Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಎಂಟನೇ ಪಸುಗೆ — ನುಡಿಮಾರಿಕೆ
8.1 ಮುನ್ನೋಟ
ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಯ ಬರಹವನ್ನಾಗಿ ಮಾರ್ಪಡಿಸುವುದಕ್ಕೆ ಕನ್ನಡದ್ದೇ ಆದ ನುಡಿಮಾರಿಕೆ ಎಂಬ ಪದವನ್ನು ಇಲ್ಲಿ ಬಳಸಲಾಗಿದೆ. ಈ ಕೆಲಸವನ್ನು ಹೆಸರಿಸುವುದಕ್ಕಾಗಿ ಸಂಸ್ಕ್ರುತ ಮೂಲದ ಬಾಶಾಂತರ ಇಲ್ಲವೇ ಅನುವಾದ ಎಂಬ ಪದವನ್ನು, ಮತ್ತು ಅರೇಬಿಕ್ ಮೂಲದ ತರ್ಜುಮೆ ಎಂಬ ಪದವನ್ನೂ ಕನ್ನಡದಲ್ಲಿ ಬಳಸಲಾಗುತ್ತದೆ.
ಒಂದು ನುಡಿಯಲ್ಲಿರುವ ಬರಹವನ್ನು ಮಾತ್ರವಲ್ಲದೆ, ಕೆಲವೊಮ್ಮೆ ನೇರವಾಗಿ ಮಾತನ್ನೂ ಬೇರೆ ನುಡಿಗೆ ಮಾರ್ಪಡಿಸಬೇಕಾಗುತ್ತದೆ. ಈ ಕೆಲಸವನ್ನು ಹೆಸರಿಸುವುದಕ್ಕಾಗಿಯೂ ನುಡಿಮಾರು ಪದವನ್ನೇ ಬಳಸಬಹುದು. ಆದರೆ, ಈ ಎರಡು ಕೆಲಸಗಳ ನಡುವೆ ಕೆಲವು ವ್ಯತ್ಯಾಸಗಳೂ ಇವೆ. ಇಂಗ್ಲಿಶ್ನಲ್ಲಿ ಇದಕ್ಕಾಗಿ ಕೆಲವೊಮ್ಮೆ ಟ್ರಾನ್್ಸಲೇಟ್ ಮತ್ತು ಇಂಟರ್ಪ್ರೆಟ್ ಎಂಬ ಎರಡು ಬೇರೆ ಬೇರೆ ಪದಗಳನ್ನು ಬಳಸುವುದೂ ಇದೆ.
ಬರಹಗಳನ್ನು ನುಡಿಮಾರುವ ಸಮಯದಲ್ಲಿ ನುಡಿಮಾರುಗರು ಹಲವು ಬಗೆಯ ಚಳಕಗಳನ್ನು ಬಳಸುತ್ತಿರುತ್ತಾರೆ. ಆದರೆ, ಸಾಮಾನ್ಯವಾಗಿ ಇವು ಅವರ ಅರಿವಿಗೆ ಎಟಕದ ರೂಪದಲ್ಲಿರುತ್ತವೆ. ಇವನ್ನು ಅರಿವಿಗೆ ಎಟಕುವ ಹಾಗೆ ಮಾಡಿದಲ್ಲಿ, ಅವರು ಈ ಕೆಲಸವನ್ನು ಹೆಚ್ಚು ಚನ್ನಾಗಿ ನಡೆಸಿಕೊಡ ಬಲ್ಲರು.
ಇದಲ್ಲದೆ, ಎಲ್ಲರಿಗೂ ಇಂತಹ ಚಳಕಗಳನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಯಾರಾದರೂ ತಿಳಿವಿಗರು ಅವನ್ನು ಕಲಿಸಿಕೊಡಬೇಕಾಗುತ್ತದೆ. ಹಾಗಾಗಿ, ಒಳ್ಳೆಯ ನುಡಿಮಾರುಗರು ಎಂತಹ ಚಳಕಗಳನ್ನು ಬಳಸುತ್ತಾರೆ ಎಂಬುದನ್ನು ತಿಳಿದುಕೊಂಡು ಅವನ್ನು ಉಳಿದವರಿಗೂ ಕಲಿಸಿಕೊಟ್ಟಲ್ಲಿ, ಅವರೂ ಒಳ್ಳೆಯ ನುಡಿಮಾರುಗರಾಗಬಲ್ಲರು.
ನುಡಿಮಾರಿಕೆ
ನುಡಿಮಾರಿಕೆಯಲ್ಲಿ ಬಳಸಬೇಕಾಗಿರುವ ಚಳಕಗಳಲ್ಲಿ ಹಲವು ನುಡಿಯರಿಮೆ ಇಲ್ಲವೇ ಸೊಲ್ಲರಿಮೆಯ ತಿಳಿವನ್ನವಲಂಬಿಸಿವೆ. ಹಾಗಾಗಿ, ಅವನ್ನು ಪಡೆಯುವು ದಕ್ಕಾಗಿ ನುಡಿಮಾರುಗರು ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆ ಗಳನ್ನು ಮಾತ್ರವಲ್ಲದೆ, ಅವುಗಳ ನಡುವಿರುವ ವ್ಯತ್ಯಾಸಗಳನ್ನೂ ತಿಳಿದಿರ ಬೇಕಾಗುತ್ತದೆ. ಈ ತಿಳಿವು ಎಂತಹ ಕಡೆಗಳಲ್ಲೆಲ್ಲ ನೆರವಿಗೆ ಬರುತ್ತದೆ ಎಂಬುದನ್ನು ಕೆಳಗೆ (8.2-4)ರಲ್ಲಿ ವಿವರಿಸಲಾಗಿದೆ.
ನುಡಿಮಾರಿಕೆಗಾಗಿ ಎಣ್ಣುಕ(ಕಂಪ್ಯೂಟರ್)ಗಳ ನೆರವನ್ನು ಪಡೆಯುವ ಪ್ರಯತ್ನವನ್ನೂ ಕಳೆದ ಅಯ್ವತ್ತು ವರ್ಶಗಳಿಂದ ನಡೆಸಲಾಗುತ್ತಿದೆ. ನಿಜಕ್ಕೂ ನುಡಿಗಳ ಸೊಲ್ಲರಿಮೆ ಎಂಬುದು ಎಶ್ಟು ತೊಡಕಿನ ವಿಶಯ ಎಂಬ ಸಂಗತಿ ಇಂತಹ ಪ್ರಯತ್ನದಲ್ಲಿ ತೊಡಗಿರುವವರಿಗೆ ತುಂಬಾ ಚನ್ನಾಗಿ ಮನವರಿಕೆ ಯಾಗಿದೆ. ಯಾಕೆಂದರೆ, ಎಣ್ಣುಕಗಳಿಗೆ ಸೊಲ್ಲರಿಮೆಯ ಒಂದೊಂದು ಕಟ್ಟಲೆ ಯನ್ನೂ ತಿಳಿಸಿಕೊಡಬೇಕಾಗುತ್ತದೆ. ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಗಳನ್ನು ಮಾತ್ರವಲ್ಲದೆ ಅವುಗಳ ನಡುವಿನ ವ್ಯತ್ಯಾಸಗಳನ್ನೂ ಅದಕ್ಕೆ ತಿಳಿಸಬೇಕಾಗುತ್ತದೆ. ಈ ಕೆಲಸದಲ್ಲಿ ತಿಳಿವಿಗರು ಎಂತಹ ಸೊಲ್ಲರಿಮೆಯ ತೊಂದರೆಗಳನ್ನೆಲ್ಲ ಎದುರಿಸಬೇಕಾಗುತ್ತದೆ ಎಂಬುದನ್ನು ಕೆಳಗೆ (8.5)ರಲ್ಲಿ ವಿವರಿಸಲಾಗಿದೆ.
8.1.1 ಎರಡು ಬಗೆತಗಳು
ನುಡಿಮಾರಿಕೆಯ ಕುರಿತಾಗಿ ಇವತ್ತು ತಿಳಿವಿಗರಲ್ಲಿ ಎರಡು ಬಗೆತಗಳಿವೆ: ಕೆಲವರ ಅನಿಸಿಕೆಯಂತೆ, ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ಪೂರ್ತಿಯಾಗಿ ನುಡಿಮಾರುವುದು ಯಾವತ್ತಿಗೂ ಕಯ್ಗೆಟುಕದ ಕೆಲಸವೇ. ಇದಕ್ಕೆ ಅವರು ಕೊಡುವ ಕಾರಣವೇನೆಂದರೆ, ಒಂದು ನುಡಿ ಅದನ್ನಾಡುವವರ ಮನಸ್ಸಿನಲ್ಲಿ ಏಳುವ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸಲು ನೆರವಾಗುತ್ತದೆ ಮಾತ್ರವಲ್ಲ, ಅವರ ಮನಸ್ಸಿನಲ್ಲಿ ಎಂತಹ ಅನಿಸಿಕೆ ಮೂಡಬಲ್ಲುದು ಎಂಬುದನ್ನೂ ಆ ನುಡಿಯೇ ತೀರ್ಮಾನಿಸುತ್ತದೆ.
ನಾವು ಪಡೆಯುವ ತಿಳುವಳಿಕೆಗಳು ಇಲ್ಲವೇ ಪಾಡು(ಅನುಬವ)ಗಳು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ನಮ್ಮ ಮನಸ್ಸಿನಲ್ಲಿ ಮೂಡುವ ಅನಿಸಿಕೆಗಳು - ಇವೆಲ್ಲವೂ ನಮ್ಮ ನುಡಿಯಲ್ಲೇ ಉಂಟಾಗಬೇಕಾಗಿದೆ. ಹಾಗಾಗಿ, ನುಡಿಗಳ ನಡುವಿರುವ ವ್ಯತ್ಯಾಸಗಳು ಅವನ್ನು ಆಡುವವರು ಪಡೆಯಬಹುದಾದ ಪಾಡು, ಅನಿಸಿಕೆ, ತಿಳಿವು - ಈ ಮೂರರ ಮೇಲೂ
ಪರಿಣಾಮಗಳನ್ನು ಬೀರದಿರುವುದಿಲ್ಲ. ಇದರಿಂದಾಗಿ, ಒಂದು ನುಡಿಯ ನ್ನಾಡುವವರು ಕಾಣುವ ಮತ್ತು ಪಡುವ ಪ್ರಪಂಚ ಇನ್ನೊಂದು ನುಡಿಯನ್ನಾಡು ವವರು ಕಾಣುವ ಮತ್ತು ಪಡುವ ಪ್ರಪಂಚಕ್ಕಿಂತ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ. ಹಾಗಾಗಿ, ಒಂದು ನುಡಿಯ ಮೇಲೆ ಅವಲಂಬಿಸಿರುವ ಅನಿಸಿಕೆ ಮತ್ತು ತಿಳಿವುಗಳನ್ನು ಪೂರ್ತಿಯಾಗಿ ಇನ್ನೊಂದು ನುಡಿಯಲ್ಲಿ ನುಡಿಮಾರಿ ಹೇಳಲು ಬರುವುದೇ ಇಲ್ಲ ಎಂಬುದಾಗಿ ಈ ತಿಳಿವಿಗರು ವಾದಿಸುತ್ತಾರೆ.
ಆದರೆ ಬೇರೆ ಕೆಲವು ತಿಳಿವಿಗರು ಇದನ್ನು ಒಪ್ಪುವುದಿಲ್ಲ. ಅವರ ಅನಿಸಿಕೆಯಂತೆ, ನಾವು ಏನನ್ನು ಬೇಕಿದ್ದರೂ ನಮ್ಮ ನುಡಿಯಲ್ಲಿ ತಿಳಿಸಬಲ್ಲೆವು, ಮತ್ತು ಅವೆಲ್ಲವನ್ನೂ ಇನ್ನೊಂದು ನುಡಿಯಲ್ಲೂ ತಿಳಿಸಬಲ್ಲೆವು. ನುಡಿಗಳ ನಡುವಿನ ವ್ಯತ್ಯಾಸಗಳೆಲ್ಲ ಮೇಲ್ಮಯ್ಯ ವ್ಯತ್ಯಾಸಗಳಲ್ಲದೆ ಆಳವಾದ ವ್ಯತ್ಯಾಸ ಗಳಲ್ಲ ಎಂಬುದಾಗಿ ಅವರು ವಾದಿಸುತ್ತಾರೆ.
ತಿಳಿವಿಗರ ನಡುವೆ ಮೂಡಿರುವ ಈ ತಿಕ್ಕಾಟಕ್ಕೆ ಅವರು ಹುರುಳು (meಚಿಟಿiಟಿg) ಎಂಬ ಪರಿಕಲ್ಪನೆಯನ್ನು ಬಳಸುವಲ್ಲಿ ಮಾಡಿರುವ ತಪ್ಪು ಮೂಲ ಕಾರಣವೆಂದು ನನಗೆ ಅನಿಸುತ್ತದೆ. ನಿಜಕ್ಕೂ ಇಲ್ಲಿ ತಿಳಿವು ಮತ್ತು ಹುರುಳು ಎಂಬ ಎರಡು ತೀರಾ ಬೇರಾಗಿರುವ ಪರಿಕಲ್ಪನೆಗಳು ಬೇಕಾಗುತ್ತವೆ. ಆದರೆ, ಅವನ್ನು ಹೆಸರಿಸುವುದಕ್ಕಾಗಿ ಈ ತಿಳಿವಿಗರು meಚಿಟಿiಟಿg ಎಂಬ ಒಂದೇ ಪದವನ್ನು ಬಳಸುವ ಕಾರಣ, ನುಡಿಮಾರಿಕೆಯ ಅಳವಿನ ಕುರಿತು ಅವರಲ್ಲಿ ಮೇಲಿನ ಗೊಂದಲ ಉಂಟಾಗಿದೆ.
ಒಂದು ಪದವನ್ನು ಕೇಳಿದಾಗ ಇಲ್ಲವೇ ಓದಿದಾಗ ಮಿದುಳಿನಲ್ಲಿ ನರಗಳ ಒಂದು ಇಟ್ಟಳ ಮಿಂಚುತ್ತದೆ; ಹಾಗೆ ಮಿಂಚುವುದೇ ಆ ಪದದ ತಿಳಿವು. ಹೊಸ ಪದವೊಂದನ್ನು ತಿಳಿದುಕೊಳ್ಳುವ ಸಮಯದಲ್ಲಿ ಅದನ್ನು ಕೇಳಿದಾಗ ಇಲ್ಲವೇ ಓದಿದಾಗ ಮಿಂಚಬಲ್ಲಂತಹ ನರಗಳ ಇಟ್ಟಳವೊಂದನ್ನು ನಮ್ಮ ಮಿದುಳಲ್ಲಿ ಹೊಸದಾಗಿ ಉಂಟಾಗುತ್ತದೆ. ಆದರೆ, ಇದು ನಮ್ಮ ಮಿದುಳಿನಲ್ಲಿ ನಡೆಯುವಂತಹ ಒಂದು ಆಗುಹ ಮಾತ್ರ. ಅದನ್ನು ನಾವು ನಮ್ಮ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಬಳಸಿಕೊಳ್ಳಬಲ್ಲೆವಲ್ಲದೆ, ಅದು ನೇರವಾಗಿ ನಮ್ಮ ಅರಿವಿಗೆ ಎಟಕುವಂತಹದಲ್ಲ. ಅದು ಮಿಂಚುವುದನ್ನು ನೋಡಬೇಕಿದ್ದರೆ, ನಮಗೆ ಉಪಕರಣಗಳ ನೆರವು ಬೇಕಾಗುತ್ತದೆ.
ಎಲ್ಲಾ ಪದಗಳಿಗೂ ಇಂತಹ ಅವುಗಳದೇ ಆದ ತಿಳಿವುಗಳು ಇರುತ್ತವೆ; ಯಾಕೆಂದರೆ, ಯಾವ ಎರಡು ಪದಗಳೂ ನಮ್ಮ ಮಿದುಳಿನಲ್ಲಿ ನರಗಳ ಒಂದೇ ಇಟ್ಟಳ ಮಿಂಚುವ ಹಾಗೆ ಮಾಡುವುದಿಲ್ಲ. ಕೆಲವೊಮ್ಮೆ ನಮ್ಮ ನುಡಿಯ
ಕುರಿತು ಮಾತನಾಡುವಾಗ, ಯಾವುದಾದರೊಂದು ಪದದ ತಿಳಿವು ಎಂತಹದು ಎಂಬುದನ್ನು ಇನ್ನೊಬ್ಬರಿಗೆ ತಿಳಿಸಬೇಕಾಗುತ್ತದೆ. ಇದನ್ನು ಹೇಗೆ ನಡೆಸುವುದು? ಇದಕ್ಕಾಗಿ ನಾವು ಒಂದು ನೇರವಲ್ಲದ ದಾರಿಯನ್ನು ಕಂಡುಕೊಂಡಿದ್ದೇವೆ: ಒಂದು ಪದದ ತಿಳಿವು ಎಂತಹದು ಎಂಬುದನ್ನು ಇನ್ನೊಬ್ಬರಿಗೆ ತಿಳಿಸ ಬೇಕಾದಾಗ, ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ಪದವನ್ನು ಬಳಸುತ್ತೇವೆ. ಎತ್ತುಗೆಗಾಗಿ, ಕನಿಕರ ಎಂಬ ಪದದ ತಿಳಿವೇನು ಎಂಬುದನ್ನು ಇನ್ನೊಬ್ಬರಿಗೆ ತಿಳಿಸಬೇಕಾದಾಗ, ಅಂತಹದೇ ತಿಳಿವನ್ನು ಕೊಡುವ ಮರುಕ ಎಂಬ ಪದವನ್ನು ಕೊಡುತ್ತೇವೆ. ನಿಜಕ್ಕೂ ಇವೆರಡಕ್ಕೆ ಬೇರೆ ಬೇರೆ ತಿಳಿವುಗಳು ಇರುತ್ತವೆ. ಹಾಗಾಗಿ, ಮರುಕ ಎಂಬುದನ್ನು ಕನಿಕರ ಪದದ ಹುರುಳು ಎಂಬುದಾಗಿ ಕರೆಯಬಹುದಲ್ಲದೆ ತಿಳಿವು ಎಂಬುದಾಗಿ ಕರೆಯಲಾರೆವು. ಇದಲ್ಲದೆ, ಬೇರೊಂದು ಕಡೆಯಲ್ಲಿ ಕನಿಕರ ಎಂಬ ಪದವನ್ನು ಮರುಕ ಪದದ ಹುರುಳಾಗಿಯೂ ನಾವು ಬಳಸಬಲ್ಲೆವು.
ಮರುಕ ಮತ್ತು ಕನಿಕರಗಳಂತಹ ಎರಡು ಪದಗಳಿಗೆ ಕನ್ನಡದಲ್ಲಿ ಒಂದೇ ಹುರುಳಿದೆಯೆನ್ನುವುದು ಅವುಗಳಲ್ಲಿ ಒಂದನ್ನು ಇನ್ನೊಂದರ ತಿಳಿವೆಂತಹದು ಎಂಬುದನ್ನು ಸೂಚಿಸುವುದಕ್ಕಾಗಿ ಬಳಸಬಲ್ಲೆವು ಎಂಬ ಕಾರಣಕ್ಕಾಗಿಯಲ್ಲದೆ, ಅವೆರಡೂ ಒಂದೇ ತಿಳಿವನ್ನು ಕೊಡುತ್ತವೆ ಎಂಬ ಕಾರಣಕ್ಕಾಗಿ ಅಲ್ಲ. ಹಾಗಾಗಿ, ನುಡಿಯೊಂದರಲ್ಲಿ ಒಂದೇ ಹುರುಳಿನ (meಚಿಟಿiಟಿgನ) ಎರಡು ಪದಗಳು ಇರಬಲ್ಲುವೇ ಎಂಬ ವಿಶಯದ ಕುರಿತಾಗಿ ತಿಳಿವಿಗರೊಳಗೆ ಮೂಡಿಬಂದಿರುವ ತಿಕ್ಕಾಟಕ್ಕೆ ಇದೇ ತಿಳಿವು-ಹುರುಳುಗಳ ನಡುವಿನ ವ್ಯತ್ಯಾಸವನ್ನು ಅವರು ಗಮನಿಸದಿರುವುದೇ ಕಾರಣ.
ಎರಡು ನುಡಿಗಳ ಪದಗಳನ್ನು ಹೋಲಿಸಿ ನೋಡುವಲ್ಲೂ ಇದೇ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ: ಒಂದು ನುಡಿಯ ಪದಕ್ಕೆ ಇನ್ನೊಂದು ನುಡಿಯ ಪದವನ್ನು ಹುರುಳಾಗಿ ಕೊಡಬಲ್ಲೆವು. ಎತ್ತುಗೆಗಾಗಿ, ಕನ್ನಡದ ಮರುಕ ಪದಕ್ಕೆ ಇಂಗ್ಲಿಶ್ನ ಛಿomಠಿಚಿssioಟಿ ಪದವನ್ನು ಹುರುಳಾಗಿ ಕೊಡಬಲ್ಲೆವು. ಆದರೆ, ಮರುಕ ಪದದ ತಿಳಿವು ಇಂಗ್ಲಿಶ್ನ ಛಿomಠಿಚಿssioಟಿ ಪದದ ತಿಳಿವಿಗೆ ಹತ್ತಿರ ಇದೆಯಲ್ಲದೆ ಅವೆರಡೂ ಒಂದೇ ಅಲ್ಲ. ಕೆಲವು ವಿಶಯಗಳಲ್ಲಿ ಈ ಎರಡು ಪದಗಳ ತಿಳಿವುಗಳು ಬೇರಾಗಿವೆ.
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಯ ಬರಹವಾಗಿ ಮಾರ್ಪಡಿಸ (ನುಡಿಮಾರ) ಬಲ್ಲೆವೇ ಎಂಬ ಕೇಳ್ವಿ ಹುರುಳು ಮತ್ತು ತಿಳಿವುಗಳ ನಡುವಿನ ಈ ವ್ಯತ್ಯಾಸವನ್ನವಲಂಬಿಸಿದೆ. ಯಾಕೆಂದರೆ, ಒಂದು ನುಡಿಯ ಸೊಲ್ಲಿಗೆ
ಹೆಚ್ಚುಕಡಿಮೆ ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ನುಡಿಯ ಸೊಲ್ಲನ್ನು ಹುರುಳಾಗಿ ಕೊಡಬಲ್ಲೆವಲ್ಲದೆ ಪೂರ್ತಿಯಾಗಿ ಅದು ಕೊಡುವ ತಿಳಿವನ್ನೇ ಕೊಡುವ ಸೊಲ್ಲನ್ನು ಇನ್ನೊಂದು ನುಡಿಯಲ್ಲಿ ಕೊಡಲಾರೆವು. ಅಂತಹ ಸೊಲ್ಲನ್ನು ಅದೇ ನುಡಿಯಲ್ಲೂ ಕೊಡಲಾರೆವು!
8.1.2 ನುಡಿಮಾರುವ ಬಗೆ
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಯ ಬರಹವಾಗಿ ಮಾರ್ಪಡಿಸು ವುದು ಸುಳುವಾದ ಕೆಲಸವೇನಲ್ಲ. ಅದನ್ನು ಮೆಚ್ಚುಗೆಯಾಗುವ ಹಾಗೆ ನಡೆಸಲು, ಆ ಎರಡು ನುಡಿಗಳಲ್ಲಿ ಮಾತನಾಡಲು ಮತ್ತು ಓದಲು-ಬರೆಯಲು ತಿಳಿದಿದ್ದ ರಶ್ಟೇ ಸಾಲದು. ಅವುಗಳ ನಡುವೆ ಪದಗಳಲ್ಲಿ, ಪದರೂಪಗಳಲ್ಲಿ, ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಮತ್ತು ಹುರುಳುಗಳ ನುಡಿತದಲ್ಲಿ ಎಂತಹ ವ್ಯತ್ಯಾಸಗಳಿವೆ, ಈ ವ್ಯತ್ಯಾಸಗಳು ನುಡಿಮಾರಿಕೆಯಲ್ಲಿ ಎಂತಹ ತೊಂದರೆಗಳ ನ್ನೊಡ್ಡಬಲ್ಲುವು ಮತ್ತು ಅವನ್ನು ಬಗೆಹರಿಸುವುದು ಹೇಗೆ ಎಂಬುದನ್ನೂ ನುಡಿಮಾರುಗನು ತಿಳಿದಿರಬೇಕಾಗುತ್ತದೆ.
ನುಡಿಮಾರುಗನಿಗೆ ಬೇಕಾಗುವ ಈ ತಿಳಿವು ಮುಕ್ಯವಾಗಿ ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಗಳಿಂದ, ಮತ್ತು ಅವೆರಡು ಸೊಲ್ಲರಿಮೆ ಗಳನ್ನು ಹೋಲಿಸಿ ನೋಡುವುದರಿಂದ ದೊರಕುತ್ತದೆ. ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪರಿಚೆಗಳಿರುತ್ತವೆ. ಪದಗಳನ್ನು ಮತ್ತು ಪದಕಂತೆಗಳನ್ನು ಕಟ್ಟುವ ಬಗೆ, ಅವನ್ನು ಸೊಲ್ಲುಗಳಲ್ಲಿ ಬಳಸುವ ಬಗೆ, ತುಂಡು ಸೊಲ್ಲುಗಳನ್ನು ಸೊಲ್ಲುಗಳೊಳಗೆ ಇರಿಸುವ ಬಗೆ, ಸೊಲ್ಲುಗಳನ್ನು ಜೋಡಿಸಿ ಕುರಳು(ಪಾರಾ) ಗಳನ್ನು ಕಟ್ಟುವ ಬಗೆ, ಸೂಳುನುಡಿ(ಸಂಬಾಶಣೆ)ಗಳನ್ನು ಬರೆಯುವ ಬಗೆ ಮೊದಲಾದವುಗಳಲ್ಲೆಲ್ಲ ಒಂದು ನುಡಿಯ ಹಾಗೆ ಇನ್ನೊಂದು ನುಡಿ ಇರುವು
ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿಕೊಂಡು, ನುಡಿಮಾರುವ ಸಮಯದಲ್ಲಿ ಮೂಲನುಡಿಯ ಪರಿಚೆಗಳು ಈಡುನುಡಿಯ ಬರಹದೊಳಗೆ ಸೇರಿಕೊಳ್ಳದ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ನುಡಿಯ ಪರಿಚೆಯನ್ನು ಬದಲಾಯಿಸದೆ ಉಳಿಸಿಕೊಳ್ಳುವ ಬರಹ ಮಾತ್ರ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ, ಮತ್ತು ಸುಳುವಾಗಿ ತಿಳಿವನ್ನೂ ಕೊಡುತ್ತದೆ.
ಇದಲ್ಲದೆ, ಬರಹಗಳ ಗುರಿಯನ್ನವಲಂಬಿಸಿ ಅವುಗಳಲ್ಲಿ ಬೇರೆ ಬೇರೆ ಬಗೆಯ ಪದಗಳನ್ನು, ಸೊಲ್ಲಿನ ಇಟ್ಟಳಗಳನ್ನು, ಮತ್ತು ನುಡಿಗಟ್ಟುಗಳನ್ನು
ಬಳಸಬೇಕಾಗುತ್ತದೆ. ಪ್ರಬಂದಗಳಲ್ಲಿ ಬಳಕೆಯಾಗುವ ಪದ ಮತ್ತು ಇಟ್ಟಳಗಳನ್ನೇ ಜಾಹೀರಾತುಗಳಲ್ಲೂ ಬಳಸಿದೆವಾದರೆ, ಅವು ತೀರಾ ವಿಚಿತ್ರವಾಗಿ ಕಾಣಿಸಬಲ್ಲುವು. ಹಾಗಾಗಿ, ಬರಹದ ಗುರಿಗೆ ಹೊಂದಿಕೊಳ್ಳುವಂತೆ ತನ್ನ ನುಡಿಮಾರಿಕೆಯನ್ನು ಬದಲಾಯಿಸಿಕೊಳ್ಳುವ ಚಳಕವೂ ನುಡಿಮಾರುಗನಿಗಿರ ಬೇಕಾಗುತ್ತದೆ.
ಇಂತಹ ತಿಳಿವು ಮತ್ತು ಚಳಕಗಳು ನುಡಿಮಾರುಗನಿಗೆ ಯಾಕೆ ಬೇಕಾಗುತ್ತದೆ ಎಂಬುದನ್ನು ಇವತ್ತು ಕೆಲವು ಕಂಪೆನಿಗಳ ಜಾಹೀರಾತುಗಳಲ್ಲಿ ಇಲ್ಲವೇ ಕಯ್ಪಿಡಿಗಳಲ್ಲಿ ಬರುವ ಕನ್ನಡ ಬರಹವನ್ನು ನೋಡಿದರೆ ಗೊತ್ತಾಗುತ್ತದೆ. ಈ ಬರಹಗಳನ್ನು ನುಡಿಮಾರುಗರಿಂದ ಬರೆಸುವ ಬದಲು ಯಾರು ಯಾರಿಂದಲೋ ಬರೆಸಲಾಗಿದೆ. ಅವರಿಗೆ ಕನ್ನಡ ಗೊತ್ತಿರುತ್ತದೆ; ಆದರೆ, ನುಡಿಮಾರುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ.
ನುಡಿಮಾರುಗರು ಎರಡು ಬಗೆಯ ತಿಳಿವುಗಳನ್ನು ತಮ್ಮ ಕೆಲಸದಲ್ಲಿ ಬಳಸಿ ಕೊಳ್ಳಬೇಕಾಗುತ್ತದೆ: ಮೂಲ ಬರಹದ ಗುರಿಯೇನು, ಅದರ ಬರಹಗಾರನ ಅನಿಸಿಕೆಗಳೇನು, ಮೂಲನುಡಿಯನ್ನು ಅವನು ಯಾವ ರೀತಿಯಲ್ಲಿ ಬಳಸಿಕೊಂಡಿ ದ್ದಾನೆ ಎಂಬುದರ ತಿಳಿವು ಒಂದು ಬಗೆಯದು, ಮತ್ತು ತಾನು ನುಡಿಮಾರುವ ಬರಹಕ್ಕೆ ಎಂತಹ ಓದುಗನಿದ್ದಾನೆ, ಆತನ ತಿಳಿವು ಎಶ್ಟರ ಮಟ್ಟಿಗಿನದು, ಆತ ಏನನ್ನು ಎದುರುನೋಡುತ್ತಿರಬಹುದು ಎಂಬುದರ ತಿಳಿವು ಇನ್ನೊಂದು ಬಗೆಯದು. ಈ ಎರಡು ಬಗೆಯ ತಿಳಿವುಗಳನ್ನು ನುಡಿಮಾರುಗರು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:
8.2 ಮೂಲ ಬರಹದ ತಿಳಿವು
ಮೇಲೆ ಸೂಚಿಸಿದ ಹಾಗೆ, ಬರಹದ ಗುರಿ ಏನು ಎಂಬುದನ್ನು ತಿಳಿದುಕೊಂಡು, ಅದಕ್ಕೆ ಅನುಸಾರವಾಗಿ ತನ್ನ ನುಡಿಮಾರಿಕೆಯನ್ನು ಹೊಂದಿಸಿಕೊಳ್ಳಲು ನುಡಿ ಮಾರುಗನಿಗೆ ಗೊತ್ತಿರಬೇಕು. ಎತ್ತುಗೆಗಾಗಿ, ಕತೆ, ಕವಿತೆ ಮೊದಲಾದವುಗಳಲ್ಲಿ ಬರಹಗಾರರ ಅನಿಸಿಕೆಗಳಿಗೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ; ಆದರೆ, ವರದಿಗಳು, ಪ್ರಬಂದಗಳು, ಕಲಿಕೆಯ ಪುಸ್ತಕಗಳು ಮೊದಲಾದವುಗಳಲ್ಲಿ ಬರಹಗಾರರ ಅನಿಸಿಕೆಗಳಿಗಿಂತಲೂ ತಿಳಿವಿಗೆ ಹೆಚ್ಚಿನ ಒತ್ತು ಕೊಡಬೇಕಾಗು ತ್ತದೆ. ಜಾಹೀರಾತು, ರಾಜಕೀಯ ಬರಹ, ಮನವಿ, ಅಡಿಗೆ ಪುಸ್ತಕ ಮೊದಲಾದವುಗಳಲ್ಲಿ ಒಂದು ಕೆಲಸವನ್ನು ಮಾಡುವ ಇಲ್ಲವೇ ಇನ್ನೊಬ್ಬರಿಂದ ಮಾಡಿಸಿಕೊಳ್ಳುವ ಬಗೆ ಹೇಗೆ ಎಂಬುದಕ್ಕೆ ಒತ್ತು ಕೊಡಬೇಕಾಗುತ್ತದೆ.
ಇದಲ್ಲದೆ, ಬರಹಗಳಲ್ಲಿ ಯಾವ ರೀತಿಯ ಪದಗಳನ್ನು, ಪದರೂಪಗಳನ್ನು ಮತ್ತು ಸೊಲ್ಲಿಟ್ಟಳಗಳನ್ನು ಬಳಸಬಹುದು ಎಂಬುದು, ಎಂದರೆ, ಬರಹದ ಒಡ್ಡವ ಎಂತಹದಿರಬೇಕು ಎಂಬುದು ಅದರ ಗುರಿಯನ್ನವಲಂಬಿಸಿರುತ್ತದೆ. ಸುದ್ದಿಹಾಳೆಗಳಿಗಾಗಿ ಬರೆದ ಬರಹಕ್ಕೂ ಅರಿವಿಗರಿಗಾಗಿ ಬರೆದ ಬರಹಕ್ಕೂ ನಡುವೆ ಇಂತಹ ವಿಶಯಗಳಲ್ಲಿ ಹಲವಾರು ವ್ಯತ್ಯಾಸಗಳಿರುವುದನ್ನು ಗಮನಿಸ ಬಹುದು.
ಬರಹದ ಗುರಿಗಳ ನಡುವಿರುವ ಈ ಎರಡು ಬಗೆಯ ವ್ಯತ್ಯಾಸಗಳನ್ನು ಗಮನಿಸಿ, ಅವಕ್ಕೆ ಅನುಸಾರವಾಗಿ ತಮ್ಮ ನುಡಿಮಾರಿಕೆಗಳನ್ನು ಹೊಂದಿಸಿ ಕೊಳ್ಳುವ ಅಳವು ನುಡಿಮಾರುಗರಲ್ಲಿರಬೇಕಾಗುತ್ತದೆ. ಈ ಎರಡು ಕೆಲಸಗಳನ್ನು ನಡೆಸುವಲ್ಲೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
8.2.1 ಆಡುನುಡಿಯ ಬಳಕೆ
ಕೆಲವು ಬರಹಗಳಲ್ಲಿ ಮಾತುಗಳನ್ನು ಬರೆಯುವುದಕ್ಕಾಗಿ ಆಡುನುಡಿಯ ಬಳಕೆ ಯಾಗಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿ, ನಾಟಕ ಮೊದಲಾದವುಗಳಲ್ಲಿ ಇಂತಹ ಬಳಕೆಯನ್ನು ಕಾಣಬಹುದು. ಕೆಲವೊಮ್ಮೆ ಸಮಾಜದಲ್ಲಿ ಬಳಕೆ ಯಲ್ಲಿರುವ ಬೇರೆ ನುಡಿಗಳನ್ನೂ ಬಳಸಿರಬಹುದು. ಇಂತಹ ಬರಹವನ್ನು ನುಡಿಮಾರುವಾಗ, ಈಡುನುಡಿಯ ಬರಹದಲ್ಲೂ ಆಡುನುಡಿಯನ್ನು (ಮತ್ತು ಬೇರೆ ನುಡಿಗಳನ್ನು) ಬಳಸಬೇಕೇ ಎಂಬ ಕೇಳ್ವಿ ನುಡಿಮಾರುಗರ ಎದುರು ನಿಲ್ಲುತ್ತದೆ.
ಕೆಲವೊಂದು ಕಡೆಗಳಲ್ಲಿ ಆಡುನುಡಿಯ ಬಳಕೆಯನ್ನು ನುಡಿಮಾರುಗರು ಕಡೆಗಣಿಸಬಹುದು. ಆದರೆ, ಅದರ ಬಳಕೆಗೆ ಮೂಲ ಬರಹದಲ್ಲಿ ಒಂದು ನಿಶ್ಚಿತವಾದ ಗುರಿಯಿದೆಯಾದರೆ, ಅದನ್ನು ಆ ರೀತಿ ಕಡೆಗಣಿಸುವುದು ಸರಿಯಾಗ ಲಾರದು. ಹಾಗೆಂದು ಈಡುನುಡಿಯ ಬರಹದಲ್ಲೂ ಅದನ್ನು ಕಾಣಿಸ ಬೇಕೆಂದಿದ್ದಲ್ಲಿ, ನುಡಿಮಾರುಗರು ಹಲವು ಬಗೆಯ ತೊಡಕುಗಳನ್ನು ಎದುರಿಸ ಬೇಕಾಗುತ್ತದೆ.
ಬರಹಗಳಲ್ಲಿ ಆಡುನುಡಿಗಳನ್ನು ಬಳಸುವ ಬಗೆ ಮೂಲನುಡಿಯಲ್ಲಿ ಬಳಕೆ ಯಲ್ಲಿರಬಹುದು; ಆದರೆ, ಈಡುನುಡಿಯಲ್ಲಿ ಇಲ್ಲದಿರಬಹುದು. ಹಾಗಿದ್ದಲ್ಲಿ, ತಾನು ಹೊಸದಾಗಿ ಅಂತಹ ಬಳಕೆಯನ್ನು ಈಡುನುಡಿಯಲ್ಲಿ ಜಾರಿಗೆ ತರಬೇಕೇ ಬೇಡವೇ ಎಂಬುದನ್ನು ನುಡಿಮಾರುಗರು ತೀರ್ಮಾನಿಸಬೇಕಾಗುತ್ತದೆ.
ಮೂಲ ಬರಹದಲ್ಲಿ ಆಡುನುಡಿಯನ್ನು ಯಾವ ಗುರಿಯನ್ನಿರಿಸಿಕೊಂಡು ಬಳಸಲಾಗಿದೆಯೋ ಅದೇ ಗುರಿಯನ್ನು ಈಡೇರಿಸಬಲ್ಲ ಆಡುನುಡಿ ಈಡು ನುಡಿಯಲ್ಲಿ ಇಲ್ಲದಿರಬಹುದು. ಎತ್ತುಗೆಗಾಗಿ, ಕೆಳವರ್ಗದ ಜನರ ಆಡುನುಡಿ ಮೂಲ ಬರಹದ ಓದುಗರಲ್ಲಿ ಎಂತಹ ಅನಿಸಿಕೆಗಳನ್ನು ಹುಟ್ಟಿಸುತ್ತದೆಯೋ ಅಂತಹವೇ ಅನಿಸಿಕೆಗಳನ್ನು ಅದು ಈಡುಬರಹದಲ್ಲಿ ಹುಟ್ಟಿಸದಿರಬಹುದು. ಹಾಗಿದ್ದಲ್ಲಿ, ಈಡುನುಡಿಯ ಬರಹದಲ್ಲಿ ಕೆಳವರ್ಗದ ಜನರ ಆಡುನುಡಿಯನ್ನು ಬಳಸುವುದರಿಂದ ಮೂಲನುಡಿಯ ಬರಹದಲ್ಲಿ ಅದಕ್ಕಿದ್ದ ಗುರಿ ಈಡೇರ ಲಾರದು.
ಇಂತಹ ಕಡೆಗಳಲ್ಲಿ ನುಡಿಮಾರುಗರು ಆಡುನುಡಿಯನ್ನು ಬಳಸುವ ಬದಲು ಬೇರೆ ಯಾವುದಾದರೂ ಹಮ್ಮುಗೆಯ ಮೂಲಕ ಮೂಲ ಬರಹಗಾರನ ಗುರಿಯನ್ನು ಈಡೇರಿಸಲು ಪ್ರಯತ್ನಿಸಬೇಕಾದೀತು. ಕೆಲವರು ಬರಹಗಾರರು ಇಂತಹ ಕಡೆಗಳಲ್ಲಿ ಈಡುನುಡಿಗೆ ತಾವೇ ಒಂದು ಹೊಸದಾದ ಆಡುನುಡಿ ಯನ್ನು ಕಲ್ಪಿಸಿಕೊಳ್ಳುತ್ತಾರೆ.
ತಮ್ಮ ಬರಹಗಳಲ್ಲಿ ಆಡುನುಡಿಗಳನ್ನು ಬಳಸುವವರು ಸಾಮಾನ್ಯವಾಗಿ ಅವನ್ನು ಪೂರ್ತಿಯಾಗಿ ಬಳಸುವುದಿಲ್ಲ. ಯಾಕೆಂದರೆ, ಹಾಗೆ ಬಳಸಿದಲ್ಲಿ ಅವರ ಬರಹ ಓದುಗರಿಗೆ ಗೊತ್ತೇ ಆಗದ ಹಾಗೆ ಆಗಬಲ್ಲುದು. ಹಾಗಾಗಿ, ಆಡು ಬರಹದ ಸವಿಯನ್ನಶ್ಟೇ ಓದುಗರಿಗೆ ಒದಗಿಸುವ ಹಾಗೆ, ಕೆಲವು ಪದಗಳನ್ನು ಮತ್ತು ಪದರೂಪಗಳನ್ನು ಮಾತ್ರ ಅದರಿಂದ ಆರಿಸಿಕೊಂಡು, ಅವನ್ನು ಅವರು ತಮ್ಮ ಬರಹಗಳಲ್ಲಿ ಬಳಸುತ್ತಾರೆ. ನುಡಿಮಾರುಗರು ಇದನ್ನು ಗಮನಿಸಿಕೊಂಡು, ಅದಕ್ಕನುಸಾರವಾಗಿ ತಮ್ಮ ನುಡಿಮಾರಿಕೆಯಲ್ಲೂ ಆಡುನುಡಿಯ ಸವಿಯನ್ನಶ್ಟೇ ಒದಗಿಸಲು ಪ್ರಯತ್ನಿಸಬೇಕು.
8.2.2 ಬರಹದ ಒಡ್ಡವ
ಒಂದು ಬರಹವನ್ನು ಬರೆಯುತ್ತಿರುವ ಸಮಯದಲ್ಲಿ ಬರಹಗಾರರು ಹಲವು ಬಗೆಯ ಆಯ್ಕೆಗಳನ್ನು ನಡೆಸಬೇಕಾಗುತ್ತದೆ: ತಮ್ಮೆದುರಿಗಿರುವ ಹುರುಳನ್ನು ಸೂಚಿಸಲು ಎರಡು ಇಲ್ಲವೆ ಹೆಚ್ಚು ಪದಗಳಿದ್ದಲ್ಲಿ, ಅವುಗಳಲ್ಲೊಂದನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ; ಇದೇ ರೀತಿಯಲ್ಲಿ, ತಾವು ತಿಳಿಸಬೇಕಾ ಗಿರುವ ಸಂಗತಿಯನ್ನು ತಿಳಿಸಬಲ್ಲ ಸೊಲ್ಲಿಟ್ಟಳಗಳು ಹಲವಿದ್ದಲ್ಲಿ, ಅವುಗಳ ಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಬರಹಗಾರರು ನಡೆಸಬಲ್ಲ ಇಂತಹ ಆಯ್ಕೆಗಳು ಬರಹದ ಒಡ್ಡವವನ್ನು (ಶಯ್ಲಿಯನ್ನು) ನಿರ್ದರಿಸುತ್ತವೆ.
ಒಂದು ಬರಹದಲ್ಲಿ ಕಾಣಿಸುವ ಒಡ್ಡವ ಬರಹಗಾರನ ಆಳ್ತನ(ವ್ಯಕ್ತಿತ್ವ)ವನ್ನು ಸೂಚಿಸಬಹುದು, ಇಲ್ಲವೇ ಬರಹದ ಬಗೆಯನ್ನೂ ಸೂಚಿಸಬಲ್ಲುದು. ಇವನ್ನು ಈಡುನುಡಿಯಲ್ಲೂ ಕಾಣಿಸಬೇಕೇ, ಮತ್ತು ಕಾಣಿಸುವುದಿದ್ದರೆ ಅದನ್ನು ಯಾವ ಬಗೆಯಲ್ಲಿ ಕಾಣಿಸಬಹುದು ಎಂಬ ಕೇಳ್ವಿಯನ್ನು ನುಡಿಮಾರುಗರು ಎದುರಿಸ ಬೇಕಾಗುತ್ತದೆ.
ಬರಹಗಾರನ ಆಳ್ತನವನ್ನು ಸೂಚಿಸುವಂತಹ ಒಡ್ಡವದ ಅಂಶಗಳು ಸಾಮಾನ್ಯವಾಗಿ ಕತೆ-ಕಾದಂಬರಿಗಳಂತಹ ನಲ್ಬರಹಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಬೇರೆ ಬಗೆಯ ಬರಹಗಳಲ್ಲಿ ಅವು ಕಾಣಿಸಿಕೊಳ್ಳುವುದು ಅಪರೂಪ. ಎತ್ತುಗೆಗಾಗಿ, ಅರಿಮೆಯ ಬರಹಗಳಲ್ಲಿ ಎಲ್ಲರೂ ಬಳಸುವ ಒಡ್ಡವವನ್ನೇ ಬರಹಗಾರರು ಆರಿಸಿಕೊಳ್ಳುತ್ತಾರಲ್ಲದೆ ತಮ್ಮದೇ ಆದ ಒಡ್ಡವವನ್ನು ಬಳಸಹೋಗುವುದಿಲ್ಲ. ಅವುಗಳಲ್ಲಿ ತಿಳಿವನ್ನು ಕೊಡುವುದರ ಮೇಲೆ ಹೆಚ್ಚಿನ ಒತ್ತು ಬೀಳುವುದು ಇದಕ್ಕೆ ಕಾರಣವಿರಬಹುದು.
ಮೇಲೆ ಸೂಚಿಸಿದ ಹಾಗೆ, ಬರಹದ ಒಡ್ಡವದಲ್ಲಿ ಹೆಚ್ಚಿನ ಅಂಶವೂ ಅದರ ಗುರಿಯನ್ನು ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಮಕ್ಕಳಿಗಾಗಿ ಬರೆದ ಬರಹಕ್ಕೂ ಅರಿವಿಗರಿಗಾಗಿ ಬರೆದ ಬರಹಕ್ಕೂ ನಡುವೆ ಒಡ್ಡವದಲ್ಲಿ ಹಲವು ವ್ಯತ್ಯಾಸಗಳಿರುತ್ತವೆ. ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿರುತ್ತವೆ, ಮತ್ತು ಅವನ್ನು ಹಲವೆಡೆಗಳಲ್ಲಿ ಹೆಸರು ಪದಕಂತೆಗಳಾಗಿ ಬದಲಾಯಿಸಿ, ಬೇರೆ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸಲಾಗಿರುತ್ತದೆ. ಆದರೆ, ಮಕ್ಕಳಿಗಾಗಿ ಬರೆದ ಬರಹಗಳಲ್ಲಿ ಇವೊಂದೂ ಇರುವುದಿಲ್ಲ. ಇಂತಹ ವ್ಯತ್ಯಾಸಗಳನ್ನು ನುಡಿಮಾರುಗರು ಗಮನಿಸಿಕೊಂಡು, ಈಡು ಬರಹದಲ್ಲಿ ಅವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.
ಇದಲ್ಲದೆ, ಒಂದೇ ಬಗೆಯ ಸೊಲ್ಲಿಟ್ಟಳ ಎರಡು ನುಡಿಗಳಲ್ಲಿ ಕಾಣಿಸಿ ಕೊಂಡಾಗಲೂ, ಅದನ್ನು ಯಾಕೆ ಬಳಸಲಾಗುತ್ತದೆ ಎಂಬುದು ನುಡಿಯಿಂದ ನುಡಿಗೆ ಬೇರಾಗಿರಬಲ್ಲುದು. ಎತ್ತುಗೆಗಾಗಿ, ಇಂಗ್ಲಿಶ್ ನುಡಿಯ ಪೇಸಿವ್ (ಠಿಚಿssive) ಇಟ್ಟಳ ಇಲ್ಲವೇ ಸಂಸ್ಕ್ರುತದ ಕರ್ಮಣಿ ಇಟ್ಟಳಕ್ಕೆ ಸಮನಾಗಿ ಕನ್ನಡದಲ್ಲಿ ಪಡು ಎಂಬ ಎಸಕಪದವನ್ನು ಬಳಸಿರುವ ಕೆಲಸ ಮಾಡಲ್ಪಟ್ಟಿತು, ಹಣ ಕೊಡಲ್ಪಟ್ಟಿತು ಎಂಬಂತಹ ಸೊಲ್ಲುಗಳನ್ನು ಕೆಲವರು ಬಳಸುತ್ತಾರೆ. ಆದರೆ, ಈ ಇಟ್ಟಳದ ಬಳಕೆ ಕನ್ನಡದಲ್ಲಿ ಕೆಲವೇ ಕೆಲವು ಬಗೆಯ ಬರಹಗಳಿಗೆ ಮಾತ್ರ ತಕ್ಕುದಾಗಿದೆ. ಹಾಗಾಗಿ, ಇಂಗ್ಲಿಶ್ನ ಪೇಸಿವ್ ಇಲ್ಲವೇ ಸಂಸ್ಕ್ರುತದ ಕರ್ಮಣಿ ಬಂದಲ್ಲೆಲ್ಲ ಅದನ್ನು ಕನ್ನಡದಲ್ಲಿ ಬಳಸಲು ಬರುವುದಿಲ್ಲ.
8.2.3 ಬೇರೆ ಕೆಲವು ತೊಡಕುಗಳು
ಪದ, ಪದಕಂತೆ, ಸೊಲ್ಲುಗಳ ಇಟ್ಟಳ ಮೊದಲಾದವುಗಳ ಮೂಲಕ ತಿಳಿವನ್ನು ಸೂಚಿಸುವ ಹೊಲಬು(ವಿದಾನ)ಗಳೂ ನುಡಿಯಿಂದ ನುಡಿಗೆ ಬೇರಾಗಿರುತ್ತವೆ. ನುಡಿಗಳ ನಡುವೆ ಕಾಣಿಸುವ ಈ ವ್ಯತ್ಯಾಸಗಳೂ ನುಡಿಮಾರುಗರಿಗೆ ತೊಂದರೆ ಕೊಡುತ್ತವೆ. ಒಳ್ಳೇ ನುಡಿಮಾರುಗರು ಈ ತೊಂದರೆಗಳನ್ನು ಬಗೆಹರಿಸುವು ದಕ್ಕಾಗಿ ತಮ್ಮವೇ ಆದ ಉಪಾಯಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೂ, ಮೂಲನುಡಿ ಮತ್ತು ಈಡುನುಡಿಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಪಟ್ಟಿಮಾಡಿದಲ್ಲಿ, ಅದು ನುಡಿಮಾರುಗರ ಕೆಲಸದಲ್ಲಿ ಹೆಚ್ಚಿನ ನೆರವನ್ನು ಕೊಡಬಲ್ಲುದು.
ಮೂಲನುಡಿಯ ಪದಗಳಿಗೆ ತಕ್ಕುದಾದ ಪದಗಳು ಈಡುನುಡಿಯಲ್ಲಿ ಇಲ್ಲ ವಾದಲ್ಲಿ, ಅವಕ್ಕೆ ಬದಲು ಪದಕಂತೆಗಳನ್ನು ಬಳಸುವ ಇಲ್ಲವೇ ಹೊಸ ಪದ ಗಳನ್ನು ಉಂಟುಮಾಡಿಕೊಳ್ಳುವ ಅಳವು ಒಳ್ಳೇ ನುಡಿಮಾರುಗರಿಗಿರುತ್ತದೆ. ಮುಕ್ಯವಾಗಿ, ಒಮ್ಮೆ ಬರೆದ ಸೊಲ್ಲನ್ನು ಬಗೆ ಬಗೆಯಾಗಿ ಬದಲಿಸಿಕೊಳ್ಳುವ ಮೂಲಕ ಅದು ಓದುಗರಿಗೆ ಮೆಚ್ಚುಗೆಯಾಗುವ ಹಾಗೆ ಮಾಡುವ ಅಳವು ಅವರಿಗಿರುತ್ತದೆ. ಇಂತಹ ಕೆಲಸಗಳಲ್ಲಿ ಸೊಲ್ಲರಿಮೆಯ ಅರಿವು ಅವರ ನೆರವಿಗೆ ಬರಬಲ್ಲುದು.
ಇಪ್ಪುರುಳುಗಳಿರುವ (ಒಂದಕ್ಕಿಂತ ಹೆಚ್ಚು ಹುರುಳುಗಳಿರುವ) ಪದಗಳು ಇಲ್ಲವೇ ಸೊಲ್ಲುಗಳು ಮೂಲನುಡಿಯ ಬರಹದಲ್ಲಿ ಇವೆಯಾದಲ್ಲಿ, ಮೂಲ ಬರಹಗಾರರ ಮನಸ್ಸಿನಲ್ಲಿ ಯಾವ ಹುರುಳು ಇದ್ದಿರಬಹುದು ಎಂಬುದನ್ನು ಊಹಿಸಿಕೊಂಡು, ಅದನ್ನು ಈಡು ಬರಹದಲ್ಲಿ ಕಾಣಿಸಬೇಕಾಗುತ್ತದೆ.
ಇದಲ್ಲದೆ, ಮೂಲ ಬರಹದಲ್ಲಿಲ್ಲದ ಇಪ್ಪುರುಳು ಈಡು ಬರಹದಲ್ಲಿ ಬಳಸಬೇಕಾಗುವ ಪದ ಇಲ್ಲವೇ ಸೊಲ್ಲಿನಲ್ಲಿ ಕಾಣಿಸಿಕೊಳ್ಳುವುದಾದರೆ, ಅದರಿಂದಾಗಿ ಓದುಗರಲ್ಲಿ ಗೊಂದಲ ಇಲ್ಲವೇ ತಪ್ಪರಿಮೆಯುಂಟಾಗದ ಹಾಗೆಯೂ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಇಪ್ಪುರುಳುಗಳು ಕಾಣಿಸದಂತೆ ನೋಡಿಕೊಳ್ಳಲು ಬರುವುದಿದ್ದರೆ ಹಾಗೆ ಮಾಡುವುದೇ ಒಳ್ಳೆಯದು (6.2 ನೋಡಿ).
ಇಪ್ಪುರುಳಿನ ಪದ ಇಲ್ಲವೇ ಸೊಲ್ಲಿನ ಇಟ್ಟಳಗಳ ಹಾಗೆ, ಮೂಲ ಬರಹ ದಲ್ಲಿ ಕಾಣಿಸಿಕೊಳ್ಳುವ ಮಾರ್ಪುರುಳು(ರೂಪಕ)ಗಳ ಬಳಕೆಯೂ ನುಡಿ ಮಾರುಗರಿಗೆ ತೊಂದರೆ ಕೊಡುತ್ತದೆ. ಎತ್ತುಗೆಗಾಗಿ, ಅವನಿಗೆ ತಲೆಯಿಲ್ಲ ಎಂಬ ಸೊಲ್ಲಿನಲ್ಲಿ ಜಾಣ್ಮೆ ಇಲ್ಲವೇ ಬುದ್ದಿ ಪದದ ಬದಲು ತಲೆ ಪದವನ್ನು
ಒಂದು ಮಾರ್ಪುರುಳಾಗಿ ಬಳಸಲಾಗಿದೆ. ಈ ಸೊಲ್ಲನ್ನು ನುಡಿಮಾರುವಾಗ, ಈಡುನುಡಿಯಲ್ಲಿ ಅಂತಹದೇ ಹುರುಳನ್ನು ಕೊಡಬಲ್ಲ ಬೇರೆ ಪದವನ್ನು ಇಲ್ಲವೇ ಮಾರ್ಪುರುಳನ್ನು ಬಳಸಬೇಕಾಗುತ್ತದೆ. ತಲೆ ಪದವನ್ನು ಹಾಗೆಯೇ ನುಡಿಮಾರಿದಲ್ಲಿ, ತಕ್ಕುದಾದ ಹುರುಳನ್ನು ಅದು ಈಡುನುಡಿಯ ಬರಹದಲ್ಲಿ ಕೊಡದೇ ಇರಬಹುದು.
ಮೂಲ ಬರಹದಲ್ಲಿ ಬರುವ ನುಡಿಗಟ್ಟುಗಳೂ ನುಡಿಮಾರುಗರಿಗೆ ತೊಂದರೆ ಕೊಡುತ್ತವೆ. ಅವನ್ನು ಹಾಗೆಯೇ ನುಡಿಮಾರಲು ಬರುವುದಿಲ್ಲ. ಅವು ಕೊಡುವ ಹುರುಳುಗಳನ್ನು ಅರಿತುಕೊಂಡು, ಅವನ್ನು ಈಡು ನುಡಿಯ ಓದುಗರಿಗೆ ತಲಪಿಸುವ ಕೆಲಸವನ್ನು ನುಡಿಮಾರುಗರು ನಡೆಸಬೇಕಾಗುತ್ತದೆ. ಅಂತಹದೇ ತಿಳಿವನ್ನು ಕೊಡುವ ಬೇರೊಂದು ನುಡಿಗಟ್ಟು ಈಡು ನುಡಿಯಲ್ಲಿ ಇದೆಯಾದರೆ, ಅದನ್ನೂ ಇಂತಹ ಕಡೆಗಳಲ್ಲಿ ಬಳಸಬಹುದು.
ನುಡಿಮಾರುಗರಿಗೆ ತೊಂದರೆ ಕೊಡುವ ಇನ್ನೊಂದು ಬಗೆಯ ಪದಗಳೆಂದರೆ, ಮೂಲನುಡಿಯಲ್ಲಿ ಕಟ್ಟುನಿಟ್ಟಾದ ಹುರುಳಿಲ್ಲದ ಪದಗಳು. ಎತ್ತುಗೆಗಾಗಿ, ಚಿಕ್ಕದು-ದೊಡ್ಡದು, ಒಳ್ಳೆಯದು-ಕೆಟ್ಟದು ಮೊದಲಾದ ಹಲವು ಪದಗಳಿಗೆ ಕಟ್ಟುನಿಟ್ಟಾದ ಹುರುಳಿಲ್ಲ. ಈಡುನುಡಿಯಲ್ಲೂ ಅಂತಹದೇ ಪದ ಇದೆಯಾದರೆ, ಅದನ್ನು ಬಳಸುವ ಮೂಲಕ ತೊಂದರೆಯನ್ನು ಬಗೆಹರಿಸಬಹುದು.
ಆದರೆ ಎಲ್ಲಾ ಕಡೆಗಳಲ್ಲೂ ಹೀಗೆ ಮಾಡಲು ಬಾರದಿರಬಹುದು. ಎತ್ತುಗೆ ಗಾಗಿ, ನಂಟಸ್ತಿಕೆಯನ್ನು ಸೂಚಿಸುವ ಪದಗಳಿಗೆ ಒಂದೊಂದು ನುಡಿಯಲ್ಲಿ ಒಂದೊಂದು ಬಗೆಯ ಹರವು ಇರುತ್ತದೆ. ಅಂತಹ ಪದಗಳನ್ನು ನುಡಿಮಾರುವಾಗ, ಮೂಲನುಡಿಯಲ್ಲಿ ನಿಜಕ್ಕೂ ಎಂತಹ ನಂಟಸ್ತಿಕೆಯನ್ನು ಸೂಚಿಸಲಾಗಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕೆ ಸಮನಾದಂತಹ ಈಡುನುಡಿಯ ಪದವನ್ನು ಬಳಸಬೇಕಾಗುತ್ತದೆ. ಕನ್ನಡದ ದೊಡ್ಡಮ್ಮ ಎಂಬ ಪದಕ್ಕೆ ಬದಲಾಗಿ eಟಜeಡಿ moಣheಡಿ ಎಂಬುದನ್ನು ಬಳಸಿದಲ್ಲಿ ಅದು ಇಂಗ್ಲಿಶ್ ಬರಹದಲ್ಲಿ ಹೊಂದಿಕೊಳ್ಳಲಾರದು.
8.3 ಈಡುನುಡಿಯ ಓದುಗ
ಒಂದು ನುಡಿಮಾರಿದ ಬರಹ ಚನ್ನಾಗಿದೆಯೆಂದು ಹೇಳಬೇಕಾದರೆ, ಮೂಲ ಬರಹ ಅದರ ಓದುಗರಲ್ಲಿ ಎಂತಹ ತಿಳಿವನ್ನು ಉಂಟುಮಾಡುತ್ತದೆಯೋ ಅಂತಹದೇ ತಿಳಿವನ್ನು ನುಡಿಮಾರಿದ ಬರಹ ಅದರ ಓದುಗರಲ್ಲೂ ಉಂಟು ಮಾಡುವಂತಿರಬೇಕು. ಈ ಇಬ್ಬರು ಓದುಗರ ನಡುವೆ ಹಲವು ಬಗೆಯ
ವ್ಯತ್ಯಾಸಗಳಿರಬಹುದು. ಎತ್ತುಗೆಗಾಗಿ, ಮೂಲನುಡಿಯ ಓದುಗರಿಗಿರುವ ಅನುಬವ ಇಲ್ಲವೇ ತಿಳಿವು ಈಡುನುಡಿಯ ಓದುಗರಿಗಿರುವ ಅನುಬವ ಇಲ್ಲವೇ ತಿಳಿವಿಗಿಂತ ತೀರ ಬೇರಾಗಿರಬಹುದು. ಹೀಗಿದ್ದಲ್ಲಿ, ಮೂಲ ಬರಹವನ್ನು ನುಡಿಮಾರುವಾಗ, ಅದರಲ್ಲಿ ಹಲವು ಬಗೆಯ ಬದಲಾವಣೆಗಳನ್ನೂ ನುಡಿಮಾರುಗರು ಮಾಡಿಕೊಳ್ಳಬೇಕಾಗುತ್ತದೆ.
ಒಳ್ಳೆಯ ನುಡಿಮಾರುಗರು ಆದಶ್ಟು ಮಟ್ಟಿಗೆ ತಮ್ಮ ಬರಹ ಓದುಗರಿಗೆ ಸುಳುವಾಗಿ ಗೊತ್ತಾಗುವ ಹಾಗೆ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಇದಕ್ಕಾಗಿ ಮೂಲ ಬರಹದಲ್ಲಿಲ್ಲದಿರುವ ವಿಶಯಗಳನ್ನೂ ಈಡು ಬರಹದಲ್ಲಿ ಹೊಸದಾಗಿ ಸೇರಿಸಿಕೊಳ್ಳುತ್ತಾರೆ. ನುಡಿಮಾರಿದ ಬರಹ ಓದುಗರನ್ನು ದಾರಿತಪ್ಪಿಸುವಂತಿರಬಾರದು, ಮತ್ತು ತೊಡಕು ತೊಡಕಾದ ಪದ ಮತ್ತು ಸೊಲ್ಲಿನ ಇಟ್ಟಳಗಳ ಬಳಕೆಯಿಂದ ಓದುಗರು ದೂರ ಹೋಗುವಂತೆಯೂ ಮಾಡಬಾರದು.
8.3.1 ತಿಳಿದುದು ಮತ್ತು ತಿಳಿಯದುದು
ಸೊಲ್ಲುಗಳಿಗೆ ಇಟ್ಟಳವಿರುವ ಹಾಗೆ, ಇಡೀ ಬರಹಕ್ಕೂ ಒಂದು ಇಟ್ಟಳ ವಿರುತ್ತದೆ. ಇದು ನುಡಿಯಿಂದ ನುಡಿಗೆ ಬೇರಾಗಿಯೂ ಇರುತ್ತದೆ. ಹಾಗಾಗಿ, ಮೂಲ ಬರಹದ ಇಟ್ಟಳ ಎಂತಹದು ಎಂಬುದನ್ನು ತಿಳಿದುಕೊಂಡು, ಅದಕ್ಕೆ ಬದಲಾಗಿ ಅಂತಹದೇ ಹುರುಳನ್ನು ಕೊಡುವ ಈಡುನುಡಿಯ ಇಟ್ಟಳವನ್ನು ಬಳಸಬಲ್ಲವರು ಮಾತ್ರ ಸಲೀಸಾಗಿ ಓದಲು ಬರುವಂತಹ ಬರಹವನ್ನು ಬರೆಯ ಬಲ್ಲರು.
ಒಂದು ವಿಶಯದ ಕುರಿತು ಬರಹಗಾರರಿಗೆ ಅವರ ಓದುಗರಿಗಿಂತ ತುಸು ಹೆಚ್ಚು ಗೊತ್ತಿರುತ್ತದೆ. ಹಾಗಾಗಿ, ಬರಹಗಾರರು ತಮ್ಮ ಓದುಗರಿಗೆ ಗೊತ್ತಿರುವು ದನ್ನು ಮೊದಲಿಗೆ ಅವರ ಮುಂದಿರಿಸುತ್ತಾರೆ, ಮತ್ತು ಆಮೇಲೆ, ಅವರಿಗೆ ಗೊತ್ತಿಲ್ಲದುದನ್ನು ಅದಕ್ಕೆ ಸಂಬಂದಿಸಿರುವ ಹಾಗೆ ತಿಳಿಸುತ್ತಾರೆ. ವಿಶಯಗಳನ್ನು ಪರಿಚಯಿಸುವ ಈ ಬಗೆಯನ್ನು ಹೆಚ್ಚಿನ ಬರಹಗಳಲ್ಲೂ ಕಾಣಬಹುದು.
ಬರಹಗಳಲ್ಲಿ ಮಾತ್ರವಲ್ಲ, ಸೊಲ್ಲುಗಳಲ್ಲೂ ಈ ತಿಳಿದುದು-ತಿಳಿಯದುದು ವ್ಯತ್ಯಾಸವನ್ನು ಕಾಣಬಹುದು. ಎತ್ತುಗೆಗಾಗಿ, ನಿಮ್ಮ ಹುಡುಗ ನಾಳೆ ಬರುತ್ತಾನೆ ಎಂಬ ಸೊಲ್ಲಿನಲ್ಲಿ ನಿಮ್ಮ ಹುಡುಗ ಎಂಬ ಮೊದಲಿನ ಅಂಶ ತಿಳಿದುದನ್ನು ಹೇಳುತ್ತದೆ ಮತ್ತು ಅದರ ಬಳಿಕ ಬರುವ ನಾಳೆ ಬರುತ್ತಾನೆ ಎಂಬ ಅಂಶ ತಿಳಿಯದುದನ್ನು ಹೇಳುತ್ತದೆ. ಇದಕ್ಕೆ ಬದಲು, ನಾಳೆ ಬರುವುದು
ನಿಮ್ಮ ಹುಡುಗ ಎಂಬ ಸೊಲ್ಲಿನಲ್ಲಿ ನಾಳೆ ಬರುವುದು ಎಂಬುದೇ ತಿಳಿದಿರುವ ಸಂಗತಿ. ಈ ಕಾರಣಕ್ಕಾಗಿ ಅದನ್ನು ಸೊಲ್ಲಿನಲ್ಲಿ ಮೊದಲಿಗೆ ಬಳಸಲಾಗಿದೆ. ಇದನ್ನೇ ನೆಲೆ-ತಿಳಿವು ವ್ಯತ್ಯಾಸ (3.2.1) ಸೂಚಿಸುತ್ತದೆ.
ಬರಹದ ಮೂಲಕ ತಿಳಿಸಬೇಕಾಗಿರುವ ಹೊಸ (ತಿಳಿಯದ) ವಿಶಯಕ್ಕೆ ಒಂದು ತಳಹದಿಯನ್ನೊದಗಿಸುವುದಕ್ಕಾಗಿ ಈ ರೀತಿ ಅದರಲ್ಲಿ ಓದುಗರಿಗೆ ತಿಳಿದಿರುವಂತಹ ಸಂಗತಿಯನ್ನು ಮೊದಲಿಗೆ ಹೇಳಲಾಗುತ್ತದೆ. ಆಮೇಲೆಯೂ ಓದುಗರ ಆಸಕ್ತಿಯನ್ನು ಬರಹದಲ್ಲಿ ಉಳಿಸಿಕೊಳ್ಳುವುದಕ್ಕಾಗಿ, ಈ ಹೊಲಬನ್ನು ಮುಂದುವರಿಸಲಾಗುತ್ತದೆ. ಇದು ಹೇಗೆಂದರೆ, ಮೊದಲಿಗೆ ತಿಳಿಯದುದಾಗಿದ್ದ ಸಂಗತಿ, ಅದನ್ನು ತಿಳಿಸಿದೊಡನೆ, ತಿಳಿದುದಾಗುತ್ತದೆ ಮತ್ತು ಈ ತಿಳಿದ ಸಂಗತಿಯನ್ನು ತಳಹದಿಯಾಗಿರಿಸಿ, ಬೇರೊಂದು ತಿಳಿಯದ ಸಂಗತಿಯನ್ನು ಓದುಗರ ಮುಂದಿಡಲಾಗುತ್ತದೆ. ತಿಳಿದುದು ಮತ್ತು ತಿಳಿಯದುದು ಎಂಬವುಗಳ ನಡುವಿನ ಕೊಂಡಿ ಈ ರೀತಿ ಬರಹದುದ್ದಕ್ಕೂ ತಪ್ಪದೆ ಉಳಿಯುವ ಹಾಗೆ ಒಳ್ಳೇ ಬರಹಗಾರರು ನೋಡಿಕೊಳ್ಳುತ್ತಾರೆ. ಅಂತಹವರ ಬರಹದ ಒಂದೊಂದು ಸೊಲ್ಲಿನಲ್ಲಿ, ಕುರಳಿನಲ್ಲಿ ಮತ್ತು ಪಸುಗೆಯಲ್ಲೂ ಈ ಕೊಂಡಿ ತಪ್ಪದಿರುತ್ತದೆ. ಒಳ್ಳೇ ಓದುಗರು ತಾವು ಓದುತ್ತಿರುವ ಬರಹದಲ್ಲಿ ಈ ರೀತಿ ತಿಳಿದುದು- ತಿಳಿಯದುದು ಎಂಬ ಇಟ್ಟಳವನ್ನು ಎದುರುನೋಡುತ್ತಿರುತ್ತಾರೆ. ಹಾಗಾಗಿ, ಅದನ್ನು ಬಳಸದಿರುವ ಬರಹವನ್ನು ಅವರಿಗೆ ಸಲೀಸಾಗಿ ಓದಲು ಬರುವುದಿಲ್ಲ. ಕೆಲವೊಮ್ಮೆ ತಿಳಿಯದುದನ್ನು ಒತ್ತಿ ಹೇಳುವುದಕ್ಕಾಗಿ ಅದನ್ನು ಮೊದಲಿಗೆ ಹೇಳುವುದೂ ಇದೆ. ಆದರೆ ಇದು ತುಂಬಾ ಅಪರೂಪವಾಗಿ ಮಾತ್ರ ಬಳಸಬೇಕಾಗಿರುವ ಇಟ್ಟಳ.
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನುಡಿಮಾರುವಾಗ, ಅದರಲ್ಲಿ ತಿಳಿದುದು-ತಿಳಿಯದುದು ವ್ಯತ್ಯಾಸ ಹೇಗೆ ಮೂಡಿಬಂದಿದೆ ಎಂಬುದನ್ನು ಗಮನಿಸಿ, ಈಡು ಬರಹದಲ್ಲೂ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ವಿಶಯದಲ್ಲಿ ಮೂಲನುಡಿ ಬಳಸುವ ಹೊಲಬಿಗಿಂತ ಈಡುನುಡಿ ಬಳಸುವ ಹೊಲಬು ಬೇರೆಯದಾಗಿರಬಲ್ಲುದಾದ ಕಾರಣ, ನುಡಿಮಾರುಗರು ಈ ವ್ಯತ್ಯಾಸವನ್ನು ಗಮನಿಸುತ್ತಿರಬೇಕು.
8.3.2 ಹೊದ್ದಿಕೆಯ ಗುರುತುಗಳು
ಹಿಂದೆ ಬರೆದುದಕ್ಕೂ ಈಗ ಬರೆಯುತ್ತಿರುವುದಕ್ಕೂ ನಡುವೆ ಯಾವ ರೀತಿಯ ಹೊದ್ದಿಕೆಯಿದೆ ಎಂಬುದನ್ನು ಬರಹಗಾರರು ಹಲವು ಬಗೆಯ ಗುರುತುಗಳ
ಮೂಲಕ ಸೂಚಿಸುತ್ತಿರುತ್ತಾರೆ. ಇಂತಹ ಗುರುತುಗಳು ನುಡಿಯಿಂದ ನುಡಿಗೆ ಬೇರಾಗಿರುವುದರಿಂದ, ಮೂಲ ಬರಹದಲ್ಲಿ ಬರುವ ಹೊದ್ದಿಕೆಯ ಗುರುತು ಗಳನ್ನು ಗಮನಿಸಿ, ಅವಕ್ಕೆ ಬದಲಾಗಿ ಈಡು ನುಡಿಯವೇ ಆದ ಗುರುತುಗಳನ್ನು ಬಳಸಲು ಒಳ್ಳೆಯ ನುಡಿಮಾರುಗರಿಗೆ ಗೊತ್ತಿರುತ್ತದೆ.
ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಹಿಂದೆ ಹೆಸರಿಸಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಇನ್ನೊಮ್ಮೆ ಸೂಚಿಸಬೇಕಾದಾಗ he, she, iಣ ಮೊದಲಾದ ತೋರು ಪದಗಳನ್ನು ಬಳಸಲಾಗುತ್ತದೆ. ಕನ್ನಡದಲ್ಲಿ ಈ ಕೆಲಸಕ್ಕಾಗಿ ಕೆಲವು ಕಡೆಗಳಲ್ಲಿ ಅವನು, ಅವಳು, ಅದು ಮೊದಲಾದ ತೋರುಪದಗಳನ್ನು ಬಳಸಬಹು ದಾದರೂ ಬೇರೆ ಕೆಲವು ಕಡೆಗಳಲ್ಲಿ ತಾನು ಪದವನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಕೆಲವೊಮ್ಮೆ ಈ ಪದಗಳು ಮೂಲ ಬರಹದಲ್ಲಿಲ್ಲದಿದ್ದರೂ ಕನ್ನಡ ಬರಹದಲ್ಲಿ ಅವನ್ನು ಬಳಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಮೂಲ ಬರಹದಲ್ಲಿದ್ದರೂ ಕನ್ನಡದಲ್ಲಿ ಅವನ್ನು ಬಳಸದಿರಬೇಕಾಗುತ್ತದೆ. ನುಡಿಮಾರು ಗರು ಇಂಗ್ಲಿಶ್ ಮತ್ತು ಕನ್ನಡ ನುಡಿಗಳ ನಡುವಿರುವ ಈ ವ್ಯತ್ಯಾಸಗಳನ್ನು ಸರಿಯಾಗಿ ತಿಳಿದುಕೊಂಡು, ಬೇಕಾಗಿರುವ ಮಾರ್ಪಾಡುಗಳನ್ನು ತಮ್ಮ ಬರಹಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವರ ಬರಹದೊಳಗೆ ಇಂಗ್ಲಿಶ್ ನುಡಿಯ ಪರಿಚೆ ನುಸುಳಿಬಿಡುತ್ತದೆ.
8.4 ನಲ್ಬರಹಗಳ ನುಡಿಮಾರಿಕೆ
ಕತೆ, ಕವಿತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳು ನುಡಿಮಾರುಗರಿಗೆ ತಮ್ಮವೇ ಆದ ಬೇರೆ ಕೆಲವು ತೊಡಕುಗಳನ್ನು ತಂದೊಡ್ಡುತ್ತವೆ. ಅವಕ್ಕೆ ಹುರುಳುಗಳು ಹಲವು ಮಟ್ಟಗಳಲ್ಲಿರುವುದರಿಂದ, ಅವನ್ನೆಲ್ಲ ತಿಳಿದುಕೊಂಡು ನುಡಿಮಾರಿದ ಬರಹದಲ್ಲೂ ಅವು ಕಾಣಿಸಿಕೊಳ್ಳುವಂತೆ ಮಾಡುವುದು ಸುಳು ವಾದ ಕೆಲಸವೇನಲ್ಲ.
ಕೆಲವರ ಅನಿಸಿಕೆಯಂತೆ, ಕವನಗಳನ್ನು ನುಡಿಮಾರಲು ಬರುವುದೇ ಇಲ್ಲ. ಅವುಗಳಲ್ಲಿ ಹುರುಳುಗಳು ಮತ್ತು ಉಲಿಗಳು ಒಂದಾಗಿ ಹೋಗುವ ಕಾರಣ, ಅಂತಹದೇ ಒಂದುಗೂಡುವಿಕೆಯನ್ನು ಇನ್ನೊಂದು ನುಡಿಯಲ್ಲಿ ಕಲ್ಪಿಸಿಕೊಳ್ಳಲೂ ಬರುವುದಿಲ್ಲವೆಂಬುದಾಗಿ ಅವರು ಹೇಳುತ್ತಾರೆ. ಹಾಗೆ ಕಲ್ಪಿಸಿಕೊಂಡರೂ ಅದು ಬೇರೊಂದು ಕವನವಾಗಬಲ್ಲುದಲ್ಲದೆ ಬೇರೊಂದು ನುಡಿಯಲ್ಲಿ ಬರುವ ಅದೇ ಕವನವಾಗಲಾರದೆಂದು ಅವರು ವಾದಿಸುತ್ತಾರೆ.
ಬೇರೆ ಕೆಲವರ ಅನಿಸಿಕೆಯಂತೆ, ಒಂದು ಕವನ ಓದುಗರಲ್ಲಿ ಎಂತಹ ಪರಿಣಾಮವನ್ನು ಉಂಟುಮಾಡುತ್ತದೆಯೋ ಅಂತಹದೇ ಪರಿಣಾಮವನ್ನು ಉಂಟುಮಾಡಬಲ್ಲ ಕವನವನ್ನು ಇನ್ನೊಂದು ನುಡಿಯಲ್ಲೂ ಬರೆಯಬಲ್ಲೆವು. ಆದರೆ, ಇದಕ್ಕೆ ಮೂಲ ನುಡಿಯ ಕವನವನ್ನು ಓದಿನೋಡಿ, ಅದರ ಆಳವಾದ ತಿಳಿವನ್ನು ಪಡೆಯುವ ಅಳವು ಮಾತ್ರವಲ್ಲ, ಅಂತಹದೇ ತಿಳಿವನ್ನು ಕೊಡುವ ಕವನವನ್ನು ಈಡುನುಡಿಯಲ್ಲಿ ಬರೆಯುವ ಅಳವೂ ನುಡಿಮಾರುಗನಿಗೆ ಇರ ಬೇಕಾಗುತ್ತದೆ. ಎಂದರೆ, ನುಡಿಮಾರುಗನು ಒರೆಗ(ವಿಮರ್ಶಕ)ನೂ ಆಗಿರ ಬೇಕಾಗುತ್ತದೆ, ಕವಿಯೂ ಆಗಿರಬೇಕಾಗುತ್ತದೆ.
ಇದಲ್ಲದೆ, ಒಂದು ನುಡಿಯ ಮತ್ತು ಅದನ್ನು ಬಳಸುವ ಜನರ ಏಳಿಗೆಗೆ ಆ ರೀತಿ ಬೇರೆ ನುಡಿಗಳ ಕವನಗಳನ್ನು ಮತ್ತು ಬೇರೆ ಬಗೆಯ ನಲ್ಬರಹಗಳನ್ನು ನುಡಿಮಾರುವುದು ಅವಶ್ಯ ಎಂಬುದಾಗಿ ಅವರು ವಾದಿಸುತ್ತಾರೆ. ಯಾಕೆಂದರೆ, ಬೇರೆ ನುಡಿಗಳಲ್ಲಿ ನಲ್ಬರಹಗಾರರು ಯಾವ ರೀತಿಯಲ್ಲಿ ತಮ್ಮ ನುಡಿಯ ಕಸುವನ್ನು ಬಳಸಿಕೊಳ್ಳುತ್ತಾರೆ ಮತ್ತು ಹೆಚ್ಚಿಸಿಕೊಳ್ಳುತ್ತಾರೆ ಎಂಬುದನ್ನು ಇಂತಹ ನುಡಿಮಾರಿಕೆಗಳು ತೋರಿಸಿಕೊಡಬಲ್ಲುವು.
8.5 ಎಣ್ಣುಕದ ನುಡಿಮಾರಿಕೆ
ಬರಹವೊಂದನ್ನು ಒಂದು ನುಡಿಯಿಂದ ಇನ್ನೊಂದು ನುಡಿಗೆ ನುಡಿಮಾರಲು ತುಂಬಾ ಸಮಯ ತಗಲುತ್ತದೆ. ಒಬ್ಬ ನುಡಿಮಾರುಗ ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಬಹುದು. ಕೆಲವು ಬಗೆಯ ಬರಹಗಳನ್ನು ಆತ ಸ್ವಲ್ಪ ಬೇಗನೆ ಮುಗಿಸಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ಮುಗಿಸಲು ಆತನಿಗೆ ಇನ್ನಶ್ಟು ಹೊತ್ತು ತಗಲಬಹುದು.
ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ಇವತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ಬೇರೆ ನುಡಿಗಳಿಗೆ ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವು
ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸುವ ಮೂಲಕ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆ(ಸಂಶೋದನೆ)ಗಳು ನಡೆಯುತ್ತಿವೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಗೆಲುವೂ
ಅವರಿಗೆ ದೊರೆತಿದೆಯೆಂದು ಹೇಳಬಹುದು. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು.
ಆದರೆ, ಎಣ್ಣುಕಗಳು ನುಡಿಮಾರಿ ಕೊಡುವ ಈ ಬರಹಗಳಲ್ಲಿ ಹಲವು ತಪ್ಪುಗಳು ಉಳಿದಿರುತ್ತವೆ. ಅವನ್ನೆಲ್ಲ ನುಡಿಮಾರುಗರು ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಇದಕ್ಕೆ ಮುಕ್ಯ ಕಾರಣವೇನೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ನೇರವಾಗಿ ಮೂಲ ಬರಹವನ್ನು ನುಡಿಮಾರುವುದೇ ಸುಳುವಾದ ಕೆಲಸವೆಂದು ಕೆಲವರಿಗೆ ಅನಿಸುತ್ತದೆ.
ಹೀಗಿದ್ದರೂ, ಎಣ್ಣುಕಗಳ ಮೂಲಕ ನುಡಿಮಾರುವ ಕೆಲಸವನ್ನು ನಾವು ಇವತ್ತು ನಡೆಸಲೇಬೇಕಾಗಿದೆ. ಇದುವರೆಗೆ ಇಂಟರ್ನೆಟ್ನಲ್ಲಿ ಹೆಚ್ಚಿನ ವಿಶಯ ಗಳೂ ಇಂಗ್ಲಿಶ್ನಲ್ಲೇ ಕಾಣಿಸಿಕೊಳ್ಳುತ್ತಿದ್ದುವು. ಹಾಗಾಗಿ, ಇಂಗ್ಲಿಶ್ ನುಡಿ ಗೊತ್ತಿದ್ದರೆ, ನಮಗೆ ಬೇಕಾದುದನ್ನೆಲ್ಲ ಇಂಟರ್ನೆಟ್ನಲ್ಲಿ ಪಡೆಯಬಹುದೆಂಬ ಅನಿಸಿಕೆಯಿತ್ತು.
ಆದರೆ, ಇತ್ತೀಚೆಗೆ ಅದರಲ್ಲಿ ಬೇರೆ ನುಡಿಗಳ ಬಳಕೆ ಹೆಚ್ಚುತ್ತಾ ಹೋಗುತ್ತಿದೆ. ಎತ್ತುಗೆಗಾಗಿ, ಜಪಾನಿನ ಇಂಟರ್ನೆಟ್ ನೆಲೆಗಳಲ್ಲಿ ಹೆಚ್ಚಿನವೂ ಜಪಾನೀಸ್ ನುಡಿಯಲ್ಲೇ ಇವೆ. ಹಾಗಾಗಿ, ಇಂಟರ್ನೆಟ್ ಮೂಲಕ ಹೆಚ್ಚು ಹೆಚ್ಚು ವಿಶಯಗಳನ್ನು ತಿಳಿಯಬೇಕೆಂದಿರುವವರು ಇಲ್ಲವೇ ಹೆಚ್ಚು ಹೆಚ್ಚು ಜನರನ್ನು ಅವುಗಳ ಮೂಲಕ ತಲುಪಬೇಕೆಂದಿರುವವರು ಇಂಗ್ಲಿಶ್ ನುಡಿ ಯೊಂದನ್ನೇ ನಂಬಿಕೊಂಡಿದ್ದರೆ ಸಾಲದು.
ಇಂಟರ್ನೆಟ್ನಲ್ಲಿ ಒಂದಕ್ಕಿಂತ ಹೆಚ್ಚು ನುಡಿಗಳಲ್ಲಿ ಬಂದಿರುವ ವಿಶಯ ಗಳನ್ನು ತಿಳಿಯಬೇಕೆಂದಿರುವವರಿಗೆ ಎಣ್ಣುಕದ ನುಡಿಮಾರಿಕೆ ನೆರವಿಗೆ ಬರ ಬಲ್ಲುದು. ಎತ್ತುಗೆಗಾಗಿ, ಇಂಗ್ಲಿಶ್ನಿಂದ ಕನ್ನಡಕ್ಕೆ ನುಡಿಮಾರುವ ಏರ್ಪಾಡು ಇಂಟರ್ನೆಟ್ನಲ್ಲೇ ಇದೆಯಾದರೆ, ಅದನ್ನು ಬಳಸಿ ಇಂಗ್ಲಿಶ್ನಲ್ಲಿರುವ ಯಾವ ಬರಹವನ್ನು ಬೇಕಿದ್ದರೂ ನೇರವಾಗಿ ಆ ಏರ್ಪಾಡಿನ ಮೂಲಕ ಕನ್ನಡಕ್ಕೆ ಮಾರ್ಪಡಿಸಿ ಓದಲು ಇಂಗ್ಲಿಶ್ ತಿಳಿಯದ ಕನ್ನಡಿಗರಿಗೂ ಸಾದ್ಯವಾಗಬಹುದು. ಇದಲ್ಲದೆ, ಇಂತಹ ಬೇರೆ ಹಲವು ನುಡಿಗಳಲ್ಲಿರುವ ಬರಹಗಳನ್ನು ಕನ್ನಡಕ್ಕೆ ನುಡಿಮಾರುವಂತಹ ಏರ್ಪಾಡುಗಳನ್ನು ಇಂಟರ್ನೆಟ್ನಲ್ಲಿ ಅಳವಡಿಸಿ ಕೊಂಡೆವಾದರೆ, ಅವುಗಳಲ್ಲಿ ಯಾವ ನುಡಿಯಲ್ಲಿರುವ ಬರಹವನ್ನು ಬೇಕಿದ್ದರೂ
ಎಲ್ಲಾ ಕನ್ನಡಿಗರೂ ಕನ್ನಡದಲ್ಲೇನೇ ಇಂಟರ್ನೆಟ್ನಲ್ಲಿ ಓದಿ ತಿಳಿದುಕೊಳ್ಳಲು ಬರುವವಂತೆ ಮಾಡಬಲ್ಲೆವು.
ಮೊದಮೊದಲಿಗೆ ಇಂತಹ ಎಣ್ಣುಕಗಳ ಮೂಲಕ ನಾವು ಪಡೆಯಬಲ್ಲ ನುಡಿಮಾರಿಕೆಗಳು ತುಂಬಾ ತಪ್ಪುಗಳಿಂದ ಕೂಡಿದ್ದು, ಒರಟೊರಟಾಗಿರ ಬಹುದು. ಆದರೆ, ಇಂತಹ ಒರಟೊರಟಾದ ನುಡಿಮಾರಿಕೆಗಳಿಂದಲೂ ನಮಗೆ ನೆರವನ್ನು ಪಡೆಯಲು ಬರುತ್ತದೆ. ಯಾಕೆಂದರೆ, ಇವತ್ತು ಇಂಟರ್ನೆಟ್ನಲ್ಲಿ ನಾವು ಹುಡುಕುವ ಬರಹಗಳಲ್ಲಿ ಹೆಚ್ಚಿನವೂ ತಿಳಿವಿಗೆ ಸಂಬಂದಿಸಿದವು. ಒರಟು ನುಡಿಮಾರಿಕೆಗಳು ಇಂತಹದೊಂದು ಬರಹದಲ್ಲಿ ಎಂತಹ ತಿಳಿವು ಸಿಗಬಲ್ಲುದು, ಅದು ನಮಗೆ ಬೇಕಾಗಿರುವಂತಹದೇ ಅಲ್ಲವೇ ಎಂಬಶ್ಟನ್ನಾದರೂ ತಿಳಿಸ ಬಲ್ಲುವು. ಅದು ಬೇಕಾಗಿರುವಂತಹದೆಂದು ಗೊತ್ತಾದ ಮೇಲೆ ಬೇಕಿದ್ದರೆ, ನುಡಿಮಾರುಗರ ನೆರವಿನಿಂದ ಅದರ ಒಳ್ಳೆಯ ನುಡಿಮಾರಿಕೆಯನ್ನು ಪಡೆಯಲು ಹೋಗಬಹುದು.
8.5.1 ಎಣ್ಣುಕದ ಹಮ್ಮುಗೆಗಳು
ನುಡಿಮಾರಿಕೆಗೆ ಎಣ್ಣುಕವನ್ನು ಬಳಸತೊಡಗಿದ ಸಮಯದಲ್ಲಿ, ಅದರ ಮೂಲಕ ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನೇರವಾಗಿ ನುಡಿಮಾರ ಬಹುದೆಂಬ ಅನಿಸಿಕೆ ತಿಳಿವಿಗರಲ್ಲಿತ್ತು. ಬರಹದಲ್ಲಿ ಬರುವ ಪದಗಳನ್ನು ಒಂದೊಂದಾಗಿ ಇನ್ನೊಂದು ನುಡಿಗೆ ಬದಲಾಯಿಸಿದಲ್ಲಿ, ಮತ್ತು ಅವನ್ನು ಸೊಲ್ಲುಗಳಾಗಿ ಜೋಡಿಸುವ ಕ್ರಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಕೊಂಡಲ್ಲಿ, ಅದು ಆ ಇನ್ನೊಂದು ನುಡಿಯ ಬರಹವಾಗಬಲ್ಲುದು ಎಂಬುದಾಗಿ ಅವರು ಬಾವಿಸಿದ್ದರು. ಇಂಗ್ಲಿಶ್ ಮತ್ತು ರಶ್ಯನ್ ನುಡಿಗಳ ನಡುವೆ ಇಂತಹ ಎಣ್ಣುಕದ ನುಡಿಮಾರಿಕೆಯನ್ನು ನಡೆಸಲು ಕೆಲವು ಪ್ರಯತ್ನಗಳನ್ನೂ ನಡೆಸ ಲಾಯಿತು.
ಆದರೆ, ಇಂತಹ ಪ್ರಯತ್ನಗಳನ್ನು ಕಯ್ಗೆತ್ತಿಕೊಂಡಾಗ ಹಲವಾರು ತೊಡಕುಗಳು ಕಾಣಿಸಿಕೊಂಡುವು. ಮುಕ್ಯವಾಗಿ, ಸೊಲ್ಲುಗಳ ಇಟ್ಟಳವೆಂತಹದು ಎಂಬುದನ್ನು ತಿಳಿದುಕೊಳ್ಳದೆ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಯ ಸೊಲ್ಲುಗಳಾಗಿ ನುಡಿಮಾರಲು ಬರುವುದಿಲ್ಲವೆಂಬ ವಿಶಯ ಈ ಪ್ರಯತ್ನಗಳಿಂದ ಗೊತ್ತಾಯಿತು. ಹಾಗಾಗಿ, ಆಮೇಲಿನ ಪ್ರಯತ್ನಗಳಲ್ಲೆಲ್ಲ ಮೂಲ ನುಡಿಯ ಬರಹದಲ್ಲಿರುವ ಪದಗಳನ್ನು ಈಡುನುಡಿಯ ಪದಗಳೊಂದಿಗೆ
ಹೊಂದಿಸುವುದರೊಂದಿಗೆ ಮೂಲ ಬರಹದಲ್ಲಿರುವ ಸೊಲ್ಲಿನ ಇಟ್ಟಳಗಳನ್ನೂ ಈಡುನುಡಿಯ ಇಟ್ಟಳಗಳೊಂದಿಗೆ ಹೊಂದಿಸಲಾಗುತ್ತಿದೆ.
ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವು ಬೇಕಾಗುತ್ತದೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆ ಯಾಗುತ್ತವೆ, ಮತ್ತು ಹಾಗೆ ಬಳಕೆಯಾಗುವಾಗ ಅವುಗಳ ಹಲವು ಹುರುಳು ಗಳಲ್ಲಿ ಒಂದು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ ಕಟ್ಟಲೆಗಳು ಅವುಗಳಲ್ಲಿ ಇರಬೇಕು.
ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ (ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸ ವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಸುಳುವಾಗಿ ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕ ಗಳು ತುಂಬಾ ತಪ್ಪು ಮಾಡುತ್ತಿವೆ.
8.5.2 ಮಾರೆಡೆ ಹಮ್ಮುಗೆ
ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.
ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸ ಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು
ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.
ಮೂಲ ಬರಹದ ಹುರುಳನ್ನು ಕಂಡುಹಿಡಿಯಲು ಮೊದಲನೆಯ ಹಂತದಲ್ಲಿ ಅದರ ಸೊಲ್ಲುಗಳನ್ನು ಬಿಡಿಸಿನೋಡಲಾಗುತ್ತದೆ. ಅದರಲ್ಲಿ ಬಳಕೆಯಾಗಿರುವ ಪದಗಳು ಎಂತಹವು (ಹೆಸರುಪದಗಳೇ, ಎಸಕಪದಗಳೇ ಇಲ್ಲವೇ ಸೊಲ್ಲರಿಮೆಗೆ ಸಂಬಂದಿಸಿದ ಪದಗಳೇ), ಅವನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ, ಬರಹದಲ್ಲಿ ಬರುವ ಸೊಲ್ಲುಗಳ ಇಟ್ಟಳ ಎಂತಹದು, ಇಪ್ಪುರುಳಿನ ಇಟ್ಟಳವಿರುವ ಸೊಲ್ಲುಗಳನ್ನು, ನುಡಿಗಟ್ಟುಗಳನ್ನು ಇಲ್ಲವೇ ಮಾರ್ಪುರುಳು(ರೂಪಕ)ಗಳನ್ನು ಬಳಸಲಾಗಿದೆಯಾದರೆ ಅವು ಎಂತಹ ಹುರುಳುಗಳಲ್ಲಿ ಬಳಕೆಯಾಗಿವೆ ಎಂಬಂತಹ ಹಲವಾರು ವಿಶಯಗಳನ್ನು ತೀರ್ಮಾನಿಸಿಕೊಳ್ಳುವ ಕೆಲಸವನ್ನು ಈ ಹಂತದಲ್ಲಿ ನಡೆಸಬೇಕಾಗುತ್ತದೆ.
ಈ ರೀತಿ ಮೂಲ ಬರಹದ ಪದಗಳು, ಸೊಲ್ಲರಿಮೆಯ ಇಟ್ಟಳಗಳು, ಮತ್ತು ಅವೆರಡರ ಮೂಲಕ ಹುರುಳುಗಳನ್ನು ಗುರುತಿಸಿರುವ ಬಗೆ - ಇವನ್ನೆಲ್ಲ ಬಿಡಿಸಿಟ್ಟಾಗ, ಆ ಬರಹದ ಕಲ್ಪಿತ ರೂಪವೊಂದು ದೊರೆಯುತ್ತದೆ.
ಎರಡನೆಯ ಹಂತದಲ್ಲಿ ಮೂಲ ಬರಹದ ಈ ಕಲ್ಪಿತ ರೂಪವನ್ನು ಈಡು ಬರಹದ ಕಲ್ಪಿತ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಇದಕ್ಕಾಗಿ, ಮೂಲನುಡಿಗೂ ಈಡುನುಡಿಗೂ ನಡುವೆ ಪದಗಳಲ್ಲಿ, ಸೊಲ್ಲಿನ ಇಟ್ಟಳಗಳಲ್ಲಿ, ಮತ್ತು ಅವುಗಳ ಮೂಲಕ ಹುರುಳುಗಳನ್ನು ಗುರುತಿಸುವ ಬಗೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆಯೋ ಅವನ್ನೆಲ್ಲ ಬಳಸಿಕೊಳ್ಳಬೇಕಾಗುತ್ತದೆ.
ಮೂರನೆಯ ಹಂತದಲ್ಲಿ ಈಡು ಬರಹದ ಈ ಕಲ್ಪಿತ ರೂಪವನ್ನು ಅದರ ನಿಜವಾದ ಬರಹ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಎಸಕ ಪದಗಳಿಗೆ ಹಿಂಬೊತ್ತನ್ನು (ಬೂತಕಾಲವನ್ನು) ಇಲ್ಲವೇ ಮುಂಬೊತ್ತನ್ನು (ಬವಿಶ್ಯತ್ಕಾಲ ವನ್ನು) ತಿಳಿಸುವ ಪದರೂಪಗಳನ್ನು ಕೊಡುವುದು, ಹೆಸರುಪದಗಳಿಗೆ ಅವುಗಳ ಪಾಂಗುಗಳನ್ನು ಗುರುತಿಸುವ ಅನ್ನು, ಇಂದ, ಗೆ, ಮತ್ತು ಅಲ್ಲಿ ಎಂಬ ಒಟ್ಟುಗಳಲ್ಲಿ ಒಂದನ್ನು ಸೇರಿಸುವುದು, ಹೆಸರುಪದಗಳಿಗೂ ಎಸಕಪದಗಳಿಗೂ ನಡುವೆ ಹೊಂದಾಣಿಕೆಯನ್ನು ಉಂಟುಮಾಡುವುದು ಮೊದಲಾದ ಕೆಲಸಗಳನ್ನು ಈ ಹಂತದಲ್ಲಿ ನಡೆಸಲಾಗುತ್ತದೆ.
ಈ ಮೂರು ಹಂತಗಳಿಗೆ ಬೇಕಾಗುವ ಕೆಲಸಗಳನ್ನು ನಡೆಸುವುದಕ್ಕಾಗಿ ಎಣ್ಣುಕಕ್ಕೆ ಮೂರು ಬಗೆಯ ಪದನೆರಕೆಗಳನ್ನು ಒದಗಿಸಬೇಕಾಗುತ್ತದೆ:
ಮೂಲನುಡಿಯ ಪದರೂಪಗಳ, ಸೊಲ್ಲರಿಮೆಯ ಮತ್ತು ಹುರುಳುಗಳ ತಿಳಿವನ್ನು ಕೊಡುವ ಪದನೆರಕೆ; ಈಡುನುಡಿಯ ಕುರಿತಾಗಿ ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ಪದನೆರಕೆ; ಮತ್ತು ಈ ಎರಡರ ನಡುವಿನ ಪತ್ತುಗೆ(ಸಂಬಂದ) ಯನ್ನು ತಿಳಿಸುವ ಮೂರನೆಯದೊಂದು ಇನ್ನುಡಿಯ ಪದನೆರಕೆ.
ಎಣ್ಣುಕಗಳಿಗೆ ಒದಗಿಸಬೇಕಾಗಿರುವ ಈ ವಿಶಯಗಳನ್ನು ಮೂರು ಬೇರೆ ಬೇರೆ ಅಂಗಗಳಲ್ಲಿ ಒದಗಿಸಲಾಗುತ್ತದೆ. ಎತ್ತುಗೆಗಾಗಿ, ಮೊದಲನೆಯ ಹಂತಕ್ಕೆ ಬೇಕಾಗುವ ವಿಶಯಗಳನ್ನು ಪದ ಮತ್ತು ಪದರೂಪಕ್ಕೆ ಸಂಬಂದಿಸಿದವು, ಸೊಲ್ಲರಿಮೆಗೆ ಸಂಬಂದಿಸಿದವು, ಮತ್ತು ಹುರುಳುಗಳಿಗೆ ಸಂಬಂದಿಸಿದವು ಎಂಬುದಾಗಿ ಮೂರು ಅಂಗಗಳಲ್ಲಿ ಬೇರ್ಪಡಿಸಿ ಕೊಡಲಾಗುತ್ತದೆ.
ಇದೇ ರೀತಿಯಲ್ಲಿ, ಎರಡನೇ ಮತ್ತು ಮೂರನೇ ಹಂತಗಳಿಗೆ ಬೇಕಾಗುವ ವಿಶಯಗಳನ್ನೂ ಮೂರು ಬೇರೆ ಬೇರೆ ಅಂಗಗಳಲ್ಲಿ ಬೇರ್ಪಡಿಸಿ ಕೊಡಲಾಗು ತ್ತದೆ. ಹೀಗೆ ಮಾಡುವುದರಿಂದಾಗಿ, ಮುಂದೆ ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಕೆಲಸ ಹೆಚ್ಚು ಸುಳುವಿನದಾಗುತ್ತದೆ.
8.5.3 ಎಡೆನುಡಿ ಹಮ್ಮುಗೆ
ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ.
ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರ ಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹ ವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು. ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ.
ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿ
ಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹವ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.
ಎತ್ತುಗೆಗಾಗಿ, ಮೂಲ ಬರಹದಲ್ಲಿ ಕಾಣಿಸುವ ಎಲ್ಲಾ ಬಗೆಯ ಇಪ್ಪುರುಳು ಗಳನ್ನೂ ಇಂತಹ ಎಡೆನುಡಿಯಲ್ಲಿ ಬಗೆಹರಿಸಿಕೊಳ್ಳಬೇಕಾಗುತ್ತದೆ. ಆದರೆ, ಇದನ್ನು ನಡೆಸುವುದು ಅಶ್ಟೊಂದು ಸುಳುವಿನ ಕೆಲಸವೇನಲ್ಲ. ಯಾಕೆಂದರೆ, ಬೇರೆ ಬೇರೆ ನುಡಿಗಳ ನಡುವೆ ಬೇರೆ ಬೇರೆ ಬಗೆಯ ಪದ ಮತ್ತು ಇಟ್ಟಳಗಳ ಇಪ್ಪುರುಳುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ನಾವು ಕಲ್ಪಿಸಬೇಕಾಗಿರುವ ಎಡೆನುಡಿಯನ್ನು ಜಗತ್ತಿನ ಎಲ್ಲಾ ನುಡಿಗಳೊಂದಿಗೂ ಹೋಲಿಸಿ ನೋಡದೆ ಅದರಲ್ಲಿ ಕಾಣಿಸಬಲ್ಲ ಇಪ್ಪುರುಳುಗಳನ್ನೆಲ್ಲ ಮೇಲೆ ಸೂಚಿಸಿದ ಹಾಗೆ ಬಗೆ ಹರಿಸಲು ಬರುವುದಿಲ್ಲ.
ಇಂತಹ ಹಲವು ತೊಡಕುಗಳು ಮಾರೆಡೆ ಹಮ್ಮುಗೆಯಲ್ಲಿ ಇಲ್ಲವಾಗುತ್ತವೆ. ಎತ್ತುಗೆಗಾಗಿ, ಅದರ ಮೊದಲನೇ ಹಂತದಲ್ಲಿ ಮೂಲನುಡಿಗೆ ಸಂಬಂದಿಸಿ ದಂತಹ ಇಪ್ಪುರುಳುಗಳನ್ನು ಮಾತ್ರ ಬಗೆಹರಿಸಿದರೆ ಸಾಕು; ಈಡುನುಡಿಗೆ ಸಂಬಂದಿಸಿದಂತಹ ಇಪ್ಪುರುಳುಗಳೇನಾದರೂ ಉಳಿದಿದ್ದರೆ, ಅವನ್ನು ಮಾರೆಡೆಗೊಳಿಸುವ ಎರಡನೇ ಹಂತದಲ್ಲಿ ಬಗೆಹರಿಸಬಹುದು.
ಇದಲ್ಲದೆ, ಮೂಲನುಡಿಗೂ ಈಡುನುಡಿಗೂ ನಡುವೆ ಕಾಣಿಸುವ ಹಲವು ಬಗೆಯ ಹೋಲಿಕೆಗಳನ್ನು ಮಾರೆಡೆ ಹಮ್ಮುಗೆಯಲ್ಲಿ ನಾವು ಬಳಸಿಕೊಳ್ಳ ಬಲ್ಲೆವು; ಅವೆರಡರ ನಡುವಿರುವ ವ್ಯತ್ಯಾಸಗಳನ್ನು ಮಾತ್ರ ನಾವು ಬಗೆಹರಿಸಿ ಕೊಳ್ಳಬೇಕಾಗುತ್ತದೆ. ಆದರೆ, ಎಡೆನುಡಿ ಹಮ್ಮುಗೆಯಲ್ಲಿ ನುಡಿಗಳ ನಡುವೆ ಕಾಣಿಸಿಕೊಳ್ಳಬಲ್ಲ ಎಲ್ಲಾ ಬಗೆಯ ವ್ಯತ್ಯಾಸಗಳನ್ನೂ ಬಗೆಹರಿಸಿಕೊಳ್ಳಬೇಕಾಗು ತ್ತದೆ. ಯಾಕೆಂದರೆ, ಅದು ಎಲ್ಲಾ ನುಡಿಗಳಿಗೂ ಸಮಾನವಾಗಿರುವಂತಹ ಅಂಶಗಳನ್ನಶ್ಟೇ ಒಳಗೊಳ್ಳಬೇಕಾಗಿರುತ್ತದೆ. ಈ ಕಾರಣಕ್ಕಾಗಿ, ಎಡೆನುಡಿ ಹಮ್ಮುಗೆಯಲ್ಲಿ ತುಂಬಾ ತೊಡಕು ತೊಡಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ.
ಇವತ್ತು ಎಡೆನುಡಿ ಹಮ್ಮುಗೆಗಳನ್ನು ಬಳಸುವವರಲ್ಲಿ ಹೆಚ್ಚಿನವರೂ ಕೆಲವೇ ಕೆಲವು ನುಡಿಗಳಿಗೆ ಸಮಾನವಾಗಿರುವಂತಹ ಎಡೆನುಡಿಗಳನ್ನು ಮಾತ್ರವೇ ಕಲ್ಪಿಸಿಕೊಳ್ಳುತ್ತಾರೆ. ಎತ್ತುಗೆಗಾಗಿ, ಯುರೋಪಿನ ನುಡಿಗಳ ನಡುವೆ ನುಡಿ ಮಾರುವುದಕ್ಕಾಗಿ ಉಂಟುಮಾಡಿರುವಂತಹ ಎಡೆನುಡಿ ಅಲ್ಲಿನ ನುಡಿಗಳಿಗೆ ಮಾತ್ರ ಸಮಾನವಾಗಿದೆಯಲ್ಲದೆ ಬೇರೆ ನುಡಿಗಳಿಗೆ ಸಮಾನವಾದುದಲ್ಲ.
ಹೀಗೆ ಮಾಡುವುದರಿಂದ ಅವರು ಕಲ್ಪಿಸಿಕೊಳ್ಳಬೇಕಾಗಿರುವ ಎಡೆನುಡಿ ಹೆಚ್ಚು ತೊಡಕಿನದಾಗುವುದಿಲ್ಲ.
8.5.4 ಎಣಿಕೆಯ ಹಮ್ಮುಗೆ
ಮೇಲಿನ ಎರಡು ಬಗೆಯ ಹಮ್ಮುಗೆಗಳಿಗೂ ನೆರವಾಗುವ ಹಾಗೆ, ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ.
ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದ ರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವು ಹೆಚ್ಚಿನೆಡೆಗಳಲ್ಲೂ ಬಳಕೆಯಾಗುತ್ತವೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.
ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ್ರಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಮೂಲನುಡಿಯ ಪದಗಳಿಗೆ ಬದಲಾಗಿ ಯಾವ ಈಡುನುಡಿಯ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ್ರಂಚ್ ನುಡಿಗೆ ಇಲ್ಲವೇ ಫ್ರಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.
ಆದರೆ, ಈ ಹಮ್ಮುಗೆಯನ್ನು ಬಳಸಬೇಕಿದ್ದಲ್ಲಿ ಸಾವಿರಾರು ಇರ್ನುಡಿಯ ಬರಹಗಳು ಎಣ್ಣುಕಗಳಿಗೆ ಸಿಗಬಲ್ಲ ರೂಪದಲ್ಲಿ ಇರಬೇಕಾಗುತ್ತದೆ. ಹಾಗಾಗಿ, ಸದ್ಯಕ್ಕಂತೂ ಈ ಹಮ್ಮುಗೆಯನ್ನು ಇಂಗ್ಲಿಶ್, ಫ್ರಂಚ್, ಜರ್ಮನ್ ಮೊದಲಾದ ಕೆಲವೇ ಕೆಲವು ನುಡಿಗಳಲ್ಲಿ ಮಾತ್ರ ಬಳಸಬಲ್ಲೆವು.
8.5.5 ಎಣ್ಣುಕಗಳ ತೊಡಕುಗಳು
ನುಡಿಮಾರುವಲ್ಲಿ ಎಣ್ಣುಕಗಳು ಹಲವು ಬಗೆಯ ತೊಡಕುಗಳನ್ನು ಎದುರಿಸ ಬೇಕಾಗುತ್ತದೆ. ಅವುಗಳಲ್ಲಿ ಕೆಲವನ್ನು ಹಮ್ಮುಗೆಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಬಗೆಹರಿಸಬಹುದು; ಆದರೆ ಬೇರೆ ಕೆಲವನ್ನು ಸದ್ಯಕ್ಕಂತೂ ಬಗೆಹರಿಸಲಾರೆವೆಂದೇ ಹೇಳಬೇಕಾಗುತ್ತದೆ. ಎಣ್ಣುಕಗಳು ಕೊಡುವ ಬರಹ ವನ್ನು ನುಡಿಮಾರುಗರಿಂದ ತಿದ್ದಿಸುವ ಮೂಲಕವೇನೇ ಇಂತಹ ತೊಡಕು ಗಳಿಂದಾಗಿ ಮೂಡಿಬರುವ ತಪ್ಪುಗಳನ್ನು ಸರಿಪಡಿಸಬೇಕಾಗುತ್ತದೆ.
ಬರಹಗಳಲ್ಲಿ ಕಾಣಿಸಿಕೊಳ್ಳುವ ಇಪ್ಪುರುಳುಗಳು ಸಾಮಾನ್ಯವಾಗಿ ಓದುಗರಿಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ಯಾಕೆಂದರೆ, ಅವರಿಗೆ ಸೊಲ್ಲು ಗಳನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದಿಂದ, ಇಲ್ಲವೇ ತಮ್ಮ ಅನುಬವದಿಂದ ಸರಿಯಾದ ಹುರುಳನ್ನು ಆರಿಸಿಕೊಳ್ಳಲು ಬರುತ್ತದೆ. ಆದರೆ, ಎಣ್ಣುಕಗಳಿಗೆ ಅವು ತುಂಬಾ ತೊಂದರೆ ಕೊಡುತ್ತವೆ. ಯಾಕೆಂದರೆ, ಕುಳ್ಳಿಹದ ತಿಳಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಇದಲ್ಲದೆ, ಎಣ್ಣುಕಗಳಿಗೆ ಪದಗಳ ಹುರುಳನ್ನು ಗಮನಿಸಲು ಬರುತ್ತದಲ್ಲದೆ ಅವುಗಳ ತಿಳಿವನ್ನು ಗಮನಿಸಲು ಬರುವುದಿಲ್ಲ (8.1.1 ನೋಡಿ). ಹಾಗಾಗಿ, ಮೂಲನುಡಿಯ ಬರಹದಲ್ಲಿ ಕಾಣಿಸುವ ಪದ ಮತ್ತು ಸೊಲ್ಲುಗಳ ಹುರುಳು ಎಂತಹದು ಎಂಬುದನ್ನು ಮಾತ್ರವೇ ಅವು ಬಳಸಿಕೊಳ್ಳಬಲ್ಲುವಲ್ಲದೆ, ನೇರವಾಗಿ ಪದ ಮತ್ತು ಸೊಲ್ಲುಗಳು ಓದುಗರಲ್ಲಿ ಮೂಡಿಸುವಂತಹ ತಿಳಿವು ಎಂತಹದು ಎಂಬುದನ್ನು ಅವು ಬಳಸಿಕೊಳ್ಳಲಾರವು.
ಮೇಲೆ ಸೂಚಿಸಿದ ಹಾಗೆ, ಪದಗಳ ತಿಳಿವನ್ನು ಅವುಗಳ ಹುರುಳುಗಳು ಪೂರ್ತಿಯಾಗಿ ಕೊಡಲಾರವು. ಯಾಕೆಂದರೆ, ಎರಡು ಪದಗಳ ನಡುವೆ ತಿಳಿವಿನಲ್ಲಿ ತುಸುವಾದರೂ ವ್ಯತ್ಯಾಸ ಇದ್ದೇ ಇರುತ್ತದೆ. ಹಾಗಾಗಿ, ಒಂದು ಪದವನ್ನು ಇನ್ನೊಂದು ಪದದ ಹುರುಳಾಗಿ ಕೊಡುವಾಗಲೆಲ್ಲ ಇಂತಹ ತಿಳಿವಿನ ವ್ಯತ್ಯಾಸ ಗಳನ್ನು ಕಡೆಗಣಿಸುತ್ತಲೇ ಇರಬೇಕಾಗುತ್ತದೆ. ಎಲ್ಲಾ ನುಡಿಗಳಿಗೂ ಸಮಾನವಾಗ ಬಲ್ಲ ಎಡೆನುಡಿಯೊಂದನ್ನು ಉಂಟುಮಾಡುವಲ್ಲಿ ಇದೂ ಒಂದು ತೊಡಕಾಗಿದೆ.
8.5.6 ಒಳನುಡಿಗಳ ನುಡಿಮಾರಿಕೆ
ಕೆಲವು ಅರಿಮೆ(ವಿಜ್ನಾನ)ಗಳಿಗೆ ಮತ್ತು ಪಳಗಿಕೆಗಳಿಗೆ ಸಂಬಂದಿಸಿದಂತೆ ಅವುಗಳವೇ ಆದ ಒಳನುಡಿಗಳು ಬೆಳೆದು ಬಂದಿರುತ್ತವೆ. ಎತ್ತುಗೆಗಾಗಿ,
ಕೋರ್ಟುಗಳಿಗೆ ಸಂಬಂದಿಸಿದಂತೆ ಒಳನುಡಿಯೊಂದು ಬಳಕೆಗೆ ಬಂದಿದ್ದು, ಕೋರ್ಟಿನ ಬರಹಗಳಲ್ಲೆಲ್ಲ ಅದರ ಬಳಕೆಯಾಗುವುದನ್ನು ಕಾಣಬಹುದು. ಇದೇ ರೀತಿಯಲ್ಲಿ ಹಲವು ಬಗೆಯ ಅರಿಮೆಯ (ವಿಜ್ನಾನದ) ಬರಹಗಳಲ್ಲೂ ಅವುಗಳದೇ ಆದ ಒಳನುಡಿಗಳು ಬಳಕೆಯಾಗುತ್ತಿರುತ್ತವೆ. ಈ ರೀತಿ ತಮ್ಮದೇ ಆದ ಒಂದು ಒಳನುಡಿಯನ್ನು ಬಳಸುವ ಬರಹಗಳನ್ನು ಎಣ್ಣುಕಗಳ ಮೂಲಕ ನುಡಿಮಾರುವುದು ಹೆಚ್ಚು ಸುಳುವಾದ ಕೆಲಸ.
ಯಾಕೆಂದರೆ, ಇಂತಹ ಬರಹಗಳಲ್ಲೆಲ್ಲ ಒಂದು ಬಗೆಯ ವಿಶಯ ಮಾತ್ರ ಬರುತ್ತದೆಯಾದ ಕಾರಣ, ಅವುಗಳಲ್ಲಿ ಬಳಕೆಯಾಗುವ ಪದಗಳ ಎಣಿಕೆ ದಿನಬಳಕೆಯ ನುಡಿಯಲ್ಲಿ ಬಳಕೆಯಾಗುವ ಪದಗಳ ಎಣಿಕೆಗಿಂತ ತುಂಬಾ ಕಡಿಮೆ ಇರುತ್ತದೆ. ಇದಲ್ಲದೆ, ಈ ಪದಗಳಿಗೆ ಕಟ್ಟುನಿಟ್ಟಾದ ಹುರುಳೂ ಇರುತ್ತದೆ. ಹಾಗಾಗಿ, ಎಣ್ಣುಕಗಳಿಗೆ ಈ ಬರಹಗಳಲ್ಲಿ ಬರುವ ಪದಗಳ ಹುರುಳುಗಳನ್ನು ಕಂಡುಹಿಡಿಯಲು ಹೆಚ್ಚು ತೊಂದರೆಯಾಗುವುದಿಲ್ಲ.
ಇಂತಹ ಬರಹಗಳಲ್ಲಿ ಕೆಲವೇ ಕೆಲವು ಸೊಲ್ಲಿನ ಇಟ್ಟಳಗಳು ಮಾತ್ರ ಬರುತ್ತಿರುತ್ತವೆ. ಹಾಗಾಗಿ, ಅವುಗಳನ್ನು ನುಡಿಮಾರಲು ಬೇಕಾಗುವ ಸೊಲ್ಲರಿಮೆಯ ತಿಳಿವನ್ನು ಎಣ್ಣುಕಗಳಿಗೆ ಕೊಡಿಸಲು ಹೆಚ್ಚು ತೊಂದರೆಯಾಗುವು ದಿಲ್ಲ. ದಿನಬಳಕೆಯ ನುಡಿಯಲ್ಲಿ ಬಾರದಿರುವಂತಹ ಕೆಲವು ಇಟ್ಟಳಗಳೂ ಇವುಗಳಲ್ಲಿ ಬಳಕೆಯಾಗುತ್ತಿರಬಹುದು. ಆದರೆ, ಇವು ಆ ಒಳನುಡಿಯ ಎಲ್ಲಾ ಬರಹಗಳಲ್ಲೂ ಬರುವ ಕಾರಣ, ಅವುಗಳಿಂದಲೂ ಹೆಚ್ಚು ತೊಂದರೆಯಾಗುವು
ಇದಲ್ಲದೆ, ನುಡಿಗಟ್ಟುಗಳು ಮತ್ತು ಮಾರ್ಪುರುಳಿನ ಪದಗಳು ಇಲ್ಲವೇ ಪದಕಂತೆಗಳು ಇಂತಹ ಬರಹಗಳಲ್ಲಿ ಬಳಕೆಯಾಗುವುದು ತುಂಬಾ ಕಡಿಮೆ. ಆದರೆ, ಸೊಲ್ಲರಿಮೆಯ ಮಾರ್ಪುರುಳುಗಳು ಹೆಚ್ಚು ಬಳಕೆಯಾಗುತ್ತವೆ. ಹಾಗಾಗಿ, ಅವನ್ನು ಸೊಲ್ಲುಗಳೊಂದಿಗೆ ಸಂಬಂದಿಸುವ ಬಗೆಯನ್ನು ಎಣ್ಣುಕಗಳಿಗೆ ತಿಳಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಗಾಗಿ, ಒಳನುಡಿಯಲ್ಲಿ ಬರೆದಿರುವ ಬರಹಗಳನ್ನು ನುಡಿಮಾರುವುದಕ್ಕಾಗಿ ಎಣ್ಣುಕಗಳನ್ನು ಬಳಸಿಕೊಳ್ಳುವುದು ದಿನಬಳಕೆಯ ನುಡಿಯಲ್ಲಿ ಬರೆದಿರುವ ಬರಹಗಳನ್ನು ನುಡಿಮಾರುವುದಕ್ಕಾಗಿ ಬಳಸಿಕೊಳ್ಳುವು ದಕ್ಕಿಂತ ಹೆಚ್ಚು ಸುಳುವಾದ ಕೆಲಸವಾಗಿದೆ. ಇದಲ್ಲದೆ, ಎಣ್ಣುಕಗಳು ಕೊಡಬಲ್ಲ ನುಡಿಮಾರಿಕೆಗಳು ಒಳನುಡಿಯವಾಗಿದ್ದಲ್ಲಿ, ಅವು ಹೆಚ್ಚು ಮಂದಿ ಓದುಗರಿಗೆ ಮೆಚ್ಚುಗೆಯಾಗಬಲ್ಲುವು.
8.5.7 ಎಣ್ಣುಕಗಳಿಗಾಗಿ ಬರೆಯುವುದು
ಎಣ್ಣುಕಗಳ ತೊಡಕನ್ನು ಕಡಿಮೆ ಮಾಡಲು ನಮ್ಮೆದುರಿಗಿರುವ ಇನ್ನೊಂದು ಉಪಾಯವೆಂದರೆ, ಅವುಗಳಿಗೆ ನುಡಿಮಾರಲು ಸುಳುವಾಗುವ ಹಾಗೆ ಬರಹವನ್ನು ತಿದ್ದಿ ಬರೆಯುವುದು, ಇಲ್ಲವೇ ಬರೆಯುವಾಗಲೇನೇ ಅವಕ್ಕೆ ಅನುಕೂಲವಾಗುವ ಹಾಗೆ ಬರೆಯುವುದು. ಎತ್ತುಗೆಗಾಗಿ, ಎಲ್ಲಾ ರಾಜ್ಯಗಳಿಗೂ ಕಳಿಸಿಕೊಡಬೇಕಾಗಿರುವ ಒಂದು ವರದಿಯನ್ನು ಬರೆಯುವಾಗಲೇನೇ ಎಣ್ಣುಕ ಗಳಿಗೆ ಅನುಕೂಲವಾಗುವ ಹಾಗೆ ಬರೆದಲ್ಲಿ, ಅದನ್ನು ನೇರವಾಗಿ, ಮತ್ತು ಹೆಚ್ಚುನ ಓದುಗರಿಗೂ ಮೆಚ್ಚುಗೆಯಾಗುವ ಹಾಗೆ ಎಣ್ಣುಕಗಳ ಮೂಲಕ ನುಡಿಮಾರಿ ಆಯಾ ರಾಜ್ಯಗಳಿಗೆ ಕಳಿಸಿಕೊಡಬಹುದು.
ಒಂದು ಬರಹ ಎಣ್ಣುಕಗಳಿಗೆ ಅನುಕೂಲವಾಗಬೇಕಿದ್ದಲ್ಲಿ, ಅದರಲ್ಲಿ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಿರಬೇಕು; ಹೆಚ್ಚು ಉದ್ದವಾಗಿರುವ ಮತ್ತು ಸಿಕ್ಕಲು ಸಿಕ್ಕಲಾಗಿರುವ ಸೊಲ್ಲುಗಳನ್ನು ಬಳಸಿರಬಾರದು; ಅದರಲ್ಲಿ ಬರುವ ಸೊಲ್ಲುಗಳೆಲ್ಲ ಸೊಲ್ಲರಿಮೆಯ ಕಟ್ಟಲೆಗಳಿಗೆ ಅನುಸಾರವಾಗಿರಬೇಕು; ಹೇಳಬೇಕಾಗಿರುವುದನ್ನು ಅಡಕವಾಗಿ ಹೇಳಿರಬೇಕು; ಅವಶ್ಯವಿಲ್ಲದ ಪದಗಳನ್ನು ಮತ್ತು ಎಣ್ಣುಕಕ್ಕೆ ತಿಳಿದಿಲ್ಲದ ಪದಗಳನ್ನು ಬಳಸಿರಬಾರದು; ಮತ್ತು ಆದಶ್ಟು ಮಟ್ಟಿಗೆ ಇಪ್ಪುರುಳಿನ ಪದಗಳು ಮತ್ತು ಇಟ್ಟಳಗಳು ಅದರಲ್ಲಿ ಬಾರದ ಹಾಗೆ ನೋಡಿಕೊಳ್ಳಬೇಕು.
ಇಂತಹ ಬರಹಗಳನ್ನು ಎಣ್ಣುಕಗಳು ಓದುಗರಿಗೆ ಮೆಚ್ಚುಗೆಯಾಗುವ ಹಾಗೆ
ನುಡಿಮಾರಬಲ್ಲುವು.
8.6 ತಿರುಳು
ಬರಹಗಳನ್ನು ಒಂದು ನುಡಿಯಿಂದ ಇನ್ನೊಂದು ನುಡಿಗೆ ನುಡಿಮಾರ ಬೇಕೆಂದಿರು ವವರಿಗೆ ಸೊಲ್ಲರಿಮೆಯ ತಿಳಿವು ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಮೂಲ ನುಡಿಯ ಸೊಲ್ಲರಿಮೆಯನ್ನು ಮಾತ್ರವಲ್ಲದೆ ಈಡುನುಡಿಯ ಸೊಲ್ಲರಿಮೆಯನ್ನೂ ಅವರು ಇದಕ್ಕಾಗಿ ತಿಳಿದಿರಬೇಕಾಗುತ್ತದೆ. ಆಡುನುಡಿ ಇಲ್ಲವೇ ಒಳನುಡಿಗಳನ್ನು ಬಳಸಿರುವ ಬರಹಗಳನ್ನು ನುಡಿಮಾರಬೇಕಿದ್ದಲ್ಲಿ, ಈಡುನುಡಿಯಲ್ಲಿ ಬಳಕೆಯಾಗುತ್ತಿರುವ, ಮತ್ತು ಅವಕ್ಕೆ ಸಮನಾಗಿರುವ ಆಡುನುಡಿ ಇಲ್ಲವೇ ಒಳನುಡಿಗಳ ಸೊಲ್ಲರಿಮೆಯನ್ನೂ ಅವರು ತಿಳಿದಿರ ಬೇಕಾಗುತ್ತದೆ.
ಎಣ್ಣುಕಗಳ ಮೂಲಕ ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಯನ್ನು ತಿಳಿಸಿಕೊಡ ಬೇಕಾಗುತ್ತದೆ; ಹಾಗಾಗಿ, ಅಂತಹ ಕೆಲಸಗಳನ್ನು ನಡೆಸುವವರೂ ಈ ಎರಡು ನುಡಿಗಳ ಸೊಲ್ಲರಿಮೆಗಳನ್ನು ಇನ್ನಶ್ಟು ಹೆಚ್ಚು ವಿವರವಾಗಿ ತಿಳಿದಿರ ಬೇಕಾಗುತ್ತದೆ.