← Ch 7  ·  Contents  ·  Ch 9 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೮ — ವಿಭಕ್ತಿಗಳು ಮತ್ತು ಕಾರಕಗಳು

↑ ಒಳಪಿಡಿಗೆ ಹಿಂತಿರುಗಿ


ವಿಭಕ್ತಿಗಳು ಮತ್ತು ಕಾರಕಗಳು

Eke →

೮.೧ ಪೀಠಿಕೆ

ಒಂದು ವಾಕ್ಯವು ತಿಳಿಸುವ ಘಟನೆ ಇಲ್ಲವೇ ಸಂಗತಿಯಲ್ಲಿ ನಾಮಪದಗಳು ಸೂಚಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಯಾವ ರೀತಿಯಲ್ಲಿ ತೊಡಗಿಕೊಂಡಿವೆ ಎಂಬುದನ್ನು ಆ

ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ಸೂಚಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹಳೆಗನ್ನಡ ವಾಕ್ಯಗಳನ್ನು ಪರಿಶೀಲಿಸಬಹುದು:

(೧ಕ) ಅರಸನ್‌ ಪಾರ್ವಂಗೆ ತುರುಗಳನ್‌ ಕೊಟ್ಟನ್‌ “ರಾಜ ಬ್ರಾಹ್ಮಣನಿಗೆ ದನಗಳನ್ನು ಕೊಟ್ಟ’ (೧ಖ) ಅರಗಿನ ಮನೆಯೊಳ್‌ ಪಾಂಡವರ್‌ ಅಳ್ಗಿದರ್‌ “ಪಾಂಡವರು ಅರಗಿನ ಮನೆಯಲ್ಲಿ ನಾಶವಾದರು’ (೧ಕ) ವಾಕ್ಯದಲ್ಲಿ ಪಾರ್ವಂ ಪದದ ಅನಂತರ ಬಂದಿರುವ ಗೆ ವಿಭಕ್ತಿ ಪ್ರತ್ಯಯ ಆ ವಾಕ್ಯವು ತಿಳಿಸುವ ಕೊಡುವಿಕೆ ಎಂಬ ಘಟನೆಯಲ್ಲಿ ಬ್ರಾಹ್ಮಣನು (ಪಾರ್ವಂ) ಅರಸನು ಕೊಟ್ಟುದನ್ನು ಪಡೆಯುವವನೆಂಬುದನ್ನೂ, ತುರುಗಳ್‌ ಪದದ ಅನಂತರ ಬಂದಿರುವ ಅನ್‌ ವಿಭಕ್ತಿ ಪ್ರತ್ಯಯ ಆ ಘಟನೆಯಲ್ಲಿ ದನಗಳು (ತುರುಗಳ್‌) ಅರಸನು ಕೊಟ್ಟ ವಸ್ತುಗಳೆಂದೂ ತಿಳಿಸುತ್ತವೆ. ಇದೇ ರೀತಿಯಲ್ಲಿ, (೧ಖ) ವಾಕ್ಯದ ಅರಗಿನ ಮನೆ ಪದಕಂತೆಯ ಕೊನೆಯಲ್ಲಿ ಬಂದಿರುವ ಒಳ್‌ ಪ್ರತ್ಯಯ ಪಾಂಡವರು ನಾಶವಾಗಿರುವರೆನ್ನಲಾದ ಘಟನೆಯ ಜಾಗ ಅರಗಿನ ಮನೆ ಎಂಬುದನ್ನು ಸೂಚಿಸುತ್ತದೆ. ಇಂತಹ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ, ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಇವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ:

Eke →

೮.೨ ವಿಭಕ್ತಿ ಪ್ರತ್ಯಯವನ್ನು ಬಳಸದಿರುವುದು

ಮೇಲೆ (೭.೩.೧)ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಭೇದವನ್ನು ಮಾತ್ರವಲ್ಲದೆ ವಚನಭೇದವನ್ನೂ ಸೂಚಿಸುತ್ತವೆ. ಉದಾಹರಣೆಗಾಗಿ, ಸಂಸ್ಕೃತದ ಗೋಷು “ದನಗಳಲ್ಲಿ’ ಪದರೂಪದಲ್ಲಿರುವ ಷು ಪ್ರತ್ಯಯ ಸಪ್ತಮೀ ವಿಭಕ್ತಿಯನ್ನು ಮಾತ್ರವಲ್ಲದೆ ಬಹುವಚನವನ್ನೂ ಸೂಚಿಸುತ್ತದೆ.

ಹಾಗಾಗಿ, ವಿಭಕ್ತಿಯನ್ನು ಸೂಚಿಸುವ ಅವಶ್ಯಕತೆಯಿಲ್ಲದಂತಹ ಸಂದರ್ಭಗಳಲ್ಲೂ

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯವನ್ನು ಬಳಸಬೇಕಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಇಂತಹ

ಸಂದರ್ಭಗಳಲ್ಲೂ ವಚನವನ್ನು ಸೂಚಿಸಬೇಕಾಗುತ್ತದೆ, ಮತ್ತು ಇದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಬಳಸುವುದಲ್ಲದೆ ಬೇರೆ ದಾರಿಯಿಲ್ಲ (ಕೆಳಗೆ ಕೊಟ್ಟಿರುವ (೩ಕ-ಖ) ವಾಕ್ಯಗಳನ್ನು ನೋಡಿ).

ಇದರಿಂದಾಗಿ, ವಾಕ್ಯದಲ್ಲಿ ಯಾವ ನಾಮಪದವನ್ನು ಬಳಸುವುದಿದ್ದರೂ ಅದಕ್ಕೆ ಯಾವುದಾದರೂ ಒಂದು ವಿಭಕ್ತಿ ಪ್ರತ್ಯಯವನ್ನು ಸೇರಿಸಿಯೇ ಬಳಸಬೇಕೆಂಬ ನಿಯಮವನ್ನು ಆ ಭಾಷೆಯ (ಸಂಸ್ಕೃತದ) ವ್ಯಾಕರಣದಲ್ಲಿ ರಚಿಸಬೇಕಾಗಿದೆ.

ಆದರೆ, ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ವಚನ ಪ್ರತ್ಯಯಕ್ಕಿಂತ ಭಿನ್ನವಾಗಿದ್ದು ವಿಭಕ್ತಿ ಭೇದವನ್ನು ಮಾತ್ರ ಸೂಚಿಸುತ್ತವೆ. ಉದಾಹರಣೆಗಾಗಿ, ಹಳೆಗನ್ನಡದ ಮುಗಿಲ್ಲ ಳಿನ್‌ ಪದರೂಪದಲ್ಲಿ ವಚನವನ್ನು ಗಳ್‌ ಪ್ರತ್ಯಯ ಸೂಚಿಸುತ್ತದೆಯಾದರೆ, ವಿಭಕ್ತಿಯನ್ನು ಅದರ ಅನಂತರ ಬರುವ ಇನ್‌ ಪ್ರತ್ಯಯ ಸೂಚಿಸುತ್ತದೆ. ಸಂಸ್ಕೃತದ ಹಾಗೆ ಇವೆರಡನ್ನೂ ಒಂದೇ ಪ್ರತ್ಯಯ ಸೂಚಿಸುವ ಬದಲು, ಬೇರೆ ಬೇರೆ ಪ್ರತ್ಯಯಗಳು ಸೂಚಿಸುತ್ತವೆ.

ಈ ರೀತಿ, ಹಳೆಗನ್ನಡದಲ್ಲಿ ವಿಭಕ್ತಿ ಮತ್ತು ವಚನಗಳನ್ನು ಸೂಚಿಸುವುದಕ್ಕಾಗಿ ಬೇರೆ ಬೇರೆ ಪ್ರತ್ಯಯಗಳಿರುವ ಕಾರಣ, ವಚನ ಪ್ರತ್ಯಯದ ಹಾಗೆ (೭.೩.೧ ನೋಡಿ) ವಿಭಕ್ತಿ ಪ್ರತ್ಯಯವನ್ನೂ ಅವಶ್ಯವಿದ್ದಲ್ಲಿ ಮಾತ್ರ ಬಳಸುವ ಸಾಧ್ಯತೆ ಹಳೆಗನ್ನಡದಲ್ಲಿ ದೆ. ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧ ಎಂತಹದು ಎಂಬ ವಿಷಯ ಸ್ಪಷ್ಟವಾಗಿರುವ ಸಂದರ್ಭಗಳಲ್ಲಿ ವಿಭಕ್ತಿ ಪ್ರತ್ಯಯವನ್ನು ಬಳಸದೆಯೇ ಇರಲೂ ಹಳೆಗನ್ನಡದಲ್ಲಿ ಸಾಧ್ಯ; ಆದರೆ, ಸಂಸ್ಕೃತದಲ್ಲಿ ಇದು ಅಸಾಧ್ಯ.

ಉದಾಹರಣೆಗಾಗಿ, ಹಳೆಗನ್ನಡದ ವಾಕ್ಯವೊಂದರಲ್ಲಿ ಕ್ರಿಯಾಪದದೊಂದಿಗೆ ಒಂದು ನಾಮಪದ ಮಾತ್ರ ಬಂದಿದೆಯಾದರೆ, ಅದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆಯೆಂಬುದು ಆ ಕ್ರಿಯಾಪದದ ಸ್ವರೂಪದಿಂದಲೇ ಸ್ಪಷ್ಟವಾಗಬಲ್ಲುದು, ಮತ್ತು ಇಂತಹ ಸಂದರ್ಭಗಳಲ್ಲಿ ಆ ನಾಮಪದದೊಂದಿಗೆ ವಿಭಕ್ತಿ ಪ್ರತ್ಯಯವನ್ನು ಬಳಸದಿರಲು ಸಾಧ್ಯವಿದೆ.

(೨ಕ) ನಲ್ಲಳ್‌ ನಸುನಕ್ಕಳ್‌ (೨ಖ) ಮಕ್ಕಳ್‌ ಪಾಡಿದರ್‌ (೨ಗ) ಅರಸನ್‌ ಬಂದನ್‌

(೨ಕ-ಗ) ವಾಕ್ಯಗಳಲ್ಲಿ ಒಂದೊಂದೇ ನಾಮಪದ ಬಂದಿದ್ದು, ಅವಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧವೇನೆಂಬುದನ್ನು ತಿಳಿಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. (೨ಕ)ದಲ್ಲಿ ನಕ್ಕವಳು ನಲ್ಲಳು, (೨ಖ)ದಲ್ಲಿ ಹಾಡಿದವರು ಮಕ್ಕಳು, ಮತ್ತು (೨ಗ)ದಲ್ಲಿ ಬಂದವನು ಅರಸನು ಎಂಬುದಾಗಿ ಈ ಸಂಬಂಧವನ್ನು ಯಾವ ಪ್ರತ್ಯಯದ ಸಹಾಯವೂ ಇಲ್ಲ ದೆ ತಿಳಿದುಕೊಳ್ಳಲು ಬರುತ್ತದೆ. ಹಾಗಾಗಿ, ಈ ನಾಮಪದಗಳೊಂದಿಗೆ ಯಾವ ವಿಭಕ್ತಿ ಪ್ರತ್ಯಯವನ್ನೂ ಬಳಸದಿರಲು ಹಳೆಗನ್ನಡದಲ್ಲಿ ಸಾಧ್ಯವಾಗಿದೆ.

ಆದರೆ, ಸಂಸ್ಕೃತ ವಾಕ್ಯಗಳಲ್ಲಿ ಈ ರೀತಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆ ನಾಮಪದಗಳನ್ನು ಬಳಸಲು ಸಾಧ್ಯವಾಗದು. ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಸೂಚಿಸುವ ಅವಶ್ಯಕತೆಯಿಲ್ಲದ ಸಂದರ್ಭಗಳಲ್ಲೂ ವಚನಭೇದವನ್ನು ಸೂಚಿಸಬೇಕಾಗುವುದಾದ ಕಾರಣ, ಅಂತಹ ಸಂದರ್ಭಗಳಲ್ಲಿ ಸಂಸ್ಕೃತದ ನಾಮಪದಗಳೊಂದಿಗೆ “ಪ್ರಥಮಾ ವಿಭಕ್ತಿ’ ಪ್ರತ್ಯಯವನ್ನು ಬಳಸಬೇಕಾಗುತ್ತದೆ. ಈ ಪ್ರತ್ಯಯಕ್ಕೆ ನಾಮಪದಗಳ ವಚನವನ್ನು ತಿಳಿಸುವ ಕೆಲಸ ಮಾತ್ರ ಇದೆ.

(೩ಕ) ನದ್ಯಃ ಸ್ರವಂತಿ “ನದಿಗಳು ಹರಿಯುತ್ತವೆ’

(೩ಖ) ಮಾಣವಕಃ ಗಚ್ಛತಿ “ಹುಡುಗ ಹೋಗುತ್ತಾನೆ”

(೩ಕ)ದಲ್ಲಿ ನದಿಗೂ ಹರಿಯುವಿಕೆಗೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸುವ ಅವಶ್ಯಕತೆಯಿಲ್ಲ; ಹರಿಯುವ ಕ್ರಿಯೆಯನ್ನು ನದಿ ನಡೆಸುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. (ಸಂಸ್ಕೃತದ ವೈಯಾಕರಣಿಗಳ ಅಭಿಪ್ರಾಯದಂತೆ ಈ ವಿಷಯವನ್ನು ಕ್ರಿಯಾಪದದ ಕೊನೆಯಲ್ಲಿ ಬರುವ ತಿಜ್‌ ಪ್ರತ್ಯಯವೇ ತಿಳಿಸುತ್ತದೆ).

ಹೀಗಿದ್ದರೂ, ಇಲ್ಲಿ ಹಲವು ನದಿಗಳು ಈ ಕ್ರಿಯೆಯನ್ನು ನಡೆಸುತ್ತವೆ ಎಂಬುದಾಗಿ ಬಹುವಚನವನ್ನು ಸೂಚಿಸುವ ಅವಶ್ಯಕತೆಯಿದೆಯಾದ ಕಾರಣ, ಮತ್ತು ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಒಂದೇ ಪ್ರತ್ಯಯ ಸೂಚಿಸುತ್ತಿದೆಯಾದ ಕಾರಣ, ನದೀ ಪದದ ಅನಂತರ ಅಃ (ಅಸ್‌) ಪ್ರಥಮಾ ಬಹುವಚನ ಪ್ರತ್ಯಯವನ್ನು ಬಳಸಬೇಕಾಗಿದೆ.

ಇದೇ ರೀತಿಯಲ್ಲಿ, (೩ಖ)ದಲ್ಲಿ ಹೋಗುವವನು ಹುಡುಗ ಎಂಬ ವಿಷಯ ಸ್ಪಷ್ಟವಾಗಿದೆಯಾದರೂ, ಆತ ಒಬ್ಬನೇ ಎಂಬುದನ್ನು ಸೂಚಿಸಬೇಕಾಗಿದೆಯಾದ ಕಾರಣ, ಮಾಣವಕ ಪದದ ಅನಂತರ : (ಸ್‌) ಪ್ರಥಮಾ ಏಕವಚನ ಪ್ರತ್ಯಯವನ್ನು ಬಳಸಬೇಕಾಗಿದೆ.

ಕ್ರಿಯಾಪದದೊಂದಿಗೆ ಎರಡು ನಾಮಪದಗಳು ಬಂದಿರುವಾಗಲೂ ಆ ನಾಮಪದಗಳಲ್ಲಿ ಒಂದು ವ್ಯಕ್ತಿ ಇಲ್ಲವೇ ಪ್ರಾಣಿಯನ್ನು ಸೂಚಿಸುತ್ತಿದ್ದು, ಇನ್ನೊಂದು ವಸ್ತು ಇಲ್ಲವೇ ವಿಷಯವನ್ನು ಸೂಚಿಸುತ್ತಿದೆಯಾದರೆ, ಅಂತಹ ಸಂದರ್ಭದಲ್ಲೂ ಹಳೆಗನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧವೇನು ಎಂಬುದನ್ನು ವಿಭಕ್ತಿ ಪ್ರತ್ಯಯಗಳ ಮೂಲಕ ತಿಳಿಸುವ ಅವಶ್ಯಕತೆ ಇಲ್ಲ. ಯಾಕೆಂದರೆ, ಅಂತಹ ಸಂದರ್ಭಗಳಲ್ಲಿ ಕ್ರಿಯಾಪದವು ಸೂಚಿಸುವಂತಹ ಘಟನೆಯನ್ನು ನಡೆಸುವ ಕೆಲಸವನ್ನು ವ್ಯಕ್ತಿ ಇಲ್ಲವೇ ಪ್ರಾಣಿ ಮಾತ್ರ ಮಾಡಲು ಸಾಧ್ಯವಲ್ಲದೆ ವಸ್ತು ಇಲ್ಲವೇ ವಿಷಯ ಮಾಡಲು ಸಾಧ್ಯವಿಲ್ಲ i

ಹಾಗಾಗಿ, ಅಂತಹ ಸಂದರ್ಭಗಳಲ್ಲಿ ಘಟನೆಯಿಂದ ಬಾಧಿತವಾಗುವ ವ್ಯಕ್ತಿ ಇಲ್ಲ ವೇ ವಸ್ತುವನ್ನು ಸೂಚಿಸುವ ಅನ್‌ ಪ್ರತ್ಯಯವನ್ನು ಬಳಸದಿರಲು ಬರುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ಬಳಕೆಗಳನ್ನು ಗಮನಿಸಬಹುದು:

(೪ಕ) ಆತನ ಬರವಿಂಗೆ ಬದ್ಧವಣಂ ಬಾಜಿಪಂತೆ (೨.೧೨ವ) “ಆತನ ಬರುವಿಕೆಗೆ ಮಂಗಳ ವಾದ್ಯವನ್ನು ಬಾರಿಸುವ ಹಾಗೆ’

(೪ಖ) ಮನಮಿಕ್ಕಿಯುಂ ಎರ್ದೆಯಿಕ್ಕಿಯುಮ್‌ ಕಿಡುವರ್‌ (೨.೨೮ವ) “ಉತ್ಸಾಹಶೂನ್ಯರಾಗಿಯೂ ಅಧೈರ್ಯರಾಗಿಯೂ ಕೆಟ್ಟುಹೋಗುತ್ತಾರೆ’

(೪ಕ)ದಲ್ಲಿ ಬದ್ಧವಣ ಪದದೊಂದಿಗೆ ಅದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವುದಕ್ಕಾಗಿ ಬರಬೇಕಾಗಿದ್ದ ಅನ್‌ ಪ್ರತ್ಯಯದ ಬಳಕೆಯಾಗಿಲ್ಲ. ಇದೇ ರೀತಿಯಲ್ಲಿ, (೪ಖ)ದಲ್ಲಿ ಮನಂ ಮತ್ತು ಎರ್ದೆ ಪದಗಳೊಂದಿಗೂ ಅನ್‌ ಪ್ರತ್ಯಯ ಬಂದಿಲ್ಲ.

ಆದರೆ, ಸಂಸ್ಕೃತದಲ್ಲಿ ಈ ರೀತಿ ನಾಮಪದದೊಂದಿಗೆ ದ್ವಿತೀಯಾ ವಿಭಕ್ತಿಯನ್ನು ಬಳಸದಿರಲು ಸಾಧ್ಯವಾಗದು. ಅದು ವಿಭಕ್ತಿಯೊಂದಿಗೆ ವಚನವನ್ನೂ ಸೂಚಿಸುತ್ತಿರುವುದೇ ಇದಕ್ಕೆ ಕಾರಣ.

Eke →

೮.೩ ವಿಭಕ್ತಿ ಪ್ರತ್ಯಯಗಳ ಸಂಖ್ಯೆ

ಹಳೆಗನ್ನಡದಲ್ಲಿ ನಾಮಪದಗಳೊಂದಿಗೆ ಬಳಸಲು ಒಟ್ಟು ನಾಲ್ಕು ವಿಭಕ್ತಿ ಪ್ರತ್ಯಯಗಳು ಮಾತ್ರ ಬಳಕೆಯಲ್ಲಿವೆ.

(೧) ಘಟನೆಯೊಂದರಿಂದ ಬಾಧಿತವಾಗುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಅನ್‌ (ಅಂ) ಪ್ರತ್ಯಯ ಇವುಗಳಲ್ಲಿ ಮೊದಲನೆಯದು.

(೫ಕ) ಆ ತಪೋವೃದ್ಧರ್‌ ಕಾಂತೆಯನ್‌ ಸಂತೈಸಿದರ್‌ “ಆ ತಪೋವೃದ್ಧರು ಕಾಂತೆಯನ್ನು ಸಂತೈಸಿದರು’

(೫ಖ) ಮುಂ ಪೊಡೆವೆಂ ಕೂಳಂ ಬಟುಯಂ ಪೊಡೆವೆಂ ರಕ್ಕಸನನ್‌ “ಮೊದಲು ಅನ್ನವನ್ನು ಹೊಡೆಯುತ್ತೇನೆ (ತಿನ್ನುತ್ತೇನೆ), ಅನಂತರ ರಾಕ್ಟಸನ ಹೊಡೆಯುತ್ತೇನೆ’

ಗೆ

(೫ಕ)ದಲ್ಲಿ ಸಂತೈಸುವ ಘಟನೆಯಿಂದ ಬಾಧಿತವಾಗುವ ಕಾಂತೆಯನ್ನು ಮತ್ತು (೫ಖ)ದಲ್ಲಿ ಹೊಡೆಯುವ (ತಿನ್ನುವ) ಘಟನೆಯಿಂದ ಬಾಧಿತವಾಗುವ ಅನ್ನವನ್ನು (ಮತ್ತು ರಾಕ್ಷಸನನ್ನು) ಸೂಚಿಸುವುದಕ್ಕಾಗಿ ಅನ್‌ ಪ್ರತ್ಯಯದ ಬಳಕೆಯಾಗಿದೆ.

(೨) ಘಟನೆಯ ಜಾಗವನ್ನು ಸೂಚಿಸುವ ಒಳ್‌ ಪ್ರತ್ಯಯ ಎರಡನೆಯದು. ಇದರ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(೬ಕ) ಅರಗಿನ ಮನೆಯೊಳ್‌ ಪಾಂಡವರ್‌ ಉರಿದು ಅಲ್ಲುದರ್‌ “ಅರಗಿನ ಮನೆಯಲ್ಲಿ ಪಾಂಡವರು ಉರಿದು ನಾಶವಾದರು’

(೬ಖ) `ಅಡವಿಯೊಳ್‌ ಎನ್ನುಮನ್‌ ಎನ್ನ ಶಿಶುಗಳುಮನ್‌ ಇರಿಸಿ… “ಕಾಡಿನಲ್ಲಿ ನನ್ನನ್ನೂ ನನ್ನ ಶಿಶುಗಳನ್ನೂ ಇರಿಸಿ’

(೬ಕ)ದಲ್ಲಿ ಪಾಂಡವರು ಉರಿದು ನಾಶವಾಗಿರುವ ಜಾಗವನ್ನು ಸೂಚಿಸುವುದಕ್ಕಾಗಿ ಮನೆ ಪದದೊಂದಿಗೆ ಒಳ್‌ ಪ್ರತ್ಯಯ ಬಂದಿದೆ; ಮತ್ತು (೬ಖ)ದಲ್ಲಿ ಕುಂತಿ ತನ್ನನ್ನೂ ತನ್ನ ಮಕ್ಕಳನ್ನೂ ಇರಿಸಿರುವ ಜಾಗವನ್ನು ಸೂಚಿಸುವುದಕ್ಕಾಗಿ ಅಡವಿ ಪದದೊಂದಿಗೆ ಒಳ್‌ ಪ್ರತ್ಯಯ ಬಂದಿದೆ.

(೩) ಒಂದು ಕ್ರಿಯಾಪದ ತಿಳಿಸುವ ಘಟನೆ ಯಾವುದಾದರೂ ಒಂದು ರೀತಿಯ ಚಲನೆಯನ್ನು ಒಳಗೊಂಡಿದೆಯಾದರೆ, ಅಂತಹ ಕ್ರಿಯಾಪದದೊಂದಿಗೆ ಆ ಚಲನೆಯ ಸುರು ಮತ್ತು ಕೊನೆಗಳನ್ನು ಸೂಚಿಸುವುದಕ್ಕಾಗಿ ಇನ್‌ ಮತ್ತು ಗೆ ಎಂಬ ಇನ್ನೂ ಎರಡು ಪ್ರತ್ಯಯಗಳು ಬರಬಲ್ಲುವು; ಇವು ಚಲನೆಗೆ ಸಂಬಂಧಿಸಿದಂತಹ ಎರಡು ರೀತಿಯ ವಿಶಿಷ್ಟವಾದ ಜಾಗಗಳನ್ನು ಸೂಚಿಸುತ್ತವೆ. ಇವು ಹಳೆಗನ್ನಡದ ಮೂರು ಮತ್ತು ನಾಲ್ಕನೆಯ ವಿಭಕ್ತಿ ಪ್ರತ್ಯಯಗಳು.

(೭ಕ) ತಾಪಸಾಶ್ರಮದಿಂ ಪೊರಮಟ್ಟು “ತಾಪಸಾಶ್ರಮದಿಂದ ಹೊರಟು’

(೭ಖ) ಧೃತರಾಷ್ಟ್ರ ಕರ್ಣ ಶಕುನಿ ಪ್ರಭೃತಿಗಳ್‌ ನಿಜ ನಿವಾಸಂಗಳ್ಗೆ ಪೋದರ್‌ “ಧೃತರಾಷ್ಟ್ರ, ಕರ್ಣ, ಶಕುನಿ ಮೊದಲಾದವರು ತಮ್ಮ ಮನೆಗಳಿಗೆ ಹೋದರು’ J)

(೭ಕ)ದಲ್ಲಿ ಹೊರಡುವ ಘಟನೆ ಎಲ್ಲಿಂದ ಸುರುವಾಗಿದೆಯೆಂಬುದನ್ನು ಸೂಚಿಸಲು ತಾಪಸಾಶ್ರಮ ಪದದೊಂದಿಗೆ ಇಂ ಪ್ರತ್ಯಯ ಬಂದಿದೆ, ಮತ್ತು (೭ಖ)ದಲ್ಲಿ ಹೋಗುವ ಘಟನೆ ಎಲ್ಲಿ ಕೊನೆಗೊಳ್ಳುತ್ತ ದೆ ಎಂಬುದನ್ನು ಸೂಚಿಸುವುದಕ್ಕಾಗಿ ನಿವಾಸಂಗಳ್‌ ಎಂಬುದರೊಂದಿಗೆ ಗೆ ಪ್ರತ್ಯಯ ಬಂದಿದೆ.

ಸಂಸ್ಕೃತದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳ ಸಂಖ್ಯೆ ಇದಕ್ಕಿಂತ ಜಾಸ್ತಿ. ಮೇಲೆ (೮.೨)ರಲ್ಲಿ ಸೂಚಿಸಿರುವ ಪ್ರಥಮಾ ವಿಭಕ್ತಿ ಮಾತ್ರವಲ್ಲ ದೆ, ನಾಮಪದಗಳಿಗೂ ಕ್ರಿಯಾಪದಗಳಿಗೂ ನಡುವಿರುವ ಸಂಬಂಧಗಳನ್ನು ಸೂಚಿಸಬಲ್ಲ ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ ಮತ್ತು ಸಪ್ತಮೀ ಎಂಬುದಾಗಿ ಹೆಸರಿಸಲಾಗಿರುವ ಇನ್ನೂ ಆರು ವಿಭಕ್ತಿಗಳು ಸಂಸ್ಕೃತದಲ್ಲಿವೆ.

(೮ಕ) ದಂಡಪಾಲಃ ಚೋರಂ ಕರ್ಷತಿ “ಕಾವಲುಗಾರನು ಕಳ್ಳನನ್ನು ಎಳೆಯುತ್ತಾ ನೆ’ (೮ಖ) ವೃತ್ರಂ ಇಂದ್ರೋ ವಜ್ರೇಣ ಅಹನ್‌ “ಇಂದ್ರನು ವೃತ್ರನನ್ನು ವಜ್ರಾಯುಧದಿಂದ ಕೊಂದ’ (೮ಗ) ಬ್ರಾಹ್ಮಣೇಭ್ಯೋ ನಿಷ್ಕಾನ್‌ ದದೌ “ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟ’ (೮ಘ) ಧಾವತೋ ಅಶ್ವಾತ್‌ ಪತತಿ “ಓಡುತ್ತಿರುವ ಕುದುರೆಯಿಂದ ಬೀಳುತ್ತಾನೆ’ (೮ಜ) ಮಾತುಃ ಸ್ಮರತಿ “ತಾಯನ್ನು ನೆನೆಯುತ್ತಾನೆ’ (೮ಚ) ಕಸ್ಮಿಂಶ್ಚಿದ್‌ ವನೇ ಭಾಸುರಕೋ ನಾಮ ಸಿಂಹಃ ಪ್ರತಿವಸತಿ ಸ್ಮ “ಯಾವುದೋ ಒಂದು ಕಾಡಿನಲ್ಲಿ ಭಾಸುರಕನೆಂಬ ಸಿಂಹ ವಾಸಿಸುತ್ತಿತ್ತು’ (೮ಕ)ದಲ್ಲಿ ಎಳೆಯುವ ಕ್ರಿಯೆಯಿಂದ ಬಾಧಿತನಾಗಿರುವ ವ್ಯಕ್ತಿಯನ್ನು ದ್ವಿತೀಯಾ ವಿಭಕ್ತಿಯ ಮೂಲಕವೂ, (೮ಖ)ದಲ್ಲಿ ಕೊಲ್ಲುವ ಘಟನೆಯಲ್ಲಿ ಬಳಸಿದ ಆಯುಧವನ್ನು ತೃತೀಯಾ ವಿಭಕ್ತಿಯ ಮೂಲಕವೂ, (ಆಗುದಲ್ಲಿ ಕೊಟ್ಟ ವಸ್ತುವನ್ನು ಪಡೆದ ವ್ಯಕ್ತಿಯನ್ನು ಚತುರ್ಥೀ ವಿಭಕ್ತಿಯ ಮೂಲಕವೂ, (೮ಘ) ದಲ್ಲಿ ಬಿದ್ದುದೆಲ್ಲಿಂದ ಎಂಬುದನ್ನು ಪಂಚಮೀ ವಿಭಕ್ತಿಯ ಮೂಲಕವೂ, (೮ಜ) ದಲ್ಲಿ ನೆನೆದುದು ಯಾರನ್ನು ಎಂಬುದನ್ನು ಷಷ್ಠೀ ವಿಭಕ್ತಿಯ ಮೂಲಕವೂ, ಮತ್ತು (ಆ೮ಚ)ದಲ್ಲಿ ವಾಸಿಸಿರುವ ಜಾಗವನ್ನು ಸಪ್ತಮೀ ವಿಭಕ್ತಿಯ ಮೂಲಕವೂ ಸೂಚಿಸಲಾಗಿದೆ. ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳು ಈ ರೀತಿ ನಾಮಪದಕ್ಕೂಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳನ್ನು ಮಾತ್ರವಲ್ಲದೆ, ವಚನಭೇದವನ್ನೂ ಸೂಚಿಸಬೇಕಾಗಿದೆಯಾದ ಕಾರಣ, ಮೇಲೆ ಸೂಚಿಸಿದ ಪ್ರತಿಯೊಂದು ವಿಭಕ್ತಿಯಲ್ಲೂ ಏಕವಚನ, ದ್ವಿವಚನ ಮತ್ತು ಬಹುವಚನಗಳನ್ನು ಸೂಚಿಸಬಲ್ಲ ಮೂರು ಮೂರು ಪ್ರತ್ಯಯಗಳಿವೆ.

(೯ಕ) ಕಟಂ ಕರೋತಿ

“ಚಾಪೆಯನ್ನು ಮಾಡುತ್ತಾನೆ’ (೯ಖ) ಕಟೌ ಕರೋತಿ

“(ಎರಡು) ಚಾಪೆಗಳನ್ನು ಮಾಡುತ್ತಾನೆ’ (೯ಗ) ಕಟಾನ್‌ ಕರೋತಿ

“(ಹಲವು) ಚಾಪೆಗಳನ್ನು ಮಾಡುತ್ತಾನೆ’

(೧ಕ)ದಲ್ಲಿ ಕಟ “ಚಾಪೆ’ ಪದದೊಂದಿಗೆ ದ್ವಿತೀಯಾ ವಿಭಕ್ತಿ ಮತ್ತು ಏಕವಚನ ಇವೆರಡನ್ನೂ ಒಟ್ಟಾಗಿ ಸೂಚಿಸಲು ೦ ಪ್ರತ್ಯಯ ಬಂದಿದೆ. (೧ಖ)ದಲ್ಲಿ ದ್ವಿತೀಯಾ ವಿಭಕ್ತಿ ಮತ್ತು ದ್ವಿವಚನಗಳನ್ನು ಸೂಚಿಸಲು ಔ ಪ್ರತ್ಯಯ ಬಂದಿದೆ ಮತ್ತು (೧ಗ)ದಲ್ಲಿ ಅದೇ ದ್ವಿತೀಯಾ ವಿಭಕ್ತಿ ಮತ್ತು ಬಹುವಚನಗಳನ್ನು ಸೂಚಿಸಲು ಅನ್‌ ಪ್ರತ್ಯಯ ಬಂದಿದೆ.

ಆದರೆ, ಹೆಚ್ಚಿನ ನಾಮಪದಗಳಲ್ಲೂ ಈ ಇಪ್ಪತ್ತೊಂದು ವಿಭಕ್ತಿ ಮತ್ತು ವಚನಗಳ ಜೋಡಿಗಳನ್ನು ಸೂಚಿಸುವ ಪ್ರತ್ಯಯಗಳಲ್ಲಿ ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುವುದಿಲ್ಲ. ಅವುಗಳಲ್ಲಿ ಕೆಲವು ಒಂದೇ ರೂಪದಲ್ಲಿರಲು ಸಾಧ್ಯವಿದೆ. ಉದಾಹರಣೆಗಾಗಿ, ಆಸ್ಯ “ಬಾಯಿ’ ಪದಕ್ಕೆ ಚತುರ್ಥಿ-ಬಹುವಚನ ಮತ್ತು ಪಂಚಮಿ-ಬಹುವಚನ ಎಂಬ ಎರಡು ವಿಭಕ್ತಿ-ವಚನ ಜೋಡಿಗಳಲ್ಲೂ ಆಸ್ಕೇಭ್ಯಃ ಎಂಬ ಒಂದೇ ರೂಪವಿದೆ; ನದೀ ಪದಕ್ಕೆ ತೃತೀಯಾ-ದ್ವಿವಚನ, ಚತುರ್ಥೀ-ದ್ವಿವಚನ ಮತ್ತು ಪಂಚಮೀ-ದ್ವಿವಚನಗಳೆಂಬ ಮೂರು ವಿಭಕ್ತಿ-ವಚನ ಜೋಡಿಗಳಲ್ಲೂ ನದೀಭ್ಯಾಂ ಎಂಬ ಒಂದೇ ರೂಪವಿದೆ.

ಸಂಸ್ಕೃತದ ವಿಭಕ್ತಿಗಳನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ಹೆಸರಿಸಲು ಮುಖ್ಯ ಕಾರಣವೇನೆಂದರೆ, ಹೀಗೆ ಹೆಸರಿಸುವ ಮೂಲಕ ಅವುಗಳಲ್ಲಿ ಯಾವ ವಿಭಕ್ತಿ-ವಚನ ಪ್ರತ್ಯಯಗಳಿಗೆ ಒಂದಲ್ಲ ಒಂದು ನಾಮಪದದೊಂದಿಗೆ ಬಂದಾಗ ಸಮಾನ ರೂಪಗಳು ಕಾಣಿಸಿಕೊಳ್ಳುತ್ತ ವೆ ಎಂಬುದನ್ನು ತಿಳಿಸುವ ಕೆಲಸ ಸುಲಭವಾಗುತ್ತ ದೆ. ಬೇರೆ ಯಾವ ಅನುಕ್ರಮದಲ್ಲಿ ಅವನ್ನು ಹೆಸರಿಸಿದರೂ ಈ ಕೆಲಸ ಅಷ್ಟು ಸುಲಭವಾಗದು (ವಿಟ್ನಿ ೧೮೮೮:೮೯ ನೋಡಿ).

Eke →

೮.೪ ವಿಭಕ್ತಿ ಪ್ರತ್ಯಯಗಳ ಅರ್ಥ

ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನು ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿರುವುದೇ ಅವುಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳ ಸಂಖ್ಯೆಯಲ್ಲಿ, ಮೇಲೆ ಸೂಚಿಸಿದ ಹಾಗೆ, ವ್ಯತ್ಯಾಸ ಕಾಣಿಸಲು ಮುಖ್ಯ ಕಾರಣ. (ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳ ಮೂಲಕ ವಚನವನ್ನೂ ಸೂಚಿಸುತ್ತಿರುವುದು (೮.೩ ನೋಡಿ) ಇನ್ನೊಂದು ಕಾರಣ).

೮.೪.೧ ಹಳೆಗನ್ನಡದ ವಿಭಕ್ತಿಗಳು

ಹಳೆಗನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನು ಮಾಡುಗ, ಆಗುಗ ಮತ್ತು ಜಾಗ ಎಂಬುದಾಗಿ ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆಯೆಂದು ಹೇಳಬಹುದು. ಒಂದು ಘಟನೆಯನ್ನು ನಡೆಸುವ ವ್ಯಕ್ತಿ ಇಲ್ಲವೇ ಪ್ರಾಣಿ ಮಾಡುಗ, ಅದರಿಂದ

ಬಾಧಿತವಾಗುವ ವ್ಯಕ್ತಿ, ಪ್ರಾಣಿ ಇಲ್ಲವೇ ವಸ್ತು ಆಗುಗ ಮತ್ತು ಘಟನೆ ನಡೆಯುವುದು ಎಲ್ಲಿ ಎಂಬುದನ್ನು ಸೂಚಿಸುವುದು ಜಾಗ (ಭಟ್‌ ೨೦೦೪:೩೫ ನೋಡಿ).

ಮೇಲೆ (೮.೨)ರಲ್ಲಿ ವಿವರಿಸಿದ ಹಾಗೆ, ಈ ಮೂರು ರೀತಿಯ ಸಂಬಂಧಗಳಲ್ಲಿ ಎರಡನ್ನು ಮಾತ್ರ ಸೂಚಿಸಿ, ಮೂರನೆಯದನ್ನು ಸೂಚಿಸದೆ ಬಿಡಲು ಸಾಧ್ಯವಿದೆಯಾದ ಕಾರಣ, ಆಗುಗವನ್ನು ಸೂಚಿಸುವ ಅನ್‌ ಮತ್ತು ಜಾಗವನ್ನು ಸೂಚಿಸುವ ಒಳ್‌ ಎಂಬುದಾಗಿ ಹಳೆಗನ್ನಡಕ್ಕೆ ಎರಡು ವಿಭಕ್ತಿ ಪ್ರತ್ಯಯಗಳ ಅವಶ್ಯಕತೆ ಮಾತ್ರ ಇದೆ.

ಇದಲ್ಲದೆ, ಘಟನೆಂಯು ಯಾವುದಾದರೊಂದು ರೀತಿಂತು “ಚಲನೆ’ಯನ್ನು ಒಳಗೊಂಡಿದೆಯಾದರೆ, ಅಂತಹ ಚಲನೆಯ ಸುರು ಮತ್ತು ಕೊನೆಗಳನ್ನು ಸೂಚಿಸುವುದಕ್ಕಾಗಿ ಇನ್‌ ಮತ್ತು ಗೆ ಎಂಬ ಬೇರೆ ಎರಡು ವಿಭಕ್ತಿ ಪ್ರತ್ಯಯಗಳ ಅವಶ್ಯಕತೆಯೂ ಹಳೆಗನ್ನಡಕ್ಕಿದೆ.

ಈ ನಾಲ್ಕು ಪ್ರತ್ಯಯಗಳಲ್ಲಿ ಒಳ್‌, ಇನ್‌, ಮತ್ತು ಗೆ ಎಂಬ ಮೂರು ಪ್ರತ್ಯಯಗಳು ಘಟನೆಯ ಜಾಗಕ್ಕೆ ಸಂಬಂಧಿಸಿದ್ದು (ಚಲನೆಯ ಅರ್ಥವಿದ್ದ ರೆ ಇನ್‌ ಅಥವಾ ಗೆ ಮತ್ತು ಇಲ್ಲದಿದ್ದ ರೆ ಒಳ್‌), ಅವು ಮೂರು ಒಂದು ಗುಂಪಿನಲ್ಲೂ, ಅನ್‌ ಎಂಬುದು ಇನ್ನೊಂದು ಗುಂಪಿನಲ್ಲೂ ಬರುತ್ತವೆ. ಹಳೆಗನ್ನಡ ವಿಭಕ್ತಿ ಪ್ರತ್ಯಯಗಳ ಈ ವಿಭಜನೆಗೆ ಚಾರಿತ್ರಿಕ ಆಧಾರವೂ ಇದೆ.

ಉದಾಹರಣೆಗಾಗಿ, ಒಳ್‌, ಇನ್‌, ಮತ್ತು ಗೆ ಎಂಬ ಮೂರು ಪ್ರತ್ಯಯಗಳು ನಾಮಪದಗಳಿಂದ ಸಾಧಿತವಾಗಿದ್ದು, ಅನ್‌ ಪ್ರತ್ಯಯದ ಹಾಗೆ ನಾಮಪದಗಳಿಗೆ ನೇರವಾಗಿ ಸೇರುವ ಬದಲು ನಾಮಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ ರಚಿಸಿದ ಸಂಬಂಧಿಸುವ ರೂಪಕ್ಕೆ ಸೇರುತ್ತವೆಯೆಂದು ಹೇಳಲು ಸಾಧ್ಯವಿದೆ. ಇದು ಅಂತಹ ಒಂದು ಚಾರಿತ್ರಿಕ ಆಧಾರ.

ಅ ‘ ಒಳ್‌ ಇನ್‌ ಗೆ ಅನ್‌ ಮಗನ ಮಗನೊಳ್‌ ಮಗನಿನ್‌ ಮಗಂಗೆ ಮಗನನ್‌ ಕಿಚಿನ ಕಿಚಿ ನೊಳ್‌ ಕಿಚಿ ನಿನ್‌ ಕಿಚಿಂಗೆ ಕಿಚನ್‌

ಜ ಜ ಜ VE; ಒಜ ಆಟದ ಆಟದೊಳ್‌ ಆಟದಿನ್‌ ಆಟಕ್ಕೆ ಆಟಮನ್‌ ಅದಲು ಅದಅತೊಳ್‌ ಅದಜಾನ್‌ ಅದರ್ಕೆ ಅದನ್‌ ಎತ್ತಣ ದಡ ಎತ್ತಣಿನ್‌ ಜಾ ದದ

ಮೇಲಿನ ಕೋಷ್ಟಕದಲ್ಲಿ ಕಾಣಿಸಿದ ಹಾಗೆ, ಒಳ್‌, ಇನ್‌, ಮತ್ತು ಗೆ ಪ್ರತ್ಯಯಗಳು ಸೇರಿದಾಗ ಕೆಲವು ನಾಮಪದಗಳ ಮುಂದೆ ಇನ್‌, ದ್‌, ಅಜ್‌, ಮತ್ತು ಅಣ್‌ ಎಂಬ ಆಗಮಗಳು ಬರುತ್ತವೆ, ಮತ್ತು ಸಂಬಂಧಿಸುವ ಅ ಪ್ರತ್ಯಯ ಸೇರಿದಾಗಲೂ ಇವೇ ಆಗಮಗಳು ಬರುತ್ತವೆ. ಆದರೆ, ಅನ್‌ ಪ್ರತ್ಯಯ ಸೇರಿದಾಗ ಈ ಆಗಮಗಳು ಬರುವುದಿಲ್ಲ. ಈ ಆಗಮಗಳು ಚಾರಿತ್ರಿಕವಾಗಿ ಸಂಬಂಧಿಸುವ ರೂಪದ ಅಂಶಗಳೆಂದು ಕಲ್ಪಿಸಿಕೊಳ್ಳಲು ಸಾಧ್ಯವಿದ್ದು, ಅಂತಹ ಸಂಬಂಧಿಸುವ ರೂಪಕ್ಕೇನೇ ಒಳ್‌, ಇನ್‌, ಮತ್ತು ಗೆ ಪ್ರತ್ಯಯಗಳು ಸೇರುತ್ತವೆಯೆಂದು ಹೇಳಲು ಸಾಧ್ಯವಿದೆ.

ಮೇಲೆ ಸೂಚಿಸಿರುವ ಆಗುಗ, ಜಾಗ, ಸುರು, ಮತ್ತು ಕೊನೆ ಎಂಬ ಸಂಬಂಧಗಳು ಈ ವಿಭಕ್ತಿ ಪ್ರತ್ಯಯಗಳ ಮುಖ್ಯ ಅರ್ಥಗಳು. ಈ ಅರ್ಥಗಳಲ್ಲಿ ಮಾತ್ರವಲ್ಲದೆ ಹಲವು ವಿಸ್ತೃತ ಅರ್ಥಗಳಲ್ಲೂ ಅವನ್ನು ಬಳಸಲು ಸಾಧ್ಯವಿದ್ದು (೮.೫ ನೋಡಿ), ಇದರಿಂದಾಗಿ ಈ ನಾಲ್ಕು ವಿಭಕ್ತಿ ಪ್ರತ್ಯಯಗಳ ಮೂಲಕ ಹಳೆಗನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವೆ ಕಾಣಿಸುವ ಎಲ್ಲಾ ಬಗೆಯ ಸಂಬಂಧಗಳನ್ನೂ ಸೂಚಿಸಲು ಸಾಧ್ಯವಾಗುತ್ತದೆ.

೮.೪.೨ ಸಂಸ್ಕೃತದ ವಿಭಕ್ತಿಗಳು

ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನು ಹಳೆಗನ್ನಡಕ್ಕಿಂತ ತೀರ ಭಿನ್ನವಾದ ರೀತಿಯಲ್ಲಿ ವಿಂಗಡಿಸಲಾಗಿದ್ದು, ಅವನ್ನು ಸೂಚಿಸುವುದಕ್ಕಾಗಿ ಏಳು ವಿಭಕ್ತಿ ಪ್ರತ್ಯಯಗಳ ಬಳಕೆಯಾಗುತ್ತದೆ. ಆದರೆ, ಹಳೆಗನ್ನಡದ ಹಾಗೆ ಈ ಏಳು ವಿಭಕ್ತಿಗಳು ನೇರವಾಗಿ ಏಳು ರೀತಿಯ ಸಂಬಂಧಗಳನ್ನು ಸೂಚಿಸುವುದಿಲ್ಲ.

ಸಂಸ್ಕೃತದ ವೈಯಾಕರಣಿಗಳು ಹೇಳುವ ಕರ್ತ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಮತ್ತು ಅಧಿಕರಣ ಎಂಬ ಆರು “ಕಾರಕ’ಗಳು ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧಗಳನ್ನು ಆರು ಮುಖ್ಯ ಗುಂಪುಗಳಲ್ಲಿ ವಿಂಗಡಿಸುತ್ತವೆ. ಇವುಗಳಲ್ಲೊಂದನ್ನು (ಕರ್ತವನ್ನು) ಕ್ರಿಯಾಪದವೇ ಸೂಚಿಸಲು ಸಾಧ್ಯವಿದೆಯಾದ ಕಾರಣ, ಅದನ್ನು ಸೂಚಿಸಲು ಬೇರೆ ವಿಭಕ್ತಿ ಪ್ರತ್ಯಯದ ಅವಶ್ಯಕತೆಯಿಲ್ಲ.

ಹೀಗಿದ್ದರೂ, ಮೇಲೆ (೮.೨)ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯವು ವಚನವನ್ನೂ ಸೂಚಿಸಬೇಕಾಗುವುದಾದ ಕಾರಣ, ಇಂತಹ ಸಂದರ್ಭಗಳಲ್ಲಿ ಬಳಸಲು ಆ ಭಾಷೆಗೆ ‘ಪ್ರಥಮಾ’ ಎಂಬ ಒಂದು ವಿಭಕ್ತಿ ಪ್ರತ್ಯಯದ ಅವಶ್ಯಕತೆಯಿದೆ.

ಸಂಸ್ಕೃತದ ಷಷ್ಠೀ ವಿಭಕ್ತಿ ಎರಡು ನಾಮಪದಗಳ ನಡುವಿರುವ ಸಂಬಂಧವನ್ನು (ಪಶೋಃ ಪಾದಃ “ಪ್ರಾಣಿಯ ಕಾಲು’) ಸೂಚಿಸುವುದಲ್ಲದೆ, ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನೂ ಸೂಚಿಸಬಲ್ಲುದು (೮.೭.೪ ನೋಡಿ). ಹಾಗಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ ಷಷ್ಠೀ ಪ್ರತ್ಯಯವನ್ನೂ ಒಂದು ವಿಭಕ್ತಿ ಪ್ರತ್ಯಯವೆಂಬುದಾಗಿ ಪರಿಗಣಿಸಲಾಗಿದೆ.

ಹಳೆಗನ್ನಡದ ಅ ಪ್ರತ್ಯಯ (ಮದನನ ಪೂಗಣೆ) ಇದಕ್ಕಿಂತ ತೀರ ಭಿನ್ನವಾಗಿದ್ದು, ಅದು ಎರಡು ನಾಮಪದಗಳ ನಡುವಿರುವ ಸಂಬಂಧವನ್ನು ಮಾತ್ರ ಸೂಚಿಸಬಲ್ಲುದು; ಸಂಸ್ಕೃತದ ಹಾಗೆ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಅದು ಸೂಚಿಸಲಾರದು. ಹಾಗಾಗಿ, ಹಳೆಗನ್ನಡ ವ್ಯಾಕರಣದಲ್ಲಿ ಅದನ್ನು ವಿಭಕ್ತಿ ಪ್ರತ್ಯಯವೆಂದು ಕರೆಯಲು ಯಾವ ಆಧಾರವೂ ಇಲ್ಲ.

ಇದಲ್ಲದೆ, ಹಳೆಗನ್ನಡದ ನಾಮಪದಗಳಿಗಿರುವ ಈ ಅ ಪ್ರತ್ಯಯ ಸೇರಿದ ರೂಪಗಳು ಗುಣಪದಗಳ ಜಾಗದಲ್ಲಿ ಬರಬಲ್ಲುವಾದ ಕಾರಣ, ಹಲವು ವಿಷಯಗಳಲ್ಲಿ ಅವು ವಿಭಕ್ತಿ ರೂಪಗಳಿಗಿಂತ ಭಿನ್ನವಾಗಿವೆ (೮.೭.೪ ನೋಡಿ).

ಸಂಸ್ಕೃತದ ದ್ವಿತೀಯಾ ವಿಭಕ್ತಿ ಪ್ರತ್ಯಯ ಘಟನೆಯಿಂದ ಭಾಧಿತವಾದುದನ್ನು (ಕರ್ಮವನ್ನು) ಮಾತ್ರವಲ್ಲದೆ ಚಲನೆಯ ಕೊನೆಯನ್ನೂ ಸೂಚಿಸಬಲ್ಲುದು. ಚತುರ್ಥೀ ವಿಭಕ್ತಿಯನ್ನೂ ಈ ಅರ್ಥದಲ್ಲಿ ಬಳಸಲು ಸಾಧ್ಯವಿದ್ದರೂ, ಅವುಗಳ ನಡುವೆ ವ್ಯತ್ಯಾಸವಿದೆ:

(೧೦ಕ) ಗ್ರಾಮಾಯ ಗಚ್ಛತಿ “ಮನೆಗೆ ಹೋಗುತ್ತಾನೆ’

(೧೦ಖ) ಗ್ರಾಮಂ ಗಚ್ಛತಿ “ಮನೆಗೆ ಹೋಗುತ್ತಾನೆ’

ಮೇಲಿನ ಎರಡು ವಾಕ್ಯಗಳಿಗೂ “ಮನೆಗೆ ಹೋಗುತ್ತಾನೆ’ ಎಂಬ ಒಂದೇ ಅರ್ಥವಿದೆ; ಆದರೆ, (೧೦ಕ)ದಲ್ಲಿ ಚತುರ್ಥೀ ವಿಭಕ್ತಿಯ ಬಳಕೆಯಾಗಿದ್ದು, ಅದು ಹೋಗುವಿಕೆಯ ಉದ್ದೇಶವನ್ನು

ಮಾತ್ರ ಸೂಚಿಸುತ್ತದೆ; ಮತ್ತು (೧೦ಖ)ದಲ್ಲಿ ದ್ವಿತೀಯೆಯ ಬಳಕೆಯಾಗಿದ್ದು, ಅದು ಆ ಉದ್ದೇಶ ಸಿದ್ಧಿಸಿದೆಯೆಂಬುದನ್ನೂ ಸೂಚಿಸುತ್ತದೆ.

ಈ ರೀತಿ, ಚಲನೆಯ ಮೂಲಕ ಒಂದು ಜಾಗವನ್ನು ತಲಪಲಾಗಿದೆ ಎಂಬರ್ಥವಿರುವಲ್ಲಿ (ಉದ್ದೇಶದ ಸಿದ್ಧಿ ಯಾಗಿರುವಲ್ಲಿ) ದ್ವಿತೀಯೆಯನ್ನು ಬಳಸಲು ಸಾಧ್ಯವಿದೆಯಲ್ಲ ದೆ ಚತುರ್ಥಿಯನ್ನು ಬಳಸಲು ಸಾಧ್ಯವಾಗದು (ತಾರಾಪೊರೆವಾಲಾ ೧೯೬೭:೪೦ ನೋಡಿ).

ಚತುರ್ಥಿಗೆ ಇದಕ್ಕಿಂತಲೂ, ಒಂದು ಘಟನೆಯನ್ನು ಯಾರಿಗಾಗಿ ನಡೆಸಲಾಗಿದೆ ಎಂಬುದನ್ನು ಸೂಚಿಸುವ ಅರ್ಥವೇ ಹೆಚ್ಚು ಮುಖ್ಯವಾದುದು. ಹಾಗಾಗಿ, ಅದು ಸಾಮಾನ್ಯವಾಗಿ ಸಂಪ್ರದಾನ ಕಾರಕವನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ (೧೧)ನೇ ವಾಕ್ಯದಲ್ಲಿ ದನವನ್ನು ಪಡೆಯುವ ವ್ಯಕ್ತಿಯನ್ನು ಸೂಚಿಸುವ ಉಪಾಧ್ಯಾಯ ಪದ ಚತುರ್ಥಿಯಲ್ಲಿ ಬಂದಿದೆ.

(೧೧) ಶಿಷ್ಯಃ ಉಪಾಧ್ಯಾಯಾಯ ಗಾಂ ದದಾತಿ “ಶಿಷ್ಯನು ಉಪಾಧ್ಯಾಯನಿಗೆ ದನವನ್ನು ಕೊಡುತ್ತಾ ನೆ

ಸಹಯೋಗಾರ್ಥವೇ ತೃತೀಯಾ ವಿಭಕ್ತಿಯ ಮುಖ್ಯ ಅರ್ಥ (ತಾರಾಪೊರೆವಾಲಾ ೧೯೬೭). ಕೆಳಗೆ ಕೊಟ್ಟಿರುವ (೧೨ಕ) ವಾಕ್ಯದಲ್ಲಿ ಈ ಬಳಕೆಯನ್ನು ಕಾಣಬಹುದು. ಘಟನೆಯೊಂದನ್ನು ನಡೆಸುವಲ್ಲಿ ಸಾಧನವಾಗಿ ಬಳಕೆಯಾಗುವ ಕರಣವೂ ಈ ರೀತಿ ಮಾಡುಗನ ಸಹಯೋಗಿಯಾಗಿರುವ ಕಾರಣ, ಅದನ್ನೂ ತೃತೀಯಾ ವಿಭಕ್ತಿ ಸೂಚಿಸಬಲ್ಲುದು ಎಂಬುದನ್ನು (೧೨ಖ)ದಲ್ಲಿ ಕಾಣಿಸಲಾಗಿದೆ.

(೧೨5) ದೇವೋ ದೇವೇಭಿರಾಗಮತ್‌ “ದೇವನು ದೇವತೆಗಳೊಂದಿಗೆ ಬಂದ’ (೧೨ಖ) ರಾಮಃ ಕಾಷ್ಠೈಃ ಓದನಂ ಪಚತಿ “ರಾಮನು ಕಟ್ಟಿಗೆಯನ್ನು ಬಳಸಿ ಅನ್ನವನ್ನು ಬೇಯಿಸುತ್ತಾ ನೆ’

ಇದಕ್ಕೆ ವಿರುದ್ಧವಾದ ವಿಯೋಗಾರ್ಥ ಪಂಚಮೀ ವಿಭಕ್ತಿಗಿದೆ. ಕೆಳಗೆ ಕೊಟ್ಟಿರುವ (೧೩ಕ- ಖ) ವಾಕ್ಯಗಳಲ್ಲಿ ಒಂದು ಜಾಗವನ್ನು ಬಿಟ್ಟು ಹೋಗುವ ಈ ಅರ್ಥದಿಂದಲೇ ಚಲನೆಯ ಸುರು ಎಂಬ ಅರ್ಥವೂ ಈ ಪ್ರತ್ಯಯಕ್ಕೆ ಬರುತ್ತದೆ.

(೧೩ಕ) ವಿಹಗಃ ಆಕಾಶಾತ್‌ ಅಪತತ್‌ “ಹಕ್ಕಿ ಆಕಾಶದಿಂದ (ಕೆಳಗೆ) ಬಿತ್ತು’ (೧೩ಖ) ಮುನಿಃ ಪರ್ವತಾದವರೋಹತಿ “ಮುನಿಯು ಪವರ್ತದಿಂದ ಇಳಿಯುತ್ತಾನೆ’

ಸಂಸ್ಕೃತದ ಸಪ್ತಮೀ ವಿಭಕ್ತಿ ಒಂದು ಘಟನೆಯ ಜಾಗವನ್ನು ಮಾತ್ರವಲ್ಲದೆ, ಚಲನೆಯ ಕೊನೆಯನ್ನೂ ಸೂಚಿಸಬಲ್ಲುದು. ಉದಾಹರಣೆಗಾಗಿ, ಕೆಳಗೆ (೧೪ಕ)ದಲ್ಲಿ ಬೇಯುವ ಘಟನೆಯ ಜಾಗವಾಗಿರುವ ಸ್ಥಾಲೀ “ಪಾತ್ರೆ’ ಎಂಬುದನ್ನು ಸಪ್ತಮಿಯಲ್ಲಿರಿಸಲಾಗಿದೆ, ಮತ್ತು (೧೪ಖ)ದಲ್ಲಿ ಬೀಳುವ ಘಟನೆಯ ಕೊನೆಯಾಗಿರುವ ಚರಣ “ಕಾಲು’ ಪದವನ್ನೂ ಸಪ್ತಮಿಯಲ್ಲಿರಿಸಲಾಗಿದೆ.

(೧೪ಕ) ಓದನಂ ಸ್ಥಾಲ್ಯಾಂ ಪಚತಿ “ಅನ್ನ ಪಾತ್ರೆಯಲ್ಲಿ ಬೇಯುತ್ತದೆ’ (೧೪ಖ) ಚರಣಯೋಃ ನಿಪೇತತುಃ “(ಅವರಿಬ್ಬರು ಆತನ) ಕಾಲುಗಳಿಗೆ ಬಿದ್ದರು’

Eke →

೮.೫ ವಿಸ್ತೃತ ಬಳಕೆಗಳು

ಹಳೆಗನ್ನಡ ವಿಭಕ್ತಿ ಪ್ರತ್ಯಯಗಳ ಬಳಕೆಗೂ ಸಂಸ್ಕೃತ ವಿಭಕ್ತಿ ಪ್ರತ್ಯಯಗಳ ಬಳಕೆಗೂ ನಡುವಿರುವ ಒಂದು ಮುಖ್ಯವಾದ ವ್ಯತ್ಯಾಸವೇನೆಂದರೆ, ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದ ವಿಭಕ್ತಿ ಪ್ರತ್ಯಯಗಳಿಗೆ ಸ್ಪಷ್ಟವಾದ ಅರ್ಥಗಳನ್ನು ಕೊಡಲು ಸಾಧ್ಯವಿದೆ; ಅವಕ್ಕೆ ಕೆಲವು ವಿಸ್ತೃತ ಬಳಕೆಗಳಿರುವುದು ನಿಜವಾದರೂ ಇಂತಹ ಬಳಕೆಗಳಲ್ಲಿ ಕಾಣಿಸುವ ಅರ್ಥಗಳಲ್ಲಿ ಹೆಚ್ಚಿನವನ್ನೂ ಅವುಗಳ ಮೂಲ ಅರ್ಥದಿಂದಲೇನೇ ಸಾಧಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಹಳೆಗನ್ನಡದ ಗೆ ಪ್ರತ್ಯಯಕ್ಕೆ ಚಲನೆಯ ಕೊನೆಯನ್ನು ಸೂಚಿಸುವ ಮೂಲಾರ್ಥ (೭ಖ ನೋಡಿ) ಮಾತ್ರವಲ್ಲದೆ, ಬೇರೆ ಹಲವು ವಿಸ್ತೃತ ಬಳಕೆಗಳೂ ಇವೆ. ಆದರೆ, ಈ ಎಲ್ಲಾ ವಿಸ್ತೃತ ಬಳಕೆಗಳನ್ನೂ ಆ ಮೂಲಾರ್ಥದಿಂದಲೇನೇ ಸಾಧಿಸಲು ಸಾಧ್ಯವಿದೆ.

(೧೫ಕ) ಅವರ್ಗೆ ನಕುಲ ಸಹದೇವರೆಂದು ಪೆಸರನಿಟ್ಟು “ಅವರಿಗೆ ನಕುಲ ಸಹದೇವರೆಂದು ಹೆಸರನ್ನಿಟ್ಟು’ (೧೫ಖ) ದ್ರೋಣಂ ಗಡಮಿಷುವಿದ್ಯೆಗೆ ಜಾಣಂ ಗಡ “ದ್ರೋಣನಲ್ಲವೆ! ಬಾಣವಿದ್ಯೆಯಲ್ಲಿ ಜಾಣನಲ್ಲವೆ!’ (೧೫ಗ) ಎನ್ನರಸಂಗೆ ಎನ್ನದಟುಮನ್‌ ತೋಖುವೆಂ “ನನ್ನ ಪರಾಕ್ರಮವನ್ನು ನನ್ನ ಸ್ವಾಮಿಗೆ ತೋರಿಸುತ್ತೇನೆ’ (೧೫ಘ) ನೊಳವಿಂಗೆ ಕುಪ್ಪೆ ವರಂ “ನೊಣಕ್ಕೆ ಕಸವೇ ಶ್ರೇಷ್ಠವಾದುದು’

(೧೫ಕ)ದಲ್ಲಿ ಯಾರಿಗೆ ಹೆಸರನ್ನಿರಿಸಲಾಗಿದೆಯೋ ಆ ವ್ಯಕ್ತಿಗಳನ್ನು ಸೂಚಿಸುವ ಅವರ್‌ ಪದದೊಂದಿಗೆ ಗೆ ಪ್ರತ್ಯಯ ಬಂದಿದೆ. ಇಲ್ಲಿ ಹೆಸರಿನ “ಚಲನೆ’ ಯಾಗಿಲ್ಲ ದಿದ್ದರೂ, ಕೊಡುವಿಕೆಯ ಅರ್ಥವಿದೆಯಾದ ಕಾರಣ, ಇದನ್ನು ಚಲನೆಯ ಕೊನೆಯೆಂಬ ಅರ್ಥಕ್ಕೆ ಸಂಬಂಧಿಸಿದುದೆಂದು ಹೇಳಲು ಸಾಧ್ಯವಿದೆ. (೧೫ಖ)ದಲ್ಲಿ ಜಾಣನಾಗಿರುವ ಗುಣಧರ್ಮಕ್ಕಿರುವ ವ್ಯಾಪ್ತಿಯನ್ನು ಇಷುವಿದ್ಯೆ ತಿಳಿಸುವುದಾದ ಕಾರಣ, ಅದು ಚಲನೆಯ ಕೊನೆಯೆಂಬ ಅರ್ಥಕ್ಕೆ ಸಂಬಂಧಿಸಿದುದೆಂದು ಹೇಳಬಹುದು. ಗೆ ಪ್ರತ್ಯಯಕ್ಕಿರುವ ಇತರ ಬಳಕೆಗಳನ್ನೂ, ಇದೇ ರೀತಿಯಲ್ಲಿ, ಚಲನೆಯ ಕೊನೆ ಎಂಬ ಮೂಲಾರ್ಥದ ಬೇರೆ ಬೇರೆ ವಿಸ್ತೃತ ಬಳಕೆಗಳೆಂದು ಪರಿಗಣಿಸಲು ಸಾಧ್ಯವಿದೆ.

ಆದರೆ, ಸಂಸ್ಕೃತದ ವಿಭಕ್ತಿ ಪ್ರತ್ಯಯಗಳಿಗೆ ಈ ರೀತಿ ಅವುಗಳ ಎಲ್ಲಾ ಬಳಕೆಗಳಿಗೂ ಸರಿಹೊಂದುವಂತೆ ಅರ್ಥವನ್ನು ಹೇಳುವುದು ಬಹಳ ಕಷ್ಟ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಂಸ್ಕೃತದ ಕ್ರಿಯಾಪದಗಳೊಂದಿಗೆ ಹಲವು ಉಪಸರ್ಗಗಳು ಬರಲು ಸಾಧ್ಯವಿದ್ದು, ಇವನ್ನನುಸರಿಸಿ, ನಾಮಪದಗಳೊಂದಿಗೆ ಬೇರೆ ಬೇರೆ ವಿಭಕ್ತಿ ಪ್ರತ್ತಯಗಳು ಬರಬೇಕಾಗುತ್ತದೆ. ಇಂತಹ ಬಳಕೆಗಳಿಗೆ

ಇದಿ ಪು) ಖಿ

ಉಪಸರ್ಗಗಳ ಅರ್ಥವೇ ಮೊದಲಿಗೆ ಆಧಾರವಾಗಿದ್ದಿರಲು ಸಾಧ್ಯವಿದೆ. ಆದರೆ, ಕಾವ್ಯಗಳ

ಕಾಲದ ಸಂಸ್ಕೃತದಲ್ಲಿ ಈ ಉಪಸರ್ಗಗಳು ತಮ್ಮ ಮೊದಲಿನ ಅರ್ಥಗಳನ್ನು ಬಹಳ ಮಟ್ಟಿಗೆ ಕಳೆದುಕೊಂಡಿವೆಯಾದ ಕಾರಣ, ಈ ಆಧಾರ ಇಲ್ಲವಾಗಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು.

(೧೬ಕ) ಪರ್ವತೇ ಆಸ್ತೇ “ಗುಡ್ಡದಲ್ಲಿ ಕುಳಿತಿದ್ದಾನೆ”

(೧೬ಖ) ಪರ್ವತಂ ಅಧ್ಯಾಸ್ತೇ “ಗುಡ್ಡದಲ್ಲಿ ಕುಳಿತಿದ್ದಾನೆ”

ಕುಳಿತುಕೊಂಡಿರುವ ಜಾಗವನ್ನು ಸೂಚಿಸುವುದಕ್ಕಾಗಿ (೧೬ಕ)ದಲ್ಲಿ ಸಪ್ತಮಿಯನ್ನು ಬಳಸಲಾಗಿದೆ, ಮತ್ತು (೧೬ಖ)ದಲ್ಲಿ ದ್ವಿತೀಯೆಯನ್ನು ಬಳಸಲಾಗಿದೆ; (೧೬ಖ)ದಲ್ಲಿ ಕ್ರಿಯಾಪದದೊಂದಿಗೆ ಅಧಿ ಉಪ ಸ. ಬಳುಕು. ಈ ರೀತಿ ಸಪ್ತಮಿಯ ಬದಲು ದ್ವಿತೀಯೆಯನ್ನು ಬಳಸಲು ಕಾರಣ. de ಈ ಬದಲಾವಣೆಗೆ ಅರ್ಥದ ಆಧಾರವಿಲ್ಲ.

ಇದಲ್ಲದೆ, ಸಂಸ್ಕೃತದಲ್ಲಿ ಆರು ಕಾರಕಗಳನ್ನು ಸೂಚಿಸುವುದಕ್ಕಾಗಿ ಏಳು ವಿಭಕ್ತಿ ಪ್ರತ್ಯಯಗಳ ಬಳಕೆಯಾಗುತ್ತದೆಯೆಂಬುದೂ ವಿಭಕ್ತಿ ಪ್ರತ್ಯಯ ಮತ್ತು ನಾಮ-ಕ್ರಿಯಾ ಸಂಬಂಧ ಇವೆರಡರ ನಡುವೆ ನೇರವಾದ ಹೊಂದಾಣಿಕೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಿಜಕ್ಕೂ ಆರು ಕಾರಕಗಳಿಗೆ ಐದು ವಿಭಕ್ತಿ ಪ್ರತ್ಯಯಗಳಿದ್ದರೆ ಸಾಕು. ಕನ್ನಡದಲ್ಲಿ ಐದು ಸಂಬಂಧಗಳನ್ನು ನಾಲ್ಕು ವಿಭಕ್ತಿ ಪ್ರತ್ಯಯಗಳು ಸೂಚಿಸುತ್ತವೆ ತಾನೇ.

Eke →

೮.೬ ವಿಭಕ್ತಿ ಪ್ರತ್ಯಯಗಳು ಮತ್ತು ಕಾರಕಗಳು

ವಿಭಕ್ತಿ ಪ್ರತ್ಯಯಗಳ ಮೂಲಕ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ರ್ಯಾ: ಸೂಚಿಸುವಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಎಂತಹ

ಸವಿದೆ ಎಂಬುದನ್ನು ನಾವು ಮೇಲಿನ ಎರಡು ವಿಭಾಗಗಳಲ್ಲಿ (೮.೪-೫ರಲ್ಲಿ) ನೋಡಿರುವೆವು. ಸರ್ಜಾ ಈ ಸಂಬಂಧಗಳು ವಿಭಕ್ತಿ ಪ್ರತ್ಯಯಗಳ ಮೂಲಕ ನೇರವಾಗಿ ಸೂಚಿತವಾಗುತ್ತವೆ; ಆದರೆ, ಸಂಸ್ಕೃತದಲ್ಲಿ ಈ ರೀತಿ ನೇರವಾಗಿ ಸೂಚಿತವಾಗುವುದಿಲ್ಲ.

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೆ ಇಂತಹ ಸಂಬಂಧಗಳನ್ನು ಸೂಚಿಸುವ ಕೆಲಸ ಮಾತ್ರವಲ್ಲದೆ ಬೇರೆಯೂ ಕೆಲವು ಕೆಲಸಗಳಿರುವುದೇ ಇದಕ್ಕೆ ಮುಖ್ಯ ಕಾರಣ. ಉದಾಹರಣೆಗಾಗಿ, ಈ ಪ್ರತ್ಯಯಗಳು ಇಂತಹ ಸಂಬಂಧಗಳನ್ನು ಮಾತ್ರವಲ್ಲದೆ ನಾಮಪದಗಳ ವಚನವನ್ನೂ ಸೂಚಿಸಬೇಕಾಗುತ್ತದೆ; ಇವುಗಳ ಬಳಕೆ ಕ್ರಿಯಾಪದದೊಂದಿಗೆ ಬರುವ ಉಪಸರ್ಗಗಳ ಮೇಲೂ ಅವಲಂಬಿಸಿರಬೇಕಾಗುತ್ತದೆ; ಮತ್ತು ಇತರ ವಿಭಕ್ತಿ ಪ್ರತ್ಯಯಗಳು ನಡೆಸುವ ಕೆಲಸವನ್ನೇ ಹಲವು ಸಂದರ್ಭಗಳಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ನಡೆಸಬಲ್ಲುದು.

ವ ಕಾರಣಕ್ಕಾಗಿ, ಸಂಸ್ಕೃತದ ವೈ ಯಾಕರಣಿಗಳು “ಕಾರಕ’ ಪಟ ಬೇರೆಯೇ ಒಂದು ವ್ಯಾಕರಣ ತತ್ವವನ್ನು ಕಲ್ಪಿಸಿಕೊಂಡು, ಅದರ ಮೂಲಕ ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧವನ್ನು ಆ ಭಾಷೆಯಲ್ಲಿ ಹೇಗೆ ವಿಂಗಡಿಸಲಾಗುತ್ತದೆ ಎಂಬುದನ್ನು ವಿವರಿಸಬೇಕಾಗಿದೆ. ಕರ್ಕ, ಕರ್ಮ, ಕರಣ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣಗಳೆಂಬ ಇಂತಹ ಆರು ಕಾರಕಗಳಲ್ಲಿ ಈ ಸಂಬಂಧಗಳು ವಿಂಗಡಣೆಯಾಗುತ್ತವೆಯೆಂದು ಅವರು ಪ್ರತಿಪಾದಿಸಿದ್ದಾರೆ.

ವಿಭಕ್ತಿಗಳು ಮತ್ತು ಕಾರಕಗಳು “4

ಮೇಲೆ ಸೂಚಿಸಿದ ಹಾಗೆ, ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧಗಳನ್ನು ಹಳೆಗನ್ನಡದಲ್ಲಿ ವಿಂಗಡಿಸಿರುವ ರೀತಿ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತದ ಕತೃ ಕಾರಕದಲ್ಲಿ ಒಟ್ಟು ಸೇರುವ ಸಂಬಂಧಗಳಲ್ಲಿ ಕೆಲವು ಹಳೆಗನ್ನಡದ ಆಗುಗ ಗುಂಪಿನಲ್ಲೂ, ಇನ್ನು ಕೆಲವು ಮಾಡುಗ ಗುಂಪಿನಲ್ಲೂ ಹಂಚಿಹೋಗುತ್ತವೆ. ಇದಲ್ಲದೆ, ಬೇರೆ ಕೆಲವು ಕೊನೆ ಗುಂಪಿನ ಲ್ಸ ಸೇರುತ್ತವೆ. ಸಂಪ್ರದಾನ ಕಾರಕದಲ್ಲಿ ಬರುವ ಸಂಬಂಧಗಳು, ಮತ್ತು ಕರ್ಮ ಕಾರಕದಲ್ಲಿ ಬರುವ ಕೆಲವು ಸಂಬಂಧಗಳೂ ಇದೇ ಕೊನೆ ಗುಂಪಿನಲ್ಲಿ ಬರುತ್ತವೆ. ಇದಲ್ಲದೆ, ಕರಣ ಕಾರಕದಲ್ಲಿ ಬರುವ ಸಂಬಂಧಗಳಲ್ಲಿ ಹೆಚ್ಚಿ ನವೂ ಜಾಗ ಗುಂಪಿನಲ್ಲಿ ಬರುತ್ತವೆ.

ನಿಜಕ್ಕೂ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನು ಹಳೆಗನ್ನಡದಲ್ಲಿ ಹೇಗೆ ಸೂಚಿಸಲಾಗುತ್ತದೆ ಎಂಬುದನ್ನು ವಿವರಿಸಲು ಕಾರಕಗಳೆಂಬ ವ್ಯಾಕರಣ ತತ್ವದ ಅವಶ್ಯಕತೆಯೇ ಇಲ್ಲ (ಜಾಸ್ತಿ ವಿವರಗಳಿಗೆ ಭಟ್‌ ೧೯೯೧ ನೋಡಿ). ಹಳೆಗನ್ನಡದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳಿಗೆ ಕೊಡಬಹುದಾದ ಅರ್ಥಗಳೇ ಈ ವಿಷಯವನ್ನು ನೇರವಾಗಿ ತಿಳಿಸುತ್ತವೆ. ಇದಕ್ಕೆ ಅಪವಾದಗಳಾಗಿ ಬರುವ ಬಳಕೆಗಳೆಲ್ಲ ಸ್ಪಷ್ಟವಾಗಿ ಈ ಪ್ರತ್ಯಯಗಳ ವಿಸ್ತೃತ ಬಳಕೆಗಳಾಗಿವೆ.

ನಾಮಪದಗಳ ಲಿಂಗವನ್ನು ನಿರ್ಧರಿಸುವಲ್ಲಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವಿರುವಂತಹ ವ್ಯತ್ಯಾಸವೇ ವಿಭಕ್ತಿಗಳ ಅರ್ಥವನ್ನು ನಿರ್ಧರಿಸುವಲ್ಲೂ ಈ ಎರಡು ಭಾಷೆಗಳ ನಡುವೆ ಕಾಣಿಸುತ್ತದೆಯೆಂದು ಹೇಳಬಹುದು. ಹಳೆಗನ್ನಡದಲ್ಲಿ ನಾಮಪದಗಳ ಲಿಂಗವನ್ನು ನೇರವಾಗಿ ಅವುಗಳ ಅರ್ಥದ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿದೆ. ಇದಕ್ಕೆ ಕೆಲವೇ ಕೆಲವು ಅಪವಾದಗಳು ಮಾತ್ರ ಇವೆ.

ಆದರೆ, ಸಂಸ್ಕೃತದಲ್ಲಿ ಪ್ರತಿಯೊಂದು ನಾಮಪದದ ಲಿಂಗವನ್ನೂವಾಕ್ಯಗಳಲ್ಲಿ ಆ ನಾಮಪದದ ಬಳಕೆಯೆಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ನಿರ್ಧರಿಸಬೇಕಾಗುತ್ತ ದೆ (ಇದಕ್ಕೆ ಅಪವಾದವಾಗಿ, ಅರ್ಥವೇ ಅಧಾರವಾಗಬಹುದಾದಂತಹ ಸಂದರ್ಭಗಳು ಸಂಸ್ಕೃತದಲ್ಲಿ ಬಹಳ ಕಡಿಮೆ). ಹಾಗಾಗಿ, ಸಂಸ್ಕೃತ ವ್ಯಾಕರಣದಲ್ಲಿ ಲಿಂಗವಿಭಜನೆಯೆಂಬುದು ಒಂದು ಬಹಳ ಕ್ಲಿಷ್ಟವಾದ ವಿಷಯವಾಗಿದೆ (೭.೨.೨ ನೋಡಿ).

ಇದೇ ರೀತಿಯಲ್ಲಿ, ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧಗಳ ವಿಭಜನೆಯೂ ಸಂಸ್ಕೃತ ವ್ಯಾಕರಣದಲ್ಲಿ ಒಂದು ಬಹಳ ಕ್ಲಿ ಷ್ಟವಾದ ವಿಷಯವಾಗಿದೆ. ವಿಭಕ್ತಿ ಪ್ರತ್ಯಯಗಳ ಬಳಕೆಗೆ ಅರ್ಥವ್ಯತ್ಯಾಸ ನೇರವಾದ ಆಧಾರವಾಗಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ.

ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಅವುಗಳ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಿದೆಯಾದ ಕಾರಣ, ಅದರ ವಿಭಕ್ತಿ ಪ್ರತ್ಯಯಗಳನ್ನು ಸಂಸ್ಕೃತದ ಹಾಗೆ ಪ್ರಥಮಾ (ಮೊದಲನೆಯದು), ದ್ವಿತೀಯಾ (ಎರಡನೆಯದು), ತೃತೀಯಾ (ಮೂರನೆಯದು) ಇತ್ಯಾದಿಯಾಗಿ ಹೆಸರಿಸುವ ಬದಲು, ಆ ಪ್ರತ್ಯಯಗಳ ಅರ್ಥವನ್ನು ಸ್ಪಷ್ಟಪಡಿಸುವ ಹಾಗೆ ಬಾಧಿತ (ಅನ್‌), ಸುರು (ಇನ್‌), ಕೊನೆ (ಗೆ) ಮತ್ತು ಜಾಗ (ಒಳ್‌) ಎಂಬುದಾಗಿ ಹೆಸರಿಸುವುದೇ ಒಳ್ಳೆಯದು.

Eke →

೮.೭ ಹಳೆಗನ್ನಡ ವೈಯಾಕರಣಿಗಳ ಸಮಸ್ಯೆಗಳು

ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ, ಮೇಲೆ ಸೂಚಿಸಿದ ಹಾಗೆ, ಹಲವು ಮೂಲಭೂತವಾದ ವ್ಯತ್ಯಾಸಗಳಿವೆ. ಹಾಗಾಗಿ, ಸಂಸ್ಕೃತ ವಿಭಕ್ಷಿಗಳ ಬಳಕೆಯಲ್ಲಿ ಕಾಣಿಸುವ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ

ಅಳವಡಿಸಿಕೊಳ್ಳಲು ಸಾಧ್ಯವಾಗದು. ಹೀಗೆ ಮಾಡಲು ಪ್ರಯತ್ನಿಸಿದುದರಿಂದಾಗಿ, ಹಳೆಗನ್ನಡ ವೈಯಾಕರಣಿಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ, ಮತ್ತು ಅವರು ರಚಿಸಿದ ವ್ಯಾಕರಣಗಳು ಅನವಶ್ಯಕವಾಗಿ ಬಹಳ ಕ್ಲಿಷ್ಟವಾಗಿವೆ.

ಸಂಸ್ಕೃತದ ಹಾಗೆ ಹಳೆಗನ್ನಡದಲ್ಲೂ ಏಳು ವಿಭಕ್ತಿಗಳನ್ನು ಕಾಣಲು ಇವರು ನಡೆಸಿದ ಪ್ರಯತ್ನ ಹೇಗೆ ಅಸಫಲವಾಗಿದೆಯೆಂಬುದನ್ನು ಈಗಾಗಲೇ ಹಲವರು ವಿದ್ವಾಂಸರು ವಿವರಿಸಿದ್ದಾ ರೆ (ಕನ್ನಡ ಕೈಪಿಡಿ ೧೯೭೧:೩೮, ಕೃಷ್ಣಭಟ್ಟ ೧೯೯೨: ೧೬೪, ಸೀತಾರಾಮಯ್ಯ ೧೯೭೯:೧೪೭). ಇಲ್ಲೂ ವ್ಯಾಕರಣದ ಮೂಲತತ್ವಗಳ ಮಟ್ಟಿಗೆ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ವ್ಯತ್ಯಾಸಗಳನ್ನು ಗಮನಿಸದಿರುವುದೇ ಈ ಸಮಸ್ಯೆಗಳಿಗೆ ಮುಖ್ಯ ಕಾರಣ ಎಂಬುದನ್ನು ಕೆಳಗಿನ ಪರಿಶೀಲನೆ ಸ್ಪಷ್ಟಪಡಿಸುತ್ತದೆ.

೮.೭.೧ ಪ್ರಥಮಾ ವಿಭಕ್ತಿ

ಸಂಸ್ಕೃತದ ಹಾಗೆ ಹಳೆಗನ್ನಡಕ್ಕೆ ಪ್ರಥಮಾ ವಿಭಕ್ತಿಯ ಅವಶ್ಯಕತೆ ಯಾಕೆ ಇಲ್ಲ ಎಂಬುದನ್ನು ಮೇಲೆ (೮.೨)ರಲ್ಲಿ ವಿವರಿಸಲಾಗಿದೆ. ಹಳೆಗನ್ನಡದ ವೈಯಾಕರಣಿಗಳು ಸಂಸ್ಕೃತದ ಹಾಗೆ ಹಳೆಗನ್ನಡಕ್ಕೂ ಪ್ರಥಮಾ ವಿಭಕ್ತಿ ಬೇಕಾಗಬಹುದು ಎಂದು ಭಾವಿಸಿ, ಅದಕ್ಕಾಗಿ ಮ್‌ ಎಂಬ ಪ್ರತ್ಯಯವೊಂದನ್ನು ಕಲ್ಪಿಸಿಕೊಂಡಿದ್ದಾರೆ.

ಆದರೆ, ಈ ಕಲ್ಪನೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಕಾರಾಂತವಲ್ಲದ ಪುಲ್‌, ಬಳ್ಳಿ, ಎರಲೆ ಮೊದಲಾದ ನಾಮಪದಗಳೊಂದಿಗೆ ಮಕಾರ ಬಾರದಿರುವುದು ಒಂದು ಸಮಸ್ಯೆಯಾದರೆ, ಅಕಾರಾಂತ ಪದಗಳ ಮಕಾರ ದ್ವಿತೀಯಾ ವಿಭಕ್ತಿಯಲ್ಲೂ ಉಳಿದುಕೊಳ್ಳುವುದು (ಬೆಟ್ಟಮಂ, ಆಟಮಂ) ಇನ್ನೊಂದು ಸಮಸ್ಯೆ.

ಅಕಾರಾಂತ ಪುಲ್ಲಿಂಗ ಪದಗಳಿಗೆ (ಮತ್ತು ಮರ, ಅಕ್ಕ, ಪೊಲ, ನೆಲ ಮೊದಲಾದ ಬೇರೆ ಕೆಲವು ಅಕಾರಾಂತ ಪದಗಳಿಗೆ) ಸ್ವರ ಪರವಾದಾಗ ಈ ಮಕಾರ ನಕಾರವಾಗುವುದು (ರಾಮನುಂ, ಅಕ್ಕನುಂ, ನೆಲನುಂ), ಮತ್ತು ಈ ನಕಾರ ಇತರ ಸ್ವರದಲ್ಲಿ ಸುರುವಾಗುವ ವಿಭಕ್ತಿ ಪ್ರತ್ಯಯಗಳು ಸೇರಿದಾಗಲೂ ಹಾಗೆಯೇ ಉಳಿಯುವುದು (ಮರನಂ, ರಾಮನಿಂ, ರಾಮನೊಳ್‌) ಮತ್ತೊಂದು ಸಮಸ್ಯೆ. ಇಂತಹ ಹಲವು ಸಮಸ್ಯೆಗಳು ಅನವಶ್ಯಕವಾದ ಈ ಕಲ್ಪನೆಯಿಂದಾಗಿ ಅವರ ವ್ಯಾಕರಣಗಳಲ್ಲಿ ಉದ ೈವಿಸಿವೆ (೭.೩.೨ ನೋಡಿ).

೮.೭.೨ ತೃತೀಯೆ ಮತ್ತು ಚತುರ್ಥಿ

ತೃತೀಯೆಯೇ ಮೊದಲಾದ ಸಂಸ್ಕೃತದ ಇತರ ವಿಭಕ್ತಿಗಳಿಗೆ ಸಮನಾದ ವಿಭಕ್ತಿಗಳನ್ನು ಹಳೆಗನ್ನಡದಲ್ಲಿ ಕಾಣಲು ಇವರು ನಡೆಸಿದ ಪ್ರಯತ್ನಗಳೂ ಇಂತಹವೇ ಸಮಸ್ಯೆಗಳಿಗೆ ಕಾರಣಗಳಾಗಿವೆ.

ಉದಾಹರಣೆಗಾಗಿ, ಹಳೆಗನ್ನಡದ ಇಂ ಪ್ರತ್ಯಯ ಸಂಸ್ಕೃತದ ತೃತೀಯೆಗೆ ಸಮನಾದುದೆಂದು ಈ ವೈಯಾಕರಣಿಗಳು ಭಾವಿಸಿದ್ದಾರೆ. ಆದರೆ, ನಿಜಕ್ಕೂ ಈ ಪ್ರತ್ಯಯ ಸಂಸ್ಕೃತದ ತೃತೀಯೆಗಿಂತಲೂ ಪಂಚಮಿಗೆ ಹತ್ತಿರವಾಗಿದೆ (ಕೃಷ್ಣಭಟ್ಟ ೧೯೯೨:೧೬೪ ನೋಡಿ).

ಸಂಸ್ಕೃತದ ತೃತೀಯಾ ವಿಭಕ್ತಿಗೆ ಸಹಯೋಗವೇ ಪ್ರಾಮುಖ್ಯವಾದ ಅರ್ಥ. ಇದಕ್ಕೆ ವಿರುದ್ಧವಾದ ವಿಯೋಗಾರ್ಥವನ್ನು ಪಂಚಮೀ ವಿಭಕ್ತಿ ಸೂಚಿಸುತ್ತದೆ. ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(೧೭ಕ) ರಾಮೋ ದೇವೇಭಿರಾಗಮತ್‌ “ರಾಮನು ದೇವತೆಗಳೊಂದಿಗೆ ಬಂದ’ (೧೭ಖ) ಗ್ರಾಮಾದಾಗಚ್ಛೆತಿ “ಗ್ರಾಮದಿಂದ ಬರುತ್ತಾನೆ’

(೧೭ಕ)ದಲ್ಲಿ ರಾಮನೊಂದಿಗೆ ದೇವತೆಗಳ ಸಹಯೋಗವಿದೆಯಾದ ಕಾರಣ (ಎಲ್ಲರೂ ಒಟ್ಟಿಗೆ ಬಂದಿರುವರಾದ ಕಾರಣ), ದೇವೇಭಿಃ ಎಂಬುದಾಗಿ ತೃತೀಯಾ ವಿಭಕ್ತಿರೂಪದ ಬಳಕೆಯಾಗಿದೆ; ಆದರೆ, (೧೭ಖ)ದಲ್ಲಿ ಬರುವ ವ್ಯಕ್ತಿಗೂ ಮತ್ತು ಗ್ರಾಮಕ್ಕೂ ನಡುವೆ ವಿಯೋಗವಾಗಿದೆಯಾದ ಕಾರಣ, ಗ್ರಾಮಾತ್‌ ಎಂಬುದಾಗಿ ಪಂಚಮೀ ವಿಭಕ್ತಿ ರೂಪದ ಬಳಕೆಯಾಗಿದೆ.

ಹಳೆಗನ್ನಡದ ಇಂ ಪ್ರತ್ಯಯ ಮುಖ್ಯವಾಗಿ ವಿಯೋಗವನ್ನು ಸೂಚಿಸುತ್ತದೆಯಲ್ಲದೆ ಸಹಯೋಗವನ್ನಲ್ಲ. ಅದು ಒಂದು ಚಲನೆಯ ಸುರುವನ್ನು ಸೂಚಿಸುವ ಕಾರಣ, ವಿಯೋಗವೇ ಅದರ ಪ್ರಾಮುಖ್ಯವಾದ ಅರ್ಥ. ಇದಕ್ಕೆ ವಿರುದ್ದ ವಾದ ಸಹಯೋಗಾರ್ಥವನ್ನು ಹಳೆಗನ್ನಡದಲ್ಲಿ ಗೆ ಪ್ರತ್ಯಯ (ಇಲ್ಲವೇ ಜಾಗವನ್ನು ಸೂಚಿಸುವ ಒಳ್‌ ಪ್ರತ್ಯಯ) ಸೂಚಿಸುತ್ತದೆ. ಈ ಪ್ರತ್ಯಯಗಳ ವಿಸ್ತೃತ ಬಳಕೆಗಳಲ್ಲೂ ಈ ವ್ಯತ್ಯಾಸವನ್ನು ಕಾಣಲು ಸಾಧ್ಯವಿದೆ.

ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಇಂ ಪ್ರತ್ಯಯ ಒಂದು ಘಟನೆಗೆ ಕಾರಣವನ್ನು ಸೂಚಿಸುವುದಾದರೆ, ಗೆ ಪ್ರತ್ಯಯ ಉದ್ದೇಶವನ್ನು ಸೂಚಿಸುತ್ತದೆ. ಕಾರಣದಿಂದ ಘಟನೆ ಸುರುವಾಗುತ್ತದೆ, ಮತ್ತು ಅನಂತರ ಉದ್ದೇಶವನ್ನು ತಲಪುತ್ತದೆ ಎಂಬುದಾಗಿ ಇಲ್ಲಿ ಚಲನೆಯ ಎರಡು ಅಂಶಗಳನ್ನು ಕಾಣಲು ಸಾಧ್ಯವಿದೆ.

(೧೮ಕ) ಪುತ್ರಸ್ನೇಹದಿಂದೆ ಅತಿ ಪ್ರಳಾಪಂ ಗೆಯ್ವ ಅಂಬಾಲೆ

“ಮಗನ ಮೇಲಿನ ಪ್ರೀತಿಯಿಂದ ಬಹಳ ಗೋಳಾಡುತ್ತಿದ್ದ ಅಂಬಾಲೆ’ (೧೮ಖ) ಮದೀಯ ಪಿತನ್‌ ತಪಕ್ಕೆ ಪೋದನ್‌

“ನನ್ನ ತಂದೆ ತಪಸ್ಸಿಗೆ ಹೋದ’

(೧೮ಕ)ದಲ್ಲಿ ಗೋಳಾಡುವುದಕ್ಕೆ ಪುತ್ರಸ್ನೇಹ ಕಾರಣವಾದ ಕಾರಣ, ಆ ನಾಮಪದದೊಂದಿಗೆ ಇಂದೆ ಪ್ರತ್ಯಯ ಬಂದಿದೆ, ಮತ್ತು (೧೮ಖ)ದಲ್ಲಿ ಹೋಗುವ ಕೆಲಸಕ್ಕೆ ತಪಸ್ಸು ಉದ್ದೇಶವಾದ ಕಾರಣ, ಆ ನಾಮಪದದೊಂದಿಗೆ ಗೆ (ಕೈ) ಪ್ರತ್ಯಯ ಬಂದಿದೆ.

ಸಂಸ್ಕೃತದಲ್ಲಿ ಕರಣವನ್ನು ಸಹಯೋಗಾರ್ಥದ ವಿಸ್ತೃತ ಅರ್ಥವೆಂಬುದಾಗಿ ಪರಿಗಣಿಸಲಾಗಿದ್ದು, ಅದಕ್ಕಾಗಿ ತೃತೀಯಾ ವಿಭಕ್ತಿಯನ್ನು ಬಳಸಲಾಗುತ್ತ ದೆ. ಉದಾಹರಣೆಗಾಗಿ, ಕೆಳಗೆ (೧೯)ನೇ ವಾಕ್ಯದಲ್ಲಿ ಜಿಂಕೆಯನ್ನು ಹೊಡೆಯುವ ರಾಜನು ಅದಕ್ಕಾಗಿ ಬಾಣವನ್ನು ಬಳಸಿರುವನಾದ ಕಾರಣ, ಅಲ್ಲಿ ಆತನೊಂದಿಗೆ ಬಾಣದ ಸಹಯೋಗವಿದೆ.

(೧೯) ನರೇಶ್ವರಃ ಶರೇಣ ಮೃಗಂ ಅವಿಧ್ಯತ್‌ “ರಾಜನು ಬಾಣದಿಂದ ಜಿಂಕೆಯನ್ನು ಹೊಡೆದನು’

ಹಳೆಗನ್ನಡದಲ್ಲಿ ಕರಣವನ್ನು ಸೂಚಿಸಲು ಇಂ ಪ್ರತ್ಯಯ ಬಳಕೆಯಾಗುವುದೇನೋ ನಿಜ; ಆದರೆ ಇಲ್ಲಿ ಕರಣವನ್ನು ವಿಯೋಗದ ವಿಸ್ತೃತ ಅರ್ಥವೆಂಬುದಾಗಿ ಪರಿಗಣಿಸಿರುವ ಹಾಗೆ

ಕಾಣಿಸುತ್ತದೆ. ಕಡಿಯುವ ಘಟನೆ ಕೊಡಲಿಯಿಂದ ಸುರುವಾಗುತ್ತದೆ ಎಂಬ ವಿಷಯ ಈ ವಿಸ್ತೃತ ಬಳಕೆಗೆ ಆಧಾರವಿರಬೇಕು.

ಹಳೆಗನ್ನಡದಲ್ಲಿ ಇಂ ಪ್ರತ್ಯಯವನ್ನು ಮಾತ್ರವಲ್ಲದೆ ಒಳ್‌ ಪ್ರತ್ಯಯವನ್ನೂ ಕರಣವನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ. ಇಲ್ಲಿ ಕರಣವನ್ನು ಘಟನೆ ಸುರುವಾಗುವ ಜಾಗ (ವಿಯೋಗ ಸಂಬಂಧ) ಎಂಬುದಕ್ಕಿಂತಲೂ ಬರೀ ಜಾಗ (ಅಧಿಕರಣ ಸಂಬಂಧ) ಎಂಬುದಾಗಿ ಪರಿಗಣಿಸಿರುವ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು:

(೨೦ಕ) ಅರಲಂಬುಗಳಿಂದೆ ಮರುಳ್ವಿ (೨.೪೦) “ಪುಷ್ಪಬಾಣಗಳಿಂದ ಮೋಹಗೊಳಿಸಿ’

(೨೦ಖ) ಪಿಡಿದ ನೆಯ್ದಿಲೊಳ್‌ ತುಂಬಿಯನ್‌ ಒಯ್ಯನೆ ಸೋವುತುಂ (೨.೧೭) “(ಕೈಯಲ್ಲಿ) ಹಿಡಿದ ನೆಯ್ದಿಲೆ ಹೂವಿನಿಂದ ತುಂಬಿಯನ್ನು ಮೆಲ್ಲಗೆ ಓಡಿಸುತ್ತ’

(೨೦ಕ)ದಲ್ಲಿ ಮೋಹಗೊಳಿಸುವ ಕೆಲಸಕ್ಕಾಗಿ ಬಳಸಿದ ಕರಣವನ್ನು (ಅರಲಂಬುಗಳ್‌ ಎಂಬುದನ್ನು) ಇಂ(ದೆ) ಪ್ರತ್ಯಯದ ಮೂಲಕ ಸೂಚಿಸಲಾಗಿದೆ, ಮತ್ತು (೨೦ಖ)ದಲ್ಲಿ ಓಡಿಸುವ ಕೆಲಸಕ್ಕಾಗಿ ಬಳಸಿದ ಕರಣವನ್ನು (ನೆಯ್ದಿಲ ಎಂಬುದನ್ನು) ಒಳ್‌ ಪ್ರತ್ಯಯದ ಮೂಲಕ ಸೂಚಿಸಲಾಗಿದೆ.

೮.೭.೩ ಪಂಚಮೀ ವಿಭಕ್ತಿ

ಹಳೆಗನ್ನಡದ ಇಂ ಪ್ರತ್ಯಯವನ್ನು ತೃತೀಯಾ ಎಂದು ಪರಿಗಣಿಸಿದ ಕಾರಣ, ಪಂಚಮೀ ವಿಭಕ್ತಿ ಇಲ್ಲವಾಗಿದೆ. ಈ ಜಾಗವನ್ನು ತುಂಬಿಸಲು ಕೇಶಿರಾಜನು ಅತ್‌ ಎಂಬುದನ್ನು ಕಲ್ಪಿಸಿಕೊಂಡಿದ್ದಾನೆ (ಸೂ. ೧೦೩). ಆದರೆ, ವೆಂಕಟಾಚಲ ಶಾಸ್ತ್ರಿ ಗಳು (೧೯೯೪:೫೫) ವಿವರಿಸಿದ ಹಾಗೆ, ಈ ಪ್ರತ್ಯಯವನ್ನು ಬಳಸಬೇಕಿದ್ದಲ್ಲಿ, ಅದರೊಂದಿಗೆ ದಿಕ್ಕನ್ನು ಸೂಚಿಸುವ ಅಣ್‌ ಎಂಬುದನ್ನು ಮತ್ತು ತೃತೀಯಾ ವಿಭಕ್ತಿಯ ಇಂ ಪ್ರತ್ಯಯವನ್ನೂ ಬಳಸಬೇಕಾಗುತ್ತದೆ. ಇದಲ್ಲದೆ, ಈ ಅತ್ತಣಿಂ ಬರುವಲ್ಲೆಲ್ಲ ಬರೇ ಇಂ ಎಂಬುದನ್ನೂ ಬಳಸಲು ಸಾಧ್ಯವಿದೆ.

ಹಳೆಗನ್ನಡ ವೈಯಾಕರಣಿಗಳು ಸಂಸ್ಕೃತದ ಮಾದರಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹಳೆಗನ್ನಡಕ್ಕೆ ಕಲ್ಪಿಸಿಕೊಂಡಿರುವ ಈ ಪಂಚಮೀ ವಿಭಕ್ತಿ ಪ್ರತ್ಯಯ ಎಂತಹ ಸಮಸ್ಯೆಗಳಿಗೆಲ್ಲ ಕಾರಣವಾಗಿದೆ ಎಂಬುದನ್ನು ಈಗಾಗಲೇ ಹಲವರು ವಿದ್ದಾ ್ರಿಂಸರು ವಿವರಿಸಿದ್ದಾರೆ (ಕನ್ನಡ ಕೈಪಿಡಿ ೧೯೭೧:೩೯, ಕೃಷ್ಣ ಭಟ್ಟ ೧೯೯೨:೧೬೪, ಇತ್ಯಾದಿ).

ಹಳೆಗನ್ನಡದ ಇಂ ಪ್ರತ್ಯಯ ನಿಜಕ್ಕೂ ಒಂದೇ ರೂಪದ ತೃತೀಯಾ ಮತ್ತು ಪಂಚಮಿಗಳೆಂಬ ಎರಡು ಬೇರೆ ಬೇರೆ ಪ್ರತ್ಯಯಗಳು ಎಂಬುದಾಗಿ ಇತ್ತೀಚೆಗೆ ರಂಗನಾಥ ಶರ್ಮರು (೨೦೦೨:೧೧೩) ವಾದಿಸಿದ್ದಾರೆ. ಇದಕ್ಕೆ ಆಧಾರವಾಗಿ ಅವರು ಕೆಳಗೆ ಕೊಟ್ಟಿರುವ ಕವಿರಾಜಮಾರ್ಗದ ವಾಕ್ಯವನ್ನು ಉದಾಹರಿಸಿದ್ದಾರೆ:

(೨೧) ತನ್ನರೇಂದ್ರನಿಂ ಧರಣಿ ಸನಾಥೆ

ಈ ವಾಕ್ಯ ಕರ್ಮಣಿ ಪ್ರಯೋಗದಲ್ಲಿದೆಯೆಂದು, ಮತ್ತು ಆದಳ್‌ ಕ್ರಿಯಾಪದವನ್ನು ಈ

ಶಿ ಮೇಲೆ, ಅವರು ಈ ವಾಕ್ಯದಲ್ಲಿ ನರೇಂದ್ರ ಪದ ಕರ್ತ ಎಂಬುದಾಗಿಯೂ, ಮತ್ತು ಅದು ಇಂ

ಪ್ರತ್ಯಯದೊಂದಿಗೆ ಬಂದಿದೆಯಾದ ಕಾರಣ, ಇಂ ಎಂಬುದು ಕತಣೃವನ್ನು ಸೂಚಿಸುವ ತೃತೀಯಾ ವಿಭಕ್ತಿ ಪ್ರತ್ಯಯ ಎಂಬುದಾಗಿಯೂ ವಾದಿಸಿದ್ದಾರೆ.

ಆದರೆ, (೨೧)ರಲ್ಲಿ ಕರ್ಮಣಿಯ ಅಲ್ಪಡು ಬಂದಿಲ್ಲ. ಆದಳ್‌ ಕ್ರಿಯಾಪದಕ್ಕೆ ಅದರ ಅಳ್‌ ಪ್ರತ್ಯಯ ಸೂಚಿಸುವ ಧರಣಿ ಪದ ಕರ್ತವಾಗಬ ಸದಲ್ಲದೆ, ನರೇಂದ್ರ ಪದ ಕರ್ತವಾಗುವುದು ಕಷ್ಟ. ಅದನ್ನು ಕರ್ತವಾಗಿ ಮಾಡಬೇಕಾದಲ್ಲಿ, ಬೇರೆ ಯಾವುದಾದರೂ ಕ್ರಿಯಾಪದವನ್ನು ಊಹಿಸಿಕೊಳ್ಳಬೇಕಾಗುತ್ತದೆ. ಆದರೆ ಈ ರೀತಿ ಸಾಧಿಸಿದ “ವಿಭಕ್ತಿ ಪ್ರತ್ಯಯ’ ಹಳೆಗನ್ನಡದ ವಾಕ್ಯರಚನೆಯ ಮೇಲೆ ಅವಲಂಬಿಸಿರುವ ವಿಭಕ್ತಿ ಪ್ರತ್ಯಯವಾಗಲಾರದು.

೮.೭.೪ ಷಷ್ಠೀ ವಿಭಕ್ತಿ

ಸಂಸ್ಕೃತದ ಮಾದರಿಯನ್ನನುಸರಿಸಿ, ಹಳೆಗನ್ನಡದಲ್ಲೂ ಷಷ್ಠೀ ವಿಭಕ್ತಿ ಯಿದೆ ಎಂಬುದಾಗಿ ಹಳೆಗನ್ನಡದ ವೈಯಾಕರಣಿಗಳು ಹೇಳಿದ್ದಾರೆ (ಕೇಶಿರಾಜ ಸೂ. ೧೦೩). ಆದರೆ ಕೇಶಿರಾಜನು ಈ ಪ್ರತ್ಯಯಕ್ಕೆ ಕೊಟ್ಟಿರುವ ಅದು ಮರದ ಪಣ್‌ ಎಂಬ ಉದಾಹರಣೆ, ಮತ್ತು ೧೪೩ನೇ ಸೂತ್ರದ ಕೆಳಗೆ ಕೊಟ್ಟಿರುವ ಬೇರೆ ಹಲವು ಉದಾಹರಣೆಗಳು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಮಾತ್ರವೇ ಸೂಚಿಸುತ್ತವೆಯಲ್ಲದೆ, ಕ್ರಿಯಾಪದ ಮತ್ತು ನಾಮಪದಗಳ ನಡುವಿರುವ ಸಂಬಂಧವನ್ನು ಸೂಚಿಸುವುದಿಲ್ಲ. ಹಾಗಾಗಿ, ಇದನ್ನು ವಿಭಕ್ತಿ ಪ್ರತ್ಯಯವೆಂದು ಕರೆಯುವುದು ಸರಿಯಲ್ಲ.

ಸಂಸ್ಕೃತದಲ್ಲಿ ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಅಸ್‌, ಓಸ್‌, ಮತ್ತು ಆಮ್‌ ಎಂಬ (ಮೂರು ವಚನಗಳಲ್ಲಿ ಬರುವ) ಪ್ರತ್ಯಯಗಳನ್ನು ವಿಭಕ್ತಿ ಪ್ರತ್ಯಯಗಳ ಜಾಗದಲ್ಲೂ (ಮುಖ್ಯವಾಗಿ ಚತುರ್ಥಿ ವಿಭಕ್ತಿ ಪ್ರತ್ಯಯದ ಜಾಗದಲ್ಲಿ) ಬಳಸಲು ಸಾಧ್ಯವಿದೆ. ಹಾಗಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ ಇವನ್ನು ವಿಭಕ್ತಿ ಪ್ರತ್ಯಯಗಳೆಂದು ಕರೆದಿರುವುದರಲ್ಲಿ ಔಚಿತ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳನ್ನು ಗಮನಿಸಬಹುದು:

(೨೨ಕ) ಮಾತುಃ ಸ್ಮರತಿ

“(ಆತ) ತಾಯನ್ನು ನೆನೆಯುತ್ತಾನೆ’ (೨೨ಖ) ಭೀಮಸ್ಕ ಅನುಕರಿಷ್ಯಾಮಿ

“(ನಾನು) ಭೀಮನನ್ನು ಅನುಕರಿಸುತ್ತೇನೆ’ (೨೨ಗ) ಮಮ ಪ್ರೀತಿಃ ಸಂಜಾತಃ

“ನನಗೆ (ಅವಳಲ್ಲಿ) ಪ್ರೀತಿಯುಂಟಾಯಿತು’ (೨೨ಘ) ಕಿಮಸ್ಯ ಭಿಕ್ಟೋಃ ಕ್ರಿಯತಾಂ

“ಈ ಬಿಕ್ಷುಕನಿಗೆ ಏನು ಮಾಡೋಣ?

(೨೨ಕ)ದಲ್ಲಿ ಯಾವ ವ್ಯಕ್ತಿಯನ್ನು ನೆನೆಯಲಾಗುತ್ತಿದೆಯೋ ಆ ವ್ಯಕ್ತಿಯನ್ನು, ಮತ್ತು (೨೨ಖ)ದಲ್ಲಿ ಯಾವ ವ್ಯಕ್ತಿಯನ್ನು ಅನುಕರಿಸಲಾಗುತ್ತಿದೆಯೋ ಆ ವ್ಯಕ್ತಿಯನ್ನು, ಷಷ್ಠೀ ವಿಭಕ್ತಿಯ ಮೂಲಕ ಸೂಚಿಸಲಾಗಿದೆ; (೨೨ಗ)ದಲ್ಲಿ ಆಡುಗನಿಗೆ ಯಾರಲ್ಲಿ ಪ್ರೀತಿಯುಂಟಾಗಿದೆಯೋ ಆ ವ್ಯಕ್ತಿಯನ್ನೂ ಷಷ್ಠಿಯಿಂದಲೇ ಸೂಚಿಸಲಾಗಿದೆ.

ಆದರೆ, ಹಳೆಗನ್ನಡದಲ್ಲಿ ಅನ್‌ ಮತ್ತು ಗೆ ಪ್ರತ್ಯಯಗಳೇ ಇಂತಹ ಸಂದರ್ಭಗಳಲ್ಲಿ ಬಳಕೆಯಾಗುತ್ತವೆಯಲ್ಲದೆ ಷಷ್ಠೀ ವಿಭಕ್ತಿ ಪ್ರತ್ಯಯ ಬಳಕೆಯಾಗುವುದಿಲ್ಲ.

ಇದಲ್ಲದೆ, ಹಳೆಗನ್ನಡದಲ್ಲಿ ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯ ಸಂಸ್ಕೃತದ ಅಸ್‌, ಓಸ್‌, ಮತ್ತು ಆಮ್‌ ಎಂಬ ಷಷ್ಠೀ ವಿಭಕ್ತಿ ಪ್ರತ್ಯಯಗಳಿಂದ, ಕೆಳಗೆ ಸೂಚಿಸಿದ ಹಾಗೆ, ಬೇರೆ ಕೆಲವು ವಿಷಯಗಳಲ್ಲೂ ಭಿನ್ನವಾಗಿದೆ.

(೧) ಹಳೆಗನ್ನಡದಲ್ಲಿ ನಾಮಪದ ಮತ್ತು ಗುಣಪದಗಳೆಂಬುದಾಗಿ ಎರಡು ತೀರ ಭಿನ್ನವಾದ ಪದವರ್ಗಗಳಿವೆ ಎಂಬುದನ್ನು ನಾವು (೪.೨)ರಲ್ಲಿ ನೋಡಿರುವೆವು. ಈ ಕಾರಣಕ್ಕಾಗಿ, ಹಳೆಗನ್ನಡದಲ್ಲಿ ಒಂದು ನಾಮಪದವನ್ನು ಇಲ್ಲವೇ ಕ್ರಿಯಾಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಬೇಕಿದ್ದಲ್ಲಿ (ಗುಣಪದದ ಜಾಗದಲ್ಲಿ ಬಳಸಬೇಕಿದ್ದಲ್ಲಿ), ಅವನ್ನು ಗುಣರೂಪಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಹಳೆಗನ್ನಡದಲ್ಲಿ ಮಕ್ಕಳ, ಅರಸನ, ಮನೆಯ, ಮರದ, ಮೊದಲಾದವುಗಳು ಇಂತಹ ನಾಮಪದಗಳ ಗುಣರೂಪಗಳಲ್ಲದೆ ವಿಭಕ್ತಿರೂಪಗಳಲ್ಲ. ಅವನ್ನು ಗುಣಪದಗಳ ಹಾಗೆ ನಾಮಪದಗಳೊಂದಿಗೆ ನಾಮಪದಕಂತೆಗಳಲ್ಲಿ ಬಳಸಲು ಸಾಧ್ಯವಿದೆಯಲ್ಲ ದೆ, ನೇರವಾಗಿ ಕ್ರಿಯಾಪದಗಳೊಂದಿಗೆ ಬಳಸಲು ಸಾಧ್ಯವಾಗದು. ಈ ವಿಷಯದಲ್ಲಿ ಅವು ಕ್ರಿಯಾಪದಗಳ ಗುಣರೂಪಗಳನ್ನು (ಕೃದಂತಗಳನ್ನು) ಹೋಲುತ್ತವೆ.

ಕೃದಂತರೂಪಗಳು ಸಂಬಂಧಿಸುವ ರೂಪಗಳು ಕುಕಿಲ್ವ ಕೋಗಿಲೆ ತುಪ್ಪದ ಕಂಪು

ನಿಮಿರ್ದ ಕುರುಳ್ಗ ಲ್‌ ಮಕ್ಕಳ ಮೆಯ್‌ ಕೆಂಪೇಅುದ ಕಣ್ಗಳ್‌ ಅರಸನ ಅಮ್ಟೆ

ಪಳಂಚಿದ ಬಣ್ಣಂಗಳ್‌ ಕೋಂಟೆಯ ಚೆಲ್ವು

ಆದರೆ ಸಂಸ್ಕೃತದಲ್ಲಿ ಗುಣಪದಗಳು ಮತ್ತು ನಾಮಪದಗಳು ಒಂದೇ ಪದವರ್ಗದಲ್ಲಿ ಬರುತ್ತವೆ. ಹಾಗಾಗಿ, ಅದರ ನಾಮಪದ ಮತ್ತು ಕ್ರಿಯಾಪದಗಳಿಗೆ ಹಳೆಗನ್ನಡದಲ್ಲಿರುವ ಹಾಗೆ ವಿಶಿಷ್ಟವಾದ ಗುಣರೂಪಗಳಿಲ್ಲ. ಸಂಸ್ಕೃತದ ಕೃದಂತಗಳು ನಾಮಪದಗಳೇ; ಇದಲ್ಲದೆ, ಅದರ ನಾಮಪದಗಳ ಸಂಬಂಧಿಸುವ (ಷಷ್ಠೀ ವಿಭಕ್ತಿಯ) ರೂಪಗಳನ್ನು ಬೇರೆ ನಾಮಪದಗಳೊಂದಿಗೆ ಮಾತ್ರವಲ್ಲದೆ, ನೇರವಾಗಿ ಕ್ರಿಯಾಪದಗಳೊಂದಿಗೂ ಸಂಬಂಧಿಸಲು ಸಾಧ್ಯವಿದೆ (೮.೭.೪ ನೋಡಿ).

(೨) ಹಳೆಗನ್ನಡದಲ್ಲಿ ಗುಣಪದಗಳ ಹಾಗೆ, ಮತ್ತು ಕ್ರಿಯಾಪದಗಳ ಗುಣರೂಪಗಳ ಹಾಗೆ, ನಾಮಪದಗಳ ಗುಣರೂಪಗಳನ್ನೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆ; ಆದರೆ, ಇದಕ್ಕಾಗಿ ಗುಣಪದಗಳ ಹಾಗೆ, ಮತ್ತು ಕ್ರಿಯಾಪದಗಳ ಗುಣರೂಪಗಳ ಹಾಗೆ, ನಾಮಪದಗಳ ಗುಣರೂಪಗಳಿಗೂ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ ಅವನ್ನು ನಾಮರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ.

ಕ್ರಿಯಾಪದ ನಾಮಪದ ನಗುವರನ್‌ ಅಅುದಳ್‌ ಬಿರ್ದಿನಂಗೆ ಸೆಅಪು ಗೆಯ್ದರ್‌ ಎಂದಳ್ಗೆ ಕರ್ಣನಿಂತೆಂದಂ ರಥದನ್‌ ಅಶ್ವತ್ಥಾಮನ್‌

ಕೂರದರ್‌ ಪೋದರ್‌ ಮನೆಯನ್‌ ಬಂದನ್‌

ಮೊದಲನೆಯ ಕಾಲಂನಲ್ಲಿ ಕ್ರಿಯಾಪದಗಳ ಗುಣರೂಪಗಳನ್ನು ಮತ್ತು ಎರಡನೆಯ ಕಾಲಂನಲ್ಲಿ ನಾಮಪದಗಳ ಗುಣರೂಪ(ಷಷ್ಠೀರೂಪ)ಗಳನ್ನು ನಾಮರೂಪಕ್ಕೆ ಬದಲಾಯಿಸಿ, ಅನಂತರ ಅವನ್ನು ನಾಮಪದಗಳ ಜಾಗದಲ್ಲಿ ಬಳಸಲಾಗಿದೆ. ಉದಾಹರಣೆಗಾಗಿ, ಎಂದಲ್ಲೆ ಎಂಬುದರಲ್ಲಿ ಎನ್‌ ಕ್ರಿಯಾಪದದ ಗುಣರೂಪವಾದ ಎಂದ ಎಂಬುದಕ್ಕೆ ಅಳ್‌ ಲಿಂಗ-ವಚನ ಪ್ರತ್ಯಯವನ್ನು ಸೇರಿಸಿ ನಾಮರೂಪಕ್ಕೆ ಬದಲಾಯಿಸಲಾಗಿದೆ (ಎಂದಳ್‌ “ಹೇಳಿದವಳು’), ಮತ್ತು ಅನಂತರ ಅದಕ್ಕೆ ಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲಾಗಿದೆ.

ಇದೇ ರೀತಿಯಲ್ಲಿ ಬಿರ್ದಿನಂಗೆ ಎಂಬುದರಲ್ಲಿ ಬಿರ್ದು “ಆತಿಥ್ಯ’ ನಾಮಪದದ ಗುಣರೂಪವಾದ ಬಿರ್ದಿನ ಎಂಬುದಕ್ಕೆ ಅನ್‌ ಲಿಂಗ-ವಚನ ಪ್ರತ್ಯಯವನ್ನು ಸೇರಿಸಿ ನಾಮರೂಪಕ್ಕೆ ಬದಲಾಯಿಸಲಾಗಿದೆ (ಬಿರ್ದಿನನ್‌ “ಆತಿಥ್ಯದವನು, ಅತಿಥಿ’) ಮತ್ತು ಅನಂತರ ಅದಕ್ಕೆಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲಾಗಿದೆ.

ಸಂಸ್ಕೃತದ ಷಷ್ಠೀ ವಿಭಕ್ತಿ ಪ್ರತ್ಯಯಕ್ಕೂ, ಹಳೆಗನ್ನಡದ ಅ ಪ್ರತ್ಯಯಕ್ಕೂ ನಡುವೆ ಇಂತಹ ಮೂಲಭೂತ ವ್ಯತ್ಯಾಸಗಳಿವೆಯಾದ ಕಾರಣ, ಸಂಸ್ಕೃತದ ಷಷ್ಠೀ ವಿಭಕ್ತಿ ಪ್ರತ್ಯಯದ ಹಾಗೆ ಹಳೆಗನ್ನಡದ ಅ ಪ್ರತ್ಯಯವನ್ನು ವಿಭಕ್ತಿ ಪ್ರತ್ಯಯವೆಂದು ಕರೆಯುವುದು ಸರಿಯಲ್ಲ.

ಇದಲ್ಲದೆ, ಹಳೆಗನ್ನಡದಲ್ಲೇನೇ ನಾಮಪದವನ್ನು ಕ್ರಿಯಾಪದದೊಂದಿಗೆ ಸಂಬಂಧಿಸುವ ಅನ್‌, ಇನ್‌, ಗೆ, ಮತ್ತು ಒಳ್‌ ಎಂಬ ವಿಭಕ್ತಿ ಪ್ರತ್ಯಯಗಳಿಗೂ, ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸುವ ಅ ಪ್ರತ್ಯಯಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಉದಾಹರಣೆಗಾಗಿ, ವಿಭಕ್ತಿ ಪತ್ನಯಗಳೊಂದಿಗೆ ಬರುವ ನಾಮಪದಗಳಿಗೆ ಉಂ (ಅಂ)

ಇದಿ ವ್ರ

“ಮತ್ತು’ ಪ್ರತ್ಯಯವನ್ನು ಸೇರಿಸಿ ಹೇಳಲು ಸಾಧ್ಯವಿದೆ.

(೨೨ಕ) ಮೆಯ್ಕೊಳುಡಿದ ಅಂಬುಗಳುಮಂ “ಶರೀರದೊಳಗೆ ಮುರಿದು ಹೋಗಿದ್ದ ಬಾಣಗಳನ್ನೂ’ (೨೨ಖ) ಕಾಲಿಂದೆಯುಂ ಕೈಯಿಂದೆಯುಂ ಘಟ್ಟಿಸಿದಂ “ಕಾಲಿನಿಂದಲೂ ಕೈಯಿಂದಲೂ ಹೊಡೆದನು’ (೨೨ಗ) ಅರಸಂಗಂ ಅರಸಿಗಂ ಪುಟ್ಟಿದನೇ “ಅರಸನಿಗೂ ಅರಸಿಗೂ ಹುಟ್ಟಿದನೇ? (೨೨ಘ) ನೀರೊಳಂ ಕಿಚ್ಚಿನೊಳಂ ಪೊರಳ್ಳು “ನೀರಿನಲ್ಲೂ ಬೆಂಕಿಯಲ್ಲೂ ಹೊರಳಿ’

ಆದರೆ ಸಂಬಂಧಿಸುವ ಅ ಪ್ರತ್ಯಯದೊಂದಿಗೆ ಬರುವ ನಾಮಪದಗಳಿಗೆ ಈ ರೀತಿ ಉಂ (ಅಂ) ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು (ಕೇಶಿರಾಜ ಸೂ. ೧೩೩ ನೋಡಿ). ಈ ವಿಷಯದಲ್ಲಿ ಸಂಬಂಧಿಸುವ ಅ ಪ್ರತ್ಯಯ ಕೃದಂತಗಳಲ್ಲಿ ಬರುವ ಅ ಪ್ರತ್ಯಯದ ಹಾಗೆ ವರ್ತಿಸುತ್ತದೆಯಲ್ಲದೆ, ವಿಭಕ್ತಿ ಪ್ರತ್ಯಯಗಳ ಹಾಗೆ ವರ್ತಿಸುವುದಿಲ್ಲ. ಗೆಲ್ಬ, ಪಾಡುವ, ಅಅಆುಯದ ಮೊದಲಾದ ಕೃದಂತ . (ಗುಣರೂಪ)ಗಳೊಂದಿಗೂ ಉಂ ಪ್ರತ್ಯಯ ಬರಲಾರದು.

ಇವೆರಡಕ್ಕೂ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ, ಅವನ್ನು ಬದಲಾಯಿಸಿದಲ್ಲಿ ಮಾತ್ರ, ಅವುಗಳೊಂದಿಗೆ ಉಂ ಪ್ರತ್ಯಯವನ್ನು ಬಳಸಲು ಸಾಧ್ಯವಿದೆ ಎಂಬುದನ್ನು

ಮೇಲೆ ನೋಡಿರುವೆವು.

ಇಲ್ಲಿ ನಾವು ಗಮನಿಸಬೇಕಾಗಿರುವ ಮುಖ್ಯವಾದ ವಿಷಯವೇನೆಂದರೆ, ಹಳೆಗನ್ನಡದಲ್ಲಿ ಕ್ರಿಯಾಪದಗಳ ಕೃದಂತರೂಪಗಳು ಮತ್ತು ನಾಮಪದಗಳ ಸಂಬಂಧಿಸುವ ರೂಪಗಳು ಪದಕಂತೆಗಳ ಅಂಗಗಳಾಗಿ ಬರಬಲ್ಲುವಲ್ಲದೆ, ನೇರವಾಗಿ ವಾಕ್ಯಗಳ ಅಂಗಗಳಾಗಿ ಬರಲಾರವು. ಅವು ನಾಮಪದಗಳಿಗಿಂತ ಮತ್ತು ಅವುಗಳ ವಿಭಕ್ತಿ ರೂಪಗಳಿಗಿಂತ ತೀರ ಭಿನ್ನವಾದ ಸ್ತರದಲ್ಲಿ ಬಳಕೆಯಾಗುತ್ತವೆ. ಅವನ್ನು ಬಳಸಿರುವ ಪದಕಂತೆಗಳನ್ನು ಮಾತ್ರ ವಾಕ್ಯಗಳ ಅಂಗಗಳಾಗಿ ಬಳಸಲು ಸಾಧ್ಯವಿದೆ.

(೨೩ಕ) ಬಂದ ಕುಂಭಸಂಭವಂ (೨೩ಖ) ಬಂದ ಕುಂಭಸಂಭವನಂ ಕಂಡಂ

(೨೪ಕ) ನಿನ್ನ ಯಶಂ (೨೪ಖ) ನಿನ್ನ ಯಶಮಂ ಕರಿದು ಮಾಡಿದೆಂ

(೨೩ಕ)ದಲ್ಲಿ ಬರ್‌ ಕ್ರಿಯಾಪದದ ಕೃದಂತರೂಪವನ್ನು (ಬಂದ ಎಂಬುದನ್ನು) ಒಂದು ಪದಕಂತೆಯ ಅಂಗವನ್ನಾಗಿ ಮಾಡಲಾಗಿದೆ, ಮತ್ತು (೨೩ಖ)ದಲ್ಲಿ ಆ ಪದಕಂತೆಯನ್ನು ಒಂದು ವಾಕ್ಯದ ಅಂಗವನ್ನಾಗಿ ಮಾಡಲಾಗಿದೆ. ಇದೇ ರೀತಿಯಲ್ಲಿ, (೨೪ಕ)ದಲ್ಲಿ ನೀನ್‌ ಎಂಬುದರ ಸಂಬಂಧಿಸುವ ರೂಪವನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಲಾಗಿದೆ, ಮತ್ತು (೨೪ಖ)ದಲ್ಲಿ ಆ ಪದಕಂತೆಯನ್ನು ಒಂದು ವಾಕ್ಯದ ಅಂಗವನ್ನಾಗಿ ಮಾಡಲಾಗಿದೆ.

ಪದಕಂತೆಯನ್ನು ಕೆಳಗಿನ ಸ್ತರವೆಂದು, ಮತ್ತು ವಾಕ್ಯವನ್ನು ಅದಕ್ಕಿಂತ ಮೇಲಿನ ಸ್ತರವೆಂದು ಪರಿಗಣಿಸಲು ಸಾಧ್ಯವಿದ್ದು , ಗುಣಪದಗಳು, ಕೃದಂತಗಳು, ಮತ್ತು ನಾಮಪದಗಳ ಸಂಬಂಧಿಸುವ ರೂಪಗಳು ಕೆಳಗಿನ ಸ್ತರದಲ್ಲಿ ಮಾತ್ರ ಬರಬಲ್ಲುವು.

೮.೭.೫ ವಿಭಕ್ತಿ ಪಲ್ಲಟ

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ, ಅವು ಸೂಚಿಸಬೇಕಾಗಿರುವ ಸಂಬಂಧ(ನಾಮ- ಕ್ರಿಯಾಸಂಬಂಧ)ಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿಲ್ಲ. ಹಾಗಾಗಿ, ಒಂದೇ ಸಂಬಂಧವನ್ನು ಎರಡು ಅಥವಾ ಜಾಸ್ತಿ ವಿಭಕ್ತಿ ಪ್ರತ್ಯಯಗಳ ಮೂಲಕ ಸೂಚಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕಾರಣವನ್ನು ಸೂಚಿಸಲು ತೃತೀಯೆಯನ್ನೂ ಬಳಸಬಹುದು, ಪಂಚಮಿಯನ್ನೂ ಬಳಸಬಹುದು (ಕಾರಣೇನ, ಕಾರಣಾತ್‌), ಯಾರೊಂದಿಗೆ ಮಾತನಾಡಿದ್ದು ಎಂಬುದನ್ನು ಸೂಚಿಸಲು ಚತುರ್ಥಿಯನ್ನೂ ಬಳಸಬಹುದು, ದ್ವಿತೀಯೆಯನ್ನೂ ಬಳಸಬಹುದು; ಯಾರಿಗೆ ಕೊಟ್ಟದ್ದು ಎಂಬುದನ್ನು ಸೂಚಿಸಲು ಚತುರ್ಥಿಯನ್ನೂ ಬಳಸಬಹುದು, ಷಷ್ಠಿ ಇಲ್ಲವೇ ಸಪ್ತಮಿಯನ್ನೂ ಬಳಸಬಹುದು; ಇತ್ಯಾದಿ (ಸ್ಪೀಜರ್‌ ೧೮೮೬ ನೋಡಿ).

ಇದಲ್ಲದೆ, ಮೇಲೆ ಸೂಚಿಸಿದ ಹಾಗೆ, ಕ್ರಿಯಾಪದದೊಂದಿಗೆ ಬರುವ ಉಪಸರ್ಗಗಳನ್ನನುಸರಿಸಿ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು (ಅರ್ಥದಲ್ಲಿ ವ್ಯತ್ಯಾಸವಿಲ್ಲದಿದ್ದರೂ) ಸಂಸ್ಕೃತದಲ್ಲಿ ಬಳಸಬೇಕಾಗುತ್ತದೆ, ಮತ್ತು ಕ್ರಿಯಾಪದವು ಕರ್ತರಿ ರೂಪದಲ್ಲಿದೆಯೇ ಅಥವಾ ಕರ್ಮಣಿ ರೂಪದಲ್ಲಿದೆಯೇ ಎಂಬುದನ್ನಾಧರಿಸಿಯೂ ಅದರೊಂದಿಗೆ ಬರುವ ನಾಮಪದಗಳ ವಿಭಕ್ತಿಯಲ್ಲಿ

ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಸಂಸ್ಕೃತದಲ್ಲಿ ಸಾಕಷ್ಟು “ವಿಭಕ್ತಿಪಲ್ಲಟ’ಗಳು ಕಾಣಿಸಿಕೊಳ್ಳಲು ಕಾರಣಗಳಾಗಿವೆ.

ಹಳೆಗನ್ನಡದಲ್ಲಿ ಕಾಣಿಸುವ “ವಿಭಕ್ತಿಪಲ್ಲಟ’ವೂ ಇಂತಹದೇ ಆಗಿರಬೇಕೆಂದು ಅದರ ವೈಯಾಕರಣಿಗಳು ನಿರ್ಧರಿಸಿರುವ ಹಾಗೆ ಕಾಣಿಸುತ್ತದೆ; ಕೇಶಿರಾಜನ ಅಭಿಪ್ರಾಯದಂತೆ, ಹಳೆಗನ್ನಡದ ವಿಭಕ್ತಿ ಪ್ರತ್ಯಯಗಳನ್ನು ಹೇಗೂ ಬಳಸಬಹುದು (“ಇಂತೀ ಪೇಲ್ಪಿ ವಿಭಕ್ತಿಗಳೆಂತುಂ ಪಲ್ಲಟಿಸುಗುಂ ಯಥೇಷ್ಟಂ’ (ಸೂ. ೧೪೫). ಆದರೆ, ನಿಜಕ್ಕೂ ಹಳೆಗನ್ನಡದಲ್ಲಿ ಸಂಸ್ಕೃತದಲ್ಲಿ ಕಾಣಿಸುವಂತಹ ವಿಭಕ್ತಿ ಪಲ್ಲಟವಿಲ್ಲ.

ವೈಯಾಕರಣಿಗಳು ಹಳೆಗನ್ನಡದಲ್ಲಿ ಬಳಕೆಯಲ್ಲಿವೆಯೆಂದು ಹೇಳುವ ವಿಭಕ್ತಿ ಪಲ್ಲಟಗಳನ್ನು ಕೆಳಗೆ ಸೂಚಿಸಿದ ಹಾಗೆ ವಿಂಗಡಿಸಲು ಸಾಧ್ಯವಿದ್ದು, ಅವು ಕಾಣಿಸಿಕೊಳ್ಳಲು ಬೇರೆ ಬೇರೆ ಕಾರಣಗಳಿವೆ:

(೧) ಹಲವು ಸಂದರ್ಭಗಳಲ್ಲಿ ಈ ರೀತಿ ಎರಡು ವಿಭಕ್ತಿ ಪ್ರತ್ಯಯಗಳ ಬಳಕೆಯಾಗಿರುವಲ್ಲೆಲ್ಲ ಅರ್ಥವ್ಯತ್ಯಾಸವೂ ಕಾಣಿಸಿಕೊಳ್ಳುತ್ತ ದೆ, ಮತ್ತು ಈ ಅರ್ಥವ್ಯತ್ಯಾಸವನ್ನು ವಿಭಕ್ತಿ ಪ್ರತ್ಯಯಗಳ ಮೂಲಾರ್ಥದಿಂದ ಸಾಧಿಸಲೂ ಸಾಧ್ಯವಾಗುತ್ತ ಜ್‌

ಉದಾಹರಣೆಗಾಗಿ, ತಾವರೆಯೊಳ್‌ ಪುಟ್ಟಿದಂ ಮತ್ತು ತಾವರೆಗೆ ಪುಟ್ಟಿದಂ ಎಂಬವುಗಳ ನಡುವೆ ಒಳ್‌ ಮತ್ತು ಗೆ ಪ್ರತ್ಯಯಗಳ ನಡುವಿರುವಂತಹದೇ ಅರ್ಥವ್ಯತ್ಯಾಸವಿರುವ ಹಾಗೆ ಕಾಣಿಸುತ್ತದೆ. ಒಳ್‌ ಎಂಬುದು ಇಲ್ಲಿ ಹುಟ್ಟಿದ ಜಾಗವನ್ನು ಸೂಚಿಸುವುದಾದರೆ, ಗೆ ಎಂಬುದು ಸಂಬಂಧವನ್ನು ಸೂಚಿಸುತ್ತದೆ.

ಪೂವನರ್ಚಿಸಿದಂ ಮತ್ತು ಪೂವಿಂದರ್ಚಿಸಿದಂ ಎಂಬ ಎರಡು ಬಳಕೆಗಳ ನಡುವೆಯೂ ಅರ್ಥವ್ಯತ್ಯಾಸವಿದೆ. ಮೊದಲನೆಯ ಬಳಕೆಯಲ್ಲಿ ಅರ್ಚನೆಯಿಂದ ಬಾಧಿತವಾಗಿರುವ ವಸ್ತು ಹೂವು ಎಂಬುದನ್ನು ಸೂಚಿಸಲು ಅನ್‌ ಪ್ರತ್ಯಯವನ್ನು ಬಳಸಲಾಗಿದೆಯಾದರೆ, ಎರಡನೆಯದರಲ್ಲಿ ಅರ್ಚನೆಗೆ ಬಳಸಿದ ವಸ್ತು ಹೂವು ಎಂಬುದನ್ನು ಸೂಚಿಸಲು ಇಂದ ಪ್ರತ್ಯಯವನ್ನು ಬಳಸಲಾಗಿದೆ.

ಒಂದು ದಿನದೊಳ್‌ ಬಂದಂ ಎಂಬುದು ಅವಧಿಯನ್ನು ಸೂಚಿಸುವುದಾದರೆ, ಒಂದು ದಿನಂ ಬಂದಂ ಎಂಬುದು ಸಮಯವನ್ನಷ್ಟೇ ಸೂಚಿಸುತ್ತದೆ; ಬರಲು ಎಷ್ಟು ಸಮಯ ಹಿಡಿಯಿತು ಎಂಬುದನ್ನು ಈ ಎರಡನೆಯ ಬಳಕೆ ಸೂಚಿಸುವುದಿಲ್ಲ.

(೨) ಬೇರೆ ಕೆಲವು ಉದಾಹರಣೆಗಳಲ್ಲಿ ತೀರ ಭಿನ್ನವಾದ ರಚನೆಗಳು ಕಾಣಿಸುತ್ತಿದ್ದು, ನಿಜಕ್ಕೂ ಅವು ವಿಭಕ್ತಿ ಪಲ್ಲಟಕ್ಕೆ ಉದಾಹರಣೆಗಳಲ್ಲ. ರಸಿಕರ ಚಕ್ರವರ್ತಿ ಎಂಬುದೊಂದು ಪದಕಂತೆ, ರಸಿಕರೊಳ್‌ ಚಕ್ರವರ್ತಿ ಎಂಬುದು ಒಂದು ವಾಕ್ಯ; ಇದೇ ರೀತಿಯಲ್ಲಿ ಕೊಡೆಯೊಡೆಯಂ ಎಂಬುದು ಪದಕಂತೆ, ಕೊಡೆಗೊಡೆಯಂ ಎಂಬುದು ವಾಕ್ಯ.

(೩) ಇನ್ನು ದ್ವಿತೀಯಾರ್ಥದಲ್ಲಿ ಷಷ್ಠಿ ಬರುತ್ತದೆ ಎಂದು ಹೇಳಿರುವಲ್ಲಿ ದ್ವಿತೀಯೆಗಿರುವ ಎರಡು ರೂಪಗಳಲ್ಲಿ ಒಂದನ್ನು ಷಷ್ಠಿಯೆಂದು ಭ್ರಮಿಸಿರುವ ಹಾಗೆ ಕಾಣಿಸುತ್ತದೆ. ನಿಜಕ್ಕೂ ಹಳೆಗನ್ನಡದಲ್ಲಿ ದ್ವಿತೀಯೆಗೆ ಅನ್‌ ಮತ್ತು ಅ ಎಂಬುದಾಗಿ ಎರಡು ರೂಪಗಳಿವೆಯೆಂದು ಹೇಳುವ ಅವಶ್ಯಕತೆಯಿದೆ (ತೆಂಕನಾಡಂ ಮಅಕಯಲ್ಕೆ, ತೆಂಕನಾಡ ಮಅಕೆಯಲೈ).

ಹಳೆಗನ್ನಡದ ಹಲವು ವೈಶಿಷ್ಟ್ಯಗಳನ್ನು ಉಳಿಸಿಕೊಂಡಿರುವ ಕರಾವಳಿಯ ಆಧುನಿಕ ಕನ್ನಡ ಪ್ರಭೇದಗಳಲ್ಲಿ ದ್ವಿತೀಯೆಯ ಅನ್ನು ಎಂಬುದರ ಬದಲು ಅ ಪ್ರತ್ಯಯವೇ ಬಳಕೆಯಲ್ಲಿದೆ. ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಮರವ ಕಡುದವು “ಮರವನ್ನು ಕಡಿದರು’, ಅವನ ಬಿಟ್ಟವು “ಅವನನ್ನು ಬಿಟ್ಟರು’ ಎಂಬಂತಹ ಬಳಕೆಗಳಿದ್ದು, ಇವುಗಳಲ್ಲಿ ದ್ವಿತೀಯಾ ವಿಭಕ್ತಿಗೆ ಅ ರೂಪವಿದೆ.

ವೆಂಕಟಾಚಲ ಶಾಸ್ತ್ರಿಗಳು (೧೯೯೪:೬೦) ಹಳೆಗನ್ನಡದ ಈ ಅ ಪ್ರತ್ಯಯದ ಬಳಕೆಯಲ್ಲಿ ಅನ್‌ ಎಂಬುದರ ಅತನ “ಸವೆದು’ಹೋಗಿರಬಹುದೆಂದು ಸೂಚಿಸಿದ್ದಾರೆ. ಹವ್ಯಕದಲ್ಲಿ ಈ ದ್ವಿತೀಯೆಯ ಅನಂತರ ಒತ್ತಿ ಹೇಳುವ ಉದೆ ಪ್ರತ್ಯಯವನ್ನು ಬಳಸಿದಾಗ ನಕಾರ ಕಾಣಿಸಿಕೊಳ್ಳುವುದಾದ ಕಾರಣ (ಮರವನ್ನುದೆ ಕಡುದವು “ಮರವನ್ನೂ ಕಡಿದರು’), ಈ ಸೂಚನೆ ಸರಿಯಿರಬಹುದೇನೋ ಎಂದೆನಿಸುತ್ತದೆ.

ಆದರೆ, ಈ ಅ ಪ್ರತ್ಯಯವನ್ನು ಬಳಸಿದಾಗ ಇನ್‌ ಮತ್ತು ಅರ್‌ (ಅಲ್‌) ಆಗಮಗಳು ಬರುತ್ತವೆ, ಮತ್ತು ಅನ್‌ ಪ್ರತ್ಯಯವನ್ನು ಬಳಸಿದಾಗ ಈ ಆಗಮಗಳು ಬರುವುದಿಲ್ಲ ಎಂಬುದನ್ನು ಗಮನಿಸಿದಾಗ, ಇಲ್ಲಿ ಬೇರೇನೋ ನಡೆದಿರುವ ಹಾಗೆ ಅನಿಸುತ್ತದೆ. ಹವ್ಯಕದ ಕಾಡಿನ “ಕಾಡನ್ನು’, ಕಣ್ಣಿನ “ಕಣ್ಣ ನ್ನು’ ಅದರ “ಅದನ್ನು’, ಎರಡರ “ಎರಡನ್ನು’ ಎಂಬಂತಹ ದ್ವಿತೀಯಾರೂಪಗಳಲ್ಲಿ ಈ ಆಗಮಗಳು ಬಂದಿರುವುದನ್ನು ಕಾಣಬಹುದು.

ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಕನ್ನಡದಲ್ಲೂ ದ್ವಿತೀಯಾ ವಿಭಕ್ತಿ ಪ್ರತ್ಯಯ ವ್ಯಂಜನಗಳ ಅನಂತರ ಅ ರೂಪದಲ್ಲಿ ಬರುತ್ತ ದೆ (ಮರಂಗಳ “ಮರಗಳನ್ನು’, ಅದರ “ಅದನ್ನು’, ಹಾರರ “ಬ್ರಾಹ್ಮಣರನ್ನು’), ಮತ್ತು ಸ್ವರಗಳ ಅನಂತರ ನ ರೂಪದಲ್ಲಿ (ಅತ್ತೆನ “ಅತ್ತೆಯನ್ನು’, ಮರನ “ಮರವನ್ನು’) ಬರುತ್ತದೆ (ಕುಶಾಲಪ್ಪ ಗೌಡ ೧೯೭೦:೪೪).

ಹಳೆಗನ್ನಡದಲ್ಲೂ ಅದಜ ತಡೆವುದಧರ್ಮಂ ಎಂಬಲ್ಲಿ ಈ ಪ್ರತ್ಯಯದೊಂದಿಗೆ ಅಾಗಮ ಬಂದಿದೆ. ಇನಾಗಮವೂ ಬರುತ್ತದೆಯೋ ಎಂಬುದನ್ನು ಪರಿಶೀಲಿಸಬೇಕು.

ಆದರೆ, ಷಷ್ಠಿಯಲ್ಲಿ ಕಾಣಿಸುವ ಅದಾಗಮ ಈ ಪ್ರತ್ಯಯದ ಬಳಕೆಯಲ್ಲಿಲ್ಲ. ಹವ್ಯಕದ ಮರದ ಕಾಲು ಮತ್ತು ಮರವ ಕಡುದವು ಎಂಬೆರಡು ಬಳಕೆಗಳಲ್ಲಿ ಈ ವ್ಯತ್ಯಾಸವನ್ನು ಕಾಣಬಹುದು. ಗೌಡ ಕನ್ನಡದಲ್ಲೂ ಮರನ “ಮರವನ್ನು’ ಮತ್ತು ಮರದ “ಮರದ’ ಎಂಬುದಾಗಿ ಈ ಎರಡು ವಿಭಕ್ತಿ ರೂಪಗಳೊಳಗೆ ವ್ಯತ್ಯಾಸವಿದೆ (ಕುಶಾಲಪ್ಪ ಗೌಡ ೧೯೭೦: ೪೭)

ಹಳೆಗನ್ನಡದ ಗ್ರಂಥಗಳು ಮುಖ್ಯವಾಗಿ ಜೈನ ಲೇಖಕರಿಂದ ಸೃಷ್ಟಿಯಾಗಿದ್ದು, ಇವರ ಕೇಂದ್ರ ಸ್ಥಾನ ಕರಾವಳಿಯಲ್ಲಿದ್ದುದೇ ಹಳೆಗನ್ನಡದಲ್ಲಿ ಈ ರೀತಿ ಕರಾವಳಿಯ ಕನ್ನಡ ಪ್ರಭೇದದ ಹಲವು ವೈಶಿಷ್ಟ್ಯಗಳು ಕಾಣಿಸಿಕೊಳ್ಳಲು ಕಾರಣವಿರಬಹುದು.

(೪) ಅವಶ್ಯವಿಲ್ಲದಲ್ಲಿ ವಿಭಕ್ತಿ ಪ್ರತ್ಯಯವನ್ನು ಬಳಸದೆಯೂ ಇರಲು ಸಾಧ್ಯ ಎಂಬುದು ಹಳೆಗನ್ನಡ ವಿಭಕ್ತಿ ಪ್ರಯೋಗದ ಒಂದು ವೈಶಿಷ್ಟ 8 (೮.೨ ನೋಡಿ). ದ್ವಿತೀಯೆಯ ಬದಲು ಪ್ರಥಮೆ ಕಾಣಿಸುವಂತಹ ಸಂದರ್ಭಗಳೆಲ್ಲ ಈ ವೈಶಿಷ್ಟ ದ ದ್ಯೋತಕಗಳಾಗಿವೆಯಲ್ಲ ದೆ ವಿಭಕ್ತಿ ಪಲ್ಲಟಕ್ಕೆ (ಇಲ್ಲವೇ ಸಮಾಸಕ್ಕೆ) ಉದಾಹರಣೆಗಳಲ್ಲ.

ವಿಭಕ್ತಿ ಪಲ್ಲಟಕ್ಕೆ ವೈಯಾಕರಣಿಗಳು ಕೊಡುವ ಉದಾಹರಣೆಗಳನ್ನು ಹಾಗೆಯೇ ಪರಿಶೀಲಿಸಿದಲ್ಲಿ ಅವುಗಳ ಉದ್ದೇಶವೇನೆಂಬುದು ಸ್ಪಷ್ಟವಾಗುವುದಿಲ್ಲ. ಅವು ಕಾಣಿಸಿಕೊಳ್ಳುವ ಕವಿಗಳ ಪ್ರಯೋಗಗಳನ್ನು ಪರಿಶೀಲಿಸಿದಾಗ ಮಾತ್ರ ನಿಜಕ್ಕೂ ಅವು ಒಂದೇ ಅರ್ಥದಲ್ಲಿ ಬಂದಿವೆಯೇ, ಅಥವಾ ಬೇರೆ ಬೇರೆ ಅರ್ಥಗಳನ್ನು ಸೂಚಿಸುವುದಕ್ಕಾಗಿ ಬಂದಿವೆಯೇ ಎಂಬ ವಿಷಯ ಸ್ಪ ಷ್ಟವಾಗಬಲ್ಲುದು.

೮.೭.೬ ಕಾರಕಗಳು

ಮೇಲೆ (೮.೬)ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು

ಸೂಚಿಸುವ ನಾಮ-ಕ್ರಿಯಾ ಸಂಬಂಧಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿಲ್ಲ. ಹಾಗಾಗಿ, ಆ ಭಾಷೆಯಲ್ಲಿ ನಾಮ-ಕ್ರಿಯಾ ಸಂಬಂಧಗಳನ್ನು ಹೇಗೆ ವಿಂಗಡಿಸಲಾಗುತ್ತದೆ ಎಂಬುದನ್ನು ವಿವರಿಸುವುದಕ್ಕಾಗಿ ಸಂಸ್ಕೃತ ವೈಯಾಕರಣಿಗಳು “ಕಾರಕ’ಗಳೆಂಬ ಸಂಬಂಧಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಹಳೆಗನ್ನಡದ ವಿಭಕ್ತಿ ಪ್ರತ್ಯಯಗಳು ನಾಮ-ಕ್ರಿಯಾ ಸಂಬಂಧಗಳನ್ನು ಹೆಚ್ಚು ಕಡಿಮೆ ನೇರವಾಗಿಯೇ ಸೂಚಿಸುತ್ತಿವೆಯಾದ ಕಾರಣ, ಕಾರಕಗಳೆಂಬ ಕಲ್ಪಿತ ಸಂಬಂಧಗಳ ಅವಶ್ಯಕತೆ ಹಳೆಗನ್ನಡ ವ್ಯಾಕರಣಕ್ಕಿಲ್ಲ. ಹಾಗೇನಾದರೂ ಕಲ್ಪಿ ಸಿಕೊಳ್ಳುವುದಿದ್ದ ರೂ, ಅವು ಸಂಸ್ಕೃತದ ಕಾರಕಗಳಿಗಿಂತ ತೀರ ಭಿನ್ನವಾಗಿರುವುದು ಅವಶ್ಯ. ಯಾಕೆಂದರೆ, ಹಳೆಗನ್ನಡದಲ್ಲಿ ಈ ಸಂಬಂಧಗಳನ್ನು ಸಂಸ್ಕೃತಕ್ಕಿಂತ ತೀರ ಭಿನ್ನವಾದ ರೀತಿಯಲ್ಲಿ ವಿಂಗಡಿಸಲಾಗುತ್ತದೆ.

ಉದಾಹರಣೆಗಾಗಿ, ಒಂದು ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಸಂಸ್ಕೃತದಲ್ಲಿ ಕರ್ತ ಮತ್ತು ಕರ್ಮ ಎಂಬುದಾಗಿ ವಿಭಜಿಸಲಾಗುತ್ತದೆ, ಆದರೆ ಹಳೆಗನ್ನಡದ ಮಟ್ಟಿಗೆ ಅಂತಹ ವಿಭಜನೆಗಿಂತಲೂ ಆಗುಗ ಮತ್ತು ಮಾಡುಗ ಎಂಬ ವಿಭಜನೆಯೇ ಹೆಚ್ಚು ಉಚಿತವಾದುದು. ಇದಕ್ಕೆ ಕಾರಣವೇನೆಂದರೆ, ಈ ಎರಡು ಭಾಷೆಗಳಲ್ಲಿ ಕ್ರಿಯಾಪದಗಳನ್ನು ವಿಭಜಿಸುವ ಕ್ರಮ ತೀರ ಭಿನ್ನವಾದುದು.

ಸಂಸ್ಕೃತದಲ್ಲಿ ಕ್ರಿಯಾಪದಗಳನ್ನು ಮುಖ್ಯವಾಗಿ ಅಕರ್ಮಕ ಮತ್ತು ಸಕರ್ಮಕ ಎಂಬುದಾಗಿ ವಿಭಜಿಸಲಾಗುತ್ತದೆ; ಕ್ರಿಯಾಪದಗಳು ಸೂಚಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ತೊಡಗಿರುವನಾದರೆ ಅದು ಅಕರ್ಮಕ, ಮತ್ತು ಇಬ್ಬರು ವ್ಯಕ್ತಿಗಳು ತೊಡಗಿರುವರಾದರೆ ಸಕರ್ಮಕ. ಅಕರ್ಮಕ ಘಟನೆಯಲ್ಲಿ ತೊಡಗಿರುವ ವ್ಯಕ್ತಿ ಕರ್ತ ಕಾರಕ ಮತ್ತು ಸಕರ್ಮಕ ಘಟನೆಯಲ್ಲಿ ತೊಡಗಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಕರ್ತ ಕಾರಕ ಮತ್ತು ಇನ್ನೊಬ್ಬ ಕರ್ಮ ಕಾರಕ.

ಸಂಸ್ಕೃತ ವೈಯಾಕರಣಿಗಳು ಈ ಅಕರ್ಮಕ-ಸಕರ್ಮಕ ಭೇದವನ್ನು ಸ್ವಲ್ಪ ಭಿನ್ನವಾಗಿ (ವ್ಯಾಪಾರ ಮತ್ತು ಫಲಗಳೆರಡೂ ಒಂದೇ ಘಟಕದಲ್ಲಿದ್ದರೆ ಅಕರ್ಮಕ, ಮತ್ತು ಬೇರೆ ಬೇರೆ ಘಟಕಗಳಲ್ಲಿ ದ್ದ ರೆ ಸಕರ್ಮಕ ಎಂಬುದಾಗಿ) ವರ್ಣಿಸುವರಾದರೂ ಮೂಲಾರ್ಥ ಒಂದೇ.

ಹಳೆಗನ್ನಡ ವ್ಯಾಕರಣಕ್ಕೆ ಇಂತಹ ಅಕರ್ಮಕ-ಸಕರ್ಮಕ ವಿಭಜನೆಯ ಅವಶ್ಯಕತೆಯಿಲ್ಲ ಅದಕ್ಕೆ ಬದಲು, ಒಬ್ಬ ವ್ಯಕ್ತಿ ಒಂದು ಘಟನೆಯಲ್ಲಿ ಸ್ವೇಚ್ಛೆಯಿಂದ ತೊಡಗಿರುವನಾದರೆ ಮಾಡುಗ, ಇಲ್ಲವಾದರೆ ಆಗುಗ ಎಂಬುದೇ ಹಳೆಗನ್ನಡ ಕ್ರಿಯಾಪದಗಳ ವಿಭಜನೆಗೆ ಮೂಲವಾಗಿರುತ್ತದೆ. ಹಾಗಾಗಿ, ಸಂಸ್ಕೃತದ ಕರ್ತ ಮತ್ತು ಕರ್ಮಕಾರಕಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ ಶಿ

ಹಳೆಗನ್ನಡದ ವಾಕ್ಯರಚನೆಯನ್ನು ವಿವರಿಸುವಾಗ, ಹಲವು ಸಂದರ್ಭಗಳಲ್ಲಿ ಈ ರೀತಿ ಆಗುಗ ಮತ್ತು ಮಾಡುಗಗಳೆಂಬ ಕಲ್ಪನೆಗಳನ್ನು ಬಳಸುವುದರಿಂದ ವಿವರಣೆಯ ಕೆಲಸ ಸುಲಭವಾಗುತ್ತದೆ; ಅದಕ್ಕೆ ಬದಲು, ಕರ್ಕ ಮತ್ತು ಕರ್ಮ ಎಂಬ ಕಲ್ಪನೆಗಳನ್ನು ಬಳಸಿದಲ್ಲಿ ವಿವರಣೆ ತಪ್ಪಾಗುತ್ತದೆ.

ಉದಾಹರಣೆಗಾಗಿ, ಎರಡು ವಾಕ್ಯಗಳನ್ನು ಜೋಡಿಸಿ ಹೇಳುವಲ್ಲಿ ಬಳಕೆಯಾಗುವ ಕುಡಿದು, ಮಿಂದು ಮೊದಲಾದವುಗಳನ್ನು ಬಳಸಬೇಕಿದ್ದಲ್ಲಿ, ಆ ಎರಡು ವಾಕ್ಯಗಳೂ ““ಏಕಕತಣೃಕ’- ಗಳಾಗಿರಬೇಕೆಂದು ಭಟ್ಟಾಕಳಂಕನು ಒಂದು ನಿಯಮವನ್ನು ಮಾಡಿದ್ದಾನೆ (ಸೂ. ೫೮೦). ಆದರೆ ಇದಕ್ಕೆ ಅಪವಾದವಾಗಿ ಪೆಣನಂ ಕಂಡು ದುಃಖಮಾದುದು, ಪ್ರಿಯಳಂ ಕಂಡು ಸುಖಮಾದುದು

ಎಂಬಂತಹ ವಾಕ್ಯಗಳಿರುವುದು ಸಮಸ್ಯೆಯಾಗಿದೆ. ಪೆಣನಂ ಕಂಡು ಸುಖ ಮಾದುದು ಎಂಬ ವಾಕ್ಯದಲ್ಲಿ ಎರಡು ವಾಕ್ಯಗಳನ್ನು (ಆತನ್‌ ಪೆಣನಂ ಕಂಡನ್‌ ಮತ್ತು ಆತಂಗೆ ದುಃಖಮಾದುದು ಎಂಬವುಗಳನ್ನು) ಕಂಡು ಕ್ರಿಯಾರೂಪದ ಮೂಲಕ ಜೋಡಿಸಲಾಗಿದ್ದು, ಅವುಗಳ ಕರ್ತೃಗಳು ಒಂದೇ ಅಲ್ಲ.

ಇದಕ್ಕೆ ಕುಂಡಲಗಿಯಾಚಾರ್ಯರು (೧೯೪೧:೬೫೪) ಕೊಡುವ ಸಮಾಧಾನವೇನೆಂದರೆ, ದುಃಖಮಾದುದು ಎಂಬುದಕ್ಕೆ ದುಃಖತನಾದನು ಎಂಬ ಅರ್ಥವನ್ನಿಟ್ಟುಕೊಂಡಲ್ಲಿ ಎರಡು ವಾಕ್ಯದಲ್ಲೂ ಒಂದೇ ಕತಣೃವಿರುವ ಹಾಗೆ ಆಗುತ್ತದೆ ಎಂಬುದು. ಆದರೆ ಇದು ಅರ್ಥವನ್ನವಲಂಬಿಸಿದ ಸಮಾಧಾನವಾಗಿದ್ದು, ವಾಕ್ಕರಚನೆಯ ಸಮಸ್ಯೆಯನ್ನು ನಿವಾರಿಸುವುದಿಲ್ಲ.

ಇದಲ್ಲದೆ, ಹಳೆಗನ್ನಡದಲ್ಲಿ ಮೇಲಿನ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಬೇರೆಯೂ ಹಲವು ವಾಕ್ಯಗಳನ್ನು ರಚಿಸಲು ಸಾಧ್ಯವಿದ್ದು , ಅವಕ್ಕೆಲ್ಲ ಇಂತಹ ಸಮಾಧಾನವನ್ನು ಕೊಡಲು ಸಾಧ್ಯವಾಗದು.

ಇದಕ್ಕೆ ಬದಲು, ಮೇಲೆ ಸೂಚಿಸಿದ ಹಾಗೆ, ಒಂದು ಘಟನೆಯಲ್ಲಿ ಸ್ವೇಚ್ಛೆಯಿಂದ ನಿರತನಾಗುವ ವ್ಯಕ್ತಿ (ಮಾಡುಗ) ಮತ್ತು ಇತರ (ಆಗುಗ) ಎಂಬುದಾಗಿ ಕಾರಕಗಳನ್ನು ವಿಭಜಿಸಿದಲ್ಲಿ, ಮೇಲಿನ ಹಳೆಗನ್ನಡ ವಾಕ್ಯಗಳಿಗೆ ಸುಲಭವಾಗಿ ನಿಯಮವನ್ನು ರಚಿಸಬಹುದು. ಜೋಡಿಸಿರುವ ಎರಡು ವಾಕ್ಯಗಳಲ್ಲೂ ಮಾಡುಗ ಕಾರಕವನ್ನು ಬಳಸಲಾಗಿದೆಯಾದರೆ, ಅದು ಒಬ್ಬನೇ ವ್ಯಕ್ತಿಯನ್ನು ಸೂಚಿಸುವ ಅವಶ್ಯಕತೆಯಿದೆ ಎಂಬುದೇ ಇಲ್ಲಿ ಬೇಕಾಗಿರುವ ನಿಯಮ (ಹೊಸಗನ್ನಡದಲ್ಲೂ ಈ ನಿಯಮ ಹೇಗೆ ಬಳಕೆಯಲ್ಲಿದೆ ಎಂಬುದನ್ನು ಭಟ್‌ (೨೦೦೪:೧೯೬)ರಲ್ಲಿ ವಿವರಿಸಲಾಗಿದೆ). ಮೇಲೆ ಕೊಟ್ಟಿರುವ ಅಪವಾದ ವಾಕ್ಯಗಳಲ್ಲಿ ಮಾಡುಗ ಘಟಕ ಮೊದಲನೆಯ ಅಂಗವಾಕ್ಯದಲ್ಲಿ ಮಾತ್ರ ಬಂದಿದೆ ಎಂಬುದನ್ನು ಗಮನಿಸಬಹುದು (೧೦.೨.೨ ನೋಡಿ).

೮.೭.೭ ನಾಮ-ಕ್ರಿಯಾ ಸಂಬಂಧ

ಸಂಸ್ಕೃತದ ವೈಯಾಕರಣಿಗಳು ಹೇಳುವ ಆರು ಕಾರಕಗಳು “ಸಕಲ ಭಾಷೆಗಳಲ್ಲಿಯೂ ನಿಹಿತವಾಗಿರುವ ಗೂಢತತ್ವ’ವನ್ನು ಸೂಚಿಸುತ್ತವೆಯೆಂಬುದಾಗಿ ಇತ್ತೀಚೆಗೆ ರಂಗನಾಥ ಶರ್ಮರು (೨೦೦೨:೨) ಬರೆದಿದ್ದಾ ರೆ. ಅವರ ಅಭಿಪ್ರಾಯದಂತೆ, “ಶಬ್ದ ಗಳಿಗೆ ಕ್ರಿಯೆಯೊಡನೆ ಸಂಬಂಧವಿಶೇಷವು ಆರು ವಿಧದಲ್ಲಿ ಮಾತ್ರ ಸಾಧ್ಯ. ಅದಕ್ಕಿಂತ ಹೆಚ್ಚು ವಿಧದಲ್ಲಿ ಈ ಸಂಬಂಧವನ್ನು ಯಾವ ಶಬ್ದವೂ ತಿಳಿಸಲಾರದು. ಆದ್ದರಿಂದ ಯಾವ ಭಾಷೆಯಲ್ಲಾಗಲಿ ಆರು ಕಾರಕಗಳಿರುತ್ತವೆ. ಅಧಿಕವೂ ಇಲ್ಲ ಕಡಿಮೆಯೂ ಇಲ್ಲ.

ಜಗತ್ತಿನಲ್ಲಿ ಒಟ್ಟು ಐದು ಸಾವಿರಕ್ಕಿಂತಲೂ ಜಾಸ್ತಿ ಭಾಷೆಗಳಿದ್ದು (ಭಟ್‌ ೨೦೦೨ ನೋಡಿ), ಒಂದು ಸಿದ್ಧಾ ೦ತ ಇವೆಲ್ಲವಕ್ಕೂ ಅನ್ವಯಿಸುತ್ತದೆ ಎಂದು ವಾದಿಸಬೇಕಾದಲ್ಲಿ, ಅವುಗಳನ್ನು ಪ್ರತಿನಿಧೀಕರಿಸುವ ನೂರಿನ್ನೂರು ಭಾಷೆಗಳನ್ನಾದರೂ ಪರಿಶೀಲಿಸುವ ಅವಶ್ಯಕತೆಯಿದೆ. ರಂಗನಾಥ ಶರ್ಮರು ಇಂತಹ ಪರಿಶೀಲನೆಯನ್ನು ನಡೆಸಿದ ಹಾಗೆ ಕಾಣಿಸುವುದಿಲ್ಲ. ಇದಲ್ಲದೆ, ಹೀಗೆ ಪರಿಶೀಲಿಸಿರುವೆವಾದರೂ, ನಮ್ಮ ಸಿದ್ದಾ ಂತಕ್ಕೆ ಅಪವಾದವಾಗಿ ಒಂದೇ ಒಂದು ಭಾಷೆ ಕಾಣಸಿಕ್ಕಿದರೂ ಒಡನೆಯೇ ಆ ಸಿದ್ಧಾ ಂತ ಬಿದ್ದು ಹೋಗುತ್ತದೆ.

ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಎಲ್ಲಾ ಭಾಷೆಗಳಿಗೂ ಅನ್ವಯಿಸುವ ಹಾಗೆ ಕ್ರೋಡೀಕರಿಸಲು ಹಲವರು ವಿದ್ವಾಂಸರು ಈಗಾಗಲೇ ಪ್ರಯತ್ನಿಸಿ ಸೋತಿದ್ದಾ ರೆ.

ವಿಭಕ್ತಿಗಳು ಮತ್ತು ಕಾರಕಗಳು ae

ಉದಾಹರಣೆಗಾಗಿ, ಫಿಲ್ಲಿ ಮೋರ್‌ ಎಂಬ ಅಮೆರಿಕದ ವಿದ್ವಾಂಸರು ಮೊದಲಿಗೆ (ಫಿಲ್ಲಿಮೋರ್‌ ೧೯೬೮) ಇಂತಹ ಆರು ಸಂಬಂಧಗಳ ಅವಶ್ಯಕತೆಯಿದೆಯೆಂದು ವಾದಿಸಿದ್ದು, ಅನಂತರ (ಫಿಲ್ಲಿಮೋರ್‌ ೧೯೭೧) ಅವುಗಳನ್ನು ಎಂಟಕ್ಕೆ ಏರಿಸಿದ್ದಾರೆ. ಮಾಡುಗ, ಅನುಭೋಗಿ, ಕರಣ, ಕರ್ಮ, ಮೂಲ, ಗುರಿ, ಆಕರ ಮತ್ತು ಸಮಯಗಳೇ ಅವರು ಸೂಚಿಸುವ ಎಂಟು ಸಂಬಂಧಗಳು.

ಫಿಲ್ಲಿಮೋರ್‌ ಅವರ ಅನಂತರ ಈ ವಿಷಯದಲ್ಲಿ ಹಲವಾರು ವಿದ್ವಾಂಸರು ಚರ್ಚೆ ನಡೆಸಿದ್ದು, ಅವರಲ್ಲಿ ಕೆಲವರು ಈ ಸಂಬಂಧಗಳ ಪಟ್ಟಿಯನ್ನು ನಾಲ್ಕಕ್ಕೆ ಇಳಿಸಿದ್ದಾರೆ, ಮತ್ತು ಬೇರೆ ಕೆಲವರು ಹತ್ತು-ಹನ್ನೊಂದರ ವರೆಗೆ ಏರಿಸಿದ್ದಾರೆ. ಆದರೆ ಈ ವಿಷಯದಲ್ಲಿ ಎಲ್ಲರೂ ಒಪ್ಪುವಂತಹ ಒಂದು ನಿರ್ಧಾರಕ್ಕೆ ಬರಲು ಈ ವಿದ್ವಾಂಸರಿಗೆ ಇನ್ನೂ ಸಾಧ್ಯವಾಗಿಲ್ಲ, ಮತ್ತು ಸಾಧ್ಯವಾಗುವ ಹಾಗೆ ಕಾಣಿಸುವುದೂ ಇಲ್ಲ (ಬ್ಲೇಕ್‌ ೨೦೦೧:೭೦ ನೋಡಿ).

ಇಂತಹ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಕೆಲವು ಭಾಷೆಗಳು ವಿಭಕ್ತಿ ಪ್ರತ್ಯಯಗಳನ್ನು ಬಳಸುತ್ತವೆಯಾದರೆ, ಬೇರೆ ಕೆಲವು ಅದಕ್ಕಿಂತ ಭಿನ್ನವಾಗಿರುವ ಪದಗಳ ಅನುಕ್ರಮದಂತಹ ಬೇರೆ ವಿಧಾನಗಳನ್ನು ಬಳಸುತ್ತವೆ. ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಭಾಷೆಗಳಲ್ಲೂ ಕೆಲವು ಒಂದೆರಡು ಪ್ರತ್ಯಯಗಳನ್ನು ಮಾತ್ರ ಬಳಸುತ್ತವೆಯಾದರೆ, ಬೇರೆ ಕೆಲವು ನಲುವತ್ತು-ಐವತ್ತು ಪ್ರತ್ಯಯಗಳನ್ನು ಬಳಸುತ್ತವೆ. ಈ ಎಲ್ಲಾ ವೈವಿಧ್ಯತೆಗಳನ್ನೂ ಗಮನದಲ್ಲಿರಿಸಿಕೊಂಡು, ಅವನ್ನೆಲ್ಲ ವಿವರಿಸುವುದಕ್ಕಾಗಿ ಎಷ್ಟು ಸಂಬಂಧಗಳ ಅವಶ್ಯಕತೆಯಿದೆಯೆಂಬುದಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ, ಮತ್ತು ಅದನ್ನು ಆಧರಿಸಿ ಸಂಬಂಧಗಳ ಪಟ್ಟಿಯನ್ನು ತಯಾರಿಸಬೇಕಾಗಿದೆ.

ಇಲ್ಲಿ ಒಂದು ಮುಖ್ಯ ವಿಷಯವನ್ನು ಗಮನಿಸುವ ಅವಶ್ಯಕತೆಯಿದೆ. ಅರ್ಥ ಎಂಬುದು ಪದವನ್ನು ಬಿಟ್ಟು ಪೂರ ಸ್ವತಂತ್ರವಾಗಿ ನಿಲ್ಲಲಾರದು. ಹಾಗಾಗಿ, ನಾವು ಕಲ್ಪಿಸಿಕೊಳ್ಳುವ ಅರ್ಥದ ಸ್ವರೂಪವನ್ನು ನಾವು ಬಳಸುವ ಭಾಷೆಯೂ ನಿಯಂತ್ರಿಸುತ್ತ 9೫ ಎಲ್ಲಾ ಭಾಷೆಗಳಿಗೂ ಅನ್ವಯವಾಗುವ ಹಾಗೆ ಒಂದು ನಿಶ್ಚಿತವಾದ ಸ್ವರೂಪದ ಮತ್ತು ಸಂಖ್ಯೆಯ ನಾಮ-ಕ್ರಿಯಾ ಸಂಬಂಧಗಳನ್ನು ಕಲ್ಪಿ ಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಅರ್ಥದ ಮೇಲಿರುವ ಈ ನಿರ್ಬಂಧವೇ ಮುಖ್ಯ ಕಾರಣ.

ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸುವ ಅವಶ್ಯಕತೆಯಿದೆ. ಸಂಸ್ಕೃತದ ಕರ್ತ, ಕರ್ಮ, ಕರಣ ಮೊದಲಾದ ಕಾರಕಗಳು ಮೇಲಿನಿಂದ ಮೇಲೆ ನೋಡುವಾಗ ಅರ್ಥದ ಮೇಲೆ ಅವಲಂಬಿಸಿವೆಯೆಂದು ಕಾಣಿಸುತ್ತದೆ; ಆದರೆ, ನಿಜಕ್ಕೂ ಅವು ಹಲವು ಸಂಸ್ಕೃತದವೇ ಆದ ವಾಕ್ಯರಚನೆಯ ನಿಯಮಗಳ ಮೇಲೂ ಅವಲಂಬಿಸಿದ್ದು, ನೇರವಾಗಿ ಬೇರೆ ಭಾಷೆಗಳಿಗೆ ಅನ್ವಯಿಸಲು ಸಾಧ್ಯವಾಗುವಂತಹ ಕಲ್ಪ ನೆಗಳೇ ಅಲ್ಲ.

ಉದಾಹರಣೆಗಾಗಿ, ಮೇಲೆ ೮.೭.೬ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದ ಕರ್ತ) ಮತ್ತು ಕರ್ಮ ಕಾರಕಗಳ ಮೂಲಕ ಹಳೆಗನ್ನಡದ ವಾಕ್ಯರಚನೆಯ ನಿಯಮಗಳನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಅವಕ್ಕಿಂತ ತೀರ ಭಿನ್ನವಾದ ಮಾಡುಗ ಮತ್ತು ಆಗುಗಗಳೆಂಬ ಘಟಕಗಳ ಅವಶ್ಯಕತೆ ಹಳೆಗನ್ನಡಕ್ಕಿದೆ. ಆದರೆ, ಸಂಸ್ಕೃತದ ವಾಕ್ಯರಚನೆಯ ನಿಯಮಗಳನ್ನು ವರ್ಣಿಸಲು ಕರ್ತ ಮತ್ತು ಕರ್ಮ ಕಾರಕಗಳೇ ಯೋಗ್ಯವಾದವುಗಳು.

Eke →

೮.೮ ಸಾರಾಂಶ

ಹಳೆಗನ್ನಡದಲ್ಲಿ ವಿಭಕ್ತಿ ಮತ್ತು ವಚನಗಳನ್ನು ಬ ಬೇರೆಬೆ ಬೇರೆ ಪ್ರತ್ಯಯಗಳು ಸೂಚಿಸುವುವಾದ

ಕಾರಣ, ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾ ಧ್ಯವಿದೆ. ಆ ಆದರೆ, ಸಂಸ್ಕೃತದಲ್ಲಿ ಅವೆ ವೆರಡನ್ನೂ ಅವಶ ಇ ಅವ್ನ ಪೃ ಒಂದೇ ಪ್ರತ್ಯಯ ಸೂಚಿ? ಸುವುದಾದ ಕಾರಣ, ಅವಶ್ಯವಿಲ್ಲದಲ್ಲೂ ಅದನ್ನು ಬಳಸ? ಸಬೇಕಾಗುತ್ತದೆ.

೧೫೮ ಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು)

ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ, ಅವು ಸೂಚಿಸುವ ನಾಮಪದ-ಕ್ರಿಯಾಪದ ಸಂಬಂಧಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿದೆ; ಆದರೆ, ಸಂಸ್ಕೃತದಲ್ಲಿ ಇಂತಹ ಹೊಂದಾಣಿಕೆಯಿಲ್ಲ. ಈ ಕಾರಣಕ್ಕಾಗಿ, ವಿಭಕ್ತಿಗಳ ಬಳಕೆಯನ್ನು ವಿವರಿಸಲು ಸಂಸ್ಕೃತ ವೈಯಾಕರಣಿಗಳು ಕಾರಕಗಳೆಂಬ ಘಟಕಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಹಳೆಗನ್ನಡಕ್ಕೆ ಇವುಗಳ ಅವಶ್ಯಕತೆಯಿಲ್ಲ ನ

ನಾಮಪದ-ಕ್ರಿಯಾಪದ ಸಂಬಂಧವನ್ನು ವಿಭಜಿಸುವಲ್ಲೂ, ಸಂಸ್ಕೃತ ಮತ್ತು ಹಳೆಗನ್ನಡಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಹಾಗಾಗಿ, ಕಾರಕಗಳೆಂಬ ಕಲ್ಪಿತ ಘಟಕಗಳನ್ನು ಹಳೆಗನ್ನಡ ವ್ಯಾಕರಣದಲ್ಲಿ ಬಳಸುವುದಿದ್ದರೂ ಅವು ಸಂಸ್ಕೃತದವಕ್ಕಿಂತ ಭಿನ್ನವಾಗಿರಬೇಕಾಗುತ್ತದೆ. ಉದಾಹರಣೆಗಾಗಿ, ಕರ್ತ-ಕರ್ಮ ಎಂಬವುಗಳ ಬದಲು ಮಾಡುಗ-ಆಗುಗ ಎಂಬವುಗಳನ್ನು ಬಳಸುವ ಅವಶ್ಯಕತೆ ಹಳೆಗನ್ನಡಕ್ಕಿದೆ.

ಇದಲ್ಲದೆ, ನಾಮಕ್ರಿಯಾ ಸಂಬಂಧವನ್ನು ಸೂಚಿಸುವುದಕ್ಕಾಗಿ ಹಳೆಗನ್ನಡ ನಾಲ್ಕು ಪ್ರತ್ಯಯಗಳನ್ನು ಮಾತ್ರ ಬಳಸುತ್ತದೆ; ಆದರೆ, ಸಂಸ್ಕೃತ ಏಳು ಪ್ರತ್ಯಯಗಳನ್ನು ಬಳಸುತ್ತದೆ.

ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವಿರುವ ಇಂತಹ ಹಲವು ಮೂಲಭೂತ ವ್ಯತ್ಯಾಸಗಳನ್ನು ಗಮನಿಸದುದರಿಂದಾಗಿ, ಹಳೆಗನ್ನಡ ವೈಯಾಕರಣಿಗಳು ಹಲವು ಸಮಸ್ಯೆಗಳನ್ನೆದುರಿಸಬೇಕಾಗಿದೆ.