Chapters: Ch 1 · Ch 2 · Ch 3 · Ch 4 · Ch 5
ಅಧ್ಯಾಯ ೨ — ಓದುವ ಹಾಗೆ ಬರೆಯುವುದು
೨.೧ ಬರವಣಿಗೆಯ ಆಳ
ಒಂದು ನುಡಿಯ ಬರಹಗಳನ್ನು ಓದುವ ಹಾಗೆ ಬರೆಯುವುದಿದ್ದ ರೆ ಮತ್ತು ಬರೆಯುವ ಹಾಗೆ ಓದುವುದಿದ್ದರೆ ಅವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗುತ್ತದೆ. ಬರೆಯುವು ದಕ್ಕೂ ಓದುವುದಕ್ಕೂ ನಡುವಿರುವ ವ್ಯತ್ಯಾಸ ಹೆಚ್ಚಿದಂತೆಲ್ಲ ಓದು-ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸ ಕಶ್ಚವಾಗುತ್ತಾ ಹೋಗುತ್ತದೆ.
ಬರೆಯುವುದಕ್ಕೂ ಓದುವುದಕ್ಕೂ ನಡುವೆ ಯಾವ ವ್ಯತ್ಯಾಸವೂ ಇಲ್ಲದ ಕೊರಿಯನ್, ಸ್ವೀಡಿಶ್ನಂತಹ ಬರವಣಿಗೆ ಗಳನ್ನು ಎರಡು-ಮೂರು ತಿಂಗಳುಗಳಲ್ಲೇ ಸಲೀಸಾಗಿ ಓದಲು ಕಲಿಯಬಹುದು; ಆದರೆ, ಬರೆಯುವುದಕ್ಕೂ ಓದುವುದಕ್ಕೂ ನಡುವೆ ತುಂಬಾ ವ್ಯತ್ಯಾಸಗಳಿರುವ ಇಂಗ್ಲಿಶ್, ಅರೇಬಿಕ್ನಂತಹ ಬರವಣಿಗೆಗಳನ್ನು ಓದಲು ಕಲಿಯಬೇಕಿದ್ದಲ್ಲಿ ಅದಕ್ಕೆ ಮೂರು- ನಾಲ್ಕು ವರ್ಷಗಳೇ ಬೇಕಾಗುತ್ತವೆ.
ಒಂದು ಬರವಣಿಗೆಯಲ್ಲಿ ಬರೆಯುವುದಕ್ಕೂ ಓದುವುದಕ್ಕೂ ನಡುವಿರುವ ವ್ಯತ್ಯಾಸವನ್ನು ಬರವಣಿಗೆಯ ಅಳ ಎಂಬುದಾಗಿ ಕರೆಯಲಾಗುತ್ತದೆ. ಆಳ ಕಡಿಮೆಯಿರುವ ಬರವಣಿಗೆಯನ್ನು ಓದಲು ಕಲಿಯುವಾಗ, ಅದರಲ್ಲಿ ಬರಿಗೆ(ಅಕ್ತರ)ಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಮಕ್ಕಳು ತುಂಬಾ ಬೇಗನೆ ಕಂಡುಕೊಳ್ಳುತ್ತಾರೆ, ಮತ್ತು ಇದರಿಂದಾಗಿ, ಹೊಸ ಹೊಸ ಪದಗಳು ಕಣ್ಣಿ ಗೆ ಬಿದ್ದಾಗ ಅವನ್ನು ಮಕ್ಕಳು ತಾವೇ ಸುಲಬವಾಗಿ ಓದಿಕೊಂಡು ಮುಂದೆ ಹೋಗುತ್ತಾರೆ.
ಇದಕ್ಕೆ ಬದಲು, ಹೆಚ್ಚು ಆಳವಿರುವ ಬರವಣಿಗೆಯನ್ನು ಓದಲು ಕಲಿಯುವಾಗ, ಅದರಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ಯಾವ ರೀತಿಯ ಸಂಬಂದ ಇದೆ ಎಂಬುದು ಮಕ್ಕಳಿಗೆ ಗೊತ್ತಾಗುವುದೇ ಇಲ್ಲ. ಈ ಸಂಬಂದ ತುಂಬಾ ಸಿಕ್ಕಲು ಸಿಕ್ಕಲಾಗಿ ಇರುವುದೇ ಇದಕ್ಕೆ ಕಾರಣ. ಹಾಗಾಗಿ, ಅಂತಹ ಬರವಣಿಗೆಯಲ್ಲಿ ಬರುವ ಒಂದೊಂದು ಪದಕ್ಕೂ ಅದರ ಓದಿಗೂ ನಡುವಿರುವ ಸಂಬಂದವನ್ನು ತಿಳಿದುಕೊಂಡು ಅವರು ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತ ದೆ, ಮತ್ತು ಓದುವಾಗ ಅದನ್ನು ನೆನಪಿಗೆ ತಂದುಕೊಂಡು ಓದಬೇಕಾಗುತ್ತದೆ.
ಹಾಗಾಗಿ, ಒಂದೊಂದು ಹೊಸ ಪದ ಎದುರಾದಾಗಲೂ ಅದನ್ನು ಓದುವುದು ಹೇಗೆ ಎಂಬುದನ್ನು ಅವರು ಹೊಸದಾಗಿ ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅದನ್ನು ತಮ್ಮ ನೆನಪಿಗೆ ಸೇರಿಸಿಕೊಳ್ಳ’ ಬೇಕಾಗುತ್ತದೆ. ಆಮೇಲೆ ಓದುವಾಗಲೆಲ್ಲ ಅದನ್ನು ತಿರುತಿರುಗಿ” ನೆನಪಿಗೆ ತಂದುಕೊಂಡು ಓದಬೇಕಾಗುತ್ತದೆ.
ಬರವಣಿಗೆಯ ಆಳ ಹೆಚ್ಚಿ ರುವ ನುಡಿಗಳಲ್ಲಿ ಎರಡು ಬಗೆಗಳಿರುತ್ತವೆ: ಬರಿಗೆಗಳಿಗೂ ಅವುಗಳ ಓದಿಗೂ ನಡುವಿರುವ ವ್ಯತ್ಕಾ ಸಗಳನ್ನು ಕೆಲವೇ ಕೆಲವು ಕಟ್ಟಲೆಗಳ ಮೂಲಕ ವಿವರಿಸಲು ಬರುವಂತಹವುಗಳದು ಒಂದು ಬಗೆ, ಮತ್ತು ಹಾಗೆ ವಿವರಿಸಲು ಬಾರದಿರುವಂತವುಗಳದು ಇನ್ನೊಂದು “ಬಗೆ. ಇವುಗಳಲ್ಲಿ ಮೊದಲನೇ ಬಗೆಯ ಬರವಣಿಗೆಯನ್ನು ಕಲಿಯುವಾಗ ಇಲ್ಲವೇ ಕಲಿಸುವಾಗ ಕಟ್ಟಲೆಗಳ ನೆರವನ್ನು ಪಡೆಯಲು ಬರುತ್ತದೆ; ಆದರೆ, ಎರಡನೇ ಬಗೆಯ ಬರವಣಿಗೆಯನ್ನು ಕಲಿಯುವಲ್ಲಿ ಅಂತಹ ಯಾವ ನೆರವೂ ದೊರಕುವುದಿಲ್ಲ.
ಒಂದು ಬರವಣಿಗೆಯನ್ನು ಕಲಿಯಲು ಕಶ್ಚವಾಗುವುದಕ್ಕೆ ಬೇರೆಯೂ ಕೆಲವು ಕಾರಣಗಳಿವೆ. ಎತ್ತುಗೆಗೆ, ಅದರಲ್ಲಿ ಬಳಕೆಯಾಗುವ ಬರಿಗೆಗಳು ಎಶ್ಟರ ಮಟ್ಟಿಗೆ ಒಂದರಿಂದೊಂದು ಬೇರಾಗಿವೆ, ಅದರಲ್ಲಿ ಒತ್ತುಬರಿಗೆಗಳನ್ನು ಹೇಗೆ ಬರೆಯ ಲಾಗುತ್ತದೆ ಎಂಬಂತಹ ಬರಿಗೆಗಳ ರಚನೆಯ ಕುರಿತಾಗಿರುವ ಸಂಗತಿಗಳ ಮೇಲೂ ಅದರ ಕಲಿಕೆ ಕಶ್ಚವಾಗಿ ಇಲ್ಲವೇ ಸುಲಬ ವಾಗಿ ತೋರಬಲ್ಲುದು.
೨.೨ ಕನ್ನಡ ಬರವಣಿಗೆಯ ಆಳ
ಕನ್ನಡದ ಬರವಣಿಗೆಯಲ್ಲಿ ಕನ್ನಡದವೇ ಆದ ಪದಗಳ ಮಟ್ಟಿಗೆ ಬರವಣಿಗೆಯ ಆಳ ತುಂಬಾ ಕಡಿಮೆ ಇದೆ. ಹಾಗಾಗಿ, ಈ ಪದಗಳನ್ನು ಓದಲು ಮತ್ತು ಬರೆಯಲು ಕಲಿಯುವ ಕೆಲಸ ತುಂಬಾ ಸುಲಬವಾದುದು. ಮಕ್ಕಳು ಈ ಪದಗಳಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿಗೂ ನಡುವಿರುವ ಸಂಬಂದವನ್ನು ತುಂಬಾ ಬೇಗನೆ ಕಂಡುಕೊಳ್ಳಬಲ್ಲರು, ಮತ್ತು ಇದನ್ನೊಮ್ಮೆ ಕಂಡುಕೊಂಡ ಮೇಲೆ, ಹೊಸ ಹೊಸ ಪದಗಳು ಎದುರಾದಾಗ ಲೆಲ್ಲ ಅವನ್ನು ತಾವಾಗಿಯೇ ಸುಲಬವಾಗಿ ಓದಿಕೊಂಡು ಮುಂದೆ ಹೋಗಬಲ್ಲರು.
ಆದರೆ, ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳ*ಮಟ್ಟಿಗೆ ಇದು ನಿಜವಲ್ಲ. ಅವುಗಳಲ್ಲಿ ಬಳಕೆಯಾಗುವ ಕ-ಐ, ತ-ಥ, ದ-ಧ, ಶ-ಷ ಮೊದಲಾದ ಏಳೆಂಟು ಬರಿಗೆಜೋಡಿಗಳ ನಡುವಿರುವ ವ್ಯತ್ಯಾಸ ಅವನ್ನು ಕಲಿಸುವವರ ಮತ್ತು ಕಲಿಯುವವರ ಓದಿನಲ್ಲಿ ಕಾಣಿಸಿಕೊಳ್ಳುವು ದಿಲ್ಲ. ಈ ಎರಡು ಬಗೆಯ ಬರಿಗೆಗಳನ್ನೂ ಅವರು ಒಂದೇ ಬಗೆಯಲ್ಲಿ ಓದುತ್ತಾರೆ. ಹಾಗಾಗಿ, ಅಂತಹ ಬರಿಗೆಗಳಿರುವ ಪದಗಳನ್ನು ಓದಲು ಮತ್ತು ಬರಹಗಳಲ್ಲಿ ಬಳಸಲು ಅವು ಬರುವ ಪದಗಳನ್ನು ಒಂದೊಂದಾಗಿ ನೆನಪಿನಲ್ಲಿರಿಸಿಕೊಳ್ಳುವು ದೊಂದೇ ದಾರಿ.
ಇದಲ್ಲದೆ, ಈ ವ್ಯತ್ಯಾಸದ ಹಿಂದೆ ಯಾವ ಬಗೆಯ ಕಟ್ಟಲೆಯನ್ನೂ ಕಾಣಲು ಬರುವುದಿಲ್ಲ. ಎತ್ತು ಗೆಗೆ, ಯಾವ ಪದದ ಯಾವ ಜಾಗದಲ್ಲಿ ಧಕಾರವನ್ನು ಬಳಸಬೇಕು ಮತ್ತು ಯಾವುದರಲ್ಲಿ ದಕಾರವನ್ನು ಬಳಸಬೇಕು ಎಂಬುದನ್ನು ತಿಳಿಸಬಲ್ಲ ಯಾವ ಕಟ್ಟಲೆಯೂ ಇಲ್ಲ. ಹಾಗಾಗಿ, ಅಂತಹ ಪದಗಳು ಕನ್ನಡದ ಬರವಣಿಗೆಯನ್ನು ತುಂಬಾ ಸಿಕ್ಕಲು ಬರವಣಿಗೆಯನ್ನಾಗಿಸಿ, ಅದರ ಆಳವನ್ನು ಹೆಚ್ಚಿಸುತ್ತವೆ.
ಕನ್ನಡದವೇ ಆದ ಪದಗಳ ಓದನ್ನು ಮಕ್ಕಳು ತಮ್ಮದಾಗಿಸು ತ್ತಿರುವ ಸಮಯದಲ್ಲೇನೇ ಇವತ್ತಿನ ಹಾಗೆ, ಇಂತಹ ಸಂಸ್ಕ್ರುತದಿಂದ ಎರವಲು ಪಡೆದ ಪದಗಳ ಓದನ್ನೂ ಅವರಿಗೆ ಕಲಿಸಹೊರಟಲ್ಲಿ, ಕನ್ನಡದವೇ ಆದ ಪದಗಳ ಓದಿನಲ್ಲೂ ಅವರು ಹಿಂದೆ ಬೀಳುತ್ತಾರೆ. ಯಾಕೆಂದರೆ, ಕನ್ನಡದವೇ ಆದ ಪದಗಳ ಓದಿನಲ್ಲಿ ಬರಿಗೆಗಳಿಗೂ ಅವುಗಳ ಓದಿಗೂ ನೇರವಾದ ಸಂಬಂದವಿದೆ ಎಂಬುದನ್ನು ಕಂಡುಕೊಳ್ಳಲು ಈ ಸಿಕ್ಕಲು ಓದಿನ ಪದಗಳು ಅಡ್ಡಿಯಾಗುತ್ತವೆ.
೨.೩ ಕನ್ನಡ ಬರಹದಲ್ಲಿ ಸಂಸ್ಕ್ರುತ ಪದಗಳು
ಸಂಸ್ಕೃತ ಪದಗಳನ್ನು ಕನ್ನಡ ಬರಹಗಳಲ್ಲಿ ಬಳಸುವಾಗಲೆಲ್ಲ ಅವನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕು
ಎಂ ಎಂಬುದಾಗಿ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾದ ಒಂದು ಕಟ್ಟಲೆಯನ್ನು ಕನ್ನಡದ ಬರಹಗಾರರು ಮಾಡಿಕೊಂಡಿದ್ದಾ ರೆ. ಈ ಬರಹಗಾರರಲ್ಲಿ ಹೆಚ್ಚಿ ನವರೂ ಬರಹವನ್ನು ಕಲಿಯುವ ಸಮಯದಲ್ಲಿ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಹಾಗಾಗಿ, ಅವರಿಗೆ ಹೀಗೆ ಮಾಡುವುದು ಹೆಚ್ಚು ಕಶ್ಚವೆಂದೆನಿಸುವುದಿಲ್ಲ.
ಆದರೆ, ಕನ್ನಡ ಬರಹಗಳನ್ನು ಬಳಸಬೇಕಾಗಿರುವ ಜನ ಸಾಮಾನ್ಯರ ಮಟ್ಟಿಗೆ, ಮತ್ತು ಕಲಿಯಬೇಕಾಗಿರುವ ಮಕ್ಕಳ ಮಟ್ಟಿಗೆ, ಇದು ಒಂದು ತುಂಬಾ ತೊಡಕಿನ ಕೆಲಸವಾಗಿದೆ. ಯಾಕೆಂದರೆ, ಎರವಲಾಗಿ ಪಡೆದಿರುವ ಈ ಸಂಸ್ಕ್ರುತ ಪದಗಳನ್ನು ಉಲಿಯುವಾಗ ಯಾರೂ (ಮೇಲ್ವರ್ಗದ ಬರಹಗಾರರೂ) ಇಂತಹ ಕಟ್ಟಲೆಯನ್ನು ಪಾಲಿಸುವುದಿಲ್ಲ. ಅವುಗಳಲ್ಲಿ ಕಾಣಿಸುವ ಹಲವು ಬಗೆಯ ವ್ಯತ್ಯಾಸಗಳನ್ನು ಹೆಚ್ಚಿನ ಕನ್ನಡಿಗರೂ ತಮ್ಮ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ.
ಹಾಗಾಗಿ, ಹೆಚ್ಚಿನ ಕನ್ನಡಿಗರಿಗೂ ಸಂಸ್ಕೃತ ಪದಸ್ವರೂಪ ಪರಿಚಿತವಾದುದಲ್ಲ. ಕನ್ನಡ ಬರಹಗಳನ್ನು ಓದಲು ಕಲಿಯುವುದಕ್ಕಾಗಿ ಮತ್ತು ಕನ್ನಡದಲ್ಲಿ ಬರೆಯುವುದಕ್ಕಾಗಿ ಮಾತ್ರ ಅವರು ಈ ಸಂಸ್ಕೃತದ ಪದಸ್ತರೂಪವನ್ನು ತಮ್ಮದಾಗಿಸಿಕೊಳ್ಳ ಸ) ವ 4 ಆ ೪
ಬೇಕಾಗುತ್ತದೆ. ಎತ್ತುಗೆಗೆ, ಸಂಸ್ಕ್ರುತ ಪದಗಳಲ್ಲಿ ಬರುವ ಅಲ್ಪಪ್ರಾಣ- ಮಹಾಪ್ರಾಣ ವ್ಯತ್ಯಾಸೆ’ ನೂರರಲ್ಲಿ ತೊಂಬತ್ತೊಂಬತ್ತು ಮಂದಿ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದೇ ಇಲ್ಲ. ಮುಖ್ಯಮಂತ್ರಿ ಎಂಬುದು ಎಲ್ಲರ ಮಾತಿನಲ್ಲೂ ಮುಕ್ಯಮಂತ್ರಿ ಎಂದಾಗುತ್ತದೆ, ಪ್ರಧಾಸ ಮತ್ತು ಪ್ರದಾಸಗಳು ಇಲ್ಲವೇ ಮಧ್ಯ ಮತ್ತು ಮದ್ಯಗಳು ಒಂದೇ ರೀತಿಯಾಗಿ ಕೇಳಿಸುತ್ತವೆ. ಈ ಬರಿಗೆಗಳನ್ನು ಕಲಿಸುವ ಸಮಯದಲ್ಲಿ ಕೆಲವರು ಕಲಿಸುಗರು (ಅದ್ಯಾಪಕರು) ಈ ಪದಜೋಡಿಗಳ ನಡುವಿನ ವ್ಯತ್ಯಾಸವನ್ನು ಕಲಿಯುವವರಿಗೆ ತಿಳಿಯುವಂತೆ ಹೇಳಿಕೊಡುತ್ತಿರ
ಬಹುದು; ಆದರೆ, ಬೇರೆಲ್ಲಾ ಸಮಯದಲ್ಲೂ ಅವರ ಓದಿನಲ್ಲಿ
ಇಲ್ಲವೇ ಮಾತಿನಲ್ಲಿ ಇವುಗಳ ನಡುವೆ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ.
ಕೆಲವರು ಪಂಡಿತರು ಮಾತ್ರ ಇಂತಹ ಪದಗಳಲ್ಲಿ ಬರುವ ಮಹಾಪ್ರಾಣ ಬರಿಗೆಗಳನ್ನು ಸರಿಯಾಗಿ ಉಲಿಯುತ್ತಿರಬಹುದು; ಆದರೆ ಇದು ಕೇಳುವವರಿಗೆ ಸ್ವಲ್ಪ ವಿಚಿತ್ರವಾಗಿ ತೋರದಿರದು. ಇದಲ್ಲದೆ, ಅಂತಹ ಜನರೂ ಎಲ್ಲಾ ಕಡೆಗಳಲ್ಲೂ ಈ ರೀತಿ ಮಹಾಪ್ರಾಣ ಬರಿಗೆಗಳನ್ನು ಸರಿಯಾಗಿ ಉಲಿಯುವುದಿಲ್ಲ; ಎಚ್ಚರದಿಂದ ಈ ಪದಗಳನ್ನು ಬಳಸುವ ಕಡೆಗಳಲ್ಲಿ ಮಾತ್ರ ಹಾಗೆ ಉಲಿಯುತ್ತಾರೆ.
ಶ-ಷ, ಯ-ರು ಮೊದಲಾದ ಬೇರೆ ಕೆಲವು ವ್ಯತ್ಯಾಸಗಳೂ ಇದೇ ರೀತಿಯಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ‘ಪಡಗಳ ಬರವಣಿಗೆಯಲ್ಲಿ ಕಾಣಿಸುತ್ತ ವೆ; ಆದರೆ, ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ. ವಿಶೇಷ ಎಂಬುದಾಗಿ ಬರೆಯುತ್ತೇವೆ; ಆದರೆ ವಿಶೇಶ ಎಂಬುದಾಗಿ ಓದುತ್ತೇವೆ. ಖುಷಿ ಎಂಬುದಾಗಿ ಬರೆಯುತ್ತೇವೆ; ಆದರೆ ರುಶಿ. ಎಂಬುದಾಗಿ ಓದುತ್ತೇವೆ.
ಕೆಲವು ಮಂದಿ ಖಕಾರದ ಬದಲು ರು ಎಂಬುದನ್ನು
ಬಳಸುವಾಗ ಅದರಲ್ಲಿ ರುವ ಉಕಾರವನ್ನು ತುಟಿಯನ್ನು ದುಂಡಗಾಗಿಸಿ ಉಲಿಯುವ ಬದಲು ಅಗಲಿಸಿ ಉಲಿಯುತ್ತಾ ರೆ; ಆದರೆ ಯಾರೂ (ಸ ೦ಸ್ಕು ತ ಪಂಡಿತರೂ) ಯಕಾರವನ್ನು ಸಂಸ್ಕ್ರುತದಲ್ಲಿ ಬರುವ ಹಾಗೆ ಡು ಸ್ವರವಾಗಿ ಉಲಿಯುವುದಿಲ್ಲ. ಸಂಸ್ಕ್ರುತ ಪದಗಳಲ್ಲಿ ಕಾಣಿಸುವ ವಿಸರ್ಗವೂ ಹೀಗೆಯೇ. ಪದಗಳ ಕೊನೆಯಲ್ಲಿ ಅದನ್ನು ಹಕಾರವಾಗಿ ಉಲಿಯಲಾಗುತ್ತದೆ, ಮತ್ತು ಅದರ ಬಳಿಕ ಅದರ. ಹಿಂದಿದ್ದ ತೆರೆಯುಲಿ(ಸ್ತ ರ)ಯನ್ನು ಇನ್ನೊಮ್ಮೆ ಉಲಿಯಲಾಗುತ್ತದೆ (ಬಹುಶಃ - ಬಹುಶಹ, ಕೃ ತಿಃ ದ ಕ್ರುತಿಜ), ಮತ್ತು ಪದಗಳ ನಡುವೆ ಬಂದಿರುವಲ್ಲಿ ಅದನ್ನು ಅದರ ಬಳಿಕ ಬರುವ ಮುಚು _ಲಿ(ವ್ಯ ೦ಜನ)ಯ ರೂಪದಲ್ಲಿ. ಉಲಿಯಲಾಗುತ್ತದೆ, ಇಲ್ಲವೇ ಹಕಾರವಾಗಿ ಮಾರ್ರಡಿಸ ಲಾಗುತ್ತದೆ (ದುಃಖ - ದುಕ್ಕ, ಅಂತಃಪುರ - ಅಂತಪ್ಪುರ/ ಅಂತಹ್ಪುರ).
ಈ ರೀತಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೆ ಲ್ಲ ನಾವು ಓದಿನ ಇಲ್ಲಿ ನಮೇ ಮಾತಿನ ಮಟ್ಟ ಗೆ ಕನ್ನಡದ ಪದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಹಲವು ಬಗೆಗಳಲ್ಲಿ ಮಾಠ್ರಡಿಸಿಕೊಂಡಿದ್ದೇವೆ: ಆದರೆ, ಬರಹದಲ್ಲಿ ಮಾತ್ರ ಇವನ್ನು ಸಂಸ್ಕ್ರುತದಲ್ಲಿ ರುವ “ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸು ತ್ರಿ ದ್ದೆ ೬.
ಕನ್ನಡದ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ- ಮಹಾಪ್ರಾಣ, ಖಕಾರ-ರುಕಾರ, ಷಕಾರ-ಶಕಾರ, ವಿಸರ್ಗ- ಹಕಾರ ಮೊದಲಾದ ಬರಿಗೆಜೋಡಿಗಳ ನಡುವಿನ ವ್ಯತ್ಯಾಸಗಳು ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲವೆಂಬ ಮೇಲಿನ ಮಾತನ್ನು ನಾನು ವಿಸ್ತಾರವಾದ ಸಂಶೋದನೆಯ ನೆಲೆಯಲ್ಲಿ ಹೇಳುತ್ತಿದ್ದೇನಲ್ಲದೆ ಮೇಲ್ಮೇಲಿನ ಅವಲೋಕನದ
ಇಲ್ಲ ವೇ ಊಹೆಯ ನೆಲೆಯಲ್ಲಿ ಹೇಳುತ್ತಿಲ್ಲ. ನಾನು ಉಲಿಯರಿಪೆಯಲ್ಲಿ (ಫೊನೆಟಿಕ್ಸ್-ದ್ವನಿವಿಜ್ನಾನದಲ್ಲಿ)
ಸಾಕಶ್ಟು ಪರಿಣತಿಯನ್ನು ಪಡೆದಿದ್ದೇ ನೆಮ ಮತ್ತ ಹಲವು ವರ್ಷ ಅದನ್ನು ಎಮ್. ಎ. ಕಲಿಗರಿಗೆ ಕಲಿಸಿ ಸಿದ್ದೇನೆ. ಅದರ ಮೇಲೆ ಹಲವು ಸಂಶೋದನೆಗಳನ್ನೂ (ಇಂಗ್ಲೆಂಡಿನ ಲೀಡ್ಸ್ ಯುನಿವರ್ಲಿಟಿಯಲ್ಲಿ ಮತ್ತು ಅಮೆರಿಕಾದ ಸ್ಟಾನ್ಫರ್ಡ್ ಯುನಿ ವರ್ಲಿಟಿಯಲ್ಲಿ) ನಡೆಸಿದ್ದೇನೆ.
ಇದಲ್ಲದೆ, ಸುಮಾರು ಒಂದೂವರೆ ತಿಂಗಳಶ್ಪು ಸಮಯ ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಮಾತುಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಎಂತಹ ತೆರೆಯುಲಿ (ಸ್ವರ) ಮತ್ತು ಮುಚ್ಚುಲಿ(ವ್ಯಂಜನ)ಗಳು ಬಳಕೆಯಾಗುತ್ತವೆ ಎಂಬುದನ್ನು ಪರಿಶೀಲಿಸಿದ್ದೇನೆ.
ಹೆಚ್ಚು ಕಜ ಇಂತಹದೇ ಪರಿಶೀಲನೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ. ಮೇಲಿನ ಬರಿಗೆ ಗಳನ್ನು ತಾವು ಸರಿಯಾಗಿಯೇ ಉಲಿಯುತ್ತೇವೆಂದು ಹೇಳಿ ಕೊಳ್ಳುವ ಹಲವು ಮಂದಿ ಪಂಡಿತರ ಮಾತನ್ನೂ ಗಮನವಿಟ್ಟು ಪರೀಕ್ಕಿಸಿದ್ದೆ ನೆ.
ಹಾಗಾಗಿ, ಮೇಲೆ ಕೊಟ್ಟಿ ರುವ ನನ್ನ ತೀರಾ ನವನ್ನು ಅಂತಹದೇ ಪರಿಣತಿಯನ್ನು ಪಡೆಯದೆ ಮತ್ತು. ಪರಿಶೀಲನೆಯನ್ನು ನಡೆಸದೆ ಸುಲಬವಾಗಿ ತಳ್ಳಿಹಾಕಲು ಬರುವುದಿಲ್ಲ.
ಓದಿಗೂ ಬರಹಕ್ಕೂ ಹವ ವ್ಯತ್ಯಾಸಗಳು ಕಾಣಿಸುವ ಕಡೆಗಳಲ್ಲೆಲ್ಲ ಸ್ಪೆಲ್ಲಿಂಗ್ ಸಮಸ್ಯೆ ಯಿದೆ ಎಂದರೆ: ಬರವಣಿಗೆಯ ಆಳ ಹೆಚ್ಚಿ! ರುತ. ದೆಯೆಂದು ಹೇಳಬಹುದು. ಇದನ್ನು ಹೋಗಲಾಡಿಸ ಬೇಕಾದಲ್ಲಿ ಓದು ಹೇಗಿದೆಯೋ ಹಾಗೆ ಬರಹವನ್ನೂ ಬದಲಾಯಿಸಿಕೊಳ್ಳುವುದೊಂದೇ ದಾರಿ.
ಕನ್ನಡ ಬರಹದಲ್ಲಿ ಸದ್ಯಕ್ಕೆ ಹೆಚ್ಚು ಸೆಲ್ಲಿಂಗ್ ಸಮಸ್ಯೆ ಗಳಿಲ್ಲ. ಕನ್ನಡದವೇ ಆದ “ಪದಗಳನ್ನು ಬರೆಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಂತಹ ಪದಗಳನ್ನೆಲ್ಲ ನಾವು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುತ್ತೆ ವೆ. ಸಂಸ್ಕ್ರುತದಿಂದೆ ಎರವಲಾಗಿ ಪಡೆದ ಪದಗಳನ್ನು ಬರೆಯುವಲ್ಲಿ ಮಾತೆ ಹಲವು ಸಮಸ್ಯೆಗಳಿವೆ. ಅವನ್ನೆಲ್ಲ ಹೋಗಲಾಡಿಸಿಕೊಂಡಲ್ಲಿ ನಮ್ಮ ಬರಹ ಬಹಳ ಮಟ್ಟಿಗೆ ಸೆಲ್ಲಿಂಗ್ ಸಮಸ್ಯೆಯಿಲ್ಲ ದ ಬರಹದಾಗಬಲ್ಲು ದು.
೨.೪ ಕನ್ನಡ ಬರವಣಿಗೆಯ ಹಿನ್ನಡವಳಿ (ಚರಿತ್ರೆ)
ಕನ್ನಡ ಬರಹದಲ್ಲಿ, ಮೇಲೆ ವಿವರಿಸಿದ ಹಾಗೆ, ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತಿ ರುವುದಕ್ಕೆ ಕನ್ನಡ ಬ ಚಜಿಗೆಯು ಹ ಹಿನ್ನಡವಳಿಯೂ ಒಂದು ಕಾರಣ.
ಸಂಸ್ಕ್ರುತ, ಪಾಲಿ, ಪ್ರಾಕ್ರುತ ಮೊದಲಾದ ಇಂಡೋ- ಆರ್ಯನ್ ನುಡಿಗಳನ್ನು ಬರಹಕಿ ಳಿಸುವುದಕ್ಕಾಗಿ ತಯಾರಾಗಿದ್ದ ಬ್ರಾಹ್ಮಿ ೇ ಬರವಣೆಔಟಂದ ಕನ್ನಡ ಬರವಣಿಗೆ ಬೆಳೆದು ಬಂದಿದೆ.
ಇದನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ಕನ್ನಡ ಬರಹಗಾರರು ಅದರಲ್ಲಿ ತಮ್ಮ ನುಡಿಗೆ ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು (ಏ, ಓ, ಅ ಮತ್ತು ಆಗಳನ್ನು) ಹೊಸದಾಗಿ ಉಂಟುಮಾಡಿ ಸೇರಿಸಿಕೊಂಡಿದ್ದರು.
ಆದರೆ, ಇವುಗಳೊಂದಿಗೆ ಕನ್ನಡಕ್ಕೆ (ಹಳೆಗನ್ನಡಕ್ಕೆ) ಬೇಡವಾದರೂ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳನ್ನು ಬರೆಯಲು ಬೇಕಾಗುವ ಮಹಾಪ್ರಾಣ ಬರಿಗೆಗಳು (ಐಛಕಥಪ ಮತ್ತು ಫರುಢಧಭ), ಯ, ಶ, “ಹೈ ಐ, ಔ, ಅನುಸ್ವಾರ (೦) ಮತ್ತು ವಿಸರ್ಗ (೬) ಎಂಬವುಗಳನ್ನೂ ಉಳಿಸಿಕೊಂಡಿದ್ದರಕ. ಇದರಿಂದಾಗಿ, ಅಂತಹ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ “ಚ್ಚು ಕಡಿಮೆ ಸಂಸ್ಕ್ರುತದಲ್ಲಿ ಇರುವ ಗೊ ಬರೆಯಲು ‘ಬರುತಿ. ದೆ.
ಕನ್ನಡ ಬರಹಗಾರರ ಈ ಆಯ್ಕೆಯಿಂದಾಗಿ, ಇವತ್ತಿನ ಕನ್ನಡ ಬರಹಗಳಲ್ಲಿ ಪದಗಳ ಓದಿಗೂ ಅವುಗಳ ಬರವಣಿಗೆಗೂ ನಡುವೆ ಹಲವು ಬಗೆಯ ವ್ಯತ್ಯಾಸಗಳು ಕಾಣಿಸುವ ಹಾಗಾಗಿದೆ. ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ಒದುವಾಗ, ಇಲ್ಲವೇ ಮಾತಿನಲ್ಲಿ NOIR) ಕನ್ನಡ ಪಡಣಳ ಸ್ವ ಸ್ಹರೂಪಕ್ಕೆ ಹೊಂದಿಕೊಳ್ಳುವ ಹಾಗೆ ಅವುಗಳಲ್ಲಿ ಹಲವು” ಬಗ್ಗೆಯ ಮಾರ್ಬಾ ಡುಗಳನ್ನು ಮಾಡಿಕೊಳ್ಳ ಲಾಗುತ್ತದೆ. ಆದರೆ ಬರೆಯುವಾಗ ಮಾತ್ರ. ಅವನ್ನು ಹೆಚು ಕಡಿಮೆ ಸಂಸ್ಕ್ರುತದಲ್ಲಿ ರುವ ಹಾಗೆಯೇ ಬರೆಯಬೇಕಾಗಿದೆ.
೨.೫ ಎರವಲು ಪದಗಳ ಬರವಣಿಗೆ
ಕನ್ನಡಕ್ಕೆ ಹಲವು ನುಡಿಗಳಿಂದ ಪದಗಳು ಎರವಲಾಗಿ ಬಂದಿವೆ, ಮತ್ತು ಇಂತಹ ಪದಗಳನ್ನು ಬರೆಯುವಲ್ಲಿ ನಾವು ಅವುಗಳ ಉಲಿಪಿಗೇನೇ ಹೆಚ್ಚಿನ ಮಹತ್ವ ವನ್ನು ಕೊಟ್ಟಿದ್ದೇವೆ. ಹಾಗಾಗಿ, ಇಂತಹ ಪದಗಳ “ಬರವಣಿಗೆಯಲ್ಲೂ ಓದುವ ಹಾಗೆಯೇ ಬರೆಯುವ ಮತ್ತು ಬರೆದ. ಹಾಗೆಯೇ ಓದುವ ಅನುವು ಕನ್ನಡಿಗರಿಗಿದೆ.
ಎತ್ತುಗೆಗೆ, ಇಂಗ್ಲಿಶ್ನಿಂದ ಎರವಲಾಗಿ ಪಡೆದ ಪದಗಳನ್ನು ನಾವು ಆ ನುಡಿಯಲ್ಲಿ ರುವ ಹಾಗೆ ಬರೆಯುವುದಿಲ್ಲ. ಅದಕ್ಕೆ ಬೇಕಾಗುವ ಬರಿಗೆಗಳು ನಮ್ಮ ಬರವಣಿಗೆಯಲ್ಲಿಲ್ಲ ದಿರುವುದು ಇದಕ್ಕೆ ಕಾರಣ. ಆ ಪದಗಳನ್ನು ನಾವು ಹೇಗೆ ಓದುತ್ತ ೀವೆಯೋ ಹಾಗೆಯೇ ಬರೆಯುತ್ತೇವೆ: ಟಯ್ಸ್, ಟೀವಿ, ರೇಡಿಯೋ, ಡಾಶ್ವರ್, ಡ್ಯೂಟ ಮೊದಲಾದ ಪದಗಳಲ್ಲಿ ಕಾಣಿಸುವ ಟಕಾರ- ಕರಗಲು ಇಂಗ್ಲಿಶ್ನಲ್ಲಿಲ್ಲ. ಈ ಪ ಪದಗಳನ್ನು ನಾವು ಟಕಾರ- -ಡಕಾರಗಳನ್ನು ಬಳಸಿ ಓದುತ್ತೇವೆ, ಮತ್ತು ಹಾಗೆಯೇ ಬರೆಯುತ್ತೇವೆ.
ಮದರ್, ಬ್ರದರ್, ವೆದರ್ ಮೊದಲಾದ ಬೇರೆ ಕೆಲವು ಪದಗಳಲ್ಲಿ ನಾವು ದಕಾರವನ್ನು ಬಳಸುತ್ತೇವೆ; ಆದರೆ ಇಲ್ಲೂ ದಕಾರ ನಮ್ಮ ಓದಿನಲ್ಲಿದೆಯಲ್ಲದೆ ಇಂಗ್ಲಿಶ್ನಲ್ಲಿಲ್ಲ. ವಯ್ರಸ್ ಮತ್ತು ವಯ್ದರ್ ಪದಗಳ ಮೊದಲನೆಯ ಬರಿಗೆಯನ್ನು ನಾವು ಒಂದೇ ರೀತಿಯಲ್ಲಿ ಉಲಿಯುತ್ತೇವೆ ಮತ್ತು ಒಂದೇ ರೀತಿಯಾಗಿ ಬರೆಯುತ್ತೇವೆ. ಆದರೆ, ಇಂಗ್ಲಿಶ್ನ virus ಮತ್ತು wiper ಎಂಬ ಈ ಎರಡು ಪದಗಳಲ್ಲಿ ಮತ್ತು ಇಂತಹವೇ ಬೇರೆ ಹಲವು ಪದಜೋಡಿಗಳಲ್ಲಿ ಮೊದಲಿಗೆ ಬರುವ ಬರಿಗೆಗಳು ಇಂಗ್ಲಿಶ್ ನುಡಿಗರ ಬರಹದಲ್ಲಶ್ಟೇ ಅಲ್ಲದೆ ಓದಿನಲ್ಲೂ ಬೇರೆ ಬೇರಾಗಿವೆ.
ಈ ರೀತಿ ಹೆಚ್ಚಿನೆಡೆಗಳಲ್ಲೂ ಇಂಗ್ಲಿಶ್ ಎರವಲು ಪದಗಳನ್ನು ನಾವು ಓದುವ ಹಾಗೆಯೇ ಬರೆಯುತ್ತೇವಲ್ಲದೆ ಇಂಗ್ಲಿಶ್ನಲ್ಲಿರುವ ಹಾಗೆ, ಇಲ್ಲವೇ ಇಂಗ್ಲಿಶ್ ನುಡಿಗರು ಓದುವ ಹಾಗೆ ॥ ಬರೆಯುವು ದಿಲ್ಲ.
ಇದಕ್ಕೆ ಕೆಲವು ಹೊರಪಡಿಕೆಗಳೂ ಇವೆ. ಎತ್ತು ಗೆಗೆ, ಇಂಗ್ಲಿಶ್ ಎಂಬ ಪದವನ್ನೇ ಗಮನಿಸಬಹುದು: ಅದನ್ನು ಇಂದ್ಲಿಷ್ ಎಂಬು ದಾಗಿ ಬರೆಯಲಾಗುತ್ತದೆ; ಆದರೆ, ನಿಜಕ್ಕೂ ಅದನ್ನು ಹೆಚ್ಚಿನವರೂ ಇಂಗ್ಲಿಶ್ ಎಂಬುದಾಗಿಯೇ ಉಲಿಯುತ್ತಾರೆ. ಇಂಗ್ಲಿಶ್ ನುಡಿಗರ ಉಲಿಪಿನಲ್ಲೂ ಈ ಘದದ ಕೊನೆಯ ಉಲಿ ಶ್ ಎಂಬುದಾಗಿಯೇ ಇದೆ! ಬೇರೆಯೂ ಕೆಲವು ಇಂಗ್ಲಿಶ್ ಎರವಲು ಪದಗಳಲ್ಲಿ ಷಕಾರವನ್ನು ಬಳಸಲಾಗುತ್ತಿದೆ; ಎತ್ತುಗೆಗೆ, -101 ಎಂಬ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳನ್ನು ಬರೆಯುವಾಗ ಷಕಾರವನ್ನು ಬಳಸಲಾಗುತ್ತದೆ (ಇಸ್ಟ್ ಸ್ಕಿರೇಹನಸ್, ಅಿಪ್ರೊಡಶ್ಟಸ್, ಡಿಸ್ಟಿ ಬ್ಯೂಷಸ್). ಇಲ್ಲೂ ಕೂಡ ಇಂಗ್ಲಿಶ್ ನುಡಿಗರ ಉಲಿಪಿನಲ್ಲಿ ಶ್ ಎಂಬುದೇ ಇದೆ, ಮತ್ತು ಹೆಚ್ಚಿನ ಕನ್ನಡಿಗರ ಉಲಿಪಿನಲ್ಲೂ ಶ್ ಎಂಬುದಿದೆ.
ಥಕಾರ ಮತ್ತು ಫಕಾರಗೆಳೆಂಬ ಎರಡು ಮಹಾಪ್ರಾಣ ಬರಿಗೆಗಳನ್ನೂ ಇಂಗ್ಲಿಶ್ ಎರವಲುಗಳನ್ನು ಬರೆಯುವಲ್ಲಿ ಬಳಸಲಾಗುತ್ತದೆ (ಥಿಯರಿ, ಥಿಯೇಟರ್, ಅಫೀಸ್, ಕಾಫಿ). ಆದರೆ, ಹೆಚ್ಚಿನ ಕನ್ನಡಿಗರ ಉಲಿಪಿನಲ್ಲೂ ಇವು ತಕಾರ ಮತ್ತು ಪಕಾರಗಳೆಂಬ ಅಲ್ಪಪ್ರಾಣ ಉಲಿಗಳಾಗಿಯೇ ಕಾಣಿಸಿಕೊಳ್ಳುತ್ತವೆ.
ಇದಲ್ಲದೆ, ಇಂಗ್ಲಿಶ್ ನುಡಿಗರ ಉಲಿಪಿನಲ್ಲಿಯೂ ಇವು ಮಹಾಪ್ರಾಣ ಉಲಿಗಳಾಗಿ ಕಾಣಿಸಿಕೊಳ್ಳುವುದಿಲ್ಲ; ಇದಕ್ಕೆ ಬದಲು, ಅವೆರಡೂ ಉಜ್ಜುಲಿ(110೩/110)ಗಳಾಗಿ ಕಾಣಿಸಿ ಕೊಳ್ಳುತ್ತವೆ. ಕೆಲವು ಮಂದಿ ಕನ್ನಡಿಗರೂ ಇವುಗಳಲ್ಲಿ ಫಕಾರವನ್ನು ಒಂದು ಉಜ್ಜುಲಿಯಾಗಿ ಉಲಿಯುತ್ತಾರೆ. ಆದರೆ, ಇದನ್ನು ಬರೆಯಲು ಫ್ ಎಂಬ ಬೇರೆಯೇ ಬರಿಗೆ ಬಳಕೆಯಲ್ಲಿದೆ (ಅಫೀಸ್, ಕಾಪಿ). ಹಾಗಾಗಿ, ಇವನ್ನು ಮಹಾಪ್ರಾಣ ಬರಿಗೆಗಳನ್ನು ಬಳಸಿ ಬರೆಯುವುದಕ್ಕೆ ಯಾವ ಅದಾರವೂ ಇಲ್ಲ.
ಹಿಂದಿ, ಮರಾಟಿ, ಉರ್ದು, ತಮಿಳು ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನೂ ನಾವು ಹೆಚ್ಚುಕಡಿಮೆ ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇ ವಲ್ಲದೆ ಆ ನುಡಿಗಳಲ್ಲಿ ಹೇಗೆ ಬರೆಯುತ್ತಾರೋ ಹಾಗೆ ಬರೆಯುವುದಿಲ್ಲ. ಉರ್ದು ಇಲ್ಲ ವೇ ಅರೇಬಿಕ್-ಪರ್ಮಿಯನ್ಗಳಿಂದ ಎರವಲಾಗಿ ಪಡೆದ ದಾಖಲ್, ಠಾಣೆ, ಫರಾಸಾ ಮೊದಲಾದ ಕೆಲವು ಪದಗಳಲ್ಲಿ ಮಹಾಪ್ರಾಣ ಬರಿಗೆಗಳು ಕಾಣಿಸಿಕೊಳ್ಳುತ್ತ ವೆ. ಆದರೆ, ಉಲಿಪಿನಲ್ಲಿ ಇವೂ ಕೂಡ ಅಲ್ಪಪ್ರಾಣ ಬರಿಗೆಗಳಾಗಿಬಿಡುತ್ತವೆ. ಹಾಗಾಗಿ, ಅವನ್ನೂ ಮಹಾಪ್ರಾಣ ಬರಿಗೆಗಳಾಗಿ ಬರೆಯ ಬೇಕೆಂದಿಲ್ಲ.
ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಮಾತ್ರ ನಾಟ ಜಗ ಓದುತ್ತೇವೆಯೋ ಹಾಗೆ ಬರೆಯದೆ ಸಂಸ್ಕ್ರುತ ನುಡಿಯಲ್ಲಿ ಅವು ಹೇಗೆ ಇವೆಯೋ ಹಾಗೆ ಬರೆಯಬೇಕಾಗಿದೆ. ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರ ಉಳಿಯುತಿ ಶಿರುವುದಕ್ಕೆ ಅದರಲ್ಲಿ ಸಂಸ್ಕ್ರುತ ಪದಗಳಿಗೆ ಈ ರೀತಿ ಅನವಶ್ಯಕವಾಗಿ ಒಂ ಹೆಚ್ಚಿನ ಸ್ವಾನವನ್ನು ಕೊಟ್ಟಿರುವುದು ಒಂದು “ಮುಕ್ಯ ವಾದ ಕಾರಣ.
A ಕನ್ನಡ ಬರಹವನ್ನು ಕಲಿಯುವಾಗ ಹಲವಾರು ಒದಿನಲ್ಲಿ ಕಾಣಿಸದಿರುವ ಬರಿಗೆಗಳನ್ನು ಮಕ್ಕಳು ಕಲಿಯ ಬೇಕಾಗಿದೆ. ಇದರಿಂದಾಗಿ, ಕನ್ನಡ ಬರಹವನ್ನು ಕಲಿತು ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಕೆಲಸ ಅವರ ಮಟ್ಟಿಗೆ ಹೆಚ್ಚು ತೊಡಕಿನದಾಗಿದೆ.
ಎತ್ತುಗೆಗೆ, ಶಾಲೆಗಳಲ್ಲಿ ಕನ್ನಡ ಬರಹವನ್ನು ಕಲಿಯ ಹೊರಡುವ ಚಿಕ್ಕ ಮಕ್ಕಳಿಗೆ ಕನ್ನಡಕ್ಕೆ ಅವಶ್ಯವಿಲ್ಲ ದಛ, ರು, ಠ ಮೊದಲಾದ ಬರಿಗೆಗಳನ್ನು ಕಲಿಸುವುದಕ್ಕಾಗಿ ಕನ್ನಡದಲ್ಲೆಲ್ಲೂ ಕಾಣಿಸದಂತಹ ಛದ (ಹೋತ), ಛದ (ಮುಚ್ಚಳ), ಖರ (ಹೇಸರಗತ್ತೆ), ಊಷರ (ಸವುಳು ನೆಲ) ಮೊದಲಾದ ಪದಗಳನ್ನು ಕಲಿಸಬೇಕಾಗಿದೆ. ಈ ಪದಗಳನ್ನು ಅವರು ಮುಂದೆಂದೂ ತಮ್ಮ ಜೀವನದಲ್ಲಿ ಓದುವ ಇಲ್ಲವೇ ಬರೆಯುವ ಸಂದರ್ಬಗಳು ಬರಲಾರವೆಂದೇ ಹೇಳಬಹುದು. ಕನ್ನಡದಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಸುವುದಕ್ಕಾಗಿ ಅವನ್ನು ಚಿಕ್ಕ ಮಕ್ಕಳ ಮೇಲೆ ಹೇರಲಾಗುತ್ತದೆ.
೨.೬ ಸಂಸ್ಕೃತದ ಎರವಲು ಪದಗಳ ಬರವಣಿಗೆ
ಹಳೆಗನ್ನಡದ ಕಾಲದಲ್ಲಿ, ಮತ್ತು ಅಮೇಲೆಯೂ ಇತ್ತೀಚೆಗಿನ ವರೆಗೆ, ಸಂಸ್ಕ್ರುತ ಎರವಲುಗಳಲ್ಲಿ ಹಲವನ್ನು ಕನ್ನಡದ ಉಲಿಪಿಗೆ pe ತದ್ಬ ವಗಳಾಗಿ ಮಾರ: ಡಿಸಿ ಬಳಸುವ ಆಯ್ಕೆ ಬರಹಗಾರರಿಗಿತ್ತು. CS: ಇಂತಹ ಪದಗಳ ಬರವಣಿಗೆಯಲ್ಲೂ ಓದು ಬರಹಗಳ ನಡುವೆ ಹೆಚ್ಚಿ ನ ವ್ಯತ್ಯಾಸ ಗಳಿರಲಿಲ್ಲ.
ಆದರೆ ಸ ಚೆಗೆ, ಕನ್ನಡ ಬರಹದಲ್ಲಿ ಬಳಕೆಯಾಗುವ ಹೆಚ್ಚಿ ನ ಸಂಸ್ಕ್ರುತ ಎರವಲುಗಳನ್ನೂ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಹೆಲಾಗುತ್ತಿದೆ, ಮತ್ತು ಹಾಗೆ ಬಕೆಯತುತ್ತಿದು. ಮತ್ತು ಉಲಿಪಿಗೆ ಅನುಸಾರವಾಗಿ ಅವುಗಳ ಬರವಣಿಗೆಯನ್ನು ಮಾರ್ಬಡಿಸುವುದು ತಪ್ಪೆಂದು ತಿಳಿಯಲಾಗುತ್ತಿದೆ. ಇದರಿಂದಾಗಿ, ಇಂತಹ ಪದಗಳ ಮಟ್ಟಿಗೆ ಇವತ್ತು ಕನ್ನಡ ಬರವಣಿಗೆಯಲ್ಲಿ
ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸ ಸಗಳು ಕಾಣಿಸಿ ಕೊಳ್ಳುತ್ತಿವೆ.
=, ವ್ಯತ್ಯಾಸ ಸಗಳನ್ನು ಹೋಗಲಾಡಿಸುವುದಕ್ಕಾಗಿ ಕನ್ನಡ ಬರವಣಿಗೆಯಲ್ಲಿ ಇವತ್ತು. ಕೆಲವು ಮಾರ್ಬಾಡುಗಳನ್ನು ಮಾಡಿಕೊಳ್ಳ ಬೇಕಾಗಿದೆ. ಬೇರೆಲ್ಲಾ ‘ಎರವಲು ಪದಗಳ ಹಾಗೆ. ಸಂಸ್ಕ್ರುತವೆ ಎರವಲು ಪದಗಳನ್ನೂ ಹೆಚ್ಚಿನ ಕನ್ನಡಿಗರೂ ಹೇಗೆ ಉಲಿಯುತ್ತಾರೋ ಹಾಗೆ ಬರೆಯಬೇಕು.
(೧) ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ ‘ಬಿಂಗೆಗಳನ್ನು ಹೆಚ್ಚಿನ ಕನ್ನಡಿಗರೂ ಅಲ್ಪಪ್ರಾಣ ಬರಿಗೆಗಳಾಗಿ ಉಲಿಯುತ್ತಾ ರೆ. ಹಾಗಾಗಿ. ಆಂತಹ ಪ ಪದಗಳನ್ನು ಬರೆಯುವಾಗ ಅವನ್ನು ಅಲ್ಪಪ್ರಾಣ ಬರಿಗೆಗಳಾಗಿಯೇ ಬರೆಯಲು ಸಾದ್ಯವಾಗಬೇಕು. ಈ ಒಂದು ಬದಲಾವಣೆಯ ಮೂಲಕ ಕನ್ನಡ ಬರಹಗಳಲ್ಲಿ ಇವತ್ತು ಕಡ್ಡಾಯವಾಗಿ ಬಳಕೆಯಾಗುತ್ತಿರುವ ಹತ್ತು ಬರಿಗೆಗಳನ್ನು (ಖಛಠಥಫ ಮತ್ತು ಫರುಢಧಭಗಳನ್ನು) ಬದಿಗಿರಿಸಬಹುದು.
(೨) ಕನ್ನಡ ಬರಹದಲ್ಲಿರುವ ಕುಜಾಣಸಮಗಳೆಂಬ ಅಯ್ದು ಮೂಗುಲಿ(ಅನುನಾಸಿಕ)ಗಳಲ್ಲಿ ಕು-ಇಾಗಳೆಂಬ ಮೊದಲಿನ ಎರಡು ಮೂಗುಲಿಗಳನ್ನು ಬಳಸದಿರಲು ಬರುತ್ತದೆ. ಯಾಕೆಂದರೆ, ಕನ್ನಡ ಪದಗಳಲ್ಲಿ ಅವು ಬೇರೆ ಮುಚ್ಚುಲಿಗಳ ಮೊದಲಶ್ಟೇ ಬರುತ್ತವೆ ಮತ್ತು ಆ ಜಾಗದಲ್ಲಿ ಎಲ್ಲಾ ಮೂಗುಲಿಗಳನ್ನೂ ೦ ರೂಪ ದಲ್ಲಿ ಕಾಣಿಸಲಾಗುತ್ತ ದೆ.
ಅವು ತಮ್ಮದೇ ಆದ ರೂಪದಲ್ಲಿ ಕಾಣಿಸುವುದು ಸಂಸ್ಕ್ರುತ ದಿಂದ ಎರವಲಾಗಿ ಪಡೆದ ಅಜ್ಜಾಸ, ವಾಜ್ಕಯ ಮೊದಲಾದ ಕೆಲವೇ ಕೆಲವು ಪದಗಳಲ್ಲಿ ಮಾತ್ರ. ಇಂತಹ ಪದಗಳಲ್ಲಿ ಇಕಾರವನ್ನು ನಕಾರವಾಗಿ (ಅಜ್ಞಾನ, ಜ್ಞಾತಿ) ಮತ್ತು ಜಕಾರವನ್ನು ಗಕಾರವಾಗಿ (ವಾರ್ಮಯ) ಬರೆಯಬಹುದು.
(೩) ಯಕಾರವನ್ನು ಒಂದು ತೆರೆಯುಲಿ (ಸ್ವರ) ಎಂಬುದಾಗಿ ತಿಳಿಯಲಾಗಿದೆ. ಸಂಸ್ಕ್ರುತದಲ್ಲಿ ಅದು ಒಂದು ‘ೆರೆಯುಲಿಯಾಗಿ ಬಳಕೆಯಾಗುತ್ತಿ ದುದ್ದ” ಇದಕ್ಕೆ ಕಾರಣ. (ಸಂಸ್ಕ್ರುತದಲ್ಲಿ ಅದಕ್ಕೆ ಖೂ ಎಂಬ ಉದ ರೂಪವ. ಆದರೆ, ಕನ್ನ ಡಿಗರು ಅದನ್ನುರು ಇಲ್ಲವೇ ಠಿ ಎಂಬುದಾಗಿ ರಕಾರಕ್ಕೆ ಉಕಾರ ಇಲ್ಲ ವೇ ಇಕಾರವನ್ನು ಸೇರಿಸಿ ಉಲಿಯುತ್ತಾರೆ. ಬೇರೆ ಲವರು ರಕಾರಕ್ಕೆ ಬೇರೊಂದು ರೀತಿಯ (ತುಟಿಯನ್ನು ಅಗಲಿಸಿ ಉಲಿಯುವ) ಉಕಾರವನ್ನು ಸೇರಿಸಿಯೂ ಅದನ್ನು ಉಲಿಯುತ್ತಾರೆ.
ಆದರೆ, ಯಾರೂ (ಸಂಸ್ಕೃತ ಪಂಡಿತರೂ) ಯಕಾರವನ್ನು ಒಂದು ತೆರೆಯುಲಿಯಾಗಿ ಉರಿಯುವುದಿಲ್ಲ.
ಈ ತೆರೆಯುಲಿಯ ಉಲಿಪು ಹೇಗಿರಬಲ್ಲುದು ಎಂಬುದನ್ನು ತಿಳಿಯಲು ಸಂಸ್ಕ್ರುತದ ಕೃತಿ ಪದವನ್ನು ಮ್ಯಾ ನು: ಈ ಪದದ ಉಲಿಪನಲ್ಲಿ ಕ ಎಂಬ ತೆರೆಯುಲಿ ಬಂದಿದೆಯೆಂದು ಹೇಳಬೇಕಾದರೆ, ಕಕಾರ ಮತ್ತು ತಕಾರಗಳ ನಡುವೆ ರಕಾರ ಮಾತ್ರ ಇರಬೇಕು ಮತ್ತು ಆ ಪದ ಎರಡು ಉಲಿಕಂತೆ (syllable)ಗಳಿಂದ ಕೂಡಿರಬೇಕು.
ಕನ್ನಡಿಗರ (ಮತ್ತು ಸಂಸ್ಕ್ರುತ ಪಂಡಿತರ) ಉಲಿಪಿನಲ್ಲಿ ಈ ಪದ ಎರಡು ಉಪಿಕ35ಗಳದಿ ಕೂಡಿರುತ್ತದೆಯೇನೋ “ನಿಜ; ಆದರೆ, ಕಕಾರ ಮತ್ತು ತಕಾರಗಳ ನಡುವೆ ರಕಾರದೊಂದಿಗೆ ಒಂದು ತೆರೆಯುಲಿಯೂ (ದುಂಡಗಿನ ಉಕಾರ, ತುಟಿ ಅಗಲಿಸಿದ ಉಕಾರ ಇಲ್ಲವೆ ಇಕಾರ) ಬಂದಿರುತ್ತದೆ.
(೪) ಷಕಾರವೂ ಇದೇ ರೀತಿಯಲ್ಲಿ ಹೆಚ್ಚಿನವರ ಮಾತಿನಲ್ಲೂ ಶಕಾರವಾಗಿ ಕಾಣಿಸಿಕೊಳ್ಳುತ್ತ ದೆ. ಕೆಲವರ ಮಾತಿನಲ್ಲಿ ಷಕಾರ ಮತ್ತು ಶಕಾರಗಳೆರಡೂ. ಸಕಾರವಾಗಿ ಕಾಣಿಸಿಕೊಳ್ಳುತ್ತ ವೆ ಯೆಂಬುದು ಬೇರೆಯೇ ವಿಶಯ; ಅದು ತಪ್ಪು ಎಂಬುದಾಗಿ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಆದರೆ, ಶಕಾರ ಮತ್ತು ಷಕಾರಗಳ “ನಡುವಿನ ವ್ಯತ್ಯಾಸ ಉಲಿಪಿನಲ್ಲಿ ಕಾಣಿಸದಿರುವುದನ್ನು ಹೆಚಿ ರಿನವರೂ ತಪ್ಪೆ ಬುದ ತಿದ ;ಲುಹೋಗುವುದಿಲ್ಲ.
ಶಕಾರ ಮತ್ತು ಷಕಾರಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಸ ವಿದೆಯೆಂದು ಹೇಳಬೇಕಿದ್ದಲ್ಲಿ, ತಕಾರ ಮತ್ತು ಟಕಾರಗಳನ್ನು ಉಲಿಯುವಾಗ ಯಾವ ರೀತಿಯಲ್ಲಿ ನಾಲಿಗೆ ಬಾಯಿಯ ಮೇಲ್ಬಾಗದ (ಅಂಗುಳಿನ) ಹತ್ತಿರ ಹೋಗುತ್ತದೆಯೋ ಅದೇ ರೀತಿಯಲ್ಲಿ ಶಕಾರ-ಷಕಾರಗಳನ್ನು ಉಚ್ಚರಿಸುವಾಗಲೂ ಹೋಗಬೇಕು.
ತಕಾರವನ್ನು ಉಲಿಯುವಾಗ ಅಂಗುಳನ್ನು ನಾಲಿಗೆಯ ಮೇಲ್ಬಾಗ ಮುಟ್ಟುತ್ತದೆ ಮತ್ತು ಟಕಾರವನ್ನು ಉಲಿಯುವಾಗ ನಾಲಿಗೆಯ ಅಡಿಬಾಗ ಮುಟ್ಟುತ್ತದೆ. ಇದಕ್ಕಾಗಿ ಟಕಾರವನ್ನು ಉಲಿಯುವಾಗ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ.
ಆದರೆ, ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಶಕಾರ ಮತ್ತು ಷಕಾರಗಳ ಉಲಿಪಿನಲ್ಲಿ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳುವು ದಿಲ್ಲ. ಅವೆರಡನ್ನೂ ಒಂದೇ ರೀತಿಯಲ್ಲಿ ಉಲಿಯಲಾಗುತ್ತದೆ. ವಿಷ, ವಿಕೇಷ, ಅಕರ್ಷಕ ಮೊದಲಾದ ಪದಗಳಲ್ಲಿ ಬರುವ ಷಕಾರವನ್ನು ಉಲಿಯುವಾಗ ಟಕಾರದ ಉಲಿಪಿನಲ್ಲಿ ಕಾಣಿಸುವ ಹಾಗೆ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುವುದಿಲ್ಲ . ಹಾಗಾಗಿ ಅವನ್ನು ವಿಶ, ವಿಶೇಶ, ಅಶರ್ಕಕ ಎಂಬುದಾಗಿ ಬರೆಯುವುದರಲ್ಲಿ ಯಾವ ತೊಂದರೆಯೂ ಇಲ್ಲ.
ಕಷ್ಟ, ಸಷ್ಟ, ಕೃಷ್ಣ ಮೊದಲಾದ ಪದಗಳು ಇದಕ್ಕೆ ಹೊರಪಡಿಕೆಗಳು. ಅವುಗಳಲ್ಲಿ ಬರುವ ಷಕಾರವನ್ನು ಉಲಿಯುವಾಗ ಹಲವರಲ್ಲಿ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ. ಆದರೆ ಇದಕ್ಕೆ ಷಕಾರದ ಬಳಿಕ ಬರುವ ಟಕಾರ ಮತ್ತು ಣಕಾರಗಳು ಕಾರಣ. ಕೆಲವರ ಉಲಿಪಿನಲ್ಲಿ ಇಲ್ಲಿಯೂ ಶಕಾರ ಇಲ್ಲವೇ ಸಕಾರ ಕಾಣಿಸಿಕೊಳ್ಳುತ್ತದೆ.
ಟಕಾರ ಮತ್ತು ಇಕಾರಗಳ ಮೊದಲಿಗೆ ಷಕಾರದ ಬದಲು ಶಕಾರ ಬೇರಾವ ಪದದಲ್ಲೂ ಕಾಣಿಸಿಕೊಳ್ಳುವುದಿಲ್ಲವಾದ
[ee] ಕಾರಣ, ಇಂತಹ ಪದಗಳಲ್ಲೂ ಕಪ್ಪ, ಸಶ್ವ, ಶ್ರುಶ್ಚ ಎಂಬುದಾಗಿ ಶಕಾರವನ್ನು ಬಳಸುವುದರಿಂದ ತೊಂದರೆಯಾಗದು.
(೫) ವಿಸರ್ಗ(ಃ )ವನ್ನು ದುಃಖ, ಅಂತಃಕರಣ, ಬಹುಶಃ ಎಂಬಂತಹ ಕೆಲವೇ ಕೆಲವು ಸಂಸ್ಕ್ರುತದ ಎರವಲು ಪದಗಳಲ್ಲಿ ಕಾಣಬಹುದು. ಈಗಾಗಲೇ ಸಕಾರ- ಸಹರಗರೆದುರು ಬಂದಿರುವ ಈ ಬರಿಗೆಯನ್ನು ಸಕಾರ-ಶಕಾರಗಳೊಂದಿಗೆ ಸೇರಿಸಿ ಒತ್ತು ಬರಿಗೆಯಾಗಿ ಕಾಣಿಸಲಾಗುತ್ತದೆ (ಸಿಃಸಾರ-ಸಿಸ್ಲಾರ, ಸಿಃಸಂತಾಸ-ಸಿಸ್ಸಂತಾಸ, ಸಿಃಪೇಷ-ಸಿಕ್ಕೇಶ, ಸಿಃಶಬ್ದ- ಸಿಶ್ಕಬ್ದ). ಉಳಿದೆಡೆಗಳಲ್ಲೂ ಇದೇ ರೀತಿಯಲ್ಲಿ ಮುಚ್ಚುಲಿಗ ಳೆದುರು ಒತ್ತುಬರಿಗೆಯಾಗಿ ಮತ್ತು ಪದದ ಕೊನೆಯಲ್ಲಿ ಹಕಾರವಾಗಿ ಹೆಚ್ಚಿನ ಕನ್ನಡಿಗರೂ ಉಲಿಯುವ ಹಾಗೆ (ದುಕ್ಕ, ಅಂತಕ್ಕರಣ ಮತ್ತು ಬಹುಶಹ ಎಂಬಂತೆ) ಕಾಣಿಸಬಹುದು.
(೬) ಕನ್ನಡ ಬರಹದಲ್ಲಿ ಐ ಮತ್ತು ಔಗಳೆಂಬ ಎರಡು ಬರಿಗೆಗಳು ಅನವಶ್ಯಕವಾಗಿ ಸೇರಿಕೊಂಡಿವೆ. ಉಲಿಪಿನಲ್ಲಿ ಅವು ಅಯ್ ಮತ್ತು ಅವ್ ಎಂಬವುಗಳಿಂದ ಬೇರಾಗಿಲ್ಲ. ಹಾಗಾಗಿ, ಅವನ್ನು ಬಳಸಬೇಕಾಗಿರುವ ಕಡೆಗಳಲ್ಲೆಲ್ಲ ಅಯ್ ಮತ್ತು ಅವ್ ಎಂಬವುಗಳನ್ನೇ ಬಳಸಲು ಬರುತ್ತದೆ.
ಅಯ್ ಮತ್ತು ಅವ್ ಎಂಬವುಗಳು ಅಕಾರ ಮತ್ತು ಯಕಾರ/ ವಕಾರಗಳ ಜೋಡಿಗಳಾಗಿದ್ದ ರೂ ಸಂಸ್ಕೃತದ ಪದಗಳಲ್ಲಿ ಮತ್ತು ಸೇರಿಕೆಯ ಕಟ್ಟಲೆ(ಸಂದಿ)ಗಳಲ್ಲಿ ಅವೆ ಬೇರೆ ತೆರೆಯುಲಿಗಳ ಹಾಗಿವೆಯಲ್ಲ ಡೆ ತೆರೆಯುಲಿ- ಮುಚ್ಚುಲಿ ಜೋಡಿಗಳ ಹಾಗಿಲ್ಲ. ಹಾಗಾಗಿ, ಸಂಸ್ಕ್ರುತವಾ ಿಕರಣಗಳಲ್ಲಿ ಅವನ್ನು ಬೇರೆಯೇ ಎರಡು ತೆರೆಯುಲಿಗಳೆಕದು ತಿಳಿಯಲಾಗಿದೆ. ಇದಲ್ಲದೆ, ಸಂಸ್ಕ್ರುತದಲ್ಲಿ ಯಕಾರ-ವಕಾರಗಳು ಅಯ್ ಮತ್ತು ಅವ್ pe = ಎರಡು ತೆರೆಯುಲಿ- ಮುಚ್ಚುಲಿ ಜೋಡಿಗಳಲ್ಲಿ ಮಾತ್ರ ಬರುತ್ತವಲ್ಲದೆ ಬೇರೆ ಜೋಡಿಗಳಲ್ಲಿ ಬರುವುದಿಲ್ಲ. ಹಾಗಾಗಿ, ಈ ಎರಡು ತೆರೆಯುಲಿ-ಮುಚ್ಚುಲಿ ಜೋಡಿಗಳನ್ನು ಬರೆಯುವುದಕ್ಕಾಗಿ ಎ ಮತ್ತು ಔ ಎಂಬ ಎರಡು ತೆರೆಯುಲಿ ಬರಿಗೆಗಳನ್ನು ಬನು ಸಂಸ್ಕ್ರುತದ ಮಟ್ಟಿಗೆ ಸರಿಯಾದ ಕ್ರಮ.
ಆದರೆ, ಕನ್ನಡದಲ್ಲಿ ಯಕಾರ ಮತ್ತು ವಕಾರಗಳು ಅಕಾರದೊಂದಿಗೆ ಮಾತ್ರವಲ್ಲದೆ ಬೇರೆ ತೆರೆಯುಲಿಗಳೊಂದಿಗೂ ತೆರೆಯುಲಿ-ಮುಚ್ಚುಲಿ ಜೋಡಿಗಳಲ್ಲಿ ಬಳಕೆಯಾಗುತ್ತವೆ. ಈ ವಿಶಯದಲ್ಲಿ ವಕಾರಕ್ಕಿಂತಲೂ ಯಕಾರ ಹೆಚ್ಚು ಜೋಡಿಗಳಲ್ಲಿ ಕಾಣಿಸಿಕೊಳ್ಳುತ್ತ ದೆ:
ಅಕಾರದೊಂದಿಗೆ ಎಕಾರದೊಂದಿಗೆ ಕಯ್ (ಕಯ್ದೆರಳು) ಶೆಯ್ (ಬತ್ತದ ಕೆಯ್) ಬಯ್ (ಬಯ್ಯು) ನೆಯ್ (ನೆಯ್ಗೆ) ಒಕಾರದೊಂದಿಗೆ ಉಕಾರದೊಂದಿಗೆ
ಹೊಯ್ (ಕೊಯ್ಯು) ತುಯ್ (ತುಯಿತ) ಹೊಯ್ (ಹೊಯ್ಯು) ಶುಯ್ (ಕುಯಿಲಾಳು) ಸೊಯ್ (ನೊಂದವರು)
ಇದಲ್ಲದೆ, ಅಯ್ತ್ ಮತ್ತು ಅವ್ ಎಂಬವುಗಳ ಬಳಕೆಯಲ್ಲಿ ತೆರೆಯುಲಿಗಳ ಸೇರಿಕೆಯ ಕಟ್ಟ ಲೆಯೂ ಕನ್ನ ಡದಲ್ಲಿ ಕಾಣಿಸುವು ದಿಲ್ಲ. ಅವು ಬೇರೆ ತೆರೆಯುಲಿ-ಮುಚ್ಚುಲಿ ಜೋಡಿಗಳ ಹಾಗೆಯೇ ಬಳಕೆಯಾಗುತ್ತವೆ.
ಹಾಗಾಗಿ, ಅಯ್ ಮತ್ತು ಅವ್ ಎಂಬವುಗಳಿಗೆ ಮಾತ್ರ ಐ ಮತ್ತು ಔ ಎಂಬುದಾಗಿ ಎರಡು ತೆರೆಯುಲಿ ಬರಿಗೆಗಳನ್ನು ಬಳಸುವುದಕ್ಕೆ ಕನ್ನಡದಲ್ಲಿ ಯಾವ ಆದಾರವೂ ಇಲ್ಲ. ಆ ಎರಡು ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಕನ್ನಡ ಬರಹವನ್ನು ಕಲಿಯುವ ಕೆಲಸ ಅಶ್ಚರ ಮಟ್ಟಿಗೆ ಸುಲಬವಾಗಬಲ್ಲುದು.
ಇದಲ್ಲದೆ, ಈ ರೀತಿ ಅನವಶ್ಯಕವಾಗಿ ಅಯ್ ಎಂಬುದನ್ನು ಐ ಎಂಬುದಾಗಿ ಬರೆದಿರುವುದು ಕನ್ನಡದ ಕೆಲವು ವಿದ್ವಾಂಸರನ್ನೇ ಗೊಂದಲಕ್ಕೆ ಒಳಪಡಿಸಿದ ಹಾಗೆ ಕಾಣಿಸುತ್ತದೆ. ಎತ್ತುಗೆಗೆ, ಕನ್ನಡದ ಕಯ್ (ಕೈ) ಎಂಬುದನ್ನು ಕೆಲವೊಮ್ಮೆ ಶೆಯ್ ಎಂಬುದಾಗಿ ಬರೆಯಲಾಗುತ್ತದೆ ಮತ್ತು ದೌಯ್ ಎಂಬುದನ್ನು ಕೆಲವೊಮ್ಮೆ ಗೈ ಎಂಬುದಾಗಿಯೂ ಬರೆಯಲಾಗುತ್ತದೆ. ಮಯ್, ಕಯ್ ಮೊದಲಾದ ಬೇರೆ ಪದಗಳ ಬರವಣಿಗೆಯಲ್ಲೂ ಇಂತಹದೇ ಗೊಂದಲ ಕಾಣಿಸಿಕೊಳ್ಳುತ್ತದೆ.
ಮುಚ್ಚುಲಿಗಳ ಬಳಿಕ ಬಂದಾಗ ಐ ಎಂಬುದಕ್ಕೆ ಎ ಎಂಬುದರ ಹಾಗೆಯೇ ಕಾಣಿಸುವಂತಹ ರೂಪ ಇರುವುದು (ಶೈ, ಮೃ, ದೈ ಮೊದಲಾದವುಗಳಿಗೂ ಶೆ. ಮೆ, ದೆ ಮೊದಲಾದವುಗಳಿಗೂ ನಡುವೆ ಹೋಲಿಕೆಯಿರುವುದು) ಈ ಗೊಂದಲಕ್ಕೆ ಕಾರಣವಿರಬೇಕು. ಐ ಮತ್ತು ಔ ಬರಿಗೆಗಳನ್ನು ಬಿಟ್ಟುಕೊಡುವುದರ ಮೂಲಕ ಈ ಗೊಂದಲವನ್ನು ಇಲ್ಲವಾಗಿಸ ಬಹುದು.
(ಹ) ಕನ್ನಡ ಬರಹದಲ್ಲಿ ಹೆಚ್ಚಿನ ಮುಚ್ಚುಲಿ(ವ್ಯಂಜನ) ಗಳಿಗೂ ದೊಡ್ಡ ರೂಪ ಮತ್ತು ಚಿಕ್ಕ ರೂಪ ಎಂಬುದಾಗಿ ಎರಡೆರಡು ರೂಪಗಳು ಮಾತ್ರ ಇವೆ. ಪದಗಳ ಮೊದಲಿಗೆ (ಸೀ, 660), ತೆರೆಯುಲಿಗಳ ನಡುವೆ (ಅವನು, ಇಲಿ) ಮತ್ತು ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ (ಅಣ್ಣ, ಅಕ್ಕ, ಉಕ್ತಿ) ಬರುವಾಗ ದೊಡ್ಡ ರೂಪ ಕಾಣಿಸಿಕೊಳ್ಳುತ್ತದೆ, ಮತ್ತು ಉಳಿದೆಡೆಗಳಲ್ಲಿ ಚಿಕ್ಕ ರೂಪ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಮೂಗುಲಿಗಳು ಮತ್ತು ರಕಾರ ಹೊರಪಡಿಕೆಗಳು: ಮೂಗುಲಿಗಳಿಗೆ ಒಂದು ಚಿಕ್ಕ ರೂಪ (,, _. ಎ) ಮತ್ತು ಎರಡು ದೊಡ್ಡ ರೂಪಗಳು (ಮ, ಸ, ಣ ಎಂಬಂತಹ ರೂಪ ಮತ್ತು ಎಲ್ಲವಕ್ಕೂ ಒಂದೇ ಆಗಿರುವ ೦ ರೂಪ) ಇವೆ.
ರಕಾರಕ್ಕೂ ಇದೇ ರೀತಿಯಲ್ಲಿ ಒಂದು ಚಿಕ್ಕ ರೂಪ ( ) ಮತ್ತು ಎರಡು ದೊಡ್ಡ ರೂಪಗಳಿವೆ (ರ, ೯). ಆದರೆ, ಇವುಗಳ ಬಳಕೆ ಮೂಗುಲಿಗಳ ಬಳಕೆಯ ಹಾಗಿಲ್ಲ.
ಪದಗಳ ಮೊದಲಿಗೆ ಮತ್ತು ಎರಡು ತೆರೆಯುಲಿಗಳ ನಡುವೆ ರಕಾರ ಬೇರೆ ಮುಚ್ಚುಲಿಗಳ ಹಾಗೆ ರ ಎಂಬ ದೊಡ್ಡ ರೂಪದಲ್ಲೇ ಬರುತ್ತದೆ (ರಾಮ, ಅರಸ, ಬರು); ಮುಚ್ಚುಲಿಗಳ ಬಳಿಕವೂ ಬೇರೆ ಮುಚ್ಚುಲಿಗಳ ಹಾಗೆ, ಅದು ಚಿಕ್ಕ ರೂಪದಲ್ಲೇ ಬರುತ್ತದೆ (ಪ್ರತಿಮೆ, ಪತ್ರಿಕೆ). ಆದರೆ, ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಇದು ೯ ಎಂಬ ಬೇರೊಂದು ದೊಡ್ಡ ರೂಪದಲ್ಲಿ ಬರುತ್ತದೆ (ಮಾರ್ಪಾಡು, ಅರ್ಯರು).
ಈ ಹೊರಪಡಿಕೆಗೆ ಇನ್ನೊಂದು ಹೊರಪಡಿಕೆಯೂ ಇದೆ! ರಕಾರ ಒಂದು ಮುಚ್ಚುಲಿಯೇ ಆದರೂ ತೆರೆಯುಲಿ ಮತ್ತು ರಕಾರಗಳ ನಡುವೆ ಇದು ೯ ಎಂಬ ಎರಡನೇ ದೊಡ್ಡ ರೂಪದಲ್ಲಿ ಬರುವೂಬದಲು ರ ಎಂಬ ಮೊದಲನೇ ದೊಡ್ಡ ರೂಪದಲ್ಲಿ ಬರುತ್ತದೆ (ಬಕ್ರೀ, ಕರ್ರಣೆ). ಕನ್ನಡ ಬರಹವನ್ನು ಕಲಿಯುವವರಿಗೆ ರಕಾರದ ಈ ಮೂರನೆಯ ರೂಪ (೯ ಎಂಬುದು) ತೊಂದರೆ ಕೊಡುತ್ತದೆ. ಯಾಕೆಂದರೆ, ಉಲಿಪಿನಲ್ಲಿ ಅದು ಇನ್ನೊಂದು ಮುಚ್ಚುಲಿಯ ಮೊದಲು ಬರುವುದಾದರೂ ಬರಹದಲ್ಲಿ ಆ ಮುಚ್ಚುಲಿಯ ಬಳಿಕ ಬರುತ್ತದೆ! ಎತ್ತುಗೆಗೆ, ಮಾರ್ಪಾಡು ಪದದ ಉಲಿಪಿನಲ್ಲಿ ರಕಾರ ಪಕಾರದ ಮೊದಲು ಬರುತ್ತದೆ; ಆದರೆ, ಬರಹದಲ್ಲಿ ಅದು ಪಕಾರದ ಬಳಿಕ ಬರುತ್ತದೆ!
ಕನ್ನಡ ಬರಹವನ್ನು ಸರಿಪಡಿಸುವ ಈ ಸಂದರ್ಬದಲ್ಲಿ ಅದರಲ್ಲಿ ಕಾಣಿಸುವ ಈ ರಕಾರದ ಸಮಸ್ಯೆಯನ್ನೂ ಸುಲಬವಾಗಿ ಬಗೆಹರಿಸ ಬಹುದು. ಇದಕ್ಕಾಗಿ ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಬರುವ ರಕಾರವನ್ನು ಬೇರೆ ಮುಚ್ಚುಲಿಗಳ ಹಾಗೆ ಅದರ ಮೊದಲನೆಯ ದೊಡ್ಡ ರೂಪದಲ್ಲೇ ಬರೆಯಬೇಕು. (ಎತ್ತುಗೆಗೆ, ಮಾರ್ಪಾಡು ಎಂಬುದನ್ನು ಮಾರ್ಬಾಡು ಎಂಬುದಾಗಿ ಬರೆಯ ಬೇಕು). ಈಗಲೂ ಕೆಲವರು ರಕಾರವನ್ನು ಆ ರೀತಿ ಬರೆಯು ತ್ತಾರೆ. ಹೀಗೆ ಮಾಡಿದಲ್ಲಿ ಅದರ ೯ ಎಂಬ ದೊಡ್ಡರೂಪ ಬೇಕಾಗುವುದಿಲ್ಲ.
೨.೭ ಹಂತ ಹಂತವಾಗಿ ಬಳಕೆಗೆ ತರುವುದು
ಎರವಲು ಪದಗಳ ಬರವಣಿಗೆಯಲ್ಲಿ ನಡೆಸಬೇಕಾಗಿರುವ ಈ ಮಾರಾ ಿಡುಗಳನ್ನು ಹಂತ ಹಂತವಾಗಿ ಬಳಕೆಗೆ ತರಲು ಬರುತ್ತ ದೆ. ಮೊದಲಿಗೆ ಊರಿನ ಹೆಸ ರುಗಳಲ್ಲಿ ಮತ್ತು ಮಂದಿಯ ಹೆಸರುಗಳಲ್ಲಿ ಕಾಣಿಸುವ ಈ ಬರಿಗೆಗಳನ್ನು ಬದಲಾಯಿಸ ದಿರಬಹುದು. ಮಾರ್ಪಾಡಿಗೆ ಜನರು ಒಗ್ಗಿ ಹೋದಮೇಲೆ
ಅವುಗಳಲ್ಲೂ ಈ ಹೆಚ್ಚಿ ವ ಬರಿಗೆಗಳ ಬಳಕೆಯನ್ನು ಇಲ್ಲವಾಗಿಸ ಬಹುದು. ಬರವಣಿಗೆಯನ್ನು ಮಾರ್ಬಡಿಸಹೊರಟಿರುವ ಕೆಲವು ನುಡಿಗಳಲ್ಲಿ ಇಂತಹ: ಹೊಲಬನ್ನು ಬಳಸಿಕೊಳ್ಳಲಾಗಿದೆ. ಎತ್ತುಗೆಗೆ, ಜರ್ಮನಿಯಲ್ಲಿ ಬರವಣಿಗೆಯ ಮಾರ್ಬಾಡಿನಿಂದ ಊರುಗಳ ಮತ್ತು. ಮಂದಿಯ ಹೆಸ ಸರುಗಳನ್ನು ಹೊರಗಿರಿಸಲಾಗಿದೆ.
ಇದಲ್ಲದೆ, ಬರವಣಿಗೆಯನ್ನು ಮಕ್ಕಳಿಗೆ ಕಲಿಸುವ ಸಮಯದಲ್ಲಿ ಮೊದಲಿಗೆ ಕನ್ನಡಕ್ಕೆ ಅವಶ್ಯವಾಗಿ ಬೇಕಾಗುವ ೩೧ ಬರಿಗೆಗಳನ್ನಶ್ಟ್ಚೇ ಕಲಿಸಬೇಕು. ಈಗ ಆ-ಅ, ಪ, ಜ ಎಂಬಂತಹ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಮಕ್ಕಳಿಗೆ ಮೊದಲಿಗೇನೇ ಹೇಗೆ ಹೇಳಿಕೊಡುವುದಿಲ್ಲವೋ ಹಾಗೆಯೇ ಮಹಾಪ್ರಾಣ, ಖ, ಷ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನೂ ಇವತ್ತಿನ ಹಾಗೆ ಮೊದಲಿಗೇನೇ ಹೇಳಿಕೊಡಬೇಕಾಗಿಲ್ಲ.
ಹೀಗೆ ಮಾಡುವುದರಿಂದ, ಓದಿನಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಮಕ್ಕಳಿಗೆ ಸುಲಬ ವಾಗಿ ತಿಳಿದುಕೊಳ್ಳಲು ಬರುತ್ತದೆ, ಮತ್ತು ಅವರ ಓದಿನ ಕಲಿಕೆ ಬೇಗನೆ ಮುಂದೆ ಹೋಗುತ್ತದೆ. ಕೆಳವರ್ಗದ ಮಕ್ಕಳಿಗೂ ಓದಿನ ಕಲಿಕೆ ಇವತ್ತಿನ ಹಾಗೆ ಹೆಚ್ಚು ತೊಂದರೆ ಕೊಡುವುದಿಲ್ಲ.
೨.೮ ಸಂಸ್ಕ್ರುತ ಪದಗಳು ಮಾರ್ಬಡದೆ ಉಳಿದಿಲ್ಲ
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಈಗಾಗಲೇ ಹಿಸ್. ಹಲವು ಬಗೆಗಳಲ್ಲಿ ಮಾರ್ಪಡಿಸಿ ಬಳಸುತ್ತಿ ದ್ದೇವೆ. ಕನ್ನಡದ ಸೊಗಡಿಗೆ ಅವನ್ನು ಹೊಂದಿಸಿಕೊಳ್ಳಬೇಕೆಂಬುದೇ “ಅವನ್ನು ಹೀಗೆ ಮಾರ್ಪಡಿಸಲು ಮುಕ್ಯ ಕಾರಣ. ಇಂತಹ ಪದಗಳಲ್ಲಿ ಬರುವ ಮಹಾಪ್ರಾಣ ಬರಿಗೆಗಳು, ಷಕಾರ, ಯಕಾರ ಮೊದಲಾದುವನ್ನು ಅಲ್ಪಪ್ರಾಣ ಬರಿಗೆಗಳು, ಶಕಾರ, ರಕಾರ ಎಂಬುದಾಗಿ ಮಾರ ಶಡಿಸುವುದೂ ಇಂತಹದೇ ಒಂದು ಪ್ರಯತ್ನವಾಗುತ್ತದೆ.
ನಾವು ಸಂಸ್ಕ್ರುತದಿಂದ ಎರವಲಾಗಿ ಪಡೆದಿರುವ ಶ್ಲುಪ್ತ ಎಂಬಂತಹ ತ ಪದಗಳಲ್ಲಿ ಯಕಾರದ ಹಾಗೆಯೇ ಇರುವ ಬೇರೊಂದು ತೆರೆಯುಲಿಯಿದೆ. ಆದರೆ, ಅದನ್ನು ಬರೆಯಲು ಕನ್ನಡ ಬರವಣೆಗೆಯಲ್ಲಿ ಬರಿಗೆಯಿಲ್ಲ. ಹಾಗಾಗಿ, ಅದನ್ನು ಲು ಎಂದೇ ಬರೆಯುತ್ತೇವೆ. ಖಕಾರವನ್ನು ರು ಎಂಬುದಾಗಿ ಬರೆಯುವುದು ನಾವು ಮಾಡಬೇಕಾಗಿರುವ ಇಂತಹದೇ ಒಂದು ಮಾರ್ಪಾಡು.
ಎರವಲಾಗಿ ಪಡೆದಿರುವ ಸಂಸ್ಕ್ರುತ ಪದಗಳಲ್ಲಿ ನಮ್ಮ ನುಡಿಗೆ ಹೊಂದಿಕೊಳ್ಳುವ ಹಾಗೆ ಇನ್ನೂ ಪಂ ಮಾರಾ ಡುಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದೇವೆ: ಪದಗಳ ಕೊನೆಯ ಉದ್ದ ಆ ತೆರೆಯುಲಿಯನ್ನು ಗಿಡ್ಡ ಎ ತೆರೆಯುಲಿಯಾಗಿ ಮಾರ್ರ ಡಿಸಿದ್ದೆ ವೆ (ಸೀತಾ-ಸೀತೆ, ರುಹಾ-ರುಹೆ, ಪತಾಕಾ- ಪತಾಕೆ, ಮಾಲಾ-ಮಾಲೆ); ಪದಗಳ ಕೊನೆಯ ಸೊನ್ನೆಯನ್ನು ತೆಗೆದುಹಾಕಿದ್ದೇವೆ (ಜ್ನ್ಞಾಸಂ-ಜ್ಞಾಸ, ತೃಣಂ-ತೃಣ, ಸಿವೇಶಸಂ-ಸಿವೇಶಸ); ಪದಗಳ ಕೊನೆಯ ಸಕಾರವನ್ನು ಸ್ಸು ಎಂಬುದಾಗಿ ಮಾರ್ಬಡಿಸಿದ್ದೇವೆ (ಅಆಯುಸ್- ಆಯುಸ್ಸು, ಛಂದಸ್-ಭಂದಸ್ಸು, ತಪಸ್-ತಪಸ್ಸು).
ತಕಾರದಲ್ಲಿ ಕೊನೆಗೊಳ್ಳುವ ಶ್ರೀಮತ್, ಭರವತ್ ಎಂಬಂತಹ ಹಲವು ಪದಗಳನ್ನು ಓರೆಣಿಕೆಯ (ಏಕವಚನದ) ರೂಪಗಳಲ್ಲಿ ಎರವಲು ಪಡೆಯುವ ಬದಲು ಶ್ರೀಮಂತ, ಭಗವಂತ ಎಂಬಂತಹ ಹಲವೆಣಿಕೆಯ (ಬಹುವಚನದ) ರೂಪಗಳಲ್ಲಿ ಎರವಲು ಪಡೆದಿದ್ದೆ ವೆ, ಮತ್ತು ಅವನ್ನೇ ಓರೆಣಿಕೆಯಲ್ಲೂ ಬಳಸುತ್ತಿದ್ದೇವೆ (ಭರವಂತನಸ್ಟು ). ಸಂಸ್ಕ್ರುತ ಪದಗಳಲ್ಲಿ ಬಂದ ಲಕಾರವನ್ನು ಹಲವೆಡೆಗಳಲ್ಲಿ ಇರ ಮಾರ ಡಿಸಿಕೊಂಡಿದ್ದೆ “ವೆ (ವಿರಲ- -ವಿರಳ, ಬಹಲ- ಬಹಳ, ಪ್ರಲಯ- ಪ್ರಳಯ, “ಓದಲ- ದ್ವಿದಳ, ಕಲಂಶ- ಕಳಂಕ, ಕಲೇಬರ-ಕಳೇಟರ, ತಾಲ-ತಾಳ), ಮತ್ತು ಸಕಾರದ ಮೊದಲು ಬಂದ ವಿಸರ್ಗವನ್ನು ಒತ್ತಕ್ಕರವಾಗಿ ಮಾರ್ಪಡಿಸಿ ಕೊಂಡಿದ್ದೇವೆ (ದುಃಸಾದ್ಯ-ದುಸ್ಸಾಧ್ಯ, ಸಿಃಸಂತಾಸ- ಸಿಸ್ಸಂತಾಸ, ಸಿಃಸಾರ-ಸಿಸ್ಸಾರ).
ಸಂಸ್ಕ್ರುತದಲ್ಲಿ ಕಂಠ, ಉಪವಾಸ, ಮಾರ, ದೇಶ. ದೀಪ ಮಾದಲಿ | ಪದಗಳು ಪುಲ್ಲಿಂಗದಲ್ಲಿವೆ; ಜಟಾ, ಜಿಹ್ವಾ, ತುಲಸೀ, ಬುದ್ಧಿ ಮೊದಲಾದವು ಸ್ತೀಲಿಂಗದಲ್ಲಿವೆ; ಕರ್ಮ, ಕಾರ್ಯ, ಚರ್ಮ, ರಹಸ್ಯ, ತೈಲ ‘ಫೊದಲಾದವು ನಪುಂಸಕ ಲಿಂಗದಲ್ಲಿವೆ. ಆದರೆ, ಕನ್ನಡದಲ್ಲಿ ಇವೆಲ್ಲವನ್ನೂ ನಾವು ನಪುಂಸಕ ಲಿಂಗದಲ್ಲೇನೇ ಬಳಸುತ್ತೇವೆ. ಮಾರ್ಕ ಸಿಕ್ಕಿತು, ಬುದ್ದಿ ಬಂತು ಎನ್ನುತ್ತೇವಲ್ಲದೆ ಮಾರ್ಕ ಸಿಕ್ಕಿದ, ಬುದ್ದಿ ಬಂದಳು ಎನ್ನುವುದಿಲ್ಲ.
ಕನ್ನಡದಲ್ಲಿ ಮುಕ್ಯವಾಗಿ ಹೆಸರುಪದ (ನಾಮಪದ), ಪರಿಚೆಪದ ಪದ), ಮತ್ತು ಎಸಕಪದ (ಕ್ರಿಯಾಪದ) ಎಂಬುದಾಗಿ ಮೂರು ಬಗೆಯ ಪದಗಳಿವೆ; ಆದರೆ, ಸಂಸ್ಕೃತದಲ್ಲಿ ಇವಕ್ಕೆ ಬದಲು ನಾಮಪದ ಮತ್ತು ಕ್ರಿಯಾಪದ ಎಂಬ “ರಡು ಬಗೆಯ ಪ ಪದಗಳಶ್ಟೇ ಬಳಕೆಯಲ್ಲಿವೆ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದ ವಾಕ್ಯಗಳಲ್ಲಿ ಹೊಂದಿಸಿಕೊಳ್ಳುವುದಕ್ಕಾಗಿ ನಾವು ಕೆಲವು ನಾಮಪದಗಳನ್ನು ಹೆಸರುಪದಗಳಾಗಿ ಬಳಸುತ್ತೇವೆ, ಮತ್ತು ಬೇರೆ ಕೆಲವನ್ನು ಪರಿಚೆಪದಗಳಾಗಿ ಬಳಸುತ್ತೇವೆ. ಎತ್ತುಗೆಗೆ, ಸಿರ್ವಾಹಶ, ರಕ್ಕಕ, ಪ್ರೇಕ್ಕಕ ಮೊದಲಾದ ಕೆಲವು ನಾಮಪದಗಳನ್ನು ‘ಹೆಸರುಪ ದಗಳಾಗಿ ‘ಬಳಸುತ್ತೆ ವೆ, ಮತ್ತು ವ್ಯಾವಹಾರಿಕ, ಸಾಮಾಜಕ, ಯಾಂತ್ರಿಶ ಮೊದಲಾದ ಬೇರೆ ಕೆಲವು ನಾಮಪದಗಳನ್ನು oases ಬಳಸುತ್ತೇವೆ; ಈ ಎರಡನೇ ಬಗೆಯ ನಾಮಪದಗಳನ್ನು ಹೆಸರುಪದಗಳಾಗಿ ಬಳಸುವುದಿಲ್ಲ (*ಸಾಮಾಜಿಕವಸ್ಟು, *ಯಾಂತ್ರಿಶಕ್ಕೆ ಎಂಬಂತಹ ಬಳಕೆಗಳು ಕನ್ನಡದಲ್ಲಿಲ್ಲ).
ಲಾಕ್ಕಣಿಕ, ಮಾಸಿಕ, ಪ್ರೇರಕ ಮೊದಲಾದ ಬೇರೆ ಕೆಲವು ನಾಮಪದಗಳನ್ನು ಹೆಸರುಪದಗಳಾಗಿಯೂ ಬಳಸುತ್ತೇವೆ ಮತ್ತು ಪರಿಚೆಪದಗಳಾಗಿಯೂ ಬಳಸುತ್ತೇವೆ.
ನಿಜಕ್ಕೂ ಎರವಲಾಗಿ ಪಡೆದ ಪದಗಳಲ್ಲಿ ಈ ರೀತಿ ಅವು ನಮ್ಮ ನುಡಿಗೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನು ಮಾಡುವುದು ನಮ್ಮ ಹಕ್ಕು. ಎಲ್ಲಾ ನುಡಿಗಳಲ್ಲೂ ಅಂತಹ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಎರವಲಾಗಿ ಪಡೆದ ಪದಗಳು ಆ ರೀತಿ ಬದಲಾಗದಿರುವುದೇ ಒಂದು ವಿಚಿತ್ರವಾದ ಮತ್ತು ಅಸ್ವಾಬಾವಿಕವಾದ ಪರಿಸ್ತಿತಿಯಾಗಿದೆ.
ಮೇಲೆ ಸೂಚಿಸಿದ ಹಾಗೆ, ಕನ್ನಡದ ಬರಹಗಾರರಿಗೆ ಸಂಸ್ಕೃತದ ಮೇಲಿರುವ ಕುರುಡು ಅಬಿಮಾನದಿಂದಾಗಿ ಕೆಲವು ವಿಶಯಗಳಲ್ಲಿ ನಾವು ಈ ಹಕ್ಕನ್ನು ಕಳೆದುಕೊಂಡಿದ್ದೇವೆ. ಸಂಸ್ಕ್ರುತ ಪದಗಳನ್ನು “ಹೇಗೆಯೇ ಉಲಿಟುಲಿ, ಬರೆಯುವಾಗ ಮಾತ ಅವನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಬರೆಯಬೇಕು (ಮೇಲಿನ ಕೆಲವು. ಅಪಮಿದಗಳನ್ನು ಬಿಟ್ಟು); ಸಂಸ್ಕೃತ ಪ್ರತ್ಯಯಗಳನ್ನು ಬಳಸುವಾಗ ಸಂಸ್ಕ್ರುತದವೇ ಆದ ಸೀರಿತೆಯ ಕಟ್ಟ ಲೆಗಳನ್ನು ಬಳಸಬೇಕು ಎಂಟ ಕಟ್ಟು ಪಾಡುಗಳು ಇಂತಹ ಕುರುಡು ಅಬಿಮಾನದಿಂದ ಬೆಳೆದು ಬಂದುವಲ್ಲದೆ ಬೇರೇನಲ್ಲ. ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳನ್ನು ಓದುವಾಗಲೂ ಸಂಸ್ಕ್ರುತದಲ್ಲಿ Fd ರ, ಎಂಬುದಾಗಿ PR We ಇದ್ದಾರೆ; ಆದರೆ, ಕನ್ನಡದ ಮಟ್ಟಿಗೆ ಇದು ಸಾದ್ಯ ವಾಗದ ಮಾತು. ಯಾಕೆಂದರೆ, ನ್ಟ ಎರರ್ ಪದಗಳನ್ನು ಮಕ್ಕಳಿಗೆ ಕಲಿಸುವ ಮಂದಿಗೂ ಅವನ್ನು ಆ ರೀತಿ ಓದಲು ಬರುವುದಿಲ್ಲವಲ್ಲ! ↑ ಒಳಪಿಡಿಗೆ ಹಿಂತಿರುಗಿ