↑ Contents · Contents · Ch 2 →
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಮೊದಲನೇ ಪಸುಗೆ — ಮುನ್ನೋಟ
1.1 ವ್ಯಾಕರಣ ಯಾರಿಗೆ ಬೇಕು?
ನಿಜಕ್ಕೂ ವ್ಯಾಕರಣವೆಂಬುದು ನುಡಿಯನ್ನು ಬಳಸುವ ನಮಗೆಲ್ಲರಿಗೂ ಬೇಕಾಗು ತ್ತದೆ. ಯಾಕೆಂದರೆ, ಅದು ನುಡಿಯ ಜೀವಾಳ. ಅದಿಲ್ಲದೆ ನುಡಿಯೇ ಇಲ್ಲ. ಒಂದು ನುಡಿಯಲ್ಲಿ ಮಾತನಾಡುವಾಗ ನಾವು ಬಳಸುವ ಪ್ರತಿಯೊಂದು ವಾಕ್ಯದ ಹಿಂದೆಯೂ ವ್ಯಾಕರಣದ ನಿಯಮಗಳು ಇಲ್ಲವೇ ಕಟ್ಟಲೆಗಳು ಅಡಗಿವೆ.
ಆದರೆ, ವ್ಯಾಕರಣದ ಈ ಕಟ್ಟಲೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ಹುದುಗಿರುತ್ತವೆ. ಅವನ್ನು ನಾವು ಮಾತನಾಡುವಾಗ ಮತ್ತು ಇನ್ನೊಬ್ಬರ ಮಾತನ್ನು ಕೇಳುವಾಗ ಬಳಸಬಲ್ಲೆವಲ್ಲದೆ, ಅವು ಎಂತಹವು ಎಂಬುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳಲಾರೆವು.
ಇದಲ್ಲದೆ, ನಾವು ಸಾಮಾನ್ಯವಾಗಿ ವ್ಯಾಕರಣ ಎಂಬ ಹೆಸರಿನಿಂದ ಕರೆಯು ವುದು ಅದರ ಅರಿವಿಗೆ ಎಟಕುವಂತಹ ರೂಪವನ್ನು. ಇದನ್ನು ನುಡಿಯರಿಗರು ವ್ಯಾಕರಣ ಪುಸ್ತಕಗಳಲ್ಲಿ ಬರೆದಿರಿಸಿರುತ್ತಾರೆ. ನುಡಿಯಲ್ಲಿ ಬಳಕೆಯಾಗುವ ಸೊಲ್ಲುಗಳ ಹಿಂದೆ ಯಾವ ಬಗೆಯ ಕಟ್ಟಲೆಗಳೆಲ್ಲ ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ, ಅವರು ಇಂತಹ ಅರಿವಿಗೆ ಎಟಕುವ ವ್ಯಾಕರಣಗಳನ್ನು ಬರೆಯುತ್ತಾರೆ. ನುಡಿಯನ್ನು ತಮ್ಮ ಕಸುಬಾಗಿ ಮಾಡಿ ಕೊಂಡವರಿಗೆ ಮತ್ತು ತಮ್ಮ ಕಸುಬಿನಲ್ಲಿ ಬರಹವನ್ನು ಬಳಸ ಬೇಕಾದವರಿಗೆ ಇಂತಹ ಅರಿವಿಗೆ ಎಟಕುವ ವ್ಯಾಕರಣ ತುಂಬಾ ನೆರವನ್ನು ನೀಡಬಲ್ಲುದು. ಆದರೆ, ಇವತ್ತು ಕನ್ನಡದ ವ್ಯಾಕರಣವನ್ನು ಯಾರೂ ತಮ್ಮ ಕಸುಬುಗಳಲ್ಲಿ ಬಳಸಿಕೊಳ್ಳುವ ಹಾಗೆ ಕಾಣಿಸುವುದಿಲ್ಲ. ಇದಕ್ಕೆ ಎರಡು ಕಾರಣಗಳಿವೆ: ಮೊದಲ ನೆಯದಾಗಿ, ಶಾಲೆಗಳಲ್ಲಿ ಇವತ್ತು ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜಕ್ಕೂ ಕನ್ನಡದ್ದೇ ಅಲ್ಲ. ಅದು ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಹೊಂದಿಸಲು ನಡೆಸಿರುವ ಪ್ರಯತ್ನ ಮಾತ್ರ. ಕೇಶಿರಾಜನ ಕಾಲದಿಂದಲೂ
ಕನ್ನಡ ವ್ಯಾಕರಣವೆಂಬುದು, ಈ ಕಾರಣಕ್ಕಾಗಿ, ಯಾವ ಕೆಲಸಕ್ಕೂ ಬಳಸ ಲಾಗದಂತಹ ಒಂದು ತೊಡಕು ತೊಡಕಾದ ವಿಶಯವಾಗಿಯೇ ಉಳಿದು
ಎರಡನೆಯದಾಗಿ, ನಿಜಕ್ಕೂ ಕನ್ನಡದ ವ್ಯಾಕರಣ ಎಂತಹದು, ಅದನ್ನು ತಿಳಿದುಕೊಳ್ಳುವುದರಿಂದ ಕನ್ನಡದ ಬರಹವನ್ನು ಕಲಿಯುವವರು ಮತ್ತು ಕಲಿಸು ವವರು, ಬರಹಗಾರರು, ನುಡಿಮಾರುಗರು (ಅನುವಾದಕರು), ನುಡಿಹಮ್ಮುಗರು ಮತ್ತು ಬೇರೆ ಹಲವು ಬಗೆಗಳಲ್ಲಿ ನುಡಿಗೆ ಸಂಬಂದಿಸಿದಂತೆ ಕೆಲಸಗಳನ್ನು ನಡೆಸುವವರು ಎಂತಹ ನೆರವನ್ನು ಪಡೆಯಬಲ್ಲರು ಎಂಬುದನ್ನು ತಿಳಿದು ಕೊಳ್ಳಲು ಹೆಚ್ಚಿನ ಪ್ರಯತ್ನಗಳಾವುವೂ ಕನ್ನಡದಲ್ಲಿ ನಡೆದಿಲ್ಲ. ಇದಲ್ಲದೆ, ಹಾಗೆ ಬಳಸಲು ಬರುವಂತಹ ವ್ಯಾಕರಣಗಳನ್ನು ಯಾರೂ ಬರೆದಿಲ್ಲ.
ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ಕನ್ನಡ ನುಡಿಯ ವ್ಯಾಕರಣ ಗಳಲ್ಲವೆಂದು ನಾವು ಹೇಗೆ ತೀರ್ಮಾನಿಸಬಲ್ಲೆವು, ಕನ್ನಡದ್ದೇ ಆದ ವ್ಯಾಕರಣ ಹೇಗೆ ಅವಕ್ಕಿಂತ ತೀರಾ ಬೇರಾಗಿರಬಲ್ಲುದು ಎಂಬುದನ್ನು ನಾನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೆ.
ಇದಲ್ಲದೆ, 1978ರಲ್ಲಿ ಹೊರತಂದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ತವ್ಯವಸ್ತೆ ಎಂಬ ಪುಸ್ತಕದ ಮೂಲಕ, ಮತ್ತು ಆಮೇಲೆ ಇತ್ತೀಚೆಗೆ ಹೊರತಂದ ಕನ್ನಡ ಪದಗಳ ಒಳರಚನೆ, ಕನ್ನಡ ವಾಕ್ಯಗಳ ಒಳರಚನೆ, ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಮತ್ತು ಕನ್ನಡದ ಸರ್ವನಾಮಗಳು ಎಂಬ ಪುಸ್ತಕಗಳ ಮೂಲಕ, ಈ ಕನ್ನಡದ್ದೇ ಆದ ವ್ಯಾಕರಣದ ಕೆಲವು ಅಂಶಗಳ ಕುರಿತಾಗಿ ಹೆಚ್ಚು ಆಳವಾದ ಚಿಂತನೆಗಳನ್ನೂ ನಡೆಸಿದ್ದೇನೆ. ಹಲವಾರು ಮಂದಿ ನುಡಿಯರಿಗರು ಇಂತಹ ಚಿಂತನೆಗಳನ್ನು ನಡೆಸಿದಲ್ಲಿ, ಅವುಗಳ ಮೂಲಕ ನಾವು ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ಕಂಡುಹಿಡಿಯಬಲ್ಲೆವು. ಆ ರೀತಿ ಕಂಡುಹಿಡಿದ ವ್ಯಾಕರಣ ಯಾವ ಬಗೆಯಲ್ಲೆಲ್ಲ ನಮ್ಮ ಕೆಲಸಗಳಲ್ಲಿ ನೆರವಾಗಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿ ಕೊಡಲಿದ್ದೇನೆ.
1.1.1 ಸೊಲ್ಲು ಮತ್ತು ಸೊಲ್ಲರಿಮೆ
ವ್ಯಾಕರಣ’ಎಂಬ ಪದ ಇವತ್ತು ಕನ್ನಡಿಗರಲ್ಲಿ ಹಲವು ಕಹಿ ಅನಿಸಿಕೆಗಳಿಗೆ ಎಡೆಮಾಡಿಕೊಡುತ್ತದೆ. ಮೇಲೆ ಸೂಚಿಸಿದ ಹಾಗೆ, ಶಾಲೆಗಳಲ್ಲಿ ಕಲಿಸುವ
ಮುನ್ನೋಟ ಕನ್ನಡ ವ್ಯಾಕರಣವೆಂಬುದು ಅವರ ಮಟ್ಟಿಗೆ ತೀರಾ ಅನವಶ್ಯಕವಾಗಿರುವುದು, ತೊಡಕು ತೊಡಕಾಗಿರುವುದು ಮತ್ತು ಹೆಚ್ಚಿನ ಮಟ್ಟಿಗೆ ಕನ್ನಡದ್ದೇ ಅಲ್ಲ ವಾಗಿರುವುದು ಇದಕ್ಕೆ ಕಾರಣ.
ವ್ಯಾಕರಣದ ಅವಶ್ಯಕತೆಯನ್ನು ತೋರಿಸಹೊರಟಿರುವ ಈ ಪುಸ್ತಕದಲ್ಲಿ ಇಂತಹ ಕಹಿ ಅನಿಸಿಕೆಗಳಿಗೆ ಎಡೆಮಾಡಿಕೊಡುವ ವ್ಯಾಕರಣ ಎಂಬ ಪದವನ್ನು ಬಳಸುವ ಬದಲು, ಕನ್ನಡದ್ದೇ ಆದ ಸೊಲ್ಲರಿಮೆ ಎಂಬ ಪದವನ್ನು ಬಳಸಿ ದ್ದೇನೆ. ಸೊಲ್ಲು ಪದ ಕನ್ನಡದಲ್ಲಿ ವಾಕ್ಯವನ್ನು ಹೆಸರಿಸಬಲ್ಲುದು ಮತ್ತು ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ತಿಳಿಸುವ ಸೊಲ್ಲರಿಮೆ ಪದ ವ್ಯಾಕರಣವನ್ನು ಹೆಸರಿಸಬಲ್ಲುದು.
ಯಾವುದೇ ಒಂದು ಸೊಲ್ಲಿನಲ್ಲಿ ಒಂದು ಇಲ್ಲವೇ ಅದಕ್ಕಿಂತ ಹೆಚ್ಚು ಪದಗಳಿರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ (1)ನೇ ಸೊಲ್ಲನ್ನು ಗಮನಿಸಬಹುದು:
(1)
ನಾಳೆ ಒಂಬತ್ತಕ್ಕೆ ನಮ್ಮ ಹುಡುಗನೊಂದಿಗೆ ಶಾಲೆಯಲ್ಲಿರು ತ್ತೇನೆ
ಈ ಸೊಲ್ಲಿನಲ್ಲಿ ನಾಳೆ, ಒಂಬತ್ತು, ನಾವು (ನಮ್ಮ), ಹುಡುಗ, ಶಾಲೆ, ಇರು ಎಂಬ ಆರು ಪದಗಳಿವೆ. ಈ ಆರು ಪದಗಳನ್ನಶ್ಟೇ ಹೇಳಿದರೆ ಅದೊಂದು ಸೊಲ್ಲಾಗುವುದಿಲ್ಲ ಮತ್ತು ನಾವು ಹೇಳಬೇಕಾಗಿರುವುದು ಏನು ಎಂಬುದು ನಮ್ಮ ಕೇಳುಗರಿಗೆ ಗೊತ್ತಾಗುವುದೂ ಇಲ್ಲ. ಹಾಗಾಗಬೇಕಿದ್ದಲ್ಲಿ, ಆ ಪದಗಳಿಗೆ ಕ್ಕೆ, ಅ, ಒಂದಿಗೆ, ಅಲ್ಲಿ, ಉತ್ತ ಮತ್ತು ಏನೆ ಎಂಬಂತಹ ಒಟ್ಟು (ಪ್ರತ್ಯಯ)ಗಳನ್ನು ಸೇರಿಸಿರುವ ಪದರೂಪಗಳನ್ನು ಬಳಸಬೇಕಾಗುತ್ತದೆ, ಮತ್ತು ಅವನ್ನು ಮೇಲೆ ಕೊಟ್ಟಿರುವ (1)ನೇ ಸೊಲ್ಲಿನಲ್ಲಿ ಕಾಣಿಸುವ ಹಾಗೆ, ಒಂದು ನಿಶ್ಚಿತವಾದ ಓರಣ(ಕ್ರಮ)ದಲ್ಲಿ ಜೋಡಿಸಿ ಹೇಳಬೇಕಾಗುತ್ತದೆ.
ಇವೇ ಪದಗಳನ್ನು ಬೇರೆ ಒಟ್ಟುಗಳೊಂದಿಗೆ ಸೇರಿಸಿ, ಮತ್ತು ಬೇರೆ ಬಗೆ ಯಲ್ಲಿ ಜೋಡಿಸಿ ಹೇಳಿದಲ್ಲಿ ಬೇರೆಯೇ ಹುರುಳುಗಳು ಸಿಗುತ್ತವೆ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು.
ನಾಳೆ ಒಂಬತ್ತಕ್ಕೆ ನಮ್ಮ ಹುಡುಗ ಶಾಲೆಯಲ್ಲಿರುತ್ತಾನೆ.
(1ಚ) ನಾಳೆಯಿಂದ ಒಂಬತ್ತು ಶಾಲೆಗಳಲ್ಲಿ ನಮ್ಮ ಹುಡುಗರಿರುತ್ತಾರೆ.
(1l)
ನಾಳೆಯಿಂದ ಒಂಬತ್ತು ಹುಡುಗರು ನಮ್ಮ ಶಾಲೆಯಲ್ಲಿರು ನಮ್ಮ ಹುಡುಗ ನಾಳೆವರೆಗೆ ಒಂಬತ್ತಕ್ಕೆ ಶಾಲೆಯಲ್ಲಿರುತ್ತಾನೆ. ನಾಳೆ ಒಂಬತ್ತಕ್ಕೆ ಹುಡುಗರು ನಮ್ಮ ಶಾಲೆಯಲ್ಲಿರುತ್ತಾರೆ. ನಾಳೆ ಒಂಬತ್ತಕ್ಕೆ ನಾವು ಹುಡುಗರ ಶಾಲೆಯಲ್ಲಿರುತ್ತೇವೆ.
ಈ ರೀತಿ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಬಗೆಬಗೆಯ ಪದರೂಪಗಳನ್ನು ಉಂಟುಮಾಡುವ ಬಗೆ ಹೇಗೆ ಮತ್ತು ಅಂತಹ ಪದರೂಪಗಳನ್ನು ಜೋಡಿಸಿ ಸೊಲ್ಲುಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಸೊಲ್ಲರಿಮೆ ತಿಳಿಸುತ್ತದೆ.
ಪದಗಳು ಸೊಲ್ಲಿನ ಎಲುಬುಗೂಡು ಮಾತ್ರ. ಅವುಗಳಿಗೊಂದು ರೂಪ ಕೊಟ್ಟು ಉಸಿರನ್ನು ತುಂಬಬೇಕಿದ್ದಲ್ಲಿ ಸೊಲ್ಲರಿಮೆಯ ಕಟ್ಟಲೆಗಳು ಬೇಕಾಗು ತ್ತವೆ. ಹಾಗಾಗಿ, ಪದಗಳು ಎಶ್ಟು ಮುಕ್ಯವೋ ಸೊಲ್ಲರಿಮೆಯ ಕಟ್ಟಲೆಗಳೂ ಅಶ್ಟೇ ಮುಕ್ಯ. ಅವೆರಡೂ ಒಟ್ಟಿಗೆ ಸೇರಿದಾಗ ಮಾತ್ರ ನಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳು ಇನ್ನೊಬ್ಬರನ್ನು ತಲುಪಬಲ್ಲುವು.
1.1.2 ಅರಿವಿಗೆ ಎಟಕದ ಕಟ್ಟಲೆಗಳು
ನಾವು ತುಂಬಾ ಚಿಕ್ಕವರಾಗಿದ್ದಾಗಲೇ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಬಗೆ ಬಗೆಯ ಸೊಲ್ಲುಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಅರಿತು ಕೊಂಡಿದ್ದೇವೆ. ಈ ಅರಿವನ್ನು ನಾವು ನಮ್ಮ ಬೆಳವಣಿಗೆಯ ಅಂಗವಾಗಿ ಎರಡೂವರೆ ಮೂರು ವರ್ಶದವರಾಗಿದ್ದಾಗಲೇ ಪಡೆದುಕೊಂಡಿದ್ದೇವೆ.
ಆದರೆ ಮೇಲೆ ಸೂಚಿಸಿದ ಹಾಗೆ, ಈ ಸೊಲ್ಲರಿಮೆಯ ಕಟ್ಟಲೆಗಳೆಲ್ಲ ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ತುಂಬಿಕೊಂಡಿರುತ್ತವೆ. ಅವನ್ನು ಬಳಸಿ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಮತ್ತು ಬೇರೆ ಯವರು ಉಂಟುಮಾಡಿದ ಸೊಲ್ಲುಗಳನ್ನು ಕೇಳಿ, ಅವುಗಳಿಂದ ತಿಳಿವನ್ನು ಪಡೆಯುವುದು ಹೇಗೆ ಎಂಬುದನ್ನು ನಾವು ಅರಿತುಕೊಂಡಿದ್ದೇವಲ್ಲದೆ ನಿಜಕ್ಕೂ ಆ ಕಟ್ಟಲೆಗಳು ಎಂತಹವು ಎಂಬುದನ್ನು ನಾವು ತಿಳಿದಿಲ್ಲ.
ಕನ್ನಡಕ್ಕೆ ಒಂದು ಸೊಲ್ಲರಿಮೆಯನ್ನು ಬರೆಯಬೇಕೆಂದಿರುವವರು ಇಂತಹ ಹಲವಾರು ಕಟ್ಟಲೆಗಳನ್ನು ಅರಿವಿಗೆ ಎಟಕುವ ರೂಪಕ್ಕೆ ತರಬೇಕಾಗುತ್ತದೆ.
ಮುನ್ನೋಟ ಎತ್ತುಗೆಗಾಗಿ, ಹೋಗುವುದು ಎಲ್ಲಿಗೆ ಎಂಬುದನ್ನು ಒಂದು ಸೊಲ್ಲು ತಿಳಿಸಬೇಕಿದ್ದಲ್ಲಿ, ಅದರಲ್ಲಿ ಹೋಗಲಿರುವ ಜಾಗವನ್ನು ಸೂಚಿಸುವ ಪದಕ್ಕೆ ಗೆ ಎಂಬ ಒಟ್ಟನ್ನು ಸೇರಿಸಬೇಕಾಗುತ್ತದೆ. ಮನೆಗೆ ಹೋಗುತ್ತಿದ್ದೇನೆ ಎಂಬ ಇಂತಹದೊಂದು ಸೊಲ್ಲಿನಲ್ಲಿ ಈ ಗೆ ಒಟ್ಟನ್ನು ಹೋಗುವ ಜಾಗವನ್ನು ಸೂಚಿಸುವ ಮನೆ ಪದಕ್ಕೆ ಸೇರಿಸಲಾಗಿದೆ.
ಈ ಗೆ ಒಟ್ಟಿನ ಬಳಕೆಯ ಹಿಂದೆ ನಮ್ಮಲ್ಲಿ ಹೆಚ್ಚಿನವರೂ ತಿಳಿಯದಿರುವ (ಎಂದರೆ ಗೊತ್ತಿದ್ದರೂ ಅರಿವಿಗೆ ಎಟಕದಿರುವ) ಒಂದು ಕಟ್ಟಲೆಯಿದೆ: (1) ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಮೇಲಿನ ಪದದಲ್ಲಿ ಕಾಣಿಸಿದ ಹಾಗೆ, ಅದನ್ನು ಗೆ ರೂಪದಲ್ಲಿ ಬಳಸಬೇಕು (ಶಾಲೆಗೆ, ಹೊಳೆಗೆ, ಹಳ್ಳಿಗೆ, ದಾರಿಗೆ); ಆದರೆ, (2) ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಅದನ್ನು ಇಗೆ ರೂಪದಲ್ಲಿ ಬಳಸಬೇಕು (ಕಾಡಿಗೆ, ಬಚ್ಚಲಿಗೆ, ಮಣ್ಣಿಗೆ), ಮತ್ತು (3) ಅಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಅವು ಮಾನವರನ್ನು ಹೆಸರಿಸುವುದಾದರೆ ಇಗೆ ರೂಪದಲ್ಲಿ ಬಳಸಬೇಕು (ಅಕ್ಕನಿಗೆ, ಅಣ್ಣನಿಗೆ, ಕುರುಡನಿಗೆ), ಮತ್ತು ಉಳಿದೆಡೆಗಳಲ್ಲಿ ಕ್ಕೆ ರೂಪದಲ್ಲಿ ಬಳಸಬೇಕು (ಬೆಟ್ಟಕ್ಕೆ, ಆಟಕ್ಕೆ, ಕಾಳಗಕ್ಕೆ).
ಕನ್ನಡದಲ್ಲಿ ಇಂತಹ ಬೇರೆಯೂ ನೂರಾರು ಕಟ್ಟಲೆಗಳು ಬಳಕೆಯಾಗುತ್ತವೆ; ಇವನ್ನು ನಿಯಮ ಎಂಬುದಾಗಿ ಕರೆಯುವುದಕ್ಕಿಂತಲೂ ಕಟ್ಟಲೆ ಎಂಬುದಾಗಿ ಕರೆಯುವುದೇ ಸರಿಯೆಂದು ತೋರುತ್ತದೆ. ಯಾಕೆಂದರೆ, ಇವು ಮುರಿಯ ಬಾರದಂತಹ ಇಲ್ಲವೇ ಮುರಿಯಲಾಗದಂತಹ ನಿಯಮಗಳೇನಲ್ಲ. ನಮ್ಮ ಸಮಾಜದಲ್ಲಿ ಬೆಳೆದುಬಂದಿರುವ ಒಂದು ಬಗೆಯ ಒಡಂಬಡಿಕೆಗಳನ್ನು ಮಾತ್ರ ಇವು ಸೂಚಿಸುತ್ತವೆ. ಸಮಯದಿಂದ ಸಮಯಕ್ಕೆ ಇವುಗಳಲ್ಲಿ ಹಲವಾರು ಮಾರ್ಪಾಡುಗಳೂ ನಡೆಯುತ್ತಾ ಇರುತ್ತವೆ, ಮತ್ತು ಈ ಕಾರಣಕ್ಕಾಗಿ, ಈ ಕಟ್ಟಲೆಗಳು ಇವತ್ತು ಆಡುನುಡಿಯಿಂದ ಆಡುನುಡಿಗೆ, ಒಳನುಡಿಯಿಂದ ಒಳನುಡಿಗೆ ಬೇರೆ ಬೇರಾಗಿಯೂ ಕಾಣಿಸಿಕೊಳ್ಳುತ್ತವೆ.
ಮಾತನಾಡುವಾಗ ಇಲ್ಲವೇ ಬರೆಯುವಾಗ ನಾವು ಈ ಕಟ್ಟಲೆಗಳನ್ನು ಮತ್ತು ಇಂತಹವೇ ಬೇರೆಯೂ ನೂರಾರು ಕಟ್ಟಲೆಗಳನ್ನು ಸರಿಯಾಗಿಯೇ ಬಳಸುತ್ತಿರುತ್ತೇವೆ. ಆದರೆ ನಿಜಕ್ಕೂ ಅವು ಎಂತಹವು ಎಂಬುದನ್ನು ನಾವು ಯಾರಿಗೂ ವಿವರಿಸಿ ಹೇಳಲಾರೆವು. ಅವು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ. ಕನ್ನಡದ ಸೊಲ್ಲರಿಮೆಯನ್ನು ಬರೆಯುವವರು ಅವನ್ನೆಲ್ಲ ಕಂಡುಹಿಡಿದು ಪಟ್ಟಿಮಾಡಿ ವಿವರಿಸಬೇಕಾಗುತ್ತದೆ.
1.2 ಈ ಕಟ್ಟಲೆಗಳನ್ನು ಯಾಕೆ ತಿಳಿಯಬೇಕು?
ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವ ಈ ಸೊಲ್ಲರಿಮೆಯ ಕಟ್ಟಲೆಗಳನ್ನು ಅರಿವಿಗೆ ಎಟಕುವ ಹಾಗೆ ಮಾಡುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂಬ ಕೇಳ್ವಿ ಇಲ್ಲಿ ಏಳುತ್ತದೆ.
ಇದಕ್ಕೆ ಒಂದು ಮರುನುಡಿ(ಉತ್ತರ) ಏನೆಂದರೆ, ಹೊಸ ಹೊಸ ವಿಶಯ ಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಮ್ಮಲ್ಲಿ ಯಾವಾಗಲೂ ಇದ್ದೇ ಇರುತ್ತದೆ. ನಿಜಕ್ಕೂ ನಮ್ಮ ಮನಸ್ಸಿನಲ್ಲಿ ಇಲ್ಲವೇ ಮಿದುಳಿನಲ್ಲಿ ಮಾತನಾಡು ತ್ತಿರುವಾಗ ಏನು ನಡೆಯುತ್ತಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಮ್ಮೊಳಗೆ ಕೆಲವರಲ್ಲಾದರೂ ಇದ್ದೇ ಇರುತ್ತದೆ. ಅಂತಹ ಕುತೂಹಲವನ್ನು ತಣಿಸುವುದಕ್ಕಾಗಿಯಾದರೂ ನಾವು ನಮ್ಮ ಮಾತಿನ (ಕನ್ನಡದ) ಸೊಲ್ಲರಿಮೆಯೆಂತಹದು, ಎಂದರೆ, ನಾವು ಬಳಸುವ ಸೊಲ್ಲುಗಳ ಒಳರಚನೆ ಯೆಂತಹದು ಎಂಬುದನ್ನು ತಿಳಿದುಕೊಳ್ಳಲು ಹೊರಡಬೇಕಾಗುತ್ತದೆ. ಇಂತಹ ತಿಳಿವು ಮಾತನಾಡುವಾಗ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ಒಂದು ಕಿಟಿಕಿಯನ್ನೊದಗಿಸುತ್ತದೆ.
ಆದರೆ, ಇದಕ್ಕಿಂತ ಮುಕ್ಯವಾದ ಬೇರೆಯೂ ಹಲವು ಪ್ರಯೋಜನಗಳನ್ನು ನಾವು ಸೊಲ್ಲರಿಮೆಯ ತಿಳಿವಿನಿಂದ ಪಡೆಯಬಲ್ಲೆವು. ಇವುಗಳಲ್ಲಿ ಓದಲು ಬರೆಯಲು ಕಲಿಯುವುದು ಮತ್ತು ಬರಹವನ್ನು ಜಾಣ್ಮೆಯಿಂದ ಬಳಸಲು ಕಲಿಯುವುದು ಮುಕ್ಯವಾದವುಗಳು.
ಸಾಮಾನ್ಯವಾಗಿ, ಮಾತನಾಡುವುದಕ್ಕೆ, ಮತ್ತು ಇನ್ನೊಬ್ಬರು ಹೇಳಿದುದನ್ನು ಕೇಳಿ ತಿಳಿಯುವುದಕ್ಕೆ ನಮಗೆ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವು ಬೇಕಾಗುವುದಿಲ್ಲ. ಅರಿವಿಗೆ ಎಟಕದಂತಹ ತಿಳಿವೇ ಅದಕ್ಕೆ ಸಾಕಾಗುತ್ತದೆ. ಆದರೆ, ಚನ್ನಾಗಿ ಬರೆಯಲು ಕಲಿಯಬೇಕಿದ್ದಲ್ಲಿ, ಮತ್ತು ಇನ್ನೊಬ್ಬರು ಬರೆದುದನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕಿದ್ದಲ್ಲಿ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವೂ ಬೇಕಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಮಾತನ್ನು ಕಲಿತುಕೊಳ್ಳುವ ಹಾಗೆ ನಾವು ಬರಹವನ್ನು ಕಲಿತುಕೊಳ್ಳುವುದಿಲ್ಲ.
ಮಾತಿಗೂ ಬರಹಕ್ಕೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಮತ್ತು ಈ ವ್ಯತ್ಯಾಸಗಳು ಕಂಡುಬರಲು ಕಾರಣವೇನು ಎಂಬುದನ್ನು ಕೆಳಗೆ ತುಸು ವಿವರವಾಗಿ ಪರಿಶೀಲಿಸಲಾಗಿದೆ:1.2.1 ಮಾತು ಮತ್ತು ಬರಹ : ವ್ಯತ್ಯಾಸಗಳು ಮಾತಿನಲ್ಲಿ ಬಳಕೆಯಾಗುವ ನುಡಿಗಿಂತ ಬರಹದಲ್ಲಿ ಬಳಕೆಯಾಗುವ ನುಡಿ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(1) ಮಾತಿನಲ್ಲಿ ಪದಗಳನ್ನೆಲ್ಲ ಒಟ್ಟೊಟ್ಟಿಗೆ ಬಳಸುತ್ತೇವೆ. ಆದರೆ ಬರೆಯು ವಾಗ ಅವನ್ನು ನಡುವೆ ಜಾಗ ಬಿಟ್ಟು ಬೇರೆ ಬೇರಾಗಿ ಬರೆಯಬೇಕಾಗುತ್ತದೆ. ಇಲ್ಲವಾದರೆ ಬರೆದುದನ್ನು ಓದಲು ತುಂಬಾ ಕಶ್ಟವಾಗಬಲ್ಲುದು. ಮಾತಿನಲ್ಲಿ ಕೆಲವೊಮ್ಮೆ ಸೊಲ್ಲುಗಳೂ ಒಟ್ಟೊಟ್ಟಿಗೆ ಬರುತ್ತವೆ. ಆದರೆ ಬರೆಯುವಾಗ ಅವನ್ನು ಬೇರ್ಪಡಿಸಿ, ಅವುಗಳ ಕೊನೆ ಎಲ್ಲಿದೆ ಎಂಬುದನ್ನು ಕೊನೆ(.), ಕೇಳ್ವಿ (?) ಇಲ್ಲವೇ ಬೆರಗು (!) ಸನ್ನೆಗಳ ಮೂಲಕ ಸೂಚಿಸುತ್ತಿರಬೇಕಾಗುತ್ತದೆ. (2) ಮಾತನಾಡುವಾಗ ಬಳಕೆಯಾಗುವ ಸೊಲ್ಲುಗಳು ತುಂಡು ತುಂಡಾ ಗಿರುವುದೇ ಹೆಚ್ಚು. ಆದರೆ ಬರೆಯುವಾಗ ಅವೆಲ್ಲ ಇಡಿ ಇಡಿಯಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಾತಿನಲ್ಲಿ ಚಿಕ್ಕ ಚಿಕ್ಕ ಸೊಲ್ಲುಗಳಿರುವುದೇ ಹೆಚ್ಚು. ಉದ್ದದ ಸೊಲ್ಲುಗಳಿದ್ದರೂ ಅವು ಮತ್ತು, ಆದರೆ ಮೊದಲಾದ ಕೆಲವೇ ಕೆಲವು ಪದಗಳಿಂದ ಜೋಡಿಸಿದವುಗಳಾಗಿರುತ್ತವೆ.
ಇದಕ್ಕೆ ಬದಲು, ಬರಹದಲ್ಲಿ ಹೆಚ್ಚು ಉದ್ದದ ಮತ್ತು ಹೆಚ್ಚು ತೊಡಕಿನ ಸೊಲ್ಲುಗಳು ಕಾಣಿಸಿಕೊಳ್ಳುತ್ತವೆ. ಜೋಡಿಸಿದ ಸೊಲ್ಲುಗಳಿಗಿಂತಲೂ ಸೊಲ್ಲು ಗಳನ್ನು ಒಳಸೊಲ್ಲುಗಳಾಗಿ ಬಳಸಿರುವಂತಹ ಸಿಕ್ಕಲು ಸೊಲ್ಲುಗಳು ಬರಹದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಬರೆದುದನ್ನು ಓದುಗರು ತಿರುತಿರುಗಿ ಓದಬಲ್ಲರಾದ ಕಾರಣ, ಅಂತಹ ಸಿಕ್ಕಲು ಸೊಲ್ಲುಗಳಿದ್ದರೂ ಅವರಿಗೆ ತೊಂದರೆಯಾಗುವುದಿಲ್ಲ. (3) ಮಾತನಾಡುವಾಗ ಆಲೋಚಿಸುವುದನ್ನೂ ಆಡುವುದನ್ನೂ ಒಟ್ಟೊಟ್ಟಿಗೆ ಮಾಡುತ್ತಿರುತ್ತೇವೆ. ಹಾಗಾಗಿ, ಮಾತಿನಲ್ಲಿ ವಿಶಯಗಳು ಒಂದು ಕ್ರಮದಲ್ಲಿ ಬರುವುದಿಲ್ಲ. ಒಂದನ್ನು ತಿಳಿಸುತ್ತಿರುವಾಗ ನಡುನಡುವೆ ಬೇರೆ ವಿಶಯಗಳೂ ಸೇರಿಕೊಳ್ಳಬಹುದು. ಈ ಕಾರಣಕ್ಕಾಗಿ, ಕೆಲವೊಮ್ಮೆ ಹೇಳಿದುದನ್ನೇ ಮತ್ತೆ ಮತ್ತೆ ಹೇಳುತ್ತಿರಬೇಕಾಗುತ್ತದೆ.
ಆದರೆ, ಬರೆಯುವಾಗ ಎಲ್ಲಾ ವಿಶಯಗಳನ್ನೂ ಮೊದಲಿಗೆ ಆಲೋಚಿಸಿ ಮತ್ತು ವಿಮರ್ಶಿಸಿ, ಅನಂತರ ಬರೆಯುತ್ತೇವೆ. ತಿಳಿಸಬೇಕಾಗಿರುವ ವಿಶಯಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಇರಿಸುತ್ತೇವೆ, ಮತ್ತು ಆದಶ್ಟು ಮಟ್ಟಿಗೆ ಒಮ್ಮೆ ಬರೆದ ವಿಶಯ ಮತ್ತೊಮ್ಮೆ ಅನವಶ್ಯಕವಾಗಿ ಬಾರದ ಹಾಗೆ ನೋಡಿಕೊಳ್ಳು ತ್ತೇವೆ.
(4) ಮಾತನಾಡುವಾಗ ಪದಗಳನ್ನು ಮಾತ್ರವಲ್ಲದೆ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ, ಮಯ್ಯ ನಿಲುವು ಮೊದಲಾದುವನ್ನೂ ಬಳಸುತ್ತೇವೆ. ಹಲವು ಕಡೆಗಳಲ್ಲಿ ತಿಳಿಸಬೇಕಾಗಿರುವ ವಿಶಯಗಳಲ್ಲಿ ಹೆಚ್ಚಿನವನ್ನೂ ಈ ಕಯ್ಸನ್ನೆ-ಕಣ್ಣುಸನ್ನೆಗಳ ಮೂಲಕವೇನೇ ತಿಳಿಸುತ್ತಿರುತ್ತೇವೆ.
ಇದಕ್ಕೆ ಬದಲು, ಬರಹದಲ್ಲಿ ಸೊಲ್ಲುಗಳ ಇಟ್ಟಳ, ಬರಹದ ಗುರುತುಗಳು, ಕುರಳು(ಪಾರಾ)ಗಳು, ಕೋಶ್ಟಕಗಳು, ಗೆರೆತಿಟ್ಟಗಳು ಮೊದಲಾದವುಗಳನ್ನು ಬಳಸುತ್ತೇವೆ. ಸೊಲ್ಲುಗಳ ಮೂಲಕ ತಿಳಿಸಲಾಗದ ಹಲವು ಹುರುಳುಗಳನ್ನು ಇಂತಹ ಇಟ್ಟಳ ಮತ್ತು ಗುರುತುಗಳ ಮೂಲಕ ಸೂಚಿಸುತ್ತೇವೆ.
1.2.2 ವ್ಯತ್ಯಾಸಗಳಿಗೆ ಕಾರಣಗಳು
ಮಾತು ಮತ್ತು ಬರಹಗಳ ನಡುವೆ ಕಾಣಿಸಿಕೊಳ್ಳುವ ಈ ವ್ಯತ್ಯಾಸಗಳಿಗೆ ನಾಲ್ಕು ಮುಕ್ಯ ಕಾರಣಗಳಿವೆ:
(1) (2) (3)
(4)
ಅವೆರಡಕ್ಕೆ ತೀರಾ ಬೇರಾಗಿರುವ ಗುರಿಗಳಿರುತ್ತವೆ; ಅವೆರಡು ಬಳಸುವ ಒಯ್ಯುಗೆ(ಮಾದ್ಯಮ)ಗಳು ಬೇರಾಗಿರುತ್ತವೆ; ಮಾತನಾಡುವವರ ಎದುರಿಗೇನೇ ಕೇಳುಗರು ಇರುವ ಹಾಗೆ ಬರಹಗಾರರ ಎದುರಿಗೆ ಓದುಗರು ಇರುವುದಿಲ್ಲ; ಮಾತು ಕಲಿಯಲು ಹುಟ್ಟಿನಿಂದಲೇ ಸಿಗುವ ಅಳವು ಇರುವ ಹಾಗೆ ಓದು-ಬರಹಗಳನ್ನು ಕಲಿಯಲು ಇರುವುದಿಲ್ಲ.
(1) ಗುರಿ ಬೇರೆ: ನುಡಿಯ ಮೂಲಕ ತಲಪಬೇಕಾಗಿರುವ ವ್ಯಕ್ತಿ ನಮ್ಮ ಎದುರಿಗೇನೇ ಇರುವಾಗ ನಾವು ಮಾತನ್ನು ಬಳಸುತ್ತೇವಲ್ಲದೆ ಬರಹವನ್ನು ಬಳಸಲು ಹೋಗುವುದಿಲ್ಲ. ಆತ ಎದುರಿನಲ್ಲಿ ಇಲ್ಲದಿರುವಾಗ ಮಾತ್ರ ಬರಹ ವನ್ನು ಬಳಸುತ್ತೇವೆ.
ಹರಟೆ ಹೊಡೆಯುವುದು, ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ತಿಳಿಸುವುದು ಮೊದಲಾದುವಕ್ಕೆ ಮಾತನ್ನು ಬಳಸುತ್ತೇವೆ. ಇದಕ್ಕೆ ಬದಲು, ವಿಶಯಗಳನ್ನು ತಿಳಿಸುವುದು, ನಡವಳಿಕೆಗಳನ್ನು ಬರೆದಿಡುವುದು, ಮರೆತುಹೋಗದಂತೆ ಸಂಗತಿ ಗಳನ್ನು ಗುರುತಿಸಿಡುವುದು ಇಲ್ಲವೇ ಪಟ್ಟಿಮಾಡುವುದು, ಮೊದಲಾದುವಕ್ಕೆ ಬರಹವನ್ನು ಬಳಸುತ್ತೇವೆ.ಇತ್ತೀಚೆಗೆ ದೂರವಾಣಿ, ಉಲಿಯಚ್ಚು, ಮಿಂಚಂಚೆ ಮೊದಲಾದವುಗಳ ಬಳಕೆಯಿಂದಾಗಿ, ಮಾತು ಮತ್ತು ಬರಹಗಳು ಹತ್ತಿರ ಬರುತ್ತಿವೆ: ಇವು ಮಾತಿನ ಕೆಲಸವನ್ನು ಬರಹದ ಮೂಲಕ ಮತ್ತು ಬರಹದ ಕೆಲಸವನ್ನು ಮಾತಿನ ಮೂಲಕ ನಡೆಸಲು ಬರುವಂತೆ ಮಾಡಿವೆ, ಮತ್ತು ಇದರಿಂದಾಗಿ ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗ ತೊಡಗಿದೆ. ಹೀಗಿದ್ದರೂ, ಮಾತು ಮತ್ತು ಬರಹಗಳ ಮುಕ್ಯ ಗುರಿಗಳು ಬೇರಾಗಿಯೇ ಇದ್ದು, ಅವುಗಳಿಂದಾಗಿ ಮೂಡಿಬರುವ ವ್ಯತ್ಯಾಸಗಳು ಹಾಗೆಯೇ ಉಳಿದುಕೊಂಡಿವೆ.
(2) ಒಯ್ಯುಗೆ ಬೇರೆ: ಮಾತಿನಲ್ಲಿ ನಾವು ಉಲಿಗಳನ್ನು ಬಳಸುತ್ತೇವೆ;
ಆದರೆ ಬರಹದಲ್ಲಿ ಬರಿಗೆ(ಅಕ್ಶರ)ಗಳನ್ನು ಬಳಸುತ್ತೇವೆ.
ಉಲಿಗಳು ಅವನ್ನು ಆಡಿದ ಕೂಡಲೇ ಮಾಯವಾಗಿಬಿಡುತ್ತವೆ. ಹಾಗಾಗಿ, ಮಾತನ್ನೊಮ್ಮೆ ಆಡಿದೆವೆಂದರೆ ಅದನ್ನು ಮತ್ತೆ ಹಿಂದಕ್ಕೆ ಪಡೆದುಕೊಳ್ಳಲಾರೆವು. ಹೇಳುವುದು ಸರಿಯಾಗುತ್ತಿಲ್ಲವೆಂದು ನಮ್ಮ ಮನಸ್ಸಿಗೆ ಅನಿಸಿದರೆ, ಅದನ್ನು ನಡುವೆಯೇ ನಿಲ್ಲಿಸಿಬಿಡುತ್ತೇವೆ, ಮತ್ತು ಇನ್ನೊಮ್ಮೆ ಹೇಳಲು ಸುರುಮಾಡು ತ್ತೇವೆ. ಈ ಕಾರಣಕ್ಕಾಗಿ, ಮಾತಿನಲ್ಲಿ ಬರುವ ಸೊಲ್ಲುಗಳು ಸಾಮಾನ್ಯವಾಗಿ ತುಂಡು ತುಂಡಾಗಿರುತ್ತವೆ.
ಆದರೆ, ಕಾಗದದ ಮೇಲೆ ಮೂಡಿಸಿದ ಬರಿಗೆಗಳು ಮತ್ತು ಬೇರೆ ಗುರುತು ಗಳು ಉಲಿಗಳ ಹಾಗೆ ಕೂಡಲೇ ಅಳಿಸಿಹೋಗುವುದಿಲ್ಲ. ಹಾಗಾಗಿ, ಬರೆದುದನ್ನು ಸರಿಪಡಿಸಿಕೊಳ್ಳಲು ನಮಗೆ ಸಾಕಶ್ಟು ಸಮಯವಿರುತ್ತದೆ. ಅದನ್ನು ಓದುಗ ರೆದುರು ಇರಿಸುವ ಮೊದಲು ಹಲವು ಬಾರಿ ಓದಿ ನೋಡಿ, ಅದರಲ್ಲಿ ನಮಗೆ ಬೇಕಾಗಿರುವ ಎಲ್ಲಾ ರೀತಿಯ ಬದಲಾವಣೆಗಳನ್ನೂ ಮಾಡಿಕೊಳ್ಳಬಲ್ಲೆವು. ಉತ್ತಮ ಬರಹವೊಂದನ್ನು ರಚಿಸುವುದಕ್ಕಾಗಿ ವರ್ಶಗಟ್ಟಲೆ ಬೇಕಿದ್ದರೂ ದುಡಿಯ ಬಲ್ಲೆವು.
ಮಾತಿನಲ್ಲಿ ಬರುವ ಉಲಿಗಳು ಒಂದರ ಹಿಂದೊಂದು ಮಾತ್ರ ಬರಬಲ್ಲು ವಲ್ಲದೆ ಒಮ್ಮೆಗೇ ಬರಲಾರವು. ಆದರೆ, ಬರಹದ ಬರಿಗೆಗಳನ್ನು ಒಂದರ ಮುಂದೆ ಒಂದರಂತೆ ಮಾತ್ರವಲ್ಲದೆ, ಮೇಲೆ-ಕೆಳಗೂ ಜೋಡಿಸಬಲ್ಲೆವು. ಅವನ್ನು ಓದುವವರೂ ಹಲವು ಗುರುತುಗಳನ್ನು ಒಮ್ಮೆಗೇನೇ ಗಮನಿಸಬಲ್ಲರು. (3) ಓದುಗರು ಬರೆಯುವವರ ಎದುರಿಗಿರುವುದಿಲ್ಲ: ಸಾಮಾನ್ಯವಾಗಿ, ಮಾತನಾಡುವವರ ಎದುರಿಗೇನೇ ಅವರ ಕೇಳುಗರಿರುತ್ತಾರೆ; ಆದರೆ, ಬರೆಯುವವರ ಎದುರಿಗೆ ಅವರ ಓದುಗರಿರುವುದು ತುಂಬಾ ಅಪರೂಪ.
ಕೇಳುಗರು ಎದುರಿಗೇನೇ ಇರುವ ಕಾರಣ, ತಮ್ಮ ಮಾತನ್ನು ಅವರು ಮೆಚ್ಚು ತ್ತಿದ್ದಾರೋ, ಇಲ್ಲವೇ ಅದು ಅವರಿಗೆ ಬೇಸರ ತರುತ್ತಿದೆಯೋ ಎಂಬುದು ಆಡುಗರಿಗೆ ಮಾತನಾಡುತ್ತಿರುವ ಹಾಗೆಯೇ ಗೊತ್ತಾಗುತ್ತಿರುತ್ತದೆ. ಕೇಳುಗರೂ ತಮ್ಮ ಅನಿಸಿಕೆಗಳನ್ನು ನಡುನಡುವೆ ತಿಳಿಸುತ್ತಿರುತ್ತಾರೆ. ಹಾಗಾಗಿ, ಸನ್ನಿವೇಶಕ್ಕೆ ತಕ್ಕ ಹಾಗೆ ಆಡುಗರು ತಮ್ಮ ಮಾತನ್ನು ಬದಲಾಯಿಸುತ್ತಾ ಹೋಗಬಲ್ಲರು. ತಾವು ಹೇಳಿದ್ದು ತಮ್ಮ ಕೇಳುಗರಿಗೆ ಸರಿಯಾಗಿ ಗೊತ್ತಾಗುತ್ತಿಲ್ಲವೆಂದು ಅನಿಸಿದರೆ, ಅದನ್ನು ಬೇರೆ ಬಗೆಯಲ್ಲಿ ಹೇಳುವ ಮೂಲಕ ಗೊತ್ತಾಗುವ ಹಾಗೆಯೂ ಅವರು ಮಾಡಬಲ್ಲರು.
ಆದರೆ, ಬರೆಯುವವರಿಗೆ ಓದುಗರ ಅನಿಸಿಕೆ ಏನಿರಬಹುದೆಂಬುದು ಕೂಡಲೇ ಗೊತ್ತಾಗುವುದಿಲ್ಲ. ಅದನ್ನವರು ಊಹಿಸಿಕೊಂಡು, ತಮ್ಮ ಬರಹ ವನ್ನು ಮುಂದುವರಿಸಬೇಕಾಗುತ್ತದೆ. ಯಾವ ರೀತಿಯಲ್ಲಿ ಬರೆದರೆ ಓದುಗರ ಕುತೂಹಲ ಉಳಿದೀತು ಎಂಬುದನ್ನೂ ಅವರು ತಾವೇ ಕಲ್ಪಿಸಿಕೊಳ್ಳ ಬೇಕಾಗುತ್ತದೆ. ಈ ಕಾರಣಕ್ಕಾಗಿ, ಬರಹದಲ್ಲಿ ಬರುವ ಸೊಲ್ಲುಗಳು ಮಾತಿನಲ್ಲಿ ಬರುವ ಸೊಲ್ಲುಗಳಿಗಿಂತ ಹಲವು ಬಗೆಯಲ್ಲಿ ಬೇರಾಗಿರಬೇಕಾಗುತ್ತದೆ.
ಕೇಳುಗರು ಎದುರಿಗೇನೇ ಇರುವ ಕಾರಣ, ಮಾತಿನೊಂದಿಗೆ ಕಣ್ಣುಸನ್ನೆ, ಕಯ್ಸನ್ನೆ ಮೊದಲಾದುವನ್ನೂ ಬಳಸಬಹುದು. ಎದುರಿಗೇನೇ ಇರುವ ವ್ಯಕ್ತಿ, ವಸ್ತು ಮೊದಲಾದುವನ್ನೂ ಮಾತಿನಲ್ಲಿ ಬಳಸಿಕೊಳ್ಳಬಹುದು. ಆದರೆ, ಬರಹಕ್ಕೆ ಇಂತಹದು ಯಾವುದೂ ನೆರವಿಗೆ ಬರುವುದಿಲ್ಲ. ತಿಳಿಸಬೇಕಾದುದನ್ನೆಲ್ಲ ಕಾಗದದ ಮೇಲೆ ಮೂಡುವ ಸೊಲ್ಲುಗಳ ಮೂಲಕವೇನೇ ತಿಳಿಸಬೇಕಾಗುತ್ತದೆ. (4) ಹುಟ್ಟಿನಿಂದಲೇ ಸಿಗುವ ಅಳವಿಲ್ಲ: ಮಾತು ಕಲಿಯಲು ಬೇಕಾಗುವ ಅಳವನ್ನು ನಾವು ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದೇವೆ. ಆದರೆ, ಬರಹ ಕಲಿಯಲು ಬೇಕಾಗುವ ಅಳವನ್ನು ನಾವು ಆ ರೀತಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿಲ್ಲ.
ಎಲ್ಲಾ ಮಕ್ಕಳೂ ಮಾತನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆದು ಕೊಳ್ಳುತ್ತಾರೆ. ಆರೋಗ್ಯ ಸರಿಯಿರುವ ಯಾವ ಮಗುವೂ ಮಾತು ಕಲಿಯ ದಿರುವುದಿಲ್ಲ. ಆದರೆ, ಓದುವ ಮತ್ತು ಬರೆಯುವ ಕೆಲಸವನ್ನು ಮಕ್ಕಳಿಗೆ ಯಾರಾದರೂ ಕಲಿಸಿಕೊಡಬೇಕಾಗುತ್ತದೆ. ಈಜುವುದು, ಸಯ್ಕಲ್ ತುಳಿ ಯುವುದು, ಕಾರು ಬಿಡುವುದು ಮೊದಲಾದ ಬೇರೆ ಹಲವಾರು ಚಳಕ (ಕವ್ಶಲ್ಯ)ಗಳ ಹಾಗೆ, ಓದುವುದು ಮತ್ತು ಬರೆಯುವುದೂ ಒಂದು ಚಳಕ ವಾಗಿದ್ದು, ಪ್ರಯತ್ನಪಟ್ಟು ಕಲಿತಲ್ಲಿ ಮಾತ್ರ ಅದು ದಕ್ಕುತ್ತದೆ.ಹೀಗೆ ಪ್ರಯತ್ನಪಟ್ಟು ಕಲಿಯಬೇಕಾಗಿರುವ ಎಲ್ಲಾ ಚಳಕಗಳ ಕಲಿಕೆಗಳಿಗೂ ಅವುಗಳ ಒಳಗುಟ್ಟಿನ ಅರಿವು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಈಜಿನ ಒಳಗುಟ್ಟನ್ನರಿತಿರುವವರು ಉಳಿದವರಿಗಿಂತ ಹೆಚ್ಚು ಚನ್ನಾಗಿ ಮತ್ತು ಹೆಚ್ಚು ಬೇಗನೆ ಈಜಲು ಕಲಿಯಬಲ್ಲರು. ಬರಹದ ಕಲಿಕೆಯೂ ಅಂತಹದೇ. ಅದರ ಒಳಗುಟ್ಟನ್ನು, ಎಂದರೆ ಅರಿವಿಗೆ ಎಟಕುವ ಸೊಲ್ಲರಿಮೆಯನ್ನು, ತಿಳಿದವರಿಗೆ ಅದನ್ನು ಹೆಚ್ಚು ಸುಳುವಾಗಿ, ಹೆಚ್ಚು ಚನ್ನಾಗಿ, ಮತ್ತು ಹೆಚ್ಚು ಬೇಗನೆ ಕಲಿಯಲು ಬರುತ್ತದೆ, ಮತ್ತು ಹೆಚ್ಚು ಚನ್ನಾಗಿ ಬಳಸಲು ಬರುತ್ತದೆ.
1.3 ಈ ಪುಸ್ತಕದ ಇಟ್ಟಳ
ಕನ್ನಡದ ಸೊಲ್ಲರಿಮೆ (ವ್ಯಾಕರಣ) ಯಾಕೆ ಬೇಕು ಎಂಬುದನ್ನು ಈ ಪುಸ್ತಕದ ಮುಂದಿನ ಹತ್ತು ಪಸುಗೆ(ಅದ್ಯಾಯ)ಗಳಲ್ಲಿ ವಿವರಿಸಲಾಗಿದೆ. ಮೇಲೆ ಸೂಚಿಸಿದ ಹಾಗೆ, ಅದರ ಪ್ರಯೋಜನ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಗಳಲ್ಲಿ ತುಂಬಾ ಹೆಚ್ಚಿನದಾಗಿರುವ ಕಾರಣ, ಈ ಪಸುಗೆಗಳಲ್ಲಿ ಹೆಚ್ಚಿನವೂ ಆ ಎರಡು ವಿಶಯಗಳ ಕುರಿತಾಗೆಯೇ ಇವೆ.
ಓದು-ಬರಹದ ಕಲಿಕೆಯಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದಿನ ನಾಲ್ಕು ಪಸುಗೆಗಳಲ್ಲಿ ವಿವರಿಸಲಾಗಿದೆ. ಚಿಕ್ಕ ಮಕ್ಕಳಿಗೆ ಓದಲು-ಬರೆಯಲು ಕಲಿಸುವುದಕ್ಕೂ ದೊಡ್ಡವರಿಗೆ ಕಲಿಸುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಎಂತಹವು, ಅವರ ಕಲಿಕೆಯಲ್ಲಿ ಸೊಲ್ಲರಿಮೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಎರಡನೇ ಪಸುಗೆ ಯಲ್ಲಿ ವಿವರಿಸಲಾಗಿದೆ.
ಬರೆಯುವುದರಲ್ಲಿ ಹೆಚ್ಚಿನ ಜಾಣ್ಮೆಯನ್ನು ಪಡೆಯುವುದರಲ್ಲೂ ಸೊಲ್ಲರಿಮೆಯ ತಿಳಿವು ನೆರವಾಗುತ್ತದೆ. ಸಾಮಾನ್ಯವಾಗಿ ಮಾತನಾಡು ತ್ತಿರುವಾಗ ಮಾತಿನ ಹಿಂದಿರುವ ಕಟ್ಟಲೆಗಳ ಕುರಿತು ಆಲೋಚಿಸಲು ನಮಗೆ ಸಮಯವೇ ಸಿಗುವುದಿಲ್ಲ. ಮಾತು ಬೇಗನೆ ನಡೆಯುತ್ತಿರುವುದು ಮತ್ತು ಆಡಿದೊಡನೆಯೇ ಅದು ಇಲ್ಲವಾಗುತ್ತಿರುವುದು ಇದಕ್ಕೆ ಕಾರಣ.
ಆದರೆ, ಬರೆಯುವ ಕೆಲಸವನ್ನು ನಡೆಸುತ್ತಿರುವಾಗ ಅದಕ್ಕಾಗಿ ನಾವು ಎಶ್ಟು ಹೊತ್ತನ್ನು ಬೇಕಿದ್ದರೂ ಬಳಸಿಕೊಳ್ಳಬಲ್ಲೆವು. ಪದಗಳನ್ನು ಮತ್ತು ಸೊಲ್ಲಿನ ಇಟ್ಟಳಗಳನ್ನು ಬರೆಯುವ ಸಮಯದಲ್ಲೇನೇ ಆರಿಸಿಕೊಂಡು ಮುಂದುವರಿಯ ಬಲ್ಲೆವು, ಮತ್ತು ಬರೆದ ಬರಹ ಮಾತಿನ ಹಾಗೆ ಅಳಿದು ಹೋಗದೆ ನಮ್ಮ ಎದುರಿಗೇನೇ ಉಳಿಯುವ ಕಾರಣ, ಅದನ್ನು ತಿರುತಿರುಗಿ ಓದಿನೋಡಿ, ಅದರಲ್ಲಿ
ಮಾರ್ಪಾಡುಗಳನ್ನೂ ಮಾಡಿಕೊಳ್ಳಬಲ್ಲೆವು. ಹಾಗಾಗಿ, ಮಾತನಾಡುವಾಗ ನಮಗೆ ಬೇಕಾಗದಿರುವ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವು ಬರಹದ ಕೆಲಸವನ್ನು ಬಳಸುವಲ್ಲಿ ನಮ್ಮ ನೆರವಿಗೆ ಬರುತ್ತದೆ.
ಬರಹಗಳಲ್ಲಿ ತಡೆ (,), ಅರೆಕೊನೆ (;), ಓರೆಗೆರೆ (/), ಕೊಗೆತ (:) ಮೊದಲಾದ ಹಲವು ಬಗೆಯ ಗುರುತುಗಳನ್ನು ಬಳಸಬೇಕಾಗುತ್ತದೆ. ಬರೆದು ದನ್ನು ಸೊಲ್ಲುಗಳಾಗಿ, ಕುರಳು(ಪಾರಾ)ಗಳಾಗಿ ಮತ್ತು ಪಸುಗೆ(ಅದ್ಯಾಯ)ಗಳಾಗಿ ವಿಂಗಡಿಸಿಕೊಳ್ಳಬೇಕಾಗುತ್ತದೆ. ಇವುಗಳನ್ನು ಸರಿಯಾಗಿ ಬಳಸಿದಲ್ಲಿ ಬರಹ ಕ್ಕಿರುವ ಹಲವು ಕೊರತೆಗಳು ಇಲ್ಲವಾಗುತ್ತವೆ. ಆದರೆ, ಈ ಗುರುತುಗಳನ್ನು ಸರಿಯಾಗಿ, ಎಂದರೆ ಓದುಗರಿಗೆ ನೆರವಾಗುವಂತೆ, ಬಳಸಬೇಕಿದ್ದಲ್ಲಿ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಈ ಎಲ್ಲಾ ವಿಶಯಗಳನ್ನೂ ಮೂರನೇ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
ಸಾಮಾನ್ಯ ಬರಹಗಳಿಗೂ ಅರಿಮೆಯ (ವಿಜ್ನಾನದ) ಬರಹಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಅರಿಮೆಯ ಬರಹಗಳಲ್ಲಿ ವಿಶಯವನ್ನು ಹೆಚ್ಚು ಅಡಕ ವಾಗಿ ಮತ್ತು ಕಟ್ಟುನಿಟ್ಟಾಗಿ ತಿಳಿಸಬೇಕಾಗುತ್ತದೆ. ಹಾಗಾಗಿ, ಅದರಲ್ಲಿ ಬರುವ ಸೊಲ್ಲುಗಳ ಇಟ್ಟಳಗಳು ಸಾಮಾನ್ಯ ಬರಹಗಳಲ್ಲಿ ಬರುವವುಗಳಿಂದ ಬೇರಾ ಗಿರುತ್ತವೆ. ಇಂತಹ ಬರಹಗಳು ಓದುಗರಿಗೆ ತೊಡಕಿನವಾಗಿ ಕಾಣಿಸಲು ಇದು ಒಂದು ಕಾರಣ.
ಅರಿಮೆಯ ಬರಹಗಳನ್ನು ಬರೆಯುವವರಿಗೆ ಮತ್ತು ಅರಿಮೆಯ (ಪಾರಿಬಾಶಿಕ) ಪದಗಳನ್ನು ಹೊಸದಾಗಿ ಉಂಟುಮಾಡಿಕೊಡುವವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ; ಇಲ್ಲವಾದರೆ ಅವರು ಬರೆದ ಅರಿಮೆಯ ಬರಹಗಳು ಇನ್ನಶ್ಟು ತೊಡಕಿನವಾಗಬಲ್ಲುವು, ಮತ್ತು ಅವರು ಉಂಟು ಮಾಡುವ ಅರಿಮೆಯ ಪದಗಳು ಅವನ್ನು ಬಳಸುವವರಲ್ಲಿ ಗೊಂದಲವನ್ನೂ ಉಂಟುಮಾಡಬಲ್ಲುವು. ಕನ್ನಡದ ಅರಿಮೆಯ ಬರಹಗಳು ಈ ಎರಡು ಕಾರಣ ಗಳಿಂದಾಗಿ ಹೇಗೆ ತುಂಬಾ ತೊಡಕಿನವಾಗಿವೆ ಎಂಬುದನ್ನು ನಾಲ್ಕನೇ ಪಸುಗೆ ಯಲ್ಲಿ ವಿವರಿಸಲಾಗಿದೆ.
ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳು ಬೇರೆಯೇ ಒಂದು ಕಾರಣಕ್ಕಾಗಿ ಇತರ ಬರಹಗಳಿಂದ ಬೇರಾಗಿವೆ: ಸಾಮಾನ್ಯ ಬರಹಗಳಲ್ಲಿ ಬಳಕೆಯಾಗುವ ಕಟ್ಟಳೆಗಳಲ್ಲಿ ಕೆಲವನ್ನು ಮುರಿಯುವ ಮೂಲಕ, ಮತ್ತು ಬೇರೆ ಕೆಲವನ್ನು ಹೊಸ ಬಳಕೆಗಳಲ್ಲಿ ತೊಡಗಿಸುವ ಮೂಲಕ, ಈ ನಲ್ಬರಹಗಳು ಓದುಗನ ಗಮನವನ್ನು ಬರಹದ ಹುರುಳಿನಿಂದ ಬರಹದ ಕಡೆಗೆ ಸೆಳೆಯಬೇಕಾಗಿದೆ. ಈ ಕೆಲಸವನ್ನು ಜಾಣ್ಮೆಯಿಂದ ನಡೆಸುವಲ್ಲಿ ಹೇಗೆ ಸೊಲ್ಲರಿಮೆಯ ತಿಳಿವು ನೆರವಿಗೆ ಬರಬಲ್ಲುದು ಎಂಬುದನ್ನು ಅಯ್ದನೆಯ ಪಸುಗೆಯಲ್ಲಿ ವಿವರಿಸಲಾಗಿದೆ.
ಬರಹಗಳಲ್ಲಿ ಬಂದಿರುವ ಸೊಲ್ಲುಗಳು ಇಪ್ಪುರುಳಿನವಾಗಿ (ಎಂದರೆ ಎರಡು ಇಲ್ಲವೇ ಹೆಚ್ಚು ಹುರುಳಿನವಾಗಿ) ಕಾಣಿಸಿಕೊಳ್ಳಲು ಎರಡು ಕಾರಣಗಳಿವೆ: ಅವುಗಳಲ್ಲಿ ಬರುವ ಪದವೊಂದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ಒಂದು ಕಾರಣ, ಮತ್ತು ಅವಕ್ಕೆ ಒಂದಕ್ಕಿಂತ ಹೆಚ್ಚು ಇಟ್ಟಳಗಳಿರುವುದು ಇನ್ನೊಂದು ಕಾರಣ. ಇಂತಹ ಸೊಲ್ಲುಗಳು ಕೆಲವರಿಗೆ ತೊಡಕಾಗಿರುತ್ತವೆ, ಮತ್ತು ಇನ್ನು ಕೆಲವರಿಗೆ ಒತ್ತಾಸೆಯಾಗಿರುತ್ತವೆ. ತೊಡಕಾಗಿದ್ದಲ್ಲಿ ಅವನ್ನು ಇಲ್ಲವಾಗಿಸುವುದು ಇಲ್ಲವೇ ಹತೋಟಿಯಲ್ಲಿರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ, ಮತ್ತು ಒತ್ತಾಸೆಯಾಗಿದ್ದಲ್ಲಿ ಅವನ್ನು ತಮ್ಮ ಬರಹಗಳಲ್ಲಿ ಜಾಣ್ಮೆಯಿಂದ ಬಳಸುವುದು ಹೇಗೆ ಎಂಬುದನ್ನು ತಿಳಿಯ ಬೇಕಾಗುತ್ತದೆ. ಈ ಎರಡು ಬಗೆಯ ಕೆಲಸಗಳಿಗೂ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗಬಲ್ಲುದು ಎಂಬುದನ್ನು ಆರನೇ ಪಸುಗೆಯಲ್ಲಿ ವಿವರಿಸಲಾಗಿದೆ. ಇವತ್ತು ಬೇರೆ ಬೇರೆ ದೇಶಗಳ ನಡುವೆ ಪತ್ತುಗೆ(ಸಂಬಂದ)ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ, ಮತ್ತು ಬೇರೆ ಬೇರೆ ನುಡಿಗಳನ್ನಾಡುವ ಜನರ ನಡುವೆಯೂ ಪತ್ತುಗೆಗಳು ಹೆಚ್ಚುತ್ತಿವೆ. ಈ ಕಾರಣಕ್ಕಾಗಿ, ಇವತ್ತು ಹಲವು ಮಂದಿ ತಮ್ಮ ತಾಯ್ನುಡಿಯನ್ನು ಮಾತ್ರವಲ್ಲದೆ ಬೇರೆ ನುಡಿಗಳನ್ನೂ ಕಲಿಯಬೇಕಾಗುತ್ತಿದೆ. ಇಂತಹ ಕಲಿಕೆಯನ್ನು ಬೇಗನೆ ಮತ್ತು ಚನ್ನಾಗಿ ನಡೆಸುವಲ್ಲಿ ಈ ನುಡಿಗಳ ಸೊಲ್ಲರಿಮೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಏಳನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಇವತ್ತು ಇಂಗ್ಲಿಶ್ನಂತಹ ನುಡಿಗಳಿಂದ ಬೇರೆ ಹಲವಾರು ನುಡಿಗಳಿಗೆ ಬರಹಗಳನ್ನು ನುಡಿಮಾರುವ (ಅನುವಾದಿಸುವ) ಕೆಲಸವೂ ಎಡೆಬಿಡದೆ ನಡೆಯುತ್ತಿರಬೇಕಾಗಿದೆ. ಯಾಕೆಂದರೆ, ಇವತ್ತು ಹೆಚ್ಚು ಹೆಚ್ಚು ಮಾಹಿತಿಗಳನ್ನು ಈ ಕೆಲವು ನುಡಿಗಳಲ್ಲಿ ಮಾತ್ರವೇ ಕಲೆಹಾಕಲಾಗುತ್ತಿದೆ. ನುಡಿಮಾರುವ ಕೆಲಸವನ್ನು ಎಣ್ಣುಕ(ಕಂಪ್ಯೂಟರ್)ಗಳ ಮೂಲಕ ನಡೆಸುವ ಹಾಗಾದಲ್ಲಿ, ಈ ನುಡಿಗಳಲ್ಲಿರುವ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರು ಸುಳುವಾಗಿ ಪಡೆಯುವಂತಾಗಬಲ್ಲುದು. ಆದರೆ ಎಣ್ಣುಕಗಳಿಗೆ ಈ ಕಸುವು ಸಿಗುವ ಹಾಗೆ ಮಾಡಬೇಕಿದ್ದಲ್ಲಿ, ಅದಕ್ಕೆ ಹಲವಾರು ನುಡಿಗಳ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಇದನ್ನು ಎಂಟನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಒಂದು ನುಡಿಯನ್ನು ಹೊಸ ಹೊಸ ಸನ್ನಿವೇಶಗಳಲ್ಲಿ ಬಳಸ ಬೇಕೆಂದಿರುವವರು ಆ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಹಾಗೆ ಅದರಲ್ಲಿ ಹಲವಾರು ಮಾರ್ಪಾಡುಗಳನ್ನು ನಡೆಸಬೇಕಾಗುತ್ತದೆ. ಎತ್ತುಗೆಗಾಗಿ, ಅದನ್ನು ಬರಹಕ್ಕೆ ಇಳಿಸಿಲ್ಲವಾದಲ್ಲಿ ಅದಕ್ಕೊಂದು ಹೊಸ ಲಿಪಿಯನ್ನು ಒದಗಿಸಿ ಕೊಡ ಬೇಕಾಗುತ್ತದೆ, ಮತ್ತು ಅದರಲ್ಲಿ ಸಾಕಶ್ಟು ಪದಗಳು ಇಲ್ಲವಾದಲ್ಲಿ ಹಲವು ಹೊಸ ಪದಗಳನ್ನು ಅದರಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ಇಂತಹ ಮಾರ್ಪಾಡುಗಳನ್ನು ನುಡಿಹಮ್ಮುಗೆಗಳ ಮೂಲಕ ಹೆಚ್ಚು ವೇಗವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಆದರೆ, ಈ ರೀತಿ ನುಡಿಹಮ್ಮುಗೆಗಳನ್ನು ಹಮ್ಮಿಕೊಳ್ಳುವವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗು ತ್ತದೆ. ಇಲ್ಲವಾದರೆ, ಅವರು ಹಮ್ಮಿಕೊಂಡ ಮಾರ್ಪಾಡುಗಳು ನುಡಿಯನ್ನು ಬಳಸುವವರಿಗೆ ತುಂಬಾ ತೊಂದರೆ ಕೊಡಬಲ್ಲುವು. ಈ ವಿಶಯವನ್ನು ಒಂಬತ್ತನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಕೆಲವು ಮಕ್ಕಳಿಗೆ ಹುಟ್ಟಿನ ತೊಂದರೆಯಿಂದಾಗಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ದೊಡ್ಡವರಲ್ಲೂ ಕೆಲವರು ಮಿದುಳಿಗೆ ಪೆಟ್ಟಾದುದರಿಂದಾಗಿ ತಮ್ಮ ಮಾತನ್ನು ತುಸುವೋ ಹೆಚ್ಚೋ ಕಳೆದುಕೊಂಡಿರುತ್ತಾರೆ. ಇಂತಹ ಮಾತಿನ ತೊಂದರೆಗಳನ್ನು ಬಗೆಹರಿಸುವಲ್ಲಿ ಇಲ್ಲವೇ ಹತೋಟಿಗೆ ತಂದು ಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗಬಲ್ಲುದು ಎಂಬುದನ್ನು ಹತ್ತನೇ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
ಇಲ್ಲಿ ಮುಕ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ, ಸೊಲ್ಲರಿಮೆ ಎಂಬುದು ಒಂದು ವಿಚಿತ್ರವಾದ ವಿಶಯವೇನಲ್ಲ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಎಗ್ಗಿಲ್ಲದೆ ಬಳಸುವ ಮಾತಿನ ಹಿಂದಿರುವ ಕಟ್ಟಲೆಗಳೆಂತಹವು ಎಂಬುದನ್ನಶ್ಟೇ ಅದು ತಿಳಿಸುತ್ತದೆ. ಈ ಕಟ್ಟಲೆಗಳು ನಮ್ಮ ನುಡಿಯ ಬೇರೆ ಬೇರೆ ಬಳಕೆಗಳಲ್ಲಿ ಸ್ವಲ್ಪ ಮಟ್ಟಿಗೆ ಬೇರೆ ಬೇರಾಗಿಯೂ ಇರುತ್ತದೆ. ಹಾಗಾಗಿ, ಅಂತಹ ಬಳಕೆಗಳನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಈ ಕಟ್ಟಲೆಗಳ ಅರಿವು ನೆರವನ್ನೀಯಬಲ್ಲುದು. ಇದು ಹೇಗೆ ಎಂಬುದನ್ನು ತಿಳಿಸುವುದೇ ಈ ಪುಸ್ತಕದ ಮುಕ್ಯ ಗುರಿಯಾಗಿದೆ.