← Ch 8  ·  Contents  ·  Ch 10 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11

ಒಂಬತ್ತನೇ ಪಸುಗೆ — ನುಡಿಹಮ್ಮುಗೆ

Eke →

9.1 ಮುನ್ನೋಟ

ನುಡಿಗಳು ಕಾಲದಿಂದ ಕಾಲಕ್ಕೆ ಮಾರ್ಪಡುತ್ತಾ ಇರುತ್ತವೆ. ಹಳೆಗನ್ನಡವಿದ್ದದ್ದು ನಡುಗನ್ನಡವಾಗಿ, ಇವತ್ತು ಹೊಸಗನ್ನಡವಾಗಿ ಮಾರ್ಪಟ್ಟಿದೆ; ಒಂದು ಕಾಲದಲ್ಲಿ ಕನ್ನಡವೆಂಬ ಒಂದೇ ನುಡಿಯಿದ್ದುದು ಇವತ್ತು ಸೊಲಿಗರ ಕನ್ನಡ, ಹವ್ಯಕ ಕನ್ನಡ, ಮಯ್ಸೂರು ಕನ್ನಡ, ಹುಬ್ಬಳ್ಳಿ ಕನ್ನಡ ಮೊದಲಾದ ಆಡುನುಡಿಗಳಾಗಿ, ಇಲ್ಲವೇ ಕನ್ನಡ ಮತ್ತು ಬಡಗ ಎಂಬ ಎರಡು ನುಡಿಗಳಾಗಿ ಬೇರ್ಪಟ್ಟಿದೆ.

ಈ ರೀತಿ ಕನ್ನಡ ನುಡಿ ಮಾರ್ಪಡಲು, ಮತ್ತು ಹಲವು ಆಡುನುಡಿಗಳಾಗಿ ಇಲ್ಲವೇ ನುಡಿಗಳಾಗಿ ಬೇರ್ಪಡಲು ಅದರಲ್ಲಿ ಬಳಕೆಯಾಗುತ್ತಿರುವ ಉಲಿಗಳಲ್ಲಿ, ಪದಗಳಲ್ಲಿ ಮತ್ತು ಸೊಲ್ಲರಿಮೆಯ ಇಟ್ಟಳಗಳಲ್ಲಿ ಕಾಲದಿಂದ ಕಾಲಕ್ಕೆ ಮಾರ್ಪಾಡುಗಳು ನಡೆಯುತ್ತಿರುವುದು, ಮತ್ತು ಈ ಮಾರ್ಪಾಡುಗಳು ಬೇರೆ ಬೇರೆ ಊರುಗಳಲ್ಲಿ ಮತ್ತು ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯು ತ್ತಿರುವುದು ಮುಕ್ಯ ಕಾರಣ.

ಇಂತಹ ಮಾರ್ಪಾಡುಗಳು ನುಡಿಯ ಒಳಗನ್ನು ತಾಗುವ ಬದಲು ಅದರ ಇರುವಿಕೆಯನ್ನೂ ತಾಗಬಲ್ಲುದು. ಒಂದು ನುಡಿ ಇಲ್ಲದಾಗಬಹುದು, ಇಲ್ಲವೇ ಹೊಸದೊಂದು ನುಡಿ ಮೂಡಿಬರಬಹುದು. ಎತ್ತುಗೆಗಾಗಿ, ಒಂದು ನುಡಿಯನ್ನಾಡುವ ಜನರಲ್ಲಿ ಎಲ್ಲರೂ ಸಾವನ್ನಪ್ಪಿದಲ್ಲಿ, ಇಲ್ಲವೇ ಎಲ್ಲರೂ ಅದನ್ನು ಬಿಟ್ಟುಕೊಟ್ಟು ಬೇರೊಂದು ನುಡಿಯನ್ನು ಬಳಸತೊಡಗಿದಲ್ಲಿ, ಆ ನುಡಿಯೇ ಇಲ್ಲದಾಗಬಹುದು.

ಹಲವು ನುಡಿಗಳು ಬೆರಕೆಗೊಂಡು ಅವುಗಳಿಂದ ಹೊಸ ನುಡಿಯೊಂದು ಮೂಡಿಬರಬಹುದು. ಎತ್ತುಗೆಗಾಗಿ, ಹಲವು ನುಡಿಗಳನ್ನಾಡುವ ಜನರು ಒಟ್ಟಿಗೆ ವಾಸಮಾಡಬೇಕಾದಾಗ, ಆ ಎಲ್ಲಾ ನುಡಿಗಳ ಅಂಶಗಳನ್ನೂ ಒಳಗೊಂಡಿರುವ ಬೆರಕೆನುಡಿಯೊಂದು ಅವರ ನಡುವೆ ಬಳಕೆಗೆ ಬರುತ್ತದೆ, ಮತ್ತು ಚಿಕ್ಕಂದಿನಲ್ಲಿ

ನುಡಿಹಮ್ಮುಗೆ

ಅಂತಹ ನುಡಿಯನ್ನು ಕೇಳುತ್ತಾ ಬೆಳೆಯುವ ಮಕ್ಕಳ ಬಾಯಿಯಲ್ಲಿ ಅದೊಂದು ಹೊಸ ನುಡಿಯಾಗಿ ಮಾರ್ಪಡುತ್ತದೆ.

Eke →

9.1.1 ಮಾರ್ಪಾಡುಗಳು ಯಾಕೆ ನಡೆಯುತ್ತವೆ?

ನುಡಿಗಳಲ್ಲಿ ಕಾಣಿಸಿಕೊಳ್ಳುವ ಮಾರ್ಪಾಡುಗಳಲ್ಲಿ ಹೆಚ್ಚಿನವೂ ಯಾಕೆ ನಡೆಯುತ್ತವೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಎತ್ತುಗೆಗಾಗಿ, ಹಳೆಗನ್ನಡ ದಲ್ಲಿದ್ದ ಪಕಾರ ಹಕಾರವಾಗಿದೆ, ರ-ಱ ಮತ್ತು ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ, ಅಲ್ಲಗಳೆಯುವ ರೂಪ ಬದಲಾಗಿದೆ (ಹಳೆಗನ್ನಡದಲ್ಲಿ ಮಾಡನ್ ಎಂದಿದ್ದುದು ಇವತ್ತು ಹೊಸಗನ್ನಡದಲ್ಲಿ ಮಾಡಲಿಕ್ಕಿಲ್ಲ ಎಂದಾಗಿದೆ); ಇಂತಹ ಮಾರ್ಪಾಡುಗಳೆಲ್ಲ ಕನ್ನಡದಲ್ಲಿ ಯಾಕೆ ನಡೆದಿವೆ ಎಂಬುದನ್ನು ನಾವು ವಿವರಿಸ ಲಾರೆವು.

ಆದರೆ, ನುಡಿಗಳಲ್ಲಿ ಕಾಣಿಸಿಕೊಳ್ಳುವ ಬೇರೆ ಕೆಲವು ಮಾರ್ಪಾಡುಗಳು ಅವನ್ನಾಡುವ ಜನರ ಹೊಸ ಹೊಸ ಬೇಡಿಕೆಗಳನ್ನು ನೆರವೇರಿಸುವುದಕ್ಕಾಗಿ ನಡೆಯುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ಬೇರೆ ನುಡಿ ಗಳಿಂದ ಕನ್ನಡಕ್ಕೆ ಹಲವಾರು ಪದಗಳು ಎರವಲಾಗಿ ಬಂದಿವೆ; ಇವುಗಳಲ್ಲಿ ಹಲವು ಕನ್ನಡಿಗರ ಬಾಳ್ವೆಯಲ್ಲಿ ಹೊಸದಾಗಿ ಸೇರಿಕೊಂಡಿರುವ ವಸ್ತುಗಳನ್ನು ಇಲ್ಲವೇ ವಿಶಯಗಳನ್ನು ಹೆಸರಿಸುವುದಕ್ಕಾಗಿ ಬಂದಿವೆ.

ಹೊಸಗನ್ನಡದ ಹಲವು ಆಡುನುಡಿಗಳಲ್ಲಿ ಒಂದು ಆಡುನುಡಿ ಬರಹದ ನುಡಿಯಾಗಿ ಮತ್ತು ಎಲ್ಲರ ನುಡಿಯಾಗಿ ಇವತ್ತು ಬಳಕೆಗೆ ಬಂದಿರುವುದೂ ಹೀಗೆಯೇ ಕನ್ನಡಿಗರ ಬೇಡಿಕೆಯೊಂದನ್ನು ನೆರವೇರಿಸುವುದಕ್ಕಾಗಿ ನಡೆದಿರುವ ಮಾರ್ಪಾಡು. ಬರಹದ ನುಡಿಯಾದುದರಿಂದಾಗಿ ಅದರಲ್ಲಿ ಆಮೇಲೆ ಬೇರೆಯೂ ಹಲವು ಮಾರ್ಪಾಡುಗಳು ನಡೆಯಬೇಕಾಯಿತು, ಮತ್ತು ಈ ಮಾರ್ಪಾಡು ಗಳಿಂದಾಗಿ ಅದು ಇವತ್ತು ಮೂಲ ಆಡುನುಡಿಗಿಂತ ಹಲವು ವಿಶಯಗಳಲ್ಲಿ ಬೇರಾಗಿದೆ.

ಸಾಮಾನ್ಯವಾಗಿ, ಇಂತಹ ಮಾರ್ಪಾಡುಗಳು ಆಡುಗರ ಬೇಡಿಕೆಗಳನ್ನನುಸರಿಸಿ ನುಡಿಗಳಲ್ಲಿ ನಡೆಯುತ್ತಲೇ ಇರುತ್ತವೆ. ಅವನ್ನು ಯಾರೂ ನುಡಿಯ ಮೇಲೆ ಹೇರುವುದಿಲ್ಲ. ಇದಕ್ಕೆ ಬದಲು, ಒಂದು ನುಡಿಯಲ್ಲಿ ಎಂತಹ ಮಾರ್ಪಾಡುಗಳು ನಡೆಯಬೇಕು ಎಂಬುದನ್ನು ಒಂದು ಕೂಟ, ಒಂದು ಆಡಳಿತ ಇಲ್ಲವೇ ಒಬ್ಬ ವ್ಯಕ್ತಿ ತೀರ್ಮಾನಿಸಿ, ಅದರಂತೆ ಅವನ್ನು ನಡೆಸಲು ತೊಡಗಬಹುದು, ಮತ್ತು

ಅದಕ್ಕಾಗಿ ಕಟ್ಟಳೆ ಇಲ್ಲವೇ ಕಾನೂನುಗಳನ್ನು ಮಾಡಬಹುದು. ಇದನ್ನು ಇಲ್ಲಿ ನುಡಿಹಮ್ಮುಗೆ ಎಂದು ಕರೆಯಲಾಗಿದೆ.

ನುಡಿಯ ಬಳಕೆಯಲ್ಲಿ ಸಮಾಜವು ಎದುರಿಸುವ ತೊಡಕುಗಳನ್ನು ಬಗೆಹರಿಸುವುದಕ್ಕಾಗಿ ನುಡಿಹಮ್ಮುಗೆಗಳನ್ನು ಕಯ್ಗೆತ್ತಿಕೊಳ್ಳಲಾಗುತ್ತದೆ. ಎತ್ತುಗೆ ಗಾಗಿ, ಹಲವು ನುಡಿಗಳಿರುವ ಒಂದು ನಾಡಿನಲ್ಲಿ ಎಲ್ಲರಿಗೂ ಒಂದೇ ಆಗಿರು ವಂತಹ ನುಡಿಯೊಂದು ಇಲ್ಲದಿರಬಹುದು. ಈ ಕೊರತೆಯನ್ನು ಹೋಗಲಾಡಿಸು ವುದಕ್ಕಾಗಿ, ಆಡಳಿತ ಒಂದು ಕಾನೂನನ್ನು ಮಾಡಬಹುದು, ಮತ್ತು ಅಂತಹ ಕಾನೂನಿನ ಮೂಲಕ, ಬಳಕೆಯಲ್ಲಿರುವ ಹಲವು ನುಡಿಗಳಲ್ಲಿ ಒಂದು ನುಡಿ ಎಲ್ಲರ ನುಡಿಯಾಗಿ, ಎಂದರೆ ಶಾಲೆಯ, ಆಡಳಿತದ ಮತ್ತು ಬರಹದ ನುಡಿಯಾಗಿ ಬಳಕೆಗೆ ಬರುವಂತೆ ಮಾಡಬಹುದು.

ಒಂದು ನುಡಿಯಲ್ಲಿ ಹೊಸದಾಗಿ ಬರಹವನ್ನು ಬೆಳೆಸಬೇಕೆಂದಿರುವ ಜನರು, ಅದಕ್ಕಿರುವ ಹಲವು ಆಡುನುಡಿಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಕೊಂಡು, ಅದರಲ್ಲಿ ಬರಹಗಳನ್ನು ಉಂಟುಮಾಡಲು ತೊಡಗಬಹುದು. ಸಮಯ ಕಳೆದಂತೆ, ಆ ಆಡುನುಡಿ ಬರಹದ ನುಡಿಯಾಗಿ ನೆಲೆಗೊಳ್ಳಬಹುದು. ಒಂದು ನುಡಿಯ ಬರಹದಲ್ಲಿ ಬರಿಗೆ(ಅಕ್ಶರ)ಗಳ ತೊಡಕುಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಹಲವಿರಬಹುದು; ಎತ್ತುಗೆಗಾಗಿ, ಅದರಲ್ಲಿ ಬಳಕೆಯಾಗುವ ಬರಿಗೆಗಳಿಗೂ ಬರಹವನ್ನು ಓದುವ ಬಗೆಗೂ ನಡುವೆ ಸರಿಯಾದ ಹೊಂದಾಣಿಕೆ ಯಿಲ್ಲದಿರಬಹುದು. ಇದರಿಂದಾಗಿ, ಆ ನುಡಿಯ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರಬಹುದು. ಈ ತೊಡಕನ್ನು ಇಲ್ಲವಾಗಿಸುವುದಕ್ಕಾಗಿ, ಅಂತಹ ಬರಿಗೆಗಳನ್ನು ಬಿಟ್ಟುಕೊಡಬೇಕೆಂಬ ತೀರ್ಮಾನ ವನ್ನು ವ್ಯಕ್ತಿಯೊಬ್ಬನು ಬಳಕೆಗೆ ತರಬಹುದು, ಮತ್ತು ಆತನ ತೀರ್ಮಾನವನ್ನು ಬೇರೆ ಬರಹಗಾರರು ಒಪ್ಪಿಕೊಳ್ಳಬಹುದು.

ಈ ರೀತಿ ಆಡಳಿತ, ಕೂಟ, ಇಲ್ಲವೇ ವ್ಯಕ್ತಿಗಳು ನಡೆಸುವ ನುಡಿಹಮ್ಮುಗೆಗಳ ಮೂಲಕವೂ ಒಂದು ನುಡಿಯ ಇಲ್ಲವೇ ಆಡುನುಡಿಯ ಪರಿಚೆ(ರೂಪ) ಮತ್ತು ಬಳಕೆಗಳಲ್ಲಿ ನಡೆಯಬೇಕಾಗಿರುವ ಮಾರ್ಪಾಡುಗಳು ನಡೆದುಹೋಗಬಲ್ಲುವು.

Eke →

9.1.2 ಹಮ್ಮುಗೆಗಳ ಬಗೆಗಳು

ಮೇಲೆ ಸೂಚಿಸಿದ ಹಾಗೆ, ಮಾರ್ಪಾಡುಗಳು ನುಡಿಯ ಒಳಗನ್ನು ತಾಗಬಹುದು, ಇಲ್ಲವೇ ಅದರ ಇರುವಿಕೆಯನ್ನೂ ತಾಗಬಹುದು. ಇದಕ್ಕನುಸಾರವಾಗಿ,

ನುಡಿಹಮ್ಮುಗೆಗಳೂ ಎರಡು ಬಗೆಯವಾಗಿರಬಲ್ಲುವು. ಅವುಗಳ ಗುರಿ ನುಡಿಯ ಒಳಗನ್ನು ಮಾರ್ಪಡಿಸುವುದಾಗಿರಬಹುದು, ಇಲ್ಲವೇ ಅದರ ಇರುವಿಕೆಯಲ್ಲಿ ಮಾರ್ಪಾಡುಗಳನ್ನು ತರುವುದಾಗಿರಬಹುದು.

ನುಡಿಯ ಒಳಗನ್ನು ತಾಗುವ ಹಮ್ಮುಗೆಗಳ ಮೂಲಕ ಹೊಸ ಹೊಸ ಕೆಲಸಗಳನ್ನು ನಡೆಸುವಲ್ಲಿ ಅದನ್ನು ಬಳಸಲು ಬರುವ ಹಾಗೆ ನಾವು ಮಾಡಬಲ್ಲೆವು. ಎತ್ತುಗೆಗಾಗಿ, ಒಂದು ನುಡಿಯನ್ನು ಕೋರ್ಟು ಕಚೇರಿಗಳಲ್ಲಿ ಇಲ್ಲವೇ ಶಾಲೆ-ಕಾಲೇಜುಗಳಲ್ಲಿ ಬಳಸಬೇಕಿದ್ದಲ್ಲಿ, ಅದಕ್ಕೆ ಬೇಕಾಗುವ ಸಾವಿರಾರು ಹೆಚ್ಚಿನ ಪದಗಳು ಆ ನುಡಿಯಲ್ಲಿರಬೇಕಾಗುತ್ತದೆ. ನುಡಿಹಮ್ಮುಗೆಯ ಮೂಲಕ ಇವನ್ನೆಲ್ಲ ಉಂಟುಮಾಡಿಕೊಟ್ಟಲ್ಲಿ ಅಂತಹ ಬಳಕೆ ಸುಳುವಾಗುತ್ತದೆ. ನುಡಿಯ ಇರುವಿಕೆಯನ್ನು ತಾಗುವ ಹಮ್ಮುಗೆಯ ಮೂಲಕ ಸಮಾಜದಲ್ಲಿ ಬಳಕೆಯಲ್ಲಿರುವ ಹಲವು ನುಡಿಗಳಲ್ಲಿ ಒಂದರ ಬೆಲೆ ಉಳಿದವುಗಳ ಬೆಲೆಗಿಂತ ಹೆಚ್ಚಾಗುವ ಹಾಗೆ ಮಾಡಬಹುದು. ಎತ್ತುಗೆಗಾಗಿ, ಹಲವು ನುಡಿಗಳಲ್ಲಿ ಒಂದನ್ನು ಕಲಿಕೆಯ ಇಲ್ಲವೇ ಆಡಳಿತದ ನುಡಿಯಾಗಿ ಆರಿಸಿಕೊಂಡಲ್ಲಿ, ಅದರ ಬೆಲೆ ಹೆಚ್ಚುತ್ತದೆ; ಸಮಾಜದಲ್ಲಿ ಅದರ ಬಳಕೆಯೂ ಹೆಚ್ಚು ಹರವನ್ನು ಪಡೆಯುತ್ತದೆ: ಹೆಚ್ಚು ಹೆಚ್ಚು ಮಂದಿ ಅದನ್ನು ಬಳಸುವಂತಾಗುತ್ತದೆ.

ಈ ಎರಡು ಬಗೆಯ ಹಮ್ಮುಗೆಗಳು ಒಂದಕ್ಕೊಂದು ಸಂಬಂದಿಸಿವೆ ಎಂಬುದನ್ನು ಗಮನಿಸುವುದು ಅವಶ್ಯ. ಎತ್ತುಗೆಗಾಗಿ, ಒಂದು ನುಡಿಯಲ್ಲಿ ಅರಿಮೆಯ (ವಿಜ್ನಾನದ) ಕಲಿಕೆಗೆ ಬೇಕಾಗುವ ಸಾವಿರಾರು ಹೊಸ ಪದಗಳನ್ನು ಉಂಟುಮಾಡಿಕೊಟ್ಟಿದ್ದರೂ, ಆ ನುಡಿಯನ್ನು ಅಂತಹ ಕಲಿಕೆಗಾಗಿ ಬಳಸಲು ತೊಡಗದಿದ್ದಲ್ಲಿ, ಅವು ಪದನೆರಕೆ(ಕೋಶ)ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಪದಗಳಾಗಿ ಉಳಿಯಬಲ್ಲುವಲ್ಲದೆ ಆ ನುಡಿಯ ಪದಗಳೆಂದೆನಿಸಲಾರವು.

Eke →

9.1.3 ಹಮ್ಮುಗೆಯ ಹಂತಗಳು

ಈ ಎರಡು ರೀತಿಯ ನುಡಿಹಮ್ಮುಗೆಗಳನ್ನೂ ನಾಲ್ಕು ಮುಕ್ಯ ಹಂತಗಳ ಮೂಲಕ ಬಳಕೆಗೆ ತರಬೇಕಾಗುತ್ತದೆ. ಇವನ್ನು ಆಯ್ಕೆ, ಪರಿಚೆ, ಬಳಕೆ ಮತ್ತು ಬೆಳವಣಿಗೆ ಎಂಬುದಾಗಿ ಹೆಸರಿಸಬಹುದು.

ಎತ್ತುಗೆಗಾಗಿ, ಬರಹವನ್ನು ಬಳಸದಿರುವ ನುಡಿಯೊಂದನ್ನು ಬರಹಕ್ಕಿಳಿಸ ಬೇಕೆಂಬ ನುಡಿಹಮ್ಮುಗೆ ನಮ್ಮ ಮುಂದಿರಬಹುದು. ಇದಕ್ಕಾಗಿ, ಮೊದಲಿಗೆ ಯಾವುದಾದರೊಂದು ಲಿಪಿಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದು ರೋಮನ್

ಲಿಪಿಯಿರಬಹುದು, ನಾಗರಿ ಲಿಪಿಯಿರಬಹುದು, ಇಲ್ಲವೇ ಪರ್ಸೋ-ಅರೇಬಿಕ್ ಲಿಪಿಯಿರಬಹುದು.

ಎರಡನೆಯದಾಗಿ, ಆ ಲಿಪಿಯಲ್ಲಿರುವ ಬರಿಗೆ(ಅಕ್ಶರ)ಗಳಲ್ಲಿ ಯಾವುವನ್ನು ಬಳಸಬೇಕು ಮತ್ತು ಯಾವುವನ್ನು ಬಿಡಬೇಕು, ಅವುಗಳ ಮೂಲಕ ನುಡಿಯ ಉಲಿಗಳನ್ನು ಇಲ್ಲವೇ ಪದಗಳನ್ನು ಹೇಗೆ ಸೂಚಿಸಬೇಕು, ನುಡಿಯಲ್ಲಿರುವ ಹೆಚ್ಚಿನ ಉಲಿಗಳನ್ನು ಸೂಚಿಸಲು ಎಂತಹ ಹೆಚ್ಚಿನ ಬರಿಗೆಗಳು ಬೇಕಾಗುತ್ತವೆ, ಅವನ್ನು ಹೇಗೆ ಉಂಟುಮಾಡಿಕೊಳ್ಳಬೇಕು ಎಂಬಂತಹ ಹಲವಾರು ತೀರ್ಮಾನ ಗಳನ್ನು ಕಯ್ಗೊಳ್ಳಬೇಕಾಗುತ್ತದೆ. ಈ ತೀರ್ಮಾನಗಳು ಆ ನುಡಿಯಲ್ಲಿ ಬಳಸಬೇಕಾಗಿರುವ ಲಿಪಿಗೆ ಅದರದೇ ಆದ ಒಂದು ಪರಿಚೆಯನ್ನು ಕೊಡುತ್ತವೆ. ಮೂರನೆಯದಾಗಿ, ಈ ಲಿಪಿಯನ್ನು ಬಳಕೆಗೆ ತರುವ ಕೆಲಸ ನಡೆಯಬೇಕು. ಇದನ್ನು ಒಬ್ಬ ವ್ಯಕ್ತಿ ನಡೆಸಬಹುದು, ಕೆಲವರು ಬರಹಗಾರರು ಒಟ್ಟು ಸೇರಿ ನಡೆಸಬಹುದು ಇಲ್ಲವೇ ಕಾನೂನುಗಳ ಮೂಲಕ ಆಡಳಿತವೂ ಅದನ್ನು ನಡೆಸಬಲ್ಲುದು. ಶಾಲೆಗಳ ಕಲಿಕೆಯಲ್ಲಿ ಅದನ್ನು ಸೇರಿಸುವ ಮೂಲಕ, ಮತ್ತು ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಅದನ್ನು ಬಳಸುವ ಮೂಲಕ, ಹೆಚ್ಚು ಹೆಚ್ಚು ಜನರಲ್ಲಿ ಅದು ಬಳಕೆಗ ಬರುವ ಹಾಗೆ ಮಾಡ ಬಹುದು.

ನಾಲ್ಕನೆಯದಾಗಿ, ಬಳಕೆಗೆ ತಂದಿರುವ ಈ ಲಿಪಿಯಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯಬೇಕಾಗುತ್ತದೆ: ಬೇರೆ ಬೇರೆ ಕಡೆಗಳಲ್ಲಿ ಬಳಸುವು ದಕ್ಕಾಗಿ ಅದರ ಬರಿಗೆಗಳನ್ನು ದಪ್ಪಬರಿಗೆ, ತೆಳುಬರಿಗೆ, ಮಾಲುಬರಿಗೆ ಮೊದಲಾದ ಹಲವು ಒಡ್ಡವಗಳಲ್ಲಿ ಉಂಟುಮಾಡಬೇಕಾಗುತ್ತದೆ; ಅದನ್ನು ಬೆರಳಚ್ಚು ಮಾಡಲು ಅದರ ಬರಿಗೆಗಳನ್ನು ಕೀಲಿಮಣೆಯಲ್ಲಿ ಅಳವಡಿಸ ಬೇಕಾಗುತ್ತದೆ; ಎಣ್ಣುಕ(ಕಂಪ್ಯೂಟರ್)ಗಳಲ್ಲಿ ಬಳಸಲು ತಂತ್ರಾಂಶಗಳನ್ನು ಉಂಟುಮಾಡಬೇಕಾಗುತ್ತದೆ.

ನುಡಿಹಮ್ಮುಗೆಯ ಈ ನಾಲ್ಕು ಹಂತಗಳಲ್ಲಿ ಎರಡು ಮತ್ತು ನಾಲ್ಕನೇ ಹಂತಗಳನ್ನು ನಡೆಸಬೇಕಿದ್ದಲ್ಲಿ, ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಅಂತಹ ತಿಳಿವಿಲ್ಲದವರು ಅವನ್ನು ನಡೆಸಹೋಗಿ, ಹೇಗೆ ಸಮಾಜವನ್ನು ಹಲವಾರು ಬಗೆಯ ತೊಂದರೆಗಳಲ್ಲಿ ಸಿಲುಕಿಸಿದ್ದಾರೆ ಎಂಬುದನ್ನು ಗಮನಿಸಿದೆ ವಾದರೆ, ಇದು ಯಾಕೆ ಬೇಕು ಎಂಬುದು ಗೊತ್ತಾಗುತ್ತದೆ.

ನುಡಿಯ ಹಮ್ಮುಗೆಗೆ ಸೊಲ್ಲರಿಮೆಯ ತಿಳಿವು ಯಾಕೆ ಬೇಕು ಎಂಬುದನ್ನು ತೋರಿಸಿಕೊಡುವುದೇ ಈ ಪಸುಗೆಯ ಗುರಿಯಾದ ಕಾರಣ, ಪರಿಚೆ ಮತ್ತು

ಬೆಳವಣಿಗೆ ಎಂಬ ಅದರ ಎರಡು ಮತ್ತು ನಾಲ್ಕನೆಯ ಹಂತಗಳನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ.

Eke →

9.2 ಪರಿಚೆ ಹಮ್ಮುಗೆ

ಒಂದು ನಾಡಿನಲ್ಲಿ ಇಲ್ಲವೇ ಸಮಾಜದಲ್ಲಿ ನುಡಿಹಮ್ಮುಗೆಯ ಮೂಲಕ ಎಂತಹ ಮಾರ್ಪಾಡುಗಳನ್ನು ನಡೆಸಬೇಕು ಎಂಬುದನ್ನು ಮುಕ್ಯವಾಗಿ ಸಾಮಾಜಿಕ ನೆಲೆಯಲ್ಲಿ ನಡೆಸಲಾಗುತ್ತದೆ. ಎತ್ತುಗೆಗಾಗಿ, ಇಸ್ರೇಲ್ನಲ್ಲಿ ಬಳಕೆಯಲ್ಲಿದ್ದ ಹಲವು ನುಡಿಗಳಲ್ಲಿ ಹೀಬ್ರೂ ನುಡಿಯನ್ನು ಎಲ್ಲರ ನುಡಿಯಾಗಿ ಆರಿಸಿಕೊಳ್ಳ ಲಾಯಿತು ಮತ್ತು ಅದನ್ನೇ ಆಡಳಿತ, ಕಾನೂನು, ಕಲಿಕೆ ಮೊದಲಾದವುಗಳಲ್ಲಿ ಬಳಸುವ ತೀರ್ಮಾನವನ್ನು ಮಾಡಲಾಯಿತು. ಇಸ್ರೇಲ್ನಲ್ಲಿ ನೆಲೆಸಿದ ಜನರಲ್ಲಿ ಹೆಚ್ಚಿನವರೂ ಯೆಹೂದಿಗಳಾಗಿದ್ದುದೇ ಈ ರೀತಿ ಹೀಬ್ರೂ ನುಡಿಯನ್ನು ಆರಿಸಿಕೊಳ್ಳಲು ಮುಕ್ಯ ಕಾರಣ.

ಒಂದು ನುಡಿ ಇಲ್ಲವೇ ಆಡುನುಡಿಯನ್ನು ಎಲ್ಲರ ನುಡಿಯಾಗಿ ಮಾರ್ಪಡಿಸ ಬೇಕಿದ್ದಲ್ಲಿ, ಅದರ ಪರಿಚೆಯಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ; ಅದನ್ನು ಬರಹದಲ್ಲಿ ಬಳಸುತ್ತಿಲ್ಲವಾದಲ್ಲಿ, ಅದಕ್ಕೊಂದು ಲಿಪಿಯನ್ನು ಕೊಟ್ಟು ಬರಹಕ್ಕೆ ಇಳಿಸಬೇಕಾಗುತ್ತದೆ; ಅದನ್ನು ಹಲವು ಮಂದಿಗೆ ಹೊಸದಾಗಿ ಕಲಿಸಬೇಕಾಗುತ್ತದೆಯಾದ ಕಾರಣ, ಹಾಗೆ ಕಲಿಸಲು ಬೇಕಾಗುವ ಸೊಲ್ಲರಿಮೆಯೊಂದನ್ನು ತಯಾರಿಸಬೇಕಾಗುತ್ತದೆ; ಮತ್ತು, ಅದನ್ನು ಹಲವು ಬಗೆಯ ಹೊಸ ಹೊಸ ಕೆಲಸಗಳಲ್ಲಿ ಬಳಸಬೇಕಾಗುತ್ತದೆ ಯಾದ ಕಾರಣ, ಆ ಕೆಲಸಗಳಿಗೆ ಬೇಕಾಗುವ ಹಲವಾರು ಹೊಸ ಪದಗಳನ್ನು ಅದರಲ್ಲಿ ಉಂಟುಮಾಡಬೇಕಾಗುತ್ತದೆ.

ಇಂತಹ ನುಡಿಪರಿಚೆಯ ಮಾರ್ಪಾಡುಗಳನ್ನು ಸರಿಯಾಗಿ, ಮುಂದೆ ಜನರಿಗೆ ತೊಂದರೆಯಾಗದ ಹಾಗೆ, ನಡೆಸಬೇಕಿದ್ದಲ್ಲಿ, ಅದನ್ನು ನಡೆಸಿಕೊಡುವವರು ನುಡಿಯರಿಮೆಯನ್ನು ಮತ್ತು ಆ ನುಡಿಯ ಸೊಲ್ಲರಿಮೆಯನ್ನು ಚನ್ನಾಗಿ ತಿಳಿದಿರಬೇಕಾಗುತ್ತದೆ.

Eke →

9.2.1 ಬರಿಗೆಹಮ್ಮುಗೆ

ಬರಹವಿಲ್ಲದ ನುಡಿಗೆ ಒಂದು ಹೊಸ ಲಿಪಿಯನ್ನು ಅಳವಡಿಸುವುದು, ಮತ್ತು ಬರಹವಿರುವ ನುಡಿಯಲ್ಲಿ ಹಲವು ಪದಬರಿಗೆಯ (ಸ್ಪೆಲ್ಲಿಂಗ್) ತೊಡಕು

ಗಳಿದ್ದಲ್ಲಿ ಅವನ್ನೆಲ್ಲ ಬಗೆಹರಿಸುವುದು ಎಂಬುದಾಗಿ ಎರಡು ಬಗೆಯ ಬರಿಗೆ ಹಮ್ಮುಗೆಗಳನ್ನು ನಡೆಸಬೇಕಾಗಿ ಬರಬಹುದು. ಬರಹವಿರುವ ನುಡಿಯಲ್ಲೂ ಪದಬರಿಗೆಯ ತೊಡಕುಗಳು ತುಂಬಾ ಹೆಚ್ಚಿದ್ದಲ್ಲಿ, ಅದನ್ನು ಸರಿಪಡಿಸುವ ಬದಲು ಹೊಸ ಲಿಪಿಯೊಂದನ್ನು ಅಳವಡಿಸಿಕೊಳ್ಳುವುದೇ ಒಳ್ಳೆಯದೆಂದೂ ಕೆಲವೊಮ್ಮೆ ಅನಿಸಬಹುದು.

ಈ ಎರಡು ಬಗೆಯ ಕೆಲಸಗಳನ್ನು ನಡೆಸುವವರೂ ನುಡಿಯ ಮತ್ತು ಬರಿಗೆಯ ಒಳಗುಟ್ಟನ್ನು ತಿಳಿದಿರುವಂತಹ ಬರಿಗೆಯರಿಗರಾಗಿರಬೇಕು. ಇಲ್ಲವಾದರೆ, ಅವರು ಹೊಸ ಲಿಪಿಯನ್ನು ತಮ್ಮ ನುಡಿಗೆ ತಪ್ಪು ತಪ್ಪಾಗಿ ಅಳವಡಿಸಬಹುದು, ಇಲ್ಲವೇ ಈಗಿನ ಲಿಪಿಯಲ್ಲಿರುವ ತೊಡಕುಗಳನ್ನು ತಪ್ಪು ತಪ್ಪಾಗಿ ಬಗೆಹರಿಸಲು ಹೋಗಬಹುದು, ಮತ್ತು ಅದರಿಂದಾಗಿ, ಆ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುವ ಹಾಗೆ ಮಾಡ ಬಹುದು.

ಒಂದು ನುಡಿಯನ್ನು ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬಳಸು ತ್ತಿರುವರಾದರೆ, ಅದರ ಬರಹ ತೊಡಕಿನದಾಗಿದೆಯಾದರೂ ಹೆಚ್ಚು ತೊಂದರೆ ಯಾಗುವುದಿಲ್ಲ. ಆದರೆ, ಎಲ್ಲಾ ಜನರೂ ಕಲಿಯಬೇಕಾಗಿರುವ ಮತ್ತು ಬಳಸಬೇಕಾಗಿರುವ ಬರಹ ತೊಡಕಿನದಾಗಿದೆಯಾದರೆ, ನುಡಿಯ ಕುರಿತು ನಮಗಿರುವ ಬೇರೆ ಹಮ್ಮುಗೆಗಳಲ್ಲಿ ಒಂದನ್ನೂ ಸರಿಯಾಗಿ ನಡೆಸಲು ಬರುವುದಿಲ್ಲ. ಎಲ್ಲರೂ ಅದನ್ನು ಕಲಿಯಬೇಕೆಂಬ ಮೊದಲನೆಯ ಗುರಿಯನ್ನೇ ತಲುಪಲು ಬರುವುದಿಲ್ಲ.

ಲಿಪಿಯ ಮಟ್ಟಿಗೆ ಒಂದು ಬರಹ ಚನ್ನಾಗಿರಬೇಕಾದರೆ, ಎಂದರೆ ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಳುವಾಗಿರಬೇಕಾದರೆ, ಅದು ಬಳಸುವ ಬರಿಗೆಗಳು ಉಲಿ ಇಲ್ಲವೇ ಉಲಿಕಂತೆಗಳೊಂದಿಗೆ ನೇರವಾಗಿ ಸಂಬಂದಿಸಿರ ಬೇಕು. ಓದಿಗೂ ಬರಹಕ್ಕೂ ನಡುವೆ ಅಂತರ ಹೆಚ್ಚಿದಂತೆಲ್ಲ ಓದುವ ಮತ್ತು ಬರೆಯುವ ಕೆಲಸ ತೊಡಕಿನದಾಗುತ್ತಾ ಹೋಗುತ್ತದೆ. ಬರಹದ ಪರಿಚೆಯನ್ನು ಮಾರ್ಪಡಿಸಿದವರಲ್ಲಿ ಕೆಲವರು ತಮ್ಮ ಜಾಣ್ಮೆಯ ಮೂಲಕ ಅದು ತುಂಬಾ ಸುಳುವಾಗುವ ಹಾಗೆ ಮಾಡಿದ್ದಾರೆ; ಮತ್ತು ಅದರ ಮೂಲಕ ಅವರ ಸಮಾಜದಲ್ಲಿ ಬರಹವನ್ನು ಎಲ್ಲರ ಸೊತ್ತಾಗಿ ಮಾಡುವ ಕೆಲಸವೂ ತುಂಬಾ ಸುಳುವಾಗುವ ಹಾಗೆ ಮಾಡಿದ್ದಾರೆ. ಆದರೆ, ಬೇರೆ ಕೆಲವರು ತಮ್ಮ ಅರಿಯಮೆ(ಅಜ್ನಾನ)ಯಿಂದಾಗಿ, ಅದು ತುಂಬಾ ತೊಡಕಿನ ಕೆಲಸವಾಗುವ ಹಾಗೆಯೂ ಮಾಡಿದ್ದಾರೆ.

Eke →

9.2.2 ಸರಿಯಾಗಿ ಮಾಡಿದ ಬರಿಗೆಹಮ್ಮುಗೆಗಳು

ಬರಿಗೆಹಮ್ಮುಗೆಗಳ ಮೂಲಕ ನುಡಿಗಳಿಗೆ ಒಳ್ಳೆಯ ಲಿಪಿಯನ್ನು ಕೊಡಿಸಿರುವ, ಮತ್ತು ಲಿಪಿಯ ಬಳಕೆಯಲ್ಲಿರುವ ತೊಡಕುಗಳನ್ನು ಬಗೆಹರಿಸಿ ಅವು ತುಂಬಾ ಸುಳುವಾಗುವ ಹಾಗೆ ಮಾಡಿರುವ ಎತ್ತುಗೆಗಳು ಹಲವಿವೆ. ಕೊರಿಯನ್ ನುಡಿಗೆ ಹೊಸ ಲಿಪಿಯೊಂದನ್ನು ಅಳವಡಿಸಿರುವ ಬಗೆ, ಮತ್ತು ಫಿನ್ನಿಶ್ ನುಡಿಯ ಬರಹದಲ್ಲಿದ್ದ ಬರಿಗೆಯ ತೊಡಕುಗಳನ್ನು ಬಗೆಹರಿಸಿರುವ ಬಗೆಗಳು ಇಂತಹವು. ಕೊರಿಯನ್ ಬರಹದಲ್ಲಿ ಬಳಕೆಯಾಗುತ್ತಿದ್ದ ಚಯ್ನೀಸ್ ಮೂಲದ ಹಾಜಾ ಲಿಪಿ ತುಂಬಾ ತೊಡಕು ತೊಡಕಿನದಾಗಿತ್ತು. ಅದನ್ನು ಕಲಿಯಲು ಹಲವು ವರ್ಶಗಳೇ ಬೇಕಾಗುತ್ತಿದ್ದುವು, ಮತ್ತು ಮುಂದೆ ಅದನ್ನು ಬಳಸುವುದೂ ತುಂಬಾ ತೊಡಕಿನ ಕೆಲಸವಾಗಿತ್ತು. 1945ರಲ್ಲಿ, ಎಂದರೆ ಜಪಾನೀಸ್ ಆಕ್ರಮಣ ಕೊನೆಗೊಂಡ ಸಮಯದಲ್ಲಿ, ಕೊರಿಯಾದ ರಾಜ ಈ ಹಾಜಾ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲು ಹಂಗುಲ್ ಎಂಬ ಹೊಸದಾಗಿ ಉಂಟುಮಾಡಿದ ಲಿಪಿಯನ್ನು ಬಳಸತಕ್ಕದ್ದೆಂಬ ತೀರ್ಮಾನವನ್ನು ಮಾಡಿದ.

ಆತನ ಈ ತೀರ್ಮಾನಕ್ಕೆ ತನ್ನ ರಾಜ್ಯದ ಎಲ್ಲಾ ಜನರೂ, ಹೆಂಗಸರು ಮತ್ತು ಹುಡುಗಿಯರು ಕೂಡ, ಓದಲು ಬರೆಯಲು ಕಲಿಯಬೇಕೆಂಬುದೇ ಮೂಲ ಗುರಿಯಾಗಿತ್ತು. ಆ ಸಮಯದಲ್ಲಿ ಬಳಕೆಯಲ್ಲಿದ್ದ ಹಾಜಾ ಲಿಪಿಯನ್ನು ಕಲಿಯಲು ಹಲವು ಮಂದಿಗೆ ಸಾದ್ಯವೇ ಆಗುತ್ತಿರಲಿಲ್ಲ. ಹಾಗಾಗಿ, ಎಲ್ಲರೂ ಸುಳುವಾಗಿ ಕಲಿಯಬಲ್ಲಂತಹ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸ ಬೇಕೆಂಬುದಾಗಿ ಕೊರಿಯಾದ ರಾಜ ತೀರ್ಮಾನಿಸಿದ್ದ.

ಹೊಸದಾಗಿ ಉಂಟುಮಾಡಿದ್ದ ಹಂಗುಲ್ ಲಿಪಿಯಲ್ಲಿ ಕೊರಿಯನ್ ನುಡಿಯಲ್ಲಿರುವ 24 ಉಲಿಗಳಿಗೆ 24 ಬರಿಗೆಗಳಿವೆ ಮತ್ತು ಅವಕ್ಕೂ ನುಡಿಯ ಉಲಿಗಳಿಗೂ ನಡುವೆ ನೇರವಾದ ಪತ್ತುಗೆ(ಸಂಬಂದ) ಇದೆ. ಇದಲ್ಲದೆ, ಈ ಬರಿಗೆಗಳನ್ನು ಬರಿಗೆಕಂತೆಗಳಾಗಿ ಜೋಡಿಸಿ ಬರೆಯಲಾಗುತ್ತದೆ ಮತ್ತು ಅವು ಪದಗಳಲ್ಲಿ ಬರುವ ಉಲಿಕಂತೆ(ಸಿಲೆಬ್್ಲ)ಗಳನ್ನು ಸರಿಯಾಗಿಯೇ ಸೂಚಿಸುತ್ತವೆ. ಬರಿಗೆಕಂತೆಗಳನ್ನು ಸೇರಿಸಿ ಮಾಡಿದ ಪದಗಳನ್ನು ಅವಕ್ಕಿಂತ ಮೊದಲು, ಮತ್ತು ಬಳಿಕ ಬರುವ ಪದಗಳಿಂದ ಬೇರ್ಪಡಿಸುವ ಬಗೆಯೂ ಹಂಗುಲ್ ಬರಹದಲ್ಲಿದೆ. ಉಲಿಗಳಿಗೂ ಬರಿಗೆಗಳಿಗೂ ನಡುವೆ ನೇರವಾದ ಪತ್ತುಗೆಯಿರುವ ಕಾರಣ, ಕೊರಿಯನ್ ಬರಹವನ್ನು ಒಂದೆರಡು ದಿನಗಳಲ್ಲಿ ಕಲಿತುಬಿಡಬಹುದು. ಮಕ್ಕಳಿಗೆ ಇದನ್ನು ಕಲಿಸುವಾಗ, ಮೊದಲಿಗೆ ಬರಿಗೆಕಂತೆಗಳನ್ನು ಕಲಿಸಲಾಗುತ್ತದೆ ಮತ್ತು ಆಮೇಲೆ ಅವುಗಳಲ್ಲಿ ಬರುವ ಬರಿಗೆಗಳನ್ನು ಬೇರೆ ಬೇರಾಗಿ ಪರಿಚಯಿಸ

ಲಾಗುತ್ತದೆ. ಕೊರಿಯನ್ ಲಿಪಿಯಲ್ಲಿ ಹೀಗೆ ಮಾಡಲು ಬರುತ್ತದೆಯಾದ ಕಾರಣ, ಅದನ್ನು ಮಕ್ಕಳಿಗೆ ಕಲಿಸುವುದು ಸುಲಬ.

ಈ ಹೊಸ ಲಿಪಿಯನ್ನು ಬಳಸತೊಡಗಿದುದರಿಂದಾಗಿ ಕೊರಿಯಾದಲ್ಲಿ ಓದು-ಬರಹ ಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ. ಮೊದಲಿಗಿದ್ದ ತೊಡಕು ತೊಡಕಾದ ಲಿಪಿಗಳನ್ನು ಬಿಟ್ಟುಕೊಟ್ಟು ಸುಳುವಾಗಿರುವ ಹೊಸದೊಂದು ಲಿಪಿಯನ್ನು ಬಳಸುವ ತೀರ್ಮಾನವನ್ನು ಮಲಯೇಶಿಯಾ ಮತ್ತು ಇಂಡೊನೇಶಿಯಾಗಳಲ್ಲೂ ತೆಗೆದುಕೊಳ್ಳಲಾಗಿತ್ತು. ಎತ್ತುಗೆಗಾಗಿ, ಮಲಯೇಶಿಯಾದಲ್ಲಿ ತೊಡಕು ತೊಡಕಾದ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟುಕೊಟ್ಟು, ಅದಕ್ಕಿಂತ ಸುಳುವಾದ ರೋಮನ್ ಲಿಪಿಯನ್ನು, ಅದರಲ್ಲಿ ಬರುವ ಬರಿಗೆಗಳಿಗೂ ನುಡಿಯ ಉಲಿಗಳಿಗೂ ನಡುವೆ ನೇರವಾದ ಪತ್ತುಗೆಯಿರುವ ಹಾಗೆ, ಅಳವಡಿಸಿಕೊಳ್ಳಲಾಗಿತ್ತು. ಇವತ್ತು ಆ ದೇಶದಲ್ಲಿ ಓದು-ಬರಹ ಬಲ್ಲವರ ಎಣಿಕೆ ನೂರಕ್ಕೆ ಎಪ್ಪತ್ತರಶ್ಟಾಗಲು ಈ ರೀತಿ ಲಿಪಿ ಯನ್ನು ಬದಲಾಯಿಸಿದುದೇ ಮುಕ್ಯ ಕಾರಣವೆಂದು ಹೇಳಲಾಗುತ್ತದೆ.

ಇವೆಲ್ಲವೂ ಹೊಸ ಲಿಪಿಯೊಂದನ್ನು ಜಾಣ್ಮೆಯಿಂದ ನುಡಿಗೆ ಅಳವಡಿಸಿ ಕೊಂಡಿರುವುದಕ್ಕೆ ಎತ್ತುಗೆಗಳಾಗಿವೆ. ಲಿಪಿಯೊಂದನ್ನು ನುಡಿಗೆ ತಪ್ಪು ತಪ್ಪಾಗಿ ಅಳವಡಿಸಿದುದರಿಂದಾಗಿ ಮೂಡಿಬಂದಿದ್ದ ಪದಬರಿಗೆಯ ತೊಡಕುಗಳನ್ನು ಬರಿಗೆಹಮ್ಮುಗೆಯ ಮೂಲಕ ಬಗೆಹರಿಸಿರುವುದಕ್ಕೂ ಹಲವು ಎತ್ತುಗೆಗಳಿವೆ. ಫಿನ್ನಿಶ್ ನುಡಿಯ ಬರಹ, ಲಿಪಿಯ ಮಟ್ಟಿಗೆ ತುಂಬಾ ತೊಡಕು ತೊಡಕಾ ಗಿತ್ತು. ಅದರ ಬಳಕೆಯಲ್ಲಿ ಹಲವಾರು ಪದಬರಿಗೆಯ (ಸ್ಪೆಲ್ಲಿಂಗ್ನ) ತೊಡಕುಗಳಿದ್ದುವು. ಈ ತೊಡಕುಗಳನ್ನು ಬಗೆಹರಿಸುವ ಕುರಿತು 18 ಮತ್ತು 19ನೇ ಶತಮಾನಗಳಲ್ಲಿ ಹಲವು ಚರ್ಚೆಗಳು ನಡೆದಿದ್ದುವು. ಕೊನೆಗೆ ಫಿನ್ಲೆಂಡಿನ ಅರಿಮೆಯ ಕೂಟ ಈ ಕೆಲಸವನ್ನು ಬಹಳ ಚನ್ನಾಗಿ ನಡೆಸಿಕೊಟ್ಟಿತು. ಇದನ್ನು ಎಶ್ಟು ಚನ್ನಾಗಿ ನಡೆಸಲಾಗಿತ್ತೆಂದರೆ, ಇವತ್ತು ಯುರೋಪಿನ ನುಡಿಗಳಲ್ಲೆಲ್ಲ ಫಿನ್ನಿಶ್ ನುಡಿಯ ಬರಹವೇ ಅತಿ ಹೆಚ್ಚು ಚನ್ನಾಗಿರುವ ಬರಹವೆಂದೆನಿಸಿದೆ. ಈ ಬರಹದಲ್ಲಿ ಪದಬರಿಗೆಯ ತೊಡಕುಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಯಾವುವೂ ಇಲ್ಲ. ಇವತ್ತು ಜಗತ್ತಿನಲ್ಲಿ ಓದು-ಬರಹದ ತಿಳಿವಿನ ಮಟ್ಟಿಗೆ ಫಿನ್ಲೆಂಡ್ ಮೊದಲನೆಯ ಜಾಗದಲ್ಲಿರಲು ಅದರ ಈ ತೊಡಕುಗಳಿಲ್ಲದ ಬರಹವೇ ಕಾರಣವೆಂದು ಹೇಳಲಾಗುತ್ತದೆ. ಅಮೆರಿಕಾದಲ್ಲಿ ಓದಿನ ತೊಂದರೆಯಿರುವ ಮಕ್ಕಳ ಅರ್ದದಶ್ಟು ಮಕ್ಕಳೂ ಫಿನ್ಲೆಂಡಿನಲ್ಲಿ ಓದಿನ ತೊಂದರೆಗೊಳಗಾಗುವುದಿಲ್ಲ. ಅಮೆರಿಕಾದಲ್ಲಿ ಮಕ್ಕಳಿಗೆ ತುಂಬಾ ಪದಬರಿಗೆಯ

ತೊಡಕುಗಳಿರುವ ಇಂಗ್ಲಿಶ್ ಬರಹವನ್ನು ಕಲಿಸಬೇಕಾಗುತ್ತದೆ ಮತ್ತು ಫಿನ್ಲೆಂಡಿ ನಲ್ಲಿ ಯಾವ ತೊಡಕೂ ಇಲ್ಲದ ಫಿನ್ನಿಶ್ ಬರಹವನ್ನು ಕಲಿಸಬೇಕಾಗುತ್ತದೆ ಎಂಬುದೇ ಈ ವ್ಯತ್ಯಾಸಕ್ಕೆ ಕಾರಣವೆಂದು ಹೇಳಲಾಗುತ್ತದೆ.

Eke →

9.2.3 ತಪ್ಪಾಗಿ ಮಾಡಿದ ಬರಿಗೆ ಹಮ್ಮುಗೆಗಳು

ಬರಿಗೆಹಮ್ಮುಗೆಗಳನ್ನು ನಡೆಸಲು ಬರಿಗೆಯರಿಮೆಯ ತಿಳಿವು ಯಾಕೆ ಬೇಕಾಗು ತ್ತದೆ ಎಂಬುದನ್ನು ವಿವರಿಸಲು ತಪ್ಪುತಪ್ಪಾಗಿ ನಡೆಸಿರುವ ಹಲವು ಬರಿಗೆ ಹಮ್ಮುಗೆಗಳನ್ನೂ ಎತ್ತುಗೆಗಳಾಗಿ ಕೊಡಬಹುದು. ಮಣಿಪುರಿ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸುವ ಸಮಯಲ್ಲಿ ಬರಹಗಾರರು ಮಾಡಿದ ತಪ್ಪುಗಳು, ಮತ್ತು ಇಂಗ್ಲಿಶ್ ನುಡಿಯ ಪದಗಳಲ್ಲಿ ಎಂತಹ ಬರಿಗೆಗಳನ್ನು ಬಳಸಬೇಕು ಎಂಬುದನ್ನು ತೀರ್ಮಾನಿಸುವ ಸಮಯಲ್ಲಿ ಸಾಮ್ಯುವೆಲ್ ಜಾನ್ಸನ್ ಎಂಬ ಒಬ್ಬ ವ್ಯಕ್ತಿ ಮಾಡಿರುವ ತಪ್ಪುಗಳು ಇಂತಹವು. ಇವುಗಳಿಂದಾಗಿ, ಇವತ್ತು ಮಣಿಪುರಿ ಮತ್ತು ಇಂಗ್ಲಿಶ್ ಬರಹಗಳನ್ನು ಕಲಿಯುವ ಮಕ್ಕಳು, ಮತ್ತು ಆಮೇಲೆ ಅವನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳುವ ದೊಡ್ಡವರು ತುಂಬಾ ತೊಂದರೆ ಗೊಳಗಾಗಬೇಕಾಗಿದೆ.

ಮಣಿಪುರದ ಜನರು ವಯ್ಶ್ಣವ ದರ್ಮವನ್ನು ತಮ್ಮದಾಗಿಸಿಕೊಂಡಾಗ, ತಮ್ಮ ನುಡಿಯನ್ನು ಬರೆಯಲು ಬಂಗಾಲಿ ಲಿಪಿಯನ್ನು ಬಳಸಬೇಕೆಂಬ ತೀರ್ಮಾನ ವನ್ನು (ಬರಿಗೆಹಮ್ಮುಗೆಯನ್ನು) ಮಾಡಿಕೊಂಡರು. ಆದರೆ, ಅವರು ಬಳಸುತ್ತಿದ್ದ ಮಣಿಪುರಿ ನುಡಿಗೂ ಬಂಗಾಲಿ ನುಡಿಗೂ ನಡುವೆ ತುಂಬಾ ವ್ಯತ್ಯಾಸಗಳಿವೆ. ಹಾಗಾಗಿ, ಮಣಿಪುರಿ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸುವುದು ಸುಳುವಿನ ಕೆಲಸವಾಗಿರಲಿಲ್ಲ. ಅದನ್ನು ಹೇಗೆ ನಡೆಸುವುದು ಎಂಬುದನ್ನು ಮಣಿಪುರಿಯ ತಿಳಿವಿಗರು ತಿಳಿದಿರಲಿಲ್ಲ, ಮತ್ತು ಅದನ್ನು ಅವರಿಗೆ ತಿಳಿಸಬಲ್ಲ ಬರಿಗೆ ಯರಿಗರೂ ಇರಲಿಲ್ಲ.

ಈ ಕೆಲಸವನ್ನು ನಡೆಸುವಲ್ಲಿ ಮಣಿಪುರಿ ಬರಹಗಾರರು ತುಸುವೂ ಜಾಣ್ಮೆಯನ್ನು ತೋರಿಸಲಿಲ್ಲವಾದ ಕಾರಣ, ಇವತ್ತು ಆ ನುಡಿಯ ಬರಹದಲ್ಲಿ ಹಲವಾರು ಪದಬರಿಗೆಯ ತೊಡಕುಗಳು ತುಂಬಿಕೊಂಡಿವೆ. ಶಾಲೆಗಳಲ್ಲಿ ಮಕ್ಕಳಿಗೆ ಮಣಿಪುರಿ ಬರಹವನ್ನು ಕಲಿಸುವುದು, ಮತ್ತು ಆಮೇಲೆ ಅದನ್ನು ತಮ್ಮ ಬರಹಗಳಲ್ಲಿ ಬಳಸುವುದು ತುಂಬಾ ತೊಡಕಿನ ಕೆಲಸವಾಗಿದೆ.

ಮಣಿಪುರಿ ನುಡಿಯಲ್ಲಿ ಬರೆಯಲು ಒಟ್ಟು 24 ಮುಚ್ಚುಲಿ(ವ್ಯಂಜನ) ಗಳಿದ್ದರೆ ಸಾಕು; ಆದರೆ, ಬಂಗಾಲಿ ಲಿಪಿಯಲ್ಲಿ ಒಟ್ಟು 35 ಮುಚ್ಚುಲಿಗಳಿವೆ.

ಮಣಿಪುರಿ ಬರಹಗಾರರು ತಮ್ಮ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸಿ ಕೊಳ್ಳುವಾಗ, ಅದಕ್ಕೆ ಬೇಕಾಗಿರುವ 24 ಮುಚ್ಚುಲಿಗಳನ್ನು ಮಾತ್ರವೇ ಆರಿಸಿಕೊಳ್ಳುವ ಬದಲು, ಈ ಎಲ್ಲಾ 35 ಮುಚ್ಚುಲಿಗಳನ್ನೂ ಒಂದಲ್ಲ ಒಂದು ಬಗೆಯಲ್ಲಿ ಬಳಸಿಕೊಂಡರು. ಇದರಿಂದಾಗಿ, ಮತ್ತು ಇಂತಹವೇ ಬೇರೆಯೂ ಹಲವು ತಪ್ಪುಗಳಿಂದಾಗಿ, ಇವತ್ತು ಮಣಿಪುರಿ ಬರಹದಲ್ಲಿ ಹಲವಾರು ಪದಬರಿಗೆಯ (ಸ್ಪೆಲ್ಲಿಂಗ್) ತೊಡುಕುಗಳು ಕಾಣಿಸಿಕೊಳ್ಳುತ್ತವೆ.

ಎತ್ತುಗೆಗಾಗಿ, ಮಣಿಪುರಿಯಲ್ಲಿ ಒಂದು ಸಕಾರ ಮಾತ್ರ ಇದೆ. ಅದನ್ನು ಬರೆಯಲು ಒಂದು ಬರಿಗೆ ಇದ್ದರೆ ಸಾಕು. ಆದರೆ, ಬಂಗಾಲಿ ಲಿಪಿಯಲ್ಲಿ ಸ, ಶ ಮತ್ತು ಷಗಳೆಂಬ ಮೂರು ಅಂತಹ ಬರಿಗೆಗಳಿವೆ. ಮಣಿಪುರಿ ಬರಹಗಾರರು ಅವುಗಳಲ್ಲಿ ಒಂದನ್ನು ಮಾತ್ರವೇ ಆರಿಸಿಕೊಳ್ಳುವ ಬದಲು ಮೂರನ್ನೂ ಆರಿಸಿಕೊಂಡರು. ಆದರೆ, ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದಕ್ಕೆ ಯಾವ ಒಂದು ಕಟ್ಟಲೆಯನ್ನೂ ಮಾಡಲಿಲ್ಲ. ಇದರಿಂದಾಗಿ, ಇವತ್ತು ಮಣಿಪುರಿಯ ಯಾವ ಪದದಲ್ಲಿ ಬರುವ ಸಕಾರವನ್ನು ಸಕಾರವಾಗಿ, ಶಕಾರವಾಗಿ ಇಲ್ಲವೇ ಷಕಾರವಾಗಿ ಬರೆಯಲಾಗುತ್ತದೆ ಎಂಬ ವಿಶಯದಲ್ಲಿ ಎಂತಹ ಕಟ್ಟಳೆಯೂ ಕಾಣಿಸುವುದಿಲ್ಲ!

ಇಂತಹವೇ ಇನ್ನೂ ಹಲವಾರು ಪದಬರಿಗೆಯ ತೊಡಕುಗಳು ಮಣಿಪುರಿ ಬರಹದಲ್ಲಿ ತುಂಬಿಕೊಂಡಿವೆ. ಈ ತೊಡಕುಗಳನ್ನು ಬಗೆಹರಿಸಬೇಕಿದ್ದಲ್ಲಿ ಮಣಿಪುರಿ ಉಲಿಗಳು ಎಶ್ಟಿವೆಯೋ ಅಶ್ಟು ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳ ಬೇಕು ಮತ್ತು ಪದಗಳನ್ನು ಯಾವ ರೀತಿಯಲ್ಲಿ ಓದಲಾಗುತ್ತದೆಯೋ ಅದೇ ರೀತಿಯಲ್ಲಿ ಬರೆಯುವ ಹಾಗೆ ಈ ಬರಿಗೆಗಳನ್ನು ಬಳಸಬೇಕು. ಇದನ್ನು ಮಣಿಪುರಿ ಉಲಿಯರಿಮೆಯ ತಿಳಿವಿಲ್ಲದೆ ನಡೆಸಲು ಬರುವುದಿಲ್ಲ.

ಇಂಗ್ಲಿಶ್ ಬರಹದಲ್ಲಿ ಪದಗಳನ್ನು ಯಾವ ರೀತಿ ಬರೆಯಬೇಕು, ಅವುಗಳಲ್ಲಿ ಯಾವ ಬರಿಗೆ(ಅಕ್ಶರ)ಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ತುಂಬಾ ಗೊಂದಲವಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬರೆಯುತ್ತಿದ್ದರು. ಈ ಸಮಯದಲ್ಲಿ (1788ರಲ್ಲಿ), ಸಾಮ್ಯುವೆಲ್ ಜಾನ್ಸನ್ ಎಂಬ ವಿದ್ವಾಂಸರು ಒಂದು ಚನ್ನಾಗಿರುವ ಪದನೆರಕೆ(ಕೋಶ)ವನ್ನು ಹೊರತಂದರು. ಇದರಲ್ಲಿ ಪದಗಳ ಹುರುಳುಗಳನ್ನು ತುಂಬಾ ಚನ್ನಾಗಿ ಕೊಡಲಾಗಿತ್ತು.

ಇದರಿಂದಾಗಿ, ಆ ಪದನೆರಕೆ ಇಂಗ್ಲಿಶ್ ಬರಹಗಾರರಿಗೆ ಮಾದರಿ ಪದನೆರಕೆಯಾಯಿತು. ಎಲ್ಲರೂ ಅದರಲ್ಲಿ ಕೊಟ್ಟಿರುವ ಪದಬರಿಗೆಯನ್ನೇ

(ಸ್ಪೆಲ್ಲಿಂಗ್) ಬಳಸಲು ತೊಡಗಿದರು ಮತ್ತು ಇದರಿಂದಾಗಿ, ಆ ವಿಶಯದಲ್ಲಿ ಮೊದಲಿಗಿದ್ದ ಗೊಂದಲ ಇಲ್ಲವಾಯಿತು.

ಆದರೆ, ಜಾನ್ಸನ್ ಅವರಿಗೆ ಸರಿಯಾದ ಬರಿಗೆಯರಿಮೆಯ ತಿಳಿವು ಇರಲಿಲ್ಲ. ಇಂಗ್ಲಿಶ್ ಪದಗಳ ಚರಿತ್ರೆ ಎಂತಹದು ಎಂಬುದನ್ನು ಅವುಗಳಲ್ಲಿ ಬರುವ ಬರಿಗೆಗಳು ಸೂಚಿಸುವಂತಿರಬೇಕು ಎಂಬ ತಪ್ಪು ತೀರ್ಮಾನವನ್ನು ಅವರು ಮಾಡಿಕೊಂಡಿದ್ದರು. ಎತ್ತುಗೆಗಾಗಿ, ಞಟಿoತಿ, ಞಟಿighಣ, ಞಟಿoಛಿಞ, ಞಟಿob, ಞಟಿiಣ, ಞಟಿoಣ ಮೊದಲಾದ ಪದಗಳ ಮೊದಲಿಗೆ ಅವರು ಇರಿಸಿದ್ದ ಞ ಬರಿಗೆ ಆ ಪದಗಳ ಉಲಿಪಿನಲ್ಲಿ (ಉಚ್ಚಾರಣೆಯಲ್ಲಿ) ಹಿಂದೆ ಒಂದು ಕಕಾರವಿತ್ತು ಎಂಬುದಾಗಿ ಅದರ ಚರಿತ್ರೆಯನ್ನು ಸೂಚಿಸುತ್ತದೆಯಲ್ಲದೆ ಅದರ ಇವತ್ತಿನ ಉಲಿಪನ್ನು ಸೂಚಿಸುವುದಿಲ್ಲ.

ಇಂತಹ ಇನ್ನೂ ಹಲವಾರು ಉಲಿಪಿನಲ್ಲಿಲ್ಲದ ಮತ್ತು ಉಲಿಪಿಗಿಂತ ಬೇರಾಗಿರುವ ಬರಿಗೆಗಳನ್ನು ಅವರು ತಮ್ಮ ಪದನೆರಕೆಯ ಪದಗಳಲ್ಲಿ ಬಳಸಿದ್ದಾರೆ. ಇದಲ್ಲದೆ, ಪದಗಳ ಚರಿತ್ರೆಯನ್ನೂ ಅವರು ಎಲ್ಲೆಡೆಗಳಲ್ಲೂ ಸರಿಯಾಗಿ ಸೂಚಿಸಿರಲಿಲ್ಲ. ಅದಕ್ಕೆ ಬೇಕಾದ ತಿಳುವಳಿಕೆ ಅವರಲ್ಲಿಲ್ಲದಿದ್ದುದೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಡಿeಛಿeiಠಿಣ ಪದದಲ್ಲಿದ್ದ ಲ್ಯಾಟಿನ್ ಪಕಾರವನ್ನು ಅವರು ಉಳಿಸಿದ್ದಾರೆ, ಅದರೆ ಜeಛಿeiಣ ಪದದಲ್ಲಿ ಅದನ್ನು ಉಳಿಸಿಲ್ಲ; uಠಿhiಟಟ ಪದದಲ್ಲಿ ಎರಡು ಲಕಾರಗಳನ್ನು ಉಳಿಸಿದ್ದಾರೆ, ಆದರೆ ಜoತಿಟಿhiಟ ಪದದಲ್ಲಿ ಒಂದನ್ನು ಬಿಟ್ಟಿದ್ದಾರೆ; ಚಿಞe ಪದಕ್ಕೆ ಗ್ರೀಕ್ ನುಡಿಯ ಚಿಛಿhos ಪದ ಮೂಲ ಎಂಬ ತಪ್ಪು ಗ್ರಹಿಕೆಯಿಂದ ಚಿಛಿhe ಎಂಬ ಪದಬರಿಗೆಯನ್ನು ಕೊಟ್ಟಿದ್ದಾರೆ; ನಿಜಕ್ಕೂ ಅದು ಆಂಗ್ಲೋ-ಸಾಕ್ಸನ್ ಪದವಾಗಿದ್ದು, ಅದನ್ನು ಚಿಞe ಎಂಬುದಾಗಿ ಬರೆಯುವುದೇ ಸರಿಯಾಗಿತ್ತು. ಇಂತಹ ಹಲವಾರು ಬೇಡದ ತಪ್ಪುಗಳನ್ನು ಅವರು ಮಾಡಿದುದರಿಂದಾಗಿ, ಮತ್ತು ಆಮೇಲೆ ಅದನ್ನು ಯಾರೂ ಸರಿಪಡಿಸಲು ಹೋಗದುದರಿಂದಾಗಿ, ಇವತ್ತು ಇಂಗ್ಲಿಶ್ ಬರಹದಲ್ಲಿ ಹಲವಾರು ಪದ ಬರಿಗೆಯ ತೊಡಕುಗಳು ತುಂಬಿಕೊಂಡಿವೆ.

ನಿಜಕ್ಕೂ ಪದಗಳ ಉಲಿಪು ಎಂತಹದು, ಎಂದರೆ ಅವುಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಸೂಚಿಸುವುದೇ ಬರಹಗಳಲ್ಲಿ ಬಳಕೆಯಾಗುವ ಬರಿಗೆಗಳು ಮಾಡಬೇಕಾಗಿರುವ ಕೆಲಸ. ಉಲಿಪಿನಲ್ಲಿಲ್ಲದ ಬರಿಗೆಗಳನ್ನು ಬಳಸಿದಾಗಲೆಲ್ಲ ಪದಗಳನ್ನು ಓದಲು ಮತ್ತು ಬರೆಯಲು ತೊಂದರೆಯಾಗು ತ್ತದೆ. ಹಿಂದಿನ ಕಾಲದಲ್ಲಿ ಹಲವು ನುಡಿಗಳಿಗೆ ಲಿಪಿಗಳನ್ನು ಅಳವಡಿಸಿದ್ದ

ಕ್ರಿಶ್ಚಿಯನ್ ಮಿಶನರಿಗಳೂ ಈ ವಿಶಯದಲ್ಲಿ ತುಂಬಾ ತಪ್ಪುಗಳನ್ನು ಮಾಡಿ ದ್ದಾರೆ. ಅವರ ಈ ತಪ್ಪುಗಳಿಂದಾಗಿ, ಇವತ್ತು ಅಂತಹ ನುಡಿಗಳ ಬರಹಗಳೆಲ್ಲ ಅನವಶ್ಯಕವಾಗಿ ತೊಡಕು ತೊಡಕಾಗಿವೆ.

ಜಾನ್ಸನ್ ಮಾಡಿದ ಹಲವು ಬಗೆಯ ಬರಿಗೆಯ ತಪ್ಪುಗಳಿಂದಾಗಿ, ಇವತ್ತು ಇಂಗ್ಲಿಶ್ ಬರಹವನ್ನು ಕಲಿಯುವ ಕೆಲಸ ತುಂಬಾ ತೊಡಕಿನದಾಗಿದೆ. ಬೇರೆ ಉಲಿಬರಿಗೆಯ ಬರಹಗಳ ಕಲಿಕೆಗೆ ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಇಂಗ್ಲಿಶ್ ಬರಹದ ಕಲಿಕೆಗೆ ಬೇಕಾಗುತ್ತದೆ! ಅಮೆರಿಕಾದಂತಹ ತುಂಬಾ ಮುಂದುವರಿದ ದೇಶಗಳಲ್ಲಿ ಮಕ್ಕಳ ಕಲಿಕೆಗಾಗಿ ಹಲವಾರು ಹೊಸ ಹೊಸ ವಿದಾನಗಳನ್ನು ಬಳಸಲಾಗುತ್ತದೆ; ಹೀಗಿದ್ದರೂ, ಇವತ್ತು ಅಲ್ಲಿನ ಶಾಲೆಗಳಲ್ಲಿ ಇಂಗ್ಲಿಶ್ ಕಲಿತ ಮಕ್ಕಳಲ್ಲಿ ಅರೆವಾಶಿ ಮಕ್ಕಳಿಗೂ ಸರಿಯಾಗಿ ಬರೆಯಲು ಬರುವುದಿಲ್ಲ, ಮತ್ತು ಅಯ್ವರಲ್ಲೊಬ್ಬರಿಗೆ ಸರಿಯಾಗಿ ಓದಲೂ ಬರುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ.

ಇಂಗ್ಲಿಶ್ ಬರಹಗಳನ್ನು ಓದುವ ಕೆಲಸ ಅಶ್ಟೊಂದು ತೊಡಕಿನದಾಗಿರಲು ಕಾರಣವೇನೆಂದರೆ, ಅದರ ಪದಗಳಲ್ಲಿ ಬರುವ ಒಂದೇ ಬರಿಗೆ ಇಲ್ಲವೇ ಬರಿಗೆಕಂತೆಯನ್ನು ಬೇರೆ ಬೇರೆ ಬಗೆಗಳಲ್ಲಿ ಓದಬೇಕಾಗುತ್ತದೆ. ಎತ್ತುಗೆಗಾಗಿ, oಟಿಛಿe, oಟಿಟಥಿ, ತಿomಚಿಟಿ, ತಿomeಟಿ, ತಿoಡಿಡಿಥಿ ಎಂಬ ಅಯ್ದು ಪದಗಳಲ್ಲಿ ಬರುವ o ಬರಿಗೆಯನ್ನು ಅಯ್ದು ಬೇರೆ ಬೇರೆ ಬಗೆಗಳಲ್ಲಿ ಓದಬೇಕಾಗುತ್ತದೆ. ಯಾವ ಪದದಲ್ಲಿ ಬರುವ o ಬರಿಗೆಯನ್ನು ಯಾವ ಬಗೆಯಲ್ಲಿ ಓದಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳದೆ ಇಂತಹ ಪದಗಳನ್ನು ಓದಲು ಬರುವುದಿಲ್ಲ.

ಇದಲ್ಲದೆ, ಒಂದೇ ಉಲಿಯನ್ನು ಬರೆಯಬೇಕಾಗಿರುವಲ್ಲೂ ಇಂಗ್ಲಿಶ್ನಲ್ಲಿ ಹಲವು ಬರಿಗೆಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಈ ಎಂಬ ಒಂದು ಉಲಿಯನ್ನು ಬರೆಯಲು ಞeಥಿ, sಞi, ಠಿeeಠಿ, ಟeಚಿಠಿ, ಠಿeoಠಿಟe, ತಿeಚಿಡಿಜ, ಛಿhieಜಿ, ಠಿoಟiಛಿe, me ಎಂಬ ಎಂಟು ಪದಗಳಲ್ಲಿ ಎಂಟು ಬೇರೆ ಬೇರೆ ಬರಿಗೆ ಇಲ್ಲವೇ ಬರಿಗೆಕಂತೆಗಳನ್ನು ಬಳಸಬೇಕಾಗುತ್ತದೆ. ಇದರಿಂದಾಗಿ, ಉಲಿ ಒಂದೇ ಇರುವಲ್ಲೂ ಯಾವ ಪದದಲ್ಲಿ ಯಾವ ಬರಿಗೆಯನ್ನು ಬಳಸಬೇಕು ಎಂಬುದನ್ನು ಬರೆಯುವವರು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಇಂಗ್ಲಿಶ್ನಲ್ಲಿ ಸ್ವಲ್ಪಮಟ್ಟಿಗಾದರೂ ತಪ್ಪಿಲ್ಲದೆ ಓದಲು-ಬರೆಯಲು ಗೊತ್ತಿರಬೇಕಿದ್ದಲ್ಲಿ, ಕಡಿಮೆಯೆಂದರೆ 3,700ರಶ್ಟು ಪದಗಳ ಬರಿಗೆಗಳನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ! ಇದಕ್ಕೆ ಬದಲು, ಮೇಲೆ ವಿವರಿಸಿರುವಂತಹ ಕೊರಿಯನ್ ಇಲ್ಲವೇ ಫಿನ್ನಿಶ್ ಬರಹಗಳಲ್ಲಿ ಓದಲು-ಬರೆಯಲು ಕಲಿಯ

ಬೇಕಿದ್ದಲ್ಲಿ, ಆ ರೀತಿ ಒಂದೇ ಒಂದು ಪದದ ಬರಿಗೆಗಳನ್ನೂ ನೆನಪಿನಲ್ಲಿರಿಸಿ ಕೊಳ್ಳಬೇಕಾಗಿಲ್ಲ! ಅವುಗಳಲ್ಲಿ ಎಲ್ಲಾ ಪದಗಳನ್ನೂ ಬರೆದಿರುವ ಹಾಗೆಯೇ ಓದಲಾಗುತ್ತದೆ ಮತ್ತು ಓದುವ ಹಾಗೆಯೇ ಬರೆಯಲಾಗುತ್ತದೆ. ಹಾಗಾಗಿ, ಅವುಗಳಲ್ಲಿ ಓದಲು ಇಲ್ಲವೇ ಬರೆಯಲು ಕಲಿಯುವವರು ಯಾವ ಬರಿಗೆ ಯಾವ ಉಲಿಯನ್ನು ಸೂಚಿಸುತ್ತದೆ ಎಂಬುದನ್ನಶ್ಟೇ ತಿಳಿದುಕೊಂಡರೆ ಸಾಕು.

Eke →

9.2.4 ಕನ್ನಡ ಬರಹದ ಪದಬರಿಗೆಯ ತೊಡಕು

ಕನ್ನಡಕ್ಕೆ ತುಂಬಾ ಒಳ್ಳೆಯ ಬರಿಗೆಕಟ್ಟಲೆಯಿದೆ. ಯಾಕೆಂದರೆ, ಕನ್ನಡದ್ದೇ ಆದ ಪದಗಳನ್ನು ನಾವು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇವೆ. ಇದಲ್ಲದೆ, ಕನ್ನಡದ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುತ್ತವೆ ಮಾತ್ರವಲ್ಲ, ಅವುಗಳಲ್ಲಿ ಬರುವ ಮುಚ್ಚುಲಿ(ವ್ಯಂಜನ) ಮತ್ತು ತೆರೆಯುಲಿ(ಸ್ವರ)ಗಳ ಕಂತೆಗಳು (ಬ, ಬಿ, ಬು, ಕಿ, ಕು ಮೊದಲಾದವು) ಉಲಿಕಂತೆಗಳನ್ನೂ ಸೂಚಿಸುತ್ತವೆ. ಎರಡು ಮುಚ್ಚುಲಿಗಳು ಒಟ್ಟಿಗೆ ಬರುವಲ್ಲಿ (ಕಟ್ಟು, ಕತ್ತಲೆ, ಕಣ್ತಪ್ಪು ಎಂಬಂತಹ ಪದಗಳಲ್ಲಿ) ಮಾತ್ರ, ಬರಿಗೆಕಂತೆಗೂ ಉಲಿಕಂತೆಗೂ ನಡುವಿರುವ ಪತ್ತುಗೆ(ಸಂಬಂದ) ಅಶ್ಟೊಂದು ಸ್ಪಶ್ಟವಾಗಿಲ್ಲ. ಕನ್ನಡದವೇ ಆದ ಪದಗಳ ಮಟ್ಟಿಗೆ ಬರಿಗೆಗಳ ಬಳಕೆ ಇಶ್ಟು ಚನ್ನಾಗಿರಲು ಒಂದು ಕಾರಣವೇನೆಂದರೆ, ಪದಗಳ ಓದಿನಲ್ಲಿ (ಉಲಿಪಿನಲ್ಲಿ) ಮಾರ್ಪಾಡುಗಳು ನಡೆಯುತ್ತಿದ್ದ ಹಾಗೆ, ಅವುಗಳ ಬರಿಗೆಗಳಲ್ಲೂ ಮಾರ್ಪಾಡುಗಳನ್ನು ಮಾಡಿಕೊಳ್ಳ ಲಾಗಿದೆ. ಎತ್ತುಗೆಗಾಗಿ, ರ-ಱ ಮತ್ತು ಳ-ೞಗಳ ನಡುವಿನ ವ್ಯತ್ಯಾಸ ಓದಿನಿಂದ ಬಿದ್ದುಹೋದಾಗ, ಕನ್ನಡ ಬರಹದಿಂದಲೂ ಆ ವ್ಯತ್ಯಾಸಗಳನ್ನು ತೆಗೆದು ಹಾಕಲಾಯಿತು; ಓದಿನಲ್ಲಿ ಪಕಾರ ಹಕಾರವಾದಾಗ, ಮತ್ತು ವಕಾರ ಬಕಾರ ವಾದಾಗ, ಬರಹದಲ್ಲೂ ಅಂತಹದೇ ಮಾರ್ಪಾಡನ್ನು ಮಾಡಿಕೊಳ್ಳಲಾಯಿತು. ಆದರೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ವಿಶಯದಲ್ಲಿ ಈ ರೀತಿ ಓದಿಗೂ ಬರಹಕ್ಕೂ ನಡುವೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಮಗೆ ಸಾದ್ಯವಾಗಿಲ್ಲ. ಅಂತಹ ಪದಗಳನ್ನುಎರಡು ಸಾವಿರ ವರ್ಶಗಳಶ್ಟು ಹಿಂದೆ ಸಂಸ್ಕ್ರುತದಲ್ಲಿ ಹೇಗೆ ಬರೆಯಲಾಗುತ್ತಿತ್ತೋ ಮತ್ತು ಓದಲಾಗುತ್ತಿತ್ತೋ ಹಾಗೆಯೇ ಕನ್ನಡದಲ್ಲೂ ಬರೆಯುತ್ತಿರಬೇಕು ಮತ್ತು ಓದುತ್ತಿರಬೇಕು ಎಂಬ ಕಟ್ಟಲೆಯೊಂದನ್ನು ನಾವು ನಮ್ಮ ಮೇಲೆ ಹೊರಿಸಿಕೊಂಡಿದ್ದೇವೆ. ಕನ್ನಡದ ಮಟ್ಟಿಗೆ ಇದು ತೀರಾ ಅನವಶ್ಯಕವಾಗಿರುವ ಕಟ್ಟಲೆ. ಈ ಪದಗಳನ್ನು ಓದುವ ವಿಶಯದಲ್ಲಿ ಇವತ್ತು ಹೆಚ್ಚಿನ ಕನ್ನಡಿಗರೂ ಈ ಕಟ್ಟಲೆಯನ್ನು ಉಳಿಸಿಕೊಂಡಿಲ್ಲ;

ಆದರೆ, ಬರೆಯುವ ವಿಶಯದಲ್ಲಿ ಮಾತ್ರ ಅದನ್ನು ಉಳಿಸಿಕೊಂಡಿದ್ದೇವೆ. ಇದರಿಂದಾಗಿ, ಇವತ್ತು ಈ ಪದಗಳ ಬರವಣಿಗೆಯಲ್ಲಿ ಉಲಿ ಮತ್ತು ಬರಿಗೆಗಳ ನಡುವೆ ನೇರವಾದ ಹೊಂದಾಣಿಕೆಯಿಲ್ಲ.

ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಬರಹವನ್ನು ಓದಲು ಮತ್ತು ಬರೆಯಲು ಕಲಿಸುವಾಗ, ಈ ಅನವಶ್ಯಕವಾದ ಕಟ್ಟಲೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಋ, ಷ, ಮಹಾಪ್ರಾಣ, ವಿಸರ್ಗ ಮೊದಲಾದ ಹಲವು ಹೆಚ್ಚಿನ ಬರಿಗೆಗಳನ್ನು ಕಲಿಸಬೇಕಾಗಿದೆ. ಇವು ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಕನ್ನಡ ಬರಹದಲ್ಲಿ ಹಲವು ಪದಬರಿಗೆಯ ತೊಡಕುಗಳನ್ನು ತಂದುಹಾಕಿವೆ. ಅವನ್ನು ಬಳಸಬೇಕಾಗಿರುವ ಮತ್ತು ಬಳಸಬಾರದಿರುವ ಎಲ್ಲಾ ಪದಗಳನ್ನೂ ನೆನಪಿನ ಲ್ಲಿಟ್ಟುಕೊಳ್ಳದೆ ಮಕ್ಕಳಿಗೆ ಕನ್ನಡದಲ್ಲಿ ತಪ್ಪಿಲ್ಲದೆ ಬರೆಯಲು ಬರುವುದಿಲ್ಲ. ಓದಲು ಕಲಿಯುವಲ್ಲೂ ಇವು ತೊಂದರೆ ಕೊಡುತ್ತವೆ. ಯಾಕೆಂದರೆ, ಶಾಲೆಗಳಲ್ಲಿ ಓದಲು-ಬರೆಯಲು ಕಲಿಸುವಾಗ, ಈ ಬರಿಗೆಗಳ ಓದು ಉಳಿದ ಬರಿಗೆಗಳ ಓದಿಗಿಂತ ಬೇರಾದುದು ಎಂಬುದಾಗಿಯೇ ಕಲಿಸಲಾಗುತ್ತದೆ. ಆದರೆ ಹೆಚ್ಚಿನ ಕಲಿಸುಗರಿಗೂ ಅವು ಹೇಗೆ ಬೇರಾಗಿವೆ ಎಂಬುದನ್ನು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಲು ಬರುವುದಿಲ್ಲ. ಇದಲ್ಲದೆ, ಓದುವಾಗ ಅಂತಹ ಕಲಿಸುಗರೂ ಅವನ್ನು ಬೇರಾಗಿ ಓದುವುದಿಲ್ಲ. ಅವರ ಓದಿನಲ್ಲಿ ಶ-ಷಗಳ ನಡುವೆ, ರು-ಋಗಳ ನಡುವೆ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಇದು ಮಕ್ಕಳಲ್ಲಿ ಗೊಂದಲವನ್ನುಂಟು ಮಾಡುತ್ತದೆ.

ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾಗಿರುವ ಈ ಕಟ್ಟಲೆಯನ್ನು ಕಯ್ಬಿಟ್ಟಲ್ಲಿ, ಕನ್ನಡ ಬರಹವನ್ನು ಓದಲು ಮತ್ತು ಬರೆಯಲು ಕಲಿಸುವ ಕೆಲಸ ತುಂಬಾ ಸುಳುವಾಗಬಲ್ಲುದು (2.3.5 ನೋಡಿ). ಇದು ಮೇಲ್ವರ್ಗ ದವರಿಗಿಂತ ಕೆಳವರ್ಗದವರಿಗೆ ಹೆಚ್ಚು ಅನುಕೂಲವಾಗಬಲ್ಲ ಬರಿಗೆಹಮ್ಮುಗೆ ಯಾಗಿದೆ. ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ನಾನು ನನ್ನ ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ (ಬಟ್ 2005, 2009) ವಿವರಿಸಿದ್ದೇನೆ.

ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗುವ ಹಾಗೆ ನಾವು ಇವತ್ತು ಮಾಡಲೇಬೇಕಾಗಿದೆ. ಯಾಕೆಂದರೆ, ಇವತ್ತು ಬರಹವನ್ನು ಜನರಿಗೆ ತಿಳುವಳಿಕೆಯನ್ನು ಕೊಡುವ ಕೆಲಸಕ್ಕಾಗಿಯೇ ಹೆಚ್ಚು ಹೆಚ್ಚು ಬಳಸಲಾಗುತ್ತಿದೆ, ಮತ್ತು ಅವು ಕೊಡಬಲ್ಲ ಈ ತಿಳುವಳಿಕೆಯನ್ನು

ಎಲ್ಲರೂ ಪಡೆಯಬೇಕಾಗಿದೆ. ಹೀಗಾಗಬೇಕಿದ್ದಲ್ಲಿ, ಎಲ್ಲರೂ ಬರಹಗಳನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

ಆದರೆ, ಇದಕ್ಕೆ ಹಲವು ತೊಡರುಗಳಿದ್ದು, ಕನ್ನಡಕ್ಕೆ ತೀರಾ ಅನವಶ್ಯಕ ವಾಗಿರುವ ಮೇಲಿನ ಕಟ್ಟಲೆ ಅವುಗಳಲ್ಲೊಂದು. ಅದನ್ನು ಬಿಟ್ಟುಕೊಡುವಂತಹ ಹಮ್ಮುಗೆಯನ್ನು ನಾವು ಇವತ್ತು ಹಮ್ಮಿಕೊಳ್ಳಲೇಬೇಕೆಂದು ನನಗೆ ಅನಿಸುತ್ತದೆ. ಹಾಗೆ ಮಾಡಿದಲ್ಲಿ, ಇವತ್ತು ಕನ್ನಡ ಬರಹದಲ್ಲಿರುವ ಪದಬರಿಗೆಯ ತೊಡಕು ಪೂರ್ತಿ ಇಲ್ಲವಾಗಬಲ್ಲುದು, ಮತ್ತು ಅದು ಫಿನ್ನಿಶ್, ಕೊರಿಯನ್ ಮೊದಲಾದ ಬರಹಗಳ ಹಾಗೆ, ಜನರಿಗೆ ಕಲಿಯಲು ತುಂಬಾ ಸುಳುವಾದ ಬರಹವಾಗ ಬಲ್ಲುದು.

Eke →

9.2.5 ಸೊಲ್ಲರಿಮೆಯ ಹಮ್ಮುಗೆ

ಒಂದು ನುಡಿ ಇಲ್ಲವೇ ಒಳನುಡಿಯನ್ನು ಎಲ್ಲರ ನುಡಿಯಾಗಿ ಇಲ್ಲವೇ ಕಲಿಕೆ, ಆಡಳಿತ, ಕೋರ್ಟು, ಕಯ್ಗಾರಿಕೆ, ಮಾರಾಟ ಮೊದಲಾದವುಗಳ ನುಡಿಯಾಗಿ ನುಡಿಹಮ್ಮುಗೆಯ ಮೂಲಕ ಬಳಕೆಗೆ ತರಬೇಕಿದ್ದಲ್ಲಿ, ಮೊದಲಿಗೆ ಅದರ ಸೊಲ್ಲರಿಮೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ.

ಈ ಕೆಲಸವನ್ನು ನುಡಿಯರಿಗರು ಮಾತ್ರವೇ ನಡೆಸಬಲ್ಲರು. ಯಾಕೆಂದರೆ, ಸೊಲ್ಲರಿಮೆಯೆಂಬುದು ತೀರಾ ತೊಡಕು ತೊಡಕಾದ ವಿಶಯ. ಎಲ್ಲಾ ನುಡಿಗಳಿಗೂ ಅವುಗಳದೇ ಆದ ಸೊಲ್ಲರಿಮೆಯಿದ್ದು, ಒಂದು ನುಡಿಯ ಸೊಲ್ಲರಿಮೆಯ ಹಾಗೆ ಇನ್ನೊಂದು ನುಡಿಯ ಸೊಲ್ಲರಿಮೆ ಇರುವುದಿಲ್ಲ. ಈ ವಿಶಯವನ್ನು ಗಮನಕ್ಕೆ ತೆಗೆದುಕೊಂಡು, ನುಡಿಹಮ್ಮುಗೆಗೆ ಆಯ್ಕೆಯಾಗಿರುವ ನುಡಿ ಇಲ್ಲವೇ ಆಡುನುಡಿಯ ನಿಜವಾದ ಸೊಲ್ಲರಿಮೆ ಎಂತಹದು ಎಂಬುದನ್ನು ಅರಕೆ(ಸಂಶೋದನೆ)ಗಳ ಮೂಲಕ ಕಂಡುಹಿಡಿಯಬೇಕು.

ನಿಜಕ್ಕೂ ಇದು ಎಶ್ಟು ಮಾಡಿದರೂ ಮುಗಿಯದ ಕೆಲಸ. ಯಾಕೆಂದರೆ, ಯಾವುದೇ ಒಂದು ನುಡಿಯ ಸೊಲ್ಲರಿಮೆಯನ್ನೂ ಪೂರ್ತಿಯಾಗಿ ಬರೆದು ಮುಗಿಸಲು ಬರುವುದೇ ಇಲ್ಲ. ಇವತ್ತು ಇಂಗ್ಲಿಶ್ ನುಡಿಯ ಸೊಲ್ಲರಿಮೆಯ ಮೇಲೆ ಸಾವಿರಾರು ಬರಹಗಳು ಹೊರಬಂದಿವೆ. ಒಂದೆರಡು ಸಾವಿರ ಪುಟಗಳ ಕೆಲವು ಪುಸ್ತಕಗಳೂ ಹೊರಬಂದಿವೆ. ಹೀಗಿದ್ದರೂ, ಈ ಬರಹಗಳು ಇಂಗ್ಲಿಶ್ ನುಡಿಯ ಸೊಲ್ಲರಿಮೆಯನ್ನು ಪೂರ್ತಿಯಾಗಿ ತಿಳಿಸುತ್ತವೆಯೆಂದು ಯಾರೂ ಹೇಳಲಾರರು.

ಆದರೆ, ನುಡಿಹಮ್ಮುಗೆಗೆ ಬೇಕಾಗಿರುವುದು ಅಂತಹ ಪೂರ್ತಿಯಾದ ಸೊಲ್ಲರಿಮೆಯೇನಲ್ಲ. ಬಗೆಬಗೆಯ ಕೆಲಸಗಳಿಗೆ ಎಂತಹ ಸೊಲ್ಲರಿಮೆಯ ತಿಳಿವುಗಳು ಬೇಕಾಗುತ್ತವೆಯೋ ಅವನ್ನು ಬಗೆಬಗೆಯ ಬರಹಗಳ ಮೂಲಕ ಒದಗಿಸಿಕೊಡುವಂತಹ ಕೆಲಸ ಅದರಲ್ಲಿ ನಡೆಯಬೇಕಾಗಿದೆ.

ಎತ್ತುಗೆಗಾಗಿ, ಒಂದು ನುಡಿಯನ್ನು ಕೋರ್ಟು-ಕಚೇರಿಗಳ ನುಡಿಯಾಗಿ ಬಳಕೆಗೆ ತರಬೇಕಿದ್ದಲ್ಲಿ, ಅದರಲ್ಲಿ ಇಪ್ಪುರುಳಿನ ಸೊಲ್ಲುಗಳು ಬಾರದ ಹಾಗೆ ಕಾನೂನುಗಳನ್ನು, ತೀರ್ಮಾನಗಳನ್ನು ಇಲ್ಲವೇ ಆಡಳಿತದ ಕಟ್ಟಲೆಗಳನ್ನು ಬರೆಯಲು ಬರಬೇಕು. ಇದಕ್ಕಾಗಿ ಯಾವ ಬಗೆಯ ಸೊಲ್ಲುಗಳನ್ನು ಬಳಸಬೇಕು, ಮತ್ತು ಯಾವ ಬಗೆಯವನ್ನು ಬಳಸದಿರಬೇಕು ಎಂಬುದನ್ನು ಸೊಲ್ಲರಿಗರು ಅರಕೆಗಳ ಮೂಲಕ ತೋರಿಸಿಕೊಡಬಲ್ಲರು. ಅವರ ಈ ಅರಕೆಗಳು ಕಾನೂನು ಗಳನ್ನು ಬರೆಯುವವರಿಗೆ ನೆರವಾಗಬಲ್ಲುವು.

ಎಲ್ಲರ ನುಡಿಯಾಗಿ ಆಯ್ಕೆಯಾಗಿರುವ ನುಡಿಯನ್ನು ಇಲ್ಲವೇ ಆಡುನುಡಿ ಯನ್ನು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿಕೊಡಬೇಕಾಗುತ್ತದೆ; ಈ ಮಕ್ಕಳು ಅಂತಹದೇ ಒಂದು ನುಡಿಯನ್ನು (ಎಂದರೆ, ಆ ನುಡಿಯ ಆಡುನುಡಿಯೊಂದನ್ನು) ತಮ್ಮ ತಾಯ್ನುಡಿಯಾಗಿ ಕಲಿತಿರಬಹುದು, ಇಲ್ಲವೇ ಅವರ ತಾಯ್ನುಡಿ ಬೇರೆಯೇ ಒಂದು ನುಡಿಯಾಗಿರಬಹುದು. ಈ ಎರಡು ಬಗೆಯ ಸಂದರ್ಬ ಗಳಲ್ಲೂ, ಆಯ್ಕೆಯಾಗಿರುವ ನುಡಿಯನ್ನು ಮಕ್ಕಳಿಗೆ ಕಲಿಸಲು ಎಂತಹ ಸೊಲ್ಲರಿಮೆಯ ಕಟ್ಟಲೆಗಳು ನೆರವಿಗೆ ಬರುತ್ತವೆ ಎಂಬುದನ್ನು ಸೊಲ್ಲರಿಗರು ಕಂಡುಹಿಡಿಯಬೇಕು. ಅವನ್ನು ಸೂಚಿಸುವಂತಹ ಬರಹಗಳನ್ನು ಅವರು ಹೊರತಂದಲ್ಲಿ ಅವು ಶಾಲೆಯ ಕಲಿಸುಗರಿಗೆ ನೆರವಾಗಬಲ್ಲುವು.

ಎಲ್ಲರ ನುಡಿಯಾಗಿ ಆಯ್ಕೆಯಾಗಿರುವ ನುಡಿಯನ್ನು ಹೀಗೆ ನುಡಿಹಮ್ಮುಗೆಯ ಮೂಲಕ ಬಗೆಬಗೆಯ ಕೆಲಸಗಳಲ್ಲಿ ತೊಡಗಿಸುವುದಕ್ಕಾಗಿ ಹಲವು ಬಗೆಯ ಸೊಲ್ಲರಿಮೆಯ ಬರಹಗಳನ್ನು ಉಂಟುಮಾಡಬೇಕಾಗುತ್ತದೆ. ಇದನ್ನು ಆ ನುಡಿಯ ಸೊಲ್ಲರಿಮೆಯನ್ನು ಚನ್ನಾಗಿ ತಿಳಿದುಕೊಂಡಿರುವ ನುಡಿಯರಿಗರೇ ನಡೆಸಬೇಕು. ಇಲ್ಲವಾದರೆ, ಅಂತಹ ಬರಹಗಳಿಂದ ಆ ಕೆಲಸಗಳನ್ನು ನಡೆಸುವವರಿಗೆ ಯಾವ ನೆರವೂ ದೊರೆಯಲಾರದು.

ಇವತ್ತು ಶಾಲೆಗಳಲ್ಲಿ ಇಲ್ಲವೇ ಕಾಲೇಜುಗಳಲ್ಲಿ ಕಲಿಸುವುದಕ್ಕಾಗಿ ಬಳಕೆಯಾಗುತ್ತಿರುವ ಕನ್ನಡದ ವ್ಯಾಕರಣ ಪುಸ್ತಕಗಳು ಇದಕ್ಕೆ ಉತ್ತಮ ಎತ್ತುಗೆಗಳಾಗಿವೆ. ನಿಜಕ್ಕೂ ಕನ್ನಡದ ವ್ಯಾಕರಣ (ಸೊಲ್ಲರಿಮೆ) ಎಂತಹದು ಎಂಬುದನ್ನು ತಿಳಿದಿಲ್ಲದ ಪಂಡಿತರು ಅವನ್ನು ಬರೆದಿದ್ದಾರೆ. ಹಾಗಾಗಿ, ಅವು

ಕನ್ನಡದಲ್ಲಿ ಓದಲು-ಬರೆಯಲು ಕಲಿಯುವ ಇಲ್ಲವೇ ಕಲಿಸುವ ಕೆಲಸದಲ್ಲಿ ಎಂತಹ ನೆರವನ್ನೂ ಕೊಡುವುದಿಲ್ಲ.

ಕೇಶಿರಾಜನೇ ಮೊದಲಾದ ಹಿಂದಿನ ತಿಳಿವಿಗರು ಸಂಸ್ಕ್ರುತದ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು, ಅಂತಹದೇ ಒಂದು ವ್ಯಾಕರಣವನ್ನು ಕನ್ನಡಕ್ಕೆ ಬರೆಯಲು ಪ್ರಯತ್ನ ಮಾಡಿದ್ದರು. ಆ ಪ್ರಯತ್ನ ಎಶ್ಟರ ಮಟ್ಟಿಗೆ ಕನ್ನಡದ ಪದಗಳನ್ನು, ಪದರೂಪಗಳನ್ನು ಮತ್ತು ಸೊಲ್ಲುಗಳನ್ನು ವಿವರಿಸುತ್ತಿವೆ ಎಂಬುದನ್ನು ಆಮೇಲಿನ ದಿನಗಳಲ್ಲಿ ಯಾರೂ ಆಳವಾಗಿ ಪರಿಶೀಲಿಸಲು ಹೋಗಲೇ ಇಲ್ಲ. ಅವರು ಬರೆದ ಹಳೆಗನ್ನಡದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹೊಸಗನ್ನಡಕ್ಕೂ ಅಳವಡಿಸಿಕೊಂಡು, ಅದನ್ನು ಶಾಲೆ-ಕಾಲೇಜು ಗಳಲ್ಲಿ ಕಲಿಸುವಂತಹ ಕೆಲಸವನ್ನು ಮಾತ್ರ ಕನ್ನಡದ ತಿಳಿವಿಗರು ಮಾಡುತ್ತಿದ್ದಾರೆ. ಕನ್ನಡದ್ದೇ ಆದ ಸೊಲ್ಲರಿಮೆ ಇದಕ್ಕಿಂತ ಯಾವ ರೀತಿಯಲ್ಲಿ ಬೇರಾಗಿದೆ ಎಂಬುದನ್ನು ನಾನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (ಬಟ್ 2008) ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ. ಅಂತಹ ಕನ್ನಡದ್ದೇ ಆದ ಸೊಲ್ಲರಿಮೆಯನ್ನು ಬರಹಕ್ಕೆ ಇಳಿಸುವ ಕೆಲಸ ಇವತ್ತು ನಡೆಯಬೇಕಾಗಿದೆ. ಮೇಲೆ ಸೂಚಿಸಿದ ಹಾಗೆ, ಇದು ಒಬ್ಬ ವ್ಯಕ್ತಿ ನಡೆಸಿ ಮುಗಿಸುವ ಕೆಲಸವಲ್ಲ; ಹಲವು ಕೂಟಗಳು ಹಲವಾರು ನುಡಿಯರಿಗರ ನೆರವಿನಿಂದ ನಡೆಸುತ್ತಾ ಇರ ಬೇಕಾದಂತಹ ಕೆಲಸ.

ಇದಲ್ಲದೆ, ಕನ್ನಡವನ್ನು ಬಗೆಬಗೆಯ ಕೆಲಸಗಳಲ್ಲಿ ತೊಡಗಿಸುವುದಕ್ಕೆ ಎಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ತಿಳಿಸುವಂತಹ ಸೊಲ್ಲರಿಮೆಯ ಬರಹಗಳೂ ಇವತ್ತು ಕನ್ನಡದಲ್ಲಿ ತಯಾರಾಗಬೇಕಾಗಿದೆ. ಎತ್ತುಗೆಗಾಗಿ, ಮೇಲೆ ಸೂಚಿಸಿದ ಹಾಗೆ, ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಓದಲು-ಬರೆಯಲು ಕಲಿಸಬೇಕಿದ್ದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳನ್ನು ಅವರು ಗಮನಿಸುವ ಹಾಗೆ ಮಾಡಬೇಕು ಎಂಬುದನ್ನು ಕಂಡುಹಿಡಿಯಬೇಕು, ಮತ್ತು ಅವನ್ನು ತಿಳಿಸುವಂತಹ ಬರಹವನ್ನು ಸೊಲ್ಲರಿಗರ ನೆರವಿನಿಂದ ತಯಾರಿಸಬೇಕು. ಅಂತಹ ಸೊಲ್ಲರಿಮೆಯ ಬರಹ ಶಾಲೆಗಳಲ್ಲಿ ಮಕ್ಕಳಿಗೆ ಓದು-ಬರಹದ ಕಲಿಸುವ ಕೆಲಸದಲ್ಲಿ ನೆರವಾಗಬಲ್ಲುದು.

ಇದೇ ರೀತಿಯಲ್ಲಿ, ಜಾಹೀರಾತುಗಳನ್ನು ಬರೆಯುವುದು, ಕಾನೂನುಗಳನ್ನು ಇಲ್ಲವೇ ಒಪ್ಪಂದಗಳನ್ನು ಬರೆಯುವುದು, ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವುದು, ಬೇರೆ ಬೇರೆ ಅರಿಮೆ(ವಿಜ್ನಾನ)ಗಳಲ್ಲಿ ಪುಸ್ತಕಗಳನ್ನು ಬರೆಯುವುದು ಮೊದಲಾದ ಕೆಲಸಗಳಿಗೆ ಎಂತಹ ಸೊಲ್ಲರಿಮೆಯ

ತಿಳಿವು ನೆರವಿಗೆ ಬರಬಲ್ಲುದು ಎಂಬುದನ್ನು ಕಂಡುಹಿಡಿದು, ಅದನ್ನು ವಿವರಿಸುವ ಬರಹಗಳನ್ನು ಈ ಕೆಲಸಗಳನ್ನು ನಡೆಸುವವರಿಗೆ ಒದಗಿಸಿಕೊಡಬೇಕು. ಈ ಬೇರೆ ಬೇರೆ ಬಗೆಯ ಬರಹಗಳಲ್ಲಿ ಬಳಸಬೇಕಾಗಿರುವ ನುಡಿ ಮತ್ತು ನುಡಿಯ ಒಡ್ಡವಗಳು ಬೇರೆ ಬೇರಾಗಿರುವ ಕಾರಣ, ಮತ್ತು ಅವರು ಎದುರಿಸುವ ಸೊಲ್ಲರಿಮೆಯ ತೊಡಕುಗಳು ಬೇರೆ ಬೇರಾಗಿರುವ ಕಾರಣ, ಎಲ್ಲರ ಇದಿರಲ್ಲೂ ಒಂದೇ ಬಗೆಯ ಸೊಲ್ಲರಿಮೆಯ ಬರಹವನ್ನು ಇರಿಸಿದಲ್ಲಿ, ಅದನ್ನವರಿಗೆ ಬಳಸಿಕೊಳ್ಳಲು ಬರುವುದಿಲ್ಲ.

ಆದರೆ, ಕನ್ನಡಕ್ಕೆ ಇಂತಹ ಸೊಲ್ಲರಿಮೆಯ ಬರಹಗಳನ್ನು ತಯಾರಿಸ ಬೇಕಾಗಿರುವ ಸೊಲ್ಲರಿಗರಿಗೆ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದು ತಿಳಿದಿರಬೇಕಾಗುತ್ತದೆ ಎಂಬುದೇ ಇಲ್ಲಿನ ಒಂದು ತೊಡಕಾಗಿದೆ. ನಿಜಕ್ಕೂ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದನ್ನು ಎಶ್ಟು ಸಾದ್ಯವೋ ಅಶ್ಟು ಪೂರ್ತಿಯಾಗಿ ಕಂಡುಹಿಡಿಯುವುದು, ಮತ್ತು ಅದನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸುವುದಕ್ಕೆ ಎಂತಹ ತಿಳಿವು ಬೇಕಾಗುತ್ತದೆ ಎಂಬುದನ್ನು ತಿಳಿಸಬಲ್ಲ ಹಲವು ಬರಹಗಳನ್ನು ತಯಾರಿಸುವುದು ಎಂಬ ಈ ಎರಡು ಕೆಲಸಗಳು ಜೊತೆಜೊತೆಯಾಗಿಯೇ ನಡೆಯಬೇಕಾಗುತ್ತದೆ. ಅವುಗಳಲ್ಲಿ ಒಂದು ಇನ್ನೊಂದಕ್ಕೆ ಪೂರಕವಾಗಿರುವ ಕಾರಣ, ಒಂದನ್ನು ಮುಗಿಸಿ ಇನ್ನೊಂದನ್ನು ಎತ್ತಿಕೊಳ್ಳುವ ಹಾಗಿಲ್ಲ.

Eke →

9.2.6 ಪದನೆರಕೆಯ ಹಮ್ಮುಗೆ

ಒಂದು ನುಡಿಯನ್ನು ಎಲ್ಲರ ನುಡಿಯಾಗಿ ಹಮ್ಮಿಕೊಳ್ಳಬೇಕಿದ್ದಲ್ಲಿ ಅದರಲ್ಲಿ ಹಲವು ಬಗೆಯ ಪದಗಳು ಇರಬೇಕಾಗುತ್ತದೆ. ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಬಗೆಯ ಪದಗಳು ಬೇಕಾಗುತ್ತವೆ. ಎತ್ತುಗೆಗಾಗಿ, ಆಡಳಿತಕ್ಕೆ ಒಂದು ಬಗೆಯ ಪದಗಳು, ಕೋರ್ಟುಗಳಿಗೆ ಇನ್ನೊಂದು ಬಗೆಯ ಪದಗಳು, ನುಡಿಯರಿಮೆ, ಉಲಿಯರಿಮೆ, ಮಂದಿಯರಿಮೆ, ಮದ್ದರಿಮೆ ಮೊದಲಾದ ಬಗೆ ಬಗೆಯ ಅರಿಮೆ(ವಿಜ್ನಾನ)ಗಳಿಗೆ ಬೇರೆ ಬಗೆಯ ಪದಗಳು ಎಂಬುದಾಗಿ ಹಲವು ಬಗೆಯ ಪದಗಳು ಅದಕ್ಕೆ ಬೇಕಾಗುತ್ತವೆ.

ಇಂತಹ ಪದಗಳನ್ನು ಒದಗಿಸಿಕೊಡುವುದಕ್ಕಾಗಿ, ಹಲವು ಬಗೆಯ ಪದನೆರಕೆ(ಪದಕೋಶ)ಗಳನ್ನು ಅದರಲ್ಲಿ ಉಂಟುಮಾಡಬೇಕಾಗುತ್ತದೆ. ಈಗಾಗಲೇ ಇಂತಹ ಪದಗಳು ಆ ನುಡಿಯಲ್ಲಿ ಬಳಕೆಯಲ್ಲಿವೆಯಾದರೆ, ಅವನ್ನೆಲ್ಲ ಈ ಪದನೆರಕೆಗಳಲ್ಲಿ ಸೇರಿಸಿಕೊಳ್ಳಬಹುದು. ಆದರೆ, ಮೇಲಿನ

ಕೆಲಸಗಳನ್ನು ಸರಿಯಾಗಿ ನಡೆಸಲು ಇನ್ನಶ್ಟು ಪದಗಳು ಬೇಕಾಗಬಹುದು. ಇಂತಹವನ್ನು ಬೇರೆ ನುಡಿಗಳಿಂದ ಎರವಲಾಗಿ ಪಡೆಯಬಹುದು ಇಲ್ಲವೇ ಆ ನುಡಿಯಲ್ಲಿ ಹೊಸದಾಗಿ ಉಂಟುಮಾಡಿಕೊಳ್ಳಬಹುದು. ಇದು ಪದನೆರಕೆಯ ಹಮ್ಮುಗೆಯ ಮೂಲಕ ನಾವು ನಡೆಸಬೇಕಾಗಿರುವ ಕೆಲಸವಾಗಿದೆ.

ಇಂತಹ ಪದನೆರಕೆಗಳನ್ನು ತಯಾರಿಸುವುದಕ್ಕೂ ಸೊಲ್ಲರಿಮೆಯ ನೆರವು ಬೇಕಾಗುತ್ತದೆ. ಯಾಕೆಂದರೆ, ಬೇರೆ ನುಡಿಯಿಂದ ಎರವಲಾಗಿ ಪಡೆಯುವ ಪದಗಳು ಮತ್ತು ಹೊಸದಾಗಿ ಉಂಟುಮಾಡುವ ಪದಗಳು ನಮ್ಮ ನುಡಿಯ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವನ್ನು ಬಳಸಿರುವ ಬರಹಗಳು ತುಂಬಾ ತೊಡಕು ತೊಡಕಾಗುತ್ತವೆ, ಮತ್ತು ಅವನ್ನು ಕಲಿಯುವವರಿಗೆ ತೊಂದರೆ ಕೊಡುತ್ತವೆ. ಆದರೆ, ಆ ರೀತಿ ಅವನ್ನು ನುಡಿಯ ಸೊಲ್ಲುಗಳಲ್ಲಿ ಹೊಂದಿಕೊಳ್ಳುವಂತೆ ಮಾಡುವುದು ಹೇಗೆ ಎಂಬುದು ಸೊಲ್ಲರಿಮೆಯ ತಿಳಿವಿಲ್ಲದವರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಕನ್ನಡದಲ್ಲಿ ಇತ್ತೀಚೆಗೆ ನಡೆದ ಅರಿಮೆಯ (ಪಾರಿಬಾಶಿಕ) ಪದಗಳ ತಯಾರಿಕೆಯನ್ನು ಎತ್ತುಗೆಯಾಗಿ ಕೊಡಬಹುದು:

ಹಿಂದಿನ ಕಾಲದಲ್ಲಿ ಕನ್ನಡಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನ ವನ್ನೂ ಸಂಸ್ಕ್ರುತದಿಂದ ಎರವಲಾಗಿ ಪಡೆಯಲಾಗುತ್ತಿತ್ತು. ಇದಕ್ಕೆ ಕಾರಣ ವೇನೆಂದರೆ, ಮೊನ್ನೆ ಮೊನ್ನೆಯ ವರೆಗೂ ಸೊಲ್ಲರಿಮೆ, ಮದ್ದರಿಮೆ, ಎಣಿಕೆ ಯರಿಮೆ, ಬಾನರಿಮೆ ಮೊದಲಾದ ಹಲವು ಬಗೆಯ ಅರಿಮೆಗಳ ತಿಳಿವನ್ನು ಕನ್ನಡದ ತಿಳಿವಿಗರು ಸಂಸ್ಕ್ರುತದಿಂದಲೇನೇ ಪಡೆಯುತ್ತಿದ್ದರು. ಹಾಗಾಗಿ, ಆ ತಿಳಿವನ್ನು ಪಡೆಯುವುದರೊಂದಿಗೆ ಅದನ್ನು ತಿಳಿಸಲು ಬೇಕಾಗುವ ಪದಗಳನ್ನೂ ಅವರು ಸಂಸ್ಕ್ರುತದಿಂದಲೇನೇ ಎರವಲಾಗಿ ಪಡೆದುಕೊಳ್ಳುತ್ತಿದ್ದರು.

ಇವತ್ತು ಹೆಚ್ಚಿನ ಅರಿಮೆಗಳ ತಿಳಿವನ್ನೂ ನಾವು ಇಂಗ್ಲಿಶ್ನಿಂದ ಪಡೆಯು ತ್ತಿದ್ದೇವೆ, ಮತ್ತು ಈ ತಿಳಿವನ್ನು ಕನ್ನಡದಲ್ಲಿ ತಿಳಿಸಲು ಬೇಕಾಗುವ ಪದಗಳಲ್ಲಿ ಹಲವನ್ನು ಇಂಗ್ಲಿಶ್ನಿಂದಲೇನೇ ಎರವಲಾಗಿ ಪಡೆಯುತ್ತಿದ್ದೇವೆ. ಇಂತಹ ಇಂಗ್ಲಿಶ್ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವು ದಿಲ್ಲವಾದಲ್ಲಿ, ನಮಗೆ ಬೇಕಾಗುವ ಮಾರ್ಪಾಡುಗಳನ್ನೂ ಅವುಗಳಲ್ಲಿ ಮಾಡಿ ಕೊಳ್ಳುತ್ತಿದ್ದೇವೆ. ಇದು ಸರಿಯಾದ ದಾರಿ.

ಆದರೆ, ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳದಿರುವ ಇಂಗ್ಲಿಶ್ನ ಅರಿಮೆಯ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಉಂಟುಮಾಡುವಲ್ಲಿ ಕನ್ನಡದ ತಿಳಿವಿಗರು ಒಂದು ದೊಡ್ಡ ತಪ್ಪನ್ನು

ಮಾಡಿದ್ದಾರೆ, ಮತ್ತು ಈಗಲೂ ಮಾಡುತ್ತಿದ್ದಾರೆ: ಅಂತಹ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಉಂಟುಮಾಡುವ ಬದಲು, ಸಂಸ್ಕ್ರುತದಲ್ಲಿ ಉಂಟುಮಾಡಿ ಅವನ್ನು ಕನ್ನಡದಲ್ಲಿ ಬಳಸುತ್ತಿದ್ದಾರೆ! ಇವುಗಳಲ್ಲಿ ಹಲವು ಕನ್ನಡದ ಸೊಲ್ಲುಗಳಲ್ಲಿ ಇಂಗ್ಲಿಶ್ ಪದಗಳಶ್ಟೂ ಹೊಂದಿಕೊಳ್ಳುವುದಿಲ್ಲ!

ಕನ್ನಡದ ತಿಳಿವಿಗರು ಮಾಡುತ್ತಿರುವ ಈ ತಪ್ಪಿನಿಂದಾಗಿ, ಇವತ್ತು ಕನ್ನಡದಲ್ಲಿ ಹೊರತಂದ ಅರಿಮೆಯ ಬರಹಗಳನ್ನು ಕಲಿಯುವ ಕೆಲಸ ಅನವಶ್ಯಕವಾಗಿ ತುಂಬಾ ತೊಡಕಿನದಾಗಿದೆ.

ಯುರೋಪಿನಲ್ಲೂ ಹಿಂದಿನ ಕಾಲದಲ್ಲಿ ಹಲವು ಬಗೆಯ ಅರಿಮೆಯ ತಿಳುವಳಿಕೆಗಳು ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿದ್ದುವು, ಮತ್ತು ಇಂಗ್ಲಿಶ್, ಫ್ರಂಚ್ ಮೊದಲಾದ ನುಡಿಗಳಲ್ಲಿ ಅವುಗಳ ಕುರಿತಾಗಿ ಬರಹಗಳನ್ನು ಬರೆಯಬೇಕಾದಾಗ, ಅಲ್ಲಿನ ತಿಳಿವಿಗರು ಲ್ಯಾಟಿನ್ ಇಲ್ಲವೆ ಗ್ರೀಕ್ ಪದಗಳನ್ನು ಎರವಲಾಗಿ ಪಡೆಯುತ್ತಿದ್ದರು. ಕನ್ನಡದಲ್ಲಿ ಸಂಸ್ಕ್ರುತದ ಎರವಲುಗಳನ್ನು ಬಳಸುವುದೂ ಇಂತಹದೇ ಒಂದು ವಿದಾನ ಎಂಬುದಾಗಿ ಕನ್ನಡದ ತಿಳಿವಿಗರು ವಾದಿಸುತ್ತಾರೆ.

ಆದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಬೆಳವಣಿಗೆಯನ್ನು ಪಡೆಯ ದಿದ್ದಂತಹ ಅರಿಮೆಗಳಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗ, ಯುರೋಪಿನ ತಿಳಿವಿಗರು ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸಿಲ್ಲ ಮತ್ತು ಬಳಸುವುದಿಲ್ಲ. ಎತ್ತುಗೆಗಾಗಿ, ಇಂಗ್ಲಿಶ್ನ ಎಣಿಕೆಯರಿಮೆಯಲ್ಲಿ (ಗಣಿತದಲ್ಲಿ) ಬಳಕೆಯಾಗಿರುವ ಹೆಚ್ಚಿನ ಪದಗಳೂ ಇಂಗ್ಲಿಶ್ನವೇ. ಇತ್ತೀಚೆಗೆ ಬೆಳವಣಿಗೆಯನ್ನು ಕಂಡಿರುವ ಎಣ್ಣುಕದ (ಕಂಪ್ಯೂಟರ್ನ) ಅರಿಮೆಯಲ್ಲಿ ಹೊಸದಾಗಿ ಉಂಟುಮಾಡಿರುವಂತಹ ಪದಗಳಲ್ಲೂ ಹೆಚ್ಚಿನವೂ ಇಂಗ್ಲಿಶ್ ನವೇ. ಹಾಗಾಗಿ, ಸಂಸ್ಕ್ರುತದಲ್ಲಿ ಬೆಳವಣಿಗೆಯನ್ನು ಕಾಣದಿರುವಂತಹ ಅರಿಮೆಯ ವಿಶಯಗಳಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗ ಕನ್ನಡದ ತಿಳಿವಿಗರು ಸಂಸ್ಕ್ರುತದ ಮರೆಹೊಗುತ್ತಿರುವುದು ನಿಜಕ್ಕೂ ತಪ್ಪು ದಾರಿಯೇ.

ಇನ್ನೊಂದು ವಿಶಯದಲ್ಲೂ ಇದು ಕನ್ನಡದ ಮಟ್ಟಿಗೆ ತಪ್ಪುದಾರಿಯಾಗು ತ್ತದೆ: ಯುರೋಪಿನ ನುಡಿಗಳಿಗೂ ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಿಗೂ ನಡುವೆ ಹತ್ತಿರದ ನಂಟಸ್ತಿಕೆಯಿದೆ. ಆದರೆ, ಕನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಅಂತಹ ಹತ್ತಿರದ ನಂಟಸ್ತಿಕೆಯಿಲ್ಲ. ಈ ಕಾರಣಕ್ಕಾಗಿ, ಯುರೋಪಿನ ನುಡಿಗಳಲ್ಲಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳು ಹೊಂದಿಕೊಳ್ಳುವ ಹಾಗೆ

ಸಂಸ್ಕ್ರುತದ ಪದಗಳು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹಾಗಾಗಿ, ಲ್ಯಾಟಿನ್ ಪದಗಳು ಯುರೋಪಿನ ಕಲಿಗರಿಗೆ ತೊಂದರೆ ಕೊಡುವು ದಕ್ಕಿಂತ ಸಂಸ್ಕ್ರುತ ಪದಗಳು ಕನ್ನಡದ ಕಲಿಗರಿಗೆ ಹೆಚ್ಚು ತೊಂದರೆ ಕೊಡುತ್ತವೆ. ಇನ್ನೊಂದು ಕಾರಣವೇನೆಂದರೆ, ಕನ್ನಡ ಸಂಸ್ಕ್ರುತಕ್ಕಿಂತ ಸೊಲ್ಲರಿಮೆಯ ಮಟ್ಟಿಗೆ ತೀರ ಬೇರಾಗಿರುವ ನುಡಿಯಾದ ಕಾರಣ, ಕನ್ನಡದ ಸೊಲ್ಲುಗಳಲ್ಲಿ ಬಳಸಲು ಬೇಕಾಗುವಂತಹ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲ. ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಿರುವ ಕನ್ನಡದ ತಿಳಿವಿಗರು ಇದನ್ನು ಗಮನಿಸಿಯೇ ಇಲ್ಲವೆಂದು ತೋರುತ್ತದೆ. ಈ ಪದಗಳು ಕನ್ನಡಕ್ಕೆ ಬೇಕಾಗಿರುವ ವ್ಯತ್ಯಾಸಗಳನ್ನು ಕಾಣಿಸುವುದಿಲ್ಲವಾದ ಕಾರಣ, ಅವನ್ನು ಬಳಸಿರುವ ಕನ್ನಡದ ಬರಹಗಳು ಹಲವು ರೀತಿಯ ಗೊಂದಲಗಳಿಗೆ ಎಡೆಮಾಡಿಕೊಡುತ್ತಿವೆ.

ಇದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ (ಬಟ್ 2005) ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ. ಎತ್ತುಗೆಗಾಗಿ, ಕನ್ನಡದಲ್ಲಿ ಹೆಸರು(ನಾಮ)ಪದಗಳಿಗೂ ಪರಿಚೆ(ಗುಣ)ಪದಗಳಿಗೂ ನಡುವೆ ವ್ಯತ್ಯಾಸವಿದೆ; ಆದರೆ ಸಂಸ್ಕ್ರುತದಲ್ಲಿ ಅಂತಹ ವ್ಯತ್ಯಾಸ ಇಲ್ಲ. ಹಾಗಾಗಿ, ಹೆಸರುಪದಗಳಿಗಿಂತ ಬೇರಾಗಿರುವ ಪರಿಚೆಪದಗಳನ್ನು ಉಂಟುಮಾಡಲು ಬೇಕಾಗುವ ಒಟ್ಟುಗಳೂ ಸಂಸ್ಕ್ರುತದಲ್ಲಿಲ್ಲ.

ಈ ಹೆಸರುಪದ-ಪರಿಚೆಪದ ವ್ಯತ್ಯಾಸ ಇಂಗ್ಲಿಶ್ನ ಅರಿಮೆ ಪದಗಳಲ್ಲಿದೆ, ಮತ್ತು ಕನ್ನಡಕ್ಕೂ ಅದು ಬೇಕಾಗುತ್ತದೆ. ಆದರೆ, ಸಂಸ್ಕ್ರುತದ ಒಟ್ಟುಗಳನ್ನು ಬಳಸಿ ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಈ ವ್ಯತ್ಯಾಸವನ್ನು ಕಾಣಿಸಲು ಸಾದ್ಯವಾಗದು. ಹಾಗೆ ಮಾಡಲು ಪ್ರಯತ್ನಿಸಿರುವಂತಹ ಕನ್ನಡದ ತಿಳಿವಿಗರು ಇದರಿಂದಾಗಿ ತುಂಬಾ ಗೊಂದಲಕ್ಕೆಡೆಯಾಗಿದ್ದಾರೆ. ಅವರು ಉಂಟು ಮಾಡಿರುವ ಅರಿಮೆ ಪದಗಳಲ್ಲಿ ಈ ವ್ಯತ್ಯಾಸ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾಣಿಸಿಕೊಳ್ಳುವುದಿಲ್ಲ (4.3.2 ನೋಡಿ).

ಕನ್ನಡದ ತಿಳಿವಿಗರು ಮಾಡಿದಂತಹ ಈ ತಪ್ಪನ್ನು ಇವತ್ತು ನಾವು ಪದ ಹಮ್ಮುಗೆಯ ಮೂಲಕ ಸರಿಪಡಿಸಬೇಕಾಗಿದೆ. ಇಂಗ್ಲಿಶ್ನ ಅರಿಮೆ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಅರಿಮೆ ಪದಗಳನ್ನು ಉಂಟುಮಾಡಬೇಕಾದಾಗ, ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು, ಮತ್ತು ಅಂತಹ ಕಡೆಗಳಲ್ಲೆಲ್ಲ ಕನ್ನಡದವೇ ಆದ ಪದಗಳನ್ನು

ಬಳಸತೊಡಗಬೇಕು. ಹೊಸಗನ್ನಡದಲ್ಲಿ ಇದಕ್ಕೆ ಬೇಕಾಗುವ ಪದಗಳು ಇಲ್ಲವಾದರೆ, ಅದಕ್ಕಾಗಿ ಹಳೆಗನ್ನಡದ ಪದಗಳನ್ನು ಬಳಸುವುದೇ ಕನ್ನಡಕ್ಕೆ ಅನುಕೂಲವಾದ ದಾರಿ.

Eke →

9.3 ಬೆಳವಣಿಗೆಯ ಹಮ್ಮುಗೆ

ಎಲ್ಲರ ನುಡಿಯಾಗಿ ಬಳಕೆಗೆ ಬಂದ ನುಡಿಯಲ್ಲಿ ಹಲವು ಬಗೆಯ ಬೆಳವಣಿಗೆ ಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಮುಕ್ಯವಾಗಿ ಅದನ್ನು ಬೇರೆ ಬೇರೆ ಕೆಲಸ ಗಳಲ್ಲಿ ತೊಡಗಿಸಲು ಬೇಕಾಗುವಂತಹ ಸಾದನಗಳನ್ನು ಉಂಟುಮಾಡುತ್ತಲೇ ಇರಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ನುಡಿಗಳೂ ಈ ರೀತಿ ಬದಲಾಗುತ್ತಲೇ ಇರುತ್ತವೆ. ಹೊಸ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದಕ್ಕಾಗಿ, ಮತ್ತು ಆಡುಗರು ಎದುರಿಸಬೇಕಾಗಿರುವ ಹೊಸ ಹೊಸ ತೊಡಕುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕಾಗಿ ಅವು ಹಾಗೆ ಬದಲಾಗುತ್ತಲೇ ಇರಬೇಕಾಗುತ್ತದೆ. ಆದರೆ, ನುಡಿಹಮ್ಮುಗೆಯ ಮೂಲಕ ನಾವು ಆಯ್ಕೆ ಮಾಡಿ ಪರಿಚೆ ಕೊಟ್ಟಿರು ವಂತಹ ನುಡಿಯಲ್ಲಿ ಇಂತಹ ಬೆಳವಣಿಗೆಯ ಕೆಲಸಗಳನ್ನೂ ನಾವು ನುಡಿ ಹಮ್ಮುಗೆಯ ಮೂಲಕವೇನೇ ನಡೆಸಿಕೊಡಬೇಕಾಗುತ್ತದೆ. ಯಾಕೆಂದರೆ ಹಾಗೆ ಮಾಡದಿದ್ದರೆ, ನಮ್ಮ ನುಡಿಹಮ್ಮುಗೆ ನಡುವೆಯೇ ನಿಂತುಹೋಗಬಲ್ಲುದು. ಈ ಬೆಳವಣಿಗೆಯ ಹಮ್ಮುಗೆ ಒಂದು ರೀತಿಯಲ್ಲಿ ಪರಿಚೆ ಹಮ್ಮುಗೆಯ ಮುಂದುವರಿಕೆಯೆಂದೂ ಹೇಳಬಹುದು. ಎತ್ತುಗೆಗಾಗಿ, ಆಯ್ಕೆಯಾಗಿರುವ ನುಡಿಯಲ್ಲಿ ಪರಿಚೆಹಮ್ಮುಗೆಯ ಮೂಲಕ ಹಲವು ಬಗೆಯ ಪದನೆರಕೆಗಳನ್ನು ಉಂಟುಮಾಡಿರಬಹುದು. ಆದರೆ, ಬೇರೆ ಬೇರೆ ಕೆಲಸಗಳಲ್ಲಿ ಮತ್ತು ಅರಿಮೆ ಗಳಲ್ಲಿ ಆ ನುಡಿಯನ್ನು ಬಳಸುತ್ತಿರುವಂತೆ, ಈ ಪದನೆರಕೆಗಳಲ್ಲಿ ಉಂಟುಮಾಡಿ ಕೊಟ್ಟಿರುವ ಪದಗಳು ಸಾಕಾಗುವುದಿಲ್ಲ. ಸಾವಿರಾರು ಹೊಸ ಅರಿಮೆಯ ಪದಗಳಿಗೆ ಮತ್ತು ಇತರ ಕೆಲಸಗಳಿಗೆ ಬೇಕಾಗುವ ಹೊಸ ಪದಗಳಿಗೆ ಬೇಡಿಕೆ ಗಳು ಬರುತ್ತಲೇ ಇರುತ್ತವೆ. ಇಂತಹ ಹೊಸಪದಗಳನ್ನು ಬೆಳವಣಿಗೆಯ ಹಮ್ಮುಗೆಯ ಮೂಲಕ ಉಂಟುಮಾಡಿಕೊಡಬೇಕಾಗುತ್ತದೆ.

ಪದನೆರಕೆಯಲ್ಲಿ ಮಾತ್ರವಲ್ಲದೆ ನುಡಿಗೆ ಸಂಬಂದಿಸಿದ ಬೇರೆ ವಿಶಯ ಗಳಲ್ಲೂ ಮಾರ್ಪಾಡುಗಳನ್ನು ಮಾಡಬೇಕಾಗುವಂತಹ ಸಂದರ್ಬಗಳು ಬರಬಲ್ಲುವು. ಇವುಗಳನ್ನು ನಡೆಸಿಕೊಡುವಲ್ಲಿಯೂ ಸೊಲ್ಲರಿಮೆಯ ತಿಳಿವು

ನೆರವಿಗೆ ಬರುತ್ತದೆ. ಸೊಲ್ಲರಿಮೆಯ ತಿಳಿವಿಲ್ಲದೆ ನಡೆಸಿದ ಬೆಳವಣಿಗೆಯ ಹಮ್ಮುಗೆಗಳು ಜನರನ್ನು ತೊಂದರೆಯಲ್ಲಿ ಸಿಲುಕಿಸುತ್ತವೆ.

Eke →

9.4 ತಿರುಳು

ಒಂದು ಸಮಾಜದಲ್ಲಿ ಹಲವು ನುಡಿಗಳು ಇಲ್ಲವೇ ಆಡುನುಡಿಗಳು ಬಳಕೆ ಯಲ್ಲಿವೆಯಾದರೆ, ಅವುಗಳಲ್ಲಿ ಒಂದನ್ನು ಎಲ್ಲರ ನುಡಿಯಾಗಿ ನುಡಿಹಮ್ಮುಗೆಯ ಮೂಲಕ ಆಯ್ದುಕೊಳ್ಳಬೇಕಾಗುತ್ತದೆ. ಆ ರೀತಿ ಆಯ್ದುಕೊಂಡಿರುವ ನುಡಿಯಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನೂ ನುಡಿಹಮ್ಮುಗೆಯ ಮೂಲಕ ನಡೆಸ ಬೇಕಾಗುತ್ತದೆ. ಅದಕ್ಕೊಂದು ಲಿಪಿಯನ್ನು ಅಳವಡಿಸಬೇಕಾಗುತ್ತದೆ; ಕೋರ್ಟು- ಕಚೇರಿ, ಕಯ್ಗಾರಿಕೆ, ಮಾರಾಟ, ಅರಿಮೆಗಳ ಕಲಿಕೆ ಮೊದಲಾದವುಗಳಲ್ಲಿ ಅದನ್ನು ಬಳಸುವುದಕ್ಕಾಗಿ ಅದರ ಪದನೆರಕೆಯನ್ನು ಹೆಚ್ಚಿಸಬೇಕಾಗುತ್ತದೆ; ಮತ್ತು ಅದಕ್ಕೆ ಬಗೆ ಬಗೆಯ ಬರಹದ ಒಡ್ಡವಗಳನ್ನು ಒದಗಿಸಿಕೊಡಬೇಕಾಗು

ಇಂತಹ ಕೆಲಸಗಳನ್ನೆಲ್ಲ ನಡೆಸಲು ಆ ನುಡಿಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಅದನ್ನು ಪಡೆಯದಿರುವವರು ಈ ಕೆಲಸಗಳನ್ನು ನಡೆಸ ಹೊರಟಲ್ಲಿ, ಸಮಾಜ ಹಲವು ಬಗೆಯ ತೊಂದರೆಗಳಿಗೊಳಗಾಗುತ್ತದೆ.