← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೪ — ಪದವರ್ಗಗಳು

↑ ಒಳಪಿಡಿಗೆ ಹಿಂತಿರುಗಿ


ಪದವರ್ಗಗಳು

Eke →

೪.೧ ಪದಗಳಲ್ಲಿ ವೈವಿಧ್ಯ

ಒಂದು ಭಾಷೆಯಲ್ಲಿ ಎಂತಹ ಪದಗಳೆಲ್ಲ ಬಳಕೆಯಾಗುತ್ತವೆ ಎಂಬುದು ಪದಕಂತೆಗಳನ್ನು ಮತ್ತು ವಾಕ್ಯಗಳನ್ನು ರಚಿಸುವುದಕ್ಕಾಗಿ ಆ ಭಾಷೆಯಲ್ಲಿ ಎಂತಹ ವಿಧಾನಗಳನ್ನು ಬಳಸಲಾಗುತ್ತ ದೆ ಎಂಬುದನ್ನವಲಂಬಿಸಿದೆ. ಈ ವಿಧಾನಗಳು ಬೇರೆ ಬೇರೆ ಭಾಷಾಕುಟುಂಬಗಳಲ್ಲಿ ಬೇರೆ ಬೇರೆಯಾಗಿರಲು ಸಾಧ್ಯವಿದೆಯಾದ ಕಾರಣ, ಎರಡು ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳಲ್ಲಿ ಬಳಕೆಯಾಗುವ ಪದಗಳು ಒಂದೇ ತೆರನಾಗಿರಬೇಕಾಗಿಲ್ಲ.

ಕ್ರಿಯಾಪದ ಮತ್ತು ನಾಮಪದ ಎಂಬುದಾಗಿ ಎರಡು ರೀತಿಯ ಪದಗಳು ಹೆಚ್ಚಿನ ಭಾಷೆಗಳಲ್ಲೂ ಬಳಕೆಯಾಗುತ್ತವೆ (ಮುಂಡಾರಿಯಂತಹ ಕೆಲವು ಭಾಷೆಗಳು ಇದಕ್ಕೂ ಅಪವಾದಗಳಾಗಿದ್ದು, ಅವುಗಳಲ್ಲಿ ಒಂದು ಪದವರ್ಗಕ್ಕೆ ಸೇರುವ ಪದಗಳು ಮಾತ್ರ ಬಳಕೆಯಲ್ಲಿವೆ). ಸಾಮಾನ್ಯವಾಗಿ, ವಾಕ್ಯವೊಂದರಲ್ಲಿ ಬರುವ ಕ್ರಿಯಾಪದಗಳು ಒಂದು ಘಟನೆಯನ್ನೂ ನಾಮಪದಗಳು ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನೂ ಸೂಚಿಸುತ್ತವೆಯೆಂದು

ಬ್ರಿ?

ಹೇಳಬಹುದು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹಳೆಗನ್ನಡ ವಾಕ್ಯವನ್ನು ಗಮನಿಸಬಹುದು. (೧ಕ) ಅರಸಂ ಪಾರ್ವಂಗೆ ಗೋವಂ ಕೊಟ್ಟಂ

(೧ಕ) ವಾಕ್ಯದಲ್ಲಿ ಅರಸಂ, ಪಾರ್ವಂ ಮತ್ತು ಗೋವು ಎಂಬ ಮೂರು ನಾಮಪದಗಳು ಮತ್ತು ಕುಡು (ಕೊಟ್‌) ಎಂಬ ಒಂದು ಕ್ರಿಯಾಪದ ಬಂದಿವೆ. ಇವುಗಳಲ್ಲಿ ಕ್ರಿಯಾಪದವು ಒಂದು ಘಟನೆಯನ್ನೂ ನಾಮಪದಗಳು ಆ ಘಟನೆಯಲ್ಲಿ ತೊಡಗಿರುವ ಇಬ್ಬರು ವ್ಯಕ್ತಿಗಳು ಮತ್ತು ಒಂದು ಪ್ರಾಣಿಯನ್ನೂ ಸೂಚಿಸುತ್ತವೆ.

ಹಳೆಗನ್ನಡದ ಹಾಗೆ, ಸಂಸ್ಕೃತದಲ್ಲೂ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ರೀತಿಯ ಪದಗಳು ಬಳಕೆಯಾಗುವುದನ್ನು ಕಾಣಬಹುದು. ಉದಾಹರಣೆಗಾಗಿ, ರಾಮಃ ಗೃಹೇ ರೋದಿತಿ “ರಾಮನು ಮನೆಯಲ್ಲಿ ಅಳುತ್ತಿದ್ದಾನೆ’ ಎಂಬ ವಾಕ್ಯದಲ್ಲಿ ರಾಮ ಮತ್ತು ಗೃಹ ಎಂಬ ಎರಡು ನಾಮಪದಗಳು ಮತ್ತು ರುದ್‌ ಎಂಬ ಒಂದು ಕ್ರಿಯಾಪದ ಬಳಕೆಯಾಗಿವೆ.

ಹಳೆಗನ್ನಡದಲ್ಲಿ ಈ ಎರಡು ರೀತಿಯ ಪದಗಳು ಮಾತ್ರವಲ್ಲದೆ, “ಗುಣಪದ’ವೆಂಬ ಅವೆರಡಕ್ಕಿಂತ ಭಿನ್ನವಾದ ಪದವರ್ಗಕ್ಕೆ ಸೇರುವ ಪದಗಳೂ ಬಳಕೆಯಲ್ಲಿವೆ. ಉದಾಹರಣೆಗಾಗಿ, ಹಳೆಗನ್ನಡದ ಪೊಸ, ಬೆಳ್‌, ತೆಳ್‌, ಕಿ೫ ಮೊದಲಾದ ಪದಗಳು ಹಲವು ವಿಷಯಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳಿಗಿಂತ ಭಿನ್ನವಾಗಿವೆಯಾದ ಕಾರಣ, ಅವನ್ನು ಈ ಎರಡು ವರ್ಗಗಳಿಂದ ಭಿನ್ನವಾದ ಗುಣಪದವೆಂಬ ಮೂರನೆಯ ಪದವರ್ಗದಲ್ಲಿ ಸೇರಿಸಿ ಹೇಳಬೇಕಾಗುತ್ತದೆ.

ಆದರೆ, ಇಂತಹ ಮೂರನೆಯದೊಂದು ಪದವರ್ಗಕ್ಕೆ ಸೇರಬಲ್ಲ ಪದಗಳು ಸಂಸ್ಕೃತದಲ್ಲಿ ಲ್ಲ.

ಹಳೆಗನ್ನಡದ ಗುಣಪದಗಳಿಗೆ ಸಮಾನವಾದ ಕೃಶ, ಪೃಥು, ಮೃದು, ಶುಕ್ಲ, ಗುರು ಮೊದಲಾದ ಪದಗಳು ಸಂಸ್ಕೃತದಲ್ಲಿ ನಾಮಪದವರ್ಗ ದಲ್ಲೇನೇ ಬರುತ್ತವೆ. ಇದು ಹಳೆಗನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಒಂದು ಮುಖ್ಯವಾದ ವ್ಯತ್ಯಾಸ. ಈ ಎರಡು ಭಾಷೆಗಳು ನಾಮಪದಕಂತೆಗಳನ್ನು ತಯಾರಿಸಿಕೊಳ್ಳುವ ಕ್ರಮ ಹೇಗೆ ಎಂಬುದನ್ನು ಪರಿಶೀಲಿಸಿದಾಗ, ಇವುಗಳ ನಡುವೆ ಈ ವ್ಯತ್ಯಾಸ ಯಾಕೆ ಮೂಡಿಬಂದಿದೆ ಎಂಬುದು ಸ್ಪಷ್ಟವಾಗುತ್ತದೆ (೪.೨ ನೋಡಿ).

Eke →

೪.೨ ನಾಮಪದಕಂತೆಗಳ ರಚನೆ

ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ, ಹೆಚ್ಚಿ: ನ ಭಾಷೆಗಳಲ್ಲೂ ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ವಿಧಾನಗಳು ಬಳಕೆ ಯಾಗುತ್ತವೆ (ಭಟ್‌ ೨೦೦೨:೮೦ ನೋಡಿ). ಸಾಮಾನ್ಯವಾಗಿ, ಹೆಸರಿಸುವುದಕ್ಕಾಗಿ ನಾಮಪದಗಳು (ರೂಢನಾಮಗಳು ಇಲ್ಲವೇ ಅಂಕಿತನಾಮಗಳು) ಬಳಕೆಯಾಗುತ್ತವೆ, ಮತ್ತು ವರ್ಣಿಸುವುದಕ್ಕಾಗಿ ನಾಮಪದಕಂತೆಗಳು ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (೧ಕ) ವಾಕ್ಯದಲ್ಲಿ ಅರಸಂ, ಪಾರ್ವಂ ಮತ್ತು ಗೋವು ಎಂಬ ಮೂರು ನಾಮಪದಗಳನ್ನು ಬಳಸಲಾಗಿದ್ದು, ಅವು ಹೆಸರಿಸುವ ವಿಧಾನದ ಮೂಲಕ ಇಬ್ಬರು ವ್ಯಕ್ತಿಗಳನ್ನು ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ.

ಕೆಳಗೆ ಕೊಟ್ಟಿರುವ (೧ಖ) ವಾಕ್ಯದಲ್ಲಿ ಪಾರ್ವಂ ನಾಮಪದದ ಬದಲು ಬಡ ಪಾರ್ವಂ ಎಂಬ ನಾಮಪದಕಂತೆಯನ್ನು ಬಳಸಲಾಗಿದ್ದು, ಇದು ವರ್ಣಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ.

(೧ಖ) ಅರಸಂ ಬಡ ಪಾರ್ವಂಗೆ ಗೋವಂ ಕೊಟ್ಟಂ

ಬಡ ಪಾರ್ವಂ ಎಂಬ ಈ ನಾಮಪದಕಂತೆಯಲ್ಲೂ ಪಾರ್ವಂ ಎಂಬ ಆ ವ್ಯಕ್ತಿಯ “ಹೆಸರು’ (ರೂಢನಾಮ) ಬಂದಿದೆಯೇನೋ ನಿಜ; ಆದರೆ, ಅದು ಆ ವ್ಯಕ್ತಿಯನ್ನು ನೇರವಾಗಿ ಗುರುತಿಸುವ ಬದಲು, ಹಾಗೆ ಗುರುತಿಸುವುದಕ್ಕಾಗಿ ಬಳಕೆಯಾಗಿರುವ ಒಂದು ವರ್ಣನೆಯ ಅಂಗವಾಗಿ ಬಂದಿದೆ.

ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಈ ರೀತಿ ವರ್ಣನೆಯ ಮೂಲಕಗುರುತಿಸುವುದಕ್ಕಾಗಿ ಬಳಕೆಯಾಗುವ ಪದಕಂತೆಗಳನ್ನು ಬೇರೆ ಬೇರೆ ಭಾಷೆಗಳು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತವೆ. ಈ ವಿಷಯದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಈ ವ್ಯತ್ಯಾಸಕ್ಕೆ ಇಂತಹ ಪದಕಂತೆಗಳ ರಚನೆಗಾಗಿ ಇವೆರಡು ಭಾಷೆಗಳು ಎರಡು ತೀರ ಭಿನ್ನವಾದ ವ್ಯಾಕರಣದ ಮೂಲತತ್ವಗಳನ್ನು ಬಳಸುವುದೇ ಕಾರಣ.

ಹಳೆಗನ್ನಡದ ಪದಕಂತೆಗಳಲ್ಲೆಲ್ಲ ಸಾಮಾನ್ಯವಾಗಿ ಒಂದು ಪ್ರಧಾನಪದ ಮತ್ತು ಒಂದು ಅಥವಾ ಜಾಸ್ತಿ ಆ ಪದಕ್ಕೆ ಸಹಾಯಕವಾಗಿರುವ ಪದಗಳು ಇರುತ್ತವೆ. ಇವುಗಳಲ್ಲಿ ಪ್ರಧಾನಪದ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಹೆಸರಿಸುತ್ತದೆ, ಮತ್ತು ಸಹಾಯಕ ಪದ ಆ ವ್ಯಕ್ತಿ ಇಲ್ಲವೇ

ಗಿ

2

ವಸ್ತುವಿನ ಗುಣಧರ್ಮವೊಂದನ್ನು ಸೂಚಿಸುವ ಮೂಲಕ ಅದನ್ನು ಗುರುತಿಸುವ ಕೆಲಸ ಸುಲಭವಾಗುವಂತೆ ಮಾಡುತ್ತದೆ. ಉದಾಹರಣೆಗಾಗಿ, ಮೇಲೆ ಕೊಟ್ಟಿರುವ ಬಡ ಪಾರ್ವಂ ಪದಕಂತೆಯ

ಲ್ಲ ಎ7 ಪ್‌ ವಾ ಕ ತಾ ಮು ಸ್‌್‌ಸಣ ಸಾತ ಣಿ. ಇ%್ಶ್‌ೆ ಎಂಬುದು ಪ್ರಧಾನ ಪದವಾಗಿದ್ದು, ಅದು ಒಬ್ಬ ವ್ಯಕ್ತಿಯನ್ನು ಹಸರಿಸುತ್ತದ, ಮ

ಎಂಬುದು ಸಹಾಯಕ ಪದವಾಗಿದ್ದು, ಆ ವ್ಯಕ್ತಿಯ ಗುಣಧರ್ಮವೊಂದನ್ನು (“ಆ ವ್ಯಕ್ತಿ ಬಡವ’ ಎಂಬುದನ್ನು) ಸೂಚಿಸುವ ಮೂಲಕ, ಆತನನ್ನು ಗುರುತಿಸುವ ಕೆಲಸ ಸುಲಭವಾಗುವಂತೆ ಮಾಡುತ್ತ ದೆ.

ಈ ಕಾರಣಕ್ಕಾಗಿ, ಹಳೆಗನ್ನಡಕ್ಕೆ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಹೆಸರಿಸುವುದಕ್ಕಾಗಿ ಬಳಕೆಯಾಗುವ “ನಾಮಪದ’ಗಳು ಮಾತ್ರವಲ್ಲದೆ, ಅವುಗಳ ಗುಣಧರ್ಮಗಳನ್ನಷ್ಟೇ ಸೂಚಿಸುವುದಕ್ಕಾಗಿ ಬಳಕೆಯಾಗುವ “ಗುಣಪದ’ಗಳೂ ಬೇಕಾಗುತ್ತವೆ. ಹಾಗಾಗಿ, ಹಳೆಗನ್ನಡದಲ್ಲಿ ನಾಮಪದ ಮತ್ತು ಗುಣಪದಗಳೆಂಬ ಎರಡು ವರ್ಗಗಳಿಗೆ ಸೇರುವ ಪದಗಳು ಕಾಣಿಸಿಕೊಳ್ಳುತ್ತವೆ.

ಸಂಸ್ಕೃತದಲ್ಲಿ ನಾಮಪದಕಂತೆಗಳನ್ನು ತಯಾರಿಸುವುದಕ್ಕಾಗಿ ಇದಕ್ಕಿಂತ ತೀರ ಭಿನ್ನವಾದ ವಿಧಾನವೊಂದು ಬಳಕೆಯಲ್ಲಿದೆ. ಈ ವಿಧಾನದ ಬಳಕೆಯಲ್ಲಿ ಆ ಭಾಷೆಗೆ “ನಾಮಪದ’ವೆಂಬ ಒಂದು ಪದವರ್ಗಕ್ಕೆ ಸೇರುವ ಪದಗಳು ಮಾತ್ರ ಬೇಕಾಗುತ್ತ ವೆ; “ಗುಣಪದ’ವೆಂಬ ಇನ್ನೊಂದು ಪದವರ್ಗಕ್ಕೆ ಸೇರುವ ಪದಗಳ ಅವಶ್ಯಕತೆ ಉಂಟಾಗುವುದಿಲ್ಲ. ಹಾಗಾಗಿ, ಅಂತಹ ಪದಗಳು ಆ ಭಾಷೆಯಲ್ಲಿ ಕಾಣಿಸುವುದೂ ಇಲ್ಲ.

ಸಂಸ್ಕೃತದ ನಾಮಪದಕಂತೆಗಳಲ್ಲಿ ಬರುವ ಪದಗಳಲ್ಲಿ ಹೆಚ್ಚಿನವೂ ಪ್ರಧಾನ ಪದಗಳೇ ಆಗಿದ್ದು, ಆ ಪದಗಳಲ್ಲಿ ಪ್ರತಿಯೊಂದೂ ಸ್ವತಂತ್ರವಾಗಿ ಮತ್ತು ಬೇರೆ ಬೇರಾಗಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ; ಆದರೆ, ಒಂದು ಪದಕಂತೆಯ ಅಂಗಗಳಾಗಿ ಬರುವಾಗ ಈ ಪದಗಳೆಲ್ಲವೂ ಒಂದೇ ಲಿಂಗ-ವಚನ-ವಿಭಕ್ತಿಗಳಲ್ಲಿರುತ್ತವೆ; ಹಾಗಾಗಿ, ಆ ಪದಕಂತೆಯಲ್ಲಿ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವು ಬೇರೆ ಬೇರಲ್ಲ, ಒಂದೇ ವ್ಯಕ್ತಿ ಇಲ್ಲವೇ ವಸ್ತು ಎಂಬ ಅರ್ಥ ದೊರಕುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯವನ್ನು ಗಮನಿಸಬಹುದು:

(೨ಕ) ಹರಿ: ಏಕಂ ಕೃಷ್ಣಂ ಸರ್ಪಂ ಅಪಶ್ಯತ್‌ “ಹರಿ ಒಂದು ಕಪ್ಪು ಹಾವನ್ನು ನೋಡಿದ’

ಈ (೨5) ವಾಕ್ಯದಲ್ಲಿ ಏಕಂ ಕೃಷ್ಣಂ ಸರ್ಪಂ ಎಂಬ ಪದಕಂತೆ ಬಂದಿದೆ. ಈ ಪದಕಂತೆಯಲ್ಲಿ ಏಕಂ, ಕೃಷ್ಣಂ ಮತ್ತು ಸರ್ಪಂ ಎಂಬ ಮೂರು ಪದಗಳಿವೆ. ಈ ಮೂರು ಪದಗಳೂ ಸ್ವತಂತ್ರವಾಗಿ ಮೂರು ಬೇರೆ ಬೇರೆ ವ್ಯಕ್ತಿ, ಪ್ರಾಣಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲುವು. ಆದರೆ, ಮೇಲಿನ ವಾಕ್ಯದಲ್ಲಿ ಅವೆಲ್ಲವೂ ಒಂದೇ ಲಿಂಗ-ವಚನ-ವಿಭಕ್ತಿಯಲ್ಲಿ ಬಂದಿವೆಯಾದ ಕಾರಣ, ಅವೆಲ್ಲವೂ ಒಟ್ಟಾಗಿ ಒಂದೇ ಪ್ರಾ ಣಿಯನ್ನು ಬೇರೆ ಬೇರೆ ರೀತಿಯಲ್ಲಿ (ಎಂದರೆ, ಅದು ಒಂದಾಗಿರುವ ಪ್ರಾಣಿಯೆಂದು, ಕಪ್ಪಾಗಿರುವ ಪ್ರಾಣಿಯೆಂದು, ಮತ್ತು ಹಾವಾಗಿರುವ ಪ್ರಾಣಿಯೆಂದು) ಗುರುತಿಸುತ್ತವೆ.

ಸಂಸ್ಕೃತದಲ್ಲಿ ಏಕಂ, ಕೃಷ್ಣಂ ಮತ್ತು ಸರ್ಪಂ ಎಂಬ ಈ ಮೂರು ಪದಗಳು ಸ್ವತಂತ್ರವಾಗಿ ಮೂರು ಬೇರೆ ಬೇರೆ ವ್ಯಕ್ತಿ, ಪ್ರಾಣಿ ಇಲ್ಲವೇ ವಸ್ತು ವನ್ನು ಗುರುತಿಸಬಲ್ಲುವು ಎಂಬುದನ್ನು ಕೆಳಗಿನ ವಾಕ್ಯಗಳು ಸ್ಪಷ್ಟಪಡಿಸುತ್ತವೆ.

(೨ಖ) ಹರಿ: ಏಕಂ ಅಪಶ್ಯತ್‌

“ಹರಿ ಒಂದನ್ನು (ಅಥವಾ ಒಬ್ಬನನ್ನು) ನೋಡಿದ’

(೨ಗ) ಹರಿ: ಕೃಷ್ಣಂ ಅಪಶ್ಯತ್‌

“ಹರಿ ಕಪ್ಪಿನದನ್ನು (ಅಥವಾ ಕಪ್ಪಿನವನನ್ನು) ನೋಡಿದ’

(೨ಘು ಹರಿ: ಸರ್ಪಂ ಅಪಶ್ಯತ್‌ “ಹರಿ ಹಾವನ್ನು ನೋಡಿದ’ (೨ಖ-ಘ) ವಾಕ್ಯಗಳಲ್ಲಿ ಏಕಂ, ಕೃಷ್ಣಂ ಮತ್ತು ಸರ್ಪಂ ಎಂಬ ಮೂರು ಪದಗಳು

ಸ್ವತಂತ್ರವಾಗಿ ಮೂರು ಬೇರೆ ಬೇರೆ ವ್ಯಕ್ತಿ, ವಸ್ತು ಇಲ್ಲವೇ ಪ್ರಾಣಿಗಳನ್ನು ಗುರುತಿಸಲು ಶಕ್ತವಾಗಿವೆ.

(೨ಕ) ವಾಕ್ಯದಲ್ಲಿ ಬಂದಿರುವ ಪದಕಂತೆಯಲ್ಲಿ ಈ ಮೂರು ಪದಗಳೂ ಒಂದೇ ಲಿಂಗ- ವಚನ-ವಿಭಕ್ತಿಯಲ್ಲಿ (ಎಂದರೆ ಪುಲ್ಲಿಂಗ-ಏಕವಚನ-ದ್ವಿತೀಯಾ ವಿಭಕ್ತಿಯಲ್ಲಿ) ಬಂದಿವೆಯಾದ ಕಾರಣ, ಅವುಗಳ ಮೂಲಕ ಒಂದೇ ಪ್ರಾಣಿಯನ್ನು (“ಒಂದು ಕಪ್ಪು ಹಾವ’ನ್ನು) ಗುರುತಿಸಲು ಸಾಧ್ಯವಾಗಿದೆ.

ಹಳೆಗನ್ನಡದ ಪದಕಂತೆಗಳಲ್ಲಿ ಬರುವ ಪದಗಳಲ್ಲಿ ಪ್ರಧಾನ ಪದವೊಂದನ್ನು ಬಿಟ್ಟು ಉಳಿದ ಪದಗಳಿಗೆ ಈ ರೀತಿ ಸ್ವತಂತ್ರವಾಗಿ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ಶಕ್ತಿಯಿಲ್ಲ. ಅವು ಗುಣಧರ್ಮವೊಂದನ್ನು ಮಾತ್ರವೇ ಸೂಚಿಸಲು ಶಕ್ತವಾಗಿದ್ದು, ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸಬಲ್ಲ ಪ್ರಧಾನ ಪದವೊಂದರೊಂದಿಗೆ ಸಹಾಯಕ ಪದಗಳಾಗಿ ಮಾತ್ರ ಬಳಕೆಯಾಗಬಲ್ಲುವು.

ಉದಾಹರಣೆಗಾಗಿ, ಬಡ ಪಾರ್ವಂ ಪದಕಂತೆಯಲ್ಲಿ ಬಂದಿರುವ ಬಡ ಎಂಬ ಪದ ಸ್ವತಂತ್ರವಾಗಿ ವ್ಯಕ್ತಿಯೊಬ್ಬನನ್ನು ಗುರುತಿಸಲಾರದು. ವ್ಯಕ್ತಿಯ ಗುಣಧರ್ಮವೊಂದನ್ನು ಸೂಚಿಸುವ ಕೆಲಸವನ್ನು ಮಾತ್ರವೇ ಅದು ಮಾಡಬಲ್ಲುದಾಗಿದ್ದು, ಪಾರ್ವಂ ಪದದ ಹಾಗಿರುವ ಒಂದು ಪ್ರಧಾನ ಪದ(ನಾಮಪದ)ದೊಂದಿಗೆ ಮಾತ್ರ ಅದು ವಾಕ್ಯದಲ್ಲಿ ಬಳಕೆಯಾಗಬಲ್ಲುದು. ಸ್ವತಂತ್ರವಾಗಿ ವ್ಯಕ್ತಿ ಯೊಬ್ಬನನ್ನು ಗುರುತಿಸಬೇಕಿದ್ದ ಲ್ಲಿ, ಅದನ್ನು ಬಡವನ್‌ ಎಂಬಂತಹ ನಾಮಪದವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಗುಣಧರ್ಮವನ್ನು ಸೂಚಿಸುವ ಪದಗಳಲ್ಲಿ ಹೆಚ್ಚಿನವುಗಳಿಗೂ ಹಳೆಗನ್ನಡದಲ್ಲಿ ಪ್ರಧಾನ (ನಾಮರೂಪ) ಮತ್ತು ಅಪ್ರಧಾನ (ಗುಣರೂಪ) ಎಂಬುದಾಗಿ ಎರಡೆರಡು ರೂಪಗಳಿರುತ್ತವೆ.

ಗುಣರೂಪ ನಾಮರೂಪ (೩ಕ) ಪೊಸ ಪೊಸತು ಕೆಅು ಕಿಜುದು ಕರ್‌ ಕರಿದು ಪೆರ್‌ ಪಿರಿದು (೩ಖ) ಬಡ ಬಡವನ್‌ ಚೆನ್ನ ಚೆನ್ನಿಗನ್‌ ಎಳೆ ಎಳೆಯನ್‌ ನಲ್‌ ನಲ್ಲನ್‌

ವ್ಯಕ್ತಿ, ವಸ್ತು ಮೊದಲಾದವುಗಳ ಲಿಂಗ-ವಚನಗಳನ್ನು ಸೂಚಿಸುವ ತು (ದು), ಅನ್‌, ಅಳ್‌,

ಅರ್‌, ಅವು ಪ್ರತ್ಯಯಗಳನ್ನು ಗುಣಪದಗಳಿಗೆ ಸೇರಿಸುವ ಮೂಲಕ ಈ ನಾಮರೂಪಗಳನ್ನು

ತಯಾರಿಸಲಾಗುತ್ತ ದೆ.

ಆದರೆ, ಸಂಸ್ಕೃತದಲ್ಲಿ ಇಂತಹ ಪದಗಳಿಗೆಲ್ಲ ನಾಮರೂಪ ಮಾತ್ರ ಇರುತ್ತ ದೆ (ಎಂದರೆ ಅವೆಲ್ಲವೂ ನಾಮಪದಗಳೇ). ಸಮಸ್ತಪದಗಳಲ್ಲಿ ಇಂತಹ ನಾಮಪದಗಳಿಗೆ ಸಂಕ್ಷಿಪ್ತ ರೂಪಗಳಿರುವುದು ನಿಜವಾದರೂ, ಅವನ್ನು ಕನ್ನಡದಲ್ಲಿ ರುವ ಹಾಗೆ, ಗುಣರೂಪಗಳೆಂದು ಪರಿಗಣಿಸಲು ಸಾಧ್ಯವಾಗದು. ಯಾಕೆಂದರೆ, ಸಂಸ್ಕೃತದಲ್ಲಿ ಅಂತಹ ಸಂಕ್ಟಿಪ್ತ ರೂಪಗಳು ಇತರ ನಾಮಪದಗಳಿಗೂ ಇವೆ.

ಪದಕಂತೆ ಸಮಸ್ತಪದ (೪ಕ) ಕೃಷ್ಣ : ಸರ್ಪ: ಕೃಷ್ಣ ಸರ್ಪ: ಕೃಷ್ಣಾ ಮಾಲಾ ಕೃಷ್ಣಮಾಲಾ ಕೃಷ್ಣ ೦ ಮಧು ಕೃಷ್ಣ ಮಧು (೪ಖ) ಮೃತ್ತಿಕ: ಘಟ: ಮೃತ್ತಿಕಘಟ: ಮೃತ್ತಿಕಾ ಸ್ತ್ರೀ ಮೃತ್ತಿ ಕಸ್ತ್ರಿ/

ಹಳೆಗನ್ನಡದ ಗುಣಪದಗಳೊಂದಿಗೆ ಬರುವ ದು, ಅನ್‌, ಅಳ್‌ ಮೊದಲಾದ ಲಿಂಗ-ವಚನ ಪ್ರತ್ಯಯಗಳನ್ನು ಸಂಸ್ಕೃತದ ಪದಕಂತೆಗಳಲ್ಲಿ ಇಂತಹವೇ ಪದಗಳೊಂದಿಗೆ ಬರುವ ಲಿಂಗ- ವಚನ-ವಿಭಕ್ತಿ ಪ್ರತ್ಯಯಗಳೊಂದಿಗೆ ಹೋಲಿಸುವುದು ಸರಿಯಲ್ಲ. ಯಾಕೆಂದರೆ, ಹಳೆಗನ್ನಡದಲ್ಲಿ ಈ ಪ್ರತ್ಯಯಗಳೊಂದಿಗೆ ಬರುವ ಗುಣಪದಗಳು ಪದಕಂತೆಗಳಲ್ಲಿ ಒಂದು ಪ್ರಧಾನ ಪದವಾಗಿ ಮಾತ್ರ ಬರಬಲ್ಲುವು.

ಉದಾಹರಣೆಗಾಗಿ, ಮೇಲೆ ಕೊಟ್ಟಿರುವ ಬಡವನ್‌ ಎಂಬ ರೂಪ ಪದಕಂತೆಯೊಂದರಲ್ಲಿ ಪ್ರಧಾನಪದವಾಗಿ ಮಾತ್ರ ಬರಬಲ್ಲುದಲ್ಲದೆ, ಬೇರೊಂದು ನಾಮಪದದೊಂದಿಗೆ ಬರಲಾರದು. ಬಡವನ್‌ ಪಾರ್ವನ್‌ ಅಥವಾ ಪಾರ್ವನ್‌ ಬಡವನ್‌ ಎಂದು ಹೇಳಿದಲ್ಲಿ ಅದು ಪದಕಂತೆಯಾಗಿ ಉಳಿಯದೆ, ಒಂದು ವಾಕ್ಯವಾಗಿಬಿಡುತ್ತದೆ.

೪.೨.೧ ಹಳೆಗನ್ನಡದ ವಿಸ್ತೃತ ಬಳಕೆಗಳು

ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಅವುಗಳದೇ ಅದ (ಎಂದರೆ “ಸಹಜ’ವಾದ) ಬಳಕೆಗಳಿದ್ದು, ಆ ಬಳಕೆಗಳಲ್ಲಿ ಅವಕ್ಕೆ ಯಾವ ಪ್ರತ್ಯಯದ ಸಹಾಯವೂ ಬೇಕಾಗುವುದಿಲ್ಲ. ನೇರವಾಗಿ ಅವುಗಳ ಕಾರ್ಯಕ್ಕೆ ಸಂಬಂಧಿಸಿದ ಪ್ರತ್ಯಯಗಳನ್ನು ಅವುಗಳೊಂದಿಗೆ ಬಳಸಬಹುದು. ಆದರೆ, ಅವನ್ನು ಬೇರೆ ಜಾಗಗಳಲ್ಲಿ ಬಳಸಬೇಕಿದ್ದಲ್ಲಿ, ಅದಕ್ಕಾಗಿ ಅವಕ್ಕೆ ಕೆಲವು ವಿಶಿಷ್ಟವಾದ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ.

(ಕ) ಗುಣಪದಗಳ ಜಾಗ: ನಾಮಪದಗಳನ್ನು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದ ಕಂತೆಯೊಂದರ ಅಪ್ರಧಾನ ಪದವಾಗಿ) ಬಳಸಲು ಸಾಧ್ಯವಿದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಅವನ್ನು ನಾಮಪದಗಳೊಂದಿಗೆ ಸಂಬಂಧಿಸುವಂತಹ ಅ ಪ್ರತ್ಯಯವನ್ನು ಅವಕ್ಕೆ ಸೇರಿಸಬೇಕಾಗುತ್ತದೆ.

ಕೊಳನ್‌ ಕೊಳನ ತಡಿ ಬಿಲ್‌ ಬಿಲ್ಲ ಗೊಲೆ ಕೋಂಟೆ ಕೋಂಟೆಯ ಚೆಲ್ಪು

ತುಂಬಿ ತುಂಬಿಯ ಬಂಬಲ್ಲಳ್‌

ಮೇಲೆ ಕೊಳ, ಬಿಲ್‌, ಕೋಂಟೆ, ಮತ್ತು ತುಂಬಿ ನಾಮಪದಗಳನ್ನು ತಡಿ, ಗೊಲೆ, ಚೆಲ್ವು ಮತ್ತು ಬಂಬಲ್ಲಳ್‌ ನಾಮಪದಗಳೊಂದಿಗೆ ಬಳಸುವುದಕ್ಕಾಗಿ, ಅವಕ್ಕೆ ಅ ಪ್ರತ್ಯಯವನ್ನು ಸೇರಿಸಬೇಕಾಗಿದೆ.

ಇದೇ ರೀತಿಯಲ್ಲಿ, ಕ್ರಿಯಾಪದಗಳನ್ನೂ ಗುಣಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ, ಮತ್ತು ಇದಕ್ಕಾಗಿಯೂ ಅವಕ್ಕೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ಆದರೆ, ಈ ಪ್ರತ್ಯಯವನ್ನು ಸೇರಿಸುವ ಮೊದಲು, ಕ್ರಿಯಾಪದಗಳಿಗೆ ಘಟನೆಯ ಸಮಯವನ್ನು ಸೂಚಿಸುವ ದ್‌ ಇಲ್ಲವೇ ವ್‌ (ಪ್‌) ಪ್ರತ್ಯಯವನ್ನು, ಇಲ್ಲವೇ ಘಟನೆಯನ್ನು ಅಲ್ಲಗಳೆಯುವ ಅದ್‌ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ.

ಎಅಗು ಎಅಗಿದ ತರುಗಳ್‌ ಮೊಲಟಾೆ ಮೊಲ್‌ ವ ತುಂಬಿಗಳ್‌ ನೋಡು ನೋಟ್ಪ ನೋಟ ಅಲಾ ಅಜುಯದ ಮಾತು

ಆದರೆ, ಗುಣಪದಗಳನ್ನು ಈ ರೀತಿ ನಾಮಪದಗಳೊಂದಿಗೆ ಬಳಸಬೇಕಿದ್ದಲ್ಲಿ, ಅವಕ್ಕೆ ಯಾವ ಪ್ರತ್ಯಯವನ್ನೂ ಸೇರಿಸುವ ಅವಶ್ಯಕತೆಯಿಲ್ಲ. ಯಾಕೆಂದರೆ, ಪದಕಂತೆಗಳಲ್ಲಿ ನಾಮಪದಗಳೊಂದಿಗೆ ಬರುವುದು ಅವುಗಳ ಸಹಜವಾದ ಕೆಲಸವಾಗಿದೆ.

ಉದಾಹರಣೆಗಾಗಿ, ಮೇಲೆ ಕೊಟ್ಟಿರುವ ಬಡ ಪಾರ್ವನ್‌ ನಾಮಪದಕಂತೆಯಲ್ಲಿ ಬಡ ಗುಣಪದ ಯಾವ ಪ್ರತ್ಯಯದ ಸಹಾಯವೂ ಇಲ್ಲದೆ ನೇರವಾಗಿ ಪಾರ್ವನ್‌ ನಾಮಪದದೊಂದಿಗೆ ಬಳಕೆಯಾಗಿರುವುದನ್ನು ಕಾಣಬಹುದು. ಪಟ ನವಿರ್‌, ಕಿಜು ವೇಂಟೆ, ಅಳಿ ಗಂಡರ್‌ ಮೊದಲಾದ ನಾಮಪದಕಂತೆಗಳಲ್ಲಿಯೂ ಇದೇ ರೀತಿಯಲ್ಲಿ ಗುಣಪದಗಳು ನೇರವಾಗಿ ನಾಮಪದಗಳೊಂದಿಗೆ ಬಳಕೆಯಾಗಿವೆ.

(ಖ) ನಾಮಪದಗಳ ಜಾಗ: ಘಟನೆಯೊಂದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವಂತಹ ಜಾಗ ನಾಮಪದಗಳಿಗೆ “ಸಹಜ’ವಾಗಿರುವ ಜಾಗವಾದ ಕಾರಣ, ಅವನ್ನು ಈ ಜಾಗದಲ್ಲಿ ಬಳಸಲು ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ ಲ ಘಟನೆಯಲ್ಲಿ ಅವುಗಳ ಕಾರ್ಯವೆಂತಹದು ಎಂಬುದನ್ನು ಸೂಚಿಸುವ ವಿಭಕ್ತಿ ಪ್ರತ್ಯಯಗಳನ್ನು ಅವಕ್ಕೆ ನೇರವಾಗಿ ಸೇರಿಸಬಹುದು. ಉಸಿರ್‌-ಅನ್‌, ಕಾಡ್‌-ಅನ್‌, ಮರಣಕ್ಕೆ, ತಂಗೆ-ಗೆ, ಬಸಿಆ್‌- ಇನ್‌, ಇರುಳ್‌-ಒಳ್‌ ಮೊದಲಾದ ವಿಭಕ್ತಿರೂಪಗಳಲ್ಲಿ ಇಂತಹ ಬಳಕೆಯನ್ನು ಕಾಣಬಹುದು.

ಆದರೆ, ಗುಣಪದಗಳನ್ನು ಈ ರೀತಿ ಘಟಕಗಳನ್ನು ಸೂಚಿಸುವ ನಾಮಪದಗಳ ಜಾಗದಲ್ಲಿ ಬಳಸಬೇಕಿದ್ದರೆ, ಅವನ್ನು ಮೊದಲಿಗೆ “ನಾಮರೂಪ’ಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವಕ್ಕೆ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.

(೫ಕ) ಬಡವನ್‌ ಪಸಿದು ವೇಡಿದನ್‌ (೫ಖ) ಕಿಣಯರನ್‌ ಕೊಂದು (೫ಗ) ಇನಿಯಳ್ಗೆ ಅರಿಪಿದೊಡೆ (೫ಘ) ಪೊಸತಂ ಮಾಡಿದುದು (೫ಜ) ಅಸಿಯವಂ ನೋಡಿದಂ

(೫ಕ-ಗ)ಗಳಲ್ಲಿ ಬಡ, ಕಿಜು, ಇನಿ, ಪೊಸ, ಮತ್ತು ಅಸಿ ಗುಣಪದಗಳು ಘಟಕವೊಂದನ್ನು ಸೂಚಿಸುವ ನಾಮಪದದ ಜಾಗದಲ್ಲಿ ಬರುವುದಕ್ಕಾಗಿ ಅನ್‌, ಅರ್‌, ಅಳ್‌, ತು ಮತ್ತು ಅವು ಎಂಬ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬರಬೇಕಾಗಿದೆ ಎಂಬುದನ್ನು ಗಮನಿಸಬಹುದು. ಅವಕ್ಕೆ ಅನ್‌, ಗೆ ಮೊದಲಾದ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಮೊದಲು, ಈ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿದೆ.

ಕ್ರಿಯಾಪದಗಳನ್ನು ನಾಮಪದಗಳ ಈ ಜಾಗದಲ್ಲಿ ಬಳಸಬೇಕಿದ್ದರೂ ಅವನ್ನು ಹಾಗೆಯೇ ಬಳಸಲು ಸಾಧ್ಯವಾಗದು. ಮೊದಲಿಗೆ ಅವನ್ನು ಮೇಲೆ ವಿವರಿಸಿರುವ ಗುಣರೂಪಕ್ಕೆ ಬದಲಾಯಿಸಿಕೊಳ್ಳಬೇಕು, ಮತ್ತು ಅನಂತರ ಅವಕ್ಕೆ ಲಿಂಗ-ವಚನಗಳನ್ನು ಸೂಚಿಸುವ ಅನ್‌, ಅಳ್‌, ಅರ್‌, ಉದು, ಇಲ್ಲವೇ ಉವು ಪ್ರತ್ಯಯಗಳಲ್ಲಿ ಒಂದನ್ನು ಸೇರಿಸುವುದರ ಮೂಲಕ, ನಾಮರೂಪಕ್ಕೆ ಬದಲಾಯಿಸಿಕೊಳ್ಳಬೇಕು.

(೬ಕ) ಆಡುವನನ್‌ ಇನಿಸು ಪೋಲ್ತು ಅನುಗೆಯ್ದಂ (೬ಖ) ಎಂದಲ್ಲೆ ಕರ್ಣನಿಂತೆಂದಂ (೬ಗ) ಕೂರದನ್‌ ಪಗೆಗೆ ಸಂತಸಮಾಗಿರೆ ಇದನೊಡ್ಡಿದಂ

(೬ಕ)ದಲ್ಲಿ ಆಡು ಕ್ರಿಯಾಪದದ ಮುಂದಿನ (ಇಲ್ಲವೇ ಈಗಿನ) ಸಮಯದ ಆಡುವ ಗುಣರೂಪಕ್ಕೆ ಪುಲ್ಲಿಂಗ-ಏಕವಚನದ ಅನ್‌ ಪ್ರತ್ಯಯವನ್ನು ಸೇರಿಸಲಾಗಿದೆ, ಮತ್ತು ಅನಂತರ ಅನ್‌ ವಿಭಕ್ತಿ ಪ್ರತ್ಯಯವನ್ನು ಸೇರಿಸಲಾಗಿದೆ; (೬ಖ)ದಲ್ಲಿ ಎನ್‌ ಕ್ರಿಯಾಪದದ ಹಿಂದಿನ ಸಮಯದ ಗುಣರೂಪಕ್ಕೆ ಮೊದಲಿಗೆ ಸ್ತ್ರೀಲಿಂಗ-ಏಕವಚನದ ಅಳ್‌ ಪ್ರತ್ಯಯವನ್ನು ಸೇರಿಸಲಾಗಿದೆ, ಮತ್ತು ಅನಂತರ ಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲಾಗಿದೆ.

ಇದೇ ರೀತಿಯಲ್ಲಿ, (೬ಗ)ದಲ್ಲಿ ಕೂರ್‌ ಕ್ರಿಯಾಪದದ ಅಲ್ಲಗಳೆಯುವ ಗುಣರೂಪವನ್ನು ನಾಮಪದದ ಜಾಗದಲ್ಲಿ ಬಳಸುವುದಕ್ಕಾಗಿ, ಅದಕ್ಕೆ ಪುಲ್ಲಿಂಗ-ಏಕವಚನದ ಅನ್‌ ಪ್ರತ್ಯಯವನ್ನು ಸೇರಿಸಲಾಗಿದೆ.

ಹಳೆಗನ್ನಡದಲ್ಲಿ ಈ ರೀತಿ ಕ್ರಿಯಾಪದಗಳ ಗುಣರೂಪದಿಂದ ನಾಮರೂಪಗಳನ್ನು ತಯಾರಿಸಲು ಸಾಧ್ಯವಿದೆಯಲ್ಲ ದೆ, ನೇರವಾಗಿ ಕ್ರಿಯಾಪದಗಳಿಂದಲೇನೇ ನಾಮರೂಪಗಳನ್ನು ತಯಾರಿಸಲು ಸಾಧ್ಯವಿರುವ ಹಾಗೆ ಕಾಣಿಸುವುದಿಲ್ಲ. ಆದರೆ, ಹೊಸಗನ್ನಡದಲ್ಲಿ ಇಕೆ ಪ್ರತ್ಯಯವನ್ನು ಬಳಸಿ ನೇರವಾಗಿ ನಾಮರೂಪಗಳನ್ನು (ಹೊಗಳುವಿಕೆ, ಹಿಡಿಯುವಿಕೆ, ಹಾಸುವಿಕೆ ಇತ್ಯಾದಿ) ತಯಾರಿಸಲು ಸಾಧ್ಯವಿದೆ.

ಹೊಸಗನ್ನಡದಲ್ಲಿ ಇಂತಹ ನಾಮರೂಪಗಳು ಕ್ರಿಯಾಪದಗಳಿಗೆ ಇಕೆ-ಇಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ನಾಮಪದಗಳಿಂದ (ಹೊಗಳಿಕೆ, ಹಿಡಿಕೆ, ಹಾಸಿಗೆ ಮೊದಲಾದವುಗಳಿಂದ) ಭಿನ್ನವಾಗಿವೆ (ಭಟ್‌ ೨೦೦೨:೯೬ ನೋಡಿ). ಆದರೆ, ಹಳೆಗನ್ನಡದಲ್ಲಿ ಈ ರೀತಿ ಎಲ್ಲಾ ಕ್ರಿಯಾಪದಗಳಿಂದಲೂ ನೇರವಾಗಿ ಸಾಧಿಸಲು ಸಾಧ್ಯವಾಗುವಂತಹ ನಾಮರೂಪಗಳಿಲ್ಲ ವೆಂದು ತೋರುತ್ತದೆ.

(ಗ) ಕ್ರಿಯಾಪದಗಳ ಜಾಗ: ಘಟನೆಗಳನ್ನು ಸೂಚಿಸುವ ಜಾಗವೇ ಕ್ರಿಯಾಪದಗಳ ಸಹಜವಾದ ಜಾಗವೆಂದು ಹೇಳಬಹುದು. ಅವನ್ನು ಈ ಜಾಗದಲ್ಲಿ ಬಳಸಬೇಕಿದ್ದ. ರೆ, ಅವಕ್ಕೆ ಬೇರೆ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ. ಸಮಯ ಮತ್ತು ಘಟಕಗಳನ್ನು ಸೂಚಿಸುವ ಪ್ರತ್ಯಯಗಳನ್ನು,

ಇಲ್ಲವೇ ಬೇರೆ ಕೆಲವು ಘಟನೆಗೆ ಸಂಬಂಧಿಸಿದ ಪ್ರತ್ಯಯಗಳನ್ನು ಅವಕ್ಕೆ ನೇರವಾಗಿ ಸೇರಿಸಲು ಸಾಧ್ಯವಿದೆ (ಬಂದನ್‌, ಪೋಗನ್‌, ಕುಡಿದುದು).

ನಾಮಪದ ಮತ್ತು ಗುಣಪದಗಳು ಘಟನೆಯನ್ನು ಸೂಚಿಸಲಾರವಾದ ಕಾರಣ, ಅವನ್ನು ಕ್ರಿಯಾಪದಗಳ ಜಾಗದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ; ಇದಲ್ಲದೆ, ಅವಕ್ಕೆ ವಿಶಿಷ್ಟವಾದ ಕ್ರಿಯಾರೂಪಗಳೂ ಇಲ್ಲ. ಆದರೆ, ಘಟನೆಗಳನ್ನು ಸೂಚಿಸುವ ಬದಲು ವಿಷಯಗಳನ್ನು ಸೂಚಿಸುವ “ವಿಷಯ’ ವಾಕ್ಯಗಳಲ್ಲಿ ನಾಮಪದಗಳನ್ನು ಕ್ರಿಯಾಪದಗಳ ಸ್ಥಾ ನದಲ್ಲಿ (ಇಲ್ಲವೇ ಇರ್‌ ಕ್ರಿಯಾಪದದ ಕ್ರಿಯಾರೂಪಗಳೊಂದಿಗೆ) ಬಳಸಲು ಸಾಧ್ಯವಿದೆ (೧೧.೩ ನೋಡಿ).

(೭ಕ) ರಾಜಂಗೆ ಇರ್ವರ್‌ ಪೆಂಡತಿಯರ್‌ (೭ಖ) ಅದು ಎಮ್ಮ ಪುರಂ (೭ಗ) ಈತಂ ಗುಣಾರ್ಣವಂ

ಇಂತಹ ವಾಕ್ಯಗಳಲ್ಲಿ ಆಡುಗ ಇಲ್ಲವೇ ಕೇಳುಗನನ್ನು ವಿಷಯವಾಗಿ ಬಳಸಲಾಗಿದೆಯಾದರೆ, ಅವನ್ನು ಸೂಚಿಸುವ ಘಟಕ (ಆಖ್ಯಾತ) ಪ್ರತ್ಯಯವನ್ನೂ ಈ ಪದಗಳೊಂದಿಗೆ ಬಳಸಬೇಕೆಂಬ ನಿಯಮ ಹಳೆಗನ್ನಡದಲ್ಲಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಪಂಪಭಾರತದ ಬಳಕೆಗಳನ್ನು ಗಮನಿಸಬಹುದು:

(ಲಕ) ನೀಂ ಆದಿತ್ಯನನ್‌ ಇಳಿಪ ತೇಜರಿರ್‌ (೨.೬೪)

“ನೀವು ಆದಿತ್ಯನನ್ನು ತಿರಸ್ಕರಿಸುವ ತೇಜಸ್ಸುಳ್ಳವರಾಗಿದ್ದೀರಿ’ (೮ಖ) ನಿಮ್ಮಯ ಧರ್ಮದ ಮಕ್ಕಳೆವು (೧೧.೧೨೮)

(ನಾವು) ನಿಮ್ಮ ಧರ್ಮದ ಮಕ್ಕಳು’ (೮ಗ) ಆನುಂ ಪೆಂಡತಿಯೆನ್‌ ಆದೆನ್‌ (೧.೭೬)

“ನಾನೂ ಹೆಂಗಸಾಗಿದ್ದೇನೆ’

ಈ ಜಾಗದಲ್ಲಿ ಗುಣಪದಗಳನ್ನು ಬಳಸಬೇಕಿದ್ದ ಲ್ಲಿ, ಅವುಗಳಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ ಅವನ್ನು ನಾಮರೂಪಕ್ಕೆ ಬದಲಾಯಿಸಬೇಕಾಗುತ್ತದೆ:

(೯ಕ) ಸಹದೇವಂ ಕಿಅಯಂ “ಸಹದೇವನು ಚಿಕ್ಕವನು’

(೯ಖ) ಮೊಗಂ ಪಿರಿದಾಗೆ “ಮುಖ ದೊಡ್ಡದಾದಾಗ’

ಇದಲ್ಲದೆ, ಈ ಜಾಗದಲ್ಲಿ ಬರುವ ಗುಣಪದಗಳು ವಾಕ್ಯದ ಆಡುಗ ಇಲ್ಲ ವೇ ಕೇಳುಗರನ್ನು ಸೂಚಿಸುವುದಿದ್ದಲ್ಲಿ, ಅವುಗಳಿಗೆ ನಾಮರೂಪವನ್ನು ಕೊಡುವ ಈ ಲಿಂಗ-ವಚನ ಪ್ರತ್ಯಯಗಳನ್ನು ಮಾತ್ರವಲ್ಲದೆ, ಆಡುಗ ಮತ್ತು ಕೇಳುಗರನ್ನು ಸೂಚಿಸುವ ಪುರುಷ ಪ್ರತ್ಯಯಗಳನ್ನೂ ಸೇರಿಸಬೇಕಾಗುತ್ತದೆ: (೧೦ಕ) ನೀಂ ಪಿರಿಯರಿರ್‌ “ನೀವು ಹಿರಿಯರು’

(೧೦ಖ) ಆನ್‌ ಕಿಟುಯಳೆನ್‌ “ನಾನು ಕಿರಿಯವಳು’

(೧೦ಕ)ದಲ್ಲಿ ಪಿರಿ ಗುಣಪದದ ಅನಂತರ ಲಿಂಗ-ವಚನಗಳನ್ನು ಸೂಚಿಸುವ ಅರ್‌ ಪ್ರತ್ಯಯ ಮತ್ತು ಕೇಳುಗರನ್ನು ಸೂಚಿಸುವ (ಬಹುವಚನದ) ಇರ್‌ ಪ್ರತ್ಯಯಗಳು ಬಂದಿವೆ; (೧೦ಖ)ದಲ್ಲಿ ಕಿಆ ಗುಣಪದದ ಅನಂತರ ಲಿಂಗ-ವಚನಗಳನ್ನು ಸೂಚಿಸುವ ಆಳ್‌ ಪ್ರತ್ಯಯ ಮತ್ತು ಆಡುಗನನ್ನು ಸೂಚಿಸುವ ಏಕವಚನದ ಎನ್‌ ಪ್ರತ್ಯಯಗಳು ಬಂದಿವೆ.

ಇಲ್ಲಿ ಲಿಂಗ-ವಚನ ಪ್ರತ್ಯಯಗಳು ಗುಣಪದಗಳನ್ನು ಅವುಗಳ ನಾಮರೂಪಕ್ಕೆ ಬದಲಾಯಿಸುವುದಕ್ಕಾಗಿ ಬಳಕೆಯಾಗಿವೆ, ಮತ್ತು ಪುರುಷ ಪ್ರತ್ಯಯಗಳು ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ಬಳಕೆಯಾಗಿವೆ ಎಂಬುದನ್ನು ಗಮನಿಸಬಹುದು (ಜಾಸ್ತಿ ವಿವರಗಳಿಗೆ ೧೧ನೇ ಅಧ್ಯಾಯ ನೋಡಿ).

೪.೨.೨ ಸಂಸ್ಕೃತದ ವಿಸ್ತೃತ ಬಳಕೆಗಳು

ಹಳೆಗನ್ನಡದಲ್ಲಿ ಕಾಣಿಸುವ ನಾಮಪದ, ಕ್ರಿಯಾಪದ ಮತ್ತು ಗುಣಪದಗಳ ವಿಸ್ತೃತ ಬಳಕೆಗಳನ್ನು ಸಂಸ್ಕೃತದ ಬಳಕೆಗಳೊಂದಿಗೆ ಹೋಲಿಸಿ ನೋಡಿದಾಗ, ಪದವರ್ಗಗಳ ಮಟ್ಟಿಗೆ ಈ ಎರಡು ಭಾಷೆಗಳ ನಡುವಿರುವ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗುತ್ತದೆ.

ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವರ್ಗಗಳು ಮಾತ್ರ ಇವೆಯಾದ ಕಾರಣ, ಮೇಲೆ ಸೂಚಿಸಿದಂತಹ ಮೂರು ರೀತಿಯ ವಿಸ್ತೃತ ಬಳಕೆಗಳ ಬದಲು, ಅದರಲ್ಲಿ ಎರಡು ರೀತಿಯ ವಿಸ್ತೃತ ಬಳಕೆಗಳು ಮಾತ್ರ ಕಾಣಿಸುತ್ತವೆ:

(ಕ) ನಾಮಪದದ ಜಾಗ: ಸಂಸ್ಕೃತದಲ್ಲಿ ಒಂದು ನಾಮಪದದೊಂದಿಗೆ ಇನ್ನೊಂದು ನಾಮಪದವನ್ನು ಹಾಗೆಯೇ, ಅದರಲ್ಲಿ ಯಾವ ಬದಲಾವಣೆಯನ್ನೂ ಮಾಡದೆ, ಬಳಸಬಹುದು. ಆದರೆ, ಈ ರೀತಿ ಬಳಕೆಯಾಗುವ ಪ್ರತಿಯೊಂದು ನಾಮಪದದೊಂದಿಗೂ ವಿಭಕ್ತಿ ಪ್ರತ್ಯಯವೊಂದನ್ನು ಸೇರಿಸುವ ಅವಶ್ಯಕತೆಯಿದೆ. ಒಂದೇ ನಾಮಪದಕಂತೆಯಲ್ಲಿ ಬರುವ ನಾಮಪದಗಳೆಲ್ಲವೂ ಒಂದೇ ವಿಭಕ್ತಿಯಲ್ಲಿರುವುದು ಅವಶ್ಯ:

(೧೧ಕ) ತತ್ರ ಏಕಃ ಕೃಷ್ಣಃ ಸರ್ಪಃ ಅ ಣ “ಅಲ್ಲಿ ಒಂದು ಕಪ್ಪು ಹಾವು ಇದೆ’ (೧೧ಖ) ಹರಿಃ ಏಕಂ ಕೃಷ್ಣಂ ಸರ್ಪಂ ಅಪಶ್ಯತ್‌ “ಹರಿ ಒಂದು ಕಪ್ಪು ಹಾವನ್ನು ನೋಡಿದ’ (೧೧ಗ) ಹರಿಃ ಏಕೇನ ಕೃಷ್ಣೆ €ನ ಸರ್ಪೇಣ ದಷ್ಟ: “ಹರಿಯನ್ನು ಒಂದು ಕಪ್ಪು ಹಾವು ಕಚ್ಚಿ ತು’

ಸಿ ಎಂ ತ

“ಒಂದು ಕಪ್ಪು ಹಾವು’ ಎಂಬ ಪದಕಂತೆಯನ್ನು ಸಂಸ್ಕೃತದಲ್ಲಿ ಬಳಸಬೇಕಿದ್ದರೆ, ಅದರಲ್ಲಿ ಬರುವ ಮೂರು ನಾಮಪದಗಳಿಗೂ ವಿಭಕ್ತಿ-ವಚನ ಪ್ರತ್ಯಯಗಳನ್ನು ಸೇರಿಸಬೇಕು, ಮತ್ತು ಈ ಪ್ರತ್ಯಯಗಳು ಮೂರರಲ್ಲೂ ಒಂದೇ ಆಗಿರಬೇಕು ಎಂಬುದನ್ನು ಆ ಪದಕಂತೆಗೆ (೧೧ಕ- ಗ)ಗಳಲ್ಲಿ ಕಾಣಿಸುವ ಬೇರೆ ಬೇರೆ ರೂಪಗಳಿಂದ ತಿಳಿಯಬಹುದು.

ಕ್ರಿಯಾಪದವೊಂದನ್ನು ನಾಮಪದದ ಜಾಗದಲ್ಲಿ (ಎಂದರೆ ವಿಭಕ್ತಿ ಪ್ರತ್ಯಯಗಳೊಂದಿಗೆ) ಬಳಸಬೇಕಿದ್ದಲ್ಲಿ, ಅದಕ್ಕೆ ಕೃತ್‌ ಪ್ರತ್ಯಯಗಳಲ್ಲೊಂದನ್ನು ಸೇರಿಸುವ ಅವಶ್ಯಕತೆಯಿದೆ. ಈ ಪ್ರತ್ಯಯವನ್ನು ಸೇರಿಸಿದ ಮೇಲೆ, ಅದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಸೇರಿಸಬಹುದು. ಹಾಗಾಗಿ, ಸಂಸ್ಕೃತದಲ್ಲಿ ಈ ರೀತಿ ಒಂದು ಕ್ರಿಯಾಪದಕ್ಕೆ ಕೃತ್‌ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಕ್ರಿಯಾರೂಪವನ್ನು ಆ ಕ್ರಿಯಾಪದದ ನಾಮರೂಪವೆಂದು ಪರಿಗಣಿಸಲು ಸಾಧ್ಯವಿದೆ.

(೧೨ಕ) ಅಹಂ ಭಗ್ನಂ ಅಪಶ್ಯಂ “ನಾನು ಒಡೆದುದನ್ನು ನೋಡಿದೆ’ (೧೨ಖ) ಅಹಂ ಘಟಂ ಕುರ್ವಾಣಂ ಅಪಶ್ಯಂ “ನಾನು ಕೊಡ ಮಾಡುವವನನ್ನು ನೋಡಿದೆ’

(೧೨ಕ)ದಲ್ಲಿ ಭಗ್ನ “ಒಡೆದ’ ಕೃದಂತಕ್ಕೆ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ನೇರವಾಗಿ ಸೇರಿಸಲಾಗಿದೆ; ಆದರೆ ಈ ವಾಕ್ಯದ ಅನುವಾದದಲ್ಲಿ ಕಾಣಿಸಿದ ಹಾಗೆ, ಕನ್ನಡದಲ್ಲಿ ಒಡೆದ ಕೃದಂತಕ್ಕೆ ಅನ್ನು ಪ್ರತ್ಯಯವನ್ನು ಸೇರಿಸಬೇಕಿದ್ದಲ್ಲಿ ಅದಕ್ಕೆ ಮೊದಲು ಲಿಂಗ-ವಚನವನ್ನು ಸೂಚಿಸುವ ಉದು ಪ್ರತ್ಯಯವನ್ನು ಸೇರಿಸ ಬೇಕಾಗಿದೆ. ಇದೇ ರೀತಿಯಲ್ಲಿ (೧೨ಖ) ವಾಕ್ಯದಲ್ಲಿ ಸಂಸ್ಕೃತದ ಕುರ್ವಾಣ “ಮಾಡುವ’ ಕೃದಂತಕ್ಕೆ ದ್ವಿತೀಯಾ ವಿಭಕ್ತಿಯನ್ನು ನೇರವಾಗಿ ಸೇರಿಸಲಾಗಿದೆ; ಆದರೆ, ಅದರ ಅನುವಾದದಲ್ಲಿ ಕಾಣಿಸಿದ ಹಾಗೆ, ಕನ್ನಡದ ಮಾಡುವ ಎಂಬ ಕೃದಂತಕ್ಕೆ ಮೊದಲಿಗೆ ಲಿಂಗ-ವಚನವನ್ನು ಸೂಚಿಸುವ ಅವನು ಎಂಬುದನ್ನು ಸೇರಿಸಿ, ಅನಂತರ ಅನ್ನು ಪ್ರತ್ಯಯವನ್ನು ಸೇರಿಸಲಾಗಿದೆ.

ಈ ವಿಷಯದಲ್ಲಿ ಹಳೆಗನ್ನಡ ಹೊಸಗನ್ನಡದ ಹಾಗೆಯೇ ಇದೆ ಎಂಬುದನ್ನು ಮೇಲೆಯೇ (೪.೨.೧ರಲ್ಲಿ) ನೋಡಿರುವೆವು.

ಹಳೆಗನ್ನಡದ ಕೃದಂತಕ್ಕೂ ಸಂಸ್ಕೃತದ ಕೃದಂತಕ್ಕೂ ನಡುವಿರುವ ವ್ಯತ್ಯಾಸ ಇದರಿಂದ ಸ್ಪಷ್ಟವಾಗುತ್ತದೆ: ಹಳೆಗನ್ನಡದ ಕೃದಂತಗಳು ಗುಣಪದದ ಜಾಗದಲ್ಲಿ ಬರುವ ಕಾರಣ, ಅವು ಯಾಪದಗಳ ಗುಣರೂಪಗಳು; ನಾಮಪದದ ಜಾಗದಲ್ಲಿ ಬರಬೇಕಿದ್ದರೆ, ಅವಕ್ಕೆ ಲಿಂಗ- ವಚನಗಳನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸುವುದರ ಮೂಲಕ, ಅವನ್ನು ನಾಮರೂಪಗಳನ್ನಾಗಿ ಬದಲಾಯಿಸುವ ಅವಶ್ಯಕತೆಯಿದೆ.

ಆದರೆ, ಸಂಸ್ಕೃತದಲ್ಲಿ ಕೃದಂತಗಳು ನೇರವಾಗಿ ನಾಮಪದದ ಜಾಗದಲ್ಲಿ ಬರುತ್ತವೆ; ಅವು ಕ್ರಿಯಾಪದಗಳ ನಾಮರೂಪಗಳಲ್ಲದೆ ಗುಣರೂಪಗಳಲ್ಲ. (ಸಂಸ್ಕೃತದಲ್ಲಿ ಗುಣಪದವೆಂಬ ಮೂರನೆಯ ಪದವರ್ಗ ಇಲ್ಲದಿರುವುದೇ ಈ ರೀತಿ ಅದರ ಕ್ರಿಯಾಪದಗಳಿಗೆ ಗುಣರೂಪಗಳಿಲ್ಲದಿರುವುದಕ್ಕೆ ಕಾರಣ).

(ಖ) ಕ್ರಿಯಾಪದದ ಜಾಗ: ಸಂಸ್ಕೃತದಲ್ಲಿ ನಾಮಪದಗಳನ್ನು ನೇರವಾಗಿ ಕ್ರಿಯಾಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ. ಇದಕ್ಕಾಗಿ ಅವುಗಳಿಗೆ ತಿಜಾ್‌ ಪ್ರತ್ಯಯಗಳನ್ನು ನೇರವಾಗಿ ಸೇರಿಸಲಾಗುತ್ತದೆ (ಪಿತೃ-ಪಿತರತಿ, ಮಾಲಾ-ಮಾಲಾತಿ, ಕವಿ-ಕವಯತಿ).

ಇದಲ್ಲದೆ, ನಾಮಪದಗಳಿಗೆ ಯ ಪ್ರತ್ಯಯವನ್ನು ಸೇರಿಸಿಯೂ ಅವನ್ನು ಕ್ರಿಯಾರೂಪಕ್ಕೆ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಈ ಪ್ರತ್ಯಯ ಸೇರಿದಾಗ ಅವುಗಳ ಕೊನೆಯ ಸ್ವರ ಮತ್ತು ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳು ತೋರಿಬರುತ್ತವೆ (ಪುತ್ರ-ಪುತ್ರೀಯತಿ, ಕವಿ-ಕವೀಯತಿ, ಗೋ-ಗವ್ಯತಿ).

(qe

೪.೨.೩ ಹಳೆಗನ್ನಡ ವ್ಯಾಕರಣಗಳ ಸಮಸ್ಯೆಗಳು

ಗುಣಪದಗಳ ಬಳಕೆಯಲ್ಲಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವಿರುವ ಈ ಅತ್ಯಂತ ಮುಖ್ಯವಾದ ವ್ಯತ್ಯಾಸವನ್ನು ಗಮನಿಸದ ಕಾರಣ, ಹೆಚ್ಚಿನ ಹಳೆಗನ್ನಡ ವ್ಯಾಕರಣಗಳಲ್ಲೂ ಹಲವು ರೀತಿಯ ಸಮಸ್ಯೆಗಳು ತಲೆದೋರಿವೆ.

(ಕ) ಸಂಸ್ಕೃತದ ಹಾಗೆ ಹಳೆಗನ್ನಡದಲ್ಲೂ ಗುಣಪದ (ಗುಣವಾಚಕ)ಗಳು ನಾಮಪದ ವರ್ಗದಲ್ಲೇನೇ ಬರುವವುಗಳೆಂದು ಭಾವಿಸಿರುವ ಕಾರಣ, ಒಳ್ಳಿತು, ಕರಿದು, ಇನಿಯದು ಮೊದಲಾದ ಗುಣಪದಗಳ ನಾಮರೂಪಗಳನ್ನೇ ಅವುಗಳ ಸಹಜರೂಪಗಳೆಂದು ಪರಿಗಣಿಸಬೇಕಾಗಿದೆ (ಕೇಶಿರಾಜ, ಸೂ. ೮೭, ಭಟ್ಟಾಕಳಂಕ, ಸೂ. ೧೬೬ ನೋಡಿ). ಯಾಕೆಂದರೆ, ವಿಭಕ್ತಿ ಪ್ರತ್ಯಯಗಳು ಇಂತಹ ನಾಮರೂಪಗಳೊಂದಿಗೆ ಮಾತ್ರ ಬರಬಲ್ಲುವಲ್ಲದೆ, ನೇರವಾಗಿ ಒಳ್‌, ಕರಿ, ಇನಿ ಮೊದಲಾದ ಗುಣಪದಗಳೊಂದಿಗೆ ಬರಲಾರವು.

ಆದರೆ, ನಿಜಕ್ಕೂ ಒಳ್ಳಿತು, ಕರಿದು, ಇನಿಯದು ಮೊದಲಾದವುಗಳನ್ನು ಒಳ್ಳಿದನ್‌, ಒಳ್ಳಿದಳ್‌, ಒಳ್ಳಿದರ್‌, ಒಳ್ಳಿದುವು ಮೊದಲಾದವುಗಳ ಹಾಗೆ, ಗುಣಪದಗಳಿಗೆ ಲಿಂಗ-ವಚನ (ನಪುಂಸಕ- ಏಕವಚನ) ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ. ಅವು ಗುಣಪದಗಳ ನಾಮರೂಪಗಳಲ್ಲದೆ ಸಹಜ ರೂಪಗಳಲ್ಲ.

(ಖ) ಗುಣಪದಗಳೊಂದಿಗೆ ನಾಮಪದಗಳನ್ನು ಬಳಸಿ ರಚಿಸಿರುವ ನಾಮಪದ ಕಂತೆಗಳನ್ನು ಸಮಾಸ(“ಕರ್ಮಧಾರಯ’)ವೆಂದು ಕರೆಯಬೇಕಾಗಿದೆ. ಆದರೆ, ನಿಜಕ್ಕೂ ನಲ್ಲಂಬು, ಕೂರಂಬು, ಬೆಳ್ಮುಗಿಲ್‌, ನಿಡುದೋಳ್‌, ಪೆರ್ದೊಡೆ, ಎಳವುಲ್‌ ಮೊದಲಾದವುಗಳಲ್ಲಿ ನಲ್‌, ಕೂರ್‌, ಬೆಳ್‌, ನಿಡು, ಪೆರ್‌, ಎಳ ಗುಣಪದಗಳು ತಮ್ಮ ಸಹಜರೂಪದಲ್ಲಿ (ಎಂದರೆ ಯಾವ ಪ್ರತ್ಯಯವನ್ನೂ ಸೇರಿಸಿಕೊಳ್ಳದೆ) ನೇರವಾಗಿ ನಾಮಪದಗಳೊಂದಿಗೆ ಬಂದಿವೆ; ಅವು ಪದಕಂತೆಗಳಲ್ಲದೆ ಸಮಾಸಗಳಲ್ಲ.

(ಗ) ಹಳೆಗನ್ನಡದಲ್ಲಿ ಕೃಲ್ಲಿಂಗಗಳು ಕೃದಂತಗಳಿಗಿಂತ ಭಿನ್ನವಾದವುಗಳು; ಕೃದಂತಗಳಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿದಾಗ ಮಾತ್ರ ಕೃಲ್ಲಿಂಗಗಳು ಸಿದ್ದವಾಗುತ್ತವೆ (ಇರ್ದ- ಇರ್ದನ್‌, ಇರ್ದರ್‌, ಇರ್ದುದು, ಪಡೆವ-ಪಡೆವನ್‌, ಪಡೆವಳ್‌, ಈಯದ- ಈಯದನ್‌, ಈಯದರ್‌ ಇತ್ಯಾದಿ). ಹಾಗಾಗಿ, ಕೃದಂತಗಳನ್ನು ಕ್ರಿಯಾಪದಗಳ ಗುಣರೂಪಗಳೆಂದು ಮತ್ತು ಕೃಲ್ಲಿಂಗಗಳನ್ನು ಅವುಗಳಿಂದ ಸಿದ್ಧ ವಾದ ನಾಮರೂಪಗಳೆಂದು ಪರಿಗಣಿಸುವ ಅವಶ್ಯಕತೆಯಿದೆ.

ಆದರೆ, ಸಂಸ್ಕೃತದಲ್ಲಿ ಕೃದಂತಗಳೇ ಕೃಲ್ಲಿಂಗಗಳು. ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದುದರಿಂದಾಗಿ, ಕೃದಂತ ಮತ್ತು ಕೃಲ್ಲಿಂಗಗಳ ಕುರಿತು ಪ್ರಾಚೀನ ವೈಯಾಕರಣಿಗಳು ಕೊಡುವ ನಿಯಮಗಳೆಲ್ಲ ಸಿಕ್ಕುಸಿಕ್ಕಾಗಿವೆ.

(ಘ) ಹಳೆಗನ್ನಡದಲ್ಲಿ ಕೊಳನ, ಮರದ, ಅರಸಿನ, ಕೋಂಟೆಯ ಮೊದಲಾದ ರೂಪಗಳು ಕೊಳ, ಮರ, ಅರಸು, ಕೋಂಟೆ ಮೊದಲಾದ ನಾಮಪದಗಳ ಗುಣರೂಪಗಳಲ್ಲದೆ ವಿಭಕ್ತಿರೂಪ ಗಳಲ್ಲ. ಗುಣಪದಗಳ ಹಾಗೆ, ಮತ್ತು ಕ್ರಿಯಾಪದಗಳ ಗುಣರೂಪಗಳ ಹಾಗೆ, ಇವು ನಾಮಪದ ಗಳೊಂದಿಗೆ ಪದಕಂತೆಗಳಲ್ಲಿ ಬರಬಲ್ಲುವಲ್ಲದೆ, ನೇರವಾಗಿ ಒಂದು ವಾಕ್ಯದ ಅಂಗವಾಗಿ ಬರಲಾರವು. ಆದರೆ, ಹಳೆಗನ್ನಡ ವ್ಯಾಕರಣಗಳಲ್ಲಿ ಇವನ್ನು ವಿಭಕ್ತಿ ರೂಪಗಳೆಂದು ಪರಿಗಣಿಸಲಾಗಿದೆ.

ಹಳೆಗನ್ನಡದ ಈ ರೂಪಗಳನ್ನು ವಿಭಕ್ತಿ ರೂಪಗಳೆಂದು ಪರಿಗಣಿಸಿದಲ್ಲಿ, ಅವು ಗುಣಪದಗಳ ಹಾಗೆ ಲಿಂಗ-ವಚನ ಪ್ರತ್ಯಯಗಳೊಂದಿಗೆ ಬರುವುದನ್ನು, ಮತ್ತು ಇವುಗಳ ಅನಂತರ ಬೇರೆ

ವಿಭಕ್ತಿ ಪ್ರತ್ಯಯಗಳು ಬರುವುದನ್ನು ವಿವರಿಸುವುದು ಒಂದು ಸಮಸ್ಯೆಯಾಗುತ್ತ ದೆ (೮.೭.೫ ನೋಡಿ).

(ಜ) ಗುಣಪದ (ಗುಣವಚನ), ಸರ್ವನಾಮ, ಗುಣೋಕ್ತಿಯಾಗಿ ಬಂದ ನಾಮಪದ, ಮೊದಲಾದವುಗಳೊಂದಿಗೆ ಘಟಕವನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳು ಬರುತ್ತವೆಯೆಂದು ಹಳೆಗನ್ನಡದ ವೈಯಾಕರಣಿಗಳು ಹೇಳುತ್ತಾರೆ (ಕೇಶಿರಾಜ, ಸೂ. ೨೩೦ ನೋಡಿ). ಆದರೆ, ನಿಜಕ್ಕೂ ಒಳ್ಳಿದನಯ್‌, ಒಳ್ಳಿದರಿರ್‌, ಪೆಅನಯ್‌ ಮೊದಲಾದವುಗಳಲ್ಲಿ, ಮೇಲೆ ೪.೧.೨ರಲ್ಲಿ ವಿವರಿಸಿದ ಹಾಗೆ, ಎರಡೆರಡು ಪ್ರತ್ಯಯಗಳು ಬಂದಿವೆ.

ಮೊದಲಿಗೆ ಗುಣಪದಗಳನ್ನು ನಾಮರೂಪಕ್ಕೆ ಬದಲಾಯಿಸುವುದಕ್ಕಾಗಿ ಅವಕ್ಕೆ ಲಿಂಗ- ವಚನಗಳನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಲಾಗಿದೆ, ಮತ್ತು ಅನಂತರ ಅವನ್ನು ವಿಷಯ ವಾಕ್ಯಗಳ ಕ್ರಿಯಾಪದದ ಜಾಗದಲ್ಲಿ ಇರಿಸಿದಾಗ, ಆಡುಗ ಮತ್ತು ಕೇಳುಗರನ್ನು ಸೂಚಿಸಬೇಕಾಗಿರುವಲ್ಲಿ ಪುರುಷ ಪ್ರತ್ಯಯಗಳನ್ನು ಸೇರಿಸಲಾಗಿದೆ.

Eke →

೪.೩ ಸರ್ವನಾಮಗಳು

ಹೆಚ್ಚಿ ನ ಭಾಷೆಗಳಲ್ಲೂ “ಪುರುಷಪದ’ ಮತ್ತು “ಸರ್ವಪದ’ ಎಂಬುದಾಗಿ ಎರಡು ಪದವರ್ಗಗಳಿಗೆ ಸೇರುವ ಪದಗಳಿರುತ್ತವೆ. ಇವುಗಳಲ್ಲಿ ಪುರುಷಪದಗಳು ಒಂದು ವಾಕ್ಯವನ್ನು ಬಳಸುವ ವ್ಯಕ್ತಿಗಳನ್ನು (ವಾಕ್ಯದ ಆಡುಗ, ಕೇಳುಗ ಮತ್ತು ಇತರ ವ್ಯಕ್ತಿಗಳನ್ನು) ಆ ವಾಕ್ಯದಲ್ಲೇನೇ ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಬೇರೆ ಪದಗಳು ಆ ವ್ಯಕ್ತಿಗಳನ್ನು ಗುರುತಿಸಬಲ್ಲುವಾದರೂ, ಅಂತಹ ವ್ಯಕ್ತಿಗಳು ಆ ವಾಕ್ಯವನ್ನು ಬಳಸುತ್ತಿರುವವರು ಎಂಬುದನ್ನು ಸೂಚಿಸಲಾರವು.

ಉದಾಹರಣೆಗಾಗಿ, ಒಂದು ವಾಕ್ಯದ ಆಡುಗ ಪಾತ್ರವನ್ನು ಆ ವಾಕ್ಯದಲ್ಲೇನೇ ಸೂಚಿಸುವುದಕ್ಕಾಗಿ ಹಳೆಗನ್ನಡದಲ್ಲಿ ಆನ್‌ (ಆಂ) ಪುರುಷಪದವನ್ನೂ, ಕೇಳುಗ ಪಾತ್ರವನ್ನು ಸೂಚಿಸುವುದಕ್ಕಾಗಿ ನೀನ್‌ (ನೀಂ) ಪುರುಷಪದವನ್ನೂ, ಮತ್ತು ಇವರಿಬ್ಬರಿಗಿಂತ ಭಿನ್ನವಾದ ವ್ಯಕ್ತಿಯೊಬ್ಬನನ್ನು ಸೂಚಿಸುವುದಕ್ಕಾಗಿ ತಾನ್‌ (ತಾಂ) ಪುರುಷಪದವನ್ನೂ ಬಳಸಲಾಗುತ್ತ ಹ ಇವುಗಳ ಬಳಕೆಯನ್ನು ಪಂಪ ಭಾರತದ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(೧೩ಕ) ಆಂ ಇಂತಿದನೆ ಬೇಡಿದೆನ್‌ (೨.೬೧) “ಇದನ್ನೇ ನಾನು ಬೇಡಿದ್ದೇನೆ’

(೧೩ಖ) ನೀಂ ಸಾಮಾನ್ಯೆಯಲ್ಲೆ (೮.೫೫ವ) “ನೀನು ಸಾಮಾನ್ಯಳಲ್ಲ’

(೧೩ಗ) ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರ ಮುನೀದ್ರನೊಳ್‌ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್‌ ಬಗೆದು

(೧.೧೧೬ವ)

“ಗಾಂಧಾರಿ ನೂರು ಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸುವವಳಾಗಿ…’

(೧೩ಕ) ವಾಕ್ಯವನ್ನು ದ್ರೋಣಾಚಾರ್ಯನು ಆಡಿದ್ದು, ಆತನನ್ನೇ ಅದರಲ್ಲಿ ಬಂದಿರುವ ಆಂ ಪದ ಸೂಚಿಸುತ್ತದೆ. ಇದಕ್ಕೆ ಬದಲು, (೧೩ಖ) ವಾಕ್ಯವನ್ನು ವಿರಾಟನ ಮಹಾರಾಣಿಯಾದ

14

ಸುದೇಷೆ ಆಡಿದು, ಅದನು ಆಕೆ ಸ್ನೆರಂಧಿ ವೇಷದಲ್ಲಿರುವ ದೌಪದಿಯನುದೇಶಿಸಿ ಹೇಳಿದಾಳೆ. ಣ ಎ 4 ಲಿ (ಪ. ದಾ ಆ ಇ ಓದಿ ಎ

ಹಾಗಾಗಿ, ಅದರ ಕೇಳುಗಳು ದ್ರೌಪದಿಯಾಗಿದ್ದು, ಆಕೆಯನ್ನು ಅದರಲ್ಲಿ ಬಂದಿರುವ ನೀಂ ಪದ ಸೂಚಿಸುತ್ತದೆ.

(೧೩ಗ) ವಾಕ್ಯದಲ್ಲಿ ಕವಿಯೇ ಆ ವಾಕ್ಯದ ಆಡುಗ, ಮತ್ತು ಅವನ ಕಾವ್ಯವನ್ನು ಓದುವವರೇ ಆ ವಾಕ್ಯದ “ಕೇಳುಗರು’; ಇವರಿಬ್ಬರಿಗಿಂತ ಭಿನ್ನವಾಗಿರುವ ಕುಂತಿಯನ್ನು ತಾನ್‌ ಎಂಬ ಮೂರನೆಯ ಪುರುಷಪದ ಸೂಚಿಸುತ್ತದೆ.

ಸರ್ವಪದಗಳಿಗೆ ಈ ಪುರುಷಪದಗಳಿಗಿಂತ ತೀರ ಭಿನ್ನವಾದ ಕೆಲಸವಿದೆ. ಅವುಗಳ ರಚನೆಯೂ ಪುರುಷಪದಗಳ ರಚನೆಗಿಂತ ಭಿನ್ನವಾಗಿದೆ. ಸರ್ವಪದಗಳಲ್ಲೆಲ್ಲ ಸಾಮಾನ್ಯವಾಗಿ ಎರಡೆರಡು ಅಂಗಗಳು ಬರುತ್ತಿದ್ದು, ಅವುಗಳಲ್ಲಿ ಮೊದಲನೆಯ ಅಂಗ ಆ ಸರ್ವಪದದ ಕೆಲಸವೇನೆಂಬುದನ್ನು ಮತ್ತು ಎರಡನೆಯ ಅಂಗ ಅದರ ವ್ಯಾಪ್ತಿಯೇನೆಂಬುದನ್ನು ತಿಳಿಸುತ್ತವೆ.

ಉದಾಹರಣೆಗಾಗಿ, ಎನಿತು ಸರ್ವಪದದಲ್ಲಿ ಮೊದಲನೆಯ ಅಂಗವಾದ ಎ ಎಂಬುದು ಆ ಸರ್ವಪದಕ್ಕೆ ಅನಿಶ್ಚಿ ತತೆಯನ್ನು ಸೂಚಿಸುವ ಕೆಲಸವಿದೆಯೆಂದು ತಿಳಿಸುತ್ತದೆ, ಮತ್ತು ಎರಡನೆಯ ಅಂಗವಾದ ನಿತು ಎಂಬುದು ಆ ಸರ್ವಪದ ಸೂಚಿಸುವ ಅನಿಶ್ಚಿ ತತೆ ವಸ್ತುವೊಂದರ ಪರಿಮಾಣಕ್ಕೆ ಸೀಮಿತವಾಗಿದೆ ಎಂಬುದಾಗಿ ಅದರ ವ್ಯಾಪ್ತಿಯನ್ನು ತಿಳಿಸುತ್ತದೆ (ಹೆಚ್ಚಿನ ವಿವರಗಳಿಗೆ ಭಟ್‌ ೨೦೦೩, ೨೦೦೪ ನೋಡಿ).

ಹೆಚ್ಚಿನ ವ್ಯಾಕರಣಗಳಲ್ಲೂ ಈ ಎರಡು ರೀತಿಯ ಪದಗಳನ್ನು ಒಟ್ಟಾಗಿ “ಸರ್ವನಾಮ’ ಎಂಬ ಒಂದು ಪದವರ್ಗದಲ್ಲಿ ಸೇರಿಸಿ ಹೇಳುವುದು ರೂಢಿ. ಆದರೆ, ನಿಜಕ್ಕೂ ಈ ಎರಡು ರೀತಿಯ ಪದಗಳ ನಡುವೆ ಯಾವ ಸಾದೃಶ್ಯವೂ ಇಲ್ಲ. ಹಾಗಾಗಿ, ಅವನ್ನು ಬೇರೆ ಬೇರೆ ಪದವರ್ಗಗಳಲ್ಲಿರಿಸಿ ಹೇಳುವುದೇ ಒಳ್ಳೆಯದು.

ಈ ಎರಡು ಪದವರ್ಗಗಳ ಮಟ್ಟಿಗೆ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಇವುಗಳಲ್ಲಿ ಪುರುಷಪದಗಳನ್ನು ಕೆಳಗೆ (೪.೪)ನೇ ವಿಭಾಗದಲ್ಲೂ ಸರ್ವಪದಗಳನ್ನು ಮುಂದೆ (೪.೫)ನೇ ವಿಭಾಗದಲ್ಲೂ ಪರಿಶೀಲಿಸಲಾಗುವುದು.

Eke →

೪.೪ ಪ್ರರುಷಪದಗಳು

ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಆನ್‌, ನೀನ್‌ ಮತ್ತು ತಾನ್‌ ಎಂಬುದಾಗಿ ಮೂರು ಪುರುಷಪದಗಳು ಬಳಕೆಯಲ್ಲಿದ್ದು, ಇವು ವಾಕ್ಯದ ಆಡುಗ, ಕೇಳುಗ ಮತ್ತು ಇತರ ಎಂಬುದಾಗಿ ವಾಕ್ಯವನ್ನು ಉಂಟುಮಾಡುವ ಮತ್ತು ಬಳಸುವ ಕೆಲಸಕ್ಕೆ ಸಂಬಂದಿಸಿದ ವ್ಯಕ್ತಿಗಳನ್ನು ಸೂಚಿಸುತ್ತವೆ.

ಆದರೆ, ಸಂಸ್ಕೃತದಲ್ಲಿ ಅಹಂ ಮತ್ತು ತ್ವಂ ಎಂಬುದಾಗಿ ಎರಡು ಪುರುಷಪದಗಳು ಮಾತ್ರ ಬಳಕೆಯಲ್ಲಿವೆ. ಆಡುಗ ಮತ್ತು ಕೇಳುಗರಿಗಿಂತ ಭಿನ್ನವಾಗಿರುವ ವ್ಯಕ್ತಿಯನ್ನು ಸೂಚಿಸುವಂತಹ ವಿಶಿಷ್ಟವಾದ ಪುರುಷಪದ ಸಂಸ್ಕೃತದಲ್ಲಿಲ್ಲ (೪.೪.೨ ನೋಡಿ).

೪.೪.೧ ಕೇಳುಗನ ಸೇರಿಕೆ

ಪುರುಷಪದಗಳ ಬಹುವಚನ ರೂಪಗಳಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಹಳೆಗನ್ನಡದಲ್ಲಿ ಆಡುಗ ಮತ್ತು ಕೇಳುಗರನ್ನು ಸೂಚಿಸುವ ಆನ್‌ ಮತ್ತು ನೀನ್‌ ಎಂಬ ಎರಡು ಪುರುಷ ಪದಗಳಿಗೆ ಬಹುವಚನದಲ್ಲಿ ಮೂರು ರೂಪಗಳಿವೆ:

ಮೊದಲನೆಯದಾಗಿ, ಆನ್‌ ಎಂಬುದರ ಕೊನೆಯ ನಕಾರವನ್ನು ಮಕಾರವಾಗಿ ಬದಲಾಯಿಸಿ ತಯಾರಿಸಿದ ಆಮ್‌ ಎಂಬ ಬಹುವಚನ ರೂಪದ ಮೂಲಕ ಹಳೆಗನ್ನಡದಲ್ಲಿ “ಆಡುಗ ಮತ್ತು ಬೇರೊಬ್ಬ ವ್ಯಕ್ತಿ’ ಎಂಬ ಅರ್ಥವನ್ನು ಸೂಚಿಸಲಾಗುತ್ತದೆ.

ಎರಡನೆಯದಾಗಿ, ನೀನ್‌ ಎಂಬುದರ ಕೊನೆಯ ನಕಾರವನ್ನು ಮಕಾರವಾಗಿ ಬದಲಾಯಿಸಿ ತಯಾರಿಸಿದ ನೀಮ್‌ ಎಂಬ ಬಹುವಚನ ರೂಪದ ಮೂಲಕ “ಕೇಳುಗ ಮತ್ತು ಬೇರೊಬ್ಬ ವ್ಯಕ್ತಿ ಸೆ ಎಂಬ ಅರ್ಥವನ್ನು, ಇಲ್ಲವೇ “ಒಬ್ಬನಿಗಿಂತ ಜಾಸ್ತಿ ಕೇಳುಗರು’ ಎಂಬ ಅರ್ಥವನ್ನು ಸೂಚಿಸಲಾಗುತ್ತದೆ.

ಮೂರನೆಯದಾಗಿ, ಆನ್‌ ಎಂಬುದರ ಕೊನೆಯ ನಕಾರವನ್ನು ಮಕಾರವಾಗಿ ಬದಲಾಯಿಸುವುದರೊಂದಿಗೆ ಅದರ ಸುರುವಿನಲ್ಲಿ ಒಂದು ನಕಾರವನ್ನೂ ಸೇರಿಸಿ ತಯಾರಿಸಿದ ನಾಮ್‌ ಎಂಬ ಬಹುವಚನ ರೂಪದ ಮೂಲಕ “ಆಡುಗ ಮತ್ತು ಕೇಳುಗ’ ಎಂಬ ಅರ್ಥವನ್ನು ಸೂಚಿಸಲಾಗುತ್ತದೆ.

ಈ ರೀತಿ, ಹಳೆಗನ್ನಡದ ಆನ್‌ ಮತ್ತು ನಾನ್‌ ಎಂಬ ಪುರುಷಪದಗಳಿಗೆ ಮೂರು ಬಹುವಚನ ರೂಪಗಳಿವೆಯಾದ ಕಾರಣ, ಆಮ್‌ ಎಂಬುದಕ್ಕೆ ಆಡುಗ ಮತ್ತು ಕೇಳುಗರ ಸೇರಿಕೆಯನ್ನು ಸೂಚಿಸುವ ಅರ್ಥವಿಲ್ಲ.

ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು.

(೧೪ಕ) ಆಮ್‌ ಅಲ್ಲಿಗೆ ಪೋಪೆವು (೪.೪೮) “ನಾವು (ಚಕ್ರವಾಕಪಕ್ಷಿಗಳು) ಅಲ್ಲಿಗೆ ಹೋಗುತ್ತೇವೆ’ (೧೪ಖ) ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ (೧.೭೦) “ನೀವು (ನನ್ನನ್ನು) ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ’

(೧೫ಕ) ನಾಮ್‌ ಆಡುವಮೆ ಬನ್ನಿ (೬.೭೦) “ನಾವು ಆಡೋಣವೇ? ಬನ್ನಿ’

(೧೫ಖ) ತೊಡರ್ದರ್‌ ನಮ್ಮಯ ಭಕ್ಷ! ದೊಳ್‌ (೩.೧೨) “ನಮ್ಮ ಆಹಾರದಲ್ಲಿ ಸಿಕ್ಕಿಬಿದ್ದ ರು’

ಮೇಲೆ (೧೪ಕ)ದಲ್ಲಿ ಬಂದಿರುವ ಆಮ್‌ ಪದಕ್ಕೆ ಆಡುಗ (ಚಕ್ರವಾಕ ಪಕ್ಷಿ) ಮತ್ತು ಇತರರು (ಬೇರೆ ಚಕ್ರವಾಕಪಕ್ಷಿಗಳು) ಎಂಬ ಅರ್ಥವಿದೆಯಲ್ಲದೆ, ಆ ವಾಕ್ಯದ ಕೇಳುಗರಾಗಿರುವ ಇತರ ಪಕ್ಷಿಗಳನ್ನು ಆಡುಗನೊಂದಿಗೆ ಸೇರಿಸಿ ಹೇಳುವ ಅರ್ಥವಿಲ್ಲ. ಇದೇ ರೀತಿಯಲ್ಲಿ, (೧೪ಖ)ದಲ್ಲಿ ಬಂದಿರುವ ಎಮ್ಮ ಎಂಬುದಕ್ಕೂ ಆಡುಗನೊಂದಿಗೆ ಕೇಳುಗನನ್ನು ಸೇರಿಸಿ ಹೇಳುವ ಅರ್ಥವಿಲ್ಲ.

ಇದಕ್ಕೆ ಬದಲು, (೧೫ಕ)ದಲ್ಲಿ ಬಂದಿರುವ ನಾಮ್‌ ಪದಕ್ಕೆ ಆಡುಗನಾಗಿರುವ ದುರ್ಯೋಧನನೊಂದಿಗೆ ಆ ವಾಕ್ಯದ ಕೇಳುಗನಾಗಿರುವ ಧರ್ಮರಾಯನನ್ನೂ ಸೇರಿಸಿ ಹೇಳುವ ಅರ್ಥವಿದೆ. ಇದೇ ರೀತಿಯಲ್ಲಿ, (೧೫ಖ)ದಲ್ಲಿ ಬಂದಿರುವ ನಮ್ಮಯ ಪುರುಷಪದಕ್ಕೆ ಆಡುಗನಾದ ಹಿಡಿಂಬನೊಂದಿಗೆ ಕೇಳುಗಳಾಗಿರುವ ಹಿಡಿಂಬೆಯನ್ನೂ ಸೇರಿಸಿ ಹೇಳುವ ಅರ್ಥವಿದೆ.

ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯಗಳಲ್ಲಿ ಈ ಮೂರು ರೀತಿಯ ಬಹುವಚನ ರೂಪಗಳೂ ಒಟ್ಟಿಗೆ ಬಂದಿದ್ದು, ಅವುಗಳ ನಡುವಿರುವ ಅರ್ಥ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗಿದೆ.

(೧೫ಗ) ನಾಮೆಲ್ಲಂ ಒಂದೆ ಗರುಡಿಯೊಳ್‌ ಓದಿದ ಮಾನಸರೆವು; ಎಮ್ಮಂ ನಿಮ್ಮಡಿ ಕೆಮ್ಮನೆ ಬಟಲಿಸವೇಡ (೯.೪೮ವ) “ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರಾಗಿದ್ದೇವೆ; ನೀವು ನಮ್ಮನ್ನು ವೃಥಾ ಆಯಾಸಪಡಿಸಬೇಡಿ’

ಹಳೆಗನ್ನಡದ ಪುರುಷಪದಗಳಲ್ಲಿ ಕಾಣಿಸುವ ಈ ವ್ಯತ್ಯಾಸ ಸಂಸ್ಕೃತದಲ್ಲಿಲ್ಲ. ಆ ಭಾಷೆಯಲ್ಲಿ ಅಹಂ ಮತ್ತು ತ್ವಂ ಎಂಬ ಎರಡು ಪುರುಷಪದಗಳು ಮಾತ್ರ ಬಳಕೆಯಲ್ಲಿದ್ದು, ಇವುಗಳ ದ್ವಿವಚನ ಇಲ್ಲವೇ ಬಹುವಚನ ರೂಪಗಳಿಗೆ, ಹಳೆಗನ್ನಡದಲ್ಲಿರುವ ಹಾಗೆ, ಆಡುಗ ಮತ್ತು ಕೇಳುಗರ ಸೇರಿಕೆಯನ್ನು ಇತರ ಸೇರಿಕೆಗಳಿಂದ ಬೇರ್ಪಡಿಸಿ ಹೇಳುವ ಶಕ್ತಿಯಿಲ್ಲ.

ಉದಾಹರಣೆಗಾಗಿ, ಅಹಂ ಪದದ ದ್ವಿವಚನ ರೂಪವಾಗಿರುವ ಆವಾಂ ಎಂಬುದರ ಬಳಕೆಯಾಗಿರುವ ಕೆಳಗಿನ ವಾಕ್ಯವನ್ನು ಗಮನಿಸಬಹುದು.

(೧೬ಕ) ಆವಾಂ ನಗರಂ ಗಚ್ಛಾಮಃ (೧) “ನಾವು ಪೇಟೆಗೆ ಹೋಗೋಣ” (೨) “ನಾವು ಪೇಟೆಗೆ ಹೋಗುತ್ತೇವೆ’

(೧೬ಕ) ವಾಕ್ಯ ಎರಡು ಅರ್ಥಗಳಲ್ಲಿ ಬರಲು ಸಾಧ್ಯವಿದ್ದು, ಅದರಲ್ಲಿ ರುವ ಆವಾಂ ಪದಕ್ಕೆ ಮೊದಲನೆಯ ಅರ್ಥದಲ್ಲಿ ಬಳಕೆಯಾದಾಗ “ನಾನು ಮತ್ತು ನೀನು’ ಎಂಬುದಾಗಿ ಆಡುಗನೊಂದಿಗೆ ಕೇಳುಗನನ್ನು ಸೇರಿಸಿ ಹೇಳುವ ಅರ್ಥವೂ, ಎರಡನೆಯ ಅರ್ಥದಲ್ಲಿ ಬಳಕೆಯಾದಾಗ “ನಾನು ಮತ್ತು ಅವನು’ ಎಂಬುದಾಗಿ ಕೇಳುಗನನ್ನು ಸೇರಿಸದೆ ಬೇರೊಬ್ಬನನ್ನು ಸೇರಿಸಿ ಹೇಳುವ ಅರ್ಥವೂ ಬರುತ್ತದೆ. ಆದರೆ, ಹಳೆಗನ್ನಡದ ಹಾಗೆ ಇಲ್ಲಿ ಎರಡು ಬೇರೆ ಬೇರೆ ಪುರುಷ ಪದರೂಪಗಳು ಬಳಕೆಯಾಗುವುದಿಲ್ಲ.

ಹಳೆಗನ್ನಡದ ಈ ವ್ಯತ್ಯಾಸ ಹೊಸಗನ್ನಡದಲ್ಲೂ ಇಲ್ಲ ಎಂಬುದು (೧೬ಕ) ಸಂಸ್ಕೃತ ವಾಕ್ಯಕ್ಕೆ ಕೊಟ್ಟಿರುವ ಹೊಸಗನ್ನಡದ (೧-೨) ಅನುವಾದ ವಾಕ್ಯಗಳಲ್ಲಿ ಕಾಣಬಹುದು. ಆಡುಗನೊಂದಿಗೆ ಕೇಳುಗನನ್ನು ಸೇರಿಸದಿರುವ (೧)ನೇ ಅನುವಾದ ವಾಕ್ಯದಲ್ಲಿ, ಮತ್ತು ಕೇಳುಗನನ್ನು ಸೇರಿಸಿರುವ (೨)ನೇ ಅನುವಾದ ವಾಕ್ಯದಲ್ಲಿ - ಈ ಎರಡು ಸಂದರ್ಭಗಳಲ್ಲೂ ಹೊಸಗನ್ನಡದಲ್ಲಿ ನಾವು ಎಂಬ ಪುರುಷಪದವೇ ಬಳಕೆಯಾಗಿದೆ. (೧೫ಕ-ಗ) ವಾಕ್ಯಗಳ ಹೊಸಗನ್ನಡ ಅನುವಾದಗಳಲ್ಲೂ ಈ ವಿಷಯ ಸೂಚಿತವಾಗಿದೆ.

ಹಳೆಗನ್ನಡದ ಪುರುಷಪದಗಳಲ್ಲಿ ಕಾಣಿಸುವ ಈ ವ್ಯತ್ಯಾಸ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಇವತ್ತಿಗೂ ಉಳಿದುಕೊಂಡಿದೆ. ಉದಾಹರಣೆಗಾಗಿ, ಕರಾವಳಿಯ ಹವ್ಯಕ ಕನ್ನಡ ಪ್ರಭೇದದಲ್ಲಿ ಹಳೆಗನ್ನಡದ ಆಮ್‌ ಎಂಬುದಕ್ಕೆ ಎಂಗೊ ಎಂಬ ರೂಪವೂ ಮತ್ತು ನಾಮ್‌ ಎಂಬುದಕ್ಕೆ ನಾವು ಎಂಬ ರೂಪವೂ ಬಳಕೆಯಲ್ಲಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯಗಳನ್ನು ಗಮನಿಸಬಹುದು.

(೧೬ಖ) ನಾವು ಪೇಟೆಗೆ ಹೋಪೊ’ “ನಾವು ಪೇಟೆಗೆ ಹೋಗೋಣ’

(೧೬ಗ) ಎಂಗೊ ಪೇಟೆಗೆ ಹೋವುತ್ತೆಯೊ’ “ನಾವು ಪೇಟೆಗೆ ಹೋಗುತ್ತೇವೆ’

(೧೬ಖ)ದಲ್ಲಿ ಬಂದಿರುವ ನಾವು ಎಂಬುದು ಆಡುಗನೊಂದಿಗೆ ಕೇಳುಗನನ್ನೂ ಸೇರಿಸಿ ಸೂಚಿಸುತ್ತದೆ, ಆದರೆ (೧೬ಗ)ದಲ್ಲಿ ಬಂದಿರುವ ಎಂಗೊ ಎಂಬುದು ಆಡುಗನೊಂದಿಗೆ ಕೇಳುಗನನ್ನು ಹೊರತುಪಡಿಸಿ, ಬೇರೆ ಯಾವುದೋ ವ್ಯಕ್ತಿಯನ್ನು (ಅಥವಾ ವ್ಯಕ್ತಿಗಳನ್ನು) ಸೇರಿಸಿ ಸೂಚಿಸುತ್ತದೆ. ಈ ಎರಡು ಸಂದರ್ಭಗಳಲ್ಲೂ ಬರಹದ ಕನ್ನಡದಲ್ಲಿ ನಾವು ಎಂಬುದೇ ಬಳಕೆಯಾಗುತ್ತದೆ.

ಪುರುಷಪದಗಳ ಬಳಕೆಯಲ್ಲಿ ಹಳೆಗನ್ನಡದಲ್ಲಿ ಮಾತ್ರ ಕಾಣಿಸುವ, ಮತ್ತು ಸಂಸ್ಕೃತದಲ್ಲಿಲ್ಲದ ಈ ವೈಶಿಷ್ಟ್ಯವನ್ನು ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಕಿಟ್ಟೆಲ್‌ (೧೯೦೩:೭೮) ಕೂಡ ಈ ಪದಗಳ ಆದಿಯಲ್ಲಿ ಬರುವ ನಕಾರಕ್ಕೆ ವಿಶಿಷ್ಟವಾದ ಅರ್ಥವನ್ನು ಕೊಡುವ ಶಕ್ತಿಯಿದೆಯೆಂಬುದನ್ನು ಗಮನಿಸಿಲ್ಲ.

ಕನ್ನಡ ಕೈಪಿಡಿಯಲ್ಲೂ (೧೯೨೭:೩೬೭) ಆಮ್‌ ಮತ್ತು ನಾಮ್‌ ಎಂಬವುಗಳು ಪ್ರಥಮ ಪುರುಷದ ಎರಡು ರೂಪಗಳೆಂದಿಷ್ಟೇ ಹೇಳಲಾಗಿದೆ. ಕಾಲ್ಡ್‌ವೆಲ್‌ (೧೯೧೩) ಕೂಡ, ಕನ್ನಡದ ಪುರುಷ ಪದಗಳಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಗಮನಿಸಿರಲಿಲ್ಲ.

ಆದರೆ, ಇದು ತಪ್ಪು, ಹಳೆಗನ್ನಡದಲ್ಲೂ ಈ ಅರ್ಥಭೇದ ಸೂಚಿತವಾಗುತ್ತಿತ್ತು ಎಂಬುದನ್ನು ಆರ್‌. ನರಸಿಂಹಾಚಾರ್‌ (೧೯೨೪:೮೪) ತೋರಿಸಿಕೊಟ್ಟಿದ್ದಾರೆ. ಹತ್ತನೇ ಶತಮಾನದ ವಡ್ಡಾರಾಧನೆಯಲ್ಲೂ ಆಮ್‌, ಎಮಗೆ ಮತ್ತು ನಾಮ್‌, ನಮಗೆ ಎಂಬವುಗಳ ನಡುವೆ ಈ ಅರ್ಥವ್ಯತ್ಯಾಸವಿತ್ತೆಂಬುದನ್ನು ಗಾಯ್‌ (೧೯೫೫) ತೋರಿಸಿಕೊಟ್ಟಿದ್ದಾರೆ.

ಬಹುಶಃ ಹಳೆಗನ್ನಡದಲ್ಲೇನೇ ಬೇರೆ ಕೆಲವು ಕಾವ್ಯಗಳಲ್ಲಿ ಈ ವ್ಯತ್ಯಾಸ ಉಳಿದಿಲ್ಲದಿರಲು ಸಾಧ್ಯವಿದೆ. “ಪ್ರಾಚೀನ ಪ್ರಯೋಗಗಳನ್ನು ಗಮನಿಸಿದರೆ ಇವು ಪಂರ್ಕಾಯವಾಗಿ ಬಳಕೆಯಾಗಿವೆಯಲ್ಲದೆ ಪದಗಳ ಅರ್ಥದಲ್ಲಿ ಅಲ್ಲ’ ಎಂಬುದಾಗಿ ವೆಂಕಟಾಚಲ ಶಾಸ್ತ್ರಿ ಗಳು (೧೯೯೪:೬೮) ಹೇಳಿರುವುದು ಅಂತಹ ಕಾವ್ಯಗಳಲ್ಲಿ ಕಾಣಿಸುವ ಪ್ರಯೋಗಗಳ ಆಧಾರದ ಮೇಲಿರಬಹುದು.

೪.೪.೨ ಮೂರನೆಯ ವ್ಯಕ್ತಿ

ಪುರುಷಪದಗಳ ಮಟ್ಟಿಗೆ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಹಳೆಗನ್ನಡದಲ್ಲಿ ಆನ್‌, ನೀನ್‌ ಮತ್ತು ತಾನ್‌ ಎಂಬುದಾಗಿ ಮೂರು ಪುರುಷಪದಗಳು ಬಳಕೆಯಲ್ಲಿವೆ. ಇವು ಮೇಲೆ ಸೂಚಿಸಿದ ಹಾಗೆ, ವಾಕ್ಯದ ಆಡುಗ, ಕೇಳುಗ ಮತ್ತು ಇತರ ಎಂಬುದಾಗಿ ಒಂದು ವಾಕ್ಯದ ಬಳಕೆಗೆ ಸಂಬಂಧಿಸಿದಂತೆ ಮೂರು ರೀತಿಯ ಪಾತ್ರಗಳನ್ನು ಸೂಚಿಸಬಲ್ಲುವು.

ಮೂರನೆಯ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ತಾನ್‌ ಮತ್ತು ತಾಮ್‌ ಎಂಬವುಗಳ ಬಳಕೆಯಾಗುವುದನ್ನು ಪಂಪಭಾರತದ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(೧೭ಕ) ತಾನಾರಂದಮಲ್ಲ, ಅವಂ ನಿನ್ನನೆ ಪೋಲ್ವಂ (೮.೧೧)

[4

ಅವನು (ಬೇರೆ) ಯಾರ ಹಾಗೂ ಅಲ್ಲ, ಅವನು ನಿನ್ನನ್ನೇ ಹೋಲುತ್ತಾನೆ’

(೧೭ಖ) ನೀಮುಂ ತಾಮುಂ ಒಂದೆಡೆಯೊಳಿರೆ ಕಿಸುರುಂ ಕಲಹಮುಂ ಎಂದುಂ ಕುಂದದು (೪.೮ವ) | “ನೀವೂ ಅವರೂ ಒಂದೇ ಕಡೆ ಇದ್ದರೆ ಅಸೂಯೆಯೂ ಕಲಹವೂ ಎಂದೂ ತಪ್ಪುವುದಿಲ್ಲ’

ಅವನ್‌, ಅವರ್‌ ಮೊದಲಾದ ಸರ್ವಪದಗಳಿಗೂ ಮತ್ತು ತಾನ್‌, ತಾಮ್‌ ಎಂಬ ಪುರುಷಪದಗಳಿಗೂ ನಡುವಿರುವ ವ್ಯತ್ಯಾಸವೇನೆಂದರೆ, ತಾನ್‌, ತಾಮ್‌ ಎಂಬವುಗಳ ಬಳಕೆ ಅವನ್ನು ಬಳಸಿರುವ ವಾಕ್ಯದ ಆಡುಗ ಮತ್ತು ಕೇಳುಗರಿಗೆ ಸಂಬಂಧಿಸಿದೆ. ಅವರಿಬ್ಬರಿಗಿಂತಲೂ ಭಿನ್ನವಾದ ವ್ಯಕ್ತಿಗಳು) ಎಂಬರ್ಥ ಅವಕ್ಕಿದೆ. ಅವನ್‌, ಅವರ್‌ ಮೊದಲಾದವುಗಳಿಗೆ ಈ ರೀತಿ ವಾಕ್ಯದ ಆಡುಗ ಮತ್ತು ಕೇಳುಗರಿಗೆ ಸಂಬಂಧಿಸಿರುವಂತಹ ಅರ್ಥವಿಲ್ಲ.

ತಾನ್‌ ಎಂಬುದರ ಬಹುವಚನ ರೂಪ, ಉಳಿದೆರಡು ಪುರುಷಪದಗಳ ಬಹುವಚನ ರೂಪಗಳ ಹಾಗೆ, ನಕಾರದ ಬದಲು ಮಕಾರವನ್ನು ಬಳಸುವುದರ ಮೂಲಕ ಸಿದ್ಧಿ ಸುತ್ತದೆ, ಮತ್ತು ವಿಭಕ್ತಿ ಪ್ರತ್ಯಯಗಳೊಂದಿಗೆ ಬಂದಾಗ, ಅದರ ಉದ್ದಸ್ವರ, ಉಳಿದೆರಡು ಪುರುಷ ಪದಗಳ ಉದ್ದಸ್ವರದ ಹಾಗೆ, ಗಿಡ್ಡ ಸ್ವರವಾಗಿ ಬದಲಾಗುತ್ತದೆ (ಆನ್‌-ಎನಗೆ, ನೀನ್‌-ನಿನಗೆ, ತಾನ್‌- ತನಗೆ, ಇತ್ಯಾದಿ).

ಇದಲ್ಲದೆ, ಅವನ್‌, ಅವರ್‌ ಮೊದಲಾದವುಗಳಿಗಿರುವಂತಹ ಒಳರಚನೆ ತಾನ್‌ ಎಂಬುದಕ್ಕಿಲ್ಲ (೪.೫ ನೋಡಿ).

ಸಂಸ್ಕೃತದಲ್ಲಿ ಅಹಂ ಮತ್ತು ತ್ವಂ ಎಂಬುದಾಗಿ ಎರಡು ಪುರುಷಪದಗಳು ಮಾತ್ರ ಇವೆ. ಹಳೆಗನ್ನಡದ ತಾನ್‌ ಎಂಬುದಕ್ಕೆ ಪ್ರತಿಯಾಗಿ ಕೆಲವು ಸಂದರ್ಭಗಳಲ್ಲಿ ಸಂಸ್ಕೃತದ ಆತ್ಮನ್‌ ಇಲ್ಲವೇ ಸ್ವ ಪದವನ್ನು ಬಳಸಲು ಸಾಧ್ಯವಿದೆಯಾದರೂ, ಅವು ತಾನ್‌ ಎಂಬುದರ ಹಾಗೆ ಪುರುಷಪದಗಳಲ್ಲ. ಸ್ವ ಎಂಬ ಪದ ಸಂಸ್ಕೃತದ ಸರ್ವನಾಮವೆಂಬ ಪದವರ್ಗದಲ್ಲಿ ಸೇರುವುದೇನೋ ನಿಜ, ಆದರೆ ಈ ಪದವೂ ಸಂಸ್ಕೃತದ ಪುರುಷಪದಗಳಿಗಿಂತ ಭಿನ್ನವಾಗಿದೆ.

Eke →

೪.೫ ಸರ್ವಪದಗಳು

ಮೇಲೆ ಸೂಚಿಸಿದ ಹಾಗೆ, ಸರ್ವಪದಗಳಲ್ಲಿ ಸಾಮಾನ್ಯವಾಗಿ ಎರಡು ಅಂಗಗಳಿದ್ದು, ಅವುಗಳಲ್ಲಿ ಒಂದು ಆ ಪದದ ಕೆಲಸವೇನೆಂಬುದನ್ನೂ ಇನ್ನೊಂದು ಅದರ ವ್ಯಾಪ್ತಿಯೇನೆಂಬುದನ್ನೂ ತಿಳಿಸುತ್ತವೆ. ಉದಾಹರಣೆಗಾಗಿ, ಇವನ್‌ ಎಂಬ ಸರ್ವಪದದಲ್ಲಿ ಮೊದಲನೆಯ ಅಂಗವಾದ ಇ ಎಂಬುದು ಆ ಪದಕ್ಕೆ “ಸೂಚಿಸುತ್ತಿರುವ ವ್ಯಕ್ತಿ ಆಡುಗನ ಹತ್ತಿರ ಇರುವವನು’ ಎಂಬುದಾಗಿ ಆ ವ್ಯಕ್ತಿಯ ಜಾಗವನ್ನು ನಿರ್ದೇಶಿಸುವಂತಹ ಕೆಲಸವಿದೆಯೆಂದು ತಿಳಿಸುತ್ತದೆ, ಮತ್ತು ಎರಡನೆಯ ಅಂಗವಾದ ಅನ್‌ ಎಂಬುದು ಆ ಪದಕ್ಕೆ ಗಂಡಸರನ್ನು ಸೂಚಿಸುವಷ್ಟಕ್ಕೇ ಸೀಮಿತವಾಗಿರುವಂತಹ ವ್ಯಾಪ್ತಿಯಿದೆಯೆಂದು ತಿಳಿಸುತ್ತದೆ.

ಈ ಕಾರಣಕ್ಕಾಗಿ, ಒಂದು ಭಾಷೆಯಲ್ಲಿ ಬಳಕೆಯಾಗುವ ಸರ್ವಪದಗಳನ್ನೆಲ್ಲ ಒಂದು ಕೋಷ್ಟಕದಲ್ಲಿ ಇರಿಸಿ ಹೇಳಲು ಸಾಧ್ಯವಾಗುತ್ತದೆ. ಈ ಕೋಷ್ಟಕದ ಕಾಲಂಗಳು ಆ ಪದಗಳ ಮತ್ತು ಸಾಲುಗಳು ಅವುಗಳ ವ್ಯಾಪ್ತಿಯನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಹಳೆಗನ್ನಡದ ಸರ್ವಪದಗಳನ್ನು ಕೆಳಗೆ ಕೊಟ್ಟಿರುವ ಕೋಷ್ಟಕದಲ್ಲಿರಿಸಿ ಹೇಳಲು ಸಾಧ್ಯವಿದೆ.

ನಿರ್ದೇಶಕ ಪದಗಳು ಅನಿಶ್ಚಿತ ಪದಗಳು ದೂರದವು ಹತ್ತಿರದವು ನಡುವಿನವು ನಾಮಪದಗಳು ಅವನ್‌ ಇವನ್‌ ಉವನ್‌ ಆವನ್‌ ಅವಳ್‌ ಇವಳ್‌ ಉವಳ್‌ ಆವಳ್‌ ಅವರ್‌ ಇವರ್‌ ಉವರ್‌ ಆವರ್‌ ಅದು ಇದು ಉದು ಆವುದು ಅವು ಇವು ಉವು ಆವುವು ಆತನ್‌ ಈತನ್‌ ಊತನ್‌ ——— ಆಕೆ ಈಕೆ ಊಕೆ ದಾರರ ಗುಣಪದಗಳು ಆ ಈ ಊ ಆವ, ಏ ಅನಿತು ಇನಿತು ಉನಿತು ಎನಿತು ಕ್ರಿಯಾಗುಣಪದಗಳು ಅಲ್ಲಿ ಇಲ್ಲಿ ಉಲ್ಲಿ ಎಲ್ಲಿ ಅಂದು ಇಂದು ಉಂದು ಎಂದು ಅಂತು ಇಂತು ಉಂತು ಎಂತು ಅನ್ನೆ ಇನ್ನೆ ಉನ್ನೆ ಎನ್ನೆ ಅತ ಇತ ಉತ ಎತ

ಹಳೆಗನ್ನಡದ ಏನ್‌ ಮತ್ತು ಏಕೆ ಎಂಬವುಗಳೂ ಈ ಪಟ್ಟಿಗೆ ಸೇರಬೇಕಾಗಿದ್ದರೂ, ಅವುಗಳಿಗೆ ಸಮನಾಗಿರುವ ನಿರ್ದೇಶಕಪದಗಳಿಲ್ಲ. ಇದೇ ರೀತಿಯಲ್ಲಿ ಹಳೆಗನ್ನಡದ ಏವನ್‌, ಏವಳ್‌, ಏವರ್‌, ಏವುದು ಮತ್ತು ಏವುವು ಎಂಬ ಪದರೂಪಗಳಲ್ಲಿ ಕ್ರಿಯಾಪದವರ್ಗಕ್ಕೆ ಸೇರಬಲ್ಲ ಅನಿಶ್ಚಿತ ಸರ್ವಪದವೊಂದರ ಬಳಕೆಯಿರುವ ಹಾಗೆ ಕಾಣಿಸುತ್ತದೆ. ಆದರೆ, ಇದಕ್ಕೆ ಸಮನಾದ ನಿರ್ದೇಶಕ ಪದಗಳೂ ಹಳೆಗನ್ನಡದಲ್ಲಿಲ್ಲ.

ಆವನ್‌, ಆವಳ್‌, ಆವುದು, ಎಲ್ಲಿ, ಎಂತು ಮೊದಲಾದುವನ್ನು ಸಾಮಾನ್ಯವಾಗಿ “ಪ್ರಶ್ನಾರ್ಥಕ’ ಪದಗಳೆಂದು ಕರೆಯಲಾಗುತ್ತದೆ. ಆದರೆ, ಅವನ್ನಿಲ್ಲಿ ಅನಿಶ್ಚಿತ ಪದಗಳೆಂದು ಕರೆಯಲಾಗಿದೆ. ಇದಕ್ಕೆ ಕಾರಣವೇನೆಂಬುದನ್ನು, ಮತ್ತು ಪ್ರಶ್ನೆಯನ್ನು ಸೂಚಿಸುವುದಕ್ಕಿಂತಲೂ ಅನಿಶ್ಚಿತತೆಯನ್ನು ಸೂಚಿಸುವುದೇ ಈ ಪದಗಳ ನಿಜವಾದ ಕೆಲಸ ಎಂಬುದನ್ನು (ಭಟ್‌ ೨೦೦೩, ೨೦೦೪)ರಲ್ಲಿ ನಾನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದೆ ನೆ.

೪.೫.೧ ಸರ್ವನಾಮಗಳ ಪಟ್ಟಿ

ಸಂಸ್ಕೃತ ವ್ಯಾಕರಣಗಳಲ್ಲಿ “ಸರ್ವಾದಿ’ ಎಂಬ ಪಟ್ಟಿಯಲ್ಲಿ ಸರ್ವ, ವಿಶ್ವ, ಏಕ, ತದ್‌, ಏತದ್‌, ಇದಂ, ಕಿಂ, ಅನ್ಯ, ಇತರ, ಕತರ, ಯತರ, ಉಭಯ, ಅಲ್ಪ ಮೊದಲಾದ ಮೂವತ್ತೈದು ಪದಗಳನ್ನು ಒಟ್ಟಿಗೆ ಸೇರಿಸಿ ಹೇಳಲಾಗಿದ್ದು, ಅವನ್ನು ಸರ್ವನಾಮಗಳೆಂದು ಕರೆಯಲಾಗಿದೆ.

ಆದರೆ ಇದರಲ್ಲಿ ಬರುವ ಪದಗಳಲ್ಲಿ ಹೆಚ್ಚಿನವೂ, ಮೇಲೆ ಕೋಷ್ಟಕದಲ್ಲಿ ಕೊಟ್ಟಿರುವ ಪದಗಳ ಹಾಗೆ, ಒಂದು ನಿಶ್ಚಿತವಾದ ಒಳರಚನೆಯಿರುವವುಗಳಲ್ಲ. ಅವುಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ಬೇರೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಂದ ಭಿನ್ನವಾಗಿವೆಯೆಂಬುದೇ ಈ ಪಟ್ಟಿಗೆ ಆಧಾರ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸರ್ವ “ಎಲ್ಲ’ ಸರ್ವನಾಮ ಮಾತ್ರವಲ್ಲದೆ ಅದೇ ರೂಪದ ಸರ್ವ “ಶಿವ’ ನಾಮಪದವೂ ಇದೆ. ಈ ಎರಡು ಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳ ರೂಪದಲ್ಲಿ ವ್ಯತ್ಯಾಸಗಳಿವೆ.

ಎಲ್ಲ ಶಿವ ಪ್ರಥಮಾ-ಬಹುವಚನ ಸರ್ವೇ ಸರ್ವಾಃ ಚತುರ್ಥೀ-ಏಕವಚನ ಸರ್ವಸ್ಮೆ ಲ ಸರ್ವಾಯ ಪಂಚಮೀ-ಏಕವಚನ ಸರ್ವಸ್ಮಾತ್‌ ಸರ್ವಾತ್‌ ಸಪ್ತಮೀ-ಏಕವಚನ ಸರ್ವಸ್ಮಿನ್‌ ಸರ್ವೇ ಷಷ್ಠೀ-ಬಹುವಚನ ಸರ್ವೇಷಾಂ ಸರ್ವಾಣಾಂ

ಸರ್ವ ಪಟ್ಟಿಯಲ್ಲಿ ಬಂದಿರುವ ಇತರ ಪದಗಳಿಗೂ ಮೇಲೆ ಕೊಟ್ಟಿರುವ ಸರ್ವ “ಎಲ್ಲ ‘ ಪದದ ಹಾಗೆಯೇ ಇರುವಂತಹ ವಿಭಕ್ತಿ ರೂಪಗಳಿವೆ.

ಕೇಶಿರಾಜನು ಹಳೆಗನ್ನಡದ ಅದು, ಇದು, ಉದು, ಆವುದು, ಎಲ್ಲದು, ಪೆಅತು, ಪೆಅದು, ಏನ್‌ ಮೊದಲಾದವುಗಳನ್ನು ಸರ್ವನಾಮಗಳೆಂದು ಕರೆದಿದ್ದಾನೆ (ಸೂ. ೮೮). ಇವುಗಳಿಗೆ ಸಮಾನವಾದ ಪದಗಳು ಸಂಸ್ಕೃತದ ಸರ್ವಾದಿ ಪಟ್ಟಿಯಲ್ಲಿವೆ ಎಂಬುದನ್ನು ಬಿಟ್ಟರೆ, ಹಳೆಗನ್ನಡದ ಈ ಪಟ್ಟಿಗೆ ಏನು ಆಧಾರ ಎಂಬುದು ಸ್ಪಷ್ಟವಾಗುವುದಿಲ್ಲ.

ಸಂಸ್ಕೃತದ ಸರ್ವಾದಿ ಪಟ್ಟಿಯಲ್ಲಿ ಪುರುಷವಾಚಕ (ಯುಷ್ಮದ್‌, ಅಸ್ಮದ್‌), ಸಂಖ್ಯಾವಾಚಕ (ಉಭಯ, ಏಕ, ದ್ವಿ) ಮತ್ತು ದಿಗ್ವಾಚಕ (ಪೂರ್ವ, ಅವರ, ಉತ್ತರ, ದಕ್ಷಿಣ) ಪದಗಳೂ ಸೇರಿವೆ. ಇವೆಲ್ಲವೂ, ಮೇಲೆ ಸೂಚಿಸಿದ ಹಾಗೆ, ವಿಭಕ್ತಿ ರೂಪದಲ್ಲಿ ಇತರ ನಾಮಪದಗಳಿಂದ ಭಿನ್ನವಾಗಿವೆಯೆಂಬುದೇ ಅವನ್ನೆಲ್ಲ ಸರ್ವಾದಿ ಎಂಬ ಪಟ್ಟಿಯಲ್ಲಿರಿಸಿ ಹೇಳಲು ಆಧಾರ.

ಅದರೆ, ಹಳೆಗನ್ನಡದಲ್ಲಿ ಮೇಲೆ ಕೊಟ್ಟ ಕೇಶಿರಾಜನ ಪಟ್ಟಿಗೆ ಅಂತಹ ಆಧಾರವೇನೂ ಇರುವ ಹಾಗೆ ಕಾಣಿಸುವುದಿಲ್ಲ. ಅವುಗಳಲ್ಲಿ ಹೆಚ್ಚಿನವನ್ನೂ ಮೇಲೆ (೪.೫)ರಲ್ಲಿ ಕೊಟ್ಟಿರುವ ಸರ್ವಪದಗಳ ಕೋಷ್ಟಕದಲ್ಲಿ ಇರಿಸಲು ಸಾಧ್ಯವಿದೆ, ಆದರೆ ಎಲ್ಲದು, ಪೆಅತು ಮತ್ತು ಪೆಅದು ಎಂಬವುಗಳು ಅದರಲ್ಲಿ ಸೇರಲಾರವು.

೪.೫.೨ ಸರ್ವನಾಮಗಳು ಮತ್ತು ಆಖ್ಯಾತ ಪ್ರತ್ಯಯಗಳು

(೪.೫)ರ ಕೋಷ್ಟಕದಲ್ಲಿ ಬಂದಿರುವ ಅವನ್‌, ಅವಳ್‌, ಆವನ್‌, ಆವಳ್‌ ಮೊದಲಾದುವನ್ನು ಕೇಶಿರಾಜನು ಅದು ಮತ್ತು ಆವುದು ಎಂಬವುಗಳಿಂದ ಸಾಧಿಸಿರುವುದು (ಸೂ. ೧೬೧-೨, ೧೬೫) ಸಂಸ್ಕೃತ ವ್ಯಾಕರಣ ನಿಯಮವನ್ನು ಹಳೆಗನ್ನಡಕ್ಕೆ ಅಳವಡಿಸಲು ನಡೆಸಿರುವ ಇನ್ನೊಂದು ಪ್ರಯತ್ನದ ಫಲ. ಆದರೆ ಇದು ಹಳೆಗನ್ನಡಕ್ಕೆ ಉಚಿತವಲ್ಲ.

ಯಾಕೆಂದರೆ, ಸಂಸ್ಕೃತದಲ್ಲಿ ಇಂತಹ ಪದಗಳ ನಡುವಿರುವ ಲಿಂಗಭೇದ ವಿಭಕ್ತಿ ಪ್ರತ್ಯಯಗಳ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತ ದೆ; ಆದರೆ, ಹಳೆಗನ್ನಡದಲ್ಲಿ ಅದು ಈ ಸರ್ವನಾಮಗಳ ಎರಡನೆಯ ಅಂಗದಲ್ಲೇನೇ ಕಾಣಿಸಿಕೊಳ್ಳುತ್ತ ದೆ. ಹಾಗಾಗಿ, ಮೇಲೆ ಕೋಷ್ಟಕದಲ್ಲಿ ಸೂಚಿಸಿದ ಹಾಗೆ, ಅವನ್‌, ಅವಳ್‌, ಇವನ್‌, ಇವಳ್‌ ಮೊದಲಾದುವನ್ನು ಅದು, ಇದು ಮೊದಲಾದವುಗಳಿಗಿಂತ ಭಿನ್ನವಾದ ಸರ್ವನಾಮ (ಸರ್ವಪದ)ಗಳೆಂದು ಪರಿಗಣಿಸುವ ಅವಶ್ಯಕತೆಯಿದೆ.

ಹಳೆಗನ್ನಡದ ವೈಯಾಕರಣಿಗಳು ಈ ಸರ್ವನಾಮಗಳನ್ನು ಸಾಧಿಸುವುದಕ್ಕಾಗಿ ಬಳಸಿದ ವಿಧಾನಕ್ಕೂ, ಕ್ರಿಯಾರೂಪಗಳ ಕೊನೆಯಲ್ಲಿ ಘಟಕಗಳನ್ನು ಸೂಚಿಸುವುದಕ್ಕಾಗಿ ಬರುವ ಅಮ್‌, ಅಳ್‌, ಉದು ಮೊದಲಾದ ಆಖ್ಯಾತ ಪ್ರತ್ಯಯಗಳನ್ನು ಸಾಧಿಸುವುದಕ್ಕಾಗಿ ಬಳಸಿದ ವಿಧಾನಕ್ಕೂ ನಡುವೆ ಒಂದು ವಿಚಿತ್ರವಾದ ವ್ಯತ್ಯಾಸವಿದೆ. |

ಮೇಲೆ ಸೂಚಿಸಿದ ಹಾಗೆ, ಸರ್ವನಾಮಗಳಲ್ಲಿ ನಪುಂಸಕ ಲಿಂಗದ ಅದು ಎಂಬುದನ್ನು ಮೂಲವಾಗಿಟ್ಟುಕೊಂಡು, ಅದರಿಂದ ಅವನ್‌, ಅವಳ್‌, ಆತ, ಆಕೆ ಮೊದಲಾದುವನ್ನು ಸಾಧಿಸಲಾಗಿದೆ (ಕೇಶಿರಾಜ, ಸೂ. ೧೬೫); ಆದರೆ, ಘಟಕಗಳನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳಲ್ಲಿ ಪುಲ್ಲಿಂಗದ ಅಮ್‌ ಎಂಬುದನ್ನು ಮೂಲವಾಗಿಟ್ಟುಕೊಂಡು, ಅದರಿಂದ ಅಳ್‌, ಉದು (ಅದು) ಮೊದಲಾದುವನ್ನು ಸಾಧಿಸಲಾಗಿದೆ (ಕೇಶಿರಾಜ, ಸೂ. ೨೨೮, ೨೩೬-೭, ಮತ್ತು ಇದೇ ಪುಸ್ತಕದ ೯.೩ ನೋಡಿ).

ಎರಡು ಕಡೆಯಲ್ಲೂ ಒಂದೇ ಲಿಂಗದ (ಪುಲ್ಲಿಂಗದ ಇಲ್ಲವೇ ನಪುಂಸಕ ಲಿಂಗದ) ರೂಪವನ್ನೇ ಮೂಲವಾಗಿ ಇರಿಸಿಕೊಳ್ಳಬಹುದಾಗಿತ್ತಲ್ಲವೇ ಎಂದು ಯಾರಾದರೂ ಕೇಳುವುದಿದ್ದಲ್ಲಿ, ಅದಕ್ಕೆ ಉತ್ತರ ಸಂಸ್ಕೃತ ವ್ಯಾಕರಣದಲ್ಲಿದೆ! ಸಂಸ್ಕೃತದ ಕ್ರಿಯಾರೂಪಗಳಲ್ಲಿ ಲಿಂಗಭೇದ ಸೂಚಿತವಾಗುವುದಿಲ್ಲ. “ಹೋಗುತ್ತಾನೆ’, “ಹೋಗುತ್ತಾಳೆ’, ಮತ್ತು “ಹೋಗುತ್ತದೆ’ ಎಂಬ ಮೂರು ಅರ್ಥಗಳಲ್ಲೂ ಗಚ್ಛತಿ ಎಂಬ ಒಂದೇ ಕ್ರಿಯಾರೂಪ ಆ ಭಾಷೆಯಲ್ಲಿ ಬಳಕೆಯಾಗುತ್ತದೆ.

ಆದರೆ, ಸಾಮಾನ್ಯವಾಗಿ ಸಂಸ್ಕೃತದ ಪ್ರಥಮಪುರುಷ ಏಕವಚನದ ಕ್ರಿಯಾರೂಪಗಳನ್ನು ಕನ್ನಡದಲ್ಲಿ ಪ್ರಥಮಪುರುಷ ಪುಲ್ಲಿಂಗ ಏಕವಚನದ ಕ್ರಿಯಾರೂಪಗಳ ಮೂಲಕವೇ ಅನುವಾದಿಸುವುದು ರೂಡಿ (ಗಚ್ಛತಿ “ಹೋಗುತ್ತಾನೆ’). ಅವನ್ನು ವಿಶಿಷ್ಟವಾದ ಸ್ತ್ರೀಲಿಂಗ ಇಲ್ಲವೇ ನಪುಂಸಕ ಲಿಂಗದ ಅರ್ಥ ಕೊಡುವ ನಾಮಪದಗಳೊಂದಿಗೆ ಬಳಸಿರುವಲ್ಲಿ ಮಾತ್ರ (ಸೀತಾ ಗಚ್ಛತಿ “ಸೀತೆ ಹೋಗುತ್ತಾಳೆ’, ಸಿಂಹಃ ಗಚ್ಛತಿ “ಸಿಂಹ ಹೋಗುತ್ತದೆ”) ಸ್ತ್ರೀಲಿಂಗ ಏಕವಚನ ಇಲ್ಲವೇ ನಪುಂಸಕ ಲಿಂಗ ಏಕವಚನ ರೂಪಗಳ ಮೂಲಕ ಅನುವಾದಿಸಲಾಗುತ್ತದೆ.

ಕೇಶಿರಾಜನು “ಆಖ್ಯಾತ ವಿಭಕ್ತಿ’ ಪ್ರತ್ಯಯಗಳನ್ನು ಹೆಸರಿಸುವಾಗ ಪುಲ್ಲಿಂಗದ ಅಮ್‌ ಪ್ರತ್ಯಯವನ್ನು ಮೂಲವಾಗಿ ಇಟ್ಟುಕೊಳ್ಳಲು ಇದೇ ಕಾರಣವಿರಬೇಕು.

ಇನ್ನು ಸಂಸ್ಕೃತ ವ್ಯಾಕರಣದಲ್ಲಿ “ಅವನು’, “ಅವಳು’ ಮತ್ತು “ಅದು’ ಎಂಬ ಈ ಮೂರು ಅರ್ಥಗಳನ್ನು ಕೊಡುವ ಸರ್ವನಾಮಗಳಿಗೆ ತತ್‌ ಎಂಬ ಒಂದೇ ಪದ ಮೂಲವಾಗಿದೆ; ಪುಲ್ಲಿಂಗದಲ್ಲಿ ಇದು ಸಃ ಎಂದಾಗುತ್ತದೆ, ಮತ್ತು ಸ್ತ್ರಿ “ಲಿಂಗದಲ್ಲಿ ಸಾ ಎಂದಾಗುತ್ತದೆ. ಆದರೆ ಇದು ಪ್ರಥಮಾ ವಿಭಕ್ತಿಯಲ್ಲಿ ಮಾತ್ರ ಕಾಣಿಸುವ ವ್ಯತ್ಯಾಸ. ಇತರ ವಿಭಕ್ತಿಗಳಲ್ಲಿ ಪುಲ್ಲಿಂಗ ಸರ್ವನಾಮಕ್ಕೆ ತಮ್‌, ತೇನ, ತಸ್ಮೈ ಮೊದಲಾದ ರೂಪಗಳೂ, ಸ್ತ್ರೀಲಿಂಗ ಸರ್ವನಾಮಕ್ಕೆ ತಾಮ್‌, ತಯಾ, ತಸ್ಯೈ ಮೊದಲಾದ ರೂಪಗಳೂ ಇವೆ. ಹಾಗಾಗಿ, ಸಂಸ್ಕೃತ ವ್ಯಾಕರಣದಲ್ಲಿ ಇವಕ್ಕೆಲ್ಲ ತತ್‌ ಎಂಬುದನ್ನೇ ಮೂಲವಾಗಿ ಇರಿಸಿಕೊಳ್ಳಲಾಗಿದೆ.

ಈ ತತ್‌ ಎಂಬುದು ಸಂಸ್ಕೃತದಲ್ಲಿ ನಪುಂಸಕ ಏಕವಚನದ ಸರ್ವನಾಮವೂ ಆಗಿದೆಯಾದ

ಕಾರಣ, ಹಳೆಗನ್ನಡದಲ್ಲಿ ಅದಕ್ಕೆ ಸಮನಾಗಿರುವ ಅದು ಎಂಬುದನ್ನು ನಮ್ಮ ವೈಯಾಕರಣಿಗಳು ಹಳೆಗನ್ನಡದ ಪ್ರಥಮಪುರುಷ ಸರ್ವನಾಮಗಳಿಗೂ ಮೂಲ ಪದವಾಗಿ ಮಾಡಿಕೊಂಡಿದ್ದಾರೆ. ಆದರೆ, ಹಳೆಗನ್ನಡದಲ್ಲಿ ಅವನ್‌ ಮತ್ತು ಅವಳ್‌ ಎಂಬವು ಎಲ್ಲಾ ವಿಭಕ್ತಿಗಳಲ್ಲೂ ಬದಲಾಗದೆ ಹಾಗೆಯೇ ಉಳಿಯುತ್ತವೆ, ಸಂಸ್ಕೃತದ ಸಃ ಮತ್ತು ಸಾ ಎಂಬವುಗಳ ಹಾಗೆ ಬದಲಾಗುವುದಿಲ್ಲ.

ಈ ವಿಧಾನವನ್ನೇ ಮುಂದುವರಿಸಿ, ಕೇಶಿರಾಜನು ಎಳೆಯಂ, ಎಳೆಯರ್‌, ಎಳೆಯಳ್‌ ಮೊದಲಾದ ಪುಲ್ಲಿಂಗ ಮತ್ತು ಸ್ತ್ರ “ಲಿಂಗಗಳಲ್ಲಿ ಬರುವ ಗುಣಪದಗಳ ರೂಪವನ್ನು ಎಳದು ಎಂಬಂತಹ ನಪುಂಸಕ ಲಿಂಗದಲ್ಲಿ ಬರುವ ಗುಣಪದಗಳ ರೂಪದಿಂದ ಸಾಧಿಸುತ್ತಾನೆ (ಸೂ. ೧೬೪).

ಹಳೆಗನ್ನಡ ವೈಯಾಕರಣಿಗಳ ಮೇಲೆ ಸಂಸ್ಕೃತ ವ್ಯಾಕರಣಕ್ಕೆ ಎಂತಹ ಹಿಡಿತವಿತ್ತು ಎಂಬುದನ್ನು ಅವರ ಈ ವಿಚಿತ್ರವಾದ ರೂಪಸಾಧನೆ ಬಹಳ ಸ್ಪಷ್ಟವಾಗಿ ತೋರಿಸಿಕೊಡುತ್ತದೆ.

೪.೫.೩ ಕೆಲಸದಲ್ಲಿ ವ್ಯತ್ಯಾಸ

ಮೇಲೆ ಕೋಷ್ಟಕದಲ್ಲಿ ಕಾಣಿಸಿದ ಹಾಗೆ, ಹಳೆಗನ್ನಡದಲ್ಲಿ ನಿರ್ದೇಶಿಸುವುದು ಮತ್ತು ಅನಿಶ್ಚಿತತೆಯನ್ನು ಸೂಚಿಸುವುದು ಎಂಬುದಾಗಿ ಎರಡು ಕೆಲಸಗಳನ್ನು ಮಾಡಬಲ್ಲ ಸರ್ವಪದಗಳು ಮಾತ್ರ ಬಳಕೆಯಲ್ಲಿವೆ; ಆದರೆ ಸಂಸ್ಕೃತದಲ್ಲಿ ನಿರ್ದೇಶಿಸುವುದು, ಅನಿಶ್ಚಿತತೆಯನ್ನು ಸೂಚಿಸುವುದು ಮತ್ತು ಸಂಬಂಧಿಸುವುದು ಎಂಬುದಾಗಿ ಮೂರು ಕೆಲಸಗಳನ್ನು ಮಾಡಬಲ್ಲ ಸರ್ವಪದಗಳು ಬಳಕೆಯಲ್ಲಿವೆ. ಹಳೆಗನ್ನಡದಲ್ಲಿ ಅನಿಶ್ಚಿತತೆಯನ್ನು ಸೂಚಿಸುವ ಸರ್ವಪದಗಳನ್ನೇ ಸಂಬಂಧಿಸುವ ಕೆಲಸದಲ್ಲೂ ಬಳಸಲಾಗುತ್ತದೆ.

ಉದಾಹರಣೆಗಾಗಿ, ಕೆಳಗೆ (೧೭ಕ-ಖ)ಗಳಲ್ಲಿ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು.

(೧೭ಕ) ಯತ್ರ ತ್ವಂ ಅವಸಃ ಸ ದೇಶೋ ರಮಣೀಯಃ

“ನೀನು ಯಾವ ದೇಶದಲ್ಲಿ ದ್ಲೆಯೋ ಆ ದೇಶ ರಮಣೇಯವಾದುದು’ (೧೭ಖ) ತ್ವಂ ಕುತ್ರ ಗಚ್ಛಸಿ?

“ನೀನು ಎಲ್ಲಿಗೆ (ಯಾವ ಜಾಗಕ್ಕೆ) ಹೋಗುತ್ತೀ?

(೧೭ಕ)ದಲ್ಲಿ “ನೀನು ಇದ್ದ’ ದೇಶಕ್ಕೂ ಮತ್ತು “ರಮಣೀಯವಾದ ದೇಶ’ಕ್ಕೂ ನಡುವೆ ಸಂಬಂಧವಿದೆ ಎಂಬುದನ್ನು (ಅವೆರಡೂ ಒಂದೇ ಎಂಬುದನ್ನು) ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಯತ್ರ ಪದದ ಬಳಕೆಯಾಗಿದೆ; ಮತ್ತು (೧೭ಖ)ದಲ್ಲಿ ಕೇಳುಗನು ಹೋಗುವ ಜಾಗದ ಕುರಿತು ಆಡುಗನಿಗಿರುವ ಅನಿಶ್ಚಿತತೆಯನ್ನು ಸೂಚಿಸುವುದಕ್ಕಾಗಿ ಕುತ್ರ ಪದದ ಬಳಕೆಯಾಗಿದೆ.

ಆದರೆ, ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಅವುಗಳ ಹೊಸಗನ್ನಡ ಅನುವಾದಗಳಲ್ಲಿ ಈ ಎರಡು ಸಂದರ್ಭಗಳಲ್ಲೂ ಅನಿಶ್ಚಿತ ಸರ್ವಪದವೇ ಅದರ ಎರಡು ರೂಪಗಳಲ್ಲಿ (ಯಾವ ಮತ್ತು ಎಲ್ಲಿ ಎಂಬುದಾಗಿ) ಬಳಕೆಯಾಗಿದೆ.

ಹಳೆಗನ್ನಡದಲ್ಲೂ ಸಂಬಂಧ ಮತ್ತು ಅನಿಶ್ಚಿ ತತೆಗಳೆಂಬ ಎರಡು ಅರ್ಥಗಳನ್ನು ಸೂಚಿಸುವುದ ಕ್ಕಾಗಿ ಒಂದೇ ಸರ್ವಪದದ ಬಳಕೆಯಾಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯಗಳಲ್ಲಿ ಕಾಣಬಹುದು.

(೧೮ಕ) ಈ ಧರಣಿಯಂ ರಸಾತಲದಿಂದೆತ್ತಿದನಾವನ್‌ ಆತನೆ ದಲಂ ತಕ್ಕಂ “ಈ ಭೂಮಿಯನ್ನು ಯಾವನು ಪಾತಾಳದಿಂದ ಎತ್ತಿದ್ದಾನೋ ಅವನೇ ನಿಜಕ್ಕೂ (ಅಗ್ರಪೂಜೆಗೆ) ಅರ್ಹನು’

(೧೮ಖ) ಎನ್ನನಾವನ್‌ ಎಚ್ಚಂ ಪೇಟುಂ “ನನಗೆ ಯಾವನು ಹೊಡೆದನು, ಹೇಳಿ’

(೧೯ಕ) ಅದೆಂತು ಹರಿ ನರನಂ ಗೆಲಿಪಂ ಅಂತೆ ನೀಮುಂ ಗೆಲ್ಲ ಂಗೊಳ್ಳಿಂ (೧೨.೯೧) “ಕೃಷ್ಣನು ಅರ್ಜುನನನ್ನು ಹೇಗೆ ಗೆಲಿಸುತ್ತಾನೋ ಹಾಗೆಯೇ ನೀವೂ ಗೆದ್ದುಕೊಳ್ಳಿರಿ’ (೧೯ಖ) ನಿನ್ನ ಬಿಸುಟೆಂತಿರ್ಪೆಂ (೨.೨೫) “ನಿನ್ನ ಬಿಟ್ಟು ಹೇಗಿರಲಿ?

ಅವಸ್‌ ಎಂಬುದನ್ನು (೧೮ಕ)ದಲ್ಲಿ ಸಂಬಂಧಿಸುವ ಅರ್ಥದಲ್ಲಿ ಮತ್ತು (೧೮ಖ)ದಲ್ಲಿ ಅನಿಶ್ಚಿತಾರ್ಥದಲ್ಲಿ ಬಳಸಲಾಗಿದೆ, ಮತ್ತು ಇದೇ ರೀತಿಯಲ್ಲಿ ಎಂತು ಎಂಬುದನ್ನು (೧೯ಕ) ಮತ್ತು (೧೯ಖ)ಗಳಲ್ಲಿ ಸಂಬಂಧಾರ್ಥ ಮತ್ತು ಅನಿಶ್ಚಿತಾರ್ಥಗಳಲ್ಲಿ ಬಳಸಲಾಗಿದೆ.

೪.೫.೪ ನಿರ್ದೇಶಕಗಳಲ್ಲಿ ವ್ಯತ್ಯಾಸ

ಮೇಲೆ ಸರ್ವಪದಗಳ ಕೋಷ್ಟಕದಲ್ಲಿ ಕಾಣಿಸಿದ ಹಾಗೆ, ಹಳೆಗನ್ನಡದಲ್ಲಿ (ಕ) ಆಡುಗನ ಹತ್ತಿರ (ಈ, ಇವನ್‌, ಈಕೆ, ಇಲ್ಲಿ, ಇಂದು, ಇತ್ಯಾದಿ), (ಖ) ಆಡುಗನಿಂದ ದೂರ (ಆ, ಅವನ್‌, ಆಕೆ, ಅಲ್ಲಿ, ಅಂದು ಇತ್ಯಾದಿ), ಮತ್ತು (ಗ) ಈ ಎರಡು ಜಾಗಗಳ ನಡುವೆ (ಊ, ಉವನ್‌, ಊಕೆ, ಉಂದು, ಇತ್ಯಾದಿ) ಎಂಬುದಾಗಿ ನಿರ್ದೇಶಕ ಪದಗಳಲ್ಲಿ ಮೂರು ಜಾಗಗಳನ್ನು ಸೂಚಿಸುವ ವ್ಯವಸ್ಥೆ ಯಿದೆ. (೨೦ಕ) ಕುಲಮನಿಂತು ಪಿಕ್ಕದಿರಿಂ “(ಕರ್ಣನ) ಕುಲವನ್ನು ಹೀಗೆ ಬಿಡಿಸಿ ನೋಡಬೇಡಿ’ (೨೦ಖ) ಅಂತು ಪಿರಿದೋಲಗಂಗೊಟ್ಟಿರ್ಪನ್ನೆಗಂ “ಹಾಗೆ ದೊಡ್ಡ ಓಲಗವನ್ನು ಕೊಟ್ಟಿದ್ದಾ ಗ’ (೨೦ಗ) ಅಲ್ಲದೆ ಉಂತು ತಲೆಯುರ್ಚುಗುಮೇ ರಣರಂಗ ಭೂಮಿಯೊಳ್‌ “ಅಲ್ಲ(ದಿದ್ದರೆ) ಹಾಗೆ/ಹೀಗೆ ರಣರಂಗದಲ್ಲಿ ತಲೆತಪ್ಪಿಸಿಕೊಳ್ಳುತ್ತಿ ನೇ’

೪.೧೦

ಇವುಗಳಲ್ಲಿ ಮೊದಲಿನ ಎರಡು ರೀತಿಯವು ಮಾತ್ರ ಹೊಸಗನ್ನಡದಲ್ಲಿ ಉಳಿದುಕೊಂಡಿವೆ. ಹಾಗಾಗಿ, ಉಕಾರದಲ್ಲಿ ಸುರುವಾಗುವ ಮೂರನೇ ರೀತಿಯ ಸರ್ವಪದಗಳನ್ನು ಹೊಸಗನ್ನಡದಲ್ಲಿ ಅನುವಾದಿಸುವುದು ಕಷ್ಟ (೨೦ಗ ನೋಡಿ).

ಸಂಸ್ಕೃತದಲ್ಲಿ ನಿರ್ದೇಶಕ ಪದಗಳು ಸೂಚಿಸುವ ವ್ಯತ್ಯಾಸ ಇದಕ್ಕಿಂತ ಭಿನ್ನವಾಗಿದೆ. ಅವು ಮೊದಲಿಗೆ (ಕ) ಆಡುಗನ ಹತ್ತಿರ (ಏಷಃ “ಇವನು’, ಏಷಾ “ಇವಳು’, ಏತತ್‌ “ಇದು’ ಇತ್ಯಾದಿ), ಮತ್ತು (ಖ) ಆಡುಗನಿಂದ ದೂರ (ಅಸೌ “ಅವನು, ಅವಳು’, ಅದಃ “ಅದು’ ಇತ್ಯಾದಿ) ಎಂಬ ವ್ಯತ್ಯಾಸದೊಂದಿಗೆ (ಕ) ಎದುರಿಗೆ ಇರುವವರು (ಅಯಂ “ಇವನು’, ಇಯಂ “ಇವಳು’, ಇದಂ “ಇದು’ ಇತ್ಯಾದಿ), ಮತ್ತು (ಖ) ಎದುರಿಗೆ ಇಲ್ಲದವರು (ಸಃ “ಅವನು’, ಸಾ “ಅವಳು’, ತತ್‌

“ಅದು’, ಇತ್ಯಾದಿ) ಎಂಬ ಇನ್ನೊಂದು ವ್ಯತ್ಯಾಸವನ್ನು ಸೇರಿಸಿ ಸೂಚಿಸಬಲ್ಲುವಾಗಿದ್ದುವು. ಆದರೆ, ಅನಂತರದ ಸಂಸ್ಕೃತದಲ್ಲಿ ಎರಡನೆಯ (ಕ-ಖ) ವ್ಯತ್ಯಾಸ ಇಲ್ಲ ವಾಗಿದೆ.

೪.೫.೫ ಸರ್ವಪದಗಳಲ್ಲಿ ಪದವರ್ಗಗಳು

ಸಂಸ್ಕೃತದ ಸರ್ವಪದಗಳನ್ನೆಲ್ಲ ಒಂದೇ ಪದವರ್ಗದಲ್ಲಿ (ನಾಮಪದವರ್ಗದಲ್ಲಿ) ಸೇರಿಸಿ ಹೇಳಲು ಸಾಧ್ಯವಿದೆ; ಆದರೆ, ಹಳೆಗನ್ನಡದ ಸರ್ವಪದಗಳನ್ನು ಈ ರೀತಿ ಒಂದೇ ಪದವರ್ಗದಲ್ಲಿ ಸೇರಿಸಿ ಹೇಳಲು ಸಾಧ್ಯವಾಗದು. ಅವುಗಳಲ್ಲಿ ಅವನ್‌, ಇದು, ಇವಳ್‌, ಮೊದಲಾದವು ನಾಮಪದವರ್ಗಕ್ಕೆ ಸೇರುತ್ತವೆಯಾದರೆ, ಆವ, ಈ, ಇತ್ತ, ಎಲ್ಲಿ ಮೊದಲಾದವು ಗುಣಪದವರ್ಗಕ್ಕೆ ಸೇರುತ್ತವೆ.

ಗುಣಪದವರ್ಗದಲ್ಲೂ ನಾಮಪದದೊಂದಿಗೆ ಬರುವವು ಮತ್ತು ಕ್ರಿಯಾಪದದೊಂದಿಗೆ ಬರುವವು ಎಂಬುದಾಗಿ ಎರಡು ಉಪವರ್ಗಗಳನ್ನು ಮಾಡಲು ಸಾಧ್ಯವಿದ್ದು, ಅವೆರಡಕ್ಕೂ ಸೇರಬಲ್ಲ ಸರ್ವಪದಗಳು ಹಳೆಗನ್ನಡದಲ್ಲಿವೆ ಎಂಬುದನ್ನು ಮೇಲೆ (೪.೫)ರಲ್ಲಿ ಕೊಟ್ಟಿರುವ ಕೋಷ್ಟಕದಲ್ಲಿ ನೋಡಬಹುದು.

ಇದಲ್ಲದೆ, ಕ್ರಿಯಾಪದವರ್ಗಕ್ಕೆ ಸೇರಬಹುದಾದ ಏವನ್‌, ಏವರ್‌, ಏವುದು ಎಂಬಂತಹ ಸರ್ವಪದಗಳೂ ಹಳೆಗನ್ನಡದಲ್ಲಿ ಬಳಕೆಯಲ್ಲಿವೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು.

(೨೧ಕ) ಒಡೆಯರದೇವರ್‌ (೪.೬)

“ಒಡೆಯರಾದ (ಪಾಂಡವರು) ಏನು ಮಾಡಬಲ್ಲರು?’ (೨೧ಖ) ಈ ತೊಡವು ಏವುದೊ (೩.೪೬)

“ಈ ಆಭರಣ ಏನು ಮಾಡಬಲ್ಲುದೋ’

(೨೧ಕ)ದಲ್ಲಿ ಏವರ್‌ ಎಂಬುದು, ಮತ್ತು (೨೧ಖ)ದಲ್ಲಿ ಏವುದು ಎಂಬುದು ಕ್ರಿಯಾಪದದ ಜಾಗದಲ್ಲಿ ಬಂದಿರುವುದನ್ನು ಕಾಣಬಹುದು.

Eke →

೪.೬ ಎರವಲಾಗಿ ಬಂದ ಪದಗಳು

ಕೇಶಿರಾಜನ ವ್ಯಾಕರಣದಲ್ಲಿ ಹಳೆಗನ್ನಡದ ಪದಗಳನ್ನು “ದೇಶ್ಯ’ (ಅಥವಾ “ದೇಶೀಯ’), “ಸಮಸಂಸ್ಕೃತ’, “ತದ ೈವ’ ಮತ್ತು “ತತ್ಸಮ’ ಎಂಬುದಾಗಿ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಸಂಸ್ಕೃತದಲ್ಲಿ ಹೇಗಿದೆಯೋ ಹಾಗೆಯೇ ಹಳೆಗನ್ನಡದಲ್ಲೂ ಇರುವ ಪದಗಳನ್ನು “ಸಮಸಂಸ್ಕೃತ’ ಪದಗಳೆಂದು, ಮತ್ತು ಸಂಸ್ಕೃತದಲ್ಲಿರುವ ಪದಗಳಿಂದ ಸ್ವರೂಪದಲ್ಲಿ ಭಿನ್ನವಾಗಿವೆಯಾದರೂ ಆ ಪದಗಳಿಂದಲೇನೇ ಬೇರೆ ಬೇರೆ ಬದಲಾವಣೆಗಳ ಮೂಲಕ ಸಾಧಿಸಲು ಸಾಧ್ಯವಾಗುವಂತಹ ಪದಗಳನ್ನು “ತದ್ಭವ’ (ಇಲ್ಲವೇ “ಅಪಭ್ರಂಶ’) ಪದಗಳೆಂದು ಕರೆಯಲಾಗಿದೆ.

ಈ ಎರಡು ರೀತಿಯ (ಸಮಸಂಸ್ಕೃತ ಮತ್ತು ತದ್ಭವ ಇಲ್ಲವೇ ಅಪಭ್ರಂಶ ಪದಗಳು) ಹಳೆಗನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು.

ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಬಳಕೆಯಾಗುವ ಪ್ರಚಂಡ, ವಿಷ, ಸಂಪೂರ್ಣ,

ಮನೋರಥ, ಉತ್ಪನ್ನ, ಇಂದ್ರಪ್ರಸ್ಥ ಮೊದಲಾದ ಪದಗಳು ಸಂಸ್ಕೃತದಲ್ಲಿ ಹೇಗಿವೆಯೋ ಹಾಗೆಯೇ ಹಳೆಗನ್ನಡದಲ್ಲೂ ಇವೆಯಾದ ಕಾರಣ, ಸಮಸಂಸ್ಕೃತ ಪದಗಳು; ದೀವಂ (<ದೀಪ), ಸಗ್ಗಂ (ಆಸ್ವರ್ಗ), ಅಚ್ಚರಿ (ಆಆಶ್ಚರ್ಯ), ಉಗ್ಗಡಂ (ಉತ್ಕಟ) ಮೊದಲಾದವುಗಳು ಕಂಸದಲ್ಲಿ ಕೊಟ್ಟಿರುವ ಸಂಸ್ಕೃತ ಪದಗಳಿಗಿಂತ ಭಿನ್ನವಾಗಿವೆಯಾದರೂ, ಆ ಪದಗಳಿಂದ ಅವನ್ನು ಸಾಧಿಸಲು ಸಾಧ್ಯವಿದೆಯಾದ ಕಾರಣ, ತದ ಡವ (ಇಲ್ಲವೇ ಅಪಭ್ರಂಶ) ಪದಗಳು.

ಬೇರೆಲ್ಲಾ ವಿಷಯಗಳಲ್ಲೂ ಸಂಸ್ಕೃತ ಪದಗಳ ಹಾಗೆಯೇ ಇದ್ದು, ಕೊನೆಯ ಭಾಗದಲ್ಲಿ ಮಾತ್ರ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ತೋರಿಸುವ ಪದಗಳನ್ನು ತದ್ಕ ೈವಗಳೆಂದು ಕರೆಯದೆ ಸಮಸಂಸ್ಕೃತ ಪದಗಳೆಂದೇ ಕರೆಯಲಾಗುತ್ತದೆ. ಉದಾಹರಣೆಗಾಗಿ, ಸೀತೆ (ಆಸೀತಾ), ಶಾಲೆ (<ಶಾಲಾ), ಜನನಿ (<ಜನನೀ) ಮೊದಲಾದವುಗಳು ಕಂಸದೊಳಗೆ ಕೊಟ್ಟಿರುವ ಸಂಸ್ಕೃತ ಪದಗಳಿಂದ ಸ್ವಲ್ಪ ಮಟ್ಟಿಗೆ ಮಾತ್ರ ಭಿನ್ನವಾಗಿವೆ; ಹಾಗಾಗಿ, ಅವನ್ನು ಸಮಸಂಸ್ಕೃತ ಪದಗಳೆಂದೇ ಪರಿಗಣಿಸಲಾಗಿದೆ.

“ತತ್ಸಮ’ ಎಂಬ ಪದವನ್ನು ಕೇಶಿರಾಜನು ಒಂದು ವಿಶಿಷ್ಟವಾದ ಅರ್ಥದಲ್ಲಿ ಬಳಸಿದ್ದಾನೆ. ಸಂಸ್ಕೃತದವೂ ಮತ್ತು ಕನ್ನಡದವೂ ಆಗಿರುವ ಮಣಿ, ಮಂಚಂ, ಪಟ್ಟಂ, ತೋರಣಂ ಮೊದಲಾದ ೨೧ ಪದಗಳನ್ನು ಆತನು ಈ ಗುಂಪಿನಲ್ಲಿ ಇರಿಸಿದ್ದಾನೆ (ಸೂ. ೩೧೨-೩). ಇವು ಸಂಸ್ಕೃತ ಪದಗಳೊಂದಿಗೆ ಮಾತ್ರವಲ್ಲದೆ ದೇಶ್ಯ ಪದಗಳೊಂದಿಗೂ ಸಮಾಸಗಳಲ್ಲಿ ಬರಬಲ್ಲುವು (ಆದರೆ ಸಮಸಂಸ್ಕೃತ (ಮತ್ತು ತದ ಡವ) ಪದಗಳು ಆ ರೀತಿ ದೇಶ್ಯ ಪದಗಳೊಂದಿಗೆ ಸಮಾಸದಲ್ಲಿ ಬರಲಾರವು) ಎಂಬುದೇ ಅವನ್ನು ತತ್ಸಮಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಇರಿಸಿ ಹೇಳಲು ಕಾರಣ.

ವೆಂಕಟಾಚಲ ಶಾಸ್ತ್ರಿ ಗಳು (೧೯೯೪:೧೩೮) ಸೂಚಿಸಿರುವ ಹಾಗೆ, ಈ ತತ್ಸಮ ಪದಗಳಲ್ಲಿ ಕೆಲವಾದರೂ ದ್ರಾವಿಡ ಭಾಷೆಗಳಿಂದ ಸಂಸ್ಕೃತಕ್ಕೆ ಎರವಲಾಗಿ ಹೋಗಿರುವ “ದೇಶ್ಯ ಪದಗಳಾಗಿರಲು ಸಾಧ್ಯವಿದೆ. ಉದಾಹರಣೆಗಾಗಿ, ಕೇಶಿರಾಜನ ೨೧ ತತ್ಸಮ ಪದಗಳ ಪಟ್ಟಿಯಲ್ಲಿ ಬಂದಿರುವ ಅಂಕಂ, ಅಟ್ಟಂ, ಕೋಂಟೆ, ಗಂಡಂ, ಗೋಣಿ, ಮಲ್ಲಂ ಮೊದಲಾದ ಕೆಲವು ಪದಗಳಿಗೆ ದ್ರಾವಿಡ ಮೂಲವನ್ನು ಸಾಧಿಸಲಾಗಿದೆ (ಅನುಕ್ರಮವಾಗಿ ಎಮೆನೋ ಮತ್ತು ಬರೋ ಅವರ ದ್ರಾವಿಡ ಜ್ಞಾತಿ ಪದಕೋಶದ (ಎಮೆನೋ ಮತ್ತು ಬರೋ ೧೯೬೧) ೨೯, ೯೩, ೨೨೦೭, ೧೧೭೩, ಅನುಬಂಧ ೩೩ ಮತ್ತು ೪೭೩೦ನೇ ಸಂಖ್ಯೆಯ ಪದಗಳನ್ನು ಗಮನಿಸಬಹುದು).

ಈ ಪದಗಳಿಗೆ ಇಂಡೋ-ಆರ್ಯನ್‌ ಇಲ್ಲವೇ ಇಂಡೋ-ಯುರೋಪಿಯನ್‌ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವಾದ ಕಾರಣ, ಅವು ಸಂಸ್ಕ ಂತೆಕ್ಕೆ ದ್ರಾವಿಡ ಭಾಷೆಗಳಿಂದ ಎರವಲಾಗಿ ಹೋಗಿರುವ ಪದಗಳೆಂದು ಪರಿಗಣಿಸಬಹುದು.

ಮೇಲೆ ವಿವರಿಸಿದ ಮೂರು ಗುಂಪುಗಳಲ್ಲೂ ಸೇರದಿರುವ ಪದಗಳನ್ನು ದೇಶ್ಯ ಪದಗಳೆಂದು ಪರಿಗಣಿಸಲಾಗಿದೆ. ಇವು ಕನ್ನಡದವೇ ಆದ ಪದಗಳು.

ಭಟ್ಟಾಕಳಂಕನೇ ಮೊದಲಾದ ಇತರ ವೈಯಾಕರಣಿಗಳು ಕೇಶಿರಾಜನು ಸೂಚಿಸಿರುವ ತತ್ಸಮ-ತದ್ಭವ ವ್ಯತ್ಯಾಸವನ್ನು ಪರಿಗಣಿಸಿಲ್ಲ. ಇದಲ್ಲದೆ, ತತ್ಸಮ ಪದವನ್ನು ಇವರು “ಸಮಸಂಸ್ಕೃತ’ ಎಂಬ ಪದದ ಅರ್ಥದಲ್ಲೇ ಬಳಸಿದ್ದಾರೆ. (ಇದನ್ನು ಅನುಸರಿಸಿ, ಈ ಪುಸ್ತಕದ ಮುಂದಿನ ವಿಭಾಗಗಳಲ್ಲಿ ತತ್ಸಮ ಪದವನ್ನು ಈ ಅರ್ಥದಲ್ಲೇ (ಎಂದರೆ ಕೇಶಿರಾಜನ ಸಮಸಂಸ್ಕೃತ ಪದದ ಅರ್ಥದಲ್ಲೇ) ಬಳಸಲಾಗುತ್ತದೆ).

ಹಾರು ,ುೈತ 855. ಇ ಇ7೧

೪.೬.೧ ವಿಂಗಡಣೆಯ ಸ್ವರೂಪ

ಹಳೆಗನ್ನಡ ವ್ಯಾ ಕರಣಗಳಲ್ಲಿ ತತ್ಸಮ (ಸಮಸಂಸ್ಕೃತ) ಪದಗಳು ಮತ್ತು ತದ್ಭವ (ಅಪಭ್ರಂಶ) ಪದಗಳು ಎಂಬುದಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನು ವಿಂಗಡಿಸಿರುವುದು ಪ್ರಾಕೃತ, ಪಾಲಿ ಮೊದಲಾದ ಭಾಷೆಗಳ ವ್ಯಾಕರಣಗಳಲ್ಲಿ ಮಾಡಿರುವ ಅಂತಹದೇ ಹೆಸರಿನ ಪದಗಳ ವಿಭಜನೆಯನ್ನು ಹಳೆಗನ್ನಡ ವ್ಯಾ ಕರಣಕ್ಕೆ ಅಳವಡಿಸಿಕೊಳ್ಳಲು ಮಾಡಿರುವ ಪ್ರಯತ್ನವಲ್ಲದೆ ಬೇರೇನಲ್ಲ.

ಪಾಲಿ, ಪ್ರಾಕೃತ, ಅರ್ಧಮಾಗಧಿ ಮೊದಲಾದ ಭಾಷೆಗಳು ಸಂಸ್ಕೃತದ ಹಾಗೆ ಇಂಡೋ- ಆರ್ಯನ್‌ ಯಕ ಸೇರಿದ ಭಾಷೆಗಳು. ವೇದಗಳ ಕಾಲದಲ್ಲಿ ಮಾತಿನ ಬಳಕೆಯಲ್ಲಿದ್ದ ಭಾಷೆಯೊಂದರಿಂದ ಈ ಭಾಷೆಗಳು ಬೆಳೆದು ಬಂದಿವೆ. ಆ ಕಾಲದ ಭಾಷೆಯನ್ನು ಮ ಬರಹಕ್ಕೆ ಮತ್ತು ಸಾಹಿತ್ಯ ರಚನೆಗೆ ಅಳವಡಿಸಿದಾಗ, ಸಂಸ್ಕೃತವೆಂಬ “ಪರಿಷ್ಕೃತ’ ಪ್ರ ಪ್ರಭೇದ ಸಿದ್ಧವಾಯಿತು. ಹಾಡಿನ ಬಳಕೆಯಲ್ಲಿದ್ದ ಭಾಷೆ ಕಾಲ ಕಳೆದಂತೆ ಬದಲಾಗುತ್ತಾ ಹೋಯಿತಾದರೂ, ಷಃ ಬರಹದ ಭಾಷೆ ಜಾಸ್ತಿ ಬದಲಾಗದೆ ಹಾಗೆಯೇ ಉಳಿಯಿತು.

ಅನಂತರದ ಕಾಲದಲ್ಲಿ, ಬುದ್ಧ: ನ ಅನುಯಾಯಿಗಳು ಮತ್ತು ಮಹಾವೀರನ ಅನುಯಾಯಿಗಳು (ಜೈನರು) ಅವರ ಉಪದೇಶಗಳನ್ನು ಬರೆದಿರಿಸುವುದಕ್ಕಾಗಿ ಸಾಮಾನ್ಯ ಜನರಿಗೆ ಅರ್ಥವಾಗದ ಸಂಸ್ಕೃತವೆಂಬ ಸಾಹಿತ್ಯಿಕ ಭಾಷೆಯನ್ನು ಬಳಸುವ ಬದಲು, ಅವರ ಕಾಲದಲ್ಲಿ ಸಾಮಾನ್ಯ ಜನರ ಮಾತಿನಲ್ಲಿ ಬಳಕೆಯಲ್ಲಿದ್ದ ಪಾಲಿ ಮತ್ತು ಪ್ರಾಕೃತಗಳೆಂಬ ಬೇರೆ ಪ್ರಭೇದಗಳನ್ನು ಬಳಸಲು ಪ್ರಾರಂಭಿಸಿದರು.

ವೇದಕಾಲದಿಂದ ಬುದ್ಧ ಮತ್ತು ಮಹಾವೀರರ ಕಾಲದ ವರೆಗೆ, ಮಾತಿನ ಬಳಕೆಯಲ್ಲಿದ್ದ ಈ ಭಾಷೆಯಲ್ಲಿ ನಡೆದ (ಮತ್ತು ಸಂಸ್ಕೃತದಲ್ಲಿ ನಡೆಯದಿದ್ದ) ಹಲವಾರು ಬದಲಾವಣೆಗಳ ಪರಿಣಾಮವನ್ನು ಈ ಪ್ರಭೇದಗಳ ಪದಗಳಲ್ಲಿ ಕಾಣಬಹುದು. ಈ ಬದಲಾವಣೆಗಳಿಂದಾಗಿ, ಅವುಗಳ ಪದಗಳು ಸಂಸ್ಕೃತದ ಪದಗಳಿಗಿಂತ ಭಿನ್ನವಾಗಿವೆ. ಸಂಸ್ಕೃತ ಭಾಷೆ ಬರಹದ ಭಾಷೆಯಾಗಿ ಮಾತ್ರ ಉಳಿದಿದ್ದುದೇ ಈ ರೀತಿ ಆ ಕಾಲದ ಮಾತಿನ ಪ್ರಭೇದದಲ್ಲಿ ನಡೆದ ಬದಲಾವಣೆಗಳು ಸಂಸ್ಕೃತದ ಪದಗಳನ್ನು ಬಾಧಿಸದಿರುವುದಕ್ಕೆ ಮುಖ್ಯ ಕಾರಣ.

ಪ್ರಾಕೃತವನ್ನು ಬರಹದ ಭಾಷೆಯಾಗಿ ಬಳಸತೊಡಗಿದಾಗ, ಅದರ ಬರಹಗಾರರು ಹಲವೆಡೆಗಳಲ್ಲಿ “ಪಾರಿಭಾಷಿಕ’ ಪದಗಳ ಕೊರತೆಯನ್ನು ಅನುಭವಿಸಿರಬೇಕು ಮತ್ತು ಅಂತಹ ಸಂದರ್ಭಗಳಲ್ಲೆಲ್ಲ ನೇರವಾಗಿ ಸಂಸ್ಕೃತದಿಂದ ಅವಶ್ಯವಿರುವ ಪದಗಳನ್ನು ಎರವಲಾಗಿ pes ಇದರಿಂದಾಗಿ, ಪ್ರಾಕೃ ತದಲ್ಲಿ ಎರಡು ರೀತಿಯ ಪದಗಳು

ವೇದಕಾಲದಿಂದ ಬುದ್ಧ -ಜೈನರ ಕಾಲದ ವರೆಗಿನ ಸಮಯದಲ್ಲಿ ನಡೆದ ಬದಲಾವಣೆಗಳಿಂದ ಬಾಧಿತವಾಗಿರುವ ಪ್ರಾಕೃತದ್ದೇ ಆದ ಪದಗಳು ಒಂದು ರೀತಿಯವು (ತದ್ಭವಗಳು), ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದಿರುವ, ಮತ್ತು ಅಂತಹ ಬದಲಾವಣೆಗಳಿಂದ ಬಾಧಿತವಾಗದಿರುವ ಪದಗಳು ಇನ್ನೊಂದು ರೀತಿಯವು (ತತ್ಸಮಗಳು).

ಇದಲ್ಲ ದೆ ಬದಲಾವಣೆಗಳ ಮೂಲಕ ಸ ಸಂಸ್ಕೃತ ಪದಗಳಿಂದ ಸಾಧಿಸಲು ಸಾಧ್ಯವಾಗದಂತಹ ಬೇರೆಯೂ ಕೆಲವು ಪದಗಳು ಪ್ರಾಕೃತದಲ್ಲಿವೆ. ಇವು ಹ… ಗ್ರಂಥಗಳಲ್ಲಿ ಕಾಣಿಸದಿದ್ದರೂ ಇಂಡೋ-ಆರ್ಯನ್‌ ಮೂಲ ಭಾಷೆಯಿಂದಲೇನೇ ಬಂದಿರುವ ಪದಗಳಿರಬಹುದು, ಇಲ್ಲವೇ

ಪದವರ್ಗಗಳು -3 A

ಬೇರೆ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳಿರಬಹುದು. ಇವನ್ನು ಪ್ರಾಕೃತ ವೈಯಾಕರಣಿ ಗಳು “ದೇಶಿ’ ಇಲ್ಲವೇ “ದೇಶಜ’ ಪದಗಳೆಂದು ಕರೆದಿದ್ದಾ ರೆ.

೪.೬.೨ ವಿಂಗಡಣೆಯ ಔಚಿತ್ಯ

ಪ್ರಾಕೃತ ವ್ಯಾಕರಣಗಳಲ್ಲಿ ಆ ಭಾಷೆಯ ಪದಗಳನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ತತ್ಸಮ ಪದಗಳು ಮತ್ತು ಪ್ರಾಕೃತದ್ದೇ ಆದ ತದ್ಭವ ಇಲ್ಲವೇ ಅಪಭ್ರಂಶ ಪದಗಳು ಎಂಬುದಾಗಿ ವಿಂಗಡಿಸುವುದರಲ್ಲಿ ಔಚಿತ್ಯವಿದೆ. ಆದರೆ ಸಂಸ್ಕೃತಕ್ಕಿಂತ ತೀರ ಭಿನ್ನವಾಗಿರುವ ಮೂಲದ್ರಾವಿಡ ಭಾಷೆಯೊಂದರಿಂದ ಬೆಳೆದು ಬಂದಿರುವ ಹಳೆಗನ್ನಡ ಭಾಷೆಯ ವ್ಯಾಕರಣದಲ್ಲಿ ಅಂತಹದೇ ವಿಂಗಡಣೆಯನ್ನು ಬಳಸುವುದರಲ್ಲಿ ಯಾವ ಔಚಿತ್ಯವೂ ಇಲ್ಲ.

ಪ್ರಾಕೃತ ಭಾಷೆಯಲ್ಲಿ ಮುಖ್ಯವಾಗಿ ತತ್ಸಮ ಮತ್ತು ತದ ವ ಪದಗಳು ಎಂಬುದಾಗಿ ಎರಡು ರೀತಿಯ ಪದಗಳು ಮಾತ್ರ ಕಾಣಿಸಿಕೊಳ್ಳುತ್ತವೆ (ದೇಶಿ ಪದಗಳು ಪ್ರಾಕೃತ ವ್ಯಾಕರಣದ ಮಟ್ಟಿಗೆ ತದ ೈವಗಳ ಹಾಗೆಯೇ ಬಳಕೆಯಾಗುತ್ತವೆ). ಇವುಗಳಲ್ಲಿ ತದ ವ ಪದಗಳು, ಮೇಲೆ ಸೂಚಿಸಿದ ಹಾಗೆ, ಮೂಲ ಭಾಷೆಯಿಂದ ಆನುವಂಶಿಕವಾಗಿ ಬೆಳೆದು ಬಂದ ಪದಗಳು; ಇವು ಕಾಲದಿಂದ ಕಾಲಕ್ಕೆ ಆ ಭಾಷೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಇವತ್ತಿನ ರೂಪವನ್ನು ಪಡೆದಿವೆ.

ಹಳೆಗನ್ನಡದಲ್ಲೂ ಇಂತಹ ಪದಗಳಿದ್ದು, ಅವನ್ನು ದೇಶ್ಯ ಪದಗಳೆಂದು ಕರೆಯಲಾಗಿದೆ. ಇವನ್ನು ಹಳೆಗನ್ನಡ ಭಾಷೆ ತನ್ನ ಮೂಲ (ದ್ರಾವಿಡ) ಭಾಷೆಯಿಂದ ಆನುವಂಶಿಕವಾಗಿ ಪಡೆದಿದೆ. ಕಾಲದಿಂದ ಕಾಲಕ್ಕೆ ಈ ಭಾಷೆಯಲ್ಲಿ ನಡೆದ ಬದಲಾವಣೆಗಳ ಫಲವಾಗಿ ಈ ಪದಗಳು ಹಳೆಗನ್ನಡದಲ್ಲಿ ಕಾಣಿಸುವ ರೂಪವನ್ನು ಪಡೆದಿವೆ (ವಿವರಗಳಿಗೆ ಭಟ್‌ ೨೦೦೭ ನೋಡಿ).

ಪ್ರಾಕೃತ ಭಾಷೆಯಲ್ಲಿ ಕಾಣಿಸುವ ತತ್ಸಮ (ಇಲ್ಲವೇ ಸಮಸಂಸ್ಕೃತ) ಪದಗಳು ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು. ಆ ಭಾಷೆಯಲ್ಲಿ ನಡೆದ ಬದಲಾವಣೆಗಳ ಅವಧಿ ಮುಗಿದ ಮೇಲೆ ಇವನ್ನು ಎರವಲಾಗಿ ಪಡೆದು ಕೊಳ್ಳಲಾಗಿದೆಯಾದ ಕಾರಣ, ಅವು ಆ ಭಾಷೆಯ “ತದ ೫ ಪದಗಳಿಂದ ಭಿನ್ನವಾಗಿವೆ.

ಹಳೆಗನ್ನಡದಲ್ಲೂ ಈ ರೀತಿ ಹಿಂದಿನ ಪ್ರಭೇದದಿಂದ ಎರವಲಾಗಿ ಪಡೆದ (ದೇಶ್ಯ) ಪದಗಳಿವೆ. ಉದಾಹರಣೆಗಾಗಿ ಮೂಲದ್ರಾವಿಡದ ಆದಿಚಕಾರ ಹಳೆಗನ್ನಡದಲ್ಲಿ ಸಕಾರವಾಗಿ ಬದಲಾಗಿದೆ. ಸಾಯ್‌, ಸಾಲ್‌, ಸಿಡಿಲ್‌, ಸುಡು, ಸೆಅ್‌ ಮೊದಲಾದ ದೇಶ್ಯ ಪದಗಳಲ್ಲಿ ಈ ಬದಲಾವಣೆಯ ಪರಿಣಾಮವನ್ನು ಕಾಣಬಹುದು. ಆದರೆ, ಆದಿಚಕಾರವನ್ನು ಉಳಿಸಿಕೊಂಡಿರುವ ಬೇರೆ ಕೆಲವು ಪದಗಳೂ ಹಳೆಗನ್ನಡದಲ್ಲಿದ್ದು (ಚಿಕ್ಕ, ಚಿನ್ನ, ಚೆನ್ನ, ಚೆಲ್ವು ಇತ್ಯಾದಿ) ಮೇಲಿನ ಬದಲಾವಣೆಯ ಅವಧಿ ಮುಗಿದ ಮೇಲೆ ಒಂದಿನ ಪ್ರಭೇದದಿಂದ (ಇಲ್ಲವೇ ಈ ಬದಲಾವಣೆಯಾಗದಿರುವ ಬೇರೊಂದು ದ್ರಾವಿಡ ಭಾಷಾಪ್ರಭೇದದಿಂದ) ಅವು ಎರವಲಾಗಿ ಬಂದಿರಬೇಕು.

ಈ ವ್ಯತ್ಯಾಸವನ್ನು ಹೊಸಗನ್ನಡ ಪದಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದು. ಕನ್ನಡದ ಚರಿತ್ರೆಯಲ್ಲಿ ಪಕಾರ ಹಕಾರವಾಗುವ ಬದಲಾವಣೆ ಹದಿನಾಲ್ಕು-ಹದಿನೈದನೇ ಶತಮಾನದ ಹೊತ್ತಿಗೆ ಸಂಪೂರ್ಣಗೊಂಡಿರಬೇಕು (ನರಸಿಂಹಯ್ಯ ೧೯೪೧ ನೋಡಿ). ಹೊಸಗನ್ನಡದ ಹಾಲು (ಪಾಲ್‌), ಹಣ್ಣು (ಪಣ್‌), ಹುಲಿ (<ಪುಲಿ), ಹೋಗು (<ಪೋ) ಮೊದಲಾದ ಪದಗಳಲ್ಲಿ ಈ ಬದಲಾವಣೆಯ ಪರಿಣಾಮವನ್ನು ಕಾಣಬಹುದು.

ಈ ಸಮಯದ ಅನಂತರ, ಕನ್ನಡ ಭಾಷೆ ಆದಿ ಪಕಾರವಿರುವ ಹಲವಾರು ಪದಗಳನ್ನು ಹಳೆಗನ್ನಡದಿಂದ ಎರವಲಾಗಿ ಪಡೆದಿದ್ದು, ಅಂತಹ ಪದಗಳಲ್ಲಿ ಆದಿ ಪಕಾರ ಬದಲಾಗದೆ ಹಾಗೆಯೇ ಉಳಿದಿದೆ. ಹೊಸಗನ್ನಡದ ಪಚ್ಚೆ, ಪಡು (ಕಷ್ಟಪಡು), ಪಾಡು, ಪುಣುಗು, ಪೆಟ್ಟು ಮೊದಲಾದ ಪದಗಳಲ್ಲಿ ಈ ರೀತಿ ಪಕಾರ ಹಕಾರವಾಗದೆ ಉಳಿದಿರುವುದನ್ನು ಕಾಣಬಹುದು.

ನಿಜಕ್ಕೂ ಹಳೆಗನ್ನಡದ (ಇಲ್ಲವೇ ಹೊಸಗನ್ನಡದ) ದೇಶ್ಯ ಪದಗಳಲ್ಲಿ ಕಾಣಿಸುವ ಈ ಮೇಲಿನ ವಿಭಜನೆಯೇ ಪ್ರಾಕೃತದ ತತ್ಸಮ-ತದ್ಭವ ವಿಭಜನೆಗೆ ಸಮನಾದುದು. ಯಾಕೆಂದರೆ, ಪ್ರಾಕೃತದಲ್ಲಿ ಬಳಕೆಯಲ್ಲಿರುವ ತದ್ಕ ಡವ ಪದಗಳು ಹಳೆಗನ್ನಡದ ದೇಶ್ಯ ಪದಗಳ ಹಾಗೆ ಮೂಲ ಭಾಷೆಯಿಂದ ಆನುವಂಶಿಕವಾಗಿ ಬೆಳೆದು ಬಂದವುಗಳು, ಮತ್ತು ತತ್ಸಮ ಪದಗಳು ಅದೇ ಮೂಲ ಭಾಷೆಯಿಂದ (ಎಂದರೆ ಅದರ ಸಾಹಿತ್ಯಿಕ ರೂಪದಿಂದ) ಎರವಲಾಗಿ ಪಡೆದ ಪದಗಳು.

೪.೬.೩ ಸಂಸ್ಕೃತದ ಎರವಲುಗಳು

ಪ್ರಾಕೃತ ವ್ಯಾಕರಣಗಳಲ್ಲಿ ಕಾಣಿಸುವಂತಹ ತತ್ಸಮ ಮತ್ತು ತದ ಲವ ವಿಭಜನೆಗೂ ಮತ್ತು ಹಳೆಗನ್ನಡ ವ್ಯಾಕರಣದಲ್ಲಿ ಕಾಣಿಸುವಂತಹ ಅದೇ ಹೆಸರಿನ ವಿಭಜನೆಗೂ ನಡುವೆ ಮೇಲೆ ವಿವರಿಸಿದ ಹಾಗೆ ಒಂದು ಮುಖ್ಯವಾದ ವ್ಯತ್ಯಾಸವಿದೆ.

ಪ್ರಾಕೃತದಲ್ಲಿ ತದ ಶವ ಇಲ್ಲವೇ ಅಪಭ್ರಂಶ ಎಂಬ ಗುಂಪಿಗೆ ಸೇರುವ ಪದಗಳೆಲ್ಲ ನಿಜಕ್ಕೂ ಆ ಭಾಷೆಯ ದೇಶ್ಯ ಪದಗಳಲ್ಲದೆ ಎರವಲಾಗಿ ಬಂದ ಪದಗಳಲ್ಲ. ಅವನ್ನು “ದೇಶೀಯ’ ಪದಗಳಿಂದ ಭಿನ್ನವಾದುವೆಂದು ಪರಿಗಣಿಸಲು ಅವಕ್ಕೆ ಸಂಸ್ಕೃತ ಮೂಲವಿದೆಯೆಂಬುದು ಮಾತ್ರವೇ ಕಾರಣ. ಸಂಸ್ಕೃತ ಮತ್ತು ಪ್ರಾಕೃತಗಳೆರಡೂ ಇಂಡೋ-ಆರ್ಯನ್‌ ಭಾಷೆಗಳಾಗಿರುವುದರಿಂದ, ಈ ರೀತಿ ಅವನ್ನು ಒಂದು ಬೇರೆಯೇ ಗುಂಪಿನಲ್ಲಿ ಇರಿಸಿ ಹೇಳಲು ಸಾಧ್ಯವಾಗಿದೆ.

ಪ್ರಾಕೃತದ ತತ್ಸಮ ಪದಗಳೂ ಇಂಡೋ-ಆರ್ಯನ್‌ ಪದಗಳೇ; ಅವನ್ನು ಅದೇ ಭಾಷೆಯ ಹಿಂದಿನ ಕಾಲದ ಪ್ರಭೇದದಿಂದ (ಎಂದರೆ ಸಂಸ್ಕೃತದಿಂದ) ಎರವಲಾಗಿ ಪಡೆಯಲಾಗಿದೆ.

ಆದರೆ ಹಳೆಗನ್ನಡ ವ್ಯಾಕರಣಗಳು ಗುರುತಿಸುವ ತತ್ಸಮ (ಸಮಸಂಸ್ಕೃತ) ಮತ್ತು ತದ್ಕ ಲವ ಪದಗಳೆರಡೂ ಎರವಲಾಗಿ ಬಂದಿರುವ ಪದಗಳೇ. ಮೇಲೆ ಸೂಚಿಸಿದ ಹಾಗೆ, ಇವು ಜಾಸ್ತಿ ಬದಲಾಗದೆ ಎರವಲು ಕೊಟ್ಟಿರುವ ಸಂಸ್ಕೃತ ಭಾಷೆಯ ಪದಗಳ ಹಾಗೆಯೇ ಇವೆಯಾದರೆ ಅವನ್ನು ತತ್ಸಮ ಪದಗಳೆಂದು ಮತ್ತು ಅವುಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆಯಾದರೆ ಅವನ್ನು ತದ್ಕ ವ ಪದಗಳೆಂದು ಕರೆಯಲಾಗುತ್ತದೆ. ಹಳೆಗನ್ನಡದ ದೇಶ್ಯ ಪದಗಳು ಇವೆರಡಕ್ಕಿಂತಲೂ ತೀರ ಭಿನ್ನವಾಗಿರುವ ಹಳೆಗನ್ನಡದವೇ ಆದ ಪದಗಳು.

ಪ್ರಾಕೃತದ ತದ ಡವ ಪದಗಳೆಲ್ಲವೂ ಒಂದೇ ರೀತಿಯಾಗಿ ಆ ಭಾಷೆಯ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಗೊಳಗಾಗಿವೆ. ಹಾಗಾಗಿ ಅವನ್ನೆಲ್ಲ ಒಂದು ಗುಂಪಿನಲ್ಲಿರಿಸಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ತತ್ಸಮ ಪದಗಳಿಂದ ಭಿನ್ನವಾದುವೆಂದು ಪರಿಗಣಿಸುವುದು ಸುಲಭ.

ಆದರೆ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತದ ಎರವಲು ಪದಗಳು ಹಾಗೆ ಒಂದೇ ರೀತಿಯಾಗಿ ಬದಲಾವಣೆಗಳಿಗೊಳಗಾಗಿಲ್ಲ. ಅವು ಬೇರೆ ಬೇರೆ ಪ್ರಮಾಣಗಳಲ್ಲಿ ಬದಲಾಗಿದ್ದು, ಬದಲಾವಣೆಗಳ ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಿಜಕ್ಕೂ ಪದಗಳ ಕೊನೆಯ ಸ್ವರವನ್ನು ಬದಲಾಯಿಸುವುದು (ಶಾಲಾ>ಶಾಲೆ, ಜನನೀ>ಜನನಿ ಇತ್ಯಾದಿ) ಇಂತಹ ಹಂತಗಳಲ್ಲಿ ಒಂದೆಂದು ಹೇಳಬಹುದು.

ಇದಕ್ಕೆ ಕಾರಣವೇನೆಂದರೆ, ಪ್ರಾಕೃತದ ತದ್ಭವ ಪದಗಳಲ್ಲಿ ನಡೆದ ಬದಲಾವಣೆಗಳು ಪದಗಳ ಬದಲಾವಣೆಗಳಲ್ಲ, ಆ ಭಾಷೆಯ ಚರಿತ್ರೆಯಲ್ಲಿ ನಡೆದ ವರ್ಣಗಳ ಬದಲಾವಣೆಗಳು. ವರ್ಣಗಳು ಈ ರೀತಿ ಬದಲಾದಾಗ ಆ ಕಾಲದಲ್ಲಿ ಭಾಷೆಯಲ್ಲಿದ್ದ ಪದಗಳೆಲ್ಲವೂ ಒಂದೇ ಬಾರಿಗೆ ಬದಲಾಗುತ್ತವೆ. ಹಾಗಾಗಿ, ಪ್ರಾಕೃತದ ತದ ಡವ ಪದಗಳನ್ನು ಇಂತಹ ಬದಲಾವಣೆಗಳೆಲ್ಲ ನಿಯಮಿತವಾಗಿ ಬಾಧಿಸಿರುವುದನ್ನು ಕಾಣಬಹುದು.

ಆದರೆ, ಹಳೆಗನ್ನಡದ ತದ್ಭವ ಪದಗಳಲ್ಲಿ ಕಾಣಿಸುವ ಬದಲಾವಣೆಗಳು ವರ್ಣಗಳ ಬದಲಾವಣೆಗಳಲ್ಲ, ಪದಗಳ ಬದಲಾವಣೆಗಳು. ಒಂದು ಭಾಷೆ ಇನ್ನೊಂದು ಭಾಷೆಯಿಂದ ಪದಗಳನ್ನು ಎರವಲಾಗಿ ಪಡೆಯುವಾಗ, ಅವುಗಳ ಸ್ವರೂಪ ಆ ಭಾಷೆಯಲ್ಲಿರುವ ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವಂತೆ ಬೇರೆ ಬೇರೆ ರೀತಿಯಲ್ಲಿ ಬದಲಾವಣೆಗಳಿಗೊಳಗಾಗುತ್ತದೆ. ಈ ಬದಲಾವಣೆಗಳನ್ನು ಪದಗಳನ್ನು ಎರವಲಾಗಿ ಪಡೆಯುವ ವ್ಯಕ್ತಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿರುತ್ತಾರೆ.

ಇಂತಹ ಬದಲಾವಣೆಗಳು ಒಮ್ಮೆಯೇ ನಡೆಯುವ ಬದಲು, ಹಂತ ಹಂತವಾಗಿ ನಡೆಯುತ್ತವೆ. ಇದಲ್ಲದೆ, ಈ ಬದಲಾವಣೆಗಳು ಎರವಲಾಗಿ ಬಂದ ಪದಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಾಧಿಸುವುವಾದ ಕಾರಣ, ಬದಲಾವಣೆಯ ಎಲ್ಲಾ ಹಂತಗಳನ್ನೂ ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಲು ಸಾಧ್ಯವಿದೆ, ಮತ್ತು ಬೇರೆ ಬೇರೆ ಪದಗಳಲ್ಲಿ ಬೇರೆ ಬೇರೆ ಹಂತಗಳನ್ನು ಕಾಣಲು ಸಾಧ್ಯವಿದೆ.

ಈ ಕಾರಣಕ್ಕಾಗಿ, ಎರವಲು ಪದಗಳಲ್ಲಿ ಕಾಣಿಸುವ ಬದಲಾವಣೆಗಳು ಸಾಮಾನ್ಯವಾಗಿ ಅನಿಯಮಿತವಾಗಿರುತ್ತವೆ. ಈ ಪದಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಕವಿಗಳು ಮತ್ತು ವಿದ್ವಾಂಸರು ಎರವಲಾಗಿ ಪಡೆದುಕೊಂಡಿರುವರಾದ ಕಾರಣ, ಅವುಗಳಲ್ಲಿ ಕಾಣಿಸುವ ಬದಲಾವಣೆಗಳಲ್ಲಿ ಹಲವು ರೀತಿಯ ವಿಕಲ್ಪಗಳನ್ನು ಕಾಣಲು ಸಾಧ್ಯವಿದೆ.

ಇವನ್ನೆಲ್ಲ ಪರಿಶೀಲಿಸಿದಾಗ, ನಿಜಕ್ಕೂ ಇಂತಹ ಎರವಲು ಪದಗಳನ್ನು ತತ್ಸಮ ಮತ್ತು ತದ ಲವ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸುವುದಕ್ಕಿಂತಲೂ ಕೆಳಗೆ ವಿವರಿಸಿದ ಹಾಗೆ ಹಲವು ಗುಂಪುಗಳಲ್ಲಿ ವಿಂಗಡಿಸುವುದೇ ಒಳ್ಳೆಯದೆಂದು ಅನಿಸದಿರದು.

(೧) ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ತದ ಡವ ಪದಗಳಲ್ಲಿ ದಾಡೆ, ಬೆಜ್ಜ, ಬಟ್ಟ, ಕಂಬ ಮೊದಲಾದ ಹಲವು ಪದಗಳನ್ನು ನೇರವಾಗಿ ಸಂಸ್ಕೃತದಿಂದ ಎರವಲಾಗಿ ಪಡೆಯುವ ಬದಲು, ಪ್ರಾಕೃತದಿಂದ ಎರವಲಾಗಿ ಪಡೆದಿರುವ ಹಾಗೆ ಕಾಣಿಸುತ್ತದೆ. ಇವನ್ನು ನೇರವಾಗಿ ಸಂಸ್ಕೃತದ ದಂಷ್ಟ್ರಾ, ವೈದ್ಯ, ವೃತ್ತ, ಸ್ತಂಭ ಮೊದಲಾದ ಪದಗಳಿಂದ ಸಾಧಿಸುವುದಕ್ಕಿಂತಲೂ, ಪ್ರಾಕೃತದ ದಾಢಾ, ವೇಜ್ಞ, ವಟ್ಟ, ಖಂಭ ಮೊದಲಾದ ಪದಗಳಿಂದ ಸಾಧಿಸುವುದು ಸುಲಭ (ಆರ್‌. ನರಸಿಂಹಾಚಾರ್‌ ೧೯೬೯:೧೬೫ ನೋಡಿ). ಹಾಗಾಗಿ, ಇವನ್ನು “ಪ್ರಾಕೃತ-ತದ್ಯ ೈವ’ವೆಂಬ ಬೇರೆಯೇ ಒಂದು ಗುಂಪಿನಲ್ಲಿ ಇರಿಸುವ ಅವಶ್ಯಕತೆಯಿದೆ.

(೨) ಈ ರೀತಿ ಪ್ರಾಕೃತದ ಮೂಲಕ ಹಳೆಗನ್ನಡಕ್ಕೆ ಬರುವ ಬದಲು, ಬೇರೆ ಭಾಷೆಗಳ ಮೂಲಕ (ಪಾಲಿ, ತಮಿಳು ಇತ್ಯಾದಿ) ಹಳೆಗನ್ನಡಕ್ಕೆ ಬಂದಿರುವ ಸಂಸ್ಕೃತ ಪದಗಳೂ ಕೆಲವಿವೆ. ಇವನ್ನೂ ನೇರವಾಗಿ ಸಂಸ್ಕೃತ ಪದಗಳಿಂದ ಸಾಧಿಸಲು ಪ್ರಯತ್ನಿಸಿದಲ್ಲಿ, ಇವುಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ವಿವರಿಸುವ ಕೆಲಸ ಬಹಳ ಕ್ಲಿಷ್ಟವಾಗುತ್ತದೆ.

ಉದಾಹರಣೆಗಾಗಿ, ಆರ್‌. ನರಸಿಂಹಾಚಾರ್‌ ಅವರು (೧೯೬೯:೧೬೮) ಸೂಚಿಸಿರುವಂತೆ,

ಹಳೆಗನ್ನಡದ ಅರಸ, ಅರಸಿ, ನೊಗ, ಬಿನ್ನಪ, ಕೆಲಸ ಮೊದಲಾದ ಕೆಲವು ಪದಗಳನ್ನು ನೇರವಾಗಿ ರಾಜ, ರಾಜ್ಞೀ, ಯುಗ, ವಿಜ್ಞಾಪ್ಯ, ಕ್ರಿಯಾ ಮೊದಲಾದ ಸಂಸ್ಕೃತ ಪದಗಳಿಂದ ಸಾಧಿಸುವ ಬದಲು, ತಮಿಳಿನ ಅರಶನ್‌, ಅರಶಿ, ನುಗಂ, ವಿಣ್ಣಪ್ಪಂ, ಕಿರಿಶೈ ಮೊದಲಾದ ತದ ಡವ ಪದಗಳಿಂದ ಸಾಧಿಸುವುದು ಸುಲಭ. ಈ ಸಂಸ್ಕೃತ ಪದಗಳಲ್ಲಿ ಕಾಣಿಸುವ ಬದಲಾವಣೆಗಳು ತಮಿಳು ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವಂತೆ ನಡೆದಿವೆಯಲ್ಲದೆ, ಹಳೆಗನ್ನಡ ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವಂತೆ ನಡೆದಿಲ್ಲ.

(೩) ಇದಲ್ಲದೆ, ಹಳೆಗನ್ನಡದ ನೆಪ, ನೇಹ, ವಕ್ಟಾಣ, ಕಜ್ಜ ಮೊದಲಾದ ಪದಗಳು ಸಂಸ್ಕೃತದ ನಿಭ, ಸ್ನೇಹ, ವ್ಯಾಖ್ಯಾನ, ಕಾರ್ಯ ಮೊದಲಾದ ಪದಗಳಿಂದ ಭಿನ್ನವಾಗಿವೆಯಾದರೂ, ಪ್ರಾಕೃತದ ನೆಪ, ನೇಹ, ವಕ್ಬಾಣ, ಕಜ್ಜ ಮೊದಲಾದ ಪದಗಳಿಗೆ ಸಮಾನವಾಗಿವೆಯಾದ ಕಾರಣ, ಇವನ್ನು ತದ್ಭವಗಳೆಂದು ಕರೆಯುವ ಬದಲು “ಸಮಪ್ರಾಕೃತ’ ಇಲ್ಲವೇ ““ಪ್ರಾಕೃತ-ತತ್ಸಮ’ ಪದಗಳೆಂದು ಕರೆಯಲು ಸಾಧ್ಯವಿದೆ (ಆರ್‌. ನರಸಿಂಹಾಚಾರ್‌ ೧೯೬೯:೧೬೬ ನೋಡಿ).

(೪) ಮೇಲೆ ವಿವರಿಸಿರುವ ಹಾಗೆ, ಹಳೆಗನ್ನಡದ “ತದ ೈವ’ ಪದಗಳು ಪ್ರಾಕೃತದಲ್ಲಿರುವ ತದ ವ ಪದಗಳ ಹಾಗೆ ಒಂದೇ ರೀತಿಯವಲ್ಲ. ಅವು ಬದಲಾವಣೆಯ ಹಲವು ಹಂತಗಳನ್ನು ತೋರಿಸುತ್ತವೆ. ಹಾಗಾಗಿ, ಅವನ್ನೆಲ್ಲ ಒಂದೇ ಗುಂಪಿನಲ್ಲಿರಿಸುವುದು ಸರಿಯಲ್ಲ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ತದ ಡವ ಪದಗಳನ್ನು ಗಮನಿಸಬಹುದು.

ಸಂಸ್ಕೃತ ತದ್ಭವ ಪದಗಳು ತಪಸ್ವಿ ತಪಸಿ, ತವಸಿ ದ್ಯೂತ ಜೂದು, ಜೂಜು ಅಮಾವಾಸ್ಕಾ ಅಮಾಸೆ, ಅವಸೆ ಆಷಾಢ ಆಸಡಿ, ಅಸಡಿ ಅಶೋಕ ಅಶೋಕೆ, ಅಸುಗೆ ಆಕಾರ ಆಗರ, ಆರ ಕುಮಾರ ಕುವರ, ಕೋರ ಉನ್ಮತ್ತ ಉಮ್ಮತ್ತ, ಉಮ್ಮತ

ಮೇಲೆ ಕೊಟ್ಟಿರುವ ತದ ವ ಪದಗಳಲ್ಲಿ ಮೊದಲನೆಯದು ಬದಲಾವಣೆಯ ಒಂದು ಹಂತದಲ್ಲೂ , ಮತ್ತು ಎರಡನೆಯದು ಅದರ ಅನಂತರದ ಬೇರೊಂದು ಹಂತದಲ್ಲೂ ಸಿದ್ದ ವಾಗಿರುವ ಹಾಗೆ ಕಾಣಿಸುತ್ತವೆ. ಹಾಗಾಗಿ, ಅವನ್ನು ಬೇರೆ ಬೇರೆ ಗುಂಪುಗಳಲ್ಲಿರಿಸುವ ಅವಶ್ಯಕತೆಯಿದೆ. (೫) ಕೊನೆಯ ಸ್ವರದಲ್ಲಿ ಮಾತ್ರ ಬದಲಾಣೆಯನ್ನು ತೋರಿಸುವ ಶಾಲೆ (<ಶಾಲಾ), ಭಾಷೆ

(ಭಾಷಾ), ಯೋಗಿನಿ (<ಯೋಗಿನೀ), ವಧು (<ವಧೂ) ಮೊದಲಾದ ಪದಗಳನ್ನು ತದ್ಭವಗಳೆಂದು ಕರೆಯದೆ ತತ್ಸಮಗಳೆಂದು ಕರೆದಿರುವುದರ ಔಚಿತ್ಯವೇನೆಂಬುದು ಸ್ಪಷ್ಟವಾಗಿಲ್ಲ. (ಬಹುಶಃ ಪ್ರಾಕೃತ ವ್ಯಾಕರಣದಲ್ಲಿ ಈ ಬಳಕೆಯ ಮೂಲವಿರಬಹುದು). ಆದರೆ, ಹಳೆಗನ್ನಡದಲ್ಲಿ ಇತರ ತದ್ಭವಗಳೆಂದೆನಿಸುವ ಪದಗಳಲ್ಲಿ ನಡೆದಿರುವ ಬದಲಾವಣೆಗಳ ಹಾಗೆ, ಈ ಪದಗಳಲ್ಲಿ ಕಾಣಿಸುವ ಬದಲಾವಣೆಗಳನ್ನೂ ಎರವಲಾಗಿ ಬಂದ ಸಂಸ್ಕೃತದ ಪದಗಳನ್ನು ಹಳೆಗನ್ನಡ ಪದಗಳ ಸ್ವರೂಪಕ್ಕೆ

ಹೊಂದಿಸಿಕೊಳ್ಳುವುದಕ್ಕಾಗಿ ನಡೆಸಲಾಗಿದೆಯಾದ ಕಾರಣ, ಅವನ್ನು ತದ ಓವಗಳಿಂದ ಭಿನ್ನವಾದ ಪದಗಳೆಂದು ಪರಿಗಣಿಸಲು ಯಾವ ಆಧಾರವೂ ಇಲ್ಲ.

ಉದಾಹರಣೆಗಾಗಿ, ಕುಂಬ (ಆ<ಕುಂಭ), ಗಾಡ (<ಗಾಢ), ಚಿನ್ನ (ಆಛಿನ್ನ), ಜಗನ (<ಜಘನ), ದೂಪ (<€ಧೂಪ), ಬೋಗ (<ಭೋಗ), ಆರಂಬ (ಆಆರಂಭ) ಮೊದಲಾದ ಪದಗಳಲ್ಲಿ ಕಾಣಿಸುವ ಹಾಗೆ ಮಹಾಪ್ರಾಣಾಕ್ಷರಗಳು ಅಲ್ಲಪ್ರಾಣಾಕ್ಷರಗಳಾಗಿರುವುದು, ಅಂಕುಸ (ಆಅಂಕುಶ), ಸಂಕರ (<ಶಂಕರ), ಪಸು (<ಪಶು), ನಿಮಿಸ (ನಿಮಿಷ), ವೇಸ (ಆವೇಷ) ಮೊದಲಾದವುಗಳಲ್ಲಿ ಕಾಣಿಸುವ ಹಾಗೆ ಶಕಾರ ಇಲ್ಲವೇ ಷಕಾರಗಳು ಸಕಾರ ಗಳಾಗಿರುವುದು, ಮತ್ತು ಜಂತ್ರ (<ಯಂತ್ರ), ಜವನಿಕೆ (<ಯವನಿಕೆ), ಜತಿ (ಯತಿ), ಜಾತ್ರೆ (ಯಾತ್ರೆ) ಮೊದಲಾದವುಗಳಲ್ಲಿ ಕಾಣಿಸುವ ಹಾಗೆ ಆದಿ ಯಕಾರ ಜಕಾರವಾಗಿರುವುದು ಹೆಚ್ಚು ಕಡಿಮೆ ಮೇಲಿನ ಪದಗಳ ಕೊನೆಯ ಸ ಸರದಲ್ಲಿ ಕಾಣಿಸುವ ಬದಲಾವಣೆಗಳ ಹಾಗೆಯೇ ಇದೆ. ಇಲ್ಲೂ ಪದಗಳ ಇತರ ಅಂಶಗಳೆಲ್ಲ ಸ್ವಲ್ಪವೂ ಬದಲಾಗದೆ ಹಾಗೆಯೇ ಉಳಿದಿರುವುದನ್ನು ಕಾಣಬಹುದು.

೪.೬.೪ ವಿಭಜನೆಯ ಮಹತ್ವ

ಹಳೆಗನ್ನಡ ವ್ಯಾಕರಣದ ಮಟ್ಟಿಗೆ ದೇಶ್ಯ ಪದಗಳಿಗೂ ತತ್ಸಮ ಹಾಗೂ ತದ ಲವ ಪದಗಳಿಗೂ ನಡುವಿರುವ ವಿಭಜನೆಯೇ ಅತ್ಯಂತ ಮಹತ್ವದ ವಿಭಜನೆ. ತತ್ಸಮ ಮತ್ತು ತದ ವ ಪದಗಳ ನಡುವಿರುವ ವಿಭಜನೆಗೆ ಹಳೆಗನ್ನಡ ವ್ಯಾಕರಣದಲ್ಲಿ ಅಂತಹ ಮಹತ್ವವಿಲ್ಲ . ಅವೆರಡೂ “ಎರವಲು ಪದಗಳು’ ಎಂಬ ಒಂದೇ ಗುಂಪಿನಲ್ಲಿ ಬರುತ್ತವೆ.

ಇದಲ್ಲದೆ, ಮೇಲೆ ಸೂಚಿಸಿದ ಹಾಗೆ ಈ ಎರವಲು ಪದಗಳನ್ನು ತತ್ಸಮ ಮತ್ತು ತದ್ಭವ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸುವುದಕ್ಕಿಂತಲೂ ಹಲವು ಗುಂಪುಗಳಲ್ಲಿ ವಿಂಗಡಿಸುವುದೇ ಹಳೆಗನ್ನಡದ ಮಟ್ಟಿಗೆ ಸರಿಯಾದ ಮಾರ್ಗ.

ಹಳೆಗನ್ನಡದಲ್ಲಿ ದೇಶ್ಯ ಪದಗಳನ್ನು ಎರವಲು (ತತ್ಸಮ ಮತ್ತು ತದ್ಭವ) ಪದಗಳಿಂದ ಪ್ರತ್ಯೇಕಿಸುವಂತಹ ಹಲವು ವ್ಯಾಕರಣ ನಿಯಮಗಳಿವೆ. ಉದಾಹರಣೆಗಾಗಿ, ಎರವಲು ಪದಗಳನ್ನು, ಅವು ತತ್ಸಮಗಳಿರಲಿ, ತದ್ಭವಗಳಿರಲಿ, ಕ್ರಿಯಾಪದಗಳ ಜಾಗದಲ್ಲಿ ಬಳಸಬೇಕಿದ್ದಲ್ಲಿ ಅವಕ್ಕೆ ಇಸು ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ (ಅರ್ಚಿಸು, ನಿನ್ನಿಸು, ಪೂಜಿಸು, ಭಾವಿಸು, ಬಂಚಿಸು, ಬಣ್ಣಿ ಸು, ಸೈರಿಸು, ಪಜ್ಜಳಿಸು, ಇತ್ಯಾದಿ).

ಆದರೆ, ಪ್ರಾಕೃತದ ವ್ಯಾಕರಣಕ್ಕೆ ತತ್ಸಮ ಮತ್ತು ತದ್ಭವ ಪದಗಳ ನಡುವಿನ ವಿಭಜನೆಯೇ ಅತ್ಯಂತ ಮಹತ್ವದ ವಿಭಜನೆ. ತದ್ಭವ ಮತ್ತು ದೇಶಿ ಪದಗಳ ನಡುವಿನ ವಿಭಜನೆಗೆ ಆ ಭಾಷೆಯ ವ್ಯಾಕರಣದಲ್ಲಿ ಹೆಚ್ಚಿನ ಮಹತ್ವವಿಲ್ಲ. ಮೇಲೆ ಸೂಚಿಸಿದ ಹಾಗೆ, ಸಂಸ್ಕೃತ ಪದಗಳೊಂದಿಗೆ ಸಂಬಂಧವನ್ನು ತೋರಿಸಲು ಸಾಧ್ಯವಾಗದಿರುವಂತಹ ಪ್ರಾಕೃತ ಪದಗಳನ್ನು ದೇಶಿ ಪದಗಳೆಂದು ಪರಿಗಣಿಸಲಾಗಿದೆ; ಪ್ರಾಕೃತ ವ್ಯಾಕರಣದ ಮಟ್ಟಿಗೆ ಇವು ಯಾವ ವಿಷಯದಲ್ಲೂ ತದ ಡವ ಪದಗಳಿಗಿಂತ ಭಿನ್ನವಾಗಿಲ್ಲ.

ಹಳೆಗನ್ನಡ ಮತ್ತು ಪ್ರಾಕೃತ ಭಾಷೆಗಳ ನಡುವೆ ಈ ರೀತಿ ತತ್ಸಮ-ತದ್ಭವ ಭೇದವನ್ನು ಬಳಸುವಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಇವನ್ನು ಗಮನಿಸದೆ, ಹಳೆಗನ್ನಡ ವೈಯಾಕರಣಿಗಳು ಪ್ರಾಕೃತ ಪದಗಳ ವಿಭಜನೆಯನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದುದರಿಂದಾಗಿ, ಆ ಭಾಷೆಯ ನಿಜವಾದ ಸ್ವರೂಪವನ್ನು ವಿವರಿಸುವಲ್ಲಿ ಅವರು ಸೋತಿದ್ದಾರೆ.

Eke →

೪.೭ ಸಾರಾಂಶ

ಹಳೆಗನ್ನಡದಲ್ಲಿ ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬುದಾಗಿ ಮೂರು ಮುಖ್ಯ ಪದವರ್ಗಗಳಲ್ಲಿ ಬರಬಲ್ಲ ಪದಗಳಿವೆ. ಆದರೆ, ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದವರ್ಗಗಳಲ್ಲಿ ಬರಬಲ್ಲ ಪದಗಳು ಮಾತ್ರ ಇವೆ. ಹಳೆಗನ್ನಡದ ಗುಣಪದಗಳಿಗೆ ಸಮಾನವಾಗಿರುವ ಪದಗಳು ಸಂಸ್ಕೃತದಲ್ಲಿ ನಾಮಪದಗಳಿಗಿಂತ ಭಿನ್ನವಾಗಿಲ್ಲ.

ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಅತಿ ಮುಖ್ಯವಾದ ವ್ಯತ್ಯಾಸವನ್ನು ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ತಿಳಿದಿರಲಿಲ್ಲವಾದ ಕಾರಣ, ಅವರು ರಚಿಸಿದ ವ್ಯಾಕರಣಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಮತ್ತು ಗೊಂದಲಗಳು ಮೂಡಿಬಂದಿವೆ.

ಸರ್ವನಾಮಗಳ ಸ್ವರೂಪ ಮತ್ತು ಬಳಕೆಗಳಲ್ಲೂ ಈ ಎರಡು ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಇವನ್ನೂ ಈ ವೈಯಾಕರಣಿಗಳು ವಿವರಿಸಿಲ್ಲ.

ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನು ತತ್ಸಮ ಮತ್ತು ತದ್ಭವ ಪದಗಳೆಂಬುದಾಗಿ ವಿಭಜಿಸುವಲ್ಲೂ ಇವರು ಪ್ರಾಕೃತ ವ್ಯಾಕರಣಗಳನ್ನು ಅನುಸರಿ ಸಿದುದರಿಂದಾಗಿ, ಹಳೆಗನ್ನಡದ ನಿಜವಾದ ಸ್ವರೂಪವನ್ನು ವಿವರಿಸಲು ಶಕ್ತರಾಗಿಲ್ಲ.