↑ Contents  ·  Contents  ·  Ch 2 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೧ — ಪೀಠಿಕೆ

↑ ಒಳಪಿಡಿಗೆ ಹಿಂತಿರುಗಿ


ಪೀಠಿಕೆ

Eke →

೧.೧ ವ್ಯಾಕರಣದ ಉದ್ದೇಶ

ಒಂದು ಭಾಷೆಯಲ್ಲಿ ಬಳಕೆಯಲ್ಲಿರುವ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ವ್ಯಾಕರಣದ ಮುಖ್ಯ ಉದ್ದೆ ೇೀಶ. ಈ ರಚನೆ ಭಾಷೆಯಿಂದ ಭಾಷೆಗೆ ಬೇರೆ ಬೇರೆಯಾಗಿರುತ್ತದೆ. ಒಂದು ಭಾಷೆಯನ್ನು ಚನ್ನಾಗಿ ತಿಳಿದಿದ್ದರೂ ಇನ್ನೊಂದು ಭಾಷೆಯಲ್ಲಿ ಬಳಸಿದ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗದಿರುವು ದಕ್ಕೆ ಆ ಎರಡು ಭಾಷೆಗಳ ನಡುವಿರುವ ಇಂತಹ ವ್ಯತ್ಯಾಸಗಳೇ ಮುಖ್ಯ ಕಾರಣ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಬರೆದ ಗ್ರಂಥಗಳನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬಲ್ಲ ಒಬ್ಬ ವ್ಯಕ್ತಿ ಹಳೆಗನ್ನಡದಲ್ಲಿ ಬರೆದ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕಿದ್ದಲ್ಲಿ, ಆ ಭಾಷೆಯನ್ನು ಪ್ರತ್ಯೇಕವಾಗಿ ಕಲಿತುಕೊಳ್ಳುವ ಅವಶ್ಯಕತೆಯಿದೆ. ಹಳೆಗನ್ನಡದ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳ ರಚನೆ ಸಂಸ್ಕೃತದ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳ ರಚನೆಗಿಂತ ತೀರ ಭಿನ್ನವಾಗಿರುವುದೇ ಇದಕ್ಕೆ ಕಾರಣ.

ಎಲ್ಲಾ ಭಾಷೆಗಳಲ್ಲೂ ಸ್ವರ ಮತ್ತು ವ್ಯಂಜನಗಳನ್ನು ಒಟ್ಟು ಸೇರಿಸಿ ಪದಗಳನ್ನು ರಚಿಸಲಾಗುತ್ತದೆ. ಆದರೆ, ಇದಕ್ಕಾಗಿ ಬಳಕೆಯಾಗುವ ಸ್ವರ ಮತ್ತು ವ್ಯಂಜನಗಳು, ಮತ್ತು ಅವುಗಳ ಸಂಖ್ಯೆ ಭಾಷೆಯಿಂದ ಭಾಷೆಗೆ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗಾಗಿ, ಸಂಸ್ಕೃತದ ಪದಗಳಲ್ಲಿ ಬಳಕೆಯಾಗುವ ಮಹಾಪ್ರಾಣಾಕ್ಷರಗಳು, ಮತ್ತು ಖಕಾರ, ಶಕಾರ, ಷಕಾರ ಮೊದಲಾದವುಗಳು ಹಳೆಗನ್ನಡದ ಪದಗಳಲ್ಲಿ ಬಳಕೆಯಾಗುವುದಿಲ್ಲ. ಇದೇ ರೀತಿಯಲ್ಲಿ, ಹಳೆಗನ್ನಡ ಪದಗಳಲ್ಲಿ ಬಳಕೆಯಾಗುವ ಗಿಡ್ಡ (ಪ್ರಸ್ತ) ಎಕಾರ-ಒಕಾರಗಳು ಮತ್ತು ಅಕಾರ-ಟಕಾರಗಳು ಸಂಸ್ಕೃತದ ಪದಗಳಲ್ಲಿ ಬಳಕೆಯಾಗುವುದಿಲ್ಲ.

ಇದಲ್ಲದೆ, ಯಾವ ಸ್ವರ ಮತ್ತು ವ್ಯಂಜನಗಳ ಸೇರಿಕೆಯಿಂದ ಒಂದು ಪದ ಮತ್ತು ಅದರ ಪದರೂಪಗಳು ಸಿದ್ಧವಾಗುತ್ತವೆ ಎಂಬುದೂ ಭಾಷೆಯಿಂದ ಭಾಷೆಗೆ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗಾಗಿ “ಹತ್ತು’ ಎಂಬ ಅರ್ಥ ಕೊಡುವ ಪದ ಹಳೆಗನ್ನಡದಲ್ಲಿ ಪತ್ತು ಎಂಬುದಾಗಿ ಪಕಾರ-ಅಕಾರ-ತಕಾರ-ಉಕಾರಗಳ ಸೇರಿಕೆಯಿಂದ ತಯಾರಾಗಿದೆಯಾದರೆ, ಸಂಸ್ಕೃತದಲ್ಲಿ ದಶ ಎಂಬುದಾಗಿ ದಕಾರ-ಅಕಾರ-ಶಕಾರ-ಅಕಾರಗಳ ಸೇರಿಕೆಯಿಂದ ತಯಾರಾಗಿದೆ.

ಈ ರೀತಿ, ಎರಡು ಭಾಷೆಗಳ ನಡುವೆ ಪದಗಳ ರಚನೆಯಲ್ಲಿ ಯಾವ ಸ್ವರ ಮತ್ತು ವ್ಯಂಜನಗಳು ಹೇಗೆ ಬಳಕೆಯಾಗುತ್ತವೆ ಎಂಬ ವಿಷಯದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಮಾತ್ರವಲ್ಲ, ಅಂತಹ ಪದಗಳ ಮೂಲಕ ಹೊಸ ಹೊಸ ಪದಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ವಿಷಯದಲ್ಲೂ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳು ಬೇರೆ ಬೇರೆಯಾಗಿರುತ್ತವೆ ಮತ್ತು ಆ ಪ್ರತ್ಯಯಗಳನ್ನು ಬಳಸಿ ಪದಗಳನ್ನು ತಯಾರಿಸುವ ವಿಧಾನಗಳೂ

ಬೇರೆ ಬೇರೆಯಾಗಿರುತ್ತವೆ. ಇದಲ್ಲದೆ, ಎರಡು ಅಥವಾ ಹೆಚ್ಚು ಪದಗಳನ್ನು ಒಟ್ಟು ಸೇರಿಸಿ ಜೋಡುಪದ (ಸಮಸ್ತಪದ)ಗಳನ್ನು ತಯಾರಿಸುವ ವಿಧಾನಗಳೂ ಈ ಭಾಷೆಗಳಲ್ಲಿ ಬೇರೆ ಬೇರೆಯಾಗಿರುತ್ತವೆ.

ಉದಾಹರಣೆಗಾಗಿ, ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಹಳೆಗನ್ನಡದಲ್ಲಿ ಕೆ(ಗೆ), ಎ, ಅಲ್‌ ಮೊದಲಾದ ಕೆಲವು ಪ್ರತ್ಯಯಗಳನ್ನು ಬಳೆಸಲಾಗುತ್ತ ದೆ (ಅಗಲ್‌-ಅಗಲ್ಕೆ, ಏಲ್‌್‌-ಏಟಕ್ಕೆ, ಉಡು-ಉಡೆ, ಬೀಟ್‌್‌-ಬೀಟಲ್‌ ಇತ್ಯಾದಿ). ಆದರೆ, ಸಂಸ್ಕೃತದಲ್ಲಿ ಇವಕ್ಕಿಂತ ಭಿನ್ನವಾಗಿರುವ ಅನ, ಮನ್‌, ತ್ರ, ತೃ. ಇತ ಯ, ಮೊದಲಾದ ಪ್ರತ್ಯಯಗಳನ್ನು ಬಳಸಲಾಗುತ್ತ ದೆ (ವಚ್‌-ವಚನ, ಕೃ-ಕರ್ಮನ್‌, ವಸ್‌ -ವಸ್ತ್ರ , ದಾ-ದಾತೃ, ಪುಷ್ಪ-ಪುಷ್ಟಿತ, ದರಿದ್ರ-ದಾರಿದ್ರ ತ ಇತ್ಯಾದಿ).

ಇದಲ್ಲದೆ, ಹಳೆಗನ್ನಡದಲ್ಲಿ ಇಂತಹ ಪ್ರತ್ಯಯಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಸೇರಿಸಲು ಸಾಧ್ಯ; ಆದರೆ, ಸಂಸ್ಕೃತದಲ್ಲಿ ಅವನ್ನು ಪದಗಳ ಆದಿಯಲ್ಲೂ ಸೇರಿಸಲು ಸಾಧ್ಯವಿದೆ. ಸಂಸ್ಕೃತದ ಕೃತಿ-ಪ್ರಕೃತಿ, ಭಾವ-ಅಭಾವ, ನಾಶ-ವಿನಾಶ, ಭಾವ-ಪ್ರಭಾವ, ರೂಪ-ಸ್ವರೂಪ ಎಂಬವುಗಳಲ್ಲಿ ಪ್ರ, ಅ, ವಿ ಮತ್ತು ಸ್ವ ಪ್ರತ್ಯಯಗಳು ಪದಗಳ ಆದಿಯಲ್ಲಿ ಸೇರಿರುವುದನ್ನು ಕಾಣಬಹುದು.

ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಧಾನಗಳೂ ಈ ಎರಡು ಭಾಷೆಗಳಲ್ಲಿ ಬೇರೆ ಬೇರೆಯಾಗಿವೆ, ಮತ್ತು ಈ ರೀತಿ ಪದಗಳಿಗೆ ಪ್ರತ್ಯಯಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವಾಗ ಅವುಗಳಲ್ಲಿ ನಡೆಯುವ ಸೇರಿಕೆಯ (ಸಂಧಿಯ) ಬದಲಾವಣೆಗಳೂ ಈ ಎರಡು ಭಾಷೆಗಳಲ್ಲಿ ಬೇರೆ ಬೇರೆಯಾಗಿವೆ.

ಉದಾಹರಣೆಗಾಗಿ, ಇಕಾರದಲ್ಲಿ ಕೊನೆಗೊಳ್ಳುವ ಒಂದು ಪದಕ್ಕೆ ಇಕಾರದಲ್ಲಿ ಸುರುವಾಗುವ ಬೇರೊಂದು ಪದ ಸೇರಿದಾಗ, ಸಂಸ್ಕೃತದಲ್ಲಿ ಅವೆರಡು ಸ್ವರಗಳ ಬದಲು ದೀರ್ಥಸ್ವರ (ಉದ್ದ ಈಕಾರ) ಬರುತ್ತದೆ (ಕವಿಇಂದ್ರ-ಕವೀಂದ್ರ, ಅಸ್ತಿಇಹ-ಅಸ್ತೀಹ). ಆದರೆ, ಹಳೆಗನ್ನಡದಲ್ಲಿ ಒಂದು ಇಕಾರ ಬಿದ್ದು ಹೋಗಿ ಇನ್ನೊಂದು ಹಾಗೆಯೇ ಉಳಿಯುತ್ತದೆ (ಇಲ್ಲಿ -ಇರಲ್‌-ಇಲ್ಲಿರಲ್‌, ಆಗಿ೬ಇರೆ-ಟಆಗಿರೆ).

ಪದಗಳನ್ನು ಬಳಸಿ ವಾಕ್ಯಗಳನ್ನು ತಯಾರಿಸುವ ಬಗೆ ಹೇಗೆ ಎಂಬ ವಿಷಯದಲ್ಲೂ ಭಾಷೆಗಳ ನಡುವೆ ವ್ಯತ್ಯಾಸಗಳು ಕಾಣಿಸುತ್ತವೆ. ಹಳೆಗನ್ನಡದ ಪದಗಳನ್ನು ಕೆಲವು ಸಂದರ್ಭಗಳಲ್ಲಿ ಹಾಗೆಯೇ ವಾಕ್ಯಗಳಲ್ಲಿ ಬಳಸಬಹುದು, ಮತ್ತು ಬೇರೆ ಕೆಲವು ಸಂದರ್ಭಗಳಲ್ಲಿ ಅವಕ್ಕೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ “ಪದರೂಪ’ಗಳನ್ನು ತಯಾರಿಸಿ ಬಳಸಬಹುದು. ಇದಲ್ಲದೆ, ಬೇರೆ ಕೆಲವು ಸಂದರ್ಭಗಳಲ್ಲಿ ಎರಡು ಅಥವಾ ಹೆಚ್ಚು ಪದಗಳನ್ನು ಒಟ್ಟು ಸೇರಿಸಿ “ಪದಕಂತೆ’ಗಳನ್ನು ಇಲ್ಲವೇ “ಕೂಡುಪದ’ಗಳನ್ನು ತಯಾರಿಸಬಹುದು.

ಸಂಸ್ಕೃತದಲ್ಲಿ ಅವ್ಯಯಗಳನ್ನು ಬಿಟ್ಟರೆ ಉಳಿದ ಯಾವ ಪದ(ಶಬ್ದ)ವನ್ನೂ ಹಾಗೆಯೇ ವಾಕ್ಯದಲ್ಲಿ ಬಳಸಲು ಸಾಧ್ಯವಾಗದು. ಅವುಗಳೊಂದಿಗೆ ಕೆಲವು ವಿಶಿಷ್ಟವಾದ ಪ್ರತ್ಯಯಗಳನ್ನು (“ಸುಬಂತ’ ಇಲ್ಲವೇ “ತಿಜಂತ’ ಪ್ರತ್ಯಯಗಳನ್ನು) ಸೇರಿಸಿಯೇ ಅವನ್ನು ಬಳಸಬೇಕಾಗುತ್ತದೆ. ಆದರೆ, ಹಳೆಗನ್ನಡದಲ್ಲಿ ನಾಮಪದಗಳನ್ನು ಇಲ್ಲವೇ ಕ್ರಿಯಾಪದಗಳನ್ನು ಯಾವ ಪ್ರತ್ಯಯದ ಸಹಾಯವೂ ಇಲ್ಲದೆ ವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ (೮.೨ ನೋಡಿ).

— ಗ್‌ ಇ7ಳ 1 ೨ ಎ ಇ್‌ ಇಗ ಇದ್‌ ಇದಲ್ಲದೆ, ಇಂತಹ ಪ್ರತ್ಯಯಗಳ ಸಂಖ್ಯೆ ಮತ್ತು ಸ್ವರೂಪಗಳೂ ಸಂಸ್ಕೃತ ಮತ್ತು

ಹಳೆಗನ್ನಡಗಳಲ್ಲಿ ಬೇರೆ ಬೇರೆಯಾಗಿವೆ. ಪದಕಂತೆ ಮತ್ತು ಕೂಡು ಪದಗಳ ತಯಾರಿಕೆಯಲ್ಲೂ ಈ ಎರಡು ಭಾಷೆಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು.

ಹಳೆಗನ್ನಡದ ಗ್ರಂಥಗಳಲ್ಲಿ ಹಲವಾರು ಪದಗಳನ್ನು ಸಂಸ್ಕೃತದಿಂದ ಎರವಲಾಗಿ ಪಡೆದು ಬಳಸಲಾಗಿದ್ದು, ಇದರಿಂದಾಗಿ ಈ ಎರಡು ಭಾಷೆಗಳಲ್ಲಿ ಬಳಕೆಯಾಗುವ ವಾಕ್ಯಗಳ ನಡುವೆ ಕೆಲವು ಸಾಮ್ಯಗಳನ್ನು ಕಾಣಬಹುದು.

ಆದರೆ, ಈ ರೀತಿ ಹಳೆಗನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೂ ಹಳೆಗನ್ನಡದವೇ ಆದ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಪದರೂಪಗಳನ್ನು ಸಾಧಿಸಬೇಕಾಗುತ್ತದೆ, ಮತ್ತು ಈ ಪದರೂಪಗಳನ್ನು ವಾಕ್ಯಗಳಲ್ಲಿ ಬಳಸುವುದಕ್ಕಾಗಿ ಹಳೆಗನ್ನಡದ್ದೆ € ಆದ ವಿಧಾನಗಳನ್ನೂ ಬಳಸಬೇಕಾಗುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಅಶ್ವ ಕುದುರೆ” ಪದವನ್ನು ಹಳೆಗನ್ನಡ ವಾಕ್ಯಗಳಲ್ಲಿ ಬಳಸುವವರು ಅದಕ್ಕೆ ಹಳೆಗನ್ನಡದವೇ ಆದ ಪ್ರತ್ಯಯಗಳನ್ನು ಸೇರಿಸಿ ಅಶ್ವಂಗಳ್‌, ಅಶ್ವಂಗಳಂ, ಅಶ್ವಕ್ಕೆ ಮೊದಲಾದ ಪದರೂಪಗಳನ್ನು ರಚಿಸಿಕೊಳ್ಳಬೇಕಲ್ಲ ದೆ ಸಂಸ್ಕೃತದ ಅಶ್ವಾಃ, ಅಶ್ವಾನ್‌, ಅಶ್ವಾಯ ಮೊದಲಾದ ಪದರೂಪಗಳನ್ನು ಹಾಗೆಯೇ ಬಳಸಲು ಸಾಧ್ಯವಾಗದು.

ಹಾಗಾಗಿ, ಇಂತಹ ಎರವಲಾಗಿ ಬಂದ ಸಂಸ್ಕೃತ ಪದಗಳ ಬಳಕೆಯಲ್ಲೂ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯಾಕರಣ ನಿಯಮಗಳಲ್ಲಿ ಹಲವು ವ್ಯತ್ಯಾಸಗಳನ್ನು ಕಾಣಬಹುದು.

ಈ ಎಲ್ಲಾ ಕಾರಣಗಳಿಂದಾಗಿ, ಹಳೆಗನ್ನಡದಲ್ಲಿ ಬಳಕೆಯಾಗುವ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳ ಸ್ವರೂಪವನ್ನು ವರ್ಣಿಸಬೇಕಾಗಿರುವ ಹಳೆಗನ್ನಡ ವ್ಯಾಕರಣಗಳು ಸಂಸ್ಕೃತದ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳ ಸ್ವರೂಪವನ್ನು ವರ್ಣಿಸಬೇಕಾಗಿರುವ ಸಂಸ್ಕೃತ ವ್ಯಾಕರಣಗಳಿಗಿಂತ ತೀರಾ ಭಿನ್ನವಾಗಿರುವುದು ಅತ್ಯವಶ್ಯ. ಹಾಗಾಗಿ, ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದಲ್ಲಿ ಅದು ಎಂದಿಗೂ ಸಮಾಧಾನಕರವಾದ ಹಳೆಗನ್ನಡ ವ್ಯಾಕರಣವಾಗಲಾರದು.

Eke →

೧.೨ ಎರಡು ರೀತಿಯ ವ್ಯಾಕರಣಗಳು

“ವ್ಯಾಕರಣ’ ಎಂಬ ಪದವನ್ನು “ಅರಿವಿಗೆ ಎಟಕದ ನಿಯಮಾವಳಿ’ ಮತ್ತು “ಅರಿವಿಗೆ ಎಟಕುವ ನಿಯಮಾವಳಿ’ ಎಂಬುದಾಗಿ ಎರಡು ಅರ್ಥಗಳಲ್ಲಿ ಬಳಸಲು ಸಾಧ್ಯವಿದೆ. ಇವುಗಳಲ್ಲಿ ಮೊದಲನೆಯ ಅರ್ಥವಿರುವ “ವ್ಯಾಕರಣ’ವನ್ನು ಭಾಷೆಯನ್ನು ಬಳಸುವವರೆಲ್ಲ ರೂತಿಳಿದಿರುತ್ತಾರೆ ಮತ್ತು ಇಂತಹ ವ್ಯಾಕರಣಗಳು ಎಲ್ಲಾ ಭಾಷೆಗಳಿಗೂ ಇದ್ದೇ ಇರುತ್ತವೆ.

ಅರಿವಿಗೆ ಎಟಕದ ನಿಯಮಾವಳಿಯನ್ನು ಅರಿವಿಗೆ ಎಟಕುವಂತೆ ಮಾಡುವುದಕ್ಕಾಗಿ ವಿದ್ವಾಂಸರು ವ್ಯಾಕರಣ ಗ್ರಂಥಗಳನ್ನು ರಚಿಸುತ್ತಾರೆ. ಈ ಗ್ರಂಥಗಳಲ್ಲಿ ಒಂದು ಭಾಷೆಯ ಪದ, ಪದರೂಪ, ವಾಕ್ಯ ಮೊದಲಾದವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳನ್ನೆಲ್ಲ ಬಳಸಬೇಕಾಗುತ್ತದೆ ಎಂಬುದನ್ನು ವಿವರಿಸಿ ಹೇಳಲಾಗುತ್ತದೆ. ಇವು ಮೇಲೆ ಸೂಚಿಸಿರುವ ಎರಡನೆಯ ಅರ್ಥದ ವ್ಯಾಕರಣಗಳು. ಇಂತಹ ವ್ಯಾಕರಣ ಗ್ರಂಥಗಳನ್ನು ಸದ್ಯಕ್ಕೆ ಕೆಲವೇ ಕೆಲವು ಭಾಷೆಗಳಿಗೆ ಮಾತ್ರ ಬರೆಯಲು ಸಾಧ್ಯವಾಗಿದೆ.

ಮೇಲೆ ಸೂಚಿಸಿದ ಹಾಗೆ, ಪ್ರತಿಯೊಂದು ಭಾಷೆಗೂ ಅದನ್ನು ಬಳಸುವ ಜನರ ಅರಿವಿಗೆ ಎಟಕದಂತಹ ಒಂದು “ವ್ಯಾಕರಣ’ ಇದ್ದೇ ಇರುತ್ತದೆ ಎಂಬುದನ್ನು ಕೆಳಗಿನ ವಿಷಯದಿಂದ

ಊಹಿಸಬಹುದು: ಒಂದು ಭಾಷೆಯನ್ನು ಬಳಸುವವರೆಲ್ಲರೂ ಅದರಲ್ಲಿ ವಾಕ್ಯಗಳನ್ನು ರಚಿಸುವುದಕ್ಕಾಗಿ, ಮತ್ತು ಬೇರೆಯವರು ರಚಿಸಿದ ವಾಕ್ಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಬೇರೆ ಬೇರೆ ರೀತಿಯ ಪದಗಳಿಗೆ ಬೇರೆ ಬೇರೆ ರೀತಿಯ ಪದರೂಪಗಳಿದ್ದು, ಇವನ್ನು ತಯಾರಿಸುವುದು ಹೇಗೆ ಮತ್ತು ವಾಕ್ಯಗಳಲ್ಲಿ ಬಳಸುವುದು ಹೇಗೆ ಎಂಬುದನ್ನೂ ಅವರೆಲ್ಲರೂ ಸರಿಯಾಗಿಯೇ ತಿಳಿದುಕೊಂಡಿರಬೇಕಾಗುತ್ತದೆ.

ಆದರೆ, ಈ ತಿಳುವಳಿಕೆ ಅವರ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುತ್ತದೆ, ಮತ್ತು ಅದರ ಬಳಕೆಯೂ ಅರಿವಿಗೆ ಎಟಕದ ರೂಪದಲ್ಲೇ ನಡೆಯುತ್ತಿರುತ್ತದೆ. ತಮ್ಮ ಭಾಷೆಗೆ ಸಂಬಂಧಿಸಿದ ಈ ವಾಕ್ಯರಚನೆಯ ನಿಯಮಗಳನ್ನು ಅವರು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲರೇನೋ ನಿಜ; ಆದರೆ, ಅವುಗಳ ನಿಜವಾದ ಸ್ವರೂಪ, ಮತ್ತು ಅವನ್ನು ಯಾವಾಗ ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬ ಸಂಗತಿ ಅವರ ಮಿದುಳಿನಲ್ಲಿ ಈ ರೀತಿ ಅರಿವಿಗೆ ಎಟಕದ ರೂಪದಲ್ಲಿರುವ ಕಾರಣ, ಅದನ್ನು ಅವರು ಇನ್ನೊಬ್ಬರಿಗೆ ವಿವರಿಸಿ ಹೇಳಲಾರರು.

ಉದಾಹರಣೆಗಾಗಿ, ಹೊಸಗನ್ನಡದಲ್ಲಿ ಇಬ್ಬರು ವ್ಯಕ್ತಿ ಇಲ್ಲ ವೇ ವಸ್ತುಗಳ ನಡುವಿರುವ ಸಂಬಂಧವನ್ನು ಸೂಚಿಸಲು ಅ ಎಂಬ ಪ್ರತ್ಯಯವನ್ನು ಬಳಸಬೇಕಾಗುತ್ತ ದೆ. ಅಣ್ಣನ ಮಗ, ಮರದ ಮೇಜು, ಮಗುವಿನ ನಗು, ಹೂವಿನ ವಾಸನೆ ಮೊದಲಾದ ಪದಕಂತೆಗಳಲ್ಲಿ ಬರುವ ಎರಡು ಪದಗಳಲ್ಲಿ ಮೊದಲನೆಯದರ ಕೊನೆಯಲ್ಲಿ ಈ ಪ್ರತ್ಯಯವನ್ನು ಕಾಣಬಹುದು. ಇದನ್ನು ಸರಿಯಾಗಿ ಬಳಸಬೇಕಿದ್ದಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಹೊಸಗನ್ನಡವನ್ನು ಬಳಸುವವರೆಲ್ಲರೂ ಅ ಪ್ರತ್ಯಯದ ಬಳಕೆಯ ನಿಯಮಗಳನ್ನೆಲ್ಲ ಅವಶ್ಯವಾಗಿಯೂ ತಿಳಿದಿರುತ್ತಾ ರೆ. ಯಾಕೆಂದರೆ, ಅವರು ವ್ಯಕ್ತಿ ಇಲ್ಲ ವೇ ವಸ್ತುಗಳ ನಡುವಿನ ಸಂಬಂಧವನ್ನು ತಿಳಿಸಬೇಕಿದ್ದಾಗಲೆಲ್ಲ ಈ ಪ್ರತ್ಯಯವನ್ನು ಸರಿಯಾಗಿಯೇ ಬಳಸಬಲ್ಲರು, ಮತ್ತು ಯಾರಾದರೂ ಅದನ್ನು ತಪ್ಪಾಗಿ ಬಳಸಿದಲ್ಲಿ ಅಲ್ಲೇನೋ ತಪ್ಪಾಗಿದೆ ಎಂಬುದನ್ನೂ ಸೂಚಿಸಬಲ್ಲರು.

ಆದರೆ, ಈ ನಿಯಮಗಳು ಎಂತಹವು ಎಂಬುದನ್ನು ಅವರು ವಿವರಿಸಿ ಹೇಳಲಾರರು; ಏನೋ ತಪ್ಪಾಗಿದೆಯೆಂದು ಹೇಳಬಲ್ಲ ರು, ಆದರೆ ಅದು ಎಂತಹ ತಪ್ಪು ಎಂಬುದನ್ನು ವಿವರಿಸಲಾರರು. ಅವರ ಮಿದುಳಿನಲ್ಲಿ ಈ ನಿಯಮಗಳು ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ.

ಸಂಬಂಧವನ್ನು ಸೂಚಿಸುವ ಅ ಪ್ರತ್ಯಯದ ಬಳಕೆಯಲ್ಲಿ ಬರುವ ನಿಯಮಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.

(೧) ಪದಗಳು ಉಕಾರದಲ್ಲಿ ಕೊನೆಗೊಳ್ಳುತ್ತಿ ವೆಯಾದರೆ, ಈ ಪ್ರತ್ಯಯದೊಂದಿಗೆ ಇನ್‌ ಎಂಬುದು ಸೇರಿಕೊಳ್ಳುತ್ತದೆ, ಮತ್ತು ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಕಾಡು- ಕಾಡಿನ, ಹಣ್ಣು-ಹಣ್ಣಿನ, ತೆಂಗು-ತೆಂಗಿನ, ಕೂದಲು-ಕೂದಲಿನ).

(೨) ಇಂತಹ ಉಕಾರದಲ್ಲಿ ಕೊನೆಗೊಳ್ಳುವ ಪದಗಳಲ್ಲಿ ಎರಡು ಅಕ್ಬರಗಳು ಮಾತ್ರ ಇದ್ದು ಅವೆರಡೂ ಲಘುವಾಗಿದ್ದಲ್ಲಿ, ಪದಗಳ ಕೊನೆಯ ಉಕಾರ ಬಿದ್ದು ಹೋಗುವುದಿಲ್ಲ; ಅದಕ್ಕೆ ಬದಲು, ಇನ್‌ ಎಂಬುದರ ಮೊದಲು ವಕಾರವೊಂದು ಸೇರಿಕೊಳ್ಳುತ್ತದೆ (ಮಗು-ಮಗುವಿನ, ಹಸು-ಹಸುವಿನ).

(೩) ಪದಗಳ ಕೊನೆಯ ಉಕಾರ “ಮನುಷ್ಯೇತರ’ ಎಂಬ ಅರ್ಥ ಕೊಡುವ ದು ಪ್ರತ್ಯಯದ ಭಾಗವಾಗಿದೆಯಾದಲ್ಲಿ, ಇನ್‌ ಎಂಬುದರ ಬದಲು ರ್‌ ಎಂಬುದು ಬರುತ್ತದೆ (ನಮ್ಮದು- ನಮ್ಮದರ, ಕೆಟ್ಟದು-ಕೆಟ್ಟದರ, ಅಷ್ಟು-ಅಷ್ಟರ, ಒಂದು-ಒಂದರ).

(೪) ಹೆಂಗಸರನ್ನು ಸೂಚಿಸುವ ಳು ಪ್ರತ್ಯಯದಲ್ಲಿ ಇಲ್ಲವೇ ಬಹುವಚನವನ್ನು ಸೂಚಿಸುವ ರು ಇಲ್ಲವೇ ಗಳು ಪ್ರತ್ಯಯದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಬಂದಾಗ, ಆ ಪದಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗುತ್ತದೆ, ಆದರೆ ಇನ್‌ ಎಂಬುದು ಸೇರುವುದಿಲ್ಲ; ಅ ಪ್ರತ್ಯಯವೇ ನೇರವಾಗಿ ಸೇರುತ್ತದೆ (ಅವಳು-ಅವಳ, ಹುಡುಗರು-ಹುಡುಗರ, ಜನರು-ಜನರ, ಮರಗಳು-ಮರಗಳ).

(೫) ಪದಗಳು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ, ಅ ಪ್ರತ್ಯಯದೊಂದಿಗೆ ಯಕಾರ ಸೇರಿಕೊಳ್ಳುತ್ತದೆ (ಗುಡಿ-ಗುಡಿಯ, ರೋಗಿ-ರೋಗಿಯ, ಮನೆ- ಮನೆಯ, ಹಟ್ಟಿ-ಹಟ್ಟಿಯ, ಕಾಗೆ-ಕಾಗೆಯ).

(೬) ಪದಗಳು ಅಕಾರದಲ್ಲಿ ಕೊನೆಗೊಳ್ಳುತ್ತಿ ದ್ದು (ಕ) ಮನುಷ್ಯರನ್ನು ಸೂಚಿಸುತ್ತಿವೆಯಾದರೆ ನಕಾರವೂ (ಅಣ್ಣ -ಅಣ್ಣ ನ, ಅಕ್ಕ-ಅಕ್ಕನ), ಮತ್ತು (ಖ) ಇತರ ಸಂದರ್ಭಗಳಲ್ಲಿ ದಕಾರವೂ (ಮರ-ಮರದ, ಹಗ್ಗ-ಹಗ್ಗದ) ಈ ಪ್ರತ್ಯಯದೊಂದಿಗೆ ಸೇರಿಕೊಳ್ಳುತ್ತವೆ. ಗರುಡ, ಕೋಣ ಮೊದಲಾದ ಬೇರೆ ಕೆಲವು ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಮನುಷ್ಯರನ್ನು ಸೂಚಿಸದಿದ್ದರೂ ನಕಾರದೊಂದಿಗೆ ಬರುತ್ತಿದ್ದು, ಈ ನಿಯಮಕ್ಕೆ ಅಪವಾದಗಳಾಗಿವೆ.

ಕನ್ನಡ ಭಾಷೆಯನ್ನು ಬಳಸುವವರೆಲ್ಲರೂ ಮೇಲೆ ಕೊಟ್ಟಿರುವ ಅ ಪ್ರತ್ಯಯದ ನಿಯಮಗಳನ್ನು ತಿಳಿದಿರಲೇಬೇಕು. ಯಾಕೆಂದರೆ ಅವರೆಲ್ಲರೂ ಈ ಪ್ರತ್ಯಯವನ್ನು ಸರಿಯಾಗಿಯೇ ಬಳಸಬಲ್ಲರು. ಎರಡೂವರೆ ಮೂರು ವರ್ಷದ ಚಿಕ್ಕ ಮಗುವೂ ಇದನ್ನು ಸರಿಯಾಗಿಯೇ ಬಳಸಬಲ್ಲುದು. ಈ ನಿಯಮಗಳನ್ನು ಮತ್ತು ಅವನ್ನು ಬಳಸುವ ಕ್ರಮವನ್ನು ಇವರೆಲ್ಲರೂ ಭಾಷೆಯನ್ನು ಕಲಿತುಕೊಳ್ಳುವ ಸಮಯದಲ್ಲೇನೇ ಪಡೆದಿರುತ್ತಾರೆ. ಆದರೆ, ಇವು ಅವರ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ಮಾತ್ರವೇ ಸಂಗ್ರಹಿತವಾಗಿರುತ್ತವೆ.

ಈ ನಿಯಮಗಳನ್ನು ಅರಿವಿಗೆ ಎಟಕುವ ರೂಪಕ್ಕೆ ತರಬೇಕಿದ್ದ ಲ್ಲಿ, ಅದಕ್ಕಾಗಿ ಕನ್ನಡದ ವ್ಯಾಕರಣವನ್ನು ಬರೆಯುವವರು ಕನ್ನಡಿಗರ ಮಾತನ್ನು (ಇಲ್ಲ ವೇ ಬರಹವನ್ನು) ಪರಿಶೀಲಿಸಬೇಕು, ಮತ್ತು ಅವರ ಮಾತಿನಲ್ಲಿ ಅ ಪ್ರತ್ಯಯ ಬೇರೆ ಬೇರೆ ರೀತಿಯ ನಾಮಪದಗಳೊಂದಿಗೆ ಬರುವಾಗ ಅವುಗಳಲ್ಲಿ ಯಾವ ಯಾವ ರೀತಿಯ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬುದನ್ನು ಕಂಡುಹಿಡಿದು, ಮೇಲೆ ಸೂಚಿಸಿದ ಹಾಗೆ ಪಟ್ಟಿಮಾಡಬೇಕು.

ಇಂತಹ ಭಾಷೆಗೆ ಸಂಬಂಧಿಸಿದ ನಿಯಮಗಳನ್ನು ಮಾತ್ರವಲ್ಲ ದೆ, ನಮ್ಮ ದೇಹಕ್ಕೆ ಸಂಬಂಧಿಸಿದ ಬೇರೆಯೂ ಹಲವು ನಿಯಮಗಳನ್ನು ನಾವು ಈ ರೀತಿ ಅರಿವಿಗೆ ಎಟಕದ ರೂಪದಲ್ಲಿ ಪಡೆದಿರುತ್ತೇವೆ. ಉದಾಹರಣೆಗಾಗಿ, ನಾವು ನಮ್ಮ ಕೈಯನ್ನು ಮೇಲೆ ಇಲ್ಲವೇ ಕೆಳಗೆ, ಆಚೆ ಇಲ್ಲವೇ ಈಚೆ ಬಾಗಿಸಿ, ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸಬಲ್ಲೆವು. ಇದಕ್ಕಾಗಿ ನಾವು ನಮ್ಮ ಮಿದುಳಿನಿಂದ ಕೈಗಳಲ್ಲಿರುವ ಸ್ನಾಯುಗಳಿಗೆ ಅವು ಯಾವಾಗ ಮತ್ತು ಎಷ್ಟು ಕುಗ್ಗಬೇಕು ಇಲ್ಲವೇ ಹಿಗ್ಗಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಬಲ್ಲ ಸಂಕೇತಗಳನ್ನು ಕಳುಹಿಸಬೇಕು.

ಎಂದರೆ, ಕೈಯನ್ನು ಬೇರೆ ಬೇರೆ ರೀತಿಯಲ್ಲಿ ಬಾಗಿಸಬೇಕಿದ್ದ ಲ್ಲಿ, ಅದಕ್ಕೆ ಸಂಬಂಧಿಸಿದ ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗೆ ಸಂಬಂಧಿಸಿದಂತೆ ಹಲವಾರು “ನಿಯಮ’ಗಳನ್ನು ನಾವು ತಿಳಿದಿರಬೇಕು, ಮತ್ತು ಅವನ್ನು ಸರಿಯಾಗಿ ಬಳಸಬೇಕು.

ಆದರೆ ಈ ನಿಯಮಗಳು ಎಂತಹವು ಎಂಬುದನ್ನು ನಾವು ವಿವರಿಸಿ ಹೇಳಲಾರೆವು. ಅಂತಹ ನಿಯಮಗಳನ್ನು ನಾವು ಪಾಲಿಸುತ್ತೇವೆ ಎಂಬುದೇ ನಮ್ಮ ಗಮನಕ್ಕೆ ಬರುವುದಿಲ್ಲ. ಅವುಗಳ

ತಿಳಿವು ನಮ್ಮಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ. ಅವುಗಳ ಬಳಕೆಯೂ ನಮ್ಮಲ್ಲಿ ಅರಿವಿಗೆ ಎಟಕದ ರೂಪದಲ್ಲೇ ನಡೆಯುತ್ತದೆ.

ಕೈಗಳ ಚಲನೆ ನಡೆಯಬೇಕಿದ್ದಲ್ಲಿ ಅದಕ್ಕಾಗಿ ಹೇಗೆ ಬೇರೆ ಬೇರೆ ಸ್ನಾಯುಗಳು ಒಗ್ಗ ಬೇಕು ಇಲ್ಲವೇ ಕುಗ್ಗ ಬೇಕು, ಮತ್ತು ಇದಕ್ಕಾಗಿ ಹೇಗೆ ಬೇರೆ ಬೇರೆ ರೀತಿಯ ಸಂಕೇತಗಳು ಮಿದುಳಿನಿಂದ ನರಗಳ ಮೂಲಕ ಆ ಸ್ನಾಯುಗಳನ್ನು ತಲಪಬೇಕು ಎಂಬುದನ್ನು ಸಂಶೋಧನೆಗಳ ಮೂಲಕ ಕಂಡುಹಿಡಿದಿರುವ ವಿಜ್ಞಾ; ನಿಗಳಲ್ಲಿ ಮತ್ತು ಅವರು ಬರೆದಿರುವ ಗ್ರಂಥಗಳನ್ನು ಓದಿ ತಿಳಿದುಕೊಂಡಿರುವ ವಿದ್ವಾಂಸರಲ್ಲಿ ಮಾತ್ರ ಈ ನಿಯಮಗಳು ಅರಿವಿಗೆ ಎಟಕುವ ರೂಪದಲ್ಲಿರುತ್ತವೆ.

ಇದೇ ರೀತಿಯಲ್ಲಿ, ಮೇಲೆ ಸೂಚಿಸಿದ ಹಾಗೆ ಎಲ್ಲಾ ಭಾಷೆಗಳಿಗೂ ಅವನ್ನು ಬಳಸುವ ಜನರಲ್ಲಿ ಅರಿವಿಗೆ ಎಟಕದಂತಹ ರೂಪದಲ್ಲಿರುವ “ವ್ಯಾಕರಣ’ಗಳು ಇಲ್ಲವೇ ನಿಯಮಾವಳಿಗಳು ಇದ್ದೇ ತೀರಬೇಕು. ಅವು ಎಂತಹವು ಎಂಬುದನ್ನು ಕಂಡುಹಿಡಿದು, ಅವನ್ನು ಅರಿವಿಗೆ ಎಟಕುವ ರೂಪಕ್ಕೆ ತರುವ ಕೆಲಸವನ್ನು ಮಾತ್ರ ಭಾಷೆಗಳ ಮೇಲೆ ವ್ಯಾಕರಣಗಳನ್ನು ಬರೆಯುವ ವೈಯಾಕರಣಿಗಳು ನಡೆಸುತ್ತಾರೆ.

ಅರಿವಿಗೆ ಎಟಕದ ವ್ಯಾಕರಣ ತಪ್ಪಾಗಿರಲು ಸಾಧ್ಯವಿಲ್ಲ. ಯಾಕೆಂದರೆ, ಒಂದು ಭಾಷೆ ಎಂತಹದು ಎಂಬುದು ಅದನ್ನಾಡುವ ಜನರ ಮಿದುಳಿನಲ್ಲಿ ಎಂತಹ ನಿಯಮಾವಳಿ ಸಿದ್ದ ವಾಗಿದೆ ಎಂಬುದನ್ನು ಅವಲಂಬಿಸಿದೆ.

ಆದರೆ, ಅದನ್ನು ಅರಿವಿಗೆ ಎಟಕುವಂತೆ ಮಾಡುವ ವಿದ್ದಾ ್ರಿಂಸನೊಬ್ಬನ ಕೆಲಸ ಸರಿಯಾಗಿಯೂ ಇರಬಲ್ಲುದು, ಸರಿಯಾಗಿಲ್ಲದೆಯೂ ಇರಬಲ್ಲುದು. ಆ ಭಾಷೆಯಲ್ಲಿ ಬರುವ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳನ್ನು ಸರಿಯಾಗಿ ವಿವರಿಸಲು ಶಕ್ತವಾಗಿದೆಯಾದಲ್ಲಿ ಮಾತ್ರ ಆತ ಸಿದ್ಧಪಡಿಸಿರುವ ಅರಿವಿಗೆ ಎಟಕುವ ನಿಯಮಾವಳಿ (ಎಂದರೆ ಆ ಭಾಷೆಯ ಮೇಲೆ ಆತ ರಚಿಸಿರುವ “ವ್ಯಾಕರಣ’) ಸರಿಯಾದುದೆಂದು ಹೇಳಲು ಸಾಧ್ಯ.

Eke →

೧.೩ ಹಳೆಗನ್ನಡದ ವ್ಯಾಕರಣ

ಹಳೆಗನ್ನಡದಲ್ಲಿ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳನ್ನು ರಚಿಸಬೇಕಾದಲ್ಲಿ ಎಂತಹ ನಿಯಮಗಳನ್ನು ಬಳಸಬೇಕಾಗುತ್ತದೆ ಎಂಬುದನ್ನು ಹಳೆಗನ್ನಡದ ವ್ಯಾಕರಣ ವಿವರಿಸಿ ಹೇಳಬೇಕು. ಆದರೆ ಇಂತಹ ನಿಯಮಗಳನ್ನು ಯಾರೂ ಹೊಸದಾಗಿ ಸೃಷ್ಟಿಸಬೇಕಾಗಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಹಳೆಗನ್ನಡವನ್ನು ಸರಿಯಾಗಿ ಬಳಸಬಲ್ಲವರೆಲ್ಲರೂ ಅದಕ್ಕೆ ಬೇಕಾಗುವ ವ್ಯಾಕರಣ ನಿಯಮಗಳನ್ನು ಅರಿವಿಗೆ ಎಟಕದ ರೂಪದಲ್ಲಿ ಆ ಭಾಷೆಯನ್ನು ಕಲಿತುಕೊಳ್ಳುವಾಗಲೇನೇ ಪಡೆದಿರುತ್ತಾರೆ.

ಎಂದರೆ, ಹಳೆಗನ್ನಡದ ವ್ಯಾಕರಣ ನಿಯಮಗಳೆಲ್ಲ ಆ ಭಾಷೆ ಬಳಕೆಯಾಗುವ ಸಂದರ್ಭದಲ್ಲೇನೇ ಬಳಕೆಗೆ ಬಂದಿರುತ್ತವೆ. ಹಾಗಾಗಿ, ಹಳೆಗನ್ನಡ ವ್ಯಾಕರಣವನ್ನು ಬರೆಯುವವರು ಮಾಡಬೇಕಾಗಿರುವ ಕೆಲಸವೇನೆಂದರೆ, ಅರಿವಿಗೆ ಎಟಕದ ರೂಪದಲ್ಲಿರುವ ಈ ವ್ಯಾಕರಣ ನಿಯಮಗಳನ್ನು ಅರಿವಿಗೆ ಎಟಕುವ ರೂಪಕ್ಕೆ ತಂದುಕೊಡುವುದು ಮಾತ್ರ.

ಈ ವ್ಯಾಕರಣ ನಿಯಮಗಳು ಎಂತಹವು? ಇವನ್ನು ಕಂಡುಹಿಡಿಯುವಲ್ಲಿ ಹಳೆಗನ್ನಡದ ವ್ಯಾಕರಣಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬುದನ್ನು ಪರಿಶೀಲಿಸುವುದೇ ಈ ಪುಸ್ತಕದ

ಮುಖ್ಯ ಉದ್ದೇಶ. ಈ ವಿಷಯದಲ್ಲಿ ಹಳೆಗನ್ನಡ ವ್ಯಾಕರಣವನ್ನು ಬರೆದಿರುವವರೆಲ್ಲರೂ ಒಂದು ದೊಡ್ಡ ತಪ್ಪು ಮಾಡಿದ್ದಾ ರೆ.

ನೇರವಾಗಿ ಹಳೆಗನ್ನಡದ ವ್ಯಾಕರಣ ನಿಯಮಗಳು ಎಂತಹವು ಎಂಬುದನ್ನು ಹಳೆಗನ್ನಡದ ಬರಹಗಳಲ್ಲಿ ಬರುವ ಪದ, ಪದರೂಪ, ಪದಕಂತೆ ಮತ್ತು ವಾಕ್ಯಗಳನ್ನು ಪರಿಶೀಲಿಸುವುದರ ಮೂಲಕ ಕಂಡುಹಿಡಿಯಲು ಪ್ರಯತ್ನಿಸುವ ಬದಲು, ಇವರೆಲ್ಲ ಆಗಲೇ ಸಿದ್ಧವಾಗಿರುವ ಸಂಸ್ಕೃತದ (ಇಲ್ಲವೇ ಪ್ರಾಕೃತದ) ವ್ಯಾಕರಣ ನಿಯಮಗಳನ್ನು ಹಳೆಗನ್ನಡಕ್ಕೆ ಅಳವಡಿಸುವ ಪ್ರಯತ್ನ ಮಾಡಿದ್ದಾರೆ, ಮತ್ತು ಇದರಿಂದಾಗಿ, ಇವರು ಬರೆದಿರುವ ಹಳೆಗನ್ನಡ ವ್ಯಾಕರಣಗಳೆಲ್ಲ ಅನವಶ್ಯಕವಾಗಿ ಬಹಳ ತೊಡಕು ತೊಡಕಿನದಾಗಿವೆ, ಮತ್ತು ಹಲವೆಡೆಗಳಲ್ಲಿ ತಪ್ಪು ತಪ್ಪಾಗಿವೆ.

ಸಂಸ್ಕೃತದ ವ್ಯಾಕರಣ ಸಂಸ್ಕೃತ ಭಾಷೆಯ ಪದ, ಪದರೂಪ ಮತ್ತು ವಾಕ್ಯಗಳನ್ನು ರಚಿಸಬೇಕಿದ್ದ ಲ್ಲಿ ಎಂತಹ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಸರಿಯಾಗಿಯೇ ವಿವರಿಸುತ್ತಿರಬಹುದು. ಆದರೆ ಹಳೆಗನ್ನಡದ ಪದ, ಪದರೂಪ ಮತ್ತು ವಾಕ್ಯಗಳು ಸಂಸ್ಕೃತದ ಪದ, ಪದರೂಪ ಮತ್ತು ವಾಕ್ಯಗಳಿಗಿಂತ ಬಹಳಷ್ಟು ಭಿನ್ನವಾಗಿವೆಯಾದ ಕಾರಣ, ಆ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯವಾಗದು. ಈ ಎರಡು ಭಾಷೆಗಳು ಎರಡು ತೀರ ಭಿನ್ನವಾದ ಮೂಲಗಳಿಂದ ಬೆಳೆದು ಬಂದಿದ್ದು, ಇವು ಬಳಸುವ ನಿಯಮಾವಳಿಗಳ ನಡುವೆ ಹಲವು ಮೂಲಭೂತವಾದ ವ್ಯತ್ಯಾಸಗಳಿವೆ.

ಪ್ರಪಂಚದ ಭಾಷೆಗಳಲ್ಲಿ ಹೆಚ್ಚಿನವನ್ನೂ ಇಂಡೋ-ಯುರೋಪಿಯನ್‌, ಟಿಬೆಟೋ- ಬರ್ಮನ್‌, ಆಫ್ರೋ-ಏಶಿಯಾಟಿಕ್‌, ಆಸ್ಟ್ರಿಕ್‌, ಇಂಡೋ-ಪೆಸಿಫಿಕ್‌ ಮೊದಲಾದ ಹದಿನೈದಿಪ್ಪತ್ತು ಭಾಷಾಕುಟುಂಬಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯ ಎಂಬುದಾಗಿ ಭಾಷಾವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ (ಭಟ್‌ ೨೦೦೨:೧೫೩ ನೋಡಿ). ಎಂದರೆ, ಪ್ರಪಂಚದ ಭಾಷೆಗಳಲ್ಲಿ ಹೆಚ್ಚಿ ನವೂ ಈ ಹದಿನೈದಿಪ್ಪತ್ತು ಮೂಲಗಳಿಂದ ಬೆಳೆದು ಬಂದವುಗಳು, ಮತ್ತು ಹಾಗೆ ಬೆಳೆದು ಬರುವಾಗ ಕವಲು ಕವಲುಗಳಾಗಿ ಒಡೆದು ಇವತ್ತಿನ ಐದಾರು ಸಾವಿರ ಭಾಷೆಗಳಾಗಿ ಸಿದ್ಧ ವಾದವುಗಳು ಎಂಬುದು ಈ ವಿದ್ವಾಂಸರ ಅಭಿಪ್ರಾಯವಾಗಿದೆ.

ಒಂದು ಭಾಷೆಯು ಬಳಸುವ ವ್ಯಾಕರಣದ ಮೂಲತತ್ವಗಳಲ್ಲಿ ಹೆಚ್ಚಿ ನವನ್ನೂ ಆ ಭಾಷೆ ಅದು ಯಾವ ಭಾಷಾಕುಟುಂಬಕ್ಕೆ ಸೇರಿದೆಯೋ ಆ ಕುಟುಂಬದ ಮೂಲಭಾಷೆಯಿಂದ ಆನುವಂಶಿಕವಾಗಿ ಪಡೆದಿರುತ್ತದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿರುವ ಭಾಷೆಗಳು; ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್‌ ಭಾಷಾಕುಟುಂಬಕ್ಕೆ ಸೇರಿದೆಯಾದರೆ, ಕನ್ನಡ ಭಾಷೆ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದೆ; ಇವೆರಡು ಒಂದಕ್ಕಿಂತ ಒಂದು ತೀರ ಭಿನ್ನವಾಗಿರುವ ಭಾಷಾಕುಟುಂಬಗಳು.

ಸಂಸ್ಕೃತ ಭಾಷೆಯಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ವಗಳಲ್ಲಿ ಹೆಚ್ಚಿ ನವನ್ನೂ ಅದು ಇಂಡೋ-ಯುರೋಪಿಯನ್‌ ಮೂಲಭಾಷೆಯಿಂದ ಆನುವಂಶಿಕವಾಗಿ ಪಡೆದಿದೆ ಮತ್ತು ಕನ್ನಡ ಭಾಷೆಯಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ತಗಳಲ್ಲಿ ಹೆಚ್ಚಿನವನ್ನೂ ಅದು ದ್ರಾವಿಡ ಮೂಲಭಾಷೆಯಿಂದ ಆನುವಂಶಿಕವಾಗಿ ಪಡೆದಿದೆ. ಈ ಎರಡು ಮೂಲಭಾಷೆಗಳು ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದುವಾದ ಕಾರಣ, ಅವುಗಳಿಂದ ಈ ಭಾಷೆಗಳು ಪಡೆದಿರುವ ವ್ಯಾಕರಣದ ಮೂಲತತ್ತಗಳೂ ಒಂದಕ್ಕಿಂತ ಒಂದು ತೀರ ಭಿನ್ನವಾಗಿವೆ.

ಪ್ರತಿಯೊಂದು ಭಾಷೆಯಲ್ಲೂ ಈ ಮೂಲತತ್ತಗಳ ಬಳಕೆ ಸಾವಿರಾರು ವರ್ಷಗಳಷ್ಟು

ದೀರ್ಫವಾದ ಅವಧಿಯಲ್ಲಿ ನಡೆದಿರುತ್ತದೆ, ಮತ್ತು ಈ ಅವಧಿಯಲ್ಲಿ ಆ ಭಾಷೆಯನ್ನಾಡುವ ಜನರು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಅವನ್ನು ಪರಿಹರಿಸುವುದಕ್ಕಾಗಿ ತಮ್ಮ ಭಾಷೆಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ.

ಇಂತಹ ಬದಲಾವಣೆಗಳಲ್ಲಿ ಕೆಲವು ಆ ಭಾಷೆಯ ಮೂಲತತ್ವಗಳ ಮೇಲೂ ಪರಿಣಾಮವನ್ನು ಬೀರಲು ಸಾಧ್ಯವಿದೆ. ಮೂಲಭಾಷೆಯಿಂದ ಬೆಳೆದು ಬರುವಂತಹ ಈ ಸಾವಿರಾರು ವರ್ಷಗಳ ಅವಧಿಯಲ್ಲಿ ನಡೆಯುವ ಬದಲಾವಣೆಗಳೇ ಒಂದೇ ಕುಟುಂಬಕ್ಕೆ ಸೇರಿದ ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ.

ಉದಾಹರಣೆಗಾಗಿ, ಸಂಸ್ಕೃತ ಭಾಷೆಗೂ ಲ್ಯಾಟನ್‌, ಗ್ರೀಕ್‌, ಪರ್ಶಿಯನ್‌, ಇಂಗ್ಲಿಷ್‌ ಮೊದಲಾದ ಇತರ ಇಂಡೋ-ಯುರೋಪಿಯನ್‌ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ತಮ್ಮ ಮೂಲಭಾಷೆಯಿಂದ ಆನುವಂಶಿಕವಾಗಿ ಪಡೆದಿರುವ ವ್ಯಾಕರಣದ ಮೂಲತತ್ವಗಳಲ್ಲಿ ಮತ್ತು ಇತರ ವ್ಯಾಕರಣ ನಿಯಮಗಳಲ್ಲಿ ಈ ರೀತಿ ಬದಲಾವಣೆಗಳನ್ನು ಮಾಡಿಕೊಂಡಿರುವುದೇ ಮುಖ್ಯ ಕಾರಣ.

ಇದೇ ರೀತಿಯಲ್ಲಿ ಕನ್ನಡ ಭಾಷೆಗೂ ತಮಿಳು, ಮಲಯಾಳ, ತೆಲುಗು, ತುಳು ಮೊದಲಾದ ಇತರ ದ್ರಾವಿಡ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ತಮ್ಮ ಮೂಲ ಭಾಷೆಯಿಂದ ಆನುವಂಶಿಕವಾಗಿ ಪಡೆದ ವ್ಯಾಕರಣದ ಮೂಲತತ್ವಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿರುವುದೇ ಮುಖ್ಯ ಕಾರಣ.

ಎಲ್ಲಾ ಭಾಷೆಗಳೂ ತಮ್ಮ ಸಂಪರ್ಕಕ್ಕೆ ಬರುವ ಇತರ ಭಾಷೆಗಳಿಂದ ಪದಗಳನ್ನು ಎರವಲಾಗಿ ಪಡೆಯುತ್ತಿರುತ್ತವೆ. ಹೀಗೆ ಸಂಪರ್ಕಕ್ಕೆ ಬರುವ ಭಾಷೆಗಳು ಒಂದೇ ಭಾಷಾಕುಟುಂಬಕ್ಕೆ ಸೇರಿದವುಗಳಿರಬಹುದು, ಇಲ್ಲವೇ ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿದವುಗಳಿರಬಹುದು. ಆದರೆ, ಈ ರೀತಿ ಎರವಲಾಗಿ ಬರುವ ಪದಗಳೆಲ್ಲ ಸಾಮಾನ್ಯವಾಗಿ ಅವನ್ನು ಪಡೆದಿರುವ ಭಾಷೆಯ ವ್ಯಾಕರಣ ನಿಯಮಗಳಿಗನುಸಾರವಾಗಿ ಬದಲಾಗದಿರುವುದಿಲ್ಲ.

ಹಳೆಗನ್ನಡದ ಕಾಲದಲ್ಲೇನೇ ಕನ್ನಡ ಭಾಷೆ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲಾಗಿ ಪಡೆದುಕೊಂಡಿದೆ. ಆದರೆ ಈ ಪದಗಳಲ್ಲಿ ಹೆಚ್ಚಿನವೂ ಕನ್ನಡ ವ್ಯಾಕರಣದ ಮೂಲತತ್ವಗಳಿಗೆ ಹೊಂದಿಕೆಯಾಗುವಂತೆ ಬದಲಾವಣೆಗಳಿಗೊಳಗಾಗಿ “ತದ್ಭವ’ಗಳೆನಿಸಿವೆ (ಶ್ರೀ-ಸಿರಿ, ವರ್ಷ- ಬರಿಸ, ಅಕ್ಬರ-ಅಕ್ಕರ, ನಿತ್ಯ-ನಿಚ್ಚ ಇತ್ಯಾದಿ). ಇದಲ್ಲದೆ, ಹಾಗೆ ಬದಲಾಗದೆ ಉಳಿದಿರುವ ಸಂಸ್ಕೃತ ಪದಗಳೂ ಕನ್ನಡ ವಾಕ್ಯಗಳಲ್ಲಿ ಬಳಕೆಯಾಗಬೇಕಿದ್ದಲ್ಲಿ ಕನ್ನಡದವೇ ಆದ ವ್ಯಾಕರಣ ನಿಯಮಗಳಿಗೆ ಒಳಪಡಬೇಕಾಗುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಿಂದ ಕನ್ನಡಕ್ಕೆ ಕ್ರಿಯಾಪದಗಳು ಎರವಲಾಗಿ ಬಂದಿವೆಯಾದರೆ, ಅವು ತತ್ಸಮಗಳಾಗಿರಲಿ ಇಲ್ಲವೇ ತದ ವವಗಳಾಗಿರಲಿ, ಅವನ್ನು ನೇರವಾಗಿ ಕನ್ನಡ ವಾಕ್ಯಗಳಲ್ಲಿ ಕ್ರಿಯಾಪದಗಳಾಗಿ ಬಳಸಲು ಸಾಧ್ಯವಾಗದು. ಅವಕ್ಕೆ ಇಸು ಪ್ರತ್ಯಯವನ್ನು ಸೇರಿಸುವುದರ ಮೂಲಕ ಅವನ್ನು ಕನ್ನಡದವನ್ನಾಗಿ ಮಾಡಿದ ಮೇಲೇನೇ ಕನ್ನಡ ವಾಕ್ಯಗಳಲ್ಲಿ ಅವನ್ನು ಕ್ರಿಯಾಪದಗಳಾಗಿ ಬಳಸಲು ಸಾಧ್ಯ (ನಟಿಸು-ನಟಿಸುತ್ತಾನೆ, ರಕ್ಷಿಸು-ರಕ್ಷಿಸಿದ, ಆಲೋಚಿಸು-ಆಲೋಚಿಸಿದ್ದೇನೆ ಇತ್ಯಾದಿ).

ಸಂಸ್ಕೃತದ ನಾಮಪದಗಳನ್ನು ಕನ್ನಡದಲ್ಲಿ ಹಾಗೆಯೇ ಬಳಸಬಲ್ಲೆವೇನೋ ನಿಜ; ಆದರೆ ಅವಕ್ಕೆ ಕನ್ನಡದವೇ ಆದ ವಚನ ಮತ್ತು ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ

(ಸಂಸ್ಕೃತಿಯನ್ನು, ಸಂಸ್ಕೃತಿಯಿಂದ, ಸಂಸ್ಕೃತಿಗೆ, ಕೃತಿಗಳು ಇತ್ಯಾದಿ). ಹೀಗೆ, ಸಂಸ್ಕೃತದಿಂದ ಬಂದ ಈ ಎಲ್ಲಾ ಎರವಲುಗಳ ನಡುವೆಯೂ ಕನ್ನಡ ಭಾಷೆ ವ್ಯಾಕರಣದ ಮಟ್ಟಿಗೆ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ.

ಹಿಂದಿನ ಕಾಲದಲ್ಲಿ ಪ್ರಾಕೃತ, ಪಾಲಿ, ಅಪಭ್ರಂಶ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕೃತದ ಒಂದು “ವಿಕೃತ’ ರೂಪವೆಂಬ ಅಭಿಪ್ರಾಯ ವಿದ್ವಾಂಸರಲ್ಲಿತ್ತು. ಆದರೆ, ಈ ಅಭಿಪ್ರಾಯ ತಪ್ಪು, ಕನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಮೂಲದಿಂದ ಬೆಳೆದು ಬಂದಿರುವ ಭಾಷೆ ಎಂಬುದನ್ನು ಹತ್ತೊಂಬತ್ತನೇ ಶತಮಾನದಲ್ಲಿ ಕಾಲ್ಡ್‌ವೆಲ್‌ (ಕಾಲ್ಡ್‌ವೆಲ್‌ ೧೮೫೬) ತೋರಿಸಿಕೊಟ್ಟಿದ್ದ ರು.

ಅನಂತರ ನಡೆದ ಭಾಷಾಭ್ಯಾಸಗಳು, ಅದರಲ್ಲೂ ಎಮೆನೋ ಮತ್ತು ಬರೋ ರಚಿಸಿದ ದ್ರಾವಿಡ ಜ್ಞಾತಿಪದಕೋಶ (ಎಮೆನೋ ಮತ್ತು ಬರೋ ೧೯೬೧), ಮತ್ತು ಕೃಷ್ಣಮೂರ್ತಿ ಇತ್ತೀಚೆಗೆ ಪ್ರಕಟಿಸಿದ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ (ಕೃಷ್ಣಮೂರ್ತಿ ೨೦೦೩) ಈ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿಸಿವೆ.

ಹಳೆಗನ್ನಡದಲ್ಲಿ ಗ್ರಂಥಗಳನ್ನು ರಚಿಸಿರುವವರೆಲ್ಲ ಸಂಸ್ಕೃತದಿಂದ ಧಾರಾಳವಾಗಿ ಪದಗಳನ್ನು ಎರವಲು ಪಡೆದುಕೊಂಡಿದ್ದಾ ರೆ. ಇವುಗಳಲ್ಲಿ ಕೆಲವು ಸಂಸ್ಕೃತದಲ್ಲಿರುವಂತೆಯೇ ಇವೆಯಾದರೆ, ಇನ್ನು ಕೆಲವು ಹಲವು ರೀತಿಯ ಬದಲಾವಣೆಗಳ ಮೂಲಕ ಕನ್ನಡತನವನ್ನು ಪಡೆದಿವೆ. ಕನ್ನಡ ಭಾಷೆ ಸಂಸ್ಕೃತದ ವಿಕೃತ ರೂಪವೆಂಬ ಅಭಿಪ್ರಾಯ ಮೂಡಿಬರಲು ಹಳೆಗನ್ನಡ ಗ್ರಂಥಗಳಲ್ಲಿ ಇಂತಹ ಎರವಲಾಗಿ ಬಂದ ಸಂಸ್ಕೃತ ಪದಗಳು ಜಾಸ್ತಿಯಿರುವುದೂ ಒಂದು ಕಾರಣವಿರಬಹುದು.

ಆದರೆ, ಹಳೆಗನ್ನಡದ ಈ ಗ್ರಂಥಗಳಲ್ಲಿ ಕನ್ನಡದವೇ ಆದ (ಎಂದರೆ ದ್ರಾವಿಡ ಮೂಲದಿಂದ ಬಂದ) ಪದಗಳೂ ಸಾಕಷ್ಟು ಕಾಣಿಸಿಕೊಳ್ಳುತ್ತ ವೆ. ಇದಲ್ಲದೆ, ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನು ಕನ್ನಡ ವಾಕ್ಯಗಳಲ್ಲಿ ಬಳಸಬೇಕಿದ್ದಾ ಗ ಅವಕ್ಕೆ ಕನ್ನಡದವೇ ಆದ ಪದರೂಪಗಳನ್ನು ಸಾಧಿಸಿಕೊಡಬೇಕಾಗುತ್ತದೆ. ಈ ಪದರೂಪಗಳನ್ನು ಬಳಸಿ ವಾಕ್ಯಗಳನ್ನು ತಯಾರಿಸಬೇಕಾದಾಗಲೂ, ಅದಕ್ಕಾಗಿ ಕನ್ನಡದ ವಾಕ್ಯರಚನೆಯ ನಿಯಮಗಳನ್ನು ಬಳಸಬೇಕಾಗುತ್ತದಲ್ಲದೆ ಸಂಸ್ಕೃತದ ವಾಕ್ಯರಚನೆಯ ನಿಯಮಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ, ಹಳೆಗನ್ನಡದ ವ್ಯಾಕರಣವನ್ನು ಬರೆಯುವವರು ಮೊದಲಿಗೆ ಕನ್ನಡದವೇ ಆದ ಪದಗಳ, ಪದರೂಪಗಳ ಮತ್ತು ವಾಕ್ಯಗಳ ರಚನೆಯೆಂತಹದು, ಮತ್ತು ಅದಕ್ಕಾಗಿ ಎಂತಹ ನಿಯಮಗಳನ್ನು ಬಳಸಬೇಕಾಗುತ್ತದೆ ಎಂಬುದನ್ನು ವಿವರಿಸುವುದೊಳ್ಳೆಯದು. ಇವು ಎಲ್ಲಾ ರೀತಿಯ ಹಳೆಗನ್ನಡ ಬರಹಗಳಿಗೂ ಸಮಾನವಾಗಿ ಅನ್ವಯಿಸುವ ನಿಯಮಗಳಾಗಿರುತ್ತವೆ.

ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು ಈ ಸನ್ನಿವೇಶದಲ್ಲಿ ಹೇಗೆ ಹೊಂದಿಕೊಳ್ಳುತ್ತ ವೆ ಎಂಬುದನ್ನು ಅನಂತರ ವಿವರಿಸಿ ಹೇಳಬಹುದು. ಇಂತಹ ಪದಗಳು ಕೆಲವು ಬರಹಗಳಲ್ಲಿ ಜಾಸ್ತಿಯಿರಬಹುದು, ಮತ್ತು ಬೇರೆ ಕೆಲವು ಬರಹಗಳಲ್ಲಿ ಕಡಿಮೆಯಿರಬಹುದು. ಉದಾಹರಣೆಗಾಗಿ, ಆಂಡಯ್ಯನ ಬರಹಗಳಲ್ಲಿ ಕನ್ನಡಕ್ಕೆ ಅಳವಡಿಸದಿರುವ ಸಂಸ್ಕೃತ ಪದಗಳನ್ನು (ಎಂದರೆ ತತ್ಸಮ ಪದಗಳನ್ನು) ಆದಷ್ಟು ಕಡಿಮೆ ಬಳಸಲಾಗಿದೆ. ಕನ್ನಡದವೇ ಆದ ಪದಗಳಿಗೆ ಅನ್ವಯಿಸುವ ವ್ಯಾಕರಣ ನಿಯಮಗಳು ಈ ರೀತಿ ಎರವಲಾಗಿ ಬಂದಿರುವ ಪದಗಳಿಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಪ್ರತ್ಯೇಕವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ.

Eke →

೧.೪ ಸಿದ್ಧವಾಗಿರುವ ವ್ಯಾಕರಣಗಳು

ಹಳೆಗನ್ನಡದ ಮೇಲೆ ಹಿಂದಿನ ಕಾಲದವರು ರಚಿಸಿದ ವ್ಯಾಕರಣಗಳಲ್ಲಿ ನಮಗೆ ದೊರೆತಿರುವವುಗಳು ಮುಖ್ಯವಾಗಿ ಮೂರು. ೧೧ನೇ ಶತಮಾನದಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ನಾಗವರ್ಮನ ಕರ್ಣಾಟಕ ಭಾಷಾಭೂಷಣ, ೧೩ನೇ ಶತಮಾನದಲ್ಲಿ ಕನ್ನಡದಲ್ಲೇನೇ ರಚಿತವಾಗಿರುವ ಕೇಶಿರಾಜನ ಶಬ್ದ ಮಣಿದರ್ಪಣ, ಮತ್ತು ೧೭ನೇ ಶತಮಾನದ ಆದಿಯಲ್ಲಿ ಸಂಸ್ಕೃತದಲ್ಲಿ ರಚಿತವಾಗಿರುವ ಭಟ್ಟಾಕಳಂಕನ ಶಬ್ದಾನುಶಾಸನ. ನಾಗವರ್ಮನೇ ಬರೆದಿರುವ ಕಾವ್ಯಾವಲೋಕನವೆಂಬ ಇನ್ನೊಂದು ಗ್ರಂಥದಲ್ಲೂ ಶಬ್ದಸ್ಮೃತಿ ಎಂಬ ಭಾಗದಲ್ಲಿ ಹಳೆಗನ್ನಡ ವ್ಯಾಕರಣವನ್ನು ಚುಟುಕಾಗಿ ವಿವರಿಸಲಾಗಿದೆ (ಹೆಚ್ಚಿನ ವಿವರಗಳಿಗೆ ಸೀತಾರಾಮಯ್ಯ ೧೯೭೯ ನೋಡಿ).

ಈ ಮೂರು ವ್ಯಾಕರಣಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ವ್ಯಾಕರಣವೆಂದರೆ, ಹಳೆಗನ್ನಡದಲ್ಲಿ ರಚಿತವಾಗಿರುವ ಕೇಶಿರಾಜನ ಶಬ್ದ ಮಣಿದರ್ಪಣ. ಇದರಲ್ಲಿ ವ್ಯಾಕರಣ ನಿಯಮಗಳನ್ನು ಚುಟುಕಾಗಿ ಕಂದಪದ್ಯಗಳ ಮೂಲಕವೂ, ಮತ್ತು ಹೆಚ್ಚು ಸ್ಪಷ್ಟವಾಗಿ ಈ ಪದ್ಯಗಳ ಅನಂತರ ವೃತ್ತಿರೂಪದಲ್ಲಿ ಬರುವ ಗದ್ಯಗಳ ಮೂಲಕವೂ ತಿಳಿಸಲಾಗಿದೆ. ಅವು ತಿಳಿಸುವ ವ್ಯಾಕರಣ ನಿಯಮಗಳಿಗೆ ಉದಾಹರಣೆಗಳನ್ನು ಇತರ ಕವಿಗಳ ಪ್ರಯೋಗಗಳನ್ನು ಎತ್ತಿಹೇಳುವುದರ ಮೂಲಕ ಅಲ್ಲಲ್ಲೇ ಕೊಡಲಾಗಿದೆ.

ಪ್ರಾಚೀನವೆಂದು ಹೇಳಬಹುದಾದ ಈ ಮೂರು ವ್ಯಾಕರಣಗಳಲ್ಲೂ ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು ಹಳೆಗನ್ನಡದ ವ್ಯಾಕರಣವನ್ನು ವಿವರಿಸಿ ಹೇಳುವ ಪ್ರಯತ್ನ ನಡೆಸಲಾಗಿದೆ. ಆದರೆ, ಮೇಲೆ ವಿವರಿಸಿದ ಹಾಗೆ, ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೆ €ನೇ ಹಲವು ಮುಖ್ಯವಾದ ವ್ಯತ್ಯಾಸಗಳಿವೆಯಾದ ಕಾರಣ, ಕನ್ನಡ ವ್ಯಾಕರಣವನ್ನು ತಯಾರಿಸುವ ಕೆಲಸಕ್ಕೆ ಸಂಸ್ಕೃತ ವ್ಯಾಕರಣ ಅಷ್ಟೊಂದು ಉತ್ತಮವಾದ ಮಾದರಿಯಲ್ಲ.

ಈ ಮೂರು ಪ್ರಾಚೀನ ವ್ಯಾಕರಣಗಳ ಅನಂತರ, ಹಳೆಗನ್ನಡದ ಮೇಲೆ ರಚಿತವಾಗಿರುವ ಒಂದು ಒಳ್ಳೆಯ ವ್ಯಾಕರಣವೆಂದರೆ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಪ್ರಕಟಗೊಂಡಿರುವ ಕಿಟ್ಟೆಲ್‌ ಅವರ ಕನ್ನಡ ವ್ಯಾಕರಣ (ಕಿಟ್ಟೆಲ್‌ ೧೯೦೩). ಇದು ಇಂಗ್ಲಿಷ್‌ ಭಾಷೆಯಲ್ಲಿದ್ದು, ಹಳೆಗನ್ನಡದ ವ್ಯಾಕರಣವೆಂತಹದು ಎಂಬುದನ್ನು ತಿಳಿಸುವುದು ಮಾತ್ರವಲ್ಲದೆ, ಅದಕ್ಕೂ ಮತ್ತು ನಡುಗನ್ನಡ-ಹೊಸಗನ್ನಡಗಳಿಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನೂ ತಿಳಿಸುತ್ತದೆ.

ಆದರೆ, ಇದನ್ನು ಬರೆಯುವಲ್ಲಿ ಕೇಶಿರಾಜನ ಶಬ್ದಮಣಿದರ್ಪಣವನ್ನು ಆಧಾರ ವಾಗಿರಿಸಿಕೊಳ್ಳಲಾಗಿದೆ. ಹಾಗಾಗಿ, ಆ ವ್ಯಾಕರಣದ ಹಲವು ಕೊರತೆಗಳು ಇದರಲ್ಲೂ ಸೇರಿಕೊಂಡಿವೆ.

ಕನ್ನಡ ವ್ಯಾಕರಣವನ್ನು ಯುರೋಪಿನ ವ್ಯಾಕರಣಗಳಿಗೆ ಹೊಂದಿಸಿ ಹೇಳುವ ಪ್ರಯತ್ನವನ್ನೂ ಕಿಟ್ಟೆಲರು ಈ ವ್ಯಾಕರಣದಲ್ಲಿ ನಡೆಸಿದ್ದಾ ರೆ. ಆದರೆ, ಸಂಸ್ಕೃತ ವ್ಯಾಕರಣದ ಹಾಗೆ ಯುರೋಪಿನ ವ್ಯಾಕರಣಗಳೂ ಗ್ರೀಕ್‌, ಲ್ಯಾಟಿನ್‌ ಮೊದಲಾದ ಇಂಡೋ-ಯುರೋಪಿಯನ್‌ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳ ನಿಯಮಾವಳಿಗಳನ್ನು ವರ್ಣಿಸುತ್ತಿವೆಯಾದ ಕಾರಣ, ಮತ್ತು ಅವೆರಡರೊಳಗೆ ಮೂಲಭೂತ ವ್ಯತ್ಯಾಸಗಳೇನೂ ಇಲ್ಲ; ಹಾಗಾಗಿ, ಹಳೆಗನ್ನಡದ ವ್ಯಾಕರಣ ತತ್ತ್ವಗಳನ್ನು ಹೊರಗೆಡಹುವಲ್ಲಿ ಹಲವೆಡೆ ಈ ವ್ಯಾಕರಣವೂ ಸೋತುಹೋಗಿದೆ.

ಇತ್ತೀಚೆಗೆ ಹಳೆಗನ್ನಡವನ್ನು ಆಧುನಿಕ ಭಾಷಾಶಾಸ್ತ್ರದ ದೃಷ್ಟಿಕೋನದಿಂದ ಪರಿಶೀಲಿಸುವ ಕೆಲವು ಪ್ರಯತ್ನಗಳೂ ನಡೆದಿವೆ. ಉದಾಹರಣೆಗಾಗಿ, ರಾಮಚಂದ್ರ ರಾವ್‌ ಅವರ ಪಂಪಭಾರತ

ವ್ಯಾಕರಣ (ರಾಮಚಂದ್ರ ರಾವ್‌ ೧೯೭೨) ಇಂತಹ ಒಂದು ಪ್ರಯತ್ನ. ಆದರೆ ಇಲ್ಲೂ ಹಳೆಗನ್ನಡವನ್ನು ಅದರದೇ ಆದ ಒಳರಚನೆಯ ದೃಷ್ಟಿಕೋನದಿಂದ ಪರಿಶೀಲಿಸುವ ಪ್ರಯತ್ನ ನಡೆದಿಲ್ಲ.

ಇದಕ್ಕೆ ಕಾರಣವೇನೆಂದರೆ, ಆಧುನಿಕ ಭಾಷಾಶಾಸ್ತ್ರವೂ ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ರಷ್ಯನ್‌ ಮೊದಲಾದ ಇಂಡೋ-ಯುರೋಪಿಯನ್‌ ಭಾಷೆಗಳ ಪರಿಶೀಲನೆಯ ಆಧಾರದ ಮೇಲೆ ಬೆಳೆದುಬಂದಿದೆ. ಅದರ ಮೂಲತತ್ವಗಳೆಲ್ಲ ಹೆಚ್ಚು ಕಡಿಮೆ ಇಂಡೋ-ಯುರೋಪಿಯನ್‌ ಭಾಷೆಗಳ ಮೂಲತತ್ವಗಳೇ. ಹಾಗಾಗಿ, ಈ ಭಾಷೆಗಳಿಂದ ತೀರ ಭಿನ್ನವಾಗಿರುವ ಭಾಷೆಗಳಿಗೆ ಅವನ್ನು ನೇರವಾಗಿ ಅನ್ವಯಿಸಲು ಸಾಧ್ಯವಾಗುವುದಿಲ್ಲ.

ಇಂಡೋ-ಯುರೋಪಿಯನ್‌ ಭಾಷೆಗಳಿಂದ ತೀರ ಭಿನ್ನವಾಗಿರುವ ಭಾಷೆಗಳಿಗೆ ವ್ಯಾಕರಣವನ್ನು ಸಿದ್ದ ಪಡಿಸಲು ಪ್ರಯತ್ನಿಸುವವರೆಲ್ಲರೂ ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಅವರಿಗೆ ಮಾದರಿಯಾಗಿ ಸಿಗುವ ವ್ಯಾಕರಣ ಇಂಡೋ-ಯುರೋಪಿಯನ್‌ ಭಾಷಾಕುಟುಂಬಕ್ಕೆ ಸೇರಿರುವ ಸಂಸ್ಕೃತ, ಲ್ಯಾಟಿನ್‌, ಇಂಗ್ಲಿಷ್‌ ಮೊದಲಾದವುಗಳಂತಹ ಯಾವುದಾದರೊಂದು ಜನಪ್ರಿಯ ಭಾಷೆಯ ವ್ಯಾಕರಣ; ಇಲ್ಲ ವೇ, ಅಂತಹ ವ್ಯಾಕರಣದ ಮೂಲತತ್ವಗಳನ್ನು ಹಾಗೆಯೇ ಬಳಸಿ ತಯಾರಿಸಿದ ಬೇರೊಂದು ಭಾಷೆಯ ವ್ಯಾಕರಣ. ತಾವು ವರ್ಣಿಸುವ ಭಾಷೆ ಇವಕ್ಕಿಂತ ತೀರ ಭಿನ್ನವಾದ ಮೂಲತತ್ವಗಳನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ಕಂಡುಹಿಡಿಯುವುದೇ ಇವರಿಗೆ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ.

ಹೆಚ್ಚಿನವರಿಗೂ ಈ ಸಮಸ್ಯೆಯನ್ನು ತೃಪ್ತಿಕರವಾಗಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಹೆಚ್ಚಿನವರೂ ತಾವು ವರ್ಣಿಸುತ್ತಿರುವ ಭಾಷೆಗೆ ಜನಪ್ರಿಯ ವ್ಯಾಕರಣವೊಂದರ ಪಡಿಯಚ್ಚ ನ್ನು ಮಾತ್ರವೇ ತಯಾರಿಸಿ ಕೊಡಲು ಶಕ್ತರಾಗುತ್ತಾರೆ. ಕೆಲವೇ ಕೆಲವು ವಿದ್ವಾಂಸರು ಮಾತ್ರ, ತಾವು ವಿವರಿಸುವ ಭಾಷೆಯ ವ್ಯಾಕರಣ ಮೂಲತತ್ವಗಳಲ್ಲೇನೇ ಜನಪ್ರಿಯ ವ್ಯಾಕರಣಗಳಿಗಿಂತ ಭಿನ್ನವಾಗಿದೆಯೆಂಬುದನ್ನು ಗಮನಿಸಿ, ಅದನ್ನು ಭಿನ್ನವಾಗಿ ವಿವರಿಸಿ ಹೇಳಲು ಶಕ್ತರಾಗಿರುತ್ತಾರೆ.

ಹಳೆಗನ್ನಡದ ಮೇಲೆ ಸಿದ್ಧ ವಾಗಿರುವ ವ್ಯಾಕರಣಗಳೆಲ್ಲ ಈ ಮೇಲಿನ ಕಾರಣಕ್ಕಾಗಿ ಅಸಮರ್ಪಕವಾಗಿವೆ. ನಾಗವರ್ಮ, ಕೇಶಿರಾಜ, ಭಟ್ಟಾಕಳಂಕ ಮೊದಲಾದ ಹಿಂದಿನ ಕಾಲದ ವಿದ್ವಾಂಸರು ಬರೆದ ವ್ಯಾಕರಣಗಳೆಲ್ಲ ಆ ಸಮಯದಲ್ಲಿ ಜನಪ್ರಿಯವಾಗಿದ್ದ ಸಂಸ್ಕೃತ ಭಾಷೆಯ ವ್ಯಾಕರಣಗಳ ಪಡಿಯಚ್ಚು ಗಳಾಗಿವೆ.

ಇವುಗಳಲ್ಲಿ ಕೇಶಿರಾಜನ ವ್ಯಾಕರಣ ಮಾತ್ರ ಕೆಲವು ವಿಷಯಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ವ್ಯತ್ಯಾಸಗಳನ್ನು ಗಮನಿಸಿರುವುದು ಕಂಡುಬರುತ್ತದೆ. ಆದರೆ ಆತನು ಗಮನಿಸಿರುವುದು ಮೇಲಿನಿಂದ ಮೇಲೆ ನೋಡುವಾಗ ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಮಾತ್ರ. ಈ ಎರಡು ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೇನೇ ಹಲವು ವ್ಯತ್ಯಾಸಗಳಿದ್ದು, ಇವನ್ನು ಗಮನಿಸುವಲ್ಲಿ ಈ ವ್ಯಾಕರಣವೂ ಸೋತುಹೋಗಿದೆ.

Eke →

೧.೫ ಪುಸ್ತಕದ ಸ್ವರೂಪ

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು, ಅದು ಬಳಸುವ ವ್ಯಾಕರಣದ ಮೂಲತತ್ತ್ವಗಳು ಎಂತಹವು, ಇದುವರೆಗೆ ಸಿದ್ಧವಾಗಿರುವ, ಮತ್ತು ಈಗ ಜನಪ್ರಿಯವಾಗಿರುವ ವ್ಯಾಕರಣ ಗ್ರಂಥಗಳು ಈ ಮೂಲತತ್ವಗಳನ್ನು ಕಂಡುಹಿಡಿಯುವಲ್ಲಿ ಹೇಗೆ ಅಸಮರ್ಥವಾಗಿವೆ, ಮತ್ತು ಇದರಿಂದಾಗಿ

ಅವುಗಳಲ್ಲಿ ಬರುವ ವ್ಯಾಕರಣ ನಿಯಮಗಳು ಹೇಗೆ ಹಳೆಗನ್ನಡದ ಪದರಚನೆ ಮತ್ತು ವಾಕ್ಯರಚನೆಗಳನ್ನು ವಿವರಿಸುವಲ್ಲಿ ಸೋತುಹೋಗಿವೆ ಎಂಬುದನ್ನು ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.

ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳಿಗೆಲ್ಲ ಸಂಸ್ಕೃತ ವ್ಯಾಕರಣವೇ ಮಾದರಿಯಾಗಿತ್ತು. ಸಂಸ್ಕೃತಕ್ಕೆ ಪಾಣಿನಿ ರಚಿಸಿದ ಅತ್ಯುತ್ತಮ ವ್ಯಾಕರಣವಿದ್ದುದು ಇದಕ್ಕೆ ಒಂದು ಕಾರಣ; ಆಗಿನ ಕಾಲದಲ್ಲಿ ಭಾರತದ ಎಲ್ಲಾ ವಿದ್ದಾ ್ರಿಂಸರಿಗೂ ಸಂಸ್ಕ ೨ತವೇ ಶಾಸ್ತ್ರಾ: ಭ್ಯಾಸಕ್ಕೆ ಮಾಧ್ಯಮವಾಗಿದ್ದು ದು ಇನ್ನೊಂದು ಕಾರಣ; ಹಳೆಗನ್ನಡಕ್ಕೆ ವ್ಯಾಕರಣವನ್ನು ರಚಿಸಲು ಹೊರಡುವ ಮೊದಲು ಇವರೆಲ್ಲರೂ ಸಂಸ್ಕೃತ ವ್ಯಾಕರಣದಲ್ಲಿ ಸಂಪೂರ್ಣವಾದ ಪರಿಣತಿಯನ್ನು ಪಡೆಯುವುದು ಅತ್ಯವಶ್ಯವಾಗಿತ್ತು ಎಂಬುದು ಮತ್ತೊಂದು ಕಾರಣ. ಈ ಎಲ್ಲಾ ಕಾರಣಗಳಿಂದಾಗಿ, ಅವರು ರಚಿಸಿದ ಹಳೆಗನ್ನಡ ವ್ಯಾಕರಣಗಳೆಲ್ಲ ಸಂಸ್ಕೃತ ವ್ಯಾಕರಣದ ಪಡಿಯಚ್ಚು ಗಳಾಗಿಬಿಟ್ಟಿವೆ.

ಸಂಸ್ಕೃತ ವ್ಯಾಕರಣಕ್ಕೆ ಹಲವು ಶತಮಾನಗಳಷ್ಟು ದೀರ್ಫವಾದ ಚರಿತ್ರೆಯಿದೆ. ವೇದಗಳನ್ನು ಬದಲಾಗದಂತೆ ಉಳಿಸುವುದಕ್ಕಾಗಿ ಅವುಗಳಲ್ಲಿ ಬಳಕೆಯಾಗುವ ವರ್ಣಗಳ ಮತ್ತು ಪದಗಳ ವ್ಯಾಸಂಗದಿಂದ ಪ್ರಾರಂಭವಾದ ಈ ಶಾಸ್ತ್ರ ಸಂಪೂರ್ಣವಾಗಿ ಸಂಸ್ಕೃತ ಭಾಷೆಯ ಪರಿಶೀಲನೆಯ ಮೇಲೆಯೇ ಬೆಳೆದು ಬಂದಿದೆ. ಹಾಗಾಗಿ, ಅದರ ಮೂಲತತ್ವಗಳು, ಪಾರಿಭಾಷಿಕ ಪದಗಳು, ವ್ಯಾಕರಣ ಸಂಪ್ರದಾಯಗಳು, ವ್ಯಾಕರಣಾಂಶಗಳನ್ನು ಪ್ರಕರಣಗಳಾಗಿ ವಿಭಜಿಸಿ ಹೇಳುವ ಕ್ರಮ, ಇವೆಲ್ಲವೂ ಸಂಸ್ಕೃತ ಭಾಷೆಯ ವ್ಯಾಕರಣವನ್ನು ವಿವರಿಸಿ ಹೇಳಲು ಅನುಕೂಲವಾಗಿವೆ.

ಆದರೆ, ಹಳೆಗನ್ನಡದ ವ್ಯಾಕರಣಕ್ಕೆ ಇಂತಹ ದೀರ್ಥವಾದ ಚರಿತ್ರೆ ಇಲ್ಲವೇ ವಿಕಾಸ ಇರುವ ಹಾಗೆ ಕಾಣಿಸುವುದಿಲ್ಲ. ಅದು ನೇರವಾಗಿ ಸಂಸ್ಕೃತ ವ್ಯಾಕರಣವನ್ನು ಕನ್ನಡಕ್ಕೆ ಅಳವಡಿಸುವಂತಹ ಕೆಲವು ಪ್ರಯತ್ನಗಳ ಫಲ ಮಾತ್ರ. ಅದರ ಪಾರಿಭಾಷಿಕ ಪದಗಳೆಲ್ಲ ನೂರಕ್ಕೆ ನೂರೂ ಸಂಸ್ಕೃತದವೇ. ಅವು ಹಳೆಗನ್ನಡದವೇ ಆದ ವ್ಯಾಕರಣ ನಿಯಮಗಳನ್ನು ವಿವರಿಸಿ ಹೇಳುವುದಕ್ಕಾಗಿ ವಿಕಸಿತವಾದುವೇನಲ್ಲ. ಈ ವ್ಯಾಕರಣಗಳಲ್ಲಿ ಕಂಡುಬರುವ ವ್ಯಾಕರಣ ಸಂಪ್ರದಾಯವೂ ಸಂಸ್ಕೃತ (ಇಲ್ಲವೇ ಅದರಿಂದ ಬೆಳೆದು ಬಂದಿರುವ ಪ್ರಾಕೃತ) ವ್ಯಾಕರಣದ ಸಂಪ್ರದಾಯವೇ.

ಈ ವ್ಯಾಕರಣಗಳು ವ್ಯಾಕರಣಾಂಶಗಳನ್ನು ಬೇರೆ ಬೇರೆ ಪರಿಚ್ಛೇದಗಳಲ್ಲಿ ವಿಂಗಡಿಸುವು ದರಲ್ಲೂ ಸಂಸ್ಕೃತ ವ್ಯಾಕರಣಗಳನ್ನೇ ಅನುಸರಿಸಿವೆ. ಈ ಪರಿಚ್ಛೇದಗಳಲ್ಲಿ ಯಾವ ವಿಷಯಗಳನ್ನು ವಿವರಿಸಬೇಕು, ಮತ್ತು ಹೇಗೆ ವಿವರಿಸಬೇಕು ಎಂಬುದಕ್ಕೂ ಅವಕ್ಕೆ ಸಂಸ್ಕೃತ (ಮತ್ತು ಪ್ರಾಕೃತ) ವ್ಯಾಕರಣಗಳೇ ಮಾದರಿಯಾಗಿವೆ.

ಈ ರೀತಿ, ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣಗಳನ್ನು ಮಾದರಿಯಾಗಿರಿಸಿಕೊಂಡು ಹಳೆಗನ್ನಡ ವ್ಯಾಕರಣವನ್ನು ರಚಿಸಲು ಪ್ರಯತ್ನಿಸಿದುದರಿಂದಾಗಿ, ಹಳೆಗನ್ನಡದ ವೈಯಾಕರಣಿಗಳಿಗೆ ಆ ಭಾಷೆಯ ನಿಜವಾದ ವ್ಯಾಕರಣವೆಂತಹದು ಎಂಬುದನ್ನು ತಿಳಿಸಿಹೇಳಲು ಸಾಧ್ಯವಾಗಿಲ್ಲ. ಅದರಲ್ಲೂ ಸಂಸ್ಕೃತ ವ್ಯಾಕರಣದ ಸೂತ್ರರೂಪವನ್ನು ಹಾಗೆಯೇ ಉಳಿಸಿಕೊಂಡಿರುವ ಮತ್ತು ಸಂಸ್ಕೃತ ಭಾಷೆಯಲ್ಲೇನೇ ತಮ್ಮ ವ್ಯಾಕರಣಗಳನ್ನು ರಚಿಸಿರುವ ನಾಗವರ್ಮ ಮತ್ತು ಭಟ್ಟಾಕಳಂಕರ ಮೇಲೆ ಸಂಸ್ಕೃತ ವ್ಯಾಕರಣದ ಪ್ರಭಾವ ಇನ್ನಷ್ಟು ಗಾಢವಾಗಿರುವ ಹಾಗೆ ಕಾಣಿಸುತ್ತದೆ.

ಹಳೆಗನ್ನಡ ವ್ಯಾಕರಣವನ್ನು ಹಳೆಗನ್ನಡದಲ್ಲೇನೇ ಬರೆಯಲು ಪ್ರಯತ್ನಿಸಿದ ಕೇಶಿರಾಜನ ಶಬ್ದಮಣಿದರ್ಪಣ ಇದಕ್ಕೆ ಸ್ವಲ್ಪ ಮಟ್ಟಿಗೆ ಅಪವಾದವೆಂದು ಹೇಳಬಹುದು. ಮೇಲೆ ಸೂಚಿಸಿದ

ಹಾಗೆ, ಇದರಲ್ಲಿ ಹಲವು ಹಳೆಗನ್ನಡದವೇ ಆದ ವಿಷಯಗಳನ್ನೂ ಪ್ರಸ್ತಾಪಿಸಲಾಗಿದೆ. ಆದರೆ, ಇಲ್ಲೂ ಮೇಲ್ನೋಟಕ್ಕೆ ಕಾಣುವ ವ್ಯತ್ಯಾಸಗಳನ್ನು ಪ್ರಸ್ತಾ ಪಿಸಲಾಗಿದೆಯಲ್ಲದೆ, ಅವನ್ನು ವಿವರಿಸುವಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೇನೇ ಇರುವಂತಹ ವ್ಯತ್ಯಾಸಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ರೀತಿ, ಹಳೆಗನ್ನಡ ವ್ಯಾಕರಣಗಳು ಹಳೆಗನ್ನಡದವೇ ಆದ ವ್ಯಾಕರಣದ ಮೂಲತತ್ವಗಳನ್ನು ಗಮನಿಸುವಲ್ಲಿ, ಮತ್ತು ಅವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸೋತುಹೋಗಿವೆ ಎಂಬುದನ್ನು ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶವಾದ ಕಾರಣ, ಇದರಲ್ಲಿ ಮೊದಲಿಗೆ ವ್ಯಾಕರಣದ ಬೇರೆ ಬೇರೆ ಅಂಶಗಳಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ವಿವರಿಸಲಾಗಿದೆ.

ಅನಂತರ, ಅಂತಹ ಪ್ರತಿಯೊಂದು ವ್ಯಾಕರಣಾಂಶದ ಮಟ್ಟಿಗೂ ಹಳೆಗನ್ನಡ ವ್ಯಾಕರಣಗಳು ಹೇಗೆ ಈ ವ್ಯತ್ಯಾಸಗಳನ್ನು ಪರಿಗಣಿಸುವಲ್ಲಿ ಸೋತುಹೋಗಿವೆ, ಮತ್ತು ಇದರಿಂದಾಗಿ ಹೇಗೆ ಈ ವ್ಯಾಕರಣಗಳು ಹಳೆಗನ್ನಡ ವ್ಯಾಕರಣವನ್ನು ವಿವರಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂಬುದನ್ನು ತೋರಿಸಿಕೊಡಲಾಗಿದೆ.

ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ಕಾಣಿಸುವ ಇಂತಹ ಮೂಲಭೂತ ವ್ಯತ್ಯಾಸಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ.

(೧) ವ್ಯಕ್ತಿ, ವಸ್ತು ಮೊದಲಾದುವನ್ನು ವರ್ಣನೆಗಳ ಮೂಲಕ ಗುರುತಿಸುವುದಕ್ಕಾಗಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳು ತೀರ ಭಿನ್ನವಾದ ವ್ಯಾಕರಣ ವಿಧಾನಗಳನ್ನು ಬಳಸಿಕೊಳ್ಳುತ್ತವೆ. ಸಂಸ್ಕೃತದಲ್ಲಿ ಇದಕ್ಕಾಗಿ ಎರಡು ಅಥವಾ ಜಾಸ್ತಿ ನಾಮಪದಗಳನ್ನು ಒಂದೇ ವಿಭಕ್ತಿಯಲ್ಲಿರಿಸಿ ಬಳಸಲಾಗುತ್ತದೆ; ಆದರೆ ಹಳೆಗನ್ನಡದಲ್ಲಿ ನಾಮಪದಗಳೊಂದಿಗೆ ಗುಣಪದಗಳೆಂಬ ಬೇರೆಯೇ ಒಂದು ಪದವರ್ಗಕ್ಕೆ ಸೇರಿದ ಪದಗಳನ್ನು ಬಳಸಲಾಗುತ್ತದೆ. ಈ ಪದಗಳು ನಾಮಪದಗಳಿಂದ ಭಿನ್ನವಾದುವಾದ ಕಾರಣ, ಹಳೆಗನ್ನಡದಲ್ಲಿ ಅವು ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವುದಿಲ್ಲ (೪.೨ ನೋಡಿ).

(೨) ವ್ಯಕ್ತಿ, ವಸ್ತು ಮೊದಲಾದವುಗಳನ್ನು ಹೆಸರಿಸಿ ಗುರುತಿಸುವುದು ಮತ್ತು ವರ್ಣಿಸಿ ಗುರುತಿಸುವುದು ಎಂಬುದಾಗಿ ಎರಡು ರೀತಿಯ ಗುರುತಿಸುವ ವಿಧಾನಗಳು ಹೆಚ್ಚಿನ ಭಾಷೆಗಳಲ್ಲೂ ಬಳಕೆಯಲ್ಲಿವೆ. ಆದರೆ ಸಂಸ್ಕೃತದಂತಹ ಮಾತಿನ ಬಳಕೆ ತಪ್ಪಿ ಹೋಗಿ ಬರಿಯ ಗ್ರಾಂಥಿಕಗಳಾಗಿರುವ ಕೆಲವು ಭಾಷೆಗಳಲ್ಲಿ ಈ ವ್ಯತ್ಯಾಸ ಇಲ್ಲ ವಾಗಿದೆ. ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡ ಹಳೆಗನ್ನಡ ವೈಯಾಕರಣಿಗಳಿಗೆ ಈ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಗಿಲ್ಲ (೫.೨-೩ ನೋಡಿ).

(೩) ಎರಡು ಪದಗಳನ್ನು ಒಟ್ಟುಸೇರಿಸಿ ಹೊಸ ಪದವೊಂದನ್ನು ಉಂಟುಮಾಡುವ ಸಮಾಸ

ಲ ನಾಮ ಗುಣಪದ ಮತ್ತು ಕ್ರಿಯಾಪದಗಳೆಂಬ ಮೂರು ಬಗೆಯ ಪದಗಳನ್ನೂ ನಾಮಪದಗಳೊಂದಿಗೆ ಸೇರಿಸಿ ಇಂತಹ ಪದಗಳನ್ನು ಉಂಟುಮಾಡಲು ಬರುತ್ತದೆ; ಇದಕ್ಕೆ ಬದಲು, ಸಂಸ್ಕೃತದ ಸಮಾಸದಲ್ಲಿ ನಾಮಪದಗಳನ್ನು ಮಾತ್ರವೇ ಬೇರೊಂದು ನಾಮಪದದೊಂದಿಗೆ ಸೇರಿಸಲು ಬರುತ್ತದೆ. ಹಾಗಾಗಿ, ಈ ಎರಡು ಭಾಷೆಗಳಲ್ಲಿ ತೀರ ಬೇರೆ ಬೇರಾಗಿರುವ ಸಮಾಸಗಳು ಕಾಣಿಸಿಕೊಳ್ಳುತ್ತವೆ.

(೪) ಹಳೆಗನ್ನಡದ ಕ್ರಿಯಾಪದಗಳಿಗೆ ಗುಣಪದಗಳ ಜಾಗದಲ್ಲಿ ಬರುವ ರೂಪ, ಮತ್ತು ನಾಮಪದಗಳ ಜಾಗದಲ್ಲಿ ಬರುವ ರೂಪ ಎಂಬುದಾಗಿ ಎರಡು ಭಿನ್ನವಾದ ರೂಪಗಳಿವೆ. ಆದರೆ ಸಂಸ್ಕೃತದ ಕ್ರಿಯಾಪದಗಳಿಗೆ ನಾಮಪದಗಳ ಜಾಗದಲ್ಲಿ ಬರುವ ರೂಪಗಳು ಮಾತ್ರ ಇವೆ. ಇವಕ್ಕಿಂತ ಭಿನ್ನವಾದ ಗುಣಪದಗಳ ಜಾಗದಲ್ಲಿ ಬರುವ ರೂಪಗಳೆಂಬುದಿಲ್ಲ. ಸಂಸ್ಕೃತದಲ್ಲಿ ಗುಣಪದವೆಂಬ ವಿಶಿಷ್ಟವಾದ ಪದವರ್ಗವಿಲ್ಲ ದಿರುವುದೇ ಇದಕ್ಕೆ ಕಾರಣ (೬.೧ ನೋಡಿ).

(೫) ನಾಮಪದಗಳನ್ನು ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳೆರಡೂ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳೆಂಬ ಮೂರು ಲಿಂಗಗಳಲ್ಲಿ ವಿಂಗಡಿಸುತ್ತವೆ; ಆದರೆ, ಇದಕ್ಕಾಗಿ ಈ ಎರಡು ಭಾಷೆಗಳು ಬಳಸುವ ಆಧಾರ ಮಾತ್ರ ಬೇರೆ ಬೇರೆ. ಹಳೆಗನ್ನಡದಲ್ಲಿ ನಾಮಪದಗಳ ಅರ್ಥವೇ ಈ ವಿಭಜನೆಗೆ ಆಧಾರ; ಆದರೆ, ಸಂಸ್ಕೃತದಲ್ಲಿ ಅಂತಹ ನಿಶ್ಚಿತವಾದ ಆಧಾರವೇನೂ ಇಲ್ಲ. ಹಾಗಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ ನಾಮಪದಗಳ ವಿಭಜನೆಯನ್ನು ವಿವರಿಸುವುದಕ್ಕಾಗಿ ಬಹಳ ಕ್ಲಿಷ್ಟವಾದ ವಿಧಾನವೊಂದನ್ನು ಬಳಸಬೇಕಾಗಿದೆ. ಹಳೆಗನ್ನಡಕ್ಕೆ ಅಂತಹ ವಿಧಾನ ಬೇಕಾಗಿಲ್ಲ (೭.೨).

(೬) ನಾಮಪದಗಳಿಗೆ ವಚನ ಮತ್ತು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಕ್ರಮ ಈ ಎರಡು ಭಾಷೆಗಳಲ್ಲಿ ಭಿನ್ನವಾಗಿದೆ. ಹಳೆಗನ್ನಡದಲ್ಲಿ ಇವನ್ನು ಬೇರೆ ಬೇರೆ ಪ್ರತ್ಯಯಗಳು ಸೂಚಿಸುತ್ತ ವೆ; ಆದರೆ, ಸಂಸ್ಕೃತದಲ್ಲಿ ಒಂದೇ ಪ್ರತ್ಯಯ ಸೂಚಿಸುತ್ತದೆ. ಹಾಗಾಗಿ, ಸಂಸ್ಕೃತದಲ್ಲಿ ಏಕವಚನವನ್ನೂ ಪ್ರತ್ಯಯವೊಂದರ ಮೂಲಕ ಸೂಚಿಸಬೇಕಾಗುತ್ತದೆ, ಮತ್ತು ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಅವಶ್ಯವಿಲ್ಲ ದಲ್ಲೂ ವಚನವನ್ನು ಸೂಚಿಸುವುದಕ್ಕಾಗಿ ಅವನ್ನು ಬಳಸಬೇಕಾಗುತ್ತದೆ. ಹಳೆಗನ್ನಡದಲ್ಲಿ ಈ ಸಮಸ್ಯೆಯಿಲ್ಲ; ಹಾಗಾಗಿ ಅದರಲ್ಲಿ ವಿಭಕ್ತಿ ಮತ್ತು ವಚನ ಪ್ರತ್ಯಯಗಳನ್ನು ಅವಶ್ಯವಿರುವಲ್ಲಿ ಮಾತ್ರ ಬಳಸಿದರೆ ಸಾಕು (೭.೩).

(೭) ವಿಭಕ್ತಿ ಪ್ರತ್ಯಯಗಳ ಮೂಲಕ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳನ್ನು ಸೂಚಿಸುವ ಕ್ರಮವೂ ಈ ಎರಡು ಭಾಷೆಗಳಲ್ಲಿ ಬೇರೆ ಬೇರಾಗಿದೆ. ಹಳೆಗನ್ನಡದಲ್ಲಿ ಈ ಪ್ರತ್ಯಯಗಳಿಗೂ ಅವು ಸೂಚಿಸುವ ಸಂಬಂಧಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿದೆ, ಆದರೆ ಸಂಸ್ಕೃತದಲ್ಲಿ ಇಂತಹ ನೇರವಾದ ಹೊಂದಾಣಿಕೆಯಿಲ್ಲ. ಈ ಕಾರಣಕ್ಕಾಗಿ, ಸಂಸ್ಕೃತ ವ್ಯಾಕರಣದಲ್ಲಿ ಕಾರಕಗಳೆಂಬ ಕಲ್ಪಿತ ಘಟಕಗಳನ್ನು ಬಳಸುವ ಅವಶ್ಯಕತೆಯಿದೆ; ಆದರೆ, ಹಳೆಗನ್ನಡ ವ್ಯಾಕರಣದಲ್ಲಿ ಅಂತಹ ಕಲ್ಪಿತ ಘಟಕಗಳನ್ನು ಬಳಸಬೇಕಾಗಿಲ್ಲ (೮.೬).

(೮) ಕ್ರಿಯಾರೂಪಗಳಲ್ಲಿ ಸಮಯ ಮತ್ತು ಘಟಕಗಳನ್ನು ಸೂಚಿಸುವ ಕ್ರಮವೂ ಈ ಎರಡು ಭಾಷೆಗಳಲ್ಲಿ ಭಿನ್ನವಾಗಿದೆ. ಹಳೆಗನ್ನಡದಲ್ಲಿ ಸಮಯ ಸಂಬಂಧಕ್ಕೆ ಹೆಚ್ಚಿನ ಪ್ರಾಶಸ್ತ $ವನ್ನು ಕೊಡಲಾಗುತ್ತದೆಯಾದರೆ, ಸಂಸ್ಕೃತದಲ್ಲಿ ಸಮಯ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲಾಗುತ್ತದೆ.

ಇದಲ್ಲದೆ, ಹಳೆಗನ್ನಡದ ಕ್ರಿಯಾರೂಪಗಳೊಂದಿಗೆ ಸಮಯವನ್ನು ಸೂಚಿಸುವುದಕ್ಕಾಗಿ ವಿಶಿಷ್ಟವಾದ ಪ್ರ ತ್ಯಯಗಳನ್ನು ಬಳಸಲಾಗುತ್ತ ದೆ; ಆದರೆ, ಸಂಸ್ಕೃತದಲ್ಲಿ ಇದಕ್ಕಾಗಿ ಧಾತುಗಳಲ್ಲೇನೇ ಬದಲಾವಣೆಗಳನ್ನು ಮಾಡಲಾಗುತ್ತದೆ (೯.೨).

(೯) ಕ್ರಿಯಾರೂಪಗಳಲ್ಲಿ ಘಟಕಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳೂ ಈ ಎರಡು ಭಾಷೆಗಳಲ್ಲಿ ಬೇರೆ ಬೇರಾಗಿವೆ. ಹಳೆಗನ್ನಡದಲ್ಲಿ ಇವು ಘಟಕಗಳ ಪುರುಷ, ವಚನ

ಮತ್ತು ಲಿಂಗಗಳನ್ನು ಸೂಚಿಸಬಲ್ಲುವು; ಆದರೆ, ಸಂಸ್ಕೃತದಲ್ಲಿ ಪುರುಷ ಮತ್ತು ವಚನಗಳನ್ನು ಮಾತ್ರ ಸೂಚಿಸಬಲ್ಲುವು.

ಇದಲ್ಲದೆ, ಸಂಸ್ಕೃತದಲ್ಲಿ ಈ ಪ್ರತ್ಯಯಗಳು ಬೇರೆಯೂ ಕೆಲವು ವಿಷಯಗಳನ್ನು ಸೂಚಿಸಬಲ್ಲುವಾಗಿದ್ದು, ಹಳೆಗನ್ನಡದ ಪ್ರತ್ಯಯಗಳಿಂದ ಭಿನ್ನವಾಗಿವೆ (೯.೩).

(೧೦) ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಜೋಡಿಸಿ ಹೇಳುವ ಕ್ರಮದಲ್ಲಿ (೧೦.೧), ಮತ್ತು ಇಂತಹ ಬೇರೆಯೂ ಹಲವಾರು ವ್ಯಾಕರಣಾಂಶಗಳಲ್ಲಿ ಸಂಸ್ಕೃತಕ್ಕೂ ಮತ್ತು ಹಳೆಗನ್ನಡಕ್ಕೂ ನಡುವೆ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ.

ಇವೆಲ್ಲವೂ ವ್ಯಾಕರಣದ ಮೂಲತತ್ವಗಳಲ್ಲೇನೇ ಕಾಣಿಸಿಕೊಳ್ಳುವಂತಹ ವ್ಯತ್ಯಾಸಗಳು; ಇವನ್ನು ಗಮನದಲ್ಲಿ ರಿಸಿಕೊಳ್ಳದೆ, ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು ಬರೆದಿರುವ ಹಳೆಗನ್ನಡದ ಪ್ರಾಚೀನ ವ್ಯಾಕರಣಗಳು ಹೇಗೆ ಅಡಿಗಡಿಗೂ ಸಮಸ್ಯೆಗಳನ್ನೆದುರಿಸಬೇಕಾಗುತ್ತ ದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಮೇಲೆ ವಿವರಿಸಿದಂತಹ ಹಲವು ಕಾರಣಗಳಿಂದಾಗಿ, ಇದುವರೆಗೆ ಹಳೆಗನ್ನಡದ ಮೇಲೆ ಸಿದ್ದ ವಾಗಿರುವ ವ್ಯಾಕರಣಗಳೆಲ್ಲ ವೂ ಸರಿಯಾದ ಅಡಿಪಾಯವಿಲ್ಲದ ಕಟ್ಟಡಗಳಂತಿವೆ. ಎಷ್ಟೇ ಅಂದವಾಗಿ ಕಟ್ಟಿರಲಿ, ಅವುಗಳ ಅಡಿಪಾಯ ಸರಿಯಿಲ್ಲವಾದ ಕಾರಣ, ವಿಮರ್ಶೆಗೆ ಒಳಪಡಿಸಿದೊಡನೆಯೇ ಅವು ಬಹಳ ಸುಲಭವಾಗಿ ಕುಸಿದುಹೋಗುತ್ತವೆ.