← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5

ಭಾಗ ನಾಲ್ಕು — ಕನ್ನಡ ಭಾಷೆಯ ಸ್ವರೂಪ

ಕನ್ನಡ ಭಾಷೆ ಒಂದು ಊರಿನಲ್ಲಿ ಇರುವ ಹಾಗೆ ಇನ್ನೊಂದು ಊರಿನಲ್ಲಿ ಇರುವು ದಿಲ್ಲ; ಒಂದು ಸಮಾಜ ಇಲ್ಲವೇ ಜಾತಿಯಲ್ಲಿ ಇರುವ ಹಾಗೆ ಇನ್ನೊಂದು ಸಮಾಜ ಇಲ್ಲವೇ ಜಾತಿಯಲ್ಲಿ ಇರುವುದಿಲ್ಲ; ಒಂದು ಕಾಲದಲ್ಲಿ ಇರುವ ಹಾಗೆ ಇನ್ನೊಂದು ಕಾಲದಲ್ಲಿ ಇರುವುದಿಲ್ಲ. ಬೇರೆ ಬೇರೆ ಊರು, ಸಮಾಜ ಮತ್ತು ಕಾಲಗಳಲ್ಲಿ ಅದು ಈ ರೀತಿ ಭಿನ್ನ ಭಿನ್ನವಾಗಿ ಕಾಣಿಸಲು ಮುಖ್ಯವಾಗಿ ಕಾಲ ದಿಂದ ಕಾಲಕ್ಕೆ ಅದರಲ್ಲಿ ನಡೆಯುವ ಬದಲಾವಣೆಗಳೇ ಕಾರಣವೆಂದು ಹೇಳ ಬಹುದು.

ಈ ಬದಲಾವಣೆಗಳು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆಯಾಗಿ ನಡೆಯಲು ಆ ಊರುಗಳಲ್ಲಿ ವಾಸಿಸುವ ಜನರ ನಡುವೆ ಸಂಪರ್ಕ ಕಡಿಮೆ ಯಾಗಿರುವುದೇ ಕಾರಣ. ಉದಾಹರಣೆಗಾಗಿ, ಕರಾವಳಿಯ ಊರುಗಳಿಗೂ ಕರ್ಣಾಟಕದ ಇತರ ಊರುಗಳಿಗೂ ನಡುವೆ ಪಶ್ಚಿಮ ಘಟ್ಟಗಳಿಂದಾಗಿ ಹಿಂದಿನ ಕಾಲದಲ್ಲಿ ಪರಸ್ಪರ ಸಂಪರ್ಕ ಬಹಳ ಕಡಿಮೆಯಿದ್ದಿರಬೇಕು. ಇದರಿಂದಾಗಿ, ಕರಾವಳಿಯ ಕನ್ನಡದಲ್ಲಿ ನಡೆದ ಬದಲಾವಣೆಗಳು ಇತರ ಪ್ರದೇಶಗಳಲ್ಲಿ ಬಳಕೆ ಯಲ್ಲಿರುವ ಕನ್ನಡದ ಪ್ರಭೇದಗಳಲ್ಲಿ ನಡೆದ ಬದಲಾವಣೆಗಳಿಗಿಂತ ಭಿನ್ನವಾದ ದಾರಿಯನ್ನು ಹಿಡಿದಿರಬೇಕು, ಮತ್ತು ಇದರಿಂದಾಗಿ ಇವತ್ತು ಕರಾವಳಿಯಲ್ಲಿ ಬಳಕೆಯಲ್ಲಿರುವ ಕನ್ನಡ ಇತರ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡಕ್ಕಿಂತ ಭಿನ್ನವಾಗಿ ಕಾಣಿಸುತ್ತಿದೆ.

ಬೇರೆ ಬೇರೆ ಸಮಾಜ ಇಲ್ಲವೇ ಜಾತಿಗಳಲ್ಲೂ ಇದೇ ರೀತಿಯಲ್ಲಿ ಪರಸ್ಪರ ಸಂಪರ್ಕ ಕಡಿಮೆಯಾದಷ್ಟೂ ಆ ಸಮಾಜ ಇಲ್ಲವೇ ಜಾತಿಗಳಿಗೆ ಸೇರಿದ ಜನರ ಮಾತುಗಳಲ್ಲಿ ಬದಲಾವಣೆಗಳು ಬೇರೆ ಬೇರೆ ದಿಕ್ಕಿನಲ್ಲಿ ನಡೆಯುತ್ತವೆ, ಮತ್ತು ಇದರಿಂದಾಗಿ ಅವು ಕ್ರಮೇಣ ಒಂದಕ್ಕಿಂತ ಒಂದು ಭಿನ್ನವಾಗತೊಡಗುತ್ತವೆ. ಹೀಗೆ, ಕಾಲ, ಊರು ಮತ್ತು ಸಮಾಜಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆಲ್ಲ ಭಾಷೆ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದೇ ಮುಖ್ಯ ಕಾರಣ.

ಕನ್ನಡದಲ್ಲಿ ಈ ರೀತಿ ಕಾಲ, ದೇಶ, ಮತ್ತು ಸಮಾಜಗಳಿಗೆ ಸಂಬಂಧಿಸಿ ದಂತೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬ ವಿಷಯದಲ್ಲಿ ಇನ್ನೂ ಬಹಳಷ್ಟು ಸಂಶೋಧನೆಗಳು ನಡೆಯುವ ಅವಶ್ಯಕತೆಯಿದೆ. ಈ ಸಂಶೋಧನೆಗಳು ಹೇಗೆ ಮುಂದುವರಿಯಬೇಕು ಎಂಬುದನ್ನು ಈ ವಿಭಾಗದ ಮೊದಲ ಎರಡು ಲೇಖನ ಗಳು ಸೂಚಿಸುತ್ತವೆ.

Eke →

ಕನ್ನಡದ ಮೂರು ಮುಖಗಳು

ಕನ್ನಡ ವ್ಯಾಕರಣದ ವಿಷಯದಲ್ಲೂ ನಾವು ಕಲಿಯಬೇಕಾಗಿರುವ ವಿಷಯ ಗಳು ಹಲವಿವೆ. ಕನ್ನಡದ ಹೆಚ್ಚಿನ ವೈಯಾಕರಣಿಗಳೂ ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು ಕನ್ನಡಕ್ಕೆ ವ್ಯಾಕರಣವನ್ನು ರಚಿಸಿರುವಂತೆ ಕಾಣಿಸುತ್ತದೆ.

ಕನ್ನಡ ಭಾಷೆ ಈ ಎರಡು ಭಾಷೆಗಳಿಗಿಂತ ತೀರ ಭಿನ್ನವಾಗಿರುವ ಕಾರಣ, ಇಂತಹ ವ್ಯಾಕರಣಗಳು ಅದರ ಪದಗಳ ಮತ್ತು ವಾಕ್ಯಗಳ ರಚನೆಗಳನ್ನು ಸರಿಯಾಗಿ ಪ್ರತಿಬಿಂಬಿಸಲಾರವು. ಕನ್ನಡ ವ್ಯಾಕರಣಕ್ಕೆ ಅದರದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಈ ವಿಭಾಗದ ಮುಂದಿನ ಎರಡು ಲೇಖನಗಳು ಸೂಚಿಸುತ್ತವೆ.

ಕನ್ನಡ ಪದಗಳ ಆಂತರಿಕ ರಚನೆ ಮತ್ತು ಚರಿತ್ರೆಯಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಂಶೋಧನೆಗೂ ಕವಿತ್ವಕ್ಕೂ ನಡುವೆ ಘರ್ಷಣೆಗಳುಂಟಾಗಲು ಸಾಧ್ಯವಿದೆ. ಕೆಲವು ಸಂದರ್ಭಗಳಲ್ಲಿ ಕವಿತ್ವ ಎಲ್ಲೆ ಮೀರುತ್ತಿದೆಯೆಂದು ಸಂಶೋಧನೆ ತಿಳಿಸಬಹುದೇನೋ ಎಂಬುದನ್ನು ಐದನೆಯ ಲೇಖನ ಸೂಚಿಸು ತ್ತದೆ.

ಕನ್ನಡದಲ್ಲಿ ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸಲು ಮತ್ತು ಇತರ ಭಾಷೆಗಳಿಂದ ಅಂತಹ ವಿಚಾರಗಳನ್ನು ಆಮದು ಮಾಡಿಕೊಳ್ಳಲು ಅದರ ಪದ ರಾಶಿಯನ್ನು ವೃದ್ಧಿಸುವ ಅವಶ್ಯಕತೆ ಕಂಡುಬರುತ್ತದೆ. ಇದನ್ನು ಹೇಗೆ ನಡೆಸ ಬೇಕು? ಹೇಗೆ ನಡೆಸಿದಲ್ಲಿ ಈ ಪದವೃದ್ಧಿ ಕನ್ನಡದ ಸಾಹಜಿಕತೆಯನ್ನು ಕೆಡಿಸ ದಿದ್ದೀತು ಎಂಬ ವಿಷಯವನ್ನು ಆರನೆಯ ಲೇಖನ ಪರೀಕ್ಷಿಸುತ್ತದೆ.

Eke →

೪.೧ ಕನ್ನಡದ ಮೂರು ಮುಖಗಳು

ಕರ್ಣಾಟಕದಲ್ಲಿ ಹೆಚ್ಚಿನ ಜನರೂ ಕನ್ನಡವನ್ನಾಡುತ್ತಾರೆಂಬ ವಿಷಯ ನಮಗೆಲ್ಲ ಗೊತ್ತಿದೆ. ಈ ಆಡುಗನ್ನಡ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ, ಮತ್ತು ಜಾತಿಯಿಂದ ಜಾತಿಗೆ ಬದಲಾಗುತ್ತಾ ನಡೆಯುವುದೆಂಬುದೂ ನಮಗೆ ಗೊತ್ತಿದೆ.

ಮೈಸೂರಿನ ಮಂದಿ ಒಂದು ತರದ ಕನ್ನಡವನ್ನಾಡುತ್ತಾರಾದರೆ, ಮಂಗಳೂರಿ ನವರು ಇನ್ನೊಂದು ತರ, ಧಾರವಾಡದವರು ಮತ್ತೊಂದು ತರ, ಮತ್ತು ಬೀದರ್ ನವರು ಮಗದೊಂದು ತರ. ಇಷ್ಟೇ ಅಲ್ಲ, ಮೈಸೂರು ಜಿಲ್ಲೆಯಲ್ಲೇನೇ ಕೊಳ್ಳೆ ಗಾಲದ ಕನ್ನಡ, ನಂಜನಗೂಡಿನ ಕನ್ನಡ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಗಳ ನಡುವೆ ವ್ಯತ್ಯಾಸವಿದೆ.

ಈ ರೀತಿ ಊರಿನಿಂದ ಊರಿಗೆ ವ್ಯತ್ಯಾಸವಿದೆ ಮಾತ್ರವಲ್ಲ, ಒಂದೇ ಹಳ್ಳಿ ಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಮಾತು, ಒಕ್ಕಲಿಗರ ಮಾತು, ಆದಿ ಕರ್ಣಾಟಕರ ಮಾತು ಎಂಬುವೆಲ್ಲ ಬೇರೆ ಬೇರಾಗಿವೆ.

Eke →

ವ್ಯತ್ಯಾಸಗಳ ನಿಯಮಬದ್ಧತೆ

ಕನ್ನಡದಲ್ಲಿ ಇಷ್ಟೆಲ್ಲ ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ಎಂತಹವು, ಇವುಗಳ ವ್ಯಾಪ್ತಿಯೇನು ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ಯಾರೂ ವಿವರಿಸಿಲ್ಲ. ಶಾಸ್ತ್ರೀಯವಾದ ಅಭ್ಯಾಸ ನಡೆಸಿದಲ್ಲಿ, ಈ ವ್ಯತ್ಯಾಸಗಳ ಹಿಂದೆ ನಿಶ್ಚಿತವಾದೊಂದು ನಿಯಮವಿದೆ ಎಂಬುದರ ಅರಿವಾಗ ಬಹುದು.

ಉದಾಹರಣೆಗಾಗಿ, ಮೈಸೂರಿನವರು ಮನೆ ಎನ್ನುತ್ತಾರಾದರೆ, ಧಾರವಾಡ ದವರು ಮನಿ ಎನ್ನುತ್ತಾರೆ. ಮೈಸೂರಿನ ಹಣೆ ಧಾರವಾಡದಲ್ಲಿ ಹಣಿಯಾಗು ಇದೆ, ಕೆರೆ ಕೆರಿಯಾಗುತ್ತದೆ, ಗೆರೆ ಗೆರಿಯಾಗುತ್ತದೆ. ಮೈಸೂರು ಕನ್ನಡದ ನಾಮಪದಗಳ ಕೊನೆಯಲ್ಲಿ ಬರುವ ಎಕಾರಗಳೆಲ್ಲ ಧಾರವಾಡ ಕನ್ನಡದಲ್ಲಿ ಇಕಾರವಾಗುತ್ತದೆಯೆಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಮೈಸೂರು ಜಿಲ್ಲೆಯೊಳಗೇನೇ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಅಂಬು ಎಂದಾಗುತ್ತದೆ, ಹಾವು ಅವು ಎಂದಾಗುತ್ತದೆ. ಪದಗಳ ಆದಿಯಲ್ಲಿ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಲೋಪಗೊಂಡಿವೆ ಎಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಕೊಳ್ಳೇಗಾಲದಲ್ಲಿ ಎಕಾರಾಂತವಾಗಿರುವ ಕ್ರಿಯಾಪದಗಳೆಲ್ಲ ನಂಜನಗೂಡಿ ನಲ್ಲಿ ಇಕಾರಾಂತವಾಗುತ್ತವೆಯೆಂಬುದು ಇಂತಹದೇ ಇನ್ನೊಂದು ನಿಯಮ. ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ; ಅಗೆ ಅಗಿಯಾಗುತ್ತದೆ, ಕರೆ ಕರಿಯಾಗುತ್ತದೆ, ಒಡೆ ಒಡಿಯಾಗುತ್ತದೆ. ಆದರೆ ಈ ನಿಯಮ ಕ್ರಿಯಾಪದಗಳಿಗೆ ಮಾತ್ರ ಅನ್ವಯಿಸುತ್ತದೆ, ನಾಮಪದಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಬೇಕು.

Eke →

ವ್ಯತ್ಯಾಸಗಳ ವ್ಯಾಪ್ತಿ

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳು ಹೀಗೆ ನಿಯಮಬದ್ಧವಾಗಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತ ವಾದ ವ್ಯಾಪ್ತಿಯೂ ಇದೆ. ಉದಾಹರಣೆಗಾಗಿ, ಪದದ ಆದಿಯಲ್ಲಿರುವ ಹಕಾರವು ಬಿದ್ದು ಹೋಗುವುದೆಂಬ ನಿಯಮವನ್ನು ಗಮನಿಸಬಹುದು.

ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಮತ್ತು ಪಿರಿಯಾ ಪಟ್ಟಣಗಳಲ್ಲಿ ಪದಗಳ ಆದಿಯಲ್ಲಿ ಬರುವ ಹಕಾರವನ್ನು ಜನರು ಸ್ಪಷ್ಟವಾಗಿಯೇ ಉಚ್ಚರಿಸುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ ಅಲ್ಲಿ ಪದಗಳ ಆದಿಯಲ್ಲಿ ಬರುವ ಹಕಾರಗಳೆಲ್ಲ ಲೋಪಗೊಂಡಿರುವುದನ್ನು

Eke →

ಕನ್ನಡದ ಮೂರು ಮುಖಗಳು

ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜ ನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರವು ಹೀಗೆ ಲೋಪಗೊಂಡಿರುವುದನ್ನು ಕಾಣಬಹುದು.

ಈ ರೀತಿ ಹಕಾರ ಲೋಪ ಎಲ್ಲೆಲ್ಲಿ ನಡೆದಿದೆ ಮತ್ತು ಎಲ್ಲೆಲ್ಲಿ ನಡೆದಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ಕೂಲಂಕಶವಾಗಿ ಅಭ್ಯಾಸ ಮಾಡಿದೆ ವಾದರೆ, ಮೈಸೂರಿನ ನಕ್ಷೆಯಲ್ಲಿ ಒಂದು ಸ್ಪಷ್ಟವಾದ ‘ಹಕಾರದ ಗೆರೆ’ ಯನ್ನೆಳೆಯಲು ಸಾಧ್ಯವಾದೀತು. ಈ ಗೆರೆ ನಂಜನಗೂಡು-ಹುಣಸೂರುಗಳ ನಡುವೆ, ಹೆಗ್ಗಡದೇವನ ಕೋಟೆಯ ಪಶ್ಚಿಮಕ್ಕಾಗಿ ಹಾಯ್ದಿತು.

ಈ ಗೆರೆ ಮೈಸೂರು ಜಿಲ್ಲೆಯನ್ನು ಮಾತ್ರವಲ್ಲ, ಇಡೀ ಕರ್ಣಾಟಕವನ್ನೇ ಎರಡು ಭಾಗಗಳಾಗಿ ವಿಂಗಡಿಸುತ್ತಿದೆಯೆಂದು ತೋರುತ್ತದೆ. ಇದರ ಒಂದು ತುದಿ ಮೈಸೂರು ಜಿಲ್ಲೆಯಲ್ಲಿದೆಯಾದರೆ, ಇನ್ನೊಂದು ತುದಿ ಗುಲ್ಬರ್ಗ ಮತ್ತು ಶಾಬಾದ್‌ಗಳ ನಡುವೆ ಹಾದು ಆಂಧ್ರದ ಗಡಿಯನ್ನು ಮುಟ್ಟುವ ಹಾಗೆ ಕಾಣಿಸುತ್ತದೆ. ಈ ಎರಡು ತುದಿಗಳ ನಡುವೆ ಈ ಗೆರೆ ಯಾವ ಯಾವ ಜಿಲ್ಲೆ ಗಳನ್ನೆಲ್ಲ ಕತ್ತರಿಸುತ್ತದೆ, ಇದರ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಮಂಡ್ಯ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಜನರ ಮಾತನ್ನು ಗಮನಿಸಬೇಕು.

Eke →

ಅಗೆ-ಆಗಿ ಗೆರೆ

ಕನ್ನಡದಲ್ಲಿ (ಗುದ್ದಲಿಯಿಂದ) ಅಗೆ, ಮತ್ತು (ಬಾಯಿಯಲ್ಲಿ) ಅಗಿ ಎಂಬುದಾಗಿ ಎರಡು ಕ್ರಿಯಾಪದಗಳಿವೆಯಷ್ಟೆ. ಮೈಸೂರು ಜಿಲ್ಲೆಯ ಬೇರೆ ಬೇರೆ ತಾಲೂಕು ಗಳಲ್ಲಿ ಇವಕ್ಕೆ ಎರಡು ರೂಪಗಳಿವೆ:

(೧) ಕೊಳ್ಳೇಗಾಲ ಮತ್ತು ತಿ.ನರಸೀಪುರಗಳಲ್ಲಿ ಇವೆರಡೂ ಆಗಿ ಎಂಬ ಒಂದೇ ರೂಪವನ್ನು ತಾಳುತ್ತವೆ.

(೨) ಹುಣಸೂರು ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಇವೆರಡೂ ಇಕಾರದಲ್ಲಿ ಕೊನೆಗೊಳ್ಳುತ್ತವೆ; ಆದರೆ, ಈ ಪದಗಳಲ್ಲಿ ಮೊದಲಿಗೆ ಬರುವ ಅಕಾರದಲ್ಲಿ ವ್ಯತ್ಯಾಸ ತಲೆದೋರಿದೆ: ಗುದ್ದಲಿಯಿಂದ ಅಗಿ, ಬಾಯಿಯಲ್ಲಿ ಅ’ಗಿ. ಇಲ್ಲಿ ಎಕಾರಾಂತವಾದ ಕ್ರಿಯಾಪದಗಳೆಲ್ಲ ಇಕಾರಾಂತವಾಗಿವೆ; ಆದರೆ, ಹಿಂದೆ ಇಕಾರಾಂತವಾಗಿದ್ದ ಕ್ರಿಯಾಪದಗಳಲ್ಲಿ ಮೊದಲಿಗೆ ಬರುವ ಅಕಾರಗಳೆಲ್ಲ ಅ’ಕಾರಗಳಾಗಿವೆಯೆಂಬ ನಿಯಮ ಕಂಡುಬರುತ್ತಿದೆ.

Eke →

ಕಂದ-ಕಂಡ ಗೆರೆ

ಮೈಸೂರು ಕನ್ನಡದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಕನ್ನಡದ ಮಾಡಿ ಕೊಂಡ, ತಿಂದುಕೊಂಡ ಎಂಬಂತಹ ಪದಗಳಲ್ಲಾಗುವ ಪರಿವರ್ತನೆ:

(೧) ನಂಜನಗೂಡು, ಚಾಮರಾಜನಗರ, ತಿ.ನರಸೀಪುರ ಮತ್ತು ಕೊಳ್ಳೇ ಗಾಲಗಳಲ್ಲಿ ಇವು ಮಾಡ್ಕಂದ, ತಿಂಡ್ಕಂದ ಎಂದಾಗುತ್ತವೆ;

(೨) ಉಳಿದೆಡೆಗಳಲ್ಲಿ ಮಾಡ್ಕಂಡ, ತಿಂಡ್ಕಂಡ ಎಂದಾಗುತ್ತವೆ.

ಈ ‘ಕಂದ-ಕಂಡ’ ಗೆರೆ ಚಾಮರಾಜನಗರ ಮತ್ತು ನಂಜನಗೂಡುಗಳ ಪಶ್ಚಿಮಕ್ಕಾಗಿ ಹಾಯುತ್ತದೆ. ಈ ಗೆರೆಯ ಇನ್ನೊಂದು ಕೊನೆ ಎಲ್ಲಿ ಎಂಬುದನ್ನು ತಿಳಿಯಲು ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ವಾಸಿಸುವ ಜನರ ಮಾತನ್ನು ಪರಿಶೀಲಿಸಬೇಕು.

Eke →

ಸಾಮಾಜಿಕ ಪರಿಮಿತಿ

ಇಷ್ಟರ ವರೆಗೆ ಕನ್ನಡದಲ್ಲಿ ಊರಿನಿಂದ ಊರಿಗೆ ಕಂಡುಬರುವ ವ್ಯತ್ಯಾಸಗಳ ಭೌಗೋಳಿಕ ಪರಿಮಿತಿ ಇಲ್ಲವೇ ವ್ಯಾಪ್ತಿ ಎಂತಹದೆಂಬುದನ್ನು ಪರಿಶೀಲಿಸಿದೆವು. ಒಂದೇ ಹಳ್ಳಿಯಲ್ಲಿಯೂ ಕನ್ನಡವು ಜಾತಿಯಿಂದ ಜಾತಿಗೆ ವ್ಯತ್ಯಾಸ ಹೊಂದು ತ್ತಿದೆಯಾದ ಕಾರಣ, ಮೇಲಿನ ನಿಯಮಗಳಿಗೆಲ್ಲ ‘ಸಾಮಾಜಿಕ ಪರಿಮಿತಿ’ಯನ್ನೂ ನಿರ್ಧರಿಸುವುದು ಅವಶ್ಯ.

ಉದಾಹರಣೆಗಾಗಿ, ಪದದ ಆದಿಯಲ್ಲಿರುವ ಹಕಾರ ಬಿದ್ದುಹೋಗುತ್ತದೆ ಯೆಂಬ ನಿಯಮವನ್ನು ಗಮನಿಸಬಹುದು:

(೧) ನಂಜನಗೂಡಿನ ಒಕ್ಕಲಿಗರ ಇಲ್ಲವೇ ಆದಿಕರ್ಣಾಟಕರ ಮಾತಿನಲ್ಲಿ ಪದಾದಿಯ ಹಕಾರ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಿದ್ದುಹೋಗಿದೆ;

(೨) ಆದರೆ, ಇದೇ ಊರಿನ ಬ್ರಾಹ್ಮಣರ ಕನ್ನಡದಲ್ಲಿ ಈ ಹಕಾರ ಹಾಗೆಯೇ ಉಳಿದುಕೊಂಡಿದೆ.

ಜಾತಿಯಿಂದ ಜಾತಿಗೆ ತೋರಿಬರುವ ಸಾಮಾಜಿಕ ವ್ಯತ್ಯಾಸಗಳೂ ಭೌಗೋಳಿಕ ವ್ಯತ್ಯಾಸಗಳಷ್ಟೇ ನಿಯಮಬದ್ಧವಾಗಿರುತ್ತವೆ. ಉದಾಹರಣೆಗಾಗಿ, ನಂಜನಗೂಡಿನ ಒಕ್ಕಲಿಗರ ಮತ್ತು ಆದಿಕರ್ಣಾಟಕರ ಮಾತುಗಳನ್ನು ಹೋಲಿಸಿ ನೋಡಬಹುದು:

ಒಕ್ಕಲಿಗರು ಮನೆ ಎನ್ನುವುದಕ್ಕೆ ಆದಿಕರ್ಣಾಟಕರು ಮನ ಎನ್ನುತ್ತಾರೆ, ಅಣೆ (ಹಣೆ)ಗೆ ಅಣ ಎನ್ನುತ್ತಾರೆ, ತಲೆಗೆ ತಲಿ ಎನ್ನುತ್ತಾರೆ, ಅತ್ತೆಗೆ ಅತ್ತ ಎನ್ನುತ್ತಾರೆ. ನಾಮಪದಗಳ ಕೊನೆಯಲ್ಲಿರುವ ಎಕಾರಗಳೆಲ್ಲ ಆದಿಕರ್ಣಾಟಕರ ಮಾತಿನಲ್ಲಿ ಅಕಾರಗಳಾಗಿವೆಯೆಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

Eke →

ಚಾರಿತ್ರಿಕ ಪರಿಮಿತಿ

ಕನ್ನಡ ಭಾಷೆಯಲ್ಲಿ ತೋರುವ ವ್ಯತ್ಯಾಸಗಳಿಗೆ ಈ ರೀತಿ ಭೌಗೋಳಿಕ ಮತ್ತು ಸಾಮಾಜಿಕ ಪರಿಮಿತಿಗಳು ಮಾತ್ರವಲ್ಲದೆ, ಮೂರನೆಯದಾದ ಚಾರಿತ್ರಿಕ ಪರಿಮಿತಿಯೂ ಇದೆಯೆಂಬುದನ್ನು ಗಮನಿಸಬೇಕು: ಹಳೆಗನ್ನಡದಲ್ಲಿ ಬರೆದ

ಪಂಪನ ಭಾಷೆಗೂ, ನಡುಗನ್ನಡದಲ್ಲಿ ಬರೆದ ಬಸವಣ್ಣನ ವಚನಗಳ ಭಾಷೆಗೂ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಮೇಲಿನ ವ್ಯತ್ಯಾಸಗಳ ಹಾಗೆಯೇ ಈ ವ್ಯತ್ಯಾಸಗಳೂ ನಿಯಮಬದ್ಧವಾಗಿವೆ.

ಪಂಪನ ಕನ್ನಡದಲ್ಲಿ ಪದಗಳ ಆದಿಯಲ್ಲಿ ಬರುತ್ತಿದ್ದ ಪಕಾರಗಳೆಲ್ಲ ನಡು ಗನ್ನಡದಲ್ಲಿ ಮತ್ತು ಇಂದಿನ ಕನ್ನಡದಲ್ಲಿ ಹಕಾರಗಳಾಗಿವೆಯೆಂಬುದು ಇಂತಹ ನಿಯಮಬದ್ಧವಾದ ಚಾರಿತ್ರಿಕ ವ್ಯತ್ಯಾಸಗಳಲ್ಲಿ ಒಂದು.

ಭೌಗೋಳಿಕ, ಸಾಮಾಜಿಕ ಮತ್ತು ಚಾರಿತ್ರಿಕಗಳೆಂಬ ಈ ಮೂರು ಮುಖ್ಯ ಬದಲಾವಣೆಗಳಿಂದಾಗಿ ಕನ್ನಡದಲ್ಲಿ ಬೇರೆ ಬೇರೆ ಪ್ರಭೇದಗಳೇರ್ಪಟ್ಟಿವೆ. ಇವನ್ನು ಕೂಲಂಕಶವಾಗಿ ಅಭ್ಯಾಸ ಮಾಡದೆ, ನಮ್ಮ ಕನ್ನಡದ ಜ್ಞಾನ ಪೂರ್ಣವಾಗದು.

ಒಂದೊಂದು ಕಾಲದಲ್ಲಿ ಒಂದೊಂದು ಪ್ರಭೇದ ಲೇಖನಯೋಗ್ಯವೆಂದು ಪರಿಗಣಿತವಾಗುತ್ತಿರುವುದು ಕಂಡುಬರುತ್ತಿದೆ. ಹೀಗೆ ಪರಿಗಣಿತವಾಗದೇ ಇರುವ ಪ್ರಭೇದಗಳು ತಪ್ಪು ಇಲ್ಲವೇ ಗ್ರಾಮ್ಯ ಎಂದು ತೆಗಳುವುದು ಸರಿಯಲ್ಲ. ಕನ್ನಡದ ಮೂರು ಮುಖಗಳಂತಿರುವ ಈ ಮೂರು ವಿಧವಾದ ಭಾಷಾಪ್ರಭೇದಗಳು ಸರಿ ಸಮನಾದ ಗೌರವಕ್ಕೆ ಅರ್ಹವಾದವುಗಳು. ಅವುಗಳೊಳಗೆ ಕೀಳು ಮೇಲಿಲ್ಲ.

Eke →

೪.೨ ಕನ್ನಡದ ಉಪಭಾಷೆಗಳು

ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ, ಊರಿನಿಂದ ಊರಿಗೆ, ಮತ್ತು ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಹನ್ನೆರಡನೇ ಶತಮಾನದಲ್ಲಿದ್ದ ಪಂಪನ ಕಾಲದ ಕನ್ನಡ, ಹದಿನೈದನೇ ಶತಮಾನದಲ್ಲಿದ್ದ ಬಸವಣ್ಣನ ಕಾಲದ ಕನ್ನಡ, ಮತ್ತು ಇಪ್ಪತ್ತನೇ ಶತಮಾನದ ಇವತ್ತಿನ ಕನ್ನಡಗಳ ನಡುವೆ ಹಲವಾರು ವ್ಯತ್ಯಾಸಗಳು ಕಾಣಿಸುತ್ತಿದ್ದು, ಇವೆಲ್ಲ ಮುಖ್ಯವಾಗಿ ಕಾಲದಿಂದ ಕಾಲಕ್ಕೆ ಕನ್ನಡ ಭಾಷೆ ಬದಲಾಗುತ್ತಾ ಹೋದುದರ ಪರಿಣಾಮವೆಂದು ಹೇಳಬಹುದು.

ಇದೇ ರೀತಿಯಲ್ಲಿ, ಕರಾವಳಿಯ ಕನ್ನಡ. ಮೈಸೂರಿನ ಕನ್ನಡ, ಮತ್ತು ಧಾರವಾಡದ ಕನ್ನಡಗಳ ನಡುವೆ ಹಲವಾರು ವ್ಯತ್ಯಾಸಗಳು ಕಾಣಿಸುತ್ತಿದ್ದು, ಇವೆಲ್ಲ ಬೇರೆ ಬೇರೆ ಪ್ರದೇಶಗಳಲ್ಲಿ ಕನ್ನಡ ಭಾಷೆ ಬೇರೆ ಬೇರೆ ರೀತಿಯಲ್ಲಿ ಬದಲಾವಣೆಗೊಂಡುದರ ಪರಿಣಾಮವೆಂದು ಹೇಳಬಹುದು.

ಒಂದೇ ಊರಿನಲ್ಲಿ ವಾಸಿಸುವ ಬೇರೆ ಬೇರೆ ಸಮಾಜ(ಜಾತಿ)ಗಳ ನಡುವೆಯೂ ಕನ್ನಡ ಭಾಷೆಯಲ್ಲಿ ಹಲವು ಬಗೆಯ ವ್ಯತ್ಯಾಸಗಳು ಕಾಣಿಸುತ್ತವೆ. ಉದಾಹರಣೆಗಾಗಿ, ಕರಾವಳಿ ಕರ್ನಾಟಕದ ಸುಳ್ಯದಲ್ಲಿ ಹವ್ಯಕರು ಬಳಸುವ ಕನ್ನಡಕ್ಕೂ ಗೌಡರು ಬಳಸುವ ಕನ್ನಡಕ್ಕೂ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಇವು ಬೇರೆ ಬೇರೆ ಸಮಾಜಗಳಲ್ಲಿ ಕನ್ನಡ ಭಾಷೆ ಬೇರೆ ಬೇರೆ ರೀತಿಯಲ್ಲಿ ಬದಲಾವಣೆಗೊಂಡುದರ ಪರಿಣಾಮವೆಂದು ಹೇಳಬಹುದು.

ಒಂದು ಭಾಷೆಗೆ ಎಂತಹ ಉಪಭಾಷೆಗಳೆಲ್ಲ ಇವೆ ಎಂಬ ಪ್ರಶ್ನೆಗೆ ಉತ್ತರ ಹೇಳಲು ಆ ಭಾಷೆ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ, ಮತ್ತು ಬೇರೆ ಬೇರೆ ಸಮಾಜಗಳಲ್ಲಿ ಯಾವ ರೀತಿಯಲ್ಲೆಲ್ಲ ಬಳಕೆಯಲ್ಲಿತ್ತು ಮತ್ತು ಬಳಕೆಯಲ್ಲಿದೆ, ಆ ಬಳಕೆಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬ ವಿಷಯವನ್ನು ಕೂಲಂಕಶವಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಕನ್ನಡದ ಮಟ್ಟಿಗೆ ಈ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿಲ್ಲವಾದ ಕಾರಣ, ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕೊಡುವುದು ಸದ್ಯಕ್ಕಂತೂ ಕಷ್ಟಸಾಧ್ಯ.

ನಮಗೆ ತಿಳಿದಿರುವ ಮಟ್ಟಿಗೆ, ಕೆಲವು ಮುಖ್ಯವಾದ ಅಂಶಗಳನ್ನು ಮಾತ್ರವೇ ಇಲ್ಲಿ ಸೂಚಿಸಲು ಸಾಧ್ಯ. ಆದರೆ ಹೀಗೆ ಮಾಡುವುದರಿಂದ, ಇನ್ನು ಮುಂದೆ ಕನ್ನಡದಲ್ಲಿ ಎಂತಹ ಸಂಶೋಧನೆಗಳೆಲ್ಲ ನಡೆಯಬೇಕು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವಿದೆ.

Eke →

ಕನ್ನಡದ ವಿಭಜನೆ

ಚಾರಿತ್ರಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಪೂರೈದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಮತ್ತು ಹೊಸಗನ್ನಡ ಎಂಬುದಾಗಿ ನಾಲ್ಕು ಮುಖ್ಯ ಉಪಭಾಷೆ ಗಳಾಗಿ ವಿಭಜಿಸಲಾಗಿದೆ. ಈ ವಿಭಜನೆಯನ್ನು ಛೇದಿಸುವಂತೆ, ಪ್ರಾದೇಶಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಕರಾವಳಿಯ ಪಶ್ಚಿಮ ಕನ್ನಡ ಮತ್ತು ಒಳನಾಡಿನ ಪೂರ್ವ ಕನ್ನಡ ಎಂಬುದಾಗಿಯೂ, ಇವುಗಳಲ್ಲಿ ಪೂರ್ವ ಕನ್ನಡ ವನ್ನು ದಕ್ಷಿಣ (ಮೈಸೂರು) ಕನ್ನಡ ಮತ್ತು ಉತ್ತರ (ಧಾರವಾಡ) ಕನ್ನಡ ಎಂಬುದಾಗಿಯೂ ವಿಂಗಡಿಸಬಹುದು.

ಸಾಮಾಜಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಸೊಲಿಗ, ಬಡಗ, ಮತ್ತು ಇತರ ಎಂಬುದಾಗಿಯೂ, ಮತ್ತು ಇತರ ಎಂಬುದನ್ನು ಬೇರೆ ಬೇರೆ ಸಮಾಜ ಇಲ್ಲವೇ ಜಾತಿಗಳನ್ನಾಧರಿಸಿ ಬೇರೆ ಬೇರೆ ಉಪಭಾಷೆಗಳನ್ನಾಗಿಯೂ ವಿಂಗಡಿಸ ಬಹುದು. ಆದರೆ ಮೇಲೆ ಸೂಚಿಸಿದಂತೆ, ಈ ಮೂರು ವಿಭಜನೆಗಳೂ ಒಂದ ನ್ನೊಂದು ಛೇದಿಸುವುವಾದ ಕಾರಣ, ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಿ ಹೇಳುವುದು ಕಷ್ಟ.

ಉದಾಹರಣೆಗಾಗಿ, ಕರಾವಳಿ (ಪಶ್ಚಿಮ) ಮತ್ತು ಒಳನಾಡು (ಪೂರ್ವ) ಎಂಬ ಪ್ರಾದೇಶಿಕ ವಿಭಜನೆ ಪೂರ್ವದ ಹಳೆಗನ್ನಡಕ್ಕಿಂತಲೂ ಹಳೆಯದಾಗಿದೆ; ಹಾಗಾಗಿ, ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಈ ನಾಲ್ಕು ಉಪಭಾಷೆಗಳ ಕಾಲದಲ್ಲೂ ಪೂರ್ವ-ಪಶ್ಚಿಮವೆಂಬ ಪ್ರಾದೇಶಿಕ ವಿಭಜನೆಯಿದ್ದಿರಬೇಕೆಂದು ಹೇಳಬಹುದು.

ಕರಾವಳಿಯಲ್ಲಿ ಬಳಕೆಯಲ್ಲಿರುವ ಹವ್ಯಕ ಎಂಬ ಪ್ರಭೇದದಲ್ಲಿ ಕರಾವಳಿ ಯಲ್ಲೇನೇ ದಕ್ಷಿಣ ಮತ್ತು ಉತ್ತರ ಪ್ರದೇಶಗಳ ನಡುವೆ ವ್ಯತ್ಯಾಸಗಳಿವೆ; ಹಾಗಾಗಿ, ಅಲ್ಲಿಯೂ ಸಾಮಾಜಿಕ ಪ್ರಭೇದವನ್ನು ಪ್ರಾದೇಶಿಕ ಪ್ರಭೇದ ಛೇದಿಸು

ತಿದೆಯೆಂದು ಹೇಳಬಹುದು. ಇದಲ್ಲದೆ, ಸೊಲಿಗ ಮತ್ತು ಬಡಗ ಎಂಬವುಗ ಳೆರಡು ಕೆಲವು ವಿಶಿಷ್ಟವಾದ ಪ್ರದೇಶಗಳಲ್ಲಿ ಮಾತ್ರ ಬಳಕೆಯಲ್ಲಿವೆ; ಹಾಗಾಗಿ, ಅವುಗಳ ಮಟ್ಟಿಗೆ ಸಾಮಾಜಿಕ ಮತ್ತು ಪ್ರಾದೇಶಿಕ ಅಂಶಗಳೆರಡು ಒಟ್ಟು ಸೇರಿವೆ ಯೆಂದು ಹೇಳಬಹುದು.

ಇದಲ್ಲದೆ, ಮೇಲೆ ಹೇಳಿರುವ ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡು ಗನ್ನಡ, ಮತ್ತು ಹೊಸಗನ್ನಡ ಎಂಬ ವಿಭಜನೆ ಬರಿಯ ಚಾರಿತ್ರಿಕ ವಿಭಜನೆ ಯಲ್ಲ. ಯಾಕೆಂದರೆ, ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳು ಶಾಸನಗಳಲ್ಲಿ ಮತ್ತು ಕಾವ್ಯಗಳಲ್ಲಿ ಬಳಕೆಯಾಗಲು ಸಾಧ್ಯವಿದ್ದು, ಇವು ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳನ್ನೂ ಪ್ರತಿನಿಧೀಕರಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಹಳೆಗನ್ನಡವೆಂಬುದು ಮುಖ್ಯವಾಗಿ ಜೈನ ಲೇಖಕರಿಂದ ರಚಿತವಾಗಿರುವ ಕಾವ್ಯಗಳಲ್ಲಿ ಕಾಣಿಸುವ ಪ್ರಭೇದವಾದರೆ, ನಡುಗನ್ನಡವೆಂಬುದು ಮುಖ್ಯವಾಗಿ ಲಿಂಗಾಯತರ ಕೃತಿಗಳಲ್ಲಿ ಕಾಣಿಸುವ ಪ್ರಭೇದ. ಹಾಗಾಗಿ, ಇವು ಚಾರಿತ್ರಿಕ ಅಂಶಗಳಲ್ಲಿ ಮಾತ್ರವಲ್ಲದೆ, ಸಾಮಾಜಿಕ ಅಂಶದಲ್ಲೂ ಒಂದಕ್ಕಿಂತ ಒಂದು ಭಿನ್ನವಾಗಿವೆಯೆಂದು ಹೇಳಬೇಕಾಗುತ್ತದೆ. ಇದೇ ರೀತಿಯಲ್ಲಿ, ಹೊಸ ಗನ್ನಡ ಹಲವು ವಿಷಯಗಳಲ್ಲಿ ಮೈಸೂರಿನ ಕನ್ನಡವನ್ನು ಹೋಲುತ್ತದೆ; ಹಾಗಾಗಿ, ಅದನ್ನೂ ಆಧುನಿಕ ಕನ್ನಡವೆಂದು ಪರಿಗಣಿಸುವುದು ಮಾತ್ರವಲ್ಲದೆ, ದಕ್ಷಿಣದ ಒಂದು ಪ್ರಾದೇಶಿಕ ಪ್ರಭೇದವೆಂದೂ ಪರಿಗಣಿಸಬೇಕಾಗುತ್ತದೆ.

ಕನ್ನಡ ಭಾಷೆಗೆ ಎಂತಹ ಉಪಭಾಷೆಗಳೆಲ್ಲ ಇವೆ ಎಂಬ ಪ್ರಶ್ನೆಗೆ ಉತ್ತರ ಹೇಳಲು ಈ ರೀತಿ ಕಾಲ, ಪ್ರದೇಶ, ಮತ್ತು ಸಮಾಜಗಳೆಂಬ ಈ ಮೂರು ಪ್ರಮಾಣಗಳನ್ನೂ ಒಟ್ಟಾಗಿ ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಕಾಲದಿಂದ ಕಾಲಕ್ಕೆ ಕನ್ನಡ ಭಾಷೆ ಯಾವ ರೀತಿಯಲ್ಲೆಲ್ಲ ಬದಲಾಗುತ್ತಾ ಬಂದಿದೆ ಎಂಬು ದನ್ನು ತಿಳಿಯುವುದರ ಮೂಲಕ, ಅದು ಕಳೆದ ಒಂದೂವರೆ ಸಾವಿರ ವರ್ಷಗಳಲ್ಲಿ ಹೇಗೆ ಬೇರೆ ಬೇರೆ ಕವಲುಗಳಾಗಿ ಒಡೆದಿದೆ ಎಂಬುದನ್ನು ನಿರ್ಧರಿಸಬಹುದು. ಇದಕ್ಕಾಗಿ ಈ ಒಂದೂವರೆ ಸಾವಿರ ವರ್ಷಗಳಲ್ಲಿ ರಚಿತವಾಗಿರುವ ಕನ್ನಡದ ಶಾಸನಗಳನ್ನು ಮತ್ತು ಇತರ ಗ್ರಂಥಗಳನ್ನು, ಅವುಗಳನ್ನು ರಚಿಸಿದ ಸಮಯವ ನ್ನಾಧರಿಸಿ, ಪರಿಶೀಲಿಸುವುದು ಅವಶ್ಯ.

ಇದಲ್ಲದೆ, ಕನ್ನಡದ ಆಧುನಿಕ ಪ್ರಭೇದಗಳ ನಡುವೆ ಕಾಣಿಸುವ ವ್ಯತ್ಯಾಸ ಗಳನ್ನು ಸಂಗ್ರಹಿಸಿ, ಅವಕ್ಕೆ ಕಾರಣಗಳಾಗಿರುವ ಬದಲಾವಣೆಗಳು ಎಂತಹವು, ಮತ್ತು ಅವುಗಳಲ್ಲಿ ಯಾವುವು ಮೊದಲು ಮತ್ತು ಯಾವುವು ಅನಂತರ ನಡೆದಿರ ಬಹುದು, ಎಂದರೆ ಅವುಗಳ ಕಾಲವ್ಯವಸ್ಥೆ ಎಂತಹದು ಎಂಬುದನ್ನು ತಿಳಿಯುವು ದರ ಮೂಲಕವೂ ಕನ್ನಡ ಭಾಷೆಯ ಚರಿತ್ರೆಯನ್ನು, ಮತ್ತು ಅದರ ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಭೇದಗಳ ಚರಿತ್ರೆಯನ್ನು ಕಲ್ಪಿಸಿಕೊಳ್ಳಲು ಬರುತ್ತದೆ.

Eke →

ಕರಾವಳಿ ಮತ್ತು ಒಳನಾಡಿನ ಕನ್ನಡ

ಕನ್ನಡದ ಉಪಭಾಷೆಗಳನ್ನು ಮುಖ್ಯವಾಗಿ ಕರಾವಳಿಯ ಕನ್ನಡ ಮತ್ತು ಒಳ ನಾಡಿನ ಕನ್ನಡ ಎಂಬುದಾಗಿ ವಿಂಗಡಿಸುವ ಅವಶ್ಯಕತೆಯಿದೆ. ಸಾಮಾನ್ಯವಾಗಿ, ಕನ್ನಡ ಭಾಷೆಯ ಚರಿತ್ರೆಯನ್ನು ಬರೆಯುವವರು ಅದು ಮೊದಲಿಗೆ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗ ಎಂಬ ಎರಡು ಕವಲುಗಳಾಗಿ ಒಡೆದಿದೆಯೆಂದು ಹೇಳುವುದೇ ರೂಢಿ. ನೃಪತುಂಗನ ಕವಿರಾಜಮಾರ್ಗದಲ್ಲಿ, ಎರಡನೇ ನಾಗ ವರ್ಮನ ಕಾವ್ಯಾವಲೋಕನದಲ್ಲಿ, ಮತ್ತು ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಈ ರೀತಿ ಕನ್ನಡದಲ್ಲಿ ಉತ್ತರ ಮತ್ತು ದಕ್ಷಿಣ ಮಾರ್ಗಗಳಿವೆಯೆಂದು ಹೇಳಿರು ವುದು ಇದಕ್ಕೆ ಮುಖ್ಯ ಆಧಾರವಿರಬೇಕು.

ಆದರೆ, ಕನ್ನಡ ಕವಿಗಳ ಮತ್ತು ವೈಯಾಕರಣಿಗಳ ಈ ಹೇಳಿಕೆ ಕನ್ನಡದ ಪ್ರಭೇದಗಳನ್ನು ಆಳವಾಗಿ ಅಭ್ಯಾಸ ಮಾಡಿ ಸಿದ್ಧಪಡಿಸಿದ ಹೇಳಿಕೆಯ ಹಾಗೆ ಕಾಣಿಸುವುದಿಲ್ಲ. ಸಂಸ್ಕೃತದಲ್ಲಿ ಉತ್ತರಮಾರ್ಗ ಮತ್ತು ದಕ್ಷಿಣಮಾರ್ಗಗಳೆಂಬ ಎರಡು ಪ್ರಭೇದಗಳಿವೆಯೆಂಬುದಾಗಿ ಕಾವ್ಯಾದರ್ಶದಲ್ಲಿ ದಂಡಿ ಹೇಳಿರುವ ಮಾತನ್ನು ಹಾಗೆಯೇ ಕನ್ನಡಕ್ಕೂ ಅಳವಡಿಸುವುದರ ಮೂಲಕ, ಈ ವಿಭಜನೆ ಯನ್ನು ಸಿದ್ದಪಡಿಸಿರುವ ಹಾಗೆ ಕಾಣಿಸುತ್ತದೆ. ದಂಡಿಯ ಈ ಮಾತಿಗೆ ಸಂಸ್ಕೃತ ದಲ್ಲಿ ಗೌಡಿ ಮತ್ತು ವೈದರ್ಭಿಗಳೆಂಬ ಎರಡು ಶೈಲಿಗಳಿದ್ದುದೇ ಕಾರಣ. ಕನ್ನಡದಲ್ಲೂ ಉತ್ತರ-ದಕ್ಷಿಣ ಭೇದವಿರುವುದು ನಿಜವಾದರೂ, ಅದು ಕರಾವಳಿ-ಒಳನಾಡು (ಇಲ್ಲವೇ ಪಶ್ಚಿಮ-ಪೂರ್ವ) ಎಂಬ ಭೇದದಷ್ಟು ಮುಖ್ಯ ವಾದುದಲ್ಲ.

ಆಧುನಿಕ ವಿದ್ವಾಂಸರೂ ಈ ಮೇಲಿನ ಹೇಳಿಕೆಯನ್ನು ಹೆಚ್ಚಿನ ಪರಾಮರ್ಶೆಗೆ ಗುರಿಪಡಿಸಿದ ಹಾಗೆ ಕಾಣುವುದಿಲ್ಲ. ಉದಾಹರಣೆಗಾಗಿ, ಶ್ರೀಕಂಠಯ್ಯ ಮತ್ತು ವೆಂಕಣ್ಣಯ್ಯ ಅವರ ಪ್ರಕಾರ “ಧಾರ್ವಾಡ(ಉತ್ತರ ಕರ್ಣಾಟಕ)ದ ಕನ್ನಡಕ್ಕೂ ಮೈಸೂರು ಕನ್ನಡಕ್ಕೂ ಇರುವಷ್ಟು ಭೇದವು ಮಂಗಳೂರು ಕನ್ನಡಕ್ಕೂ ಮೈಸೂರು ಕನ್ನಡಕ್ಕೂ ಇರುವುದಿಲ್ಲ”. ಮೇಲಿನಿಂದ ಮೇಲೆ ನೋಡಿದಾಗ ಈ ಮಾತು ಸರಿಯೆಂದು ತೋರುತ್ತದೆ; ಆದರೆ, ಇಲ್ಲಿ ಮೈಸೂರು ಮತ್ತು ಧಾರವಾಡ ಕನ್ನಡಗಳೊಂದಿಗೆ ಹೋಲಿಸಿರುವುದು ಮಂಗಳೂರಿನ ಬರಹದ ಕನ್ನಡವನ್ನಲ್ಲದೆ, ಅಲ್ಲಿನ ಕನ್ನಡಿಗರ ಮಾತಿನಲ್ಲಿ ಬಳಕೆಯಲ್ಲಿರುವ ಹವ್ಯಕ, ಕೋಟ, ಗೌಡ, ಹಾಲಕ್ಕಿ ಮೊದಲಾದ ಪ್ರಭೇದಗಳನ್ನಲ್ಲ.

ಬರಹದ ಕನ್ನಡ ಕರ್ನಾಟಕದಲ್ಲಿ ಎಲ್ಲೆಡೆಯಲ್ಲೂ ಹೆಚ್ಚು ಕಡಿಮೆ ಒಂದೇ ತರವಾಗಿದೆ. ಕೆಲವು ವಿಶಿಷ್ಟವಾದ ಬರಹಗಳಲ್ಲಿ ಮಾತ್ರ ಮಾತಿನ ಕನ್ನಡ ಬಳಕೆ ಯಾಗುತ್ತಿದ್ದು, ಸಾಹಿತಿಗಳು ಅದನ್ನು ಬಳಸಿ ಪ್ರಾದೇಶಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ತೋರಿಸಿಕೊಡಲು ಪ್ರಯತ್ನಿಸುತ್ತಾರೆ. ಮಂಗಳೂರಿನ (ಸಾಹಿತಿ ಗಳ) ಬರಹಗಳಲ್ಲೂ ಈ ರೀತಿ ಕೆಲವು ಪ್ರಾದೇಶಿಕ ಅಂಶಗಳನ್ನು ಕಾಣಲು ಸಾಧ್ಯ. ಆದರೆ, ಇವು ಧಾರವಾಡ ಇಲ್ಲವೇ ಮೈಸೂರಿನ ಬರಹಗಳಲ್ಲಿ ಕಾಣಿಸುವ ಹಾಗೆ, ಅಲ್ಲಿನವರ ಮಾತನ್ನು ಪೂರ್ತಿಯಾಗಿ ತೋರಿಸಿಕೊಡಲು ಯತ್ನಿ

ಸುವುದಿಲ್ಲ. ಹಾಗೆ ಮಾಡಿದಲ್ಲಿ ಆ ಬರಹಗಳು ಇತರ ಕನ್ನಡಿಗರಿಗೆ ಸ್ವಲ್ಪವೂ ಅರ್ಥವಾಗದೆಂಬುದೇ ಇದಕ್ಕೆ ಕಾರಣವಿರಬಹುದು.

Eke →

ಕೆಲವು ಮುಖ್ಯವಾದ ವ್ಯತ್ಯಾಸಗಳು

ಕರಾವಳಿಯ ಕನ್ನಡಿಗರ ಆಡುಮಾತನ್ನು ಒಳನಾಡಿನ ಕನ್ನಡಿಗರ ಆಡುಮಾತಿ ನೊಂದಿಗೆ ಹೋಲಿಸಿ ನೋಡಿದೆವಾದರೆ, ಅವುಗಳ ನಡುವೆ ಹಲವಾರು ಮುಖ್ಯ ವಾದ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಮೈಸೂರು ಕನ್ನಡ ಮತ್ತು ಧಾರವಾಡ ಕನ್ನಡಗಳ ನಡುವಿರುವ ವ್ಯತ್ಯಾಸಗಳಿಗಿಂತ ಇವು ಒಟ್ಟು ಸಂಖ್ಯೆಯಲ್ಲಿ ಮಾತ್ರವಲ್ಲದೆ, ಕಾಲದ ಮಟ್ಟಿಗೂ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇವು ಗಳಲ್ಲಿ ಕೆಲವು ಪೂರ್ವದ ಹಳೆಗನ್ನಡಕ್ಕಿಂತಲೂ ಹಿಂದಿನ ಕಾಲದಲ್ಲಿ, ಎಂದರೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆ ನಡೆದ ಬದಲಾವಣೆಗಳಿಂದ ಸಿದ್ದವಾದವುಗಳಿರಬೇಕು.

ಉದಾಹರಣೆಗಾಗಿ, ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಮಧ್ಯಮಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ ಎಂಬುದಾಗಿ ಉತ್ತಮಪುರುಷದಲ್ಲಿ ಎರಡು ರೂಪಗಳಿವೆ: ಹವ್ಯಕದಲ್ಲಿ ನಾವು ಎಂಬುದಕ್ಕೆ ‘ನೀವೂ ಕೂಡ’ ಎಂಬ ಸಮಾವಿಷ್ಟ ಅರ್ಥವಿದೆಯಾದರೆ, ಎಂಗೊ ಎಂಬುದಕ್ಕೆ ‘ನಿಮ್ಮನ್ನು ಬಿಟ್ಟು ನಾವು ಮಾತ್ರ’ ಎಂಬ ಅಸಮಾವಿಷ್ಟ ಅರ್ಥವಿದೆ. ಕ್ರಿಯಾಪದಗಳ ಪದರೂಪ ಗಳಲ್ಲೂ ಹವ್ಯಕದಲ್ಲಿ ಈ ವ್ಯತ್ಯಾಸ ಕಾಣಿಸುತ್ತದೆ.

ಮಧ್ಯಮಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ ಎಂಬ ಈ ವ್ಯತ್ಯಾಸ ಹಳೆಗನ್ನಡದಲ್ಲಿ (ಉದಾ: ಪಂಪನ ಕಾವ್ಯಗಳಲ್ಲಿ) ನಾಮ್ ಮತ್ತು ಆಮ್ ಎಂಬ ಸರ್ವನಾಮಗಳಲ್ಲಿ ಕಾಣಿಸುತ್ತದೆ; ಆದರೆ, ನಡುಗನ್ನಡ ಮತ್ತು ಹೊಸಗನ್ನಡ ಗಳಲ್ಲಿ ಕಾಣಿಸುವುದಿಲ್ಲ. ಹಳೆಗನ್ನಡದಲ್ಲೂ ಈ ವ್ಯತ್ಯಾಸ ಕ್ರಿಯಾಪದಗಳ ಪದರೂಪಗಳಲ್ಲಿ ಕಾಣಿಸುವುದಿಲ್ಲ.

ವ್ಯಾಕರಣದ ಮಟ್ಟಿಗೆ ಕರಾವಳಿಯ ಕನ್ನಡ ಪ್ರಭೇದಗಳಿಗೂ ಒಳನಾಡಿನ ಪ್ರಭೇದಗಳಿಗೂ ನಡುವೆ ಇನ್ನೂ ಹಲವಾರು ವ್ಯತ್ಯಾಸಗಳಿದ್ದು, ಅವುಗಳಲ್ಲಿ ಕೆಲವನ್ನು ಪರಿಶೀಲಿಸಿದಾಗ, ಕರಾವಳಿಯ ಕನ್ನಡ ಪ್ರಭೇದಗಳು ಹಳೆಗನ್ನಡ ಕ್ಕಿಂತಲೂ ಹಿಂದಿನ ಕಾಲದಲ್ಲೇನೇ ಒಳನಾಡಿನ ಪ್ರಭೇದಗಳಿಂದ ಭಿನ್ನವಾಗಿದ್ದಿರ ಬೇಕೆಂಬುದನ್ನು ಸೂಚಿಸುತ್ತವೆ.

ಉದಾಹರಣೆಗಾಗಿ, ಮೂಲದ್ರಾವಿಡದಲ್ಲಿ ಕ್ರಿಯಾಪದಗಳಿಗೆ ತ್ ಪ್ರತ್ಯಯ ವನ್ನು ಸೇರಿಸಿ ಆಗುವಿಕೆಯನ್ನು ಮಾಡುವಿಕೆಯನ್ನಾಗಿ ಮಾರ್ಪಡಿಸಲಾಗುತ್ತಿತ್ತು; ಈ ಪ್ರತ್ಯಯ ಕನ್ನಡ ಮತ್ತು ತುಳು ಭಾಷೆಗಳನ್ನು ಹೊರತುಪಡಿಸಿ, ಎಲ್ಲಾ ದ್ರಾವಿಡ ಭಾಷೆಗಳಲ್ಲೂ ಉಳಿದುಕೊಂಡಿದೆ. ಕನ್ನಡದಲ್ಲಿ ಇದು ಬರೇ ಪಳೆಯುಳಿಕೆಯಾಗಿ ಅಡಗು ‘ಮರೆಯಾಗು’: ಅಡಕು ‘ಮರೆಮಾಡು’, ಅಮುಗು ‘ಒತ್ತಿಹೋಗು’:

ಅಮುಕು ‘ಒತ್ತು’, ತುರುಗು ‘ಒತ್ತಿ ತುಂಬಿರು’ : ತುರುಕು ‘ಒತ್ತಿ ತುಂಬಿಸು’ ಎಂಬಂತಹ ಕೆಲವೇ ಕೆಲವು ಕ್ರಿಯಾಪದಜೋಡಿಗಳಲ್ಲಿ ಮಾತ್ರ ಕಾಣಿಸುತ್ತದೆ.

ಆದರೆ ಬಡಗ ಕನ್ನಡದಲ್ಲಿ ಮತ್ತು ಹವ್ಯಕ ಕನ್ನಡದಲ್ಲಿ ಇವತ್ತಿಗೂ ಈ ಪ್ರತ್ಯಯದ ಬಳಕೆ ಉಳಿದುಕೊಂಡಿದೆ. ಹವ್ಯಕದ ಮುರುತ್ತು ‘ಮುರಿಯಿತು’ : ಮುರುದತ್ತು ‘ಮುರಿದ’, ಒಡತ್ತು ‘ಒಡೆಯಿತು’ : ಒಡದತ್ತು ‘ಒಡೆದ’, ಮರತ್ತು ‘ಮರೆತುಹೋಯಿತು’: ಮರೆದತ್ತು ‘ಮರೆತ’ ಎಂಬಂತಹ ರೂಪ ಜೋಡಿಗಳಲ್ಲಿ ಈ ಪ್ರತ್ಯಯದ ಬಳಕೆಯನ್ನು ಕಾಣಬಹುದು.

Eke →

ಧ್ವನಿ ಪರಿವರ್ತನೆಗಳು

ಕರಾವಳಿಯ ಈ ಕನ್ನಡ ಪ್ರಭೇದಗಳು ಹಳೆಗನ್ನಡಕ್ಕಿಂತ ಹಿಂದಿನವೆಂಬುದನ್ನು ಅವುಗಳಲ್ಲಿ ಕಾಣಿಸುವ ಬೇರೆ ಕೆಲವು ಧ್ವನಿ ಪರಿವರ್ತನೆಗಳ ಆಧಾರದ ಮೇಲೂ ಸಾಧಿಸಬಲ್ಲೆವು. ಉದಾಹರಣೆಗಾಗಿ, ಎಂಟು-ಒಂಬತ್ತನೇ ಶತಮಾನದಲ್ಲಿ ನಡೆದ (೧) ಎಕಾರ ಇಕಾರವಾಗುವ, ಮತ್ತು (೨) ಒಕಾರ ಉಕಾರವಾಗುವ ಬದಲಾ ವಣೆ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ನಡೆದಿಲ್ಲ, ಆದರೆ ಹಳೆಗನ್ನಡ-ನಡು ಗನ್ನಡಗಳಲ್ಲಿ ಮತ್ತು ಒಳನಾಡಿನ ಇವತ್ತಿನ ಪ್ರಭೇದಗಳಲ್ಲಿ ನಡೆದಿವೆ.

ಪದಗಳ ಮೊದಲನೇ ಅಕ್ಷರದಲ್ಲಿ ಎಕಾರ ಇಲ್ಲವೇ ಒಕಾರ ಬಂದಿದ್ದು, ಅದರ ಅನಂತರ ಯಾವುದಾದರೊಂದು ಒತ್ತೆ ವ್ಯಂಜನ, ಮತ್ತು ಆ ವ್ಯಂಜನದ ಬಳಿಕ ಉಕಾರ ಇಲ್ಲವೇ ಇಕಾರ ಬಂದಿದೆಯಾದರೆ, ಮೊದಲನೇ ಅಕ್ಷರದ ಎಕಾರ ಇಕಾರವಾಗುತ್ತದೆ, ಮತ್ತು ಒಕಾರ ಉಕಾರವಾಗುತ್ತದೆ ಎಂಬುದೇ ಈ ಮಾರ್ಪಾಡಿನ ಸ್ವರೂಪ.

ಎಂಟು-ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕಾಣಿಸುವ ಎದಿರ್, ಕೆಡಿಸು, ಕೆಸು ‘ಕೆಂಪು’, ಪೆರಿಯ ‘ದೊಡ್ಡ’ ಮೊದಲಾದ ಪದಗಳು ಆಮೇಲಿನ ಶಾಸನಗಳಲ್ಲಿ ಅನುಕ್ರಮವಾಗಿ ಇದಿರು, ಕಿಡಿಸು, ಕಿಸು, ಪಿರಿಯ ಎಂಬು ದಾಗಿಯೂ, ತೊಲು ‘ದನ’, ಪೊಗು ‘ಪ್ರವೇಶಿಸು’ ಮೊದಲಾದ ಪದಗಳು ತುಲು, ಪುಗು ಎಂಬುದಾಗಿಯೂ ಬದಲಾಗಿರುವುದು ಇದಕ್ಕೆ ಉದಾಹರಣೆ.

ಮೇಲೆ ಸೂಚಿಸಿದ ಹಾಗೆ, ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಬದಲಾ ವಣೆ ನಡೆದಿಲ್ಲ. ಉದಾಹರಣೆಗಾಗಿ, ಹವ್ಯಕದ ಎದುರು, ಕೆಡು, ಹೆರಿಯೋರು ‘ದೊಡ್ಡವರು’, ಹೊಗು ಮೊದಲಾದ ಪದಗಳಲ್ಲಿ ಎಕಾರ, ಮತ್ತು ಕೆಮಿ ‘ಕಿವಿ’, ಬೆಳಿ ‘ಬಿಳಿ’, ಎರಗು ‘ಇರುವೆ’, ಸೊಲಿ ‘ಸುಲಿ’, ತೊರುಸು ‘ತುರಿಸು’, ತೊಳಿ ‘ತುಳಿ’ ಮೊದಲಾದ ಪದಗಳಲ್ಲಿ ಇಕಾರ ಬದಲಾಗದೆ ಉಳಿದಿರುವುದನ್ನು ಕಾಣ ಬಹುದು.

ಇದಲ್ಲದೆ, ಕರಾವಳಿಯ ಇತರ ಕನ್ನಡ ಪ್ರಭೇದಗಳಲ್ಲೂ ಈ ಬದಲಾವಣೆ ನಡೆದಿಲ್ಲವೆಂಬುದಕ್ಕೆ ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ಕಾಣಿಸುವ ಎದುರು, ಕೆವಿ ‘ಕಿವಿ’, ಬೆಳಿ ‘ಬಿಳಿ’, ಹೆರಿ, ತೊರಿ ‘ತುರಿಸು’ ಮೊದಲಾದ ಪದಗಳನ್ನು, ಮತ್ತು

ಸುಳ್ಯದ ಗೌಡರ ಕನ್ನಡದಲ್ಲಿ ಕಾಣಿಸುವ ಕೆಬಿ ‘ಕಿವಿ’, ಬೆದರ್ ‘ಬಿದಿರು’, ಕೊದಿ ‘ಕುದಿ’ ತೊಳಿ ‘ತುಳಿ’ ಮೊದಲಾದ ಪದಗಳನ್ನು ಉದಾಹರಿಸಬಹುದು.

ಎಂಟು-ಒಂಬತ್ತನೇ ಶತಮಾನದಲ್ಲಿ ನಡೆದಿದ್ದ ಈ ಬದಲಾವಣೆ ಈ ರೀತಿ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ನಡೆದಿರಲಿಲ್ಲವಾದ ಕಾರಣ, ಕನ್ನಡದಲ್ಲಿ ಕರಾವಳಿ-ಒಳನಾಡು (ಇಲ್ಲವೇ ಪಶ್ಚಿಮ-ಪೂರ್ವ) ಎಂಬ ಪ್ರಾದೇಶಿಕ ಪ್ರಭೇದ ಹಳೆಗನ್ನಡದ ಕಾಲಕ್ಕಿಂತಲೂ ಹಿಂದೆಯೇ ಸಿದ್ಧವಾಗಿತ್ತು ಎಂದು ಹೇಳಲು ಬರು ತ್ತದೆ.

ಆದರೆ, ಕನ್ನಡದಲ್ಲಿ ಈ ಬದಲಾವಣೆಯ ಅನಂತರ ಬೇರೆಯೂ ಹಲವು ಬದಲಾವಣೆಗಳು ನಡೆದಿದ್ದು, ಅವುಗಳಲ್ಲಿ ಕೆಲವು ಕರಾವಳಿ ಮತ್ತು ಒಳನಾಡಿನ ಪ್ರಭೇದಗಳೆರಡರಲ್ಲೂ ಕಾಣಿಸುತ್ತವೆ; ಆದರೆ, ಇನ್ನು ಕೆಲವು ಬದಲಾವಣೆಗಳು ಒಳನಾಡಿನ ಪ್ರಭೇದಗಳಲ್ಲಿ ಮಾತ್ರ ಕಾಣಿಸುತ್ತವೆ, ಮತ್ತು ಬೇರೆ ಕೆಲವು ಕರಾವಳಿಯ ಪ್ರಭೇದಗಳಲ್ಲಿ ಮಾತ್ರ ಕಾಣಿಸುತ್ತವೆ.

ಉದಾಹರಣೆಗಾಗಿ, ಸುಮಾರು ಒಂಬತ್ತನೇ ಶತಮಾನದಲ್ಲಿ ನಡೆಯಲು ಸುರುವಾಗಿದ್ದ ಪಕಾರ ಹಕಾರವಾಗುವ ಬದಲಾವಣೆ ಕನ್ನಡದ ಎಲ್ಲಾ ಪ್ರಭೇದ ಗಳಲ್ಲೂ ಕಾಣಿಸುತ್ತದೆ. ಈ ಬದಲಾವಣೆಗೆ ಕರಾವಳಿಯ ಪ್ರಭೇದಗಳು ಅಪವಾದಗಳಲ್ಲ. ಪಾಲ್>ಹಾಲು, ಪುಲಿ>ಹುಲಿ, ಪೋ>ಹೋಗು, ಪೊಗಲ್>ಹೊಗಳು ಮೊದಲಾದ ಪದಗಳಲ್ಲಿ ಈ ಬದಲಾವಣೆ ನಡೆದಿರುವು ದನ್ನು ಕಾಣಬಹುದು. ಇದೇ ರೀತಿಯಲ್ಲಿ, ಹತ್ತು-ಹನ್ನೊಂದನೇ ಶತಮಾನದಲ್ಲಿ ನಡೆದ ಳಿಕಾರ ಳಕಾರವಾಗುವ ಬದಲಾವಣೆಯೂ ಕನ್ನಡದ ಎಲ್ಲಾ ಪ್ರಭೇದ ಗಳಲ್ಲೂ ಕಾಣಿಸುತ್ತದೆ. ಅಲಿ ‘ನಾಶವಾಗು’>ಅಳಿ, ಪುಲು>ಹುಳ, ಪೊಗಲ್> ಹೊಗಳು, ಎಲೆ ‘ಎಳೆದಾಡು’ > ಎಳೆ, ಬಲಿಸು ‘ಉಪಯೋಗಿಸು’ > ಬಳಸು ಮೊದಲಾದ ಪದಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು.

ಆದರೆ, ದೀರ್ಘ ಸ್ವರದ ಅನಂತರ, ಇಲ್ಲವೇ ಮೂರಕ್ಷರದ ಪದಗಳಲ್ಲಿ ಎರಡನೇ ಸ್ವರದ ಅನಂತರ ಬರುವ ಅನುನಾಸಿಕವು ಅದರ ಅನಂತರ ಒಂದು ಸ್ಪರ್ಶವ್ಯಂಜನ ಬಂದಾಗ ಲೋಪಗೊಳ್ಳುವ ಬದಲಾವಣೆ ಹಳೆಗನ್ನಡದ ಕಾಲ ಕ್ಕಿಂತ ಅನಂತರ ನಡೆದ ಬದಲಾವಣೆ. ಇದು ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ನಡೆದಿದೆಯಾದರೂ, ಕರಾವಳಿಯ ಪ್ರಭೇದಗಳಲ್ಲಿ ನಡೆದಿಲ್ಲ. ಹವ್ಯಕದ ದಾಂಟು ‘ದಾಟು’, ನೂಂಕು ‘ನೂಕು’, ಸಾಂಕು ‘ಸಾಕು’, ಕಲಿಂಕು ‘ಕಲಕು’, ಕಾಡಿಂಗೆ ‘ಕಾಡಿಗೆ’, ಮರಂಗೊ ‘ಮರಗಳು’ ಮೊದಲಾದ ಪದಗಳನ್ನು ಮತ್ತು ಪದರೂಪ ಗಳನ್ನು ಇದಕ್ಕೆ ಉದಾಹರಣೆಗಳಾಗಿ ಕೊಡಬಹುದು.

ಆದಿಚಕಾರ, ಜಕಾರ ಮತ್ತು ಗಕಾರಗಳ ಅನಂತರ ಬರುವ ಅಕಾರ ಎಕಾರ ವಾಗುವ ಬದಲಾವಣೆ ಕರಾವಳಿಯಲ್ಲಿ ಮಾತ್ರ ನಡೆದಿದೆ; ಆದರೆ, ಒಳನಾಡಿನಲ್ಲಿ ನಡೆದಿಲ್ಲ. ಹವ್ಯಕದ ಜೆಗಿಲಿ ‘ಜಗಲಿ’, ಚೆಪ್ಪರ ‘ಚಪ್ಪರ’, ಗಂಡು ‘ಗಂಡು’,

ಗೆಡ್ಡೆ ‘ಗಡ್ಡೆ’, ಗೆಡ್ಡೆ ‘ಗಡ್ಡ’ ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆ ಗಳಾಗಿ ಕೊಡಬಹುದು.

ಒಂದು ಭಾಷೆ ಹಲಕೆಲವು ಉಪಭಾಷೆಗಳಾಗಿ ಒಡೆದ ಮೇಲೂ ಅದರಲ್ಲಿ ನಡೆಯುವ ಬದಲಾವಣೆಗಳು ಅದರ ಎಲ್ಲಾ ಉಪಭಾಷೆಗಳನ್ನೂ ಬಾಧಿಸಲು ಸಾಧ್ಯವಿದೆ. ಪಕಾರ ಹಕಾರವಾಗಿರುವ, ಮತ್ತು ವಕಾರ ಬಕಾರವಾಗಿರುವ ಬದಲಾವಣೆಗಳು ಕನ್ನಡದಲ್ಲಿ ಇಂತಹವೆಂದು ಹೇಳಬಹುದು.

ಕೆಲವು ಬದಲಾವಣೆಗಳು ಒಂದು ಪ್ರದೇಶದಲ್ಲಿ ಬಳಕೆಯಲ್ಲಿರುವ ಎಲ್ಲಾ ಭಾಷೆಗಳನ್ನೂ ಒಟ್ಟಾಗಿ ಬಾಧಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಉತ್ತರದ ಕನ್ನಡ ಪ್ರಭೇದವನ್ನು ಬಾಧಿಸಿದ ಚಕಾರ ತ್ಸ್ ಮತ್ತು ಚ್ ಎಂಬುದಾಗಿ ಒಡೆದು ಕೊಳ್ಳುವ ಬದಲಾವಣೆ ಕನ್ನಡವನ್ನು ಮಾತ್ರವಲ್ಲದೆ ತೆಲುಗು ಮತ್ತು ಮರಾಠಿ ಭಾಷೆಗಳನ್ನು ಬಾಧಿಸಿದೆ; ಆದರೆ, ಕನ್ನಡದಲ್ಲಿ ಇದು ಉತ್ತರದ ಉಪಭಾಷೆ ಗಳನ್ನು ಮಾತ್ರ ಬಾಧಿಸಿದೆ, ದಕ್ಷಿಣದವನ್ನು ಬಾಧಿಸಿಲ್ಲ.

ಇದಕ್ಕೆ ಬದಲಾಗಿ, ಕೆಲವು ಬದಲಾವಣೆಗಳು ಒಂದು ಭಾಷೆಯ ಕೆಲವು ಉಪಭಾಷೆಗಳನ್ನು ಮಾತ್ರ ಬಾಧಿಸಿ, ಉಳಿದುವನ್ನು ಸ್ಪರ್ಶಿಸದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಮೂರಕ್ಷರದ ಪದಗಳಲ್ಲಿ ಬರುವ ಎರಡನೇ ಸ್ವರ ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಲೋಪಗೊಂಡಿರುವುದನ್ನು ನಾವು ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ಮಾತ್ರ ಕಾಣುತ್ತೇವೆ: ಕುದುರೆ>ಶುದ್ರೆ, ಸಾಸಿವೆ> ಸಾಸ್ವೆ, ಬಾಗಿಲು>ಬಾಗ್ಲು, ಅಂಗಡಿ>ಅಂಗ್ಲಿ ಮೊದಲಾದ ಮೈಸೂರು ಕನ್ನಡದಲ್ಲಿ ನಡೆದಿರುವ ಈ ಬದಲಾವಣೆ ಕರಾವಳಿಯ ಕನ್ನಡದಲ್ಲಿ ನಡೆದಿಲ್ಲ.

Eke →

ಕರಾವಳಿಯ ಕನ್ನಡ ಹಳೆಗನ್ನಡವೇ?

ಕರಾವಳಿಯ ಕನ್ನಡ ಪ್ರಭೇದಗಳಾಗಿರುವ ಹವ್ಯಕ, ಹಾಲಕ್ಕಿ, ಗೌಡ ಮೊದಲಾದವು ಗಳನ್ನು ಕೇಳಿದಾಗ ಕೆಲವರಿಗೆ ಹಳೆಗನ್ನಡವನ್ನು ಕೇಳಿದ ಹಾಗೆ ಅನಿಸುತ್ತದೆ. ಇತರ ಕನ್ನಡ ಪ್ರಭೇದಗಳಲ್ಲಿ ನಡೆದಿರುವ ಕೆಲವು ಬದಲಾವಣೆಗಳು ಈ ಪ್ರಭೇದದಲ್ಲಿ ನಡೆಯದಿದ್ದುದೇ ಅವರಿಗೆ ಹೀಗೆ ಅನಿಸಲು ಮುಖ್ಯ ಕಾರಣ.

ಉದಾಹರಣೆಗಾಗಿ ಮೇಲೆಯೆ ಸೂಚಿಸಿದಂತೆ, ಇತರ ಪ್ರಭೇದಗಳಲ್ಲಿ ನಡೆದಿದ್ದ ಅನುನಾಸಿಕ ಲೋಪ ಹವ್ಯಕದಲ್ಲಿ ನಡೆದಿಲ್ಲ. ಈ ಕಾರಣಕ್ಕಾಗಿ, ಹವ್ಯಕದ ಬಹುವಚನ ರೂಪಗಳನ್ನು (ಮರಂಗೊ, ಮಂಗಂಗೊ ಇತ್ಯಾದಿ) ಕೇಳಿದಾಗ, ಮತ್ತು ಅನುನಾಸಿಕವಾಗಿರುವ ಬೇರೆ ಕೆಲವು ಪದಗಳನ್ನು (ದಾಂಟು, ನೂಂಕು, ಅವುಂಕು ಮೊದಲಾದವುಗಳನ್ನು) ಕೇಳಿದಾಗ ಹಳೆಗನ್ನಡ ವನ್ನು ಕೇಳಿದಂತೆ ಅನಿಸುತ್ತದೆ.

ಇದೇ ರೀತಿಯಲ್ಲಿ, ಹಳೆಗನ್ನಡದ ಕ್ರಿಯಾಪದಗಳಿಗಿದ್ದ ಭವಿಷ್ಯದ್ರೂಪಗಳು ಮತ್ತು ನಿಷೇಧರೂಪಗಳು ಹವ್ಯಕದಲ್ಲಿ ಮತ್ತು ಇತರ ಕರಾವಳಿಯ ಪ್ರಭೇದ ಗಳಲ್ಲಿ ನಷ್ಟವಾಗದೆ ಉಳಿದಿವೆ: ಬಪ್ಪೆ ‘ಬಂದೇನು’, ಹೋಪ್ ‘ಹೋದೇನು’,

ತಿಂಬೆ ‘ತಿಂದೇನು’, ಹೋಗ ‘ಹೋಗಲಿಕ್ಕಿಲ್ಲ’, ಹಾಡ ‘ಹಾಡಲಿಕ್ಕಿಲ್ಲ’ ಮೊದಲಾದ ಹವ್ಯಕದ ಪದರೂಪಗಳನ್ನು ಕೇಳಿದಾಗಲೂ ಅವಕ್ಕೆ ಸಮನಾಗಿರುವ ಹಳೆಗನ್ನಡ ಪದರೂಪಗಳನ್ನು ಕೇಳಿದ ಹಾಗೆ ಅನಿಸುತ್ತದೆ.

ಆದರೆ ಈ ಕಾರಣಕ್ಕಾಗಿ ಕರಾವಳಿಯ ಪ್ರಭೇದಗಳನ್ನು ‘ಹಳೆಗನ್ನಡ’ವೆಂದು ಹೇಳುವುದು ಸರಿಯಲ್ಲ. ಇತರ ಕನ್ನಡ ಪ್ರಭೇದಗಳ ಹಾಗೆ ಅವು ಹೊಸಗನ್ನಡದ ಪ್ರಭೇದಗಳೇ. ಒಳನಾಡಿನ ಪ್ರಭೇದಗಳಲ್ಲಿ ನಡೆದ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ಹೇಗೆ ನಡೆದಿಲ್ಲವೋ, ಹಾಗೆಯೇ ಕರಾವಳಿಯ ಪ್ರಭೇದಗಳಲ್ಲಿ ನಡೆದ ಕೆಲವು ಬದಲಾವಣೆಗಳು ಒಳನಾಡಿನ ಪ್ರಭೇದಗಳಲ್ಲಿ ನಡೆದಿಲ್ಲ. ಇದರಿಂದಾಗಿ, ಇವು ಒಂದರಿಂದೊಂದು ಭಿನ್ನವಾಗಿವೆಯೆಂದು ಹೇಳಲು ಸಾಧ್ಯವಿದೆಯಲ್ಲದೆ, ಇವುಗಳಲ್ಲಿ ಕೆಲವನ್ನು ಹೊಸಗನ್ನಡವೆಂದೂ ಇನ್ನು ಕೆಲವನ್ನು ಹಳೆಗನ್ನಡವೆಂದೂ ಹೇಳಲು ಬರುವುದಿಲ್ಲ.

ಆದರೆ, ಕನ್ನಡದಲ್ಲಿ ಹಲವು ಮಂದಿ ಬರಹಗಾರರು ಈ ತಪ್ಪನ್ನು ಮಾಡು ವುದು ಕಾಣಿಸುತ್ತದೆ. ಹಳತು-ಹೊಸತು ಎಂಬುದು ಒಂದು ಪ್ರಭೇದ ಯಾವ ಕಾಲದಲ್ಲಿ ಬಳಕೆಯಲ್ಲಿದೆ ಎಂಬುದನ್ನು ಅವಲಂಬಿಸಿದೆಯಲ್ಲದೆ ಅದರ ವ್ಯಾಕರಣ ಎಂತಹದು ಎಂಬುದರ ಮೇಲೆ, ಇಲ್ಲವೇ ಅದರ ಪದಗಳ ರಚನೆಯಲ್ಲಿ ಎಂತಹ ಧ್ವನಿಗಳೆಲ್ಲ ಬಳಕೆಯಾಗುತ್ತಿವೆ ಎಂಬುದರ ಮೇಲೆ ಅವಲಂಬಿಸಿಲ್ಲ.

Eke →

ಬಡಗ ಮತ್ತು ಸೊಲಿಗ

ಹಳೆಗನ್ನಡ ಕಾಲದ ಅನಂತರ, ಆದರೆ ಹದಿನೈದನೇ ಶತಮಾನಕ್ಕಿಂತ ಮೊದಲು, ಬಡಗ ಮತ್ತು ಸೊಲಿಗ ಎಂಬ ಈ ಎರಡು ಕನ್ನಡ ಪ್ರಭೇದಗಳು ಕನ್ನಡದ ಇತರ ಒಳನಾಡಿನ ಪ್ರಭೇದಗಳಿಂದ ಬೇರ್ಪಟ್ಟಿರುವ ಹಾಗೆ ಕಾಣಿಸುತ್ತದೆ. ಹಳೆಗನ್ನಡ ಕಾಲದ ಅನಂತರ, ಎಂದರೆ ಹದಿನಾಲ್ಕು-ಹದಿನೈದನೇ ಶತಮಾನದಲ್ಲಿ ನಡೆದ ಅಕಾರ ರಕಾರವಾಗುವ ಬದಲಾವಣೆ ಈ ಎರಡು ಕನ್ನಡ ಪ್ರಭೇದಗಳಲ್ಲೂ ನಡೆ ದಿಲ್ಲ. ಆದರೆ, ಅದಕ್ಕಿಂತ ಮೊದಲು ನಡೆದಿದ್ದ ಬದಲಾವಣೆಗಳೆಲ್ಲ ಇವುಗಳಲ್ಲೂ ನಡೆದಿರುವ ಹಾಗೆ ಕಾಣಿಸುವುದೇ ಹೀಗೆ ಹೇಳಲು ಆಧಾರ.

ಉದಾಹರಣೆಗಾಗಿ, ಸೊಲಿಗರ ಕನ್ನಡದಲ್ಲಿ ಅಟ್ ‘ಬಂಡೆ’ : ಅರೆ ‘ಅರ್ಧ’, ಇಟು ‘ಇರುವೆ’ : ಇರು ‘ಇರು’, ಕಟ್ ‘ಬರಹೇಳು’ : ಕರೆ ‘ಬಟ್ಟೆಯ ಕಲೆ’, ಊಟು ‘ಕಾಲೂರು’ : ಊರು ‘ಹಳ್ಳಿ’ ಮೊದಲಾದ ಪದಜೋಡಿಗಳಲ್ಲಿ ಅಕಾರ ಮತ್ತು ರಕಾರಗಳು ಭಿನ್ನವಾಗಿ ಉಳಿದಿರುವುದನ್ನು ಕಾಣಬಹುದು.

ಇದೇ ರೀತಿಯಲ್ಲಿ, ಬಡಗ ಕನ್ನಡದ ಮಟು ‘ಕರು’ : ನರಿ ‘ನರಿ’, ಮೂರು ‘ಮೂರು’ : ಮಾರು ‘ಎದೆ’, ಬೇಟು ‘ಕೆಸರು’ : ಬೇರು ‘ಬೇರು’, ಮೂರು ‘ಮುರಿ’ : ಪುರಿ ‘ಹುರಿಯಕ್ಕಿ’ ಮೊದಲಾದ ಪದಜೋಡಿಗಳಲ್ಲಿ ಈ ವ್ಯತ್ಯಾಸ ಅಳಿಯದೆ ಉಳಿದಿರುವುದನ್ನು ಕಾಣಬಹುದು.

ಈ ಬದಲಾವಣೆಗಿಂತ ಮೊದಲೇ ನಡೆದಿದ್ದ ಳಕಾರ ಳಕಾರವಾಗುವ ಬದಲಾವಣೆ, ಪಕಾರ ಹಕಾರವಾಗುವ ಬದಲಾವಣೆ ಮೊದಲಾದವುಗಳೆಲ್ಲ ಈ ಎರಡು ಪ್ರಭೇದಗಳಲ್ಲೂ ನಡೆದಿರುವ ಹಾಗೆ ಕಾಣಿಸುವುದಾದ ಕಾರಣ, ಇವು ಹಳೆಗನ್ನಡ ಕಾಲದ ಬಳಿಕ ಕವಲೊಡೆದು ಬೇರಾಗಿರಬೇಕೆಂದು ಸದ್ಯಕ್ಕೆ ಊಹಿಸಿ ಕೊಳ್ಳಬಹುದು.

Eke →

ಒಳನಾಡಿನ ಪ್ರಭೇದಗಳು

ಒಳನಾಡಿನ ಕನ್ನಡದಲ್ಲಿ ಎಂತಹ ಪ್ರಭೇದಗಳೆಲ್ಲ ಇವೆ, ಅದನ್ನು ಯಾವ ರೀತಿ ಯಲ್ಲೆಲ್ಲ ವಿಂಗಡಿಸಬಹುದು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಉತ್ತರ ಮತ್ತು ದಕ್ಷಿಣ ಎಂಬುದಾಗಿ ಎರಡು ಮುಖ್ಯವಾದ ಪ್ರಭೇದಗಳನ್ನು ವಿದ್ವಾಂಸರು ಗಮನಿಸಿರುವರಾದರೂ, ನಿಜಕ್ಕೂ ಈ ಎರಡು ಒಳನಾಡಿನ ಪ್ರಭೇದಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಅವುಗಳ ವ್ಯಾಪ್ತಿ ಎಂತಹದು, ಮತ್ತು ಈ ವ್ಯತ್ಯಾಸಗಳ ಆಧಾರದ ಮೇಲೆ ಒಳನಾಡಿನ ಪ್ರಭೇದಗಳನ್ನು ಯಾವ ರೀತಿಯಲ್ಲಿ ವಿಂಗಡಿಸಲು ಸಾಧ್ಯ ಎಂಬ ವಿಷಯದಲ್ಲಿ ಪರಿಪೂರ್ಣವಾದ ಮತ್ತು ವ್ಯಾಪಕವಾದ ಸಂಶೋಧನೆ ಇನ್ನೂ ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯವಾಗಲೀ ಇಲ್ಲವೇ ಕರ್ನಾಟಕದ ಇತರ ವಿಶ್ವವಿದ್ಯಾಲಯಗಳಾಗಲೀ ಇಂತಹ ಸಂಶೋಧನೆಯನ್ನು ಕೈಗೆತ್ತಿಕೊಳ್ಳುವುದು ಅವಶ್ಯ.

ಉದಾಹರಣೆಗಾಗಿ, ಹಕಾರ ಲೋಪಗೊಳ್ಳುವ ಬದಲಾವಣೆಯನ್ನು ನಾವು ಮೈಸೂರು ಜಿಲ್ಲೆಯಲ್ಲೂ ಕಾಣುತ್ತೇವೆ, ಬಳ್ಳಾರಿ ಜಿಲ್ಲೆಯಲ್ಲೂ ಕಾಣುತ್ತೇವೆ, ಮತ್ತು ಗುಲ್ಬರ್ಗ ಜಿಲ್ಲೆಯಲ್ಲೂ ಕಾಣುತ್ತೇವೆ. ಆದರೆ, ಮೈಸೂರು ಜಿಲ್ಲೆ ಯಲ್ಲೇನೇ ಕೆ.ಆರ್.ನಗರ, ಪಿರಿಯಾಪಟ್ಟಣ, ಮತ್ತು ಹುಣಸೂರಿನ ಒಂದು ಭಾಗದಲ್ಲಿ ಈ ಬದಲಾವಣೆ ಕಾಣಿಸುವುದಿಲ್ಲ. ಉಳಿದ ಭಾಗಗಳಲ್ಲಿ ಮಾತ್ರ ಕಾಣಿಸುತ್ತದೆ.

ಇಲ್ಲೂ ಕೂಡ, ಮೇಲ್ವರ್ಗದವರ ಕನ್ನಡದಲ್ಲಿ ಕಾಣಿಸುವುದಿಲ್ಲ, ಮಧ್ಯಮ ಮತ್ತು ಕೆಳವರ್ಗದವರ ಕನ್ನಡದಲ್ಲಿ ಮಾತ್ರ ಕಾಣಿಸುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲೂ ಈ ಬದಲಾವಣೆ ಕೆಲವು ಪ್ರಭೇದಗಳಲ್ಲಿ ಕಾಣಿಸುತ್ತದೆ, ಆದರೆ ಬೇರೆ ಕೆಲವು ಪ್ರಭೇದಗಳಲ್ಲಿ ಕಾಣಿಸುವುದಿಲ್ಲ.

ನಿಜಕ್ಕೂ ಈ ಬದಲಾವಣೆಯ ವ್ಯಾಪ್ತಿಯೇನು? ಬೇರೆ ಬೇರೆ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಹಕಾರಲೋಪ ಒಂದೇ ಬದಲಾವಣೆಯೇ, ಇಲ್ಲವೇ ಸ್ವತಂತ್ರವಾಗಿ ನಡೆದ ಬೇರೆ ಬೇರೆ ಬದಲಾವಣೆಗಳೇ? ಒಂದೇ ಬದಲಾವಣೆ ಯಾದರೆ, ಇದು ಕನ್ನಡವನ್ನು ಯಾವ ರೀತಿಯಲ್ಲಿ ವಿಭಜಿಸುತ್ತದೆ? ಗುಲ್ಬರ್ಗಕ್ಕೂ ಮೈಸೂರಿಗೂ ನಡುವೆ ಈ ಹಕಾರಲೋಪದ ಗೆರೆ ಹೇಗೆ ಹರಿಯುತ್ತದೆ?

ಒಳನಾಡಿನ ಉಪಭಾಷೆಗಳ ವಿಭಜನೆಯಲ್ಲಿ ಅದರ ಸ್ಥಾನವೇನು? ಇಂತಹ ಹಲವಾರು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.

ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ನಡೆದಿರುವ ಎಲ್ಲಾ ಬದಲಾವಣೆಗಳ ವಿಷಯದಲ್ಲೂ ಇಂತಹವೇ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಬೇಕಾಗಿದೆ. ಇದಕ್ಕಾಗಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳನ್ನು ಒಂದೊಂದಾಗಿ ಆರಿಸಿಕೊಂಡು, ಅವುಗಳಲ್ಲಿ ಎಂತಹ ಕನ್ನಡ ಪ್ರಭೇದಗಳೆಲ್ಲ ಇವೆ, ಮತ್ತು ಈ ಪ್ರಭೇದಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದಾಗಿ ಪರಿಶೀಲನೆಯೊಂದನ್ನು ನಡೆಸಬೇಕಾಗಿದೆ.

Eke →

ಮೈಸೂರು ಕನ್ನಡದ ಪ್ರಭೇದಗಳು

ಉದಾಹರಣೆಗಾಗಿ, ಮೈಸೂರು ಜಿಲ್ಲೆಯ ಕನ್ನಡ ಪ್ರಭೇದಗಳನ್ನು ಗಮನಿಸ ಬಹುದು. ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ಒಂದು ತಿಂಗಳು ಈ ಜಿಲ್ಲೆಯಲ್ಲಿ ಸುತ್ತಾಡಿ, ಬೇರೆ ಬೇರೆ ಊರುಗಳಲ್ಲಿ ಬಳಕೆಯಲ್ಲಿರುವ ಕನ್ನಡ ಪ್ರಭೇದಗಳ ನಡುವಿರುವ ವ್ಯತ್ಯಾಸಗಳನ್ನು ಸಂಗ್ರಹಿಸಿದ್ದೆ. ಇದು ಈ ಜಿಲ್ಲೆಯ ಸಮಗ್ರ ಪರಿಶೀಲನೆಯೇನೂ ಅಲ್ಲ; ಆದರೂ, ಕನ್ನಡ ಪ್ರಭೇದಗಳ ಕುರಿತು ಎಂತಹ ವಿಷಯಗಳನ್ನು ಸಂಗ್ರಹಿಸಲು ಸಾಧ್ಯ ಎಂಬುದನ್ನು ಇದು ತೋರಿಸಿಕೊಡ ಬಲ್ಲುದು.

ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರು ಹೇಳುವಂತೆ, ಮೈಸೂರಿನ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸಮಾಜದ ಸಂಪೂರ್ಣ ಸದಸ್ಯರಾಗಿರುವವರು, ಅರ್ಧ ಸದಸ್ಯರಾಗಿರುವವರು, ಮತ್ತು ಸಮಾಜದಿಂದ ಹೊರಗಿರುವವರು ಎಂಬುದಾಗಿ ಮೂರು ವರ್ಗಗಳಲ್ಲಿ ವಿಂಗಡಿಸಬಹುದು. ಮುಸ್ಲಿಮರು ಇವರಲ್ಲಿ ಕೊನೆಯ ವರ್ಗಕ್ಕೆ ಸೇರುತ್ತಾರೆ; ಆದರೆ, ಅವರು ಮನೆಯಲ್ಲಿ ಉರ್ದು ಮಾತ ನಾಡುವ ಕಾರಣ, ಕನ್ನಡ ಪ್ರಭೇದಗಳ ಈ ಪರಿಶೀಲನೆಯಲ್ಲಿ ಅವರ ಮಾತನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ.

ಸಮಾಜದ ಅರ್ಧ ಸದಸ್ಯರಾಗಿರುವ ಎರಡನೇ ವರ್ಗದವರನ್ನು ಮೇಲ್ವರ್ಗ ದವರು ಮತ್ತು ಕೆಳವರ್ಗದವರು ಎಂಬುದಾಗಿ ಎರಡು ಪ್ರಭೇದಗಳಲ್ಲಿ ವಿಂಗಡಿಸ ಬಹುದು, ಮತ್ತು ಸಮಾಜದ ಸಂಪೂರ್ಣ ಸದಸ್ಯರಾಗಿರುವ ಮೊದಲನೆಯ ವರ್ಗದವರನ್ನು ಮಧ್ಯ ವರ್ಗದವರೆಂದು ಪರಿಗಣಿಸಬಹುದು. ಕನ್ನಡದ ಪ್ರಭೇದ ಗಳ ಮಟ್ಟಿಗೆ ಹೇಳುವುದಾದರೆ, ಮೈಸೂರಿನ ಹಳ್ಳಿಗಳಲ್ಲಿ ಮೇಲಿನ ಮೂರು ವರ್ಗಗಳಿಗನುಸರಿಸಿ ಮೂರು ಸಾಮಾಜಿಕ ಪ್ರಭೇದಗಳನ್ನು ಕಾಣಬಹುದು.

ಪ್ರಾದೇಶಿಕವಾಗಿ, ಮೈಸೂರು ಜಿಲ್ಲೆಯನ್ನು ಪಶ್ಚಿಮ, ಪೂರ್ವ, ಮತ್ತು ಮಧ್ಯ ಎಂಬುದಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಟಿ.ನರಸೀಪುರ, ಕೊಳ್ಳೇ ಗಾಲ, ಯಳಂದೂರು, ಚಾಮರಾಜನಗರ, ಮತ್ತು ಗುಂಡ್ಲುಪೇಟೆ ತಾಲೂಕಿನ ಸ್ವಲ್ಪ ಭಾಗ - ಇವಿಷ್ಟು ಪೂರ್ವ ವಿಭಾಗಕ್ಕೂ, ಪಿರಿಯಾಪಟ್ಟಣ, ಕೆ.ಆರ್.ನಗರ,

ಮತ್ತು ಹುಣಸೂರು ತಾಲೂಕಿನ ಸ್ವಲ್ಪ ಭಾಗ - ಇವಿಷ್ಟು ಪಶ್ಚಿಮ ಭಾಗಕ್ಕೂ, ಮತ್ತು ಜಿಲ್ಲೆಯ ಉಳಿದ ಭಾಗಗಳು ಮಧ್ಯ ವಿಭಾಗಕ್ಕೂ ಸೇರುತ್ತವೆ.

ಇದು ಈ ಪ್ರದೇಶದಲ್ಲಿ ಬಳಕೆಯಲ್ಲಿರುವ ಕನ್ನಡ ಪ್ರಭೇದಗಳನ್ನು ಅವಲಂಬಿಸಿ ರಚಿಸಿರುವ ಪ್ರಾದೇಶಿಕ ವಿಭಜನೆ. ಮೇಲೆ ವಿವರಿಸಿದ ಮೂರು ಸಾಮಾಜಿಕ ಪ್ರಭೇದಗಳು ಈ ಮೂರು ಪ್ರಾದೇಶಿಕ ಪ್ರಭೇದಗಳನ್ನು ಛೇದಿಸುತ್ತವೆ ಯಾದ ಕಾರಣ, ಮೈಸೂರು ಜಿಲ್ಲೆಯ ಕನ್ನಡ ಪ್ರಭೇದಗಳ ವರ್ಣನೆಯನ್ನು ಕೊಡುವಾಗ ಸಾಮಾಜಿಕ ಮತ್ತು ಪ್ರಾದೇಶಿಕಗಳೆಂಬ ಈ ಎರಡು ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳುವುದು ಅವಶ್ಯ.

ಮೈಸೂರು ಜಿಲ್ಲೆಯ ಎಲ್ಲಾ ಕನ್ನಡ ಪ್ರಭೇದಗಳಲ್ಲೂ ಕಾಣಿಸುವ, ಮತ್ತು ಬರಹ ಕನ್ನಡದಲ್ಲಿ ಕಾಣಿಸದಿರುವ ವೈಶಿಷ್ಟ್ಯಗಳು ಕೆಲವಿವೆ. ಉದಾಹರಣೆಗಾಗಿ, ಮೂರು ಲಘು ಅಕ್ಷರಗಳಿರುವ ಪದಗಳಲ್ಲಿ, ಮತ್ತು ಮೂರು ಅಕ್ಷರಗಳಲ್ಲಿ ಮೊದಲನೆಯದು ಮಾತ್ರ ಗುರುವಾಗಿರುವ ಪದಗಳಲ್ಲಿ ಎರಡನೆಯ ಸ್ವರ ಲೋಪಗೊಳ್ಳುತ್ತದೆ (ಆಗಸ>ಆಗ್ನ, ಕೂದಲು> ಕೂದ್ದು); ಇಂತಹ ಪದಗಳಲ್ಲಿ ಮೂರು ಅಕ್ಷರಗಳ ಬದಲು ನಾಲ್ಕು ಅಕ್ಷರಗಳಿವೆಯಾದರೆ, ಎರಡನೆಯ ಸ್ವರದ ಬದಲು ಮೂರನೆಯ ಸ್ವರ ಲೋಪಗೊಳ್ಳುತ್ತದೆ (ಕನ್ನಡಕ>ಕನ್ನಡ). ಈ ಬದಲಾವಣೆ ಮೈಸೂರಿನ ಎಲ್ಲಾ ಪ್ರಭೇದಗಳಲ್ಲೂ ಕಾಣಿಸುತ್ತದೆ.

ಅಕಾರ ಮತ್ತು ಎಕಾರಗಳು ಪರವಾದಾಗ, ಒ ಮತ್ತು ಓ ಸ್ವರಗಳು ಅನುಕ್ರಮವಾಗಿ ವ ಮತ್ತು ವಾ ಎಂದಾಗುವುದು (ಒಗೆ>ವಗೆ, ಗೋಡೆ> ಗ್ವಾಡೆ), ಮಕಾರದ ಅನಂತರ ಅ ಮತ್ತು ಆ ಎಂದಾಗುವುದು (ಮೊಸರು> ಮಸರು), ಮತ್ತು ಎ-ಏ ಸ್ವರಗಳು ಯ-ಯಾ ಎಂದಾಗುವುದು (ಎಮ್ಮೆ> ಯಮ್ಮೆ, ಹೇಟೆ>ಹ್ಯಾಟೆ) ಮೈಸೂರು ಜಿಲ್ಲೆಯಲ್ಲಿ ಎಲ್ಲೆಡೆಯಲ್ಲೂ ಕಾಣಿಸುವ ಇನ್ನೊಂದು ಬದಲಾವಣೆ.

ಆದರೆ, ಕೆಲವರ ಮಾತಿನಲ್ಲಿ ಮಾತ್ರ ಈ ಬದಲಾವಣೆ ಕಾಣಿಸಿಕೊಳ್ಳುತ್ತದೆ, ಬೇರೆ ಕೆಲವರ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಈ ಬದಲಾ ವಣೆಯ ನಿಜವಾದ ವ್ಯಾಪ್ತಿ ಎಂತಹದು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇದಕ್ಕೆ ಸಾಮಾಜಿಕ ಇಲ್ಲವೇ ಪ್ರಾದೇಶಿಕ ಮಿತಿಗಳೇನಾದರೂ ಇವೆಯೇ ಎಂಬುದನ್ನು ತಿಳಿಯಲು ಹೆಚ್ಚಿನ ಪರಿಶೀಲನೆ ಅವಶ್ಯ.

ಮೇಲ್ವರ್ಗದವರ ಪ್ರಭೇದದಲ್ಲಿ ಕಾಣಿಸದಿರುವ, ಮತ್ತು ಉಳಿದ ಎಲ್ಲಾ ಪ್ರಭೇದಗಳಲ್ಲೂ ಕಾಣಿಸುವ ವೈಶಿಷ್ಟ್ಯಗಳೂ ಕೆಲವಿವೆ. ಉದಾಹರಣೆಗಾಗಿ, ರ್ತ್, ರ್ಡ್, ಮತ್ತು ರ್ಟ್ ಎಂಬ ವ್ಯಂಜನಕಂತೆಗಳು ಳ್, ಣ್, ಮತ್ತು ಣ್ಣ್ ಎಂಬುದಾಗಿ ಬದಲಾಯಿಸಿರುವುದನ್ನು (ಹುರ್ತಿ>ಹುಳ್ಳಿ ‘ಹುರುಳಿ’, ಕಳುರ್ತಿ> ಕಳ್ಳು ‘ಕರುಳು’, ಕುರ್ಡ>ಕುಣ್ಣ ‘ಕುರುಡ’, ಹೋರ್ಟ>ಹೊಣ್ಣ ‘ಹೊರಟ’)

ಮಧ್ಯ ಮತ್ತು ಕೆಳವರ್ಗದ ಪ್ರಭೇದಗಳಲ್ಲಿ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು.

Eke →

ಮಧ್ಯವರ್ಗದ ಪ್ರಭೇದಗಳು

ಮಧ್ಯವರ್ಗದ ಸಾಮಾಜಿಕ ಪ್ರಭೇದವನ್ನು ಮೈಸೂರು ಕನ್ನಡದ ಮುಖ್ಯ ಸಾಮಾಜಿಕ ಪ್ರಭೇದವೆಂದು ಪರಿಗಣಿಸಬಹುದು. ಮೇಲೆ ವಿವರಿಸಿದಂತೆ, ಮೈಸೂರಿನ ಹಳ್ಳಿಗಳಲ್ಲಿ ಇದು ಸಮಾಜದ ಸಂಪೂರ್ಣ ಸದಸ್ಯರಾಗಿರುವ ಜನರ ಪ್ರಭೇದ. ಈ ಪ್ರಭೇದವನ್ನು ಪೂರ್ವ, ಪಶ್ಚಿಮ, ಮತ್ತು ಮಧ್ಯ ಎಂಬ ಮೂರು ಪ್ರಾದೇಶಿಕ ಪ್ರಭೇದಗಳಾಗಿ ವಿಂಗಡಿಸಬಹುದು.

ಈ ವಿಭಜನೆಗೆ ಆಧಾರವಾಗಬಲ್ಲ ಬದಲಾವಣೆಗಳನ್ನು ಒಟ್ಟಾಗಿ ಪರಿಶೀಲಿಸಿ ದಾಗ, ಪಶ್ಚಿಮದ ಪ್ರಭೇದ ಉಳಿದ ಎರಡು ಪ್ರಭೇದಗಳಿಗಿಂತ ಹಲವು ವಿಷಯ ಗಳಲ್ಲಿ ಭಿನ್ನವಾಗಿರುವುದು ಕಾಣಿಸುತ್ತದೆ. ಆದರೆ, ಪೂರ್ವ ಮತ್ತು ಮಧ್ಯ ಪ್ರಭೇದಗಳ ನಡುವೆ ಹೆಚ್ಚು ವ್ಯತ್ಯಾಸಗಳು ಕಾಣಿಸುವುದಿಲ್ಲ.

ಉದಾಹರಣೆಗಾಗಿ ಮೇಲೆಯೇ ಸೂಚಿಸಿರುವಂತೆ, ಆದಿಹಕಾರ ಲೋಪ ಗೊಳ್ಳುವ ಬದಲಾವಣೆ (ಹಾಲು>ಆಲು, ಹಕ್ಕಿ>ಅಕ್ಕಿ, ಹೇಳು>ಏಳು, ಹುಳಿ> ಉಳಿ) ಪೂರ್ವ ಮತ್ತು ಮಧ್ಯ ಪ್ರಭೇದಗಳಲ್ಲಿ ನಡೆದಿದೆ; ಆದರೆ, ಪಶ್ಚಿಮ ಪ್ರಭೇದದಲ್ಲಿ ನಡೆದಿಲ್ಲ. ಇದೇ ರೀತಿಯಲ್ಲಿ, ಡ್ ಎಂದು ಎಂಬ ವ್ಯಂಜನಕಂತೆ ಪೂರ್ವ ಮತ್ತು ಮಧ್ಯ ಪ್ರಭೇದಗಳಲ್ಲಿ ಳ್ ಎಂದಾಗಿದೆ (ಕೊಡ್ಡಿ>ಕೊಳ್ಳಿ ‘ಕೊಡಲಿ’, ಕಡ್ಡೆ>ಕಳ್ಳೆ ‘ಕಡಲೆ’, ಸಡ್ಡು>ಸಳ್ಳು ‘ಸಡಿಲು’, ಗುಡ್ಡು>ಗುಳ್ಳು ‘ಗುಡಿಸಲು’); ಆದರೆ, ಪಶ್ಚಿಮ ಪ್ರಭೇದದಲ್ಲಿ ಬದಲಾಗದೆ ಹಾಗೆಯೇ ಉಳಿದಿದೆ.

ಪಶ್ಚಿಮ ಮತ್ತು ಮಧ್ಯ ಪ್ರಭೇದಗಳನ್ನು ಪೂರ್ವ ಪ್ರಭೇದದಿಂದ ಬೇರ್ಪಡಿಸುವ ಬದಲಾವಣೆಯೆಂದರೆ, ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳು ಇಕಾರದಲ್ಲಿ ಕೊನೆಗೊಳ್ಳುವಂತಾಗುವುದು (ಬರೆ>ಬರಿ, ನಡೆ>ನಡಿ, ಕರ>ಕರಿ ‘ಬರಹೇಳು’, ಅಗೆ>ಅಗಿ ‘ಗುದ್ದಲಿಯಿಂದ ಆಗಿ’). ಈ ಬದಲಾವಣೆ ಪಶ್ಚಿಮ ಮತ್ತು ಮಧ್ಯ ಪ್ರಭೇದಗಳಲ್ಲಿ ನಡೆದಿದೆ; ಆದರೆ, ಪೂರ್ವ ಪ್ರಭೇದದಲ್ಲಿ ನಡೆದಿಲ್ಲ.

ಇಲ್ಲೂ ಪಶ್ಚಿಮದ ಪ್ರಭೇದ ಮಧ್ಯ ಪ್ರಭೇದಕ್ಕಿಂತ ಬೇರಾಗಿದೆ: ಕೊನೆಯ ಎಕಾರ ಇಕಾರವಾಗಿರುವ ಕ್ರಿಯಾಪದಗಳು ಮೊದಲಿನಿಂದಲೂ ಕೊನೆಯಲ್ಲಿ ಇಕಾರವಿದ್ದ (ಅಗಿ ‘ಜಗಿ’, ಕರಿ ‘ಎಣ್ಣೆಯಲ್ಲಿ ಕರಿ’ ಮೊದಲಾದ) ಕ್ರಿಯಾಪದ ಗಳಿಗಿಂತ ಮಧ್ಯ ಪ್ರಭೇದದಲ್ಲಿ ಬೇರಾಗಿಲ್ಲ; ಆದರೆ, ಪಶ್ಚಿಮದ ಪ್ರಭೇದದಲ್ಲಿ ಅವೆರಡು ಮೊದಲನೆಯ ಸ್ವರದಲ್ಲಿ ಬೇರಾಗಿವೆ.

ಇದಲ್ಲದೆ, ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವೆ ಅವು ಬಳಸುವ ಪದಗಳಲ್ಲೂ ಕೆಲವು ವ್ಯತ್ಯಾಸಗಳಿವೆ; ಇಲ್ಲೂ ಕೂಡ, ಮಧ್ಯ ಪ್ರಭೇದ ಪೂರ್ವ

ಪಶ್ಚಿಮದ ಪ್ರಭೇದ ಪೂರ್ವದ ಪ್ರಭೇದ
ಬೆಂಕಿ ಬಿಂಕಿ
ಇಲಿ ಎಲಿ
ಮಗ ಮಣ
ಮಗ್ಗು ಮಗ
ಚೇಣು ಚೇಳು
ಏಳು ಯೋಳು
ಬೆಳ್ಳು ಬೆಟ್ಟು
ಗೊರ್ಲು ಕೊಬ್ಬು
ತಿಂದೊ ‘ತಿಂದೆವು’ ತಿಂದು
ತಿಂದಿವ್ನಿ ತಿಂದಿನಿ

ಪೂರ್ವದ ಪ್ರಭೇದವನ್ನು ದಕ್ಷಿಣ ಪೂರ್ವ ಮತ್ತು ಉತ್ತರ ಪೂರ್ವ ಎಂಬು ದಾಗಿ ವಿಂಗಡಿಸಬಹುದು. ಪದಗಳ ಕೊನೆಯಲ್ಲಿ ಬರುವ ಎಕಾರ ದಕ್ಷಿಣದಲ್ಲಿ ಅಯ್ ಇಲ್ಲವೇ ಅ ಎಂದಾಗಿರುವುದು (ಬರೆ>ಬರ, ಬರಯ್, ಮನೆ>ಮನ, ಮನಯ್, ಅಗೆ>ಅಗ, ಅಗಯ್) ಈ ವಿಭಜನೆಗೆ ಒಂದು ಆಧಾರ. ಪ್ರಥಮ ಪುರುಷ ಏಕವಚನದಲ್ಲಿ ಕ್ರಿಯಾಪದಗಳ ಪುಲ್ಲಿಂಗ ಮತ್ತು ಸ್ತ್ರೀಲಿಂಗ ರೂಪಗಳು ದಕ್ಷಿಣದಲ್ಲಿ ಭಿನ್ನವಾಗಿವೆ, ಉತ್ತರದಲ್ಲಿ ಭಿನ್ನವಾಗಿಲ್ಲ ಎಂಬುದು ಇನ್ನೊಂದು ಆಧಾರ.

ದಕ್ಷಿಣದಲ್ಲಿ ಪುಲ್ಲಿಂಗ ರೂಪಗಳ ಕೊನೆಯಲ್ಲಿ ಬರುವ ಅಕಾರ ಅನುನಾಸಿಕ ಸ್ವರವಾಗಿದೆ. ಉತ್ತಮ ಪುರುಷ ಏಕವಚನದಲ್ಲೂ ಕ್ರಿಯಾಪದದ ಭೂತರೂಪ ಗಳು ದಕ್ಷಿಣದಲ್ಲಿ ಎಕಾರದಲ್ಲಿ ಕೊನೆಗೊಳ್ಳುವುವಾದರೆ, ಉತ್ತರದಲ್ಲಿ ಇಕಾರ ದಲ್ಲಿ ಕೊನೆಗೊಳ್ಳುತ್ತವೆ (ಬಂದೆ>ಬಂದಿ, ತಿಂದೆ>ತಿಂದಿ, ನೋಡ್ಡೆ>ನೋಡ್ಡಿ).

Eke →

ಇತರ ಪ್ರಭೇದಗಳು

ಇತರ ಎರಡು ಸಾಮಾಜಿಕ ಪ್ರಭೇದಗಳೂ ಇದೇ ರೀತಿಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ತೋರಿಸುತ್ತವೆ. ಉದಾಹರಣೆಗಾಗಿ, ಮೇಲ್ವರ್ಗದ ಪ್ರಭೇದ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳು ಇಕಾರದಲ್ಲಿ ಕೊನೆಗೊಳ್ಳುವಂತೆ ಮಾಡುತ್ತವೆ, ಆದರೆ ಪೂರ್ವ ಪ್ರದೇಶ ದಲ್ಲಿ ಮಾಡುವುದಿಲ್ಲ. ಪಶ್ಚಿಮ ಪ್ರದೇಶದಲ್ಲಿ ಮೊದಲಿಂದಲೇನೇ ಇಕಾರದಲ್ಲಿ ಕೊನೆಗೊಳ್ಳುತ್ತಿದ್ದ ಕ್ರಿಯಾಪದಗಳು ಎಕಾರ ಇಕಾರವಾದುದರಿಂದ ಸಿದ್ಧವಾದ

ಕ್ರಿಯಾಪದಗಳಿಂದ ಅವುಗಳ ಮೊದಲನೇ ಸ್ವರದಲ್ಲಿ ಭಿನ್ನವಾಗಿವೆ, ಆದರೆ, ಮಧ್ಯ ಪ್ರದೇಶದಲ್ಲಿ ಇಂತಹ ವ್ಯತ್ಯಾಸವಿಲ್ಲ.

ಕೆಳವರ್ಗದವರಲ್ಲಿ ಬಳಕೆಯಲ್ಲಿರುವ ಕನ್ನಡದ ಪ್ರಭೇದ ಮಧ್ಯ ವರ್ಗದವರ ಪ್ರಭೇದದಲ್ಲಿ ಕಾಣಿಸುವ ವೈಶಿಷ್ಟ್ಯಗಳೆಲ್ಲವನ್ನೂ ಪಡೆದಿರುತ್ತದೆ. ಇದಲ್ಲದೆ, ಅದರಲ್ಲಿ ಅದರವೇ ಆದ ಬೇರೆ ಕೆಲವು ವೈಶಿಷ್ಟ್ಯಗಳೂ ಸೇರಿಕೊಂಡಿವೆ. ಆದರೆ, ಈ ವೈಶಿಷ್ಟ್ಯಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದು, ಅವುಗಳ ನಿಜವಾದ ವ್ಯಾಪ್ತಿಯಂತಹದು ಎಂಬುದನ್ನು ತಿಳಿಯಲು ಇದಕ್ಕಿಂತಲೂ ಹೆಚ್ಚು ವಿಸ್ತಾರವಾದ ಪರಿಶೀಲನೆಯನ್ನು ನಡೆಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಕೆ.ಆರ್.ನಗರ ತಾಲೂಕಿನ ಕೆಳವರ್ಗದವರ ಮಾತಿನಲ್ಲಿ ಕಕಾರ ಮತ್ತು ಗಕಾರಗಳು, ಇ, ಈ, ಎ ಮತ್ತು ಏ ಸ್ವರಗಳು ಬಳಿಕ ಬಂದಾಗ, ಅನುಕ್ರಮವಾಗಿ ಚಕಾರ ಮತ್ತು ಜಕಾರಗಳಾಗಿ ಮಾರ್ಪಟ್ಟಿವೆ (ಕಿವಿ>ಚಿವಿ, ಕೀಲು>ಚೀಲು, ಕೆಲಸ>ಚೆಲ್ಸ, ಕೇಳು>ಬೇಳು; ಗಿಡ>ಜಿಡ, ಗೀರು>ಜೀರು, ಗೆಲ್ಲು>ಜೆಲ್ಲು, ಗೇಣು>ಜೇಣು). ಈ ಬದಲಾವಣೆಯ ವ್ಯಾಪ್ತಿ ಪಶ್ಚಿಮ ಪ್ರದೇಶದಲ್ಲಿ ಹೇಗಿದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಕೆಳವರ್ಗದವರ ಮಾತಿನಲ್ಲೇನೇ, ಚಾಮರಾಜನಗರ ತಾಲೂಕಿನ ದಕ್ಷಿಣ ಪ್ರದೇಶದಲ್ಲಿ ನಕಾರ ಣಕಾರವಾಗಿರುವುದು ಕಂಡುಬರುತ್ತದೆ (ಅನ್ನ>ಅಣ್ಣ, ನಿನ್ನೆ>ನಿಣ್ಣೆ, ಬನ್ನಿ>ಬಣ್ಣಿ, ಆನೆ>ಆಣೆ). ಈ ಬದಲಾವಣೆಯದೂ ವ್ಯಾಪ್ತಿ ಮತ್ತು ಸ್ವರೂಪಗಳು ಎಂತಹವು ಎಂಬುದು ಸ್ಪಷ್ಟವಾಗಿಲ್ಲ.

Eke →

ಕಾಡುಕುರುಬರ ಕನ್ನಡ

ಮೈಸೂರಿನ ಪಶ್ಚಿಮ ಪ್ರದೇಶದಲ್ಲಿ ಮೇಲೆ ವಿವರಿಸಿದ ಸಮಾಜಗಳಿಗಿಂತ ಭಿನ್ನ ವಾಗಿರುವ ಕಾಡುಕುರುಬ ಎಂಬ ಪಂಗಡವೂ, ಪೂರ್ವ ಪ್ರದೇಶದಲ್ಲಿ ಸೊಲಿಗ ಎಂಬ ಪಂಗಡವೂ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಇವುಗಳಲ್ಲಿ ಸೊಲಿಗ ಎಂಬ ಪಂಗಡ ಹಳೆಗನ್ನಡದ ಕಾಲದಲ್ಲೇನೇ ಕವಲೊಡೆದ ಪಂಗಡ ವಿರಬೇಕೆಂಬುದನ್ನು ನಾವು ಮೇಲೆ ನೋಡಿರುವೆವು. ಕಾಡುಕುರುಬ ಪಂಗಡದ ಕನ್ನಡವೂ ಇತರ ಕನ್ನಡ ಪ್ರಭೇದಗಳಿಗಿಂತ ಹಲವು ವಿಷಯಗಳಲ್ಲಿ ಬೇರಾಗಿದೆ.

ಉದಾಹರಣೆಗಾಗಿ, ಈ ಪ್ರಭೇದದಲ್ಲಿ ಎ ಮತ್ತು ಏ ಸ್ವರಗಳು ಅನುಕ್ರಮ ವಾಗಿ ಅ ಮತ್ತು ಆ ಸ್ವರಗಳಾಗುತ್ತವೆ; ಆದರೆ, ಈ ಬದಲಾವಣೆ ಅವುಗಳ ಬಳಿಕ ಟ್, ಡ್, ಣ್ ಮತ್ತು ಳ್ ವ್ಯಂಜನಗಳು ಬಂದಿರುವಲ್ಲಿ ನಡೆಯುವುದೇ ಜಾಸ್ತಿ (ಎಣ್ಣೆ>ಅಣ್ಣೆ, ಹೆಣ್ಣು>ಅಣ್ಣು, ಹೇಳು>ಆಳು, ಬೇಡ>ಬಾಡ).

ಮಕಾರದ ಅನಂತರ ಒ ಮತ್ತು ಓ ಸ್ವರಗಳು ಅನುಕ್ರಮವಾಗಿ ಅ ಮತ್ತು ಆ ಸ್ವರಗಳಾಗಿ ಬದಲಾಗುವುದು ಈ ಪ್ರಭೇದದ ಇನ್ನೊಂದು ವೈಶಿಷ್ಟ್ಯ (ಮೊಟ್ಟೆ>ಮಟ್ಟೆ, ಮೊಳೆ>ಮಳೆ, ಮೋಡ>ಮಾಡ).

ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಇಂತಹವೇ ಇಲ್ಲವೇ ಇದಕ್ಕಿಂತಲೂ ಆಳವಾದ ಮತ್ತು ವಿಸ್ತಾರವಾದ ಪರಿಶೀಲನೆಯನ್ನು ನಡೆಸಿ, ಅಲ್ಲಿ ಬಳಕೆ ಯಲ್ಲಿರುವ ಕನ್ನಡದಲ್ಲಿ ಎಂತಹ ವೈಶಿಷ್ಟ್ಯಗಳೆಲ್ಲ ಕಾಣಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಈ ರೀತಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪರಿಶೀಲನೆ ನಡೆಸಿದ ಬಳಿಕ, ಅದರಿಂದ ಸಿದ್ಧವಾಗುವ ಪ್ರಭೇದಗಳನ್ನೆಲ್ಲ ಒಟ್ಟು ಸೇರಿಸಿ, ಕನ್ನಡಕ್ಕೆ ಎಂತಹ ಪ್ರಭೇದ ಇಲ್ಲವೇ ಉಪಭಾಷೆಗಳೆಲ್ಲ ಇವೆ ಎಂಬು ದನ್ನು, ಮತ್ತು ಈ ಪ್ರಭೇದಗಳ ವ್ಯಾಪ್ತಿಯೇನು, ಅವುಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಅವು ಚಾರಿತ್ರಿಕವಾಗಿ ಎಷ್ಟು ವರ್ಷಗಳಷ್ಟು ಹಿಂದೆ ಕವಲೊಡೆದಿರಬಹುದು ಎಂಬುದನ್ನು ನಿರ್ಧರಿಸಬಹುದು.

Eke →

ಪರಿಶೀಲನೆಯ ಅವಶ್ಯಕತೆ

ಸಾಮಾನ್ಯವಾಗಿ, ಮಾತಿನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಪ್ರಭೇದಗಳನ್ನೆಲ್ಲ ‘ಅಶುದ್ಧ’ ರೂಪಗಳೆಂದೂ, ಬರಹದಲ್ಲಿ ಕಾಣಿಸುವ ರೂಪವನ್ನು ‘ಶುದ್ಧ’ ರೂಪ ವೆಂದೂ ಹೇಳುವುದು ರೂಢಿ. ಬರಹದಲ್ಲಿ ಎಂತಹ ಪ್ರಭೇದವನ್ನು ಬಳಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದಕ್ಕಾಗಿ ಈ ರೀತಿ ಶುದ್ಧ ಮತ್ತು ಅಶುದ್ಧ ಎಂಬುದಾಗಿ (ಇಲ್ಲವೇ ಬೇರೆ ಯಾವುದಾದರೂ ಪದದ ಬಳಕೆಯ ಮೂಲಕ) ಕನ್ನಡ ಪ್ರಭೇದಗಳನ್ನು ಪ್ರತ್ಯೇಕಿಸುವುದು ಅವಶ್ಯವಾದರೂ, ಶುದ್ಧಾಶುದ್ಧವೆಂಬ ಪದಗಳ ಹಿಂದಿರುವ ಅರ್ಥ ಇವುಗಳ ನಡುವಿರುವ ವ್ಯತ್ಯಾಸಕ್ಕೆ ಅನ್ವಯಿಸುವು ದಿಲ್ಲವೆಂಬುದನ್ನು ಗಮನಿಸುವುದು (ಮತ್ತು ವಿದ್ಯಾರ್ಥಿಗಳಿಗೆ ತಿಳಿಹೇಳುವುದು) ಅವಶ್ಯ.

ಮೇಲೆಯೇ ಸೂಚಿಸಿದಂತೆ, ಒಂದು ನುಡಿಯ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪ್ರಭೇದಗಳಲ್ಲಿ ಯಾವುದು ಬೇಕಿದ್ದರೂ, ಬರಹದಲ್ಲಿ ಬಳಕೆ ಯಾಗುವ ಮೂಲಕ, ಬರಹದ ಪ್ರಭೇದವಾಗಬಲ್ಲುದು. ಇದಲ್ಲದೆ, ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಪ್ರಭೇದಗಳು ಬರಹದ ಪ್ರಭೇದವಾಗಿ ಬಳಕೆಗೆ ಬರ ಬಲ್ಲುವು. ಎಂದರೆ, ಒಂದು ಕಾಲದಲ್ಲಿ ‘ಅಶುದ್ಧ’ವೆಂದೆನಿಸಿದ್ದ ಪ್ರಭೇದ ಇನ್ನೊಂದು ಕಾಲ ದಲ್ಲಿ ‘ಶುದ್ಧ’ವೆಂದೆನಿಸಬಲ್ಲುದು.

ಈ ಕಾರಣಕ್ಕಾಗಿ, ಕನ್ನಡದ ಪ್ರಭೇದಗಳ ನಡುವೆ ಕಾಣಿಸುವ ಈ ವೈವಿಧ್ಯತೆ ಕನ್ನಡದ ಭಾಷಾಸಂಪತ್ತು ಎಂಬುದಾಗಿ ನಾವು ತಿಳಿದುಕೊಳ್ಳಬೇಕಾಗಿದೆ. ಈ ವೈವಿಧ್ಯತೆಯನ್ನು ಪರಿಶೀಲಿಸುವುದೆಂದರೆ, ನಿಜಕ್ಕೂ ಕನ್ನಡದ ಭಾಷಾಸಂಪತ್ತನ್ನು ಪರಿಶೀಲಿಸಿದ ಹಾಗೆ. ಹಳೆಗನ್ನಡ-ನಡುಗನ್ನಡಗಳಿಗೂ ಹೊಸಗನ್ನಡಕ್ಕೂ ನಡು ವಿರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಹೇಗೆ ಅವಶ್ಯವೋ, ಹಾಗೆಯೇ ಕನ್ನಡದ ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳ ನಡುವಿರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದೂ ಅವಶ್ಯವೇ.

Eke →

ಕನ್ನಡದ ವ್ಯಾಕರಣ ಪರಂಪರೆ

ಈ ಪ್ರಭೇದಗಳ ನಡುವೆ ಅವು ಬಳಸುವ ಪದಗಳಲ್ಲಿಯೂ ಹಲವಾರು ವ್ಯತ್ಯಾಸಗಳಿವೆ. ಕೆಲವು ಪ್ರಭೇದಗಳಲ್ಲಿ ಮಾತ್ರವೇ ಕಾಣಿಸುವಂತಹ ಪದಗಳೂ ಹಲವಿವೆ. ಇವನ್ನೆಲ್ಲ ಒಟ್ಟು ಸೇರಿಸಿ, ಕನ್ನಡದ ಉಪಭಾಷಾಕೋಶವೊಂದನ್ನು ತಯಾರಿಸಿದೆವಾದರೆ, ಪದಗಳ ಮಟ್ಟಿಗೆ ನಿಜಕ್ಕೂ ಕನ್ನಡದ ಭಾಷಾಸಂಪತ್ತು ಎಂತಹದು ಎಂಬ ವಿಷಯ ಸ್ಪಷ್ಟವಾದೀತು.

ಇದೇ ರೀತಿಯಲ್ಲಿ, ಈ ಪ್ರಭೇದಗಳ ನಡುವೆ ಅವು ಬಳಸುವ ವ್ಯಾಕರಣದ ಮಟ್ಟಿಗೂ ಹಲವು ವ್ಯತ್ಯಾಸಗಳಿವೆ. ಇವನ್ನೂ ಒಟ್ಟು ಸೇರಿಸಿ, ಪದಗಳನ್ನು ಮತ್ತು ವಾಕ್ಯಗಳನ್ನು ರಚಿಸುವಲ್ಲಿ ಈ ಪ್ರಭೇದಗಳು ಹೇಗೆ ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿವೆ ಎಂಬುದನ್ನು ತಿಳಿಯಬಹುದು. ಕನ್ನಡ ಭಾಷೆಯ ಸ್ವರೂಪವೆಂತಹದು ಎಂಬ ವಿಷಯ ಇಂತಹ ಕನ್ನಡ ಪ್ರಭೇದಗಳ ಪರಿಶೀಲನೆಯಿಂದ ಮಾತ್ರವೇ ಸ್ಪಷ್ಟವಾಗಬಲ್ಲುದು.

Eke →

೪.೩ ಕನ್ನಡದ ವ್ಯಾಕರಣ ಪರಂಪರೆ

ಕನ್ನಡದ ವ್ಯಾಕರಣದ ಅಧ್ಯಯನಕ್ಕೆ ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ದೀರ್ಘವಾದ ಚರಿತ್ರೆಯಿದೆ. ಈ ಅವಧಿಯಲ್ಲಿ ಕನ್ನಡ ವ್ಯಾಕರಣದ ಮೇಲೆ ಬೇರೆ ಬೇರೆ ರೀತಿಯ ಮತ್ತು ಬೇರೆ ಬೇರೆ ಗಾತ್ರದ ನೂರಕ್ಕೂ ಮಿಕ್ಕಿ ಗ್ರಂಥಗಳು ಮತ್ತು ಲೇಖನಗಳು ರಚಿತವಾಗಿವೆ. ಇವು ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಷ್, ಸಂಸ್ಕೃತ, ರಶ್ಯನ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲೂ ರಚಿತವಾಗಿವೆ. ಈ ವ್ಯಾಕರಣಗಳು ಸೂತ್ರರೂಪದಲ್ಲಿ, ಸೂತ್ರದ ವ್ಯಾಖ್ಯಾನ ರೂಪದಲ್ಲಿ, ಪ್ರಶ್ನೆ- ಉತ್ತರ ರೂಪದಲ್ಲಿ, ಪ್ರಬಂಧ ರೂಪದಲ್ಲಿ - ಹೀಗೆ ಬೇರೆ ಬೇರೆ ರೂಪ ಗಳಲ್ಲೂ ರಚಿತವಾಗಿವೆ.

ಕನ್ನಡವನ್ನು ಕಲಿಯಬಯಸುವವರಿಗೆ, ಕನ್ನಡದ ಒಳಗುಟ್ಟನ್ನು ತಿಳಿಯ ಬಯಸುವವರಿಗೆ, ಕನ್ನಡವನ್ನು ಇತರ ದ್ರಾವಿಡ ಇಲ್ಲವೇ ಬೇರೆ ಭಾಷೆಗಳೊಂದಿಗೆ ಹೋಲಿಸಬಯಸುವವರಿಗೆ, ಕನ್ನಡದ ಚರಿತ್ರೆಯನ್ನು ಅರಿಯಬೇಕೆಂದಿರುವವರಿಗೆ

  • ಹೀಗೆ ಬೇರೆ ಬೇರೆ ಉದ್ದೇಶಗಳನ್ನು ಮುಂದಿಟ್ಟುಕೊಂಡು ಬರೆದಿರುವ ವ್ಯಾಕರಣಗಳೂ ಇವುಗಳಲ್ಲಿವೆ.

Eke →

ಮೂರು ಮುಖ್ಯ ಪರಂಪರೆಗಳು

ಕನ್ನಡ ವ್ಯಾಕರಣದ ಮೇಲೆ ಇಷ್ಟೆಲ್ಲಾ ಗ್ರಂಥಗಳು ಮತ್ತು ಲೇಖನಗಳು ಹೊರ ಬಂದಿವೆಯೆಂಬುದು ನಮಗೆ ಸಂತೋಷವನ್ನು ಮತ್ತು ಹೆಮ್ಮೆಯನ್ನು ತರುವಂತಹ ಸಂಗತಿಯೆಂಬುದೇನೋ ನಿಜ. ಆದರೆ, ನಿಜಕ್ಕೂ ಈ ಗ್ರಂಥಗಳು ಮತ್ತು ಲೇಖನ ಗಳು ಕನ್ನಡ ವ್ಯಾಕರಣದ ಒಳಗುಟ್ಟನ್ನು ತಿಳಿಸಿಕೊಡುವಲ್ಲಿ ಎಷ್ಟರ ಮಟ್ಟಿಗೆ

ಸಮರ್ಥವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಈ ಗ್ರಂಥ ಗಳನ್ನು ಮತ್ತು ಲೇಖನಗಳನ್ನು ಮೂರು ಮುಖ್ಯ ಪರಂಪರೆಗಳಲ್ಲಿ ರಚಿತವಾದವು ಗಳೆಂದು ವಿಂಗಡಿಸಿಕೊಳ್ಳಬಹುದು.

ಪಾಣಿನಿಯ ಸಂಸ್ಕೃತ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ ಶಬ್ದಾನುಶಾಸನ ಮತ್ತು ಇನ್ನಿತರ ಹಲವಾರು ಹಳೆಗನ್ನಡ ವ್ಯಾಕರಣಗಳು, ಮತ್ತು ಅವುಗಳ ಮೇಲೆ ಬರೆದ ವ್ಯಾಖ್ಯಾನಗಳು ಒಂದು ವಿಭಾಗಕ್ಕೆ ಸೇರುತ್ತವೆ. ಆಧುನಿಕ ಕನ್ನಡದ ಮೇಲೂ ಈ ಪರಂಪರೆಯಲ್ಲಿ ಬರೆದ ವ್ಯಾಕರಣಗಳು ಹಲವಿವೆ.

ಹತ್ತೊಂಬತ್ತನೇ ಶತಮಾನದಿಂದ ಈಚೆಗೆ, ಮುಖ್ಯವಾಗಿ ಕ್ರಿಶ್ಚಿಯನ್ ಮಿಶನರಿಗಳು ಇಂಗ್ಲಿಷ್‌ನಲ್ಲಿ ಬರೆದಿರುವ ಕೆಲವು ಹೊಸಗನ್ನಡ ವ್ಯಾಕರಣಗಳು ಯುರೋಪಿನ ವ್ಯಾಕರಣ ಪರಂಪರೆಯಲ್ಲಿ ರಚಿತವಾಗಿದ್ದು ಎರಡನೆಯ ವಿಭಾಗಕ್ಕೆ ಸೇರುತ್ತವೆ.

ಅದರಿಂದೀಚೆಗೆ, ಆಧುನಿಕ ಭಾಷಾವಿಜ್ಞಾನಿಗಳು ರಚಿಸಿರುವ ವ್ಯಾಕರಣ ಗ್ರಂಥಗಳು ಮತ್ತು ಲೇಖನಗಳು ಮುಖ್ಯವಾಗಿ ಅಮೆರಿಕದ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಸಿದ್ಧವಾಗಿದ್ದು, ಮೂರನೆಯ ವಿಭಾಗಕ್ಕೆ ಸೇರುತ್ತವೆ.

ಕನ್ನಡದ ಈ ಮೂರು ರೀತಿಯ ವ್ಯಾಕರಣಗಳಲ್ಲೂ ನಮಗೆ ಕಂಡುಬರುವ ಒಂದು ಮುಖ್ಯವಾದ ಸಂಗತಿಯೇನೆಂದರೆ, ಇವು ಬೇರೆ ಯಾವುದೋ ಒಂದು ಭಾಷೆಯ (ಎಂದರೆ ಸಂಸ್ಕೃತ, ಲ್ಯಾಟಿನ್ ಇಲ್ಲವೇ ಇಂಗ್ಲಿಷ್ ಭಾಷೆಯ) ವ್ಯಾಕರಣ ಪರಂಪರೆಯನ್ನು ಅನುಸರಿಸಲು ಪ್ರಯತ್ನಿಸಿವೆಯಲ್ಲದೆ, ಕನ್ನಡಕ್ಕೆ ಅದರದ್ದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಾಧಿಸಿಕೊಡಲು ಪ್ರಯತ್ನಿ ಸಿಲ್ಲ. ಈ ಎಲ್ಲಾ ವ್ಯಾಕರಣಗಳಲ್ಲೂ ಇದೊಂದು ಎದ್ದು ಕಾಣುವ ಕೊರತೆ.

ಸಂಸ್ಕೃತ, ಲ್ಯಾಟಿನ್ ಮತ್ತು ಇಂಗ್ಲಿಷ್ - ಇವು ಮೂರೂ ಇಂಡೋ ಯುರೋಪಿಯನ್ ಎಂಬ ಒಂದೇ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು. ಇವು ಸ್ವತಂತ್ರ ಭಾಷೆಗಳಾಗಿದ್ದು ಒಂದರಿಂದೊಂದು ಸಾಕಷ್ಟು ಭಿನ್ನವಾಗಿವೆಯಾದರೂ, ಇವುಗಳ ವ್ಯಾಕರಣದ ಮೂಲ ಸೂತ್ರಗಳು ಹೆಚ್ಚು ಕಡಿಮೆ ಒಂದೇ ಆಗಿವೆ; ಹಾಗಾಗಿ, ಈ ಮೂರು ವ್ಯಾಕರಣ ಪರಂಪರೆಗಳು ಹೆಚ್ಚು ಕಡಿಮೆ ಒಂದೇ ವ್ಯಾಕರಣ ಪರಂಪರೆಯ ಮೂರು ಪ್ರಭೇದಗಳೆಂದು ಹೇಳಲು ಸಾಧ್ಯವಿದೆ.

ಕನ್ನಡ ಭಾಷೆ ಇದಕ್ಕಿಂತ ತೀರ ಭಿನ್ನವಾದ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ. ಇದರ ವ್ಯಾಕರಣದ ಮೂಲ ಸೂತ್ರಗಳು ಸಂಸ್ಕೃತ, ಲ್ಯಾಟಿನ್, ಇಂಗ್ಲಿಷ್ ಮೊದಲಾದ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಕಾಣಿಸುವ ವ್ಯಾಕರಣದ ಮೂಲ ಸೂತ್ರಗಳಿಗಿಂತ ತೀರ ಭಿನ್ನವಾದವುಗಳು. ಹಾಗಾಗಿ, ಕನ್ನಡ ವ್ಯಾಕರಣದ ಮೂಲಸೂತ್ರಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸಿಕೊಳ್ಳುವುದು ಅವಶ್ಯ. ಸಂಸ್ಕೃತ ಇಲ್ಲವೇ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಬರೆದ ಗ್ರಂಥಗಳು

Eke →

ಕನ್ನಡದ ವ್ಯಾಕರಣ ಪರಂಪರೆ

ಮತ್ತು ಲೇಖನಗಳು ಇಂತಹ ಕನ್ನಡದವೇ ಆದ ವೈಶಿಷ್ಟ್ಯಗಳಿಗೆ ಹೆಚ್ಚಿನ ಗಮನ ಕೊಡಲಾರವು.

Eke →

ವ್ಯಾಕರಣ ಸಂಬಂಧಗಳು

ಉದಾಹರಣೆಗಾಗಿ, ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿತವಾಗಿರುವ ಗ್ರಂಥಗಳಲ್ಲಿ ಕರ್ತೃ, ಕರ್ಮ, ಕರಣ ಮೊದಲಾದ ‘ಕಾರಕ’ಗಳಿಗೆ ಮಹತ್ವದ ಸ್ಥಾನವಿದೆ. ಇಂತಹ ಕಾರಕಗಳು ಸಂಸ್ಕೃತದ ವಾಕ್ಯರಚನೆಯನ್ನು ಸರಿಯಾಗಿ ವರ್ಣಿಸಿ ಹೇಳಲು ಅವಶ್ಯವಾದ ಕಾರಣ, ಅವಕ್ಕೆ ಆ ಭಾಷೆಯ ವ್ಯಾಕರಣ ಪರಂಪರೆಯಲ್ಲಿ ಪ್ರಧಾನವಾದ ಸ್ಥಾನವನ್ನು ಕೊಡುವುದು ಉಚಿತವೆಂದೇ ಹೇಳಬಹುದು.

ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಪರಂಪರೆಯಲ್ಲಿ ಸಿದ್ಧ ವಾಗಿರುವ ಗ್ರಂಥಗಳಲ್ಲಿ ಇಂತಹವೇ ಆದ ಸಬ್ಜೆಕ್ಟ್, ಡೈರೆಕ್ಟ್ ಆಬ್ಜೆಕ್ಟ್, ಎಂಬಂತಹ ‘ವ್ಯಾಕರಣ ಸಂಬಂಧಗಳು’ ಮಹತ್ವದ ಸ್ಥಾನ ಪಡೆದಿವೆ. ಈ ಭಾಷೆಗಳಲ್ಲಿ ಬರುವ ವಿಭಕ್ತಿ ಪ್ರತ್ಯಯ ಇಲ್ಲವೇ ಉಪಸರ್ಗಗಳಿಗೆ ನೇರವಾಗಿ ಅರ್ಥ ಹೇಳಲು ಸಾಧ್ಯವಿಲ್ಲವಾದ ಕಾರಣ, ವಾಕ್ಯಗಳಲ್ಲಿ ಅವು ಎಂತಹ ಕಾರ್ಯ ಗಳನ್ನು ನಡೆಸುತ್ತವೆ ಎಂಬುದನ್ನು ತಿಳಿಸಲು ಇಂತಹ ವ್ಯಾಕರಣ ಸಂಬಂಧಗಳ ಅವಶ್ಯಕತೆಯಿದೆ.

ಆದರೆ, ಕನ್ನಡದ ವಾಕ್ಯರಚನೆಯಲ್ಲಿ ಈ ಸಮಸ್ಯೆಯಿಲ್ಲ. ಅದರ ವಿಭಕ್ತಿ ಪ್ರತ್ಯಯಗಳಿಗೆ ನೇರವಾಗಿ ಅರ್ಥದೊಡನೆ ಸಂಬಂಧವನ್ನು ಕಲ್ಪಿಸಿಕೊಡಲು ಸಾಧ್ಯ ವಿದೆ. ವಾಕ್ಯವು ತಿಳಿಸುವ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಕಾರ್ಯವೇನು ಎಂಬುದನ್ನು ಈ ವಿಭಕ್ತಿ ಪ್ರತ್ಯಯಗಳು ನೇರ ವಾಗಿ ಸೂಚಿಸುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ, ಕನ್ನಡದ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯಗಳ ಅರ್ಥವೇನೆಂಬುದನ್ನು ತಿಳಿಸಲು ಕಾರಕಗಳನ್ನಾಗಲಿ ಇಲ್ಲವೇ ಇತರ ವ್ಯಾಕರಣ ಸಂಬಂಧಗಳನ್ನಾಗಲಿ ಬಳಸುವ ಅವಶ್ಯಕತೆಯಿಲ್ಲ.

ಸಂಸ್ಕೃತ, ಇಂಗ್ಲಿಷ್ ಮೊದಲಾದ ಇತರ ಭಾಷೆಗಳ ವ್ಯಾಕರಣ ಪರಂಪರೆ ಯಲ್ಲಿ ಬರೆದ ಕನ್ನಡ ವ್ಯಾಕರಣಗಳು ಇಂತಹ ಅನವಶ್ಯವಾದ ಕಾರಕಗಳನ್ನು ಇಲ್ಲವೇ ವ್ಯಾಕರಣ ಸಂಬಂಧಗಳನ್ನು ಕನ್ನಡದ ಮೇಲೆ ಹೇರಿ, ಅದರ ವ್ಯಾಕರಣ ತುಂಬಾ ಕ್ಲಿಷ್ಟವಾಗುವಂತೆ ಮಾಡಿವೆ.

ಉದಾಹರಣೆಗಾಗಿ, ಯುರೋಪಿಯನ್ ಭಾಷೆಗಳ ವ್ಯಾಕರಣಗಳಲ್ಲಿ ಬಳಕೆ ಯಾಗುವ ‘ಸಬ್ಜೆಕ್ಟ್’ ಎಂಬ ವ್ಯಾಕರಣ ಸಂಬಂಧವನ್ನು ಕನ್ನಡ ವ್ಯಾಕರಣದಲ್ಲೂ ಅಳವಡಿಸಹೊರಟ ಭಾಷಾವಿಜ್ಞಾನಿಗಳು ಕನ್ನಡದ ನನಗೆ ಮೂರು ಕತೆ ಗೊತ್ತಿದೆ ಎಂಬಂತಹ ವಾಕ್ಯಗಳಲ್ಲಿ ಯಾವುದನ್ನು (ನನಗೆ ಎಂಬುದನ್ನೋ, ಕತೆ ಎಂಬುದನ್ನೋ) ಸಬ್ಜೆಕ್ಟ್ ಎಂಬುದಾಗಿ ಪರಿಗಣಿಸಬೇಕು ಎಂಬ ವಿಷಯದಲ್ಲಿ

ಹಲವು ಸಮಸ್ಯೆಗಳನ್ನೆದುರಿಸಬೇಕಾಗಿದೆ. ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಸಾಧಿಸಿಕೊಟ್ಟಲ್ಲಿ ಇಂತಹ ತೊಡಕುಗಳು ಏಳುವುದಿಲ್ಲ.

Eke →

ಗುಣಪದಗಳು

ಕನ್ನಡದ ವಾಕ್ಯರಚನೆಯಲ್ಲಿ ಉದ್ದ, ಅಗಲ, ದೊಡ್ಡ ಮೊದಲಾದ ಗುಣಪದ ಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ; ಅವು ನಾಮಪದ ಮತ್ತು ಕ್ರಿಯಾಪದ ಗಳಿಗಿಂತ ಭಿನ್ನವಾದ ಬೇರೆಯೇ ಒಂದು ಪದವರ್ಗಕ್ಕೆ ಸೇರುತ್ತವೆ. ಕನ್ನಡ ಭಾಷೆಯ ಮೇಲೆ ರಚಿತವಾಗಿರುವ ವ್ಯಾಕರಣಗಳು ಕನ್ನಡದ ಈ ವೈಶಿಷ್ಟ್ಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಅವಶ್ಯ.

ಸಂಸ್ಕೃತದ ವಾಕ್ಯರಚನೆ ಈ ವಿಷಯದಲ್ಲಿ ಕನ್ನಡಕ್ಕಿಂತ ತೀರ ಭಿನ್ನ ವಾದುದು. ಸಂಸ್ಕೃತದಲ್ಲಿ ಇಂತಹ ಗುಣವಾಚಕ ಪದಗಳಿಗೆ ನಾಮಪದಗಳಿಗಿಂತ ಭಿನ್ನವಾದ ಸ್ಥಾನವಿಲ್ಲ. ಅವು ನಾಮಪದಗಳ ಹಾಗೆಯೇ ಲಿಂಗ, ವಚನ ಮತ್ತು ವಿಭಕ್ತಿ ಪ್ರತ್ಯಯಗಳೊಂದಿಗೆ ಬರುತ್ತಿದ್ದು, ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲ ಬಲ್ಲುವು. ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಹಾಗೆ, ಅವು ನಾಮಪದಗಳನ್ನು ಅವಲಂಬಿಸಿಕೊಂಡಿರುವುದಿಲ್ಲ. ಸಂಸ್ಕೃತ ಭಾಷೆಯ ಈ ವೈಶಿಷ್ಟ್ಯವನ್ನು ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿಸಿರುವ ಗ್ರಂಥಗಳು ಸರಿಯಾಗಿ ಪ್ರತಿ ಬಿಂಬಿಸುತ್ತವೆ.

ಆದರೆ, ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಕನ್ನಡ ವ್ಯಾಕರಣಗಳು ಕನ್ನಡದ್ದೇ ಆದ ವೈಶಿಷ್ಟ್ಯವನ್ನು ವರ್ಣಿಸುವ ಬದಲು, ಅದರ ವಾಕ್ಯರಚನೆ ಸಂಸ್ಕೃತದ ವಾಕ್ಯರಚನೆಯ ಹಾಗೆಯೇ ಇದೆಯೆಂಬ ತಪ್ಪು ಕಲ್ಪನೆ ಬರುವಂತೆ ಮಾಡುತ್ತವೆ. ಸಂಸ್ಕೃತದ ಗುಣಧರ್ಮವನ್ನು ಕನ್ನಡದ ಮೇಲೆ ಹೇರಹೋಗಿ, ಕನ್ನಡ ವ್ಯಾಕರಣ ಅನವಶ್ಯಕವಾಗಿ ಹೆಚ್ಚು ಕ್ಲಿಷ್ಟವಾಗುವಂತೆ ಮಾಡುತ್ತವೆ.

ಕನ್ನಡ ಭಾಷೆ ಇಂತಹ ಹಲವಾರು ವಿಷಯಗಳಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗಿಂತ ತೀರ ಭಿನ್ನವಾಗಿದೆ; ಹಾಗಾಗಿ, ಅದರ ವ್ಯಾಕರಣವನ್ನು ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಯಲ್ಲಿ ಬರೆಯ ಹೋದಾಗ, ಆ ವ್ಯಾಕರಣ ಅನವಶ್ಯಕವಾಗಿ ಹೆಚ್ಚು ಕ್ಲಿಷ್ಟವಾಗುತ್ತದೆ.

ಕನ್ನಡಕ್ಕೆ ಅದರದ್ದೇ ಆದ ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ತನ್ನದೇ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಗ್ರಂಥಗಳು ಕನ್ನಡದ ವಾಕ್ಯರಚನೆಯನ್ನು ಸರಳವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ವಿವರಿಸಿ ಹೇಳಬಲ್ಲುವು. ಕನ್ನಡ ವ್ಯಾಕರಣ ವನ್ನು ವರ್ಣಿಸಹೊರಡುವವರೆಲ್ಲ ಈ ದಿಕ್ಕಿನಲ್ಲಿ ಸಂಶೋಧನೆ ನಡೆಸುವುದು ಅವಶ್ಯ.

Eke →

೪.೪ ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಕಳೆದ ಇಪ್ಪತ್ತನೇ ಶತಮಾನದಲ್ಲಿ ಕನ್ನಡ ವ್ಯಾಕರಣದ ಮೇಲೆ ಎಂತಹ ಸಂಶೋಧನೆಗಳೆಲ್ಲ ನಡೆದಿದ್ದುವು ಎಂಬುದನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಆದರೆ, ಈ ಪರಿಶೀಲನೆಯನ್ನು ನಡೆಸುವ ಮೊದಲು ಸಂಶೋಧನೆಯೆಂದರೇನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಯಿದೆ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರು ಬಹಳ ಮಂದಿ ಇರುವ ರಾದರೂ ಜಾಗತಿಕ ಮಟ್ಟದ ಸಂಶೋಧನೆಗಳು ನಮ್ಮಲ್ಲಿ ಹೆಚ್ಚೇನೂ ನಡೆಯು ತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದಕ್ಕೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಮಾರ್ಗದರ್ಶನ ಮಾಡುವವರಲ್ಲಿ ಹೆಚ್ಚಿನವರೂ ಸಂಶೋಧನೆ ಎಂದರೇನು, ಸಂಶೋಧನೆ ಮತ್ತು ಕಲಿಯುವಿಕೆಗಳ ನಡುವೆ ಎಂತಹ ವ್ಯತ್ಯಾಸ ವಿದೆ ಎಂಬುದನ್ನು ಸರಿಯಾಗಿ ತಿಳಿಯದಿರುವುದೇ ಮುಖ್ಯ ಕಾರಣವೆಂದು ನನಗೆ ಅನಿಸುತ್ತದೆ.

ಈ ವ್ಯತ್ಯಾಸವನ್ನು ಮೊದಲಿಗೆ ಸ್ವಲ್ಪ ವಿವರಿಸಿ, ಆಮೇಲೆ ಕನ್ನಡ ವ್ಯಾಕರಣದ ಮೇಲೆ ಕಳೆದ ಶತಮಾನದಲ್ಲಿ ನಡೆದ ಸಂಶೋಧನೆಗಳು ಹೇಗೆ ದಾರಿ ತಪ್ಪಿವೆ ಎಂಬುದನ್ನು ತೋರಿಸಬಯಸುತ್ತೇನೆ.

Eke →

ಕಲಿಯುವಿಕೆ ಮತ್ತು ಸಂಶೋಧನೆ

ಯಾವುದಾದರೂ ಒಂದು ವಿಷಯವನ್ನು ಕಲಿಯುವುದಕ್ಕೂ, ಅದರ ಮೇಲೆ ಸಂಶೋಧನೆ ಮಾಡುವುದಕ್ಕೂ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ: ನಾವು ಎತ್ತಿಕೊಂಡ ವಿಷಯದ ಮೇಲೆ ಬೇರೆ ಬೇರೆ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ವಿದ್ವಾಂಸರಲ್ಲಿ ಸಾಕಷ್ಟು ಮಾಹಿತಿಗಳು ಸಂಗ್ರಹವಾಗಿರುತ್ತವೆ. ಅಂತಹ ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿ, ವಿದ್ವಾಂಸರು ಹೇಳುವುದನ್ನು ಕೇಳಿ, ಆ ವಿಷಯದ ಕುರಿತು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಕಲಿಯುವುದು ಎಂದು ಹೆಸರು.

ಸಂಶೋಧನೆ ಎಂಬುದು ಇದಕ್ಕಿಂತ ತೀರ ಭಿನ್ನವಾದುದು: ಒಂದು ವಿಷಯದ ಕುರಿತು ಸಮಾಜದಲ್ಲಿ ಸಂಗ್ರಹವಾಗಿರುವ ಮಾಹಿತಿಯಲ್ಲಿ ತಪ್ಪುಗಳು ಇಲ್ಲವೇ ಅಸಾಂಗತ್ಯಗಳು ಏನಾದರೂ ಇವೆಯೇ, ಮತ್ತು ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಸಂಶೋಧನೆ.

ಈ ವ್ಯತ್ಯಾಸದ ಪ್ರಕಾರ, ಒಂದು ವಿಷಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ನಮಗೆ ಅಧ್ಯಾಪಕರ ಸಹಾಯ ಬೇಕು; ಆದರೆ, ಒಂದು ವಿಷಯದ ಕುರಿತು

ಸಂಶೋಧನೆ ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ಮಾರ್ಗದರ್ಶಕರ’ ಸಹಾಯ ಬೇಕಲ್ಲದೆ ಅಧ್ಯಾಪಕರ ಸಹಾಯ ಬೇಕಾಗಿಲ್ಲ. ಕಲಿಯುವವರ ಮಟ್ಟಿಗೆ ಅಧ್ಯಾಪಕರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯ ಗಳನ್ನೆಲ್ಲ ನಿವಾರಿಸುವ ಶಕ್ತಿ ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಕಲಿಯುವವರು ಮಾಡಬೇಕಾಗಿರುವ ಮುಖ್ಯ ಕೆಲಸ.

ಆದರೆ, ಸಂಶೋಧಕರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ಮಾರ್ಗದರ್ಶಕರು ಅವರಿಗೆ ಯಾವ ರೀತಿಯಲ್ಲಿ ಸಂಶೋಧನೆ ಮಾಡಬೇಕು ಎಂಬುದನ್ನು ತಿಳಿಸಬಲ್ಲರಲ್ಲದೆ, ಸಂಶೋಧನೆಯ ಫಲಿತಾಂಶ ಏನಿರಬಹುದು, ಇಲ್ಲವೇ ಏನಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಸಂಶೋಧನೆ ಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಸಂಶೋಧಕರ ಮುಖ್ಯ ಕೆಲಸ.

ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದ ಜ್ಞಾನರಾಶಿಯನ್ನು ಹೆಚ್ಚಿಸುವುದೇ ಸಂಶೋಧಕರ ಕೆಲಸ.

ಕಲಿಯುವಿಕೆಗೂ ಸಂಶೋಧನೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಸುವ ಅಧ್ಯಾಪಕರಿಗೂ ಸಂಶೋಧನೆಗೆ ದಾರಿ ತೋರಿಸುವ ಮಾರ್ಗದರ್ಶಕರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಅಧ್ಯಾಪಕನೊಬ್ಬ ತಾನು ಕಲಿಸುವ ವಿಷಯ ವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಷಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಧೈರ್ಯದಿಂದ ವಿದ್ಯಾರ್ಥಿಗಳಿಗೆ ಕಲಿಸಲಾರ.

ಆದರೆ, ಸಂಶೋಧನೆ ಮಾಡುವವರು, ಮತ್ತು ಸಂಶೋಧನೆಗೆ ಮಾರ್ಗ ದರ್ಶನ ಮಾಡುವವರು ಯಾವ ಹೇಳಿಕೆಯನ್ನೂ ಸಂಪೂರ್ಣವಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡಿದಾಗ ಮಾತ್ರ, ಅವರ ಸಂಶೋಧನೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ವಿದ್ವಾಂಸರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಸಿದ್ಧರಿರಬೇಕು.

ಈ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ರೇಂಕ್ ಗಳಿಸುವ ವಿದ್ಯಾರ್ಥಿ ಉತ್ತಮ ಸಂಶೋಧಕನಾಗಬೇಕೆಂದೇನಿಲ್ಲ. ಹಾಗೆ ಆಗುವುದೂ ಕಷ್ಟಸಾಧ್ಯ. ಇದೇ ರೀತಿ ಯಲ್ಲಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕ ಉತ್ತಮ ಮಾರ್ಗದರ್ಶಕ ನಾಗುವುದೂ ಕಷ್ಟಸಾಧ್ಯ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಭಾವ ಸಂಶೋಧನೆಗೆ ಮತ್ತು ಮಾರ್ಗದರ್ಶನಕ್ಕೆ ಬೇಕಾಗುವ ಮನೋ ಭಾವಕ್ಕಿಂತ ತೀರ ಭಿನ್ನವಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡ ಬೇಕಾಗುವುದರಿಂದ, ಸಂಶೋಧನೆಯೆಂಬ ಹೆಸರಿನಲ್ಲಿ ಕಲಿಯುವಿಕೆ ಮಾತ್ರ

ನಡೆಯುವುದು ಕಾಣಿಸುತ್ತದೆ. ಹೆಚ್ಚಿನವರಿಗೂ ಈ ಎರಡು ಭಿನ್ನ ಭಿನ್ನವಾದ ಕೆಲಸಗಳನ್ನು ಒಟ್ಟಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪ್ರಬಂಧವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ಆಶ್ಚರ್ಯ ವಾಯಿತು: ಮೂವತ್ತು ವರ್ಷಗಳಷ್ಟು ಹಳೆಯ ಸಿದ್ಧಾಂತಗಳನ್ನು ಬಳಸಿ ಅವರು ಆ ಪ್ರಬಂಧವನ್ನು ಬರೆದಿದ್ದರು. ಆ ಸಿದ್ಧಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು.

ಇದು ಯಾಕೆ ಹೀಗೆ ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ಮಾರ್ಗದರ್ಶಿಗಳು ತಮ್ಮ ಡಾಕ್ಟರೇಟ್ ಪ್ರಬಂಧದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪ್ರಬಂಧ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪ್ರಬಂಧಕ್ಕೆ ಅವರ ಒಪ್ಪಿಗೆ ಸಿಗುವುದು ಅಸಂಭವ”.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಸಂಶೋಧನೆಗಳು ನಡೆಯ ದಿರುವುದಕ್ಕೆ ಒಂದು ಮುಖ್ಯವಾದ ಕಾರಣವನ್ನು ಈ ಮೇಲಿನ ಘಟನೆ ಬಹಳ ಸ್ಪಷ್ಟವಾಗಿ ಸೂಚಿಸುತ್ತದೆ. ತಮ್ಮ ಮಾರ್ಗದರ್ಶನದಲ್ಲಿ ಪ್ರಬಂಧಗಳನ್ನು ಬರೆಯು ತಿರುವ ಸಂಶೋಧಕರು ತಾವು ಬರೆದಿರುವ ಪ್ರಬಂಧಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ಅಧ್ಯಾಪಕರಿರುವಷ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸುವುದು ಅಸಾಧ್ಯವೆಂದೇ ಹೇಳ ಬಹುದು. ತನ್ನ ಶಿಷ್ಯನಿಂದ ಪರಾಭವವನ್ನು ಬಯಸುವ ಅಧ್ಯಾಪಕರು ಮಾತ್ರ ನಿಜಕ್ಕೂ ಸಂಶೋಧನೆಗೆ ಮಾರ್ಗದರ್ಶಕರಾಗಬಲ್ಲರು. ಅಂತಹ ಅಧ್ಯಾಪಕರು ನಮ್ಮಲ್ಲಿ ಬೆರಳೆಣಿಕೆಯಷ್ಟು ಇಲ್ಲ ಎಂಬುದು ಬೇಸರದ ಸಂಗತಿ.

ಕನ್ನಡ ವ್ಯಾಕರಣದ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯ. ಕೇಶಿರಾಜನೇ ಮೊದಲಾದ ಕನ್ನಡ ವೈಯಾಕರಣಿಗಳು ಏನು ಹೇಳಿದ್ದಾರೆ ಎಂಬುದನ್ನು ಚರ್ಚಿಸುವುದು ವ್ಯಾಕರಣದ ಕಲಿಯುವಿಕೆಯಲ್ಲದೆ ಸಂಶೋಧನೆಯಲ್ಲ. ಅವರು ಬರೆದಿರುವ ವ್ಯಾಕರಣ ನಿಯಮಗಳಲ್ಲಿ ತಪ್ಪು ಇಲ್ಲವೇ ಅಸಾಂಗತ್ಯಗಳೇನಾದರೂ ಇವೆಯೇ? ಇದ್ದರೆ ಅವನ್ನು ನಿವಾರಿಸುವುದು ಹೇಗೆ? ಅವರು ಹೇಳದೇ ಇರುವಂತಹ ಹೊಸ ವ್ಯಾಕರಣಾಂಶಗಳೇನಾದರೂ ಇವೆಯೇ? ಅವರು ಬರೆ ದಿರುವ ವ್ಯಾಕರಣ ನಿಯಮಗಳನ್ನು ಹೊಸಗನ್ನಡಕ್ಕೆ ಹೊಂದಿಸಿಕೊಳ್ಳಲು ಅವು ಗಳಲ್ಲಿ ಎಂತಹ ಬದಲಾವಣೆಗಳನ್ನು ಮಾಡಿಕೊಳ್ಳಬೇಕು? ಇಂತಹ ವಿಷಯಗಳ ಕುರಿತು ಚರ್ಚೆ ನಡೆದಲ್ಲಿ ಮಾತ್ರ ಈ ವ್ಯಾಕರಣಗಳ ಮೇಲೆ ಸಂಶೋಧನೆ ನಡೆದಿದೆಯೆಂದು ಹೇಳಬಹುದು.

ಆದರೆ, ಕನ್ನಡ ವ್ಯಾಕರಣದ ಕುರಿತಾಗಿ ಅಂತಹ ಚರ್ಚೆ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ನಡೆದಿಲ್ಲ ಮತ್ತು ನಡೆಯುತ್ತಿಲ್ಲವೆಂದೇ ಹೇಳಬಹುದು.

ಕೇಶಿರಾಜನ ನಿಯಮಗಳಲ್ಲಿ ತಪ್ಪಿದೆಯೆಂದು ಹೇಳುವುದೇ ಮಹಾಪಾಪ ಎಂದು ಭಾವಿಸುವವರಿಗೆ ನಿಜಕ್ಕೂ ಸಂಶೋಧನೆ ಮಾಡುವ ಅಧಿಕಾರವೇ ಇಲ್ಲ.

Eke →

ಶತಮಾನದ ವ್ಯಾಕರಣಗಳು

ಕಳೆದ ಶತಮಾನದಲ್ಲಿ ಕನ್ನಡ ವ್ಯಾಕರಣದ ಮೇಲೆ ಹಲವಾರು ಪುಸ್ತಕಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಆದರೆ, ಇವುಗಳಲ್ಲಿ ಸಂಶೋಧನೆಯ ಮೂಲಕ ಕನ್ನಡ ವ್ಯಾಕರಣದ ಕುರಿತು ನಮ್ಮ ಜ್ಞಾನ ಹೆಚ್ಚಾಗುವಂತೆ ಮಾಡುವ ಪುಸ್ತಕಗಳು ಮತ್ತು ಲೇಖನಗಳು ಬಹಳ ಕಡಿಮೆ. ಹೆಚ್ಚಿನವೂ ಕೇಶಿರಾಜನೇ ಮೊದಲಾದ ಹಿಂದಿನ ವೈಯಾಕರಣಿಗಳು ಹೇಳಿದ ವಿಷಯವನ್ನೇ ಬೇರೆ ಬೇರೆ ರೀತಿಯಲ್ಲಿ ವಿವರಿಸಿ ಹೇಳಲು ನಡೆಸಿದ ಪ್ರಯತ್ನಗಳು.

ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಬಳಸುವ ಬದಲು ಯುರೋಪಿನ ಲ್ಯಾಟಿನ್, ಗ್ರೀಕ್ ಮೊದಲಾದ ಭಾಷೆಗಳ ವ್ಯಾಕರಣ ಪರಂಪರೆಯನ್ನಾಗಲಿ, ಇಲ್ಲವೇ ಇಂಗ್ಲೆಂಡ್ ಮತ್ತು ಅಮೆರಿಕದ ಇಂಗ್ಲಿಷ್ ವ್ಯಾಕರಣ ಪರಂಪರೆ ಯನ್ನಾಗಲಿ ಬಳಸಿ ರಚಿಸಿದ ವ್ಯಾಕರಣ ಗ್ರಂಥಗಳು ಮತ್ತು ಲೇಖನಗಳು ಹಲವು ಈ ಶತಮಾನದಲ್ಲಿ ಸಿದ್ಧವಾಗಿವೆ. ಆದರೆ, ಈ ಪ್ರಯತ್ನಗಳಲ್ಲೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ಕಂಡುಹಿಡಿಯುವ ಸಂಶೋಧಕ ಪ್ರವೃತ್ತಿ ಕಾಣಿಸು ವುದು ಬಹಳ ಅಪರೂಪವೆಂದೇ ಹೇಳಬಹುದು.

ಪ್ರೌಢಶಾಲೆಗಳಲ್ಲಿ ವ್ಯಾಕರಣವನ್ನು ಬೋಧಿಸುವುದಕ್ಕಾಗಿ ಹಲವಾರು ಮಂದಿ ಅಧ್ಯಾಪಕರು ಮತ್ತು ಇತರ ಲೇಖಕರು ಚಿಕ್ಕ ಚಿಕ್ಕ ವ್ಯಾಕರಣ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಇವೆಲ್ಲವೂ ಕೇಶಿರಾಜನೇ ಮೊದಲಾದ ಹಿಂದಿನ ಕನ್ನಡ ವೈಯಾಕರಣಿಗಳು ತೋರಿಸಿದ ದಾರಿಯಲ್ಲೇ ನಡೆದಿವೆಯಾದ ಕಾರಣ, ಇವುಗಳ ರಚನೆಯ ಹಿಂದೆ ಸಂಶೋಧನೆಯೇನೂ ಇಲ್ಲ. ಇಂತಹ ಪುಸ್ತಕಗಳು ಪಠ್ಯಪುಸ್ತಕ ಸಮಿತಿಯು ಎಳೆದಿರುವ ಗೆರೆಯೊಳಗೇನೇ ಉಳಿಯುವ ಅವಶ್ಯಕತೆಯಿದೆಯಾದ ಕಾರಣ, ಇವುಗಳ ತಯಾರಿಕೆಯಲ್ಲಿ ಸಂಶೋಧನೆಯನ್ನು ಕಾಣಲು ಸಾಧ್ಯವೂ ಇಲ್ಲ.

ಇದಲ್ಲದೆ, ಹಳೆಗನ್ನಡ ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಎದು ರಾಗುವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುವ ಲೇಖನ ಮತ್ತು ಗ್ರಂಥಗಳೂ ಕೆಲವು ಪ್ರಕಟವಾಗಿವೆ. ಇವು ವ್ಯಾಖ್ಯಾನಕಾರನ ದೃಷ್ಟಿಕೋನವನ್ನು ಅವಲಂಬಿಸು ತ್ತವೆಯಲ್ಲದೆ, ಒಬ್ಬ ಸಂಶೋಧಕನ ದೃಷ್ಟಿಕೋನವನ್ನು ಅವಲಂಬಿಸುವುದಿಲ್ಲ. ಹಾಗಾಗಿ, ಇವುಗಳಲ್ಲೂ ಕನ್ನಡ ವ್ಯಾಕರಣದ ಕುರಿತಾಗಿ ಹೊಸ ವಿಷಯಗಳ ಪ್ರಸ್ತಾಪವನ್ನು ಕಾಣುವುದು ಕಷ್ಟಸಾಧ್ಯ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪದವಿ (ಪಿ.ಹೆಚ್.ಡಿ)ಗಾಗಿ ಸಿದ್ಧ ವಾಗಿರುವ ಪ್ರಬಂಧಗಳು, ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆದವುಗಳು, ಹಲವಿವೆ. ಇವುಗಳಲ್ಲಿ ಹಳೆಗನ್ನಡ (ಸಂಸ್ಕೃತ) ವ್ಯಾಕರಣ ಪರಂಪರೆಯನ್ನು

ಬಿಟ್ಟುಕೊಟ್ಟು, ಯುರೋಪಿನ ಇಲ್ಲವೇ ಅಮೆರಿಕದ ವ್ಯಾಕರಣ ಪರಂಪರೆಯನ್ನು ಬಳಸಿರುವುದು ಕಂಡುಬರುತ್ತದೆ. ಆದರೆ, ಈ ವ್ಯಾಕರಣ ಪರಂಪರೆಗೂ ಲ್ಯಾಟಿನ್, ಗ್ರೀಕ್, ಇಂಗ್ಲಿಷ್ ಮೊದಲಾದ ಇಂಡೋ-ಯುರೋಪಿಯನ್ ಭಾಷೆ ಗಳೇ ಆಧಾರವಾಗಿರುವ ಕಾರಣ, ಕನ್ನಡದ ಮಟ್ಟಿಗೆ ಇದು ಸಂಸ್ಕೃತ ವ್ಯಾಕರಣ ಪರಂಪರೆಯಷ್ಟೇ ಅಸಮರ್ಪಕವೆಂದು ಹೇಳಬಹುದು.

ಕನ್ನಡ ಭಾಷೆ ಈ ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ. ಅದರ ವ್ಯಾಕರಣ ಇಂಡೋ-ಯುರೋಪಿಯನ್ ಭಾಷೆಗಳ ವ್ಯಾಕರಣಕ್ಕಿಂತ ತೀರ ಭಿನ್ನವಾದುದು. ಕನ್ನಡ ವ್ಯಾಕರಣದ ಮೇಲೆ ರಚಿತವಾಗಿರುವ ಈ ಪ್ರಬಂಧಗಳು ಆ ವ್ಯಾಕರಣ ಒಂದು ಹೊಸ ದಾರಿಯಲ್ಲಿ ನಡೆಯುವಂತೆ ಮಾಡಿರುವುವೇನೋ ನಿಜ. ಆದರೆ, ಈ ಹೊಸ ದಾರಿಯೂ, ಹಳೇ ದಾರಿಯ ಹಾಗೆ, ಕನ್ನಡದ ಮಟ್ಟಿಗೆ ಒಂದು ತಪ್ಪು ದಾರಿಯಲ್ಲದೆ ಬೇರೆನಲ್ಲ.

Eke →

ಕೇಶಿರಾಜನ ವ್ಯಾಕರಣ

ಕೇಶಿರಾಜನ ಕಾಲದಲ್ಲಿ ಕನ್ನಡವನ್ನು ಬಹುಶಃ ಪ್ರಾಕೃತ, ಪಾಲಿ, ಅಪಭ್ರಂಶ ಮೊದಲಾದವುಗಳ ಹಾಗೆ ಸಂಸ್ಕೃತದ ಒಂದು ವಿಕೃತ ರೂಪವೆಂದು ಪರಿಗಣಿಸು ತಿದ್ದಿರಬೇಕು. ಇವತ್ತಿಗೂ ಇಂತಹ ಅಭಿಪ್ರಾಯವನ್ನು ಹೊಂದಿರುವ ಮಂದಿ ನಮ್ಮಲ್ಲಿ ಕೆಲವರಿದ್ದಾರೆ.

ಆದರೆ, ಹತ್ತೊಂಬತ್ತನೇ ಶತಮಾನದ ಕೊನೆಯಲ್ಲೇನೇ ಈ ಅಭಿಪ್ರಾಯ ತಪ್ಪು ಎಂಬ ವಿಷಯ ಸಿದ್ಧವಾಗಿತ್ತು. ಸಂಸ್ಕೃತ ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುವುದೆಂದೂ, ಕನ್ನಡ ಅದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾಕುಟುಂಬಕ್ಕೆ ಸೇರುವುದೆಂದೂ ಆ ಸಮಯದಲ್ಲಿ ವಿದ್ವಾಂಸರು ತೋರಿಸಿಕೊಟ್ಟಿದ್ದರು. ಈ ಕಾರಣಕ್ಕಾಗಿ, ಕನ್ನಡ ವ್ಯಾಕರಣ ಸಂಸ್ಕೃತವೇ ಮೊದಲಾದ ಇಂಡೋ-ಯುರೋಪಿಯನ್ ಭಾಷೆಗಳ ವ್ಯಾಕರಣಕ್ಕಿಂತ ಭಿನ್ನ ವಾಗಿರುವುದು ಅನಿವಾರ್ಯ. ಆದರೆ, ಯಾವ ರೀತಿಯಲ್ಲೆಲ್ಲ ಅದು ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನ ಕನ್ನಡದ ಮಟ್ಟಿಗೆ ಇನ್ನೂ ಸರಿಯಾಗಿ ನಡೆದಿಲ್ಲ.

ಕೇಶಿರಾಜನ ಶಬ್ದಮಣಿದರ್ಪಣ ಎಂಬುದು ಸಂಸ್ಕೃತದ ವ್ಯಾಕರಣ ನಿಯಮ ಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ನಡೆಸಿರುವ ಪ್ರಯತ್ನ ಮಾತ್ರ. ಹಾಗೆ ಅಳವಡಿಸಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲವೆಂದು ತೋರಿದಾಗ ಮಾತ್ರ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ನಿಯಮಗಳನ್ನು ತಯಾರಿಸಿಕೊಡುವ ಪ್ರಯತ್ನವನ್ನು ಈ ವ್ಯಾಕರಣದಲ್ಲಿ ಮಾಡಲಾಗಿದೆ.

ಆದರೆ ಹೀಗೆ ಮಾಡಿದುದರಿಂದಾಗಿ, ಆ ವ್ಯಾಕರಣ ಕನ್ನಡದ ಮಟ್ಟಿಗೆ ಒಂದು ಗಂಟು ಗಂಟಾಗಿರುವ, ಮತ್ತು ಅನವಶ್ಯಕವಾಗಿ ತುಂಬಾ ಕ್ಲಿಷ್ಟವಾಗಿರುವ

ವ್ಯಾಕರಣವಾಗಿದೆ. ಹಲವೆಡೆಗಳಲ್ಲಿ ಅದು ಸಂಸ್ಕೃತ ವ್ಯಾಕರಣದ ನಿಯಮಗಳ ಮೇಲೆ ಕನ್ನಡ ನಿಯಮಗಳ ತೇಪೆ ಹಾಕಿರುವ ಹಾಗಿದೆ.

ಹೊಸಗನ್ನಡದ ಮಟ್ಟಿಗೆ ಹೇಳುವುದಾದರೆ, ಈ ವ್ಯಾಕರಣವನ್ನು ಸಂಪೂರ್ಣ ವಾಗಿ ಬಿಟ್ಟುಕೊಟ್ಟು, ಕನ್ನಡದ್ದೇ ಆದ ಹೊಸದೊಂದು ವ್ಯಾಕರಣವನ್ನು ಸಿದ್ಧಪಡಿಸುವುದೇ ನಮಗೆ ಉಳಿದಿರುವ ದಾರಿ.

ಹಳೆಗನ್ನಡದ ಈ ವ್ಯಾಕರಣವನ್ನು ಸಂಶೋಧಕನ ದೃಷ್ಟಿಯಿಂದ ಪರೀಕ್ಷಿಸಿದೆ ವಾದರೆ, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಭಾಗದಲ್ಲಿ ಕನ್ನಡಕ್ಕೆ ಅವಶ್ಯವಲ್ಲದ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಬಹಳ ಕಷ್ಟದಿಂದ ಕನ್ನಡ ಉದಾಹರಣೆ ಗಳನ್ನು ಕೊಟ್ಟು ವಿವರಿಸಲು ಪ್ರಯತ್ನಿಸಿರುವುದನ್ನು ಕಾಣಬಹುದು. ಉಳಿದ ಅರ್ಧದ ಸ್ವಲ್ಪ ಭಾಗದಲ್ಲಿ ಸಂಸ್ಕೃತದಲ್ಲಿ ಇಲ್ಲದ, ಮತ್ತು ಕನ್ನಡದಲ್ಲಿ ಇವೆ ಯೆಂದು ಭ್ರಮಿಸಿರುವ ವ್ಯಾಕರಣ ನಿಯಮಗಳನ್ನು ಕಾಣಬಹುದು. ಇನ್ನು ಸ್ವಲ್ಪ ಭಾಗದಲ್ಲಿ ಹಳೆಗನ್ನಡಕ್ಕೆ ಅನ್ವಯಿಸುವ, ಮತ್ತು ಹೊಸಗನ್ನಡಕ್ಕೆ ಅನ್ವಯಿಸ ದಿರುವ ನಿಯಮಗಳಿವೆ. ಹಾಗಾಗಿ, ಈ ವ್ಯಾಕರಣದಲ್ಲಿ ನಿಜಕ್ಕೂ ಹೊಸಗನ್ನಡಕ್ಕೆ ಅನ್ವಯಿಸುವ ನಿಯಮಗಳಿರುವ ಭಾಗ ಬಹಳ ಚಿಕ್ಕದು.

ಉದಾಹರಣೆಗಾಗಿ, ಕನ್ನಡದ ಸಮಾಸಗಳನ್ನು ಈ ವ್ಯಾಕರಣ ನೇರವಾಗಿ ವರ್ಣಿಸಲು ಪ್ರಯತ್ನಿಸುವುದಿಲ್ಲ. ಇದಕ್ಕೆ ಬದಲು, ಸಂಸ್ಕೃತದ ಆರು ಸಮಾಸ ಗಳನ್ನು (ತತ್ಪುರುಷ, ಕರ್ಮಧಾರಯ, ದ್ವಿಗು, ಅವ್ಯಯೀಭಾವ, ದ್ವಂದ್ವ, ಮತ್ತು ಬಹುವ್ರೀಹಿ ಎಂಬವುಗಳನ್ನು) ಹಾಗೆಯೇ ಉಳಿಸಿಕೊಂಡು, ಅನಂತರ ಈ ಆರು ಸಮಾಸಗಳಲ್ಲಿ ಸೇರದಿರುವ ಸಮಸ್ತಪದಗಳಿಗಾಗಿ ಮಾತ್ರ, ಇನ್ನೆರಡು ಸಮಾಸ ಗಳನ್ನು (ಗಮಕ ಮತ್ತು ಕ್ರಿಯಾಸಮಾಸ ಎಂಬವುಗಳನ್ನು) ಹೊಸದಾಗಿ ಸೇರಿಸಿ ಕೊಳ್ಳುತ್ತದೆ. ನಿಜಕ್ಕೂ ಕನ್ನಡದ ಸಮಸ್ತಪದಗಳನ್ನು ವರ್ಣಿಸಲು ಈ ತೇಪೆ ಕೆಲಸ ಅವಶ್ಯವಿಲ್ಲ. ನೇರವಾಗಿ ಕನ್ನಡ ಸಮಾಸಗಳು ಎಂತಹವು ಎಂಬುದಾಗಿ ವರ್ಣನೆ ಯೊಂದನ್ನು ಕೊಟ್ಟಿದ್ದರೆ ಸಾಕಾಗುತ್ತಿತ್ತು.

ಸಂಸ್ಕೃತದ ಸಮಸ್ತಪದಗಳನ್ನು ಅವುಗಳ ಅಂಗಗಳಾಗಿ ಬಂದಿರುವ ಪದ ಗಳಲ್ಲಿ ಪ್ರಧಾನಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸ ಬೇಕಾಗುತ್ತದೆ. ಆದರೆ, ಕನ್ನಡದ ಹೆಚ್ಚಿನ ಸಮಸ್ತಪದಗಳಲ್ಲೂ ಎರಡನೆಯ ಅಂಗವೇ ಪ್ರಧಾನಪದವಾಗಿದೆಯಾದ ಕಾರಣ, ಅವನ್ನು ಈ ವಿಷಯದ ಆಧಾರದ ಮೇಲೆ ವಿಂಗಡಿಸಿದಲ್ಲಿ ಅದು ಸಮರ್ಪಕವಾದ ವಿಭಜನೆಯಾಗಲಾರದು.

ಇದಲ್ಲದೆ, ಸಂಸ್ಕೃತದಲ್ಲಿ ನಾಮಪದಗಳನ್ನು ಮಾತ್ರ ಸಮಸ್ತಪದಗಳಲ್ಲಿ ಬಳಸಲು ಸಾಧ್ಯ. ಅವ್ಯಯಗಳೂ ಅವುಗಳಲ್ಲಿ ಬರಬಲ್ಲುವಾದರೂ, ಅವನ್ನು ಸಂಸ್ಕೃತ ವ್ಯಾಕರಣಗಳಲ್ಲಿ ನಾಮಪದಗಳೆಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ಬದಲು, ಕನ್ನಡದಲ್ಲಿ ಸಮಸ್ತಪದಗಳ ಮೊದಲನೆಯ ಅಂಗವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳು ಬರಬಲ್ಲುವು. ಹಾಗಾಗಿ, ಕನ್ನಡದ ಸಮಸ್ತಪದಗಳ ವಿಭಜನೆಗೆ (ಮತ್ತು ಬೇರೆ ದ್ರಾವಿಡ

ನುಡಿಗಳ ಸಮಸ್ತಪದಗಳ ವಿಭಜನೆಗೆ) ಅವುಗಳ ಮೊದಲ ಪದವಾಗಿ ಎಂತಹ ಪದ ಬಂದಿದೆ ಎಂಬುದೇ ಸರಿಯಾದ ಆಧಾರವಾಗಬಲ್ಲುದು.

ಕನ್ನಡದಲ್ಲಿ ನಾಮಪದಗಳು ಮತ್ತು ಗುಣಪದಗಳು ಎಂಬ ಎರಡು ಪದ ವರ್ಗಗಳಿಗೆ ಸೇರುವ ಪದಗಳಿವೆ; ಆದರೆ, ಸಂಸ್ಕೃತದಲ್ಲಿ ಈ ಎರಡು ಬಗೆಯ ಪದಗಳೂ ನಾಮಪದವೆಂಬ ಒಂದೇ ಪದವರ್ಗದಲ್ಲಿ ಬರುತ್ತವೆ. ಕನ್ನಡದಲ್ಲಿ ಗುಣಪದಗಳನ್ನು, ಕೃದಂತಗಳನ್ನು, ಮತ್ತು ಸಂಖ್ಯಾವಾಚಕ ಪದಗಳನ್ನು ನೇರ ವಾಗಿ ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದದೊಂದಿಗೆ ಬಳಸಬಲ್ಲೆವು. ಆದರೆ, ಸಂಸ್ಕೃತದಲ್ಲಿ ಇವಕ್ಕೆ ಸಮನಾದ ಪದಗಳನ್ನು ನಾಮ ಪದಗಳೊಂದಿಗೆ ಬಳಸಬೇಕಿದ್ದಲ್ಲಿ, ಆ ಪದಗಳೊಂದಿಗೆ ಬರುವ ವಿಭಕ್ತಿ-ವಚನ ಪ್ರತ್ಯಯಗಳನ್ನು ಅವಕ್ಕೂ ಸೇರಿಸಬೇಕಾಗುತ್ತದೆ.

ಉದಾಹರಣೆಗಾಗಿ, ಕೃಷ್ಣನ ಸರ್ಪಣ ‘ಕಪ್ಪು ಹಾವಿನಿಂದ’ ಎಂಬುದರಲ್ಲಿ ತೃತೀಯಾ-ಏಕವಚನದ ವಿಭಕ್ತಿ ಪ್ರತ್ಯಯ ಸರ್ಪ ಎಂಬ ನಾಮಪದದೊಂದಿಗೆ ಮಾತ್ರವಲ್ಲದೆ ಕೃಷ್ಣ ಪದದೊಂದಿಗೂ ಬಂದಿದೆ. ಆದರೆ, ಕನ್ನಡದಲ್ಲಿ ಈ ರೀತಿ *ಕಪ್ಪಿನಿಂದ ಹಾವಿನಿಂದ ಎಂದು ಹೇಳಲು ಬರುವುದಿಲ್ಲ.

ಸಂಸ್ಕೃತದಲ್ಲಿ ಕೃಷ್ಣ ಎಂಬ ಪದವನ್ನು ವಿಭಕ್ತಿ ಪ್ರತ್ಯಯವಿಲ್ಲದೆ ಕೃಷ್ಣ ಸರ್ಪಣ ಎಂಬುದರಲ್ಲಿರುವ ಹಾಗೆ ಬಳಸಿದಾಗ, ಅಲ್ಲಿ ವಿಭಕ್ತಿಲೋಪವಾಗಿ ಸಮಾಸವಾಗಿದೆಯೆಂದು ಹೇಳಲು ಬರುತ್ತದೆ; ಆದರೆ, ಕನ್ನಡದ ಕಪ್ಪುಹಾವು ಎಂಬುದರಲ್ಲಿ ಈ ರೀತಿ ವಿಭಕ್ತಿ ಲೋಪ ಆಗಿಲ್ಲವಾದ ಕಾರಣ (ಅಲ್ಲಿ ಮೊದಲಿಗೇನೇ ವಿಭಕ್ತಿ ಪ್ರತ್ಯಯವಿರಲಿಲ್ಲವಾದ ಕಾರಣ) ಸಮಾಸವಾಗಿದೆಯೆಂದು ಹೇಳಲು ಯಾವ ಆಧಾರವೂ ಇಲ್ಲ. ಆದರೆ, ಇಂತಹ ಕಡೆಗಳಲ್ಲಿ ಸಮಾಸ ವಾಗಿದೆಯೆಂದು ಕನ್ನಡದ ವೈಯಾಕರಣಿಗಳು ಭ್ರಮಿಸಿದ್ದಾರೆ.

ಕೃದಂತ, ಸರ್ವನಾಮ ಮತ್ತು ಸಂಖ್ಯಾವಾಚಕಗಳ ಬಳಕೆಯೂ ಇದೇ ರೀತಿ ಯದು. ಸಂಸ್ಕೃತದಲ್ಲಿ ಮೃತೇನ ಸರ್ಪಣ ಎಂಬಲ್ಲಿ, ಇಲ್ಲವೇ ತಸ್ಮಾತ್ ಘಟಾತ್ ಎಂಬಲ್ಲಿ ವಿಭಕ್ತಿ ಪ್ರತ್ಯಯ ಎರಡು ಪದಗಳಲ್ಲೂ ಬಂದಿದ್ದು, ಮೃತ ಸರ್ಪಣ ಮತ್ತು ತದ್ವಟಾತ್ ಎಂಬಲ್ಲಿ ಮೊದಲನೆಯ ಪದದ ವಿಭಕ್ತಿ ಲೋಪ ವಾಗಿದೆಯೆಂದು ಹೇಳಬಲ್ಲೆವು.

ಆದರೆ, ಕನ್ನಡದಲ್ಲಿ ಸತ್ತ ಹಾವಿನಿಂದ ಮತ್ತು ಆ ಕೊಡದಿಂದ ಎಂಬ ಬಳಕೆಗಳಿವೆಯಲ್ಲದೆ, *ಸತ್ತದಿಂದ ಹಾವಿನಿಂದ ಮತ್ತು *ಅದರಿಂದ ಕೊಡ ದಿಂದ ಎಂಬಂತಹ ಮೊದಲನೆಯ ಪದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿರುವ ಬಳಕೆಗಳಿಲ್ಲ. ಹಾಗಾಗಿ, ಕನ್ನಡದ ಸತ್ತ ಹಾವು, ಆ ಕೊಡ ಎಂಬಂತಹ ಬಳಕೆ ಗಳಲ್ಲಿ ವಿಭಕ್ತಿ ಲೋಪವೂ ಇಲ್ಲ. ಇವುಗಳಲ್ಲಿ ಗಮಕ ಸಮಾಸವೆಂಬ ಕನ್ನಡದ್ದೇ ಆದ ಸಮಾಸವಿದೆಯೆಂದು ನಮ್ಮ ವೈಯಾಕರಣಿಗಳು ಹೇಳಿರುವುದು ಅವರ ಭ್ರಮೆ ಮಾತ್ರ.

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವುಗಳ ಅರ್ಥದೊಂದಿಗೆ ನೇರವಾಗಿ ಸಂಬಂಧಿಸುವುದು ತುಂಬಾ ಕಷ್ಟ. ಹಲವೆಡೆಗಳಲ್ಲಿ ಕಾಣಿಸುವ ವಿಭಕ್ತಿ ಪಲ್ಲಟಕ್ಕೆ ಸಂಸ್ಕೃತದಲ್ಲಿ ಅರ್ಥವೇ ಇಲ್ಲ. ಈ ಕಾರಣಕ್ಕಾಗಿ, ಮತ್ತು ಸಂಸ್ಕೃತದ ಕೆಲವು ವ್ಯಾಕರಣ ನಿಯಮಗಳನ್ನು ಸುಲಭವಾಗಿ ವಿವರಿಸಲು ಸಾಧ್ಯವಾಗುವಂತೆ ಅದರ ವೈಯಾಕರಣಿಗಳು ಕಾರಕ ಎಂಬ ವ್ಯಾಕರಣ ತತ್ವವೊಂದನ್ನು ಕಲ್ಪಿಸಿಕೊಂಡಿ ದ್ದಾರೆ. ಇಂಗ್ಲಿಷ್, ಫ್ರೆಂಚ್ ಮೊದಲಾದ ಕೆಲವು ಪಾಶ್ಚಾತ್ಯ ಭಾಷೆಗಳಲ್ಲೂ ಇಂತಹದೇ ಸಮಸ್ಯೆಯಿದ್ದು, ಅದಕ್ಕಾಗಿ ಸಬ್ಜೆಕ್ಟ್, ಆಬ್ಜೆಕ್ಟ್ ಮೊದಲಾದ ಕೆಲವು ವ್ಯಾಕರಣ ತತ್ವಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಸಂಸ್ಕೃತದಲ್ಲಿ ಈ ರೀತಿ ಕಾರಕ ಎಂಬುದನ್ನು ಯಾಕೆ ಕಲ್ಪಿಸಿಕೊಂಡಿದ್ದಾರೆ, ಮತ್ತು ಕನ್ನಡಕ್ಕೆ ಇದರ ಅವಶ್ಯಕತೆಯಿದೆಯೇ ಎಂಬುದನ್ನು ಪರಾಮರ್ಶಿಸಲು ಹೋಗದೆ, ಕನ್ನಡ ವೈಯಾಕರಣಿಗಳು ಅದನ್ನು ಹಾಗೆಯೇ ತಮ್ಮ ವ್ಯಾಕರಣ ಗಳಲ್ಲೂ ಅಳವಡಿಸಿಕೊಂಡಿದ್ದಾರೆ.

ಆದರೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೆ ಅವುಗಳ ಎಲ್ಲಾ ಬಳಕೆಗಳಲ್ಲೂ ನೇರವಾಗಿ ಅರ್ಥದೊಂದಿಗೆ ಸಂಬಂಧವನ್ನು ಸಾಧಿಸಬಹುದು. ಅವುಗಳ ಬಳಕೆ ಯಲ್ಲಿ ಸಂಸ್ಕೃತ ವಿಭಕ್ತಿಗಳ ಬಳಕೆಯಲ್ಲಿ ಕಾಣಿಸುವಂತಹ ಸಮಸ್ಯೆಯಿಲ್ಲ. ಹಾಗಾಗಿ, ಅವನ್ನು ಅರ್ಥದೊಂದಿಗೆ ಸಂಬಂಧಿಸುವುದಕ್ಕಾಗಿ ಕಾರಕವೆಂಬ ವ್ಯಾಕರಣ ತತ್ವವನ್ನು ಬಳಸುವ ಅವಶ್ಯಕತೆಯಿಲ್ಲ.

ಕನ್ನಡದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲೂ ಈ ಕಾರಕಗಳ ಅವಶ್ಯಕತೆ ಕಂಡುಬರುವುದಿಲ್ಲ. ಇದನ್ನು ಕಂಡುಕೊಳ್ಳಲು ಸಾಧ್ಯವಾಗದ ಕನ್ನಡದ ವೈಯಾಕರಣಿಗಳು ಈ ಕಾರಕವೆಂಬ ಕಲ್ಪಿತ ತತ್ವವನ್ನು ಕನ್ನಡ ವ್ಯಾಕರಣದೊಳಕ್ಕೆ ತಂದು ಹಾಕಿ, ಆ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗುವಂತೆ ಮಾಡಿದ್ದಾರೆ.

ಹಳೆಗನ್ನಡ ವ್ಯಾಕರಣಗಳಲ್ಲಿ, ಮತ್ತು ಅವುಗಳ ಆಧಾರದ ಮೇಲೆ ರಚಿತ ವಾಗಿರುವ ಹೊಸಗನ್ನಡ ವ್ಯಾಕರಣಗಳಲ್ಲಿ ಇಂತಹ ಕನ್ನಡಕ್ಕೆ ಅವಶ್ಯವಿಲ್ಲದಿರುವ ಇನ್ನೂ ಹಲವಾರು ವ್ಯಾಕರಣ ನಿಯಮಗಳನ್ನು ಮತ್ತು ಕಲ್ಪನೆಗಳನ್ನು ಕಾಣ ಬಹುದು. ಕಲಿಯುವವನ ವೃತ್ತಿಯನ್ನು ಬಿಟ್ಟುಕೊಟ್ಟು, ಸಂಶೋಧಕನ ದೃಷ್ಟಿ ಯಿಂದ ಪರಿಶೀಲಿಸಿದಾಗ ಮಾತ್ರ, ಕನ್ನಡ ವ್ಯಾಕರಣಕ್ಕೆ ಇವು ಯಾಕೆ ಅವಶ್ಯವಿಲ್ಲ ಎಂಬುದು ಸ್ಪಷ್ಟವಾದೀತು.

ನಮ್ಮ ವೈಯಾಕರಣಿಗಳಲ್ಲಿ ಅಪರೂಪಕ್ಕೆ ಕೆಲವರು ಇಂತಹ ಸಂಶೋಧಕ ದೃಷ್ಟಿಯಿಂದ ಹಳೆಗನ್ನಡ ವ್ಯಾಕರಣಗಳನ್ನು, ಮತ್ತು ಅದೇ ಪರಂಪರೆಯಲ್ಲಿ ಸಿದ್ಧವಾದ ಹೊಸಗನ್ನಡ ವ್ಯಾಕರಣಗಳನ್ನು ಪರಿಶೀಲಿಸಿದ್ದಾರೆ. ಉದಾಹರಣೆಗಾಗಿ, ಪಂಚಮೀ ವಿಭಕ್ತಿ ಮತ್ತು ಗಮಕ ಸಮಾಸಗಳ ಕುರಿತು ಸೇಡಿಯಾಪು ಕೃಷ್ಣಭಟ್ಟರು ಬರೆದಿರುವ ಲೇಖನಗಳನ್ನು ಗಮನಿಸಬಹುದು.

ವ್ಯಾಕರಣವೊಂದರಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳು ಅದರ ಹಿಂದಿರುವ ವ್ಯಾಕರಣ ಪರಂಪರೆಯಲ್ಲಿ ಬೆಳೆದುಬಂದಿರುತ್ತವೆ. ಅವುಗಳ ಅವಶ್ಯಕತೆ, ಅವುಗಳಿಗಿರುವ ಅರ್ಥ ಮೊದಲಾದುವೆಲ್ಲ ಆ ವ್ಯಾಕರಣ ಪರಂಪರೆ ಯನ್ನು, ಮತ್ತು ಆ ಭಾಷೆಯ ವ್ಯಾಕರಣವನ್ನು ಅವಲಂಬಿಸಿರುತ್ತವೆ. ಅವನ್ನು ಬೇರೊಂದು ಭಾಷೆಯ ವ್ಯಾಕರಣವನ್ನು ಬರೆಯುವಲ್ಲಿ ಬಳಸಬೇಕಾದಾಗ, ಇಂತಹ ವ್ಯಾಕರಣಾಂಶಗಳು ಅನವಶ್ಯಕವಾಗಿ ಆ ಭಾಷೆಯ ವ್ಯಾಕರಣವನ್ನು ಕ್ಲಿಷ್ಟವಾಗಿ ಮಾಡದಂತೆ ಎಚ್ಚರ ವಹಿಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಏಳು ವಿಭಕ್ತಿಗಳಿವೆ; ಸಂಸ್ಕೃತದ ವೈಯಾ ಕರಣಿಗಳು ಇವನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ಹೆಸರಿಸಿದ್ದಾರೆ. ಈ ಪಾರಿಭಾಷಿಕ ಪದ(ಹೆಸರು)ಗಳನ್ನು ಕನ್ನಡದ ವೈಯಾಕರಣಿ ಗಳು ಹಾಗೆಯೇ ಕನ್ನಡ ವ್ಯಾಕರಣದಲ್ಲೂ ಅಳವಡಿಸಿಕೊಂಡಿದ್ದಾರೆ.

ಇಲ್ಲಿ ಏಳು ವಿಭಕ್ತಿಗಳಿವೆಯೆಂಬುದು, ಅವನ್ನು ಒಂದನೇ ವಿಭಕ್ತಿ, ಎರಡನೇ ವಿಭಕ್ತಿ, ಮೂರನೇ ವಿಭಕ್ತಿ ಮೊದಲಾದವುಗಳಾಗಿ ಒಂದು ಕ್ರಮದಲ್ಲಿ ಪಟ್ಟಿ ಮಾಡಬೇಕೆಂಬುದು, ಮತ್ತು ಈ ಪಟ್ಟಿಯಲ್ಲಿ ಬರುವ ಯಾವುದೇ ಒಂದು ವಿಭಕ್ತಿಗೆ ಇಂತಹದೇ ಅರ್ಥ ಇಲ್ಲವೇ ಬಳಕೆ ಇರಬೇಕೆಂಬುದು ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ ಅಂಶ. ಕನ್ನಡ ವ್ಯಾಕರಣ ಈ ಎಲ್ಲಾ ವಿಷಯಗಳಲ್ಲೂ ಸಂಸ್ಕೃತಕ್ಕಿಂತ ಭಿನ್ನವಾಗಿರಬಲ್ಲುದು, ಮತ್ತು ನಿಜಕ್ಕೂ ಅದು ಆ ರೀತಿ ಭಿನ್ನವಾಗಿದೆ.

ಕನ್ನಡದಲ್ಲಿ ಒಟ್ಟು ನಾಲ್ಕು ವಿಭಕ್ತಿಗಳು ಮಾತ್ರ ಇವೆ: ಅನ್ನು, ಇಂದ, ಗೆ, ಮತ್ತು ಲ್ಲಿ ಎಂಬವು ಈ ನಾಲ್ಕು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳು. ಕನ್ನಡದ ಮಟ್ಟಿಗೆ ಇಂದ ಮತ್ತು ಗೆ ಎಂಬವುಗಳೆರಡು ಮುಖ್ಯವಾಗಿ ಚಲನೆಗೆ ಸಂಬಂಧಿಸಿದ ಆಕರವನ್ನು, ಎಂದರೆ ಚಲನೆ ಎಲ್ಲಿಂದ ಸುರುವಾಗಿದೆ ಮತ್ತು ಎಲ್ಲಿಗೆ ಸಾಗಿದೆ ಎಂಬುದನ್ನು, ಸೂಚಿಸುತ್ತವೆ. ಚಲನೆಗೆ ಸಂಬಂಧಿಸದೇ ಇರುವ ಆಕರವನ್ನು ಲ್ಲಿ ಎಂಬ ಪ್ರತ್ಯಯ ಸೂಚಿಸುತ್ತದೆ. ಹೀಗೆ ಈ ಮೂರು ಪ್ರತ್ಯಯ ಗಳದು ಒಂದು ಗುಂಪಾದರೆ, ಅನ್ನು ಎಂಬ ಪ್ರತ್ಯಯ ಇವಕ್ಕಿಂತ ತೀರ ಭಿನ್ನ ವಾಗಿದ್ದು, ಒಂದು ಘಟನೆ ಯಾವುದರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಸೂಚಿಸುತ್ತದೆ.

ಸಂಖ್ಯೆಗಳ ಮೂಲಕ ಈ ಪ್ರತ್ಯಯಗಳನ್ನು ಹೆಸರಿಸುವುದಾದರೆ, ಅನ್ನು ಎಂಬುದನ್ನು ಮೊದಲನೆಯ ವಿಭಕ್ತಿಯೆಂದೂ, ಇಂದ ಮತ್ತು ಗೆ ಎಂಬವುಗಳನ್ನು ಎರಡನೇ ಮತ್ತು ಮೂರನೇ ವಿಭಕ್ತಿಗಳೆಂದೂ, ಲ್ಲಿ ಎಂಬುದನ್ನು ನಾಲ್ಕನೇ ವಿಭಕ್ತಿಯೆಂದೂ ಹೆಸರಿಸುವುದೇ ಕನ್ನಡದ ಮಟ್ಟಿಗೆ ಸರಿ.

ಸಂಸ್ಕೃತ ವ್ಯಾಕರಣದಲ್ಲಿ ವಿಭಕ್ತಿಗಳಿಗೆ ಪ್ರಥಮಾ, ದ್ವಿತಿಯಾ, ತೃತೀಯ ಇತ್ಯಾದಿಯಾಗಿ ಸಂಖ್ಯೆಗಳನ್ನು ಬಳಸಿ ಹೆಸರುಗಳನ್ನು ಕೊಟ್ಟಿರುವುದಕ್ಕೆ ಕಾರಣ

ಬೇರೆಯೇ ಇದೆ: ಅವನ್ನು ಸೂಚಿಸುವ ಪ್ರತ್ಯಯಗಳು ಎಲ್ಲೆಲ್ಲ ಒಂದೇ ರೂಪ ದಲ್ಲಿ ಬರುತ್ತವೆ ಎಂಬುದನ್ನು ಸೂಚಿಸಲು ಸುಲಭವಾಗುವಂತೆ ಈ ಪಟ್ಟಿಯನ್ನು ಮಾಡಲಾಗಿದೆ. ಉದಾಹರಣೆಗಾಗಿ, ಅಗ್ನಿ ಎಂಬ ಪದಕ್ಕೆ ದ್ವಿವಚನದ ತೃತೀಯಾ, ಚತುರ್ಥೀ ಮತ್ತು ಪಂಚಮಿ ವಿಭಕ್ತಿಗಳಲ್ಲಿ ಅಗ್ನಿಭ್ಯಾಂ ಎಂಬ ಒಂದೇ ರೂಪ ಇದೆ. ಆದರೆ, ಬಹುವಚನದ ಚತುರ್ಥೀ ಮತ್ತು ಪಂಚಮಿಗಳಲ್ಲಿ ಮಾತ್ರ ಅಗ್ನಿಭ್ಯಃ ಎಂಬ ಒಂದೇ ರೂಪ ಇದೆ. ಏಕವಚನದ ಪಂಚಮೀ ಮತ್ತು ಷಷ್ಠಿಗಳಲ್ಲಿ ಅಗ್ನೇಃ ಎಂಬ ಒಂದೇ ರೂಪ ಇದೆ.

ಈ ರೀತಿ ಬೇರೆ ಬೇರೆ ನಾಮಪದಗಳಿಗೆ ಒಂದೇ ರೂಪ ಕಾಣಿಸುವ ವಿಭಕ್ತಿಗಳೆಲ್ಲ ಒಟ್ಟೊಟ್ಟಾಗಿ ಬರುವಂತೆ ಸಂಸ್ಕೃತದ ವೈಯಾಕರಣಿಗಳು ಈ ವಿಭಕ್ತಿಗಳ ಪಟ್ಟಿಯನ್ನು ಮಾಡಿದ್ದಾರೆ. ಇದನ್ನು ಕನ್ನಡದಲ್ಲೂ ಹಾಗೆಯೇ ಬಳಸುವುದರಿಂದ ಕನ್ನಡದ ವ್ಯಾಕರಣದ ಮಟ್ಟಿಗೆ ಯಾವ ಪ್ರಯೋಜನವೂ ಸಿಗುವುದಿಲ್ಲ. ನಿಜಕ್ಕೂ ಕನ್ನಡದ ಯಾವ ಎರಡು ವಿಭಕ್ತಿಗಳೂ ಒಂದೇ ರೂಪ ದಲ್ಲಿ ಬರುವುದಿಲ್ಲ.

ಸಂಸ್ಕೃತ ವೈಯಾಕರಣಿಗಳು ಬಳಸುವ ಸ್ವರಗಳ ಪಟ್ಟಿಯೂ ಹೀಗೆಯೇ. ಸಂಸ್ಕೃತದ ಸಂಧಿನಿಯಮಗಳನ್ನು ಸುಲಭವಾಗಿ ಮತ್ತು ಅಡಕವಾಗಿ ಹೇಳಲು ಸಾಧ್ಯವಾಗುವಂತೆ ಈ ಪಟ್ಟಿಯನ್ನು ರಚಿಸಲಾಗಿದೆ. ಕನ್ನಡದ ವೈಯಾಕರಣಿಗಳು ಈ ಪಟ್ಟಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ಮಾಡಿ, ಹಾಗೆಯೇ ಅದನ್ನು ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ. ಆದರೆ ಈ ಪಟ್ಟಿ ಕನ್ನಡ ವ್ಯಾಕರಣಕ್ಕೆ ಸ್ವಲ್ಪವೂ ಅನುಕೂಲವಾಗಿಲ್ಲ.

ಅ, ಇ ಮತ್ತು ಉ (ಹ್ರಸ್ವ ಮತ್ತು ದೀರ್ಘ) ಎಂಬವುಗಳನ್ನು ಒಟ್ಟಿಗೆ ಹೇಳಿ, ಅನಂತರ ಋ ಮತ್ತು ೈ (ಹ್ರಸ್ವ ಮತ್ತು ದೀರ್ಘ) ಎಂಬವುಗಳನ್ನು, ಮತ್ತು ಅನಂತರ ಏ, ಓ ಮತ್ತು ಐ, ಔ ಎಂಬವುಗಳನ್ನು ಹೇಳುವುದು ಸಂಸ್ಕೃತದ ಕ್ರಮ. ಅಇಉಣ್, ಋಲ್ಕಕ್, ಏಓಚ್, ಐಓಚ್ ಎಂಬ ಮಾಹೇಶ್ವರ ಸೂತ್ರ ಗಳಲ್ಲಿ ಈ ಪಟ್ಟಿ ಬರುತ್ತದೆ.

ಸಂಸ್ಕೃತದಲ್ಲಿ ಅಕಾರ, ಇಕಾರ ಮತ್ತು ಉಕಾರಗಳು ಮೂಲಸ್ವರಗಳು; ಇಂಡೋ-ಯುರೋಪಿಯನ್ ಮೂಲಭಾಷೆಯ ಎಕಾರ ಮತ್ತು ಒಕಾರಗಳು ಸಂಸ್ಕೃತದಲ್ಲಿ ಅಕಾರವಾಗಿ ಬದಲಾಗಿವೆಯಾದ ಕಾರಣ, ಸಂಸ್ಕೃತದಲ್ಲಿ ಕಾಣಿಸುವ ಎಕಾರ ಮತ್ತು ಒಕಾರಗಳು ಮೂಲಸ್ವರಗಳಲ್ಲ. ಅವು ಸಂಧಿಯ ಮೂಲಕ ಸಿದ್ಧವಾಗುವ ‘ಗುಣಾಕ್ಷರಗಳು’ ಮಾತ್ರ. ಅವನ್ನು ಅಕಾರ, ಇಕಾರ ಮತ್ತು ಉಕಾರಗಳಿಂದ ಬೇರೆ ಇರಿಸಲು ಇದು ಒಂದು ಕಾರಣ; ಅವು ದೀರ್ಘ ರೂಪದಲ್ಲಿ ಮಾತ್ರ ಬರುತ್ತವೆ, ಹ್ರಸ್ವ ರೂಪದಲ್ಲಿ ಬರುವುದಿಲ್ಲ ಎಂಬುದು ಇನ್ನೊಂದು ಕಾರಣ. ಐ ಮತ್ತು ಔಗಳೂ ಸಂಸ್ಕೃತದ ಸಂಧಿಕಾರ್ಯಗಳಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವ ‘ವೃದ್ಧಿ’ ಎಂಬ ಹೆಸರಿನ ಸ್ವರಗಳು. ಈ ರೀತಿ, ಮೇಲಿನ ಸ್ವರಗಳ ಪಟ್ಟಿ ಸಂಸ್ಕೃತ ವ್ಯಾಕರಣದ ಮಟ್ಟಿಗೆ ಅತ್ಯಂತ ಉಪಯುಕ್ತವಾದ ಪಟ್ಟಿ.

ಆದರೆ, ಕನ್ನಡ ವ್ಯಾಕರಣದ ಮಟ್ಟಿಗೆ ಈ ಪಟ್ಟಿ ತೀರಾ ಅನುಪಯುಕ್ತ ವಾದುದು. ಯಾಕೆಂದರೆ, ಕನ್ನಡದಲ್ಲಿ ಎಕಾರ ಮತ್ತು ಒಕಾರಗಳೆರಡೂ ಮೂಲ ಸ್ವರಗಳಾಗಿದ್ದು, ಹ್ರಸ್ವ ಮತ್ತು ದೀರ್ಘಗಳೆಂಬ ಎರಡು ರೂಪಗಳಲ್ಲೂ ಬರು ತ್ತವೆ; ಅವನ್ನು ಅ, ಇ ಮತ್ತು ಉ ಸ್ವರಗಳಿಂದ ಪ್ರತ್ಯೇಕಿಸುವುದಕ್ಕೆ ಕನ್ನಡ ವ್ಯಾಕರಣದಲ್ಲಿ ಯಾವ ಆಧಾರವೂ ಇಲ್ಲ.

ಇದಲ್ಲದೆ, ಕನ್ನಡದ ಸಂಧಿಕಾರ್ಯಗಳಲ್ಲಿ ಇಕಾರ ಮತ್ತು ಎಕಾರಗಳು ಒಂದು ರೀತಿಯಲ್ಲಿ ವರ್ತಿಸುವುವಾದರೆ (ಅವುಗಳೆದುರು ಯಕಾರ ಆಗಮವಾಗಿ ಬರುತ್ತದೆ), ಉಕಾರ, ಒಕಾರ ಮತ್ತು ಅಕಾರಗಳು ಇನ್ನೊಂದು ರೀತಿಯಲ್ಲಿ ವರ್ತಿಸುತ್ತವೆ (ಅವುಗಳೆದುರು ವಕಾರ ಆಗಮವಾಗಿ ಬರುತ್ತದೆ). ಹಾಗಾಗಿ, ಕನ್ನಡದ ಮಟ್ಟಿಗೆ ಸ್ವರಗಳ ಪಟ್ಟಿಯನ್ನು ಇ, ಎ; ಉ, ಒ, ಅ (ಹ್ರಸ್ವ ಮತ್ತು ದೀರ್ಘ) ಎಂಬುದಾಗಿ ಕೊಡುವುದೇ ಉತ್ತಮ.

ಇದಲ್ಲದೆ, ಐ ಮತ್ತು ಔಗಳಿಗೆ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಹಾಗೆ ವಿಶಿಷ್ಟವಾದ ಸ್ಥಾನವಿಲ್ಲ. ನಿಜಕ್ಕೂ ಅವು ಅಕಾರಕ್ಕಿಂತ ಭಿನ್ನವಾದ ಸ್ವರಗಳೇ ಅಲ್ಲ; ಅಕಾರಕ್ಕೆ ಯಕಾರ ಮತ್ತು ವಕಾರಗಳನ್ನು ಸೇರಿಸಿರುವ ಸೇರಿಕೆಗಳು ಮಾತ್ರ. ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿಕೊಂಡಾಗ ಅನವಶ್ಯಕವಾಗಿ ಬಂದು ಸೇರಿಕೊಂಡ ಅಕ್ಷರಗಳಿವು. ಕನ್ನಡದಲ್ಲಿ ಇವೆರಡು ಮಾತ್ರವಲ್ಲದೆ, ಎಯ್, ಒಯ್, ಆಯ್ ಮೊದಲಾದ ಬೇರೆಯೂ ಹಲವು ಸೇರಿಕೆಗಳಿವೆಯಾದ ಕಾರಣ, ಈ ಎರಡು ಸೇರಿಕೆಗಳಿಗೆ ಮಾತ್ರ ವಿಶಿಷ್ಟವಾದ ಸ್ಥಾನವನ್ನು ಕೊಟ್ಟಿರು ವುದರಿಂದಾಗಿ ಕನ್ನಡ ಬರಹ ಅನವಶ್ಯಕವಾಗಿ ಕ್ಲಿಷ್ಟವಾಗಿದೆ. ಇದಲ್ಲದೆ, ಅದು ಸಂಶೋಧಕರಲ್ಲಿ ಗೊಂದಲವನ್ನೂ ಉಂಟುಮಾಡುತ್ತದೆ.

Eke →

ಆಧುನಿಕ ವ್ಯಾಕರಣಗಳು

ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಬಿಟ್ಟುಕೊಟ್ಟು, ಯುರೋಪಿನ ಇಲ್ಲವೇ ಅಮೆರಿಕಾದ ವ್ಯಾಕರಣ ಪರಂಪರೆಯನ್ನು ಅನುಸರಿಸಿ ಬರೆದ ಹಲವು ಕನ್ನಡ ವ್ಯಾಕರಣಗಳು ಕಳೆದ ಶತಮಾನದಲ್ಲಿ ಸಿದ್ಧವಾಗಿವೆ. ಕೆಲವು ವಿಷಯಗಳಲ್ಲಿ ಇವು ಸಂಸ್ಕೃತ ವ್ಯಾಕರಣದ ಹೊರೆಯನ್ನು ಕನ್ನಡ ವ್ಯಾಕರಣದಿಂದ ತೆಗೆದುಹಾಕುವ ಮೂಲಕ ಕನ್ನಡ ವ್ಯಾಕರಣವನ್ನು ಸರಳಗೊಳಿಸಿವೆ. ಆದರೆ, ಇನ್ನು ಕೆಲವು ವಿಷಯಗಳಲ್ಲಿ ಇಂಗ್ಲಿಷ್ ಇಲ್ಲವೇ ಇತರ ಪಾಶ್ಚಾತ್ಯ ಭಾಷೆಗಳ ವ್ಯಾಕರಣದ ಹೊರೆಯನ್ನು ಕನ್ನಡ ವ್ಯಾಕರಣದ ಮೇಲೆ ಹೇರುವ ಮೂಲಕ ಅದನ್ನು ಕ್ಲಿಷ್ಟ ಗೊಳಿಸಿವೆ.

ಅಮೆರಿಕಾದ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಮುಖ್ಯವಾಗಿ ಎರಡು ರೀತಿಯ ದೃಷ್ಟಿಕೋನಗಳನ್ನು ಕಾಣಬಹುದು: ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ರೀತಿಯ ವ್ಯಾಕರಣಗಳಿರಲು ಸಾಧ್ಯ, ಮತ್ತು ಈ ಕಾರಣಕ್ಕಾಗಿ ಅವುಗಳ ವ್ಯಾಕರಣಗಳನ್ನು ಅವುಗಳದೇ ಆದ ರಚನಾವೈಶಿಷ್ಟ್ಯಗಳನ್ನು ಕಂಡುಹಿಡಿಯುವ

ಮೂಲಕ ವರ್ಣಿಸಬೇಕು ಎನ್ನುವ ಬ್ಲೂಮ್‌ಫೀಲ್ಡ್ ಮೊದಲಾದವರ ವರ್ಣ ನಾತ್ಮಕ ವ್ಯಾಕರಣಗಳ ದೃಷ್ಟಿಕೋನ ಇವುಗಳಲ್ಲೊಂದು; ಎಲ್ಲಾ ಭಾಷೆಗಳಿಗೂ ಸಮಾನವಾಗಿರುವ ವ್ಯಾಕರಣವೊಂದಿದೆ, ಅದನ್ನು ಮೊದಲಿಗೆ ವರ್ಣಿಸಿ, ಅನಂತರ ಅವುಗಳ ನಡುವೆ ಮೇಲಿನಿಂದ ಮೇಲೆ ಕಾಣಿಸುವ ವ್ಯತ್ಯಾಸಗಳಾವುವು ಎಂಬುದನ್ನು ವರ್ಣಿಸಬೇಕು ಎಂಬ ಚೊಮ್‌ಸ್ಕಿ ಮೊದಲಾದವರ ದೃಷ್ಟಿಕೋನ ಇನ್ನೊಂದು.

ಆಧುನಿಕ ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವೂ ಇವುಗಳಲ್ಲಿ ಮೊದಲನೆಯ ದಾದ ವರ್ಣನಾತ್ಮಕ ದೃಷ್ಟಿಕೋನವನ್ನವಲಂಬಿಸಿವೆ. ಆದರೆ, ಅದರ ಮೂಲ ತತ್ವಗಳನ್ನು ಬಳಸಿಕೊಳ್ಳುವಲ್ಲಿ ಅವು ಯಶಸ್ವಿಯಾಗಿರುವ ಹಾಗೆ ಕಾಣಿಸುವುದಿಲ್ಲ. ಹಲವಾರು ವಿಷಯಗಳಲ್ಲಿ ಅವು ಇಂಗ್ಲಿಷ್ ಭಾಷೆಗೆ ಅವಶ್ಯವಿರುವ, ಆದರೆ ಕನ್ನಡ ಭಾಷೆಗೆ ಅವಶ್ಯವಿಲ್ಲದಿರುವ ವ್ಯಾಕರಣಾಂಶಗಳನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲೂ ಅಳವಡಿಸಲು ಯತ್ನಿಸಿರುವುದನ್ನು ಕಾಣಬಹುದು.

ಉದಾಹರಣೆಗಾಗಿ, ಸಂಸ್ಕೃತದ ಹಾಗೆ ಇಂಗ್ಲಿಷ್‌ನಲ್ಲೂ ಸಮಸ್ತಪದಗಳ ವಿಭಜನೆಯನ್ನು ಅವುಗಳ ಅಂಗಗಳಲ್ಲಿ ಪ್ರಧಾನ ಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಸಾಧಿಸಲು ಸಾಧ್ಯವಿದೆ. ಇದನ್ನೇ ಈ ವ್ಯಾಕರಣಗಳು ಕನ್ನಡಕ್ಕೂ ಅನ್ವಯಿಸಿರುವುದನ್ನು ಕಾಣಬಹುದು. ಇದಲ್ಲದೆ, ಇಂಗ್ಲಿಷ್‌ನ ಸಬ್ಜೆಕ್ಟ್, ಆಬ್ಜೆಕ್ಟ್ ಮೊದಲಾದುವನ್ನೂ ಇವು ಕನ್ನಡ ವ್ಯಾಕರಣದಲ್ಲಿ ಅನವಶ್ಯಕವಾಗಿ ಅಳವಡಿಸಿಕೊಂಡಿವೆ.

ಆದರೆ, ಬೇರೆ ಕೆಲವು ವಿಷಯಗಳಲ್ಲಿ ಇವು ಕನ್ನಡ ವ್ಯಾಕರಣವನ್ನು ಹೊಸ ರೀತಿಯಲ್ಲಿ ವರ್ಣಿಸಲು ಯತ್ನಿಸಿವೆ. ಉದಾಹರಣೆಗಾಗಿ, ಕನ್ನಡದ ಸ್ವರಗಳನ್ನು ಪೂರ್ವ ಮತ್ತು ಪಶ್ಚ ಎಂಬುದಾಗಿ ವಿಂಗಡಿಸುವ ಮೂಲಕ, ಕನ್ನಡ ವ್ಯಾಕರಣಕ್ಕೆ ಅನುಕೂಲವಾಗುವಂತಹ ಸ್ವರಗಳ ಪಟ್ಟಿಯನ್ನು ಕೊಡಲು ಇವು ಶಕ್ತವಾಗಿವೆ. ಕನ್ನಡದ ಸಂಧಿಕಾರ್ಯಗಳನ್ನೂ ಇವು ಸ್ವತಂತ್ರ ರೀತಿಯಲ್ಲಿ ವರ್ಣಿಸಿರುವುದನ್ನು ಕಾಣಬಹುದು. ವಿಭಕ್ತಿಗಳ ವರ್ಣನೆ, ಕ್ರಿಯಾರೂಪಗಳ ವರ್ಣನೆ ಮೊದಲಾದ ಬೇರೆ ಕೆಲವು ಕಡೆಗಳಲ್ಲೂ ಇವು ಕನ್ನಡದ ಸ್ವರೂಪವನ್ನು ಹೆಚ್ಚು ಸರಳವಾಗಿ ವಿವರಿಸಲು ಶಕ್ತವಾಗಿವೆ.

ಚೊಮ್‌ಸ್ಕಿಯ ‘ಜನರೆಟಿವ್’ ದೃಷ್ಟಿಕೋನದಿಂದ ಸಿದ್ಧವಾದ ವ್ಯಾಕರಣಗಳಲ್ಲಿ ಮಾತ್ರ, ಕನ್ನಡ ವ್ಯಾಕರಣ ಇಂಗ್ಲಿಷ್ ವ್ಯಾಕರಣದ ತದ್ಪ್ರತಿಯಾಗಿದೆ. ಎ.ಕೆ. ರಾಮಾನುಜನ್ ಅವರ ಕನ್ನಡ ವ್ಯಾಕರಣದಲ್ಲಿ ಇದನ್ನು ಸ್ಪಷ್ಟವಾಗಿ ಕಾಣ ಬಹುದು. ಉದಾಹರಣೆಗಾಗಿ, ಇಂಗ್ಲಿಷ್‌ನಲ್ಲಿ ವಾಕ್ಯರಚನೆಗೆ ಪದಗಳ (ಇಲ್ಲವೇ ಪದಗುಚ್ಛಗಳ) ಸಾಪೇಕ್ಷ ಸ್ಥಾನ ಬಹಳ ಮುಖ್ಯವಾದುದು. ವಾಕ್ಯದಲ್ಲಿ ಒಂದು ನಾಮಪದ ಕ್ರಿಯಾಪದದ ಮೊದಲು ಬಂದರೆ ಅದು ಸಬ್ಜೆಕ್ಟನ್ನೂ, ಅನಂತರ ಬಂದರೆ ಆಬ್ಜೆಕ್ಟನ್ನೂ ಸೂಚಿಸುತ್ತದೆಯೆಂಬ ನಿಯಮ ಅದರಲ್ಲಿದೆ.

ಇದಲ್ಲದೆ, ಇಂಗ್ಲಿಷ್ ವಾಕ್ಯದಲ್ಲಿ ಆಬ್ಜೆಕ್ಟ್ ಇಲ್ಲದ ವಾಕ್ಯ ಇರಬಲ್ಲುದು, ಆದರೆ ಸಬ್ಜೆಕ್ಟ್ ಇಲ್ಲದ ವಾಕ್ಯ ಇರಲಾರದು.

ಇಂತಹ ಹಲವು ನಿಯಮಗಳ ಆಧಾರದ ಮೇಲೆ, ಇಂಗ್ಲಿಷ್ ವಾಕ್ಯಗಳನ್ನು ನಾಮಪದಗುಚ್ಛ (ಸಬ್ಜೆಕ್ಟ್) ಮತ್ತು ಕ್ರಿಯಾಪದಗುಚ್ಛ ಎಂಬುದಾಗಿ ಮೊದಲಿಗೆ ವಿಂಗಡಿಸಿ, ಆಮೇಲೆ ಕ್ರಿಯಾಪದಗುಚ್ಛವನ್ನು ತಿರುಗಿ ಕ್ರಿಯಾಪದಗುಚ್ಛ ಮತ್ತು ನಾಮಪದಗುಚ್ಛ (ಆಬ್ಜೆಕ್ಟ್) ಎಂಬುದಾಗಿ ವಿಂಗಡಿಸಲಾಗುತ್ತದೆ.

ಆದರೆ, ಈ ಎಲ್ಲಾ ವಿಷಯಗಳಲ್ಲೂ ಕನ್ನಡ ಭಾಷೆ ಇಂಗ್ಲಿಷ್‌ನಿಂದ ಭಿನ್ನವಾಗಿದೆ; ಹಾಗಾಗಿ, ಮೇಲಿನ ನಿಯಮಗಳನ್ನು ಕನ್ನಡದ ವಾಕ್ಯಗಳಿಗೆ ಅನ್ವಯಿಸಲು ಸಾಧ್ಯವಾಗದು. ಹಾಗಿದ್ದರೂ, ರಾಮಾನುಜನ್ ಅವರ ಕನ್ನಡ ವ್ಯಾಕರಣ ಇಂತಹದೇ ವಾಕ್ಯರಚನೆಯನ್ನು ಕನ್ನಡದಲ್ಲೂ ಕಾಣಲು ಪ್ರಯತ್ನಿಸು ತ್ತದೆ.

ಮುಂದೆ ಎಂಬತ್ತನೇ ದಶಕದಲ್ಲಿ ಭಾಷೆಗಳು ಈ ವಿಷಯದಲ್ಲಿ ಭಿನ್ನ ವಾಗಿರಲು ಸಾಧ್ಯ ಎಂಬುದನ್ನು ಮನಗಂಡ ಚೊಮ್‌ಸ್ಕಿ ಮೊದಲಾದವರು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ; ಇದಲ್ಲದೆ, ಇತ್ತೀಚೆಗೆ ಅವರ ಸಿದ್ಧಾಂತ ಇದೇ ದಿಕ್ಕಿನಲ್ಲಿ ಇನ್ನಷ್ಟು ಬದಲಾವಣೆಗಳನ್ನು ಕಂಡಿದೆ: ಬೇರೆ ಬೇರೆ ಭಾಷೆಗಳ ನಡುವೆ ಸಮಾನವಾಗಿರುವ ವ್ಯಾಕರಣಾಂಶ ಅತ್ಯಲ್ಪ ಎಂದು ವಾದಿಸುವ ಚೊಮ್‌ಸ್ಕಿಯವರ ‘ಮಿನಿಮಲಿಸ್ಟ್ ಸಿದ್ಧಾಂತ’ ಈ ವಿಷಯದಲ್ಲಿ ಹೆಚ್ಚು ಕಡಿಮೆ ಬ್ಲೂಮ್‌ಫೀಲ್ಡ್ ಅವರ ಹಳೇ ಸಿದ್ದಾಂತವನ್ನೇ ಹೋಲುತ್ತಿದೆ. ಕನ್ನಡ ವ್ಯಾಕರಣದ ಮಟ್ಟಿಗೆ ಈ ಸಿದ್ದಾಂತವನ್ನು ಕಾರ್ಯರೂಪಕ್ಕೆ ತರುವ ಕೆಲಸ ಈ ಶತಮಾನದಲ್ಲಿ ಇನ್ನೂ ನಡೆಯಬೇಕಾಗಿದೆ.

Eke →

ವ್ಯಾಕರಣದ ಅವಶ್ಯಕತೆ

ನಿಜಕ್ಕೂ ಈ ರೀತಿ ಕನ್ನಡ ವ್ಯಾಕರಣವನ್ನು ಸಂಶೋಧಿಸುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂದು ಯಾರಾದರೂ ಕೇಳಬಹುದು. ವ್ಯಾಕರಣಬದ್ಧ ವಾಗಿ ಮಾತನಾಡಲು ನಾವು ಚಿಕ್ಕಂದಿನಲ್ಲೇ ಕಲಿತಿರುವೆವಾದ ಕಾರಣ, ಅದಕ್ಕೆ ವ್ಯಾಕರಣವನ್ನು ಕಲಿಯುವ ಅವಶ್ಯಕತೆಯಿಲ್ಲ. ಆದರೆ, ಅರಿವಿಗೆ ಎಟಕುವಂತಹ ವ್ಯಾಕರಣ ಜ್ಞಾನದಿಂದ ಬೇರೆ ಹಲವು ರೀತಿಯ ಪ್ರಯೋಜನಗಳನ್ನು ನಾವು ಪಡೆಯಬಲ್ಲೆವು.

ಕಂಪ್ಯೂಟರ್‌ಗಳು ಇವತ್ತು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ವನ್ನು ಆಕ್ರಮಿಸಿಕೊಳ್ಳುತ್ತಿವೆ. ಕನ್ನಡ ಭಾಷೆಯನ್ನು ಕಂಪ್ಯೂಟರ್‌ಗಳಿಗೆ ಅಳವಡಿಸಿ ಕೊಳ್ಳಬೇಕಿದ್ದಲ್ಲಿ, ಅದಕ್ಕೆ ಕನ್ನಡ ಪದರಚನೆ ಮತ್ತು ವಾಕ್ಯರಚನೆಗಳನ್ನು ತಿಳಿಸಿಕೊಡುವ ತಂತ್ರಾಶವನ್ನು ತಯಾರಿಸಿಕೊಡುವುದು ಅವಶ್ಯ. ಇದಕ್ಕೆ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಇಲ್ಲವೇ ಇಂಗ್ಲಿಷ್ ವ್ಯಾಕರಣ ನಿಯಮಗಳನ್ನು ಕನ್ನಡದವೆಂದು ಭ್ರಮಿಸುವ ಕನ್ನಡ ವ್ಯಾಕರಣಗಳಿಂದ ಏನೂ ಪ್ರಯೋಜನ

ವಾಗಲಾರದು. ಕನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಸಿದ್ಧಪಡಿಸಿದಲ್ಲಿ ಮಾತ್ರ, ಅಂತಹ ವ್ಯಾಕರಣವನ್ನು ಬಳಸಿ ಕಂಪ್ಯೂಟರ್‌ಗಳಿಗೆ ಉತ್ತಮವಾದ ಕನ್ನಡ ತಂತ್ರಾಂಶವನ್ನು ತಯಾರಿಸಿಕೊಡಲು ಸಾಧ್ಯ.

ಇಂತಹ ಕನ್ನಡದ್ದೇ ಆದ ತಂತ್ರಾಂಶದ ಮೂಲಕ, ನಾವು ಬರೆದಿರುವ ಕನ್ನಡ ಪದಗಳನ್ನು ಮತ್ತು ವಾಕ್ಯಗಳನ್ನು ಕಂಪ್ಯೂಟರ್ ಮೂಲಕ ತಿದ್ದಲು ಸಾಧ್ಯವಾಗ ಬಹುದು, ಮತ್ತು ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಬರೆದ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನೂ ಕಂಪ್ಯೂಟರ್ ಮೂಲಕ ಮಾಡಿಸಲು ಸಾಧ್ಯವಾಗಬಹುದು. ಹಾಗಾಗಿ, ಈ ಕಂಪ್ಯೂಟರ್‌ಗಳ ಹೊಸ ಯುಗದಲ್ಲಿ ಕನ್ನಡ ವ್ಯಾಕರಣಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಬರುವುದರಲ್ಲಿ ಸಂಶಯವಿಲ್ಲ.

Eke →

೪.೫ ಶಬ್ದಬ್ರಹ್ಮರು ಎಡವಿದಾಗ

ಶಬ್ದಕ್ಕೆ ಅರ್ಥ ಹೇಳುವುದೂ ಒಂದು ಕಲೆಯೇ ಎಂಬುದನ್ನು ಒಪ್ಪಬೇಕು. ಯಾಕೆಂದರೆ, ಈ ಕಾರ್ಯದಲ್ಲಿ ವಿದ್ವಾಂಸರಿಗಿಂತಲೂ ಕವಿಗಳಿಗೇ ಅಗ್ರಸ್ಥಾನ. ಕೆಲವೆಡೆಗಳಲ್ಲಿ ಒಂದು ಶಬ್ದ ಮತ್ತು ಅದರ ಅರ್ಥ ಇವುಗಳೊಳಗೆ ಯಾವ ರೀತಿಯ ಚಾರಿತ್ರಿಕ ಸಂಬಂಧವಿಲ್ಲದಿದ್ದರೂ ಕವಿಗಳು ಆ ಅರ್ಥ ಕೊಟ್ಟುದ ರಿಂದಾಗಿ ಅದಕ್ಕೆ ಮಾನ್ಯತೆ ಬರುತ್ತದೆ. ಹಾಗೆಂದು ವಿದ್ವಾಂಸರು ತಮ್ಮ ಶಾಸ್ತ್ರೀಯ ಕೃತಿಗಳಲ್ಲೂ ಕವಿತ್ವಕ್ಕೆ ಇಲ್ಲವೇ ಕಲ್ಪನಾವಿಲಾಸಕ್ಕೆ ಮಾರುಹೋದರಾದರೆ, ಅಂತಹ ವಿದ್ವಾಂಸರು ಎಡವಿದ್ದಾರೆಂದೇ ಹೇಳಬೇಕಾಗುತ್ತದೆ.

ಕೆಂಪಗಿರುವುದು ಕೆನ್ನೆ (ಆರೋಗ್ಯವಂತರ ಕೆನ್ನೆ ಕೆಂಪಾಗಿರುವುದರಿಂದ) ಎಂದಾಗಲಿ, ಪರನೆ ಪರಿದು ಹೋಗುವ ಸ್ವಭಾವವುಳ್ಳುದೇ ಪರ್ದು > ಹದ್ದು ಎಂದಾಗಲಿ, ಮೇಯುವುದರಲ್ಲಿ ಹಿರಿದೆನಿಸಿದ್ದನ್ನು ಕಂಡುಹಿಡಿದುದೇ ಮೇಕೆ ಎಂದಾಗಲಿ ಶಂ.ಭಾ.ಜೋಶಿಯವರು ವಾದಿಸಿದರೆ, ಅದನ್ನು ತಪ್ಪೆಂದು ಶಾಸ್ತ್ರೀಯವಾಗಿ ವಾದಿಸಲು ಸಾಧ್ಯವಾಗದಿರಬಹುದು. ಕುಡು-ಕುಡನೆ ನಡುಗುವು ದಕ್ಕೆ ಹಚ್ಚುವ ಚಳಿಯನ್ನು ಕೋಡು ಎಂದೂ, ಆ ಚಳಿಯಿನ್ನೂ ಜಾಸ್ತಿಯಾಗಿ ಕುಳ್ಳಿರಬೇಕಾದ ಪರಿಸ್ಥಿತಿ ಬಂದರೆ ಅದಕ್ಕೆ ಕುಳಿರ್ ಎಂಬ ಹೆಸರೆಂದೂ ಅವರು ಸಾರಿದರೂ ಅವರ ಈ ಕವಿತ್ವಕ್ಕೆ ಕೆಲವರು ತಲೆದೂಗಬಹುದು (ಶಂ.ಭಾ. ಜೋಶಿಯವರ ಕನ್ನುಡಿಯ ಹುಟ್ಟು ಎಂಬ ಪುಸ್ತಕವನ್ನು ನೋಡಿ).

ಆದರೆ, ಬೆರಲ್ ಎಂಬ ಶಬ್ದದಿಂದ ಬೆರಂಟು ಎಂಬುದು ಸಿದ್ದವಾಗಿದೆ ಯೆಂದಾಗಲಿ, ಕೂಳ್ (ಅನ್ನ)ವನ್ನು ತಿಂದು ತಿರುಗುವುದರಿಂದಾಗಿ ಕೂಳಿ > ಗೂಳಿ ಎಂಬ ಪದ ಸಿದ್ಧವಾಗಿದೆಯೆಂದಾಗಲಿ, ಸುದ್ದಿಗಳನ್ನು ಬೇರೆಯವರಿಗರಿಯ ದಂತೆ ಹೀರಿಕೊಂಡು ಬರುವವನೇ ಹೇರ ಇಲ್ಲವೇ ಹೇರಿಗೆ ಎಂದಾಗಲಿ ವಾದಿಸಹೊರಟರೆ ಅದಕ್ಕೆ ಶಾಸ್ತ್ರದ ಮನ್ನಣೆ ದೊರಕಲಾರದು. ಶಬ್ದಗಳಲ್ಲಿ

Eke →

ಶಬ್ದ ಬ್ರಹ್ಮರು ಎಡವಿದಾಗ

ಬರುವ ಪ್ರತಿಯೊಂದು ವ್ಯಂಜನಕ್ಕೆ ಇಲ್ಲವೇ ಸ್ವರಕ್ಕೆ ಅದರದೇ ಆದ ಚರಿತ್ರೆ ಯಿದ್ದು, ಬರಿಯ ಸಾರೂಪ್ಯದ ಆಧಾರದ ಮೇಲೆ ಶಬ್ದಗಳೊಳಗೆ ಸಂಬಂಧವನ್ನು ಕಲ್ಪಿಸಲು ಸಾಧ್ಯವಾಗದು.

Eke →

ಸ್ವರ ಮತ್ತು ವ್ಯಂಜನಗಳ ಚರಿತ್ರೆ

ಕನ್ನಡ ಶಬ್ದಗಳಲ್ಲಿ ಬರುವ ಸ್ವರ ಮತ್ತು ವ್ಯಂಜನಗಳ ಚರಿತ್ರೆಯನ್ನು ಬರೀ ಕನ್ನಡ ಶಬ್ದಗಳನ್ನು ಮಾತ್ರವೇ ಪರಿಶೀಲಿಸುವುದರ ಮೂಲಕ ತಿಳಿಯಲು ಸಾಧ್ಯವಾಗದು. ಇದಕ್ಕಾಗಿ ಕೆಲವೊಮ್ಮೆ ತಮಿಳು, ತೆಲುಗು, ತುಳು, ಗೋಂಡಿ, ಕುಡುಖ್ ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿ ಬರುವ ಶಬ್ದಗಳನ್ನೂ ಅಭ್ಯಾಸ ಮಾಡುವ ಅವಶ್ಯಕತೆ ಕಂಡುಬರುತ್ತದೆ.

ಉದಾಹರಣೆಗಾಗಿ, ಬೆರಂಟು ಎಂಬ ಶಬ್ದದಲ್ಲಿ ಬರುವ ಎರಡನೆಯ ವ್ಯಂಜನವು ಅಕಾರವಾಗಿದ್ದು, ಕನ್ನಡದಲ್ಲಿ ಅದು ರಕಾರವಾಗಿದೆಯೆಂದು, ಮತ್ತು ಬೆರಲ್ ಎಂಬುದರಲ್ಲಿ ಈ ವ್ಯಂಜನಕ್ಕೆ ರಕಾರವೇ ಮೂಲವಾಗಿತ್ತೆಂದು ಇಂತಹ ಅಭ್ಯಾಸದಿಂದ ಸಿದ್ಧಿಸುತ್ತದೆ. ಅವುಗಳೊಳಗೆ ಅರ್ಥದಲ್ಲಿ ಸಂಬಂಧ ತೋರಬಹು ದಾದರೂ ಶಬ್ದಗಳ ಮಟ್ಟಿಗೆ ಸಂಬಂಧವಿಲ್ಲ.

ಕೂಳ್-ಗೂಳ್ ಎಂಬವುಗಳಲ್ಲೂ ಹೀಗೆಯೇ. ಅವುಗಳೊಳಗೆ ಅರ್ಥ ಸಾಮ್ಯ ಕಾಣಿಸುತ್ತದೆ, ಆದರೆ ಶಬ್ದ ಸಂಬಂಧವಿಲ್ಲ. ಕೂಳ್ ಎಂಬುದು ಹಳೆಗನ್ನಡ ದಲ್ಲೇನೇ ಕೂಳ್ ಎಂದಿದೆ. ಆದರೆ, ಗೂಳ್ ಎಂಬುದರಲ್ಲಿರುವ ಳಕಾರ ಈ ರೀತಿ ಐಕಾರದಿಂದ ಬಂದಿದೆಯೆಂದು ವಾದಿಸಲು ಯಾವ ಆಧಾರವೂ ಇಲ್ಲ. ಅದು ಮೂಲದಲ್ಲೂ ಳಕಾರವಾಗಿಯೇ ಇದ್ದಿರಬೇಕು. ಹೀರು ಎಂಬ ಪದದಿಂದ ಹೇರ ಇಲ್ಲವೇ ಹೇರಿಗ ಎಂಬ ಪದವನ್ನು ಶಾಸ್ತ್ರೀಯವಾಗಿ ಸಾಧಿಸಲು ಸಾಧ್ಯವಿಲ್ಲವೇಕೆಂದರೆ, ಕನ್ನಡದ ಚರಿತ್ರೆಯಲ್ಲಿ ಈ ಎಂಬ ಸ್ವರ ಏ ಎಂಬ ಸ್ವರವಾಗಿದೆಯೆಂದು ಹೇಳಲು ಯಾವ ಆಧಾರವೂ ಇಲ್ಲ.

Eke →

ನಮ್ಮ ನುಡಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಬರೆದ ನಮ್ಮ ನುಡಿ ಎಂಬ ಪುಸ್ತಕ ದಲ್ಲೂ ಇಂತಹವೇ ಹಲವು ಕಲ್ಪನೆಗಳನ್ನು ಕಾಣುತ್ತೇವೆ. ಅಂದವಾದ ಕೈ ಅಂಗೈ, ಅಂಗೈಯಲ್ಲಿ ಇರುವುದು ಅಂಕೆಯಲ್ಲಿರುತ್ತದೆ, ಹಾಗಾಗಿ ಅಂಕೈಯೇ ಅನಂತರ ಅಂಕೆ ಎಂದಾಗಿರಬೇಕು ಎಂಬುದು ಇಂತಹ ಕಲ್ಪನೆಗಳಲ್ಲೊಂದು. ಬಾಯಲ್ಲಿ ನೀರೂರುವಂತೆ ಮಾಡುವ ಪದಾರ್ಥ ಊರ್ಪು > ಉಪ್ಪು ಎಂಬು ದಿನ್ನೊಂದು. ಇರು ಎಂಬ ಧಾತುವಿನಿಂದ ಏತೆ, ಐದಾನೆ ಎಂಬ ರೂಪಗ ಳಾದಂತೆ, ಕೈಯ ಬೆರಳುಗಳ ಹಾಗೆ ಒತ್ತಾಗಿರು ಎಂಬ ಅರ್ಥದಲ್ಲಿ ಐದು ಎಂಬ ಪದ ಬಂದು ಅದೇ ಐದು ಎಂಬ ಸಂಖ್ಯಾವಾಚಿಯಾದ ಪದವಾಗಿರಲೂ ಸಾಕು ಎಂಬುದು ಮತ್ತೊಂದು.

ಮೇಲಿನಿಂದ ಮೇಲೆ ನೋಡುವವರಿಗೆ ಇವೆಲ್ಲವೂ ಯುಕ್ತಿಯುಕ್ತವಾದ ವಾದ ಗಳಾಗಿಯೇ ತೋರಬಹುದಾದರೂ ಒಂದು ಮುಖ್ಯ ಚಾರಿತ್ರಿಕ ಕಾರಣಕ್ಕಾಗಿ ಇವು ಮೂರನ್ನೂ ತಪ್ಪು ಕಲ್ಪನೆಗಳೆಂದು ತ್ಯಜಿಸಬೇಕಾಗುತ್ತದೆ. ಕನ್ನಡದವೇ ಆದ ಚಂದ, ಚನ್ನಾಗಿ ಮೊದಲಾದ ಪದಗಳಿಂದ ಮತ್ತು ಇತರ ದ್ರಾವಿಡ ಭಾಷೆಗಳಲ್ಲಿ ಕಾಣಿಸುವ ಪದಗಳಿಂದ, ಕನ್ನಡದ ಅಂದ ಎಂಬ ಪದದ ಮೂಲವೂ ಚಂದ ಎಂದೇ ಇದ್ದಿರಬೇಕೆಂದು ನಿರ್ಧರಿಸಬೇಕಾಗುತ್ತದೆ.

ಆದಿ ಚಕಾರ ವಿಕಲ್ಪವಾಗಿ ಲೋಪಗೊಂಡಿರುವುದೇ ಈ ರೀತಿ ಕನ್ನಡದಲ್ಲಿ ಚಂದ-ಅಂದ ಎಂಬುದಾಗಿ ಎರಡೆರಡು ರೂಪಗಳು ಕಾಣಿಸಲು ಕಾರಣ. ಅಂಗೈ ಮತ್ತು ಅಂಕೆ ಎಂಬ ಪದಗಳ ಮೂಲರೂಪಕ್ಕೆ ಇಂತಹ ಆದಿಚಕಾರವನ್ನು ಕಲ್ಪಿಸಿಕೊಳ್ಳಲು ಯಾವ ಆಧಾರವೂ ಇಲ್ಲವಾದುದರಿಂದ, ಅವಕ್ಕೂ ಅಂದ ಎಂಬ ಪದಕ್ಕೂ ನಡುವೆ ಯಾವ ಸಂಬಂಧವೂ ಸಿದ್ದಿಸದು.

ಉಪ್ಪು ಎಂಬ ಪದದ ಮೂಲವೂ ಚುಪ್ಪು ಎಂದಿದ್ದಿರಬೇಕೆಂದು ಕುಯಿ, ಗೋಂಡಿ, ಪಾರ್ಜಿ ಮೊದಲಾದ ಮಧ್ಯದ್ರಾವಿಡ ಭಾಷೆಗಳ ಆಧಾರದ ಮೇಲೆ ಹೇಳಬಹುದು. ಐದು ಎಂಬ ಪದದಲ್ಲೂ ಇಂತಹ ಆದಿಚಕಾರವಿತ್ತು. ಉದಾ ಹರಣೆಗಾಗಿ, ಪಾರ್ಜಿಯಲ್ಲಿ ಈ ಪದ ಚೇದು ಎಂದೂ, ಕುಯಿಯಲ್ಲಿ ಸಿಂಗಿ ಎಂದೂ ಬರುತ್ತದೆ. ಊರು (ಮೂಲ ಊರು) ಎಂಬ ಪದಕ್ಕಾಗಲಿ, ಇರು ಎಂಬ ಪದಕ್ಕಾಗಲಿ ಇಂತಹ ಆದಿಚಕಾರವನ್ನು ಕಲ್ಪಿಸಿಕೊಳ್ಳಲು ಆಧಾರವಿಲ್ಲವಾದ ಕಾರಣ, ಮೇಲೆ ಹೇಳಿದ ಮಾಸ್ತಿಯವರ ಕಲ್ಪನೆಯನ್ನು ಸರಿಯೆಂದು ಸಮರ್ಥಿಸಿ ಕೊಳ್ಳಲು ಸಾಧ್ಯವಾಗದು. ಇಲ್ಲ ಎಂಬ ಪದಕ್ಕೂ ಚಿಲ್ ಎಂಬ ರೂಪವಿದ್ದಿತಾದ ಕಾರಣ, ಅದನ್ನೂ ಇರ್ ಎಂಬ ಧಾತುವಿನಿಂದ ಸಾಧಿಸುವುದು ಕಷ್ಟಸಾಧ್ಯ.

Eke →

ಬೇರೆ ಕೆಲವು ಕಲ್ಪನೆಗಳು

ಮಾಸ್ತಿಯವರ ಪುಸ್ತಕದಲ್ಲಿ ಇದೇ ರೀತಿಯ ಇನ್ನೂ ಹಲವಾರು ಕಲ್ಪನೆಗಳನ್ನು ಕಾಣಬಹುದು. ಇವುಗಳಲ್ಲಿ ಕೆಲವನ್ನು ಮೇಲಿನ ಕಲ್ಪನೆಗಳ ಹಾಗೆ ತಪ್ಪೆಂದು ನಿರ್ಧಾರವಾಗಿ ಹೇಳಬಹುದಾದರೆ, ಬೇರೆ ಕೆಲವನ್ನು ಸರಿಯೆಂದು ಇಲ್ಲವೇ ತಪ್ಪೆಂದು ವಾದಿಸಲು ಯಾವ ಆಧಾರವೂ ಇಲ್ಲವಾದ್ದರಿಂದ ಸದ್ಯಕ್ಕಂತೂ ಹಾಗೆಯೇ ಬಿಡಬೇಕಾಗುತ್ತದೆ.

ಬಾಗಿ ಬಾಗಿ ಮಾಡುವ ಕೆಲಸವಾದ್ದರಿಂದ ಕುಣಿ ಎಂಬುದಕ್ಕೂ ಕೂನು ಎಂಬುದಕ್ಕೂ ಸಂಬಂಧ ಕಲ್ಪಿಸಿದ್ದಾರೆ, ಆದರೆ ಕೂನು ಎಂಬುದರ ನಕಾರ ಕುಣಿ ಎಂಬುದರಲ್ಲಿ ಣಕಾರವಾದುದು ಹೇಗೆ ಎಂಬುದನ್ನು ಮಾತ್ರ ಹೇಳಿಲ್ಲ. ಕಳ್ ‘ಮರೆಸು’ ಎಂಬುದರಿಂದ ಕಳತಲೆ > ಕತ್ತಲೆ ಎಂಬ ಪದ ಬಂದಿದೆಯೆಂದಿ ದ್ದಾರೆ, ಆದರೆ ಈ ಎರಡನೆಯ ಪದ (ಕಳತಲೆ ಎಂಬುದು) ಕರಿ ಎಂಬುದರಿಂದ ಸಿದ್ಧಿಸಿದೆಯೆಂದು ಹೇಳಲು ಚಾರಿತ್ರಿಕ ಆಧಾರವಿದೆ. ಪಿತ್ (ಹಿಂದೆ) ಎಂಬ ಪದದ

Eke →

ಪಾರಿಭಾಷಿಕ ಪದಗಳ ಸೃಷ್ಟಿ

ಉಚ್ಚಾರಣೆ ಹಿಂದುಮುಂದಾಗಿ ತಿಪ್ಪೆ ಎಂದಾಗಿದೆಯೆಂದು ಅವರು ಹೇಳಿರುವು ದಂತೂ ತೀರ ವಿಚಿತ್ರ.

ಬೆನ್ನು ಎಂಬ ಪದವನ್ನು ಮಾಸ್ತಿಯವರು ಪಿನ್ ಎಂಬ ಪದದಿಂದ ಸಾಧಿಸು ತ್ತಾರೆ. ಆದರೆ ಕನ್ನಡದ ಇಕಾರ ಎಕಾರವಾದುದು ಅಕಾರ ಇಲ್ಲವೇ ಎಕಾರ ಪರದಲ್ಲಿ ಬಂದಾಗ ಮಾತ್ರ (ಉದಾ: ಇರ್ > ಎರಡು, ನಿಲ್ಲು > ನೆಲೆ). ಬೆನ್ನು ಎಂಬ ಪದದ ಮೂಲ ‘ವೆರಿನ್’ ಎಂದೇನೋ ಇರಬೇಕು (ತುಳುವಿನ ಬೆರಿ, ತಮಿಳಿನ ವೆರಿನ್ ಇತ್ಯಾದಿ ಪದಗಳನ್ನು ಇದಕ್ಕೆ ಆಧಾರವಾಗಿ ಕೊಡಬಹುದು).

ಒಗೆದು ಒಣಗಿಸಿದ ಬಟ್ಟೆಯನ್ನು ಮಡಿಸುತ್ತೇವೆ, ಆದ್ದರಿಂದ ಮಡಿಸಿದ ಬಟ್ಟೆ ಮೈಲಿಗೆ ಅಲ್ಲದ ಬಟ್ಟೆ ಮಡಿ ಆಯಿತು, ಇದನ್ನು ಮಾಡುವವನೇ ಮಡಿ ವಳ ಎಂಬ ಮಾಸ್ತಿಯವರ ವಾದವನ್ನು ಸದ್ಯಕ್ಕಂತೂ ತಪ್ಪೆಂದು ಸಾಧಿಸಲು ಸಾಧ್ಯವಿಲ್ಲವಾದರೂ ಅದು ಮೇಲಿನವುಗಳ ಹಾಗೆಯೇ ಇದೆ.

Eke →

ರೂಢಿಮೂಲವಾದ ಸಂಬಂಧ

ಭಾಷೆಯಲ್ಲಿ ಬರುವ ಹೆಚ್ಚಿನ ಪದಗಳಿಗೂ ಅವು ಸೂಚಿಸುವ ವಸ್ತುವಿನೊಡನೆ ಇಲ್ಲವೇ ವಿಷಯದೊಡನೆ ನೇರವಾದ ಸಂಬಂಧವಿಲ್ಲ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ರೂಢಿಮೂಲವಾದ ಸಂಬಂಧ ಮಾತ್ರವೇ ಇವುಗಳೊಳಗೆ ಇರುವಂತಹದು ಎಂಬುದನ್ನು ಮರೆಯಬಾರದು. ಪದಕ್ಕೂ ಅದು ಸೂಚಿಸುವ ವಸ್ತುವಿಗೂ ನೇರವಾದ ಸಂಬಂಧ ಇದೆಯಾದರೆ, ಕನ್ನಡದ ಮರಕ್ಕೆ ಸಂಸ್ಕೃತ ದಲ್ಲಿ ವೃಕ್ಷ, ಹಿಂದಿಯಲ್ಲಿ ಪೇಡ್, ಮರಾಠಿಯಲ್ಲಿ ಝಾಡ್, ಇಂಗ್ಲಿಷ್‌ನಲ್ಲಿ ಟ್ರೀ ಎಂದೆಲ್ಲ ಬೇರೆ ಹೆಸರುಗಳಿರಲು ಸಾಧ್ಯವಾಗುತ್ತಿರಲಿಲ್ಲ.

ಪದಗಳಿಗೂ, ವಸ್ತು ಇಲ್ಲವೇ ವಿಷಯಗಳಿಗೂ ನಡುವಿರುವ ಈ ಸಂಬಂಧ ವನ್ನು, ಮತ್ತು ಅದರ ಚರಿತ್ರೆಯನ್ನು ತಿಳಿಯುವಲ್ಲಿ ತರ್ಕಕ್ಕೆ ಯಾವ ಸ್ಥಾನವೂ ಇಲ್ಲ. ಭಾಷೆಯ ಸ್ವರೂಪವನ್ನು ತರ್ಕದ ಮೂಲಕ ವಿಶ್ಲೇಷಿಸ ಹೊರಟವರಲ್ಲಿ ಒಬ್ಬರೂ ಇದುವರೆಗೆ ಜಯಶೀಲರಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

Eke →

೪. ಪಾರಿಭಾಷಿಕ ಪದಗಳ ಸೃಷ್ಟಿ

ಯಾವುದಾದರೊಂದು ಶಾಸ್ತ್ರದಲ್ಲಿ ಹೊಸ ವಿಷಯಗಳನ್ನು ಕಂಡುಹಿಡಿದ ಮೇಲೆ, ಅದನ್ನು ವರದಿಮಾಡಬೇಕಾಗಿ ಬಂದಾಗ, ಹಲವು ಬಾರಿ ಹೊಸ ಪದಗಳನ್ನೂ ಸೃಷ್ಟಿಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ. ಭಾಷೆಯಲ್ಲಿರುವ ಪದಗಳು ಈ ಹೊಸ ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಅಡಕವಾಗಿ ವರ್ಣಿಸಲು ಶಕ್ತವಾಗ ದಿರುವುದೇ ಇದಕ್ಕೆ ಕಾರಣ. ಈ ಸಮಸ್ಯೆ ಹೆಚ್ಚಾಗಿ ಶಾಸ್ತ್ರೀಯ ಬರಹಗಳಲ್ಲಿ

ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಈ ರೀತಿ ಹೊಸದಾಗಿ ಸೃಷ್ಟಿಯಾಗುವ ಪದಗಳು ಶಾಸ್ತ್ರೀಯ ಬರಹಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ, ಮತ್ತು ಅವುಗಳಲ್ಲಿ ಹೆಚ್ಚಿನವೂ ಅಂತಹ ಬರಹಗಳಿಗಷ್ಟೇ ಸೀಮಿತವಾಗಿರುತ್ತವೆ.

ಇಂತಹ ಪದಗಳನ್ನು ನಾವು ಪಾರಿಭಾಷಿಕ ಪದಗಳೆಂದು ಕರೆಯುತ್ತೇವೆ. ಇವುಗಳ ಅರ್ಥವೇನೆಂಬುದನ್ನು ತಿಳಿಯಲು, ಅವಕ್ಕೆ ಸಂಬಂಧಿಸಿದ ಶಾಸ್ತ್ರಗಳನ್ನು ತಿಳಿದುಕೊಂಡಿರುವುದು ಅತ್ಯವಶ್ಯ. ಉದಾಹರಣೆಗಾಗಿ, ಸಮಾಸ ಎಂಬುದು ವ್ಯಾಕರಣ ಶಾಸ್ತ್ರಕ್ಕೆ ಸಂಬಂಧಿಸಿರುವ ಒಂದು ಪಾರಿಭಾಷಿಕ ಪದ. ಇದರ ಅರ್ಥ ವೇನೆಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದ್ದಲ್ಲಿ, ಮೊದಲಿಗೆ ಅದಕ್ಕೆ ಸಂಬಂಧಿಸಿದ ವ್ಯಾಕರಣ ತತ್ವಗಳು ಎಂತಹವು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಇತ್ತೀಚೆಗೆ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳಲ್ಲಿ ಹೆಚ್ಚಿನವೂ ಇಂಗ್ಲಿಷ್ ಭಾಷೆಯಲ್ಲೇ ವರದಿಯಾಗುತ್ತಿವೆ. ಹಾಗಾಗಿ, ಅವಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪಾರಿಭಾಷಿಕ ಪದಗಳೂ ಆ ಭಾಷೆಯಲ್ಲೇ ಹೆಚ್ಚು ಹೆಚ್ಚು ಸೃಷ್ಟಿ ಯಾಗುತ್ತಿವೆ. ಆದರೆ, ಕನ್ನಡದಂತಹ ಇತರ ಭಾಷೆಗಳಲ್ಲಿ ಈ ಹೊಸ ವಿಷಯ ಗಳನ್ನು ವಿವರಿಸಬೇಕಾದಾಗಲೆಲ್ಲ, ಅವುಗಳಲ್ಲೂ ತಕ್ಕುದಾದ ಪಾರಿಭಾಷಿಕ ಪದಗಳನ್ನು ಸೃಷ್ಟಿಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ. ಈ ಪಾರಿಭಾಷಿಕ ಪದಗಳ ಸೃಷ್ಟಿಯನ್ನು ಯಾವ ರೀತಿಯಲ್ಲಿ ನಡೆಸಬಹುದು ಎಂಬುದನ್ನು ಪರಿಶೀಲಿಸುವುದೇ ಈ ಲೇಖನದ ಗುರಿ.

Eke →

ಎರಡು ರೀತಿಯ ವ್ಯಾಕರಣ ಜ್ಞಾನಗಳು

ಒಂದು ಭಾಷೆಯನ್ನು ಬಳಸುತ್ತಿರುವಾಗ, ನಾವು ಎರಡು ರೀತಿಯ ವ್ಯಾಕರಣ ಜ್ಞಾನಗಳನ್ನು ಉಪಯೋಗಿಸುತ್ತಿರುತ್ತೇವೆ. ನಮ್ಮ ಅರಿವಿಗೆ ಎಟಕದಂತಹ ವ್ಯಾಕರಣ ಜ್ಞಾನವೊಂದು; ಇದನ್ನು ನಾವು ನಮ್ಮ ಅರಿವಿಲ್ಲದಂತೆಯೇ ಬಳಸು ತಿರುತ್ತೇವೆ; ಇದರಲ್ಲಿ ನಡೆಯುವ ಬದಲಾವಣೆಗಳೂ ನಮಗೆ ಗೊತ್ತಾಗದಂತೆ ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ನಮ್ಮ ಭಾಷೆಯ ಬಗೆಗಿರುವ ಈ ವ್ಯಾಕರಣ ಜ್ಞಾನವನ್ನು ನಾವು ಚಿಕ್ಕಂದಿನಲ್ಲಿ ಭಾಷೆಯನ್ನು ಪಡೆಯುವಾಗ ನಮಗರಿವಿಲ್ಲ ದಂತೆಯೇ ಪಡೆದಿರುತ್ತೇವೆ.

ಇಂತಹ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ಮಾತ್ರವಲ್ಲದೆ, ನಮ್ಮ ಭಾಷೆಯ ಕುರಿತಾಗಿ ಅರಿವಿಗೆ ಎಟಕುವ ವ್ಯಾಕರಣ ಜ್ಞಾನವೂ ನಮ್ಮಲ್ಲಿದೆ. ಸ್ವಲ್ಪ ಮಟ್ಟಿಗೆ ನಾವಿದನ್ನು ಕನ್ನಡದ ಕ್ಲಾಸಿನಲ್ಲಿ ಕಲಿತಿರುತ್ತೇವೆ. ಅನಂತರವೂ ಭಾಷೆಯ ಕುರಿತಾಗಿ ನಮಗಿರುವ ಕುತೂಹಲವನ್ನು ತಣಿಸುವುದಕ್ಕಾಗಿ ಲೇಖನಗಳ ನ್ನೋದಿಯೋ ಅಥವಾ ನಮ್ಮ ಮಾತನ್ನೇ ಗಮನಿಸಿಯೋ ಆ ಮಾತಿನ ಆಂತರಿಕ ರಚನೆಯಂತಹದು ಎಂಬುದನ್ನು ಸ್ವಲ್ಪಮಟ್ಟಿಗೆ ಅರಿತಿರುತ್ತೇವೆ. ಪಾರಿಭಾಷಿಕ

Eke →

ಪಾರಿಭಾಷಿಕ ಪದಗಳ ಸೃಷ್ಟಿ,

ಪದಗಳ ಸೃಷ್ಟಿ ಪ್ರಾಮುಖ್ಯವಾಗಿ ಈ ಎರಡನೇ ರೀತಿಯ ವ್ಯಾಕರಣ ಜ್ಞಾನದ ಆಧಾರದ ಮೇಲೆ ನಡೆಯಬೇಕಾಗಿದೆ.

ಹಾಗಾಗಿ, ಇಂತಹ ಪದಗಳನ್ನು ಸೃಷ್ಟಿಸುವವರಿಗೆ ಸಾಕಷ್ಟು ಅರಿವಿಗೆ ಎಟಕುವ ವ್ಯಾಕರಣ ಜ್ಞಾನವಿಲ್ಲದಿದ್ದಲ್ಲಿ ಅವರು ಸೃಷ್ಟಿಸುವ ಪದಗಳು ಭಾಷೆಗೆ ಸರಿಯಾಗಿ ಹೊಂದಿಕೊಳ್ಳಲಾರವು. ಇದಲ್ಲದೆ, ಇಂತಹ ಪದಗಳ ಮೂಲಕ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು. ಅವನ್ನು ಭಾಷೆ (ಎಂದರೆ ಭಾಷೆಯನ್ನು ಬಳಸುವ ಸಮಾಜ) ಸ್ವೀಕರಿಸದಿರಲೂ ಸಾಧ್ಯವಿದೆ. ಎಂದರೆ, ಹೀಗೆ ಸೃಷ್ಟಿಯಾದ ಪದಗಳು ಪಾರಿಭಾಷಿಕ ಪದಕೋಶಗಳಲ್ಲಷ್ಟೇ ಉಳಿಯಲೂ ಸಾಧ್ಯವಿದೆ.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಪಾರಿಭಾಷಿಕ ಪದ ಗಳನ್ನು ಒಂದು ಭಾಷೆಯ ವಿದ್ವಾಂಸರು ತಮ್ಮ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಆಧಾರದ ಮೇಲೆ ರಚಿಸಿ ಬರಹಗಳಲ್ಲಿ ಬಳಸುತ್ತಾರಾದರೂ, ಅನಂತರ ಭಾಷೆಯಲ್ಲಿ ನಡೆಯುವ ಅದರ ಬಳಕೆ ಅರಿವಿಗೆ ಎಟಕದ ವ್ಯಾಕರಣಜ್ಞಾನದ ಅಂಗವಾಗಿಯೇ ನಡೆಯಬೇಕಾಗುತ್ತದೆ. ಈ ಎರಡನೆಯ ಕ್ರಿಯೆ ಸಮರ್ಪಕವಾಗಿ ನಡೆಯಬೇಕಿದ್ದಲ್ಲಿ ಅಂತಹ ಪದಗಳು ಭಾಷೆಯ ರಚನೆಗೆ ಹೊಂದುವಂತಿರು ವುದು ಅವಶ್ಯ.

ವಿದ್ವಾಂಸರು ಸೃಷ್ಟಿಸುವ ಹೊಸ ಹೊಸ ಪಾರಿಭಾಷಿಕ ಪದಗಳು ಭಾಷೆ ಯಲ್ಲಿ ಸರಿಯಾಗಿ ಹೊಂದಿಕೊಂಡು, ಅವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಬಳಸುವ ಇತರ ವಿದ್ವಾಂಸರಿಗೆ ತೊಂದರೆಯಾಗದಿರಬೇಕಾದಲ್ಲಿ, ಅಂತಹ ಪದ ಗಳನ್ನು ಸೃಷ್ಟಿಸುವವರೆಲ್ಲ ಅತ್ಯವಶ್ಯವಾಗಿಯೂ ತಿಳಿದುಕೊಳ್ಳಬೇಕಾಗಿರುವ ವಿಷಯಗಳು ಕೆಲವಿವೆ.

Eke →

ಪದಗಳ ಮೂಲ

ಹೊಸತಾಗಿ ಪದಗಳನ್ನು ಸೃಷ್ಟಿ ಮಾಡುವಾಗ ಅದಕ್ಕೆ ಬೇಕಾಗುವ ಪದಾಂಶ ಗಳನ್ನು ಎಂದರೆ ಧಾತುಗಳನ್ನು ಮತ್ತು ಪ್ರತ್ಯಯಗಳನ್ನು ಎಲ್ಲಿಂದ ಪಡೆಯಬೇಕು ಎಂಬುದು ಒಂದು ಪ್ರಶ್ನೆ. ಕನ್ನಡದಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿ ಮಾಡು ವವರೆಲ್ಲ ಇವನ್ನು ಸಂಸ್ಕೃತದಿಂದ ಎತ್ತಿಕೊಳ್ಳುವುದು ರೂಢಿ. ಆದಷ್ಟು ಮಟ್ಟಿಗೆ ಇವರು ಇಂಗ್ಲಿಷ್‌ನಲ್ಲಿರುವ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ; ಅವು ಕನ್ನಡ ಭಾಷೆಗೆ ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ ಎಂದು ಅನಿಸಿದಲ್ಲಿ ಮಾತ್ರ, ಇವರು ಹೊಸ ಪದಗಳನ್ನು ಸೃಷ್ಟಿಸಲು ಹೋಗುತ್ತಾರೆ.

ಕನ್ನಡದ್ದೇ ಆದ ಧಾತು ಮತ್ತು ಪ್ರತ್ಯಯಗಳನ್ನು ಇಂತಹ ಪಾರಿಭಾಷಿಕ ಪದ ಗಳನ್ನು ಸೃಷ್ಟಿಸುವಲ್ಲಿ ಬಳಸದಿರಲು ಇವರು ಕೊಡುವ ಮುಖ್ಯ ಕಾರಣ ವೇನೆಂದರೆ, ಕನ್ನಡದಲ್ಲಿ ಈ ಧಾತುಗಳಿಗೆ ದಿನಬಳಕೆಯ ಅರ್ಥವಿದ್ದು, ನಿಷ್ಕೃಷ್ಟ

ವಾದ ಅರ್ಥ ಬರುವಂತೆ ಅವನ್ನು ಶಾಸ್ತ್ರೀಯ ಬರಹಗಳಲ್ಲೂ ಬಳಸಿದೆವಾದರೆ ಗೊಂದಲವುಂಟಾಗಲು ಸಾಧ್ಯವಿದೆ ಎಂಬುದು.

ಇಂಗ್ಲಿಷ್, ಫ್ರೆಂಚ್ ಮೊದಲಾದ ಭಾಷೆಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿ ಸುವುದಕ್ಕಾಗಿ ಗ್ರೀಕ್ ಇಲ್ಲವೇ ಲ್ಯಾಟಿನ್ ಭಾಷೆಗಳಿಂದ ಧಾತುಗಳನ್ನು ಮತ್ತು ಪ್ರತ್ಯಯಗಳನ್ನು ಆಮದು ಮಾಡಿಕೊಳ್ಳುವ ಕ್ರಮ ರೂಢಿಗೆ ಬಂದಿತ್ತು. ಕನ್ನಡದ ಮಟ್ಟಿಗೆ ಇದೇ ರೀತಿಯಲ್ಲಿ ಸಂಸ್ಕೃತದಿಂದ ಧಾತುಗಳನ್ನು ಮತ್ತು ಪ್ರತ್ಯಯ ಗಳನ್ನು ಆಮದು ಮಾಡಿಕೊಳ್ಳುವುದು ಅಷ್ಟೇ ಅನುಕೂಲ ಎಂಬುದು ಇವರ ವಾದ.

ಆದರೆ, ದಿನಬಳಕೆಯ ಅರ್ಥವಿರುವ ಪದಗಳನ್ನು ಪಾರಿಭಾಷಿಕ ಪದಗಳಾಗಿ ಬಳಸಿದಲ್ಲಿ ಗೊಂದಲವುಂಟಾಗಬಲ್ಲುದು ಎಂಬ ವಾದ ನಿಜಕ್ಕೂ ಸಾಧಾರವೇ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇಂಗ್ಲಿಷ್‌ನ ಇತ್ತೀಚೆಗಿನ ಪ್ರವೃತ್ತಿ ಯನ್ನು ಗಮನಿಸಿದೆವಾದರೆ, ದಿನಬಳಕೆಯ ಪದಗಳೇ ಹೆಚ್ಚು ಹೆಚ್ಚಾಗಿ ಪಾರಿಭಾಷಿಕ ಪದಗಳ ಸ್ಥಾನದಲ್ಲಿ ಬಳಕೆಗೆ ಬರುತ್ತಿರುವುದು ಕಂಡುಬರುತ್ತಿದೆ.

ಉದಾಹರಣೆಗಾಗಿ, ಗಣಕಯಂತ್ರಕ್ಕೆ (ಕಂಪ್ಯೂಟರ್) ಸಂಬಂಧಿಸಿದ ಪಾರಿ ಭಾಷಿಕ ಪದಗಳಲ್ಲಿ ಹೆಚ್ಚಿನವೂ ದಿನಬಳಕೆಯ ಪದಗಳೇ (mouse, tools, paste, web, ಇತ್ಯಾದಿ). ಇಂತಹ ಪದಗಳನ್ನು ಅಡಕವಾಗಿ ರಚಿಸಲು ಸಾಧ್ಯ ವಾಗದೆ, ದೀರ್ಘವಾದ ಪದಗುಚ್ಛಗಳನ್ನು ಬಳಸಬೇಕಾಗಿ ಬಂದಾಗ, ಅವುಗಳಲ್ಲಿ ಬರುವ ಪದಗಳ ಮೊದಲನೆಯ ಅಕ್ಷರಗಳನ್ನು ಮಾತ್ರ ಬಳಸಿ ಅಡಕವಾದ ಪದಗಳನ್ನು ರಚಿಸುವ ಕ್ರಮವೂ (URL ‘Uniform Resource Locator’, FTP ‘File Transfer Protocol’, VBA ‘Visual Basic for Applications’ ಇತ್ಯಾದಿ) ಇಂಗ್ಲಿಷ್‌ನಲ್ಲಿ ಬೆಳೆದು ಬಂದಿದೆ.

ಕನ್ನಡದಲ್ಲೂ ಇದೇ ವಿಧಾನವನ್ನು ಯಾಕೆ ಬಳಸಬಾರದು? ರಾಜಕೀಯ ಪಕ್ಷಗಳನ್ನು ಹೆಸರಿಸುವಲ್ಲಿ ಮತ್ತು ವ್ಯಕ್ತಿಗಳನ್ನು ಹೆಸರಿಸುವಲ್ಲಿ (ಕುವೆಂಪು, ತರಾಸು, ಅನಕೃ, ಇತ್ಯಾದಿ) ಇಂತಹದೇ ವಿಧಾನ ಈಗಾಗಲೇ ಕನ್ನಡದಲ್ಲಿ ಬಳಕೆಯಲ್ಲಿದೆ. ಅದನ್ನೇ ಪಾರಿಭಾಷಿಕ ಪದಗಳನ್ನು ಉಂಟುಮಾಡುವಲ್ಲೂ ಬಳಸಬಹುದು.

ನಾವು ಗಮನಿಸಬೇಕಾಗಿರುವ ಇನ್ನೊಂದು ವಿಷಯವೇನೆಂದರೆ, ಸಂಸ್ಕೃತ ದಲ್ಲಿ ಹೊಸ ಪಾರಿಭಾಷಿಕ ಪದಗಳನ್ನು ರಚಿಸಬೇಕಾದಾಗ, ಅವರು ಬೇರೆ ಯಾವ ಭಾಷೆಗೂ ಮರೆಹೊಕ್ಕಿರಲಿಲ್ಲ; ಸಂಸ್ಕೃತದವೇ ಆದ ಪದ ಮತ್ತು ಪ್ರತ್ಯಯ ಗಳನ್ನೇ ಬಳಸಿ ತಮಗೆ ಬೇಕಾದ ಹೊಸ ಪದಗಳನ್ನು ಉಂಟುಮಾಡಿಕೊಂಡಿದ್ದರು. ಲ್ಯಾಟಿನ್‌ನಲ್ಲಿಯೂ ಹೀಗೆಯೇ. ಈ ಭಾಷೆಗಳಲ್ಲಿ ಈ ರೀತಿ ತಮ್ಮವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಪಾರಿಭಾಷಿಕ ಪದಗಳನ್ನು ಉಂಟುಮಾಡಿರುವುದು ಗೊಂದಲಕ್ಕೆ ಎಡೆಕೊಡಲಿಲ್ಲವಾದರೆ, ಕನ್ನಡದಲ್ಲಿ ಯಾಕೆ ಗೊಂದಲಕ್ಕೆಡೆ ಕೊಡಬೇಕು?

ಪಾರಿಭಾಷಿಕ ಪದಗಳ ಸೃಷ್ಟಿ,

Eke →

ಎರವಲು ಮತ್ತು ಪದಸೃಷ್ಟಿ

ಒಂದು ಭಾಷೆ ಎಷ್ಟು ಸುಲಭವಾಗಿ ಬೇರೆ ಭಾಷೆಗಳಿಂದ ಪದಗಳನ್ನು ಎರವಲಾಗಿ ಪಡೆದುಕೊಳ್ಳಬಲ್ಲುದು ಎಂಬುದು ಬಹುಶಃ ಅದನ್ನು ಬಳಸುವ ಇಡೀ ಸಮಾಜದ ಅನಿಸಿಕೆಯನ್ನವಲಂಬಿಸಿದೆ. ಕನ್ನಡದಲ್ಲಿ ಇಂತಹ ಎರವಲು ಬಹಳ ಸುಲಭವಾಗಿ ನಡೆಯುತ್ತದೆ, ಆದರೆ, ಇದಕ್ಕೆ ವಿರುದ್ಧವಾಗಿ, ಬಳಸಬೇಕಾಗಿರುವ ಪದಗಳನ್ನೆಲ್ಲ ತಮ್ಮ ಭಾಷೆಗೆ ಭಾಷಾಂತರಿಸಿಕೊಳ್ಳುವ ಪ್ರವೃತ್ತಿ ತಮಿಳಿನಲ್ಲಿ ಕಾಣಿಸುತ್ತದೆ.

ಈ ಎರಡು ವಿಧಾನಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳ ನಡುವೆಯೂ ಇಂತಹದೇ ವ್ಯತ್ಯಾಸವಿರುವುದನ್ನು ಕಾಣಬಹುದು. ಇಂಗ್ಲಿಷ್‌ನಲ್ಲಿ ಎರವಲು ಬಹಳ ಸುಲಭವಾಗಿ ನಡೆಯಬಲ್ಲುದು, ಆದರೆ ಜರ್ಮನ್‌ನಲ್ಲಿ ಭಾಷಾಂತರ ವಿಧಾನವನ್ನು ಬಳಸುವುದೇ ಜಾಸ್ತಿ.

ಕನ್ನಡ ಭಾಷೆಯನ್ನು ಬಳಸುವ ಸಮಾಜ ಎರವಲನ್ನು ಬಹಳ ಸುಲಭವಾಗಿ ಅಂಗೀಕರಿಸಬಲ್ಲುದಾದ ಕಾರಣ, ಪಾರಿಭಾಷಿಕ ಪದಗಳ ಸೃಷ್ಟಿಯಲ್ಲಿ ಸಂಸ್ಕೃತ ಧಾತು ಮತ್ತು ಪ್ರತ್ಯಯಗಳ ಬಳಕೆಗೆ ಈ ಸಮಾಜದಲ್ಲಿ ಹೆಚ್ಚಿನ ವಿರೋಧ ವೇನೂ ತೋರಿಬರುವುದಿಲ್ಲ. ಆ ರೀತಿ ರಚಿತವಾದ ಪಾರಿಭಾಷಿಕ ಪದಗಳನ್ನು ಅರಗಿಸಿಕೊಳ್ಳುವುದು ಮಾತ್ರ ವಿದ್ಯಾರ್ಥಿಗಳಿಗೆ ಮತ್ತು ಇತರ ಓದುಗರಿಗೆ ತುಂಬಾ ಕಷ್ಟವಾಗುತ್ತಿದೆ.

ಇದಲ್ಲದೆ, ಸಂಸ್ಕೃತದ ಬದಲು ಕನ್ನಡದವೇ ಆದ ಪದ ಮತ್ತು ಪ್ರತ್ಯಯ ಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿದಲ್ಲಿ, ಅಂತಹ ಪದಗಳು ಕನ್ನಡದ ಜಾಯಮಾನಕ್ಕೆ ಹೆಚ್ಚು ಹೊಂದಿಕೆಯಾಗಬಲ್ಲುವು ಎಂಬ ವಿಷಯದಲ್ಲಿ ಸಂಶಯವಿಲ್ಲ. ಹೊಸಗನ್ನಡದ ಪದಗಳು ಇದಕ್ಕೆ ಅನುಕೂಲವಾಗಿಲ್ಲವಾದಲ್ಲಿ ಹಳೆಗನ್ನಡದ ಇಲ್ಲವೇ ಕನ್ನಡದವೇ ಆದ ಉಪಭಾಷೆಗಳ ಪದಗಳನ್ನು ಮತ್ತು ಪ್ರತ್ಯಯಗಳನ್ನು ಇದಕ್ಕಾಗಿ ಆರಿಸಿಕೊಳ್ಳಬಹುದಲ್ಲವೇ?

Eke →

ಭಾಷಾಂತರ ಮತ್ತು ಅರ್ಥಾಂತರ

ಇಂಗ್ಲಿಷ್‌ನಲ್ಲಿರುವ ಪಾರಿಭಾಷಿಕ ಪದವೊಂದಕ್ಕೆ ಬದಲಾಗಿ ಕನ್ನಡದಲ್ಲಿ ಒಂದು ಹೊಸದಾದ ಪಾರಿಭಾಷಿಕ ಪದವನ್ನು ಸೃಷ್ಟಿಸುವಾಗ, ಅದು ಇಂಗ್ಲಿಷ್‌ನಲ್ಲಿದ್ದ ಪದದ ಒಳರಚನೆ ಮತ್ತು ಅದರ ಅರ್ಥ ಇವನ್ನು ಪ್ರತಿಬಿಂಬಿಸಬೇಕೇ ಅಥವಾ ಆ ಪದಕ್ಕೆ ಶಾಸ್ತ್ರದಲ್ಲಿ ಯಾವ ಅರ್ಥವಿದೆಯೋ ಅದನ್ನು ಪ್ರತಿಬಿಂಬಿಸಬೇಕೇ ಎಂಬ ವಿಷಯದಲ್ಲಿ ವಿದ್ವಾಂಸರೊಳಗೆ ಭಿನ್ನಾಭಿಪ್ರಾಯವಿದೆ.

ಉದಾಹರಣೆಗಾಗಿ black box ಎಂಬ ಪದಕ್ಕೆ ಬದಲಾಗಿ ಕನ್ನಡದಲ್ಲೊಂದು ಪಾರಿಭಾಷಿಕ ಪದವನ್ನು ಸೃಷ್ಟಿಸಬೇಕಾದಾಗ, ಆ ಪದದ ಒಳರಚನೆಯನ್ನು ಮತ್ತು ಅದರ ಅರ್ಥವನ್ನು ಸೂಚಿಸುವಂತೆ ಕಪ್ಪು ಪೆಟ್ಟಿಗೆ ಎಂಬ ಪದವನ್ನು ಬಳಸ ಬೇಕೇ, ಇಲ್ಲವೇ ಆ ಪದ ಗುರುತಿಸುವ ವಸ್ತುವನ್ನು (cockpit recorder)

ವರ್ಣಿಸುವಂತೆ ಬೇರೊಂದು ಪದವನ್ನು ಇಲ್ಲವೇ ಪದಗುಚ್ಛವನ್ನು ಬಳಸಬೇಕೇ ಎಂಬುದಾಗಿ ಸಂದೇಹವುಂಟಾಗಲು ಸಾಧ್ಯವಿದೆ.

ವಿಜ್ಞಾನ ಪದಕೋಶವನ್ನು ಕನ್ನಡದಲ್ಲಿ ತಯಾರಿಸುವವರು ಮೊದಲನೆಯ ವಿಧಾನವನ್ನು ಅನುಸರಿಸಿರುವರಾದರೆ, ಅದನ್ನೇ ಮರಾಠಿಯಲ್ಲಿ ತಯಾರಿಸುವವರು ಎರಡನೆಯ ವಿಧಾನವನ್ನು ಅನುಸರಿದ್ದಾರೆ. ಆದರೆ, ಇವುಗಳಲ್ಲಿ ಯಾವುದನ್ನೂ ಸಂಪೂರ್ಣ ಸರಿಯೆಂದು ಹೇಳಲು ಬರುವುದಿಲ್ಲ. ಒಂದು ಪದವನ್ನು ಬಳಸ ತೊಡಗುವಾಗ, ಸಾಮಾನ್ಯವಾಗಿ ಅದು ಗುರುತಿಸುವ ವಸ್ತುವಿನ ಗುಣಧರ್ಮ ಗಳಲ್ಲಿ ಕಣ್ಣಿಗೆ ಹೊಡೆದು ಕಾಣಿಸುವಂತಹದನ್ನು ಆ ಪದ ವರ್ಣಿಸುವಂತಿರ ಬೇಕೆಂದು ನಾವು ಪ್ರಯತ್ನಿಸುತ್ತೇವೆ. ಆದರೆ, ಬಳಕೆ ಮುಂದುವರಿದಂತೆ ಆ ವಸ್ತುವಿನ ಗುಣಧರ್ಮಗಳಲ್ಲಿ ಬದಲಾವಣೆಗಳುಂಟಾಗಲು ಸಾಧ್ಯವಿದೆ, ಮತ್ತು ಆ ವಸ್ತುವಿನ ಕುರಿತಾಗಿ ನಮಗಿರುವ ಜ್ಞಾನದಲ್ಲೂ ಬದಲಾವಣೆಗಳುಂಟಾಗಲು ಸಾಧ್ಯವಿದೆ.

ಹಾಗಾಗಿ, ಬಳಸಲು ಪ್ರಾರಂಭಿಸಿದ ಸಮಯದಲ್ಲಿ ಒಂದು ಪಾರಿಭಾಷಿಕ ಪದದ ಒಳರಚನೆ ಮತ್ತು ಅರ್ಥ ಅದು ಗುರುತಿಸುವ ವಸ್ತುವಿಗೆ ಅನ್ವಯಿಸು ವಂತೆಯೇ ಇದ್ದಿತಾದರೂ, ಅನಂತರದ ಕಾಲದಲ್ಲಿ ಅದು ಆ ರೀತಿ ಅನ್ವಯಿಸ ದಂತೆ ಆಗಲು ಸಾಧ್ಯವಿದೆ. ಕನ್ನಡದ ಉಗಿಬಂಡಿ ಪದ ಇದಕ್ಕೆ ಒಂದು ಉತ್ತಮ ಉದಾಹರಣೆ. ಈಗಿನ ಕಾಲದಲ್ಲಿ ಈ ಪದ ಗುರುತಿಸುವ ಸಾಧನ ಡೀಸೆಲ್ ಇಲ್ಲವೇ ವಿದ್ಯುಚ್ಛಕ್ತಿಯಿಂದ ಚಲಿಸುವುದೇ ಜಾಸ್ತಿ.

ಇದಲ್ಲದೆ, ಭಾಷೆಗಳಲ್ಲಿ ಬರುವ ಪದಗಳ ಒಳರಚನೆ ಮತ್ತು ಅರ್ಥ ಇವಕ್ಕೂ ಅವು ಗುರುತಿಸುವ ವಸ್ತುವಿನ ಗುಣಧರ್ಮಕ್ಕೂ ನಡುವೆ ಅಸಾಂಗತ್ಯ ವಿರುವುದೇ ಜಾಸ್ತಿ. ಕೃಷ್ಣ ಎಂಬ ಹೆಸರಿನ ವ್ಯಕ್ತಿ ಬೆಳ್ಳಗಾಗಿರುವುದು, ಇಲ್ಲವೇ ಸುಂದರಿ ಎಂಬ ಹೆಸರಿನ ಹುಡುಗಿ ಕುರೂಪಿಯಾಗಿರುವುದು ಅಷ್ಟೊಂದು ಅಪರೂಪವೇನಲ್ಲ. ಈ ಹೆಸರುಗಳನ್ನು ಬಳಸುವವರೂ ಅವು ವ್ಯಕ್ತಿಗಳ ಇಲ್ಲವೇ ವಸ್ತುಗಳ ಗುಣಧರ್ಮವನ್ನು ಸರಿಯಾಗಿ ತಿಳಿಸುತ್ತಿರಬಹುದೆಂದು ನಿರೀಕ್ಷಿಸು ವುದೂ ಇಲ್ಲ. ಪದಗಳು ಭಾಷೆಯಲ್ಲಿ ಬರಿಯ ಸಂಕೇತಗಳಾಗಿ ಬಳಕೆಯಾಗುವು ವಲ್ಲದೆ, ಅವು ಗುರುತಿಸುವ ವಸ್ತುಗಳ ಇಲ್ಲವೇ ವಿಷಯಗಳ ವರ್ಣನೆಗಳಾಗಿ ಬಳಕೆಯಾಗುವುದು ಬಹಳ ಕಡಿಮೆ. ಪಾರಿಭಾಷಿಕ ಪದಗಳೂ ಈ ರೀತಿ ಸಂಕೇತ ಗಳಾಗಿದ್ದರೆ ಸಾಕು, ವರ್ಣನೆಗಳಾಗಿರಬೇಕೆಂದೇನೂ ಇಲ್ಲ.