Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11


ಕನ್ನಡ ವ್ಯಾಕರಣ ಯಾಕೆ ಬೇಕು?

ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ

← ಸೂಚಿ ಇಂಗ್ಲಿಶ್ ವಿಶ್ಲೇಷಣೆ: en Eke: eke

ಪರಿವಿಡಿ


ಕನ್ನಡ ವ್ಯಾಕರಣ ಯಾಕೆ ಬೇಕು?

ಹೊಸಬರಹ ಹೊಸಬರಹ (ಈ ಪುಸ್ತಕ ಹೊಸಬರಹ ಹೊಸಬರಹದಲ್ಲಿದೆ) ಹೊಸಬರಹ

ಡಿ. ಎನ್. ಶಂಕರ ಬಟ್

ಬಾಶಾಪ್ರಕಾಶನ, ಹೆಗ್ಗೋಡು, ಸಾಗರ

KANNADA VYAKARANA YAKE BEKU (Why do we need Kannada grammar?) by D. N. Shankara Bhat, Ninasam, Heggodu, Sagara 577 417. Phone:

ಮೊದಲನೆಯ ಅಚ್ಚು: 2009

ಬಿ : ಬರಹಗಾರ

ಈ ಪುಸ್ತಕವನ್ನು ಅಚ್ಚು ಹಾಕಿಸುವಲ್ಲಿ ಬೆಂಗಳೂರಿನ ಸಿಸ್ಕೋ ಸಂಬ್ರಮದ ಗೆಳೆಯರು ಹಣದ ನೆರವು ನೀಡಿದ್ದಾರೆ.

ಹೊರತರಿಕೆ ಬಾಶಾಪ್ರಕಾಶನ, ಹೆಗ್ಗೋಡು, ಸಾಗರ 577 417

ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001

ಶ್ರೀಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಅಡ್ಡರಸ್ತೆ, ಜಯನಗರ ಮಯ್ಸೂರು 570 014

1 ಮುನ್ನೋಟ 1.1 ವ್ಯಾಕರಣ ಯಾರಿಗೆ ಬೇಕು? 1.1.1 ಸೊಲ್ಲು ಮತ್ತು ಸೊಲ್ಲರಿಮೆ 1.1.2 ಅರಿವಿಗೆ ಎಟಕದ ಕಟ್ಟಲೆಗಳು 1.2 ಈ ಕಟ್ಟಲೆಗಳನ್ನು ಯಾಕೆ ತಿಳಿಯಬೇಕು? 1.2.1 ಮಾತು ಮತ್ತು ಬರಹ : ವ್ಯತ್ಯಾಸಗಳು 1.2.2 ವ್ಯತ್ಯಾಸಗಳಿಗೆ ಕಾರಣಗಳು 1.3 ಪುಸ್ತಕದ ಇಟ್ಟಳ

2 ಓದು-ಬರಹದ ಕಲಿಕೆ 2.1 ಶಾಲೆಯಲ್ಲಿ ಕನ್ನಡದ ಕಲಿಕೆ 2.2 ಓದು-ಬರಹದ ಕಲಿಕೆಗೆ ಸೊಲ್ಲರಿಮೆಯ ನೆರವು 2.2.1 ಎಲ್ಲರ ಕನ್ನಡ ಮತ್ತು ಆಡುಗನ್ನಡ 2.2.2 ಆಡುಗನ್ನಡದ ನೆರವು 2.2.3 ಹೆಚ್ಚಿನ ಉಲಿಗಳ ಕಲಿಕೆ 2.3 ಓದಲು ಕಲಿಯುವುದು 2.3.1 ಉಲಿಗಳಿಂದ ಪದಗಳು 2.3.2 ಉಲಿ ಮತ್ತು ಬರಿಗೆಗಳ ನಡುವಿನ ಪತ್ತುಗೆ 2.3.3 ಬರಿಗೆಗಳ ಕಲಿಕೆ 2.3.4 ಮಿದುಳಿನಲ್ಲಿ ಓದುವ ಕೆಲಸ 2.3.5 ಕನ್ನಡ ಬರಹದ ಬರಿಗೆಗಳ ಸಮಸ್ಯೆ 2.3.6 ಸಲೀಸಾದ ಓದು 2.3.7 ಪದಗಳ ಕಲಿಕೆ 2.3.8 ಓದಿನಿಂದ ತಿಳುವಳಿಕೆಯನ್ನು ಪಡೆಯುವುದು 2.4 ಬರೆಯಲು ಕಲಿಯುವುದು

2.4.1 ಬರವಣಿಗೆಯ ಚಳಕಗಳು 2.4.2 ಗಟ್ಟಿಯಾಗಿ ಬರೆಯುವುದು 2.4.3 ಬರೆಯುವುದು ಮತ್ತು ಸರಿಪಡಿಸುವುದು 2.4.4 ಬರಹದಲ್ಲಿ ಆಸಕ್ತಿ 2.5 ದೊಡ್ಡವರಿಗೆ ಓದಲು-ಬರೆಯಲು ಕಲಿಸುವುದು 2.6 ತಿರುಳು

3 ಬರೆಯುವುದರಲ್ಲಿ ಹೆಚ್ಚಿನ ಕಲಿಕೆ 3.1 ಮುನ್ನೋಟ 3.1.1 ಬರಹಗಾರರಲ್ಲಿ ಎರಡು ಬಗೆ 3.1.2 ಬರಹದ ಒಳಗುಟ್ಟು 3.2 ಬರಹಗಾರರು ಮತ್ತು ಓದುಗರು 3.2.1 ಸೊಲ್ಲುಗಳ ನೆಲೆ ಮತ್ತು ತಿಳಿವು 3.2.2 ಇಟ್ಟಳಗಳ ಆಯ್ಕೆ 3.2.3 ಸರಿತೆರಪಿನ ಇಟ್ಟಳಗಳು 3.2.4 ತೋರುಗ ಪದಗಳ ಬಳಕೆ 3.2.5 ಹೊದ್ದಿಕೆಯ ಗುರುತುಗಳು 3.3 ಬರಹದ ಗುರಿ 3.4 ಬರಹದ ಮರುನೋಟ 3.5 ತಿದ್ದಿ ಸರಿಪಡಿಸುವುದು 3.5.1 ಬರಹದ ಗುರುತುಗಳ ಬಳಕೆ 3.5.2 ಕುರಳುಗಳ ಇಟ್ಟಳ 3.5.3 ಸೊಲ್ಲುಗಳ ಕೊನೆಯ ಗುರುತುಗಳು 3.5.4 ಸೊಲ್ಲುಗಳ ನಡುವಿನ ಗುರುತುಗಳು 3.6 ತಿರುಳು

4 ಅರಿಮೆಯ ಬರಹಗಳು 4.1 ಮುನ್ನೋಟ 4.2 ಸರಿಯಾಗಿ ತಿಳಿಸಿ ಹೇಳುವ ಬಗೆ 4.3 ಅರಿಮೆಯ ಪದಗಳ ಬಳಕೆ 4.3.1 ಕನ್ನಡದ ಅರಿಮೆಯ ಪದಗಳು

4.3.2 ಸೊಲ್ಲರಿಮೆಯ ತಿಳಿವು 4.3.3 ಕನ್ನಡ ಪದಗಳ ಬಳಕೆ 4.4 ಸೊಲ್ಲರಿಮೆಯ ಮಾರ್ಪುರುಳು 4.4.1 ಎರಡು ಬಗೆಯ ಮಾರ್ಪುರುಳುಗಳು 4.4.2 ಕೆಲವು ಪ್ರಯೋಜನಗಳು 4.4.3 ತೊಡಕೆನಿಸಲು ಕಾರಣ 4.4.4 ಕನ್ನಡದಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು 4.4.5 ಕನ್ನಡದ ಕಸುವು 4.5 ಸಿಕ್ಕಲು ಸೊಲ್ಲುಗಳು 4.6 ಬರಹದ ಇಟ್ಟಳ 4.7 ಮಂದಿ ಮೆಚ್ಚುವಂತೆ ಬರೆಯುವುದು 4.8 ತಿರುಳು

5 ನಲ್ಬರಹಗಳು ಮತ್ತು ಸೊಲ್ಲರಿಮೆ 5.1 ಮುನ್ನೋಟ 5.2 ನಲ್ಬರಹಗಳಲ್ಲಿ ಸೊಲ್ಲುಗಳ ಬಳಕೆ 5.2.1 ನಲ್ಬರಹಗಳು ಮತ್ತು ಉಳಿದ ಬರಹಗಳು 5.2.2 ಮುಂಜರಿಸುವುದು 5.2.3 ಸೊಲ್ಲರಿಮೆ ಮತ್ತು ನುಡಿಯೊಡ್ಡವ 5.3 ನಾಟಕದ ಮಾತು 5.3.1 ಸೂಳುನುಡಿ ಮತ್ತು ನಡುನುಡಿ 5.3.2 ನಡುನುಡಿಯಲ್ಲಿ ಸೂಳುನುಡಿಯ ಕಟ್ಟಲೆಗಳ ಬಳಕೆ 5.3.3 ಆಡುನುಡಿ ಮತ್ತು ಒಳನುಡಿಗಳ ಬಳಕೆ 5.4 ನಾಟಕಗಳಲ್ಲಿ ನುಡಿಯೊಡ್ಡವ 5.4.1 ಸೊಲ್ಲುಗಳ ನಡುವಿನ ಪತ್ತುಗೆ 5.4.2 ಸೊಲ್ಲುಗಳ ಹುರುಳುಗಳು 5.5 ತಿರುಳು

6 ಇಪ್ಪುರುಳಿನ ತೊಡಕುಗಳು 6.1 ಮುನ್ನೋಟ 6.2 ಇಪ್ಪುರುಳಿನ ಸೊಲ್ಲುಗಳ ಬಗೆಗಳು

6.2.1 ಪದದ ಇಪ್ಪುರುಳು 6.2.2 ಪದರೂಪದ ಇಪ್ಪುರುಳು 6.2.3 ಇಟ್ಟಳದ ಇಪ್ಪುರುಳು 6.3 ಇಪ್ಪುರುಳು ತೊಡಕಾಗಿರುವುದು 6.3.1 ಕಾನೂನುಗಳನ್ನು ಬರೆಯುವುದು 6.3.2 ಅರಿಮೆಯ ಬರಹಗಳು 6.3.3 ಎಣ್ಣುಕಗಳಲ್ಲಿ ಇಪ್ಪುರುಳು 6.4 ಇಪ್ಪುರುಳು ಒತ್ತಾಸೆಯಾಗಿರುವುದು 6.5 ತಿರುಳು

7 ಎರಡನೇ ನುಡಿಯ ಕಲಿಕೆ 7.1 ಮುನ್ನೋಟ 7.1.1 ಎರಡು ನುಡಿಯುವುದನ್ನು ಕಲಿಯುವುದರ ಹೆಚ್ಚುಗಾರಿಕೆ 158 7.1.2 ಮೊದಲನೇ ಮತ್ತು ಎರಡನೇ ನುಡಿಗಳ ಕಲಿಕೆ 7.1.3 ಮಕ್ಕಳ ಕಲಿಕೆ ಮತ್ತು ದೊಡ್ದವರ ಕಲಿಕೆ 7.2 ಎರಡನೇ ನುಡಿಯಾಗಿ ಇಂಗ್ಲಿಶ್ನ ಕಲಿಕೆ 7.2.1 ತಾಯ್ನುಡಿಯನ್ನು ಕಲಿಕೆಯಿಂದ ಹೊರಗಿಡುವುದು 7.2.2 ಕಟ್ಟಲೆಯ ಮೂಲ 7.2.3 ತಾಯ್ನುಡಿಯ ಸೊಲ್ಲರಿಮೆಯ ಬಳಕೆ 7.2.4 ಕಲಿಕೆಯ ತಪ್ಪುಗಳು 7.2.5 ಓದಲು-ಬರೆಯಲು ಕಲಿಯುವುದು 7.2.6 ದೊಡ್ಡವರ ಕಲಿಕೆ 7.3 ಎರಡನೇ ನುಡಿಯಾಗಿ ಕನ್ನಡದ ಕಲಿಕೆ 7.4 ತಿರುಳು

8 ನುಡಿಮಾರಿಕೆ 8.1 ಮುನ್ನೋಟ 8.1.1 ಎರಡು ಬಗೆತಗಳು 8.1.2 ನುಡಿಮಾರುವ ಬಗೆ 8.2 ಮೂಲ ಬರಹದ ತಿಳಿವು 8.2.1 ಆಡುನುಡಿಯ ಬಳಕೆ

8.2.2 ಬರಹದ ಒಡ್ಡವ 8.2.3 ಬೇರೆ ಕೆಲವು ತೊಡಕುಗಳು 8.3 ಈಡುನುಡಿಯ ಓದುಗ 8.3.1 ತಿಳಿದುದು ಮತ್ತು ತಿಳಿಯದುದು 8.3.2 ಹೊದ್ದಿಕೆಯ ಗುರುತುಗಳು 8.4 ನಲ್ಬರಹಗಳ ನುಡಿಮಾರಿಕೆ 8.5 ಎಣ್ಣುಕದ ನುಡಿಮಾರಿಕೆ 8.5.1 ಎಣ್ಣುಕದ ಹಮ್ಮುಗೆಗಳು 8.5.2 ಮಾರೆಡೆ ಹಮ್ಮುಗೆ 8.5.3 ಎಡೆನುಡಿ ಹಮ್ಮುಗೆ 8.5.4 ಎಣಿಕೆಯ ಹಮ್ಮುಗೆ 8.5.5 ಎಣ್ಣುಕಗಳ ತೊಡಕುಗಳು 8.5.6 ಒಳನುಡಿಗಳ ನುಡಿಮಾರಿಕೆ 8.5.7 ಎಣ್ಣುಕಗಳಿಗಾಗಿ ಬರೆಯುವುದು 8.6 ತಿರುಳು

9 ನುಡಿಹಮ್ಮುಗೆ 9.1 ಮುನ್ನೋಟ 9.1.1 ಮಾರ್ಪಾಡುಗಳು ಯಾಕೆ ನಡೆಯುತ್ತವೆ? 9.1.2 ಹಮ್ಮುಗೆಗಳ ಬಗೆಗಳು 9.1.3 ಹಮ್ಮುಗೆಯ ಹಂತಗಳು 9.2 ಪರಿಚೆ ಹಮ್ಮುಗೆ 9.2.1 ಬರಿಗೆ ಹಮ್ಮುಗೆ 9.2.2 ಸರಿಯಾಗಿ ಮಾಡಿದ ಬರಿಗೆ ಹಮ್ಮುಗೆಗಳು 9.2.3 ತಪ್ಪಾಗಿ ಮಾಡಿದ ಬರಿಗೆ ಹಮ್ಮುಗೆಗಳು 9.2.4 ಕನ್ನಡ ಬರಹದ ಪದಬರಿಗೆಯ ತೊಡಕು 9.2.5 ಸೊಲ್ಲರಿಮೆಯ ಹಮ್ಮುಗೆ 9.2.6 ಪದನೆರಕೆಯ ಹಮ್ಮುಗೆ 9.3 ಬೆಳವಣಿಗೆಯ ಹಮ್ಮುಗೆ 9.4 ತಿರುಳು

10 ಮಾತಿನ ತೊಂದರೆಗಳು 10.1 ಮುನ್ನೋಟ 10.2 ಬೆಳವಣಿಗೆಯ ತೊಂದರೆಗಳು 10.2.1 ಕಿವಿ ಕೇಳಿಸದ ಮಕ್ಕಳು 10.2.2 ಉಲಿಯ ತೊಂದರೆಗಳು 10.2.3 ಸೊಲ್ಲರಿಮೆಯ ತೊಂದರೆಗಳು 10.2.4 ಓದಿನ ತೊಂದರೆಗಳು 10.2.5 ಉಗ್ಗುಮಾತು 10.3 ಬಳಕೆಯ ತೊಂದರೆಗಳು 10.3.1 ಸಲೀಸಾದ ಮಾತು 10.3.2 ಹುರುಳಿಲ್ಲದ ಮಾತು 10.4 ತಿರುಳು

11 ಮುಕ್ತಾಯ 11.1 ಹಲವು ಬಗೆಯ ಸೊಲ್ಲರಿಮೆಗಳು 11.2 ಎರಡು ಬಗೆಯ ಸೊಲ್ಲರಿಮೆಯ ತಿಳಿವು 11.3 ಸೊಲ್ಲರಿಮೆಯ ಹೆಚ್ಚುಗಾರಿಕೆ

ಕೆಲವು ಪದಗಳ ಹುರುಳುಗಳು ಸುಟ್ಟುಗೆ

ಮುನ್ನುಡಿ

ಕನ್ನಡ ಸೊಲ್ಲರಿಮೆ (ವ್ಯಾಕರಣ) ಕನ್ನಡದ ಕುರಿತಾಗಿ ನಾವು ನಡೆಸುವ ಯಾವ ಕೆಲಸಗಳಲ್ಲೆಲ್ಲ ನೆರವನ್ನು ನೀಡಬಲ್ಲುದು, ಮತ್ತು ಈ ನೆರವನ್ನು ಪಡೆಯಬೇಕಿ ದ್ದಲ್ಲಿ ನಮಗೆ ಎಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.

ಕನ್ನಡ ಬರಹಗಳಲ್ಲಿ ಇವತ್ತು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದ ಗಳನ್ನು ತುಂಬಾ ಹೆಚ್ಚು ಬಳಸಲಾಗುತ್ತಿದೆ. ಹೊಸ ಪದಗಳನ್ನು ಉಂಟುಮಾಡ ಬೇಕಾದಾಗಲೆಲ್ಲ ಹೆಚ್ಚಿನವರೂ ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ) ಗಳನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ, ಕನ್ನಡ ಬರಹ ಇವತ್ತು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿದೆ.

ಕನ್ನಡದ ಬರಹವೊಂದರಲ್ಲಿ ತುಂಬಾ ಸಂಸ್ಕ್ರುತ ಎರವಲುಗಳನ್ನು ಬಳಸಿ ದುದರಿಂದಾಗಿ ಅದನ್ನು ಓದಲು ತೊಡಕಾಗುತ್ತಿದ್ದಲ್ಲಿ, ಅಂತಹ ಪದಗಳನ್ನು ತಿಳಿಯದಿರುವುದು ತಮ್ಮ ಕೊರತೆ ಎಂಬುದಾಗಿ ಹೆಚ್ಚಿನ ಓದುಗರಿಗೂ ಅನಿಸು ತ್ತದೆ; ಬರಹ ತುಂಬಾ ಚನ್ನಾಗಿದೆ, ಅದರೆ ಅದು ನನ್ನ ಕಯ್ಗೆ ಎಟಕುವುದಿಲ್ಲ ಎಂಬುದಾಗಿ ಅವರು ತೀರ್ಮಾನಿಸುತ್ತಾರೆ.

ಆದರೆ ಇದಕ್ಕೆ ಬದಲು, ಬರಹವೊಂದರಲ್ಲಿ ತುಂಬಾ ಕನ್ನಡ ಪದಗಳನ್ನು ಬಳಸಿದುದರಿಂದಾಗಿ ಅದನ್ನು ಓದಲು ತೊಡಕಾಗುತ್ತಿದ್ದಲ್ಲಿ, ಅದು ಬರಹದ ಕೊರತೆ ಎಂಬ ಅನಿಸಿಕೆ ಓದುಗರಲ್ಲಿ ಮೂಡುತ್ತದೆ. ಆ ಬರಹವೇ ಚನ್ನಾಗಿಲ್ಲ ಎಂಬುದಾಗಿ ಓದುಗರು ತೀರ್ಮಾನಿಸಿಬಿಡುತ್ತಾರೆ. ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿರುವ ಸಂಸ್ಕ್ರುತದ ಕುರಿತಾಗಿರುವ ಮೇಲರಿಮೆ ಮತ್ತು ಕನ್ನಡದ ಕುರಿತಾಗಿರುವ ಕೀಳರಿಮೆ ಇದಕ್ಕೆ ಕಾರಣ. ನನ್ನ ಈ ಬರಹ ಹಲವು ಮಂದಿ ಕನ್ನಡಿಗರಲ್ಲಿ ಈ ಎರಡನೇ ಬಗೆಯ ಅನಿಸಿಕೆಗೆ ಎಡೆಮಾಡಿಕೊಡಬಲ್ಲುದು. ಆದರೆ, ಕನ್ನಡ ಬರಹದಲ್ಲಿ ಸಂಸ್ಕ್ರುತ ಎರವಲುಗಳನ್ನು ಮತ್ತು ಬೇರೆ ಎರವಲುಗಳನ್ನು ಆದಶ್ಟು ಕಡಿಮೆ ಮಾಡಬೇಕು ಎಂಬುದು ಈ ಪುಸ್ತಕದ ಗುರಿನುಡಿಯಾಗಿದೆ. ಇದಕ್ಕಾಗಿ ಬಳಕೆಯಿಂದ ಬಿದ್ದುಹೋಗಿರುವ ಹಲವು ಕನ್ನಡ

ಪದಗಳನ್ನು ಇಲ್ಲಿ ಬಳಸಲಾಗಿದೆ, ಮತ್ತು ಹಲವೆಡೆಗಳಲ್ಲಿ ಕನ್ನಡದವೇ ಆದ ಪದಗಳನ್ನು ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಉಂಟು ಮಾಡಿಯೂ ಬಳಸಲಾಗಿದೆ. ಇದು ಸಂಸ್ಕ್ರುತ ಪದಗಳನ್ನು ಬಳಸಿ ಬಳಕೆ ಯಾದವರಿಗೆ ಒಂದು ತೊಡಕಾಗಿ ಕಾಣಬಹುದು.

ಇದಲ್ಲದೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಅವು ಎರಡು ಸಾವಿರ ವರ್ಶಗಳಶ್ಟು ಹಿಂದೆ ಸಂಸ್ಕ್ರುತದಲ್ಲಿ ಹೇಗಿದ್ದುವೋ ಹಾಗೆಯೇ ಇವತ್ತೂ ಕನ್ನಡದಲ್ಲಿ ಬರೆಯಬೇಕಾಗಿಲ್ಲ, ಅವನ್ನು ನಾವು ಹೇಗೆ ಓದುತ್ತೇವೆಯೋ ಹಾಗೆ ಬರೆದರೆ ಸಾಕು ಎಂಬ ತೀರ್ಮಾನದ ಮೇಲೆ ನಿಂತಿರುವ ಹೊಸ ಬರಹ ವನ್ನು ಈ ಪುಸ್ತಕದಲ್ಲಿ ಬಳಸಲಾಗಿದೆ. ಕೆಲವು ಮಂದಿ ಓದುಗರಿಗೆ ಇದೂ ಒಂದು ತೊಡಕೆಂದು ಅನಿಸಬಹುದು.

ಆದರೆ, ಈ ಎರಡು ಬಗೆಯ ಬಳಕೆಗಳೂ ಕನ್ನಡ ಬರಹದಲ್ಲಿ ಕನ್ನಡದ ಸೊಗಡನ್ನು ಉಳಿಸಿಕೊಳ್ಳುವ ಮೂಲಕ ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡುವಲ್ಲಿ ನೆರವಾಗಬಲ್ಲುವು. ಹಾಗಾಗಿ, ಇದನ್ನು ನಡೆಸಬೇಕೆಂಬ ಕಳಕಳಿಯಿರುವ ಓದುಗರು ಈ ತೊಡಕುಗಳನ್ನು ತಾಳಿಕೊಳ್ಳದಿರರೆಂದು ನನ್ನ ನಂಬಿಕೆ.

ಈ ಪುಸ್ತಕದ ಕರಡುಬರಹವನ್ನೊಮ್ಮೆ ಓದಿ ನೋಡಿ, ಅದರ ಕುರಿತಾಗಿ ತಮ್ಮ ಅನಿಸಿಕೆಗಳನ್ನು ತಿಳಿಸಿರುವ ಕೆ.ವಿ.ನಾರಾಯಣ, ಸಿ.ಪಿ.ನಾಗರಾಜ್, ಬಿ.ಆರ್.ಕಿರಣ್, ಕೆ.ವಿ.ಅಕ್ಶರ, ಬಿ.ಆರ್.ವೆಂಕಟರಮಣ ಅಯ್ತಾಳ, ಮತ್ತು ಬಾರತಿ ಬಟ್ ಅವರನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ.

ಇದಲ್ಲದೆ, ಇದನ್ನು ಅಂದವಾಗಿ ಅಚ್ಚುಹಾಕಿದ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ರಾ.ಶ್ರೀ.ಮೋಹನ ಮೂರ್ತಿ ಅವರನ್ನು, ಅಚ್ಚುಹಾಕಿಸುವಲ್ಲಿ ಹಣದ ಬೆಂಬಲವಿತ್ತ ಸಿಸ್ಕೋ ಸಂಬ್ರಮದ ಗೆಳೆಯರನ್ನು, ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಜಿ.ಎನ್.ಅಶೋಕವರ್ದನ ಅವರನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ.

ಹೆಗ್ಗೋಡು, ಸಾಗರ ಒಕ್ಟೋಬರ್ 15, 2009

ಡಿ.ಎನ್.ಶಂಕರ ಬಟ್


Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11