Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಮೂರು — ವಿಷಯವಾಕ್ಯಗಳ ಒಳರಚನೆ
3.1 ಪೀಠಿಕೆ
ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ವಿಷಯವಾಕ್ಯಗಳು ಬಳಕೆಯಲ್ಲಿವೆ. ಇವು ಮೂರು ರೀತಿಯ ಸಂಗತಿಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಸಂಗತಿಗಳ ಸ್ವರೂಪದ ಆಧಾರದ ಮೇಲೆ ಕೆಳಗೆ ಕೊಟ್ಟಿರುವಂತೆ ಈ ವಾಕ್ಯ ಗಳನ್ನು ಇರುವಿಕೆಯ ವಾಕ್ಯಗಳು, ಗುಣವಾಕ್ಯಗಳು ಮತ್ತು ಸಂಬಂಧ ವಾಕ್ಯಗಳು ಎಂಬುದಾಗಿ ಹೆಸರಿಸಬಹುದು. ಇರುವಿಕೆಯ ವಾಕ್ಯಗಳು: ಯಾವುದಾದರೊಂದು ಜಾಗದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಇರುವಿಕೆಯನ್ನು ತಿಳಿಸುವ ವಾಕ್ಯಗಳು.
(1ಕ) ಮೇಷ್ಟ್ರು ಕ್ಲಾಸಿನಲ್ಲಿದ್ದಾರೆ. (1ಖ) ನಿಮ್ಮ ಹೊಸ ಪುಸ್ತಕ ಮೇಜಿನ ಮೇಲಿತ್ತು. (1ಗ) ಆಕೆಯ ಹತ್ತಿರ ಒಂದು ಹೊಲಿಗೆ ಯಂತ್ರವಿದೆ. (1ಘ) ಈ ಹಾಲಿನಲ್ಲಿ ನಾಳೆ ಒಂದು ಸಭೆಯಿದೆ. (1ಕ) ವಾಕ್ಯದಲ್ಲಿ ಕ್ಲಾಸು ಎಂಬ ಜಾಗದಲ್ಲಿ ಮೇಷ್ಟ್ರು ಎಂಬ ವ್ಯಕ್ತಿಯ ಈಗಿನ ಇರುವಿಕೆಯನ್ನು ತಿಳಿಸಲಾಗಿದೆ, ಮತ್ತು (1ಖ) ವಾಕ್ಯದಲ್ಲಿ ಮೇಜು ಎಂಬ ಜಾಗದಲ್ಲಿ ನಿಮ್ಮ ಹೊಸ ಪುಸ್ತಕ ಎಂಬ ವಸ್ತುವಿನ ಹಿಂದಿನ ಇರುವಿಕೆಯನ್ನು ತಿಳಿಸಲಾಗಿದೆ, ಇತ್ಯಾದಿ. ಗುಣವಾಕ್ಯಗಳು: ಯಾವುದಾದರೊಂದು ಗುಣಧರ್ಮವನ್ನು ವ್ಯಕ್ತಿ, ವಸ್ತು ಮೊದಲಾದವುಗಳ ಮೇಲೆ ಹೊರಿಸುವ ವಾಕ್ಯಗಳು.
(2ಕ) ಆಕೆಯ ತುಟಿ ಬಹಳ ಕೆಂಪಗಿದೆ. (2ಖ) ನಾರಾಯಣಸ್ವಾಮಿಯ ತಲೆ ನುಣ್ಣಗಿತ್ತು. (2ಗ) ಆ ಹುಲಿ ಬಹಳ ಹಸಿದಿದೆ. (2ಘ) ನಿಮ್ಮ ಕೆಲಸ ಅವರಿಗೆ ಮೆಚ್ಚುಗೆಯಾಗಿದೆ. (2ಕ) ವಾಕ್ಯದಲ್ಲಿ ಬಹಳ ಕೆಂಪು ಎಂಬ ಗುಣಧರ್ಮವನ್ನು ಆಕೆಯ ತುಟಿಯ ಮೇಲೆ ಹೊರಿಸಲಾಗಿದೆ, ಮತ್ತು (2ಖ) ವಾಕ್ಯದಲ್ಲಿ ನುಣ್ಣಗೆ ಎಂಬ ಗುಣ ಧರ್ಮವನ್ನು ನಾರಾಯಣಸ್ವಾಮಿಯ ತಲೆಯ ಮೇಲೆ ಹೊರಿಸಲಾಗಿದೆ, ಸಂಬಂಧವಾಕ್ಯಗಳು: ಯಾವುದಾದರೊಂದು ವ್ಯಕ್ತಿ, ವಸ್ತು, ಸಂಗತಿ, ಘಟನೆ ಮೊದಲಾದವುಗಳೊಂದಿಗೆ ಬೇರೊಂದು ವ್ಯಕ್ತಿ, ವಸ್ತು, ಸಂಗತಿ, ಘಟನೆ ಮೊದಲಾದವುಗಳನ್ನು ಸಂಬಂಧಿಸುವ ವಾಕ್ಯಗಳು. ಇಂತಹ ವಾಕ್ಯಗಳು ಇಬ್ಬರು ವ್ಯಕ್ತಿಗಳ ನಡುವಿರುವ ಸಂಬಂಧಗಳನ್ನು (ಉದಾ: ನಂಟಸ್ತಿಕೆ) ಮಾತ್ರವಲ್ಲದೆ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವಿನ ನಡುವಿರುವ ಸಂಬಂಧವನ್ನಾಗಲಿ (ಉದಾ: ವ್ಯಕ್ತಿಯ ಅಂಗ, ಸೊತ್ತು, ದೇಹದ ಇಲ್ಲವೇ ಮನಸ್ಸಿನ ಸ್ಥಿತಿ, ಕೆಲಸ, ಇತ್ಯಾದಿ) ಇಲ್ಲವೇ ಎರಡು ವಸ್ತುಗಳ ಇಲ್ಲವೇ ಸಂಗತಿಗಳ ನಡುವಿರುವ ಸಂಬಂಧವನ್ನಾಗಲಿ (ಉದಾ: ವಸ್ತು ಇಲ್ಲವೇ ಸಂಗತಿಯ ಗುಣಧರ್ಮ, ಅಂಗ, ಇತ್ಯಾದಿ) ಸೂಚಿಸಬಲ್ಲುವು. (3ಕ) ಆ ರಾಜನಿಗೆ ಮೂವರು ರಾಣಿಯರಿದ್ದರು. (3ಖ) ಸೀತಾಪತಿಗೆ ನಾಲ್ಕು ಎಮ್ಮೆಗಳಿವೆ. (3ಗ) ಆತನ ಮಾತಿಗೆ ಬಹಳ ಬೆಲೆಯಿರುತ್ತದೆ. (3ಘ) ಪೊೀಲೀಸರಿಗೆ ನಿಮ್ಮ ಮೇಲೆ ಸಂಶಯವಿತ್ತು. (3ಕ) ವಾಕ್ಯದಲ್ಲಿ ರಾಜ ಎಂಬ ವ್ಯಕ್ತಿಗೂ ಮತ್ತು ಮೂವರು ರಾಣಿಯರಿಗೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಮತ್ತು (3ಘ)ದಲ್ಲಿ ಪೊೀಲೀಸ ರಿಗೂ ಮತ್ತು ನಿಮ್ಮ ಮೇಲಿನ ಸಂಶಯ ಎಂಬ ಗುಣಧರ್ಮಕ್ಕೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಇತ್ಯಾದಿ.
3.1.1 ಸಮಯಭೇದಗಳು
ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದ ಕ್ರಿಯಾವಾಕ್ಯಗಳಲ್ಲಿ ಬರುವ ಇತರ ಕ್ರಿಯಾಪದಗಳಿಗಿಂತ ಸಮಯಭೇದವನ್ನು ಸೂಚಿಸುವುದರಲ್ಲಿ ಭಿನ್ನವಾಗಿದೆ. ಇತರ ಕ್ರಿಯಾಪದಗಳಿಗೆ ಹಿಂದಿನ ಮತ್ತು ಮುಂದಿನ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸುವ ಪದರೂಪಗಳು ಮಾತ್ರ ಇವೆಯಾದರೆ, ಇರು ಕ್ರಿಯಾ ಪದಕ್ಕೆ ಹಿಂದಿನ, ಮುಂದಿನ ಮತ್ತು ಈಗಿನ ಎಂಬುದಾಗಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಪದರೂಪಗಳಿವೆ. ಉದಾಹರಣೆಗಾಗಿ ಕೆಳಗೆ (4- 5)ರಲ್ಲಿ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು.
ರಾಜು ಈಗ ಮನೆಯಲ್ಲಿದ್ದಾನೆ. (4ಖ) ರಾಜು ನಿನ್ನೆ ಮನೆಯಲ್ಲಿದ್ದ. ರಾಜು ನಾಳೆ ಮನೆಯಲ್ಲಿರುತ್ತಾನೆ. ರಾಜು ಮನೆಗೆ ಹೋದ. (5ಖ) ರಾಜು ಮನೆಗೆ ಹೋಗುತ್ತಾನೆ. (4)ರಲ್ಲಿ ಮೂರು ಬೇರೆ ಬೇರೆ ವಾಕ್ಯಗಳು ಬಂದಿದ್ದು, ಇವುಗಳಲ್ಲಿ ಇರು ಕ್ರಿಯಾಪದ ಇದ್ದಾನೆ, ಇದ್ದ ಮತ್ತು ಇರುತ್ತಾನೆ ಎಂಬ ಮೂರು ಬೇರೆ ಬೇರೆ ರೂಪಗಳಲ್ಲಿ ಬಂದಿರುವುದನ್ನು ಗಮನಿಸಬಹುದು. ಇವು ಆ ವಾಕ್ಯಗಳನ್ನು ಆಡುತ್ತಿರುವ ಸಮಯ (ಈಗಿನ ಸಮಯ), ಅದಕ್ಕಿಂತ ಹಿಂದಿನ ಸಮಯ ಮತ್ತು ಅದರ ಅನಂತರದ ಸಮಯ (ಮುಂದಿನ ಸಮಯ) ಎಂಬುದಾಗಿ ಮೂರು ಬೇರೆ ಬೇರೆ ಸಮಯಗಳಲ್ಲಿ ಒಂದು ಸಂಗತಿಯ ಇರವನ್ನು ಸೂಚಿಸುತ್ತವೆ.
ಆದರೆ (5)ರಲ್ಲಿ ಎರಡು ವಾಕ್ಯಗಳು ಮಾತ್ರ ಬಂದಿದ್ದು, ಇವುಗಳಲ್ಲಿ ಹೋಗು ಕ್ರಿಯಾಪದ ಹೋದ ಮತ್ತು ಹೋಗುತ್ತಾನೆ ಎಂಬ ಎರಡು ರೂಪ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇವು ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದಿನ ಸಮಯ ಮತ್ತು ಅದಕ್ಕಿಂತ ಮುಂದಿನ ಸಮಯ ಎಂಬುದಾಗಿ ಎರಡು ಸಮಯಗಳಲ್ಲಿ ನಡೆಯುವ ಘಟನೆಗಳನ್ನು ಮಾತ್ರವೇ ಸೂಚಿಸಬಲ್ಲುವು. ಇರು ಎಂಬುದರ ಹಾಗೆ ಹೋಗು ಎಂಬುದಕ್ಕೆ (ಮತ್ತು ಇತರ ಕ್ರಿಯಾಪದಗಳಿಗೆ) ಈಗಿನ ಸಮಯದಲ್ಲಿ ನಡೆಯುತ್ತಿರುವ ಘಟನೆಯನ್ನು ಸೂಚಿಸಲು ಮುಂದಿನ ಸಮಯದ ರೂಪಕ್ಕಿಂತ ಭಿನ್ನವಾದ ರೂಪವಿಲ್ಲ. ಒಂದು ಮಾತನ್ನು ಆಡುತ್ತಿರುವ ಸಮಯದಲ್ಲೇನೇ ನಡೆಯುವ ಈಗಿನ ಸಮಯದ ಘಟನೆಯನ್ನು ಅಂತಹ ವಾಕ್ಯಗಳಲ್ಲಿ ಸೂಚಿಸಬೇಕೆಂದಿದ್ದಲ್ಲಿ, ಕನ್ನಡದಲ್ಲಿ ಅದಕ್ಕಾಗಿ ಆ ವಾಕ್ಯಗಳ ಕ್ರಿಯಾಪದದೊಂದಿಗೆ ಇರು ಕ್ರಿಯಾಪದದ ಈಗಿನ ಸಮಯದ ರೂಪವನ್ನು ಸೇರಿಸಿ ಬಳಸಬೇಕಾಗುತ್ತದೆ. ಆದರೆ ಇದಕ್ಕೆ ಘಟನೆ ನಡೆಯುತ್ತಾ ಇದೆ ಎಂಬ ಅರ್ಥ, ಇಲ್ಲವೇ ಘಟನೆ ಹಲವು ಬಾರಿ ನಡೆಯುತ್ತಿದೆ ಎಂಬ ಅರ್ಥವೂ ಬರುತ್ತದೆ. ರಾಜು ಪುಸ್ತಕ ಓದುತ್ತಾ ಇದ್ದಾನೆ. (6ಖ) ರಾಜು ತಲೆಯನ್ನು ಆಡಿಸುತ್ತಾ ಇದ್ದಾನೆ. (6ಕ) ವಾಕ್ಯಕ್ಕೆ ‘ಪುಸ್ತಕ ಓದುವ ಒಂದು ಘಟನೆ ನಡೆಯುತ್ತಾ ಇದೆ’ ಎಂಬ ಅರ್ಥವಿದೆಯಾದರೆ, (6ಖ) ವಾಕ್ಯಕ್ಕೆ ‘ತಲೆಯನ್ನು ಆಡಿಸುವಂತಹ’ ಹಲವು ಘಟನೆಗಳು ಒಂದಾದರೊಂದರಂತೆ ನಡೆಯುತ್ತಿವೆ ಎಂಬ ಅರ್ಥ ಬರುತ್ತದೆ.
ಕನ್ನಡದಲ್ಲಿ ಈ ರೀತಿ ಒಂದು ವಿಷಯ ಇಲ್ಲವೇ ಸಂಗತಿಯ ಇರವನ್ನು ಸೂಚಿಸುವ ಇರು ಕ್ರಿಯಾಪದಕ್ಕೆ ಮೂರು ಸಮಯ ರೂಪಗಳಿವೆಯಾದರೂ ಘಟನೆಗಳನ್ನು ಸೂಚಿಸುವ ಇತರ ಕ್ರಿಯಾಪದಗಳಿಗೆ ಎರಡು ಸಮಯರೂಪಗಳು ಮಾತ್ರ ಕಾಣಿಸಿಕೊಳ್ಳುವುದಕ್ಕೆ ಸಮಯಕ್ಕೆ ಸಂಬಂಧಿಸಿದಂತೆ ಸಂಗತಿ ಮತ್ತು ಘಟನೆಗಳ ನಡುವಿರುವ ವ್ಯತ್ಯಾಸವೇ ಮುಖ್ಯ ಕಾರಣ. ಒಂದು ಘಟನೆಯನ್ನು ತಿಳಿಸುವ ಸಮಯದಲ್ಲಿ ಅದು ಒಂದೋ ನಡೆದಿರುತ್ತದೆ ಇಲ್ಲವೇ ನಡೆಯ ಲಿರುತ್ತದೆ. ಹಾಗಾಗಿ ಅದರ ಸಮಯವನ್ನು ಸೂಚಿಸಲು ಎರಡು ಸಮಯ ರೂಪಗಳಿದ್ದರೆ ಸಾಕು. ಆದರೆ ಒಂದು ಸಂಗತಿಯು ಅದನ್ನು ತಿಳಿಸುವ ಸಂದಭ್ರದಲ್ಲಿಯೂ ಇರಬಹುದು ಇಲ್ಲವೇ ಅದಕ್ಕಿಂತ ಹಿಂದೆ ಇಲ್ಲವೇ ಮುಂದೆಯೂ ಇರಬಹುದು. ಹಾಗಾಗಿ ಅದರ ಇರುವಿಕೆಯನ್ನು ತಿಳಿಸುವ ಮೂರು ಸಮಯರೂಪಗಳ ಅವಶ್ಯಕತೆಯಿದೆ.
ಕ್ರಿಯಾಪದಕ್ಕೆ ತಿಳಿಸುವ ಸಮಯದಲ್ಲಿ ಒಂದು ಘಟನೆ ನಡೆಯುತ್ತಿರಬೇಕಾದರೆ ಅದು ಕ್ಷಣಿಕವಾಗಿಲ್ಲದಿರಬೇಕು ಇಲ್ಲವೇ ಕ್ಷಣಿಕವಾಗಿದ್ದರೂ ಹಲವು ಬಾರಿ ನಡೆಯು ವಂತಹದಿರಬೇಕು. ಈ ಎರಡು ಹೆಚ್ಚಿನ ಅರ್ಥಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಸರಳ ಕ್ರಿಯಾರೂಪದ ಬದಲು ಮೇಲೆ ಸೂಚಿಸಿದಂತೆ ಕೂಡು ಕ್ರಿಯಾಪದಗಳನ್ನು ಬಳಸುವ ಕ್ರಮ ಬಳಕೆಯಲ್ಲಿ ಬಂದಿದೆ.
ಕ್ರಿಯಾವಾಕ್ಯಗಳಿಗೂ ಮತ್ತು ವಿಷಯವಾಕ್ಯಗಳಿಗೂ ನಡುವೆ ಸಮಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯವಾದ ವ್ಯತ್ಯಾಸವಿದೆ. ಕ್ರಿಯಾವಾಕ್ಯಗಳಲ್ಲೆಲ್ಲ ಘಟನೆಯ ಸಮಯವನ್ನು ಖಡ್ಡಾಯವಾಗಿಯೂ ಸೂಚಿಸಲೇಬೇಕೆಂಬ ನಿಯಮ ವಿದೆ. ಆದರೆ ವಿಷಯವಾಕ್ಯಗಳಲ್ಲಿ ಈ ರೀತಿ ಖಡ್ಡಾಯವಿಲ್ಲ. ವಿಷಯದ ಸಮಯ ಅಷ್ಟೊಂದು ಪ್ರಾಮುಖ್ಯವಾಗಿಲ್ಲವಾದಲ್ಲಿ ಅದನ್ನು ಸೂಚಿಸದೇ ಇರಲೂ ಸಾಧ್ಯ ವಿದೆ ಮತ್ತು ಇಂತಹ ಸಂದಭ್ರಗಳಲ್ಲಿ ಈ ವಾಕ್ಯಗಳನ್ನು ಇರು ಕ್ರಿಯಾಪದ ವಿಲ್ಲದೆಯೂ ಬಳಸಲು ಸಾಧ್ಯವಿದೆ. ರಾಜು ಬೊಂಬಾಯಿಯಲ್ಲಿ, ಅವನ ಹೆಂಡತಿ ಬೆಂಗಳೂರಿನಲ್ಲಿ. (7ಖ) ಆಕೆಯ ತುಟಿ ಕೆಂಪು.’ (7ಗ) ಆ ರಾಜನಿಗೆ ಮೂವರು ರಾಣಿಯರು. ಸಾಮಾನ್ಯವಾಗಿ ಇಂತಹ ಇರು ಕ್ರಿಯಾಪದವಿಲ್ಲದ ವಿಷಯವಾಕ್ಯಗಳು ಮಾತ ನಾಡುವ ಸಮಯಕ್ಕೆ ಸಂಬಂಧಿಸಿದ ಸಂಗತಿಯೊಂದನ್ನು ತಿಳಿಸುತ್ತವೆ. ಆದರೆ ಮೇಲೆ (7ಗ)ದಲ್ಲಿ ಕಾಣಿಸಿದಂತೆ ಅದು ಮಾತನಾಡುವ ಸಮಯಕ್ಕಿಂತಲೂ ವಾಕ್ಯದ ಮೂಲಕ ನಿರೂಪಿಸುವ ಸಮಯಕ್ಕೆ ಸಂಬಂಧಿಸಿದಂತಹ ಸಂಗತಿ ಯಾಗಿರಲು ಸಾಧ್ಯವಿದೆ.
3.1.2 ಕ್ರಿಯಾವಾಕ್ಯಗಳೊಂದಿಗೆ ಸಂಬಂಧ
ವಿಷಯವಾಕ್ಯ ಮತ್ತು ಕ್ರಿಯಾವಾಕ್ಯಗಳು ಹಲವು ವಿಷಯಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆಯಾದರೂ ಅವುಗಳ ನಡುವೆ ಹತ್ತಿರದ ಸಂಬಂಧವಿದೆ. ಸಾಮಾನ್ಯವಾಗಿ ಒಂದು ಕ್ರಿಯಾವಾಕ್ಯ ಎರಡು ವಿಷಯವಾಕ್ಯಗಳನ್ನು ಸಂಬಂಧಿಸು ತ್ತದೆಯೆಂದು ಹೇಳಲು ಸಾಧ್ಯವಿದೆ. ರಾಜು ಮರಕ್ಕೆ ಹತ್ತಿದ. ರಾಜು ಮರದ ಕೆಳಗಿದ್ದಾನೆ. (8ಖ) ರಾಜು ಮರದ ಮೇಲಿದ್ದಾನೆ. ಜಾನಕಿ ಒಂದು ಮಗುವನ್ನು ಹಡೆದಳು. (9ಕ) ಜಾನಕಿಗೆ ಮಕ್ಕಳಿಲ್ಲ. (9ಖ) ಜಾನಕಿಗೆ ಒಂದು ಮಗು ಇದೆ. (8)ರಲ್ಲಿ ಬಂದಿರುವ ಕ್ರಿಯಾವಾಕ್ಯವು ಸೂಚಿಸುವ ಘಟನೆ (8ಕ) ಮತ್ತು (8ಖ) ಗಳಲ್ಲಿ ಬಂದಿರುವ ವಿಷಯವಾಕ್ಯಗಳು ಸೂಚಿಸುವ ಎರಡು ಸಂಗತಿಗಳನ್ನು ಜೋಡಿಸಿ ಹೇಳುತ್ತವೆಯೆಂಬುದನ್ನು ಗಮನಿಸಬಹುದು. ಮರದ ಕೆಳಗಿರುವ ರಾಜು ಮರಕ್ಕೆ ಹತ್ತುವ ಮೂಲಕ ಮರದ ಮೇಲಿರುವವನಾಗುತ್ತಾನೆ. (9) ರಲ್ಲೂ ಹೀಗೆಯೇ; ಮಕ್ಕಳಿಲ್ಲದ ಜಾನಕಿ ಒಂದು ಮಗುವನ್ನು ಹಡೆಯುವುದರ ಮೂಲಕ ಒಂದು ಮಗು ಇರುವವಳಾಗುತ್ತಾಳೆ.
3.2 ಇರುವಿಕೆಯ ವಾಕ್ಯಗಳು
ಯಾವುದಾದರೊಂದು ಜಾಗದಲ್ಲಿ ವ್ಯಕ್ತಿ, ವಸ್ತು, ಗುಣಧರ್ಮ ಮೊದಲಾದವುಗಳ ಇರುವಿಕೆಯನ್ನು ಸೂಚಿಸುವುದಕ್ಕಾಗಿ ಇರುವಿಕೆಯ ವಾಕ್ಯಗಳು ಬಳಕೆಯಾಗುತ್ತವೆ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಜಾಗವನ್ನು ಸೂಚಿಸುವುದಕ್ಕಾಗಿ ಒಂದು ಘಟಕ ಮತ್ತು ಅದರಲ್ಲಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಒಂದು ಘಟಕ ಎಂಬುದಾಗಿ ಎರಡು ಮುಖ್ಯ ಘಟಕಗಳು ಬರಬೇಕಾಗುತ್ತದೆ. (10ಕ) ಕಪ್ಪು ಮಡಕೆಯಲ್ಲಿ ಬಿಸಿ ನೀರಿದೆ. (10ಖ) ಬಿಳಿಗಿರಿಯವರ ಬೆಕ್ಕು ಬೇವಿನ ಮರದ ತುದಿಯಲ್ಲಿತ್ತು. (10ಗ) ಆಕೆಯ ಹುಡುಗ ನಮ್ಮಲ್ಲಿರುತ್ತಾನೆ. (10ಕ)ದಲ್ಲಿ ಒಂದು ಜಾಗವನ್ನು ಸೂಚಿಸುವ ಕಪ್ಪು ಮಡಕೆ ಎಂಬ ಘಟಕವೂ ಮತ್ತು ಅದರಲ್ಲಿರುವ ಒಂದು ವಸ್ತುವನ್ನು ಸೂಚಿಸುವ ಬಿಸಿ ನೀರು ಎಂಬ ಘಟಕವೂ ಬಂದಿರುವುದನ್ನು ಗಮನಿಸಬಹುದು. ಇತರ ವಾಕ್ಯಗಳಲ್ಲೂ ಇದೇ ರೀತಿಯಲ್ಲಿ ಎರಡೆರಡು ಘಟಕಗಳು ಬಂದಿರುವುದನ್ನು ಕಾಣಬಹುದು.
3.2.1 ಜಾಗದ ಸ್ವರೂಪ
ಕ್ರಿಯಾವಾಕ್ಯಗಳಲ್ಲಿ ಒಂದು ಘಟನೆ ಇಲ್ಲವೇ ಚಲನೆಯ ಸುರು, ಕೊನೆ ಮತ್ತು ಜಾಗವನ್ನು ಸೂಚಿಸಬಲ್ಲ ಮೂರು ರೀತಿಯ ಘಟಕಗಳು ಬರಬಲ್ಲುವೆಂಬುದನ್ನು ನೋಡಿರುವೆವು. ಆದರೆ ನಾವು ಹಿಂದಿನ ಅಧ್ಯಾಯದಲ್ಲಿ ಇರುವಿಕೆಯ ವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸ ಬಲ್ಲ ಘಟಕಗಳು ಮಾತ್ರ ಬರಬಲ್ಲುವು.
ಇದಕ್ಕೆ ಕಾರಣವೇನೆಂದರೆ, ಸುರು ಇಲ್ಲವೇ ಕೊನೆಗಳೊಂದಿಗೆ ಬರುವ ಘಟನೆಗಳಿಂದಲೂ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುವ ಸಂಗತಿಗಳೇ ಸಿದ್ಧವಾಗುವುವಾದ ಕಾರಣ, ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುವ ವಿಷಯವಾಕ್ಯಗಳಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಘಟಕಗಳ ಅವಶ್ಯಕತೆಯಿಲ್ಲ. (11ಕ) ಬೆಕ್ಕು ಮರದ ತುದಿಗೆ ಹತ್ತಿತು. (11ಖ) ಬೆಕ್ಕು ಮರದ ತುದಿಯಲ್ಲಿದೆ. (12ಕ) ರಾಯರು ಬೆಂಗಳೂರಿನಿಂದ ಬಂದಿದ್ದಾರೆ. (12ಖ) ರಾಯರು ಬೆಂಗಳೂರಿನಲ್ಲಿ ಇಲ್ಲ. (11ಕ)ದಲ್ಲಿ ಹತ್ತು ಎಂಬ ಘಟನೆಯ ಕೊನೆಯನ್ನು ಸೂಚಿಸುವುದಕ್ಕಾಗಿ ಮರದ ತುದಿಗೆ ಎಂಬ ಘಟಕ ಬಂದಿದೆ. ಆದರೆ ಆ ಘಟನೆಯಿಂದ ಸಿದ್ಧವಾಗಿರುವ ಸಂಗತಿಯನ್ನು ತಿಳಿಸುವ (11ಖ) ವಾಕ್ಯದಲ್ಲಿ ಮರದ ತುದಿಯಲ್ಲಿ ಎಂಬುದಾಗಿ ಒಂದು ಜಾಗವನ್ನು ಸೂಚಿಸುವ ಘಟಕ ಬಂದಿದೆ.
ಇದೇ ರೀತಿಯಲ್ಲಿ (12ಕ) ವಾಕ್ಯದಲ್ಲಿ ಘಟನೆಯ ಸುರುವನ್ನು ಸೂಚಿಸುವ ಬೆಂಗಳೂರಿನಿಂದ ಎಂಬ ಘಟಕವೂ ಮತ್ತು (12ಖ) ವಾಕ್ಯದಲ್ಲಿ ಆ ಘಟನೆ ಯಿಂದ ಸಿದ್ಧವಾಗಿರುವ ಸಂಗತಿಯ ಜಾಗವನ್ನು ಸೂಚಿಸುವ ಬೆಂಗಳೂರಿನಲ್ಲಿ ಎಂಬ ಘಟಕವೂ ಬಂದಿರುವುದನ್ನು ಕಾಣಬಹುದು. ಜಾಗವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಅಲ್ಲಿ ಪ್ರತ್ಯಯ ಬಳಕೆಯಾಗು ತ್ತದೆ. ಹಾಗಾಗಿ, ಈ ಪ್ರತ್ಯಯವನ್ನೊಳಗೊಂಡಿರುವ ಪದಗಳನ್ನು ಹೆಚ್ಚಿನ ಇರುವಿಕೆಯ ವಾಕ್ಯಗಳಲ್ಲೂ ಕಾಣಬಹುದು. ಈ ಪ್ರತ್ಯಯ ಮಾತ್ರವಲ್ಲದೆ, ಸುತ್ತಲೂ, ಹತ್ತಿರ, ಹಿಂದುಗಡೆ ಮೊದಲಾದ ಬೇರೆ ಕೆಲವು ಪದಗಳೂ ಜಾಗಗಳನ್ನು ಸೂಚಿಸುವುದಕ್ಕಾಗಿ ಇಂತಹ ಇರುವಿಕೆಯ ವಾಕ್ಯಗಳಲ್ಲಿ ಬರ ಬಲ್ಲುವು. ಇವು ಜಾಗಗಳ ನಡುವಿರುವ ವೈವಿಧ್ಯವನ್ನು ಸೂಚಿಸುತ್ತವೆ. (13ಕ) ಅವರ ಮನೆಯ ಸುತ್ತಲೂ ಮುಳ್ಳಿನ ಗಿಡಗಳಿವೆ. (13ಖ) ತಂದೆಯ ಹತ್ತಿರ ಮಗನೂ ಇದ್ದ. (13ಗ) ಮನೆಯ ಹಿಂದುಗಡೆ ತರಕಾರಿಯ ತೋಟ ಇದೆ. (13ಘ) ಪೆಟ್ಟಿಗೆಯ ಒಳಗೆ ಒಂದು ಹಾವಿತ್ತು.
3.2.2 ಸಮಯಘಟಕದ ಬಳಕೆ
ಜಾಗ ಮತ್ತು ಜಾಗದಲ್ಲಿರುವ ವ್ಯಕ್ತಿ, ವಸ್ತು ಇತ್ಯಾದಿ ಎಂಬುದಾಗಿ ಎರಡು ಘಟಕಗಳು ಮಾತ್ರವಲ್ಲದೆ ಇರುವಿಕೆಯ ಸಮಯವನ್ನು ಹೆಚ್ಚು ಸ್ಪಷ್ಟವಾಗಿ ಸೂಚಿಸಬಲ್ಲ ಸಮಯ ಘಟಕವೂ ಇರುವಿಕೆಯ ವಾಕ್ಯಗಳಲ್ಲಿ ಬರಬಲ್ಲುದು.
(14ಕ) ನಿನ್ನೆ ರಾತ್ರಿ ಈ ಉದ್ಯಾನದಲ್ಲಿ ಒಂದು ಹುಲಿ ಇತ್ತು. (14ಖ) ಮಾಧವರಾಯರು ಈಗ ಕ್ಲಾಸಿನಲ್ಲಿ ಇದ್ದಾರೆ. (14ಗ) ಇವತ್ತು ಬೆಳಿಗ್ಗೆ ಆ ಟಾಂಕಿಯಲ್ಲಿ ಸ್ವಲ್ಪ ನೀರಿತ್ತು. (14ಘ) ಮೂರು ವಷ್ರಗಳ ಹಿಂದೆ ಆತ ಮಂಗಳೂರಿನಲ್ಲಿದ್ದ. (14ಕ)ದಲ್ಲಿ ಈ ಉದ್ಯಾನ ಎಂಬುದಾಗಿ ಒಂದು ಜಾಗವನ್ನು ಸೂಚಿಸುವ ಘಟಕ ಮತ್ತು ಒಂದು ಹುಲಿ ಎಂಬುದಾಗಿ ಆ ಜಾಗದಲ್ಲಿರುವ ಒಂದು ಪ್ರಾಣಿಯನ್ನು ಸೂಚಿಸುವ ಘಟಕ ಮಾತ್ರವಲ್ಲದೆ ನಿನ್ನೆ ರಾತ್ರಿ ಎಂಬುದಾಗಿ ಒಂದು ಸಮಯ ವನ್ನು ಸೂಚಿಸುವ ಘಟಕವೂ ಬಂದಿರುವುದನ್ನು ಗಮನಿಸಬಹುದು. ಸೂಚಿಸುವ ಘಟಕ ಇರುವಿಕೆಯ ವಾಕ್ಯವೊಂದರಲ್ಲಿ ಸೂಚಿಸುವ ಘಟಕವನ್ನು ಬಳಸದಿರಲೂ ಬಂದಿದೆಯಾದಲ್ಲಿ, ಜಾಗವನ್ನು ಸಾಧ್ಯವಿದೆ. ಜಾಗಕ್ಕೂ ಸಮಯಕ್ಕೂ ಹತ್ತಿರದ ಸಂಬಂಧವಿರುವುದೇ ಇದಕ್ಕೆ ಕಾರಣವಿರಬೇಕು. ಸಮಯವನ್ನು (15ಕ) ನಾಳೆ ರಾತ್ರಿ ಒಂದು ಭಾರೀ ಮದುವೆಯಿದೆ. (15ಖ) ನಿನ್ನೆ ರಾತ್ರಿ ಒಂದು ಒಂದು ಮೀಟಿಂಗ್ ಇತ್ತು. (15ಗ) ಇವತ್ತು ಮೂರು ಗಂಟೆಗೆ ಹೊಸ ಉದ್ಯಾನದ ಉದ್ಘಾಟನೆಯಿದೆ. ಸಾಮಾನ್ಯವಾಗಿ ಇಂತಹ ವಾಕ್ಯಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಇರವನ್ನು ಸೂಚಿಸುವುದಕ್ಕಿಂತಲೂ ಒಂದು ಘಟನೆಯ ಇರವನ್ನು ಸೂಚಿಸಲಾಗುತ್ತದೆ. ಘಟನೆಗಳ ಇರುವಿಕೆಗೆ ಜಾಗಕ್ಕಿಂತಲೂ ಸಮಯವೇ ಹೆಚ್ಚು ಪ್ರಾಮುಖ್ಯವಾದು ದಾದ ಕಾರಣ, ಇವು ಒಂದು ನಿಶ್ಚಿತವಾದ ಸಮಯದಲ್ಲಿ ಘಟನೆಯ ಇರವನ್ನು ಸೂಚಿಸುವ ಬೇರೊಂದು ರೀತಿಯ ವಾಕ್ಯಗಳು ಎಂದೂ ಹೇಳಲು ಸಾಧ್ಯವಿದೆ.
3.2.3 ಇರು ಕ್ರಿಯಾಪದದ ಬಳಕೆ
ವಿಷಯವಾಕ್ಯಗಳಲ್ಲಿ ವಸ್ತು, ವ್ಯಕ್ತಿ ಮೊದಲಾದವುಗಳ ಇರವನ್ನು ಸೂಚಿಸುವ ಕ್ರಿಯಾಪದವನ್ನು ಬಳಸದಿರಲೂ ಸಾಧ್ಯ ಎಂಬುದನ್ನು ಮೇಲೆ 3.1.1ರಲ್ಲಿ ನೋಡಿರುವೆವು. ಆದರೆ ಇರುವಿಕೆಯ ವಾಕ್ಯಗಳಲ್ಲಿ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರುವಲ್ಲಿ ಕೆಲವು ನಿಬ್ರಂಧಗಳಿವೆ. ಸಾಮಾನ್ಯವಾಗಿ ಒಂದು ಘಟನೆಯ ಇರವನ್ನು ಸೂಚಿಸುವ ಇರುವಿಕೆಯ ವಾಕ್ಯಗಳಲ್ಲಿ ಮಾತ್ರವೇ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರಲು ಸಾಧ್ಯ. (16ಕ) ಅವರಲ್ಲಿ ನಾಳೆ ಮದುವೆ (ಇದೆ). (16ಖ) ಶಾಲೆಯಲ್ಲಿ ಇವತ್ತು ಪರೀಕ್ಷೆ (ಇದೆ). ವ್ಯಕ್ತಿ, ವಸ್ತು ಮೊದಲಾದವುಗಳ ಇರವನ್ನು ಸೂಚಿಸುವ ವಾಕ್ಯಗಳಲ್ಲಿ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರುವುದು ಕಷ್ಟ. ಆದರೆ, ಇಂತಹ ಎರಡು ಅಥವಾ ಜಾಸ್ತಿ ಇರುವಿಕೆಯ ವಾಕ್ಯಗಳನ್ನು ಜೋಡಿಸಿ ಹೇಳಲಾಗಿದೆಯಾದಲ್ಲಿ, ಅವುಗಳ ಇರು ಕ್ರಿಯಾಪದವನ್ನು ಬಳಸದಿರಲು ಸಾಧ್ಯವಿದೆ. (17ಕ) ಒಂದು ಕೈಯಲ್ಲಿ ಕೊಡೆ (ಇದೆ) ಮತ್ತು ಇನ್ನೊಂದರಲ್ಲಿ ತರಕಾರಿ (17ಖ) ಕೋಣೆಯ ನಡುವೆ ಒಂದು ಮೇಜು (ಇದೆ), ಮೇಜಿನ ಮೇಲೆ ಕೆಲವು ಪುಸ್ತಕಗಳು (ಇವೆ), ಮೇಜಿನ ಪಕ್ಕಕ್ಕೆ ಒಂದು ಕಪಾಟು (ಇದೆ), ಮತ್ತು ಮೇಜಿನ ಕೆಳಗೆ ಒಂದು ಸ್ಟೂಲು (ಇದೆ). (17ಗ) ಮಾಧವರಾಯರು ಕ್ಲಾಸಿನಲ್ಲಿ (ಇದ್ದಾರೆ), ಮತ್ತು ಹುಡುಗರೆಲ್ಲ ಸಂತೆಯಲ್ಲಿ (ಇದ್ದಾರೆ).
3.3 ಗುಣವಾಕ್ಯಗಳು
ಗುಣವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಒಂದು ಘಟಕ ಮತ್ತು ಆ ಘಟಕದ ಗುಣಧರ್ಮವೊಂದನ್ನು ಸೂಚಿಸುವ ಇನ್ನೊಂದು ಘಟಕ ಘಟಕಗಳು ಬರುತ್ತವೆ. ಇವುಗಳಲ್ಲಿ ಎಂಬುದಾಗಿ ಎರಡು ಮುಖ್ಯ ಸಾಮಾನ್ಯವಾಗಿ ಗುಣಧರ್ಮವನ್ನು ಸೂಚಿಸುವ ಘಟಕ ಅದನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕದ ಅನಂತರ ಬರುತ್ತದೆ. (18ಕ) ಆಚೆ ಮನೆಯ ಹುಡುಗ ಸಪ್ಪಗಿದ್ದಾನೆ. (18ಖ) ಈ ಬುಟ್ಟಿಯ ಹಣ್ಣುಗಳು ಮೆತ್ತಗಿವೆ. (18ಗ) ಈ ಗಿಡದ ನಿಂಬೇಹಣ್ಣು ಬಹಳ ದೊಡ್ಡದಾಗಿದೆ. ವಾಕ್ಯದಲ್ಲೂ ಹೀಗೆಯೇ. ಈ ಎರಡು (18ಕ) ವಾಕ್ಯದಲ್ಲಿ ಆಚೆ ಮನೆಯ ಹುಡುಗ ಎಂಬುದು ಒಬ್ಬ ವ್ಯಕ್ತಿಯನ್ನೂ ಮತ್ತು ಸಪ್ಪಗೆ ಎಂಬುದು ಆ ವ್ಯಕ್ತಿಯ ಗುಣಧರ್ಮವನ್ನೂ ಸೂಚಿಸುತ್ತವೆ. ವಾಕ್ಯಗಳಲ್ಲೂ ಗುಣಧರ್ಮವನ್ನು ಸೂಚಿಸುವ ಘಟಕ ಅಗೆ ಪ್ರತ್ಯಯದಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಗಮನಿಸ ಬಹುದು. (18ಗ) ವಾಕ್ಯ ಇವೆರಡಕ್ಕಿಂತ ಸ್ವಲ್ಪ ಭಿನ್ನವಾದುದು. ಇದರಲ್ಲಿ ಒಂದು ವಸ್ತುವನ್ನು ಸೂಚಿಸುವ ಈ ಗಿಡದ ನಿಂಬೇಹಣ್ಣು ಎಂಬುದು ಇತರ ಎರಡು ವಾಕ್ಯಗಳಲ್ಲಿ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಘಟಕದ ಹಾಗೆಯೇ ಇದೆ; ಆದರೆ, ಆ ವಸ್ತುವಿನ ಗುಣಧರ್ಮವನ್ನು ಸೂಚಿಸುವ ಬಹಳ ದೊಡ್ಡದಾಗಿ ಎಂಬ ಘಟಕ ಆಗಿ ಎಂಬ ಕ್ರಿಯಾಪದರೂಪದಲ್ಲಿ ಕೊನೆಗೊಂಡಿದ್ದು ಇತರ ಎರಡು ವಾಕ್ಯಗಳಲ್ಲಿ ಕಾಣಿಸುವ ಗುಣಧರ್ಮವನ್ನು ಸೂಚಿಸುವ ಘಟಕಕ್ಕಿಂತ ಭಿನ್ನವಾಗಿದೆ.
3.3.1 ಅಗೆ ಪ್ರತ್ಯಯದ ಬಳಕೆ
ಅಗೆ ಪ್ರತ್ಯಯವನ್ನು ಬಳಸಿ ತಯಾರಿಸಿರುವ ಪದಗಳು ಕನ್ನಡದಲ್ಲಿ ಜಾಸ್ತಿ ಇಲ್ಲ. ಕೆಂಪಗೆ, ಕರ್ರಗೆ, ಬೆಳ್ಳಗೆ, ನುಣ್ಣಗೆ, ನೆಟ್ಟಗೆ, ತೆಪ್ಪಗೆ, ತೆಳ್ಳಗೆ, ದುಂಡಗೆ, ಬೆಚ್ಚಗೆ, ಮೆತ್ತಗೆ, ಮೆಲ್ಲಗೆ, ಸಪ್ಪಗೆ ಮೊದಲಾದವುಗಳು ಈ ವಿಭಾಗಕ್ಕೆ ಸೇರಬಹುದಾದ ಪದಗಳು. (19ಕ) ಆಕೆಯ ಮಕ್ಕಳು ದುಂಡಗಿದ್ದಾರೆ. (19ಖ) ಆ ಬಟ್ಟೆ ಬಹಳ ಬೆಳ್ಳಗಿದೆ. (19ಗ) ಈ ಬುಟ್ಟಿಯ ಹಣ್ಣುಗಳು ಮೆತ್ತಗಿವೆ. (19ಘ) ತಾತನ ತಲೆ ನುಣ್ಣಗಿದೆ. ಅಗೆ ಪ್ರತ್ಯಯದಲ್ಲಿ ಕೊನೆಗೊಳ್ಳುವ ಈ ಘಟಕಗಳ ಮುಂದೆಯೂ ಆಗಿ ಎಂಬ ಕ್ರಿಯಾರೂಪವನ್ನು ಬಳಸಿ ಹೇಳಲು ಸಾಧ್ಯವಿದೆ. (20ಕ) ಆಕೆಯ ತುಟಿ ಬಹಳ ಕೆಂಪಗಿದೆ. (20ಖ) ಆಕೆಯ ತುಟಿ ಬಹಳ ಕೆಂಪಗಾಗಿದೆ. ಆದರೆ ಈ ಎರಡು ವಾಕ್ಯಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬಹುದು. (20ಕ) ವಾಕ್ಯಕ್ಕೆ ‘ಆಕೆಯ ತುಟಿ ಕೆಂಪು’ ಎಂಬ ಒಂದು ಸಂಗತಿಯನ್ನು ತಿಳಿಸುವ ಅರ್ಥ ಮಾತ್ರ ಇದೆ, ಆದರೆ (20ಖ) ವಾಕ್ಯಕ್ಕೆ ಈ ಅರ್ಥ ಮಾತ್ರವಲ್ಲದೆ ‘ಕೆಂಪಿಲ್ಲದ ತುಟಿ ಕೆಂಪಾಗಿರುವ’ ಒಂದು ಘಟನೆಯನ್ನು ತಿಳಿಸುವ ಅರ್ಥವೂ ಬರಲು ಸಾಧ್ಯವಿದೆ.
3.3.2 ಆಗಿ ಕ್ರಿಯಾರೂಪದ ಬಳಕೆ
ಆಗಿ ಎಂಬುದು ಆಗು ಕ್ರಿಯಾಪದದ ‘ಜೋಡಿಸುವ’ ರೂಪ (10.2.4 ನೋಡಿ). ಇಂತಹ ಜೋಡಿಸುವ ಕ್ರಿಯಾರೂಪಗಳು ಸಾಮಾನ್ಯವಾಗಿ ಒಂದು ಘಟನೆಯನ್ನು ಸೂಚಿಸುವ ವಾಕ್ಯವನ್ನು ಅದರ ಅನಂತರ ನಡೆಯುವ ಇನ್ನೊಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸಿ ಹೇಳಲು ಬಳಕೆಯಾಗುತ್ತವೆ. (21ಕ) ಜಾನಕಿ ನದಿಯನ್ನು ದಾಟಿ ಹಳ್ಳಿಯ ಕಡೆಗೆ ನಡೆದಳು. (21ಖ) ಆತ ಬಟ್ಟೆಗಳನ್ನು ಹಿಂಡಿ ಒಣಗಲು ಹಾಕಿದ. (21ಗ) ಕುಸುಮ ಆತನ ಕಾಲಿಗೆ ಎಣ್ಣೆ ಹಚ್ಚಿ ತಿಕ್ಕಿದಳು. (21ಘ) ಆತ ಸಂಘದ ಅಧ್ಯಕ್ಷನಾಗಿ ಒಂದು ವಷ್ರ ಮುಗಿಯಿತು. (21ಕ)ದಲ್ಲಿ ದಾಟು ಕ್ರಿಯಾಪದದ ಜೋಡಿಸುವ ರೂಪವಾಗಿರುವ ದಾಟಿ ಎಂಬುದನ್ನು ಬಳಸಲಾಗಿದೆ. ಈ ರೂಪದ ಮೂಲಕ (21ಕ)ದಲ್ಲಿ ‘ನದಿಯನ್ನು ದಾಟುವ’ ಘಟನೆಯನ್ನು ಸೂಚಿಸುವ ವಾಕ್ಯವನ್ನು ಅದರ ಅನಂತರ ಜರಗುವ ‘ಹಳ್ಳಿಯ ಕಡೆಗೆ ನಡೆಯುವ’ ಘಟನೆಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸಿ ಹೇಳಲು ಸಾಧ್ಯವಾಗಿದೆ. ಇತರ ಎರಡು ವಾಕ್ಯಗಳಲ್ಲೂ ಹೀಗೆಯೇ (8.2.3 ನೋಡಿ). ಆಗಿ ಎಂಬ ಜೋಡಿಸುವ ಕ್ರಿಯಾರೂಪವನ್ನೂ ಈ ರೀತಿ ಒಂದು ಘಟನೆ ಯನ್ನು ಸೂಚಿಸುವ ವಾಕ್ಯವನ್ನು ಇನ್ನೊಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸುವುದಕ್ಕಾಗಿ ಬಳಸಲು ಸಾಧ್ಯವಿದೆ ಎಂಬುದನ್ನು ಮೇಲೆ (21ಘ)ದಲ್ಲಿ ನೋಡಬಹುದು. ಇದಲ್ಲದೆ, ಆಗಿ ಎಂಬ ಕ್ರಿಯಾರೂಪವನ್ನು ಗುಣಪದಗಳೊಂದಿಗೆ ಸೇರಿಸಿ ಅವನ್ನು ಗುಣವಾಕ್ಯಗಳಲ್ಲಿ ಸೂಚಿಸುವ ಘಟಕಗಳನ್ನಾಗಿ ಬದಲಾಯಿಸುವುದಕ್ಕೂ ಗುಣಧರ್ಮಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (22ಕ) ಆ ಪೆಟ್ಟಿಗೆಯೊಳಗಿರುವ ಮಣಿಗಳೆಲ್ಲ ಕೆಂಪಾಗಿವೆ. (22ಖ) ಆ ಕೆರೆಯ ನೀರು ಯಾವಾಗಲೂ ಬಿಸಿಯಾಗಿರುತ್ತದೆ. (22ಗ) ಗೌರೀಪತಿಯ ತಂಗಿ ಬಹಳ ತೆಳುವಾಗಿದ್ದಾಳೆ. (22ಘ) ಆ ಕಟ್ಟಡ ಬಹಳ ಎತ್ತರವಾಗಿದೆ. ಈ ಮೇಲಿನ ವಾಕ್ಯಗಳಿಗೆಲ್ಲ ಎರಡು ಬೇರೆ ಬೇರೆ ಅರ್ಥಗಳು ಬರಲು ಸಾಧ್ಯವಿದೆ. ಉದಾಹರಣೆಗಾಗಿ, (22ಕ) ವಾಕ್ಯಕ್ಕೆ ‘ಆ ಪೆಟ್ಟಿಗೆಯೊಳಗಿದ್ದ ಮಣಿ ಗಳು ಮೊದಲು ಬಿಳಿ ಬಣ್ಣದವಾಗಿದ್ದುವು, ಆದರೆ ಈಗ ಯಾವುದೋ ಕಾರಣ ಕ್ಕಾಗಿ ಕೆಂಪಾಗಿವೆ’ ಎಂಬ ಅರ್ಥವಾಗಲಿ, ಇಲ್ಲವೇ ‘ಆ ಪೆಟ್ಟಿಗೆಯೊಳಗಿರುವ ಮಣಿಗಳೆಲ್ಲ ಕೆಂಪು ಬಣ್ಣದವು’ ಎಂಬ ಅರ್ಥವಾಗಲಿ ಬರಲು ಸಾಧ್ಯವಿದೆ. ಈ ಎರಡನೆಯ ಅರ್ಥದಲ್ಲಿ ಆಗಿ ಕ್ರಿಯಾರೂಪದ ಮೂಲಕ ಬಿಳಿ ಗುಣಪದವನ್ನು ಗುಣಧರ್ಮವನ್ನು ಸೂಚಿಸುವ ಘಟಕವನ್ನಾಗಿ ಮಾಡಲಾಗಿದೆ. ಅದಕ್ಕೆ ಈ ಬಳಕೆಯಲ್ಲಿ ಆಗು ಕ್ರಿಯಾಪದವು ಸೂಚಿಸಬಲ್ಲ ಘಟನೆಯನ್ನು ತಿಳಿಸುವ ಅರ್ಥ ವಿಲ್ಲ ಎಂಬುದನ್ನು ಗಮನಿಸಬಹುದು.
ಇತರ ಕ್ರಿಯಾಪದಗಳ ಜೋಡಿಸುವ ರೂಪಗಳನ್ನೂ ಈ ರೀತಿ ಗುಣಧರ್ಮ ವನ್ನು ಸೂಚಿಸುವ ಘಟಕಗಳನ್ನಾಗಿ ಬಳಸುವುದರ ಮೂಲಕ ಗುಣವಾಕ್ಯಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗಿನ ವಾಕ್ಯಗಳಲ್ಲಿ ಬರುವ ಜೋಡಿಸುವ ಕ್ರಿಯಾರೂಪಗಳಿಗೆ ಎರಡು ಬೇರೆ ಬೇರೆ ಅರ್ಥಗಳಿರಲು ಸಾಧ್ಯ (23ಕ) ಅಂಗಡಿಯ ಬಾಗಿಲು ತೆರೆದಿದೆ. (23ಖ) ಆ ಕಪಾಟಿನ ಕನ್ನಡಿ ಒಡೆದಿತ್ತು. (23ಗ) ಹೊಸ ಕುಚ್ರಿಯ ಕಾಲು ಮುರಿದಿದೆ. (23ಘ) ಆ ಹುಲಿ ಬಹಳ ಹಸಿದಿದೆ. (23ಕ) ವಾಕ್ಯವು ‘ಮುಚ್ಚಿಕೊಂಡಿದ್ದ ಅಂಗಡಿಯ ಬಾಗಿಲು ಈಗ ತೆರೆದಿದೆ’ ಎಂಬುದಾಗಿ ಒಂದು ಘಟನೆಯ ಇರವನ್ನು ತಿಳಿಸುತ್ತಿರಬಹುದು, ಇಲ್ಲವೇ ‘ಅಂಗಡಿಯ ಬಾಗಿಲು ತೆರೆದಿದೆ’ ಎಂಬುದಾಗಿ ಒಂದು ಸಂಗತಿಯ ಇರವನ್ನು ಮಾತ್ರವೇ ತಿಳಿಸುತ್ತಿರಬಹುದು. ಈ ಎರಡನೆಯ ಅರ್ಥದಲ್ಲಿ ತೆರೆದು ಎಂಬ ಜೋಡಿಸುವ ಕ್ರಿಯಾರೂಪಕ್ಕೆ ಅಂಗಡಿಯ ಬಾಗಿಲಿನ ಒಂದು ಗುಣಧರ್ಮವನ್ನು ತಿಳಿಸುವ ಕೆಲಸವಷ್ಟೇ ಇರುತ್ತದೆ. ಆದರೆ ಈ ರೀತಿ ಜೋಡಿಸುವ ಕ್ರಿಯಾರೂಪಗಳನ್ನು ಗುಣಧರ್ಮವನ್ನು ಸೂಚಿಸುವ ಘಟಕಗಳಾಗಿ ಬಳಸಬೇಕಿದ್ದಲ್ಲಿ, ಅವು ಹತೋಟಿಯಲ್ಲಿಲ್ಲದ ಘಟನೆ ಗಳನ್ನು ಸೂಚಿಸುತ್ತಿರುವುದು ಅವಶ್ಯ. ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳನ್ನು ಜೋಡಿಸುವ ರೂಪದಲ್ಲಿ ಬಳಸಿದಾಗಲೆಲ್ಲ ಅವಕ್ಕೆ ಘಟನೆಯ ಅರ್ಥವೇ ಬರುತ್ತದೆ. (24ಕ) ರಾಜು ಅಂಗಡಿಯ ಬಾಗಿಲನ್ನು ತೆರೆದಿದ್ದಾನೆ. (24ಖ) ಆಕೆ ಆ ಕಪಾಟಿನ ಕನ್ನಡಿಯನ್ನು ಒಡೆದಿದ್ದಾಳೆ. (24ಗ) ಹೊಸ ಕುಚ್ರಿಯ ಕಾಲನ್ನು ಆ ನಾಯಿ ಮುರಿದಿದೆ. ಮೇಲೆ ಕೊಟ್ಟಿರುವ ಮೂರು ವಾಕ್ಯಗಳಿಗೂ ಘಟನೆಯನ್ನು ಸೂಚಿಸುವ ಅರ್ಥ ವಿದೆಯಲ್ಲದೆ ಸಂಗತಿಯನ್ನು ಸೂಚಿಸುವ ಅರ್ಥವಿಲ್ಲ. ಕದಲುವಿಕೆಯನ್ನು ಸೂಚಿಸುವ ಕ್ರಿಯಾಪದಗಳ ಜೋಡಿಸುವ ರೂಪಗಳೂ ಇಂತಹ ವಾಕ್ಯಗಳಲ್ಲಿ ಸಂಗತಿಯ ಅರ್ಥವನ್ನು ಕೊಡಲಾರವು. ಉದಾಹರಣೆಗಾಗಿ, ಕ್ರಿಯಾಪದದೊಂದಿಗೆ ಕದಲುವಿಕೆಯ ಸುರು ಇಲ್ಲವೇ ಕೊನೆಗಳನ್ನು ಸೂಚಿಸುವ ಇಂದ ಮತ್ತು ಗೆ ಎಂಬ ಪ್ರತ್ಯಯಗಳಿರುವ ಘಟಕಗಳಿವೆಯಾದಲ್ಲಿ ಅಂತಹ ಕ್ರಿಯಾಪದಗಳ ಜೋಡಿಸುವ ರೂಪಗಳಿಗೆ ಗುಣಧರ್ಮದ ಅರ್ಥವಿಲ್ಲ. (25ಕ) ಮಾಡಿನಿಂದ ನೀರು ಸೋರುತ್ತಿತ್ತು. (25ಖ) ಆಕೆಯ ಕೆನ್ನೆಗೆ ಮಸಿ ಹಿಡಿದಿತ್ತು. ಇದಲ್ಲದೆ, ಇಂತಹ ವಾಕ್ಯಗಳಲ್ಲಿ ಬರುವ ಜೋಡಿಸುವ ಕ್ರಿಯಾರೂಪಗಳು ‘ಹಿಂದಿನ ಸಮಯ’ದ ಕ್ರಿಯಾರೂಪಗಳಾಗಿರಬೇಕೆಂಬ ಇನ್ನೊಂದು ನಿಬ್ರಂಧವೂ ಇರುವ ಹಾಗೆ ತೋರುತ್ತದೆ. ಈಗಿನ ಇಲ್ಲವೇ ಮುಂದಿನ ಸಮಯದ ಕ್ರಿಯಾ ರೂಪಗಳನ್ನು ಇರು ಕ್ರಿಯಾಪದದೊಂದಿಗೆ ಜೋಡಿಸುವ ಕ್ರಿಯಾರೂಪದಲ್ಲಿ ಬಳಸಿದಾಗಲೆಲ್ಲ ಅವಕ್ಕೆ ಘಟನೆಯ ಅರ್ಥ ಬರುತ್ತದಲ್ಲದೆ ಸಂಗತಿಯ ಅರ್ಥ ಬರುವುದಿಲ್ಲ. (26ಕ) ಅಂಗಡಿಯ ಬಾಗಿಲು ತೆರೆಯಲಿದೆ. (26ಖ) ಅಂಗಡಿಯ ಬಾಗಿಲು ತೆರೆಯುತ್ತಾ ಇದೆ. (27ಕ) ಆ ಕಪಾಟಿನ ಕನ್ನಡಿ ಒಡೆಯಲಿದೆ. (27ಖ) ಆ ಕಪಾಟಿನ ಕನ್ನಡಿ ಒಡೆಯುತ್ತಾ ಇದೆ. ಮೇಲೆ ಕೊಟ್ಟಿರುವ ವಾಕ್ಯಗಳನ್ನು ಘಟನೆಯನ್ನು ಸೂಚಿಸುವ ಕ್ರಿಯಾವಾಕ್ಯಗಳೆಂದು ಕರೆಯಲು ಸಾಧ್ಯವಿದೆಯಲ್ಲದೆ ಸಂಗತಿಯನ್ನು ಸೂಚಿಸುವ ವಿಷಯವಾಕ್ಯ ಇಲ್ಲವೇ ಗುಣವಾಕ್ಯಗಳೆಂದು ಕರೆಯಲು ಸಾಧ್ಯವಾಗದು ಎಂಬುದನ್ನು ಗಮನಿಸಬಹುದು.
3.3.3 ಗುಣಪದಗಳ ವಿಭಜನೆ
ಆಗಿ ಕ್ರಿಯಾರೂಪದೊಂದಿಗೆ ಬರಬಲ್ಲ ಗುಣಪದಗಳನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
(ಕ) ಅವುಗಳೊಂದಿಗೆ ಗುಣವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಬರುವ ಘಟಕಗಳ ಸ್ವರೂಪವನ್ನಾಧರಿಸಿ, ಅವನು, ಅವಳು, ಅವರು, ಅದು ಇಲ್ಲವೇ ಅವು ಎಂಬ ಸವ್ರಪದದೊಂದಿಗೆ ಬರುವ ದೊಡ್ಡ, ಕಿರಿ, ಒಳ್ಳೆ, ತಕ್ಕ, ಹಳೆ ಮೊದಲಾದವುಗಳದು ಒಂದು ವಿಭಾಗ. (28ಕ) ಆ ಹುಡುಗ ಬಹಳ ದೊಡ್ಡವನಾಗಿದ್ದಾನೆ. (28ಖ) ರಾಧಾಮಣಿ ಬಹಳ ಕೆಟ್ಟವಳಾಗಿದ್ದಳು. (28ಗ) ಈ ಉಪ್ಪಿನಕಾಯಿ ಬಹಳ ಹಳೆಯದಾಗಿದೆ. (28ಘ) ವಾದಿರಾಜರ ಮಕ್ಕಳು ದೊಡ್ಡವರಾಗಿದ್ದರು. (28ಙ) ನ್ಯೂಯಾಕ್ರಿನ ಕಟ್ಟಡಗಳು ಅತ್ಯಂತ ಎತ್ತರವಾಗಿವೆ. ಮೇಲೆ ಕೊಟ್ಟಿರುವ ಸವ್ರಪದಗಳು ಒಂದು ಮತ್ತು ಒಂದಕ್ಕಿಂತ ಜಾಸ್ತಿ (ಹಲವು) ಎಂಬುದಾಗಿ ಎರಡು ರೀತಿಯ ವಚನಭೇದವನ್ನು ಸೂಚಿಸುತ್ತವೆ. ಇದಲ್ಲದೆ, ಒಂದಕ್ಕಿಂತ ಜಾಸ್ತಿ ಇದ್ದಲ್ಲಿ ಮನುಷ್ಯರು ಮತ್ತು ಇತರರು ಎಂಬು ದಾಗಿ ಎರಡು ರೀತಿಯ ಲಿಂಗಭೇದವನ್ನೂ, ಮತ್ತು ಒಂದೇ ಇದ್ದಲ್ಲಿ ಹೆಣ್ಣು, ಗಂಡು ಮತ್ತು ಇತರ ಎಂಬುದಾಗಿ ಮೂರು ರೀತಿಯ ಲಿಂಗಭೇದವನ್ನೂ ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು. (ಖ) ಸಂಸ್ಕೃತದಿಂದ ಎರವಲಾಗಿ ಬಂದ ಪ್ರಖ್ಯಾತ, ದೃಢ, ಪ್ರಬಲ, ಕ್ರೂರ ಮೊದಲಾದ ಪದಗಳು ಈ ರೀತಿ ಸವ್ರಪದಗಳೊಂದಿಗೆ ಬರುವ ಬದಲು ನು, ಳು, ವು ಇಲ್ಲವೇ ರು ಎಂಬ ಪ್ರತ್ಯಯಗಳೊಂದಿಗೆ ಬರುತ್ತವೆ. ಇವನ್ನು ಎರಡನೆಯ ವಿಭಾಗದಲ್ಲಿ ಇರಿಸಬಹುದು. (29ಕ) ಆ ಹುಡುಗ ಪ್ರಖ್ಯಾತನಾಗಿದ್ದಾನೆ. (29ಖ) ಜಾನಕಿ ಬಹಳ ಗಂಭೀರಳಾಗಿದ್ದಾಳೆ. (29ಗ) ಅಲ್ಲಿನ ಪೊೀಲೀಸರು ಪ್ರಬಲರಾಗಿದ್ದರು. (29ಘ) ಈ ಕಂಬ ದೃಢವಾಗಿದೆ. ಮೇಲೆ ಕೊಟ್ಟಿರುವ ಪ್ರತ್ಯಯಗಳು ಮನುಷ್ಯೇತರರಲ್ಲಿ ವಚನಭೇದವನ್ನು ಸೂಚಿಸುವುದಿಲ್ಲ. ಆದರೆ ಪ್ರಖ್ಯಾತದಂತಹ ಕೆಲವು ಪದಗಳು ಗಳು ಎಂಬ ಹೆಚ್ಚಿನ ಪ್ರತ್ಯಯದ ಮೂಲಕ ವಚನಭೇದವನ್ನೂ ಸೂಚಿಸಬಲ್ಲುವು. (30ಕ) ಈ ಕಂಪೆನಿಯ ಕಾರು ಬಹಳ ಪ್ರಖ್ಯಾತವಾಗಿದೆ. (30ಖ) ಈ ಕಂಪೆನಿಯ ಕಾರುಗಳು ಬಹಳ ಪ್ರಖ್ಯಾತಗಳಾಗಿವೆ. (ಗ) ಎಲ್ಲಾ ಸಂದಭ್ರಗಳಲ್ಲೂ ಒಂದೇ ರೂಪದಲ್ಲಿ ಉಳಿಯುವ ದಪ್ಪ, ಗಟ್ಟಿ, ಉದ್ದ, ಕೆಂಪು, ಗಿಡ್ಡ, ತೋರ, ಜೋರು, ತೆಳು, ಬಿಸಿ ಮೊದಲಾದ ಪದಗಳನ್ನು ಮೂರನೆಯ ವಿಭಾಗದಲ್ಲಿ ಇರಿಸಬಹುದು. (31ಕ) ಆ ಹುಡುಗ ಬಹಳ ತೆಳುವಾಗಿದ್ದಾನೆ. (31ಖ) ಗೌರೀಪತಿಯ ತಂಗಿ ಉದ್ದವಾಗಿದ್ದಳು. (31ಗ) ಈ ಕೆರೆಯ ನೀರು ಯಾವಾಗಲೂ ಬಿಸಿಯಾಗಿರುತ್ತದೆ. (31ಘ) ಆ ಜನರ ಕಣ್ಣುಗಳು ಕೆಂಪಾಗಿದ್ದುವು.
3.3.4 ಹೆಚ್ಚಿನ ಘಟಕಗಳು
ಗುಣವಾಕ್ಯಗಳಲ್ಲಿ ಗುಣಧರ್ಮವನ್ನು ಸೂಚಿಸುವ ಘಟಕ ಮತ್ತು ಆ ಗುಣ ಧರ್ಮವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ಎಂಬುದಾಗಿ ಎರಡು ಘಟಕಗಳು ಮಾತ್ರವಲ್ಲದೆ ಬೇರೆಯೂ ಕೆಲವು ಘಟಕಗಳು ಬರಲು ಸಾಧ್ಯವಿದೆ.
ಉದಾಹರಣೆಗಾಗಿ, ಯಾವುದಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನಲ್ಲಿ ಗುಣಧರ್ಮವೊಂದು ಕಾಣಿಸುತ್ತದೆ ಎಂಬುದನ್ನು ತಿಳಿಸಲು ಗುಣವಾಕ್ಯಗಳಲ್ಲಿ ಅಲ್ಲಿ ವಿಭಕ್ತಿಯಲ್ಲಿ ಕೊನೆಗೊಳ್ಳುವ ‘ಜಾಗ’ ಇಲ್ಲವೇ ‘ಸಮಯ’ವನ್ನು ಸೂಚಿಸುವ ಘಟಕ ಬರಬಲ್ಲುದು.
(32ಕ) ಆ ಹುಡುಗಿ ಮಾತಿನಲ್ಲಿ ಜೋರಿದ್ದಾಳೆ. (32ಖ) ಆತ ಮನೆಯಲ್ಲಿ ತೆಪ್ಪಗಿರುತ್ತಾನೆ. (32ಗ) ಚಿಕ್ಕಂದಿನಲ್ಲಿ ಆಕೆ ತೆಳ್ಳಗಿದ್ದಳು. ಇದೇ ರೀತಿಯಲ್ಲಿ ಒಂದು ಗುಣಧರ್ಮದ ವ್ಯಾಪ್ತಿಯನ್ನು ಸೂಚಿಸುವುದಕ್ಕಾಗಿ ಗೆ ವಿಭಕ್ತಿಯಲ್ಲಿ ಕೊನೆಗೊಳ್ಳುವ ‘ಕೊನೆ’ ಘಟಕವೂ ಇಂತಹ ಗುಣವಾಕ್ಯಗಳಲ್ಲಿ ಬರಬಲ್ಲುದು.
(33ಕ) ಆ ಚೂರಿ ನನಗೆ ಇಷ್ಟವಾಗಿದೆ. (33ಖ) ಈ ಅಂಗಿ ಅವನಿಗೆ ದೊಡ್ಡದಾಗುತ್ತದೆ. (33ಗ) ಈ ಮರದ ತುಂಡು ನನ್ನ ಕೆಲಸಕ್ಕೆ ತಕ್ಕುದಾಗಿದೆ (33ಘ) ನಿಮ್ಮ ಕೆಲಸ ಅವರಿಗೆ ಮೆಚ್ಚುಗೆಯಾಗಿದೆ.
3.3.5 ಜೋಡಿ ಗುಣಪದಗಳು
ಅಳತೆ ಮತ್ತು ಭೌತಿಕ ಗುಣಧರ್ಮಗಳನ್ನು ಸೂಚಿಸುವ ಗುಣಪದಗಳಲ್ಲಿ ಉದ್ದ- ಗಿಡ್ಡ, ಅಗಲ-ಸಪುರ, ಎತ್ತರ-ತಗ್ಗು, ದಪ್ಪ-ತೆಳು, ದೂರ-ಹತ್ತಿರ, ದೊಡ್ಡ- ಚಿಕ್ಕ ಮೊದಲಾದ ಕೆಲವು ಪದಗಳು ವಿರುದ್ಧಾರ್ಥದ ಜೋಡಿಗಳಾಗಿ ಬರುತ್ತವೆ (4.3.2 ನೋಡಿ). ಇಂತಹ ಪದಗಳು ಗುಣವಾಕ್ಯಗಳಲ್ಲಿ ಬರುವಾಗ ಕೆಲವು ನಿಬ್ರಂಧಗಳಿಗೊಳಗಾಗುತ್ತವೆ. ಮೊದಲನೆಯದಾಗಿ, ಇಂತಹ ಜೋಡಿಗಳಲ್ಲಿ ಬರುವ ಎರಡು ಪದಗಳು ಒಂದೇ ಗುಣಧರ್ಮದ ಎರಡು ಅಂಗಗಳನ್ನು ಅವು ಎರಡು ವಿರುದ್ಧ ದಿಕ್ಕಿನ ಲ್ಲಿರುವವುಗಳೆಂಬುದಾಗಿ ಸೂಚಿಸುತ್ತವೆ. ಉದಾಹರಣೆಗಾಗಿ, ಉದ್ದ ಮತ್ತು ಗಿಡ್ಡ ಎಂಬೆರಡು ಗುಣಪದಗಳು ಅಳತೆಗೆ ಸಂಬಂಧಿಸಿದ ಒಂದೇ ಗುಣಧರ್ಮದ ಎರಡು ಅಂಗಗಳಾಗಿದ್ದು, ವಿರುದ್ಧಾರ್ಥವನ್ನು ಕೊಡುತ್ತವೆ. ಇದಲ್ಲದೆ, ಇಂತಹ ಗುಣಧರ್ಮಗಳಿಗೆ ಒಂದು ವಿಸ್ತಾರ ಇಲ್ಲವೇ ವ್ಯಾಪ್ತಿ ಯಿದ್ದು, ಈ ವ್ಯಾಪ್ತಿಯಲ್ಲಿ ಬರುವ ಬೇರೆ ಬೇರೆ ಬಿಂದುಗಳನ್ನು ಸೂಚಿಸುವು ದಕ್ಕಾಗಿ ಸ್ವಲ್ಪ, ಬಹಳ, ಜಾಸ್ತಿ, ಒಳ್ಳೆ ಮೊದಲಾದ ಪದಗಳನ್ನು ಈ ಗುಣಪದಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿದೆ.
ಉದಾಹರಣೆಗಾಗಿ, ಉದ್ದ-ಗಿಡ್ಡ ಎಂಬೆರಡು ಗುಣಪದಗಳು ಸೂಚಿಸುವ ಗುಣಧರ್ಮದ ವ್ಯಾಪ್ತಿಯಲ್ಲಿ ನಾಲ್ಕು ಬಿಂದುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದ್ದು ಅವನ್ನು ಕೆಳಗೆ ತೋರಿಸಿದ ಹಾಗೆ ಈ ಗುಣಪದಗಳೊಂದಿಗೆ ಬಹಳ ಮತ್ತು ಸ್ವಲ್ಪ ಎಂಬ ಪದಗಳನ್ನು ಸೇರಿಸಿ ಸೂಚಿಸಲು ಸಾಧ್ಯವಿದೆ. ಬಹಳ ಉದ್ದ - ಸ್ವಲ್ಪ ಉದ್ದ - ಸ್ವಲ್ಪ ಗಿಡ್ಡ - ಬಹಳ ಗಿಡ್ಡ
ಎರಡನೆಯದಾಗಿ, ಇಂತಹ ಗುಣಪದಗಳು ಸೂಚಿಸುವ ಗುಣಧರ್ಮ ಅವು ಯಾವ ರೀತಿಯ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಅವಲಂಬಿಸಿದೆ. ಉದಾಹರಣೆಗಾಗಿ, ಒಂದು ಆನೆ ಎಷ್ಟೇ ಚಿಕ್ಕ ದಾದರೂ ಅತೀ ದೊಡ್ಡ ಇಲಿಗಿಂತ ದೊಡ್ಡದಾಗಿರುತ್ತದೆ. (ಕಟ್ಟುಕತೆಗಳಲ್ಲಿ ಮಾತ್ರ ಇದಕ್ಕೆ ಅಪವಾದಗಳಿರಬಲ್ಲುವು). ಇದಲ್ಲದೆ, ಇಂತಹ ಗುಣಧರ್ಮಗಳು ಅವನ್ನು ಕಾಣುವ ಕಣ್ಣು, ಬಳಸುವ ಸಂದಭ್ರ, ಅನುಭವಿಸುವ ವ್ಯಕ್ತಿ, ಮೊದಲಾದವುಗಳ ಮೇಲೂ ಅವಲಂಬಿಸಿರಲು ಸಾಧ್ಯವಿದೆ. ಉದಾಹರಣೆಗಾಗಿ, ಒಬ್ಬನಿಗೆ ಬಿಸಿಯಾಗಿ ಕಾಣಿಸುವ ಕಾಫಿ ಇನ್ನೊಬ್ಬನಿಗೆ ತಣ್ಣಗಾಗಿ ಕಾಣಿಸಬಹುದು; ಒಬ್ಬನಿಗೆ ಖಾರವಾಗಿರುವ ತಿಂಡಿ ಇನ್ನೊಬ್ಬನಿಗೆ ಸಪ್ಪೆಯಾಗಿರಬಹುದು; ನೋಡಲು ಚೆನ್ನಾಗಿರುವ ಹಣ್ಣು ತಿನ್ನಲು ಕೆಟ್ಟುದಾಗಿರಬಹುದು; ಬಸ್ಸಿನಲ್ಲಿ ಹೋಗಲು ಬಹಳ ದೂರವಾಗಿರುವ ಜಾಗ ವಿಮಾನದಲ್ಲಿ ಹೋಗಲು ಬಹಳ ಹತ್ತಿರ ವಾಗಿರಬಹುದು; ಇತ್ಯಾದಿ. ಮೂರನೆಯದಾಗಿ, ಗುಣಪದಗಳ ಜೋಡಿಗಳಲ್ಲಿ ಸಾಮಾನ್ಯವಾಗಿ ಒಂದು ಪದವು ಇಡೀ ಗುಣಧರ್ಮವನ್ನೇ ಸೂಚಿಸುವಂತಿರುತ್ತದೆ, ಮತ್ತು ಇನ್ನೊಂದು ಆ ಗುಣಧರ್ಮದ ಒಂದು ಅಂಗವನ್ನಷ್ಟೇ ಸೂಚಿಸುವಂತಿರುತ್ತದೆ.
ಉದಾಹರಣೆಗಾಗಿ, ದೊಡ್ಡ ಮತ್ತು ಚಿಕ್ಕ ಎಂಬೆರಡು ಪದಗಳು ಸೂಚಿಸುವ ಅಳತೆಯ ಗುಣಧರ್ಮವನ್ನು ದೊಡ್ಡ ಎಂಬ ಒಂದೇ ಪದದ ಮೂಲಕ ಪೂತ್ರಿಯಾಗಿ ಸೂಚಿಸಲು ಸಾಧ್ಯವಿದೆ; ಆದರೆ, ಚಿಕ್ಕ ಎಂಬ ಪದದ ಮೂಲಕ ಅದರ ಒಂದು ಅಂಗವನ್ನು ಮಾತ್ರವೇ ಸೂಚಿಸಲು ಸಾಧ್ಯ. ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. (35ಕ) ಅವರ ಮನೆ ಎಷ್ಟು ದೊಡ್ಡದು? -ಅದು ಬಹಳ ದೊಡ್ಡದು. -ಅದು ಬಹಳ ಚಿಕ್ಕದು. (35ಖ) ಅವರ ಮನೆ ಎಷ್ಟು ಚಿಕ್ಕದು? -ಅದು ಬಹಳ ಚಿಕ್ಕದು. -ಅದು (ಇದಕ್ಕಿಂತ) ಸ್ವಲ್ಪ ಚಿಕ್ಕದು. ದೊಡ್ಡ ಎಂಬ ಗುಣಪದವನ್ನು ಬಳಸಿರುವ (35ಕ)ದ ಕೇಳ್ವಿಗೆ ದೊಡ್ಡ ಮತ್ತು ಚಿಕ್ಕ ಎಂಬ ಎರಡು ಗುಣಪದಗಳನ್ನು ಬಳಸಿಯೂ ಉತ್ತರ ಕೊಡಲು ಸಾಧ್ಯ. ಆದರೆ, ಚಿಕ್ಕ ಎಂಬ ಪದವನ್ನು ಬಳಸಿರುವ (35ಖ)ದ ಕೇಳ್ವಿಗೆ ಚಿಕ್ಕ ಎಂಬ ಪದವನ್ನು ಬಳಸಿರುವ ಉತ್ತರವನ್ನು ಮಾತ್ರ ಕೊಡಲು ಸಾಧ್ಯ.
ಇದಲ್ಲದೆ, ಈ ರೀತಿಯಾಗಿ ಗುಣಧರ್ಮದ ಒಂದು ಅಂಗವನ್ನು ಮಾತ್ರವೇ ಸೂಚಿಸಬಲ್ಲ ಗುಣಪದಗಳನ್ನು ಕೇಳ್ವಿಗಳಲ್ಲಿ ಬಳಸಿದಾಗ, ಅವು ಆ ಗುಣ ಧರ್ಮಕ್ಕೆ ಸಂಬಂಧಿಸಿದ ಅಳತೆಯೆಷ್ಟೆಂಬುದನ್ನು ಮಾತ್ರವೇ ಕೇಳುವ ಬದಲು ಅದು ಎಷ್ಟರ ಮಟ್ಟಿಗೆ ಕಡಿಮೆ ಎಂಬುದಾಗಿ ಕೇಳುತ್ತವೆ. (36ಕ) ಆ ಕೋಲು ಎಷ್ಟು ಉದ್ದ ಇದೆ? (36ಖ) ಆ ಕೋಲು ಎಷ್ಟು ಗಿಡ್ಡ ಇದೆ? ಉದ್ದ ಎಂಬ ಪದವನ್ನು ಬಳಸಿರುವ (36ಕ) ಕೇಳ್ವಿ ಆ ಕೋಲಿನ ಅಳತೆ ಯೆಷ್ಟೆಂಬುದನ್ನು ಮಾತ್ರವೇ ಕೇಳುತ್ತಿದೆ; ಆ ಕೋಲು ಉದ್ದ ಇರಬಹುದು ಇಲ್ಲವೇ ಗಿಡ್ಡ ಇರಬಹುದು; ಆದರೆ, ಗಿಡ್ಡ ಎಂಬ ಪದವನ್ನು ಬಳಸಿರುವ (36ಖ)ದ ಕೇಳ್ವಿ ಅದರ ಅಳತೆ ಬೇಕಾದ್ದಕ್ಕಿಂತ ಎಷ್ಟರ ಮಟ್ಟಿಗೆ ಕಡಿಮೆಯಿದೆ ಎಂಬುದನ್ನು ಕೇಳುತ್ತಿದೆ.
ನಾಲ್ಕನೆಯದಾಗಿ, ಈ ರೀತಿ ಜೋಡಿಗಳಾಗಿ ಬರುವ ಗುಣಪದಗಳಲ್ಲಿ ಒಂದು ಇನ್ನೊಂದರ ಅಲ್ಲಗಳೆಯುವ ರೂಪಕ್ಕೆ ಸಮ ಎಂದು ಹೇಳಲು ಸಾಧ್ಯ ವಿದೆ. ಈ ಕಾರಣಕ್ಕಾಗಿ ಕೆಳಗೆ ಕೊಟ್ಟಿರುವಂತಹ ವಾಕ್ಯಗಳಲ್ಲಿ ಜೋಡಿಯಾಗಿ ಬರುವ ಗುಣಪದಗಳನ್ನು ಮಾತ್ರವೇ ಬಳಸಲು ಸಾಧ್ಯ. (37ಕ) ಅವನು ಉದ್ದ, ಆಕೆಯೂ ಗಿಡ್ಡವೇನಲ್ಲ. (37ಖ) ಅವರ ಮನೆ ದೊಡ್ಡದು, ಇವರದೂ ಚಿಕ್ಕದೇನಲ್ಲ. (37ಗ) ಆಕೆ ಬಹಳ ಸುಂದರಿ, ಈಕೆಯೂ ಕುರೂಪಿಯೇನಲ್ಲ.
3.3.6 ಇರು ಪದದ ಬಳಕೆ
ಇರುವಿಕೆಯ ವಾಕ್ಯಗಳ ಹಾಗೆ ಗುಣವಾಕ್ಯಗಳಲ್ಲೂ ಇರು ಕ್ರಿಯಾಪದದ ರೂಪ ಗಳನ್ನು ಬಳಸದಿರಲು ಸಾಧ್ಯವಿದೆ. (38ಕ) ಆ ಹುಡುಗಿ ಬಹಳ ಬೆಳ್ಳಗಿದ್ದಾಳೆ. (38ಖ) ಆ ಹುಡುಗಿ ಬಹಳ ಬೆಳ್ಳಗೆ. (39ಕ) ಈ ಎಮ್ಮೆಯ ಕೊಂಬು ನೆಟ್ಟಗಿದೆ. (39ಖ) ಈ ಎಮ್ಮೆಯ ಕೊಂಬು ನೆಟ್ಟಗೆ. ಆದರೆ, ಇಂತಹ ಗುಣವಾಕ್ಯಗಳಲ್ಲಿ ಗುಣಪದಗಳ ಮುಂದೆ ಆಗಿ ಎಂಬ ಕ್ರಿಯಾರೂಪ ಬಂದಿದೆಯಾದರೆ, ಇರು ಪದದೊಂದಿಗೆ ಅದನ್ನೂ ಬಳಸದಿರ ಬೇಕಾಗುತ್ತದೆ. ಉದಾಹರಣೆಗಾಗಿ, ಕೆಳಗಿನ ವಾಕ್ಯಜೋಡಿಗಳನ್ನು ಗಮನಿಸ ಬಹುದು. (40ಕ) ಈ ಹಣ್ಣು ಕೆಂಪಾಗಿದೆ. (40ಖ) ಈ ಹಣ್ಣು ಕೆಂಪು. (41ಕ) ಆಕೆ ಆ ಕಾಖ್ರಾನೆಯಲ್ಲಿ ಟೈಪಿಸ್್ಟ ಆಗಿದ್ದಾಳೆ. (41ಖ) ಆಕೆ ಆ ಕಾಖ್ರಾನೆಯಲ್ಲಿ ಟೈಪಿಸ್್ಟ. ಗುಣಪದದ ಜಾಗದಲ್ಲಿ ಕ್ರಿಯಾಪದಗಳ ಜೋಡಿಸುವ ರೂಪ ಬಂದಿದೆ ಯಾದರೆ, ಅಂತಹ ಗುಣವಾಕ್ಯಗಳಲ್ಲಿ ಇರು ಪದವನ್ನು ಬಳಸದಿರಲು ಸಾಧ್ಯ ವಾಗದು.
(42) ಅಂಗಡಿಯ ಬಾಗಿಲು ತೆರೆದಿದೆ. (42)ನೇ ವಾಕ್ಯದಲ್ಲಿ ತೆರೆ ಕ್ರಿಯಾಪದದ ಜೋಡಿಸುವ ರೂಪ ಗುಣಪದದ ಜಾಗದಲ್ಲಿ ಬಂದಿದೆಯಾದ ಕಾರಣ, ಈ ವಾಕ್ಯದಿಂದ ಇರು ಕ್ರಿಯಾಪದವನ್ನು ತೆಗೆದು ಹಾಕಲು ಸಾಧ್ಯವಾಗದು.
3.3.7 ಇರುವಿಕೆಯ ವಾಕ್ಯದೊಂದಿಗಿರುವ ಸಂಬಂಧ
ಇರುವಿಕೆಯ ವಾಕ್ಯಗಳಿಗೂ ಮತ್ತು ಗುಣವಾಕ್ಯಗಳಿಗೂ ನಡುವೆ ಹತ್ತಿರದ ಸಂಬಂಧವಿದೆ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಒಂದು ಜಾಗದಲ್ಲಿದೆ ಎಂಬುದನ್ನು ಇರುವಿಕೆಯ ವಾಕ್ಯ ತಿಳಿಸುವುದಾದರೆ, ಅದೇ ಸಂಗತಿಯನ್ನು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಇರುವುದು ಒಂದು ಜಾಗದ ಗುಣಧರ್ಮ ಎಂಬುದಾಗಿ ಗುಣವಾಕ್ಯ ತಿಳಿಸಬಲ್ಲುದು. (43ಕ) ಆ ಸಾಹುಕಾರರಲ್ಲಿ ಬಹಳ ಹಣವಿದೆ. (43ಖ) ಆ ಸಾಹುಕಾರರು ಬಹಳ ಹಣವಂತರಾಗಿದ್ದಾರೆ. (43ಕ)ದಲ್ಲಿ ಹಣ ಎಂಬ ವಸ್ತು ಸಾಹುಕಾರ ಎಂಬ ವ್ಯಕ್ತಿಯಲ್ಲಿ (ಎಂದರೆ ಜಾಗದಲ್ಲಿ) ಇರುವುದನ್ನು ಇರುವಿಕೆಯ ವಾಕ್ಯದ ಮೂಲಕ ಸೂಚಿಸಲಾಗಿದೆ, ಮತ್ತು ಅದೇ ಸಂಗತಿಯನ್ನು (43ಖ)ದಲ್ಲಿ ಹಣ ಇರುವುದು ಸಾಹುಕಾರರ ಒಂದು ಗುಣಧರ್ಮ ಎಂಬುದಾಗಿ ಗುಣವಾಕ್ಯದ ಮೂಲಕ ಸೂಚಿಸಲಾಗಿದೆ. ಇದಲ್ಲದೆ, ಗುಣಧರ್ಮವೊಂದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಲ್ಲಿದೆ ಎಂಬುದಾಗಿ ಇರುವಿಕೆಯ ವಾಕ್ಯದ ಮೂಲಕ ತಿಳಿಸುವ ಬದಲು, ಆ ಗುಣಧರ್ಮ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನದು ಎಂಬುದಾಗಿ ಗುಣವಾಕ್ಯದ ಮೂಲಕ ತಿಳಿಸಲು ಸಾಧ್ಯವಿದೆ. (44ಕ) ಅವಳಲ್ಲಿ ಜಾಣ್ಮೆಯಿದೆ. (44ಖ) ಅವಳು ಜಾಣೆ(ಯಾಗಿದ್ದಾಳೆ). (45ಕ) ಆ ಹುಡುಗನಲ್ಲಿ ಬಹಳ ತುಂಟತನವಿದೆ. (45ಖ) ಆ ಹುಡುಗ ಬಹಳ ತುಂಟ(ನಾಗಿದ್ದಾನೆ). ಇರುವಿಕೆಯ ವಾಕ್ಯ ಮತ್ತು ಗುಣವಾಕ್ಯಗಳ ನಡುವೆ ಇಂತಹ ಸಂಬಂಧ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಬಳಕೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೆಳಗಿನ ಕೆಲವು ಉದಾಹರಣೆಗಳನ್ನು ಕೊಡಬಹುದು. (46ಕ) ಆಚಾರ್ಯರು ಗಂಭೀರರಾಗಿದ್ದಾರೆ. (46ಖ) ಆಚಾರ್ಯರಲ್ಲಿ ಗಾಂಭೀರ್ಯವಿದೆ. (47ಕ) ಅವನು ಬಹಳ ನಿಪುಣನಾಗಿದ್ದಾನೆ. (47ಖ) ಅವನಲ್ಲಿ ಬಹಳ ನೈಪುಣ್ಯವಿದೆ. (48ಕ) ಆತನು ಕೃತಘ್ನನಾಗಿದ್ದಾನೆ. (48ಖ) ಆತನಲ್ಲಿ ಕೃತಘ್ನತೆಯಿದೆ.
3.4 ಸಂಬಂಧ ವಾಕ್ಯಗಳು
ಇತರ ಎರಡು ವಿಷಯವಾಕ್ಯಗಳ ಹಾಗೆ ಸಂಬಂಧ ವಾಕ್ಯಗಳಲ್ಲೂ ಮುಖ್ಯವಾಗಿ ಎರಡು ಘಟಕಗಳಿರುತ್ತವೆ. ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ವೊಂದು, ಮತ್ತು ಅವಕ್ಕೆ ಸಂಬಂಧಿಸಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ಇನ್ನೊಂದು. ಇವುಗಳಲ್ಲಿ ಮೊದಲನೆಯದು ಗೆ ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬರುತ್ತದೆ. (49ಕ) ಮನೋಹರನಿಗೆ ಆರು ಮಂದಿ ಹುಡುಗಿಯರಿದ್ದಾರೆ. (49ಖ) ಆ ಮುದುಕನಿಗೆ ನೂರು ಮುಡಿ ಗದ್ದೆಯಿದೆ. (49ಗ) ಈ ಪುಸ್ತಕಕ್ಕೆ ಕೆಂಪು ಬಣ್ಣದ ತಟ್ಟಿಯಿದೆ. (49ಘ) ಪುಣೆ ನಗರಕ್ಕೊಂದು ಕಾಪ್ರರೇಶನ್ ಇದೆ. (49ಕ)ದಲ್ಲಿ ಮನೋಹರನಿಗೆ ಎಂಬ ಮೊದಲನೆಯ ಘಟಕ ಒಬ್ಬ ವ್ಯಕ್ತಿಯನ್ನೂ ಮತ್ತು ಆರು ಮಂದಿ ಹುಡುಗಿಯರು ಎಂಬ ಎರಡನೆಯ ಘಟಕ ಆ ವ್ಯಕ್ತಿಗೆ ಸಂಬಂಧಿಸಿರುವ ವ್ಯಕ್ತಿಗಳನ್ನೂ (ಅವರ ಪರಿಮಾಣವನ್ನೂ) ತಿಳಿಸುತ್ತವೆ. ಗೆ ಪ್ರತ್ಯಯಕ್ಕೆ ಘಟನೆಯನ್ನು ಸೂಚಿಸುವ ಕ್ರಿಯಾವಾಕ್ಯಗಳಲ್ಲಿ ಘಟನೆಯ ಕೊನೆಯನ್ನು ಸೂಚಿಸುವ ಅರ್ಥವಿದೆಯೆಂಬುದನ್ನು ನಾವು ಹಿಂದೆ 2.2ರಲ್ಲಿ ನೋಡಿರುವೆವು. ಸಂಬಂಧವಾಕ್ಯಗಳಲ್ಲೂ ಇದಕ್ಕೆ ಒಂದು ಸಂಬಂಧದ ‘ಕೊನೆ’ ಯನ್ನು, ಎಂದರೆ ಆ ಸಂಬಂಧ ಎಲ್ಲಿ ಹೋಗಿ ನೆಲೆಸುವುದೋ ಅಂತಹ ವ್ಯಕ್ತಿ, ವಸ್ತು, ಮೊದಲಾದುವನ್ನು ಸೂಚಿಸುವ ಅರ್ಥವಿದೆಯೆಂದು ಹೇಳಲು ಸಾಧ್ಯವಿದೆ. ಆದರೆ ಇಲ್ಲಿ ಕ್ರಿಯಾವಾಕ್ಯಗಳಲ್ಲಿ ಕಾಣಿಸುವ ಹಾಗೆ ಈ ಪ್ರತ್ಯಯಕ್ಕೆ ಕದಲುವ ಅರ್ಥವಿಲ್ಲ (2.5.3 ನೋಡಿ).
3.4.1 ಹೆಚ್ಚಿನ ಘಟಕಗಳು
ಸಂಬಂಧ ವಾಕ್ಯಗಳಲ್ಲಿ ಮೇಲೆ ಸೂಚಿಸಿದ ಎರಡು ಘಟಕಗಳು ಮಾತ್ರವಲ್ಲದೆ ಬೇರೆ ಕೆಲವು ಘಟಕಗಳೂ ಬರಬಲ್ಲುವು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯಲ್ಲಿ ಕಾಣಿಸುವ ಗುಣಧರ್ಮಕ್ಕೆ ಒಂದು ವ್ಯಾಪ್ತಿಯಿದೆಯಾದಲ್ಲಿ ಅದನ್ನು ಸೂಚಿಸುವು ದಕ್ಕಾಗಿ ಮೂರನೆಯ ಘಟಕವೊಂದು ಅಂತಹ ವಾಕ್ಯಗಳಲ್ಲಿ ಬರಬಲ್ಲುದು. ಇದು ಜಾಗ ಘಟಕದ ರೂಪದಲ್ಲಿರುತ್ತದೆ. (50ಕ) ಆಕೆಗೆ ಈ ಸೀರೆಯ ಮೇಲೆ ಆಸೆಯಿದೆ. (50ಖ) ಅವನಿಗೆ ತನ್ನ ಕೆಲಸದಲ್ಲಿ ಶ್ರದ್ಧೆಯಿದೆ. (50ಗ) ಜಾನಕಿಗೆ ಶ್ರೀಹರಿಯ ಮೇಲೆ ಕೋಪವಿದೆ. (50ಘ) ಆ ಹುಡುಗನಿಗೆ ಆಟದಲ್ಲಿ ಮಾತ್ರ ಉತ್ಸಾಹವಿದೆ. ಇದಲ್ಲದೆ, ಸಂಬಂಧಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗ ಮತ್ತು ಸಮಯಗಳನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳೂ ಇಂತಹ ವಾಕ್ಯಗಳಲ್ಲಿ ಬರಬಲ್ಲುವು. (51ಕ) ಅವರಿಗೆ ಇವತ್ತು ಒಂದು ಮೀಟಿಂಗ್ ಇದೆ. (51ಖ) ಹುಡುಗರಿಗೆ ನಾಳೆ ಶಾಲೆಗೆ ರಜೆಯಿದೆ.
3.5 ಸಾರಾಂಶ
ಬೇರೆ ಬೇರೆ ರೀತಿಯ ಸಂಗತಿಗಳನ್ನು ತಿಳಿಸುವುದಕ್ಕಾಗಿ ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ವಿಷಯವಾಕ್ಯಗಳ ಬಳಕೆಯಾಗುತ್ತದೆ. ಜಾಗವೊಂದರಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಇರುವಿಕೆಯನ್ನು ತಿಳಿಸುವ ‘ಇರುವಿಕೆಯ ವಾಕ್ಯಗಳು’, ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ತಿಳಿಸುವ ‘ಗುಣವಾಕ್ಯಗಳು’, ಮತ್ತು ವ್ಯಕ್ತಿ, ವಸ್ತು, ಗುಣಧರ್ಮ ಮೊದಲಾದವುಗಳಲ್ಲಿ ಒಂದು ಇನ್ನೊಂದ ರೊಡನೆ ಸಂಬಂಧಿಸಿರುವುದನ್ನು ತಿಳಿಸುವ ‘ಸಂಬಂಧ ವಾಕ್ಯಗಳು’ ಎಂಬುದಾಗಿ ಇವನ್ನು ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು. ಈ ಎಲ್ಲಾ ವಾಕ್ಯಗಳಲ್ಲೂ ಇರು ಎಂಬ ಒಂದೇ ಕ್ರಿಯಾಪದ ಬರುತ್ತದೆ. ಇಂತಹ ವಾಕ್ಯಗಳಲ್ಲಿ ಹಲವನ್ನು ಇರು ಕ್ರಿಯಾಪದವಿಲ್ಲದೆಯೂ ಬಳಸಲು ಸಾಧ್ಯ ಇಂತಹ ಹೆಚ್ಚಿನ ವಾಕ್ಯಗಳಲ್ಲೂ ಎರಡು ಮುಖ್ಯ ಘಟಕಗಳು ಬಂದಿರುತ್ತವೆ. ಅವುಗಳೊಂದಿಗೆ ಕೆಲವು ಅಮುಖ್ಯ ಘಟಕಗಳೂ ಬರಬಲ್ಲುವು.