← Ch 2  ·  Contents  ·  Ch 4 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೩ — ವರ್ಣಗಳ ಬಳಕೆ

↑ ಒಳಪಿಡಿಗೆ ಹಿಂತಿರುಗಿ


ವರ್ಣಗಳ ಬಳಕೆ

Eke →

೩.೧ ಪೀಠಿಕೆ

ಎಲ್ಲಾ ಭಾಷೆಗಳೂ ವರ್ಣಗಳನ್ನು ಜೋಡಿಸಿ ಪದಗಳನ್ನು ರಚಿಸುತ್ತ ವೆಯಾದರೂ, ಇದಕ್ಕಾಗಿ ಯಾವ ವರ್ಣಗಳನ್ನೆಲ್ಲ ಬಳಸಲಾಗುತ್ತದೆ, ಮತ್ತು ಅವನ್ನು ಯಾವ ಅನುಕ್ರಮದಲ್ಲೆಲ್ಲ ಜೋಡಿಸಲಾಗುತ್ತದೆ ಎಂಬ ವಿಷಯದಲ್ಲಿ ಭಾಷೆಗಳೊಳಗೆ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತ ವೆ. ಮೇಲೆ ಪೀಠಿಕೆಯಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವೆ ಪದರಚನೆಗಾಗಿ ಅವು ಬಳಸುವ ವರ್ಣಗಳ ಸಂಖ್ಯೆ, ಅವುಗಳ ಸ್ವರೂಪ, ಮತ್ತು ಪದಗಳಲ್ಲಿ ಅವುಗಳಿಗಿರುವ ಅನುಕ್ರಮ - ಈ ಮೂರು ವಿಷಯಗಳಲ್ಲೂ ಹಲವು ಮುಖ್ಯವಾದ ವ್ಯತ್ಯಾಸಗಳಿವೆ.

ಸಂಸ್ಕೃತ ವ್ಯಾಕರಣಗಳಲ್ಲಿ ಬರುವ ವರ್ಣಗಳ ಪಟ್ಟಿ, ಅವುಗಳ ವಿಭಜನೆ, ಮತ್ತು ಅದರಿಂದ ಸಿದ್ಧವಾಗುವ ಪಾರಿಭಾಷಿಕ ಪದಗಳು ಇವನ್ನೆಲ್ಲ ಹಾಗೆಯೇ ತಮ್ಮ ಹಳೆಗನ್ನಡ ವ್ಯಾಕರಣಗಳಲ್ಲೂ ಬಳಸಿದ ಪ್ರಾಚೀನ ವೈಯಾಕರಣಿಗಳು ಅನವಶ್ಯಕವಾಗಿ ಹಳೆಗನ್ನಡ ವ್ಯಾಕರಣ ಬಹಳ ಕ್ಲಿಷ್ಟವಾಗುವಂತೆ ಮಾಡಿದ್ದಾ ರೆ. ಈ ಎಲ್ಲಾ ವಿಷಯಗಳಲ್ಲೂ ಹಳೆಗನ್ನಡ ತನ್ನದೇ ಆದ ವ್ಯಾಕರಣದ ಮೂಲ ತತ್ವಗಳನ್ನು ಬಳಸಿಕೊಳ್ಳುವುದಾದ ಕಾರಣ, ಹಳೆಗನ್ನಡಕ್ಕೆ ಅದರದೇ ಆದ ವರ್ಣಗಳ ಪಟ್ಟಿ, ವಿಭಜನೆ, ಮತ್ತು ಪಾರಿಭಾಷಿಕ ಪದಗಳ ಅವಶ್ಯಕತೆಯಿದೆ.

Eke →

೩.೨ ವರ್ಣಗಳ ಪಟ್ಟಿ

ಸಂಸ್ಕೃತಕ್ಕೂ ಹಳೆಗನ್ನಡಕ್ಕೂ ನಡುವೆ ಅವು ಬಳಸುವ ವರ್ಣಗಳ ಮಟ್ಟಿಗೆ ಹಲವು ವ್ಯತ್ಯಾಸಗಳಿದ್ದು, ಇವುಗಳಲ್ಲಿ ಕೆಲವನ್ನು ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಗಮನಿಸಿದ್ದಾರೆ; ಬೇರೆ ಕೆಲವನ್ನು ಆಧುನಿಕ ವಿದ್ವಾಂಸರು (ಬಿಳಿಗಿರಿ ೧೯೬೯, ಸೀತಾರಾಮಯ್ಯ ೧೯೭೯ ನೋಡಿ) ವಿವರಿಸಿದ್ದಾರೆ. ಹಾಗಾಗಿ, ಈ ವಿಷಯದಲ್ಲಿ ಇಲ್ಲಿ ಜಾಸ್ತಿ ಬರೆಯಬೇಕಾಗಿಲ್ಲ.

ಸಂಸ್ಕೃತ ಪದಗಳ ರಚನೆಯಲ್ಲಿ ಬಳಕೆಯಾಗುವ ಮಹಾಪ್ರಾಣಾಕ್ಷರಗಳು (ಖ, ಛ, ಠ, ಥ, ಫಘ ಮತ್ತು ಘ, ರು, ಢ, ಧ, ಭ), ಖ, ಶ, ಷ, ಹ ಮೊದಲಾದ ಹಲವು ವರ್ಣಗಳು ಹಳೆಗನ್ನಡ ಪದಗಳ ರಚನೆಯಲ್ಲಿ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಹಳೆಗನ್ನಡ ಪದಗಳ ರಚನೆಯಲ್ಲಿ ಬಳಕೆಯಾಗುವ ಗಿಡ್ಡ (ಪ್ರಸ್ತ) ಎಕಾರ-ಒಕಾರಗಳು ಮತ್ತು ಅ, ಟ, ಳ ವರ್ಣಗಳು ಸಂಸ್ಕೃತ ಪದಗಳ ರಚನೆಯಲ್ಲಿ ಬಳಕೆಯಾಗುವುದಿಲ್ಲ.

ಐ ಮತ್ತು ಔಗಳಿಗೆ ಕನ್ನಡ ಬರಹದಲ್ಲಿ ವಿಶಿಷ್ಟವಾದ ಸ್ವರಸಂಜ್ಞೆಗಳು ಇವೆಯಾದರೂ ಅವು ಹಳೆಗನ್ನಡ ಭಾಷೆಯಲ್ಲಿ ವಿಶಿಷ್ಟವಾದ ಸ್ವರಗಳೇನಲ್ಲ. ಉಚ್ಚಾರಣೆಯಲ್ಲಿ ಅವು ಅಯ್‌ ಮತ್ತು ಅವ್‌ ಎಂಬ ಸ್ವರ-ವ್ಯಂಜನ ಜೋಡಿಗಳಿಗಿಂತ ಭಿನ್ನವಲ್ಲ. ಹಳೆಗನ್ನಡದಲ್ಲಿ ಈ ಎರಡು ಸ್ವರ-ವ್ಯಂಜನ ಜೋಡಿಗಳು ಮಾತ್ರವಲ್ಲದೆ, ಗೆಯ್ಗೆ, ಪೊಯ್ಸು, ಮುಯ್ವು, ಪೋಯ್ತು, ಕಾಯ್ದು

ಮೊದಲಾದ ಪದಗಳಲ್ಲಿ ಕಾಣಿಸುವ ಹಾಗೆ ಎಯ್‌, ಒಯ್‌, ಉಯ್‌, ಓಯ್‌, ಆಯ್‌ ಮೊದಲಾದ ಅಂತಹವೇ ಬೇರೆಯೂ ಹಲವು ಜೋಡಿಗಳಿವೆ.

ಹಾಗಾಗಿ, ಮೊದಲಿನ ಎರಡು ಸ್ವರ-ವ್ಯಂಜನ ಜೋಡಿಗಳನ್ನು (ಅಯ್‌ ಮತ್ತು ಅವ್‌ ಎಂಬವುಗಳನ್ನು) ಸೂಚಿಸುವುದಕ್ಕಾಗಿ ಮಾತ್ರ ವಿಶಿಷ್ಟವಾದ ಸ್ವರ ಸಂಜ್ಞೆ( (ಐ, ಔ)ಗಳನ್ನು ಬಳಸುವುದು ಹಳೆಗನ್ನಡದ ಮಟ್ಟಿಗಂತೂ ಅನವಶ್ಯಕ.

ಸಂಸ್ಕೃತದಲ್ಲಿ ಅಯ್‌ ಮತ್ತು ಅವ್‌ ಎಂಬ ಎರಡು ಜೋಡಿಗಳು ಮಾತ್ರ ಬಳಕೆಯಲ್ಲಿವೆ; ಹಳೆಗನ್ನಡದ ಹಾಗೆ ಎಯ್‌, ಒಯ್‌, ಉಯ್‌, ಓಯ್‌, ಆಯ್‌ ಮೊದಲಾದ ಇಂತಹ ಇತರ ಜೋಡಿಗಳು ಬಳಕೆಯಲ್ಲಿಲ್ಲ; ಇದಲ್ಲದೆ, ಸೇರಿಕೆಯ ನಿಯಮಗಳಲ್ಲಿ ಅಯ್‌ ಮತ್ತು ಅವ್‌ ಎಂಬ ಈ ಎರಡು ಜೋಡಿಗಳು ಸಂಸ್ಕೃತದಲ್ಲಿ ಇತರ ಸ್ವರಗಳ ಹಾಗೆ ಕಾಣಿಸಿಕೊಳ್ಳುತ್ತ ವಲ್ಲದೆ ಸ್ವರ- ವ್ಯಂಜನ ಜೋಡಿಗಳ ಹಾಗೆ ಕಾಣಿಸುವುದಿಲ್ಲ.

ಈ ಕಾರಣಗಳಿಗಾಗಿ, ಸಂಸ್ಕೃತದ ಬರಹದಲ್ಲಿ ಅಯ್‌ ಮತ್ತು ಅವ್‌ ಎಂಬವುಗಳಿಗೆ ವಿಶಿಷ್ಟವಾದ ಸಂಜ್ಞೆ] ಗಳನ್ನು ಕಲ್ಪಿಸಿಕೊಳ್ಳುವುದು ಮತ್ತು ಅದರ ಅಕ್ಬರಮಾಲೆಯಲ್ಲಿ ಅವನ್ನು ಸ್ವರಗಳೊಂದಿಗೆ ಸೇರಿಸಿ ಹೇಳುವುದು ಸಮರ್ಥನೀಯವಾಗಿದೆ.

ನಾವು ಬಳಸುವ ಕನ್ನಡ ಲಿಪಿ ಬ್ರಾಹ್ಮೀ ಲಿಪಿಯಿಂದ ಬೆಳೆದು ಬಂದಿದೆ. ಈ ಲಿಪಿಯನ್ನು ಮುಖ್ಯವಾಗಿ ಸಂಸ್ಕೃತ, ಮತ್ತು ಪಾಲಿ, ಪ್ರಾಕೃತ ಮೊದಲಾದ ಸಂಸ್ಕೃತದಂತಹವೇ ಆದ ಇತರ ಇಂಡೋ-ಆರ್ಯನ್‌ ಭಾಷೆಗಳನ್ನು ಬರಹಕ್ಕೆ ಇಳಿಸುವುದಕ್ಕಾಗಿ ತಯಾರಿಸಲಾಗಿದೆ. ಹಾಗಾಗಿ, ಈ ಭಾಷೆಗಳ ಮಟ್ಟಿಗೆ ಸಮರ್ಥನೀಯವಾದರೂ ಕನ್ನಡದ ಮಟ್ಟಿಗೆ ಸಮರ್ಥನೀಯವಲ್ಲದಿರುವ, ಮೇಲಿನ ಎರಡು ಸಂಜ್ಞೆ ಗಳು ನಮ್ಮ ಲಿಪಿಯಲ್ಲಿ ಸೇರಿಕೊಂಡಿವೆ.

ಇವಲ್ಲದೆ, ಮೇಲೆ ಸೂಚಿಸಿದ ಹಾಗೆ ಯ, ಷ, ಮಹಾಪ್ರಾಣಾಕ್ಷರಗಳು ಮೊದಲಾದ ಬೇರೆ ಕೆಲವು ಸಂಜ್ಞೆ; ಗಳೂ ಇದೇ ರೀತಿಯಲ್ಲಿ ಅನವಶ್ಯಕವಾಗಿ ನಮ್ಮ ಲಿಪಿಯಲ್ಲಿ ಸೇರಿಕೊಂಡಿವೆ.

ಅವಶ್ಯವಿಲ್ಲದಿದ್ದರೂ ಈ ಹೆಚ್ಚಿ ನ ಸಂಜ್ಞೆ ಗಳನ್ನು ಬಳಸಿ ಅಭ್ಯಾಸವಾಗಿರುವ ಇವತ್ತಿನ ವಿದ್ವಾಂಸರಿಗೆ ಅವನ್ನು ತೆಗೆದುಹಾಕಿದಲ್ಲಿ ಅದೇನೋ ಆಭಾಸವಾಗುವ ಹಾಗೆ ಅನಿಸುತ್ತದೆ. ಹಾಗಾಗಿ, ಅವನ್ನು ಬಿಟ್ಟುಬಿಡೋಣ ಎಂಬ ಉತ್ತಮವಾದ ಸಲಹೆಯನ್ನು ಅವರು “ಸಂಸ್ಕೃತಿಯ ನಾಶ’ ಎಂಬ ದೊಡ್ಡ ಹೆಸರು ಕೊಟ್ಟು ತಳ್ಳಿಹಾಕುತ್ತಿದ್ದಾರೆ.

ಉಚ್ಚಾ. ರಣೆಯಿಂದ ಬಿದ್ದು ಹೋಗಿರುವ ಹಳೆಗನ್ನಡದ ಅ ಮತ್ತು ಗಳನ್ನು ಹೊಸಗನ್ನಡದ ಬರಹದಿಂದಲೂ ತೆಗೆದುಹಾಕಲಾಗಿದೆ; ಈ ಬದಲಾವಣೆಯಿಂದ ಸಂಭವಿಸದ ಸಂಸ್ಕೃತಿ ನಾಶ, ಉಚ್ಚಾರಣೆಯಲ್ಲಿಲ್ಲದಿರುವ ಮೇಲಿನ ಸಂಜ್ಞೆಗಳನ್ನು ತೆಗೆದುಹಾಕುವುದರಿಂದ ಹೇಗೆ ಸಂಭವಿಸುತ್ತದೆ ಎಂಬುದು ನನಗಂತೂ ಅರ್ಥವಾಗುವುದಿಲ್ಲ.

Eke →

೩.೩ ವರ್ಣಗಳ ಅನುಕ್ರಮ

ವರ್ಣಗಳು ಪದಗಳಲ್ಲಿ ಯಾವ ಅನುಕ್ರಮದಲ್ಲೆಲ್ಲ ಬರಬಲ್ಲುವು ಎಂಬ ವಿಷಯದಲ್ಲೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಪಂಪಭಾರತದ ಕನ್ನಡ ವ್ಯಾಕರಣವನ್ನು ಆಳವಾಗಿ ಸಂಶೋಧಿಸಿದ ರಾಮಚಂದ್ರ ರಾಯರು (೧೯೭೨:೯-೨೦) ಕೊಟ್ಟಿರುವ ಹಳೆಗನ್ನಡದ ಕೆಲವು ನಿಯಮಗಳನ್ನು ಸಂಸ್ಕೃತ ನಿಯಮಗಳೊಂದಿಗೆ ಹೋಲಿಸಿ ನೋಡಬಹುದು.

ಪಂಪಭಾರತದ ಹಳೆಗನ್ನಡ (ದೇಶಿ) ಪದಗಳಲ್ಲಿ ಸಮಾನವಲ್ಲದ ಎರಡು ವ್ಯಂಜನಗಳು ಒಟ್ಟಿಗೆ ಬರುವುದಿದ್ದಲ್ಲಿ, ಅವುಗಳಲ್ಲಿ ಮೊದಲನೆಯದು ಅನುನಾಸಿಕ ಇಲ್ಲವೇ ಯರಅಲಳೆಟಿಗಳಲ್ಲಿ ಒಂದಾಗಿರಬೇಕೆಂಬ ನಿಯಮವಿದೆ. ಉದಾಹರಣೆಗಾಗಿ, ಕಣ್ಗಳ್‌, ನೋನ್ತು, ಪೋಯ್ತು, ಕಿರ್ಚು, ಪೊಟ್ಟು ಮೊದಲಾದ ಪದಗಳಲ್ಲಿ ಸಮಾನವಲ್ಲದ ಎರಡು ವ್ಯಂಜನಗಳು ಒಟ್ಟಿಗೆ ಬಂದಿದ್ದು ಅವುಗಳಲ್ಲಿ ಮೊದಲನೆಯ ವ್ಯಂಜನವಾಗಿ ಅನುನಾಸಿಕ (ಣ್‌, ನ್‌) ಇಲ್ಲವೇ ಯ್‌, ರ್‌, ಆ್‌ಗಳಲ್ಲೊಂದು ಬಂದಿರುವುದನ್ನು ಕಾಣಬಹುದು. ಹಳೆಗನ್ನಡದಲ್ಲಿ ಎರಡು ಸ್ಪರ್ಶಗಳು ಒಟ್ಟಿಗೆ ಬರುವುದಿದ್ದರೆ, ಅವೆರಡೂ ಒಂದೇ ಸ್ಪರ್ಶವಾಗಿರುವುದು ಅವಶ್ಯ (ತಪ್ಪು ಗಟ್ಟಿಸಿ, ಕಬ್ಬಂ, ಒಕ್ಕಲ್‌ ಇತ್ಯಾದಿ).

ಆದರೆ, ಸಂಸ್ಕೃತ ಪದಗಳಲ್ಲಿ ಸಮಾನವಲ್ಲದ ಎರಡು ವ್ಯಂಜನಗಳ ಸೇರಿಕೆಯಲ್ಲಿ ಮೊದಲನೆಯ ವ್ಯಂಜನವಾಗಿ ಸ್ಪರ್ಶಗಳೂ ಬರಬಲ್ಲುವು. ಉದಾಹರಣೆಗಾಗಿ, ಭಕ್ತಿ, ಸಪ್ತ, ರಾಕ್ಷಸ, ವತ್ಸ ಎಂಬಂತಹ ಪದಗಳಲ್ಲಿ ಕ್ತ್‌, ಪ್ತ್‌, ಕ್ಸ್‌ ಮತ್ತು ತ್ಸ್‌ ಎಂಬ ಸಮಾನವಲ್ಲದ ವ್ಯಂಜನಕಂತೆಗಳು ಬಂದಿದ್ದು, ಇವುಗಳಲ್ಲಿ ಮೊದಲನೆಯ ವ್ಯಂಜನವಾಗಿ ಒಂದು ಸ್ಟ ರ್ಶ (ಕ್‌, ಪ್‌ ಇಲ್ಲವೇ ತ್‌) ಬಂದಿದೆ.

ಸಂಸ್ಕೃತ ಪದಗಳ ಆದಿಯಲ್ಲೂ ಎರಡು ವ್ಯಂಜನಗಳು ಒಟ್ಟಾಗಿ ಬರಬಲ್ಲುವು; ಉದಾಹರಣೆಗಾಗಿ, ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೆ ಚ್ಛ ಮೊದಲಾದ ಪದಗಳ ಆದಿಯಲ್ಲಿ ಎರಡೆರಡು ವ್ಯಂಜನಗಳು ಒಟ್ಟಾಗಿ ಬಂದಿವೆ. ಆದರೆ, ಹಳೆಗನ್ನಡ ಪದಗಳ ಆದಿಯಲ್ಲಿ ಈ ರೀತಿ ಎರಡು ವ್ಯಂಜನಗಳು ಒಟ್ಟಾಗಿ ಬರಲಾರವು.

ಹಳೆಗನ್ನಡ ಪದಗಳ ಕೊನೆಯಲ್ಲಿ ಕ್‌, ಗ್‌, ಚ್‌, ಜ್‌ ಮೊದಲಾದ ಸ್ಪರ್ಶಗಳಾಗಲಿ, ಇಲ್ಲವೇ ಸಕಾರವಾಗಲಿ ಬರಲಾರವು. ಆದರೆ ಸಂಸ್ಕೃತದಲ್ಲಿ ಕಟತಪಗಳೂ ಪದಗಳ ಕೊನೆಯಲ್ಲಿ ಬರಬಲ್ಲುವು (ವಿಶ್ವಜಿತ್‌, ಸರ್ವಶಕ್‌, ವಿಟ್‌).

Eke →

೩.೪ ತದ್ಭವಗಳಲ್ಲಿ ಕಾಣಿಸುವ ಬದಲಾವಣೆಗಳು

ಹಳೆಗನ್ನಡಕ್ಕೆ ಸಂಸ್ಕೃತದಿಂದ ನೂರಾರು ಪದಗಳು ಎರವಲಾಗಿ ಬಂದಿವೆ. ಇವುಗಳಲ್ಲಿ ಹಲವು ಬದಲಾಗದೆ ಹಾಗೆಯೇ ಕಾಣಿಸಿಕೊಳ್ಳುವುವಾದರೆ, ಬೇರೆ ಹಲವು ಬದಲಾವಣೆಗೊಳ- ಗಾಗುವುದರ ಮೂಲಕ ಕನ್ನಡದವಾಗಿ ಮಾರ್ಪಟ್ಟಿವೆ. ಸಂಸ್ಕೃತದಿಂದ ನೇರವಾಗಿ ಬರುವ ಬದಲು, ಪಾಲಿ, ಪ್ರಾಕೃತ ಮೊದಲಾದುವುಗಳ ಮೂಲಕ ಬಂದುದರಿಂದಲೂ ಇಂತಹ ಪದಗಳಲ್ಲಿ ಕೆಲವು ಸಂಸ್ಕೃತ ಪದಗಳಿಗಿಂತ ಭಿನ್ನವಾಗಿವೆ.

ಸಂಸ್ಕೃತದಿಂದ ಬಂದಿರುವ ಈ ಪದಗಳಲ್ಲಿ ಕಾಣಿಸುವ ಬದಲಾವಣೆಗಳಲ್ಲಿ ಹೆಚ್ಚಿನವಕ್ಕೂ ಆ ಭಾಷೆಯಲ್ಲಿ ಬಳಕೆಯಾಗುವ ವರ್ಣಗಳ ಸಂಖ್ಯೆ, ಸ್ವರೂಪ, ಮತ್ತು ಅನುಕ್ರಮಗಳು ಹಳೆಗನ್ನಡದಲ್ಲಿರುವುದಕ್ಕಿಂತ ಭಿನ್ನವಾಗಿರುವುದೇ ಮುಖ್ಯ ಕಾರಣ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಮಹಾಪ್ರಾಣಾಕ್ಟರಗಳಿವೆ; ಆದರೆ, ಹಳೆಗನ್ನಡದಲ್ಲಿಲ್ಲ. ಹಾಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವು ಪದಗಳಲ್ಲಿ ಮಹಾಪ್ರಾಣಾಕ್ಷರಗಳು ಅಲ್ಪಪ್ರಾಣಾಕ್ಟರಗಳಾಗಿವೆ (ಮುಖ- ಮುಕ, ಘಂಟೆ-ಗಂಟೆ, ಕಥೆ-ಕತೆ, ಇಚ್ಛೆ-ಇಚ್ಚೆ, ಧೂಪ-ದೂಪ).

ಹಳೆಗನ್ನಡದಲ್ಲಿ ಸ-ಶ-ಷಗಳ ಬದಲು ಸ ಎಂಬುದೊಂದೇ ಇದ್ದಿತಾದ ಕಾರಣ, ತದ್ಧ ಸೈ ವಗಳಲ್ಲಿ ಷ-ಶಗಳು ಸ ಆಗುತ್ತವೆ (ಶಂಕೆ-ಸಂಕೆ, ಶುಚಿ-ಸುಚಿ, ಭಾಷೆ-ಬಾಸೆ, ವಿಷಯ-ವಿಸಯ).

ಮೇಲೆ ವಿವರಿಸಿದ ಹಾಗೆ, ಹಳೆಗನ್ನಡ ಪದಗಳ ಆದಿಯಲ್ಲಿ ಒಂದಕ್ಕಿಂತ ಜಾಸ್ತಿ ವ್ಯಂಜನಗಳು ಬರಲಾರವು. ಹಾಗಾಗಿ, ಮೊದಲಿಗೆ ಎರಡು ವ್ಯಂಜನಗಳು ಬರುವ ಸಂಸ್ಕೃತ ಪದಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದು, ಅವುಗಳಲ್ಲಿ ಒಂದು ವ್ಯಂಜನ ಮಾತ್ರ ಉಳಿಯುವ ಹಾಗಾಗಿದೆ (ಕ್ಲಾರ-ಕಾರ, ಸ್ಮಶಾನ-ಮಸಣ, ಪ್ರಾಯ-ಹರಯ, ಧೃಷ್ಟ-ದಿಟ್ಟ, ಧ್ವನಿ-ದನಿ, ತ್ಯಾಗಿ-ಚಾಗಿ, ಕ್ಷಣ-ಚಣ, ಶ್ರೀ-ಸಿರಿ, ಸ್ಥಾನ-ತಾಣ).

Eke →

೩.೫ ಪದಗಳ ಉಚ್ಚಾರಣೆ

ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವೆ ಪದಗಳ ಉಚ್ಚಾರಣೆಯಲ್ಲೂ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸಂಸ್ಕೃತದ ಹೆಚ್ಚಿ ನ ಪದಗಳಲ್ಲೂ ಯಾವುದಾದರೂ ಒಂದು ಸ್ವರವನ್ನು ಇತರ ಸ್ವರಗಳಿಂದ ಸ್ವಲ್ಪ ಎತ್ತರದ ಧ್ವನಿಯಲ್ಲಿ (ಎಂದರೆ “ಉದಾತ್ತ’ ಸ್ವರವಾಗಿ) ಉಚ್ಚರಿಸಬೇಕಾಗುತ್ತದೆ. ಉದಾಹರಣೆಗಾಗಿ, ವಚಸ್‌ “ಮಾತು’ ಪದದಲ್ಲಿ ಮೊದಲನೆಯ ಸ್ವರ ಉದಾತ್ತವಾಗಿದೆಯಾದರೆ, ಗುರು “ಭಾರ’ ಪದದಲ್ಲಿ ಎರಡನೆಯ ಸ್ವರ ಉದಾತ್ತವಾಗಿದೆ. ಯಾವ ಸ್ವರ ಈರೀತಿ ಉದಾತ್ತವಾಗಿದೆ (ಎತ್ತರದ ಧ್ವನಿಯಲ್ಲಿ ಉಚ್ಚಾರವಾಗುತ್ತದೆ) ಎಂಬುದರ ಮೇಲೆ ಸಂಸ್ಕೃತ ಪದಗಳಲ್ಲಿ ಅರ್ಥ ವ್ಯತ್ಯಾಸ ಕಾಣಿಸಿಕೊಳ್ಳುತ್ತ ದೆ.

ಉದಾಹರಣೆಗಾಗಿ, ರಾಜಪುತ್ರ ಪದದಲ್ಲಿ ಕೊನೆಯ ಸ್ವರ ಉದಾತ್ತವಾಗಿದೆಯಾದರೆ “ರಾಜನ ಮಗ’ ಎಂಬ ಅರ್ಥ ಬರುತ್ತದೆ, ಮತ್ತು ಮೊದಲನೆಯ ಸ್ವರ ಉದಾತ್ತವಾಗಿದೆಯಾದರೆ “ರಾಜನು ಮಗನಾಗಿರುವವನು’ (ಎಂದರೆ “ರಾಜನ ತಂದೆ’) ಎಂಬ ಅರ್ಥ ಬರುತ್ತದೆ.

ಸ್ವರಗಳ ಉಚ್ಚಾರಣೆಯಲ್ಲಿ ಕಾಣಿಸುವ ಈ ಉಚ್ಚಾರಣೆಯ ವ್ಯತ್ಯಾಸ ವೇದ ಕಾಲದ ಸಂಸ್ಕೃತದಲ್ಲಿ ಸ್ಪಷ್ಟವಾಗಿತ್ತು. ಅನಂತರ ಇದು ಪಾಣಿನಿ, ಪತಂಜಲಿ ಮೊದಲಾದವರ ಕಾಲದವರೆಗೂ ಉಳಿದುಕೊಂಡಿತ್ತು. ಆದರೆ, ಏಳು-ಎಂಟನೇ ಶತಮಾನದ ಹೊತ್ತಿಗೆ ಇದರ ಬಳಕೆ ಮಾತಿನಿಂದ ಬಿದ್ದು ಹೋಗಲು ಆರಂಭಿಸಿ, ಅನಂತರದ ಸಂಸ್ಕೃತದಲ್ಲಿ ಪೂರ್ತಿ ಇಲ್ಲವಾಗಿದೆ. ಈಗಿನವರು ವೇದಮಂತ್ರಗಳ ಉಚ್ಚಾರಣೆಯಲ್ಲಿ ಮಾತ್ರ ಈ ವ್ಯತ್ಯಾಸವನ್ನು ಕಾಣಿಸುತ್ತಾರೆ.

ಸಂಸ್ಕೃತ ಪದಗಳಲ್ಲಿ ಕಾಣಿಸುವ ಹಲವು ಬದಲಾವಣೆಗಳಿಗೆ, ಮತ್ತು ವಿಕಲ್ಪೊ। ಚ್ಹಾ ರಣೆಗಳಿಗೆ ಅವುಗಳಲ್ಲಿರುವ ಸ್ವರಗಳ ಈ ಉಚ್ಚಾ ರಣಾಭೇದವೂ ಕಾರಣವಾಗಿತ್ತು. ಇಂತಹ ಉಚ್ಚಾ ರಣಾಭೇದ ಹಳೆಗನ್ನಡದ ಪದಗಳಲ್ಲಿಲ್ಲ.

ವೇದಕಾಲದಲ್ಲಿ ದ್ದು ಅನಂತರ ಇಲ್ಲವಾಗಿರುವ ಈ ಉಚ್ಚಾ ರಣಾಭೇದವನ್ನು ವೇದಗಳ ಬರಹದಲ್ಲಿ ಮಾತ್ರ ಸೂಚಿಸುತ್ತೇವಲ್ಲದೆ ಸಂಸ್ಕೃತ ಕಾವ್ಯಗಳ ಬರಹದಲ್ಲಿ ಸೂಚಿಸುವುದಿಲ್ಲ. (ಆದರೆ ಈ ರೀತಿ ಉಚ್ಚಾರಣೆಯಲ್ಲಿಲ್ಲದ ವ್ಯತ್ಯಾಸವನ್ನು ಬರಹದಲ್ಲಿ ಕಾಣಿಸದಿರುವುದರಿಂದಾಗಿ “ಸಂಸ್ಕತಿ ನಾಶ’ವಾಗಿದೆಯೆಂದು, ಮತ್ತು ಕಾವ್ಯಗಳ ಕಾಲದ ಸಂಸ್ಕೃತ ಪದಗಳಲ್ಲೂ ಈ ವ್ಯತ್ಯಾಸವನ್ನು ಸೂಚಿಸಬೇಕೆಂದು ಯಾರೂ ಹೇಳುವ ಹಾಗೆ ಕಾಣಿಸುವುದಿಲ್ಲ).

Eke →

೩.೬ ವರ್ಣಗಳ ಗುಂಪುಗಳು

ಒಂದು ಭಾಷೆಯಲ್ಲಿ ಬರುವ ವರ್ಣಗಳನ್ನು ಯಾವ ರೀತಿಯ ಗುಂಪುಗಳಲ್ಲಿ ವಿಂಗಡಿಸಿ ಹೇಳಬೇಕು ಎಂಬುದು ಅವುಗಳ ಉತ್ಪಾದನೆ, ಬಳಕೆ ಮತ್ತು ಚರಿತ್ರೆಯಲ್ಲಿ ಕಾಣಿಸು ಗುಣಧರ್ಮಗಳನ್ನವಲಂಬಿಸಿದೆ. ಇವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬೇರೆ

ಬೇರೆಯಾಗಿರಲು ಸಾಧ್ಯವಿದೆಯಾದ ಕಾರಣ, ವರ್ಣಗಳನ್ನು ಯಾವ ರೀತಿಯ ಗುಂಪುಗಳಲ್ಲಿ ಸೇರಿಸಿ ಹೇಳಬೇಕು ಎಂಬುದೂ ಭಾಷೆಯಿಂದ ಭಾಷೆಗೆ ಬೇರೆ ಬೇರೆಯಾಗಿರಲು ಸಾಧ್ಯವಿದೆ.

೩.೬.೧ ಸಂಸ್ಕೃತದ ಸ್ವರಗಳು

ಇಂಡೋ-ಯುರೋಪಿಯನ್‌ ಭಾಷಾಕುಟುಂಬದ ಮೂಲಭಾಷೆಯಲ್ಲಿದ್ದ ಸ್ವರಗಳಲ್ಲಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರ ಸಂಸ್ಕೃತದಲ್ಲಿ ಬದಲಾಗದೆ ಉಳಿದಿವೆ; ಇವು ಗಿಡ್ಡ (ಪ್ರಸ್ತ) ಸ್ವರಗಳಿರಬಹುದು, ಇಲ್ಲವೇ ಉದ್ದ (ದೀರ್ಫ) ಸ್ವರಗಳಿರಬಹುದು. ಮೂಲ ಭಾಷೆಯ ಎಕಾರ-ಏಕಾರ ಮತ್ತು ಒಕಾರ-ಓಕಾರಗಳು ಸಂಸ್ಕೃತದಲ್ಲಿ ಅಕಾರ-ಆಕಾರಗಳಾಗಿ ಬದಲಾಗಿವೆ.

ಈ ಎಲ್ಲಾ ಸ್ವರಗಳನ್ನೂ ಹಾಗೆಯೇ ಉಳಿಸಿಕೊಂಡಿರುವ ಲ್ಯಾಟಿನ್‌ ಭಾಷೆಯ ಪದಗಳೊಂದಿಗೆ ಸಂಸ್ಕೃತ ಪದಗಳನ್ನು ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ:

ಸಂಸ್ಕೃತ ಲ್ಯಾಟಿನ್‌

(೧ಕ) ಅಯಸ್‌ ಅಎಸ್‌ “ಲೋಹ’ ಅಪ ಅಬ್‌ “ಆಚೆ’ ಹಂಸ ಅನ್ಸೆರ್‌ “ಹಂಸ’ ಮಾತರ್‌ ಮಾತೆರ್‌ “ತಾಯಿ ಸ್ವಾದು ಸುಆವಿಸ್‌ “ಸಿಹಿ’

(೧ಖ) ಅಸ್ತಿ ಎಸ್‌ “ಇದೆ’ ಮಧ್ಯ ಮೆದಿಉಸ್‌ “ನಡುವೆ’ ಚ ಕೆ “ಮತು ರಾಜನ್‌ ರೇಕ್ಸ್‌ “ಅರಸು’ ಸಾಮಿ ಸೇಮಿ “ಅರೆ’

(೧ಗ) ಅವಿ ಒವಿಸ್‌ “ಕುರಿ’ ಅಸ್ಥಿ ಒಸ್‌ “ಎಲುಬು’ ಜಾ ಪೊತಿಸ್‌ “ಗಂಡ, ಸಮರ್ಥ’ ಕಸ್‌ ಕೊದ್‌ “ಯಾರು’ ಆಸ್‌ ಓಸ್‌ “ಬಾಯಿ’ ಪಾ ಪೋತುಸ್‌ “ಕುಡಿ’

ಮೇಲೆ (೧ಕ)ದಲ್ಲಿ ಸಂಸ್ಕೃತದ ಅಕಾರ ಮತ್ತು ಆಕಾರಗಳು ಲ್ಯಾಟಿನ್‌ನಲ್ಲಿ ಹಾಗೆಯೇ ಕಾಣಿಸಿಕೊಳ್ಳುತ್ತವೆ; ಆದರೆ, (೧ಖ)ದಲ್ಲಿ ಅವು ಎಕಾರ-ಏಕಾರಗಳಾಗಿ ಕಾಣಿಸಿಕೊಳ್ಳುತ್ತವೆ, ಮತ್ತು (೧ಗ)ದಲ್ಲಿ ಒಕಾರ-ಓಕಾರಗಳಾಗಿ ಕಾಣಿಸಿಕೊಳ್ಳುತ್ತವೆ.

ಮೂಲ ಇಂಡೋ-ಯುರೋಪಿಯನ್‌ನಲ್ಲಿ (೧ಕ)ದಲ್ಲಿ ಕಾಣಿಸಿರುವಂತಹ ಪದಗಳಲ್ಲಿ ಅಕಾರ ಮತ್ತು ಆಕಾರಗಳಿದ್ದುವೆಂದೂ, (೧ಖ)ದಲ್ಲಿ ಕಾಣಿಸಿರುವಂತಹ ಪದಗಳಲ್ಲಿ ಎಕಾರ ಮತ್ತು ಏಕಾರಗಳಿದ್ದುವೆಂದೂ, ಮತ್ತು (೧ಗ)ದಲ್ಲಿ ಕಾಣಿಸಿರುವಂತಹ ಪದಗಳಲ್ಲಿ ಒಕಾರ ಮತ್ತು ಓಕಾರಗಳಿದ್ದು ವೆಂದೂ ವಿದಾ ಿಂಸರು ಅಭಿಪ್ರಾಯಪಟ್ಟಿದ್ದಾ ರೆ (ಬರೋ ೧೯೫೫ ನೋಡಿ). ಇವೆಲ್ಲವೂ ಸಂಸ್ಕೃತದಲ್ಲಿ ಅಕಾರ ಮತ್ತು ಆಕಾರಗಳಾಗಿ ಬದಲಾಗಿವೆ.

ಸಂಸ್ಕೃತದಲ್ಲಿ ಗಿಡ್ಡ ಎಕಾರ ಮತ್ತು ಒಕಾರಗಳಿಲ್ಲದಿರುವುದಕ್ಕೆ ಮೂಲ ಭಾಷೆಯ ಎಕಾರ- ಒಕಾರಗಳು ಅಕಾರವಾಗಿರುವ ಮೇಲಿನ ಬದಲಾವಣೆಯೇ ಕಾರಣ. ಉದ್ದ ಏಕಾರ ಮತ್ತು ಒಕಾರಗಳು ಸಂಸ್ಕೃತ ಪದಗಳಲ್ಲಿ ಕಾಣಿಸುವುವಾದರೂ ಅವು ಮೂಲ ಪದಗಳಲ್ಲಿ ದ್ದ ಏಕಾರ- ಓಕಾರಗಳಲ್ಲ; ಅವುಗಳಲ್ಲಿ ಕೆಲವು ಮೂಲ ಭಾಷೆಯ ಅಇ, ಎಇ ಮತ್ತು ಒಇ ಎಂಬ ಸ್ವರಜೋಡಿಗಳು ಏ ಎಂದಾದುದರಿಂದಾಗಿ, ಮತ್ತು ಅಉ, ಎಉ, ಒಉ ಎಂಬವುಗಳು ಓ ಆದುದರಿಂದಾಗಿ ಕಾಣಿಸಿಕೊಳ್ಳುವವುಗಳು.

ಉದಾಹರಣೆಗಾಗಿ, ಸಂಸ್ಕೃತದ ವೇದ ಪದಕ್ಕೆ ಸರಿಯಾಗಿ ಗ್ರೀಕ್‌ ಭಾಷೆಯಲ್ಲಿ ಒಇದ ಎಂದಿದೆ, ಮತ್ತು ತೇ ಎಂಬುದಕ್ಕೆ ಸರಿಯಾಗಿ ತೊಇ ಎಂದಿದೆ; ಸಂಸ್ಕೃತದ ಓಜಸ್‌ ಪದಕ್ಕೆ ಸರಿಯಾಗಿ ಲ್ಯಾಟಿನ್‌ನಲ್ಲಿ ಅಉಗುಸ್ತುಸ್‌ ಎಂದಿದೆ, ಮತ್ತು ಶೋಷ- ಎಂಬುದಕ್ಕೆ ಸರಿಯಾಗಿ ಲಿಥುವೇನಿಯನ್‌ ಭಾಷೆಯಲ್ಲಿ ಸಉಸಸ್‌ ಎಂದಿದೆ.

ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕವೂ ಈ ಎರಡು ಸ್ವರಗಳು ಸಂಸ್ಕೃತದಲ್ಲಿ ಸಿದ್ಧವಾಗುತ್ತವೆ. ಉದಾಹರಣೆಗಾಗಿ, ರಾಜೇಂದ್ರ ಪದದಲ್ಲಿ ಕಾಣಿಸುವ ಏಕಾರ ರಾಜ ಪದದ ಕೊನೆಯ ಅಕಾರದೊಂದಿಗೆ ಇಂದ್ರ ಪದದ ಆದಿಯಲ್ಲಿರುವ ಇಕಾರ ಸೇರಿದುದರಿಂದಾಗಿ ಸಿದ್ಧ ವಾಗಿದೆ, ಮತ್ತು ಸೂರ್ಯೋದಯ ಪದದಲ್ಲಿ ಕಾಣಿಸುವ ಓಕಾರ ಸೂರ್ಯ ಪದದ ಕೊನೆಯಲ್ಲಿ ಬರುವ ಅಕಾರದೊಂದಿಗೆ ಉದಯ ಪದದ ಆದಿಯಲ್ಲಿರುವ ಉಕಾರ ಸೇರಿದುದರಿಂದಾಗಿ ಸಿದ್ಧ ವಾಗಿದೆ.

ಈ ಕಾರಣಕ್ಕಾಗಿ, ಏ ಮತ್ತು ಓಗಳನ್ನು ಸಂಸ್ಕೃತದ ವೈಯಾಕರಣಿಗಳು ಅ, ಆ, ಇ, ಈ, ಉ ಮತ್ತು ಊಗಳಿಂದ ಭಿನ್ನವಾಗಿರುವ “ಗುಣಾಕ್ಷರ’ಗಳೆಂಬ ಪ್ರತ್ಯೇಕವಾದೊಂದು ಗುಂಪಿನಲ್ಲಿ ಇರಿಸುತ್ತಾರೆ.

ಇದೇ ರೀತಿಯಲ್ಲಿ ಸಂಸ್ಕೃತದ ಐ ಮತ್ತು ಔಗಳೆಂಬ ಬೇರೆ ಎರಡು ಸ್ವರಗಳೂ ಮೂಲ ಪದಗಳಲ್ಲಿ ಕಾಣಿಸುವವುಗಳಲ್ಲ. ಇವೂ ಕೂಡ ಸೇರಿಕೆಯ ನಿಯಮಗಳ ಮೂಲಕ ಸಿದ್ಧವಾಗುವವುಗಳಾಗಿದ್ದು, “ವೃದ್ಧ ‘ಕರ’ಗಳೆಂಬ ಬೇರೆ ಒಂದು ಗುಂಪಿನಲ್ಲಿ ಸೇರುತ್ತವೆ; ಉದಾಹರಣೆಗಾಗಿ, ವಿದ್ಯಾಏವ ಎಂಬುದು ವಿದ್ಯೈವ ಎಂದಾಗುತ್ತದೆ, ಮತ್ತು ಅಲ್ಬಓಜಸ್‌ ಎಂಬುದು ಅಲ್ರೌಜಸ್‌ ಎಂದಾಗುತ್ತದೆ.

ಏಇ, ಓಇ, ಏಉ, ಓಉ ಮೊದಲಾದ ಸ್ವರಜೋಡಿಗಳಿಂದಲೂ ಐ ಮತ್ತು ಔಗಳು ಬಂದಿರಲು ಸಾಧ್ಯವಿದೆ. ಉದಾಹರಣೆಗಾಗಿ, ತಸ್ಮೈ ಎಂಬುದರಲ್ಲಿರುವ ಐಕಾರ ಓಇ ಸ್ವರಜೋಡಿಯಿಂದಲೂ, ನೌಃ ಎಂಬುದರಲ್ಲಿರುವ ಔಕಾರ ಆಉ ಸ್ವರಜೋಡಿಯಿಂದಲೂ, ದ್ಯೌಃ ಎಂಬುದರಲ್ಲಿರುವ ಔಕಾರ ಏಉ ಸ್ವರ ಜೋಡಿಯಿಂದಲೂ, ಮತ್ತು ದೇವ್ಯೈಃ ಎಂಬುದರಲ್ಲಿರುವ ಐಕಾರ ಆಇ ಸ್ವರ ಜೋಡಿಯಿಂದಲೂ ಬಂದಿದೆ.

೩.೬.೨ ಹಳೆಗನ್ನಡದ ಸ್ವರಗಳು

ಸ್ವರಗಳನ್ನು ಬೇರೆ ಬೇರೆ ಗುಂಪುಗಳಲ್ಲಿ ಸೇರಿಸುವ ಮೇಲಿನ ಸಂಸ್ಕೃತದ ನಿಯಮಗಳಿಗಿಂತ ಕನ್ನಡದ ನಿಯಮಗಳು ತೀರಾ ಭಿನ್ನವಾಗಿವೆ. ಹಳೆಗನ್ನಡದಲ್ಲಿ ಅ, ಇ, ಉ, ಎ ಮತ್ತು ಒ ಎಂಬ ಐದು ಸ್ವರಗಳೂ ಮೂಲ ಪದಗಳಲ್ಲೇನೇ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಉದ್ದ ಮತ್ತು ಗಿಡ್ಡ ಎಂಬುದಾಗಿ ಎರಡೆರಡು ರೂಪಗಳಲ್ಲಿ ಬರುತ್ತವೆ. ಇವೆಲ್ಲವನ್ನೂ ಕನ್ನಡ ಭಾಷೆ ತನ್ನ ಮೂಲಭಾಷೆಯಿಂದಲೇನೇ ನೇರವಾಗಿ ಪಡೆದುಕೊಂಡಿದೆ.

ಮೂಲದ್ರಾವಿಡದ ಈ ಸ್ವರಗಳಲ್ಲಿ ಇಕಾರ-ಉಕಾರಗಳು ಮಾತ್ರ ಕೆಲವು ಸಂದರ್ಭಗಳಲ್ಲಿ (ಅವುಗಳ ಅನಂತರ ಅಕಾರ ಬಂದಾಗ) ಎಕಾರ-ಒಕಾರಗಳಾಗಿ ಕನ್ನಡದಲ್ಲಿ ಬದಲಾಗಿವೆ. ನಿಲ್ಲು- ನೆಲೆ, ಇರ್‌-ಎರಡು, ಸುಡು-ಸೊಡರು, ಕುಂದು-ಕೊರತೆ ಮೊದಲಾದ ಕೆಲವು ಪದಯುಗ್ಮಗಳಲ್ಲಿ ಈ ಬದಲಾವಣೆಯ ಪರಿಣಾಮವನ್ನು ಕಾಣಬಹುದು.

ಬೇರೆ ಕೆಲವು ಸಂದರ್ಭಗಳಲ್ಲಿ (ಇಕಾರ-ಉಕಾರಗಳು ಅನಂತರ ಬಂದಾಗ) ಎಕಾರ- ಒಕಾರಗಳು ಇಕಾರ-ಉಕಾರಗಳಾಗಿವೆ. ಬಿಳಿ-ಬೆಳ್ಳಗೆ, ಕಿಸು-ಕೆಂಪು, ತುಟುಲ್‌-ತೊಲ್ತು, ಉಸಿರು- ಒಸಗೆ ಮೊದಲಾದ ಪದಯುಗ್ಮಗಳನ್ನು ಈ ಬದಲಾವಣೆಗೆ ಉದಾಹರಣೆಗಳನ್ನಾಗಿ ಕೊಡಬಹುದು (ಜಾಸ್ತಿ ವಿವರಗಳಿಗೆ ಭಟ್‌ ೨೦೦೭ ನೋಡಿ). ಆದರೆ, ಈ ಎರಡು ರೀತಿಯ ಬದಲಾವಣೆಗಳೂ ಮೇಲೆ ವಿವರಿಸಿದಂತಹ ಸಂಸ್ಕೃತದ ಬದಲಾವಣೆಗಳಿಗಿಂತ ತೀರ ಭಿನ್ನವಾದವುಗಳು.

ಇಕಾರ-ಎಕಾರಗಳು ನಾಲಿಗೆಯ ಮುಂಭಾಗದಲ್ಲಿ ಹುಟ್ಟುವವುಗಳಾಗಿದ್ದು ಒಂದು ಗುಂಪಿನಲ್ಲೂ, ಉಕಾರ-ಒಕಾರಗಳು ನಾಲಿಗೆಯ ಹಿಂಭಾಗದಲ್ಲಿ ಹುಟ್ಟುವವುಗಳಾಗಿದ್ದು ಇನ್ನೊಂದು ಗುಂಪಿನಲ್ಲೂ ಸೇರುತ್ತವೆ. ನಾಲಿಗೆಯ ನಡು ಭಾಗದಲ್ಲಿ ಹುಟ್ಟುವ ಅಕಾರ ಕೆಲವು ವಿಷಯಗಳಲ್ಲಿ ಇಕಾರ-ಎಕಾರಗಳ ಹಾಗೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಉಕಾರ-ಒಕಾರಗಳ ಹಾಗೆ ಕಾಣಿಸಿಕೊಳ್ಳುತ್ತ ದೆ.

ಇದಲ್ಲದೆ, ಬಾಯಿಯನ್ನು ಸ್ವಲ್ಪವೇ ತೆರೆದು ಉಚ್ಚರಿಸುವ ಇಕಾರ-ಉಕಾರಗಳು ಒಂದು ಗುಂಪಿನಲ್ಲೂ ಬಾಯಿಯನ್ನು ಇದಕ್ಕಿಂತ ಸ್ವಲ್ಪ ಜಾಸ್ತಿ ತೆರೆದು ಉಚ್ಚರಿಸುವ ಎಕಾರ-ಒಕಾರ- ಅಕಾರಗಳು ಇನ್ನೊಂದು ಗುಂಪಿನಲ್ಲೂ ಸೇರುತ್ತವೆ.

ಈ ರೀತಿ, ಸ್ವರಗಳ ಹುಟ್ಟನ್ನಾಧರಿಸಿ ರಚಿಸಿದ ವರ್ಗೀಕರಣವೇ ಕನ್ನಡದ ಮಟ್ಟಿಗೆ ಹೆಚ್ಚು ಉಪಯುಕ್ತವಾದುದು. ಇದು ಮೇಲೆ ವಿವರಿಸಿದ ಸಂಸ್ಕೃತ ಸ್ವರಗಳ ಸಮಾನಸ್ವರ-ಗುಣಸ್ವರ- ವೃದ್ಧಿ ಸ್ವರ ವರ್ಗೀಕರಣಕ್ಕಿಂತ ತೀರ ಭಿನ್ನವಾದುದೆಂಬುದನ್ನು ಗಮನಿಸಬಹುದು.

ಹಳೆಗನ್ನಡದ ಸೇರಿಕೆಯ ನಿಯಮಗಳನ್ನು ಬರೆಯುವಲ್ಲಿ, ಮೇಲಿನ ಕನ್ನಡದ್ದೇ ಆದ ವರ್ಗೀಕರಣ ಸಹಾಯಕವಾಗುತ್ತದೆ. ಉದಾಹರಣೆಗಾಗಿ, ಇಕಾರ ಮತ್ತು ಎಕಾರಗಳ ಅನಂತರ ಬೇರೆ ಸ್ವರ ಬಂದಾಗ ಹಳೆಗನ್ನಡದಲ್ಲಿ ಅವೆರಡರ ನಡುವೆ ಕೆಲವು ಸಂದರ್ಭಗಳಲ್ಲಿ ಯಕಾರವೊಂದು ಆಗಮವಾಗಿ ಬಂದು ಸೇರುತ್ತದೆ (ಬೂದಿಯಾದುದು, ಈಯೊಡಲ್‌, ಕೋಗಿಲೆಯಾಗಿ); ಇದಕ್ಕೆ ಬದಲು, ಉಕಾರ ಮತ್ತು ಒಕಾರಗಳ ಅನಂತರ ಬೇರೆ ಸ್ವರ ಬಂದಿದೆಯಾದಲ್ಲಿ, ಅವುಗಳ ನಡುವೆ ಯಕಾರದ ಬದಲು ವಕಾರ ಬರುತ್ತದೆ (ಕೈದುವೆಲ್ಲಂ, ಪೂವಿನ).

೩.೬.೩ ವ್ಯಂಜನಾಕ್ಷರಗಳು

ಸಂಸ್ಕೃತದ ವ್ಯಂಜನಾಕ್ಟರಗಳನ್ನು ವರ್ಗೀಯಗಳು (ಇಲ್ಲವೇ ಸ್ಪರ್ಶಗಳು) ಮತ್ತು ಅವರ್ಗೀಯಗಳು ಎಂಬುದಾಗಿ ಎರಡು ುಖಖ್ಯ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇವುಗಳಲ್ಲಿ

ವರ್ಗೀಯಗಳನ್ನು ಅವುಗಳ ಸ್ಥಾ ನವನ್ನಾಧರಿಸಿ ಐದು ವರ್ಗಗಳಲ್ಲಿ ವಿಂಗಡಿಸಲಾಗಿದ್ದು ; ಪ್ರತಿಯೊಂದು ವರ್ಗದಲ್ಲೂ ಅಘೋಷ-ಅಲ್ಲಪ್ರಾಣ (ಕಚಟತಪ), ಅಘೋಷ-ಮಹಾಪ್ರಾಣ (ಖಚಠಥಫ), ಘೋಷ-ಅಲ್ಪಪ್ರಾಣ (ಗಜಡದಬ), ಘೋಷ-ಮಹಾಪ್ರಾಣ (ಘರುಢಧಭ), ಮತ್ತು ಅನುನಾಸಿಕ (ಜಇಣನಮ) ಎಂಬುದಾಗಿ ಐದು ರೀತಿಯ ವ್ಯಂಜನಗಳು ಕಾಣಿಸಿಕೊಳ್ಳುತ್ತ ವೆ. ಅವರ್ಗೀಯಗಳನ್ನು ಅಂತಸ್ಥ (ಯರಲವ) ಮತ್ತು ಊಷ್ಮ (ಸಶಷಹ) ಎಂಬುದಾಗಿ ವಿಂಗಡಿಸಲಾಗಿದೆ.

ಹಳೆಗನ್ನಡದ ವ್ಯಂಜನಗಳನ್ನು ಈ ರೀತಿ ವಿಂಗಡಿಸುವ ಬದಲು, ಬೇರೆ ರೀತಿಯಲ್ಲಿ ವಿಂಗಡಿಸುವುದರಿಂದ ಅದರ ಸೇರಿಕೆಯ ನಿಯಮಗಳನ್ನು ವಿವರಿಸುವ ಕೆಲಸ ಸುಲಭವಾಗುತ್ತದೆ. ಇದಲ್ಲದೆ, ಸಂಸ್ಕೃತದ ವರ್ಗೀಯಗಳಲ್ಲಿ ಕಾಣಿಸುವ ಅಚ್ಚುಕಟ್ಟು ಹಳೆಗನ್ನಡದ ವರ್ಗೀಯಗಳಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲವಾದ ಕಾರಣ, ವರ್ಗೀಯಗಳಲ್ಲಿ ಮೂರು ಗುಂಪುಗಳು ಮಾತ್ರ ಉಳಿಯುತ್ತವೆ. ಇಲ್ಲೂ, ಮೂರನೆಯ ಗುಂಪಿನಲ್ಲಿ ಸಂಸ್ಕೃತದ ಹಾಗೆ ಐದು ಅನುನಾಸಿಕಗಳಿರುವ ಬದಲು, ಮೂರು ಅನುನಾಸಿಕಗಳು (ಮನಣ) ಮಾತ್ರ ಇವೆ (ರಾಮಚಂದ್ರರಾವ್‌ ೧೯೭೨ ನೋಡಿ).

ಇದಲ್ಲದೆ, ಹಳೆಗನ್ನಡದ ಯರಲವಸ ಮತ್ತು ಳಟಜಗಳನ್ನು ಮೇಲಿನ ಐದು ವರ್ಗಗಳಲ್ಲೇನೇ ಸೇರಿಸಿ ಹೇಳುವುದರಿಂದ, ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಹೆಚ್ಚಿನ ಪ್ರಯೋಜನವಾಗಬಲ್ಲುದು. ಉದಾಹರಣೆಗಾಗಿ, ಹಳೆಗನ್ನಡದ ಪಬಮಗಳಿಗೂ ವಕ್ಕೂ ನಡುವೆ ಹತ್ತಿರದ ಸಂಬಂಧವಿದೆ, ಮತ್ತು ಡ ಹಾಗೂ ಳಟಗಳ ನಡುವೆಯೂ ಹತ್ತಿರದ ಸಂಬಂಧವಿದೆ. ಇವನ್ನು ವಿವರಿಸಲು ಹಳೆಗನ್ನಡಕ್ಕೆ ಸಂಸ್ಕೃತದಿಂದ ಭಿನ್ನವಾದ ವಿಂಗಡಣೆಯನ್ನು ತಯಾರಿಸುವ ಅವಶ್ಯಕತೆಯಿದೆ.

೩.೬.೪ ಮಾಹೇಶ್ವರ ಸೂತ್ರಗಳು

ಇಲ್ಲಿ ಗಮನಿಸಬೇಕಾಗಿರುವ ಮುಖ್ಯವಾದ ವಿಷಯವೇನೆಂದರೆ, ಪಾಣಿನಿಯ “ಮಾಹೇಶ್ವರ ಸೂತ್ರ’ಗಳನ್ನು, ಮತ್ತು ಅವು ಸಾಧ್ಯವಾಗಿಸುವ ವರ್ಣಗಳ ಗುಂಪುಗಳನ್ನು (ಅಣ್‌, ಅಕ್‌, ಅಚ್‌ ಮೊದಲಾದುವನ್ನು) ಸಂಸ್ಕೃತ ಭಾಷೆಯಲ್ಲಿ ವರ್ಣಗಳ ಬಳಕೆ ಎಂತಹದು, ಮತ್ತು ಸೇರಿಕೆಯ (ಸಂಧಿಯ) ನಿಯಮಗಳು ಎಂತಹವು ಎಂಬುದನ್ನು ಸುಲಭವಾಗಿ ವಿವರಿಸಲು ಅನುಕೂಲವಾಗುವಂತೆ ರಚಿಸಲಾಗಿದೆ.

ಉದಾಹರಣೆಗಾಗಿ, ಅಇಉಣ್‌, ಖಯಲ್‌’ಕ್‌ ಎಂಬ ಎರಡು ಮಾಹೇಶ್ವರ ಸೂತ್ರಗಳು ಸೂಚಿಸುವ ಎಲ್ಲಾ ಸ್ವರಗಳನ್ನೂ (ಅ, ಇ, ಉ, ಖ ಮತ್ತು ಲ್‌’ ಎಂಬವುಗಳನ್ನು) ಈ ಸೂತ್ರಗಳ ಮೊದಲನೆಯ ಮತ್ತು ಕೊನೆಯ ಅಕ್ಷರಗಳನ್ನು ಒಟ್ಟಿಗೆ ಬಳಸಿ ರಚಿಸಿದ “ಅಕ್‌’ ಸಂಜ್ಞೆಯ ಮೂಲಕ ಸಂಕ್ಷಿಪ್ತವಾಗಿ ಸೂಚಿಸಲಾಗುತ್ತದೆ. ಇದಕ್ಕೆ ಬದಲು, ಎರಡನೆಯ ಅಕ್ಸ್ಟರದೊಂದಿಗೆ ಕೊನೆಯ ಅಕ್ಷರವನ್ನು ಸೇರಿಸಿ ರಚಿಸಿದ “ಇಕ್‌’ ಸಂಜ್ಞೆಯನ್ನು ಬಳಸಿದಲ್ಲಿ, ಅದು ಅಕಾರವನ್ನುಳಿದು ಇತರ ಸ್ವರಗಳನ್ನು ಸೂಚಿಸುತ್ತದೆ.

ಹಳೆಗನ್ನಡದಲ್ಲಿ ಕಂಡುಬರುವ ವರ್ಣಗಳ ಬಳಕೆ ಇದಕ್ಕಿಂತ ತೀರ ಭಿನ್ನವಾಗಿರುವುದಾದ ಕಾರಣ, ಈ ಸೂತ್ರಗಳಾಗಲೀ, ಇಲ್ಲವೆ ಅವು ಸೂಚಿಸುವ ವರ್ಣ ವಿಂಗಡಣೆಗಳಾಗಲೀ ಹಳೆಗನ್ನಡ ಮಟ್ಟಿಗೆ ಅನುಕೂಲವಾದವುಗಳಲ್ಲ. ಹಾಗಾಗಿ, ಹಳೆಗನ್ನಡ ವ್ಯಾಕರಣಕ್ಕೆ ಬೇಕಾಗುವ ಸಂಜ್ಞೆಗಳನ್ನು ಈ ಸೂತ್ರಗಳ ಸಹಾಯದಿಂದ ಪಡೆಯಲು ಸಾಧ್ಯವಾಗದು.

Eke →

೩.೭ ಸೇರಿಕೆಯ ನಿಯಮಗಳು

ಎರಡು ಅಥವಾ ಜಾಸ್ತಿ ಪದ ಇಲ್ಲವೇ ಪದರೂಪಗಳನ್ನು ವಾಕ್ಯಗಳಲ್ಲಿ ಬಳಸುವಾಗ, ಸಾಮಾನ್ಯವಾಗಿ ಅವು ಒಂದರೊಡನೊಂದು ಸೇರಿಕೊಳ್ಳುತ್ತವೆ, ಮತ್ತು ಹಾಗೆ ಸೇರಿಕೊಳ್ಳುವಾಗ ಅವುಗಳಲ್ಲಿ ಕೆಲವು ಬದಲಾವಣೆಗಳು ನಡೆಯುತ್ತವೆ. ಉದಾಹರಣೆಗಾಗಿ, ಬೇಡ ಗಡಾ ನಿನಗಾತನೊಳ್‌ ಚಲಂ ಎಂಬ ವಾಕ್ಯದಲ್ಲಿ ನಿನಗೆ ಮತ್ತು ಆತನೊಳ್‌ ಎಂಬೆರಡು ಪದಗಳು ಒಟ್ಟುಸೇರಿವೆ, ಮತ್ತು ಹೀಗೆ ಒಟ್ಟುಸೇರುವಾಗ, ನಿನಗೆ ಪದದ ಕೊನೆಯ ಎಕಾರ ಬಿದ್ದು ಹೋಗಿದೆ.

ಎರಡು ಪದಗಳನ್ನು ಒಟ್ಟು ಸೇರಿಸಿ ಜೋಡುಪದಗಳನ್ನು ತಯಾರಿಸುವಾಗಲೂ ಆ ಪದಗಳಲ್ಲಿ ಬರುವ ವರ್ಣಗಳಲ್ಲಿ ಹಲವು ರೀತಿಯ ಬದಲಾವಣೆಗಳಾಗಬಲ್ಲುವು. ಉದಾಹರಣೆಗಾಗಿ, ಹಳೆಗನ್ನಡದ ಕಣ್‌ ಪದಕ್ಕೆ ನೀರ್‌ ಪದವನ್ನು ಸೇರಿಸಿ ಕಣ್ಣೀರ್‌ ಎಂಬ ಜೋಡುಪದವನ್ನು ತಯಾರಿಸುವಾಗ, ಎರಡನೆಯ ಪದದ ಮೊದಲನೆಯ ವರ್ಣ ನ್‌ ಎಂದಿದ್ದುದು ಣ್‌ ಎಂದಾಗಿರುವುದನ್ನು ಗಮನಿಸಬಹುದು.

ಇದಲ್ಲದೆ, ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗಲೂ ಪದಗಳಲ್ಲಿ ಇಲ್ಲ ವೇ ಪ್ರತ್ಯಯಗಳಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ನಗು ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ದ್‌ ಪ್ರತ್ಯಯವನ್ನು ಮತ್ತು ಘಟಕವನ್ನು ಸೂಚಿಸುವ ಅನ್‌ ಪ್ರತ್ಯಯವನ್ನು ಸೇರಿಸಿದಾಗ ನಕ್ಕನ್‌ ಎಂಬ ರೂಪ ಸಿದ್ಧ ವಾಗುತ್ತದೆ; ಇಲ್ಲಿ ನಗು ಎಂಬುದು ನಕ್‌ ಎಂದಾಗಿದೆ, ಮತ್ತು ದ್‌ ಎಂಬುದು ಕ್‌ ಎಂದಾಗಿದೆ.

ವಾಕ್ಯಗಳಲ್ಲಿ ಪದ ಮತ್ತು ಪ್ರತ್ಯಯಗಳನ್ನು ಬಳಸುವಲ್ಲಿ ನಡೆಯುವ ಇಂತಹ ಬದಲಾವಣೆಗಳನ್ನು ಸಂಸ್ಕೃತ ವ್ಯಾಕರಣಗಳಲ್ಲಿ “ಸಂಧಿ ನಿಯಮ’ಗಳೆಂದು ಕರೆಯಲಾಗಿದೆ. ಕನ್ನಡದಲ್ಲಿ ಇವನ್ನೇ “ಸೇರಿಕೆಯ ನಿಯಮ’ಗಳೆಂದು ಕರೆಯಬಹುದು. ಇಂತಹ ನಿಯಮಗಳು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರಾಗಿರುತ್ತವೆ. ಸಂಸ್ಕೃತ ಮತ್ತು ಹಳೆಗನ್ನಡಗಳ ನಡುವೆ ಈ ವಿಷಯದಲ್ಲಿ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳಿಗೆಲ್ಲ ಈ ಎರಡು ಭಾಷೆಗಳು ಬಳಸುವ ವ್ಯಾಕರಣದ ಮೂಲತತ್ವಗಳು ಬೇರೆ ಬೇರಾಗಿರುವುದೇ ಮುಖ್ಯ ಕಾರಣ.

೩.೭.೧ ಪದಮಧ್ಯ ಸಂಧಿ ಮತ್ತು ಪದಾಂತ್ಯ ಸಂಧಿ

ಸಂಸ್ಕೃತ ವ್ಯಾಕರಣಗಳಲ್ಲಿ “ಪದಮಧ್ಯ ಸಂಧಿ’ ಮತ್ತು “ಪದಾಂತ್ಯ ಸಂಧಿ’ ಎಂಬುದಾಗಿ ಸಂಧಿ ನಿಯಮಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಎರಡು ಪದ ಇಲ್ಲವೇ ಪದರೂಪಗಳು ವಾಕ್ಯದಲ್ಲಿ ಒಂದರ ಅನಂತರ ಒಂದರಂತೆ ಬಂದಾಗ ಅವುಗಳಲ್ಲಿ ನಡೆಯುವ ಬದಲಾವಣೆಗಳು ಪದಾಂತ್ಯ ಸಂಧಿಗಳು. ನಿಜಕ್ಕೂ ಇವು ಪದಾಂತ್ಯದಲ್ಲಿ ಮಾತ್ರವಲ್ಲದೆ ಪದಾದಿಯಲ್ಲಿಯೂ ನಡೆಯಬಲ್ಲುವು.

ಪದಕ್ಕೆ ಪದವನ್ನು ಸೇರಿಸಿ ಬೇರೊಂದು ಪದವನ್ನು ತಯಾರಿಸುವಲ್ಲಿ, ಇಲ್ಲವೇ ಪದಕ್ಕೆ ಪ್ರತ್ಯಯವನ್ನು ಸೇರಿಸಿ ಪದರೂಪವನ್ನು ಇಲ್ಲವೇ ಬೇರೊಂದು ಪದವನ್ನು ತಯಾರಿಸುವಲ್ಲಿ ನಡೆಯುವ ಬದಲಾವಣೆಗಳು ಪದಮಧ್ಯ ಸಂಧಿಗಳು.

ಸಂಸ್ಕೃತದ ಪದಮಧ್ಯ ಸಂಧಿನಿಯಮಗಳಲ್ಲಿ ಹೆಚ್ಚಿನವೂ ಪದಾಂತ್ಯ ಸಂಧಿ ನಿಯಮಗಳ ಹಾಗೆಯೇ ಇವೆ. ಆದರೆ, ಕೆಲವು ನಿಯಮಗಳು ಇವೆರಡರಲ್ಲಿ ಬೇರೆ ಬೇರಾಗಿವೆ. ಉದಾಹರಣೆಗಾಗಿ, ರಕಾರ ಇಲ್ಲವೇ ವಕಾರದಲ್ಲಿ ಕೊನೆಗೊಳ್ಳುವ ಕೆಲವು ಧಾತುಗಳಿಗೆ ವ್ಯಂಜನದಲ್ಲಿ ಸುರುವಾಗುವ ಪ್ರತ್ಯಯವೊಂದು ಸೇರಿದಾಗ, ಆ ಧಾತುಗಳ ಕೊನೆಯ ವ್ಯಂಜನದ ಹಿಂದಿರುವ ಇಕಾರ ಮತ್ತು

ಉಕಾರಗಳು ದೀರ್ಫಸ್ತರಗಳಾಗುತ್ತವೆ (ದಿವ್‌-ಯಾಮಿ - ದೀವ್ಯಾಮಿ, ಗಿರ್‌ಭಿಃ - ಗೀರ್ಭಿಃ, ಪುರ್‌ಭಿಃ - ಪೂರ್ಭಿಃ). ಇದು ಸಂಸ್ಕೃತದ ಪದಮಧ್ಯ ಸಂಧಿ ನಿಯಮ. ಪದಾಂತ್ಯ ಸಂಧಿಯಲ್ಲಿ ಇಂತಹ ನಿಯಮವಿಲ್ಲ.

ಪದಾಂತ್ಯ ಸಂಧಿಯಲ್ಲಿ ಪದಗಳ ಕೊನೆಯ ಕಟತಪಗಳು ಅವುಗಳ ಅನಂತರ ಸ್ವರ ಬಂದಾಗ ಗಡದಬಗಳಾಗುತ್ತವೆ (ಸಮ್ಯಕ್‌–ಉಕ್ತಂ - ಸಮ್ಯಗುಕ್ತಂ, ತತ್‌-ಅರ್ಹತಿ - ತದರ್ಹತಿ); ಆದರೆ, ಪದಮಧ್ಯ ಸಂಧಿಯಲ್ಲಿ ಇವು ಸಾಮಾನ್ಯವಾಗಿ ಹಾಗೆಯೇ ಉಳಿಯುತ್ತವೆ (ಸರ್ವಶಕ್‌ಅಂ- ಸರ್ವಶಕಂ, ಮರುತ್‌-ಆ - ಮರುತಾ).

ಹಳೆಗನ್ನಡದಲ್ಲೂ ಇಂತಹ ಪದಮಧ್ಯ ಮತ್ತು ಪದಾಂತ್ಯ ಸಂಧಿನಿಯಮಗಳೆಂಬ ಎರಡು ಬಗೆಯ ನಿಯಮಗಳಿದ್ದು, ಅವು ಕೆಲವು ವಿಷಯಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಇದಲ್ಲದೆ ಈ ಎರಡು ಬಗೆಯ ನಿಯಮಗಳೂ ಹಲವು ವಿಷಯಗಳಲ್ಲಿ ಸಂಸ್ಕೃತದ ಪದಮಧ್ಯ ಮತ್ತು ಪದಾಂತ್ಯ ಸಂಧಿನಿಯಮಗಳಿಂದ ಭಿನ್ನವಾಗಿವೆ.

ಉದಾಹರಣೆಗಾಗಿ, ಹಳೆಗನ್ನಡದ ಕೆಲವು ಧಾತುಗಳಿಗೆ ವ್ಯಂಜನದಲ್ಲಿ ಸುರುವಾಗುವ ಪ್ರತ್ಯಯಗಳನ್ನು ಸೇರಿಸಿದಾಗ, ಅವುಗಳ ಉದ್ದಸ್ವರ ಗಿಡ್ಡವಾಗುತ್ತದೆ (ಕಾಣ್‌-ದ್‌ಅನ್‌ - ಕಂಡನ್‌, ಬೀಲ್‌ +ದ್‌ 4+ಅಳ್‌ - ಬಿಟ್ಟಳ್‌, ಏಟ್‌್‌4ದ್‌ಅ - ಎಬ್ಬಿ). ಕಾರಿರುಳ್‌-ಕರ್ಬಸು, ಪೇರಾನೆ-ಪೆರ್ದೆರೆ, ಮಾರ್ವಲ-ಮಜುವಕ್ಕ ಮೊದಲಾದವುಗಳಲ್ಲಿರುವ ಗುಣಪದಗಳ ಬಳಕೆಯಲ್ಲಿ, ಮತ್ತು ಓರಡಿ-ಒರ್ವೆಸರ್‌, ಈರೊಡಲ್‌-ಇರ್ವಲ ಮೊದಲಾದವುಗಳಲ್ಲಿರುವ ಎಣಿಕೆಯ ಪದಗಳ ಬಳಕೆಯಲ್ಲಿ ಇಂತಹ ಬದಲಾವಣೆಯನ್ನು ಕಾಣಬಹುದು.

ಆದರೆ, ಮೇಲೆ ಕೊಟ್ಟಿರುವ ಗಿಡ್ಡಸ್ವರ ಉದ್ದವಾಗುವ ಸಂಸ್ಕೃತದ ಪದಮಧ್ಯ ಸಂಧಿನಿಯಮಕ್ಕಿಂತ ಹಳೆಗನ್ನಡದ ಈ ಬದಲಾವಣೆ ತೀರ ಭಿನ್ನವಾಗಿದೆ. ವ್ಯಂಜನ ಪರವಾದಾಗ, ಸಂಸ್ಕೃತದಲ್ಲಿ ಗಿಡ್ಡಸ್ವರ ಉದ್ದವಾಗುತ್ತದೆ; ಆದರೆ, ಹಳೆಗನ್ನಡದಲ್ಲಿ ಉದ್ದಸ್ವರ ಗಿಡ್ಡವಾಗುತ್ತದೆ.

ಇದಲ್ಲದೆ, ಹಳೆಗನ್ನಡದಲ್ಲಿ ಈ ಉದ್ದಸ್ವರ ಗಿಡ್ಡಸ್ವರವಾಗುವ ನಿಯಮ ಪದಮಧ್ಯ ಸಂಧಿಯಲ್ಲಿ ಕಾಣಿಸುತ್ತಿದೆಯಲ್ಲದೆ ಪದಾಂತ್ಯ ಸಂಧಿಯಲ್ಲಿ ಕಾಣಿಸುವುದಿಲ್ಲ. ಇಂತಹವೇ ಬೇರೆಯೂ ಕೆಲವು ನಿಯಮಗಳನ್ನು ಹಳೆಗನ್ನಡದ ಪದಮಧ್ಯ ಸಂಧಿಯಲ್ಲಿ ಮಾತ್ರವೇ ಕಾಣಲು ಸಾಧ್ಯವಿದೆ.

ಕೇಶಿರಾಜನು (ಸೂ. ೬೦)ರಲ್ಲಿ ಪದಮಧ್ಯಂ ಮತ್ತು ಪದದಂತ್ಯಂ ಎಂಬುದಾಗಿ ಎರಡು ಬಗೆಯ ಸಂಧಿಗಳಿವೆಯೆಂದು ಹೇಳಿದ್ದಾ ನೆ; ಆದರೆ, ಅನಂತರ ಎಲ್ಲೂ ಈ ವಿಭಜನೆಯನ್ನು ಬಳಸಿಕೊಂಡಿರುವ ಹಾಗೆ ಕಾಣಿಸುವುದಿಲ್ಲ. ಸಂಧಿನಿಯಮಗಳಿಗೆ ಉದಾಹರಣೆಗಳನ್ನು ಕೊಡುವಾಗ ಕೆಲವು ಕಡೆಗಳಲ್ಲಿ ಪದಮಧ್ಯ ಸಂಧಿಯಾಗಿರುವವುಗಳನ್ನು (ತೋಯಲುಂ, ನೋಯಿಸಿದಂ) ಕೊಟ್ಟರೆ, ಇನ್ನು ಕೆಲವು ಕಡೆಗಳಲ್ಲಿ ಪದಾಂತ್ಯ ಸಂಧಿಯಾಗಿರುವವುಗಳನ್ನು (ಜೋಯೆಂದು, ಸ್ತ್ರೀಯೆಂಬ) ಕೊಟ್ಟಿದ್ದಾನೆ.

Eke →

೩.೮ ಸಾರಾಂಶ

ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವರ್ಣಗಳ ಸಂಖ್ಯೆಯಲ್ಲಿ ಮಾತ್ರವಲ್ಲ, ಅವುಗಳ ಬಳಕೆಯಲ್ಲೂ ವ್ಯತ್ಯಾಸವಿದೆ. ಹಾಗಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಾಗುವ ವರ್ಣಗಳ ಪಾಠಕ್ರಮವನ್ನು ಹಾಗೆಯೇ ಹಳೆಗನ್ನಡ ವ್ಯಾಕರಣದಲ್ಲಿ ಬಳಸುವುದು ಹಿತಕರವಲ್ಲ. ಈ ಎರಡು ಭಾಷೆಗಳು ಬಳಸುವ ಸೇರಿಕೆಯ ನಿಯಮಗಳಲ್ಲೂ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಹಳೆಗನ್ನಡ ವ್ಯಾಕರಣದಲ್ಲಿ ಇವನ್ನು ಸರಿಯಾಗಿ ನಿರೂಪಿಸುವ ಅವಶ್ಯಕತೆಯಿದೆ.