← Ch 4 · Contents · ↑ Contents
Chapters: Ch 1 · Ch 2 · Ch 3 · Ch 4 · Ch 5
ಅಧ್ಯಾಯ ೫ — ಮುಕ್ತಾಯ
೫.೧ ಸಾಮಾಜಿಕ ನ್ಯಾಯ
ಒಂದು ಸಮಾಜದಲ್ಲಿ ಓದು-ಬರಹವನ್ನು ಕಲಿಯುವ ಕೆಲಸ ಕೆಲವು ಮಕ್ಕಳಿಗೆ ತುಂಬಾ ಕಶ್ಚ ಮತ್ತು ಬೇರೆ ಕೆಲವು ಮಕ್ಕಳಿಗೆ ಅದಕ್ಕಿಂತ ಸುಲಬ ಎಂದಿದ್ದಲ್ಲಿ ಅದು ಸಾಮಾಜಿಕ ನ್ಯಾಯ ವೆಂದೆನಿಸುವುದಿಲ್ಲ. ಆದಶ್ಟು ಮಟ್ಟಿಗೆ ಓದು-ಬರಹದ ಕಲಿಕೆ ಎಲ್ಲಾ ಮಕ್ಕಳಿಗೂ ಒಂದೇ “ಬಗೆಯಲ್ಲಿ ಕಶ್ಚ ಇಲ್ಲವೇ ಸುಲಬ ವಾಗಿರಚೆ 4. ಹಾಗಿದ್ದಲ್ಲಿ ಮಾತ್ರ ಓದು- ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರಲು ಎಲ್ಲಾ ಮಕ್ಕಳಿಗೂ ಒಂದೇ ಬಗೆಯ ಅನುವು (ಅವಕಾಶ) ದೊರೆತಂತಾಗುತ್ತದೆ.
ಇಂತಹ ಸಾಮಾಜಿಕ ನ್ಯಾಯ ಮಕ್ಕಳಿಗೆ ದೊರಕಬೇಕು ಎಂಬುದಕ್ಕಾಗಿ ಜರ್ಮನಿಯಂತಹ ಕೆಲವು ನಾಡುಗಳಲ್ಲಿ ಬರವಣಿಗೆಯ ಸರಿಪಡಿಕೆಯನ್ನು ಅದು ನೂರಕ್ಕೆ ಎಪ್ಪತ್ತರಶ್ಟು ಜನರಿಗೆ ಬೇಡವಾಗಿದ್ದರೂ ಜಾರಿಗೆ ತರಲಾಗಿದೆ. ಇವತ್ತು ಕನ್ನಡ ಬರವಣಿಗೆಯಲ್ಲಿ ನಾವು ನಡೆಸಬೇಕಾಗಿರುವ ಸರಿಪಡಿಕೆಯೂ ಇಂತಹದೇ.
ಸಂಸ್ಕ್ರುತ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವ ಕೆಲಸ, ಮತ್ತು ಇದಕ್ಕಾಗಿ ಸುಶುವಿನಿಂದಲೂ ಹತ್ತಿಪ್ಪತ್ತು ಹೆಚ್ಚಿನ ಬರಿಗೆಗಳನ್ನು ಔರಯುವ ಕೆಲಸ ಮೇಲ್ವ ರದ ಮಕ್ಕ ಗಿಂತಲೂ ಕೆಳವರ್ಗದ ಮಕ್ಕ ಳಿಗೆ ಹೆಚ್ಚು ಕಶ್ಚ ವಾಗುತ್ತದೆ. ಇದರಿಂದಾಗಿ, ಓದು-ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರಲು ಮೇಲ್ವರ್ಗದ ಮಕ್ಕಳಿಗೆ ಸಿಗುವಂತಹ ಅನುವು ಕೆಳವರ್ಗದ ಮಕ್ಕಳಿಗೆ ಸಿಗುವುದಿಲ್ಲ. aE ಈ ಕೆಲಸದಲ್ಲಿ ತುಂಬಾ ಹಿಂದೆ ಬೀಳುತ್ತಿದ್ದಾರೆ.
ಕನ್ನಡದ ಓದು-ಬರಹದ ಕಲಿಕೆಯಲ್ಲಿ ಕಾಣಿಸುವ ಈ ಸಾಮಾಜಿಕ ಅನ್ಯಾಯವನ್ನು ನಾವು ಇವತ್ತು ಆದಶ್ಟು ಮಟ್ಟಿಗೆ ಹೋಗಲಾಡಿಸಬೇ ಚು ಸಂಸ್ಕ್ರುತದಿಂದ ಧಾ ಪಡೆದ ಪದಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಕನ್ನ ಡದ ಮಟ್ಟಿ ಅನವಶ್ಯ ಕವಾಗಿರುವ ಕಟ್ಟ ಲೆಯನ್ನು ಬಿಟು ಕೊಟ್ಟಲ್ಲಿ ಆಶ್ಚರ ಮಟ್ಟಿಗೆ ಕೆಳವರ್ಗದ ಮಕ್ಕಳಿಗೆ ಇತ ನ್ಯಾಯ ಒದಗಿಸಿದಂತಾಗುತ್ತದೆ.
ಓದು-ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರುವ ಕೆಲಸದಲ್ಲಿ ಬೇರೆಯೂ ಕೆಲವು ವಿಶಯಗಳಿಂದಾಗಿ ಮೇಲ್ವ ರ್ಲದ ಮಕ್ಕಳಿಗೆ ಸಿಗುವ ಅನುವು ಕೆಳವರ್ಗ ದ ಮಕ್ಕಳಿಗೆ ಸಿಗುವುದಿಲ್ಲ.
ಎತ್ತುಗೆಗೆ, ಬರಹದಲ್ಲಿ ಬಳಕೆಯಾಗುವ ಕನ್ನಡ ನುಡಿ ಕೆಳವರ್ಗದ ಮಕ್ಕಳು ಮನೆಯಲ್ಲಿ ಬಳಸುವ ಕನ್ನಡದ ಒಳನುಡಿಗಿಂತಲೂ ಮೇಲ್ವರ್ಗದ ಮಕ್ಕಳು ಬಳಸುವ ಕನ್ನಡದ ಒಳನುಡಿಗೆ ಹೆಚ್ಚು ಹತ್ತಿರವಾಗಿದೆ. ಅದರಲ್ಲಿ ಬಳಕೆಯಾಗುವ ಪದಗಳಲ್ಲಿ ಹೆಚ್ಚಿನವೂ ಮೇಲ್ವರ್ಗದ ಮಕ್ಕಳಿಗೆ ಶಾಲೆಗೆ ಸೇರುವ ಮೊದಲೇ ತಿಳಿದಿರುತ್ತವೆ.
ಅದರ ಸೊಲ್ಲರಿಮೆಯ ಕಟ್ಟಲೆಗಳೂ ಮೇಲ್ವರ್ಗದ ಮಕ್ಕಳ ಒಳನುಡಿಗೆ ಹೆಚ್ಚು ಹತ್ತಿರವಾಗಿವೆ. ಇದರಿಂದಾಗಿಯೂ ಓದು- ಬರಹವನ್ನು ಕಲಿಯುವ ಕೆಲಸ ಕೆಳವರ್ಗದ ಮಕ್ಕಳಿಗಿಂತ ಮೇಲ್ವ ರದ ಮಕ್ಕಳಿಗೆ ಹೆಚ್ಚು ಸುಲಬವಾಗುತ್ತದೆ.
ಮನೆಯಲ್ಲಿ ದಿನಾಲೂ ಓದು-ಬರಹಗಳನ್ನು ನಡೆಸುವ ತಂದೆ, ತಾಯಿ, ಅಣ್ಣ, ಅಕ್ಕ ಮೊದಲಾದವವಿದ್ದರೆ, ಅವರೊಂದಿಗೆ ಒಡನಾಡುತ್ತಾ ಬೆಳೆಯುವ ಮಕ್ಕಳು ಹೆಚ್ಚು ಸುಲಬವಾಗಿ ಒದು- ಬರಹವನ್ನು ‘ಕಲಿಯಬಲ್ಲ ರು. i ವಿಶಯದಲ್ಲೂ ಮೇಲ್ವ ರ್ಸದ ಮಕ್ಕಳಿಗಿರುವ ಅನುವು “ಕೆಳವರ್ಗದ ಮಕ್ಕಳಿಗಿರುವುದಿಲ್ಲ.
ಆದರೆ, ಇಂತಹ ಕೆಲವು ವಿಶಯಗಳಲ್ಲಿ ಎಲ್ಲಾ ಮಕ್ಕಳಿಗೂ ಓದು-ಬರಹವನ್ನು ಕಲಿಯುವಲ್ಲಿ ಒಂದೇ ಬಗೆಯ ಅನುವು ದೊರಕುವ ಹಾಗೆ ಮಾಡುವುದು ತುಂಬಾ ಕಶ್ಚ. ಆದರೆ, ಕನ್ನಡದ ಬರವಣಿಗೆಯ ವಿಶಯದಲ್ಲಿ ಅಂತಹ ಕಶ್ಚವೇನಿಲ್ಲ.
೫.೨ ಕನ್ನಡದ್ದೇ ಆದ ಪದಗಳ ಬಳಕೆ
ಎಲ್ಲಾ ಮಕ್ಕಳಿಗೂ ಓದಲು ಮತ್ತು ಬರೆಯಲು ಕಲಿಯುವಲ್ಲಿ ಒಂದೇ ಬಗೆಯ ಅನುವು ದೊರಕುವ ಹಾಗಾಗಲು ನಾವು ಮಾಡಬಹುದಾದ ಇನ್ನೊಂದು ಮಾರ್ದಾಡೆಂದರೆ, ಮಕ್ಕಳ ಒದುಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು. ಎರವಲು ಪದೆಗಳ ಬಳಕೆಗೆ, ಅದರಲ್ಲೂ ಸಂಸ್ಕೃತ ಎರವಲುಗಳ ಬಳಕೆಗೆ ಒಂದು ಮಿತಿಯಿರಬೇಕು.
ಎರವಲು ಪದಗಳ ಬಳಕೆಯ ಮೇಲೆ ಇಂತಹ ಮಿತಿಯನ್ನು ಹಲವು ನಾಡುಗಳಲ್ಲಿ ಹೇರಲಾಗಿದೆ. ಜಪಾನ್ ಮತ್ತು ಕೊರಿಯಾ ಗಳಲ್ಲಿ ಯಾವ ಚಯ್ನೀಸ್ ಎರವಲು ಪದಗಳನ್ನು ಬರಹಗಳಲ್ಲಿ ಬಳಸಬಹುದು ಎಂಬುದಕ್ಕೆ ಪಟ್ಟಿಗಳನ್ನು ಮಾಡಲಾಗಿದೆ.
ರಶ್ಯನ್ ನುಡಿಯಲ್ಲಿ ಎರವಲು ಪದಗಳ ಬಳಕೆಯನ್ನು ಒಂದು ಮಿತಿಯಲ್ಲಿ ರಿಸಿಕೊಳ್ಳಬೇಕೆಂಬ ಚಳವಳಿಗಳು ಹಿಂದಿನಿಂದಲೂ ನಡೆದುಬಂದಿವೆ. ಕೆಲವೊಮ್ಮೆ ಇವು ಬಳಕೆಯಲ್ಲಿರುವ ಎರವಲು ಪದಗಳಿಗೆ ಬದಲಾಗಿ ತಮ್ಮವೇ ಆದ ಪದಗಳನ್ನು ಬಳಸುವಲ್ಲಿ ವರೆಗೂ ಹೋಗಿವೆ. ಫ್ರೆಂಚ್ ಮತ್ತು ಕ್ರೊಯೇಶಿಯನ್ ನುಡಿ ಗಳಲ್ಲೂ ಎರವಲು ಪದಗಳನ್ನು ಕಡಿಮೆ ಮಾಡುವ ಹಲವು ಪ್ರಯತ್ನಗಳು ನಡೆದಿವೆ, ಮತ್ತು ನಡೆಯುತ್ತಿವೆ.
ಕನ್ನಡದ ತಿಳಿವಿಗರಿಗೆ ತಮ್ಮದೇ ಆದ ನುಡಿಯ ಮೇಲೆ ಒಂದು ಬಗೆಯ ಕೀಳರಿಮೆ ಇದೆ. ಹಾಗಾಗಿ, ಹೊಸಪದಗಳನ್ನು ಕಟ್ಟ ಬೇಕಾದಾಗಲೆಲ್ಲ ಅವರು ಸಂಸ್ಕ್ರುತದ ಮೊರೆಹೊಗುತ್ತಿ ದ್ದಾರೆ. Sk ಹೆಚ್ಚು ಹೆಚ್ಚು ಹೊಸ ಪದಗಳನ್ನು ಬಳಸಬೇಕಾಗುವ ಬರಹಗಳಲ್ಲಿ ಸಂಸ್ಕ್ರುತ ವಿರವಲುಗಳ ಎಣಿಕೆ ಮಿತಿಮೀರುವ ಹಾಗಾಗಿದೆ.
ಇದನ್ನು ಆದಶ್ಟು ಕಡಿಮೆ ಮಾಡಿ, ಹೆಚ್ಚು ಹೆಚ್ಚು ಕನ್ನಡದವೇ ಆದ ಹೊಸಪದಗಳನ್ನು ಕಟ್ಟಿ ಬಳಸಲು ತೊಡಗಿದಲ್ಲಿ, ತಾನಾಗಿಯೇ ಕನ್ನಡ ಬರಹಗಳಲ್ಲಿ ತುಂಬಿಕೊಳ್ಳುವ ಸಂಸ್ಕ್ರುತ ಎರವಲುಗಳ ಎಣಿಕೆ ಕಡಿಮೆಯಾಗಬಲ್ಲು ದು.
೫.೩ ಕಲಿಯುವ ಒಳ ಒತ್ತಡ
ಬರಹವನ್ನು ಕಲಿಯಲೇಬೇಕೆಂಬ ಒಳ ಒತ್ತಡವಿರುವವರು ಅದು ಎಶ್ಟೇ ತೊಡಕಿನದಾದರೂ ಅದನ್ನು ಕಲಿಯದಿರುವುದಿಲ್ಲ. ಸಾಮಾನ್ಯವಾಗಿ, ಮೇಲ್ವರ್ಗದ ಮಕ್ಕಳಲ್ಲಿ ಅವರ ಹಿರಿಯರು ಅಂತಹ ಒಳ ಒತ್ತಡವನ್ನು ಹುಟ್ಟಿಸಿಬಿಡುತ್ತಾರೆ. ಹಾಗಾಗಿ, ಅವರು ಬರಹದ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ.
ಕೆಳವರ್ಗ ದ ಮಕ್ಕಳಲ್ಲಿ ಕೆಲವರಿಗೆ ಇಂತಹ ತಮ್ಮದೇ ಆದ ಒಳ ಒತ್ತಡವಿರುತ್ತದೆ. ಅವರು ಬರಹದ ತೊಡಕುಗಳೊಂದಿಗೆ ಬಡತನ, ಜಾತೀಯತೆ ಮೊದಲಾದ ಬೇರೆಯೂ ಹಲವು
ತೊಡಕುಗಳಿದ್ದರೂ ಅವನ್ನೆಲ್ಲ ಎದುರಿಸಿ ಬರಹದ ಕಲಿಕೆಯಲ್ಲಿ ಮುಂದೆ ಹೋಗುತ್ತಾರೆ. “ಇವರನ್ನು ಹೊರತುಪಡಿಸಿ, ಬೇರೆ ಕೆಳವರ್ಗದ ಮಕ್ಕ ಛು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ; ಯಾಕೆಂದರೆ, ಅವರಿಗೆ ತಮ್ಮದೇ ಆದ ಒಳ ಒತ್ತ ಡವಿರುವುದಿಲ್ಲ, ಮತ್ತು ಹೊರಗಿನಿಂದಲೂ ಅಂತಹ ಒತ್ತಡ ಅವರ ಮೇಲೆ ಬೀಳುವುದಿಲ್ಲ.
ಅಂತಹ ಮಕ್ಕಳಿಗಾಗಿ, ಬೇರೆ ತೊಡಕುಗಳನ್ನೆಲ್ಲ ನೀಗಲು ಸಾದ್ಯವಾಗದಿದ್ದ ರೂ ಮೇಲೆ ವಿವರಿಸಿದಂತಹ ಎರಡು ಬಗೆಯ ಬರಹದ ತೊಡಕುಗಳನ್ನಾದರೂ ನೀಗಿದೆವಾದರೆ, ಅವರಲ್ಲೂ ಇವತ್ತಿಗಿಂತ ಹೆಚ್ಚು ಮಂದಿ ಬರಹವನ್ನು ಕಲಿತುಕೊಳ್ಳಲು ಮುಂದೆ ಬರಬಹುದೆಂದು ನನಗೆ ತೋರುತ್ತದೆ.
ಕನ್ನಡ ಬರಹದಲ್ಲಿ ಈ ಮಾರ್ಪಾಡುಗಳನ್ನು ನಡೆಸುವಲ್ಲಿ ಮುಂದಾಳುಗಳಾಗಲು ನನಗಿಂತಲೂ ಕೆಳವರ್ಗದಿಂದ ಮುಂದೆ ಬಂದ ಬಂಡಾಯ ಬರಹಗಾರರೇ ಸರಿಯಾದ ವ್ಯಕ್ತಿಗಳು ಎಂಬುದಾಗಿ ನಾನು ನನ್ನ ಕಸ್ಟಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ಬರೆದಿದ್ದೆ . ಆದರೆ, ಯಾವ ವರ್ಗದಿಂದಲೇ ಬಂದಿರಲಿ, ಒಮ್ಮೆ ಮೇಲೆ ಬಂದ ಮೇಲೆ, ತಮ್ಮ ಮೇಲ್ತನವನ್ನು ಉಳಿಸಿಕೊಳ್ಳುವುದೇ ಹಾಗೆ ಮೇಲೇರಿದವರ ಗುರಿಯಾಗಿರುತ್ತದೆ; ಹಾಗಾಗಿ, ಅಶ್ಟೊಂದು ಕಶ್ಚದಿಂದ ಮೇಲ್ತನವನ್ನು ಪಡೆದಿರುವ ಬಂಡಾಯ ಬರಹಗಾರರು ತಮ್ಮ ಮೇಲ್ತನಕ್ಕೆ ತೊಡಕಾಗ ಬಲ್ಲುದೆಂದು ತೋರುವ ಈ ಕೆಲಸವನ್ನು ನಡೆಸಲು ಮುಂದಾಗಿಲ್ಲದಿರಬಹುದು.
ಇದು ಏನೇ ಇರಲಿ, ಕನ್ನಡ ಬರಹ ಎಲ್ಲಾ ವರ್ಗ ದವರನ್ನೂ ಲಪಬೇಕು, ಎಲ್ಲರೂ ಬರಹಕ್ಕೆ ಹೊಂದಿಕೊಳ್ಳು ವ ಹೊಸದಾದ ಆಲೋಚನೆಯ ಬಗೆಯನ್ನು ಪಡೆಯಬೇಕು, ಮತ್ತು ಹಾಗೆ ಪಡೆಯುವ ಮೂಲಕ ಎಲ್ಲಾ ವರ್ಗದವರೂ ಸಮಾಜದಲ್ಲಿ ಮುಂದೆ ಬರಬೇಕು ಮಾತ್ರವಲ್ಲ, ಅವರ ಕೊಡುಗೆಗಳ ಮೂಲಕ ಕನ್ನಡ ಬರಹವೂ ಹೆಚ್ಚು ಹೆಚ್ಚು ಶ್ರೀಮಂತವಾಗಬೇಕು ಎಂಬ ತುಡಿತವಿರುವವರೆಲ್ಲರೂ ಈ ಕೆಲಸದಲ್ಲಿ ಇವತ್ತು ಕಯ್ದೋಡಿಸ ಬೇಕಾಗಿದೆ.
೫.೪ ಮುಕ್ಯವಾದ ಪ್ರಯೋಜನಗಳು
ಈ ರೀತಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವುದರಿಂದ ನಾವು ಕೆಳವರ್ಗ ದ ಮಕ್ಕಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದರೊಂದಿಗೆ ಬೇರೆಯೂ ಕೆಲವು ಪ್ರಯೋಜನಗಳನ್ನು ಪಡೆಯಬಲ್ಲೆವು. ಮೇಲೆ ನಾಲ್ಕನೇ ಪಸುಗೆಯಲ್ಲಿ ತಿಳಿಸಿದ ಇಂತಹ ಪ್ರಯೋಜನಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಇನ್ನೊಮ್ಮೆ ಚುಟುಕಾಗಿ ಪಟ್ಟಿಮಾಡಲಾಗಿದೆ:
(೧) ಚಿಕ್ಕ ಮಕ್ಕಳಿಗೆ ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಸುಲಬವಾಗುತ್ತದೆ. ಅವರಿಗೆ ೫೦ ಅಕ್ರರಗಳ ಬದಲು ಬರೇ ೩೧ ಅಕ್ತರಗಳನ್ನು ಕಲಿಸಿದರೆ ಸಾಕು. ಇವನ್ನೆಲ್ಲ ಓದುವ ಹಾಗೆಯೇ ಬರೆಯುವ ಕಾರಣ, ಕಲಿಯುವುದೂ ಸುಲಬ.
(೨) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತ ಸೆ
(೩) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆಕಾದಂಬರಿಗಳಲ್ಲಿ ತುಂಬಾ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣ ಬರಿಗೆಗಳು, ಷಕಾರ, ಮತ್ತು
ಖುಕಾರಗಳ ಬಳಕೆಯಲ್ಲಿ. ಮೇಲಿನ ಮಾರ್ಪಾಡನ್ನು ಮಾಡಿಕೊಂಡಲ್ಲಿ, ಈ ತಪು ಗಳೆಲ್ಲವೂ ಇಲ್ಲವಾಗುತ್ತವೆ. (ಹಲವು ಜನರಿಗೆ ಹಕಾರದ ಇಲ್ಲವೇ ಶಕಾರದ ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು).
(೪) ಬರಹಗಾರರಿಗೆ ಎಲ್ಲಿ ಯಾವ ಬರಿಗೆಯನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಬರಿಗೆಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ಮೇಲಿನ ಮಾರ್ಬಾಡಿನಿಂದ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ.
(೫) ಕೆಳವರ್ಗದ ಮಕ್ಕಳಿಗೆ ಉಲಿಪಿನಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಯಲು ತುಂಬಾ ಕಶ್ಚವೆಂದೆನಿಸುವ ಕಾರಣ, ಅವರಲ್ಲಿ ಕೀಳರಿಮೆಯುಂಟಾಗುತ್ತದೆ ಮತ್ತು ಕಲಿಸುವವರೂ ಅವರಲ್ಲಿ ಕೀಳರಿಮೆಯು ುಂಟಾಗುವ ಹಾಗೆ ಮಾಡುತ್ತಾರೆ. ಇದರಿಂದಾಗಿ, ಅವರು ತಮ್ಮ ಕಲಿ ಕೆಯನ್ನು ಅರ್ತದಲ್ಲೇ ಬಿಟ್ಟು ಬಿಡುತ್ತಾರೆ.
ೀಲಿನ ಮಾರ್ಪಾಡನ್ನು ನಡೆಸಿದಲ್ಲಿ ಈ ತೊಂದರೆ ಇಲ್ಲ ವಾಗುತ ಮತ್ತು ಕೆಳವರ್ಗದ ಮಕ್ಕಳಿಗೆ ಅಶ್ಚರ ಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ. (೬) ಈ ವಸ್ಸು ಡನ್ನು ನಡೆಸಿದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ ಬರೆಯುವುದು ಸುಲಬ; ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗುತ್ತದೆ. (೭) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ ಆಡುಮಾತಿಗೂ ನಡುವಿರುವ ಅಂತರ ಕಡಿಮೆ ಯಾಗುತ್ತದೆ.
(೮) ಬರಹದ ತೊಡಕುಗಳು ಮತ್ತು ಕ್ರುತಕತೆಗಳು ಕಡಿಮೆಯಾಗುತ್ತವೆ ಮತ್ತು ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
ಮೇಲಿನ ಬದಲಾವಣೆಯನ್ನು ಮಾಡದಿರುವುದರಿಂದ ನಾವು ಪಡೆಯಬಹುದಾದ ಪ್ರಯೋಜನಗಳು ನನ್ನ ಅನಿಸಿಕೆಯಂತೆ ಕೆಳಗಿನವು ಮಾತ್ರ :
(೧) ಸಂಸ್ಕೃತದ ಮೇಲೆ ಹೆಚ್ಚಿನ ಅಬಿಮಾನ ಮತ್ತು ಪೂಜ್ಯ 2 ಇಂವ ಮಡಿ ವಿದ್ಧಾ ಂಸರಿಗೆ ಸಂತೋಶ ಹಾಗ ಜಡಿ
(೨) ಬದಲಾವಣೆಗಳಿಂದ ದೂರ ನಿಲ್ಲುವ ಸೋಮಾರಿಗಳಿಗೂ ಸಂತೋಶವಾಗಬಹುದು.
ಆದರೆ ಇಶ್ಚಕ್ಕಾಗಿ ಮೇಲೆ ಸೂಚಿಸಿದ ಹಲವು ಪ್ರಯೋಜನ ಗಳನ್ನು ನಾವು ಬಿಟ್ಟುಕೊಡಬೇಕೇನು? ನಾವು ಹೊರತಂದ ಬೇರೆ ಕೆಲವು ಪುಸ್ತಕಗಳು
ಡಿ.ಎನ್.ಶಂಕರ ಬಟ್ ಬರೆದ ಪುಸ್ತಕಗಳು:
೧. ಕನ್ನಡ ಬರಹದ ಸೊಲ್ಲರಿಮೆ-೧, ೨೦೧೦, ೨೦೧೩, ಪುಟ ೩೨೮, ರೂ. ೨೨೦.