ಕನ್ನಡ ನುಡಿ ನಡೆದು ಬಂದ ದಾರಿ

ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ

← ಸೂಚಿ ಇಂಗ್ಲಿಶ್ ವಿಶ್ಲೇಷಣೆ: en Eke: eke

ಪರಿವಿಡಿ


ಕನ್ನಡ ನುಡಿ ನಡೆದು ಬಂದ ದಾರಿ

(ಈ ಪುಸ್ತಕ‘‘ಹೊಸ ಬರಹ’ದಲ್ಲಿದೆ)

ಡಿ. ಎನ್. ಶಂಕರ ಬಟ್

ಬಾಶಾ ಪ್ರಕಾಶನ, ಹೆಗ್ಗೋಡು

KANNADA NUDI NADEDU BANDA DARI (The path that Kannada language has covered - A history of Kannada language) by D.N.Shankara Bhat, Ninasam, Heggodu, Sagara 577417. Phone: 9900829345.

ಮೊದಲನೆಯ ಮುದ್ರಣ : 2007

ಬಿ ಬರಹಗಾರ

ಪ್ರಕಟಣೆ ಬಾಶಾ ಪ್ರಕಾಶನ, ಹೆಗ್ಗೋಡು,
ಸಾಗರ 577 417

ವಿತರಣೆ ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001.

ಮುದ್ರಣ ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮಯ್ಸೂರು 570 014.

ಮುನ್ನುಡಿ

‘ಹೊಸ ಬರಹ’ ಈ ಪುಸ್ತಕದಲ್ಲಿ ನಾನು ಕನ್ನಡದ ‘ಹೊಸ ಬರಹ’ವನ್ನು ಬಳಸಿದ್ದೇನೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಹಾಗೆಯೇ ಬರೆಯುವ ಹೇಗಿವೆಯೋ ಅವು ಅವಶ್ಯಕತೆಯಿಲ್ಲ; ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆ ಬರೆದರೆ ಸಾಕು ಎಂಬ ನಿರ್ಣಯದ ಮೇಲೆ ಈ ‘ಹೊಸ ಬರಹ’ವನ್ನು ಯೋಜಿಸಲಾಗಿದೆ.

ಸಂಸ್ಕ್ರುತದಲ್ಲಿ

ಬೇರೆ ಬಾಶೆಗಳಿಂದ ಎರವಲಾಗಿ ಬಂದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ ಬಾಶೆಗಳಲ್ಲಿರುವ ಹಾಗೆ ವಕಾರಗಳಿವೆ, ಎರಡು ಬರೆಯುವುದಿಲ್ಲ. ಇಂಗಿಶ್ನಲ್ಲಿ ಎರಡು ಶಕಾರಗಳಿವೆ, ಎರಡು ಸಕಾರಗಳಿವೆ. ಆದರೆ ಇವನ್ನೆಲ್ಲ ನಾವು ಒಂದೇ ರೀತಿ ಬರೆಯುತ್ತೇವೆ.

ನಾವು ಅದನ್ನೂ

ಹಳೆಗನ್ನಡದಲ್ಲೇನೇ ಳ-ೞ ಮತ್ತು ರ-ಱಗಳ ನಡುವೆ ವ್ಯತ್ಯಾಸವಿತ್ತು; ಆದರೆ ಹೊಸಗನ್ನಡದಲ್ಲಿ ಬಿಟ್ಟುಕೊಟ್ಟಿದ್ದೇವೆ. ಹೀಗಿರುವಾಗ, ಹಳೆಗನ್ನಡದ ಸಮಯಕ್ಕಿಂತಲೂ ಹಿಂದೆ ಸಂಸ್ಕ್ರುತದಲ್ಲಿ ಇದ್ದಿರಬಹುದಾದ ವ್ಯತ್ಯಾಸಗಳನ್ನು ಸಂಸ್ಕ್ರುತಕ್ಕಿಂತ ತೀರ ಬೇರಾಗಿರುವ

ಕನ್ನಡ ಬಾಶೆಯ ಬರಹಗಳಲ್ಲಿ ಇವತ್ತಿಗೂ ಉಳಿಸಿಕೊಳ್ಳಬೇಕೆಂದು ಹೇಳುವುದು ಯಾವ ರೀತಿಯಲ್ಲೂ ಸಮತ್ರನೀಯವಲ್ಲ.

ಸಂಸ್ಕ್ರುತ

ಕನ್ನಡಿಗರ

ಪದಗಳಲ್ಲಿ

ಮಾತಿನಲ್ಲಿ

ಬರುವ ಮಹಾಪ್ರಾಣಾಕ್ಶರಗಳು ಅಲ್ಪಪ್ರಾಣಾಕ್ಶರಗಳಾಗಿ ಉಚ್ಚಾರವಾಗುತ್ತವೆ; ಷಕಾರ ಶಕಾರವಾಗಿ, ಋಕಾರ ರು ಎಂಬುದಾಗಿ, ವಿಸರ್ಗ ಸ್ವರದ ಮೊದಲು ಹಕಾರವಾಗಿ ಮತ್ತು ವ್ಯಂಜನದ ಮೊದಲು ಆ ವ್ಯಂಜನದ ಒತ್ತಕ್ಶರವಾಗಿ, ಐ ಮತ್ತು ಔಗಳು ಅಯ್ ಮತ್ತು ಅವ್ಗಳಾಗಿ ಉಚ್ಚಾರವಾಗುತ್ತವೆ. (ಎಂದರೆ, ಆ ರೀತಿ ನಾವು ಓದುತ್ತೇವೆ). ಹಾಗಾಗಿ, ಸಂಸ್ಕ್ರುತ ಪದಗಳಲ್ಲಿ ಮಾತ್ರವೇ ಬರುವ ಈ ಎಲ್ಲಾ ಅಕ್ಶರಗಳನ್ನು (ಮತ್ತು ಕನ್ನಡ ಪದಗಳಲ್ಲೂ ‘ಹೊಸ ಬರಹ’ದಲ್ಲಿ ಅವುಗಳ ಬರುವ ಐ, ಔಗಳನ್ನು) ಉಚ್ಚಾರಣೆಗನುಸಾರವಾಗಿ ಬರೆಯಲಾಗುತ್ತದೆ.

ಇದಲ್ಲದೆ, ರಕಾರಕ್ಕೆ ಕನ್ನಡದ ಲಿಪಿಯಲ್ಲಿ ಮೂರು ರೂಪಗಳಿವೆ (ರ, ್ರ ಮತ್ತು ್ರ). ಇವುಗಳಲ್ಲಿ ಎರಡನೆಯದು ನಿಜಕ್ಕೂ ಅವಶ್ಯವಿಲ್ಲವಾದ ಕಾರಣ ಅದನ್ನೂ ಬಿಟ್ಟುಕೊಡಲಾಗಿದೆ. ಇದೇ ರೀತಿಯಲ್ಲಿ ಕನ್ನಡ ಲಿಪಿಯಲ್ಲಿ ವಿಶಿಶ್ಟವಾದ ಸಂದಬ್ರಗಳಲ್ಲಿ ಮೂಗುಲಿ(ಅನುನಾಸಿಕ)ಗಳ ಬದಲು ಬಳಸುವ ಕಾರಣ, ಞ್ ಮತ್ತು ಙ್ಗಳ ಅವಶ್ಯಕತೆಯಿಲ್ಲ. ಹಾಗಾಗಿ, ಅವನ್ನೂ ಬಿಟ್ಟುಕೊಡಲಾಗಿದೆ.

ಸೊನ್ನೆ(ಂ)(ಅನುಸ್ವಾರ)ವನ್ನು

ಕೆಲವು

ಈ ‘ಹೊಸ ಬರಹ’ದ ಕುರಿತು ಹೆಚ್ಚಿನ ವಿವರಗಳನ್ನು ನಾನು 2005ರಲ್ಲಿ ಬರೆದು ಪ್ರಕಟಿಸಿರುವ ಕನ್ನಡ ಬರಹವನ್ನು ಸರಿಪಡಿಸೋಣ! ಪುಸ್ತಕದಲ್ಲಿ ನೋಡಬಹುದು.

ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳನ್ನು ಈ ರೀತಿ ಬರೆಯುವು ದರಿಂದ ಅವು ಬಂದಿರುವ ವಾಕ್ಯಗಳನ್ನು ಓದಿ ಅರ್ತ ಮಾಡಿಕೊಳ್ಳುವಲ್ಲಿ ತೊಂದರೆಯೂ ಆಗುವುದಿಲ್ಲವೆಂಬುದು ಈ ಪುಸ್ತಕವನ್ನು ಯಾವ ಓದಿದವರಿಗೆ ಸ್ಪಶ್ಟವಾಗದಿರದು.

ಈ ಬರಹವನ್ನು ಬಳಸುವುದರಿಂದ ಕನ್ನಡವನ್ನು ಕಲಿಯುವ ಮಕ್ಕಳಿಗೆ (ಅದರಲ್ಲೂ ಕೆಳವರ್ಗದ ಮಕ್ಕಳಿಗೆ) ಮತ್ತು ಅದನ್ನು ಆಮೇಲೆ ಬಳಸುವ ಜನರಿಗೆ ಬಹಳಶ್ಟು ಉಪಕಾರವಾಗಬಲ್ಲುದೆಂಬುದೇ ಅದನ್ನು ಬಳಕೆಗೆ ತರ ಬೇಕೆಂಬ ಈ ಪ್ರಯತ್ನಕ್ಕೆ ಮುಕ್ಯ ಕಾರಣ.

ಮೀಸಲಾತಿಯಿಂದಾಗಿ ಹೇಗೆ ಹೆಚ್ಚು ಹೆಚ್ಚು ಮಂದಿ ಕೆಳವರ್ಗದ ಜನರು ಸಮಾಜದಲ್ಲಿ ಮೇಲೆ ಬರುತ್ತಿದ್ದಾರೋ ಹಾಗೆಯೇ ಈ ಹೊಸ ಬರಹದ ಬಳಕೆಯಿಂದಾಗಿ ಹೆಚ್ಚು ಹೆಚ್ಚು ಮಂದಿ ಕೆಳವರ್ಗದ ಜನರು ಕನ್ನಡ ಬರಹವನ್ನು ಬಳಸುವಂತಾಗಬಲ್ಲರೆಂಬುದರಲ್ಲಿ ಸಂಶಯವಿಲ್ಲ.

ಕೀಳರಿಮೆಯಿಲ್ಲದೆ

ಮೇಲೆ ಸೂಚಿಸಿದ ನನ್ನ ಕನ್ನಡ ಬರಹವನ್ನು ಸರಿಪಡಿಸೋಣ! ಪುಸ್ತಕವನ್ನು ಓದಿದವರಲ್ಲಿ ಹಲವರು ‘ಹಾಗೆ ಮಾಡಿದರೆ ಬಹಳ ಒಳ್ಳೆಯದಿತ್ತು, ಆದರೆ ಮಾಡುವುದು ಯಾರು?’ ಎಂದು ಕೇಳಿದ್ದಾರೆ. ಅದರ ವಿಮರ್ಶಕರೊಬ್ಬರು ‘ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

ಕನ್ನಡದ ಬರಹಗಾರರು ಈ ‘ಹೊಸ ಬರಹ’ವನ್ನು ಬಳಸಿದರೆ ಒಳ್ಳೆಯ ದೆಂದು ಅನಿಸಿದರೂ ಬಳಸುವ ಎದೆಗಾರಿಕೆಯನ್ನು ತೋರಿಸದಿರುವುದಕ್ಕೆ ಹಾಗೆ ಮಾಡಿದಲ್ಲಿ ಅವರ ಬರಹಕ್ಕೆ ಕನ್ನಡದ ಇವತ್ತಿನ ಹಲವು ವಿದ್ವಾಂಸರ ಮನ್ನಣೆ ದೊರೆಯದಿರಬಹುದು ಮತ್ತು ಅದಕ್ಕೆ ಸಿಗಬಹುದಾದ ಪ್ರಶಸ್ತಿಗಳು ಮುಕ್ಯ ಕಾರಣವಿರಬೇಕು.

ತಪ್ಪಿಹೋಗಬಹುದು ಎಂಬ

ಹೆದರಿಕೆಯೇ

ನನಗೆ ವಿದ್ವಾಂಸರ ಮನ್ನಣೆ ದೊರೆಯದಿರಬಹುದೆಂಬ ಹೆದರಿಕೆಯಿಲ್ಲ; ಯಾಕೆಂದರೆ, ಅದನ್ನು ಪುಸ್ತಕದ ಯೋಗ್ಯತೆ ನಿರ್ದರಿಸಬೇಕಲ್ಲದೆ ಅದಕ್ಕಾಗಿ ಬಳಸಿದ ಬರಹದ ಸ್ವರೂಪವಲ್ಲ. ಇನ್ನು ಪ್ರಶಸ್ತಿಗಳ ಮೇಲೆ ನನಗೆ ಸ್ವಲ್ಪವೂ ಆಸೆಯಿಲ್ಲ.

ಹಾಗಾಗಿ, ‘ಹೊಸ ಬರಹ’ವನ್ನು ಬಳಸಲು ಸುರುಮಾಡುವುದಕ್ಕೆ ನಾನೇ ತಕ್ಕ ವ್ಯಕ್ತಿ ಎಂದು ನಿರ್ದರಿಸಿ ಈ ಪುಸ್ತಕದಲ್ಲಿ ಅದನ್ನು ಬಳಸಲು ಮೊದಲು ಮಾಡಿದ್ದೇನೆ. ನನ್ನ ಮುಂದಿನ ಪುಸ್ತಕಗಳಲ್ಲೂ ಅದನ್ನೇ ಬಳಸುವ ನಿರ್ದಾರ ವನ್ನೂ ಮಾಡಿದ್ದೇನೆ.

ಈ ‘ಹೊಸ ಬರಹ’ವನ್ನು ಬಳಸಿದುದರಿಂದ ಕೆಲವು ಮಂದಿ ಓದುಗರಿಗೆ ಸ್ವಲ್ಪ ಹಿಂಸೆಯಾಗಬಹುದು. ಅದರಲ್ಲೂ ಬೇರೆ ಬರಹಗಾರರ ಹೆಸರುಗಳು (ಬಾಲಕ್ರುಶ್ಣನ್, ಕ್ರುಶ್ಣಮೂರ್ತಿ, ಗವ್ಡ, ಮೊದಲಾದುವು) ಇಂತಹ ಅನಿಸಿಕೆಗೆ ಕಾರಣವಾಗಬಲ್ಲುವು. ಆದರೆ ಇದು ಬರಹದ ಮಾದ್ಯಮ ಬೇರಾದುದರ ಪರಿಣಾಮವಲ್ಲದೆ ಬೇರೇನಲ್ಲ.

ಬಣ್ಣದ ಚಿತ್ರದಲ್ಲಿ ಕೆಂಪಾಗಿ ಕಾಣಿಸುವ ತುಟಿ ಕಪ್ಪು-ಬಿಳುಪು ಚಿತ್ರದಲ್ಲಿ ಕಪ್ಪಾಗಿ ಕಾಣಿಸುತ್ತದೆ. ಆದರೆ, ಇದರಿಂದ ಯಾರಿಗೂ ಹಿಂಸೆಯಾಗುವುದಿಲ್ಲ. ಅದನ್ನು ನೋಡಿ ಬಳಕೆಯಾಗಿರುವುದೇ ಇದಕ್ಕೆ ಕಾರಣ. ಹೊಸ ಬರಹವೂ ಹಾಗೆಯೇ. ಬಳಕೆಯಾದಾಗ ಅದರಿಂದ ಯಾರಿಗೂ ಹಿಂಸೆಯಾಗದು.

ಕನ್ನಡದ್ದೇ ಪದಗಳು ಈ ಪುಸ್ತಕದಲ್ಲಿ ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಲು ಪ್ರಯತ್ನಿಸಿದ್ದೇನೆ. ಇದು ಕನ್ನಡದ ವಿದ್ವಾಂಸರು ಸಾಮಾನ್ಯವಾಗಿ ಬಳಸುವ ವಿದಾನಕ್ಕಿಂತ ತೀರ ಬೇರಾಗಿದೆ.

ಉದಾಹರಣೆಗಾಗಿ, ಕನ್ನಡ ಪದಗಳಲ್ಲಿ ಕಾಣಿಸಿಕೊಳ್ಳುವ ಉಲಿಗಳನ್ನು ವಾಕ್ಯಗಳ ಒಳರಚನೆಯಲ್ಲಿ

ಪದಗಳ

ಮತ್ತು

ಕನ್ನಡ

ಮತ್ತು

ಬಳಕೆಯಾಗುವ ನಿಯಮಗಳನ್ನು ವಿವರಿಸಬೇಕಾದಾಗ ಹಲವಾರು ಹೊಸ ಇಂತಹ ಪದಗಳನ್ನು ಉಂಟುಮಾಡಬೇಕಾಗುತ್ತದೆ. ವಿಶಯಗಳನ್ನು ತಿಳಿಸಲು ಯೋಗ್ಯವಾದ ಪದಗಳಿಲ್ಲದಿರುವುದೇ ಇದಕ್ಕೆ ಕಾರಣ.

ಕನ್ನಡದಲ್ಲಿ

ಇಂತಹ

ಸಂದರ್ಬಗಳಲ್ಲಿ

ಕನ್ನಡದ ವಿದ್ವಾಂಸರು

ಸಂಸ್ಕ್ರುತದ ಮೊರೆಹೊಗುತ್ತಾರೆ. ಆ ನುಡಿಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ಅವರು ಎರವಲಾಗಿ ಪಡೆಯುತ್ತಾರೆ ಮಾತ್ರವಲ್ಲ, ಹೊಸ ಪದಗಳನ್ನು ಉಂಟುಮಾಡಬೇಕಾಗಿರುವಲ್ಲೂ ಕನ್ನಡ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸುತ್ತಾರೆ (ಕೆಂಪೇಗವ್ಡ 1976 ನೋಡಿ). ಆದರೆ ಅಂತಹ ಪದಗಳನ್ನು ಬಳಸಿದ ಕನ್ನಡ ಬರಹ ಕಗ್ಗಂಟಾಗುತ್ತದೆ.

ಹಾಗೆ ಮಾಡುವ ಬದಲು ನಾನು ಈ ಪುಸ್ತಕದಲ್ಲಿ ಹೆಚ್ಚು ಹೆಚ್ಚು
ಕನ್ನಡದ್ದೇ ಆದ ಪದಗಳನ್ನು ಉಂಟುಮಾಡಿ ಬಳಸಿದ್ದೇನೆ. ತಡೆಯುಲಿ, ಮಡಚಿದ ತಡೆಯುಲಿ, ಉಜ್ಜುಲಿ, ಮುಂದಿನ ಸ್ವರ, ಮೇಲಿನ ಸ್ವರ, ಉದ್ದ ಸ್ವರ ಮೊದಲಾದ ಈ ಪದಗಳನ್ನು ಕಲಿಯುವುದು ಮತ್ತು ನೆನಪಿನಲ್ಲಿಟ್ಟು ಕೊಳ್ಳುವುದು ಕನ್ನಡಿಗರಿಗೆ ಹೆಚ್ಚು ಸುಲಬವೆಂದು ನನಗೆ ತೋರುತ್ತದೆ. ಇವುಗಳ ಅರ್ತವನ್ನು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.

ಈ ಪುಸ್ತಕದ ಕುರಿತು ಕನ್ನಡ ನುಡಿ ಮೂಲದ್ರಾವಿಡದಿಂದ ಬದಲಾಗುತ್ತಾ ಬಂದ ಬಗೆ ಹೇಗೆ ಎಂಬುದನ್ನು ವಿವರಿಸುವಲ್ಲಿ ಇದು ನನ್ನ ಮೂರನೆಯ ಪ್ರಯತ್ನವಾಗಿದೆ. ಇದಕ್ಕೆ ಮೊದಲು 1979ರಲ್ಲಿ ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ ಎಂಬ ಪುಸ್ತಕವನ್ನು ಮತ್ತು 1995ರಲ್ಲಿ ಅದನ್ನೇ ತಿದ್ದಿ ದೊಡ್ಡದು

ಮಾಡಿರುವ ಕನ್ನಡ ಬಾಶೆಯ ಕಲ್ಪಿತ ಚರಿತ್ರೆ ಎಂಬ ಪುಸ್ತಕವನ್ನು ಬರೆದಿದ್ದೆ.

ಈ ಪುಸ್ತಕ ಅವೆರಡಕ್ಕಿಂತಲೂ ಬೇರಾಗಿದ್ದು, ಕನ್ನಡ ನುಡಿಯಲ್ಲಿ ನಡೆದ ಬದಲಾವಣೆಗಳನ್ನು ವಿವರಿಸುವ ಒಂದು ಹೊಸ ಪ್ರಯತ್ನವಾಗಿದೆ. ಮೂಲದ್ರಾವಿಡದ ಸ್ವರ ಮತ್ತು ವ್ಯಂಜನಗಳು ಕನ್ನಡದ ಚರಿತ್ರೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಆ ವಿಶಯದಲ್ಲಿ ಇತ್ತೀಚೆಗಿನ ವರೆಗೂ ನಡೆದಿರುವ ಸಂಶೋದನೆಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಹೆಚ್ಚು ವಿವರವಾಗಿ ಕೊಡಲಾಗಿದೆ.

ನಡೆದ ಬದಲಾವಣೆಗಳು

ಕನ್ನಡದ ಒಳನುಡಿಗಳಲ್ಲಿ, ಅದರಲ್ಲೂ ಕರಾವಳಿ ಮತ್ತು ಬಡಗ ಕನ್ನಡದ ಚರಿತ್ರೆಯನ್ನು ಒಳನುಡಿಗಳಲ್ಲಿ ತಿಳಿಯಬೇಕೆಂದಿರುವವರಿಗೆ ಬಹಳ ಪ್ರಾಮುಕ್ಯವಾದವುಗಳು. ಯಾಕೆಂದರೆ, ಕನ್ನಡದ ಬರಹ ಒಳನಾಡಿನ ಒಳನುಡಿಯೊಂದರಿಂದ ಬೆಳೆದು ಬಂದಿದೆಯಾದ ಕಾರಣ, ಅದು ಕನ್ನಡ ನುಡಿಯ ಚರಿತ್ರೆಯ ಒಂದು ಅಂಶವನ್ನು ತಿಳಿಯುವಲ್ಲಿ ಮಾತ್ರ ಸಹಾಯಕವಾಗಬಲ್ಲುದು. ಅದಕ್ಕೂ ಹಳೆಗನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅರ್ತಮಾಡಿಕೊಳ್ಳಬೇಕಿದ್ದರೂ ಕರಾವಳಿಯ ಒಳನುಡಿಗಳ ತಿಳಿವು ಅವಶ್ಯ.

ಈ ಕಾರಣಕ್ಕಾಗಿ, ಕರಾವಳಿ ಮತ್ತು ಬಡಗ ಒಳನುಡಿಗಳಿಗೆ ಈ ಪುಸ್ತಕದಲ್ಲಿ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಡಲಾಗಿದೆ. ಇದಲ್ಲದೆ ಇವತ್ತಿನ ದ್ರಾವಿಡ ನುಡಿಗಳಲ್ಲಿ ಕನ್ನಡಕ್ಕೆ ಅತಿ ಸಮೀಪದಲ್ಲಿರುವ ತಮಿಳು ನುಡಿಯ ಪದ ಮತ್ತು ಪದರೂಪಗಳನ್ನು ಅಲ್ಲಲ್ಲಿ ಕೊಡುವ ಮೂಲಕ, ಕನ್ನಡ ನುಡಿ ನಡೆದು ಬಂದ ದಾರಿಯನ್ನು ಹೆಚ್ಚು ಸ್ಪಶ್ಟವಾಗಿ ತೋರಿಸಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಈ ಪುಸ್ತಕದಲ್ಲಿ ವ್ಯಂಜನಗಳನ್ನು ಸೂಚಿಸಬೇಕಾದಾಗ ಅವನ್ನು ಅಕಾರ ದೊಂದಿಗೆ ಕೊಡಲಾಗಿದೆ. ಆದರೆ ಈ ಅಕಾರಕ್ಕೆ ಬೆಲೆಯಿಲ್ಲ ಎಂಬುದನ್ನು ಗಮನಿಸಬೇಕು. ‘ಕ, ಚ, ತಗಳು’ ಎಂದರೆ ‘ಕ್, ಚ್, ತ್ಗಳು’ ಎಂದೇ

ಅರ್ತ. ಕಕಾರ ಎಂಬುದಕ್ಕೂ ಕ್ ಎಂಬ ವ್ಯಂಜನ ಎಂಬ ಅರ್ತವಿದೆ. ಅಲ್ಲೂ ಅಕಾರಕ್ಕೆ ಬೆಲೆಯಿಲ್ಲ.

ಕನ್ನಡದ ಚರಿತ್ರೆಯನ್ನು ವರ್ಣಿಸುವಲ್ಲಿ ಸ್ವರ ಮತ್ತು ವ್ಯಂಜನಗಳ ಕುರಿತು ಹೆಚ್ಚು ಹೇಳಲು ಸಾದ್ಯವಾಗಿದೆ, ಆದರೆ ಪದ ಮತ್ತು ಪದರೂಪಗಳ ಕುರಿತು ಇದಕ್ಕಿಂತ ಸ್ವಲ್ಪ ಕಡಿಮೆ ಮತ್ತು ವಾಕ್ಯಗಳ ಕುರಿತು ಬಹಳ ಸ್ವಲ್ಪ ಮಾತ್ರ ತಿಳಿಸಲು ಸಾದ್ಯವಾಗಿದೆ. ಮೂಲದ್ರಾವಿಡದ ಕುರಿತಾಗಿ ಇದುವರೆಗೆ ನಡೆದಿರುವ ಸಂಶೋದನೆಗಳಲ್ಲಿರುವ ಕೊರತೆಯನ್ನು ಇದು ಸೂಚಿಸುತ್ತದೆ. ಈ ವಿಶಯದಲ್ಲಿ ನಡೆಸಬೇಕೆಂದಿರುವವರು ಇದನ್ನು ಗಮನಿಸಬೇಕು.

ಸಂಶೋದನೆ

ಈ ಪುಸ್ತಕದ ಮುದ್ರಣದಲ್ಲಿ ‘ಬರಹ’ ತಂತ್ರಾಂಶವನ್ನು ಉಚಿತವಾಗಿ ಬಳಸಿಕೊಳ್ಳಲು ಒಪ್ಪಿಗೆ ಕೊಟ್ಟಿರುವ ಶ್ರೀ ಶೇಶಾದ್ರಿವಾಸು ಚಂದ್ರಶೇಕರನ್ ಅವರನ್ನು, ಇದನ್ನು ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀ ರಾ. ಶ್ರೀ. ಮೋಹನ ಮೂರ್ತಿ ಅವರನ್ನು, ಇದರ ಮಾರಾಟದ ಹೊರೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ. ಜಿ. ಎನ್. ಅಶೋಕವರ್ದನ ಅವರನ್ನು, ಹಾಗೂ ಇದರ ಕಯ್ಬರಹವನ್ನು ಓದಿ ಹಲವು ಸಲಹೆಗಳನ್ನು ಕೊಟ್ಟ ಮತ್ತು ಬೇರೆಲ್ಲಾ ರೀತಿ ಯಲ್ಲೂ ನನ್ನ ಬೆನ್ನೆಲುಬಾಗಿ ನಿಂತ ನನ್ನ ಮಡದಿ ಶ್ರೀಮತಿ ಬಾರತಿ ಬಟ್ ಅವರನ್ನು ಇಲ್ಲಿ ನೆನಪಿಸಬಯಸುತ್ತೇನೆ.

ಹೆಗ್ಗೋಡು ಅಗೋಸ್ಟು 1, 2007

ಡಿ. ಎನ್. ಶಂಕರ ಬಟ್

ಒಳಪಿಡಿ

1 ಮುನ್ನೋಟ 1.1 ನಡೆದು ಬಂದ ದಾರಿ 1.1.1 ನುಡಿಗಳ ನಡುವಿನ ನಂಟಸ್ತಿಕೆ 1.1.2 ಒಡೆದುಕೊಳ್ಳುವ ವಿದಾನಗಳು 1.1.3 ಮೂಲನುಡಿಯ ಕಲ್ಪನೆ
1.1.4 ವ್ಯತ್ಯಾಸ ಮತ್ತು ಸಾಮ್ಯ 1.2 ದ್ರಾವಿಡ ನುಡಿಗಳು 1.2.1 ಇವತ್ತಿನ ದ್ರಾವಿಡ ನುಡಿಗಳು 1.2.2 ದ್ರಾವಿಡರ ಮೂಲ ನೆಲೆ 1.2.3 ತೆಂಕುದ್ರಾವಿಡದಲ್ಲಿ ಕನ್ನಡದ ಜಾಗ 1.3 ಕನ್ನಡ ನುಡಿ ಒಳನುಡಿಗಳಾಗಿ ಒಡೆದುಕೊಂಡ ಬಗೆ 1.3.1 ಕರಾವಳಿ ಮತ್ತು ಒಳನಾಡಿನ ಒಳನುಡಿಗಳು
1.3.2 ಬಡಗ ಒಳನುಡಿ 1.3.3 ಇತರ ಒಡೆತಗಳು 1.4 ಪುಸ್ತಕದ ಸ್ವರೂಪ

2 ಬೇರಿನ ಸ್ವರಗಳು 2.1 ಸ್ವರಗಳ ಎಣಿಕೆ ಮತ್ತು ಉಚ್ಚಾರಣೆ
2.1.1 ಐ ಮತ್ತು ಔ ಸ್ವರಗಳು 2.1.2 ಉಲಿಗಳು ಮತ್ತು ಉಲಿಕಂತೆಗಳು
2.1.3 ಬೇರುಗಳು ಮತ್ತು ಒಟ್ಟುಗಳು 2.2 ಬೇರಿನ ಸ್ವರಗಳು 2.2.1 ಮೇಲಿನ ಗಿಡ್ಡ ಸ್ವರಗಳು ನಡುವಿನ ಸ್ವರಗಳಾದುದು 2.2.2 ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾದುದು 2.2.3 ಎಕಾರ, ಒಕಾರಗಳು ಯ ಮತ್ತು ವಗಳಾದುದು

15 15 16 16 19 20 21 22 24 25 27 28 31 33 34

35 
35 
37 
39 
40 
42 
42 
47 
53 

2.2.4 ನಡುವಿನ ಸ್ವರಗಳು ಕೆಳಗಿನ ಸ್ವರಗಳಾದುದು
2.2.5 ಅಕಾರ ಎಕಾರವಾದುದು 2.3 ಸ್ವರದ ಉದ್ದದಲ್ಲಿ ಬದಲಾವಣೆಗಳು
2.3.1 ಮೂಲದ್ರಾವಿಡದಲ್ಲಿದ್ದ ವ್ಯತ್ಯಾಸ
2.3.2 ಕನ್ನಡದಲ್ಲಿ ನಡೆದ ಬದಲಾವಣೆಗಳು 2.4 ಸ್ವರಗಳ ಎಣಿಕೆಯಲ್ಲಿ ಹೆಚ್ಚಳ 2.4.1 ಅಕಾರದ ಒಡೆತ 2.4.2 ದುಂಡಗಿಲ್ಲದ ಉ 2.4.3 ಮೂಗಿಸಿದ ಸ್ವರಗಳು
2.4.4 ಮಡಚಿದ ಸ್ವರಗಳು 2.5 ತಿರುಳು

3 ಒಟ್ಟಿನ ಸ್ವರಗಳು
3.1 ಮುನ್ನೋಟ
3.2 ಮೂಲದ್ರಾವಿಡದ ಒಟ್ಟುಗಳು 3.3 ಉದ್ದ ಸ್ವರ ಗಿಡ್ಡವಾಗುವುದು 3.4 ಎರಡು ಗಿಡ್ಡ ಸ್ವರಗಳು ಸೇರಿ ಉದ್ದ ಸ್ವರವಾಗುವುದು 3.5 ಎರಡನೆಯಸ್ವರದಲ್ಲಿ ಬದಲಾವಣೆ
3.5.1 ಎರಡನೇ ಸ್ವರ ಬಿದ್ದುಹೋಗುವುದು 3.5.2 ಮೂಗಿಸಿದ ಸ್ವರಗಳು
3.6 ಪದಗಳ ಕೊನೆಯ ಸ್ವರಗಳು 3.6.1 ಅಯ್ ಎಂಬುದು ಎಕಾರವಾಗುವುದು 3.6.2 ಅಕಾರ ಎಕಾರವಾಗುವುದು 3.6.3 ಎಕಾರ ಇಕಾರವಾಗುವುದು 3.6.4 ಉಕಾರದ ಸೇರಿಕೆ 3.6.5 ಉಕಾರ ಅಕಾರವಾಗುವುದು 3.6.6 ಉಕಾರದ ಒಡೆತ 3.7 ತಿರುಳು

4 ತಡೆಯುಲಿಗಳು
4.1 ಮುನ್ನೋಟ

55 
56 
58 
58 
66 
68 
69 
70 
71 
72 
73 

75 
75 
76 
78 
79 
79 
81 
83 
84 
84 
86 
86 
87 
87 
89 
89 

91 
91 

4.1.1 ತಡೆಯುಲಿಗಳು 4.1.2 ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳು 4.2 ಪದಗಳ ಮೊದಲಿಗಿದ್ದ ತಡೆಯುಲಿಗಳು 4.2.1 ಪಕಾರ ಹಕಾರವಾಗಿರುವುದು ಮತ್ತು ಬಿದ್ದು ಹೋಗಿರುವುದು 4.2.2 ಚಕಾರದ ಬದಲಾವಣೆಗಳು 4.2.3 ಕಕಾರ-ಗಕಾರಗಳು ಚಕಾರ-ಜಕಾರಗಳಾಗಿರುವುದು 4.3 ಸ್ವರಗಳ ನಡುವಿನ ಒತ್ತೆ ತಡೆಯುಲಿಗಳು 4.3.1 ಪಕಾರವು ವಕಾರ ಮತ್ತು ಬಕಾರಗಳಾಗಿರುವುದು 4.3.2 ಚಕಾರವು ಸಕಾರವಾಗಿರುವುದು
4.3.3 ಱಕಾರವು ರಕಾರವಾಗಿರುವುದು
4.3.4 ಟಕಾರದ ಬದಲಾವಣೆಗಳು 4.3.5 ಕಕಾರ ಬಿದ್ದುಹೋಗಿರುವುದು 4.4 ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು
4.4.1 ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿರುವುದು 4.4.2 ಕೊರಳಿಸುವ ಮತ್ತು ಕೊರಳಿಸದ ಇಮ್ಮಡಿ ತಡೆಯುಲಿಗಳಾಗಿ

ಒಡೆತ

4.4.3 ಉದ್ದ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು 4.4.4 ಗಿಡ್ದ ಸ್ವರದ ಅನಂತರದ ಬಂದಿದ್ದ ಇಮ್ಮಡಿ ತಡೆಯುಲಿಗಳು 4.4.5 ಹವ್ಯಕದಲ್ಲಿ ಗಿಡ್ಡ ಸ್ವರಗಳ ಅನಂತರ ಬದಲಾವಣೆಯಿಲ್ಲ
4.5 ಮೂಗುಲಿಯ ಅನಂತರದ ತಡೆಯುಲಿಗಳು 4.6 ಇತರ ವ್ಯಂಜನಗಳೊಂದಿಗೆ ಬಂದ ತಡೆಯುಲಿಗಳು 4.6.1 ಕನ್ನಡದಲ್ಲಿ ನಡೆದ ಬದಲಾವಣೆಗಳು 4.7 ತಿರುಳು

5 ಇತರ ವ್ಯಂಜನಗಳು 5.1 ಮುನ್ನೋಟ
5.2 ಮೂಗುಲಿಗಳು
5.2.1 ಪದಗಳ ಮೊದಲಿನ ಮೂಗುಲಿಗಳು 5.2.2 ಸ್ವರಗಳ ನಡುವಿನ ಒತ್ತೆ ಮೂಗುಲಿಗಳು 5.2.3 ಸ್ವರಗಳ ನಡುವಿನ ಇಮ್ಮಡಿ ಮೂಗುಲಿಗಳು
5.2.4 ತಡೆಯುಲಿಗಳ ಮೊದಲು ಬಂದ ಮೂಗುಲಿಗಳು

93 
95 
96 
99     101     106     108     108     113     114     116     117     118     118 

121 123 125 128 129 132 133 136

137 137 137 138 140 142 144

5.2.5 ಇತರ ವ್ಯಂಜನಗಳೊಂದಿಗೆ ಬಂದ ಮೂಗುಲಿಗಳು 5.2.6 ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು
5.3 ಹೊಡೆಯುಲಿ ಮತ್ತು ಪಕ್ಕದುಲಿಗಳು
5.3.1 ಲಕಾರದ ಬದಲಾವಣೆಗಳು 5.3.2 ಳಕಾರದ ಬದಲಾವಣೆಗಳು 5.3.3 ರಕಾರದ ಬದಲಾವಣೆಗಳು 5.4 ತಡೆಯಿಲ್ಲದ ವ್ಯಂಜನಗಳು 5.4.1 ಪದಗಳ ಮೊದಲಿಗೆ ಬಂದ ತಡೆಯಿಲ್ಲದುಲಿಗಳು 5.4.2 ಪದಗಳ ನಡುವಿನ ಯುಕಾರ ಮತ್ತು ವಕಾರಗಳು 5.4.3 ೞಕಾರದ ಬದಲಾವಣೆಗಳು 5.4.4 ಪದಗಳ ಕೊನೆಯ ತಡೆಯಿಲ್ಲದುಲಿಗಳು 5.5 ತಿರುಳು

6 ಪದಗಳ ಒಳರಚನೆ 6.1 ಮುನ್ನೋಟ
6.2 ಬೇರುಗಳ ಸ್ವರೂಪ 6.3 ಉಲಿಕಂತೆಗಳಲ್ಲಿ ಹಗುರ ಮತ್ತು ತೂಕ 6.4 ಪದರಚನೆಯಲ್ಲಿ ಬೇರುಗಳ ಬಳಕೆ
6.5 ತಿರುಳು

7 ಕ್ರಿಯಾಪದಗಳ ಒಳರಚನೆ
7.1 ಮುನ್ನೋಟ
7.2 ಆಗುವಿಕೆ ಮತ್ತು ಮಾಡುವಿಕೆ 7.2.1 ತಮಿಳಿನಲ್ಲಿ ಕೆಲಸದ ಪರಿಣಾಮ
7.2.2 ಕನ್ನಡದಲ್ಲಿ ಆಗುವಿಕೆ ಮತ್ತು ಮಾಡುವಿಕೆ
7.2.3 ಮೂಲದ್ರಾವಿಡದ ವ್ಯತ್ಯಾಸ 7.3 ಕ್ರಿಯಾಬೇರುಗಳಿಂದ ಕ್ರಿಯಾಪದಗಳು
7.3.1 ಅ, ಇ, ಉ ಒಟ್ಟುಗಳು
7.3.2 ತಡೆಯುಲಿಯಲ್ಲಿ ಕೊನೆಗೊಳ್ಳುವ ಒಟ್ಟುಗಳು
7.3.3 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು 7.4 ಆಗುವಿಕೆಯ ಒಟ್ಟುಗಳು

150 151 152 153 154 156 161 162 165 166 172 173

174 174 176 179 180 181

182 182 182 183 186 189 190 190 191 193 193

7.5 ಮಾಡುವಿಕೆಯನ್ನು ಸೂಚಿಸುವ ಒಟ್ಟು 7.5.1 ಕನ್ನಡದಲ್ಲಿ *ತ್ ಒಟ್ಟಿನ ಪಳೆಯಳಿಕೆಗಳು
7.5.2 ಸಮಯದ ಒಟ್ಟಿನ ಅನಂತರ *ತ್ ಒಟ್ಟಿನ ಬಳಕೆ 7.5.3 ಬಡಗ ಕನ್ನಡದಲ್ಲಿ *ತ್ ಒಟ್ಟು
7.5.4 ಹವ್ಯಕದಲ್ಲಿ *ತ್ ಒಟ್ಟು 7.6 ಮಾಡುವಿಕೆಯನ್ನು ಸೂಚಿಸುವ ಬೇರೆ ಒಟ್ಟುಗಳು 7.7 ನಾಮಬೇರುಗಳಿಂದ ಕ್ರಿಯಾಪದಗಳು
7.8 ಗುಣಬೇರುಗಳಿಂದ ಕ್ರಿಯಾಪದಗಳು
7.9 ಕ್ರಿಯಾಪದಗಳ ರೂಪದಲ್ಲಿ ಬದಲಾವಣೆಗಳು
7.10 ತಿರುಳು

8 ಕ್ರಿಯಾರೂಪಗಳು 8.1 ಮುನ್ನೋಟ
8.1.1 ವಾಕ್ಯದ ಕೊನೆಯ ಕ್ರಿಯಾರೂಪಗಳು 8.1.2 ವಾಕ್ಯದ ನಡುವಿನ ಕ್ರಿಯಾರೂಪಗಳು 8.2 ಸಮಯದ ಒಟ್ಟುಗಳು 8.2.1 ಹಿಂದಿನ ಸಮಯದ ಒಟ್ಟು 8.2.2 ಮುಂದಿನ ಸಮಯದ ಒಟ್ಟು 8.3 ಹಳೆಗನ್ನಡದಲ್ಲಿ ಸಮಯದ ಒಟ್ಟುಗಳು 8.3.1 ಹಿಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು 8.3.2 ಮುಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು 8.3.3 ಕರಾವಳಿಯಲ್ಲಿ ಮುಂದಿನ ಸಮಯದ ಒಟ್ಟು
8.3.4 ಬಡಗ ಕನ್ನಡದಲ್ಲಿ ಸಮಯದ ಒಟ್ಟುಗಳು
8.3.5 ಸಂಗತಿಯನ್ನು ತಿಳಿಸುವ ಕ್ರಿಯಾಪದಗಳು 8.4 ಅಲ್ಲಗಳೆಯುವ ಒಟ್ಟು 8.5 ಆಡುಗ ಒಟ್ಟುಗಳು 8.5.1 ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಒಟ್ಟುಗಳು
8.5.2 ಇತರರನ್ನು ಸೂಚಿಸುವ ಒಟ್ಟುಗಳು 8.5.3 ಕನ್ನಡದ ಒಳನುಡಿಗಳಲ್ಲಿ ಆಡುಗ ಒಟ್ಟುಗಳು 8.5.4 ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಇನ್ನೊಂದು ಒಟ್ಟು 8.6 ಕೆಲಸವನ್ನು ಮಾಡಿಸುವ ಕ್ರಿಯಾರೂಪಗಳು

195 196 197 199 201 204 205 207 208 213

215 215 215 216 217 218 224 226 229 232 234 239 240 241 243 243 245 246 249 250

8.7 ವಾಕ್ಯದ ನಡುವೆ ಬರುವ ಕ್ರಿಯಾರೂಪಗಳು 8.8 ತಿರುಳು

9 ನಾಮಪದಗಳು
9.1 ಮುನ್ನೋಟ
9.2 ನಾಮಪದಗಳ ಒಳರಚನೆ
9.2.1 ನಾಮಬೇರುಗಳಿಂದ ನಾಮಪದಗಳು 9.2.2 ಕ್ರಿಯಾಬೇರುಗಳಿಂದ ನಾಮಪದಗಳು 9.2.3 ಗುಣಬೇರುಗಳಿಂದ ನಾಮಪದಗಳು 9.2.4 ಜೋಡುಪದಗಳ ಒಳರಚನೆ 9.3 ಲಿಂಗ ಮತ್ತು ವಚನ 9.3.1 ಎರಡು ಲಿಂಗಗಳು 9.3.2 ಎರಡು ವಚನಗಳು 9.3.3 ಲಿಂಗಬೇದದಲ್ಲಿ ಬದಲಾವಣೆ 9.4 ನಂಟಸ್ತಿಕೆಯ ಪದಗಳು
9.5 ಸಂಬಂದ ಒಟ್ಟು 9.5.1 ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟು 9.5.2 ವಿಬಕ್ತಿ ಒಟ್ಟುಗಳೊಂದಿಗೆ ಬಳಕೆ
9.6.3 ಕನ್ನಡದ ಬದಲಾವಣೆಗಳು 9.6 ವಿಬಕ್ತಿ ಒಟ್ಟುಗಳು 9.6.1 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು 9.6.2 ಕನ್ನಡದ ಬದಲಾವಣೆಗಳು 9.7 ತಿರುಳು

10 ಆಡುಗ ಮತ್ತು ತೋರುಗ ಪದಗಳು 10.1 ಮುನ್ನೋಟ
10.2 ಆಡುಗ ಪದಗಳು 10.2.1 ವ್ಯವಸ್ತೆಯಲ್ಲಿ ಬದಲಾವಣೆ 10.2.2 ಮೂರನೆಯ ವ್ಯಕ್ತಿ
10.2.3 ಆಡುಗ ಪದಗಳು ಮತ್ತು ನಾಮಪದಗಳು
10.3 ತೋರುಗ ಪದಗಳು

252 253

255 255 256
256 263 269 270 272 272 273 275 276 278 278 280 281 284 284 285 286

287 287 287 288 291 293 294

10.3.1 ಮೊದಲನೆಯ ಅಂಗದಲ್ಲಿ ನಡೆದ ಬದಲಾವಣೆಗಳು
10.3.2 ಎರಡನೆಯ ಅಂಗದಲ್ಲಿ ನಡೆದ ಬದಲಾವಣೆಗಳು 10.4 ತಿರುಳು

11 ಗುಣಪದಗಳು
11.1 ಮುನ್ನೋಟ
11.1.1 ನಾಮ-ಗುಣಪದಗಳ ಕೆಲಸ 11.1.2 ಕ್ರಿಯಾ-ಗುಣಪದಗಳ ಕೆಲಸ
11.2 ನಾಮ-ಗುಣಪದಗಳ ಒಳರಚನೆ
11.2.1 ಗುಣಬೇರುಗಳಿಂದ ನಾಮ-ಗುಣಪದಗಳು
11.2.2 ನಾಮಬೇರುಗಳಿಂದ ನಾಮ-ಗುಣಪದಗಳು 11.2.3 ಕ್ರಿಯಾಬೇರುಗಳಿಂದ ನಾಮ-ಗುಣಪದಗಳು 11.3 ನಾಮ-ಗುಣಪದಗಳ ಬಳಕೆ 11.3.1 ಮೂಲದ್ರಾವಿಡದ ಸೇರಿಕೆಯ ಬದಲಾವಣೆಗಳು 11.3.2 ಕನ್ನಡದವೇ ಆದ ಸೇರಿಕೆಯ ಬದಲಾವಣೆಗಳು 11.4 ಕ್ರಿಯಾ-ಗುಣಪದಗಳು
11.5 ಅಣಕಿಸುವ ಪದಗಳು
11.6 ಗುಣಪದಗಳ ನಾಮರೂಪಗಳು
11.7 ತಿರುಳು

12 ವಾಕ್ಯಗಳ ಒಳರಚನೆ 12.1 ಮುನ್ನೋಟ
12.2 ಜೋಡಿಸುವ ಕ್ರಿಯಾರೂಪಗಳು
12.3 ಸಂಬಂದಿಸುವ ಕ್ರಿಯಾರೂಪಗಳು
12.4 ಶರತ್ತಿನ ಕ್ರಿಯಾರೂಪಗಳು 12.4.1 ಹಳೆಗನ್ನಡದ ರೂಪಗಳು 12.4.2 ಕನ್ನಡದಲ್ಲಿ ನಡೆದ ಬದಲಾವಣೆಗಳು 12.5 ತಿರುಳು

ಕೆಲವು ಪಾರಿಬಾಶಿಕ ಪದಗಳು
ಆಕರಸೂಚಿ

297 298 299

301 301 301 304 305 305 306 307 308 309 311 313 314 316 318

319 319 321 324 325 326 326 328

329 339

ವಿಶಯಸೂಚಿ

343

1. ಮುನ್ನೋಟ

Eke →

1.1 ನಡೆದು ಬಂದ ದಾರಿ

ಇವತ್ತು ನಾವು ಮಾತನಾಡಲು ಮತ್ತು ಬರೆಯಲು ಬಳಸುವ ಕನ್ನಡ ನುಡಿ ಯಾವ ದಾರಿಯಾಗಿ ನಡೆದು ಬಂದಿದೆ, ಎಂದರೆ ಮೂಲದ್ರಾವಿಡ ನುಡಿಯ ಒಂದು ಕವಲಿನಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯುವುದರ ಮೂಲಕ ಅದು ‘ಹೊಸಗನ್ನಡ’ ಎಂಬ ಇವತ್ತಿನ ರೂಪವನ್ನು ಪಡೆದಿದೆ ಎಂಬುದನ್ನು ತಿಳಿಯುವ ಒಂದು ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.

ಇದಕ್ಕಾಗಿ ಕನ್ನಡವನ್ನು ಅದರೊಂದಿಗೆ ‘ನಂಟಸ್ತನ’ವನ್ನು ತೋರಿಸುವ ತಮಿಳು, ಮಲಯಾಳ, ತೆಲುಗು, ತುಳು, ಗೋಂಡಿ, ಕೂಯಿ, ಕುಡುಕ್ ಮೊದಲಾದ ಬೇರೆ ಇಪ್ಪತ್ತು-ಇಪ್ಪತ್ತಯ್ದು ದ್ರಾವಿಡ ನುಡಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಈ ಎಲ್ಲಾ ನುಡಿಗಳೂ ‘ಮೂಲದ್ರಾವಿಡ’ ಎಂಬ ಒಂದು ಮೂಲ ನುಡಿಯಿಂದ ಬೆಳೆದು ಬಂದಿರಬೇಕೆಂಬ ಕಲ್ಪನೆಯೇ ಈ ಪ್ರಯತ್ನಕ್ಕೆ ಅಡಿಗಲ್ಲಾಗಿದೆ.

ಬರಹ ಕನ್ನಡವನ್ನು ಈ ರೀತಿ ಅದರೊಂದಿಗೆ ನಂಟಸ್ತನವಿರುವ ಬೇರೆ ಹಲವು ನುಡಿಗಳೊಂದಿಗೆ ಹೋಲಿಸುವುದು ಮಾತ್ರವಲ್ಲದೆ ಕನ್ನಡದ್ದೇ ಆದ ಹಲವು ಒಳನುಡಿಗಳೊಂದಿಗೂ ಹೋಲಿಸುವ ಮೂಲಕ, ಕನ್ನಡ ನುಡಿ ತನ್ನ ತನವನ್ನು ಪಡೆದ ಮೇಲೆ ಅದರಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿವೆ ಎಂಬುದನ್ನೂ ಇಲ್ಲಿ ತಿಳಿಯಲು ಪ್ರಯತ್ನಿಸಲಾಗಿದೆ.

ಇದಕ್ಕಾಗಿ, ಹಿಂದಿನ ಕಾಲದಿಂದ ಉಳಿದು ಬಂದಿರುವ ಶಾಸನಗಳಲ್ಲಿ ಮತ್ತು ಇತರ ಬರಹಗಳಲ್ಲಿ ಕಾಣಿಸುವ ಕನ್ನಡದ ರೂಪಗಳನ್ನು ಮತ್ತು

ಇವತ್ತು ಕನ್ನಡ ನಾಡಿನ ಬೇರೆ ಬೇರೆ ಊರುಗಳಲ್ಲಿ (ಅದರಲ್ಲೂ ಕಾಣಿಸುವ ಮುಕ್ಯವಾಗಿ ಒಳನುಡಿಗಳಲ್ಲಿ) ಬಳಕೆಯಲ್ಲಿರುವ ಕನ್ನಡದ ರೂಪಗಳನ್ನು (ಎಂದರೆ ಕನ್ನಡದ ‘ಒಳನುಡಿ’ಗಳನ್ನು) ಬಳಸಿಕೊಳ್ಳಲಾಗಿದೆ.

ಮತ್ತು ಒಳನಾಡುಗಳಲ್ಲಿ

ಕರಾವಳಿ

ಈ ವ್ಯತ್ಯಾಸ ಯಾವ ರೀತಿ ಇರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಿದ್ದಲ್ಲಿ ಮೊದಲಿಗೆ ಒಂದು ನುಡಿ ಎರಡು (ಇಲ್ಲವೇ ಇಲ್ಲವೇ ಒಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದು ಅವಶ್ಯ.

ನುಡಿಗಳಾಗಿ ಬದಲಾಗುವುದು

ಹೆಚ್ಚು)

(1) ಒಂದು ಊರಿನಲ್ಲಿರುವ ಜನರಲ್ಲಿ ಕೆಲವರು ದೂರದಲ್ಲಿರುವ ಬೇರೊಂದು ಊರಿಗೆ ಹೋಗಿ ನೆಲೆಸಿದರಾದರೆ, ಅವರಿಗೂ ಹಿಂದೆ ಉಳಿದ ವರಿಗೂ ನಡುವಿದ್ದ ಸಂಪರ್ಕ ಪೂರ್ತಿ ಕಡಿದು ಹೋಗುತ್ತದೆ ಮತ್ತು ಇದರಿಂದಾಗಿ ಅವರು ಬಳಸುವ ನುಡಿಯಲ್ಲಿ ಹಿಂದೆ ಉಳಿದವರ ನುಡಿಯಲ್ಲಿ ನಡೆಯುವ ಬದಲಾವಣೆಗಳಿಗಿಂತ ತೀರ ಬೇರಾಗಿರುವ ಬದಲಾವಣೆಗಳು ನಡೆಯತೊಡಗುತ್ತವೆ.

ಇದರಿಂದಾಗಿ, ಆ ಎರಡು ಊರುಗಳಲ್ಲಿ ನೆಲೆಸಿರುವ ಜನರ ನುಡಿ ಮೊದಲಿಗೆ ಒಂದು ಇದ್ದುದು ಕಳೆದಂತೆ ಎರಡಾಗಿ ಒಡೆದುಕೊಳ್ಳುತ್ತದೆ ಮತ್ತು ಅನಂತರ ಈ ಎರಡು ಒಳನುಡಿಗಳು ಎರಡು ಸ್ವತಂತ್ರವಾದ ನುಡಿಗಳೆನಿಸುತ್ತವೆ.

ಸಮಯ

ಉದಾಹರಣೆಗಾಗಿ, ಕನ್ನಡ ನುಡಿಯನ್ನಾಡುತ್ತಿದ್ದ ಕೆಲವು ಜನರು ಸುಮಾರು ನಾನೂರು ವರ್ಶಗಳಶ್ಟು ಹಿಂದೆ ಮಯ್ಸೂರನ್ನು ಬಿಟ್ಟು ನೀಲಗಿರಿಯಲ್ಲಿ ಹೋಗಿ ನೆಲೆಸಿರಬೇಕು ಮತ್ತು ಅನಂತರ ಅವರಿಗೂ ಮಯ್ಸೂರಿನ ಹೋಗಿರಬೇಕು.

ಕನ್ನಡಿಗರಿಗೂ

ನಡುವಿದ್ದ

ಸಂಪರ್ಕ

ಪೂರ್ತಿ

ಈ ರೀತಿ ಸಂಪರ್ಕ ತಪ್ಪಿಹೋದುದರಿಂದಾಗಿ ಮಯ್ಸೂರಿನಲ್ಲೇ ಉಳಿದಿದ್ದ ಕನ್ನಡಿಗರ ನುಡಿಯಲ್ಲಿ ನಡೆದ ಬದಲಾವಣೆಗಳಿಗಿಂತ ತೀರ ಬೇರಾಗಿರುವ ಹಲವು ಬದಲಾವಣೆಗಳು ನೀಲಗಿರಿಯಲ್ಲಿ ನೆಲಸಿದವರ

ನುಡಿಯಲ್ಲಿ ನಡೆದಿರಬೇಕು ಮತ್ತು ಇದರಿಂದಾಗಿ ನೀಲಗಿರಿಯಲ್ಲಿ ನೆಲಿಸಿದವರ ಕನ್ನಡ ಮಾತು ‘ಬಡಗ’ ಎಂಬ ಹೆಸರಿನ ಬೇರೆಯೇ ಒಂದು ಒಳನುಡಿಯಾಗಿ ಬದಲಾಗಿರಬೇಕು.

ಕೆಲವರ ಅಬಿಪ್ರಾಯದಂತೆ ಬಡಗ ಎಂಬುದು ಇವತ್ತು ಕನ್ನಡಕ್ಕಿಂತ ಬೇರಾಗಿರುವ ಒಂದು ಸ್ವತಂತ್ರವಾದ ನುಡಿಯಾಗಿದೆ (ಹೋಕಿಂಗ್್ಸ ಮತ್ತು ಪಯ್ಲಟ್-ರಯ್ಚೂರ್ 1992 ನೋಡಿ).

(2) ಒಂದು ನುಡಿಯನ್ನಾಡುವ ಜನರು ವಿಸ್ತಾರವಾದ ಒಂದು ಪ್ರದೇಶ ದಲ್ಲಿ ನೆಲೆಸಿರುವರಾದರೆ, ಅದರ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆಯಬಲ್ಲುವು. ಆ ಜಾಗಗಳಲ್ಲಿ ನೆಲೆಸಿದ ಜನರ ನಡುವೆ ಎಂತಹ ಸಂಪರ್ಕವಿತ್ತು ಎಂಬುದರ ಮೇಲೆ ಇದು ಅವ ಲಂಬಿಸಿದೆ.

ಉದಾಹರಣೆಗಾಗಿ, ಕನ್ನಡವನ್ನಾಡುವ ಪ್ರದೇಶವನ್ನು ‘ಕರಾವಳಿ’ ಮತ್ತು ‘ಒಳನಾಡು’ ಎಂಬುದಾಗಿ ಮತ್ತು ಒಳನಾಡನ್ನು ‘ಬಡಗು ಒಳನಾಡು’ ಮತ್ತು ‘ತೆಂಕು ಒಳನಾಡು’ ಎಂಬುದಾಗಿ ವಿಂಗಡಿಸಬಲ್ಲೆವು. ಇವುಗಳಲ್ಲಿ ಕರಾವಳಿ ಮತ್ತು ಒಳನಾಡುಗಳ ನಡುವೆ ದುರ್ಗಮವಾದ ಪಶ್ಚಿಮಗಟ್ಟಗಳು ತಡೆಯಾಗಿ ನಿಂತಿವೆ ಮತ್ತು ಈ ತಡೆಯಿಂದಾಗಿ ಆ ಎರಡು ಜಾಗಗಳಲ್ಲಿ ನೆಲೆಸಿದ್ದ ಜನರ ನಡುವೆ ಹಿಂದಿನ ಕಾಲದಲ್ಲಿ ಬಹಳ ಕಡಿಮೆ ಸಂಪರ್ಕವಿದ್ದಿರಬೇಕು.

ಬಡಗು ಮತ್ತು ತೆಂಕು ಒಳನಾಡುಗಳ ನಡುವೆ ಇಂತಹ ದುರ್ಗಮವಾದ ನಡುವಿರುವ

ತಡೆಯಿಲ್ಲವಾದರೂ, ಅವುಗಳ ಎರಡು ಅಂತರದಿಂದಾಗಿ ಸಂಪರ್ಕಕ್ಕೆ ಸ್ವಲ್ಪ ಮಟ್ಟಿಗಿನ ತಡೆ ಬಂದಿರಬೇಕು.

ತುದಿಗಳ

ನಡುವೆ

ಕರಾವಳಿ

ಮತ್ತು ಒಳನಾಡುಗಳ

ಸಂಪರ್ಕ ಬಹಳ ಕಡಿಮೆಯಿದ್ದುದರಿಂದಾಗಿ, ಕರಾವಳಿಯ ಕನ್ನಡಿಗರ ನುಡಿಯಲ್ಲಿ ನಡೆದ ಹಲವು ಬದಲಾವಣೆಗಳು ಒಳನಾಡಿನ ಕನ್ನಡಿಗರ ನುಡಿಯಲ್ಲಿ ನಡೆಯಲಿಲ್ಲ ಮತ್ತು ಒಳನಾಡಿನಲ್ಲಿ ನಡೆದ ಹಲವು ಬದಲಾವಣೆಗಳು ಕರಾವಳಿಯಲ್ಲಿ ನಡೆಯಲಿಲ್ಲ (1.3.1 ನೋಡಿ).

ಇದರಿಂದಾಗಿ, ಇವತ್ತು ಕರಾವಳಿಯ ಕನ್ನಡ ಮತ್ತು ಒಳನಾಡಿನ ಕನ್ನಡಗಳ ನಡುವೆ ಒಂದು ನಿಶ್ಚಿತವಾದ ಗಡಿಯಿರುವುದನ್ನು ಕಾಣಬಹುದು. ಕರಾವಳಿಯಿಂದ ಒಳನಾಡಿನ ಬಡಗು ಇಲ್ಲವೇ ತೆಂಕು ಕರ್ನಾಟಕದ ಕಡೆಗಾಗಿ ಸಂಚರಿಸಿದಾಗ, ದಾಟುತ್ತಿದ್ದಂತೆ ಒಮ್ಮೆಗೇನೇ ಕರಾವಳಿಯ ಒಳನುಡಿ ಮುಗಿದು ಒಳನಾಡಿನ ಒಳನುಡಿ ಸುರುವಾಗುವುದು ಕಾಣಿಸುತ್ತದೆ.

ಪಶ್ಚಿಮಗಟ್ಟಗಳನ್ನು

ಇದಕ್ಕೆ ಬದಲು, ಒಳನಾಡಿನ ಬಡಗು ಮತ್ತು ತೆಂಕು ಒಳನುಡಿಗಳ ನಡುವೆ ಇಂತಹ ಒಂದು ನಿಶ್ಚಿತವಾದ ಗಡಿಯನ್ನು ಕಾಣಲು ಸಾದ್ಯವಾಗುವು ದಿಲ್ಲ. ಅವು ಬಡಗಿನಿಂದ ತೆಂಕಕ್ಕೆ ಹಂತ ಹಂತವಾಗಿ ಬೇರಾಗುತ್ತಾ ಹೋಗುತ್ತವೆ. ಅವುಗಳ ನಡುವಿನ ಯಾವುದೇ ಒಂದು ಊರಲ್ಲೂ ಬಡಗು ಕನ್ನಡದ ಒಳನುಡಿ ಕನ್ನಡದ ಒಳನುಡಿ ಸುರುವಾಗುತ್ತಿದೆಯುಂದು ನಿಶ್ಚಿತವಾಗಿ ಹೇಳಲು ಸಾದ್ಯವಾಗುವುದಿಲ್ಲ.

ಮುಗಿದು

ಮೇಲೆ ಸೂಚಿಸಿದ ಹಾಗೆ, ಒಳನಾಡಿನಲ್ಲಿ ಬಡಗು ಮತ್ತು ತೆಂಕು ಕರ್ನಾಟಕಗಳ ನಡುವೆ ದುರ್ಗಮವಾದ ತಡೆ ಯಾವುದೂ ಇಲ್ಲದಿರುವುದೇ ಈ ರೀತಿ ಆ ಎರಡು ಒಳನುಡಿಗಳ ನಡುವೆ ನಿಶ್ಚಿತವಾದ ಗಡಿಯಿಲ್ಲದಿರಲು ಕಾರಣ. ಬರಿಯ ಅಂತರ ಮಾತ್ರವೇ ಅವನ್ನು ಬೇರ್ಪಡಿಸಬಲ್ಲುದು. ಹಾಗಾಗಿ, ಒಳನಾಡಿನ ಜನರ ನುಡಿಯಲ್ಲಿ ನಡೆದ ಬದಲಾವಣೆಗಳ ಹರಹು ಬೇರೆಯೇ ಒಂದು ರೂಪದಲ್ಲಿದೆ.

ಅವುಗಳಲ್ಲಿ ನಡೆದ ಕೆಲವು ಬದಲಾವಣೆಗಳು ಇಡೀ ಒಳನಾಡನ್ನೇ ವ್ಯಾಪಿಸಿವೆಯಾದರೆ, ಬೇರೆ ಕೆಲವು ಬದಲಾವಣೆಗಳು ಬಡಗು ಪ್ರದೇಶದಲ್ಲಿ ಮಾತ್ರ ನಡೆದಿವೆ ಇಲ್ಲವೇ ತೆಂಕು ಪ್ರದೇಶದಲ್ಲಿ ಮಾತ್ರ ನಡೆದಿವೆ. ಇನ್ನು ಕೆಲವು ಬದಲಾವಣೆಗಳು ಇವೆರಡರ ನಡುವಿನ ಪ್ರದೇಶದಲ್ಲಿ ಮಾತ್ರ ನಡೆದಿವೆ. ಇದರಿಂದಾಗಿ, ಇವತ್ತು ಕನ್ನಡದ ಒಳನಾಡಿನ ಒಳನುಡಿಗಳು ಊರಿಂದೂರಿಗೆ ಹಂತ ಹಂತವಾಗಿ ಬೇರಾಗುತ್ತಿರುವುದನ್ನು ಕಾಣಬಹುದು.
ಮೂಲದ್ರಾವಿಡವೆಂಬ ಒಂದು ನುಡಿ ಕನ್ನಡ ಮತ್ತು ಅದರೊಂದಿಗೆ ನಂಟಸ್ತಿಕೆಯನ್ನು ತೋರಿಸುವ ತಮಿಳು, ಮಲಯಾಳ, ತೆಲುಗು, ತುಳು,

ಕೊಡಗು, ಗೋಂಡಿ, ಕುಡುಕ್ ಮೊದಲಾದ ಸುಮಾರು ಇಪ್ಪತ್ತಾರು ದ್ರಾವಿಡ ನುಡಿಗಳಾಗಿ ಒಡೆದುಕೊಳ್ಳಲು ಮೇಲೆ ವಿವರಿಸಿದ ಎರಡು ರೀತಿಯ ವಿದಾನಗಳಲ್ಲಿ ಯಾವುದು ಕಾರಣವಿರಬಹುದು ಎಂಬುದನ್ನು ಈಗ ಹೇಳುವುದು ಕಶ್ಟ. ಈ ಎರಡು ರೀತಿಯ ವಿದಾನಗಳೂ ಒಟ್ಟಾಗಿ ಇದಕ್ಕೆ ಕಾರಣವಾಗಿರಬಹುದು.

ಉದಾಹರಣೆಗಾಗಿ, ಇವತ್ತು ಬಲೂಚಿಸ್ತಾನ(ಪಾಕಿಸ್ತಾನ)ದಲ್ಲಿ ನೆಲೆ ಸಿರುವ ಬ್ರಾಹುಯೀ ಜನಾಂಗದ ನುಡಿ ಒಂದು ಸ್ವತಂತ್ರ ನುಡಿಯಾಗಿ ಬದಲಾಗಲು ಅದನ್ನಾಡುವ ಜನರು ಬಾರತದಿಂದ ಬಲೂಚಿಸ್ತಾನಕ್ಕೆ ವಲಸೆ ಹೋದುದೇ ಕಾರಣವಾಗಿರಬಹುದು. ಆದರೆ, ತಮಿಳು ಮತ್ತು ಮಲಯಾಳ ನುಡಿಗಳು ಎರಡು ಸ್ವತಂತ್ರ ನುಡಿಗಳಾಗಿ ಬದಲಾಗಲು ಅಂತಹ ವಲಸೆಗಿಂತಲೂ ಅವನ್ನಾಡುವ ಜನರು ವಾಸಿಸುವ ಜಾಗಗಳ ನಡುವಿರುವ ಅಂತರವೇ ಕಾರಣವಿರಬೇಕು.

Eke →

1.1.3 ಮೂಲನುಡಿಯ ಕಲ್ಪನೆ

ಎರಡು ನುಡಿಗಳು ಒಂದೇ ಮೂಲನುಡಿಯಿಂದ ಬೆಳೆದು ಬಂದಿವೆಯುಂದು ವಾದಿಸಬೇಕಿದ್ದಲ್ಲಿ ಅವುಗಳ ನಡುವೆ ಎಂತಹ ವ್ಯತ್ಯಾಸಗಳಿರಬೇಕು ಎಂಬುದು ಮೇಲಿನ ವಿವರಣೆಯಿಂದ ಸ್ಪಶ್ಟವಾಗುತ್ತದೆ. ಆ ವ್ಯತ್ಯಾಸಗಳೆಲ್ಲ ಮೂಲನುಡಿಯನ್ನಾಡುತ್ತಿದ್ದ ಎರಡು ಗುಂಪುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಿದ್ದಲ್ಲಿ ಮಾತ್ರ ಆ ಎರಡು ನುಡಿಗಳು ಒಂದೇ ವಾದಿಸಲು ಮೂಲನುಡಿಯಿಂದ ಸಾದ್ಯವಾಗುತ್ತದೆ.

ಬೆಳೆದು ಬಂದಿವೆಯುಂಬುದಾಗಿ

ನಡೆದುದರಿಂದಾಗಿ

ಉದಾಹರಣೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳು ತೆಂಕುದ್ರಾವಿಡ ವೆಂಬ ಮೂಲನುಡಿಯಿಂದ ಬೆಳೆದು ಬಂದಿವೆಯುಂಬುದಾಗಿ ವಾದಿಸಲು ನಮಗೆ ಸಾದ್ಯವಾಗಿದೆ. ಎಂದರೆ, ಈ ಎರಡು ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಕಲ್ಪಿತವಾಗಿರುವ ತೆಂಕುದ್ರಾವಿಡವೆಂಬ ಮೂಲನುಡಿಯ

ಎರಡು ಕವಲುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದುದ ರಿಂದಾಗಿ ಮೂಡಿಬಂದಿವೆಯುಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ.

ಈ ಮೂಲನುಡಿಯನ್ನಾಡುತ್ತಿದ್ದ ಜನರ ಒಂದು ಗುಂಪಿನಲ್ಲಿ ಒಂದು ರೀತಿಯ ಬದಲಾವಣೆಗಳಾದುದರಿಂದಾಗಿ ಕನ್ನಡ ನುಡಿ ಸಿದ್ದವಾಗಿದೆ ಮತ್ತು ಇನ್ನೊಂದು ಬದಲಾವಣೆಗಳಾದುದರಿಂದಾಗಿ ತಮಿಳು ನುಡಿ ಸಿದ್ದವಾಗಿದೆ ಎಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಿದೆ.

ಗುಂಪಿನಲ್ಲಿ

ಬೇರೆಯೇ

ಇದೇ ರೀತಿಯಲ್ಲಿ ತೆಲುಗು, ಕೊಡಗು, ತುಳು ಮೊದಲಾದ ಇತರ ದ್ರಾವಿಡ ನುಡಿಗಳೂ ಮೂಲದ್ರಾವಿಡ ನುಡಿಯನ್ನಾಡುತ್ತಿದ್ದ ಜನರ ಬೇರೆ ಬೇರೆ ಗುಂಪುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದುದ ರಿಂದಾಗಿ ಮೂಡಿಬಂದಿವೆಯುಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ.

Eke →

1.1.4 ವ್ಯತ್ಯಾಸ ಮತ್ತು ಸಾಮ್ಯ

ನುಡಿಗಳ ನಡುವಿನ ನಂಟಸ್ತನ ಈ ರೀತಿ ಅವುಗಳ ನಡುವಿರುವ ವ್ಯತ್ಯಾಸಗಳು ಎಂತಹವು ಎಂಬುದನ್ನು ಅವಲಂಬಿಸಿದೆಯಲ್ಲದೆ ಅವುಗಳ ನಡುವೆ ಎಂತಹ ಸಾಮ್ಯವಿದೆ ಇಲ್ಲವೇ ಎಶ್ಟು ಸಾಮ್ಯವಿದೆ ಎಂಬುದನ್ನು ಅವಲಂಬಿಸಿಲ್ಲ. ನುಡಿಗಳ ನಡುವಿರುವ ನಂಟಸ್ತಿಕೆ ಎಶ್ಟು ಹತ್ತಿರದ್ದು ಇಲ್ಲವೇ ಎಶ್ಟು ದೂರದ್ದು ಎಂಬ ವಿಶಯದಲ್ಲಿ ಇದೊಂದು ಅತ್ಯಂತ ಪ್ರಾಮುಕ್ಯವಾದ ಸಂಗತಿ. ಆದರೆ ಹೆಚ್ಚಿನವರೂ ಇದನ್ನು ಸರಿಯಾಗಿ ಅರ್ತಮಾಡಿಕೊಂಡಿರುವುದಿಲ್ಲ.

ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಹಲವು ರೀತಿಯ ಸಾಮ್ಯಗಳನ್ನು ಕಾಣಬಲ್ಲೆವು. ಕರ್ಣ-ಕಿವಿ, ಮುಖ-ಮೋರೆ, ಮೊದಲಾದ ಹಲವು ಸಾಮ್ಯವಿದೆಯುಂದು ಪದಗಳ ತೋರಬಹುದು; ವ್ಯಾಕರಣದಲ್ಲೂ ಇಂತಹ ಕೆಲವು ಸಾಮ್ಯಗಳನ್ನು ಈ ಎರಡು ನುಡಿಗಳ ನಡುವೆ ಕಾಣಲು ಕಶ್ಟವಾಗದು.

ಸಂಸ್ಕ್ರುತ-ಕನ್ನಡ

ನಡುವೆ

ಆದರೆ ಈ ಸಾಮ್ಯಗಳನ್ನವಲಂಬಿಸಿ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ನಂಟಸ್ತಿಕೆಯಿದೆಯುಂದಾಗಲಿ ಇಲ್ಲವೇ ಕನ್ನಡ ಸಂಸ್ಕ್ರುತದಿಂದ

(‘ವಿಕ್ರುತ’ಗೊಂಡು)

ಬೆಳೆದು ಸಾದ್ಯವಾಗದು.

ಬಂದಿದೆಯುಂದಾಗಲಿ

ವಾದಿಸಲು

ಇದಕ್ಕೆ ಕಾರಣವೇನೆಂದರೆ, ಎರಡು ನುಡಿಗಳ ನಡುವಿನ ಸಾಮ್ಯಕ್ಕೆ ಹಲವು ಕಾರಣಗಳಿರಬಹುದು. ಅವುಗಳೊಳಗೆ ಹಲವು ಶತಮಾನಗಳ ಸಂಪರ್ಕವಿದೆಯಾದಲ್ಲಿ ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಇಲ್ಲವೇ ವ್ಯಾಕರಣಾಂಶಗಳನ್ನು ಎರವಲಾಗಿ ಪಡೆದಿರಲು ಸಾದ್ಯವಿದ್ದು, ಅದರಿಂದಾಗಿ ಅವುಗಳ ನಡುವೆ ಸಾಮ್ಯ ಕಾಣಿಸಬಲ್ಲುದು.

ಇದಲ್ಲದೆ, ನುಡಿಗಳ ನಡುವಿನ ಸಾಮ್ಯ ಆಕಸ್ಮಿಕವಾದುದಾಗಿರಲೂ ಸಾದ್ಯವಿದೆ. ಎಲ್ಲಾ ನುಡಿಗಳೂ ಮಾನವನ ವಿಕಾಸದ ಒಂದು ಅಂಗವಾಗಿ ಮೂಡಿ ಬಂದಿವೆಯಾದ ಕಾರಣ, ಅವುಗಳ ನಡುವೆ ಅಂತಹ ಸಾಮ್ಯ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ.

ನುಡಿಗಳಾಗಿ

ಆದರೆ ನುಡಿಗಳ ನಡುವಿನ ನಂಟಸ್ತಿಕೆಯುಂಬುದು ಒಂದು ಮೂಲನುಡಿ ಯಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ಅದು ಹೇಗೆ ಹಲವು ಒಡೆದುಕೊಂಡಿದೆಯುಂಬುದನ್ನು ತಿಳಿಸಬೇಕಾಗಿದೆಯಾದ ಕಾರಣ, ಅದಕ್ಕೆ ನುಡಿಗಳ ನಡುವಿನ ಸಾಮ್ಯವನ್ನು ಆದಾರವಾಗಿ ಕೊಡಲು ಸಾದ್ಯವಾಗುವುದಿಲ್ಲ. ಆ ನುಡಿಗಳ ನಡುವಿನ ವ್ಯತ್ಯಾಸಗಳನ್ನೆಲ್ಲ ಒಂದೇ ಮೂಲ ನುಡಿಯ ಎರಡು ಬೇರೆ ಬೇರೆ ಬದಲಾವಣೆಗಳ ಕವಲುಗಳಲ್ಲಿ ತೋರಿಸಿಕೊಡಲು ಸಾದ್ಯವಾಗುವುದೊಂದೇ ಅದಕ್ಕೆ ಆದಾರವಾಗಬಲ್ಲುದು.

ನಡೆದ

Eke →

1.2 ದ್ರಾವಿಡ ನುಡಿಗಳು

ಒಂದರೊಡನೊಂದು ನಂಟಸ್ತನವನ್ನು ತೋರಿಸುವ (ಎಂದರೆ ಒಂದೇ ಮೂಲ ನುಡಿಯಿಂದ ಬದಲಾಗಿ ಬಂದಿರುವ) ನುಡಿಗಳನ್ನೆಲ್ಲ ಒಟ್ಟಿಗೆ ಒಂದು ‘ನುಡಿ ಕುಟುಂಬ’ವೆಂಬುದಾಗಿ ಪರಿಗಣಿಸಲಾಗುತ್ತದೆ.

ಕನ್ನಡ, ತಮಿಳು, ತೆಲುಗು, ಮಲಯಾಳ ಮೊದಲಾದ ನುಡಿಗಳು ‘ದ್ರಾವಿಡ’ ಎಂಬ ಒಂದು ನುಡಿಕುಟುಂಬಕ್ಕೆ ಸೇರಿದವುಗಳೆಂಬುದನ್ನು

ಮೊದಲಿಗೆ ತೋರಿಸಿ ಕೊಟ್ಟವರು ರೋಬರ್್ಟ ಕಾಲ್್ಡವೆಲ್ (ಕಾಲ್್ಡವೆಲ್ 1913). ಅವರ ಅನಂತರ ಈ ನುಡಿಕುಟುಂಬದ ಮೇಲೆ ಮತ್ತು ಅದಕ್ಕೆ ಸೇರಿದ ನುಡಿಗಳ ಮೇಲೆ ಹಲವು ಮಂದಿ ವಿದ್ವಾಂಸರು ಸಂಶೋದನೆಗಳನ್ನು ನಡೆಸಿದ್ದಾರೆ ಮತ್ತು ಈ ಸಂಶೋದನೆಗಳ ಮೂಲಕ ಈ ವಿಶಯ ಇನ್ನಶ್ಟು ಸ್ಪಶ್ಟ ಮತ್ತು ಕಚಿತವಾಗುವ ಹಾಗೆ ಮಾಡಿದ್ದಾರೆ.

ಒಟ್ಟು ಇಪ್ಪತ್ತಾರಕ್ಕಿಂತಲೂ ಹೆಚ್ಚು ನುಡಿಗಳು ಈ ನುಡಿಕುಟುಂಬಕ್ಕೆ ಸೇರುತ್ತವೆ. ಮೇಲೆ ಸೂಚಿಸಿದ ಹಾಗೆ, ಮೊದಲಿಗೆ ಈ ದ್ರಾವಿಡ ಜನರಲ್ಲಿ ಒಂದೇ ಒಂದು ಮೂಲನುಡಿ ಬಳಕೆಯಲ್ಲಿದ್ದಿರಬೇಕು; ಅನಂತರ ಅದನ್ನಾಡುವ ಈ ಜನರು ಬೇರೆ ಬೇರೆ ಊರುಗಳಿಗೆ ಹೋಗಿ (ಇಲ್ಲವೇ ಒಂದು ವಿಶಾಲವಾದ ಜಾಗದಲ್ಲಿ ನೆಲೆಸಿದುದರಿಂದಾಗಿ ನೆಲೆಸಿದುದರಿಂದಾಗಿ), ಅವರ ಮಾತಿನಲ್ಲಿ ಸಮಯದಿಂದ ಸಮಯಕ್ಕೆ ನಡೆದ ಬದಲಾವಣೆಗಳು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ದಿಕ್ಕುಗಳನ್ನು ಹಿಡಿದಿರಬೇಕು; ಮತ್ತು ಇದರಿಂದಾಗಿ, ಆ ಮೂಲ ನುಡಿ ಹಲವು ನುಡಿಗಳಾಗಿ ಒಡೆದಿರಬೇಕು ಎಂಬುದು ವಿದ್ವಾಂಸರ ಕಲ್ಪನೆ

ಮೊದಲಿಗೆ

ಕರೆಯಲಾಗಿದೆ. ಅದು

ಇದ್ದಿರಬಹುದಾದ ಈ

ಮೂಲನುಡಿಯನ್ನು ‘ಮೂಲದ್ರಾವಿಡ’ ಎಂದು ತೆಂಕುದ್ರಾವಿಡ, ನಡುದ್ರಾವಿಡ ಮತ್ತು ಬಡಗು ದ್ರಾವಿಡ ಎಂಬ ಮೂರು ಕವಲುಗಳಾಗಿ ಒಡೆದಿದ್ದು, ಅವುಗಳಲ್ಲಿ ತೆಂಕುದ್ರಾವಿಡವೆಂಬ ಕವಲಿನಿಂದ ಕನ್ನಡ ನುಡಿ ಬೆಳೆದು ಬಂದಿರಬೇಕು ಎಂಬುದು ಇವತ್ತಿನ ಹಲವು ವಿದ್ವಾಂಸರ ಕಲ್ಪನೆಯಾಗಿದೆ.

Eke →

1.2.1 ಇವತ್ತಿನ ದ್ರಾವಿಡ ನುಡಿಗಳು

ತೆಂಕುದ್ರಾವಿಡ ಕವಲಿನಿಂದ ಕನ್ನಡ ನುಡಿ (ಜನಸಂಕ್ಯೆ: ಮೂರು ಕೋಟಿ) ಮಾತ್ರವಲ್ಲದೆ, ತಮಿಳು (ಅಯ್ದು ಕೋಟಿ) ಮಲಯಾಳ (ಮೂರು ಕೋಟಿ), ಕೊಡಗು (93 ಸಾವಿರ), ತೊದ (1,600), ಕೋತ (1,400), ಇರುಳ (5,200) ಮತ್ತು ಕುಱುಂಬ (5000) ಎಂಬ ಬೇರೆ ಏಳು

ನುಡಿಗಳೂ ಬೆಳೆದು ಬಂದಿವೆ. ಇವುಗಳಲ್ಲಿ ಕೊನೆಯ ನಾಲ್ಕು ನುಡಿಗಳು (ತೊದ, ಕೋತ, ಇರುಳ ಮತ್ತು ಕುಱುಂಬ) ನೀಲಗಿರಿಯ ಗುಡ್ಡ ಕಾಡುಗಳಲ್ಲಿ ಬಳಕೆಯಲ್ಲಿವೆ.

ಇದಲ್ಲದೆ, ಕರ್ನಾಟಕದ ಕರಾವಳಿಯಲ್ಲಿ ಬಳಕೆಯಲ್ಲಿರುವ ತುಳು (ಹದಿನಾರು ಲಕ್ಶ) ಮತ್ತು ಕೊರಗ (ನಾಲ್ಕು ಸಾವಿರ) ನುಡಿಗಳೂ ಈ ಕವಲಿಗೆ ಸೇರುತ್ತವೆಯುಂದು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಆದರೆ ಈ ವಿಶಯದಲ್ಲಿ ಕೆಲವು ಸಂದೇಹಗಳು ಇನ್ನೂ ಉಳಿದಿವೆ. ಇವುಗಳಲ್ಲಿ ತುಳು ನುಡಿ ತೆಂಕು ದ್ರಾವಿಡ ನುಡಿಗಳಿಂದ ಹಲವು ವಿಶಯಗಳಲ್ಲಿ ಬೇರಾಗಿದ್ದು, ನಡುದ್ರಾವಿಡದ ನುಡಿಗಳೊಂದಿಗೆ ಹತ್ತಿರದ ನಂಟಸ್ತನವನ್ನು ತೋರಿಸುವ ಹಾಗೆ ಕಾಣಿಸುತ್ತದೆ. ಕೊರಗ ನುಡಿಯೂ ಕೆಲವು ವಿಶಯಗಳಲ್ಲಿ ಬಡಗು ದ್ರಾವಿಡ ನುಡಿಗಳಿಗೆ ಸಮೀಪವಿರುವ ಹಾಗೆ ಕಾಣಿಸುತ್ತದೆ. ಹಾಗಾಗಿ, ಈ ಎರಡು ನುಡಿಗಳ ವಿಶಯವಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ನೀಲಗಿರಿಯಲ್ಲಿ ಬಳಕೆಯಲ್ಲಿರುವ ‘ಬಡಗ’ ಎಂಬುದು (ಜನಸಂಕ್ಯೆ: ಒಂದೂಕಾಲು ಲಕ್ಶ) ಕನ್ನಡಕ್ಕಿಂತ ಬೇರಾಗಿರುವ ಒಂದು ಸ್ವತಂತ್ರ ನುಡಿಯುಂಬುದಾಗಿ ಕೆಲವರು ವಾದಿಸಿದ್ದಾರೆ; ಆದರೆ ಇಲ್ಲಿ ಅದನ್ನು ಕನ್ನಡದ ಒಳನುಡಿಯುಂದೇ ಪರಿಗಣಿಸಲಾಗಿದೆ. ಇದಕ್ಕೆ ಕೆಳಗೆ (1.3.2)ರಲ್ಲಿ ವಿವರಿಸಲಾಗಿದೆ.

ಕಾರಣವನ್ನು

ನಡುದ್ರಾವಿಡ ಕವಲಿನಲ್ಲಿ ತೆಲುಗು, ಗೋಂಡಿ, ಕೊಂಡ, ಕೂಯಿ, ಕೂವಿ, ಪೆಂಗೊ, ಮಂಡ, ಕೋಲಾಮಿ, ನಾಯ್ಕಿ, ನಾಯ್ಕಿಡಿ, ಪಾರ್ಜಿ, ಒಲ್ಲಾರಿ ಮತ್ತು ಗದಬ ಎಂಬ ಹದಿಮೂರು ನುಡಿಗಳು ಸೇರುತ್ತವೆ. ತೆಲುಗು ನುಡಿಯನ್ನಾಡುವವರ ಜನಸಂಕ್ಯೆ ಸುಮಾರು ಆರೂವರೆ ಕೋಟಿ.
ಉಳಿದವುಗಳಲ್ಲಿ ಗೋಂಡಿ ನುಡಿ ಸುಮಾರು ಇಪ್ಪತ್ತನಾಲ್ಕು ಲಕ್ಶ ಜನರ ಮಾತಾಗಿದ್ದು, ಮದ್ಯಪ್ರದೇಶ, ಮಹಾರಾಶ್ಟ್ರ, ಒರಿಸ್ಸ ಮತ್ತು ಆಂದ್ರ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿ ಒರಿಸ್ಸಾದಲ್ಲಿ ಬಳಕೆಯಲ್ಲಿದೆ.

ಕೂವಿ ನುಡಿ ಸುಮಾರು ಎರಡೂವರೆ ಲಕ್ಶ ಜನರ ಮಾತಾಗಿದ್ದು, ಒರಿಸ್ಸಾ ಮತ್ತು ಆಂದ್ರಪ್ರದೇಶ (ವಿಶಾಕಪಟ್ಟಣ)ಗಳಲ್ಲಿ ಬಳಕೆಯಲ್ಲಿದೆ. ಕೊಂಡ ನುಡಿ ಸುಮಾರು ಹದಿನೆಂಟು ಸಾವಿರ ಜನರ ಮಾತಾಗಿದ್ದು, ಆಂದ್ರಪ್ರದೇಶದಲ್ಲಿ ಬಳಕೆಯಲ್ಲಿದೆ. ಸುಮಾರು ಒಂದೂವರೆ ಸಾವಿರ ಜನರ ಮಾತಾಗಿದ್ದು, ಒರಿಸ್ಸಾದ ನವರಂಗಪುರ ಜಿಲ್ಲೆಯಲ್ಲಿ ಬಳಕೆಯಲ್ಲಿದೆ. ಅದೇ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಮಂಡ ನುಡಿ ಎಶ್ಟು ಜನರ ಮಾತಾಗಿದೆಯುಂಬುದಿನ್ನೂ ನಿಶ್ಚಿತವಾಗಿ ತಿಳಿದಿಲ್ಲ.

ಪೆಂಗೋ

ಬಡಗುದ್ರಾವಿಡ ಕವಲಿನಲ್ಲಿ ಕುಡುಕ್, ಮಾಲ್ತೋ ಮತ್ತು ಬ್ರಾಹುಯಿ ಎಂಬ ಮೂರು ನುಡಿಗಳು ಸೇರುತ್ತವೆ. ಇವುಗಳಲ್ಲಿ ಕುಡುಕ್ ನುಡಿ ಸುಮಾರು ಹದಿನಾಲ್ಕು ಲಕ್ಶ ಜನರ ಮಾತಾಗಿದ್ದು, ಬಿಹಾರ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಬಳಕೆಯಲ್ಲಿದೆ. ನೇಪಾಳದಲ್ಲೂ ಈ ನುಡಿಯನ್ನಾಡುವ ಸುಮಾರು ಹತ್ತು ಸಾವಿರ ಜನರಿದ್ದಾರೆ.

ಸುಮಾರು ಒಂದು ಲಕ್ಶ ಜನರ ಮಾತಾಗಿರುವ ಮಾಲ್ತೋ ನುಡಿ ಬಿಹಾರದ ರಾಜಮಹಾಲ್ ಗುಡ್ಡಗಳಲ್ಲಿ ಬಳಕೆಯಲ್ಲಿದೆ ಮತ್ತು ಸುಮಾರು ಹದಿನೇಳು ಲಕ್ಶ ಜನರ ಮಾತಾಗಿರುವ ಬ್ರಾಹುಯೀ ನುಡಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಳಕೆಯಲ್ಲಿದೆ.

ಈ ಹಂಚಿಕೆಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಹಂಚಿಕೆಯೊಂದನ್ನು ಕ್ರುಶ್ಣಮೂರ್ತಿ (2003) ಸೂಚಿಸಿದ್ದಾರೆ. ಮೇಲೆ ಕೊಟ್ಟಿರುವ ತೆಂಕುದ್ರಾವಿಡ ನುಡಿಗಳನ್ನು ಮೇಲೆ ನಡುದ್ರಾವಿಡದಲ್ಲಿ ಸೇರಿಸಿದ ತೆಲುಗು, ಗೋಂಡಿ, ಕೊಂಡ, ಕೂಯಿ, ಕೂವಿ, ಪೆಂಗೊ ಮತ್ತು ಮಂಡ ನುಡಿಗಳನ್ನು ‘ತೆಂಕುದ್ರಾವಿಡ-2’ ಎಂಬುದಾಗಿ ಪರಿಗಣಿಸಬೇಕೆಂದು ಅವರು ವಾದಿಸಿದ್ದಾರೆ.

‘ತೆಂಕುದ್ರಾವಿಡ-1’ ಎಂಬುದಾಗಿ

ಮತ್ತು

ಇವನ್ನು ಬಿಟ್ಟು ಉಳಿದ ಕೋಲಾಮಿ, ನಾಯ್ಕಿ, ಪಾರ್ಜಿ, ಒಲ್ಲಾರಿ ಮತ್ತು ಗದಬ ನುಡಿಗಳನ್ನು ಮಾತ್ರ ‘ನಡುದ್ರಾವಿಡ’ ಕವಲಿನಲ್ಲಿ ಇರಿಸಬೇಕೆಂಬುದು ಅವರ ಅಬಿಪ್ರಾಯ. ತಮಿಳು, ಕನ್ನಡ ಮೊದಲಾದ ನುಡಿಗಳಲ್ಲಿ ನಡೆದ

ಕೆಲವು ಬದಲಾವಣೆಗಳು ತೆಲುಗು, ಗೋಂಡಿ, ಕೂಯಿ ಮೊದಲಾದ ನುಡಿ ಗಳಲ್ಲೂ ಕಾಣಿಸುತ್ತಿರುವುದೇ ಅವರ ಈ ಅಬಿಪ್ರಾಯಕ್ಕೆ ಆದಾರ.

ಗಡಿಪ್ರದೇಶದ

Eke →

1.2.2 ದ್ರಾವಿಡರ ಮೂಲ ನೆಲೆ

ದ್ರಾವಿಡ ನುಡಿಗಳನ್ನಾಡುವ ಜನರು ತೆಂಕು ಏಶ್ಯಾ ಇಲ್ಲವೇ ಯುರೋಪ್ ನಿಂದ ಈಶಾನ್ಯ ವಲಸೆ ಬಂದಿರಬೇಕೆಂದು ಹೆಚ್ಚಿನ ವಿದ್ವಾಂಸರೂ ಅಬಿಪ್ರಾಯಪಡುತ್ತಾರೆ. ಇದು ಬಾರತಕ್ಕೆ ಆರ್ಯರು ವಲಸೆ ಬಂದುದಕ್ಕಿಂತ ಸುಮಾರು ಎರಡು ಸಾವಿರ ವರ್ಶಗಳಶ್ಟು ಹಿಂದೆ ನಡೆದಿರಬೇಕೆಂದೂ ಕೂಡ ಇವರು ವಾದಿಸುತ್ತಾರೆ. ಬಾರತಕ್ಕೆ ಆರ್ಯರು ವಲಸೆ ಬಂದುದು ಸುಮಾರು ಮೂರೂವರೆ ಸಾವಿರ ವರ್ಶಗಳಶ್ಟು ಹಿಂದೆ.

ಬಾರತಕ್ಕೆ

ಮೂಲಕ

ಆದರೆ, ಈ ಅಬಿಪ್ರಾಯಗಳಿಗೆ ಸಮಾದಾನಕರವಾದ ಆದಾರವೇನೂ ಇರುವ ಹಾಗೆ ಕಾಣಿಸುವುದಿಲ್ಲ. ದ್ರಾವಿಡ ನುಡಿಗಳಿಗೆ ಉರಾಲ್- ಆಲ್ಟೇಯಿಕ್ ಕುಟುಂಬಕ್ಕೆ ಸೇರಿದ ಹಂಗೇರಿಯನ್, ಫಿನ್ನಿಶ್ ಮೊದಲಾದ ಹಲವರು ವಿದ್ವಾಂಸರು ನುಡಿಗಳೊಂದಿಗೆ ಮತ್ತು ಜಪಾನೀಸ್ ವಾದಿಸಿದ್ದಾರೆ. ಇದಲ್ಲದೆ, ಇಲಾಮಯ್ಟ ನುಡಿಗಳೊಂದಿಗೂ ದ್ರಾವಿಡ ನುಡಿಗಳಿಗೆ ನಂಟಸ್ತನವಿದೆಯುಂದು ಸಾದಿಸಲು ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಇವುಗಳಲ್ಲಿ ಯಾವುದೂ ಇದುವರೆಗೆ ಎಲ್ಲರೂ ಒಪ್ಪುವಂತಹ ಸ್ತಿತಿಗೆ ತಲಪಿಲ್ಲ.

ನಂಟಸ್ತನವಿದೆಯುಂದು

ತಮಿಳು,

ಇದಲ್ಲದೆ, ನಮಗೆ ತಿಳಿದಿರುವ ಹಾಗೆ, ಇವತ್ತು ಮೂಲದ್ರಾವಿಡದ ಪದ ಮತ್ತು ವ್ಯಾಕರಣ ಸ್ವರೂಪಗಳನ್ನು ಹೆಚ್ಚು ಬದಲಾಯಿಸದೆ ಕೊಡಗು, ಮಲಯಾಳ ಉಳಿಸಿಕೊಂಡಿರುವುದು ಮೊದಲಾದ ದ್ರಾವಿಡ ನುಡಿಗಳನ್ನಾಡುವ ಜನರ ವಲಸೆ ಬಾರತದಲ್ಲಿ ತೆಂಕು ದಿಕ್ಕಿನಿಂದ ಬಡಗು ದಿಕ್ಕಿಗೆ ಸಾಗಿರಬೇಕಲ್ಲದೆ ಬಡಗು ದಿಕ್ಕಿನಿಂದ ತೆಂಕು ದಿಕ್ಕಿಗಲ್ಲ (ಕ್ರುಶ್ಣಮೂರ್ತಿ

ಕನ್ನಡ, ನುಡಿಗಳೇ.

ತೆಂಕುದ್ರಾವಿಡ

Eke →

1.2.3 ತೆಂಕುದ್ರಾವಿಡದಲ್ಲಿ ಕನ್ನಡದ ಜಾಗ

ತೆಂಕುದ್ರಾವಿಡ ನುಡಿಗಳಲ್ಲಿ ತುಳು ಮತ್ತು ಕೊರಗ ನುಡಿಗಳು ಮೊತ್ತ ಮೊದಲಿಗೆ ಬೇರಾಗಿರಬೇಕು. ಅವು ಹಲವು ವಿಶಯಗಳಲ್ಲಿ ಇತರ ತೆಂಕು ದ್ರಾವಿಡ ನುಡಿಗಳಿಂದ ಬೇರಾಗಿರುವುದೇ ಈ ನಿರ್ದಾರಕ್ಕೆ ಬರಲು ಕಾರಣ. ಮೇಲೆ ಸೂಚಿಸಿದ ಹಾಗೆ, ಹಲವು ವಿಶಯಗಳಲ್ಲಿ ತುಳು ನುಡಿ ನಡು ದ್ರಾವಿಡ ತೋರುವುದು ಇದೇ ಹತ್ತಿರವಿದೆಯುಂದು ಕಾರಣಕ್ಕಾಗಿಯೂ ಇರಬಹುದು.

ನುಡಿಗಳಿಗೆ

ಮೇಲಿನ ಎರಡು ನುಡಿಗಳ ಅನಂತರ, ತೆಂಕುದ್ರಾವಿಡದಿಂದ ಕನ್ನಡ ನುಡಿ ಬೇರಾಗಿರಬೇಕು ಮತ್ತು ಅದರ ಅನಂತರ ಕೋತ ಹಾಗೂ ತೊದ ನುಡಿಗಳು ಮತ್ತು ಆಮೇಲೆ ಕೊಡಗು ಮತ್ತು ಕುಱುಂಬ ನುಡಿಗಳು ಬೇರಾಗಿರಬೇಕೆಂದು ವಿದ್ವಾಂಸರು ಕಲ್ಪಿಸಿಕೊಂಡಿದ್ದಾರೆ. ಬಾಕಿ ಉಳಿದಿರುವ ನುಡಿಗೆ ‘ತಮಿಳು’ ಎಂಬ ಹೆಸರು ಬಂದಿದ್ದು, ಅದರಿಂದ ಇತ್ತೀಚೆಗೆ ಅಂದರೆ ಸುಮಾರು ಒಂದೂವರೆ ಸಾವಿರ ವರ್ಶಗಳಶ್ಟು ಹಿಂದೆ ಇರುಳ ಮತ್ತು ಮಲಯಾಳ ನುಡಿಗಳು ಬೇರಾಗಿರಬೇಕು.

ನುಡಿಗಳ ಈ ಚರಿತ್ರೆಗಿಂತ ಅವು ಬಳಸುವ ಲಿಪಿಗಳ ಚರಿತ್ರೆ ತೀರ ಬೇರಾದುದೆಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ (ಎಂದರೆ ಅಶೋಕನ ಕಾಲದಲ್ಲಿ) ಪ್ರಾಕ್ರುತ ಶಾಸನಗಳನ್ನು ಬರೆಯಲು ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯೇ ಬಾರತದ ಹೆಚ್ಚಿನ ಲಿಪಿಗಳಿಗೂ ಮೂಲ. ದ್ರಾವಿಡ ನುಡಿಗಳು ಬಳಸುವ ಲಿಪಿಗಳೂ ಇದರಿಂದಲೇ ಬೆಳೆದು ಬಂದಿವೆಯೆಂದು ವಿದ್ವಾಂಸರು ನಿರ್ಣಯಕ್ಕೆ ಬಂದಿದ್ದಾರೆ.

ಕನ್ನಡ ಮತ್ತು ತೆಲುಗು ನುಡಿಗಳು ಬಳಸುತ್ತಿದ್ದ ಲಿಪಿ ಹದಿನಯ್ದನೇ ಶತಮಾನದ ವರೆಗೂ ಹೆಚ್ಚು ಕಡಿಮೆ ಒಂದೇ ಲಿಪಿಯಾಗಿ ಉಳಿದಿತ್ತು. ಅನಂತರ ಅದು ಎರಡು ಬೇರೆ ಬೇರೆ ಲಿಪಿಗಳಾಗಿ ಒಡೆದುಕೊಂಡಿತು. ಈ ಲಿಪಿಗಳನ್ನು ಮುದ್ರಣಕ್ಕೆ ಅಳವಡಿಸಿಕೊಳ್ಳುವ ಸಮಯದಲ್ಲಿ ಅವುಗಳ ನಡುವೆ ಬೆಳೆದು ಬಂದಿದ್ದ ವ್ಯತ್ಯಾಸಗಳು ಇನ್ನಶ್ಟು ಸ್ಪಶ್ಟವಾದುವು.

ಕನ್ನಡ ಮತ್ತು ತೆಲುಗು ಲಿಪಿಗಳ ನಡುವಿರುವ ಈ ಸಾಮ್ಯದಿಂದಾಗಿ, ಆ ಎರಡು ನುಡಿಗಳ ನಡುವೆಯೂ ಹತ್ತಿರದ ನಂಟಸ್ತನವಿರಬೇಕೆಂದು ಹಲವು ಮಂದಿ ಬಾವಿಸುತ್ತಾರೆ. ಆದರೆ ಇದು ತಪ್ಪು. ಹಳೆಗನ್ನಡವನ್ನು ಹಳೆತಮಿಳು ಮತ್ತು ಹಳೆತೆಲುಗುಗಳೊಂದಿಗೆ ಹೋಲಿಸಿ ನೋಡಿದಾಗ, ಹಲವು ವಿಶಯ ಗಳಲ್ಲಿ ಕನ್ನಡ ನುಡಿ ತೆಲುಗಿಗಿಂತಲೂ ತಮಿಳಿಗೆ ಹೆಚ್ಚು ಹತ್ತಿರವಿರುವುದು ಕಂಡುಬರುತ್ತದೆ.

ತೆಲುಗು ನುಡಿಯನ್ನು ಕನ್ನಡ, ತಮಿಳು ಮೊದಲಾದ ತೆಂಕುದ್ರಾವಿಡ ನುಡಿಗಳಿಂದ ದೂರ ಮಾಡುವ ಸಂಗತಿಗಳಲ್ಲಿ ಕೆಲವನ್ನು ಇಲ್ಲಿ ಗಮನಿಸ ಬಹುದು.

ವಸ್ತು,

ವಿಶಯ

ಮೊದಲಾದುವನ್ನು

(1) ತೆಂಕುದ್ರಾವಿಡ ನುಡಿಗಳಲ್ಲಿ ಮನುಶ್ಯರನ್ನು ಹೊರತುಪಡಿಸಿ ಇತರ ಪ್ರಾಣಿ, ಸೂಚಿಸುವ ನಾಮಪದಗಳೊಂದಿಗೆ ಹಲವಚನವನ್ನು ಸೂಚಿಸುವ ಗಳ್ ಒಟ್ಟನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅವಶ್ಯವಿದ್ದಲ್ಲಿ ಮಾತ್ರ ಅದನ್ನು ಬಳಸಿದರೆ ಸಾಕು. ಆದರೆ ತೆಲುಗು ಮತ್ತು ಇತರ ನಡುದ್ರಾವಿಡ ನುಡಿಗಳಲ್ಲಿ ಹಲವಚನದ ಅರ್ತವಿರುವಲ್ಲೆಲ್ಲ ಈ ಒಟ್ಟನ್ನೂ ಬಳಸಲೇಬೇಕೆಂಬ ನಿಯಮವಿದೆ.

(2) ತೆಂಕುದ್ರಾವಿಡ ನುಡಿಗಳಲ್ಲಿ ಕಾಣಿಸುವ ಅವನ್ ‘ಅವನು’ ಎಂಬುದು ತೆಲುಗು ಮತ್ತು ಇತರ ನಡುದ್ರಾವಿಡ ನುಡಿಗಳಲ್ಲಿ *ಅವನ್ಱ್ ಎಂಬ ರೂಪದಲ್ಲಿದೆ. ತೆಲುಗಿನಲ್ಲಿ ಇದು ವಾಡು ಎಂದಾಗಿದೆ.

(3) ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ತೆಂಕುದ್ರಾವಿಡ ನುಡಿಗಳಲ್ಲಿ ಮೂಲದ್ರಾವಿಡದ ಪ್್ಪ ಒಟ್ಟು ಬಳಕೆಯಾಗುವುದಾದರೆ (ಹಳೆಗನ್ನಡದ ಪೋಪೆಂ, ಬರ್ಪೆಂ), ತೆಲುಗು ಮತ್ತು ಇತರ ದ್ರಾವಿಡ (ಚೇಸ್ತಾನು ನುಡಿಗಳಲ್ಲಿ ‘ಮಾಡುತ್ತೇನೆ’). ಹಳೆಗನ್ನಡದಲ್ಲಿ ಈ ತ್್ತ ಒಟ್ಟು ಅಟ್ಟುತ್ತುಂ, ಒಡೆಯುತ್ತುಂ ಎಂಬಂತಹ ಜೋಡಿಸುವ ರೂಪಗಳಲ್ಲಿ ಮಾತ್ರ ಉಳಿದಿದೆ. ಹೊಸಗನ್ನಡದಲ್ಲಿ ಈ ತ್್ತ ಒಟ್ಟು ಮುಂದಿನ ಸಮಯವನ್ನು

ಬಳಕೆಯಾಗುತ್ತದೆ

ಸೂಚಿಸುವುದಕ್ಕಾಗಿಯೂ (ಮಾಡುತ್ತೇನೆ), ಆದರೆ ಇದಕ್ಕೆ ಕನ್ನಡದಲ್ಲಿ ಇತ್ತೀಚೆಗೆ ನಡೆದ ಬದಲಾವಣೆ ಕಾರಣ (8.3.2 ನೋಡಿ).

ಬಳಕೆಯಾಗುತ್ತದೆಯೇನೋ

(4) ನಡುದ್ರಾವಿಡದ ತೆಲುಗು, ಗೋಂಡಿ, ಕೊಂಡ, ಕೂವಿ, ಕೂಯಿ, ಪೆಂಗೊ ಮತ್ತು ಮಂಡ ನುಡಿಗಳಲ್ಲಿ ಎರಡು ಗಿಡ್ಡಸ್ವರಗಳಿರುವ ಪದಗಳಲ್ಲಿ ಮೊದಲನೆಯ ಸ್ವರದ ಅನಂತರ ಟ್, ಱ್, ಲ್, ಳ್, ರ್ ಇಲ್ಲವೇ ೞ್ ಬಂದಿದೆಯಾದರೆ, ಮೊದಲ ಸ್ವರ ಎರಡನೆಯ ಸ್ವರವಿದ್ದಲ್ಲಿಗೆ ಹೋಗಿ ಅದರೊಂದಿಗೆ ಸೇರಿ ಉದ್ದ ಸ್ವರವಾಗುತ್ತದೆ. ಇಕಾರ ಮತ್ತು ಎಕಾರಗಳು ಈ ರೀತಿ ಒಟ್ಟು ಸೇರಿದಾಗ ಏಕಾರವೂ, ಉಕಾರ ಮತ್ತು ಒಕಾರಗಳು ಒಟ್ಟು ಸೇರಿದಾಗ ಓಕಾರವೂ ದೊರೆಯುತ್ತವೆ. ಈ ಬದಲಾವಣೆ ತೆಂಕುದ್ರಾವಿಡ ನುಡಿಗಳಲ್ಲಿ ನಡೆದಿಲ್ಲ.

ಕನ್ನಡ
ಮರ(ನ್) ಒರಳು
ಬರೆ(ಯು) ಕಿಳ್ (ಕೆಳಗೆ) ಕುರುಡ
ಕೊೞವೆ

ತೆಲುಗು ರ್ಮಾನು ರೋಲು ವ್ರಾಯು, ರಾಯು ಲೋನು ಗ್ರುಡ್ಡಿ ಕ್ರೋವಿ

Eke →

1.3 ಕನ್ನಡ ನುಡಿ ಒಳನುಡಿಗಳಾಗಿ ಒಡೆದುಕೊಂಡ ಬಗೆ

ಮೂಲ ತೆಂಕುದ್ರಾವಿಡದಿಂದ ಕನ್ನಡ ಒಂದು ಸ್ವತಂತ್ರ ನುಡಿಯಾಗಿ ಒಡೆದು ಕೊಂಡ ಮೇಲೆ, ಅದು ಹಲವು ಒಳನುಡಿಗಳಾಗಿ ಒಡೆದುಕೊಂಡಿದೆ. ಇದು ಯಾವ ರೀತಿಯಲ್ಲಿ ನಡೆದಿರಬೇಕು ಎಂಬುದನ್ನು ಅದರ ಇವತ್ತಿನ

ಒಳನುಡಿಗಳ ಪರಿಶೀಲನೆಯ ಮೂಲಕ ತಿಳಿದುಕೊಳ್ಳಬಹುದು.

ಕಾಣಿಸುವ

ನಡುವೆ

ಸಾಮ್ಯ ಮತ್ತು ವ್ಯತ್ಯಾಸಗಳ

ಮೇಲೆ (1.1.2)ರಲ್ಲಿ ಸೂಚಿಸಿದ ಹಾಗೆ, ಕನ್ನಡ ನುಡಿಯನ್ನಾಡುವ ಜನರಲ್ಲಿ ಕೆಲವರು ಕರಾವಳಿಯಲ್ಲೂ, ಇನ್ನು ಕೆಲವರು ಒಳನಾಡಿನಲ್ಲೂ ನೆಲೆಸಿರಬೇಕು ಮತ್ತು ಹೀಗೆ ನೆಲೆಸಿದ ಮೇಲೆ, ಈ ಎರಡು ಗುಂಪುಗಳ ನಡುವಿನ ಸಂಪರ್ಕ ಪೂರ್ತಿ ತಪ್ಪಿ ಹೋಗಿರಬೇಕು. ಇದರಿಂದಾಗಿ, ಅನಂತರ ಕನ್ನಡ ನುಡಿಯಲ್ಲಿ ನಡೆದ ಬದಲಾವಣೆಗಳಲ್ಲಿ ಹೆಚ್ಚಿನವೂ ಈ ಎರಡು ಪ್ರದೇಶಗಳಲ್ಲಿ ತೀರ ಬೇರಾಗಿರುವ ದಿಕ್ಕುಗಳಲ್ಲಿ ನಡೆದಿರಬೇಕು.

ಕರಾವಳಿ ಮತ್ತು ಒಳನಾಡುಗಳ ಒಳನುಡಿಗಳಾಗಿ ಈ ರೀತಿ ಒಡೆದು ಕೊಂಡಿರುವುದೇ ಕನ್ನಡದ ಅತ್ಯಂತ ಹಳೆಯ ಕವಲೊಡೆತವಾಗಿದೆ. ಈ ಕವಲೊಡೆತವನ್ನು ಬೆಂಬಲಿಸುವಂತಹ ಬದಲಾವಣೆಗಳಲ್ಲಿ ಕೆಲವನ್ನು ಕೆಳಗೆ 1.3.1ರಲ್ಲಿ ಸೂಚಿಸಲಾಗಿದೆ. ಅವುಗಳ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ಅದ್ಯಾಯಗಳಲ್ಲಿ ಕೊಡಲಾಗುವುದು.

ಈ ಒಳನುಡಿಗಳೊಂದಿಗೆ ಬಡಗ ಒಳನುಡಿಯನ್ನು ಹೋಲಿಸಿದಾಗ, ಕೆಲವು ವಿಶಯಗಳಲ್ಲಿ ಅದು ಕರಾವಳಿಯ ಒಳನುಡಿಗಳ ಹಾಗೆ ಮತ್ತು ಕೆಲವು ವಿಶಯಗಳಲ್ಲಿ ಒಳನಾಡಿನ ಒಳನುಡಿಗಳ ಹಾಗೆ ಬೇರೆ ಕಾಣಿಸುತ್ತದೆ. ಇದಕ್ಕೆ ಕಾರಣವೇನಿರಬಹುದೆಂಬುದನ್ನು 1.3.2ರಲ್ಲಿ ಸೂಚಿಸಲಾಗಿದೆ.

Eke →

1.3.1 ಕರಾವಳಿ ಮತ್ತು ಒಳನಾಡಿನ ಒಳನುಡಿಗಳು

ಕರಾವಳಿಯ ಒಳನುಡಿಗಳಿಗೂ ಒಳನಾಡಿನ ಒಳನುಡಿಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಕೆಲವು ಅವುಗಳ ನಡುವಿನ ಒಡೆತವನ್ನು ಅತ್ಯಂತ ಪ್ರಾಚೀನವಾದ ಕನ್ನಡ ಬರಹಗಳಿಂದಲೂ ಹಿಂದಕ್ಕೆ ಕೊಂಡುಹೋಗುತ್ತವೆ.

ತೆಂಕುದ್ರಾವಿಡದಲ್ಲಿ

ಸೂಚಿಸುವ ಕ್ರಿಯಾಪದಗಳಿಗೆ ತ್ ಒಟ್ಟನ್ನು ಸೇರಿಸಿ ಅವನ್ನು ಮಾಡುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು. ಒಳನಾಡಿನ ಒಳನುಡಿಗಳಲ್ಲಿ ಇದು ಪೂರ್ತಿ

ಆಗುವಿಕೆಯನ್ನು

ಇಲ್ಲವಾಗಿದೆ; ಆದರೆ ಕರಾವಳಿಯ ಹವ್ಯಕ ಒಳನುಡಿಯಲ್ಲಿ ಇದರ ಅವಶೇಶಗಳನ್ನು ಹಲವು ಕ್ರಿಯಾಪದಗಳಲ್ಲಿ ಕಾಣಬಹುದು (7.5.4 ನೋಡಿ).

(2) ನಡುವಿನ ಗಿಡ್ಡ ಸ್ವರಗಳು (ಎಕಾರ, ಒಕಾರಗಳು) ಅವುಗಳ ಅನಂತರ ಮೇಲಿನ ಸ್ವರಗಳು (ಇ ಇಲ್ಲವೇ ಉ) ಬಂದಾಗ ಮೇಲಿನ ಗಿಡ್ಡ ಸ್ವರಗಳಾಗುವಂತಹ ಬದಲಾವಣೆಯೊಂದು ಕನ್ನಡದಲ್ಲಿ ಎಂಟು- ಒಂಬತ್ತನೇ ಶತಮಾನದಲ್ಲಿ ನಡೆದಿರಬೇಕೆಂದು ಶಾಸನಗಳ ಆದಾರದ ಮೇಲೆ ಹೇಳಲಾಗುತ್ತದೆ. ಈ ಬದಲಾವಣೆ ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ನಡೆದಿದೆ, ಆದರೆ ಕರಾವಳಿಯ ಒಳನುಡಿಗಳಲ್ಲಿ ನಡೆದಿಲ್ಲ (2.2.2 ನೋಡಿ).

(3) ತಡೆಯುಲಿಯ ಮೊದಲು ಬಂದಿದ್ದ ಮೂಗುಲಿ ಉದ್ದ ಸ್ವರದ ಅನಂತರ ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಬಿದ್ದು ಹೋಗುವ ಬದಲಾವಣೆ ಹಳೆಗನ್ನಡದ ಸಮಯದಲ್ಲಿ ನಡೆದಿತ್ತು. ಒಳನಾಡಿನ ಒಳನುಡಿ ಗಳಲ್ಲಿ ಈ ಮೂಗುಲಿ ಉಳಿದಿಲ್ಲ, ಆದರೆ ಕರಾವಳಿಯ ಒಳನುಡಿಗಳ ಹಲವು ಪದಗಳಲ್ಲಿ ಅದು ಉಳಿದಿದೆ (5.2.4 ನೋಡಿ).

(4) ಎರಡು ಗಿಡ್ಡ ಸ್ವರಗಳ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿ ಹಳೆಗನ್ನಡಕ್ಕಿಂತಲೂ ಹಿಂದಿನ ಸಮಯದಲ್ಲೇನೇ ಬಿದ್ದು ಹೋಗಲು ತೊಡಗಿರಬೇಕು. ಹಳೆಗನ್ನಡದಲ್ಲಿ ಇಂತಹ ಕೆಲವು ಪದಗಳು ಮಾತ್ರ ಉಳಿದುಕೊಂಡಿವೆ. ಒಳನಾಡಿನ ಒಳನುಡಿಗಳಲ್ಲೂ ಈ ಬದಲಾವಣೆ ನಡೆದಿದೆ, ಆದರೆ ಕರಾವಳಿಯ ಹವ್ಯಕ ಕನ್ನಡದಲ್ಲಿ ಟಕಾರವನ್ನು ಹೊರತುಪಡಿಸಿ ಇತರ ತಡೆಯುಲಿಗಳಲ್ಲಿ ಅದು ನಡೆದಿಲ್ಲ (4.4.5 ನೋಡಿ).

(5) ಮೂಲದ್ರಾವಿಡದಲ್ಲಿ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಯಾಮ್ ಪದವನ್ನು ಬಳಸಲಾಗುತ್ತಿತ್ತು ಮತ್ತು ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಞಾಮ್ ಹಳೆಗನ್ನಡ ಪದವನ್ನು ಬಳಸಲಾಗುತ್ತಿತ್ತು. ಈ

ವ್ಯತ್ಯಾಸವನ್ನು

ಉಳಿಸಿಕೊಂಡಿದೆ (ಆಮ್ ಮತ್ತು ನಾಮ್ ಪದಗಳ ಮೂಲಕ) ಮತ್ತು ಕರಾವಳಿಯ ಒಳನುಡಿಗಳೂ ಉಳಿಸಿಕೊಂಡಿವೆ (ಹವ್ಯಕದಲ್ಲಿ ಎಂಗೊ ಮತ್ತು ನಾವು ಪದಗಳು ಇದಕ್ಕಾಗಿ ಬಳಕೆಯಾಗುತ್ತವೆ). ಆದರೆ, ಒಳನಾಡಿನ ಒಳನುಡಿಗಳು ಇದನ್ನು ಉಳಿಸಿಕೊಂಡಿಲ್ಲ (10.2 ನೋಡಿ).

(6) ಮೂಲದ್ರಾವಿಡದ ಕ್ರಿಯಾರೂಪಗಳಲ್ಲೂ ಮೇಲಿನ ವ್ಯತ್ಯಾಸ ಕಾಣಿಸುತ್ತಿದ್ದಿರಬೇಕು. ಅವುಗಳ ಕೊನೆಯಲ್ಲಿ ಬರುವ *ಅಮ್ ಒಟ್ಟು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಾದರೆ *ಎಮ್ ಒಟ್ಟು ಆಡುಗ ಮತ್ತು (ಕೇಳುಗನನ್ನು ಹೊರತುಪಡಿಸಿ) ಇತರರ ಕೂಡಿಕೆಯನ್ನು ಸೂಚಿಸುತ್ತದೆ.

ಈ ವ್ಯತ್ಯಾಸವನ್ನು ಹಳೆಗನ್ನಡ ಉಳಿಸಿಲ್ಲ ಮತ್ತು ಒಳನಾಡಿನ ಒಳನುಡಿ ಗಳೂ ಉಳಿಸಿಲ್ಲ. ಆದರೆ ಕರಾವಳಿಯ ಹವ್ಯಕ ಕನ್ನಡ ಬೇರೆ ವಿದಾನದ ಮೂಲಕ (ಅಮ್ ಒಟ್ಟಿನ ಬದಲು ತು ಒಟ್ಟನ್ನು ಬಳಸುವ ಮೂಲಕ) ಉಳಿಸಿಕೊಂಡಿದೆ (8.5.3 ನೋಡಿ).

(7) ಹಳೆಗನ್ನಡದ ವ (ಪ) ಒಟ್ಟನ್ನು ಒಳನಾಡಿನ ಒಳನುಡಿಗಳು ಕ್ರಿಯಾಪದಗಳ ಸಂಬಂದಿಸುವ ರೂಪಗಳಲ್ಲಿ (ಮಾಡುವ, ಕೊಡುವ) ಮಾತ್ರ ಉಳಿಸಿಕೊಂಡಿವೆ, ಆದರೆ ಕರಾವಳಿಯ ಒಳನುಡಿಗಳು ಅದನ್ನು ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಲ್ಲೂ ಉಳಿಸಿಕೊಂಡಿವೆ.

ಈ ರೂಪಕ್ಕೆ ಮುಂದಿನ ಕೆಲಸದ ಕುರಿತಾಗಿ ಆಡುಗನ ಊಹೆಯನ್ನು ತಿಳಿಸುವ ಅರ್ತ ಬಂದಿದೆಯೆಂಬುದು ಮಾತ್ರ ಕರಾವಳಿಯಲ್ಲಿ ನಡೆದ ಕೊಡುವೆ ಹೋಪೆ ಬದಲಾವಣೆ ‘ಕೊಟ್ಟೇನು’) (8.3.3 ನೋಡಿ).

‘ಹೋದೇನು’,

(ಹವ್ಯಕದ

(8) ಹಳೆಗನ್ನಡದ ಬಂದಪೆಂ

‘ಬರುತ್ತೇನೆ’, ಮುರಿದಪೆಂ ‘ಮುರಿಯುತ್ತೇನೆ’ ಎಂಬಂತಹ ಕರಾವಳಿಯ ಒಳನುಡಿಗಳಲ್ಲಿ ಉಳಿದಿಲ್ಲ, ಒಳನಾಡಿನ ಒಳನುಡಿಗಳಲ್ಲಿ ಬಂದೇನು, ಮುರಿದೇನು ಎಂಬಂತಹ ರೂಪಗಳಲ್ಲಿ ಉಳಿದುಕೊಂಡಿವೆ. ಇವುಗಳ ಅರ್ತ ಮಾತ್ರ ಈ ಒಳನುಡಿಗಳಲ್ಲಿ ಬದಲಾಗಿದೆ; ಅವು ಮುಂದಿನ ಕೆಲಸವನ್ನು

ಕ್ರಿಯಾರೂಪಗಳು

ತಿಳಿಸುವ ಬದಲು ಆ ಕೆಲಸಗಳ ಕುರಿತಾಗಿ ಆಡುಗನ ಊಹೆಯನ್ನು ತಿಳಿಸುತ್ತವೆ (8.3 ನೋಡಿ).

(9) ಹಳೆಗನ್ನಡದಲ್ಲಿ ಮುಂದಿನ ಸಮಯದ ಕೆಲಸದ ಕುರಿತು ಆಡುಗನ ಊಹೆಯನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಕುಂ (ಗುಂ) ಒಟ್ಟನ್ನು ಬಳಸಲಾಗುತ್ತಿತ್ತು. ಒಳನಾಡಿನ ಒಳನುಡಿಗಳಲ್ಲಿ ಈ ಒಟ್ಟು ಉಳಿದಿಲ್ಲ. ಆದರೆ ಕರಾವಳಿಯ ಹವ್ಯಕ ಕನ್ನಡದಲ್ಲಿ ಇದು ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ, ಇತರರ ಕೆಲಸದ ಕುರಿತು ಆಡುಗನ ಊಹೆಯನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತದೆ (8.3.3 ನೋಡಿ).

ಇದಲ್ಲದೆ, ಹಿಂದಿನ ಸಮಯದಲ್ಲಿ ರೂಡಿಯಲ್ಲಿದ್ದ ಕೆಲಸವೊಂದನ್ನು ಸೂಚಿಸುವುದಕ್ಕಾಗಿಯೂ ಈ ಒಟ್ಟನ್ನು ಹಳೆಗನ್ನಡದಲ್ಲಿ ಬಳಸಲಾಗುತ್ತಿತ್ತು; ಇಂತಹದೇ ಬಳಕೆ ಹವ್ಯಕದಲ್ಲಿಯೂ ಇದೆ.

(10) ಮುಂದಿನ ಸಮಯದ ಕೆಲಸಗಳನ್ನು ಸೂಚಿಸುವುದಕ್ಕಾಗಿ ಕನ್ನಡದ ಎಲ್ಲಾ ಒಳನುಡಿಗಳೂ ಕ್ರಿಯಾಪದಕ್ಕೆ ಉತ್ತ ಒಟ್ಟನ್ನು ಸೇರಿಸಿರುವ ರೂಪಗಳನ್ನು ಬಳಸುತ್ತವೆ (ಬಡಗ ಕನ್ನಡ ಇದಕ್ಕೆ ಅಪವಾದ - 1.3.2 ನೋಡಿ). ಆದರೆ ಈ ಒಟ್ಟಿನ ಅನಂತರ ಬರುವ ಆಡುಗ ಒಟ್ಟಿನ ಸ್ವರೂಪದಲ್ಲಿ ಕರಾವಳಿಯ ಒಳನುಡಿಗಳು ಒಳನಾಡಿನ ಒಳನುಡಿಗಳಿಂದ ಬೇರಾಗಿವೆ.

ಒಳನಾಡಿನ ಒಳನುಡಿಗಳು ಆಗು ಕ್ರಿಯಾಪದದ ಮುಂದಿನ ಸಮಯದ ರೂಪಗಳಿಂದ ಸಿದ್ದವಾದ ಏನೆ, ಏವೆ, ಈರಿ ಮೊದಲಾದ ಒಟ್ಟುಗಳನ್ನು ಬಳಸುತ್ತವೆ (ಮಾಡುತ್ತೇನೆ, ಕೊಡುತ್ತೇನೆ) ಆದರೆ ಕರಾವಳಿಯ ಒಳನುಡಿಗಳು ಹಿಂದಿನ ಸಮಯದ ಒಟ್ಟಿನೊಂದಿಗೆ ಬರುವ ಆಡುಗ ಒಟ್ಟುಗಳನ್ನೇ ಇಲ್ಲಿಯೂ ಬಳಸುತ್ತವೆ (ಮಾಡುತ್ತೆ, ಕೊಡುತ್ತೆ).

(11) ಮೂಲದ್ರಾವಿಡದ ಅಲ್ಲಗಳೆಯುವ ಕ್ರಿಯಾರೂಪ ಹಳೆಗನ್ನಡ ದಲ್ಲಿ ಉಳಿದಿದೆ (ನೋಡೆಂ ‘ನಾನು ನೋಡುವುದಿಲ್ಲ’, ನೋಡರ್ ‘ಅವರು ನೋಡುವುದಿಲ್ಲ’) ಮತ್ತು ಕರಾವಳಿಯ ಒಳನುಡಿಗಳಲ್ಲಿಯೂ ಉಳಿದಿದೆ; (ಇದರ ಅರ್ತದಲ್ಲಿ ಮಾತ್ರ ಸ್ವಲ್ಪ ಬದಲಾವಣೆಯಾಗಿದೆ:

ಹವ್ಯಕದ ಮಾಡೆ ‘ನಾನು ಮಾಡಲಿಕ್ಕಿಲ್ಲ’, ನೋಡವು ‘ಅವರು ನೋಡಲಿಕ್ಕಿಲ್ಲ’). ಬಡಗ ಒಳನುಡಿಯಲ್ಲೂ ಉಳಿದಿದೆ (ಬರೋ ‘ನಾವು ಬರಲಿಕ್ಕಿಲ್ಲ’). ಆದರೆ ಒಳನಾಡಿನ ಒಳನುಡಿಗಳಲ್ಲಿ ಇದು ಉಳಿದಿಲ್ಲ (8.4 ನೋಡಿ).

(12) ಹಳೆಗನ್ನಡದಲ್ಲಿ ಶರತ್ತನ್ನು ಸೂಚಿಸುವ ಒಡೆ ಒಟ್ಟನ್ನು ನೇರವಾಗಿ ಹಿಂದಿನ ಇಲ್ಲವೇ ಮುಂದಿನ ಸಮಯದ ಒಟ್ಟುಗಳ ಅನಂತರ ಮತ್ತು ಅಲ್ಲಗಳೆಯುವ ಒಟ್ಟಿನ ಅನಂತರ ಬಳಸಲು ಸಾದ್ಯವಿತ್ತು (ಬಂದೊಡೆ ‘ಬಂದರೆ’, ಬಪೊ್ಪಡೆ ‘ಬರುವುದಿದ್ದರೆ’, ಬಾರದೊಡೆ ‘ಬಾರದಿದ್ದರೆ’).

ಕರಾವಳಿಯ ಹವ್ಯಕ ಕನ್ನಡದಲ್ಲೂ ಇದೇ ರೀತಿಯಲ್ಲಿ ಶರತ್ತನ್ನು ಸೂಚಿಸುವ ಅರೆ ಒಟ್ಟನ್ನು ಹಿಂದಿನ ಮತ್ತು ಮುಂದಿನ ಸಮಯದ ಒಟ್ಟುಗಳ ಅನಂತರ ಇಲ್ಲವೇ ಅಲ್ಲಗಳೆಯುವ ಒಟ್ಟಿನ ಅನಂತರ ಬಳಸಲು ಸಾದ್ಯವಿದೆ (ಬಂದರೆ ‘ಬಂದರೆ’, ಬತ್ತರೆ ‘ಬರುವುದಿದ್ದರೆ’ ಬಾರದ್ದರೆ ‘ಬಾರದಿದ್ದರೆ’).

ಆದರೆ ಒಳನಾಡಿನ ಒಳನುಡಿಗಳಲ್ಲಿ ಶರತ್ತನ್ನು ಸೂಚಿಸುವ ಅರೆ
ಒಟ್ಟನ್ನು ಮುಂದಿನ ಸಮಯದ ಒಟ್ಟಿನ ಅನಂತರ ಇಲ್ಲವೇ ಅಲ್ಲಗಳೆಯುವ ಒಟ್ಟಿನ ಅನಂತರ ನೇರವಾಗಿ ಬಳಸಲು ಸಾದ್ಯವಾಗದು (12.4. ನೋಡಿ). ಕರಾವಳಿ ಮತ್ತು ಒಳನಾಡಿನ ಕನ್ನಡ ಒಳನುಡಿಗಳಲ್ಲಿ ಇಂತಹ ಹಲವು ಬದಲಾವಣೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿದ್ದು, ಅವು ಈ ಎರಡು ಒಳನುಡಿಗಳ ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಕಾರಣಗಳಾಗಿವೆ. ಕನ್ನಡದ ಒಳನುಡಿಗಳ ಒಡೆತದಲ್ಲಿ ಕರಾವಳಿ ಮತ್ತು ಒಳನಾಡುಗಳ ನಡುವಿನ ಒಡೆತವೇ ಅತ್ಯಂತ ಹಳೆಯದೆಂಬುದು ಈ ವ್ಯತ್ಯಾಸಗಳಿಂದ ಸ್ಪಶ್ಟವಾಗುತ್ತದೆ.

Eke →

1.3.2 ಬಡಗ ಒಳನುಡಿ

ಬಡಗ ಕನ್ನಡ ಕೆಲವು ವಿಶಯಗಳಲ್ಲಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ ಮತ್ತು ಬೇರೆ ಕೆಲವು ವಿಶಯಗಳಲ್ಲಿ ಒಳನಾಡಿನ ಒಳನುಡಿಗಳನ್ನು ಹೋಲುತ್ತದೆ. ಇದಲ್ಲದೆ, ಇನ್ನು ಕೆಲವು ವಿಶಯಗಳಲ್ಲಿ ಅದು ತನ್ನವೇ ಆದ ಬದಲಾವಣೆಗಳನ್ನೂ ಮಾಡಿಕೊಂಡಿದೆ.

ಈ ಎಲ್ಲಾ ವಿಶಯಗಳನ್ನೂ ವಿವರಿಸುವುದಕ್ಕಾಗಿ, ಅದನ್ನಾಡುವ ಜನ ಮೊದಲಿಗೆ ಕರಾವಳಿಯಲ್ಲಿದ್ದಿರಬೇಕೆಂದು ಮತ್ತು ಆಮೇಲೆ ಅಲ್ಲಿಂದ ಒಳ ನಾಡಿಗೆ (ಮಯ್ಸೂರಿಗೆ) ವಲಸೆ ಹೋಗಿರಬೇಕೆಂದು ಕಲ್ಪಿಸಿಕೊಳ್ಳಬಹುದು. ಇದರ ಅನಂತರ ಅವರು ನೀಲಗಿರಿಗೆ ವಲಸೆ ಹೋದುದರಿಂದಾಗಿ, ಅವರ ನುಡಿಯಲ್ಲಿ ಅದರದೇ ಆದ ಕೆಲವು ಬದಲಾವಣೆಗಳು ನಡೆದಿರಬೇಕು.

(1) ಕ್ರಿಯಾಪದಗಳಲ್ಲಿ ಕಾಣಿಸುವ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಕರಾವಳಿಯ ಹವ್ಯಕದಲ್ಲಿದೆ ಮತ್ತು ಬಡಗದಲ್ಲೂ ಇದೆ; ಆದರೆ, ಒಳನಾಡಿನ ಒಳನುಡಿಗಳಲ್ಲಿರುವ ಹಾಗೆ ಕಾಣಿಸುವುದಿಲ್ಲ (7.5.3-4 ನೋಡಿ).

(2) ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಮುಂದಿನ ಸಮಯದ ವ್ (ಪ್) ಒಟ್ಟನ್ನು ಉಳಿಸಿಕೊಂಡಿದೆ ಮತ್ತು ಸುಳ್ಯದ ಗವ್ಡ ಕನ್ನಡದ ಹಾಗೆ ಹಳೆಗನ್ನಡದ ‘ದಪ’ ಕ್ರಿಯಾರೂಪದ ಬದಲು ಉತ್ತ ರೂಪವನ್ನು ಬಳಸದೆ ಅದನ್ನೇ ಉಳಿಸಿಕೊಂಡಿದೆ (8.3.3-4 ನೋಡಿ).

(3) ಅಲ್ಲಗಳೆಯುವ ಕ್ರಿಯಾರೂಪವನ್ನು ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಉಳಿಸಿಕೊಂಡಿದೆ. ಇದಲ್ಲದೆ, ಇಲ್ಲ ಪದವನ್ನು (ಬಡಗದಲ್ಲಿ ಇಲೆ ಎಂಬುದನ್ನು) ಹಿಂದಿನ, ಮುಂದಿನ ಮತ್ತು ಅಲ್ಲಗಳೆಯುವ ಕ್ರಿಯಾರೂಪಗಳೊಂದಿಗೆ ಬಳಸುವ ಕರಾವಳಿಯ ವಿದಾನ ಬಡಗದಲ್ಲೂ ಉಳಿದಿದೆ (8.4 ನೋಡಿ).

(4) ಆಡುಗ ಪದಗಳಲ್ಲಿ ಮತ್ತು ಕ್ರಿಯಾರೂಪಗಳಲ್ಲಿ ಆಡುಗನೊಂದಿಗೆ ಕೇಳುಗನನ್ನು ಸೇರಿಸಿ ಮತ್ತು ಸೇರಿಸದೆ ಹೇಳುವಂತಹ ಎರಡು ರೀತಿಯ

ಕೂಡಿಕೆಯ ರೂಪಗಳನ್ನು ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಉಳಿಸಿಕೊಂಡಿದೆ (10.2.1 ಮತ್ತು 8.5.3 ನೋಡಿ).

(5) ಆಡುಗ ಮತ್ತು ಕೇಳುಗರನ್ನು ಸೂಚಿಸುವ ಪದಗಳ ಹಲವಚನದ ರೂಪಗಳಲ್ಲಿ ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಗ (<ಗಳ್) ಒಟ್ಟನ್ನು ಬಳಸುತ್ತದೆ (10.2.1 ನೋಡಿ).

(6) ಹಲವಚನವನ್ನು ಸೂಚಿಸುವ ಗಳ್ ಒಟ್ಟು ಗೊ ಎಂದಾಗಿರುವಲ್ಲಿ ಬಡಗ ನುಡಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ (9.3.2 ನೋಡಿ).

(7) ಕ್ರಿಯಾರೂಪಗಳಲ್ಲಿ ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ಇತು ಒಟ್ಟನ್ನು ಮನುಶ್ಯರನ್ನು ಸೂಚಿಸುವುದಕ್ಕಾಗಿಯೂ ಬಳಸುವ ವಿದಾನ ಬಡಗದಲ್ಲಿಯೂ ಇದೆ (8.5.2 ನೋಡಿ).

ಕರಾವಳಿಯ ಒಳನುಡಿಗಳಲ್ಲಿರುವ

(8) ಏಳು-ಎಂಟನೇ ಶತಮಾನದಲ್ಲಿ ನಡೆದ ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾಗುವ ಬದಲಾವಣೆ ಬಡಗ ಕನ್ನಡದಲ್ಲೂ ನಡೆದಿದೆ. ಇದು ಈ ಒಳನುಡಿಯನ್ನಾಡುವವರು ಮಯ್ಸೂರಿಗೆ ವಲಸೆ ಹೋದ ಅನಂತರ ನಡೆದಿರಬೇಕು. ಯಾಕೆಂದರೆ, ಕರಾವಳಿಯಲ್ಲಿ ಈ ಬದಲಾವಣೆ ನಡೆದಿಲ್ಲ (2.2.2 ನೋಡಿ).

ಮೂಗುಲಿ

ಮೊದಲು ಬಂದಿದ್ದ

(9) ಉದ್ದಸ್ವರದ ಅನಂತರ ಮತ್ತು ಎರಡು ಗಿಡ್ಡಸ್ವರಗಳ ಅನಂತರ ತಡೆಯುಲಿಯ ಕರಾವಳಿಯ ಒಳನುಡಿಗಳಲ್ಲಿ ಉಳಿದುಕೊಂಡಿದೆ (5.2.4). ಇದು ಬಡಗ ಕನ್ನಡದ ಕೆಲವು ಪದಗಳಲ್ಲಿ ಉಳಿದಿದೆಯಾದರೂ (ಏಂಗು ‘ಹಂಬಲಿಸು’, ನೀಂದು ‘ಈಜು’, ತಾಂಡು ‘ಹಾರಿ ದಾಟು’, ತಾಂಗು ‘ತಾಳ್ಮೆ’), ಬೇರೆ ಕೆಲವು ಪದಗಳಲ್ಲಿ ಉಳಿದಿಲ್ಲ (ನೂಕು (ಹವ್ಯಕ ನೂಂಕು), ಸಾಕು (ಹವ್ಯಕ ಸಾಂಕು), ತಾಟು (ಹವ್ಯಕ ತಾಂಟು), ಮರಗೊ (ಹವ್ಯಕ ಮರಂಗೊ).

(10) ನೀಲಗಿರಿಗೆ ವಲಸೆ ಹೋದ ಮೇಲೆ ಅದರಲ್ಲಿ ನಡೆದಿರುವ ಬದಲಾವಣೆಗಳಲ್ಲಿ (ಕ) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ

ಮೂಗುಲಿ ಮತ್ತು ಕೊರಳಿಸದ ತಡೆಯುಲಿಗಳ ಸೇರಿಕೆ ಇಮ್ಮಡಿ ತಡೆಯುಲಿ ಯಾಗಿ ಬದಲಾಗಿರುವುದು (5.2.4 ನೋಡಿ) ಮತ್ತು (ಚ) ಳಕಾರ ಮತ್ತು ೞಕಾರಗಳು ಬಿದ್ದು ಹೋಗಿ ಅವುಗಳ ಹತ್ತಿರ ಇದ್ದ ಸ್ವರಗಳು ಮಡಚಿದ ಸ್ವರಗಳಾಗಿ ಬದಲಾಗಿರುವುದು ಮುಕ್ಯವಾದವುಗಳು (2.4.4 ನೋಡಿ).

Eke →

1.3.3 ಇತರ ಒಡೆತಗಳು

ಕನ್ನಡದಲ್ಲಿ ಮೇಲಿನ ಒಳನುಡಿಗಳ ಒಡೆತ ಮಾತ್ರವಲ್ಲದೆ ಬೇರೆಯೂ ಹಲವು ಒಡೆತಗಳು ನಡೆದಿರುವುದನ್ನು ಕಾಣಬಹುದು. ಇವುಗಳ ಸ್ವರೂಪ ಎಂತಹದೆಂಬುದಿನ್ನೂ ಸ್ಪಶ್ಟವಾಗಿಲ್ಲ. ಕನ್ನಡಿಗರು ಕರ್ನಾಟಕದ ಬೇರೆ ಬೇರೆ ಜಾಗಗಳಲ್ಲಿ ನೆಲೆಸಿದ್ದು, ಈ ಜಾಗಗಳ ನಡುವಿನ ಅಂತರದಿಂದಾಗಿ ಅವರು ಬಳಸುವ ನುಡಿಯಲ್ಲಿ ವ್ಯತ್ಯಾಸಗಳೇರ್ಪಟ್ಟಿವೆ. ಒಳನಾಡಿನಲ್ಲೇನೇ ಕಾಣಿಸುವ ಬಡಗು (ದಾರವಾಡ) ಮತ್ತು ತೆಂಕು (ಮಯ್ಸೂರು) ಎಂಬ ವ್ಯತ್ಯಾಸ ಇಂತಹದು.

ಕರಾವಳಿಯ ಹವ್ಯಕದಲ್ಲೂ ತೆಂಕು ಹವ್ಯಕ, ಬಡಗು ಹವ್ಯಕ ಮತ್ತು ಗಟ್ಟದ ಮೇಲಿನ ಹವ್ಯಕ ಎಂದೆಲ್ಲ ವ್ಯತ್ಯಾಸಗಳಿವೆ. ಆದರೆ ಈ ಯಾವ ಒಡೆತಗಳೂ ಮೇಲೆ ಸೂಚಿಸಿದ ಕರಾವಳಿ-ಒಳನಾಡು ಒಡೆತದಶ್ಟು ಮುಕ್ಯ ವಾದುವಲ್ಲ.

ಇಂತಹ ನುಡಿಯನ್ನಾಡುವವರ ಜಾಗವನ್ನವಲಂಬಿಸಿದ ಒಡೆತಗಳು ಮಾತ್ರವಲ್ಲದೆ ಒಂದೇ ಜಾಗದಲ್ಲೂ ಬೇರೆ ಬೇರೆ ಜಾತಿಗಳಲ್ಲಿ ಬಳಕೆಯಾಗುವ ಕನ್ನಡವೂ ಬೇರೆ ಬೇರಾಗಿದೆ. ಈ ಜಾತಿ ಇಲ್ಲವೇ ಸಮಾಜಕ್ಕೆ ಸಂಬಂದಿಸಿದ ಒಳನುಡಿಗಳ ನಡುವಿನ ವ್ಯತ್ಯಾಸ ಯಾವ ರೀತಿಯದು ಎಂಬುದರ ಕುರಿತಾಗಿಯೂ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ಈ ಎಲ್ಲ ವ್ಯತ್ಯಾಸಗಳೂ ಕನ್ನಡ ನುಡಿಯನ್ನು ಬಳಸುವ ಈ ಬೇರೆ ಬೇರೆ ರೀತಿಯ ಪಂಗಡಗಳ ನಡುವೆ ಕಳೆದ ನೂರಾರು ವರ್ಶಗಳಲ್ಲಿ ಎಂತಹ ಸಂಪರ್ಕವಿತ್ತು ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ಇಲ್ಲಿ ಮರೆಯಬಾರದು.

Eke →

1.4 ಪುಸ್ತಕದ ಸ್ವರೂಪ

ಮೂಲದ್ರಾವಿಡದಿಂದ ಕನ್ನಡದ ವರೆಗೆ ಮತ್ತು ಅಲ್ಲಿಂದ ಇವತ್ತಿನ ಕನ್ನಡದ ಒಳನುಡಿಗಳ ವರೆಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ಎಂತಹ ಬದಲಾವಣೆ ಗಳೆಲ್ಲ ನಡೆದಿವೆ ಎಂಬುದನ್ನು ವಿವರಿಸುವುದೇ ಈ ಪುಸ್ತಕದ ಗುರಿಯಾಗಿದೆ. ಮೂಲದ್ರಾವಿಡ ಸ್ವರಗಳು ಬೇರಿನಲ್ಲಿ ಮತ್ತು ಒಟ್ಟಿನಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಿಗೊಳಗಾಗಿವೆಯಾದ ಕಾರಣ ಅವನ್ನು ಬೇರೆ ಬೇರಾಗಿ ಎರಡು ಮತ್ತು ಮೂರನೇ ಅದ್ಯಾಯಗಳಲ್ಲಿ ವಿವರಿಸಲಾಗಿದೆ.

ಇದಕ್ಕೆ ಬದಲು, ವ್ಯಂಜನಗಳಲ್ಲಿ

ನಡೆದ ಬದಲಾವಣೆಗಳನ್ನು ತಡೆಯುಲಿಗಳಲ್ಲಿ ನಡೆದವು ಮತ್ತು ಇತರ ವ್ಯಂಜನಗಳಲ್ಲಿ ನಡೆದವು ಎಂಬುದಾಗಿ ವಿಂಗಡಿಸಿ, ನಾಲ್ಕು ಮತ್ತು ಅಯ್ದನೆಯ ಅದ್ಯಾಯಗಳಲ್ಲಿ ವಿವರಿಸಲಾಗಿದೆ.

ಮೂಲದ್ರಾವಿಡದ ಪದರಚನೆ ಹೇಗಿದ್ದಿರಬೇಕು ಮತ್ತು ಅದರಲ್ಲಿ ಎಂತಹ ಬದಲಾವಣೆಗಳಾದುದರಿಂದಾಗಿ ಕನ್ನಡದ ಪದಗಳು ಸಿದ್ದವಾಗಿವೆ ಎಂಬುದನ್ನು ಆರನೆಯ ಅದ್ಯಾಯದಲ್ಲಿ ವಿವರಿಸಲಾಗಿದೆ.

ಕ್ರಿಯಾಪದಗಳ ಒಳರಚನೆಯ ಕುರಿತು ಹಲವಾರು ಸಂಗತಿಗಳನ್ನು ಈಗಾಗಲೇ ಕಂಡುಹಿಡಿಯಲಾಗಿದೆಯಾದ ಕಾರಣ, ಅದನ್ನು ಬೇರೆಯೇ ಒಂದು (ಏಳನೇ) ಅದ್ಯಾಯದಲ್ಲಿ ವಿವರಿಸಲಾಗಿದೆ. ಈ ಪದಗಳಿಂದ ರಚಿಸಬಹುದಾದ ಕ್ರಿಯಾರೂಪಗಳ ಒಳರಚನೆಯನ್ನು ಮತ್ತು ಅದರಲ್ಲಿ ನಡೆದ ಅದ್ಯಾಯದಲ್ಲಿ ಕಯ್ಗೆತ್ತಿಕೊಳ್ಳಲಾಗಿದೆ.

ಬದಲಾವಣೆಗಳನ್ನು

ನಾಮಪದಗಳ ಮತ್ತು ನಾಮರೂಪಗಳ ಒಳರಚನೆಯಲ್ಲಿ ನಡೆದ ಬದಲಾವಣೆಗಳನ್ನು ಒಂಬತ್ತನೇ ಅದ್ಯಾಯದಲ್ಲೂ, ಆಡುಗ ಮತ್ತು ತೋರುಗ ಹತ್ತನೇ ನಡೆದವುಗಳನ್ನು ಅದ್ಯಾಯದಲ್ಲೂ, ಹನ್ನೊಂದನೇ ಅದ್ಯಾಯದಲ್ಲೂ ವಿವರಿಸಲಾಗಿದೆ.

ಗುಣಪದಗಳ ಒಳರಚನೆಯಲ್ಲಿ

ಪದಗಳ ಒಳರಚನೆಯಲ್ಲಿ

ನಡೆದವುಗಳನ್ನು

ಮೂಲದ್ರಾವಿಡದಲ್ಲಿ ವಾಕ್ಯರಚನೆ ಹೇಗಿದ್ದಿರಬೇಕು ಮತ್ತು ಈ ರಚನೆ ಯಲ್ಲಿ ಎಂತಹ ಬದಲಾವಣೆಗಳನ್ನು ಕನ್ನಡ ಮಾಡಿಕೊಂಡಿದೆ ಎಂಬುದನ್ನು ಹನ್ನೆರಡನೇ ಅದ್ಯಾಯದಲ್ಲಿ ಪರಿಶೀಲಿಸಲಾಗಿದೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಪಾರಿಬಾಶಿಕ ಪದಗಳನ್ನು ಕೊನೆಯಲ್ಲಿ ವಿವರಿಸಲಾಗಿದೆ.

2. ಬೇರಿನ ಸ್ವರಗಳು

Eke →

2.1 ಸ್ವರಗಳ ಎಣಿಕೆ ಮತ್ತು ಉಚ್ಚಾರಣೆ

ಮೂಲದ್ರಾವಿಡಕ್ಕೆ ಇ, ಎ, ಉ, ಒ ಮತ್ತು ಅ ಎಂಬ ಅಯ್ದು ಗಿಡ್ಡ ಸ್ವರಗಳನ್ನು ಮತ್ತು ಈ, ಏ, ಊ, ಓ ಮತ್ತು ಆ ಎಂಬ ಅಯ್ದು ಉದ್ದ ಸ್ವರಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಕನ್ನಡದಲ್ಲೂ ಇಂತಹವೇ ಅಯ್ದು ಗಿಡ್ಡ ಸ್ವರಗಳ ಎಣಿಕೆ ಮತ್ತು ಮತ್ತು ಉದ್ದ ಉಚ್ಚಾರಣೆಗಳ ಮಟ್ಟಿಗೆ ಮೂಲದ್ರಾವಿಡಕ್ಕೂ ಕನ್ನಡಕ್ಕೂ ನಡುವೆ, ಈಗ ಕಲ್ಪಿಸಿಕೊಂಡಿರುವ ಹಾಗೆ, ಯಾವ ವ್ಯತ್ಯಾಸವೂ ಇಲ್ಲ.

ಸ್ವರಗಳಿವೆ. ಎಂದರೆ,

ಆದರೆ, ಕನ್ನಡದ ಕೆಲವು ಇವತ್ತಿನ ಒಳನುಡಿಗಳಲ್ಲಿ ಸ್ವರಗಳ ಎಣಿಕೆಯ ಮಟ್ಟಿಗೂ ಬದಲಾವಣೆಗಳಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು (2.4 ನೋಡಿ).

ಕನ್ನಡದಲ್ಲಿ ಬಳಕೆಯಾಗುವ ಈ ಸ್ವರಗಳನ್ನು ಹೆಸರಿಸುವುದಕ್ಕಾಗಿ ಎರಡು ಮುಕ್ಯ ವಿಶಯಗಳನ್ನು ಗಮನಿಸಬೇಕಾಗುತ್ತದೆ. ಅದಕ್ಕಾಗಿ (1) ನಾಲಿಗೆಯ ಯಾವ ಬಾಗವನ್ನು ಬಳಸಲಾಗುತ್ತದೆ ಎಂಬುದೊಂದು; ಮತ್ತು (2) ಆ ಬಾಗವನ್ನು ಬಾಯಿಯ ಯಾವ ಜಾಗದಲ್ಲಿ ನಿಲ್ಲಿಸಲಾಗುತ್ತದೆ ಎಂಬುದು ಇನ್ನೊಂದು.

ಕನ್ನಡ ಸ್ವರಗಳ ಉಚ್ಚಾರಣೆಯಲ್ಲಿ ಈ ಎರಡು ಅಂಶಗಳು (ನಾಲಗೆಯ ಬಾಗ ಮತ್ತು ಅದು ನಿಲ್ಲುವ ಬಾಯಿಯ ಜಾಗ) ಯಾವ ರೀತಿಯಲ್ಲಿ ತೊಡಗಿಕೊಳ್ಳುತ್ತವೆ ಎಂಬುದನ್ನು ಕೆಳಗೆ ಸೂಚಿಸಲಾಗಿದೆ.

ಬಾಯಿಯ ಜಾಗ

ಮುಂದಿನ ಬಾಗ

ಹಿಂದಿನ ಬಾಗ

ನಾಲಿಗೆಯ ಬಾಗ

ಮೇಲಿನ ಜಾಗ ನಡುವಿನ ಜಾಗ
ಕೆಳಗಿನ ಜಾಗ

ನಾಲಿಗೆಯ ಮುಂಬಾಗವನ್ನು ಬಾಯಿಯ ಮೇಲ್ಬಾಗದಲ್ಲಿ ನಿಲ್ಲಿಸಿ ಒಂದು ಸ್ವರವನ್ನು ಉಚ್ಚರಿಸಿದಲ್ಲಿ ಅದು ಇ ಇಲ್ಲವೇ ಈ ಎಂಬುದಾಗಿ ಕೇಳಿಸುತ್ತದೆ; ಅದೇ ಮುಂಬಾಗವನ್ನು ಸ್ವಲ್ಪ ಕೆಳಗೆ ಎಂದರೆ ಬಾಯಿಯ ನಡುಬಾಗಕ್ಕೆ ಸರಿಸಿ ಉಚ್ಚರಿಸಿದರೆ ಆ ಸ್ವರ ಎ ಇಲ್ಲವೇ ಏ ಎಂಬುದಾಗಿ ಕೇಳಿಸುತ್ತದೆ.

ನಾಲಿಗೆಯ ಮುಂಬಾಗದ ಬದಲು ಹಿಂಬಾಗವನ್ನು ಬಾಯಿಯ ಮೇಲ್ಬಾಗದಲ್ಲಿರಿಸಿ (ಮತ್ತು ಅದರೊಂದಿಗೆ ತುಟಿಯನ್ನೂ ದುಂಡಗಾಗಿಸಿ) ಒಂದು ಸ್ವರವನ್ನು ಉಚ್ಚರಿಸಿದೆವಾದರೆ, ಅದು ಉ ಇಲ್ಲವೇ ಊ ಎಂಬುದಾಗಿ ಕೇಳಿಸುತ್ತದೆ; ನಡುಬಾಗದಲ್ಲಿರಿಸಿ (ಮತ್ತು ತುಟಿಯನ್ನು ದುಂಡಗಾಗಿಸಿ) ಉಚ್ಚರಿಸಿದೆವಾದರೆ ಒ ಇಲ್ಲವೇ ಓ ಎಂಬುದಾಗಿ ಕೇಳಿಸುತ್ತದೆ; ಮತ್ತು ಕೆಳಬಾಗದಲ್ಲಿರಿಸಿ (ತುಟಿಯನ್ನು ದುಂಡಗಾಗಿಸದೆ) ಉಚ್ಚರಿಸಿದೆವಾದರೆ ಅ ಇಲ್ಲವೇ ಆ ಎಂಬುದಾಗಿ ಕೇಳಿಸುತ್ತದೆ.

ಈ ರೀತಿ ಉಚ್ಚರಿಸುವ ನಾಲಿಗೆಯ ಬಾಗ ಮತ್ತು ಅದು ನಿಲ್ಲುವ ಬಾಯಿಯ ಜಾಗಗಳನ್ನು ಅವಲಂಬಿಸಿ, ಕನ್ನಡದ ಸ್ವರಗಳನ್ನು ಅಯ್ದು ಗುಂಪುಗಳಲ್ಲಿ ಹಂಚಿ ಹೆಸರಿಸಬಹುದು. ಇ ಮತ್ತು ಈ ಎಂಬವುಗಳು ಮುನ್ಮೇಲಿನ’ಸ್ವರಗಳು; ಎ ಮತ್ತು ಏ ಎಂಬವುಗಳು ಮುನ್ನಡುವಿನ ಸ್ವರಗಳು; ಉ ಮತ್ತು ಊ ಎಂಬವುಗಳು ಹಿನ್ಮೇಲಿನ’ಸ್ವರಗಳು; ಒ ಮತ್ತು ಓ ಎಂಬವುಗಳು ಹಿನ್ನಡುವಿನ’ಸ್ವರಗಳು; ಅ ಮತ್ತು ಆ ಎಂಬವುಗಳು ಹಿಂಗೆಳಗಿನ’ಸ್ವರಗಳು.

ಕನ್ನಡ ಸ್ವರಗಳ ಈ ಹೆಸರುಗಳಲ್ಲಿ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ನಾಲಿಗೆಯ ಬಾಗವನ್ನು ಮತ್ತು ಎರಡನೆಯದು ಅದು

ನಿಲ್ಲುವ ಬಾಯಿಯ ಜಾಗವನ್ನು ಸೂಚಿಸುತ್ತದೆಯುಂಬುದನ್ನು ಗಮನಿಸ ಬಹುದು.

ಕನ್ನಡದ ಸ್ವರಗಳನ್ನು ಈ ರೀತಿ ಅವುಗಳ ಉಚ್ಚಾರಣೆಯಲ್ಲಿ ಬಳಕೆಯಾಗುವ ನಾಲಿಗೆಯ ಬಾಗ ಮತ್ತು ಆ ಬಾಗ ನಿಲ್ಲುವ ಬಾಯಿಯ ಜಾಗಗಳನ್ನವಲಂಬಿಸಿ ಮಾತ್ರವಲ್ಲದೆ ಬೇರೆ ವಿಶಯಗಳನ್ನವಲಂಬಿಸಿಯೂ ಹಂಚಲು ಸಾದ್ಯವಿದೆ. ಮೇಲೆ ಸೂಚಿಸಿದ ಹಾಗೆ, ಈ ಸ್ವರಗಳನ್ನು ಎಶ್ಟು ಹೊತ್ತು ಉಚ್ಚರಿಸಲಾಗುತ್ತದೆ ಎಂಬುದನ್ನವಲಂಬಿಸಿ ಗಿಡ್ಡಸ್ವರಗಳು (ಇ, ಎ, ಉ, ಒ ಮತ್ತು ಅ) ಮತ್ತು ಉದ್ದಸ್ವರಗಳು (ಈ, ಏ, ಊ, ಓ ಮತ್ತು ಆ) ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು.

ಇದಲ್ಲದೆ, ಇವುಗಳ ಉಚ್ಚಾರಣೆಯಲ್ಲಿ ತುಟಿ ದುಂಡಗಿರುತ್ತದೆಯೇ ಇಲ್ಲವೇ ದುಂಡಗಿಲ್ಲದಿರುತ್ತದೆಯೇ ಎಂಬುದನ್ನವಲಂಬಿಸಿ, ದುಂಡಗಿನ ಸ್ವರಗಳು (ಉ, ಊ, ಒ ಮತ್ತು ಓ), ಮತ್ತು ದುಂಡಗಿಲ್ಲದ ಸ್ವರಗಳು (ಇ, ಈ, ಎ, ಏ, ಅ ಮತ್ತು ಆ) ಎಂಬುದಾಗಿಯೂ ಹಂಚಬಹುದು.

ಕನ್ನಡದ

ಚರಿತ್ರೆಯಲ್ಲಿ ಈ

ಸ್ವರಗಳು ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ವರ್ಣಿಸುವಲ್ಲಿ ಅವುಗಳ ಉಚ್ಚಾರಣೆಯನ್ನನುಸರಿಸಿ ಮಾಡಿರುವ ಈ ಮೂರು ರೀತಿಯ ಹಂಚಿಕೆಗಳು ಸಹಾಯಕವಾಗುತ್ತವೆ ಎಂಬುದನ್ನು ಮುಂದೆ ನೋಡಲಿರುವೆವು.

ಹತ್ತು

Eke →

2.1.1 ಐ ಮತ್ತು ಔ ಸ್ವರಗಳು

ಕನ್ನಡ ಬರಹದಲ್ಲಿ ಐ ಮತ್ತು ಔ ಎಂಬ ಬೇರೆ ಎರಡು ಸ್ವರಗಳನ್ನು ಪಟ್ಟಿಮಾಡಲಾಗುತ್ತದೆ; ಆದರೆ ನಿಜಕ್ಕೂ ಇವು ಕನ್ನಡದ (ಇಲ್ಲವೇ ಮೂಲದ್ರಾವಿಡದ) ಹೆಚ್ಚಿನ ಸ್ವರಗಳಲ್ಲ. ಅಕಾರದ ಅನಂತರ ಯಕಾರ ಬಂದಿರುವುದನ್ನು ಬರೆಯಲಾಗುತ್ತದೆ ಮತ್ತು ವಕಾರ ಬಂದಿರುವುದನ್ನು (ಅವ್ ಎಂಬುದನ್ನು) ಔ ಎಂಬುದಾಗಿ ಬರೆಯಲಾಗುತ್ತದೆ.

ಎಂಬುದನ್ನು)

ಕನ್ನಡದಲ್ಲಿ (ಮತ್ತು ಮೂಲದ್ರಾವಿಡದಲ್ಲಿ) ಈ ರೀತಿ ಅಕಾರದೊಂದಿಗೆ ಸೇರಿರುವುದನ್ನು ಎರಡು ಹೆಚ್ಚಿನ

ಯಕಾರ ಮತ್ತು ವಕಾರಗಳು

ಸ್ವರಗಳೆಂಬುದಾಗಿ ಪರಿಗಣಿಸಲು ಯಾವ ಆದಾರವೂ ಇಲ್ಲ. ಈ ಸಂದರ್ಬದಲ್ಲಿ ಕೆಳಗಿನ ಕೆಲವು ವಿಶಯಗಳನ್ನು ಗಮನಿಸುವುದು ಅವಶ್ಯ.

(1) ಅಕಾರದ ಅನಂತರ ಮಾತ್ರವಲ್ಲದೆ ಇತರ ಸ್ವರಗಳ ಅನಂತರವೂ ಯಕಾರ ಬರಬಲ್ಲುದು. ಉದಾಹರಣೆಗಾಗಿ, ಮೂಲದ್ರಾವಿಡದ *ಕೆಯ್ ‘ಮಾಡು’ ಮತ್ತು *ಕೊಯ್’‘ಕೊಯ್ಯು’’ಪದಗಳಲ್ಲಿ ಯಕಾರ ಎ ಮತ್ತು ಒ ಸ್ವರಗಳ ಅನಂತರ ಬಂದಿದೆ. ಈ ಬಳಕೆಯ ಯಕಾರಕ್ಕೂ *ಕಯ್ (ಕೈ) ಪದದಲ್ಲಿರುವಂತಹ ಅಕಾರದ ಅನಂತರದ ಬಳಕೆಯಲ್ಲಿರುವ ಯಕಾರಕ್ಕೂ ನಡುವೆ ಯಾವ ವ್ಯತ್ಯಾಸವೂ ಇಲ್ಲ.

(2) ಗಿಡ್ಡ ಸ್ವರಗಳ ಅನಂತರ ಮಾತ್ರವಲ್ಲದೆ ಉದ್ದ ಸ್ವರಗಳ ಅನಂತರವೂ ಯಕಾರ ಬರಬಲ್ಲುದು. *ಕಯ್ (ಕೈ) - *ಕಾಯ್ ‘ಕಾಯು’, *ಬಯ್ ‘ಬಯ್ಯು’’- *ಬಾಯ್’‘ಬಾಯಿ’, *ಪಯ್ ‘ಒಡೆ’

  • *ಪಾಯ್ ‘ಜಿಗಿ’’ಮೊದಲಾದ ಮೂಲದ್ರಾವಿಡ ಬೇರುಗಳಲ್ಲಿ ಈ ಎರಡು ರೀತಿಯ ಬಳಕೆಗಳನ್ನು ಕಾಣಬಹುದು. ಗಿಡ್ಡ ಅಕಾರದ ಅನಂತರ ಬರುವ ಯಕಾರವನ್ನು ಮಾತ್ರವೇ ಒಂದು ಹೆಚ್ಚಿನ ಸ್ವರದ ಅಂಗವೆಂದು ಕರೆಯುವುದಕ್ಕೆ ದ್ರಾವಿಡ ನುಡಿಗಳಲ್ಲಾಗಲಿ, ಮೂಲದ್ರಾವಿಡದಲ್ಲಾಗಲಿ ಯಾವ ಆದಾರವೂ ಇಲ್ಲ.

ವ್ಯಂಜನಗಳೊಂದಿಗೂ

(3) ಸ್ವರಗಳ ಅನಂತರ ಬರುವ ಯಕಾರ ಮತ್ತು ವಕಾರಗಳು ಮೂಲದ್ರಾವಿಡದಲ್ಲಿ ರಕಾರ, ಲಕಾರ, ಳಕಾರ ಮೊದಲಾದವುಗಳ ಹಾಗೆ ಹಲವು ವಿಶಯಗಳಲ್ಲಿ ವ್ಯಂಜನಗಳಂತೆಯೇ ಬಳಕೆಯಾಗುತ್ತವೆ. ಇದಲ್ಲದೆ, ಅವುಗಳಿಗೆ ಸಂಬಂದವಿದೆ. ಉದಾಹರಣೆಗಾಗಿ, *ಪಯ್ - *ಪಚ್ಚೆ’‘ಹಸುರು’, *ಮುಯ್ - *ಮುಚ್ಚು ‘ಹೊದಿಸು’, *ಕಯ್ - *ಕಚ್ ‘ಕಹಿ’, *ಪಿಯರ್ - *ಪಿಚರ್ ‘ಹೆಸರು’ ಮೊದಲಾದ ಪದಗಳಲ್ಲಿ ಯಕಾರ ಮತ್ತು ಚಕಾರಗಳ ನಡುವೆ ಮತ್ತು ಸಂಬಂದವಿರುವುದನ್ನು ಮಕಾರಗಳೊಂದಿಗೆ ಇಂತಹದೇ ಸಂಬಂದವಿದೆ (4.3.1 ಮತ್ತು 5.2.2 ನೋಡಿ).

ಕಾಣಬಹುದು.

ವಕಾರಕ್ಕೆ

ಪಕಾರ

(4) ಮೂಲದ್ರಾವಿಡದ ಹಲವು ಬೇರುಗಳಲ್ಲಿ *ಅಯ್ ಎಂಬುದರ ಬದಲಿಗೆ *ಎಯ್ ಎಂಬುದನ್ನು ಬಳಸಬಹುದಿತ್ತು. ಇವತ್ತಿನ ದ್ರಾವಿಡ ನುಡಿಗಳಲ್ಲಿ ಈ ಪದಗಳು ಅಯ್ ಎಂಬುದನ್ನು ತೋರಿಸಬಹುದು ಇಲ್ಲವೇ ಎಯ್ ಎಂಬುದನ್ನು ತೋರಿಸಬಹುದು.

ಇದಲ್ಲದೆ, ಮೂಲದ್ರಾವಿಡದಲ್ಲಿ ಇದಕ್ಕಿಂತ ಬೇರಾದ *ಎಯ್ ಎಂಬುದೂ ಬಳಕೆಯಲ್ಲಿತ್ತು. ಅದು ಇವತ್ತಿನ ಎಲ್ಲಾ ನುಡಿಗಳಲ್ಲೂ ಎಯ್ ರೂಪದಲ್ಲೇ ಉಳಿದಿದೆ (ದ್ಸ್ವೆಲೆಬಿಲ್ 1970:70 ನೋಡಿ).

ಮೂಲದ್ರಾವಿಡದಲ್ಲಿದ್ದ *ಅಯ್ ಮತ್ತು *ಎಯ್ ಎಂಬವುಗಳ ನಡುವಿನ ಈ ಸಂಬಂದವೂ ಅವುಗಳಲ್ಲಿ ಒಂದು ‘ಐ ಎಂಬ ಸ್ವರ’ ಮತ್ತು ಇನ್ನೊಂದು ‘ಸ್ವರ (ಎ) ಮತ್ತು ವ್ಯಂಜನ(ಯ್)ಗಳ ಸೇರಿಕೆ’ ಎಂಬುದಾಗಿ ಹೇಳುವುದು ಸರಿಯಲ್ಲವೆಂಬುದನ್ನೇ ಸೂಚಿಸುತ್ತದೆ.

ಹಳೆಗನ್ನಡ

ಪದ್ಯರಚನೆಯಲ್ಲಿ

ಪ್ರಾಸವನ್ನು ಸೂಚಿಸಬೇಕಾಗಿರುವಂತಹ ಸಂದರ್ಬಗಳಲ್ಲಿ ಅಯ್ ಎಂಬುದರ ಬದಲಿಗೆ ಒಯ್, ಉಯ್, ಎಯ್ ಎಂಬವುಗಳನ್ನು ಬಳಸಬಹುದಿತ್ತು ಎಂಬುದೂ ಅಯ್ (ಐ) ಎಂಬುದು ಕನ್ನಡದಲ್ಲಿ ಒಯ್, ಉಯ್, ಎಯ್ ಮೊದಲಾದವುಗಳಿಂದ ಬೇರೆ ರೀತಿಯದಲ್ಲ ಎಂಬುದನ್ನೇ ಸೂಚಿಸುತ್ತದೆ. ಉದಾಹರಣೆಗಾಗಿ, ಪಂಪಬಾರತದ ಕೆಳಗಿನ ಪದ್ಯವನ್ನು ಗಮನಿಸಬಹುದು.

ಅಯ್ದೞಿವಾಡದೊಳಯ್ವರುಮಂ ನೀಂ ಕೂರ್ತಿರಿಸೆಂದೊಡಮೆಂತುಮೇ ಗೆಯ್ದುದನೊಲ್ಲದ ಕಾರಣದಿಂದಂ ನೋಡಿನಿತಾದುದು ನಿನ್ನೊಳೇ ಗೆಯ್ದವನಲ್ಲನೆ ಧರ್ಮತನೂಜಂ ಪೇೞ್ದುದನಿನ್ನೆಮಗಿಂಬುಕಯ್ ಸಯ್ದೊರೆಯಾಗುೞಿದಾರೊಳಮೇವಂಗೊಳ್ಳದಿರಿಂ ಫಣಿಕೇತನಾ

ಮೇಲಿನ ಪದ್ಯದ ಮೊದಲನೆಯ ಮತ್ತು ಕೊನೆಯ ಸಾಲಿನ ಮೊದಲಿಗೆ ಬರುವ ಅಯ್ದೞಿವಾಡ ಮತ್ತು ಸಯ್ದೊರೆ ಎಂಬವುಗಳನ್ನು ಐದೞಿವಾಡ ಮತ್ತು ಸೈದೊರೆ ಎಂಬುದಾಗಿ ಬರೆದಲ್ಲಿ ಪ್ರಾಸ ತಪ್ಪಾಗಿದೆಯುಂದು ತೋರ

ದಿರದು. ಯಾಕೆಂದರೆ, ಆಗ ನಡುವಿನ ಎರಡು ಸಾಲುಗಳಲ್ಲಿ ಕಾಣಿಸುವ ಯಕಾರ ಮೊದಲನೆಯ ಮತ್ತು ಕೊನೆಯ ಸಾಲುಗಳಲ್ಲಿ ಕಾಣಿಸದಾಗುತ್ತದೆ. (6) ದ್ರಾವಿಡ ನುಡಿಗಳ ಬರಹಗಳಲ್ಲಿ ಐ ಮತ್ತು ಔಗಳೆಂಬ ಎರಡು ಸ್ವರಾಕ್ಶರಗಳು ಕಾಣಿಸಿಕೊಳ್ಳಲು ಅವುಗಳಲ್ಲಿ ಅಂತಹ ವಿಶಿಶ್ಟವಾದ ಸ್ವರಗ ಳಿದ್ದುವೆಂಬುದು ಕಾರಣವಲ್ಲ; ಇದಕ್ಕೆ ಬದಲು, ಬ್ರಾಹ್ಮೀ ಎಂಬ ಲಿಪಿ ಈ ಬರಹಗಳಿಗೆ ಮೂಲವಾಗಿತ್ತು ಎಂಬುದೇ ಕಾರಣವಾಗಿದೆ.

ಈ ಲಿಪಿ ಮೊದಲಿಗೆ ಪ್ರಾಕ್ರುತ ಮತ್ತು ಸಂಸ್ಕ್ರುತ ನುಡಿಗಳನ್ನು ಬರೆಯುವುದಕ್ಕಾಗಿ ಬಳಕೆಗೆ ಬಂದಿತ್ತು. ಆ ನುಡಿಗಳಲ್ಲಿ ಅಯ್ ಮತ್ತು ಅವ್ ಎಂಬವುಗಳಿಗೆ ಒಂದು ವಿಶಿಶ್ಟವಾದ ಸ್ತಾನವಿತ್ತಾದ ಕಾರಣ ಅವನ್ನು ಸ್ವರಗಳೆಂದು ಪರಿಗಣಿಸಲಾಗಿತ್ತು ಮತ್ತು ಇದಕ್ಕಾಗಿ ಆ ಲಿಪಿಯಲ್ಲಿ ಐ ಮತ್ತು ಔ ಎಂಬ ಎರಡು ಸ್ವರಾಕ್ಶರಗಳನ್ನು ಹುಟ್ಟುಹಾಕಲಾಗಿತ್ತು (ಬಟ್

Eke →

2.1.2 ಉಲಿಗಳು ಮತ್ತು ಉಲಿಕಂತೆಗಳು

ಕನ್ನಡದ ಪದಗಳನ್ನು ಉಲಿಕಂತೆಗಳಾಗಿ ಮತ್ತು ಉಲಿಗಳಾಗಿ ಒಡೆದು ಹೇಳಲು ಸಾದ್ಯವಿದೆ. ಉದಾಹರಣೆಗಾಗಿ, ಆನೆ ಪದದಲ್ಲಿ ಆ ಮತ್ತು ನೆ ಎಂಬ ಎರಡು ಉಲಿಕಂತೆಗಳಿವೆ. ಇವುಗಳಲ್ಲಿ ಮೊದಲನೆಯ ಉಲಿಕಂತೆಯಲ್ಲಿ ಆ ಎಂಬ ಒಂದು ಉಲಿ (ಸ್ವರ) ಮಾತ್ರ ಇದೆ; ಆದರೆ ಎರಡನೆಯದರಲ್ಲಿ ನ್ ವ್ಯಂಜನ ಮತ್ತು ಎ ಸ್ವರ ಎಂಬುದಾಗಿ ಎರಡು ಉಲಿಗಳಿವೆ.

ಉಲಿಕಂತೆಗಳನ್ನು ಹಗುರದವು ಮತ್ತು ತೂಕದವು ಎಂಬುದಾಗಿ ತೂಕದವು; ವಿಂಗಡಿಸಬಹುದು. ಉದ್ದಸ್ವರವಿರುವ ಉಲಿಕಂತೆಗಳೆಲ್ಲ ಉದಾಹರಣೆಗಾಗಿ, ಆನೆ ಪದದ ಮೊದಲನೆಯ ಉಲಿಕಂತೆ ತೂಕದ

ಗಿಡ್ಡಸ್ವರವಿರುವ ಉಲಿಕಂತೆಗಳಲ್ಲಿ ಸ್ವರದ ಅನಂತರ ಒಂದು ವ್ಯಂಜನ ಬಂದಿದೆಯಾದರೆ ಉಲಿಕಂತೆಯಾಗುತ್ತದೆ. ತೂಕದ ಉದಾಹರಣೆಗಾಗಿ, ಹತ್ತು ಪದದಲ್ಲಿ ಹತ್ ಮತ್ತು ತು ಎಂಬ ಎರಡು

ಉಲಿಕಂತೆಗಳಿದ್ದು, ಅವುಗಳಲ್ಲಿ ಮೊದಲನೆಯದು ತೂಕದ ಉಲಿಕಂತೆ (ಯಾಕೆಂದರೆ ಅದರಲ್ಲಿ ಅಕಾರದ ಅನಂತರ ತ್ ವ್ಯಂಜನ ಬಂದಿದೆ) ಮತ್ತು ಎರಡನೆಯದು ಹಗುರದ ಉಲಿಕಂತೆ (ಯಾಕೆಂದರೆ ಅದರಲ್ಲಿ ಉಕಾರದ ಅನಂತರ ಯಾವ ವ್ಯಂಜನವೂ ಬಂದಿಲ್ಲ).

ಉಲಿಕಂತೆಗಳಲ್ಲಿ ಸ್ವರದ ಮೊದಲಿಗೆ ಬಂದಿರುವ ವ್ಯಂಜನಗಳು ಅವುಗಳ ತೂಕದ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಉದಾಹರಣೆಗಾಗಿ, ಅವನು ಪದದ ಮೊದಲ ಉಲಿಕಂತೆಯಾದ ಅ ಎಂಬುದರಲ್ಲಿ ವ್ಯಂಜನವಿಲ್ಲ; ಮನೆ ಪದದ ಮೊದಲ ಉಲಿಕಂತೆಯಾದ ಮ ಎಂಬುದರಲ್ಲಿ ಅ ಎಂಬ ಸ್ವರ ಮಾತ್ರವಲ್ಲದೆ ಅದರ ಮೊದಲು ಮ್ ಎಂಬ ಒಂದು ವ್ಯಂಜನವಿದೆ; ಹೀಗಿದ್ದರೂ ಈ ಎರಡು ಉಲಿಕಂತೆಗಳೂ (ಅ ಮತ್ತು ಮ) ಹಗುರದ ಉಲಿಕಂತೆಗಳು.

ಮೂಲದ್ರಾವಿಡ ಸ್ವರಗಳ (ಮತ್ತು ವ್ಯಂಜನಗಳ) ಚರಿತ್ರೆಯನ್ನು ವಿವರಿಸುವಲ್ಲಿ ಹಗುರದ ಉಲಿಕಂತೆಗಳು ಮತ್ತು ತೂಕದ ಉಲಿಕಂತೆಗಳು ಎಂಬ ಈ ವ್ಯತ್ಯಾಸವನ್ನು ಆಗಾಗ ಬಳಸಬೇಕಾಗುತ್ತದೆ ಎಂಬುದನ್ನು ಮುಂದೆ ನೋಡಲಿರುವೆವು.

Eke →

2.1.3 ಬೇರುಗಳು ಮತ್ತು ಒಟ್ಟುಗಳು

ಮೂಲದ್ರಾವಿಡದ ಮಟ್ಟಿಗೆ ಬೇರುಗಳಲ್ಲಿ ಬರುವ ಸ್ವರಗಳು ಮತ್ತು ಅವುಗಳ ಅನಂತರ ಒಟ್ಟುಗಳಲ್ಲಿ ಬರುವ ಸ್ವರಗಳು ಎಂಬ ಇನ್ನೊಂದು ರೀತಿಯ ವ್ಯತ್ಯಾಸವನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಪದಗಳ ಮೊದಲಿಗೆ ಬೇರುಗಳು ಬರುತ್ತವೆ; ಇವನ್ನು ಇವತ್ತಿನ ಎಲ್ಲಾ ದ್ರಾವಿಡ ನುಡಿಗಳೂ ಉಳಿಸಿಕೊಂಡಿವೆ. ಹಾಗಾಗಿ ಅವುಗಳನ್ನು ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವುದು ಸುಲಬ. ಈ ಬೇರುಗಳ ಅನಂತರ ಒಟ್ಟುಗಳು ಬರುತ್ತಿದ್ದು, ಅವು ನುಡಿಯಿಂದ ನುಡಿಗೆ ಬೇರೆ ಬೇರಾಗಿರುತ್ತವೆ. ಹಾಗಾಗಿ, ಒಂದು ನುಡಿಯ ಪದಗಳಲ್ಲಿ ಕಾಣಿಸುವ ರೂಪದಲ್ಲಿ ಒಟ್ಟುಗಳಲ್ಲಿ

ಯಾವುದು

ಯಾವ

ಮೂಲದ್ರಾವಿಡದಲ್ಲಿದ್ದಿರಬಹುದು ಕಂಡುಹಿಡಿಯಲು ಸಾದ್ಯವಾಗುವುದಿಲ್ಲ.

ಎಂಬುದನ್ನು

ಹೆಚ್ಚಿನೆಡೆಗಳಲ್ಲೂ

ಮೂಲದ್ರಾವಿಡದ ಬೇರುಗಳೆಲ್ಲ ಒಂದೇ ಉಲಿಕಂತೆಯವಾಗಿದ್ದುವೆಂಬ ಕಲ್ಪನೆಯಿದೆಯಾದ ಕಾರಣ, ಬೇರುಗಳಲ್ಲಿ ಬರುವ ಸ್ವರಗಳೆಲ್ಲ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಬರುವ ಸ್ವರಗಳೇ ಎಂದು ಹೇಳಬಲ್ಲೆವು.
ಇದಲ್ಲದೆ, ಒಟ್ಟುಗಳಲ್ಲಿ ಬರುವ ಸ್ವರಗಳೆಲ್ಲ ಎರಡನೆಯ ಇಲ್ಲವೇ ಮೂರನೆಯ ಉಲಿಕಂತೆಯಲ್ಲಿ ಬರುವ ಸ್ವರಗಳಲ್ಲದೆ ಮೊದಲನೆಯ ಉಲಿ ಕಂತೆಯಲ್ಲಿ ಬರುವ ಸ್ವರಗಳಲ್ಲ.

ಹಾಗಾಗಿ, ಮೂಲದ್ರಾವಿಡದ ಮಟ್ಟಿಗೆ ಬೇರುಗಳಲ್ಲಿ ಬರುವ ಸ್ವರಗಳು ಮತ್ತು ಒಟ್ಟುಗಳಲ್ಲಿ ಬರುವ ಸ್ವರಗಳು ಎಂಬ ಮೇಲಿನ ವ್ಯತ್ಯಾಸ ಮೊದಲನೆಯ ಉಲಿಕಂತೆಯ ಸ್ವರಗಳು ಮತ್ತು ಇತರ ಉಲಿಕಂತೆಗಳ ಸ್ವರಗಳು ಎಂಬ ವ್ಯತ್ಯಾಸವೂ ಆಗಿದೆ (ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಪದಗಳು ಸೇರಿರುವ ಜೋಡುಪದಗಳು ಮಾತ್ರ ಇದಕ್ಕೆ ಅಪವಾದಗಳು).
ಮೂಲದ್ರಾವಿಡ ಪದಗಳಲ್ಲಿ ಬರುವ ಸ್ವರಗಳ ಬಳಕೆಯ ಕುರಿತಾಗಿ

ಕೆಳಗೆ ಕೊಟ್ಟಿರುವಂತಹ ಕೆಲವು ನಿಯಮಗಳನ್ನು ಕಲ್ಪಿಸಿಕೊಳ್ಳಲಾಗಿದೆ.

(1) ಮೂಲದ್ರಾವಿಡ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಮೇಲೆ ವಿವರಿಸಿದ ಎಲ್ಲಾ ಸ್ವರಗಳೂ ಬರಬಲ್ಲುವಾಗಿದ್ದುವು; ಆದರೆ, ಅವುಗಳ ಅನಂತರ ಬರುವ ಉಲಿಕಂತೆಗಳಲ್ಲಿ ಇ, ಉ ಮತ್ತು ಅ ಎಂಬ ಮೂರು ಗಿಡ್ಡ ಸ್ವರಗಳು ಮಾತ್ರವೇ ಬರಬಲ್ಲುವಾಗಿದ್ದುವು;

(2) ಪದದ ಮೊದಲಿಗೆ ಯಕಾರ ಇಲ್ಲವೇ ಞಕಾರ ಬಂದಿದೆಯಾದರೆ, ಅದರ ಅನಂತರ ಮೂಲದ್ರಾವಿಡದಲ್ಲಿ ಅ ಮತ್ತು ಆ ಎಂಬ ಎರಡು ಸ್ವರಗಳು ಮಾತ್ರ ಬರಬಲ್ಲುವಾಗಿದ್ದುವು;

(3) ಪದದ ಮೊದಲಿಗೆ ಪಕಾರ ಇಲ್ಲವೇ ಮಕಾರ ಬಂದಿದೆಯಾದರೆ ವ್ಯಂಜನವಾಗಿ ಪ್, ಮ್ ಇಲ್ಲವೇ ವ್ ಮತ್ತು ಎರಡನೆಯ ಬಂದಿದೆಯಾದರೆ, ಅವುಗಳ ನಡುವೆ ಇ, ಈ, ಎ ಮತ್ತು ಏಗಳನ್ನು (ಎಂದರೆ ನಾಲಗೆಯ ಮುಂದಿನ ಬಾಗದ ಮೂಲಕ ಉಚ್ಚರಿಸುವ

‘ಮುಂದಿನ’ ಸ್ವರಗಳನ್ನು) ಬಿಟ್ಟು ಉಳಿದ ಸ್ವರಗಳು (ಎಂದರೆ ಉ, ಊ, ಒ, ಓ, ಅ ಮತ್ತು ಆ ಎಂಬ ‘ಹಿಂದಿನ’ ಸ್ವರಗಳು) ಮಾತ್ರ ಬರಬಲ್ಲುವಾಗಿದ್ದುವು.

ಮೂಲದ್ರಾವಿಡದ ಸ್ವರಗಳ ಬಳಕೆಯ ಕುರಿತಾಗಿ ಕಲ್ಪಿಸಿಕೊಂಡಿರುವ ಈ ನಿಯಮಗಳಲ್ಲಿ ಕೆಲವು ಕನ್ನಡದಲ್ಲಿ ಹಾಗೆಯೇ ಉಳಿದುಕೊಂಡಿವೆ; ಆದರೆ ಬೇರೆ ಕೆಲವು ಬದಲಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು.

ಪದಗಳ ಬೇರುಗಳಲ್ಲಿ

Eke →

2.2 ಬೇರಿನ ಸ್ವರಗಳು

ಮೂಲದ್ರಾವಿಡ ಮೊದಲನೆಯ ಉಲಿಕಂತೆಯಲ್ಲಿ) ಬಂದಿದ್ದ ಸ್ವರಗಳು ಕನ್ನಡದ ಹಲವು ಪದಗಳಲ್ಲಿ ಬದಲಾಗದೆ ಹಾಗೆಯೇ ಉಳಿದಿವೆ. ಈ ರೀತಿ ಅವು ಬದಲಾಗದೆ ಉಳಿದಿರುವುದಕ್ಕೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಮೂಲದ್ರಾವಿಡ *ಪುಲ್

ಕನ್ನಡ ಕಲ್ಲು ನಿಲ್ಲು ನೀರು ಹುಲ್ಲು

ಮೂಲದ್ರಾವಿಡ *ಕೇಳ್ *ಕೊಲ್ *ಕೋಲ್

ಕನ್ನಡ ಹೂ(ವು) ಗೆಯ್ಯು ಕೇಳು ಕೊಲ್ಲು ಕೋಲು

ಆದರೆ, ಕೆಲವು ಸಂದರ್ಬಗಳಲ್ಲಿ ಮೂಲದ್ರಾವಿಡ ಬೇರುಗಳಲ್ಲಿ ಬಂದಿದ್ದ ಈ ಸ್ವರಗಳು ಕನ್ನಡದ ಪದಗಳಲ್ಲಿ ಮತ್ತು ಪದರೂಪಗಳಲ್ಲಿ ಕೆಲವು ಬದಲಾವಣೆಗಳನ್ನು ತೋರಿಸುತ್ತವೆ. ಈ ಬದಲಾವಣೆಗಳ ಸ್ವರೂಪ ಎಂತಹದು ಮತ್ತು ಕನ್ನಡದ ಚರಿತ್ರೆಯಲ್ಲಿ ಅವು ಯಾವಾಗ ನಡೆದಿರಬೇಕು ಎಂಬುದನ್ನು ಈ ಅದ್ಯಾಯದಲ್ಲಿ ವಿವರವಾಗಿ ಪರಿಶೀಲಿಸಲಾಗುವುದು.

Eke →

2.2.1 ಮೇಲಿನ ಗಿಡ್ಡ ಸ್ವರಗಳು ನಡುವಿನ ಸ್ವರಗಳಾದುದು

ಕನ್ನಡ ಪದಗಳ ಬೇರಿನಲ್ಲಿರುವ (ಎಂದರೆ ಮೊದಲನೆಯ ಉಲಿಕಂತೆ ಯಲ್ಲಿರುವ) ನಡುವಿನ ಗಿಡ್ಡ ಸ್ವರಗಳು (ಎ ಮತ್ತು ಒ ಎಂಬವುಗಳು) ಮೂಲದ್ರಾವಿಡ ಬೇರುಗಳ ಎಕಾರ ಮತ್ತು ಒಕಾರಗಳಿಂದ ಬಂದಿರಬಹುದು ಇಲ್ಲವೇ ಇಕಾರ ಮತ್ತು ಉಕಾರಗಳಿಂದ ಬಂದಿರಬಹುದು.

ಅವು ಮೂಲದ್ರಾವಿಡ ಬೇರುಗಳ ಇಕಾರ ಮತ್ತು ಉಕಾರಗಳಿಂದ ಬಂದಿರುವುದಕ್ಕೆ ತೆಂಕುದ್ರಾವಿಡದಲ್ಲಿ ನಡೆದ ಒಂದು ಬದಲಾವಣೆಯೇ ಕಾರಣ. ಈ ಬದಲಾವಣೆಯ ಮೂಲಕ ಕೆಲವು ಸನ್ನಿವೇಶಗಳಲ್ಲಿ ಮೂಲದ್ರಾವಿಡದಲ್ಲಿದ್ದ ಎಕಾರ ಮತ್ತು ಇಕಾರಗಳ ನಡುವಿನ ವ್ಯತ್ಯಾಸ ಹಾಗೂ ಒಕಾರ ಮತ್ತು ಉಕಾರಗಳ ನಡುವಿನ ವ್ಯತ್ಯಾಸ - ಇವೆರಡೂ ಇಲ್ಲವಾಗಿದ್ದುವು.

ಆದರೆ ಈ ಬದಲಾವಣೆ ಯಾವ ಸನ್ನಿವೇಶಗಳಲ್ಲೆಲ್ಲ ನಡೆದಿತ್ತು ಎಂಬುದನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ವಿದ್ವಾಂಸರಿಗಿನ್ನೂ ಸಾದ್ಯವಾಗಿಲ್ಲ.
(1) ಈ ಬದಲಾವಣೆ ಮೂಲದ್ರಾವಿಡದಲ್ಲಿ ಗಿಡ್ಡ ಇ-ಎ, ಉ-ಒ ಸ್ವರಗಳಿದ್ದ ಮತ್ತು ಒಂದು ಒತ್ತೆ ವ್ಯಂಜನದಲ್ಲಿ ಕೊನೆಗೊಳ್ಳುತ್ತಿದ್ದ ಬೇರುಗಳಲ್ಲಿ ಮಾತ್ರ ನಡೆದಿದೆ. ಇಂತಹ ಬೇರುಗಳ ಅನಂತರ ಅಕಾರದಲ್ಲಿ ಮೊದಲಾಗುವ ಒಂದು ತೆಂಕುದ್ರಾವಿಡ ಪದದೊಟ್ಟು ನುಡಿಗಳಲ್ಲಿ (ಮತ್ತು ನಡುದ್ರಾವಿಡದ ತೆಲುಗು, ಕೂವಿಗಳಲ್ಲಿ) ಇ-ಎ ಮತ್ತು ಉ-ಒಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.

ಸೇರಿದಾಗ

ಕನ್ನಡದಲ್ಲಿ ಈ ಬದಲಾವಣೆಯ ಮೂಲಕ ಪದದ ಮೊದಲನೆಯ ಉಲಿ ಕಂತೆಯಲ್ಲಿದ್ದ (ಕ) ಇಕಾರ ಎಕಾರವಾಗಿದೆ ಮತ್ತು (ಚ) ಉಕಾರ ಒಕಾರವಾಗಿದೆ. ತೆಲುಗಿನಲ್ಲೂ ಇದೇ ರೀತಿ ನಡೆದಿದೆ.

ಆದರೆ ಹಳೇ ತಮಿಳಿನಲ್ಲಿ ಇದಕ್ಕೆ ವಿರುದ್ದವಾದ, ಎಂದರೆ (ಕ) ಎಕಾರ ಇಕಾರವಾಗುವ ಮತ್ತು (ಚ) ಒಕಾರ ಉಕಾರವಾಗುವ ಬದಲಾವಣೆ ಮೇಲಿನ ಸನ್ನಿವೇಶಗಳಲ್ಲಿ ನಡೆದಿತ್ತು; ಇವತ್ತಿನ ಬರಹದ ತಮಿಳಿನಲ್ಲೂ ಹೀಗೆಯೇ ಇದೆ. ಆದರೆ ಇವತ್ತಿನ ತಮಿಳು ಒಳನುಡಿಗಳಲ್ಲಿ, ಕನ್ನಡ-

ತೆಲುಗುಗಳ ಹಾಗೆ, ಮೇಲಿನ ಸನ್ನಿವೇಶಗಳಲ್ಲಿ ಎಕಾರ-ಒಕಾರಗಳೇ ಕಾಣಿಸುತ್ತವೆ.

ಕನ್ನಡ
(ಕ) ಎಳತು

ತೆಱ
ಬೆಳಗು

ಹೊಗೆ
ತೊಗಲು ಮೊದಲು ಹೊಗಳು

ತೆಲುಗು
ಚೆಲುಗು ತೆಱಚು
ಪೆನ ವೆಲುಗು

ಪೊಗ
ತೊವಲು ಮೊದಲು ಪೊಗಡು ಗೊಡುಗು

ತಮಿಳು
ವಿಳಂಗು

ಪುಕಯ್ ತುಕಲ್ ಮುತಲ್ ಪುಕೞ್ ಕುಟಯ್

(2) ಈ ರೀತಿ ಇಕಾರ ಮತ್ತು ಉಕಾರಗಳು ಬದಲಾಗಿರುವ ಪದ ಗಳಲ್ಲಿ ಮೂಲದ್ರಾವಿಡ ಸ್ವರ ಯಾವುದಿತ್ತು ಎಂಬುದನ್ನು ಎರಡನೆಯ ಉಲಿಕಂತೆಯಲ್ಲಿ (ಕ) ಅಕಾರದ ಬದಲು ಬೇರೆ ಸ್ವರಗಳಿರುವ ಇಲ್ಲವೇ ನಡುವೆ ಒತ್ತೆ ವ್ಯಂಜನದ ಬದಲು ಇಮ್ಮಡಿ (ಚ) ಅವುಗಳ ವ್ಯಂಜನವಿರುವ ಪದರೂಪಗಳಿಂದ ತಿಳಿಯಲು ಕನ್ನಡದವೇ ಆದ ಸಾದ್ಯವಿದೆ.

ಇಕಾರ ಎಕಾರವಾಗಿರುವುದು ನಿಲ್, ನಿಲ್ಲು ಇರ್ (ಇಬ್ಬರು)
ಬಿತ್ತು

ನೆಲಸು, ನೆಲೆ ಬೆದೆ‘‘ಬಿತ್ತನೆ’’

ತೆವರು’‘ಬೆಟ್ಟ’’ ತಿನ್, ತಿನಿಸು ’ತುರಿಕೆ’ ತೆನಸು’‘ತುರಿಕೆ’’

ಉಕಾರ ಒಕಾರವಾಗಿರುವುದು

ಸುಡು
ಮುಂದೆ
ಮುಳ್ಳು
ಕುಂದು (<ಕುನ್ಱು) ಸುಕ್ರು, ಸುಕ್ಕು

ಸೊಡರು’‘ದೀಪ’’ ಮೊನೆ ಮೊಳೆ ಕೊರತೆ ಸೊರಗು

ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಕನ್ನಡ ಪದಗಳ ಮೊದಲ ಉಲಿಕಂತೆಯಲ್ಲಿ ಇಕಾರ ಮತ್ತು ಉಕಾರಗಳಿವೆ ಮತ್ತು ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಕನ್ನಡದವೇ ಆದ ಪದಗಳ ಮತ್ತು ಒಕಾರಗಳಿವೆ. ಮೊದಲನೆಯ ಉಲಿಕಂತೆಯಲ್ಲಿ ಎಕಾರ ಇವುಗಳಲ್ಲೆಲ್ಲ ಮೂಲದ್ರಾವಿಡದಲ್ಲಿ ಇಕಾರ ಮತ್ತು ಉಕಾರಗಳೇ ಇದ್ದಿರಬೇಕು; ಎರಡನೆಯ ಉಲಿಕಂತೆಯಲ್ಲಿ ಬಂದಿರುವ ಅಕಾರದಿಂದಾಗಿ ಕಾಲಂನಲ್ಲಿರುವ ಪದಗಳಲ್ಲಿ ಎಕಾರ ಮತ್ತು ಇವು ಎರಡನೆಯ ಒಕಾರಗಳಾಗಿ ಬದಲಾಗಿವೆ.

ನೆಲೆ, ಬೆದೆ, ಮೊನೆ ಮತ್ತು ಮೊಳೆ ಪದಗಳ ಎರಡನೆಯ ಸ್ವರವಾಗಿ ಕನ್ನಡದಲ್ಲಿ ಎಕಾರ ಕಾಣಿಸುವುದಾದರೂ ಅದು ಮೂಲದ್ರಾವಿಡದ ಅಕಾರ ದಿಂದ (ಅಯ್ ಎಂಬುದರಿಂದ) ಬಂದಿದೆಯಾದ ಕಾರಣ (2.6.1 ನೋಡಿ), ಆ ಪದಗಳಲ್ಲಿ ಮೇಲಿನ ಬದಲಾವಣೆಯೇ ನಡೆದಿದೆ.

ತಿಪ್ಪೆ ಮತ್ತು ಮುಂದೆ ಪದಗಳಲ್ಲಿ ಇದೇ ಅಯ್ ಎಂಬುದರಿಂದ ಬಂದ ಎಕಾರ ಎರಡನೆಯ ಸ್ವರವಾಗಿ ಬಂದಿದೆಯಾದರೂ ಅದರ ಮೊದಲು ಎರಡು ವ್ಯಂಜನಗಳು ಬಂದಿರುವ ಕಾರಣ, ಆ ಪದಗಳಲ್ಲಿ ಮೇಲಿನ ಬದಲಾವಣೆ ನಡೆದಿಲ್ಲ.

ತಿನಿಸು ಮತ್ತು ಸುಡು ಪದಗಳಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನವಿದೆಯಾದರೂ, ಅವುಗಳ ಎರಡನೆಯ ಸ್ವರ ಅಕಾರ (ಇಲ್ಲವೇ ಎಕಾರ) ವಲ್ಲವಾದ ಕಾರಣ, ಮೇಲಿನ ಬದಲಾವಣೆ ನಡೆದಿಲ್ಲ.

(3) ಈ ಬದಲಾವಣೆಗೆ ಒಳಗಾಗದಿರುವ ಬೇರೆ ನುಡಿಗಳ ಪದ ಗಳಿಂದಲೂ ಮೂಲದ್ರಾವಿಡ ಪದಗಳಲ್ಲಿ ಯಾವ ಸ್ವರ ಇತ್ತು ಎಂಬುದನ್ನು ಊಹಿಸಲು ಸಾದ್ಯವಿದೆ.

(ಕ) ಇಕಾರ ಎಕಾರವಾಗಿರುವುದು

ಕನ್ನಡ
ಎಣೆ ‘ಜೋಡಿ’’

ಬದಲಾವಣೆಗೊಳಗಾಗದ ನುಡಿ ತುಳು: ಇರೆ ತುಳು: ಇಣೆ ಗೋಂಡಿ: ಕಿಲಾನಾ ಕೊಂಡ: ನಿಱಯ್

(ಚ) ಉಕಾರ ಒಕಾರವಾಗಿರುವುದು

ತೊಗಲು ಸೊರಗು ನೊಳೆ

ಕೊಂಡ: ಒಡೊಲ್ ತುಳು: ತುಗಲ್ ಕೊಂಡ: ಸೊಲು ಪಾಜ್ರಿ: ಚುಕ್್ರ- ಕುಡುಕ್: ನುಲ್್ಗನಾ

ಮೇಲೆ ಕೊಟ್ಟಿರುವ ಕನ್ನಡದ (ಕ) ಪದಗಳಲ್ಲಿ ಮೊದಲಿಗೆ ಇಕಾರ
ವಿದ್ದಿರಬೇಕು ಮತ್ತು (ಚ) ಪದಗಳಲ್ಲಿ ಉಕಾರವಿದ್ದಿರಬೇಕು ಎಂಬುದನ್ನು ಅವುಗಳ ಎದುರಿಗೆ ಕೊಟ್ಟಿರುವ (ಬ್ರಾಹ್ಮಣರ) ತುಳು, ಗೋಂಡಿ, ಕೊಂಡ, ಪಾಜ್ರಿ ಮತ್ತು ಕುಡುಕ್ ಪದಗಳಿಂದ ತಿಳಿಯಬಹುದು. ಯಾಕೆಂದರೆ, ಈ ನುಡಿಗಳಲ್ಲಿ ಮೇಲಿನ ಬದಲಾವಣೆ ನಡೆದಿಲ್ಲ. (ತುಳುವಿನ ಬ್ರಾಹ್ಮಣರ ಒಳನುಡಿಯಲ್ಲಿ ಈ ಬದಲಾವಣೆ ನಡೆದಿಲ್ಲ, ಆದರೆ ಅದರ ಇತರ ಒಳನುಡಿಗಳಲ್ಲಿ ನಡುವಿನ ಸ್ವರಗಳು ಮೇಲಿನ ಸ್ವರಗಳಾಗುವ ಇಲ್ಲವೇ

ಮೇಲಿನ ಸ್ವರಗಳು ನಡುವಿನ ಸ್ವರಗಳಾಗುವ ಬೇರೊಂದು ಬದಲಾವಣೆ ಇತ್ತೀಚೆಗೆ ನಡೆದಿದೆ (ಬಟ್ 1966 ನೋಡಿ)).

(4) ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಚಕಾರ ಬಂದಿದ್ದು, ಅದರ ಅನಂತರ ಬಂದಿದ್ದ ಇಕಾರ (ಮತ್ತು ಎಕಾರಗಳು) ಮೇಲಿನ ಬದಲಾವಣೆಗೆ ಒಳಗಾಗಿಲ್ಲವೆಂದು ತೋರುತ್ತದೆ. ಕನ್ನಡದಲ್ಲಿ ಇಕಾರ ಬದಲಾಗಿಲ್ಲದಿರುವುದಕ್ಕೆ ಉದಾಹರಣೆಯಾಗಿ ಪದಗಳನ್ನು ಕೊಡಬಹುದು.

ಕೆಳಗಿನ

ತೆಲುಗು

ಕನ್ನಡ
ಜಿಗಟು, ಚಿಕಣಿ
ಚಿಗರಿ, ಚಿಗರೆ ‘ಹುಲೆ’್ಲ’ ಸಿವಂಗಿ ‘ಕತ್ತೆಕಿರುಬ’’ ಚಿವರ ಚಿವರು ‘ಪರಚು’’

(5) ಮೇಲಿನ ಬದಲಾವಣೆ ನಡೆಯಲು ಎರಡನೆಯ ಉಲಿಕಂತೆಯಲ್ಲಿ ಬರುವ ಅಕಾರವು ಒಂದು ಪದದೊಟ್ಟಿನ ಅಕಾರವಾಗಿರುವ ಅವಶ್ಯಕತೆಯಿದೆ. ಅದು ಒಂದು ‘ಪದರೂಪ’ದೊಟ್ಟಿನ ಅಕಾರವಾಗಿರುವ ಸಂದರ್ಬಗಳಲ್ಲಿ ಈ ಬದಲಾವಣೆ ನಡೆದಿಲ್ಲ.

ಉದಾಹರಣೆಗಾಗಿ ಇರು ಕ್ರಿಯಾಪದದ ಪದರೂಪಗಳಾದ ಇರಲು, ಇರದೆ ಮೊದಲಾದ ರೂಪಗಳಲ್ಲಿ ಬಂದಿರುವ ಅಲು ಮತ್ತು ಅದೆ ಎಂಬವುಗಳು ಪದರೂಪದೊಟ್ಟುಗಳಾದ ಕಾರಣ, ಅವು ಅಕಾರದಲ್ಲಿ ಮೊದಲಾಗುವುವಾದರೂ ಅವುಗಳ ಮೊದಲಿದ್ದ ಇಕಾರ ಬದಲಾಗದೆ ಹಾಗೆಯೇ ಉಳಿದಿದೆ.

(6) ಕನ್ನಡದ ಚರಿತ್ರೆಯಲ್ಲಿ ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರ ಗಳಾಗುವ ಬೇರೊಂದು ಬದಲಾವಣೆಯೂ ನಡೆದಿದ್ದು (2.2.2 ನೋಡಿ),

ಅದನ್ನು ತೋರಿಸುವ ಪದಗಳನ್ನು ಮೇಲಿನ ಬದಲಾವಣೆಯನ್ನು ತೋರಿಸ ದಿರುವ ಪದಗಳಿಂದ ಬೇರೆ ಮಾಡಬೇಕಾಗುತ್ತದೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಉದಾಹರಣೆಗಾಗಿ, ಬಿಳಿ - ಬೆಳಕು, ಉಸಿರು ‘ಹೇಳು’’- ಒಸಗೆ ‘ಹೇಳುವಿಕೆ’ ಮೊದಲಾದ ಪದಜೋಡಿಗಳಲ್ಲಿ ಕಾಣಿಸುವ ವ್ಯತ್ಯಾಸಕ್ಕೆ ಈ ಬದಲಾವಣೆ ಕಾರಣವಲ್ಲ. ಯಾಕೆಂದರೆ ಇವುಗಳಲ್ಲಿ ಮೂಲದ್ರಾವಿಡದ ಎಕಾರ ಮತ್ತು ಒಕಾರಗಳು ಇಕಾರ ಮತ್ತು ಉಕಾರಗಳಾಗಿವೆಯಲ್ಲದೆ ಇಕಾರ ಮತ್ತು ಉಕಾರಗಳು ಎಕಾರ ಮತ್ತು ಒಕಾರಗಳಾಗಿಲ್ಲ.

(7) ಇದಲ್ಲದೆ, ಎರಡನೆಯ ಉಲಿಕಂತೆಯಲ್ಲಿದ್ದ ಸ್ವರಗಳಲ್ಲಿ ಹಲ ವಾರು ರೀತಿಯ ಬದಲಾವಣೆಗಳು ಕನ್ನಡದ ಚರಿತ್ರೆಯಲ್ಲಿ ನಡೆದಿದ್ದು, ಇದರಿಂದಾಗಿಯೂ ಹಲವು ಅಪವಾದಗಳಿವೆಯುಂದು ತೋರಬಹುದು.

ಕನ್ನಡದಲ್ಲಿ

ನಿಯಮಕ್ಕೆ

ಮೇಲಿನ

ಕನ್ನಡ

ರೂಪಗಳೂ

ಉದಾಹರಣೆಗಾಗಿ, ಎರಡನೆಯ ಉಲಿಕಂತೆಯ ಇಕಾರ-ಉಕಾರಗಳು ಅಕಾರವಾಗಿರುವಂತಹ ಪದಕೋಶಗಳಲ್ಲಿ ಕಾಣಿಸುತ್ತವೆ (ದಿಗಿಲು>ದಿಗಲು, ಇೞಿತ>ಇೞತ, ಉಳುಕು>ಉಳಕು, ತಿರುಳು> ತಿರಳು). ಆದರೆ ಈ ಬದಲಾವಣೆ (3.5 ನೋಡಿ) ಕನ್ನಡದ ಕೆಲವು ಒಳನುಡಿಗಳಲ್ಲಿ ಇತ್ತೀಚೆಗೆ ಎಂದರೆ ಮೇಲಿನ ಬದಲಾವಣೆ ನಡೆದ ಅನಂತರ ನಡೆದಿರಬೇಕು. ಹಾಗಾಗಿ, ನಿಜಕ್ಕೂ ಈ ಪದಗಳು ಮೇಲಿನ ಬದಲಾವಣೆಗೆ ಅಪವಾದಗಳಲ್ಲ.

Eke →

2.2.2 ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾದುದು

ನಡುವಿನ ಗಿಡ್ಡ ಸ್ವರಗಳಾದ ಎಕಾರ ಮತ್ತು ಒಕಾರಗಳು ಮೇಲಿನ ಸ್ವರ ಗಳಾಗಿ (ಎಂದರೆ ಅನುಕ್ರಮವಾಗಿ ಇಕಾರ ಮತ್ತು ಒಕಾರಗಳಾಗಿ) ಬದಲಾ ಗಿರುವುದನ್ನು ಒಳನಾಡಿನ ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಕಾಣಬಹುದು. ಕರಾವಳಿಯ ಒಳನುಡಿಗಳಲ್ಲಿ ಈ ಬದಲಾವಣೆ ನಡೆದಿಲ್ಲ.

ಸನ್ನಿವೇಶಗಳಲ್ಲಿ ಮಾತ್ರ

ಮೇಲೆ ವಿವರಿಸಿದ ಬದಲಾವಣೆಯ ಹಾಗೆ, ಈ ಬದಲಾವಣೆಯೂ ನಡೆದಿದೆ. ಅದಕ್ಕೆ ಅವಶ್ಯವಿದ್ದ ಕೆಲವು ಶರತ್ತುಗಳೆಂದರೆ, (ಕ) ಎರಡನೆಯ ಸ್ವರವಾಗಿ ಇಕಾರ ಇಲ್ಲವೇ ಉಕಾರ (ಮೇಲಿನ ಸ್ವರ) ಬಂದಿರಬೇಕು; ಮತ್ತು (ಚ) ಈ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿರಬೇಕು.

ಉದಾಹರಣೆಗಾಗಿ, ಬರಹ ಕನ್ನಡದ ಬಿಳಿ ಪದ ಅದಕ್ಕೆ ಹಿಂದಿನ *ಬೆಳಿ ಪದದಿಂದ ಬಂದಿದೆ. ಇಲ್ಲಿ ಎರಡನೆಯ ಸ್ವರವಾಗಿ ಇಕಾರ ಬಂದಿದೆ ಮತ್ತು ಪದದ ಎರಡು ಸ್ವರಗಳ ನಡುಗೆ ಳ್ ಎಂಬ ಒಂದೇ ವ್ಯಂಜನ ಬಂದಿದೆ.

ಬರಹ ಕನ್ನಡದಲ್ಲೇನೇ ಮೇಲಿನ ಶರತ್ತುಗಳನ್ನು ಪೂರಯ್ಸದಿರುವ ಪದಗಳಲ್ಲಿ ಇಲ್ಲವೇ ಪದರೂಪಗಳಲ್ಲಿ ಈ ಬದಲಾವಣೆ ನಡೆದಿಲ್ಲ. ಹಾಗಾಗಿ, ಕೆಲವು ಸಂದರ್ಬಗಳಲ್ಲಿ ಕನ್ನಡದಲ್ಲೇನೇ ಈ ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಎರಡೆರಡು ಪದ ಇಲ್ಲವೇ ಪದರೂಪಗಳಿರುವುದನ್ನು ಕಾಣಬಹುದು.

(ಕ) ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಪದಗಳು

ಬಿಳಿ, ಬಿಳುಪು
ಕಿವುಡು

ಉಸಿರು ‘ಹೇಳು’’ ತುಳಿಲು
ಕುಲಿ ‘ಕೊಲೆಗಾರ’’

ಬೆಳ್ಳಗೆ, ಬೆಳಕು ಬೆಚ್ಚಗೆ ಕೆಪ್ಪು ನೆಟ್ಟಗೆ

ಒಸಗೆ ‘ಹೇಳುವಿಕೆ’’ ತೊಟ್ಟು ತೊತ್ತು ಕೊಲ್ಲು

ಮೇಲೆ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳಲ್ಲಿ ಎಕಾರ ಇಕಾರವಾಗುವ ಇಲ್ಲವೇ ಒಕಾರ ಉಕಾರವಾಗುವ ಬದಲಾವಣೆ ನಡೆದಿಲ್ಲ. ಇದಕ್ಕೆ ಕಾರಣವೇನೆಂದರೆ (1) ಬೆಳಕು ಮತ್ತು ಒಸಗೆ ಪದಗಳಲ್ಲಿ

ಎರಡನೆಯ ಸ್ವರವಾಗಿ ಮೇಲಿನ ಸ್ವರ (ಇಕಾರ ಇಲ್ಲವೇ ಉಕಾರ) ಬಂದಿಲ್ಲ, ಅಕಾರ ಬಂದಿದೆ; (2) ಕೆಪ್ಪು, ತೊಟ್ಟು, ತೊತ್ತು ಮತ್ತು ಕೊಲ್ಲು ಪದಗಳಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿಲ್ಲ, ಒಂದಕ್ಕಿಂತ ಜಾಸ್ತಿ (ಎರಡು) ವ್ಯಂಜನಗಳು ಬಂದಿವೆ; ಮತ್ತು (3) ಬೆಳ್ಳಗೆ, ಬೆಚ್ಚಗೆ ಮತ್ತು ನೆಟ್ಟಗೆ ಪದಗಳಲ್ಲಿ ಈ ಎರಡು ಶರತ್ತುಗಳೂ ನೆರವೇರಿಲ್ಲ.

(ಚ) ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಪದರೂಪ ಗಳು

ಪುಗು
ಕುಡು

ಪೊಕ್ಕ

ಇಲ್ಲೂ ಕೂಡ, ಮೊದಲನೆಯ ಕಾಲಂನಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿದೆ, ಮತ್ತು ಎರಡನೆಯ ಕಾಲಂನಲ್ಲಿ ಎರಡು ವ್ಯಂಜನಗಳು (ಇಮ್ಮಡಿ ವ್ಯಂಜನ) ಬಂದಿವೆ; ಹಾಗಾಗಿ, ಮೊದಲನೆಯ ಕಾಲಂನಲ್ಲಿರುವ ಪದರೂಪಗಳಲ್ಲಿ ಮೇಲಿನ ಬದಲಾವಣೆ ನಡೆದಿದೆ; ಆದರೆ, ಎರಡನೆಯ ಕಾಲಂನಲ್ಲಿರುವ ಪದರೂಪಗಳಲ್ಲಿ ನಡೆದಿಲ್ಲ.

(1) ಕನ್ನಡದ ಚರಿತ್ರೆಯಲ್ಲಿ ಈ ಬದಲಾವಣೆ ಏಳು-ಎಂಟನೇ ಶತಮಾನದಲ್ಲಿ ನಡೆದಿರಬೇಕೆಂದು ಹೇಳುವುದಕ್ಕೆ ಶಾಸನಗಳ ಆದಾರವಿದೆ. ಆರು-ಏಳನೇ ಶತಮಾನದ ಶಾಸನಗಳಲ್ಲಿ ಕಾಣಿಸುವ ಕೊಡು, ಕೆಡು ಮತ್ತು ಪೆರಿಯ ಪದಗಳು ಅನಂತರದ ಶಾಸನಗಳಲ್ಲಿ ಕುಡು, ಕಿಡು ಮತ್ತು ಪಿರಿಯ ಎಂಬ ರೂಪದಲ್ಲಿವೆ. ಶಾಸನಗಳಲ್ಲಿ ಇದಲ್ಲದೆ, ಎಂಟು-ಒಂಬತ್ತನೆಯ ಇಂತಹ ಪದಗಳಿಗೆ ಈ ಬದಲಾವಣೆಯನ್ನು ತೋರಿಸುವ ರೂಪ ಮತ್ತು

ಶತಮಾನದ

ಅದನ್ನು ತೋರಿಸದಿರುವ ರೂಪ ಎಂಬುದಾಗಿ ಎರಡೆರಡು ರೂಪಗಳು ಕಾಣಿಸುತ್ತವೆ (ಗಾಯ್ 1946). ಎಂಟು-ಒಂಬತ್ತನೇ ಶತಮಾನದ ಶಾಸನಗಳು

ಬದಲಾಗಿರುವ ರೂಪ

ಬದಲಾಗದ ರೂಪ
ಎದಿರ್ ‘ಮುಂದೆ’’ ಎಱಿದು ‘ಚುಚ್ಚಿ’’ ಇಱಿದು ಕೆಡಿಸು ‘ಹಾಳು ಮಾಡು’’ಕಿಡಿಸು ಪೆರಿಯ ‘ದೊಡ್ಡ’’ ತೊಱು ‘ಹಸು’’
ತುಱು ಪೊಗು ‘ಹೊಗು’’ ಪುಗು

ಮೇಲೆ ಕೊಟ್ಟಿರುವ ಎರಡು ರೀತಿಯ (ಬದಲಾಗದ ಮತ್ತು ಬದಲಾ ಗಿರುವ) ರೂಪಗಳೂ ಎಂಟು-ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕಾಣಿಸುತ್ತವೆ.

(2) ಹಳೆಗನ್ನಡದಲ್ಲಿ ಈ ಬದಲಾವಣೆ ಬಹಳ ನಿಯಮಿತವಾಗಿ ನಡೆದಿರಬೇಕು; ಆದರೆ ಈ ನಿಯಮಿತತೆ ಹೊಸಗನ್ನಡದಲ್ಲಿ ಉಳಿದಿಲ್ಲ. ಅದಕ್ಕೆ ಅಪವಾದವಾಗಿ ಕಾಣಿಸುವ ಪದಗಳೂ ಹೊಸಗನ್ನಡದಲ್ಲಿವೆ. ಉದಾಹರಣೆಗಾಗಿ, ಹಳೆಗನ್ನಡದ ಹಲವು ಕ್ರಿಯಾಪದಗಳು ಇಕಾರ ಮತ್ತು ಒಕಾರಗಳನ್ನು ಅನುಸಾರವಾಗಿಯೇ ತೋರಿಸುತ್ತಿವೆಯಾದರೂ, ಹೊಸಗನ್ನಡದಲ್ಲಿ ಅವು ಎಕಾರ ಮತ್ತು ಒಕಾರಗಳನ್ನು ತೋರಿಸುತ್ತಿದ್ದು ಮೇಲಿನ ನಿಯಮಕ್ಕೆ ಅಪವಾದಗಳಾಗಿ ಕಾಣಿಸುತ್ತವೆ.

ನಿಯಮಕ್ಕೆ

ಮೇಲಿನ

ಹಳೆಗನ್ನಡ ಕುಡು
ಪುಗು

ಹೊಸಗನ್ನಡ ಕೊಡು
ಹೊಗು

ತುಡು

ತೊಡು

ಹೊಸಗನ್ನಡದಲ್ಲಿ ಈ ಕ್ರಿಯಾಪದಗಳು ಮೇಲಿನ ನಿಯಮಕ್ಕೆ ಅಪ ವಾದಗಳಾಗಿ ಬದಲಾಗಲು ಕಾರಣವೇನೆಂದರೆ, ಅವುಗಳಿಗಿರುವ ಹಿಂದಿನ ಸಮಯದ ರೂಪದಲ್ಲಿ ಎಕಾರ ಮತ್ತು ಒಕಾರಗಳು ಕಾಣಿಸುತ್ತವಲ್ಲದೆ, ಇಕಾರ ಮತ್ತು ಉಕಾರಗಳು ಕಾಣಿಸುವುದಿಲ್ಲ.

ಕ್ರಿಯಾಪದಗಳು
ಕುಡು
ಪುಗು
ತುಡು

ಹಿಂದಿನ ಸಮಯದ ರೂಪಗಳು ಪೊಕ್ಕ

ಮೇಲೆ ಕೊಟ್ಟಿರುವ ಹಿಂದಿನ ಸಮಯದ ಕ್ರಿಯಾರೂಪಗಳ ಮೊದಲ ನೆಯ ಉಲಿಕಂತೆಯಲ್ಲಿ ಇಕಾರ-ಉಕಾರಗಳು ಬರುವುದಕ್ಕೆ ಬೇಕಾಗುವ ಶರತ್ತುಗಳು (ಒತ್ತೆ ವ್ಯಂಜನ ಮತ್ತು ಅದರ ಅನಂತರ ಮೇಲಿನ ಸ್ವರ) ಇಲ್ಲದಿರುವುದೇ ಈ ರೀತಿ ಅವುಗಳಲ್ಲಿ ಮೇಲಿನ ಬದಲಾವಣೆ ನಡೆಯದಿರಲು ಕಾರಣ ಎಂಬುದನ್ನು ನಾವು ಮೇಲೆ ನೋಡಿರುವೆವು.

ಈ ಹಿಂದಿನ ಸಮಯದ ಕ್ರಿಯಾರೂಪಗಳ ಪ್ರಬಾವದಿಂದಾಗಿ ಕುಡು, ಕಿಡು, ಪುಗು ಮತ್ತು ತುಡು ಕ್ರಿಯಾಪದಗಳು ಹೊಸಗನ್ನಡದಲ್ಲಿ ಕೊಡು, ಕೆಡು, ಹೊಗು (<ಪೊಗು) ಮತ್ತು ತೊಡು ಎಂಬುದಾಗಿ ಬದಲಾಗಿವೆ.

ಹಿಂದಿನ ಸಮಯದ ರೂಪಗಳಲ್ಲಿ ಮೇಲಿನ ನಿಯಮಕ್ಕೆ ಬೇಕಾಗುವ ಶರತ್ತನ್ನು ಕಾಣಿಸುವಂತಹ ಕುಣಿ (ಕುಣಿದ), ತುಳಿ (ತುಳಿದ), ಸುಲಿ (ಸುಲಿದ) ಮೊದಲಾದ ಕ್ರಿಯಾಪದಗಳು ಮೇಲಿನ ಕ್ರಿಯಾಪದಗಳ ಹಾಗೆ ಹೊಸಗನ್ನಡದಲ್ಲಿ ಬದಲಾಗಿಲ್ಲ. ಅವುಗಳಲ್ಲಿದ್ದ ಮೇಲಿನ ಸ್ವರಗಳು (ಇಕಾರ-ಉಕಾರಗಳು) ನಡುವಿನ ಸ್ವರಗಳಾಗಿ ಬದಲಾಗದೆ ಹಾಗೆಯೇ ಉಳಿದುಕೊಂಡಿವೆ. ಈ ಕ್ರಿಯಾಪದಗಳ ಪದರೂಪಗಳಲ್ಲಿ ಹಿಂದಿನ ಮತ್ತು

ಮುಂದಿನ ಸಮಯದ ರೂಪಗಳ ನಡುವೆ ಮೊದಲನೆಯ ಸ್ವರದ ಮಟ್ಟಿಗೆ ಇಲ್ಲದಿರುವುದೇ ವ್ಯತ್ಯಾಸವೂ ಯಾವ ಬದಲಾಗದಿರುವುದಕ್ಕೆ ಕಾರಣವಿರಬೇಕು.

ಯಕಾರದಲ್ಲಿ

ಕೊನೆಗೊಳ್ಳುವ ಒಂದಕ್ಶರದ ಕ್ರಿಯಾಪದಗಳಲ್ಲೂ ನಡುವಿನ ಸ್ವರಗಳು ಮೇಲಿನ ಸ್ವರಗಳಾಗುವ ಮೇಲಿನ ಬದಲಾವಣೆ ಹಳೆಗನ್ನಡದಲ್ಲಿ ನಡೆದಿತ್ತು (ಆದರೆ ಈ ಬದಲಾವಣೆಗೆ ಒಕಾರ ಮಾತ್ರವೇ ಒಳಗಾಗಿರುವ ಹಾಗೆ ಕಾಣಿಸುತ್ತದೆ). ಇಂತಹ ಕ್ರಿಯಾಪದಗಳಲ್ಲೂ ಹೊಸಗನ್ನಡದಲ್ಲಿ ನಡುವಿನ ಸ್ವರಗಳೇ ಕಾಣಿಸುತ್ತವೆ.

ಹಳೆಗನ್ನಡ ಕುಯ್
ತುಯ್
ಪುಯ್

ಹೊಸಗನ್ನಡ ಕೊಯ್ಯು ತೊಯ್ಯು ಒಯ್ಯು
ಹೊಯ್ಯು

ಮೂಲದ್ರಾವಿಡ *ಕೊಯ್ *ತೋಯ್ *ಪೊಯ್

ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ನಡುವಿನ ಸ್ವರಗಳೇ ಕಾಣಿಸುತ್ತವೆಯಾದ ಕಾರಣ (ಎಂದರೆ, ಅಂತಹ ರೂಪಗಳಲ್ಲಿ ಈ ಬದಲಾವಣೆಗೆ ಬೇಕಾಗಿರುವ ಶರತ್ತುಗಳು ಇರಲಿಲ್ಲವಾದ ಕಾರಣ), ಕುಡು, ಕಿಡು, ತುಡು ಮೊದಲಾದ ಕ್ರಿಯಾಪದಗಳ ಹಾಗೆ ಅವುಗಳ ವಿಶಯದಲ್ಲೂ ಎರಡೆರಡು ತಪ್ಪಿಸುವುದಕ್ಕಾಗಿ ಹೊಸಗನ್ನಡದಲ್ಲಿ ಈ ಬದಲಾವಣೆ ಇಲ್ಲವಾಗಿರಬಹುದು.

ರೂಪಗಳಿರುವುದನ್ನು

ಹಳೆಗನ್ನಡ ತುಯ್-ತೊಯ್ದಂ ಕುಯ್-ಕೊಯ್ದಂ ಉಯ್-ಒಯ್ದಂ
ಪುಯ್-ಪೊಯ್ದಂ

ಹೊಸಗನ್ನಡ ತೊಯ್ಯು-ತೊಯ್ದ ಕೊಯ್ಯು-ಕೊಯ್ದ ಒಯ್ಯು-ಒಯ್ದ ಹೊಯ್ಯು-ಹೊಯ್ದ

(3) ಕರಾವಳಿಯ ಒಳನುಡಿಗಳಲ್ಲಿ ಈ ಬದಲಾವಣೆ ನಡೆದಿಲ್ಲವೆಂಬು ದನ್ನು ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ಪದಗಳನ್ನು ಬರಹ ಕನ್ನಡ ಪದ ಗಳೊಂದಿಗೆ ಹೋಲಿಸಿ ನೋಡುವುದರ ಮೂಲಕ ತಿಳಿದುಕೊಳ್ಳಬಹುದು.

 ಎಕಾರ ಇಕಾರವಾದುದು  ಹವ್ಯಕ ಕನ್ನಡ  ಎರುಗು  ಎದುರು  ಬೆಶಿಲು  ಬೆದುರು  ಸೆಡಿಲು 

ಬರಹ ಕನ್ನಡ ಇರುವೆ ಬಿಸಿಲು ಬಿದಿರು

ಒಕಾರ ಉಕಾರವಾದುದು ಹವ್ಯಕ ಕನ್ನಡ ಸೊಲಿ ತೊರಿಕ್ಕೆ

ಬರಹ ಕನ್ನಡ ಹುಡಿ, ಪುಡಿ ಸುಲಿ

ಕರಾವಳಿಯ ಇತರ ಒಳನುಡಿಗಳಲ್ಲೂ ಈ ಬದಲಾವಣೆ ನಡೆದಿಲ್ಲ. ಉದಾಹರಣೆಗಾಗಿ, ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ಎದುರು ‘ಇದಿರು’, ಕೆವಿ ‘ಕಿವಿ’, ಬೆಳಿ ‘ಬಿಳಿ’, ಹೆರಿ ‘ಹಿರಿಯ’, ಹೊರಿ ‘ಹುರಿ’, ಚೆಡ್ಲು ‘ಸಿಡಿಲು’, ತೊರಿ ‘ತುರಿಸು’ ಮೊದಲಾದ ಪದಗಳಿವೆ (ಆಚಾರ್ಯ 1967); ಸುಳ್ಯ-ಪುತ್ತೂರು ಗವ್ಡರ ಕನ್ನಡದಲ್ಲಿ ಎದ್ರ್ ‘ಇದಿರು’, ಕೆಬಿ ‘ಕಿವಿ’, ಹೊರಿ ‘ಹುರಿ’, ಬೆದ್ರ್ ‘ಬಿದಿರು’, ಕೊದಿ ‘ಕುದಿ’, ತೊಳಿ ‘ತುಳಿ’ ಮೊದಲಾದ ಪದಗಳಿವೆ (ಗವ್ಡ 1970).

ಆದರೆ ಬಡಗ

ಕನ್ನಡದಲ್ಲಿ ಈ ಬದಲಾವಣೆ

ನಡೆದಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಬಡಗ ಕನ್ನಡ ಪದಗಳನ್ನು ಗಮನಿಸಬಹುದು.

ಎಕಾರ ಇಕಾರವಾದುದು ಒಕಾರ ಉಕಾರವಾದುದು

ಇರುಪು ‘ಇರುವೆ’’ ಬಿಸಲು ‘ಬಿಸಿಲು’’ ಇದುರು ‘ಇದಿರು’’

ತುಡಿ ‘ತುಟಿ’’ ಹುಡಿ ‘ದೂಳು’’ ತುರಿ ‘ತುರಿಕೆ’’

(4) ಈ ಬದಲಾವಣೆ ನಡೆದ ಅನಂತರ ಕನ್ನಡದ ಕೆಲವು ಒಳನುಡಿ ಗಳಲ್ಲಿ ಬೇರೆ ಕೆಲವು ಬದಲಾವಣೆಗಳು ನಡೆದಿದ್ದು, ಅವುಗಳಿಂದಾಗಿ ಕೆಲವು ಪದಗಳು ಈ ನಿಯಮಕ್ಕೆ ಅಪವಾದಗಳಾಗಿರುವ ಹಾಗೆ ಕಾಣಿಸುತ್ತವೆ.

ಉದಾಹರಣೆಗಾಗಿ, ಮೂರು ಉಲಿಕಂತೆಗಳಿರುವ ಪದಗಳಲ್ಲಿ ಎರಡ ನೆಯ ಉಲಿಕಂತೆಯಲ್ಲಿ ಬರುವ ಮೇಲಿನ ಸ್ವರ ಕೆಲವು ಒಳನುಡಿಗಳಲ್ಲಿ ಕೆಳಗಿನ ಸ್ವರವಾಗಿ ಬದಲಾಗಿದೆ (3.5 ನೋಡಿ). ಆದರೆ, ಈ ಬದಲಾವಣೆ ಮೇಲಿನ ಬದಲಾವಣೆ ನಡೆದು ಹೋದ ಅನಂತರ ನಡೆದಿದೆಯಾದ ಕಾರಣ, ಅದರ ಮೂಲಕ ಬಂದಿರುವ ಕೆಳಗಿನ ಸ್ವರ ಮೇಲಿನ ನಿಯಮಕ್ಕೆ ಅಪವಾದವಾಗಿ ಕಾಣಿಸುತ್ತದೆ.

ಬರಹದ ಕನ್ನಡ

ಹವ್ಯಕ

ಮೇಲಿನ ಸ್ವರ ಬಿದಿರು
ಬಿಸಿಲು
ಇಱುವೆ
ತುಱಿಸು

ಕೆಳಗಿನ ಸ್ವರ ಬಿದರು
ಬಿಸಲು
ತುಱಸು

ಬೆದುರು ಬೆಶಿಲು ಎರುಗು ತೊರುಸು

ಮೇಲೆ ಕೊಟ್ಟಿರುವ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಎಕಾರ ಇಲ್ಲವೇ ಒಕಾರವಿತ್ತೆಂಬುದನ್ನು ಹವ್ಯಕದ ರೂಪಗಳು ತಿಳಿಸುತ್ತವೆ. ಈ ಸ್ವರದ ಅನಂತರ ಎರಡನೆಯ ಉಲಿಕಂತೆಯಲ್ಲಿ ಇಕಾರ ಇಲ್ಲವೇ ಉಕಾರ

ಇದ್ದುದರಿಂದಾಗಿ ಮೊದಲನೆಯ ಕಾಲಂನ ಪದಗಳು ಸೂಚಿಸುವ ಹಾಗೆ ಮೊದಲನೆಯ ಉಲಿಕಂತೆಯ ಎಕಾರ-ಒಕಾರಗಳು ಬರಹ ಕನ್ನಡದಲ್ಲಿ ಇಕಾರ-ಉಕಾರಗಳಾಗಿವೆ.

ಎರಡನೆಯ ಕಾಲಂನಲ್ಲಿ ಕಾಣಿಸುವ ಎರಡನೇ ಉಲಿಕಂತೆಯ ಅಕಾರ ಮೇಲಿನ ಬದಲಾವಣೆ ನಡೆದ ಮೇಲೆ ಇಕಾರ-ಉಕಾರಗಳು ಅಕಾರವಾದು ದರಿಂದಾಗಿ ಸಿದ್ದವಾಗಿವೆ. ಹಾಗಾಗಿ ಇವು ಮೇಲಿನ ನಿಯಮಕ್ಕೆ ಅಪವಾದ ಗಳಲ್ಲ.

Eke →

2.2.3 ಎಕಾರ, ಒಕಾರಗಳು ಯ ಮತ್ತು ವಗಳಾದುದು

ಪದಗಳ ಮೊದಲಿಗೆ ಬರುವ ಎಕಾರ ಮತ್ತು ಒಕಾರಗಳು ಕನ್ನಡದ ಹಲವಾರು ಇವತ್ತಿನ ಒಳನುಡಿಗಳಲ್ಲಿ ಯ ಮತ್ತು ವಗಳಾಗಿ ಬದಲಾಗಿವೆ. ಆದರೆ, ಕರಾವಳಿಯ ಒಳನುಡಿಗಳಲ್ಲಿ ಮತ್ತು ಬರಹ ಕನ್ನಡದಲ್ಲಿ ಈ ಎರಡು ಬದಲಾವಣೆಗಳು ನಡೆದಿಲ್ಲ.

ಒಳನಾಡಿನ ಬಡಗು ಒಳನುಡಿಗಳಲ್ಲಿ ಈ ಎರಡು ರೀತಿಯ ಬದಲಾ ವಣೆಗಳೂ ನಿಯಮಿತವಾಗಿ ನಡೆದಿವೆ. ಆದರೆ ತೆಂಕು ಒಳನುಡಿಗಳಲ್ಲಿ ಒಕಾರ ವ ಎಂದಾಗುವ ಬದಲಾವಣೆ ನಿಯಮಿತವಾಗಿ ನಡೆದಿದೆಯಾದರೂ, ಎಕಾರ ಯ ಎಂದಾಗುವ ಬದಲಾವಣೆ ಅಶ್ಟೊಂದು ನಿಯಮಿತವಾಗಿ ನಡೆದಿಲ್ಲ. ಅದರಲ್ಲೂ ಎರಡನೆಯ ಉಲಿಕಂತೆಯಲ್ಲಿ ಮೇಲಿನ (ಇ, ಉ) ಸ್ವರವಿರುವಲ್ಲಿ ಈ ಎರಡನೆಯ (ಎ>ಯ) ಬದಲಾವಣೆ ನಡೆದಿರುವುದು ಅಪರೂಪವೆಂದೇ ಹೇಳಬಹುದು.

(ಕ) ಎಕಾರ ಯ ಎಂದಾಗುವುದು (ನಡುಸ್ವರ ಇಲ್ಲವೇ ಕೆಳಸ್ವರ ಅನಂತರ ಬಂದಿರುವಲ್ಲಿ)

ಬರಹ

ಮಯ್ಸೂರು ಯಲೆ
ಯಲ್ಲ

ಗುಲ್ಬಗ್ರ ಯಲ್ಲ

(ಚ) ಎಕಾರ ಯ ಎಂದಾಗುವುದು (ಮೇಲಿನ ಸ್ವರ ಅನಂತರ ಬಂದಿರುವಲ್ಲಿ)

ಬರಹ

ಮಯ್ಸೂರು

ಗುಲ್ಬಗ್ರ ಯತ್ತ

(ಟ) ಒಕಾರ ವ ಎಂದಾಗುವುದು

ಬರಹ
ಒಪ್ಪು

ಮಯ್ಸೂರು ವಳ್ಗೆ ವಪ್ಪು
ವಣ್ಗು

ಗುಲ್ಬಗ್ರ ವಳ್ಗ ವಪ್ಪು ವಣ್ಗು

ಕೆಲವು ಪದಗಳಲ್ಲಿ ಅವುಗಳ ಮೊದಲಿನ ಉದ್ದ ಏ ಮತ್ತು ಓ ವಾ ಎಂದಾಗುವ)

ಮತ್ತು

ಸ್ವರಗಳೂ ಇಂತಹದೇ ಬದಲಾವಣೆಗೊಳಗಾಗಿವೆ.

ಬರಹ

ಮಯ್ಸೂರು ವಾಲೆ
ಯಾಲಕ್ಕಿ

ಗುಲ್ಬರ್ಗ

ಪದಗಳ ಮೊದಲಲ್ಲಿದ್ದ ಹಕಾರ ಬಿದ್ದು ಹೋಗಿರುವ ಕೆಲವು ಪದಗಳಲ್ಲೂ (3.2.2 ನೋಡಿ) ಎಕಾರ ಮತ್ತು ಒಕಾರಗಳು ಇಂತಹದೇ ಬದಲಾವಣೆಗೊಳಗಾಗಿರುವುದನ್ನು ಕೊಟ್ಟಿರುವ ಮಯ್ಸೂರಿನ ಪದಗಳಲ್ಲಿ ಕಾಣಬಹುದು. ಇದಲ್ಲದೆ, ಗುಲ್ಬರ್ಗ ಕನ್ನಡದಲ್ಲಿ ಹಕಾರ ಬದಲಾವಣೆ ಉಳಿದಿದ್ದರೂ ನಡೆದಿದೆಯೆಂಬುದನ್ನೂ ಕೆಳಗಿನ ಉದಾಹರಣೆಗಳಲ್ಲಿ ನೋಡಬಹುದು (ಉಪಾದ್ಯಾಯ 1976).

ಪದಗಳಲ್ಲಿ

ಕೆಲವು

ಕೆಳಗೆ

ಬರಹ
ಹೊಕ್ಕುಳು ಹೊಟ್ಟೆ
ಹೊಲ
ಹೊಸತು ಹೋಗು ಹೋತ

ಮಯ್ಸೂರು ವಕ್ಕ್ಳು
ವಟ್ಟೆ
ವಸ್ತು
ವಾಗು

ಗುಲ್ಬರ್ಗ ಹೊಂಕ್ಳ ಹ್ವಟ್ಟಿ ಹ್ವಲ ಹೊಸ ಹೋಗು ಹೋತ

Eke →

2.2.4 ನಡುವಿನ ಸ್ವರಗಳು ಕೆಳಗಿನ ಸ್ವರಗಳಾದುದು

ಮಡಿಕೇರಿಯ ಜೇನುಕುರುಬ ಒಳನುಡಿಯಲ್ಲಿ ಪದಗಳ ಮೊದಲಿಗೆ ಬರುವ ಮಕಾರದ ಅನಂತರ ಒಕಾರ ಅಕಾರವಾಗಿದೆ ಮತ್ತು ಪದಗಳ ಮೊದಲಿಗೆ ಬರುವ ನಕಾರದ ಅನಂತರ ಎಕಾರ ಅಕಾರವಾಗಿದೆ (ಉಪಾದ್ಯಾಯ

ಬರಹ ಜೇನುಕುರುಬ ಬರಹ ಜೇನುಕುರುಬ ಮೊಲ ಮಲ
ಮೊನ್ನೆ ಮನ್ನೆ
ಮೊಟ್ಟೆ ಮಟ್ಟೆ

ನೆರಳು ನಳ್ಳು ನೆನೆ

ಇದಲ್ಲದೆ, ಜೇನುಕುರುಬ ಒಳನುಡಿಯಲ್ಲಿ ಎ ಮತ್ತು ಏ ಎಂಬ ಈ ಎರಡು ಸ್ವರಗಳ ಅನಂತರ ಮಡಚಿದ ವ್ಯಂಜನವೊಂದು ಬಂದಿರುವಲ್ಲೆಲ್ಲ ಅವು (ಎ ಮತ್ತು ಏ ಸ್ವರಗಳು) ಅ ಮತ್ತು ಆ ಸ್ವರಗಳಾಗಿ ಬದಲಾಗಿವೆ.

ಬರಹ ಜೇನುಕುರುಬ ಬರಹ ಜೇನುಕುರುಬ ಕೆಳಗೆ ಕಳಗೆ
ಎಣ್ಣೆ ಅಣ್ಣೆ

ಬೇಡ ಬಾಡ ಕೇಳು ಕಾಳು

ಬಳ್ಳಾರಿಯ ಕನ್ನಡ ಒಳನುಡಿಯಲ್ಲೂ ಮಕಾರದ ಅನಂತರ ಇಂತಹದೇ ಬದಲಾವಣೆ ನಡೆದಿದೆ. ಆ ಒಳನುಡಿಯಲ್ಲಿ ಮಕಾರದ ಅನಂತರ ಒಕಾರ ಅಕಾರವಾಗಿದೆ ಮಾತ್ರವಲ್ಲ, ಓ ಸ್ವರ ಆ ಸ್ವರವಾಗಿ ಬದಲಾಗಿದೆ (ಉಪಾ ದ್ಯಾಯ 1976).

ಬರಹ ಕನ್ನಡ ಬಳ್ಳಾರಿ ಕನ್ನಡ ಮೊಗ್ಗೆ
ಮೊಳಕೆ
ಮೊಲ
ಮೊಸಳೆ

ಮಗ್ಗೆ ಮಳಿಕೆ ಮಲ ಮಸುಳೆ

ಮೋಡ
ಮೋಸ

ಮಾಡ ಮಾಸ

Eke →

2.2.5 ಅಕಾರ ಎಕಾರವಾದುದು

(1) ಪದಗಳ ಮೊದಲಲ್ಲಿ ಬರುವ ಚಕಾರದ ಅನಂತರ ಗಿಡ್ಡ ಅಕಾರ ಮತ್ತು ಗಿಡ್ಡ ಎಕಾರಗಳ ನಡುವಿನ ವ್ಯತ್ಯಾಸ ಹಲವು ಕನ್ನಡ ಪದಗಳಲ್ಲಿ ಇಲ್ಲವಾಗಿದೆ. ಇದು ಕನ್ನಡದ ಕೆಲವು ಒಳನುಡಿಗಳಲ್ಲಿ ನಿಯಮಿತವಾಗಿ ನಡೆದ ಬದಲಾವಣೆಯಿರಬಹುದು.

ತಮಿಳಿನಲ್ಲಿ ಚಕಾರದ ಅನಂತರದ ಅಕಾರ ಮತ್ತು ಎಕಾರಗಳು ಈ ರೀತಿ ಬದಲಾಗಿಲ್ಲವಾದ ಕಾರಣ, ಕನ್ನಡದ ಪದಗಳನ್ನು ಕೆಳಗೆ ಕೊಟ್ಟಿರುವ ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ ಮೂಲ ಸ್ವರ ಎಂತಹದೆಂಬ ವಿಶಯ ಸ್ಪಶ್ಟವಾಗುತ್ತದೆ.

ಮೂಲದ್ರಾವಿಡ ಅಕಾರ

ತಮಿಳು ಕನ್ನಡ ಚಲ್ಲು, ಚೆಲ್ಲು ಚಲ್ಲು ಚಂದ, ಚೆಂದ ಚಂತಮ್ ಚಟ್ಟಿ, ಚೆಟ್ಟಿ

ಮೂಲದ್ರಾವಿಡ ಎಕಾರ ತಮಿಳು ಚಕ್ಕಯ್ ಚಣ್ಟಯ್

ಕನ್ನಡ ಚಕ್ಕೆ, ಚೆಕ್ಕೆ ಚಂಡೆ, ಚೆಂಡೆ ಚಂಬು, ಚೆಂಬು ಚೆಮ್ಪು

ಕರಾವಳಿಯ ಹವ್ಯಕ ಕನ್ನಡದಲ್ಲಿ ಚಕಾರದ ಅನಂತರ ಮಾತ್ರವಲ್ಲದೆ ಜಕಾರ ಮತ್ತು ಗಕಾರಗಳ ಅನಂತರವೂ ಹಲವು ಪದಗಳಲ್ಲಿ ಅಕಾರ ಎಕಾರ ವಾಗಿದೆ.

ಬರಹ ಕನ್ನಡ

ಹವ್ಯಕ ಕನ್ನಡ

(ಕ) ಜರಿ ‘ಜರಿದು ಬೀಳು’’ ಜೆರಿ

ಜಡಿ (ಮಳೆ)

(2) ಮೂಲದ್ರಾವಿಡದ ಅಕಾರ ನಕಾರದ ಅನಂತರ ಅನಿಯಮಿತವಾಗಿ

ಎಕಾರವಾಗಿರುವುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಕನ್ನಡ
ನಕ್ಕು, ನೆಕ್ಕು ನಚ್ಚು, ನೆಚ್ಚು
ನಡು, ನೆಡು ನಂಟು, ನೆಂಟು
ನಂಬು, ನೆಮ್ಮು
ನನೆ, ನೆನೆ

ತಮಿಳು ನಕ್ಕು ನಚ್ಚು ನಡು ನಣ್ಟು ನಮ್ಪು ನನಯ್

Eke →

2.3 ಸ್ವರದ ಉದ್ದದಲ್ಲಿ ಬದಲಾವಣೆಗಳು

ಕನ್ನಡದ ಕೆಲವು ಪದಗಳಿಗೆ ಮೊದಲನೆಯ ಉಲಿಕಂತೆಯಲ್ಲಿ ಉದ್ದಸ್ವರ ವಿರುವ ರೂಪ ಮತ್ತು ಗಿಡ್ಡಸ್ವರವಿರುವ ರೂಪ ಎಂಬುದಾಗಿ ಎರಡೆರಡು ರೂಪಗಳಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದವೇ ಆದ ಪದಗಳನ್ನು ಗಮನಿಸಬಹುದು.

ಉದ್ದ ಸ್ವರವಿರುವ ರೂಪ ಗಿಡ್ಡಸ್ವರವಿರುವ ರೂಪ

ನೀನು
ನೇಯು
ಕೇಡು
ಬಾಳು
ಹಾಳು
ಕೇರು

ತಿನ್ನು ನಿನ್ನ ನೆಯ್ಗು ಕೆಡುಕು ಬದುಕು ಹಳತು ಗೆರಸೆ

ಕನ್ನಡ ಪದಗಳಲ್ಲಿ ಕಾಣಿಸುವ ಸ್ವರಗಳ ಈ ಉದ್ದ-ಗಿಡ್ಡ ವ್ಯತ್ಯಾಸಕ್ಕೆ ಎರಡು ಕಾರಣಗಳಿವೆ. ಅಂತಹ ವ್ಯತ್ಯಾಸ ಮೂಲದ್ರಾವಿಡ ಪದಗಳಲ್ಲೇ ಇದ್ದುದು ಒಂದು ಕಾರಣ (2.3.1 ನೋಡಿ) ಮತ್ತು ಮೂಲದ್ರಾವಿಡ ಪದ ನಡೆದ ಕನ್ನಡದ ಗಳಲ್ಲಿ ಬದಲಾವಣೆಗಳಿಂದಾಗಿ ಅಂತಹ ಮೂಡಿಬಂದಿರುವುದು ಇನ್ನೊಂದು ಕಾರಣ (2.3.2).

ಇಲ್ಲದಿದ್ದಲ್ಲೂ

ಚರಿತ್ರೆಯಲ್ಲಿ

ವ್ಯತ್ಯಾಸ

Eke →

2.3.1 ಮೂಲದ್ರಾವಿಡದಲ್ಲಿದ್ದ ವ್ಯತ್ಯಾಸ

ಮೂಲದ್ರಾವಿಡದಲ್ಲಿ ಉದ್ದಸ್ವರವಿರುವ ಬೇರು ಮತ್ತು ಗಿಡ್ಡಸ್ವರವಿರುವ ಬೇರು ಎಂಬುದಾಗಿ ಎರಡು ರೀತಿಯ ಬೇರುಗಳಿದ್ದುವು. ಉದಾಹರಣೆಗಾಗಿ, ಮೂಲದ್ರಾವಿಡಕ್ಕೆ ಕಲ್ಪಿಸಲಾಗಿರುವ ಕೆಳಗೆ ಕೊಟ್ಟಿರುವ ಬೇರುಗಳನ್ನು ಗಮನಿಸಬಹುದು.

ಉದ್ದಸ್ವರದ ಬೇರು *ಆರ್ ‘ಅರಚು’’
*ಕಾರ್ ‘ಕಾರವಾಗಿರು’’
*ತಾೞ್ ‘ತಗ್ಗು’’ *ನೂಱ್ ‘ಜಜ್ಜು, ನುರಿ’’
*ಪಾಱ್ ‘ಓಡು, ಹಾರು’’ *ನಾನ್ ‘ಒದ್ದೆಯಾಗು’’

ಗಿಡ್ಡಸ್ವರದ ಬೇರು *ಕಳ್ ‘ಕಳ್ಳು’’ *ತಳ್ ‘ತಡೆ’’ *ನಿಲ್ ‘ನಿಲ್ಲು’’ *ಪರಿ ‘ಹರಿ’’ *ಮಿನ್ ‘ಹೊಳೆ’’

(1) ಇವುಗಳಲ್ಲಿ ಉದ್ದಸ್ವರವಿರುವ ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ, ಆ ಬೇರುಗಳ ಉದ್ದಸ್ವರ ಗಿಡ್ಡವಾಗುವು ದೆಂಬ ನಿಯಮವೊಂದನ್ನು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ. ಈ ನಿಯಮದ ಪರಿಣಾಮವನ್ನು ಕೆಳಗೆ ಕೊಟ್ಟಿರುವ ಕನ್ನಡ ಪದಗಳಲ್ಲಿ ಕಾಣ ಬಹುದು.

ಗಿಡ್ಡಸ್ವರದ ರೂಪ ನನೆ ‘ಒದ್ದೆಯಾಗು’’ ನೆರೆ ‘ಒಟ್ಟು ಸೇರು’’ ನೆಱ’‘ನೇತುಹಾಕು’’ ತಳೆ ‘ತಾಳು’ ನುಲಿ ‘ತಿರುಪು’’ ನುಱಿ ‘ಪುಡಿಮಾಡು’’

ಉದ್ದಸ್ವರದ ರೂಪ ನಾನ್ ‘ಒದ್ದೆಮಾಡು’’
ನೇರ್ ‘ಒಪ್ಪು’’
ನೇಱು ‘ನೇತಾಡು’’ ತಾಳ್ ‘ತಾಳ್ಮೆಯಿಂದಿರು’’
ನೂಲ್ ‘ನೂಲು ಮಾಡು’’ ನೂಱು ‘ಜಜ್ಜು’’
ಮೀಟು ‘ತಂತಿಯನ್ನು ಮಿಡಿ’’ ಮಿಡಿ ‘ಸಿಡಿಸು’ ಪಾರ್ ‘ಓಡು’’
ಕೂನ್ ‘ಬಾಗು, ಕುಸಿ’’
ಬೀಸು ‘ಎಸೆ’’

ಪರಿ ‘ಓಡು’ ಕುನಿ ‘ಬಾಗು’’ ಬಿಸುಡು ‘ಎಸೆ’’

ಚೀವು ‘ಕೆತ್ತು’’
ಚಿವುಟು
ನೂಱು ‘ಜಜ್ಜು’’
ನುಱುಗು ‘ಜಜ್ಜು’’ ಕೀಱು, ಚೀಱು ‘ಅಂಜಿ ಕೂಗು’’ ಕಿಱುಚು ‘ಕೂಗು’’

ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳು ಮೂಲ ಪದಗಳು; ಅವುಗಳಲ್ಲೆಲ್ಲ ಮೊದಲನೆಯ ಉಲಿಕಂತೆಯಲ್ಲಿ (ಬೇರಿನಲ್ಲಿ) ಉದ್ದ ಸ್ವರವಿದೆ. ಈ ಪದಗಳೆಲ್ಲ ಒಂದು ಉಲಿಕಂತೆಯ ಪದಗಳು ಇಲ್ಲವೇ ಉಚ್ಚಾರಣೆಗಾಗಿ ಸೇರಿಸಿರುವ ಉಕಾರದಲ್ಲಿ ಕೊನೆಗೊಳ್ಳುವ ಪದಗಳು.

ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳನ್ನು ಎ (<*ಅಯ್), ಇ, ಉಡು, ಉಟು, ಉಗು, ಉಚು ಎಂಬ ಸ್ವರದಲ್ಲಿ ಮೊದಲಾಗುವ ಒಟ್ಟುಗಳನ್ನು ಸೇರಿಸಿ ರಚಿಸಲಾಗಿದ್ದು, ಅವುಗಳ ಮೊದಲನೆಯ ಉಲಿಕಂತೆ ಯಲ್ಲಿದ್ದ ಉದ್ದ ಸ್ವರಗಳು ಗಿಡ್ಡ ಸ್ವರಗಳಾಗಿ ಬದಲಾಗಿವೆ.

ಬೇರಾಗಿರುವ

ನುಡಿಗಳಲ್ಲಿ ಅದಕ್ಕಿಂತ

ಕನ್ನಡ ಕ್ರಿಯಾಪದಗಳಲ್ಲಿ ಗಿಡ್ಡ ಇಲ್ಲವೇ ಉದ್ದ ಸ್ವರವಿದ್ದು ಬೇರೆ ದ್ರಾವಿಡ ಸ್ವರವಿರುವ ಉದಾಹರಣೆಗಳೂ ಹಲವಿವೆ. ಇವುಗಳಲ್ಲಿ ಕಾಣಿಸುವ ವ್ಯತ್ಯಾಸಕ್ಕೂ ಮೇಲಿನ ಬದಲಾವಣೆಯೇ ಕಾರಣ. ಅಂತಹ ಪದಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ.
ಇವುಗಳಲ್ಲಿ (ಕ) ವಿಬಾಗದಲ್ಲಿ ಬಂದವುಗಳು ಕನ್ನಡದಲ್ಲಿ ಬದಲಾಗಿವೆ ಮತ್ತು (ಚ) ವಿಬಾಗದಲ್ಲಿ ಬಂದವುಗಳು ಬೇರೆ ದ್ರಾವಿಡ ನುಡಿಯಲ್ಲಿ (ತಮಿಳಿನಲ್ಲಿ) ಬದಲಾಗಿವೆ ಎಂಬುದನ್ನು ಗಮನಿಸಬಹುದು.

ಬೇರೆ ದ್ರಾವಿಡ ನುಡಿಗಳು ತೆಲುಗು: ಪಾಱು

ಕನ್ನಡ
ಪರಡು, ಹರಡು
ಮುಸುಱು ‘ಮುಚ್ಚು’’ ತಮಿಳು: ಮೂಚು ‘ಸುತ್ತುವರಿ’’ ಸೆಡೆ ‘ಸೆಟೆದುಕೊಳ್ಳು’’ ಕೋಲಾಮಿ: ಸೀಡ್ ’

(ಚ) ಆರ್ ‘ಬೊಬ್ಬಿರಿ’’

ತಮಿಳು: ಅರಱ್ಱು ‘ಹಲುಬು’’

ಪೋರ್ ‘ಹೋರಾಡು’’ ತಮಿಳು: ಪೊರುತು ಪಾಱ್ ‘ಹಾರು’’

ತಮಿಳು: ಪಱ

ಮೇಲೆ

ಕೊಟ್ಟಿರುವ ಉದಾಹರಣೆಗಳಲ್ಲೆಲ್ಲ ಒಂದು ಕ್ರಿಯಾಪದದಿಂದ ಬೇರೊಂದು ಕ್ರಿಯಾಪದವನ್ನು ತಯಾರಿಸಲಾಗಿದೆ. ಇದಲ್ಲದೆ ಎಣಿಕೆಯ ಪದಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ; ‘ನಾಲ್ಕು’, ಆಱ್ ‘ಆರು’’ಮತ್ತು ಏೞ್ ‘ಏಳು’ ಎಂಬ ಎಣಿಕೆಯ ಪದಗಳಲ್ಲಿ ಕಾಣಿಸುವ ಉದ್ದ ಸ್ವರ ಅವುಗಳ ಅನಂತರ ಉ ಒಟ್ಟು ಬಂದಾಗ ಗಿಡ್ಡ ಸ್ವರವಾಗಿ ಬದಲಾಗುತ್ತದೆ.

‘ಎರಡು’, ನಾಲ್

ಸಾಮಾನ್ಯವಾಗಿ, ಈ ಎಣಿಕೆಯ ಪದಗಳು ಒಂದು ವ್ಯಂಜನದಲ್ಲಿ ಮೊದಲಾಗುವ ಪದಗಳ ಮೊದಲು ಇಂತಹ ಉ ಒಟ್ಟು ಸೇರಿರುವ ರೂಪದಲ್ಲಿ ಬರುತ್ತವೆ ಮತ್ತು ಸ್ವರದಲ್ಲಿ ಮೊದಲಾಗುವ ಪದಗಳ ಮೊದಲು ಹಾಗೆಯೇ ಯಾವ ಒಟ್ಟೂ ಸೇರದೆ ಬರುತ್ತವೆ.

ಒಟ್ಟಿಲ್ಲದ ಬಳಕೆ ಒಟ್ಟಿನೊಂದಿಗೆ ಬಳಕೆ ಓರೊರ್ವ ‘ಒಬ್ಬೊಬ್ಬ’’ ಒರ್ನುಡಿ ‘ಒಂದು ಮಾತು’’ ಇರುವಾಯಿ ‘ಎರಡು ಬಾಯಿ’’ ಈರಡಿ ‘ಎರಡು ಅಡಿ’’ ಆಱಾಳು ‘ಆರು ಆಳು’’ ಅಱುದಿಂಗಳ್ ‘ಆರು ತಿಂಗಳು’’ ಏೞಡಿ ‘ಏಳು ಅಡಿ’’

ಎೞ್ಪತ್ತು ‘ಏಳು ಹತ್ತು, ಎಪ್ಪತ್ತು’’

ಮೇಲೆ ಮೊದಲನೆಯ ಕಾಲಂನಲ್ಲಿ ಬಂದಿರುವ ಎಣಿಕೆಯ ಪದಗಳ ಅನಂತರ ಸ್ವರದಲ್ಲಿ ಮೊದಲಾಗುವ ಒರ್ವ, ಅಡಿ ಮತ್ತು ಆಳು ಪದಗಳು ಬಂದಿವೆ ಮತ್ತು ಎರಡನೆಯ ಕಾಲಂನಲ್ಲಿ ಬಂದಿರುವ ಎಣಿಕೆಯ ಪದಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ನುಡಿ, ವಾಯಿ ‘ಬಾಯಿ’, ತಿಂಗಳ್ ಮತ್ತು ಪತ್ತು ‘ಹತ್ತು’’ಪದಗಳು ಬಂದಿವೆ.

ನಾಲ್ ಪದದ ಬಳಕೆಯಲ್ಲಿ ಈ ಬದಲಾವಣೆ ನಲುವತ್ತು ಎಂಬು ದರಲ್ಲಿ ಮಾತ್ರ ಕಾಣಿಸುತ್ತದೆ. ಈ ಬದಲಾವಣೆಯನ್ನು ತೋರಿಸದಿರುವ ನಾಲ್ವತ್ತು ಎಂಬ ರೂಪವೂ ಕನ್ನಡದಲ್ಲಿದೆ. ಇದಲ್ಲದೆ, ನಾಲ್ದಿಂಗಳ್, ನಾಲ್ತೋಳ್, ನಾಲ್ವಡಿ (ನಾಲ್ + ಮಡಿ) ಮೊದಲಾದ ಪದಗಳಲ್ಲೂ ವ್ಯಂಜನಗಳಲ್ಲಿ ಮೊದಲಾಗುವ ಪದಗಳೊಂದಿಗೆ ಒಟ್ಟಿಲ್ಲದ ರೂಪ ಬಂದಿದ್ದು, ಉದ್ದ ಆ ಸ್ವರ ಬದಲಾಗದೆ ಉಳಿದಿದೆ.

ಮೂ ‘ಮೂರು’ ಪದದ ಬಳಕೆಯಲ್ಲಿ ಕೆಳಗೆ (2.3.2ರಲ್ಲಿ) ಸೂಚಿಸಿದ ಹಾಗೆ ಕನ್ನಡದ್ದೇ ಆದ ಬದಲಾವಣೆಯ ಮೂಲಕ ಉದ್ದ (ಮೂಗೆರೆ, ಮೂದಲೆ, ಮೂನೂಱ್) ಮತ್ತು ಗಿಡ್ಡ (ಮುಯ್ಯಡಿ, ಮುಯ್ಯೀರ್, ಮುಯ್ಯೇೞ್) ರೂಪಗಳು ಕಾಣಿಸಿಕೊಳ್ಳುತ್ತವೆ. ಮೂಱು ಎಂಬುದರ ಬಳಕೆಯಲ್ಲೂ ಇಂತಹದೇ ಕಾರಣಕ್ಕೆ ಉದ್ದ (ಮೂಸ್ರೂೞ್, ಮೂಗ್ರಳ್) ಮತ್ತು ಗಿಡ್ಡ (ಮುಕ್ಕಣ್, ಮುಚ್ಚಾಲ್, ಮುನ್ನೀರ್, ಮುಪ್ಪುರಿ) ರೂಪಗಳಿವೆ.

(3) ಗುಣಪದಗಳ ಬಳಕೆಯಲ್ಲೂ ಕ್ರಿಯಾಪದ ಮತ್ತು ಎಣಿಕೆಯ ಪದಗಳ ಬಳಕೆಯಲ್ಲಿ ನಡೆದಿರುವಂತಹದೇ ಬದಲಾವಣೆ ನಡೆದಿರುವುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

ಒಟ್ಟಿರುವ ರೂಪ

ಒಟ್ಟಿಲ್ಲದ ರೂಪ
ಕೇಸಕ್ಕಿ ‘ಕೆಂಪು ಅಕ್ಕಿ’’ ಕಿಸುಗಣ್ ‘ಕೆಂಪು ಕಣ್ಣು’’ ಕಾರಡವಿ ‘ಕಪ್ಪು ಅಡವಿ’’ಕರಿತುಳಸಿ ‘ಕಪ್ಪು ತುಳಸಿ’’ ಕೀೞಲೆ ‘ಕೆಳಗಿನ ಎಲೆ’’ ಕೆಳನಾಲಿಗೆ ‘ಕೆಳಗಿನ ನಾಲಿಗೆ’’ ನಾಱುವ ‘ನಾತದ’’ ಮಾಱಣೆ ‘ಮತ್ತಿನ’’

ನಱುನೆಯ್ ‘ಪರಿಮಳದ ತುಪ್ಪ’’ ಮರುದಿವಸ ‘ಮತ್ತಿನ ದಿವಸ’’

ಮೇಲಿನ ಉದಾಹರಣೆಗಳಲ್ಲಿ ಒಟ್ಟಿಲ್ಲದ ಕೇಸ್, ಕಾರ್, ಕೀೞ್, ನಾಱ್, ಮಾಱ್ ರೂಪಗಳು ಸ್ವರದಲ್ಲಿ ಮೊದಲಾಗುವ ಅಕ್ಕಿ, ಅಡವಿ,

ಎಲೆ ಮೊದಲಾದ ಪದಗಳೊಂದಿಗೆ ಬಂದಿವೆ ಮತ್ತು ಒಟ್ಟಿರುವ ಕಿಸು, ಕರಿ, ಕೆಳ, ನಱು, ಮರು ರೂಪಗಳು ವ್ಯಂಜನದಲ್ಲಿ ಮೊದಲಾಗುವ ಕಣ್, ತುಳಸಿ, ಮರ ಮೊದಲಾದ ಪದಗಳೊಂದಿಗೆ ಬಂದಿವೆ. ಕೊನೆಯ ಎರಡು ಪದಗಳಲ್ಲಿ ಮಾತ್ರ ಉದ್ದಸ್ವರದ ರೂಪಗಳು ಸ್ವರದಲ್ಲಿ ಮೊದಲಾಗುವ ಪದರೂಪದ ಒಟ್ಟುಗಳೊಂದಿಗೆ (ಅ ಮತ್ತು ಅಣೆ ಎಂಬವುಗಳೊಂದಿಗೆ) ಬಂದಿವೆ.

(4) ಕ್ರಿಯಾಪದದಿಂದ ನಾಮಪದವನ್ನು ತಯಾರಿಸಿರುವಲ್ಲಿ ಈ ಬದಲಾವಣೆ ಅಶ್ಟೊಂದು ನಿಯಮಿತವಾಗಿ ನಡೆದಿಲ್ಲ. ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ನಾಮಪದಗಳಲ್ಲಿ ಅದು ನಿಯಮಿತವಾಗಿ ನಡೆದಿದೆ ಯಾದರೂ ಎರಡು ಉಲಿಕಂತೆಗಳಿರುವ ನಾಮಪದಗಳಲ್ಲಿ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬುದಾಗಿ ಸುಬ್ರಹ್ಮಣ್ಯಂ (1983) ವಾದಿಸಿ

(ಕ) ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ಪದಗಳು

ಕ್ರಿಯಾಪದ ತಾಱು ‘ಒಣಗು’’ ಪೋೞ್ ‘ಸೀಳು’’ ಸೋಂಕು, ಸೋಕು ಚೀವು ‘ಕೆತ್ತು’’
ನೇರ್ ‘ಒಪ್ಪು’’

ನಾಮಪದ ತಱಗು ‘ತರಗೆಲೆ’’ ಪೊಟರೆ ‘ತೂತು’’ ಒಱತೆ ‘ನೀರಿನ ಚಿಲುಮೆ’’ ಸೊಗಡು ‘ಸೋಂಕುವಿಕೆ’’ ಸಿವಱು ಸಿಪ್ಪೆ’’
ನೆರವಿ ‘ಕೂಟ’ (ನೆರೆ ‘ಒಟ್ಟುಸೇರು’)’

ಬುರುಲಿ ‘ಕಾಡು ಕೋಳಿ’’ತಮಿಳು: ಪೂೞ್ ಮುಸುರೆ ಮುಸುಡು ‘ಮೂತಿ’’

ತಮಿಳು: ಮೂಚು ‘ಕೆಡು’’ ತಮಿಳು: ಮೂಂಚಿ

ಮುಸುಕು ಹಸುಕು ‘ಹಸಿ ವಾಸನೆ’’ ತೆಲುಗು: ಪಾಸು, ಪಾಯು ‘ಕೊಳೆ’

ತಮಿಳು: ಮೂಚು ‘ಸುತ್ತುವರಿ’’

(ಚ) ಎರಡು ಉಲಿಕಂತೆಗಳಿರುವ ಪದಗಳಲ್ಲಿ ಮೇಲಿನ ಬದಲಾವಣೆ ನಡೆದಿರುವುದಕ್ಕೆ ಉದಾಹರಣೆಗಳು

ಕ್ರಿಯಾಪದ ಕಾಣ್ ‘ಕಾಣು’’
ಬೀಸು
ಪಾಸು ‘ಹಾಸು’’

ನಾಮಪದ ಕಣಿ ‘ನೋಟ’’ ಬೆಸೆ ‘ಹೊಡೆತ’’ ಪಸೆ ‘ಹಾಸುಗೆ’’

ಕೆಳೆ ‘ಗೆಳೆತನ’’

ತಮಿಳು: ಕೇಳ್

(ಟ) ಎರಡು ಉಲಿಕಂತೆಗಳಿರುವ ಪದಗಳಲ್ಲಿ ಮೇಲಿನ ಬದಲಾವಣೆ ನಡೆಯದಿರುವುದಕ್ಕೆ ಉದಾಹರಣೆಗಳು

ಕ್ರಿಯಾಪದ ಹಾಯು ‘ದಾಟು, ಹೋಗು’’ ತೀರು ‘ಮುಗಿ’’
ಮಾಯು ‘ಕಾಣದಾಗು’’
ಮೇಯು

ನಾಮಪದ ಹಾದಿ ‘ದಾರಿ’’ ತೀರ ‘ಮುಗಿತಾಯ’’ ಮಾಯ
ಮೇತ ‘ಮೇಯುವಿಕೆ’’

(5) ಮೇಲೆ ವಿವರಿಸಿದಂತಹ ಬದಲಾವಣೆ ಸ್ವರದಲ್ಲಿ ಮೊದಲಾಗುವ ಒಟ್ಟುಗಳನ್ನು ಸೇರಿಸಿ ಒಂದು ಪದದಿಂದ ಇಲ್ಲವೇ ಬೇರಿನಿಂದ ಹೊಸ ಪದ ಗಳನ್ನು ತಯಾರಿಸಿರುವಲ್ಲಿ ಮಾತ್ರ ನಡೆಯುತ್ತದಲ್ಲದೆ, ಪದರೂಪಗಳನ್ನು ತಯಾರಿಸಿರುವಲ್ಲಿ ನಡೆಯುವುದಿಲ್ಲ.

ಉದಾಹರಣೆಗಾಗಿ, ಹಾಡು-ಹಾಡಲು, ಕೇಳು-ಕೇಳದೆ, ಆಗು- ಆಗಿ, ಕಾಡು-ಕಾಡನ್ನು ಮೊದಲಾದ ಪದರೂಪಗಳಲ್ಲಿ ಸ್ವರದಲ್ಲಿ

ಮೊದಲಾಗುವ ಅಲು, ಅದೆ, ಇ, ಅನ್ನು ಎಂಬ ಒಟ್ಟುಗಳು ಬಂದಿವೆಯಾದರೂ ಅವು ಪದರೂಪಗಳನ್ನು ತಯಾರಿಸುವ ಒಟ್ಟುಗಳಾದ ಕಾರಣ, ಅವುಗಳಲ್ಲಿ ಉದ್ದ ಸ್ವರ ಬದಲಾಗದೆ ಉಳಿದಿರುವುದನ್ನು ಕಾಣಬಹುದು.

ಪದರೂಪಗಳಲ್ಲಿ

ಆದರೆ, ನಾನು, ನಾವು, ನೀನು, ತಾನು ಮೊದಲಾದ ಆಡುಗ ಪದಗಳ ಕಾಣಿಸುವ ಉದ್ದಸ್ವರ ಗಿಡ್ಡವಾಗುವ ಬದಲಾವಣೆ ಮೇಲಿನ ನಿಯಮಕ್ಕೊಳಪಟ್ಟಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಇವುಗಳೊಂದಿಗೆ ಪದರೂಪಗಳನ್ನು ತಯಾರಿಸುವ ಒಟ್ಟುಗಳನ್ನು ಬಳಸಿದಾಗಲೂ ಅವುಗಳ ಉದ್ದಸ್ವರ ಗಿಡ್ಡವಾಗುತ್ತದೆ.

ಸ್ವರದಲ್ಲಿ

ಇದಲ್ಲದೆ, ಈ ಒಟ್ಟುಗಳು

ಸುರುವಾಗಬೇಕೆಂಬ ನಿಯಮವಿಲ್ಲ (ನಾನು-ನನಗೆ, ನೀನು, ನಿನಗೆ ಪದಗಳಲ್ಲಿ ವ್ಯಂಜನದಲ್ಲಿ ಮೊದಲಾಗುವ ಗೆ ಒಟ್ಟು ಬಂದಿದೆ) ಮತ್ತು ಸ್ವರದಲ್ಲಿ ಸುರುವಾಗುವ ಒಟ್ಟುಗಳನ್ನು ಬಳಸಿದಾಗ ಇವುಗಳ ಕೊನೆಯ ಮೂಗುಲಿ ಇಮ್ಮಡಿಯಾಗಿ ಬದಲಾಗಿದೆ (ತಾನು-ತನ್ನ, ನೀನು-ನಿನ್ನನ್ನು, ನಿನ್ನಿಂದ).

(6) ಉದ್ದಸ್ವರವಿರುವ ಕ್ರಿಯಾಬೇರಿನ ಅನಂತರ ವ್ಯಂಜನದಲ್ಲಿ ಮೊದಲಾಗುವ ಒಟ್ಟು ಬಂದಿರುವಲ್ಲಿ ಮೇಲಿನ ಉದ್ದಸ್ವರ ಗಿಡ್ಡವಾಗುವ ಬದಲಾವಣೆ ನಡೆದಿರಲಿಲ್ಲ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಹಾಸು
ಸೇರು ‘ಕೂಡು’’ ಮೀರು
ಬಾಳು

ಹಾಸುಗೆ ಸೇರುವೆ ‘ಕೂಟ’’ ಮೀರುಹ ಬಾಳ್ತೆ

(7) ಕನ್ನಡದ ಕೆಲವು ಪದಗಳಲ್ಲಿ ಉದ್ದಸ್ವರವನ್ನು ಗಿಡ್ಡಸ್ವರವಾಗಿ ಬದಲಾಯಿಸಿದ ಒಟ್ಟಿನ ಸ್ವರ ಅನಂತರ ಬಿದ್ದುಹೋಗಿರುವುದೂ ಇದೆ; ಅಂತಹ ಪದಗಳಲ್ಲಿ ಮೇಲಿನ ಬದಲಾವಣೆ ವ್ಯಂಜನದಲ್ಲಿ ಮೊದಲಾಗುವ

ಒಟ್ಟು ಸೇರಿದಾಗಲೂ ನಡೆದಿದೆಯುಂದು ಅನಿಸುವುದಾದರೂ ನಿಜಕ್ಕೂ ಅಂತಹ ಪದಗಳಲ್ಲಿ ಮೊದಲಿಗೆ ಒಂದು ಸ್ವರ ಇದ್ದಿರಬೇಕು.

ಉದ್ದ ಸ್ವರದ ರೂಪ
ಅೞ್ ‘ಮುಳುಗು’’
ಊಱು ‘ಹೆಚ್ಚು’ ಕಾರ್ ‘ಕಪ್ಪು’’ ಸೋರು ‘ಬಳಲು’’
ತಾೞ್ ‘ತಗ್ಗು’’ ನೀಳ್ ‘ಉದ್ದವಾಗು’’

ಗಿಡ್ಡ ಸ್ವರದ ರೂಪ ಅಳ್ದು, ಅದ್ದು (ಅೞುತ್ತು) ‘ಮುಳುಗಿಸು’ ಉರ್ಬು, ಉಬ್ಬು (ಉಱುಪ್ಪು) ಕರ್ಪು, ಕಪ್ಪು (<ಕರುಪ್ಪು) ಸೊರ್ಕು, ಸೊಕ್ಕು (<ಸೊರುಕ್ಕು) ತೞ್ಗು, ತಗ್ಗು (<ತೞುಕ್ಕು) ನಿಳ್ಕು, ನಿಕ್ಕು (ನಿಳುಕ್ಕು) ‘ನಿಲುಕು’’

ಇಮ್ಮಡಿ ವ್ಯಂಜನಗಳ (ಇಲ್ಲವೇ ಬೇರೆ ಒತ್ತಕ್ಶರಗಳ) ಮೊದಲು ಬಂದ ಉದ್ದಸ್ವರ ಕನ್ನಡದಲ್ಲಿ ಗಿಡ್ಡಸ್ವರವಾಗುವುದೆಂಬುದನ್ನು ನಾವು ಕೆಳಗೆ (2.3.2(1-2)ರಲ್ಲಿ) ನೋಡಲಿರುವೆವು. ಕನ್ನಡದಲ್ಲೇನೇ ನಡೆದ ಈ ಬದಲಾವಣೆಯೂ ಮೇಲಿನ ಪದಗಳಲ್ಲಿ ಕಾಣಿಸುವ ಗಿಡ್ಡಸ್ವರಕ್ಕೆ ಕಾರಣ ವಾಗಬಲ್ಲುದು.

(8) ಕೆಳಗೆ ಕೊಟ್ಟಿರುವ ಪದಗಳಲ್ಲಿ ನಾಮಪದಗಳು ಉದ್ದಸ್ವರ ದೊಂದಿಗೂ ಕ್ರಿಯಾಪದಗಳು ಗಿಡ್ಡಸ್ವರದೊಂದಿಗೂ ಬರುವುದನ್ನು ಕಾಣ ಬಹುದು. ಇಲ್ಲಿ ನಾಮಪದಗಳಿಂದ ಕ್ರಿಯಾಪದಗಳನ್ನು ಪಡೆಯಲಾಗಿದ್ದು, ಅದಕ್ಕಾಗಿ ಸ್ವರದಲ್ಲಿ ಮೊದಲಾಗುವ ಅರು, ಇ, ಎ ಒಟ್ಟುಗಳನ್ನು ಬಳಸ

ನಾಮಪದ ಊಳ್ ‘ಕೂಗು’’
ಏಱ್ ‘ಗಾಯ’’
ನೂಳ್ ‘ಸುಳ್ಳು’’

ಕ್ರಿಯಾಪದ ಒಳರು ‘ಕೂಗು’’ ನೊಳೆ ‘ಕದ್ದು ಒಳಹೋಗು’’

(9) ಇನ್ನು ಕೆಲವು ಪದಗಳಲ್ಲಿ ಕಾಣಿಸುವ ಉದ್ದಸ್ವರ ಗಿಡ್ಡಸ್ವರದಿಂದ ಬಂದಿರುವುದು ಕಾಣಿಸುತ್ತದೆ. ಮೂಲದ್ರಾವಿಡದ ಕ್ರಿಯಾಬೇರುಗಳ ಕೊನೆ

ಯಲ್ಲಿದ್ದ ಯಕಾರ ಇಲ್ಲವೇ ಕಕಾರ ಬಿದ್ದುಹೋದಾಗ (4.3.5 ನೋಡಿ) ಬೇರಿನ ಸ್ವರ ಮತ್ತು ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ - ಇವೆರಡರ ಬದಲು ಉದ್ದಸ್ವರವೊಂದು ಬಂದಿರುವುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಗಿಡ್ಡಸ್ವರದ ರೂಪ

ಕುಸಿ (*ಕುಯಿ)
ಕೊಸರು ‘ಹೆಚ್ಚು ಆಸೆಪಡು’’ ನುಸಿ ‘ಒಳಹೊಗು’’

ಉದ್ದಸ್ವರದ ರೂಪ ಕೂಲು ‘ಬೀಳು’’ ಕೋಱು ‘ಬಯಸು’’ ನೂಱು ‘ನುಗ್ಗು’’

(10) ಕೆಳಗೆ ಕೊಟ್ಟಿರುವ ಕನ್ನಡದ ಪದಗಳೂ ಮೇಲಿನ ನಿಯಮಗಳಿಗೆ ಅಪವಾದಗಳಾಗಿ ಕಾಣಿಸುತ್ತವೆ. ಇವುಗಳಲ್ಲಿ ಕ್ರಿಯಾಪದ ಗಿಡ್ಡಸ್ವರವನ್ನು ಮತ್ತು ನಾಮಪದ ಉದ್ದಸ್ವರವನ್ನು ತೋರಿಸುತ್ತಿದ್ದು, ಇಲ್ಲಿ ಎಂತಹ ಬದಲಾವಣೆ ಕಂಡುಹಿಡಿಯಲು ಇನ್ನೂ ಸಾದ್ಯವಾಗಿಲ್ಲ.

ನಡೆದಿದೆ ಎಂಬುದನ್ನು

ನಾಮಪದಗಳು ಈಡು ‘ಇಡುವಿಕೆ, ಇಟ್ಟದ್ದು’’ ಕೇಡು ‘ಅಳಿವು’’ ಕೋಡು ‘ಕೊಡುವಿಕೆ’’ ಕೋಳ್ ‘ಹಿಡಿತ’’

ಕ್ರಿಯಾಪದಗಳು
ಇಡು ‘ಇರಿಸು’’
ಕೆಡು ‘ಅಳಿ’’ ಕೊಡು
ಕೊಳ್ ‘ಹಿಡಿ’’
ಸುಡು ‘ಉರಿ, ಉರಿಸು’’ ಸೂಡು ‘ಸುಡುವಿಕೆ, ಬಿಸಿ’’ ತಿನ್ ‘ತಿನ್ನು’’
ಪಡು ‘ಪಡೆ’’

ತೀನಿ ‘ತಿನಿಸು, ತಿಂಡಿ’’ ಪಾಡು’‘ಪಡೆಯುವಿಕೆ’’ ಬೀಡು ‘ಬಿಡುವಿಕೆ, ಮನೆ’’

Eke →

2.3.2 ಕನ್ನಡದಲ್ಲಿ ನಡೆದ ಬದಲಾವಣೆಗಳು

(1) ಕನ್ನಡದಲ್ಲಿ ಸಾಮಾನ್ಯವಾಗಿ ಉದ್ದಸ್ವರದ ಅನಂತರ ಇಮ್ಮಡಿ ವ್ಯಂಜನ ಬರುವುದಿಲ್ಲ; ಇಮ್ಮಡಿ ವ್ಯಂಜನ ಬಂದಿರುವ ಕನ್ನಡದ ಹಲವು ಪದಗಳಲ್ಲಿ ಗಿಡ್ಡಸ್ವರ ಕಾಣಿಸುತ್ತದೆ ಮತ್ತು ಅವಕ್ಕೆ ಸಮನಾದ ತಮಿಳು ಪದಗಳಲ್ಲಿ ಉದ್ದಸ್ವರ ಕಾಣಿಸುತ್ತದೆ.

ತಮಿಳು: ಕನ್ನಡ
ಸಿಳ್ಳು
ಪಿಲ್ಲಿ ‘ಕಾಲುಂಗುರ’’ ಪೀಲಿ ನೇಟು ನಿಟ್ಟಿಸು
ತೂವಲ್ ತುಪ್ಪುಳ ಪೂಚಲ್ ಹುಯ್ಯಲು ಉಯ್ಯಲು

ಇಂತಹ ಪದಗಳಲ್ಲಿ ಕನ್ನಡ ಇಮ್ಮಡಿ ವ್ಯಂಜನಗಳ ಮೊದಲು

ಬಂದಿರುವ ಉದ್ದಸ್ವರವನ್ನು ಗಿಡ್ಡಸ್ವರವಾಗಿ ಬದಲಾಯಿಸಿಕೊಂಡಿರಬೇಕು.

ಇಮ್ಮಡಿ

ಆದರೆ ಸಾಮಾನ್ಯವಾಗಿ ತೆಂಕುದ್ರಾವಿಡದಲ್ಲಿ ಉದ್ದಸ್ವರದ ಅನಂತರ ವ್ಯಂಜನವಾಗಿ ಹಾಗೆಯೇ ಕಾಣಿಸುವ

ಬಂದಿದ್ದ ಬದಲಾಯಿಸುವುದರ ಉಳಿಸಿಕೊಳ್ಳುವುದೇ ಬದಲಾವಣೆಯಾಗಿದೆ (4.4.3 ನೋಡಿ).

ಸ್ವರವನ್ನು ಪದಗಳಲ್ಲೂ

ವ್ಯಂಜನವನ್ನು ಮೂಲಕ ಉದ್ದ

ಕನ್ನಡದ

ಹೆಚ್ಚಿನ

(2) ಉದ್ದಸ್ವರದ ಅನಂತರ ಒತ್ತಕ್ಶರ ಬಂದಿರುವಲ್ಲೂ ಕನ್ನಡ ಪದಗಳಲ್ಲಿ ಕೆಲವೆಡೆ ಉದ್ದಸ್ವರ ಗಿಡ್ಡಸ್ವರವಾಗಿ ಬದಲಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಈ ಎರಡು ರೀತಿಯ ಪದಗಳೂ ಕಾಣಿಸುತ್ತಿದ್ದು, ಅವುಗಳಲ್ಲಿ ಮೊದಲನೆಯದು ಹಳೆಯದಿರಬೇಕು.

ಉದ್ದಸ್ವರವಿರುವ ರೂಪ
ಮಾರ್ಮ ‘ಎದುರಾಳಿ’’ ಏಳ್ನೂರು ಆಣ್ಮ ‘ಆಳುವವನು’’ ಆಮಂಡ
ನಾಲ್ವತ್ತು

ಗಿಡ್ಡಸ್ವರವಿರುವ ರೂಪ

ಮರ್ಮ ಎಳ್ನೂರು ಅಣ್ಮು ‘ಕೆಚ್ಚು’’
ಅಮಂಡ ನಲ್ವತ್ತು

ಆದರೆ ಮೇಲೆ ಸೂಚಿಸಿದ ಹಾಗೆ ಇಂತಹ ಹೆಚ್ಚಿನ ಕಡೆಗಳಲ್ಲೂ ಉದ್ದ ಸ್ವರವನ್ನು ಹಾಗೆಯೇ ಉಳಿಸಿ, ಒತ್ತಕ್ಶರದಲ್ಲಿ ಬದಲಾವಣೆ ಮಾಡುವುದೇ ಕನ್ನಡದ ಒಲವಾಗಿದೆ.

ಯಕಾರದಲ್ಲಿ

ಕೊನೆಗೊಳ್ಳುವ ಒಂದು ಉಲಿಕಂತೆಯ ಕನ್ನಡದಲ್ಲಿ ಬೇರುಗಳಲ್ಲಿ ಉದ್ದ ಮತ್ತು ಗಿಡ್ಡಸ್ವರಗಳ ವ್ಯತ್ಯಾಸವಿರುವುದು ನಿಜವಾದರೂ (ಬಯ್ಯು ‘ಹಳಿಯು’, ಬಾಯು ‘ಬಾತುಕೊಳ್ಳು’) ಅಂತಹ ಕೆಲವು ಬೇರುಗಳು ಉದ್ದ ಇಲ್ಲವೇ ಗಿಡ್ಡ ಸ್ವರದೊಂದಿಗೆ ಬರುವುದು ಕಾಣಿಸುತ್ತದೆ.

ನಡುವೆ

ಉದ್ದಸ್ವರದ ರೂಪ ತೊಯ್ಯು ‘ಒದ್ದೆಯಾಗು’’ ಬೆಯ್ಯು
ಸಯ್ ‘ಮಾಯವಾಗು’’
ಸುಯ್ ‘ನಿಟ್ಟುಸಿರು ಬಿಡು’

ಗಿಡ್ಡಸ್ವರದ ರೂಪ

ತೋಯು ಬೇಯು ಸಾಯ್ ಸೂಯ್

Eke →

2.4 ಸ್ವರಗಳ ಎಣಿಕೆಯಲ್ಲಿ ಹೆಚ್ಚಳ

ಕನ್ನಡದ ಕೆಲವು ಒಳನುಡಿಗಳಲ್ಲಿ ಮೇಲೆ ವಿವರಿಸಿದ ಹತ್ತು ಸ್ವರಗಳಲ್ಲಿ ಕೆಲವು ಹತ್ತಕ್ಕಿಂತ ಜಾಸ್ತಿಯಾಗಿವೆ.

ಬದಲಾವಣೆಗಳಾಗಿರುವುದರಿಂದಾಗಿ

ಈ ಬದಲಾವಣೆಗಳನ್ನು ವಿವರಿಸುವುದಕ್ಕಾಗಿ ಬರಹ ಕನ್ನಡದಲ್ಲಿರುವ ಸ್ವರಗಳಿಗಿಂತ ಹೆಚ್ಚಿನ ಸ್ವರಗಳನ್ನು ಬಳಸಬೇಕಾಗುತ್ತದೆಯಾದ ಕಾರಣ, ಅದಕ್ಕಾಗಿ ಕೆಳಗೆ ಸೂಚಿಸಿದ ಹಾಗೆ, ನಾಲಿಗೆಯನ್ನು ಮುಂದೆ, ನಡುವೆ ಮತ್ತು ಹಿಂದೆ ಎಂಬುದಾಗಿ ಮೂರು ಬಾಗಗಳಲ್ಲಿ ವಿಂಗಡಿಸಬೇಕಾಗುತ್ತದೆ ಮತ್ತು ಬಾಯಿಯ ಜಾಗವನ್ನು ಮೇಲೆ, ಮೇಲ್ನಡುವೆ, ಕೆಳನಡುವೆ ಮತ್ತು ಕೆಳಗೆ ಎಂಬ ನಾಲ್ಕು ಅಂಶಗಳಾಗಿ ವಿಂಗಡಿಸಬೇಕಾಗುತ್ತದೆ.

ಬಾಯಿಯ ಜಾಗ ಮೇಲೆ ಮೇಲ್ನಡುವೆ

ಮುಂದಿನ ಬಾಗ

ನಾಲಿಗೆಯ ಬಾಗ ನಡುವಿನ ಬಾಗ

ಕೆಳನಡುವೆ ಕೆಳಗೆ

ಹಿಂದಿನ ಬಾಗ

ಈ ರೀತಿ ವಿಂಗಡಿಸಿದಲ್ಲಿ ಒಟ್ಟು 12 ಸ್ವರಗಳು ದೊರೆಯುತ್ತವೆ; ಅವುಗಳಲ್ಲಿ ಎಂಟು ಸ್ವರಗಳು ಮಾತ್ರ ಕನ್ನಡದ ಒಳನುಡಿಗಳನ್ನು ವರ್ಣಿಸಲು ಬೇಕಾಗುತ್ತವೆಯಾದ ಕಾರಣ, ಅವಕ್ಕೆ ಮಾತ್ರ ಮೇಲೆ ವಿಶಿಶ್ಟವಾದ ಲಿಪಿ ಗಳನ್ನು ಒದಗಿಸಲಾಗಿದೆ. ಮುಂಗೆಳನಡುವಿನ ಎ಼, ಹಿಂಗೆಳನಡುವಿನ ಒ಼ ಮತ್ತು ನಡುಕೆಳನಡುವಿನ ಅ಼ ಎಂಬವುಗಳು ಇಲ್ಲಿ ಬೇಕಾಗುವ ಹೆಚ್ಚಿನ ಸ್ವರಗಳು.

ಈ ಹೆಚ್ಚಿನ ಸ್ವರಗಳನ್ನು ಹೆಸರಿಸುವುದಕ್ಕಾಗಿ ಎಕಾರ ಒಕಾರಗಳನ್ನು ನಡುವಿನ ಸ್ವರಗಳೆಂದು ಕರೆಯುವ ಬದಲು ಮೇಲ್ನಡುವಿನ ಸ್ವರಗಳೆಂದು ಕರೆಯಬೇಕಾಗುತ್ತದೆ. ಎಂದರೆ, ‘ನಡು’ ಎಂಬ ಬಾಯಿಯ ಜಾಗವನ್ನು ಮೇಲ್ನಡು ಮತ್ತು ಕೆಳನಡು ಎಂಬುದಾಗಿ ಒಡೆದುಕೊಳ್ಳಬೇಕಾಗುತ್ತದೆ.

ಈ ಎಂಟು ಸ್ವರಗಳನ್ನು ಮಾತ್ರವಲ್ಲದೆ, ಬೇರೆಯೂ ಕೆಲವು ಸ್ವರಗಳನ್ನು ಕನ್ನಡದ ಒಳನುಡಿಗಳನ್ನು ವಿವರಿಸುವಲ್ಲಿ ಬಳಸಬೇಕಾಗುತ್ತದೆ. ಆದರೆ ಇವುಗಳ ಉಚ್ಚಾರಣೆಗೆ ಕೆಲವು ಅಂಶಗಳು ಬಳಕೆಯಾಗುತ್ತವೆ.

ಬೇರೆಯೇ

(1) ಉಕಾರವನ್ನು ಉಚ್ಚರಿಸುವಾಗ ತುಟಿ ದುಂಡಗಿರಬಹುದು (ಉ) ಇಲ್ಲವೇ ದುಂಡಗಿಲ್ಲದಿರಬಹುದು (ಉ್); ಈ ವ್ಯತ್ಯಾಸದ ಮೂಲಕ ಕರಾವಳಿಯ ಗವ್ಡ ಕನ್ನಡದಲ್ಲಿ ಎರಡು ಸ್ವರಗಳನ್ನು ಬೇರ್ಪಡಿಸಲಾಗುತ್ತದೆ.

(2) ಸ್ವರಗಳನ್ನು ಉಚ್ಚರಿಸುವಾಗ ಉಸಿರು ಬಾಯಿಯ ಮೂಲಕ ಮಾತ್ರವೇ ಹೊರ ಹೋಗಬಹುದು ಇಲ್ಲವೇ ಮೂಗಿನ ಮೂಲಕವೂ ಹೊರ ಹೋಗಬಹುದು. ಈ ವ್ಯತ್ಯಾಸದ ಮೂಲಕ ಕರಾವಳಿಯ ಹವ್ಯಕ ಕನ್ನಡ, ಗುಲ್ಬರ್ಗ ಕನ್ನಡ, ಹಾಲಕ್ಕಿ ಕನ್ನಡ ಮೊದಲಾದ ಕೆಲವು ಒಳನುಡಿಗಳಲ್ಲಿ ಸ್ವರಗಳನ್ನು ಬೇರ್ಪಡಿಸಲಾಗುತ್ತದೆ.

(3) ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ತುದಿ ಹಿಂದಕ್ಕೆ ಮಡಚಿರಬಹುದು ಇಲ್ಲವೇ ಮಡಚದಿರಬಹುದು; ಮಡಚಿರುವಲ್ಲೂ ಅದು ಬೇರೆ ಬೇರೆ ಪ್ರಮಾಣಗಳಲ್ಲಿ ಮಡಚಿರಬಹುದು. ಈ ವ್ಯತ್ಯಾಸದ ಮೂಲಕ ಸೊಲಿಗ ಮತ್ತು ಬಡಗ ಕನ್ನಡಗಳಲ್ಲಿ ಸ್ವರಗಳನ್ನು ಬೇರ್ಪಡಿಸಲಾಗುತ್ತದೆ. ಈ ವ್ಯತ್ಯಾಸಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗುವುದು.

Eke →

2.4.1 ಅಕಾರದ ಒಡೆತ

ಕನ್ನಡದ ಕೆಲವು ಇವತ್ತಿನ ಒಳನುಡಿಗಳಲ್ಲಿ ಅಕಾರವು ಹಿಂಗೆಳಗಿನ ಅಕಾರ ಮತ್ತು ನಡುಕೆಳನಡುವಿನ ಅ಼ಕಾರ ಎಂಬ ಎರಡು ಸ್ವರಗಳಾಗಿ ಒಡೆದು ಕೊಂಡಿದೆ. ಅಕಾರದ ಅನಂತರ ಬರುವ ಸ್ವರಗಳಲ್ಲಿ ಕೆಲವು ಬದಲಾವಣೆ ಗಳಾದುದೇ ಇದಕ್ಕೆ ಮುಕ್ಯ ಕಾರಣ.

ಈ ಒಳನುಡಿಗಳಲ್ಲಿ ಅಕಾರಕ್ಕೆ ಎರಡು ಉಚ್ಚಾರಣೆಗಳಿದ್ದುವು. ಅದರ ಅನಂತರ ಮೇಲಿನ ಸ್ವರ ಬಂದಿರುವ ಪದಗಳಲ್ಲಿ ಅದು ನಡುಕೆಳನಡುವಿನ

ಅ಼ಕಾರವಾಗಿ ಬದಲಾಗಿತ್ತು, ಮತ್ತು ಅದರ ಅನಂತರ ಇತರ ಸ್ವರಗಳಿರುವ ಪದಗಳಲ್ಲಿ ಹಿಂಗೆಳಗಿನ ಅಕಾರವಾಗಿಯೇ ಉಳಿದಿತ್ತು.

ಈ ಬದಲಾವಣೆ ನಡೆದ ಮೇಲೆ, ಈ ಒಳನುಡಿಗಳಲ್ಲಿ ಬೇರೆ ಕೆಲವು ಬದಲಾವಣೆಗಳೂ ನಡೆದಿದ್ದುವು. ಉದಾಹರಣೆಗಾಗಿ, ಇಂತಹ ಕೆಲವು ಪದಗಳಲ್ಲಿ ಅಕಾರದ ಅನಂತರ ಬಂದಿದ್ದ ಎಕಾರ ಇಕಾರವಾಗಿತ್ತು ಮತ್ತು ಬೇರೆ ಕೆಲವು ಪದಗಳಲ್ಲಿ ಅಕಾರದ ಅನಂತರ ಬಂದ ಸ್ವರ (ಇದು ಮೇಲಿನದಿರಬಹುದು ಇಲ್ಲವೇ ನಡು ಅತವಾ ಕೆಳಗಿನದಿರಬಹುದು) ಬಿದ್ದು ಹೋಗಿತ್ತು. ಈ ಬದಲಾವಣೆಗಳಿಂದಾಗಿ ಮೇಲಿನ ಎರಡು ಅಕಾರಗಳಿಗೆ ಈ ಒಳನುಡಿಗಳಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆ ಬಂದಿದೆ.

ಕೆಳಗೆ ಕೊಟ್ಟಿರುವ ಗುಲ್ಬರ್ಗ ಕನ್ನಡದ ಪದಗಳಲ್ಲಿ ಈ ಎರಡು ರೀತಿಯ ಅಕಾರಗಳಿಗೆ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿದೆ ಎಂಬುದನ್ನು ಗಮನಿಸಬಹುದು (ಉಪಾದ್ಯಾಯ 1976).

ಇಕಾರವಿದ್ದ ಪದಗಳು ಗುಲ್ಬರ್ಗ

ಬರಹ

ಬ಼ಸ಼್ರ

ಎಕಾರ ಇಕಾರವಾದ ಪದಗಳು ಗುಲ್ಬರ್ಗ ಮರೆ

ಬರಹ ಮರೆ ಕಡಲೆ

ಕತ್ತಿ ಪದದಲ್ಲಿ ಎರಡನೆಯ ಸ್ವರವಾಗಿ ಮೇಲಿನ ಸ್ವರ (ಇಕಾರ) ಬಂದಿದೆಯಾದ ಕಾರಣ, ಮೊದಲಿಗೆ ಅದರ ಅಕಾರ ನಡುಕೆಳಗಿನ ಅ಼ಕಾರವಾಗಿಯೂ ಮತ್ತು ಕತ್ತೆ ಪದದಲ್ಲಿ ಎರಡನೆಯ ಸ್ವರವಾಗಿ ಮೇಲ್ನಡುವಿನ ಸ್ವರ (ಎಕಾರ) ಬಂದಿದೆಯಾದ ಕಾರಣ, ಅದರ ಅಕಾರ ಅಕಾರವಾಗಿಯೂ ಗುಲ್ಬರ್ಗ ಕನ್ನಡದಲ್ಲಿ ಉಚ್ಚಾರವಾಗುತ್ತಿದ್ದಿರಬೇಕು.

ಸೂಚಿಸಲು

ಅನಂತರ  ಕತ್ತೆ  ಪದದ  ಎರಡನೆಯ  ಸ್ವರ  (ಎಕಾರ)  ಮೇಲಿನ  ಸ್ವರವಾಗಿ  (ಇಕಾರವಾಗಿ)  ಬದಲಾದುದರಿಂದ  ಈ  ಎರಡು  ಪದಗಳ  ನಡುವಿನ  ಅರ್ತವ್ಯತ್ಯಾಸವನ್ನು  ಮೊದಲಿನ  ಹಾಗೆ  ಅವುಗಳ  ಎರಡನೆಯ  ಸ್ವರಗಳು  ಸಾದ್ಯವಾಗದ  ಹಾಗಾಯಿತು.  ಯಾಕೆಂದರೆ,  ಎರಡರಲ್ಲೂ ಈಗ ಎರಡನೆಯ ಸ್ವರವಾಗಿ ಇಕಾರವೇ ಬರುತ್ತಿದೆ. ಹಾಗಾಗಿ  ಆ  ಅರ್ತವ್ಯತ್ಯಾಸವನ್ನು  ಅವುಗಳ  ಮೊದಲನೆಯ  ಸ್ವರದಲ್ಲಿದ್ದ  ಅ಼-ಅ  (ನಡುಕೆಳನಡುವಿನ  ಅ಼ಕಾರ  ಮತ್ತು  ಹಿಂಗೆಳಗಿನ  ಅಕಾರ)  ವ್ಯತ್ಯಾಸವೇ  ಸೂಚಿಸುವಂತಾಗಿರಬೇಕು. ಇತರ ಪದಗಳಲ್ಲೂ ಹೀಗೆಯೇ.  

Eke →

2.4.2 ದುಂಡಗಿಲ್ಲದ ಉಕಾರ

ಕರಾವಳಿಯ (ಸುಳ್ಯದ) ಗೌಡ ಕನ್ನಡದಲ್ಲಿ ಉಕಾರ ದುಂಡಗಿನ ಉ ಮತ್ತು ದುಂಡಗಿಲ್ಲದ ಉ್ ಎಂಬ ಎರಡು ಉಗಳಾಗಿ ಒಡೆದುಕೊಂಡಿದೆ. ಉದಾ ಹರಣೆಗಾಗಿ, ಗವ್ಡ ಕನ್ನಡದ ಅದ್ ‘ಅದು’’ಪದದ ಕೊನೆಯಲ್ಲಿ ದುಂಡಗಿಲ್ಲದ ಉಕಾರ ಬಂದಿದೆ. ಕೊಟ್್ಟ ‘ಕೊಟ್ಟು’’ಮತ್ತು ಕೊಟ್ಟು ‘ಹಾರೆ’ ಎಂಬಂತಹ ಪದಜೋಡಿಗಳಲ್ಲಿ ಈ ವ್ಯತ್ಯಾಸಕ್ಕೆ ಅರ್ತವನ್ನು ಸೂಚಿಸುವ ಕೆಲಸ ಬಂದಿದೆ.

ಆದರೆ ಈ ಬದಲಾವಣೆ ಒಟ್ಟಿನ ಸ್ವರಗಳಲ್ಲಿ ಮಾತ್ರ ನಡೆದಿದೆಯಾದ ಕಾರಣ ಅದರ ಸ್ವರೂಪವನ್ನು ಮುಂದಿನ ಅದ್ಯಾಯದಲ್ಲಿ (3.6.6ರಲ್ಲಿ) ವಿವರಿಸಲಾಗುವುದು.

Eke →

2.4.3 ಮೂಗಿಸಿದ ಸ್ವರಗಳು

ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ಪದ ಇಲ್ಲವೇ ಪದರೂಪಗಳ ಕೊನೆಯಲ್ಲಿ ಬಂದಿರುವ ನಕಾರ ಇಲ್ಲವೇ ಮಕಾರ ಬರಹ ಕನ್ನಡದ ಹಲವು ಪದ ಮತ್ತು ಪದರೂಪಗಳಲ್ಲಿ ಬಿದ್ದು ಹೋಗಿದೆ. ಆದರೆ ಕನ್ನಡದ

ಕೆಲವು ಒಳನುಡಿಗಳಲ್ಲಿ ಈ ಬಿದ್ದು ಹೋದ ಮೂಗುಲಿಯ ಅವಶೇಶವಾಗಿ ಅದರ ಮೊದಲಿದ್ದ ಸ್ವರ ‘ಮೂಗಿಸಿದ’ ಸ್ವರವಾಗಿ ಬದಲಾಗಿದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಪದ ಮತ್ತು ಪದರೂಪಗಳನ್ನು ಹಳೆಗನ್ನಡ ಮತ್ತು ಬರಹ ಕನ್ನಡದ ಪದ ಮತ್ತು ಪದ ರೂಪಗಳೊಂದಿಗೆ ಹೋಲಿಸಿ ನೋಡಬಹುದು.

ಹಳೆಗನ್ನಡ ಬಂದನ್
ಪೋದನ್ ಮಗನ್
ಅಕ್ಕನ್

ಬರಹ ಕನ್ನಡ ಹೋದ
ಮಗ

ಹವ್ಯಕ ಕನ್ನಡ ಹೋದ ᵒ ಮಗ ᵒ

ಆದರೆ ಈ ಮೂಗಿಸಿದ ಸ್ವರಗಳು ಹವ್ಯಕ ಕನ್ನಡದಲ್ಲಿ ಪದಗಳ ಬರುವುದಿಲ್ಲ. ಒಟ್ಟುಗಳಲ್ಲಿ ಬೇರುಗಳಲ್ಲಿಯೂ ಇಂತಹ ಮೂಗಿಸಿದ ಸ್ವರ ಬರುವುದನ್ನು ಕನ್ನಡದ ಬೇರೆ ಒಳನುಡಿಗಳಲ್ಲಿ ಕಾಣಬಹುದು.

ಬರುತ್ತವಲ್ಲದೆ

ಬೇರುಗಳಲ್ಲಿ

ಉದಾಹರಣೆಗಾಗಿ,

ಮೂಲದ್ರಾವಿಡದ ಹೊಸಗನ್ನಡದಲ್ಲಿ ಹಾವು ಎಂಬುದಾಗಿ ಬದಲಾಗಿದೆ; ಆದರೆ ಕೆಲವು ಒಳನುಡಿಗಳಲ್ಲಿ ಇದು ಹಾᵒವು ಎಂಬುದಾಗಿ ಉಚ್ಚಾರಣೆಯಲ್ಲಿದ್ದು ಅದರಲ್ಲಿ ಬಿದ್ದು ಹೋಗಿರುವ ಮಕಾರ ಮೂಗಿಸಿದ ಆ ᵒ ಸ್ವರದಲ್ಲಿ ಉಳಿದುಕೊಂಡಿದೆ.

ಪಾಂಬು

Eke →

2.4.4 ಮಡಚಿದ ಸ್ವರಗಳು

ಕನ್ನಡದ ಬಡಗ ಮತ್ತು ಸೊಲಿಗ ಒಳನುಡಿಗಳಲ್ಲಿ ಸ್ವರಗಳು ಮಡಚಿದ ಮತ್ತು ಮಡಚದ ಸ್ವರಗಳಾಗಿ ಒಡೆದುಕೊಂಡಿವೆ. ಇವುಗಳಲ್ಲಿ ಮಡಚಿದ ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ತುದಿ, ಟ, ಡ, ಣ, ಳಗಳ ಸೊಲಿಗರ ಉಚ್ಚಾರಣೆಯಲ್ಲಿರುವ ಹಾಗೆ, ಒಳಕ್ಕೆ ಮಡಚಿರುತ್ತದೆ.

ಒಳನುಡಿಯಲ್ಲಿ ಇದೊಂದು ಉಚ್ಚಾರಣೆಯ ಸಂಗತಿ ಮಾತ್ರ. ಆದರೆ ಬಡಗರ ಒಳನುಡಿಯಲ್ಲಿ ಇದು ಅರ್ತಬೇದವನ್ನೂ ಸೂಚಿಸುತ್ತದೆ.

ಸೊಲಿಗರ ಕನ್ನಡದಲ್ಲಿ ಇಂತಹ ಮಡಚಿದ ಸ್ವರಗಳು ಅವುಗಳ ಅನಂತರ ಮಡಚಿದ ವ್ಯಂಜನವೊಂದು (ಟ್, ಡ್, ಣ್ ಇಲ್ಲವೇ ಳ್) ಬಂದಿರುವಲ್ಲಿ ಮಾತ್ರ ಕಾಣಿಸುತ್ತದೆ. ಇದಲ್ಲದೆ, ಇಂತಹ ಮಡಚಿದ ಸ್ವರ ಕಾಣಿಸಬೇಕಿದ್ದಲ್ಲಿ ಅವುಗಳ ಮೊದಲು ಕಕಾರ ಇಲ್ಲವೇ ಗಕಾರ ಇರಬೇಕು ಇಲ್ಲವೇ ಅವುಗಳ ಅನಂತರ ಬಂದಿರುವ ಮಡಚಿದ ವ್ಯಂಜನದ ಅನಂತರ ಮೇಲಿನ ಸ್ವರವೊಂದು ಬಂದಿರಬೇಕು (ಗುರುಬಸವೇ ಗವ್ಡ 1968). ಹಾಗಾಗಿ, ಈ ವ್ಯತ್ಯಾಸಕ್ಕೆ ಸೊಲಿಗ ಒಳನುಡಿಯಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿಲ್ಲ.

ಆದರೆ, ಬಡಗ ಒಳನುಡಿಯಲ್ಲಿ ಈ ಬದಲಾವಣೆ ಎರಡು ಹೆಜ್ಜೆ ಮುಂದೆ ಹೋಗಿದೆ. ಅದರಲ್ಲಿ ಪೂರ್ತಿ ಮಡಚಿದ, ಅರೆ ಮಡಚಿದ ಮತ್ತು ಸ್ವರಗಳು ಮಡಚದ ಉಚ್ಚಾರಣೆಯಲ್ಲಿವೆ ಮತ್ತು ಅವೆಲ್ಲಕ್ಕೂ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿದೆ.

ಸ್ವರಗಳೆಂಬುದಾಗಿ

ಮೂರು

ಳಕಾರ ಮತ್ತು ೞಕಾರಗಳು ಹತ್ತಿರವಿರುವಲ್ಲೆಲ್ಲ ಸ್ವರಗಳು ಈ ರೀತಿ ಮಡಚಿದ ಸ್ವರಗಳಾಗಿ ಬದಲಾಗಿದ್ದು, ಅನಂತರ ಆ ವ್ಯಂಜನಗಳು (ಳಕಾರ ಮತ್ತು ೞಕಾರಗಳು) ಬಿದ್ದುಹೋದುದರಿಂದಾಗಿ ಅವಕ್ಕೆ ಅರ್ತವ್ಯತ್ಯಾಸವನ್ನು ಹೊರುವ ಹೊಣೆ ದೊರೆತಿದೆಯುಂದು ಈ ಬದಲಾವಣೆಯನ್ನು ಸ್ತೂಲವಾಗಿ ವಿವರಿಸಬಹುದು.
ಬಡಗ ಒಳನುಡಿಯಲ್ಲಿ ಕಾಣಿಸುವ ಈ ಸ್ವರಗಳಿಗೆ ಕೆಳಗಿನ ಪದಗಳನ್ನು ಉದಾಹರಣೆಗಳನ್ನಾಗಿ ಕೊಡಬಹುದು (ಎಮೆನೋ 1940):

ಬಡಗರ ಕನ್ನಡ

ಅರೆಮಡಚಿದ ಸ್ವರ ಪೂರ್ತಿ ಮಡಚಿದ ಸ್ವರ ಮಡಚದ ಸ್ವರ ಕತ್ತೆ ‘ಕಲಿತೆ’ ಕತ್ತೆ ‘ಹಿಡಿ ಎಲೆ’’ ಕತ್ತೆ ‘ಕತ್ತೆ’’ ಬೇ ’‘ಬಾಯಿ’ ಬೇ ’‘ಬಳೆ’’ ಬೇ ’‘ಬೆಳೆ’’

ಗೀ ’‘ಗೇಯು’’ ಕೀ ’‘ಕೀಳು’ ಕಯ್ ‘ಕಯ್’’ ಕಯ್ ‘ಕಳೆ’

ಕೀಎ ‘ಕೆಳಗೆ’ ಕಯ್ ‘ಕೊಳೆತ ಹಣ್ಣು’

ಮೇಲೆ ಮೊದಲನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಮೊದಲ ನೆಯ ಸ್ವರ ಮಡಚದ ಸ್ವರವಾಗಿದೆ; ಆದರೆ ಎರಡನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಮೊದಲನೆಯ ಸ್ವರ ಅರೆಮಡಚಿದ ಸ್ವರವಾಗಿದೆ ಮತ್ತು ಮೂರನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಅದು ಪೂರ್ತಿ ಮಡಚಿದ ಸ್ವರವಾಗಿದೆ (ಇದನ್ನಿಲ್ಲಿ ಚಿಹ್ನೆಗಳ ಮೂಲಕ ಸೂಚಿಸಲು ಪ್ರಯತ್ನಿಸಿಲ್ಲ).

ಎಮೆನೋ ಅವರು 1940ರಲ್ಲಿ ವರ್ಣಿಸಿದ ಈ ವ್ಯತ್ಯಾಸದ ಕುರಿತು ಬಾಲಕ್ರುಶ್ಣನ್ ಅವರು 1999ರಲ್ಲಿ ಬರೆದಿರುವ ಬಡಗ ವ್ಯಾಕರಣದಲ್ಲಿ (ಬಾಲಕ್ರುಶ್ಣನ್ 1999) ಏನೂ ಹೇಳಿಲ್ಲ. ಅವರ ಸಮಯಕ್ಕಾಗುವಾಗ ಆ ವ್ಯತ್ಯಾಸ ಇಲ್ಲವಾಗಿತ್ತೋ ಅತವಾ ಅದನ್ನು ಉಳಿಸಿಕೊಂಡಿರುವ ಬಡಗ ಕನ್ನಡಿಗರು ಅವರ ಗಮನಕ್ಕೆ ಬರಲಿಲ್ಲವೋ ತಿಳಿಯದು. ಇದಲ್ಲದೆ, ಎಮೆನೋ ಅವರ 1940ರ ಬರಹವನ್ನು ಬಾಲಕ್ರುಶ್ಣನ್ ಗಮನಿಸಿದ ಹಾಗೂ ಕಾಣಿಸುವುದಿಲ್ಲ.

ಎಮೆನೋ ಅವರ ಬರಹದಲ್ಲಿದ್ದ ಮೇಲಿನ ಪದಗಳು ಬಾಲಕ್ರುಶ್ಣನ್ ಕೊಟ್ಟಿರುವ ಪದಕೋಶದಲ್ಲಿ ಒಂದೇ ರೂಪದವಾಗಿ ಬರುತ್ತವೆ. ಉದಾ ಹರಣೆಗಾಗಿ ‘ಬಾಯಿ’, ‘ಬಳೆ’ ಮತ್ತು ‘ಬೆಳೆ’ ಎಂಬ ಮೂರು ಅರ್ತದಲ್ಲೂ ಬೇ ಎಂಬ ಒಂದೇ ಪದ ಬರುತ್ತದೆ.

Eke →

2.5 ತಿರುಳು

ಮೂಲದ್ರಾವಿಡದ ಬೇರುಗಳಲ್ಲಿ ಸ್ವರಗಳ ಬಳಕೆ ಹೇಗಿತ್ತು ಮತ್ತು ಅದು ಕನ್ನಡದಲ್ಲಿ ಯಾವ ರೀತಿಯಲ್ಲೆಲ್ಲ ಬದಲಾಗಿದೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. ಬೇರುಗಳ ಸ್ವರಗಳಲ್ಲಿದ್ದ ’ಮೇಲೆ-ನಡುವೆ’ ವ್ಯತ್ಯಾಸ ಮೂಲತೆಂಕು ದ್ರಾವಿಡದ ಕಾಲದಲ್ಲೇನೇ ಅವುಗಳ ಅನಂತರ ಒಟ್ಟಿನ ಜಾಗದಲ್ಲಿ ಅಕಾರ

ಬಂದಿರುವಲ್ಲಿ ಅಳಿದು ಹೋಗಿತ್ತು. ಈ ಬದಲಾವಣೆಯ ಪರಿಣಾಮವನ್ನು ತುಳು ಮತ್ತು ಕೊರಗ ನುಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತೆಂಕು ದ್ರಾವಿಡ ನುಡಿಗಳಲ್ಲೂ ಕಾಣಬಹುದು. ಇದಲ್ಲದೆ, ನೆರೆಯ ನುಡಿಯಾದ ತೆಲುಗಿನಲ್ಲಿ ಮತ್ತು ಬೇರೆ ಕೆಲವು ನಡುದ್ರಾವಿಡ ನುಡಿಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ.

ಈ ಬದಲಾವಣೆಯಲ್ಲದೆ, ಕನ್ನಡದಲ್ಲಿ ನಡೆದ ಬೇರೆಯೂ ಕೆಲವು ಬದಲಾವಣೆಗಳು ಮೂಲದ್ರಾವಿಡದ ಬೇರುಗಳಲ್ಲಿ ಬರುತ್ತಿದ್ದ ಸ್ವರಗಳ ಸ್ವರೂಪವನ್ನು ಬದಲಾಯಿಸಿವೆ.

ಬೇರುಗಳ

ಸ್ವರಗಳಲ್ಲಿದ್ದ

ವ್ಯತ್ಯಾಸ ಮೂಲದ್ರಾವಿಡದಲ್ಲೇನೇ ಸೇರಿಕೆಯ ನಿಯಮವೊಂದಕ್ಕೆ ಒಳಗಾಗಿತ್ತು. ಅನಂತರ ಕನ್ನಡದ ಚರಿತ್ರೆಯಲ್ಲೂ ಇದು ಕೆಲವು ಬದಲಾವಣೆಗಳನ್ನು ಕಂಡಿದೆ. ಇವನ್ನೆಲ್ಲ ಮೇಲೆ ವಿವರವಾಗಿ ಪರಿಶೀಲಿಸಲಾಗಿದೆ.

ಉದ್ದ-ಗಿಡ್ಡ

ಈ ಸ್ವರಗಳ ಅನಂತರ ಬಂದಿದ್ದ ಒಟ್ಟುಗಳಲ್ಲಿ ಎಂತಹ ಸ್ವರಗಳು ಬರಬಲ್ಲುವಾಗಿದ್ದುವು ಮತ್ತು ಇವು ಕನ್ನಡದಲ್ಲಿ ಹೇಗೆ ಬದಲಾಗಿವೆ ಎಂಬುದನ್ನು ಮುಂದಿನ ಅದ್ಯಾಯದಲ್ಲಿ ವಿವರಿಸಲಾಗುವುದು.

3. ಒಟ್ಟಿನ ಸ್ವರಗಳು

Eke →

3.1 ಮುನ್ನೋಟ

ಮೂಲದ್ರಾವಿಡ ಪದಗಳ ಮೊದಲಿನ ಉಲಿಕಂತೆಯಲ್ಲಿ ಬರುವ ಸ್ವರಗಳು ಬೇರಿನದಾಗಿದ್ದುವು ಮತ್ತು ಅದರ ಅನಂತರ ಎರಡು, ಮೂರು ಇಲ್ಲವೇ ನಾಲ್ಕನೆಯ ಉಲಿಕಂತೆಯಲ್ಲಿ ಬರುವ ಸ್ವರಗಳು ಒಟ್ಟಿನದಾಗಿದ್ದುವು. ಬೇರಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಿಗೂ ಅವುಗಳ ಅನಂತರ ಬಂದಿದ್ದ ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಿಗೂ ನಡುವೆ ಹಲಕೆಲವು ವ್ಯತ್ಯಾಸಗಳಿವೆಯಾದ ಕಾರಣ, ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳನ್ನು ಇಲ್ಲಿ ಈ ಬೇರೆಯೇ ಒಂದು ಅದ್ಯಾಯದಲ್ಲಿ ವಿವರಿಸಲಾಗಿದೆ.

ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳನ್ನು ಬೇರಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಶ್ಟು ಸ್ಪಶ್ಟವಾಗಿ ಮತ್ತು ನಿಯಮಿತವಾಗಿ ವಿವರಿಸಲು ಸಾದ್ಯವಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಪದಗಳಲ್ಲಿ ಕಾಣಿಸುವ ಬೇರುಗಳು ಎಲ್ಲಾ ದ್ರಾವಿಡ ನುಡಿಗಳಲ್ಲೂ ಸಮಾನವಾಗಿರುತ್ತವೆ; ಆದರೆ ಅವುಗಳ ಅನಂತರ ಬರುವ ಒಟ್ಟುಗಳು ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಬೇರೆ ಬೇರಾಗಿರುತ್ತವೆ.

ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಬೇರೆ

ದ್ರಾವಿಡ ನುಡಿಗಳ ಪದಗಳೊಂದಿಗೆ ಹೋಲಿಸಿ ನೋಡಬಹುದು.

ಕನ್ನಡ

ಬೇರೆ ದ್ರಾವಿಡ ನುಡಿಗಳು ತಮಿಳು: ಅಳವಯ್, ತುಳು: ಅಳಕೆ, ತೆಲುಗು: ಅಲವಿ, ಕೂಯಿ: ಡಾಸ

ತೇಪೆ

ತಮಿಳು: ನಾಣ್ಮಯ್, ಕೊಡಗು: ಞಾಣ ತೆಲುಗು: ನಕ್ಕ, ಗೋಂಡಿ: ನರ್ಕಲ್ ತಮಿಳು: ತಯ್ಯಲ್, ಕೂವಿ: ತಚಲಿ

ಈ ಪದಗಳಲ್ಲೆಲ್ಲ ಮೊದಲನೆಯ ಉಲಿಕಂತೆ ಎಂದರೆ ಬೇರು ಸಮಾನ ವಾಗಿರುವುದನ್ನು ಕಾಣಬಹುದು. ಆದರೆ ಅದರ ಅನಂತರ ಬಂದ ಒಟ್ಟಿನ ಉಲಿಕಂತೆಗಳು ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರಾಗಿವೆ.

ಹಾಗಾಗಿ, ಹಲವು ಸಂದರ್ಬಗಳಲ್ಲಿ ಕನ್ನಡ ಪದಗಳಲ್ಲಿ ಕಾಣಿಸಿಕೊಳ್ಳುವ ಒಟ್ಟುಗಳು ಮೂಲದ್ರಾವಿಡದಲ್ಲಿ ಯಾವ ರೂಪದಲ್ಲಿ ಇದ್ದಿರಬಹುದು ಮತ್ತು ಅವುಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ನಮಗೆ ಸಾಕಶ್ಟು ಆದಾರಗಳು ಸಿಗುವುದಿಲ್ಲ.

Eke →

3.2 ಮೂಲದ್ರಾವಿಡದ ಒಟ್ಟುಗಳು

ಮೂಲದ್ರಾವಿಡ ಪದಗಳಲ್ಲಿ ಬರುತ್ತಿದ್ದ ಒಟ್ಟುಗಳ ಕುರಿತಾಗಿ ಕೆಲವು ನಿಯಮಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಾಗಿದೆ.

(1) ಒಟ್ಟಿನ ಸ್ವರಗಳಾಗಿ ಮೂಲದ್ರಾವಿಡದಲ್ಲಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರ ಬರಬಲ್ಲುವಾಗಿದ್ದುವು. ಉದಾಹರಣೆ ಗಾಗಿ, ಕನ್ನಡದ ಅಱಿ ‘ತಿಳಿ’, ಇೞಿ ‘ಇಳಿ’, ಪಿಡಿ ‘ಹಿಡಿ’ ಪದಗಳಲ್ಲಿ ಮೂಲದ್ರಾವಿಡ ಬೇರಿನ ಅನಂತರ ಇ ಒಟ್ಟು ಬಂದಿದೆ; ಪುೞು ‘ಹುಳ’, ಕಿಱು ‘ಚಿಕ್ಕ’’ ಪದಗಳಲ್ಲಿ ಉ ಒಟ್ಟು ಬಂದಿದೆ ಮತ್ತು ನೀಳ ‘ಉದ್ದ’, ತುಂಬ ‘ಬಹಳ’, ಕೂಡ ‘ಒಟ್ಟಾಗಿ’ ಪದಗಳಲ್ಲಿ ಅ ಒಟ್ಟು ಬಂದಿದೆ.

ಕನ್ನಡ ಪದಗಳಲ್ಲಿ ಎಕಾರವೂ ಒಟ್ಟಿನ ರೂಪದಲ್ಲಿ ಬಂದಿರುವುದನ್ನು ಕಟ್ಟು-ಕಟ್ಟೆ, ಮೊದಲಾದ ಪದಜೋಡಿಗಳಲ್ಲಿ ಕಾಣಬಹುದು. ಆದರೆ, ಇದು ಮೂಲದ್ರಾವಿಡದಲ್ಲಿ *ಅಯ್ ಎಂಬ ರೂಪದಲ್ಲಿದ್ದ ಒಟ್ಟಾಗಿತ್ತು. ಕನ್ನಡದಲ್ಲಿ ಅದು ಎ ಒಟ್ಟಾಗಿ

ಕೊಲ್ಲು-ಕೊಲೆ

ನಗು-ನಗೆ,

ಬದಲಾಗಿದೆ. ತಮಿಳಿನ ಕಟ್ಟಯ್ ‘ಕಟ್ಟೆ’, ನಕಯ್ ‘ನಗೆ’, ಕೊಲಯ್ ‘ಕೊಲೆ’ ಮೊದಲಾದ ಪದಗಳಲ್ಲಿ ಈ ಒಟ್ಟು ಮೂಲದ್ರಾವಿಡದ ರೂಪದಲ್ಲಿ ಉಳಿದುಕೊಂಡಿದೆ.

(2) ತಡೆಯುಲಿಗಳಲ್ಲಿ ಕೊನೆಗೊಳ್ಳುವ ಬೇರುಗಳ ಅನಂತರ ಉಚ್ಚಾ ರಣೆಗಾಗಿ ಉಕಾರವೊಂದನ್ನು ಸೇರಿಸಿಕೊಳ್ಳಲಾಗುತ್ತಿತ್ತು (6.2 ನೋಡಿ). ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ ಈ ಉಕಾರ ಬಿದ್ದುಹೋಗುತ್ತಿತ್ತು. ಈ ಸೇರಿಕೆಯ ನಿಯಮವನ್ನು ಕನ್ನಡದ ಕೂಡು-ಕೂಡ, ತೆಱು-ತೆಱ ಪದಗಳಲ್ಲಿ ಕಾಣಬಹುದು.

ಉದಾಹರಣೆಗಾಗಿ, ಕೂಡು ಪದದ ಕೊನೆಯಲ್ಲಿ ಕಾಣಿಸುವ ಉಕಾರ ಉಚ್ಚಾರಣೆಗಾಗಿ ಬಂದುದು; ಆ ಪದಕ್ಕೆ ಅ ಒಟ್ಟನ್ನು ಸೇರಿಸಿ ಕೂಡ ಪದವನ್ನು ತಯಾರಿಸಬಹುದು. ಆದರೆ ಈ ರೀತಿ ಅ ಒಟ್ಟನ್ನು ಸೇರಿಸುವಾಗ ಕೂಡು ಪದದ ಕೊನೆಯಲ್ಲಿರುವ ಉಕಾರ ಬಿದ್ದುಹೋಗುತ್ತದೆ.

(3) ಬೇರುಗಳ ಅನಂತರ ಬರಬಲ್ಲ ಉ ಒಟ್ಟಿಗಿಂತ ಬೇರಾಗಿರುವ ಇಂತಹ ಉಚ್ಚಾರಣೆಗಾಗಿ ಸೇರುವ ಉಕಾರವೊಂದನ್ನು ಕಲ್ಪಿಸಿಕೊಳ್ಳಲು ಮೂಲದ್ರಾವಿಡದ ಕೆಲವು ಸೇರಿಕೆಯ ನಿಯಮಗಳು ಕಾರಣ.

ಉದಾಹರಣೆಗಾಗಿ, ಮೂಲದ್ರಾವಿಡದ ಬೇರುಗಳಲ್ಲಿ ಬರುವ ಇಮ್ಮಡಿ ತಡೆಯುಲಿಗಳು ಅವುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆಯೆಂಬ ಸೇರಿಕೆಯ ನಿಯಮವೊಂದಿದೆ (4.4.1 ನೋಡಿ).

ಆದರೆ, ಇಂತಹ ಇಮ್ಮಡಿ ತಡೆಯುಲಿಗಳ ಅನಂತರ ಉಚ್ಚಾರಣೆಗಾಗಿ ಉಕಾರ ಬಂದಿದೆಯಾದರೆ, ಅಂತಹ ಪದಗಳಲ್ಲಿ ಈ ರೀತಿ ಇಮ್ಮಡಿ ತಡೆಯುಲಿ ಒತ್ತೆ ತಡೆಯುಲಿಯಾಗುವ ಬದಲಾವಣೆ ನಡೆಯುವುದಿಲ್ಲ.

ಕನ್ನಡದ ನುಗ್ಗು ಮತ್ತು ನುಗಿ ಪದಗಳನ್ನು ಈ ವ್ಯತ್ಯಾಸಕ್ಕೆ ಉದಾ

ಹರಣೆಯಾಗಿ ಕೊಡಬಹುದು:

ನುಗ್ಗು ಪದದಲ್ಲಿ ಬಂದಿರುವ ಉಕಾರ ಉಚ್ಚಾರಣೆಗಾಗಿ ಬಂದುದು;

ಹಾಗಾಗಿ, ಅದರ ಗ್್ಗ ಎಂಬುದು ಒತ್ತೆ ತಡೆಯುಲಿಯಾಗಿ ಬದಲಾಗಿಲ್ಲ.

ಆದರೆ ನುಗಿ ಪದದಲ್ಲಿ ಬಂದಿರುವ ಇ ಎಂಬುದು ಒಂದು ಒಟ್ಟು. ಗ್್ಗ ಎಂಬುದು ಒತ್ತೆ ತಡೆಯುಲಿಯಾಗಿ

ಹಾಗಾಗಿ, ಅದರಲ್ಲಿದ್ದ ಬದಲಾಗಿದೆ.

(4) ಉಚ್ಚಾರಣೆಗಾಗಿ ಬಂದ ಸ್ವರಕ್ಕೂ ಒಟ್ಟಿನ ಸ್ವರಕ್ಕೂ ನಡುವಿರುವ ಈ ವ್ಯತ್ಯಾಸ ಸಮಯ ಕಳೆದಂತೆ ನುಡಿಯೊಂದರಲ್ಲಿ ಇಲ್ಲವಾಗಲು ಸಾದ್ಯವಿದೆ. ಉದಾಹರಣೆಗಾಗಿ, ಕನ್ನಡದ ಕ್ರಿಯಾಪದಗಳಿಗೆ ಉಚ್ಚಾರಣೆಗಾಗಿ ಸೇರಿಸಿರುವ ಉಕಾರದ ಸ್ವರೂಪ ಸಮಯ ಕಳೆದಂತೆ ಬದಲಾಗಿದೆ.

ಹಳೆಗನ್ನಡದಲ್ಲಿ ಮಾಡು, ನೋಡು, ಬೇಡು ಮೊದಲಾದ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಬಂದಿದ್ದ ಉಕಾರ ಅವುಗಳ ಅನಂತರ ಒಟ್ಟುಗಳು ಸೇರಿದಾಗ ಬಿದ್ದುಹೋಗುವಂತಹದಾಗಿತ್ತು (ಮಾೞ್ಪೂಡೆ, ಮಾಳ್ತುದು).

ಆದರೆ, ಅನಂತರದ ಸಮಯದಲ್ಲಿ ಈ ಉಕಾರ ಬಿದ್ದು ಹೋಗದೆ (ಮಾಡುವೊಡೆ,

ಕ್ರಿಯಾಪದದ ಅಂಶವಾಗಿಯೇ ಉಳಿದಿರುವುದನ್ನು ಮಾಡಿದುದು) ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಬಹುದು.

Eke →

3.3 ಉದ್ದಸ್ವರ ಗಿಡ್ಡವಾಗುವುದು

ತಮಿಳಿನ ಕೆಲವು ಪದಗಳಲ್ಲಿ ಒಟ್ಟಿನ ಜಾಗದಲ್ಲಿ ಕಾಣಿಸುವ ಉದ್ದ ಸ್ವರ ಕನ್ನಡದಲ್ಲಿ ಗಿಡ್ಡ ಸ್ವರವಾಗಿ ಕಾಣಿಸುತ್ತದೆ. ಇಲ್ಲಿ ಮೇಲ್ನೋಟಕ್ಕೆ ಉದ್ದ ಸ್ವರ ಕನ್ನಡದಲ್ಲಿ ಗಿಡ್ಡ ಸ್ವರವಾಗಿದೆಯೆಂದು ತೋರುತ್ತದೆ. ಉದಾಹರಣೆ ಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು. ಕನ್ನಡ
ಕೞಲ್ ‘ಮಜ್ಜಿಗೆ’’ ನೆಂಟರು

ಕಿೞಾನ್ ಕಾಕ್ಕಾಯ್ ನಾಟ್ಟಾರ್

ತಮಿಳು

ಕನ್ನಡಿ

ಆದರೆ, ಎರಡು ಇಲ್ಲವೇ ಮೂರನೇ ಉಲಿಕಂತೆಯಲ್ಲಿ ಉದ್ದಸ್ವರ ಮತ್ತು ಗಿಡ್ಡಸ್ವರಗಳ ನಡುವಿನ ವ್ಯತ್ಯಾಸ ಮೂಲದ್ರಾವಿಡದಲ್ಲಿ ಇತ್ತೆಂದು ವಾದಿಸಲು ಹೆಚ್ಚಿನ ಆದಾರವೇನೂ ಇಲ್ಲ. ಹಾಗಾಗಿ, ಒಟ್ಟಿನ ಜಾಗದಲ್ಲಿ ಬರಬಲ್ಲ ಸ್ವರಗಳೆಲ್ಲ ಮೂಲದ್ರಾವಿಡದಲ್ಲಿ ಗಿಡ್ಡವಾಗಿ ಮಾತ್ರ (ಅದರಲ್ಲೂ ಅ, ಇ, ಉಗಳಾಗಿ ಮಾತ್ರ) ಇದ್ದುವು ಎಂಬುದೇ ಈಗಿನ ಕಲ್ಪನೆಯಾಗಿದೆ.

ಈ ಕಲ್ಪನೆಯಂತೆ ಮೇಲಿನ ಪದಗಳಲ್ಲಿ ಕನ್ನಡ ಮೂಲದ್ರಾವಿಡದ ಒಟ್ಟಿನ ರೂಪಗಳನ್ನು ಉಳಿಸಿಕೊಂಡಿದೆ ಮತ್ತು ತಮಿಳು ಅವನ್ನು ಉದ್ದ ಸ್ವರದವನ್ನಾಗಿ ಬದಲಾಯಿಸಿದೆ.

ಆದರೆ, ಇದಕ್ಕೆ ಅಪವಾದವಾಗಿ ಇಂತಹ ಕೆಲವು ಪದಗಳು ಜೋಡು ಪದಗಳಾಗಿರಲು ಸಾದ್ಯವಿದ್ದು, ಅವುಗಳಲ್ಲಿ ಬರುವ ಉದ್ದಸ್ವರ ಬೇರಿನ ಸ್ವರವಾಗಿರಲು ಸಾದ್ಯವಿದೆ. ಕನ್ನಡ ಆ ಬೇರನ್ನು ಒಟ್ಟಿನ ರೂಪಕ್ಕೆ ಬದಲಾಯಿಸಿ ಅದರ ಉದ್ದಸ್ವರವನ್ನು ಗಿಡ್ಡsಸ್ವರವಾಗಿ ಮಾಡಿಕೊಂಡಿದೆ.

ಕನ್ನಡ
ಕಣವೆ, ಕಣಿವೆ

ತಮಿಳು ಕಣವಾಯ್ ಅಟಿಕ್ಕಾಯ್ ಕುಣ್ಟಿಕ್ಕಾಯ್

ಮೇಲಿನ ಕನ್ನಡ ಪದಗಳಲ್ಲಿ ಕಾಣಿಸುವ ಗಿಡ್ಡ ಎಕಾರ ತಮಿಳಿನಲ್ಲಿ ಆಯ್ ರೂಪದಲ್ಲಿ ಕಾಣಿಸುತ್ತದೆ. ನಿಜಕ್ಕೂ ಇದು ಬೇರಿನ (ವಾಯ್ ‘ಬಾಯಿ’ ಮತ್ತು ಕಾಯ್ ‘ಕಾಯಿ’) ಸ್ವರವಲ್ಲದೆ ಒಟ್ಟಿನ ಸ್ವರವಲ್ಲ. ಕನ್ನಡದ ಪದಗಳಲ್ಲಿ ಮಾತ್ರ ಇದು ಗಿಡ್ಡಸ್ವರವಾಗಿ ಬದಲಾಗಿದ್ದು ಒಟ್ಟಿನ ರೂಪವನ್ನು ಪಡೆದಿದೆ.

Eke →

3.4 ಎರಡು ಗಿಡ್ಡ ಸ್ವರಗಳು ಸೇರಿ ಉದ್ದ ಸ್ವರವಾಗುವುದು

ಮೂಲದ್ರಾವಿಡದ ಕ್ರಿಯಾಬೇರುಗಳ ಕೊನೆಯಲ್ಲಿದ್ದ ಯಕಾರ ಇಲ್ಲವೇ ಕಕಾರ ಬಿದ್ದುಹೋದಾಗ (4.3.5 ನೋಡಿ) ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ ಮತ್ತು ಅದರ ಮೊದಲು ಬಂದಿದ್ದ ಬೇರಿನ ಸ್ವರ - ಇವೆರಡು ಒಟ್ಟು ಸೇರಿ ಒಂದು ಉದ್ದ ಸ್ವರ ಕಾಣಿಸಿಕೊಳ್ಳುತ್ತದೆ. ಇದು ಮೂಲದ್ರಾವಿಡದಲ್ಲೇನೇ ನಡೆದ ಬದಲಾವಣೆಯಾಗಿರಬಹುದು. ಈ ಬದಲಾವಣೆಯನ್ನು ತೋರಿಸುವ (ಬದಲಾದ) ಮತ್ತು ತೋರಿಸದಿರುವ (ಬದಲಾಗದ) ಎರಡು ರೀತಿಯ ಪದಗಳೂ ಕನ್ನಡದಲ್ಲಿವೆ.

ಬದಲಾಗದ ಪದ
ತೊಗಲು ಮೊಗ
ತಿಗಡು ‘ತಿಕ್ಕು’’

ಬದಲಾದ ಪದ ತೋಲು ಮೋರೆ

ಇದಲ್ಲದೆ, ಬೇರೆ ದ್ರಾವಿಡ ನುಡಿಗಳ ಪದಗಳೂ ಈ ಬದಲಾವಣೆ ನಡೆ ದಿರುವುದನ್ನು ಸೂಚಿಸಬಲ್ಲುವು. ಉದಾಹರಣೆಗಾಗಿ, ಕನ್ನಡದ ಜೇನು ಪದದಲ್ಲಿ ಈ ಬದಲಾವಣೆ ನಡೆದಿದೆಯೆಂಬುದನ್ನು ತುಳುವಿನ ತಿಗ ‘ಜೇನು’ ಪದ ಸೂಚಿಸುತ್ತದೆ; ಕನ್ನಡದ ಕೆಸವು ಪದದಲ್ಲಿ ಈ ಬದಲಾವಣೆ ನಡೆದಿಲ್ಲ, ಆದರೆ, ತಮಿಳಿನ ಚೇಮ್ಪು ‘ಕೆಸವು’ ಪದದಲ್ಲಿ ನಡೆದಿದೆ.

Eke →

3.5 ಎರಡನೆಯ ಸ್ವರದಲ್ಲಿ ಬದಲಾವಣೆ

ಮೂರು ಉಲಿಕಂತೆಗಳಿರುವ ಹಲವು ಪದಗಳಿಗೆ ಕಿಟ್ಟೆಲ್ ಅವರ ಕನ್ನಡ- ಇಂಗ್ಲಿಶ್ ನಿಗಂಟಿನಲ್ಲಿ ಅವುಗಳ ಎರಡನೆಯ ಸ್ವರವನ್ನವಲಂಬಿಸಿ ಮೂರು ಮೂರು ರೂಪಗಳಿರುವುದನ್ನು ಕಾಣಬಹುದು. ಕನ್ನಡದ ಪದಗಳಲ್ಲಿ ಈ ಎರಡನೆಯ ಸ್ವರ ಅಕಾರ, ಇಕಾರ ಇಲ್ಲವೇ ಉಕಾರವಾಗಿರಲು ಸಾದ್ಯ ಎಂಬುದೇ ಅವುಗಳಿಗೆ ಈ ರೀತಿ ಮೂರು ಮೂರು ರೂಪಗಳು ಕಾಣಿಸಿ

ಕೊಳ್ಳಲು ಕಾರಣ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪದಗಳನ್ನು ಗಮನಿಸಬಹುದು.

ಇಮರು
ಪಾಸಗೆ
ಕುಡಕ
ಹುಡಗಿ

ಇಮಿರು
ಪಾಸಿಕೆ

ಅದುರು ‘ನಡುಗು’’ ಇಮುರು ‘ಒಣಗು’’ ಉಡುಗು ‘ಕುಗ್ಗು’’ ಪಾಸುಗೆ ‘ಹಾಸಿಗೆ’ ಕುಡುಕ ಹುಡುಗಿ

ಇನ್ನು ಕೆಲವು ಪದಗಳಿಗೆ ಎರಡನೆಯ ಸ್ವರವನ್ನವಲಂಬಿಸಿ ಎರಡೆರಡು ರೂಪಗಳು ಕಾಣಿಸುತ್ತವೆ; ಅದು (1) ಅಕಾರ ಇಲ್ಲವೇ ಇಕಾರವಾಗಿರ ಬಹುದು (ಅಱವೆ, ಅಱಿವೆ; ಒಕ್ಕಲ್, ಒಕ್ಕಿಲ್); (2) ಇಕಾರ ಇಲ್ಲವೇ ಉಕಾರವಾಗಿರಬಹುದು (ಅಳಿಪು, ಅಳುಪು; ಒಪ್ಪಿಗೆ, ಒಪ್ಪುಗೆ); (3) ಅಕಾರ ಇಲ್ಲವೇ ಉಕಾರವಾಗಿರಬಹುದು (ಅಲಗು, ಅಲುಗು; ಗಂಡಸು, ಗಂಡುಸು).

ಇದಲ್ಲದೆ, ಎರಡನೆಯ ಸ್ವರವಾಗಿ ಅಕಾರ ಇಲ್ಲವೇ ಎಕಾರವನ್ನು ತೋರಿಸುವ ಪದಗಳು (ಅಳತ, ಅಳೆತ; ಬರಹ, ಬರೆಹ) ಕೆಲವಿವೆ ಮತ್ತು ಅ, ಇ, ಉ, ಎಗಳೆಂಬ ನಾಲ್ಕು ಸ್ವರಗಳನ್ನೂ ತೋರಿಸುವ ಪದಗಳೂ (ಅಳಸು, ಅಳಿಸು, ಅಳುಸು, ಅಳೆಸು) ಕೆಲವಿವೆ.

ಈ ಹೆಚ್ಚಿನ ರೂಪಗಳು ಯಾವ ರೀತಿಯ ಪದಗಳಲ್ಲಿ ಕಾಣಿಸಿಕೊಳ್ಳು ತ್ತವೆ, ಅವುಗಳ ಹಿಂದೆ ನಿಯಮವೇನಾದರೂ ಅಡಗಿದೆಯೇ ಎಂಬುದನ್ನು ಕಂಡುಹಿಡಿಯುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಎರಡನೇ ಉಲಿಕಂತೆಯಲ್ಲಿರುವ ಸ್ವರ ಮೂಲ ದ್ರಾವಿಡದ *ಅಯ್ (ಇಲ್ಲವೇ *ಅ) ಎಂಬುದರಿಂದ ಬಂದಿದೆಯಾದರೆ,

ಅದು ಇಂತಹ ಪದಗಳಲ್ಲಿ ಅಕಾರವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಒಂದು ನಿಯಮವನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಅಳೆ ಅಳತೆ
ನಡತೆ
ಬರೆ ಬರವಣಿಗೆ ಮೆರೆ ಮೆರವಣಿಗೆ ಬೆಳೆ ಬೆಳವಣಿಗೆ

ಕಳವು
ನೆರವು ತೆರವು ನಡವಳಿಕೆ ನೆನಪು ನೆನೆ ಬರೆ ಬರಹ

ಇದಲ್ಲದೆ, ಈ ಬೇರೆ ಬೇರೆ ರೂಪಗಳು ಕನ್ನಡದ ಬೇರೆ ಬೇರೆ ಒಳನುಡಿಗಳಲ್ಲಿ ಬೆಳೆದುಬಂದು, ಅಲ್ಲಿಂದ ಬರಹ ಕನ್ನಡಕ್ಕೆ ಬಂದಿರಲು ಸಾದ್ಯವಿದೆ.

ಯಾವ

ಪದಗಳಲ್ಲಿ

ಸ್ವರ ಎರಡನೆಯ

ಇದು ನಿಜವೇ ಎಂಬುದನ್ನು ತಿಳಿಯಲು ಇವತ್ತಿನ ಒಳನುಡಿಗಳಲ್ಲಿರುವ ಸ್ವರವಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನೂ ಕಂಡುಹಿಡಿಯುವ ಅವಶ್ಯಕತೆಯಿದೆ. ನಿಯಮಗಳಿಗಿಂತಲೂ ‘ಒಲವು’ಗಳು ಕಾಣಿಸಿಕೊಳ್ಳುವುದೇ ಜಾಸ್ತಿ ಎಂಬುದು ಇಲ್ಲಿ ನಾವು ಎದುರಿಸಬೇಕಾಗಿರುವ ತೊಂದರೆಯಾಗಿದೆ.

ಪದರಚನೆಯಲ್ಲಿ

ಸಾಮಾನ್ಯವಾಗಿ

Eke →

3.5.1 ಎರಡನೇ ಸ್ವರ ಬಿದ್ದು ಹೋಗುವುದು

ಮೂರು ಉಲಿಕಂತೆಗಳಲ್ಲೂ ಸ್ವರವಿದ್ದು, ಎರಡನೆಯ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರವಿದ್ದ ಪದಗಳ ಎರಡನೆಯ ಗಿಡ್ಡಸ್ವರ ಕನ್ನಡದ ಹಲವು ಪದಗಳಲ್ಲಿ ಬಿದ್ದುಹೋಗಿರುವುದನ್ನು (ಮತ್ತು ಅನಂತರ ರಕಾರ ಇಲ್ಲವೇ ೞಕಾರ ಮುಂದಿನ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗಿರುವುದನ್ನು) ಕಾಣಬಹುದು. ಕೆಳಗೆ ಕೊಟ್ಟಿರುವ ತಮಿಳು ಪದಗಳಲ್ಲಿ ಈ ಸ್ವರ ಬಿದ್ದುಹೋಗಿಲ್ಲ.

ಕನ್ನಡ
ಉರ್ಕು, ಉಕ್ಕು
ಕುರ್ಗು, ಕುಗ್ಗು ಗುರ್ಬಿ, ಗುಬ್ಬಿ ಪರ್ತಿ, ಹತ್ತಿ

ಉರ್ದು, ಉದ್ದು
ಕರ್ಚು, ಕಚ್ಚು ಮೞ್ಗು, ಮಗ್ಗು

ಪಿೞ್ಕ, ಹಿಕ್ಕೆ

ತಮಿಳು ಉರುಕ್ಕು ಕುರಙ್ಕು ಕುರುವಿ ಪರುತ್ತಿ

ಉೞುನ್ತು ಕೞುವು ಮೞುಙ್ಕು ಪಿೞುಕ್ಕಯ್

ಆದರೆ ಈ ಬದಲಾವಣೆ ಕನ್ನಡದಲ್ಲಿ ನಿಯಮಿತವಾಗಿ ನಡೆದಿಲ್ಲ. ಕೆಳಗೆ ಕೊಟ್ಟಿರುವ ಪದಗಳ ಎರಡನೇ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರ ಬಂದಿದೆಯಾದರೂ ಎರಡನೆಯ ಗಿಡ್ಡಸ್ವರ ಬಿದ್ದುಹೋಗಿಲ್ಲ.

ಕನ್ನಡ
ಎರಪು, ಎರವು
ಗೊರಸು ಸರಕು
ಅೞಿವು
ಪೞಗು
ಮೊೞಗು

ತಮಿಳು ಇರಪ್ಪು ಕುರಚ್ಚಯ್ ಚರಕ್ಕು ಅೞಿಪು ಪೞಕು ಮುೞುಙ್ಕು

ಎರಡನೆಯ ಉಲಿಕಂತೆಯಲ್ಲಿ ಬಂದ ಗಿಡ್ಡ ಸ್ವರಗಳು ಕರ್ನಾಟಕದ ಇಂದಿನ ಕೆಲವು ಒಳನುಡಿಗಳಲ್ಲಿ ಬೇರೆ ಹಲವು ಸನ್ನಿವೇಶಗಳಲ್ಲೂ ಬಿದ್ದು ಹೋಗಿವೆ.

ಉದಾಹರಣೆಗಾಗಿ, ಒಳನಾಡಿನ ಬಡಗು ಒಳನುಡಿಗಳಲ್ಲಿ ಇವು ಹೆಚ್ಚಿನ ಪದಗಳಲ್ಲೂ ಬಿದ್ದುಹೋಗಿವೆ; ಆದರೆ, ತೆಂಕು ಒಳನುಡಿಗಳಲ್ಲಿ ಕೆಲವು

ಸನ್ನಿವೇಶಗಳಲ್ಲಿ (ಉದಾ: ಎರಡನೇ ಮತ್ತು ಮೂರನೇ ಉಲಿಕಂತೆಗಳಲ್ಲಿ ತಡೆಯುಲಿ ತಡೆಯುಲಿಯಿದ್ದು, ಒತ್ತಕ್ಶರವಾಗಿರುವಲ್ಲಿ) ಅವು ಹಾಗೆಯೇ ಉಳಿದಿವೆ ಮತ್ತು ಉಳಿದೆಡೆಗಳಲ್ಲಿ ಬಿದ್ದು ಹೋಗಿವೆ (ಉಪಾದ್ಯಾಯ 1976:256).

ಉಲಿಕಂತೆಯ

ಎರಡನೇ

(1) ಒಳನಾಡಿನ ಬಡಗು ಒಳನುಡಿಗಳಲ್ಲಿ ಮಾತ್ರ ಬಿದ್ದುಹೋಗಿರುವುದು:

ಬರಹ

ಮಯ್ಸೂರು

ಗುಲ್ಬರ್ಗ

(2) ಒಳನಾಡಿನ ತೆಂಕು ಮತ್ತು ಬಡಗು ಒಳನುಡಿಗಳೆರಡರಲ್ಲೂ

ಬಿದ್ದುಹೋಗಿರುವುದು:

ಬರಹ
ಕುದುರೆ
ಸಾಸಿವೆ
ಬಾಗಿಲು

ಮಯ್ಸೂರು ಕುದ್ರೆ
ಸಾಸ್ವೆ
ಬಾಗ್ಲು

ಗುಲ್ಬರ್ಗ ಕುದ್ರಿ ಸಾಸ್ವಿ ಬಾಗ್ಲ

ಕರಾವಳಿಯ ತೆಂಕು ಒಳನುಡಿಗಳಲ್ಲಿ ಈ ಸ್ವರ ಬಿದ್ದುಹೋಗದೆ ಉಳಿದಿದೆಯುಂಬುದಕ್ಕೆ ತೆಂಕು ಹವ್ಯಕದ ಕುದುರೆ, ಸಾಸಮೆ, ಬಾಗಿಲು, ಪದಗಳನ್ನು ಉದಾಹರಣೆಯಾಗಿ ಕೊಡಬಹುದು.

ಮೊದಲಾದ

(3) ಮಡಿಕೇರಿಯ ಜೇನುಕುರುಬರ ಕನ್ನಡದಲ್ಲಿ ಬರುವ ಮೂರು ಉಲಿಕಂತೆಯ ಪದಗಳಲ್ಲಿ ಬೇರೆಯೇ ಒಂದು ಬದಲಾವಣೆ ಕಾಣಿಸುತ್ತಿದೆ. ಇಂತಹ ಪದಗಳ ಎರಡನೆಯ ಉಲಿಕಂತೆಯಲ್ಲಿ ಬರುವ ಸ್ವರ ಈ ಒಳನುಡಿಯಲ್ಲಿ ಉದ್ದಸ್ವರವಾಗುತ್ತದೆ (ಉಪಾದ್ಯಾಯ 1976). ಆದರೆ

ಇದು ಅಕಾರವನ್ನು ಮಾತ್ರವಲ್ಲದೆ ಬೇರೆ ಸ್ವರಗಳನ್ನೂ ಬದಲಾಯಿಸಿದೆಯೇ ಎಂಬುದನ್ನು ತಿಳಿಯಲು ಉದಾಹರಣೆಗಳಿಲ್ಲ.

ಬರಹದ ಕನ್ನಡ
ಹಗಲು
ಕನಸು

ಕತ್ತಲೆ
ಕೂದಲು

ಜೇನುಕುರುಬ ಹಗಾಲು ವನಾಕೆ ಕನಾಸು

ಕತ್ತಾಲೆ ಕೂದಾಲು

Eke →

3.5.2 ಮೂಗಿಸಿದ ಸ್ವರಗಳು

ಎರಡನೇ (ಇಲ್ಲವೇ ಮತ್ತಿನ) ಸ್ವರದ ಅನಂತರ ಬಂದಿದ್ದ ಮೂಗುಲಿ ಬಿದ್ದು ಹೋದಾಗ ಅದರ ಮೊದಲಿನ ಸ್ವರ ಕೆಲವು ಒಳನುಡಿಗಳಲ್ಲಿ ಮೂಗಿಸಿದ ಸ್ವರವಾಗಿ ಬದಲಾಗುತ್ತದೆ (5.2.6 ನೋಡಿ).

ಕರಾವಳಿಯ ಹವ್ಯಕ ಕನ್ನಡದಲ್ಲಿ ಇಂತಹ ಸನ್ನಿವೇಶದಲ್ಲಿ ಬಂದಿದ್ದ ಳಕಾರವೂ ಬಿದ್ದು ಹೋದುದರಿಂದಾಗಿ, ಮೂಗಿಸಿದ ಸ್ವರಕ್ಕೆ ‘ಗಂಡಸು’ ಅರ್ತವನ್ನು ಸೂಚಿಸುವ ಕೆಲಸ ದೊರೆತಿದೆ. ಯಾಕೆಂದರೆ, ಳಕಾರ ಬಿದ್ದುಹೋಗಿರುವಲ್ಲಿ ಅದರ ಮೊದಲು ಬಂದಿದ್ದ ಸ್ವರ ಬದಲಾಗದೆ

ಹಳೆಗನ್ನಡ

ಹವ್ಯಕ ಕನ್ನಡ

ಬಂದನ್
ಬಂದಳ್

ಮಾಡಿದನ್ ಮಾಡಿದಳ್

ಮಾಡಿದ ᵒ ಮಾಡಿದ

ಆದರೆ, ಹಳೆಗನ್ನಡದ ಅಪ್ಪನ್, ಅಜ್ಜನ್ (ಹವ್ಯಕ ಅಪ್ಪ ᵒ, ಅಜ್ಜ ᵒ)
ಮೊದಲಾದ ಗಂಡಸರನ್ನು ಸೂಚಿಸುವ ಪದಗಳಲ್ಲಿ ಮಾತ್ರವಲ್ಲದೆ, ಅಕ್ಕನ್ (ಹವ್ಯಕ ಅಕ್ಕ ᵒ)ದಂತಹ ಬೇರೆ ಕೆಲವು ಪದಗಳಲ್ಲೂ ಈ ಬದಲಾವಣೆ ನಡೆದಿದೆಯಾದ ಕಾರಣ ಇಂತಹ ಪದಗಳಲ್ಲಿ ಮೂಗಿಸಿದ ಸ್ವರಕ್ಕೆ ಮೇಲಿನ ಅರ್ತವಿಲ್ಲ.

Eke →

3.6 ಪದಗಳ ಕೊನೆಯ ಸ್ವರಗಳು

ಮೂಲದ್ರಾವಿಡ ಪದಗಳ ಕೊನೆಯಲ್ಲಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರವೇ ಬರಬಲ್ಲುವಾಗಿದ್ದುವು. ಆದರೆ ಕನ್ನಡದ ಹಲವು ಕಾಣಬಹುದು. ಪದಗಳ ಮೂಲದ್ರಾವಿಡ ಪದಗಳ ಕೊನೆಯಲ್ಲಿ ಬರುತ್ತಿದ್ದ ಅಯ್ ಎಂಬುದು ಕೆಲವು ಸನ್ನಿವೇಶಗಳಲ್ಲಿ ಎಕಾರವಾಗಿ ಕನ್ನಡದಲ್ಲಿ ಬದಲಾಗಿರುವುದೇ ಇದಕ್ಕೆ ಕಾರಣ. ಇದಲ್ಲದೆ, ಕ್ರಿಯಾಪದಗಳ ಕೊನೆಯಲ್ಲಿದ್ದ ಅಕಾರವೂ ಕನ್ನಡದಲ್ಲಿ ಎಕಾರವಾಗಿದೆ.

ಕೊನೆಯಲ್ಲಿ ಎಕಾರ ಬಂದಿರುವುದನ್ನು

ಪದಗಳ ಕೊನೆಯಲ್ಲಿದ್ದ ಬೇರೆ ಕೆಲವು ಸ್ವರಗಳು ಕನ್ನಡದ ಒಳನುಡಿ ಗಳಲ್ಲಿ ಬದಲಾಗಿವೆ. ಪದಗಳ ಕೊನೆಯ ಎಕಾರ ಇಕಾರವಾಗುವುದು, ಅಕಾರ ಅ಼ಕಾರವಾಗುವುದು ಮತ್ತು ಉಕಾರ ಉ ಮತ್ತು ಉ್ಗಳಾಗಿ ಇದಲ್ಲದೆ, ಒಡೆದುಕೊಳ್ಳುವುದು ಉಕಾರದಲ್ಲಿ ವ್ಯಂಜನಗಳಲ್ಲಿ ಕೊನೆಗೊಳ್ಳುವಂತಾದುದು ಹೊಸಗನ್ನಡದ ಇನ್ನೊಂದು ಬದಲಾವಣೆ.

ಬದಲಾವಣೆಗಳು. ಪದಗಳು

ಕೊನೆಗೊಳ್ಳುವ

Eke →

3.6.1 ಅಯ್ ಎಂಬುದು ಎಕಾರವಾಗುವುದು

ಮೂಲದ್ರಾವಿಡದಲ್ಲಿದ್ದ ಉಲಿಕಂತೆಗಳಿರುವ ಪದಗಳಲ್ಲಿ ಬಂದಾಗಲೆಲ್ಲ ಕನ್ನಡದಲ್ಲಿ ಎಕಾರವಾಗಿ ಬದಲಾಗಿದೆ. ತಮಿಳಿನಲ್ಲಿ ಇದು ಅಯ್ ಎಂಬುದಾಗಿಯೇ ಕಾಣಿಸುತ್ತದೆ.

ಇಲ್ಲವೇ

ಕನ್ನಡ
ಹೊಗೆ
ಬೆಳೆ

ತಮಿಳು ಕಟ್ಟಯ್ ತಾಳಯ್ ಯಾನಯ್ ಪುಕಯ್ ವಿಳಯ್ ಎಚ್ಚರಿಕ್ಕಯ್

ಕನ್ನಡದಲ್ಲೂ ಕೆಲವು ತೆಂಕು ಒಳನುಡಿಗಳಲ್ಲಿ ಅಯ್ ಎಂಬುದು ಪದಗಳ ಕೊನೆಯಲ್ಲಿ ಬದಲಾಗದೆ ಉಳಿದಿದೆ. ಉದಾಹರಣೆಗಾಗಿ, ಮಯ್ಸೂರು ಜಿಲ್ಲೆಯ ಪಶ್ಚಿಮ ವಿಬಾಗ(ಚಾಮರಾಜನಗರ)ದಲ್ಲಿ ಅದು ಇವತ್ತಿಗೂ ಅಯ್ ಎಂಬ ರೂಪದಲ್ಲೇ ಉಚ್ಚಾರಣೆಯಾಗುತ್ತದೆ.

ಬರಹದ ಕನ್ನಡ ಚಾಮರಾಜ ನಗರ ಮನೆ

ಕಲಯ್
ಮನಯ್ ಬರಯ್

ತಮಿಳು ಮನಯ್ ವರಯ್ (ಅಗೞ್)

ಆದರೆ ಇದೇ ಊರಿನ ಕೆಲವರ ಮಾತಿನಲ್ಲಿ ಅಯ್ ಎಂಬುದು ಅ ಎಂಬುದಾಗಿ (ಇಲ್ಲವೇ ನಾಲಿಗೆಯ ಮುಂಬಾಗವನ್ನು ಬಾಯಿಯ ಕೆಳಬಾಗ ದಲ್ಲಿ ನಿಲ್ಲಿಸಿ ಉಚ್ಚರಿಸಿದ ’ಮುಂಗೆಳಗಿನ’ಸ್ವರವಾಗಿ) ಬದಲಾದುದೂ ಇದೆ. ಮನ (ಇಲ್ಲವೇ ಮನೆ಼) ‘ಮನೆ’, ಗ್ವಾಡ (ಇಲ್ಲವೇ ಗ್ವಾಡೆ಼) ‘ಗೋಡೆ’, ತಲ (ಇಲ್ಲವೇ ತಲೆ಼) ‘ತಲೆ’ ಮೊದಲಾದ ಬಳಕೆಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

ಒಂದು ಉಲಿಕಂತೆಯಿರುವ ಪದಗಳಲ್ಲಿ ಮಾತ್ರ ಅಯ್ ಎಂಬುದು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿದೆ. ಹೊಸಗನ್ನಡದಲ್ಲೂ ಇದು ನಾಮಪದಗಳಲ್ಲಿ ಮತ್ತು ಕ್ರಿಯಾಪದಗಳ ಕೆಲವು ರೂಪಗಳಲ್ಲಿ ಬದಲಾಗದೆ ಉಳಿದಿದೆ (5.4.4 ನೋಡಿ).

Eke →

3.6.2 ಅಕಾರ ಎಕಾರವಾಗುವುದು

ಪದಗಳ ಕೊನೆಯಲ್ಲಿ ಬರುವ ಅಕಾರವೂ ಕನ್ನಡದಲ್ಲಿ ಎಕಾರವಾಗಿ ಬದಲಾಗಿರುವುದನ್ನು ಕನ್ನಡದ ಕ್ರಿಯಾಪದಗಳಲ್ಲಿ ಕಾಣಬಹುದು.

ಕನ್ನಡ
ಮರೆ ಮೊಗೆ

ತಮಿಳು
ಮಱ
ಮುಕ

ಪದಗಳ ಕೊನೆಯ ಅಯ್ ಎಂಬುದು (3.6.1 ನೋಡಿ) ಮತ್ತು ಕೊನೆಯ ಅಕಾರ - ಇವೆರಡೂ ಎಕಾರವಾಗಿ ಕ್ರಿಯಾಪದಗಳ ಮತ್ತು ಅಯ್ ಬದಲಾದುದರಿಂದಾಗಿ, ಎಂಬವುಗಳಲ್ಲಿ ಕೊನೆಗೊಳ್ಳುತ್ತಿದ್ದ ಎರಡು ರೀತಿಯ ಕ್ರಿಯಾಪದಗಳೂ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವಂತಾಗಿದೆ.

ಮೂಲದ್ರಾವಿಡದಲ್ಲಿ ಅ

Eke →

3.6.3 ಎಕಾರ ಇಕಾರವಾಗುವುದು

ಮೇಲೆ ವಿವರಿಸಿದ ಎರಡು ಬದಲಾವಣೆಗಳಿಂದ ಬಂದ ಪದಗಳ ಕೊನೆಯ ಎಕಾರ ಒಳನಾಡಿನ ಬಡಗು ಒಳನುಡಿಗಳಲ್ಲಿ, ಎಂದರೆ ದಾರವಾಡ, ಗುಲ್ಬರ್ಗ, ಬೆಳಗಾವಿ ಮೊದಲಾದ ಪ್ರದೇಶಗಳಲ್ಲಿ ಇಕಾರವಾಗಿ ಬದಲಾಗಿದೆ.
ಬದಲಾವಣೆ ನಡೆದಿದೆಯಾದರೂ, ಅದು ಕ್ರಿಯಾಪದಗಳನ್ನು ಮಾತ್ರ ಬದಲಾಯಿಸಿದೆ; ನಾಮಪದಗಳನ್ನು ಬದಲಾಯಿಸಿಲ್ಲ.

ಒಳನುಡಿಗಳಲ್ಲೂ

ಇಂತಹದೊಂದು

ಕರಾವಳಿಯ ಒಳನುಡಿಗಳಲ್ಲಿ ಈ ಸ್ವರ ಎಕಾರವಾಗಿಯೇ ಇದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಕರಾವಳಿಯ ಹವ್ಯಕ ಕನ್ನಡ, ತೆಂಕು ಒಳ ನಾಡಿನ ಮಯ್ಸೂರು ಕನ್ನಡ ಮತ್ತು ಬಡಗು ಒಳನಾಡಿನ ಗುಲ್ಬರ್ಗ ಕನ್ನಡ ಪದಗಳ ನಡುವೆ ಕಾಣಬಹುದು.

(1) ನಾಮಪದಗಳು:

ಹವ್ಯಕ
ಕುದುರೆ
ಸಾಸವೆ

(2) ಕ್ರಿಯಾಪದಗಳು:

ಹವ್ಯಕ
ಕೊಳೆ
ಮಸೆ

ಮಯ್ಸೂರು ಕುದ್ರೆ
ಯಲೆ
ಸಾಸ್ವೆ

ಮಯ್ಸೂರು ಮಸಿ

ಗುಲ್ಬರ್ಗ ಕುದ್ರಿ ಸಾಸ್ವಿ

ಗುಲ್ಬರ್ಗ ಮಸಿ

ಕೊನೆಯಲ್ಲೂ ಬರಬಲ್ಲುವಾಗಿದ್ದುವು.

Eke →

3.6.4 ಉಕಾರದ ಸೇರಿಕೆ

ಮೂಲದ್ರಾವಿಡದಲ್ಲಿ ತಡೆಯುಲಿಗಳನ್ನು ಬಿಟ್ಟು ಇತರ ವ್ಯಂಜನಗಳು ಹಳೆಗನ್ನಡ ಈ ಪದಗಳ ಮೂಲದ್ರಾವಿಡದಲ್ಲಿ ಬಳಕೆಯನ್ನು ಉಳಿಸಿಕೊಂಡಿದೆ. ಇದಲ್ಲದೆ, ತಡೆಯುಲಿಯಾಗಿದ್ದ ಅದಿರುಲಿಯಾಗಿ ಬದಲಾಯಿಸಿಕೊಂಡಿದೆಯಾದ ಕಾರಣ, ಅದನ್ನೂ ಅದು ಪದಗಳ ಕೊನೆಯ ವ್ಯಂಜನವಾಗಿ ಬಳಸಬಲ್ಲುದು.

ಱಕಾರವನ್ನು

ಹಳೆಗನ್ನಡ

ಹೊಸಗನ್ನಡ (ಬರಹ ಕನ್ನಡ) ಇಂತಹ ಪದಗಳೆಲ್ಲವನ್ನೂ ಸ್ವರದಲ್ಲಿ ಪದಗಳಾಗಿ ಬದಲಾಯಿಸಿದೆ. ಇದಕ್ಕಾಗಿ ಇಂತಹ ಕೊನೆಗೊಳ್ಳುವ ಹೊಸಗನ್ನಡದಲ್ಲಿ ಉಚ್ಚಾರಣೆಗಾಗಿ ಉಕಾರವನ್ನು ಪದಗಳಿಗೆಲ್ಲ ಸೇರಿಸಲಾಗುತ್ತದೆ. ಈ ರೀತಿ ಉಕಾರವನ್ನು ಸೇರಿಸಿದಾಗ ಪದಗಳ ಕೊನೆಯ ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳೂ ನಡೆದಿವೆ (ಉದಾಹರಣೆಗಳಿಗೆ

Eke →

7.9 ನೋಡಿ).

Eke →

3.6.5 ಉಕಾರ ಅ಼ಕಾರವಾಗುವುದು

ನಾಮಪದಗಳ ಕೊನೆಯಲ್ಲಿ ಬರುವ ಉಕಾರ ಕರ್ನಾಟಕದ ಬಡಗು ಒಳನುಡಿಗಳಲ್ಲಿ (ಉದಾಹರಣೆಗಾಗಿ ಗುಲ್ಬರ್ಗ ಕನ್ನಡದಲ್ಲಿ) ಅ಼ಕಾರವಾಗಿ ಬದಲಾಗಿದೆ.

ಪದಗಳಲ್ಲಿ

ಆದರೆ, ಈ ಬದಲಾವಣೆ ಎಲ್ಲಾ ಪದಗಳಲ್ಲೂ ನಡೆದಿಲ್ಲ. ಎರಡು ಉಲಿಕಂತೆಗಳಿರುವ ಸ್ವರ ಉದ್ದವಾಗಿರುವಲ್ಲಿ ಮತ್ತು (2) ಮೊದಲನೆಯ ಸ್ವರದ ಅನಂತರ ಒತ್ತಕ್ಶರವಿರುವಲ್ಲಿ ಮಾತ್ರ ನಡೆದಿದೆ.
(1) ಮೊದಲನೆಯ ಸ್ವರ ಉದ್ದವಾಗಿರುವ ಎರಡು ಉಲಿಕಂತೆಯ ಪದ ಗಳು:

ಮೊದಲನೆಯ

ಬರಹದ ಕನ್ನಡ

ಗುಲ್ಬರ್ಗದ ಕನ್ನಡ

ಹಾಲು
ಹೂವು
ಕೂಸು

ಹೂ಼ವ

ಕೂ಼ಸ

(2) ಮೊದಲನೆಯ ಸ್ವರದ ಅನಂತರ ಒತ್ತಕ್ಶರವಿರುವ ಎರಡು ಉಲಿಕಂತೆಯ ಪದಗಳು:

ಬರಹದ ಕನ್ನಡ

ಗುಲ್ಬರ್ಗದ ಕನ್ನಡ

ಕಲ್ಲು
ಮಂಜು
ನೆಕ್ಕು

ನೆ಼ಕ್ಕ

ಮೂರು ಉಲಿಕಂತೆಗಳಿರುವ

ಸ್ವರ ಬಿದ್ದುಹೋದುದ ರಿಂದಾಗಿ ಎರಡು ಉಲಿಕಂತೆಗಳಿರುವವುಗಳಾಗಿರುವಂತಹ ಪದಗಳಲ್ಲೂ ಈ ಬದಲಾವಣೆ ನಡೆದಿದೆ.

ಪದಗಳ ಎರಡನೆಯ

ಬರಹದ ಕನ್ನಡ
ಬಿಸಿಲು
ನೇಗಿಲು
ಗುಡುಗು ಹೊಕ್ಕುಳು

ಗುಲ್ಬರ್ಗದ ಕನ್ನಡ

ಬಿ಼ಸ್ಲ

ನೇ಼ಗ್ಲ

ಗು಼ಡ್ಗ

ಹೊ಼ಂಕ್ಳ

ಆದರೆ, ಉದ್ದಸ್ವರವಿಲ್ಲದ ಎರಡು ಉಲಿಕಂತೆಗಳಿರುವ ಪದಗಳಲ್ಲಿ ಈ

ಬದಲಾವಣೆ ನಡೆದಿಲ್ಲ.

ಬರಹದ ಕನ್ನಡ
ಇರುವೆ
ಎಲುಬು
ಹಸಿವು

ಗುಲ್ಬರ್ಗದ ಕನ್ನಡ ಯಲು ಹೊಸು

ಈ ಬದಲಾವಣೆ ಎಲ್ಲೆಲ್ಲ ನಡೆದಿದೆ ಎಂಬುದನ್ನು ಸರಿಯಾಗಿ

ತಿಳಿಯಲು ಹೆಚ್ಚಿನ ಸಂಶೋದನೆ ನಡೆಯಬೇಕಾಗಿದೆ.

Eke →

3.6.6 ಉಕಾರದ ಒಡೆತ

ಕರಾವಳಿಯ ಗವ್ಡ ಕನ್ನಡದ ಒಟ್ಟುಗಳಲ್ಲಿ ಬರುವ (ಎಂದರೆ ಮೊದಲನೆಯ ಉಲಿಕಂತೆಯನ್ನು ಹೊರತುಪಡಿಸಿ ಇತರ ಉಲಿಕಂತೆಗಳಲ್ಲಿ ಬರುವ) ಉಕಾರ ದುಂಡಗಿರುವ ಉಕಾರ ಮತ್ತು ದುಂಡಗಿಲ್ಲದ ಉ್ಕಾರ ಎಂಬ ಎರಡು ಸ್ವರಗಳಾಗಿ ಒಡೆದುಕೊಂಡಿದೆ.

ತುಟಿಯನ್ನು ಬಳಸಿ ಉಚ್ಚರಿಸುವ ವ, ಪ, ಬ ಮತ್ತು ಮ ವ್ಯಂಜನಗಳ ಅನಂತರ ಮತ್ತು ದುಂಡಗಿರುವ (ಉದ್ದ ಇಲ್ಲವೇ ಗಿಡ್ಡ) ಉಕಾರ ಮತ್ತು ಒಕಾರಗಳ ಅನಂತರ ಉಕಾರ ಬದಲಾಗದೆ ಉಳಿದಿದೆ, ಆದರೆ ಇತರ ಸನ್ನಿವೇಶಗಳಲ್ಲಿ ಉ್ಕಾರವಾಗಿ ಬದಲಾಗಿದೆ.

ಕಪ್ಪು

ಉಕಾರವಿರುವ ಪದಗಳು ಉ್ಕಾರವಿರುವ ಪದಗಳು ಕಂತ್ಸ್ ‘ಮುಳುಗಿಸು’’ ಅವುಲು ‘ಅವಲಕ್ಕಿ’ ಕಟ್್ಟ ‘ಕಟ್ಟು’ ತಟ್್ಟ ‘ತಟ್ಟು’’ ಎತ್್ತ ‘ಎತ್ತು’ ಸಿಕ್್ಕ ‘ಸಿಗು’ ಹೇಳ್ ‘ಹೇಳು’

ಹೋಳು ‘ತುಂಡು’

ಕೊಕ್ಕು

ತಬ್ಬು

ಕುತ್ತು

ಆದರೆ, ಈ ನಿಯಮಕ್ಕೆ ಹಲವು ಅಪವಾದಗಳೂ ಇವೆಯಾದ ಕಾರಣ (ದುಡ್್ಕ ‘ದುಡುಕು’, ಮೊಣ್್ಣ ‘ಮಣ್ಣು’, ಮೂಕ್ತಿ ‘ಮೂಗುತಿ’, ಅಂತು ‘ಹಾಗೆ’), ಈ ವ್ಯತ್ಯಾಸಕ್ಕೆ ಗವ್ಡ ಕನ್ನಡದಲ್ಲಿ ಅರ್ತವನ್ನು ಸೂಚಿಸುವ ಹೊಣೆ

ಕೆಲವು

ಜೋಡುಪದಗಳಲ್ಲಿ

Eke →

3.7 ತಿರುಳು

ಮೂಲದ್ರಾವಿಡದ ಒಟ್ಟುಗಳಲ್ಲಿ ಬರುತ್ತಿದ್ದ ಸ್ವರಗಳು ಕನ್ನಡದಲ್ಲಿ ಯಾವ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬ ವಿಶಯದಲ್ಲಿ ನಮಗಿನ್ನೂ ಹೆಚ್ಚು ತಿಳಿದಿಲ್ಲ. ಕಾಣಿಸುತ್ತಿದ್ದ ಉದ್ದಸ್ವರ ಗಿಡ್ಡವಾಗಿರುವುದು, ಯಕಾರ ಇಲ್ಲವೇ ಕಕಾರ ಬಿದ್ದು ಹೋದುದರಿಂದಾಗಿ ಅವುಗಳ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಟ್ಟು ಸೇರಿ ಉದ್ದಸ್ವರವಾಗಿರುವುದು ಮತ್ತು ಪದಗಳ ಕೊನೆಯ *ಅಯ್ ಮತ್ತು *ಅ ಎಂಬವುಗಳು ಎಕಾರವಾಗಿ ಬದಲಾಗಿರುವುದು ನಮಗೆ ತಿಳಿದಿರುವ ಮುಕ್ಯ ಬದಲಾವಣೆಗಳು.

ಇದಲ್ಲದೆ, ಕನ್ನಡದ ಚರಿತ್ರೆಯಲ್ಲೇನೇ ಅದರ ಒಳನುಡಿಗಳಲ್ಲಿ ಕೆಲವು ಬದಲಾವಣೆಗಳನ್ನೂ ಈ ಅದ್ಯಾಯದಲ್ಲಿ ನಡೆದಿರುವ ವಿವರಿಸಲಾಗಿದೆ. ವ್ಯತ್ಯಾಸ ಅಳಿದುಹೋಗುವುದು ಇಲ್ಲವೇ ಆ ಸ್ವರವೇ ಬಿದ್ದುಹೋಗುವುದು, ಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿ ಮತ್ತು ಉಕಾರ ಅ಼ಕಾರವಾಗಿ

ಪದಗಳ ಎರಡನೆಯ

ಸ್ವರದಲ್ಲಿದ್ದ

ಇಲ್ಲವೇ ಉ್ಕಾರವಾಗಿ ಬದಲಾಗುವುದು ಮತ್ತು ವ್ಯಂಜನಗಳಲ್ಲಿ ಕೊನೆಗೊಳ್ಳುವ ಪದಗಳ ಅನಂತರ ಉಕಾರವೊಂದು ಸೇರಿಕೊಳ್ಳುವುದು ಇವುಗಳಲ್ಲಿ ಮುಕ್ಯವಾದ ಬದಲಾವಣೆಗಳು.

4. ತಡೆಯುಲಿಗಳು

Eke →

4.1 ಮುನ್ನೋಟ

ಕನ್ನಡದ ಚರಿತ್ರೆಯಲ್ಲಿ ಮೂಲದ್ರಾವಿಡ ಸ್ವರಗಳ ಎಣಿಕೆ ಮತ್ತು ಉಚ್ಚಾರಣೆಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ನಡೆದಿಲ್ಲವೆಂಬುದನ್ನು ನಾವು ಹಿಂದಿನ ಅದ್ಯಾಯದಲ್ಲಿ ನೋಡಿರುವೆವು. ಕೆಲವು ವಿಶಿಶ್ಟವಾದ ಮತ್ತು ಜಾಗಗಳಲ್ಲಿ ಸನ್ನಿವೇಶಗಳಲ್ಲಿ ಬದಲಾವಣೆಗಳಾಗಿವೆ, ಅಶ್ಟೆ (ಕನ್ನಡದ ಕೆಲವು ಒಳನುಡಿಗಳು ಇದಕ್ಕೆ ಅಪವಾದಗಳು).

ಸ್ವರಗಳ ಉದ್ದ

ಮಾತ್ರ

ಆದರೆ, ಮೂಲದ್ರಾವಿಡದಲ್ಲಿದ್ದ ವ್ಯಂಜನಗಳ ಎಣಿಕೆ ಮತ್ತು ಕನ್ನಡದ ಬದಲಾವಣೆಗಳಿಂದಾಗಿ, ಕನ್ನಡದಲ್ಲಿ

ಉಚ್ಚಾರಣೆಗಳೆರಡರಲ್ಲೂ ಚರಿತ್ರೆಯಲ್ಲಿ ಮೂಲದ್ರಾವಿಡದಲ್ಲಿದ್ದ ಇಪ್ಪತ್ತೊಂದು ವ್ಯಂಜನಗಳಾಗಿವೆ.

ಹಲವಾರು ಬದಲಾವಣೆಗಳು

ವ್ಯಂಜನಗಳು

ಹದಿನಾರು

ನಡೆದಿವೆ.

ವಿದ್ವಾಂಸರು ಮೂಲದ್ರಾವಿಡಕ್ಕೆ ಕಲ್ಪಿಸಿಕೊಂಡಿರುವ ವ್ಯಂಜನಗಳನ್ನು

ಕೆಳಗೆ ಸೂಚಿಸಿದ ಹಾಗೆ ಪಟ್ಟಿಮಾಡಬಹುದು.

ಮೂಲದ್ರಾವಿಡ ವ್ಯಂಜನಗಳು

ತಡೆಯುಲಿ ಪ ಮೂಗುಲಿ
ಪಕ್ಕದುಲಿ
ಹೊಡೆಯುಲಿ ತಡೆಯಿಲ್ಲದುಲಿ

ಮೂಲದ್ರಾವಿಡದ ಈ ವ್ಯಂಜನಗಳಲ್ಲಿ ಪ, ತ, ಚ, ಕ; ಮ, ನ, ಞ; ವ, ಯ ಎಂಬ ಒಂಬತ್ತು ವ್ಯಂಜನಗಳು ಮಾತ್ರ ಪದಗಳಲ್ಲಿ ಮೊದಲಿಗೆ ಬರಬಲ್ಲುವಾಗಿದ್ದುವು.

ಞಕಾರವನ್ನು ಬಿಟ್ಟು ಇತರ ಎಲ್ಲಾ ವ್ಯಂಜನಗಳೂ ಎರಡು ಸ್ವರಗಳ ನಡುವೆ ಬರಬಲ್ಲುವಾಗಿದ್ದುವು; ಅವುಗಳಲ್ಲಿ ತಡೆಯುಲಿಗಳು ಮತ್ತು ಮೂಗುಲಿಗಳು ಒತ್ತೆ ರೂಪದಲ್ಲಿ ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ (ಎಂದರೆ ಒತ್ತಕ್ಶರದ ರೂಪದಲ್ಲೂ) ಬರಬಲ್ಲುವಾಗಿದ್ದುವು.

ಉಳಿದ ವ್ಯಂಜನಗಳಲ್ಲಿ ರ-ೞಗಳನ್ನು ಬಿಟ್ಟು ಇತರ ವ್ಯಂಜನಗಳು ಒತ್ತೆ ರೂಪದಲ್ಲಿ ಮತ್ತು ಇಮ್ಮಡಿ ರೂಪದಲ್ಲಿ ಬರಬಲ್ಲುವಾಗಿದ್ದುವು; ರ- ೞಗಳು ಮಾತ್ರ ಇಮ್ಮಡಿ ರೂಪದಲ್ಲಿ ಬರುತ್ತಿರಲಿಲ್ಲ.

ತಡೆಯುಲಿಗಳ ಮೊದಲು ಬಂದ ಮೂಗುಲಿಗೆ ಆ ತಡೆಯುಲಿಗಳ ಜಾಗದಲ್ಲೇನೇ ನಡೆಯುವಂತಹ ಉಚ್ಚಾರಣೆಯಿತ್ತು. ಆದರೆ ಈ ಒಂದು ಮೊದಲಿನ) ಜಾಗವನ್ನು ಹೊರತುಪಡಿಸಿ ಇತರ (ತಡೆಯುಲಿಗಳ ಜಾಗಗಳಲ್ಲಿ ಇಲ್ಲವೇ ಇಮ್ಮಡಿ ರೂಪದಲ್ಲಿ ಮ, ನ, ಣ ಮತ್ತು ಞಗಳು ಮಾತ್ರ ಬರಬಲ್ಲುವಾಗಿದ್ದುವು. ಹಾಗಾಗಿ, ಮೂಲದ್ರಾವಿಡಕ್ಕೆ ಮ, ನ, ಣ ಮತ್ತು ಞಗಳೆಂಬ ಈ ನಾಲ್ಕು ಮೂಗುಲಿಗಳನ್ನು ಕಲ್ಪಿಸಿಕೊಂಡರೆ ಸಾಕಾಗುತ್ತದೆ.

ಹಳೆ ತಮಿಳಿನಲ್ಲಿ ಎರಡು ರೀತಿಯ ನಕಾರಗಳು ಬಳಕೆಯಲ್ಲಿದ್ದುವು; ಇವುಗಳಲ್ಲಿ ಒಂದಕ್ಕೆ ತಕಾರದ ಜಾಗದಲ್ಲಿ ಮತ್ತು ಇನ್ನೊಂದಕ್ಕೆ ಱಕಾರದ ಜಾಗದಲ್ಲಿ ಉಚ್ಚಾರಣೆಯಿತ್ತು. ಉದಾಹರಣೆಗಾಗಿ, ವೆರಿನ್ ‘ಬೆನ್ನು’ ಪದದಲ್ಲಿ ತಕಾರದ ಜಾಗದಲ್ಲಿ ಉಚ್ಚಾರವಾಗುವ ನಕಾರವಿದೆ ಮತ್ತು ವರಿನ್ ‘ಬಂದರೆ’ ಪದದಲ್ಲಿ ಱಕಾರದ ಜಾಗದಲ್ಲಿ ಉಚ್ಚಾರವಾಗುವ ನಕಾರವಿದೆ. ಆದರೆ ಈ ವ್ಯತ್ಯಾಸವನ್ನು ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವ ಅವಶ್ಯಕತೆಯಿಲ್ಲವೆಂದು ತೋರುತ್ತದೆ.

ಮಲಯಾಳದಲ್ಲೂ ಈ ಎರಡು ರೀತಿಯ

ಮೂಗುಲಿಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಎನ್ನಾಲ್ ‘ಆದರೆ’ ಪದದಲ್ಲಿ ಬರುವ

ಇಮ್ಮಡಿ ನಕಾರಕ್ಕೆ ತಕಾರದ ಜಾಗದಲ್ಲಿ ಉಚ್ಚಾರಣೆಯಿದೆ ಮತ್ತು ಎನ್ನಾಲ್ ‘ನನ್ನಿಂದ’ ಪದದಲ್ಲಿ ಬರುವ ಇಮ್ಮಡಿ ನಕಾರಕ್ಕೆ ಱಕಾರದ ಜಾಗದಲ್ಲಿ ಮೊದಲಿನದು ಮೂಲದ್ರಾವಿಡದ *ನ್್ತ ಇಲ್ಲವೇ *ನ್ಱ್ದಿಂದ ಬಂದಿದೆ ಮತ್ತು ಎರಡನೆಯದು *ನ್್ನದಿಂದ ಬಂದಿದೆ (ಸುಬ್ರಹ್ಮಣ್ಯಂ 1983:380 ನೋಡಿ).

ಉಚ್ಚಾರಣೆಯಿದೆ.

ಇವುಗಳಲ್ಲಿ

ಮೂಗುಲಿಗಳ ಅನಂತರ ಬರುವ ತಡೆಯುಲಿಗಳು ಒತ್ತೆ ಇಲ್ಲವೇ

ಇಮ್ಮಡಿ ರೂಪದಲ್ಲಿರಲು ಸಾದ್ಯವಿತ್ತು.

ತಡೆಯುಲಿಗಳನ್ನು ಬಿಟ್ಟು ಉಳಿದ ಎಲ್ಲಾ ವ್ಯಂಜನಗಳೂ ಪದದ ಕೊನೆ

ಯಲ್ಲಿ ಬರಬಲ್ಲುವಾಗಿದ್ದುವು.

ಮೂಲದ್ರಾವಿಡದಲ್ಲಿ ಱಕಾರ ಒಂದು ತಡೆಯುಲಿಯಾಗಿತ್ತು ಎಂದು

ವಾದಿಸುವುದಕ್ಕೆ ಹಲವು ಕಾರಣಗಳಿವೆ:

(1) ಇತರ ತಡೆಯುಲಿಗಳ ಹಾಗೆ ಅದು ಮೂಗುಲಿಗಳ ಅನಂತರ ಒತ್ತೆ ರೂಪದಲ್ಲಿ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುದಾಗಿತ್ತು (*ತೋನ್ಱು ‘ತೋರು’, *ಕನ್‌ಱ್ಱಯ್ ‘ಕಂತೆ’);

(2) ಸ್ವರಗಳ ನಡುವೆಯೂ ಅದು ಒತ್ತೆ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುದಾಗಿತ್ತು (ಆಱು ‘ತಣಿ’, *ಮಾಱ್ಱು ‘ಮಾತು’).
(3) ಇವತ್ತಿನ ದ್ರಾವಿಡ ನುಡಿಗಳಲ್ಲಿ ಈ ಱಕಾರ ಹಲವು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ತಡೆಯುಲಿಯಾಗಿಯೇ ಉದಾಹರಣೆಗಾಗಿ, ಮೂಗುಲಿಗಳ ಮೊದಲು ಬಂದಿದ್ದ ಈ ಱಕಾರ ಗಿಡ್ಡ ಸ್ವರದ ಅನಂತರ ಕನ್ನಡದಲ್ಲಿ ದಕಾರವಾಗಿ ಕಾಣಿಸಿಕೊಳ್ಳುತ್ತದೆ (
ಒನ್ಱು > ಒಂದು); ಸ್ವರಗಳ ನಡುವಿನ ಇಮ್ಮಡಿ ಱಕಾರವೂ ಗಿಡ್ಡಸ್ವರದ ಅನಂತರ ತ್್ತ ಎಂಬುದಾಗಿ ಕಾಣಿಸಿಕೊಳ್ಳುತ್ತದೆ (*ಪುಱ್ಱಮ್ > ಹುತ್ತ).

ಮೂಲದ್ರಾವಿಡದ ಈ ಹದಿನಾರು ವ್ಯಂಜನಗಳು ಕನ್ನಡದಲ್ಲಿ ಇಪ್ಪ ತ್ತೊಂದು ವ್ಯಂಜನಗಳಾಗಿ ಒಡೆದುಕೊಂಡುದು ಹೇಗೆ ಎಂಬುದನ್ನು ಮತ್ತು

ಬೇರೆ ಕೆಲವು ಬದಲಾವಣೆಗಳಿಂದಾಗಿ ಅವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಉಂಟಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ಮತ್ತು ಮುಂದಿನ (ಅಯ್ದನೇ) ಅದ್ಯಾಯದಲ್ಲಿ ವಿವರವಾಗಿ ಪರಿಶೀಲಿಸಲಾಗುವುದು.

Eke →

4.1.1 ತಡೆಯುಲಿಗಳು

ಒಂದು ವ್ಯಂಜನವನ್ನು ಉಚ್ಚರಿಸುವಾಗ ಬಾಯಿಯ ಮೂಲಕ ಹೊರ ಹೋಗುವ ಉಸಿರನ್ನು ಬಾಯಿಯೊಳಗೆ ಎಲ್ಲಾದರೂ ಒಂದು ಕಡೆ ಪೂರ್ತಿ ಮೂಲಕವೇ) ಬಿಡಲಾಗುತ್ತದೆಯಾದರೆ, ಅದನ್ನು ‘ತಡೆಯುಲಿ’ ಎಂದು ಕರೆಯಬಹುದು; ಪ, ತ, ಚ, ಱ, ಟ, ಕ ಎಂಬವು ಮೂಲದ್ರಾವಿಡದಲ್ಲಿ ಬರುತ್ತಿದ್ದ ಇಂತಹ ತಡೆಯುಲಿಗಳು.

(ಬಾಯಿಯ

ಅನಂತರ

ತಡೆದು

ಇವುಗಳ ಉಚ್ಚಾರಣೆ ಮೂಲದ್ರಾವಿಡದಲ್ಲಿ ರೀತಿಯಲ್ಲಿ ನಡೆಯುತ್ತಿದ್ದಿರಬೇಕೆಂದು ಕಲ್ಪಿಸಲಾಗಿದೆ.

ಕೆಳಗೆ ವಿವರಿಸಿದ

(1) ತುಟಿಗಳೆರಡನ್ನು ಒಟ್ಟಿಗೆ ತರುವ ಮೂಲಕ ಉಚ್ಚರಿಸುವ ಪ;
(2) ನಾಲಿಗೆಯ ತುದಿಯನ್ನು ಹಲ್ಲುಗಳ ಹಿಂಬದಿಯಲ್ಲಿ ನಿಲ್ಲಿಸುವ

ಮೂಲಕ ಉಚ್ಚರಿಸುವ ತ;

(3) ನಾಲಿಗೆಯ ತುದಿಯನ್ನು ಅದಕ್ಕಿಂತ ಇನ್ನೂ ಸ್ವಲ್ಪ ಹಿಂಬದಿಯಲ್ಲಿ

ನಿಲ್ಲಿಸುವ ಮೂಲಕ ಉಚ್ಚರಿಸುವ ಱ;

(4) ನಾಲಗೆಯ ಮುಂದಿರುವ (ಎಂದರೆ ಅದರ ತುದಿಯ ಹಿಂದಿರುವ) ಚಪ್ಪಟೆ ಬಾಗವನ್ನು ಅಲ್ಲೇ ಮೇಲ್ಗಡೆಯಿರುವ ಅಂಗುಳಿಗೆ ತಾಗಿಸುವ ಮೂಲಕ ಉಚ್ಚರಿಸುವ ಚ;

(5) ನಾಲಗೆಯ ತುದಿಯನ್ನು ಮಡಚಿ ಅದರ ಅಡಿಬಾಗವನ್ನು ಅಂಗುಳಿಗೆ

ತಾಗಿಸುವ ಮೂಲಕ ಉಚ್ಚರಿಸುವ ಟ; ಮತ್ತು

(6) ನಾಲಿಗೆಯ ಹಿಂಬಾಗವನ್ನು ಅಲ್ಲೇ ಮೇಲ್ಗಡೆಯಿರುವ ಮೆದು

ಅಂಗುಳಿಗೆ ತಾಗಿಸುವ ಮೂಲಕ ಉಚ್ಚರಿಸುವ ಕ.

ಈ ಎಲ್ಲಾ ತಡೆಯುಲಿಗಳಿಗೂ ಕೊರಳಿಸಿದ ಮತ್ತು ಕೊರಳಿಸದ

ಉಚ್ಚಾರಣೆಗಳಿದ್ದುವು (4.1.2 ನೋಡಿ).

ಮೂಲದ್ರಾವಿಡದಲ್ಲಿದ್ದ ಈ ಆರು ತಡೆಯುಲಿಗಳು ಕನ್ನಡದಲ್ಲಿ ಹತ್ತು ತಡೆಯುಲಿಗಳಾಗಿ ಒಡೆದುಕೊಂಡಿವೆ. ಇದಕ್ಕೆ ಕಾರಣವೇನೆಂದರೆ, ಮೂಲ ದ್ರಾವಿಡದಲ್ಲಿ ಅರ್ತಬೇದವನ್ನು ಸೂಚಿಸದಿದ್ದಂತಹ ಕೊರಳಿಸದ (ಪ, ತ, ಚ, ಟ, ಕ) ಮತ್ತು ಕೊರಳಿಸಿದ (ಬ, ದ, ಜ, ಡ, ಗ) ತಡೆಯುಲಿಗಳ ನಡುವಿನ ವ್ಯತ್ಯಾಸ ಕನ್ನಡದಲ್ಲಿ ಅರ್ತಬೇದವನ್ನು ಸೂಚಿಸುವ ಹಾಗಾಗಿದೆ.

ಇದಲ್ಲದೆ, ಮೂಲದ್ರಾವಿಡದ ತಡೆಯುಲಿಗಳು ಕನ್ನಡದಲ್ಲಿ ಬೇರೆಯೂ ಹಲವು ಬದಲಾವಣೆಗೊಳಗಾಗಿವೆ. ಅದರಲ್ಲಿದ್ದ ಱ ಎಂಬ ತಡೆಯುಲಿ ಹಳೆಗನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ರಕಾರದ ಹಾಗಿದ್ದ, ಆದರೆ ಉಚ್ಚಾರಣೆ ಯಲ್ಲಿ ಅದಕ್ಕಿಂತ ಬೇರಾಗಿದ್ದ, ಒಂದು ‘ಹೊಡೆಯುಲಿ’ಯಾಗಿ ಬದಲಾಗಿದೆ; ಅನಂತರ ಹೊಸಗನ್ನಡದಲ್ಲಿ ಅದು ಉಚ್ಚಾರಣೆಯಲ್ಲಿ ರಕಾರವೇ ಆಗಿದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಕೆಲವು ಸನ್ನಿವೇಶಗಳಲ್ಲಿ (ಎರಡು ಸ್ವರಗಳ ನಡುವೆ ಇಮ್ಮಡಿ ರೂಪದಲ್ಲಿ ಬಂದಿದ್ದಾಗ ಇಲ್ಲವೇ ಒಂದು ಮೂಗುಲಿಯ ಮೊದಲು ಬಂದಿದ್ದಾಗ) ಅದು ಹಳೆಗನ್ನಡದಲ್ಲೇನೇ ತಕಾರ ಇಲ್ಲವೇ ದಕಾರವಾಗಿಯೂ ಬದಲಾಗಿದೆ. ಮೂಲದ್ರಾವಿಡದ ಚಕಾರ ಕನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ಸಕಾರವಾಗಿ ಬದಲಾಗಿದೆ; ಆದರೆ ಕೆಲವು ಪದಗಳಲ್ಲಿ ಅದು ಚಕಾರವಾಗಿಯೇ ಉಳಿದಿದೆ ಇಲ್ಲವೇ ಜಕಾರವಾಗಿ ಬದಲಾಗಿದೆ.

ಮೂಲದ್ರಾವಿಡದ ತಡೆಯುಲಿಗಳು ಕನ್ನಡದಲ್ಲಿ ಬೇರೆಯೂ ಹಲವು ಬದಲಾವಣೆಗಳಿಗೊಳಗಾಗಿದ್ದು, ಅದರಿಂದಾಗಿ ಅವು ಯಾವ ಪದಗಳಲ್ಲೆಲ್ಲ ಬರುತ್ತವೆ ಎಂಬ ವಿಶಯದಲ್ಲಿ ಮೂಲದ್ರಾವಿಡ ಮತ್ತು ಕನ್ನಡಗಳ ನಡುವೆ ಹಲವು ವ್ಯತ್ಯಾಸಗಳು ತೋರಿಬರುತ್ತವೆ.

Eke →

4.1.2 ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳು

ಮೂಲದ್ರಾವಿಡದಲ್ಲಿ ತಡೆಯುಲಿಗಳಿಗೆ ‘ಕೊರಳಿಸಿದ’ ಉಚ್ಚಾರಣೆ ಮತ್ತು ‘ಕೊರಳಿಸದ’ ಉಚ್ಚಾರಣೆ ಎಂಬುದಾಗಿ ಎರಡು ರೀತಿಯ ಉಚ್ಚಾರಣೆ ಗಳಿದ್ದುವು; ಕೊರಳಿಸಿದ ಉಚ್ಚಾರಣೆಯಲ್ಲಿ ಅವುಗಳೊಂದಿಗೆ ಗಂಟಲಿನಲ್ಲಿ ನಡೆಯುವ ಅದಿರುವಿಕೆಯೂ ಸೇರಿರುತ್ತದೆ; ಕೊರಳಿಸದ ಉಚ್ಚಾರಣೆಯಲ್ಲಿ ಈ ಅದಿರುವಿಕೆ ಸೇರಿರುವುದಿಲ್ಲ. ಆದರೆ, ಮೂಲದ್ರಾವಿಡ ತಡೆಯುಲಿಗಳ ಉಚ್ಚಾರಣೆಯಲ್ಲಿದ್ದ ಈ ಸೂಚಿಸುವ ವ್ಯತ್ಯಾಸಕ್ಕೆ ಕೆಲಸವಿತ್ತೆಂದು ವಾದಿಸಲು ಯಾವ ಆದಾರವೂ ದೊರಕುವುದಿಲ್ಲ.

ನಡುವಿನ ಅರ್ತವ್ಯತ್ಯಾಸವನ್ನು

ಪದಗಳ

ಹಾಗಾಗಿ, ಎರಡು ಸ್ವರಗಳ ನಡುವೆ ಬಂದಾಗ, ಇಲ್ಲವೇ ಮೂಗುಲಿ ಗಳ (ಮನಣಞಗಳ) ಅನಂತರ ಒತ್ತೆಯಾಗಿ ಬಂದಾಗ ತಡೆಯುಲಿಗಳನ್ನು ಕೊರಳಿಸಿದ ವ್ಯಂಜನಗಳಾಗಿ ಮತ್ತು ಇತರ ಸಂದರ್ಬಗಳಲ್ಲಿ ಕೊರಳಿಸದ ವ್ಯಂಜನಗಳಾಗಿ ಮೂಲದ್ರಾವಿಡದಲ್ಲಿ ಉಚ್ಚರಿಸಲಾಗುತ್ತಿತ್ತು ಎಂಬುದಾಗಿ ಕಲ್ಪಿಸಬೇಕಾಗಿದೆ.
ನಡೆದ ಹಲವಾರು ಬದಲಾವಣೆಗಳ ಕನ್ನಡದ ತಡೆಯುಲಿಗಳ ಪರಿಣಾಮವಾಗಿ, ನಡುವಿದ್ದ ಈ ಉಚ್ಚಾರಣೆಯ ವ್ಯತ್ಯಾಸಕ್ಕೆ ಅರ್ತವ್ಯತ್ಯಾಸವನ್ನು ಸೂಚಿಸುವ ಬೆಲೆ ಬಂದಿದೆ.

ಕೊರಳಿಸಿದ ಮತ್ತು

ಚರಿತ್ರೆಯಲ್ಲಿ

ಕೊರಳಿಸದ

ಉದಾಹರಣೆಗಾಗಿ, ಕತ್ತೆ ಮತ್ತು ಗದ್ದೆ ಎಂಬ ಎರಡು ಪದಗಳ ನಡು ವಿರುವ ಅರ್ತ ವ್ಯತ್ಯಾಸವನ್ನು ಅವುಗಳಲ್ಲಿ ಬರುವ ತಡೆಯುಲಿಗಳು ಕೊರಳಿಸದ ಕ-ತ ರೂಪದಲ್ಲಿವೆಯೇ ಇಲ್ಲವೇ ಕೊರಳಿಸಿದ ಗ-ದ ಕನ್ನಡದಲ್ಲಿ ರೂಪದಲ್ಲಿವೆಯೇ ಎಂಬ ಸೂಚಿಸಲಾಗುತ್ತದೆ. ಆದರೆ ಪದಗಳು *ಕೞುತಯ್ ರೂಪದಲ್ಲಿದ್ದಿರಬೇಕು (ಉಚ್ಚಾರಣೆಯಲ್ಲಿ *ಕೞುದಯ್ ಮತ್ತು *ಕೞದಯ್).

ವ್ಯತ್ಯಾಸದ ಮೂಲದ್ರಾವಿಡದಲ್ಲಿ ಈ

*ಕೞತಯ್ ಎಂಬ

ಮೂಲಕ

ಮತ್ತು

ಇವುಗಳಲ್ಲಿ ಮೊದಲನೆಯ ಪದ ಕನ್ನಡದಲ್ಲಿ ಕತ್ತೆ ಎಂಬುದಾಗಿ ಬದಲಾಗಿದೆ. ಎಂದರೆ, ೞಕಾರದ ಅನಂತರ ಬಂದಿದ್ದ ಉಕಾರ ಬಿದ್ದು

ಹೋಗಿದೆ ಮತ್ತು ಇದರಿಂದ ಉಂಟಾದ ೞ್್ದ ಒತ್ತಕ್ಶರ ಕೊರಳಿಸದ ತ್್ತ ಎಂಬುದಾಗಿ ಬದಲಾಗಿದೆ. ಇದಲ್ಲದೆ, ಪದದ ಕೊನೆಯ *ಅಯ್ ಎಂಬುದು ಎಕಾರವಾಗಿ ಬದಲಾಗಿದೆ.

ಇದಕ್ಕೆ ಬದಲು ಎರಡನೆಯ ಪದ ಗದ್ದೆ ಎಂಬುದಾಗಿ ಬದಲಾಗಿದೆ. ಎಂದರೆ, ೞಕಾರದ ಅನಂತರ ಬಂದಿದ್ದ ಅಕಾರ ಬಿದ್ದುಹೋಗಿದೆ ಮತ್ತು ಇದರಿಂದ ಉಂಟಾದ ೞ್್ದ ಒತ್ತಕ್ಶರ ಕೊರಳಿಸಿದ ದ್್ದ ಎಂಬುದಾಗಿ ಬದಲಾಗಿದೆ. ಇದಲ್ಲದೆ, ಪದದ ಮೊದಲಿನ ಕಕಾರವೂ ಕೊರಳಿಸಿದ ಗಕಾರವಾಗಿ ಬದಲಾಗಿದೆ ಮತ್ತು ಪದದ ಕೊನೆಯ ಅಯ್ ಎಂಬುದು ಎಕಾರವಾಗಿ ಬದಲಾಗಿದೆ.

ತಡೆಯುಲಿಗಳ ಕೊರಳಿಸುವಿಕೆಯ ಮಟ್ಟಿಗೆ ಕನ್ನಡದಲ್ಲಿ ನಡೆದ ಇಂತಹ ಬದಲಾವಣೆಗಳೆಲ್ಲ ಹೆಚ್ಚಿನ ಮಟ್ಟಿಗೆ ಅನಿಯಮಿತವಾದವುಗಳು. ಅವುಗಳ ಸ್ವರೂಪ ಎಂತಹದು ಎಂಬುದನ್ನು ಕೆಳಗಿನ ವಿಬಾಗಗಳಲ್ಲಿ (ಬೇರೆ ಬೇರೆ ಸಂದರ್ಬಗಳಲ್ಲಿ) ವಿವರಿಸಲಾಗಿದೆ.

ಮತ್ತು

ನಾಲ್ಕು

Eke →

4.2 ಪದಗಳ ಮೊದಲಿಗಿದ್ದ ತಡೆಯುಲಿಗಳು

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಕ, ಚ, ಮಾತ್ರ ಬರಬಲ್ಲುವಾಗಿದ್ದುವು; ಱ ಮತ್ತು ಟಗಳು ಆ ಜಾಗದಲ್ಲಿ ಬರುತ್ತಿರಲಿಲ್ಲ.
ಇದಲ್ಲದೆ, ಈ ತಡೆಯುಲಿಗಳು ಪದಗಳ ಮೊದಲಿಗೆ ಕೊರಳಿಸದ ರೂಪದಲ್ಲಿ ಮಾತ್ರ ಬಳಕೆಯಾಗುತ್ತಿದ್ದುವು. ಅದರೆ ಕನ್ನಡ ಪದಗಳಲ್ಲಿ ಮೊದಲಿಗೆ ಅವು ಕೊರಳಿಸದ ರೂಪದಲ್ಲಿ ಮಾತ್ರವಲ್ಲದೆ ಕೊರಳಿಸಿದ ರೂಪದಲ್ಲೂ ಬರಬಲ್ಲುವು.

ತಡೆಯುಲಿಗಳು

ಈ ವಿಶಯದಲ್ಲಿ ಕನ್ನಡದ (ಮತ್ತು ಇತರ ದ್ರಾವಿಡ ನುಡಿಗಳ) ಪದ ಗಳು ಹಲವು ರೀತಿಯ ಅನಿಶ್ಚಿತತೆಗಳಿಗೊಳಗಾಗಿವೆ. ಹಳೆತಮಿಳು ನುಡಿ ಮಾತ್ರ ಇದಕ್ಕೆ ಅಪವಾದವೆಂದು ಹೇಳಬಹುದು. ಉದಾಹರಣೆಗಾಗಿ, ಕನ್ನಡದ ಕೆಲವು ಪದಗಳ ಮೊದಲಿಗೆ ಬರುವ ತಡೆಯುಲಿಗಳು ಅವುಗಳ ಎಲ್ಲಾ ರೂಪಗಳಲ್ಲೂ ಕೊರಳಿಸಿದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ಗಂಡು, ಗಂಡ, ಗಂಡಸು, ಗಂಡಿಕೆ, ಗಂಡಿಗ ಜಾಱು, ಜಾಱಿಕೆ ’ಜಾರುವಿಕೆ’, ಜಾಱ (ಜಾರುಗುಪ್ಪೆ) ದಟ್ಟ ‘ದಪ್ಪ’, ದಡ್ಡ, ದಡಾಲಿ ‘ದಪ್ಪ ಹೆಂಗಸು’, ದಂಡಿ
‘ದೊಡ್ಡದು’

ಇನ್ನು ಕೆಲವು ಪದಗಳು ಅವುಗಳ ಒಂದೆರಡು ರೂಪಗಳಲ್ಲಿ ಮಾತ್ರ ಮೊದಲಿಗಿರುವ ತಡೆಯುಲಿಯನ್ನು ಕೊರಳಿಸಿದ ರೂಪಕ್ಕೆ ಬದಲಾಯಿಸಿವೆ; ಉಳಿದ ರೂಪಗಳಲ್ಲಿ ಅದನ್ನು ಕೊರಳಿಸದ ರೂಪದಲ್ಲೇ ಉಳಿಸಿಕೊಂಡಿವೆ. (ಈ ಸಂದರ್ಬದಲ್ಲಿ ಚಕಾರ ಕನ್ನಡದಲ್ಲಿ ಚಕಾರವಾಗಿ ಉಳಿದಿರಬಹುದು ಇಲ್ಲವೇ ಸಕಾರವಾಗಿ ಬದಲಾಗಿರಬಹುದು).

  ಗೀರು, ಗೀಟು, ಗೀಚು; ಕೀಱು, ಕಿಱುಕು 

ಗುೞಿ; ಕೊೞವೆ, ಕುೞಿ ಜರಿ, ಜರುಗು, ಜಗ್ಗು; ಸರಿ, ಸರಕು ಜಂಬು; ಚಾಚು, ಚಾಪು; ಸಾಗು

ಆದರೆ, ಕನ್ನಡದ ಹೆಚ್ಚಿನ ಪದಗಳಲ್ಲೂ ಅವುಗಳ ಮೊದಲಿಗಿದ್ದ ಕೊರಳಿಸದ

ಪದರೂಪಗಳಲ್ಲೂ

ತಡೆಯುಲಿಗಳು ತಡೆಯುಲಿಗಳಾಗಿಯೇ ಉಳಿದಿವೆ.

ಕೊಳೆ, ಕೊಳಕು, ಕೊಳಚೆ, ಕೊಚ್ಚೆ ತಡೆ, ತಡ, ತಡವು, ತಡೆತ ಪೊಗೞ್, ಪೊಗೞ್ಕ, ಪೊಗೞ್ತ

ಈ ಬದಲಾವಣೆಯ ಅನಿಯಮಿತತೆಯಿಂದಾಗಿ, ಪದಗಳ ಮೊದಲಿಗೆ ಕಾಣಿಸುವ ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳ ನಡುವಿನ ವ್ಯತ್ಯಾಸಕ್ಕೆ ಕನ್ನಡದಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆ ಸಿಕ್ಕಿದೆ. ಪದಜೋಡಿಯಲ್ಲಿ ಇದನ್ನು

ಕತ್ತೆ-ಗದ್ದೆ

ಕೊಟ್ಟಿರುವ

ಮೇಲೆ

ಕುರಿ-ಗುರಿ

ಮೊದಲಾದ

ಮಾತ್ರವಲ್ಲದೆ, ತೊಟ್ಟಿ-ದೊಡ್ಡಿ, ಕುತ್ತು-ಗುದ್ದು, ತಣಿ-ದಣಿ, ಕಂಡ- ಗಂಡ, ಚಪ್ಪರಿಸು-ಜಬ್ಬರಿಸು, ಸರಿ-ಜರಿ, ತಟ್ಟಿ-ದಟ್ಟಿ, ಪಣ-ಬಣವೆ, ಪರ್ದು-ಬರ್ದು, ಪದಜೋಡಿಗಳಲ್ಲೂ ಕಾಣಬಹುದು. ಹಳೆಯ

ದ್ರಾವಿಡ ನುಡಿಗಳಲ್ಲೂ ನಡೆದಿರುವ ಈ ಬದಲಾವಣೆಯ ಹಿಂದೆ ಎಂತಹ ಹಲವು ನಿಯಮವಿದೆ ಎಂಬುದನ್ನು ಪ್ರಯತ್ನಗಳನ್ನು ಮಾಡಿರುವರಾದರೂ ಹೆಚ್ಚಿನ ಪ್ರಯೋಜನವಾಗಿಲ್ಲ.

ತಮಿಳೊಂದನ್ನು ಬಿಟ್ಟು ಉಳಿದ ಎಲ್ಲಾ

ತಿಳಿಯಲು ವಿದ್ವಾಂಸರು

ಕನ್ನಡದ ಮಟ್ಟಿಗೆ ಹೇಳುವುದಾದರೆ, ಈ ಪದಗಳ ಎರಡನೆಯ ಮತ್ತು ಅನಂತರದ ಉಲಿಕಂತೆಗಳಲ್ಲಿ ಬರುವ ಕೊರಳಿಸಿದ ತಡೆಯುಲಿಗಳಿಂದಾಗಿ ಮತ್ತು ಇತರ ಕೊರಳಿಸಿದ ವ್ಯಂಜನಗಳಿಂದಾಗಿ ಅವುಗಳ ಮೊದಲಿಗಿದ್ದ ತಡೆಯುಲಿಗಳಲ್ಲಿ ಈ ಬದಲಾವಣೆ ನಡೆದಿರಲು ಸಾದ್ಯವಿದೆ.

ಇದಲ್ಲದೆ, ದ್ರಾವಿಡ ಕುಟುಂಬಕ್ಕೆ ಸೇರದಿರುವ ಇತರ ನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲಿ ಕೊರಳಿಸದ ಮತ್ತು ಕೊರಳಿಸಿದ ತಡೆಯುಲಿಗಳ ನಡುವಿನ ವ್ಯತ್ಯಾಸಕ್ಕೆ ಅರ್ತವ್ಯತ್ಯಾಸವನ್ನು ಸೂಚಿಸುವ ಪದಗಳಲ್ಲಿ ಈ ಮೂಲದ್ರಾವಿಡದಿಂದ ಬಂದ ಬೆಲೆಯಿರುವುದು ಬದಲಾವಣೆ ನಡೆಯಲು ಇನ್ನೊಂದು ಕಾರಣವಾಗಿರಬಹುದು.

ಈ ಬದಲಾವಣೆಯಿಂದಾಗಿ, ಮೂಲದ್ರಾವಿಡ ಪದಗಳ ಮೊದಲಿಗಿದ್ದ ಕಕಾರವು ಕಕಾರ ಮತ್ತು ಗಕಾರಗಳಾಗಿಯೂ, ಚಕಾರವು ಚಕಾರ (ಇಲ್ಲವೇ ಸಕಾರ) ಮತ್ತು ಜಕಾರಗಳಾಗಿಯೂ, ತಕಾರವು ತಕಾರ ಮತ್ತು ದಕಾರ ಗಳಾಗಿಯೂ, ಪಕಾರವು ಪಕಾರ ಮತ್ತು ಬಕಾರಗಳಾಗಿಯೂ ಕನ್ನಡದಲ್ಲಿ ಒಡೆದುಕೊಂಡಿವೆ.

ಕನ್ನಡ

ಮಲಯಾಳ: ಕುಡುಖ್:

ಚ>ಚ ಚಂದ

ತಮಿಳು:

ಚ>ಜ ಜಾಱು

ತಮಿಳು:

ತ>ತ ತಿದ್ದು
ತ>ದ ದಿಣ್ಣೆ

ಪ>ಪ ಪಚ್ಚೆ
ಪ>ಬ ಬುರುಡೆ

ಮಲಯಾಳ: ತುಳು:

ತಮಿಳು:
ತೆಲುಗು:

ತಿರುತ್ತು

ಪಚ್ಚಯ್ ಪುಱ್ಱೆ

ಆದರೆ, ಕನ್ನಡ ಪದಗಳ ಮೊದಲಿಗಿದ್ದ ಬಕಾರ ಮೇಲೆ ಸೂಚಿಸಿದ ಹಾಗೆ ಮೂಲದ್ರಾವಿಡದ ಪಕಾರದಿಂದ ಬಂದಿರುವುದು ಕೆಲವೇ ಕೆಲವು ಪದಗಳಲ್ಲಿ ಮಾತ್ರ; ಹೆಚ್ಚಿನವುಗಳಲ್ಲೂ ಅದು ಮೂಲದ್ರಾವಿಡದ ವಕಾರದಿಂದ ನೋಡಲಿರುವೆವು.

ಬಂದಿದೆಯುಂಬುದನ್ನು

ಮುಂದೆ

ಪದಗಳ ಮೊದಲಿಗಿದ್ದ ತಡೆಯುಲಿಗಳು ಕನ್ನಡದ ಚರಿತ್ರೆಯಲ್ಲಿ ಬೇರೆಯೂ ಕೆಲವು ಬದಲಾವಣೆಗಳಿಗೊಳಗಾಗಿದ್ದು ಅವನ್ನು ಕೆಳಗಿನ ವಿಬಾಗಗಳಲ್ಲಿ ವಿವರಿಸಲಾಗಿದೆ.

Eke →

4.2.1 ಪಕಾರ ಹಕಾರವಾಗಿರುವುದು ಮತ್ತು ಬಿದ್ದುಹೋಗಿರುವುದು

ಪದಗಳ ಮೊದಲಿಗಿದ್ದ ಪಕಾರ ಹೊಸಗನ್ನಡದಲ್ಲಿ ಹಕಾರವಾಗಿ ಬದಲಾ ಗಿದೆ ಮತ್ತು ಇವತ್ತಿನ ಕೆಲವು ಒಳನುಡಿಗಳಲ್ಲಿ ಬಿದ್ದುಹೋಗಿದೆ. ಪಕಾರ ಹಕಾರವಾಗುವ ಬದಲಾವಣೆ ಸುಮಾರು ಹತ್ತನೇ ಶತಮಾನದಲ್ಲಿ ಸುರುವಾಗಿತ್ತು ಎಂಬುದಾಗಿ ಕನ್ನಡ ಶಾಸನಗಳನ್ನು ಪರಿಶೀಲಿಸಿದಾಗ ತಿಳಿಯುತ್ತದೆ.
ಒಂಬತ್ತನೇ

ಮಾತ್ರವೇ ಕಾಣಿಸುತ್ತದೆ; ಆದರೆ ಹತ್ತನೇ ಶತಮಾನದ ಶಾಸನಗಳಲ್ಲಿ ಪಕಾರದ ಬದಲು ಹಕಾರವನ್ನು ತೋರಿಸುವ ಕೆಲವು ಪದಗಳು ಕಾಣಸಿಗುತ್ತವೆ.

ಶಾಸನಗಳಲ್ಲಿ

ಶತಮಾನದ

ಪಕಾರ

ಅನಂತರದ ಶಾಸನಗಳಲ್ಲಿ ಇಂತಹ ಪದಗಳ ಎಣಿಕೆ ಜಾಸ್ತಿಯಾಗುತ್ತಾ ಹೋಗುತ್ತದೆ ಮತ್ತು ಹದಿನಾಲ್ಕು-ಹದಿನಯ್ದನೇ ಶತಮಾನಕ್ಕಾಗುವಾಗ

ಮೊದಲಿಗೆ ಪಕಾರ ಬಂದಿರುವ ಪದಗಳು ಕಡಿಮೆಯಾಗುತ್ತಾ ಹೋಗಿ ಅನಂತರ ಅವು ಪೂರ್ತಿ ಇಲ್ಲವಾಗಿಬಿಡುತ್ತವೆ (ನರಸಿಂಹಯ್ಯ 1941,

ಈ ಬದಲಾವಣೆ ಸಾಹಿತ್ಯರಚನೆಯಲ್ಲಿ, ಅದರಲ್ಲೂ ಪದ್ಯಗಳ ರಚನೆಯಲ್ಲಿ ಬಳಕೆಯಾಗುವ ಪದಗಳಲ್ಲಿ ಸರಿಯಾಗಿ ಕಂಡುಬರುವುದು ಹದಿಮೂರು-ಹದಿನಾಲ್ಕನೇ ಶತಮಾನದ ಅನಂತರ ಮಾತ್ರ. ಮಾತಿನಲ್ಲಿ ನಡೆದ ಬದಲಾವಣೆಗಳು ಬರಹವನ್ನು ತಲಪಲು ಸ್ವಲ್ಪ ಸಮಯ ಬೇಕಾಗುತ್ತದೆಯುಂಬುದೇ ಇದಕ್ಕೆ ಕಾರಣ. ಶಾಸನಗಳ ಬರಹ ಮಾತಿಗೆ ಹೆಚ್ಚು ಹತ್ತಿರ ಇರುವ ಕಾರಣ, ಅದರಲ್ಲಿ ಬದಲಾವಣೆಗಳು ಮೊದಲು ಕಾಣಿಸಿಕೊಳ್ಳುತ್ತವೆ.

ಹಳೆಗನ್ನಡ ಪದಗಳ ಮೊದಲಿಗಿದ್ದ ಪಕಾರ ಈ ರೀತಿ ಹಕಾರವಾಗಿ ಬದಲಾಗಿರುವುದನ್ನು ಹೊಸಗನ್ನಡದ ನೂರಾರು ಪದಗಳಲ್ಲಿ ಕಾಣಬಹುದು. ಕೆಳಗಿನ ಕೆಲವು ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಹಳೆಗನ್ನಡ ಪಾಲ್ ಪುಲಿ

ಹೊಸಗನ್ನಡ ಹಣ್ಣು ಹಾಲು ಹೀರು ಹುಲಿ

ಹಳೆಗನ್ನಡ ಪೆರ್ಚು ಪೇೞ್

ಪೊಗೞ್ ಪೋ

ಹೊಸಗನ್ನಡ ಹೂವು ಹೆಚ್ಚು ಹೇಳು ಹೊಗಳು ಹೋಗು

ಇದಲ್ಲದೆ, ಪದಗಳ ಮೊದಲಿಗಿದ್ದ ಪಕಾರದ ಬದಲಿಗೆ ಬಂದ ಹಕಾರವು ಹದಿಮೂರನೇ ಶತಮಾನದ ಶಾಸನವೊಂದರಲ್ಲೇನೇ ಕೆಲವು ‘ಹೋದರು’) ಬಿದ್ದು ‘ಹೋಗು’, ಓದರ್ ಪದಗಳಲ್ಲಿ ಹೋಗಿರುವುದು ಕಂಡು ಬರುತ್ತದೆ. ಆದರೆ, ಅನಂತರದ ಶಾಸನಗಳಲ್ಲಿ ಮತ್ತು ಇವತ್ತಿನ ಬರಹದ ಕನ್ನಡದಲ್ಲಿ ಈ ಹಕಾರ ಉಳಿದುಕೊಂಡಿದೆ. ಇವತ್ತಿನ ಕೆಲವು ಒಳನುಡಿಗಳಲ್ಲಿ ಮಾತ್ರ ಇದು ಪೂರ್ತಿ ಬಿದ್ದುಹೋಗಿದೆ.

ಉದಾಹರಣೆಗಾಗಿ, ಬಳ್ಳಾರಿ ಮತ್ತು ನಂಜನಗೂಡಿನ ಒಕ್ಕಲಿಗರ ಮಾತಿ ನಲ್ಲಿ ಇದು ಪೂರ್ತಿ ಬಿದ್ದುಹೋಗಿದೆ. ಗುಲ್ಬರ್ಗದಲ್ಲೂ ಕೆಲವು ಪ್ರದೇಶಗಳಲ್ಲಿ ಬಿದ್ದುಹೋಗಿದೆ. ಕರಾವಳಿಯ ಕನ್ನಡದಲ್ಲಿ ಇದು ಹೆಚ್ಚಿನೆಡೆಗಳಲ್ಲೂ ಉಳಿದಿದೆಯಾದರೂ ಹಾಲಕ್ಕಿ ಕನ್ನಡದಲ್ಲಿ ವಿಕಲ್ಪವಾಗಿ ಬಿದ್ದುಹೋಗಿದೆ. ಈ ಬದಲಾವಣೆಗಳನ್ನು ಕೆಳಗಿನ ಪದಗಳಲ್ಲಿ ಕಾಣಬಹುದು (ಉಪಾದ್ಯಾಯ

ಬರಹ ನಂಜನಗೂಡು ಬಳ್ಳಾರಿ ಹಳ್ಳಿ ಹಾಲು ಹುಲಿ ಹೂವು ಊ ಹೆದರು ಹೊಲ ಹೋಗು

ವಾಗು

ಗುಲ್ಬರ್ಗ ಹಳ್ಳಿ ಹುಲಿ ಹೂವ ಹೆದ್ರು ಹ್ವಲ ಹೋಗು

ಈ ಬದಲಾವಣೆ ಕನ್ನಡದ ಯಾವ ಒಳನುಡಿಗಳಲ್ಲಿ ನಡೆದಿದೆ ಮತ್ತು ಯಾವ ಒಳನುಡಿಗಳಲ್ಲಿ ನಡೆದಿಲ್ಲ ಎಂಬುದಿನ್ನೂ ಸರಿಯಾಗಿ ಗೊತ್ತಾಗಿಲ್ಲ. ಮಯ್ಸೂರು ಜಿಲ್ಲೆಯನ್ನು ಇದು ಎರಡಾಗಿ ಒಡೆಯುತ್ತದೆ. ಉದಾಹರಣೆ ಗಾಗಿ, ಕೆ. ಆರ್. ನಗರ, ಪೆರಿಯಾಪಟ್ಟಣ ಮತ್ತು ಹುಣಸೂರಿನ ಅರೆವಾಶಿ ಜಾಗದಲ್ಲಿ ಈ ಬದಲಾವಣೆ ನಡೆದಿಲ್ಲ; ಆದರೆ ಹುಣಸೂರಿನ ಉಳಿದ ಅರೆ ವಾಶಿ ಜಾಗದಲ್ಲಿ ಮತ್ತು ಮಯ್ಸೂರಿನ ಇತರ ತಾಲೂಕುಗಳಲ್ಲಿ ನಡೆದಿದೆ.

ನಂಜನಗೂಡಿನ ಒಕ್ಕಲಿಗರ ಮಾತಿನಲ್ಲಿ ಹಕಾರ ಬಿದ್ದುಹೋಗಿದೆ; ಆದರೆ, ಬ್ರಾಹ್ಮಣರ ಮಾತಿನಲ್ಲಿ ಬಿದ್ದುಹೋಗಿಲ್ಲ. ಇದರಿಂದ ಈ

ಬದಲಾವಣೆಗೆ ಸಾಮಾಜಿಕ ಮೇರೆಯೂ ಇದೆಯುಂದು ತಿಳಿಯುತ್ತದೆ (ಬಟ್ 1967 ನೋಡಿ).

ಗುಲ್ಬರ್ಗ ಜಿಲ್ಲೆಯನ್ನೂ ಈ ಬದಲಾವಣೆ ಎರಡಾಗಿ ಒಡೆಯುತ್ತದೆ. ಆದರೆ ಯಾವ ರೀತಿಯಲ್ಲಿ ಅದು ಈ ಜಿಲ್ಲೆಯನ್ನು ಒಡೆಯುತ್ತದೆ ಎಂಬುದನ್ನು ತಿಳಿಯಲು ಇನ್ನೂ ಸಂಶೋದನೆಗಳು ನಡೆಯಬೇಕಾಗಿದೆ.

Eke →

4.2.2 ಚಕಾರದ ಬದಲಾವಣೆಗಳು

ಪದಗಳ ಮೊದಲಿಗಿದ್ದ ಚಕಾರವು ಕನ್ನಡದ ಚರಿತ್ರೆಯಲ್ಲಿ ಹಲವು ರೀತಿಯ ಬದಲಾವಣೆಗಳಿಗೊಳಗಾಗಿದೆ. ಇತರ ತಡೆಯುಲಿಗಳ ಹಾಗೆ ಚಕಾರವೂ ಚಕಾರ ಮತ್ತು ಜಕಾರಗಳಾಗಿ ಒಡೆದಿದೆಯುಂಬುದನ್ನು ನಾವು ಮೇಲೆ ನೋಡಿರುವೆವು.

(1) ಆದರೆ ಈ ರೀತಿ ಅದು ಒಡೆದಿರುವುದು ಕೆಲವು ಪದಗಳಲ್ಲಿ

ಮಾತ್ರ; ಹೆಚ್ಚಿನ ಪದಗಳಲ್ಲೂ ಅದು ಸಕಾರವಾಗಿ ಬದಲಾಗಿದೆ.

ಕನ್ನಡ
ಸಟ್ಟುಗ
ಸಪ್ಪೆ ಸಾರು
ಸಿಕ್ಕು
ಸೀನು
ಸುತ್ತು
ಸೇರು
ಸೋರು

ತಮಿಳು ಚಟ್ಟುಕ ಚಪ್ಪಯ್ ಚೀನ್ತು ಚುಱ್ಱು ಚೋರ್

ತಮಿಳಿನಲ್ಲೂ ಪದಗಳ ಮೊದಲಿಗೆ ಬಂದಿರುವ ಚಕಾರ ಇಂದಿನ

ಕೆಲವು ಒಳನುಡಿಗಳಲ್ಲಿ ಶಕಾರ ಇಲ್ಲವೇ ಸಕಾರವಾಗಿ ಬದಲಾಗಿದೆ.

ಕನ್ನಡದಲ್ಲಿ ಕಾಣಿಸುವ ಈ ಚಕಾರದ ಬದಲಾವಣೆಗೂ (ಎಲ್ಲಿ ಅದು ಚಕಾರ ಇಲ್ಲವೇ ಜಕಾರವಾಗಿ ಬದಲಾಗಿದೆ ಮತ್ತು ಎಲ್ಲಿ ಸಕಾರವಾಗಿದೆ ಎಂಬುದಕ್ಕೂ) ಒಂದು ನಿಶ್ಚಿತವಾದ ನಿಯಮವನ್ನು ಕಂಡುಹಿಡಿಯಲು ಇದು ವರೆಗೂ ಸಾದ್ಯವಾಗಿಲ್ಲ.

ಚಕಾರದಿಂದ ಸುರುವಾಗುವ ಎಲ್ಲಾ ಪದಗಳೂ ಮೊದಲಿಗೆ ಸಕಾರ ವಾಗಿ ಬದಲಾಗಿದ್ದು, ಹಾಗೆ ಸಕಾರವಾದ ಅನಂತರ, ಅದಕ್ಕಿಂತ ಹಿಂದಿನ ಒಳನುಡಿಯಿಂದ ಚಕಾರವಿರುವ ಕೆಲವು ಪದಗಳು ಎರವಲಾಗಿ ಬಂದಿರ ಬಹುದು, ಮತ್ತು ಅವುಗಳಲ್ಲಿ ಕೆಲವು ಪದಗಳ ಮೊದಲ ಚಕಾರ ಜಕಾರ ವಾಗಿರಬಹುದು.

ಇನ್ನು ಕೆಲವು ಪದಗಳನ್ನು ಸುರುವಿನಲ್ಲಿ ಚಕಾರವನ್ನು ಹಾಗೆಯೇ ಉಳಿಸಿಕೊಂಡಿರುವ ತೆಲುಗು ಮೊದಲಾದ ನೆರೆಹೊರೆಯ ದ್ರಾವಿಡ ನುಡಿಗಳಿಂದ ಕನ್ನಡ ಎರವಲಾಗಿ ಪಡೆದಿರಬಹುದು.

ತಮಿಳು, ಮಲಯಾಳ,

ಕನ್ನಡ
ಚಿಲ್ಲಱ
ಚೂಪು ‘ನೋಟ’’ ಚೆಲುವು
ಚೊಕ್ಕ ‘ಸೊಗಸು’’ ಜೋಳ

ತೆಲುಗು: ಚಂದಮು ತಮಿಳು: ಚಿಲ್ಲಱಯ್ ತೆಲುಗು: ಚೂಪು ತೆಲುಗು: ಚೆಲುವು ತಮಿಳು: ಚೊಕ್ಕಮ್ ತಮಿಳು: ಚೋಳಮ್

(2) ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಬರಹ ಕನ್ನಡದ ಸಕಾರ

ಚಕಾರವಾಗಿ ಕಾಣಿಸುತ್ತದೆ. ಸೊಲಿಗರ ಕನ್ನಡದಲ್ಲಿಯೂ ಹೀಗೆಯೇ.

ಬರಹ
ಸಾಸಿವೆ

ಹಾಲಕ್ಕಿ
ಚಾಚಮಿ ಚೆಡ್ಳು

ಸೊಲಿಗ ಚಾಚವೆ

ಸಪ್ಪು
ಸಾರು

ಚೊಪ್ಪು

ಚೊಪ್ಪು

(3) ಮೂಲದ್ರಾವಿಡ ಪದಗಳ ಮೊದಲಿಗಿದ್ದ ಚಕಾರ ಕನ್ನಡದಲ್ಲಿ ಇನ್ನೊಂದು ಬದಲಾವಣೆಗೂ ಒಳಗಾಗಿದೆ; ಅದೇನೆಂದರೆ, ಕನ್ನಡದ ಹಲವು ಪದಗಳಲ್ಲಿ ಅದು ಅನಿಯಮಿತವಾಗಿ ಬಿದ್ದುಹೋಗಿದೆ. ಕನ್ನಡದಲ್ಲಿ ಮಾತ್ರ ವಲ್ಲದೆ, ತಮಿಳು, ಮಲಯಾಳ, ತೆಲುಗು ಮೊದಲಾದ ಇತರ ತೆಂಕು ದ್ರಾವಿಡ ನುಡಿಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ.

ಕೆಲವು ಪದಗಳ ಮೊದಲಿಗಿದ್ದ ಚಕಾರ ಈ ರೀತಿ ಅವುಗಳ ಎಲ್ಲಾ ರೂಪಗಳಲ್ಲೂ ಬಿದ್ದುಹೋಗಿದೆಯಾದರೆ, ಬೇರೆ ಕೆಲವು ಪದಗಳ ಕೆಲವು ಕೆಳಗೆ ರೂಪಗಳಲ್ಲಿ ಮಾತ್ರ ಬಿದ್ದುಹೋಗಿದೆ. ಉದಾಹರಣೆಗಾಗಿ, ಕೊಟ್ಟಿರುವ ಪದಗಳಿಗೆ ಕನ್ನಡದಲ್ಲಿ ಚಕಾರ ಬಿದ್ದು ಹೋಗಿರುವ ರೂಪಗಳು ಮಾತ್ರವಲ್ಲದೆ ಬಿದ್ದುಹೋಗದಿರುವ ರೂಪಗಳೂ ಇವೆ.

ಚಕಾರ ಬಿದ್ದಿರುವುದು ಅಮರು ‘ಒಟ್ಟು ಸೇರು’’
ಇಗರು ‘ಚಿಗುರು’
ಅನುವು ‘ಸೌಂದರ್ಯ’’
ಈರು ‘ಹೇನಿನ ತತ್ತಿ’’ ಉಗಿ ‘ಹೊರಗೆಳೆ’’ ಉೞಲ್ ‘ಸುತ್ತು’’

ಚಕಾರ ಉಳಿದಿರುವುದು ಸಮನಿಸು ‘ಒದಗು’’ ಚಿಗುರು ಚನ್ನಾಗಿ ಸೀರು ಸುೞಿ

ತೆಂಕುದ್ರಾವಿಡ ನುಡಿಗಳ ಕೆಲವು ಪದಗಳ ಎಲ್ಲಾ ರೂಪಗಳಲ್ಲೂ ಆ ಪದಗಳ ಮೊದಲಿಗಿದ್ದ ಚಕಾರ ಬಿದ್ದುಹೋಗಿದೆ. ಹಾಗಾಗಿ, ಇಂತಹ ಪದಗಳ ಮೊದಲಿಗೆ ಚಕಾರವಿತ್ತೆಂಬುದು ಕನ್ನಡದವೇ ಆದ (ಇಲ್ಲವೇ

ತೆಂಕುದ್ರಾವಿಡದ) ಗೊತ್ತಾಗುವುದಿಲ್ಲ.

ಪದಗಳನ್ನು

ಮಾತ್ರವೇ

ಗಮನಿಸಿದಾಗ

ಆದರೆ, ನಡು ಮತ್ತು ಬಡಗು ದ್ರಾವಿಡ ನುಡಿಗಳಲ್ಲಿ ಈ ರೀತಿ ಪದಗಳ ಮೊದಲಿಗಿದ್ದ ಚಕಾರ ಬಿದ್ದುಹೋಗಿರಲಿಲ್ಲವಾದ ಕಾರಣ, ಮೇಲೆ ಸೂಚಿಸಿದಂತಹ ಕನ್ನಡ ಪದಗಳನ್ನು ನಡು ಮತ್ತು ಬಡಗು ದ್ರಾವಿಡ ನುಡಿಗಳಲ್ಲಿರುವ ಪದಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳ ಮೊದಲಿಗೆ ಮೂಲ ದ್ರಾವಿಡದಲ್ಲಿ ಚಕಾರ ಇತ್ತು ಮತ್ತು ಅದು ಕನ್ನಡದಲ್ಲಿ ಬಿದ್ದುಹೋಗಿದೆ ಎಂಬ ಸಂಗತಿ ಗೊತ್ತಾಗುತ್ತದೆ.

ನಡು ಮತ್ತು ಬಡಗು ದ್ರಾವಿಡ ನುಡಿಗಳು

ಕನ್ನಡ
ಅಯ್ದು
ಇರುಳು
ಈಯು ‘ಕೊಡು’’ ಉಪ್ಪು
ಅವಲಕ್ಕಿ

ಕೋಲಾಮಿ: ಕೋಲಾಮಿ: ಕೋಲಾಮಿ: ನಾಯ್ಕಿ:

ಚೇದು ಸಾರುಂಗ್ ಚಿರುಮ್ ಚುಪ್ ಚವಲಿ ‘ಒರಳು’’ ಸಾನಿಕುಲ್ ಸೇರು ಸೀನ್ತೆಲ್

(4) ಪದಗಳ ಮೊದಲಿಗಿದ್ದ ಚಕಾರ ಕನ್ನಡದ ಕೆಲವು ಪದಗಳಲ್ಲಿ ತಕಾರವಾಗಿ ಬದಲಾಗಿದೆ. ಈ ಬದಲಾವಣೆಯೂ ಕನ್ನಡದ ಚರಿತ್ರೆಯಲ್ಲಿ ಬಹಳ ಅನಿಯಮಿತವಾಗಿ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸು ತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳಿಗೆ ಮೊದಲಿಗೆ ಚಕಾರವಿರುವ ರೂಪಗಳು ಮಾತ್ರವಲ್ಲದೆ ತಕಾರವಿರುವ ರೂಪಗಳೂ ಇವೆ.

ಚಕಾರವಿರುವ ರೂಪಗಳು
ಸದಕು, ಸದೆ ‘ಹೊಡೆ’’
ಸಪ್ಪು, ಸೊಪ್ಪು
ಸುೞಿ, ಸುೞಿವು, ಸುೞುಹು ಚಪ್ಪಳಿಸು, ಚಪ್ಪಾಳೆ

ತಕಾರವಿರುವ ರೂಪಗಳು

ತದಕು, ತದೆ ತೊಪ್ಪಲು ತುೞಿ, ತುೞಿಸು, ತೊೞಸು ತಪ್ಪಳಿಸು

ಅನಂತರ

(5) ದಾರವಾಡ, ಗುಲ್ಬರ್ಗ, ಬಳ್ಳಾರಿ ಮೊದಲಾದ ಕನ್ನಡದ ಬಡಗು ಒಳನುಡಿಗಳಲ್ಲಿ ಪದಗಳ ಮೊದಲಿಗೆ ಬರುವ ಚಕಾರ ಮತ್ತು ಜಕಾರಗಳಿಗೆ ಅವುಗಳ ಉಚ್ಚಾರಣೆಗಳಿವೆ. ಇವುಗಳ ಅನಂತರ ಹಿನ್ಮೇಲಿನ (ಉ, ಊ) ಮತ್ತು ಹಿನ್ನಡುವಿನ ಸ್ವರಗಳು ಬಂದಾಗ, ಇವಕ್ಕೆ ಹಲ್ಲಿನ ಉಚ್ಚಾರಣೆಯಿದೆ ಮತ್ತು ಇತರ ಸ್ವರಗಳು ಬಂದಾಗ, ಅಂಗುಳಿನ ಉಚ್ಚಾರಣೆಯಿದೆ (ಹಿರೇಮಟ 1961).

ಸ್ವರಗಳನ್ನವಲಂಬಿಸಿ

ಬರುವ

(ಕ) ಹಲ್ಲಿನ ಉಚ್ಚಾರಣೆ

ಬರಹ ಕನ್ನಡ ಚುಂಗು
ಚೂರು
ಜೋರು

(ಖ) ಅಂಗುಳಿನ ಉಚ್ಚಾರಣೆ

ಬರಹ ಕನ್ನಡ

ದಾರವಾಡ ಕನ್ನಡ ತ್ಸುಂಗು ತ್ಸೂರು ದ್ಸೂಜು
ದ್ಸೋರು

ದಾರವಾಡ ಕನ್ನಡ

ಚಕಾರ ಮತ್ತು ಜಕಾರಗಳಲ್ಲಿ ಕಾಣಿಸುವ ಈ ಒಡೆತ ಪದಗಳ ಮೊದಲಿಗೆ ಮಾತ್ರವಲ್ಲದೆ, ನಡುವೆಯೂ ನಡೆದಿದೆ. ಇದಲ್ಲದೆ, ಈ ಬದಲಾವಣೆ ಕನ್ನಡದ ಬಡಗು ಒಳನಾಡಿನ ಒಳನುಡಿಗಳಲ್ಲಿ ಮಾತ್ರವಲ್ಲದೆ, ಮರಾಟಿ, ಕೆಲವು ಒಳನುಡಿಗಳಲ್ಲೂ ನಡೆದಿದೆ.

ಮತ್ತು ಒಡಿಯಾದ

ನುಡಿಗಳಲ್ಲಿ

ತೆಲುಗು

(6) ಹೊಳೇನರಸೀಪುರ ತಾಲೂಕಿನಲ್ಲಿರುವ ಕೆಳವರ್ಗದ ಜನರ ಮಾತಿನಲ್ಲಿ ಪದಗಳ ಮೊದಲಿಗೆ ಬಂದಿದ್ದ ಚಕಾರ ಮತ್ತು ಜಕಾರಗಳು ಅವುಗಳ ಅನಂತರ ಮುನ್ಮೇಲಿನ (ಇ, ಈ) ಮತ್ತು ಮುನ್ನಡುವಿನ (ಎ, ಏ) ಸ್ವರಗಳು ಬಂದಾಗ ಕಕಾರ ಮತ್ತು ಗಕಾರಗಳಾಗಿ ಬದಲಾಗಿವೆಯುಂದು ಚಿದಾನಂದ ಮೂರ್ತಿ (1972, 1984) ವರದಿ ಮಾಡಿದ್ದಾರೆ.

ಬರಹದ ಕನ್ನಡ
ಚೆನ್ನಾಗಿ
ಚೇಳು
ಜಿರಿ ‘ಸಾವಿರಕಾಲು’’ ಜೇನು

ಹೊಳೇನರಸೀಪುರ ಕೆನ್ನಾಗಿ ಕೇಳು ಗೇನು

ಈ ಬದಲಾವಣೆ ನಿಯಮಿತವಾದುದಲ್ಲ. ಯಾಕೆಂದರೆ, ಅದಕ್ಕೆ ಚಿನ್ನ, ಚಿಲುಕ, ಜಿಗುಟು, ಚಿಕ್ಕಣ್ಣ ಮೊದಲಾದ ಹಲವು ಅಪವಾದಗಳಿವೆ. ಅರಕಲಗೂಡಿನಲ್ಲೂ ಈ ಬದಲಾವಣೆ ಅಪರೂಪವಾಗಿ ಕೆಲವು ಪದಗಳಲ್ಲಿ (ಚಿಕ್ಕಿ>ಕಿಕ್ಕಿ, ಚಿಲಕ>ಕಿಲಕ) ಕಾಣಿಸುತ್ತದೆ.

Eke →

4.2.3 ಕಕಾರ-ಗಕಾರಗಳು ಚಕಾರ-ಜಕಾರಗಳಾಗಿರುವುದು

ಮಯ್ಸೂರು ಜಿಲ್ಲೆಯ ಕೆ. ಆರ್. ನಗರದ ಉತ್ತರ ಬಾಗದಲ್ಲಿ (ಉದಾ ಹರಣೆಗಾಗಿ, ಹೊಸೂರು ಮತ್ತು ಸಾಲಿಗ್ರಾಮಗಳಲ್ಲಿ) ಮತ್ತು ಅದರ ಪಕ್ಕ ದಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ಹರಿಜನರ ಕನ್ನಡದಲ್ಲಿ ಕಕಾರ ಮತ್ತು ಗಕಾರಗಳು ಅವುಗಳ ಅನಂತರ ಮುಂದಿನ ಸ್ವರಗಳಾದ ಇ, ಈ, ಎ ಮತ್ತು ಏಗಳು ಬಂದಾಗ, ಚಕಾರ ಮತ್ತು ಜಕಾರಗಳಾಗಿ ಬದಲಾಗಿವೆ

(ಕ) ಕಕಾರ ಚಕಾರವಾಗಿರುವುದು

ಬರಹದ ಕನ್ನಡ
ಕೀವು
ಕೆಲಸ
ಕೇಳು

(ಖ) ಗಕಾರ ಜಕಾರವಾಗಿರುವುದು ಬರಹದ ಕನ್ನಡ
ಗೆಲ್ಲು

ಹೊಸೂರು ಚೀವು ಚೆಲಸ ಚೇಳು

ಹೊಸೂರು ಜೆಲ್ಲು

ಈ ಬದಲಾವಣೆ ಮಯ್ಸೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ, ಹಾಸನ ಮತ್ತು ಚಿಕ್ಕಮಗಳೂರುಗಳಲ್ಲೂ ಕಾಣಿಸುತ್ತದೆಯುಂದು ಚಿದಾನಂದ ಮೂರ್ತಿ (1972, 1984) ವರದಿ ಮಾಡಿದ್ದಾರೆ. ಅಕ್ಕಪಕ್ಕದಲ್ಲಿರುವ ಹೊಳೇ ನರಸೀಪುರ, ಚನ್ನರಾಯ ಪಟ್ಟಣ, ಅರಕಲಗೋಡು, ಸಕಲೇಶಪುರ, ಮೂಡಿ ಗೆರೆ ಮತ್ತು ಕ್ರುಶ್ಣರಾಜಪೇಟೆ ತಾಲೂಕುಗಳಲ್ಲೂ ಅವರು ಈ ಬದಲಾವಣೆ ನಡೆದಿರುವುದನ್ನು ಗಮನಿಸಿದ್ದಾರೆ.

ಅವರ ಅಬಿಪ್ರಾಯದಂತೆ ಈ ಬದಲಾವಣೆ ಚನ್ನರಾಯ ಪಟ್ಟಣದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಎಲ್ಲಾ ವಗ್ರಗಳ ಜನರ ಮಾತಿನಲ್ಲೂ ನಡೆದಿದೆ. ಆದರೆ ಉಳಿದ ತಾಲೂಕುಗಳಲ್ಲಿ ಇದು ಕೆಳವಗ್ರದ ಜನರ ಮಾತಿನಲ್ಲಿ ಮಾತ್ರ ಕಾಣಿಸುತ್ತದೆ.

ಸಕಲೇಶಪುರ ಪೇಟೆಯಲ್ಲಿ ಈ ಬದಲಾವಣೆ ಪದಗಳ ನಡುವೆ

ಬಂದಿರುವ ಕಕಾರ ಗಕಾರಗಳಲ್ಲೂ ಕಾಣಿಸುತ್ತದೆ.

ಬರಹದ ಕನ್ನಡ
ಕುಕ್ಕೆ ಹೊಗೆ

ಸಕಲೇಶಪುರ ಕುಚ್ಚೆ ಹೊಜೆ

ಇಂತಹ ಪದಗಳು ಚನ್ನರಾಯಪಟ್ಟಣದಲ್ಲೂ ಕಾಣಿಸುತ್ತವೆ; ಆದರೆ ಅಲ್ಲಿ ಪದಗಳ ಮೊದಲಿಗೆ ಬರುವ ಕಕಾರ-ಗಕಾರಗಳಲ್ಲಿ ಕಾಣಿಸುವಶ್ಟು ನಿಯಮಿತವಾಗಿ ಈ ಬದಲಾವಣೆ ಪದಗಳ ನಡುವೆ ಬರುವ ಕಕಾರ-ಗಕಾರ ಗಳಲ್ಲಿ ಕಾಣಿಸುವುದಿಲ್ಲ.

ತಮಿಳು ಮತ್ತು ಮಲಯಾಳ ನುಡಿಗಳಲ್ಲಿ ಪದಗಳ ಮೊದಲಿಗಿದ್ದ ಕಕಾರ ಚಕಾರವಾಗುವಂತಹ ಇಂತಹದೇ ಒಂದು ಬದಲಾವಣೆ ಬಹಳ ಹಿಂದೆಯೇ ನಡೆದಿತ್ತು. ತಮಿಳಿನ ಅತೀ ಹಿಂದಿನ ಬರಹಗಳಲ್ಲೂ ಈ ಬದಲಾವಣೆ ನಡೆದಿರುವುದು ಕಾಣಿಸುತ್ತದೆ. ಇದು ಮುನ್ಮೇಲಿನ ಮತ್ತು ಮುನ್ನಡುವಿನ ಸ್ವರಗಳು ಅನಂತರ ಬಂದಿದ್ದಾಗ ನಡೆದಿದ್ದುವು, ಆದರೆ ಅವುಗಳ ಅನಂತರ ಮಡಚಿದ ವ್ಯಂಜನಗಳು (ಟ, ಣ, ಳ, ೞ) ಬಂದಿದ್ದಾಗ ನಡೆದಿರಲಿಲ್ಲ.

ಕನ್ನಡದ ತೆಂಕು ಒಳನುಡಿಯಲ್ಲಿ ನಡೆದ ಮೇಲಿನ ಬದಲಾವಣೆ ಅಂತಹದೇ ಇತ್ತೀಚೆಗಿನದಾದರೂ ಬದಲಾವಣೆಯೊಂದನ್ನು ಮಲಯಾಳ ಮೊದಲಿಗೇನೇ ಪಕ್ಕದಲ್ಲಿದ್ದುದು ಕಾರಣವಾಗಿರಲು ಸಾದ್ಯವಿದೆ. ಆದರೆ ಮೇಲೆ ಸೂಚಿಸಿದ ಹಾಗೆ ಕನ್ನಡ ಒಳನುಡಿಯ ಬದಲಾವಣೆ ಮತ್ತು ಮಲಯಾಳದ ಬದಲಾವಣೆಗಳ ನಡುವೆ ವ್ಯತ್ಯಾಸಗಳಿವೆ.

ನಡೆಯಲು

ನಡೆಸಿದ್ದ

ಹೆಚ್ಚಿನ

ಸ್ವರಗಳ

Eke →

4.3 ಸ್ವರಗಳ ನಡುವಿನ ಒತ್ತೆ ತಡೆಯುಲಿಗಳು

ತಡೆಯುಲಿಗಳಿಗೆ ನಡುವೆ ಒತ್ತೆಯಾಗಿ ಬಂದ ಮೂಲದ್ರಾವಿಡದಲ್ಲಿ ಕೊರಳಿಸಿದ ಉಚ್ಚಾರಣೆಯಿದ್ದಿರಬೇಕು. ಕನ್ನಡದಲ್ಲಿ ತಡೆಯುಲಿಗಳಾಗಿಯೇ ಉಳಿದುಕೊಂಡಿವೆ. ಹಗಲು, ಮಗ, ಸೋಗೆ, ಕದಿರು, ಒದೆ, ಉದುರು, ಹೊಡೆ, ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಆದರೆ ಈ ನಿಯಮಕ್ಕೆ

ಕೆಳಗೆ ವಿವರಿಸಿದ ಹಾಗೆ

ಮೊದಲಾದ

ಕೊರಳಿಸಿದ

ಮಟ್ಟಿಗೆ

ಕೆಲವು

ಅಪವಾದಗಳಿವೆ.

Eke →

4.3.1 ಪಕಾರವು ವಕಾರ ಮತ್ತು ಹಕಾರಗಳಾಗಿರುವುದು

(1) ಮೂಲದ್ರಾವಿಡದ ಬದಲಾವಣೆ: ಎರಡು ಸ್ವರಗಳ ನಡುವೆ ಮೂಲದ್ರಾವಿಡದಲ್ಲೇನೇ ಒತ್ತೆ ಪಕಾರ ಮತ್ತು ಒತ್ತೆ ವಕಾರಗಳ ತೋರುತ್ತದೆ. ಯಾಕೆಂದರೆ, ಕನ್ನಡವೇ ಮೊದಲಾದ ಇವತ್ತಿನ ಹಲವು ದ್ರಾವಿಡ ನುಡಿಗಳಲ್ಲಿ ಇಮ್ಮಡಿ ಪಕಾರ ಒತ್ತೆ ಪಕಾರವಾಗಬೇಕಿದ್ದ ಹಲವು ಸನ್ನಿವೇಶಗಳಲ್ಲಿ ಒತ್ತೆ ಪಕಾರದ ಬದಲು ವಕಾರ ಕಾಣಿಸಿಕೊಳ್ಳುತ್ತದೆ.

ನಡುವೆ ವ್ಯತ್ಯಾಸವಿರಲಿಲ್ಲವೆಂದು

ಕನ್ನಡದಲ್ಲಿ ಈ ರೀತಿ ಎರಡು

ನಡುವೆ ಪಕಾರ ವಕಾರವಾಗಿರುವುದಕ್ಕೆ ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಪದಗಳನ್ನು ಉದಾಹರಣೆಯಾಗಿ ಕೊಡಬಹುದು. ಇವುಗಳಲ್ಲಿ ಪಕಾರ ಇಮ್ಮಡಿ

ಸ್ವರಗಳ

ರೂಪದಲ್ಲಿ ಬಂದಾಗ ಪಕಾರವಾಗಿ ಉಳಿದಿದೆ ಮತ್ತು ಒತ್ತೆ ರೂಪದಲ್ಲಿ ಬಂದಾಗ ಬಕಾರವಾಗದೆ ವಕಾರವಾಗಿದೆ.

ಇಮ್ಮಡಿ ರೂಪದಲ್ಲಿ ಕಪ್ಪು ‘ಮುಚ್ಚು’
ಕೆಪ್ಪು ‘ಕಿವುಡು’’ ಸೊಪ್ಪು, ತೊಪ್ಪಲು

ಒತ್ತೆ ರೂಪದಲ್ಲಿ

ಕವಿ, ಕವುದಿ ಕಿವುಡು ತೊವಲ್ ‘ತೊಪ್ಪಲು’’ ತೆವರು ’‘ಎತ್ತರದ ಉದ್ದ ಕಟ್ಟೆ’

ಬೇರೆ ದ್ರಾವಿಡ ನುಡಿಗಳಲ್ಲಿ ಇಮ್ಮಡಿ ರೂಪದ ಪ್್ಪ ಇದ್ದು, ಕನ್ನಡ ದಲ್ಲಿ ವ್ ಇರುವ, ಮತ್ತು ಕನ್ನಡದಲ್ಲಿ ಪ್್ಪ ಇದ್ದು ಇತರ ನುಡಿಗಳಲ್ಲಿ ವ್ ಇರುವ ಪದಗಳೂ ಈ ಬದಲಾವಣೆಗೆ ಉದಾಹರಣೆಗಳಾಗಬಲ್ಲುವು.

ಕನ್ನಡದಲ್ಲಿ ವ್
ತವು ‘ಕಡಿಮೆಯಾಗು’’ ತಪ್ಪು, ತವು

ತಮಿಳಿನಲ್ಲಿ ಪ್್ಪ

ಕನ್ನಡದಲ್ಲಿ ಪ್್ಪ
ತಪ್ಪು
ಉಪ್ಪು
ಚಪ್ಪರಿಸು ಕುಪ್ಪಳಿಸು

ತಮಿಳಿನಲ್ಲಿ ವ್ ತವರ್ ಉವಱು ಚವಯ್ ‘ಜಗಿ’’ ಕೊವ್್ಕ ‘ನೆಗೆ’’ (ಗೋಂಡಿ)

ಹಳೆತಮಿಳಿನ

ಕೆಲವು

ಕ್ರಿಯಾರೂಪಗಳಲ್ಲಿ ಒತ್ತೆ

ಪಕಾರ

ಉಳಿದುಕೊಂಡಿದೆ; ಆದರೆ, ಕನ್ನಡದಲ್ಲಿ ಇದು ವಕಾರವಾಗಿ ಕಾಣಿಸುತ್ತದೆ.

ಹಳೆತಮಿಳು ವರುಪವನ್ ಪಾಡುಪ

ಕನ್ನಡ ಬರುವವನು ಹಾಡುವರು (ಹಾಡುತ್ತಾರೆ)

ಚರಿತ್ರೆಯಲ್ಲಿಯೂ

(2) ಕನ್ನಡದಲ್ಲಿ ನಡೆದ ಅನಿಯಮಿತವಾದ ಬದಲಾವಣೆ: ಪಕಾರ ಸ್ವರಗಳ ಕನ್ನಡದ ವಕಾರವಾಗುವ ಬದಲಾವಣೆಯೊಂದು ಅನಿಯಮಿತವಾಗಿ ನಡೆದಿದೆ. ಈ ಬದಲಾವಣೆಗೆ ಬೇಕಾಗುವ ಒತ್ತೆ ಪಕಾರ ಕನ್ನಡದಲ್ಲೇ ನಡೆದಂತಹ ಮೂಲದ್ರಾವಿಡದ ಪಕಾರವಾಗುವ ಬದಲಾವಣೆಯಿಂದ ಬಂದಿದೆ.

ನಡುವಿನ ಒತ್ತೆ

ಇಮ್ಮಡಿ

ಪಕಾರ

ಸ್ವರಗಳ ನಡುವೆ ಬರುವ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಉದ್ದ ಸ್ವರದ ಅನಂತರ ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ ಎಂಬುದನ್ನು ಮುಂದೆ (4.4.1)ರಲ್ಲಿ ನೋಡಲಿರುವೆವು. ಈ ಬದಲಾವಣೆಯ ಮೂಲಕ ದೊರೆತ ಒತ್ತೆ ಪಕಾರ ಕನ್ನಡದಲ್ಲಿ ಅನಿಯಮಿತವಾಗಿ ವಕಾರವಾಗಿದೆ.

ನಾವು

ಕೆಳಗೆ ಕೊಟ್ಟಿರುವಂತಹ ಪದಗಳಲ್ಲಿ ಮತ್ತು ಪದರೂಪಗಳಲ್ಲಿ ಈ

ರೀತಿ ಪಕಾರ ವಕಾರವಾಗಿ ಬದಲಾಗಿರುವುದನ್ನು ಕಾಣಬಹುದು.

ತಮಿಳು ಓಪ್ಪು

ಕನ್ನಡ
ಸೋವು ‘ಓಡಿಸು’’ ತೊಡವು ‘ಮೊದಲು’’ ತೊಟುಪ್ಪು ಕಾವ ’‘ಕಾಯುವ’’ ಕುಡಿವ

ಕಾಪ್ಪ ಪಿಟಿಪ್ಪ ಕುಟಿಪ್ಪ

ಆದರೆ, ಕೆಳಗೆ ಕೊಟ್ಟಿರುವಂತಹ ಪದಗಳಲ್ಲಿ ಈ ಪಕಾರ ಬದಲಾಗದೆ ಉಳಿದಿರುವ ಕಾರಣ, ಇದನ್ನೊಂದು ಅನಿಯಮಿತ ಬದಲಾವಣೆಯುಂದು ಪರಿಗಣಿಸಬೇಕಾಗಿದೆ.

ಕನ್ನಡ
ತೋಪು

ತಮಿಳು ಚಾಪ್ಪಯ್ ತೋಪ್ಪು

ತಾಪಾಳ ಬಳಪ
ಬರಪ (ಬರಹ)
ಬಿಳುಪು
ಮುಡಿಪು

ಅಪ್ಪು ತಾೞ್ಪ್ಪಾಳ್ ಪಳಪ್ಪಮ್ ವರಯ್ಪ್ಪು ಅಕಪ್ಪಯ್ ವೆಳುಪ್ಪು ಮುಟಿಪ್ಪು

ಕನ್ನಡದಲ್ಲೇನೇ ಪಕಾರ ಮತ್ತು ವಕಾರಗಳೆರಡನ್ನೂ ತೋರಿಸುವ ಪದ

ಗಳಿರುವುದೂ ಈ ಬದಲಾವಣೆ ಅನಿಯಮಿತವೆಂಬುದನ್ನು ಸೂಚಿಸುತ್ತದೆ.

ಕನ್ನಡ
ಅೞಿಪು, ಅೞಿವು ಎರಪು, ಎರವು
ಕಱುಪು, ಕಱುವು
ಕೆಡಪು, ಕೆಡವು
ನೆನಪು, ನೆನವು

ತಮಿಳು ಅೞಿಪ್ಪು ಇರಪ್ಪು ‘ಬೇಡುವಿಕೆ’’ ಕಱುಪ್ಪು ಕಿಟಪ್ಪು ನಿನಯ್ಪ್ಪು

ಪಂಪಬಾರತದಲ್ಲಿ ಪಕಾರವಿರುವ ಪೊಳೆಪು, ಪಡೆಪು, ಕರುಪು, ಕಾಪು ಮೊದಲಾದ ಪದಗಳನ್ನು ಮತ್ತು ವಕಾರವಿರುವ ಅಱಿವು, ಉೞಿವು, ಅೞವು, ಸಾವು ಮೊದಲಾದ ಪದಗಳನ್ನು ಕಾಣಬಹುದು.

ಈ ರೀತಿ ವಕಾರವಾಗದೆ ಉಳಿದ ಪಕಾರ ಅನಂತರ ಹಕಾರವಾಗಿದೆ (ಕೆಳಗೆ (4) ನೋಡಿ). ಇಂತಹ ಕೆಲವು ಪದಗಳಿಗೆ ಪಕಾರ, ವಕಾರ ಮತ್ತು ಹಕಾರಗಳಿರುವ ಮೂರು ಮೂರು ರೂಪಗಳಿರುವುದನ್ನು ಕಾಣಬಹುದು (ಸಲಪು, ಸಲವು, ಸಲಹು; ತಿರುಪು, ತಿರುವು, ತಿರುಹು; ಕೊಡಪು, ಕೊಡವು, ಕೊಡಹು; ಕೆಡಪು, ಕೆಡವು, ಕೆಡಹು).

(3) ಪಕಾರ ವಕಾರವಾಗುವ ಸೇರಿಕೆಯ ನಿಯಮ:

ಪಕಾರ ವಕಾರವಾಗುವ ಈ ಬದಲಾವಣೆ ಕನ್ನಡದ ಏಳನೇ ಶತಮಾನದ ಶಾಸನಗಳಲ್ಲಿ ಒಂದು ಸೇರಿಕೆಯ ನಿಯಮವಾಗಿ ಕಾಣಿಸಿಕೊಳ್ಳುತ್ತದೆ. ಈ ನಿಯಮದಂತೆ, ಸ್ವರದಲ್ಲಿ ಕೊನೆಗೊಳ್ಳುವ ಪದದ ಅನಂತರ ಪಕಾರದಲ್ಲಿ ಮೊದಲಾಗುವ ಪದ ಬಂದಾಗ, ಎರಡನೆಯ ಪದದ ಮೊದಲ ಪಕಾರ ವಕಾರವಾಗಿ ಬದಲಾಗುತ್ತದೆ (ನರಸಿಂಹಯ್ಯ 1941:3 ನೋಡಿ).

ಎಡೆವಿಡಿಯಲ್

ಎಡೆ + ಪಿಡಿಯಲ್ ಎಡೆ + ಪೊೞಲ್ನಾಡು ಎಡೆವೊೞಲ್ನಾಡು ಪೋಗೆ + ಪೋಗಿ ಮಂಜು + ಪೋಲ್

ಪೋಗೆವೋಗಿ ಮಂಜುವೋಲ್

ಹಳೆಗನ್ನಡದ  ಕಾವ್ಯಗಳಲ್ಲೂ  ಸೇರಿಕೆಯ  ನಿಯಮವಾಗಿ  ಸ್ವರಗಳ  ನಡುವೆ  ಬಂದ  ಪಕಾರ  ವಕಾರವಾಗಿರುವುದನ್ನು  ಕೆಳಗೆ  ಕೊಟ್ಟಿರುವ  ಪಂಪಬಾರತದ  ಉದಾಹರಣೆಗಳಲ್ಲಿ  ಕಾಣಬಹುದು  (ರಾಮಚಂದ್ರ  ರಾವ್ 

ಅಡಿ + ಪಜ್ಜೆಯಂ ಪಗೆ + ಪಾಡಿಯೊಳ್ ಗಿಳಿ + ಪಿಂಡಿನ
ಒಡ + ಪುಟ್ಟಿತು
ಪೊಱ + ಪೊೞಲೊಳ್ ಪೊಱವೊೞಲೊಳ್ ನಚ್ಚು + ಪೋದ

ಅಡಿವಜ್ಜೆಯಂ ಪಗೆವಾಡಿಯೊಳ್ ಗಿಳಿವಿಂಡಿನ ಒಡವುಟ್ಟಿತು

ನಚ್ಚುವೋದ

(4) ಒತ್ತೆ ಪಕಾರ ಹಕಾರವಾದುದು: ಪದಗಳಲ್ಲಿ ಸ್ವರಗಳ ನಡುವೆ ಬಂದಿದ್ದ ಒತ್ತೆ ಪಕಾರ ವಕಾರವಾಗುವ ಮೇಲಿನ ಅನಿಯಮಿತ ಬದಲಾವಣೆ ನಡೆದ ಅನಂತರ ಆ ಬದಲಾವಣೆಗೆ ಒಳಗಾಗದೆ ಉಳಿದಿದ್ದ ಒತ್ತೆ ಪಕಾರಗಳು ನಡುಗನ್ನಡದಲ್ಲಿ ಹಕಾರವಾಗಿ ಬದಲಾಗಿವೆ.

ಹಳೆಗನ್ನಡ ಅಱುಪು
ಅೞಿಪು
ಎಡಪು
ಬರಪ
ಪೋಪ

ನಡುಗನ್ನಡ ಅರುಹು ಅೞಿಹು ಎಡಹು ಬರಹ ಹೋಹ

ಇದಲ್ಲದೆ, ಹಳೆಗನ್ನಡದಲ್ಲಿ ಸ್ವರಗಳ ನಡುವೆ ಬಂದಿದ್ದ ಇಮ್ಮಡಿ ಪಕಾರ ಕೆಲವು ಸನ್ನಿವೇಶಗಳಲ್ಲಿ ಒತ್ತೆ ಪಕಾರವಾಗಿ ಬದಲಾಗಿದ್ದು, ಅಂತಹ ಹಕಾರವಾಗಿ ಬದಲಾಗಿದೆ. ಈ ಪಕಾರವೂ ಶಾಸನಗಳಲ್ಲೇನೇ ಬದಲಾವಣೆಯನ್ನು ಹದಿಮೂರನೇ ಕಾಣಬಹುದು (ನರಸಿಂಹಯ್ಯ 1941).

ನಡುಗನ್ನಡದಲ್ಲಿ

ಶತಮಾನದ

ಇಮ್ಮಡಿ ಪಕಾರ ಒತ್ತೆ ಪಕಾರ
ಬಪ್ಪ ಅಂತಪ್ಪ

ಹಕಾರ

ಇದಕ್ಕೂ ಮೊದಲು, ಎಂದರೆ ಹನ್ನೊಂದನೇ ಶತಮಾನದ ಒಂದು ನಡಹಿದರ್ ಎಂಬ ಶಾಸನದಲ್ಲೇನೇ ರೂಪದಲ್ಲಿದೆ; ಹತ್ತನೇ ಶತಮಾನದ ಒಂದು ಶಾಸನದಲ್ಲಿ ಹೋಹನ್ (< ಪೋಪನ್) ಎಂಬ ಪದರೂಪ ಇದೆ (ನರಸಿಂಹಯ್ಯ 1941).

ನಡಪ್ಪಿದರ್ ಎಂಬುದು

ಕೆಲವು ಪದರೂಪಗಳಲ್ಲಿದ್ದ ಇಂತಹ ಹಕಾರ ಬಿದ್ದುಹೋಗಿ, ಗಿಡ್ಡ ಸ್ವರದ ಬದಲು ಉದ್ದ ಸ್ವರ ಬಂದಿರುವುದನ್ನು ಕನ್ನಡದ ಕೆಲವು (ಬಂದಹನ್ > (ಒಳನಾಡಿನ) ಒಳನುಡಿಗಳಲ್ಲಿ ಬಂದಾನು, ಬಂದಹೆನ್ > ಬಂದೇನು).

ಕಾಣಬಹುದು

ಹೊಸಗನ್ನಡದಲ್ಲಿ ಈ ಸ್ವರಗಳ ನಡುವಿನ ಹಕಾರ ಕೆಲವು ಪದಗಳಲ್ಲಿ ಮಾತ್ರ ಉಳಿದಿದೆ (ಬರಹ, ಕೆಡಹು, ಸಲಹು); ಬೇರೆ ಕೆಲವು ಪದಗಳಲ್ಲಿ ಅದರ ಬದಲು ಪಕಾರವಿರುವ ರೂಪವೇ ಕಾಣಿಸುತ್ತದೆ (ನೆನಪು, ಬಿಳುಪು). ಹೊಸಗನ್ನಡ ಇವನ್ನು ಪಕಾರ ಹಕಾರವಾದ ಅನಂತರ ಹಳೆಗನ್ನಡದಿಂದ ಎರವಲಾಗಿ ಪಡೆದಿರಬೇಕು.

Eke →

4.3.2 ಚಕಾರ ಸಕಾರವಾಗಿರುವುದು

ಮೂಲದ್ರಾವಿಡ ಪದಗಳಲ್ಲಿ ಎರಡು ಸ್ವರಗಳ ನಡುವೆ ಕಾಣಿಸಿಕೊಂಡಿದ್ದ ಚಕಾರ ಕನ್ನಡದಲ್ಲಿ ಜಕಾರವಾಗಿ ಕಾಣಿಸಿಕೊಳ್ಳುವ ಬದಲು ಸಕಾರವಾಗಿ (ಎಂದರೆ ಕೊರಳಿಸದ ಉಜ್ಜುಲಿಯಾಗಿ) ಕಾಣಿಸಿಕೊಳ್ಳುತ್ತದೆ.

ಕನ್ನಡ
ಹಸಿವು
ಮಸಕು
ಮಾಸು
ಬೀಸು
ಮುಸು
ಮೊಸರು

ತಮಿಳು ಮಚಂಕು ಮಾಚು ವೀಚು ಮುಚು ಮುಚರ್

ಸ್ವರಗಳ

ನುಡಿಗಳಲ್ಲಿ ನಡುವಿದ್ದ ಚಕಾರ ಹಲವು ದ್ರಾವಿಡ ಯಕಾರವಾಗಿ ಬದಲಾಗಿದ್ದು, ಮೂಲದ್ರಾವಿಡದಲ್ಲೇನೇ ಇಂತಹದೊಂದು ಬದಲಾವಣೆ ನಡೆದಿರಬೇಕೆಂದು ಊಹಿಸಲಾಗಿದೆ. ಇದಲ್ಲದೆ, ಈ ಯಕಾರ ಅನಂತರ ಬಿದ್ದು ಹೋಗಿರುವುದನ್ನೂ ಕೆಲವು ನುಡಿಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಈ ಬದಲಾವಣೆಯನ್ನು ತೋರಿಸುವ ಕೆಲವು ಪದಗಳಿವೆ (ಪಯಿರ್ (*ಪಚಿರ್), ಪುಯ್ಯಲ್, ಹುಯ್ಯಲ್ (ತಮಿಳು: ಪೂಚಲ್)).
ಆದರೆ, ಹೆಚ್ಚಿನೆಡೆಗಳಲ್ಲೂ ಸ್ವರಗಳ ನಡುವಿನ ಒತ್ತೆ ಚಕಾರವನ್ನು ಕನ್ನಡ ಸಕಾರವಾಗಿಯೇ ಉಳಿಸಿಕೊಂಡಿರುವ ಕಾರಣ, ಅದು ಈ

ವಿಶಯದಲ್ಲಿ ಮೂಲದ್ರಾವಿಡದ ತೋರಿಸುತ್ತದೆಯುಂದು ಹೇಳಬಹುದು.

ಸ್ವರೂಪವನ್ನು ಹೆಚ್ಚು

ಸರಿಯಾಗಿ

ಕನ್ನಡ
ಹೆಸರು
ಪುಸಿ
ಮೊಸರು ಕಿಸುರ್

ತಮಿಳು ಪೆಯರ್ ಉಯಿರು ಪೊಯ್ ಮೋರ್ (<*ಮೊಯರ್) ಚೆಯಿರ್ ‘ಕೋಪಿಸು’’

ಕನ್ನಡದಲ್ಲಿ ಇವತ್ತು ಸ್ವರಗಳ ನಡುವೆ ಕಾಣಿಸುವ ಒತ್ತೆ ಚಕಾರ ಹೆಚ್ಚಿನೆಡೆಗಳಲ್ಲೂ ಮೂಲದ್ರಾವಿಡದ ಇಮ್ಮಡಿ ಚಕಾರದಿಂದ ಬಂದಿದೆ. ಉದ್ದಸ್ವರದ ಅನಂತರ ಬಂದ ಇಮ್ಮಡಿ ಚಕಾರ ಕನ್ನಡದಲ್ಲಿ ಒತ್ತೆ ಚಕಾರವಾಗಿ ಬದಲಾಗಿರುವುದೇ ಇದಕ್ಕೆ ಕಾರಣ (4.4.1 ನೋಡಿ).

ಕನ್ನಡ
ಆಚ ‘ಶಾಲ ಮರ’’ ಕೂಚು ‘ಕಂಬ’’
ಪೀಚು ‘ಚಿಕ್ಕ’’
ಪೀಚು ‘ಚಿಮ್ಮು’
ಪೂಚಿ ‘ಹುಳ’’

ತಮಿಳು ಕೂಚ್ಚಮ್ ಪೀಚ್ಚ (ಮಲಯಾಳ) ಪೀಚ್ಚು ಪೂಚ್ಚಿ

Eke →

4.3.3 ಱಕಾರ ರಕಾರವಾಗಿರುವುದು

ಮೂಲದ್ರಾವಿಡದ ಱಕಾರ ಎರಡು ಸ್ವರಗಳ ನಡುವೆ ಕೊರಳಿಸಿದ ವ್ಯಂಜನವಾಗಿಯೇ ಉಳಿದಿದೆ; ಹಳೆಗನ್ನಡದ ಕಾಲದಲ್ಲಿ ಅದು ರಕಾರಕ್ಕಿಂತ ಬೇರಾಗಿರುವ ಹೊಡೆಯುಲಿಯಾಗಿ ಉಚ್ಚಾರಣೆಯಲ್ಲಿತ್ತೆಂದು ಹೇಳಲು ಅವಕಾಶವಿದೆ.

ಸೊಲಿಗರ ಕನ್ನಡದಲ್ಲಿ ಈ ತಡೆಯುಲಿ ಇವತ್ತಿಗೂ ರಕಾರಕ್ಕಿಂತ ಬೇರಾ ರಕಾರದ ಹೊಡೆಯುಲಿಯಾಗಿ ಉಚ್ಚಾರಣೆಯಲ್ಲಿದೆ. ಗಿರುವ ಉಚ್ಚಾರಣೆಯಲ್ಲಿ ನಾಲಿಗೆ ಹಲ್ಲಿನ ಹಿಂಬದಿಯಲ್ಲಿರುವ ಅಂಗುಳಿಗೆ ಒಂದು ಬಾರಿ ಹೊಡೆಯುವು ದಾದರೆ, ಱಕಾರದ ಉಚ್ಚಾರಣೆಯಲ್ಲಿ ಹಲವು ಬಾರಿ ಹೊಡೆಯುತ್ತದೆ (ಗುರುಬಸವೇ ಗವ್ಡ 1968).

ಸೊಲಿಗರ ಕನ್ನಡ

ರಕಾರವಿರುವ ಪದ ಱಕಾರವಿರುವ ಪದ ಅಱ ‘ಬಂಡೆ’
ಇರು ‘ಇರು’’ ಇಱು ‘ಇರುವೆ’’
ಊಱು ‘ಕಾಲೂರು’’ ಊರು ‘ಹಳ್ಳಿ’’ ಕಱ ‘ಬರಹೇಳು’’ ತೆಱ ‘ಬಾಗಿಲು ತೆರೆ’’ ತೆರೆ ‘ನೀರಿನ ತೆರೆ’

ಕರೆ ‘ಕಲೆ’

ಬಡಗರ ಕನ್ನಡದಲ್ಲೂ ರಕಾರ ಮತ್ತು ಱಕಾರಗಳ ನಡುವಿನ ಈ ರೂಪದಲ್ಲಿ ವ್ಯತ್ಯಾಸ ಉಳಿದುಕೊಂಡಿದೆ. ಇದಕ್ಕೆ ಕೆಳಗಿನ ಕೆಲವು ಪದಗಳನ್ನು ಉದಾಹರಣೆಯಾಗಿ ಕೊಡಬಹುದು (ನಟರಾಜನ್ 1962).

ಹೊಡೆಯುಲಿಗಳ

ಬಡಗರ ಕನ್ನಡ

ಱಕಾರವಿರುವ ಪದ ಮಱಿ ‘ಕರು’’
ಮೂಱು ‘ಮೂರು’’ ಮೊಱ ‘ಕೇರು’’
ಮುಱಿ ‘ಮುರಿ’
ಚೇಱು ‘ಕೆಸರು’

ರಕಾರವಿರುವ ಪದ ನರಿ ‘ನರಿ’’ ಮಾರು ‘ಎದೆ’’ ಒರಲ ‘ಒರಲು’’ ಪುರಿ ‘ಹುರಿಯಕ್ಕಿ’’ ಬೇರು ‘ಬೇರು’’

ಆದರೆ, ಬಾಲಕ್ರುಶ್ಣನ್ ಬರೆದ ಬಡಗ ವ್ಯಾಕರಣದಲ್ಲಿ (ಬಾಲಕ್ರುಶ್ಣನ್ 1999) ರ ಮತ್ತು ಱಗಳ ನಡುವಿನ ಈ ವ್ಯತ್ಯಾಸ ಬಡಗದಲ್ಲಿ ಅಳಿದು ಹೋಗಿದೆಯುಂದು ಕೊಡಲಾಗಿದೆ. ಅವರು ಸಂಶೋದಿಸಿದ ಒಳನುಡಿ ಬೇರೆಯದಿರಬಹುದು ಇಲ್ಲವೇ ಅವರು ಸಂಶೋದಿಸಿದ ಸಮಯಕ್ಕೆ ಈ ವ್ಯತ್ಯಾಸ ಬಡಗ ಕನ್ನಡದಲ್ಲಿ ಇಲ್ಲವಾಗಿರಬಹುದು.

ಇವತ್ತು ಬಳಕೆಯಲ್ಲಿರುವ ಕನ್ನಡದ ಇತರ ಒಳನುಡಿಗಳಲ್ಲೆಲ್ಲ ಹಳೆ ಗನ್ನಡದ ಱಕಾರ ರಕಾರವಾಗಿ ಬದಲಾಗಿದೆ. ಱಕಾರ ಮತ್ತು ರಕಾರಗಳ ನಡುವಿನ ವ್ಯತ್ಯಾಸ ಈ ರೀತಿ ಇಲ್ಲವಾಗಿರುವುದನ್ನು ಕೆಳಗೆ ಕೊಟ್ಟಿರುವ ಹೊಸಗನ್ನಡ ಪದಗಳಲ್ಲಿ ಕಾಣಬಹುದು.

  ಮೂಲದ್ರಾವಿಡದ ರಕಾರ  ಹಳೆಗನ್ನಡ  ಹೊಸಗನ್ನಡ 

ಮೂಲದ್ರಾವಿಡದ ಱಕಾರ ಹಳೆಗನ್ನಡ ಹೊಸಗನ್ನಡ ಕಱ ಕೆಱ ತೆಱ ಸಾಱು

ಕರೆ ‘ಹಾಲು ಕರೆ’     ಕರೆ 
ಊರು ‘ನಿಲ್ಲಿಸು’      ಊರು  ಊರು ‘ಹಳ್ಳಿ’’ 
ಎರೆ ‘ಹುಯ್ಯು’’ 
ಕೆರೆ ‘ನೀರಿನ ಕೆರೆ’’    ಕೆರೆ 
ತೆರೆ ‘ಬಾಗಿಲು ತೆರೆ’’  ತೆರೆ 
ಸಾರು ‘ಕೂಗಿ ಹೇಳು’’ಸಾರು 

ಎರೆ ‘ಎರೆಹುಳ’’ ಕೆರೆ ‘ಪರಚು’’ ತೆರೆ ‘ಕಡಲಿನ ತೆರೆ’’ ಸಾರು ‘ಸಮೀಪಿಸು’’

ಕರೆ ‘ಬರಹೇಳು’’

ಕನ್ನಡದ ಚರಿತ್ರೆಯಲ್ಲಿ ಈ ರೀತಿ ಱಕಾರ ಮತ್ತು ರಕಾರಗಳು ಒಂದಾಗಿ ಶತಮಾನದಲ್ಲಿ ರಕಾರವಾಗತೊಡಗಿದುದು ಹದಿನಾಲ್ಕು-ಹದಿನಯ್ದನೇ ಎಂಬುದನ್ನು ಆಗಿನ ಕಾಲದ ಶಾಸನಗಳ ಆದಾರದ ಮೇಲೆ ಹೇಳಬಹುದು.
ಹದಿಮೂರನೇ ಶತಮಾನದ ಶಾಸನಗಳಲ್ಲೇನೇ ಕೆಲವು ಪದಗಳಲ್ಲಿ ಱಕಾರದ ಬದಲು ರಕಾರ ಕಾಣಿಸತೊಡಗಿದೆ; ಅನಂತರದ ಶಾಸನಗಳಲ್ಲಿ ಇಂತಹ ಪದಗಳ ಎಣಿಕೆ ಹೆಚ್ಚಾಗುತ್ತಾ ಹೋಗಿ, ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಎಲ್ಲಾ ಪದಗಳಲ್ಲೂ ಱಕಾರದ ಬದಲು ರಕಾರವೇ ಕಾಣಿಸುತ್ತದೆ (ನರಸಿಂಹಯ್ಯ 1941, ಗಾಯ್ 1946).

Eke →

4.3.4 ಟಕಾರದ ಬದಲಾವಣೆಗಳು

ಸ್ವರಗಳ ನಡುವಿದ್ದ ಟಕಾರ ಕನ್ನಡದ ಹೆಚ್ಚಿನ ಪದಗಳಲ್ಲೂ ಡಕಾರವಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಾವು ಮೇಲೆ ನೋಡಿರುವೆವು. (1) ಈ ಡಕಾರ ಹಳೆಗನ್ನಡದ ಕೆಲವು ಪದಗಳಲ್ಲಿ ಅನಿಯಮಿತವಾಗಿ ೞಕಾರವಾಗಿದ್ದು, ಹೊಸಗನ್ನಡದಲ್ಲಿ ಳಕಾರವಾಗಿ ಕಾಣಿಸಿಕೊಳ್ಳುತ್ತದೆ. ನಾಡಿದ್ದು-ನಾಳಿದ್ದು, ಅಳವಡಿಕೆ-ನಡವಳಿಕೆ, ಏಡಿಸು-ಏಳಿಸು, ಪೊಡಪು-ಪೊಳಪು (ಹೊಳಪು), ತೋಳ (ತಮಿಳು: ತೋಣ್ಟನ್), ತೊಡಕು-ತುಳುಕು ಪದಜೋಡಿಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು. (2) ಡಕಾರ ೞಕಾರವಾಗುವ ಸೇರಿಕೆಯ ನಿಯಮ:
ಪದಗಳ ಕೊನೆಯ ಉಲಿಕಂತೆಯಲ್ಲಿ ಬರುವ ಡಕಾರ, ಅದರ ಅನಂತರ ಒಂದು ತಡೆಯುಲಿಯಲ್ಲಿ ಇಲ್ಲವೇ ಮೂಗುಲಿಯಲ್ಲಿ ಮೊದಲಾಗುವ ಒಟ್ಟು ಇಲ್ಲವೇ ಪದ ಬಂದಾಗ, ಅದಕ್ಕೂ ಅದರ ಅನಂತರದ ಒಟ್ಟು ಇಲ್ಲವೇ ಪದಕ್ಕೂ ನಡುವಿರುವ ಸ್ವರ ಬಿದ್ದು ಹೋಗಿ, ಡಕಾರ ೞಕಾರವಾಗಿ ಬದಲಾಗುವ ಸೇರಿಕೆಯ ನಿಯಮವೊಂದು ಹಳೆಗನ್ನಡದ ಕಾಲದಲ್ಲಿತ್ತು.

ಮೊದಲಾದ

ಈ ನಿಯಮ ನಡೆಯಬೇಕಿದ್ದಲ್ಲಿ ಡಕಾರವು ಉದ್ದ ಸ್ವರದ ಅನಂತರ

ಬರಬೇಕು ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಬರಬೇಕು.

ಡಕಾರವಿರುವ ಪದ (ಕ) ಉದ್ದ ಸ್ವರದ ಅನಂತರ ಮಾಡು
ನೋಡು ಮಾಡು
ಬೇಡು

ೞಕಾರವಿರುವ ಪದರೂಪ

ಮಾೞ್ಪನ್ ‘ಮಾಡುತ್ತೇನೆ’’ ನೋೞ್ಪೂಡೆ ‘ನೋಡುವುದಾದರೆ’’ ಮಾೞ್ಗುಂ ‘ಮಾಡಬಹುದು’’ ಕಾೞಿ್ಕಚ್ರು ‘ಕಾಡಿನ ಬೆಂಕಿ’’ ಬೇೞ್ಕುಂ ‘ಬೇಕು’’

(ಚ) ಎರಡು ಗಿಡ್ಡ ಸ್ವರಗಳ ಅನಂತರ

ಬಿಸುಡು

ಬಿಸುೞ್ಪೂಡೆ ‘ಬಿಸಾಡುವುದಾದರೆ’’ ಎರೞ್ಕುದುರೆ

Eke →

4.3.5 ಕಕಾರ ಬಿದ್ದುಹೋಗಿರುವುದು

ಎರಡು ಸ್ವರಗಳ ನಡುವೆ ಬಂದಿದ್ದ ಕಕಾರ (ಗಕಾರ) ಕೆಲವು ಪದಗಳಲ್ಲಿ ಬಿದ್ದುಹೋಗಿ, ಅದರ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಂದಾಗಿ ಉದ್ದಸ್ವರ ಕಾಣಿಸುತ್ತದೆ.

ಉದ್ದಸ್ವರ ಗಿಡ್ಡಸ್ವರ
ತೋಲು ತೊಗಲು ತೋಟೆ ತೊಗಟೆ
ಈರು ‘ಒಸಡು’’ ಮೋರೆ ಮೊಗ
ಸಿಗುಳು ‘ಸೀಳು’
ಸೀಳು ತಿಗಡು ‘ತಿಕ್ಕು’’
ನಿಗುಳ್ ’ನೆಟ್ಟಗೆ ನಿಲ್ಲು’’ ನೀಳ್

ಆದರೆ ಉಳಿದೆಡೆಗಳಲ್ಲಿ ಎರಡು ಸ್ವರಗಳ ನಡುವಿನ ಕಕಾರ ಗಕಾರ ವಾಗಿಯೇ ಉಳಿದಿದೆ. ಇದಕ್ಕೆ ಹೊಗೆ, ಉಗುರು, ತೊಗಲು, ಹಗಲು, ಹೊಗಳು, ಮಗು, ಸಿಗು, ಮಿಗು, ಬಗೆ ಮೊದಲಾದ ಪದಗಳನ್ನು ಉದಾ ಹರಣೆಯಾಗಿ ಕೊಡಬಹುದು.

ಕನ್ನಡದ ಹಲವು ಪದಗಳಲ್ಲಿ ಎರಡು ಸ್ವರಗಳ ನಡುವೆ ಒತ್ತೆ ಕಕಾರ ಕಾಣಿಸುತ್ತಿದ್ದು, ಇದು ಮೂಲದ್ರಾವಿಡದ ಇಮ್ಮಡಿ ಕಕಾರದಿಂದ ಬಂದಿದೆ ಯುಂಬುದನ್ನು ಮುಂದೆ (4.4.1ರಲ್ಲಿ) ನೋಡಲಿರುವೆವು.

ಸ್ವರಗಳ

ನಡುವೆ ಬಂದಿದ್ದ ಇಮ್ಮಡಿ

Eke →

4.4 ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು

ತಡೆಯುಲಿಗಳು ಮೂಲದ್ರಾವಿಡದಲ್ಲೇನೇ ಕೆಲವು ಬದಲಾವಣೆಗಳನ್ನು ತೋರಿಸುತ್ತಿದ್ದುವು; ಇವುಗಳಲ್ಲಿ ಕೆಲವನ್ನು ಕನ್ನಡದ ಪದಗಳಿಗಿರುವ ಪದರೂಪಗಳಲ್ಲೂ ಕಾಣಬಹುದು.

ಇದಲ್ಲದೆ, ಕನ್ನಡದ ಚರಿತ್ರೆಯಲ್ಲೂ ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಈ ಬದಲಾವಣೆಗಳಲ್ಲಿ ಕೆಲವು ಮೇಲಿನ ಬದಲಾವಣೆಗಳನ್ನು ಹೋಲುತ್ತವೆ. ಆದರೆ ಬೇರೆ ಕೆಲವು ಕನ್ನಡದವೇ ಆದ ಬದಲಾವಣೆಗಳು.

Eke →

4.4.1 ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿರುವುದು

ಮೂಲದ್ರಾವಿಡದಲ್ಲೇನೇ ಇಮ್ಮಡಿ ತಡೆಯುಲಿಗಳು ಕೆಲವು ಸಂದರ್ಬಗಳಲ್ಲಿ ಒತ್ತೆ ತಡೆಯುಲಿಗಳಾಗಿ ಬದಲಾಗಿವೆಯುಂದು ಕಲ್ಪಿಸಲಾಗಿದೆ. ಈ ಬದಲಾ ವಣೆ ಹಿಂದೆ ಎರಡನೇ ಅದ್ಯಾಯದಲ್ಲಿ (2.3.1ರಲ್ಲಿ) ವಿವರಿಸಿದಂತಹ ಉದ್ದಸ್ವರ ಗಿಡ್ಡಸ್ವರವಾಗುವ ಬದಲಾವಣೆಯನ್ನೇ ಹೋಲುತ್ತದೆ.

ಇಮ್ಮಡಿ ತಡೆಯುಲಿಗಳ ಅನಂತರ ಉಚ್ಚಾರಣೆಗಾಗಿ ಸೇರಿಸಿರುವ ಉಕಾರ ಬಂದಿದೆಯಾದರೆ ಆ ತಡೆಯುಲಿಗಳು ಬದಲಾಗದೆ ಉಳಿಯುತ್ತವೆ (ಕುಟ್ಟು, ಮುಚ್ಚು, ಕಪ್ಪು); ಆದರೆ ಇದಕ್ಕೆ ಬದಲು ಅವುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಿದೆಯಾದರೆ, ಅವು ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ (ಕುಟುಕು, ಮುಚುಕು, ಕವಿ). ಉಚ್ಚಾರಣೆಗಾಗಿ ಬಂದ ಉಕಾರ ಇಂತಹ ಸ್ವರದಲ್ಲಿ ಮೊದಲಾಗುವ ಒಟ್ಟು ಸೇರಿದಾಗ ಬಿದ್ದುಹೋಗುತ್ತದೆ.

ಕನ್ನಡದಲ್ಲಿ ಈ ವ್ಯಂಜನಗಳು ಬೇರೆ ಕೆಲವು ಬದಲಾವಣೆಗಳಿಗೆ (ಒತ್ತೆ ಚಕಾರ ಸಕಾರವಾಗುವುದು, ಒತ್ತೆ ಪಕಾರ ವಕಾರವಾಗುವುದು ಮತ್ತು ಒತ್ತೆ ಱಕಾರ ಅದಿರುಲಿಯಾಗುವುದು) ಒಳಗಾಗಿವೆ.

ಇಮ್ಮಡಿ ತಡೆಯುಲಿಗಳು ಅವುಗಳ ಅನಂತರ ವ್ಯಂಜನದಲ್ಲಿ ಮೊದ ಲಾಗುವ ಒಟ್ಟು ಬಂದಾಗಲೂ ಬದಲಾಗದೆ ಉಳಿಯುತ್ತವೆ; ಆದರೆ ಅಂತಹ ಸಂದರ್ಬಗಳಲ್ಲಿ ಅವುಗಳೊಂದಿಗೆ ಉಚ್ಚಾರಣೆಗಾಗಿ ಬಂದ ಉಕಾರ ಬಿದ್ದು ಹೋಗದೆ ಉಳಿದಿರುತ್ತದೆ, ಇಲ್ಲವೇ ಬೇರೆ ರೀತಿಯಲ್ಲಿ ಬದಲಾಗಿರುತ್ತದೆ (ಮುಚ್ಚುಗೆ, ಕಟ್ಟಡ, ಬಿತ್ತಿಗೆ).

ಮೂಲದ್ರಾವಿಡದಲ್ಲೇನೇ ಕಾಣಿಸಿಕೊಂಡಿದ್ದ ಈ ಬದಲಾವಣೆ ಕ್ರಿಯಾ ಪದಗಳಲ್ಲಿ, ಗುಣಪದಗಳಲ್ಲಿ ಮತ್ತು ಮೂರು ಉಲಿಕಂತೆಗಳಿರುವ ನಡೆದಿದೆ; ಆದರೆ ಎರಡು ನಾಮಪದಗಳಲ್ಲಿ ಉಲಿಕಂತೆಗಳಿರುವ ನಡೆದಿದೆ (ಸುಬ್ರಹ್ಮಣ್ಯಂ 1983).

ನಿಯಮಿತವಾಗಿ ನಾಮಪದಗಳಲ್ಲಿ ಅನಿಯಮಿತವಾಗಿ

ಕ್ರಿಯಾಪದಗಳಲ್ಲಿ ಈ ಬದಲಾವಣೆ ನಿಯಮಿತವಾಗಿ ನಡೆದಿದೆಯುಂಬು ದನ್ನು ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಉದಾಹರಣೆಗಳಿಂದ ಮತ್ತು ತಮಿಳು ಮತ್ತು ಕನ್ನಡ ನುಡಿಗಳಲ್ಲಿ ಬರುವ ಪದಗಳ ನಡುವಿನ ವ್ಯತ್ಯಾಸದಿಂದ ತಿಳಿಯಬಹುದು.

ಇಮ್ಮಡಿ ತಡೆಯುಲಿ ನುಗ್ಗು ‘ಹಿಸುಕು’’ ಕೆತ್ತು
ಕಟ್ಟು ‘ಗಂಟುಕಟ್ಟು’’ ಎಟ್ಟು ‘ಮುಟ್ಟು’’ ಮುಚ್ಚು ’

ಒತ್ತೆ ತಡೆಯುಲಿ ಕೆದಕು ‘ಅಗೆ’’ ಕಡಗು ‘ಗಟ್ಟಿಯಾಗು’’ ಎಟಕು ‘ಕಯ್ಗು ಮುಟ್ಟು’’ ಮುಸುಱ್

ಕನ್ನಡ

ತಮಿಳು
ಅತ್ತು ‘ಜೋಡಿಸು’’ ಅದುಕು ‘ಜೋಡಿಸು’’ ಎಱ್ಱು ‘ಚೆಲ್ಲು’’
ಕೊಟ್ಟು ‘ಕೊಂಡಿ’’

ಕುಟುಕು ‘ಚುಚ್ಚು’’

ಒತ್ತಕ್ಶರವಿರುವ ಕ್ರಿಯಾಪದಗಳು ಉಕಾರದಲ್ಲಿ ಮಾತ್ರ ಕೊನೆಗೊಳ್ಳ ಬಲ್ಲುವು ಮತ್ತು ಅವುಗಳಲ್ಲಿ ಎರಡು ಉಲಿಕಂತೆಗಳು ಮಾತ್ರ ಇರಬಲ್ಲುವು ಎಂಬ ನಿಯಮವೊಂದು ಕನ್ನಡದಲ್ಲಿದೆ (7.9 ನೋಡಿ). ಈ ನಿಯಮಕ್ಕೆ ಮೇಲಿನ ಬದಲಾವಣೆ ಕ್ರಿಯಾಪದಗಳಲ್ಲಿ ಬಹಳ ನಿಯಮಿತವಾಗಿ ನಡೆದಿರು ವುದೇ ಕಾರಣ.

ನಾಮಪದಗಳಲ್ಲೂ ಈ ಬದಲಾವಣೆ ನಡೆದಿದೆ; ಆದರೆ ಮೂರು ಉಲಿ ಕಂತೆಗಳಿರುವ ಪದಗಳಲ್ಲಿ ಕಾಣಿಸುವಶ್ಟು ನಿಯಮಿತವಾಗಿ ಇದು ಎರಡು ಉಲಿಕಂತೆಗಳಿರುವ ಪದಗಳಲ್ಲಿ ಕಾಣಿಸುವುದಿಲ್ಲ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಈ ಬದಲಾವಣೆ ನಡೆದಿರುವುದನ್ನು ಕಾಣಬಹುದು.

(ಕ) ಮೂರು ಉಲಿಕಂತೆಗಳಿರುವ ಪದಗಳಲ್ಲಿ

ಒತ್ತೆ ತಡೆಯುಲಿ ಇಮ್ಮಡಿ ತಡೆಯುಲಿ
ಪಿಸುರು ‘ಪಿಚ್ಚು’’ ಪಿಚ್ಚು ‘ಕಣ್ಣಿನ ಕೊಳೆ’’ ಮುಸುಕು ಮುಚ್ಚು
ತಡಿಕೆ ‘ತಟ್ಟಿ’’ ತಟ್ಟಿ ‘ಬಿದಿರ ಚಾಪೆ’’ ತೊಟ್ಟು ‘ಹನಿ’’ ತಟಕು ‘ಹನಿ’ ಚಟಿಗೆ ‘ಚಿಕ್ಕ ಮಣ್ಣಿನ ಪಾತ್ರೆ’’ ಚಟ್ಟಿ ‘ಮಣ್ಣಿನ ಪಾತ್ರೆ’’ ಗುಡಸು ‘ಉರುಟಾದುದು’’ ಗುಡ್ಡು ‘ಕಣ್ಣುಗುಡ್ಡೆ’’ ಗುದಿಗೆ ‘ದೊಣ್ಣೆ’’ ಗುದ್ದು
ಕುತ್ತ (<*ಕುಱ್ಱ) ‘ಕೊರತೆ’’ ಕೊಱತೆ ‘ಕೊರತೆ’’ ಸತ್ತೆ ‘ಕೊಳೆ’’ ಬೆಚ್ಚಗೆ
ಪಚ್ಚೆ

ಸೆದಗೆ ‘ಕಸಕಡ್ಡಿ, ಕೊಳೆ’’ ಬಿಸಿಲು ಹಸುರು

(ಚ) ಎರಡು ಉಲಿಕಂತೆಗಳಿರುವ ಪದಗಳಲ್ಲಿ

ಇಮ್ಮಡಿ ತಡೆಯುಲಿ
ಬಿತ್ತು ‘ಬೀಜ’’ ಕಿಟ್ಟು ‘ಮುಟ್ಟು’’
ಬತ್ತು (<*ವಱ್ಱು)

ಒತ್ತೆ ತಡೆಯುಲಿ ಬೆದೆ ‘ಬಿತ್ತುವಿಕೆ’’ ಕಿಡು, ಗೆಡೆ ‘ಮುಟ್ಟುವಿಕೆ’’ ಬಱ(ಗಾಲ)

ಸತ್ತೆ ‘ಕೊಳೆ’’ ಮತ್ತು (<*ಮಱ್ಱು)

ಸದೆ ‘ಕಸಕಡ್ಡಿ, ಕೊಳೆ’’ ಮಱು(ಮದುವೆ)

ಮೂಲದ್ರಾವಿಡದಲ್ಲೇನೇ ನಡೆದಿದ್ದ ಈ ಬದಲಾವಣೆ ಇಮ್ಮಡಿ ತಡೆಯುಲಿಗಳನ್ನು ಮಾತ್ರವಲ್ಲದೆ ಇತರ ಇಮ್ಮಡಿ ವ್ಯಂಜನಗಳನ್ನೂ ಒತ್ತೆ ವ್ಯಂಜನಗಳಾಗಿ ಬದಲಾಯಿಸಿದೆ (5.2.3 ನೋಡಿ). ಕೆಳಗೆ ಕೊಟ್ಟಿರುವ ಪದಗಳು ಇದಕ್ಕೆ ಉದಾಹರಣೆಗಳಾಗಬಲ್ಲುವು.

ಒತ್ತೆ ವ್ಯಂಜನ

ಇಮ್ಮಡಿ ವ್ಯಂಜನ
ಚಿಮ್ಮು ‘ಹೊರಚೆಲ್ಲು’’ ಚಿಮುಕು, ಚಿಮುಕಿಸು ಎಣ್ಣು ‘ಎಣಿಸು’’ ಕೊಳ್ಳು ‘ಹಿಡಿ’’

ಕೊಳಿಕೆ

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡದ ಈ ಬದಲಾವಣೆ ಹಿಂದೆ ಎರಡನೇ ಅದ್ಯಾಯದಲ್ಲಿ (2.3.1ರಲ್ಲಿ) ವಿವರಿಸಿದ ಉದ್ದಸ್ವರ ಗಿಡ್ಡಸ್ವರ ವಾಗುವ ಬದಲಾವಣೆಯನ್ನು ಹೋಲುತ್ತದೆ. ಈ ಎರಡು ಬದಲಾವಣೆ ತೂಕದ ಗಳಲ್ಲೂ ಉಲಿಕಂತೆಗಳು ಹಗುರದ ಉಲಿಕಂತೆಗಳಾಗಿ ಬದಲಾಗುತ್ತವೆ ಎಂಬುದಾಗಿ ಇವೆರಡು ಬದಲಾವಣೆಗಳನ್ನೂ ಒಟ್ಟಾಗಿ ವಿವರಿಸಲು ಸಾದ್ಯವಿದೆ.

ಸ್ವರದಲ್ಲಿ ಮೊದಲಾಗುವ ಒಟ್ಟು

ಸೇರಿದಾಗ

ಕನ್ನಡದ ಚರಿತ್ರೆಯಲ್ಲಿ ಎರಡು ಸ್ವರಗಳ ನಡುವಿದ್ದ ಇಮ್ಮಡಿ ತಡೆಯುಲಿಗಳು ಬೇರೆಯೂ ಕೆಲವು ಬದಲಾವಣೆಗಳಿಗೊಳಗಾಗಿದ್ದು ಅವನ್ನು ಕೆಳಗೆ ವಿವರಿಸಲಾಗಿದೆ.

Eke →

4.4.2 ಕೊರಳಿಸದ ಮತ್ತು ಕೊರಳಿಸಿದ ಇಮ್ಮಡಿ ತಡೆಯುಲಿಗಳಾಗಿ

ಎರಡು ಸ್ವರಗಳ ನಡುವೆ ಇಮ್ಮಡಿ ರೂಪದಲ್ಲಿ ಬಂದಿದ್ದ ತಡೆಯುಲಿಗಳು ಮೂಲದ್ರಾವಿಡದಲ್ಲಿ ಕೊರಳಿಸದ ರೂಪದಲ್ಲಿದ್ದುವು. ಕನ್ನಡದಲ್ಲಿ ಇವು

ಕೆಲವು ಸಂದರ್ಬಗಳಲ್ಲಿ ಆ ರೂಪದಲ್ಲೇ ಉಳಿದಿವೆ; ಆದರೆ ಬೇರೆ ಕೆಲವು ಸಂದರ್ಬಗಳಲ್ಲಿ ಕೊರಳಿಸಿದ ತಡೆಯುಲಿಗಳಾಗಿ ಬದಲಾಗಿವೆ.

ಈ ಬದಲಾವಣೆ ತಮಿಳಿನಲ್ಲಿ ನಡೆದಿಲ್ಲವಾದ ಕಾರಣ, ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸುವುದರ ಮೂಲಕ ಇದಕ್ಕೆ ಉದಾಹರಣೆಗಳನ್ನು ಕೊಡಬಹುದು.

(ಕ) ಕೊರಳಿಸದ ರೂಪದಲ್ಲಿ ಉಳಿದಿರುವುದು ತಮಿಳು ವಿಕ್ಕು ಮುಚ್ಚು ಕುತ್ತು ಕುಪ್ಪಯ್

ಕನ್ನಡ
ಬಿಕ್ಕು
ಮುಚ್ಚು
ಕುತ್ತು
ಕುಪ್ಪೆ

(ಚ) ಕೊರಳಿಸಿದ ರೂಪಕ್ಕೆ ಬದಲಾಗಿರುವುದು ಕನ್ನಡ
ತಮಿಳು ಉಗ್ಗ ‘ಹಗ್ಗದ ಹಿಡಿ’’ ಉಕ್ಕಂ ಅಚ್ಚನ್ ಪೊಚ್ಚಯ್ ಬೊಜ್ಜು
ಕುತ್ತಲ್ ಗುದ್ದು
ತಿಪ್ಪಯ್ ಕೊಪ್ಪರಿ ಕೊಬ್ಬರಿ

ಕನ್ನಡದಲ್ಲೇನೇ ಕೆಲವು ಪದಗಳಿಗೆ ಕೊರಳಿಸದ ಮತ್ತು ಕೊರಳಿಸಿದ ಇಮ್ಮಡಿ ತಡೆಯುಲಿಗಳಿರುವ ಎರಡೆರಡು ರೂಪಗಳಿರುವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಕೊರಳಿಸದ ರೂಪ

ಕೊರಳಿಸಿದ ರೂಪ

ಚಕ್ಕನೆ
ಗುಚ್ಚು ‘ಕಿರಿದು’
ತೊಟ್ಟಿ ‘ಬಾನಿ’’
ಕುತ್ತು
ಮುತ್ತು
ಹೊಪ್ಪುಳ

ಜಗ್ಗನೆ ಗುಜ್ಜು ಗುದ್ದು ಮುದ್ದು ಬೊಬ್ಬೆ

ಕನ್ನಡದಲ್ಲಿ ಈ ಬದಲಾವಣೆ ನಡೆದಿರುವುದು ಅನಿಯಮಿತವಾಗಿ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಎಲ್ಲಿ ಇಮ್ಮಡಿ ತಡೆಯುಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗಿದೆ ಮತ್ತು ಎಲ್ಲಿ ಬದಲಾಗಿಲ್ಲ ಎಂಬುದಕ್ಕೆ ಒಂದು ನಿಯಮವನ್ನು ರಚಿಸಲು ಇನ್ನೂ ಸಾದ್ಯವಾಗಿಲ್ಲ.

Eke →

4.4.3 ಉದ್ದ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು

ಉದ್ದಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಒತ್ತೆ ತಡೆಯುಲಿಗಳಾಗಿ ಬದಲಾಗಿವೆ ಮತ್ತು ಇಮ್ಮಡಿ ಱಕಾರ ಒತ್ತೆ ತಕಾರವಾಗಿದೆ. ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಶಯ ಸ್ಪಶ್ಟವಾಗುತ್ತದೆ.

(ಕ) ಒತ್ತೆ ತಡೆಯುಲಿಯಾಗಿ ಬದಲಾಗಿರುವುದು

ತಮಿಳು ಕನ್ನಡ
ತೂಕ್ಕಮ್ ಪೋಕ ‘ಅಲೆಯುವಾತ’’ ಪೋಕ್ಕನ್ ಪೂಚಿ ‘ಹುಳ’’
ನೋಟ

ಪೂಚ್ಚಿ ನೋಟ್ಟಮ್

ಪೋಟಿ
ಮೋತೆ
ತೋಪು

ಪೋಟ್ಟಿ ಮೋತ್ತಯ್ ಚಾಪ್ಪಯ್ ತೋಪ್ಪು

(ಚ) ಇಮ್ಮಡಿ ಱಕಾರ ಒತ್ತೆ ತಕಾರವಾಗಿರುವುದು

ಕನ್ನಡ
ಕೀತು ‘ತುಣುಕು’’ ಮಾತು

ತಮಿಳು ಏಱ್ಱಮ್ ಕೀಱ್ಱು ಮಾಱ್ಱು (ಮಲಯಾಳ) ಪಾಱ್ಱ (ಮಲಯಾಳ)

ಈ ತಡೆಯುಲಿಗಳ ಅನಂತರ ಬಂದಿದ್ದ ಸ್ವರ ಉಚ್ಚಾರಣೆಗಾಗಿ ಮಾತ್ರ ಬಂದುದಾಗಿರುವಲ್ಲಿ ಆ ಕೊರಳಿಸಿದವುಗಳಾಗಿಯೂ ತಡೆಯುಲಿಗಳು ಬದಲಾಗಿವೆ. ಆದರೆ, ಇಂತಹ ಸನ್ನಿವೇಶದಲ್ಲಿ ಱ್ಱ ಎಂಬುದು ಒತ್ತೆ ದಕಾರವಾಗುವ ಬದಲು ಒತ್ತೆ ಱಕಾರವಾಗಿಯೇ ಉಳಿದಿದೆ.

(ಕ) ಕೊರಳಿಸಿದ (ಒತ್ತೆ) ತಡೆಯುಲಿಯಾಗಿ ಬದಲಾಗಿರುವುದು

ಕನ್ನಡ
ತೂಗು
ನೀಗು
ಮೂಗು
ಕೂಡು ‘ಒಂದಾಗು’’ ನೀಡು

ತಮಿಳು ತಾಕ್ಕು ತೂಕ್ಕು ನೀಕ್ಕು ಮೂಕ್ಕು ಕೂಟ್ಟು ನೀಟ್ಟು

ಪೂಡು ‘ಜೋಡಿಸು’’ ಪೂಟ್ಟು

(ಚ) ಱ್ಱ ಎಂಬುದು ಒತ್ತೆ ಱಕಾರವಾಗಿರುವುದು

ಕನ್ನಡ
ತೋಱು
ಸಾಱು
ಮಾಱು
ಆಱು ‘ಶಕ್ತಿ’’
ತೂಱು ‘ಸುರಿ’’

ತಮಿಳು ತೋಱ್ಱು ಚಾಱ್ಱು ಮಾಱ್ಱು ಆಱ್ಱು ‘ಶಕ್ತನಾಗು’’ ತೂಱ್ಱಿ ‘ಚದರಿಸು’’ ಕೀಱ್ಱು

ಮೇಲಿನ ನಿಯಮಕ್ಕೆ ಅಪವಾದವಾಗಿ ಕಾಣಿಸುವ ಕೆಲವು ಪದಗಳು ಕನ್ನಡದಲ್ಲಿವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು.

ಕನ್ನಡ
ನಾದಿನಿ

ತಮಿಳು ಕಾಕ್ಕಯ್ ತೇಕ್ಕು ನಾತ್ತನಾರ್

ಮೇಲಿನ ಕನ್ನಡ ಪದಗಳಲ್ಲಿ ಉದ್ದ ಸ್ವರದ ಅನಂತರ ಬಂದ ಇಮ್ಮಡಿ ತಡೆಯುಲಿ ಅದರ ಅನಂತರ ಬಂದ ಸ್ವರ ಒಟ್ಟಿನದಾಗಿದೆಯಾದರೂ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಬದಲಾಗಿದೆ. ಆದರೆ ಕಾಗೆ ಪದ ಕಾಕೆ ರೂಪದಲ್ಲೂ ಇದೆ. ಹವ್ಯಕದಲ್ಲೂ ಅದು ಕಾಕೆ ರೂಪದಲ್ಲಿದೆ.

Eke →

4.4.4 ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು

(1) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಇಮ್ಮಡಿ ರೂಪದಲ್ಲೇ ಉಳಿಯುತ್ತವೆ. ಇಮ್ಮಡಿ ಱಕಾರ ಮಾತ್ರ ಇಮ್ಮಡಿ ತಕಾರವಾಗಿ ಬದಲಾಗುತ್ತದೆ.

(ಕ) ಇಮ್ಮಡಿ ತಡೆಯುಲಿಗಳು ಬದಲಾಗದಿರುವುದು

ಕನ್ನಡ
ಸಿಕ್ಕು
ಕಚ್ಚು
ಕೆತ್ತು
ತಪ್ಪು
ಮಜ್ಜಿಗೆ
ಕೊಟ್ಟಿಗೆ
ಸಟ್ಟುಗ
ಸುತ್ತಿಗೆ
ಚಪ್ಪಟೆ
ಹಪ್ಪಳ

ತಮಿಳು ಕಚ್ಚು ಚೆತ್ತು ತಪ್ಪು ಉಕ್ಕಳಮ್ ಮಚ್ಚಿಕಯ್ ಕೊಟ್ಟಿಕಯ್ ಚಟ್ಟುಕಮ್ ಚುತ್ತಿಕ (ಮಲಯಾಳ) ಚಪ್ಪಟ್ಟಯ್ ಪಪ್ಪಟಮ್, ಅಪ್ಪಳಮ್

(ಚ) ಇಮ್ಮಡಿ ಱಕಾರ ಇಮ್ಮಡಿ ತಕಾರವಾಗಿರುವುದು

ಕನ್ನಡ
ಹುತ್ತ
ಸುತ್ತು
ತುತ್ತು
ಮತ್ತು
ಮುತ್ತಿಗೆ

ತಮಿಳು ಪುಱ್ಱೆ ಚುಱ್ಱು ತುಱ್ಱು ಮಱ್ಱು ಕೊಱ್ಱಿ ಮುಱ್ಱಿಕಯ್

(2) ಆದರೆ, ಎರಡನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ ಮತ್ತು ಇಮ್ಮಡಿ ಚಕಾರ ಸಕಾರವಾಗುತ್ತದೆ.

(ಕ) ಇಮ್ಮಡಿ ತಡೆಯುಲಿ ಒತ್ತೆ ತಡೆಯುಲಿಯಾಗಿರುವುದು

ಕನ್ನಡ
ನಂಬಿಕೆ
ಕಮ್ಮಟ
ಸುರುಟು ನಡತೆ
ಹೊರತು ಅೞಿಪು ‘ನಾಶ’’ ಎರಪು ‘ಎರವಲು’’ ಸರಪಳಿ

ತಮಿಳು ನಮ್ಪಿಕ್ಕಯ್ ಅಟಿಕ್ಕಾಯ್ ಕಂಪಟ್ಟಮ್ ಚಿರಟ್ಟಯ್ ಚುರುಟ್ಟು ಚಿಱುತ್ತಯ್ ನಟತ್ತಯ್ ಪುಱತ್ತಿ ಅೞಿಪ್ಪು
ಇಱಪ್ಪು ಚರಪ್ಪಳಿ

(ಚ) ಇಮ್ಮಡಿ ಚಕಾರ ಸಕಾರವಾಗಿರುವುದು

ಗೊರಸು ಕಡಸು ‘ಎಳೆಯ ದನ’’ ಕಟಚ್ಚಿ (ಮಲಯಾಳ)

ಕುರಚ್ಚಯ್

ಒತ್ತೆ ಪಕಾರವಾದ ಇಮ್ಮಡಿ ಪಕಾರ ಅನಂತರ ಕನ್ನಡದ ಚರಿತ್ರೆಯಲ್ಲಿ ಅನಿಯಮಿತವಾಗಿ ವಕಾರ ಇಲ್ಲವೇ ಹಕಾರವಾಗಿ ಬದಲಾಗುತ್ತದೆ ಎಂಬು ದನ್ನು ನಾವು ಮೇಲೆ (4.3.1)ರಲ್ಲಿ ನೋಡಿರುವೆವು.

ಈ ಸನ್ನಿವೇಶದಲ್ಲಿ ಇಮ್ಮಡಿ ಱಕಾರ ಒತ್ತೆ ಱಕಾರವಾಗಲು ಸಾದ್ಯವಿದೆ; ಆದರೆ ಇದಕ್ಕೆ ಕನ್ನಡದಲ್ಲಿ ಉದಾಹರಣೆಗಳು ದೊರೆತಿಲ್ಲ. ಪದರೂಪದಲ್ಲಿ ಇಂತಹ ಬದಲಾವಣೆ ನಡೆದಿರುವುದಕ್ಕೆ ಉದಾಹರಣೆಗಳನ್ನು ಕೆಳಗೆ (3)ನೇ ವಿಬಾಗದಲ್ಲಿ ಕೊಡಲಾಗಿದೆ.

ಉದ್ದ ಸ್ವರದ ಅನಂತರ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿ ಹಳೆಗನ್ನಡದ

ಬದಲಾವಣೆ

ನೋಡಿ)

ಗಳಾಗುವ

ಸಮಯಕ್ಕಿಂತಲೂ ಮೊದಲೇ ನಡೆದಿರಬೇಕು. ಆದರೆ ಎರಡನೆಯ ಗಿಡ್ಡ ತಡೆಯುಲಿಗಳು ಒತ್ತೆ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳಾಗುವ ಹಳೆಗನ್ನಡದ ಸಮಯದಲ್ಲೇನೇ ನಡೆದಿರುವ ಹಾಗೆ ಕಾಣಿಸುತ್ತದೆ.

ಬದಲಾವಣೆ

ಮೇಲಿನ

ಯಾಕೆಂದರೆ ಎರಡು ಸ್ವರಗಳ ಅನಂತರ ಇಮ್ಮಡಿ ತಡೆಯುಲಿಯನ್ನು ಉಳಿಸಿಕೊಂಡಿರುವ ನೇರಿತ್ತು, ಬಲ್ಲಿತ್ತು, ಪದಪ್ಪು ‘ಹೆಬ್ಬಯಕೆ’ ಮೊದ ಲಾದ ಪದಗಳು ಹಳೆಗನ್ನಡದಲ್ಲಿವೆ. ಆದರೆ ಈ ಉಳಿಕೆಯ ಹರಹು ಎಂತಹದೆಂಬುದು ಇನ್ನೂ ಸ್ಪಶ್ಟವಾಗಿಲ್ಲ.

ಗುಣಪದಗಳಲ್ಲಿ ಇಂತಹ ತ್ತು ಒಟ್ಟಿರುವ ರೂಪ ಮೊದಲನೆಯ ಉಲಿ ಕಂತೆ ಮುಚ್ಚಿದ ಉಲಿಕಂತೆಯಾಗಿದ್ದಾಗ (ಎಂದರೆ, ವ್ಯಂಜನದಲ್ಲಿ ಕೊನೆ ಗೊಂಡಿದ್ದಾಗ) ಇಲ್ಲವೇ ಅದರಲ್ಲಿ ಉದ್ದ ಸ್ವರ ಬಂದಿದ್ದಾಗ ಮಾತ್ರ ಕಾಣಿಸುತ್ತದೆ (11.6 ನೋಡಿ).

(3) ಎರಡು ಸ್ವರಗಳ ಅನಂತರ ಬಂದ ಇಮ್ಮಡಿ ತಡೆಯುಲಿ ಪದರಚನೆಯ ಒಟ್ಟಾಗಿರದೆ ಪದರೂಪದ ಒಟ್ಟಾಗಿದ್ದಲ್ಲಿ ಅದು ಕನ್ನಡದಲ್ಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗುತ್ತದೆ (ಸುಬ್ರಹ್ಮಣ್ಯಂ 2004).

ಕನ್ನಡ
ಕೊಳದ
ಮರದ
ಹಗೆಗೆ

ತಮಿಳು ಕೊಳತ್ತ ಮರತ್ತ ಎನಕ್ಕು ಪಕಯ್ಕ್ಕು ತನ್ಕಯ್ಕ್ಕು ತೇಯ್ತ್ತ

ಈ ಸನ್ನಿವೇಶದಲ್ಲಿ ಇಮ್ಮಡಿ ಪಕಾರ ಒತ್ತೆ ಬಕಾರವಾಗುವ ಬದಲು ವಕಾರವಾಗಿದೆ ಮತ್ತು ಇಮ್ಮಡಿ ಱಕಾರ ಒತ್ತೆ ದಕಾರವಾಗುವ ಬದಲು ಒತ್ತೆ ಱಕಾರವಾಗಿದೆ.

ಕನ್ನಡ
ಕುಡಿವ

ತಮಿಳು ಕಾಪ್ಪ ಕುಟಿಪ್ಪ ಪಿಟಿಪ್ಪ ಅವಱ್ಱ

ಮೇಲಿನ ನಿಯಮಕ್ಕೆ ಮರಕ್ಕೆ, ಕೊಳಕ್ಕೆ ಮೊದಲಾದ ಅಕಾರದಲ್ಲಿ (ಅನ್ ಎಂಬುದರಲ್ಲಿ) ಕೊನೆಗೊಳ್ಳುವ (ಮತ್ತು ಮನುಶ್ಯೇತರರನ್ನು ಸೂಚಿಸುವ) ಪದಗಳ ವಿಬಕ್ತಿ ರೂಪಗಳು ಅಪವಾದಗಳಾಗಿ ಕಾಣಿಸುತ್ತವೆ (ಸುಬ್ರಹ್ಮಣ್ಯಂ 2004:134). ಯಾಕೆಂದರೆ ಇಲ್ಲಿ ಇಮ್ಮಡಿ ತಡೆಯುಲಿ ಬದಲಾಗದೆ ಉಳಿದಿದೆ.

Eke →

4.4.5 ಹವ್ಯಕದಲ್ಲಿ ಗಿಡ್ಡಸ್ವರಗಳ ಅನಂತರ ಬದಲಾವಣೆಯಿಲ್ಲ

ಎರಡು ಗಿಡ್ಡ ಸ್ವರಗಳ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿ ಕರಾವಳಿಯ ಹವ್ಯಕ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಇಮ್ಮಡಿ ಟಕಾರ ಮಾತ್ರ ಇದಕ್ಕೆ ಅಪವಾದವಾಗಿದ್ದು, ಅದು ಒತ್ತೆ ಟಕಾರವಾಗಿ ಬದಲಾಗಿದೆ.

(ಕ) ಬರಹದ ಕನ್ನಡ ಹವ್ಯಕ ಕನ್ನಡ

ಕಳಚು
ನಡತೆ
ಹುರುಪು

ಕುಡಿಕ್ಕೆ
ಕಳಚ್ಚು
ಅಳತ್ತೆ
ನಡತ್ತೆ
ಹುರುಪ್ಪು

ತಮಿಳು ಕುಟುಕ್ಕಯ್ ಅಟಯ್ಕ್ಕಾಯ್ ಅಳತ್ತಯ್ ನಟತ್ತಯ್

ಹೊಳಪು

ಹೊಳಪ್ಪು

(ಚ) ಇಮ್ಮಡಿ ಟಕಾರ ಒತ್ತೆ ಟಕಾರವಾಗಿರುವುದು ಬರಹದ ಕನ್ನಡ ಹವ್ಯಕ ಕನ್ನಡ ಬೆರಣಿ
ಸುರುಟು

ಸುರುಟು

ತಮಿಳು ಚಿರಟ್ಟಯ್ ವಱಟ್ಟಿ ಚುರುಟ್ಟು

ಉದ್ದಸ್ವರದ ಅನಂತರ ಬಂದ ಇಮ್ಮಡಿ ತಡೆಯುಲಿಗಳು ಹವ್ಯಕದಲ್ಲೂ ಒತ್ತೆ ತಡೆಯುಲಿಗಳಾಗಿ ಬದಲಾಗಿವೆಯುಂಬುದನ್ನು ಹವ್ಯಕ ಕನ್ನಡದ ತೂಕ (ತಮಿಳು: ತೂಕ್ಕಂ) ಆಟ, ಹಾತೆ, ಮೇಪು ಮೊದಲಾದ ಪದಗಳಿಂದ ತಿಳಿಯಬಹುದು.

ಇದಲ್ಲದೆ, ಎರಡು

ಸ್ವರಗಳ ಅನಂತರ ಬಂದ ಇಮ್ಮಡಿ ತಡೆಯುಲಿಗಳು ಪದರಚನೆಯ ಒಟ್ಟಿನಲ್ಲಿ ಬರುವ ಬದಲು ಪದರೂಪದ ಒಟ್ಟಿನಲ್ಲಿ ಬಂದಿವೆಯಾದರೆ, ಅವು ಕನ್ನಡದ ಹಾಗೆ ಹವ್ಯಕದಲ್ಲೂ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಬದಲಾಗಿವೆ.

ಹವ್ಯಕದ ಮರದ, ಎನಗೆ ‘ನನಗೆ’, ಕಡಿದ, ಹಿಡಿವ ‘ಹಿಡಿಯುವ’ ಇದಕ್ಕೆ ಉದಾಹರಣೆಗಳನ್ನಾಗಿ

ಪದರೂಪಗಳನ್ನು

ಮೊದಲಾದ ಕೊಡಬಹುದು.

Eke →

4.5 ಮೂಗುಲಿಯ ಅನಂತರದ ತಡೆಯುಲಿಗಳು

ಮೂಲದ್ರಾವಿಡದಲ್ಲಿ ಮೂಗುಲಿಗಳ ಅನಂತರ ಅವುಗಳದೇ ಜಾಗದಲ್ಲಿ ಉಚ್ಚಾರಣೆಯಾಗುವ ತಡೆಯುಲಿಗಳು ಒತ್ತೆಯಾಗಿ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುವಾಗಿದ್ದುವು.

(1) ಇವುಗಳಲ್ಲಿ ಒತ್ತೆಯಾಗಿ ಬಂದ ತಡೆಯುಲಿಗಳು ಕನ್ನಡದಲ್ಲಿ ತಡೆಯುಲಿಗಳಾಗಿ ಕೊರಳಿಸದ

(ಮೂಲದ್ರಾವಿಡದಲ್ಲಿದ್ದ ಕಾಣಿಸುತ್ತವೆ.

ಬರಹದಲ್ಲಿ

ಕೊರಳಿಸಿದ

ತಮಿಳು

ರೂಪದಲ್ಲಿವೆಯಾದರೂ ತಡೆಯುಲಿಗಳಾಗಿವೆ.

ಉಚ್ಚಾರಣೆಯಲ್ಲಿ

ಕೊರಳಿಸಿದ

ಕನ್ನಡ
ಪೊಂಗು
ನಂಬು

ತಮಿಳು ಪೊಂಕು ನಂಪು

ಮೂಲದ್ರಾವಿಡದ ಱಕಾರ ಮೇಲಿನ ಸನ್ನಿವೇಶದಲ್ಲಿ ಱಕಾರವಾಗಿ

ಉಳಿಯದೆ ದಕಾರವಾಗಿ ಬದಲಾಗಿದೆ.

ಕನ್ನಡ
ಕುಂದು

ತಮಿಳು ಒನ್ಱು ಕನ್ಱು ಅನ್ಱು ಪನ್ಱಿ ಕುನ್ಱು ಎನ್ಱು

ಕನ್ನಡದಲ್ಲಿ

ಕೊರಳಿಸದ ಒತ್ತೆ

(2) ಮೂಗುಲಿಗಳ ಅನಂತರ ಇಮ್ಮಡಿ ರೂಪದಲ್ಲಿ ಬಂದಿದ್ದ ತಡೆಯುಲಿಗಳಾಗಿ ತಡೆಯುಲಿಗಳು ಬದಲಾಗಿವೆ; ಱ್ಱ ಎಂಬುದು ಮಾತ್ರ ತ ಎಂಬುದಾಗಿ ಬದಲಾಗಿದೆ. ತಮಿಳಿನಲ್ಲಿ ಇಮ್ಮಡಿ ರೂಪದಲ್ಲಿರುವ ತಡೆಯುಲಿಗಳು ಈ ರೀತಿ ಬದಲಾಗದೆ ಉಳಿದಿವೆಯಾದರೂ ಅವುಗಳ ಮೊದಲು ಬಂದಿದ್ದ ಮೂಗುಲಿ ಬಿದ್ದುಹೋಗಿದೆ.

ಮೂಲದ್ರಾವಿಡ
*ಕಲಂಕ್ಕು *ಮಂಕ್ಕು *ತೋಂಟ್ಟಮ್

ಕನ್ನಡ
ಕಲಂಕು
ಮಂಕು
ನಂಟ(ರು)

ತಮಿಳು ಕಲಕ್ಕು
ಮಕ್ಕು ತೋಟ್ಟಮ್ ನಟ್ಟಾರ್

(ಚ) ಮೂಗುಲಿಯ ಅನಂತರದ ಇಮ್ಮಡಿ ಱಕಾರ ಒತ್ತೆ ತಕಾರವಾಗಿರು ವುದು

ಮೂಲದ್ರಾವಿಡ
*ಕನ್‌ಱ್ಱಯ್

ಕನ್ನಡ

ತಮಿಳು ಕಱ್ಱಯ್

ನಡೆದ

ಕನ್ನಡದ

ಬೇರೊಂದು ಚರಿತ್ರೆಯಲ್ಲಿ ಬದಲಾವಣೆಯಿಂದಾಗಿ, ಈ ಎರಡು ರೀತಿಯ ಪದಗಳಲ್ಲೂ ತಡೆಯುಲಿಯ ಮೊದಲಿದ್ದ ಮೂಗುಲಿ ಕೆಲವು ಸಂದರ್ಬಗಳಲ್ಲಿ (ಮೂಗುಲಿಯ ಮೊದಲು ಉದ್ದಸ್ವರವಿದ್ದಾಗ ಇಲ್ಲವೇ ಎರಡು ಗಿಡ್ಡಸ್ವರಗಳಿದ್ದಾಗ) ಬಿದ್ದುಹೋಗಿದೆ. ಈ ಬದಲಾವಣೆಯ ಕುರಿತು ಹೆಚ್ಚಿನ ವಿವರಗಳಿಗೆ (5.2.4) ನೋಡಿ.

ಈ ರೀತಿ ಮೂಗುಲಿ ಬಿದ್ದು ಹೋಗುವ ಬದಲಾವಣೆ ಕನ್ನಡದಲ್ಲಿ ಮೂಗುಲಿಗಳ ಅನಂತರ ಱಕಾರ ದಕಾರವಾಗುವ ಬದಲಾವಣೆಗಿಂತ ಮೊದಲೇ ಸಂದರ್ಬಗಳಲ್ಲಿ ಮೂಲದ್ರಾವಿಡ ಱಕಾರ ಹಳೆಗನ್ನಡದಲ್ಲಿ ದಕಾರವಾಗಿ ಬದಲಾಗದೆ ಱಕಾರವಾಗಿಯೇ ಉಳಿದಿದೆ.

ನಡೆದಿರಬೇಕು. ಯಾಕೆಂದರೆ, ಅಂತಹ

ತಮಿಳು

ಕನ್ನಡ
ಮೂಱು ‘ಮೂರು’’ ಊಱು ‘ನಿಲ್ಲಿಸು’’ ಊನ್ಱು ‘ಒತ್ತು’’

ಮೂನ್ಱು

ತೋಱು ‘ತೋರು’’

ತೋನ್ಱು

(4) ಉದ್ದ ಸ್ವರದ ಅನಂತರ ಮೂಗುಲಿಯೊಂದಿಗೆ ಪಕಾರ ಬಂದಿರುವಲ್ಲಿ ಮೇಲೆ ಸೂಚಿಸಿದ ಹಾಗೆ ಮೂಗುಲಿ ಬಿದ್ದುಹೋದಾಗ, ಉಳಿದುಕೊಂಡಿದ್ದ ಪಕಾರ ಕನ್ನಡದ ಕೆಲವು ಪದಗಳಲ್ಲಿ ವಕಾರವಾಗಿ ಬದಲಾಗಿದೆ.

ಕನ್ನಡ
ಹಾವು
ಬೇವು
ಓವು ‘ಕಾಯು’’
ಕಾವು ‘ಹಿಡಿ’’

ತಮಿಳು ಪಾಂಪು ವೇಂಪು
ಕಾಂಪು

ಆದರೆ ಬೇರೆ ಕೆಲವು ಪದಗಳಲ್ಲಿ ಅದು ಬಕಾರವಾಗಿಯೂ ಬದಲಾ

ಕನ್ನಡ
ನಾಂಬು ‘ಸಡಿಲಾಗು’’
ತೂಬು (ಹವ್ಯಕ: ತೂಂಬು)

ತಮಿಳು

ನಾಂಪು ತೂಂಪು

(5) ಕನ್ನಡದ ಕೆಲವು ಪದಗಳಿಗೆ (ಕ) ಮೂಗುಲಿ ಮತ್ತು ತಡೆಯುಲಿ ಗಳಿರುವ ರೂಪ ಮತ್ತು (ಚ) ಇಮ್ಮಡಿ ತಡೆಯುಲಿಯಿರುವ ರೂಪ ಕಾಣಿಸುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಪದಗಳನ್ನು ಗಮನಿಸಬಹುದು.

ರೂಪಗಳಿರುವುದು

ಎರಡೆರಡು

ಮೂಗುಲಿ ಮತ್ತು ತಡೆಯುಲಿ

ಇಮ್ಮಡಿ ತಡೆಯುಲಿ

ಇಂಗು ‘ಬತ್ತು’’

ಗುಂಗುರು ಸುಂದು
ಒಂದು ‘ಸೇರು’’
ಕಂಪು

ದಕ್ಕು ಗುಗ್ಗುರು ಕೆಚ್ಚು
ಅಟ್ಟು ‘ಸೇರು’’ ಪಿತ್ತಿಲ್ ಸುತ್ತು ಗಬ್ಬು

ಮೂಲದ್ರಾವಿಡದಲ್ಲಿ  ಕೆಲವು  ಒಟ್ಟುಗಳು  ಸೇರಿದಾಗ  ಈ  ರೀತಿ  ಮೂಗುಲಿ  ಮತ್ತು  ತಡೆಯುಲಿಗಳ  ಜೋಡಿಯ  ಬದಲು,  ಇಮ್ಮಡಿ  ತಡೆಯುಲಿ ಬರುವಂತಹ ಸೇರಿಕೆಯ ನಿಯಮವೊಂದಿತ್ತೆಂದು ಕಲ್ಪಿಸಲಾಗಿದೆ.  ಕನ್ನಡದ ಮೇಲಿನ ಪದಗಳು ಆ ನಿಯಮದ ಪಳೆಯಳಿಕೆಗಳಿರಬೇಕು. 

Eke →

4.6 ಇತರ ವ್ಯಂಜನಗಳೊಂದಿಗೆ ಬಂದ ತಡೆಯುಲಿಗಳು

ತಡೆಯುಲಿಗಳು ಇತರ ವ್ಯಂಜನಗಳೊಂದಿಗೆ ಬಂದಿರುವಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿದ್ದುವು ಎಂಬ ವಿಶಯದಲ್ಲಿ ಇನ್ನಶ್ಟು ಸಂಶೋದನೆಗಳು ನಡೆಯುವ ಅವಶ್ಯಕತೆಯಿದೆ. ಮೂಲದ್ರಾವಿಡದಲ್ಲೇನೇ ಕೆಲವು ಬದಲಾವಣೆಗಳು ನಡೆದಿದ್ದು ಅವನ್ನು ವಿವರಿಸುವಂತಹ ಕೆಲವು ಸೇರಿಕೆಯ ನಿಯಮಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಇವುಗಳಲ್ಲಿ ಕೆಳಗಿನ ನಿಯಮಗಳಿಗೆ ಕನ್ನಡದಲ್ಲಿ ಉದಾಹರಣೆಗಳನ್ನು ಕೊಡಲು ಸಾದ್ಯವಿದೆ.

(ಕ) ಲಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಱ್ ಮತ್ತು ನ್ಱ್ ಎಂದಾಗುತ್ತವೆ (ಮತ್ತು ಲಕಾರ ಬಿದ್ದು ಹೋಗು

(ಚ) ಳಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಟ್ ಮತ್ತು ಣ್್ಟ ಎಂದಾಗುತ್ತವೆ (ಮತ್ತು ಳಕಾರ ಬಿದ್ದು ಹೋಗುತ್ತದೆ);
(ಟ) ನಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಱ್ ಮತ್ತು ನ್ಱ್ ಎಂದಾಗುತ್ತವೆ (ಮತ್ತು ನ್ಱ್ ಎಂಬುದರ ಮೊದಲಿನ ನಕಾರ ಬಿದ್ದು ಹೋಗುತ್ತದೆ); ಮತ್ತು (ತ) ಣಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಟ್ ಮತ್ತು ಣ್್ಟ ಎಂದಾಗುತ್ತವೆ (ಮತ್ತು ಣ್್ಟ ಎಂಬುದರ ಮೊದಲಿನ ಣಕಾರ ಬಿದ್ದುಹೋಗುತ್ತದೆ).

ಈ ನಾಲ್ಕು ರೀತಿಯ ಸೇರಿಕೆಯ ನಿಯಮಗಳಿಗೂ ಉದಾಹರಣೆಗಳನ್ನು  ಕನ್ನಡದ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ಕಾಣಬಹುದು.  

ಕ್ರಿಯಾಪದ ಕೊಲ್

ಹಿಂದಿನ ಸಮಯ
ಕೊಂದು

ಕೊಳ್

ಕೊಂಡು

ತಮಿಳು ಕೊನ್ಱು ನಿನ್ಱು

ಕೊಣ್ಟು

ಎನ್ಱು

Eke →

4.6.1 ಕನ್ನಡದಲ್ಲಿ ನಡೆದ ಬದಲಾವಣೆಗಳು

(1) ಹಳೆಗನ್ನಡದಲ್ಲಿ ಳಕಾರ, ೞಕಾರ ಮತ್ತು ರಕಾರ (ಇಲ್ಲವೇ ಱಕಾರ)ಗಳ ಅನಂತರ ಬರುವ ವ್ಯಂಜನಗಳಿಗೆ ಎರಡು ರೀತಿಯ ಉಚ್ಚಾರಣೆಗಳಿದ್ದುವು. ಹೆಚ್ಚಿನ ಪದಗಳಲ್ಲೂ ಅವು ಸ್ವಲ್ಪ ಮಟ್ಟಿಗೆ ಉದ್ದವಾಗಿ ಉಚ್ಚಾರಣೆಯಾಗುತ್ತಿದ್ದುವು.

ಆದರೆ ಕೆಲವು ವಿಶಿಶ್ಟವಾದ ಜಾಗಗಳಲ್ಲಿ ಮತ್ತು ಪದಗಳಲ್ಲಿ ಅವು ಗಿಡ್ಡರೂಪದಲ್ಲೇ ಉಚ್ಚಾರಣೆಯಾಗುತ್ತಿದ್ದಿರಬೇಕು ಎಂಬುದನ್ನು ಆ ಕಾಲದ ವಯ್ಯಾಕರಣಿಗಳು ಕೊಟ್ಟಿರುವ ಹೇಳಿಕೆಗಳಿಂದ ಊಹಿಸಬಹುದು. ಇಂತಹ ಗಿಡ್ಡ ಉಚ್ಚಾರಣೆಯಿರುವ ವ್ಯಂಜನಗಳಿಗೆ ‘ಶಿತಿಲದ್ವಿತ್ವ’ ಎಂಬ ಹೆಸರು ರೂಡಿಯಲ್ಲಿದೆ.

ಮೂರು

ಇಲ್ಲವೇ

ಸಾಮಾನ್ಯವಾಗಿ

ವ್ಯಂಜನಕಂತೆಗಳನ್ನು

ಹೆಚ್ಚು ಉಲಿಕಂತೆಗಳಿರುವ ಮತ್ತು ಮೊದಲನೆಯ ಎರಡು ಉಲಿಕಂತೆಗಳು ಹಗುರವಾಗಿರುವ ಪದಗಳಲ್ಲಿ ಮಾತ್ರ ಈ ರೀತಿ ಶಿತಿಲದ್ವಿತ್ವವನ್ನು ತೋರಿಸುವ ನಾಮಪದಗಳಿಗೆ ಹಲವಚನದ ಗಳ್ ಒಟ್ಟು ಇಲ್ಲವೇ ವಿಬಕ್ತಿಯ ಗೆ ಒಟ್ಟು ಸೇರಿರುವಲ್ಲಿ (ಎಸೞ್ಗಳ್, ಎಸೞ್ಗ, ಚಿಗುರ್ಗಳ್, ಚಿಗುರ್ಗೆ), ಕ್ರಿಯಾರೂಪಗಳಲ್ಲಿ (ತೆಗೞ್ದಂ, ತೆಗೞ್ವ, ನುಸುಳ್ಗುಂ, ತೊಡರ್ದಂ), ಮತ್ತು ಕೆಲವು ಜೋಡುಪದಗಳಲ್ಲಿ (ಅಲರ್ದೋರಣಂ, ಬೆಮರ್ವನಿ, ಕುಳಿಗ್ರಾಳಿ) ಇಂತಹ ಉಚ್ಚಾರಣೆಯಿತ್ತೆಂದು ತೋರುತ್ತದೆ.

ಕಾಣಬಹುದು.

ಆದರೆ, ಮೇಲಿನ ನಿಯಮಕ್ಕೆ ಅಪವಾದವಾಗಿ, ಎರ್ದೆ, ಬರ್ದಿಲಂ ಎಂಬಂತಹ ಕೆಲವು ಪದಗಳಲ್ಲೂ ಶಿತಿಲದ್ವಿತ್ವವಿತ್ತು. ಹೊಸಗನ್ನಡದಲ್ಲಿ ಎರ್ದೆ ಪದ ಎದ್ದೆ ಎಂದಾಗದೆ (ಕೆಳಗೆ (2)ನೇ ವಿಬಾಗ ನೋಡಿ) ಎದೆ ಎಂದಾಗಿರುವುದು ಇದೇ ಕಾರಣಕ್ಕಿರಬಹುದು (ಆದರೆ, ಕಿಟ್ಟೆಲ್ ಅವರು ಎದ್ದೆ ರೂಪವನ್ನೂ ಕೊಟ್ಟಿದ್ದಾರೆ).

(2) ಕನ್ನಡದ ಚರಿತ್ರೆಯಲ್ಲಿ ಎರಡು ಗಿಡ್ಡ ಸ್ವರಗಳ ಅನಂತರ ತಡೆಯುಲಿ ಬಂದಿರುವ ಪದಗಳಲ್ಲಿ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರವಿದೆಯಾದಲ್ಲಿ, ಅವುಗಳ ಎರಡನೆಯ ಗಿಡ್ಡ ಸ್ವರ ಬಿದ್ದು ಹೋಗುವ ಬದಲಾವಣೆಯೊಂದು ಅನಿಯಮಿತವಾಗಿ ನಡೆದಿತ್ತು.

ಈ ಬದಲಾವಣೆಯಿಂದಾಗಿ ರಕಾರ ಇಲ್ಲವೇ ೞಕಾರದೊಂದಿಗೆ ತಡೆ ಯುಲಿ ಬರಲು ಸಾದ್ಯವಾಗಿದ್ದು (ಪೊರ್ದು ‘ಹೊಂದು’ - ತಮಿಳು: ಪೊರುತು; ಕೞ್ತ ‘ಕತ್ತೆ’ - ತಮಿಳು: ಕೞುತಯ್), ಅವುಗಳಲ್ಲಿ (ಕ)

ೞಕಾರ ರಕಾರವಾಗುವ (ತೞ್ಗು > ತರ್ಗು) ಮತ್ತು (ಚ) ರಕಾರ ತಡೆಯುಲಿಯೊಂದಿಗೆ ಸೇರಿ ಇಮ್ಮಡಿ ತಡೆಯುಲಿಯಾಗುವ (ಪೊರ್ದು > ಪೊದ್ದು) ಬದಲಾವಣೆಗಳು ನಡೆದಿದ್ದುವು. ಈ ಎರಡನೆಯ ಬದಲಾವಣೆಗೆ ೞಕಾರದಿಂದ ಬಂದ ರಕಾರವೂ ಒಳಗಾಗಿತ್ತು (ತರ್ಗು > ತಗ್ಗು).

ಇಂತಹ ಪದಗಳಲ್ಲಿ ಎರಡನೆಯ ಸ್ವರದ ಅನಂತರ ಬಂದಿದ್ದ ಒತ್ತೆ ತಡೆಯುಲಿ ಕನ್ನಡದಲ್ಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗುತ್ತದೆ ಮತ್ತು ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಬದಲಾಗುತ್ತದೆ (ಪರ್ತಿ ‘ಹತ್ತಿ’ - ತಮಿಳು: ಪರುತ್ತಿ).

ಆದರೆ, ಇವುಗಳಲ್ಲಿ ಮೊದಲನೆಯ ಬದಲಾವಣೆಗೆ ಪೊೞ್ತು (ತಮಿಳು: ಪೊೞುತು), ಕೞ್ತ (ತಮಿಳು: ಕೞುತಯ್), ಒೞ್ಕು ಮತ್ತು ಬೆರ್ಕು (ತಮಿಳು: ವೆರುಕು) ಪದಗಳಲ್ಲಿ ತಕಾರ ಮತ್ತು ಕಕಾರಗಳು ದಕಾರ ಮತ್ತು ಗಕಾರಗಳಾಗಿಲ್ಲದಿರುವುದು ಅಪವಾದವಾಗಿ ಕಾಣಿಸುತ್ತದೆ.

(3) ಎರಡು ಗಿಡ್ಡ ಸ್ವರಗಳ ಅನಂತರ ಮೂಗುಲಿ ಮತ್ತು ಒತ್ತೆ ಇಲ್ಲವೇ ಇಮ್ಮಡಿ ತಡೆಯುಲಿಗಳು ಬಂದಿರುವಂತಹ ಪದಗಳಲ್ಲೂ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರ ಬಂದಿದೆಯಾದರೆ, ಎರಡನೆಯ ಸ್ವರ ಅನಿಯಮಿತವಾಗಿ ಬಿದ್ದುಹೋಗುತ್ತದೆ.

ಇಂತಹ ಪದಗಳಲ್ಲಿ ರಕಾರ ಇಲ್ಲವೇ ೞಕಾರದ ಅನಂತರ ಮೂಗುಲಿ ಮತ್ತು ಒತ್ತೆ ಇಲ್ಲವೇ ಇಮ್ಮಡಿ ತಡೆಯುಲಿಗಳಿದ್ದುವಾದಲ್ಲಿ, ಮೂಗುಲಿ ಬಿದ್ದು ಹೋಗುತ್ತದೆ ಮತ್ತು ಇದರಿಂದಾಗಿ, ರಕಾರ ಇಲ್ಲವೇ ೞಕಾರಗಳ ಅನಂತರ ತಡೆಯುಲಿಗಳು ಬರುವಂತಾಗುತ್ತದೆ.

ಇಂತಹ ಪದಗಳಲ್ಲೂ (ಕ) ೞಕಾರ ರಕಾರವಾಗುತ್ತದೆ (ಉೞ್ದು > ಉರ್ದು) ಮತ್ತು (ಚ) ರಕಾರ (ಮೂಲದ್ರಾವಿಡ ರಕಾರ ಮತ್ತು ೞಕಾರದಿಂದ ಬಂದ ರಕಾರ) ತಡೆಯುಲಿಯೊಂದಿಗೆ ಸೇರಿ ಇಮ್ಮಡಿ ತಡೆಯುಲಿ ಉಳಿಯುವಂತೆ ಮಾಡುತ್ತದೆ (ಪರ್ದು > ಪದ್ದು ‘ಹದ್ದು’ - ತಮಿಳು: ಪರುನ್ತು; ಪರ್ತಿ > ಹತ್ತಿ; ಉರ್ದು > ಉದ್ದು - ತಮಿಳು:

ಉೞುನ್ತು). ಹೆಚ್ಚಿನ ವಿವರಗಳಿಗೆ (5.2.5), (5.3.3) ಮತ್ತು (5.4.3) ನೋಡಿ.

(4) ಹಳೆಗನ್ನಡದ ಕೆಲವು ಪದಗಳಲ್ಲಿ ಡಕಾರದ ಅನಂತರ ಬೇರೆ ತಡೆಯುಲಿಯೊಂದು ಬಂದಿರುವಲ್ಲಿ ಅದು ೞಕಾರವಾಗಿ ಬದಲಾಗಿರುವುದು ಕಂಡುಬರುತ್ತದೆ. ಈ ಬದಲಾವಣೆ ಉದ್ದಸ್ವರದ ಅನಂತರ ಇಲ್ಲವೇ ಎರಡು ಗಿಡ್ಡಸ್ವರಗಳ ಅನಂತರ ಮಾತ್ರವೇ ನಡೆದಿರುವ ಹಾಗೆ ತೋರುತ್ತದೆ (4.3.4 ನೋಡಿ).

ಸ್ವರಗಳ ನಡುವೆ

ನೋಡು ಮಾಡು
ಬಿಸುಡು

ತಡೆಯುಲಿಯ ಮೊದಲು ನೋೞ್ಪೂಡೆ ‘ನೋಡುವುದಿದ್ದರೆ’’ ಮಾೞ್ಗುಂ ‘ಮಾಡಬಹುದು’’ ಕಾೞಿ್ಗಚ್ರು ‘ಕಾಡುಕಿಚ್ಚು’’ ಬಿಸುಳ್ಪೊಡೆ ‘ಬಿಸಾಡುವುದಿದ್ದರೆ’

ಈ ಬದಲಾವಣೆಗೆ ಅವಶ್ಯವಿರುವ ಸನ್ನಿವೇಶ ಉಳಿದಿಲ್ಲವಾದ ಕಾರಣ, ಹೆಚ್ಚಿನ ರೂಪಗಳಲ್ಲೂ ಅದು ಹೊಸಗನ್ನಡದಲ್ಲಿ ಮುಂದುವರಿದಿಲ್ಲ. ಆದರೆ ಕೆಲವು ಳಕಾರವಾಗಿ ಜೋಡುಪದಗಳಲ್ಲಿ ಕಾಣಿಸಿಕೊಳ್ಳುತ್ತದೆ (ಕಾಳ್ಗಿಚ್ಚು).

ಮಾತ್ರ

Eke →

4.7 ತಿರುಳು

ಮೂಲದ್ರಾವಿಡದ ತಡೆಯುಲಿಗಳು (ಕ, ತ, ಱ, ಟ, ಚ, ಪ) ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಬರಿಯ ಉಚ್ಚಾರಣೆಯಲ್ಲಿ ಮಾತ್ರವೇ ಕಾಣಿಸುತ್ತಿದ್ದ (ಎಂದರೆ ಅರ್ತ ಮತ್ತು ಕೆಲಸವಿಲ್ಲದಿದ್ದ) ವ್ಯತ್ಯಾಸವನ್ನು ಕೊರಳಿಸುವ ತಡೆಯುಲಿಗಳ ನಡುವಿನ ವ್ಯತ್ಯಾಸ ಕನ್ನಡದಲ್ಲಿ ಅರ್ತ ನಡೆದ ವ್ಯತ್ಯಾಸವನ್ನು

ಸೂಚಿಸುವಂತಾದುದು ಈ ಉಲಿಗಳಲ್ಲಿ

ಕೊರಳಿಸದ

ಸೂಚಿಸುವ

ಬದಲಾವಣೆಗಳಲ್ಲಿ ಮುಕ್ಯವಾದುದು. ಆದರೆ ಈ ಬದಲಾವಣೆಯ ಸ್ವರೂಪ ಎಂತಹದು ಎಂಬುದನ್ನಿನ್ನೂ ಸ್ಪಶ್ಟವಾಗಿ ವಿವರಿಸಲು ಸಾದ್ಯವಾಗಿಲ್ಲ.

ಮೂಲದ್ರಾವಿಡ ಱಕಾರ ಕನ್ನಡದಲ್ಲಿ ಹಲವು ರೀತಿಯ ಬದಲಾವಣೆಗಳಿ ಗೊಳಗಾಗಿದ್ದು ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿದೆ. ಚಕಾರ ಮತ್ತು ಪಕಾರಗಳೂ ಇಂತಹವೇ ಹಲವು ಬದಲಾವಣೆಗಳಿಗೊಳಗಾಗಿದ್ದರೂ ಎರವಲುಗಳಿಂದಾಗಿ ಅವು ಹೊಸಗನ್ನಡದಲ್ಲಿ ಇವತ್ತಿಗೂ ಪ್ರತ್ಯೇಕ ತಡೆಯುಲಿಗಳಾಗಿ ಉಳಿದುಕೊಂಡಿವೆ.

5. ಇತರ ವ್ಯಂಜನಗಳು

Eke →

5.1 ಮುನ್ನೋಟ

ಹಿಂದಿನ ಅದ್ಯಾಯದಲ್ಲಿ ಕನ್ನಡದಲ್ಲಿ ಎಂಬುದನ್ನು ವಿವರಿಸಲಾಗಿತ್ತು.

ತಡೆಯುಲಿಗಳು ಮೂಲದ್ರಾವಿಡದಲ್ಲಿದ್ದ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ

ಮೂಲದ್ರಾವಿಡದಲ್ಲಿದ್ದ ಇತರ ವ್ಯಂಜನಗಳು, ಎಂದರೆ ನಾಲ್ಕು ಮೂಗುಲಿಗಳು (ಮ, ನ, ಣ, ಞ), ಒಂದು ಹೊಡೆಯುಲಿ (ರ), ಎರಡು ಪಕ್ಕದುಲಿಗಳು (ಲ, ಳ) ಮತ್ತು ಮೂರು ತಡೆಯಿಲ್ಲದುಲಿಗಳು (ಯ, ವ, ೞ) ಕನ್ನಡದಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗುವುದು.

Eke →

5.2 ಮೂಗುಲಿಗಳು

ಮೂಲದ್ರಾವಿಡದಲ್ಲಿ ಮ, ನ, ಣ ಮತ್ತು ಞಗಳೆಂಬ ನಾಲ್ಕು ಮೂಗುಲಿ ಗಳಿದ್ದುವು. ಇವುಗಳಲ್ಲಿ ಣಕಾರವನ್ನು ಬಿಟ್ಟು ಉಳಿದ ಮೂರು ಮೂಗುಲಿಗಳು (ಮ, ನ ಮತ್ತು ಞಗಳು) ಮೂಲದ್ರಾವಿಡ ಪದಗಳ ಮೊದಲನೆಯ ವ್ಯಂಜನವಾಗಿ ಬರಬಲ್ಲುವಾಗಿದ್ದುವು ಮತ್ತು ಞಕಾರವನ್ನು ಬಿಟ್ಟು ಉಳಿದ ಮೂರು ಮೂಗುಲಿಗಳು (ಮ, ನ, ಣಗಳು) ಎರಡನೆಯ ವ್ಯಂಜನವಾಗಿ ಬರಬಲ್ಲುವಾಗಿದ್ದುವು. ಪದಗಳ ಎರಡನೆಯ ವ್ಯಂಜನವಾಗಿ ಬರುವ ಮೂಗುಲಿಗಳು ಒತ್ತೆ ರೂಪದಲ್ಲಿ ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ ಬರಬಲ್ಲುವಾಗಿದ್ದುವು.

ಇದಲ್ಲದೆ, ಈ ನಾಲ್ಕು ಮೂಗುಲಿಗಳೂ ತಡೆಯುಲಿಗಳ ಮೊದಲು ಬರಬಲ್ಲುವಾಗಿದ್ದುವು. ಆದರೆ ಈ ಸನ್ನಿವೇಶದಲ್ಲಿ ಕಕಾರ, ಱಕಾರ ಮತ್ತು

ತಕಾರಗಳ ಎದುರು ನಕಾರ ಮಾತ್ರ ಬರಲು ಸಾದ್ಯವಿದ್ದು, ಅದಕ್ಕೆ ಆ ತಡೆಯುಲಿಗಳದೇ ಆದ ಜಾಗಗಳಲ್ಲಿ ಉಂಟಾಗುವ ಮೂರು ಬೇರೆ ಬೇರೆ ಉಚ್ಚಾರಣೆಗಳಿದ್ದುವು. ಉಳಿದ ಮೂಗುಲಿಗಳಲ್ಲಿ ಮಕಾರ ಪಕಾರದೆದುರು, ಣಕಾರ ಟಕಾರದೆದುರು ಮತ್ತು ಞಕಾರ ಚಕಾರದೆದುರು ಮಾತ್ರ ಬರಬಲ್ಲು ವಾಗಿದ್ದುವು.

Eke →

5.2.1 ಪದಗಳ ಮೊದಲಿನ ಮೂಗುಲಿಗಳು

ಮೂಲದ್ರಾವಿಡದಲ್ಲಿ ಪದಗಳ ಮೊದಲಿಗೆ ಬರಬಲ್ಲ ಮ, ನ ಮತ್ತು ಞಗಳಲ್ಲಿ ಮ ಮತ್ತು ನಗಳು ಕನ್ನಡದಲ್ಲಿ ಹೆಚ್ಚು ಬದಲಾಗದೆ ಹಾಗೆಯೇ ಉಳಿದಿವೆ. ಞಕಾರ ಮಾತ್ರ ನಕಾರವಾಗಿ ಬದಲಾಗಿದೆ.

(1) ಮಕಾರ ಮತ್ತು ನಕಾರಗಳು ಕನ್ನಡದಲ್ಲಿ ಹೆಚ್ಚು ಬದಲಾಗದೆ ಹಾಗೆಯೇ ಉಳಿದಿವೆಯುಂಬುದಕ್ಕೆ ಉದಾಹರಣೆಯಾಗಿ ಮರ, ಮಾತು, ಮೀರು, ಮುಚ್ಚು, ಮೇಲೆ, ಮೇಯು; ನಾನು, ನೀರು, ನುಂಗು, ನೋಡು ಮೊದಲಾದ ಪದಗಳನ್ನು ಕೊಡಬಹುದು.

(2) ಪದಗಳ ಮೊದಲಿಗೆ ಬರುತ್ತಿದ್ದ ಞಕಾರ ಕನ್ನಡದಲ್ಲಿ ನಕಾರವಾಗಿ ಬದಲಾಗಿದೆ ಮಾತ್ರವಲ್ಲ, ಅದರ ಅನಂತರ ಬಂದಿದ್ದ ಆ ಎಂಬ ಸ್ವರವೂ ಕೆಲವು ಪದಗಳಲ್ಲಿ ಏ ಎಂಬ ಸ್ವರವಾಗಿ ಬದಲಾಗಿದೆ. ಉದಾಹರಣೆಗಾಗಿ, ಞಕಾರವನ್ನು ಮತ್ತು ಅದರ ಅನಂತರ ಬಂದಿರುವ ಆ ಎಂಬ ಸ್ವರವನ್ನು ಹೆಚ್ಚಿನೆಡೆಗಳಲ್ಲೂ ಬದಲಾಯಿಸದೆ ಉಳಿಸಿಕೊಂಡಿರುವ ಮಲಯಾಳ ಪದಗಳೊಂದಿಗೆ ಕೆಳಗೆ ಕೊಟ್ಟಿರುವ ಕನ್ನಡದ ಪದಗಳನ್ನು ಹೋಲಿಸಿ ನೋಡ ಬಹುದು.

(ಕ) ಞಕಾರ ನಕಾರವಾಗಿರುವುದು

ಕನ್ನಡ
ನರಳು
ನಾಱು
ನಿಮಿರು, ನಿಗುರು

ಮಲಯಾಳ ಞಾಱು ಞಿಮಿರ್ (ತಮಿಳು)

ನೇಗಿಲು

ಞೆಙ್ಙೋಳ್

(ಚ) ಆ ಸ್ವರ ಏ ಸ್ವರವಾಗಿರುವುದು

ಕನ್ನಡ
ನೇಣು
ನೇಸಱ್ ನೇಲು
ನೇರಳೆ
ನೇಗಿಲು

ಮಲಯಾಳ ಞಾಯಿಱು ಞಾಲು ಞಾಱಲ್ ಞಾಞ್ಚಲ್ (ತಮಿಳು)

(3) ಕರಾವಳಿಯ ಹವ್ಯಕ ಕನ್ನಡದಲ್ಲಿ ಮೂಲದ್ರಾವಿಡ ಞಕಾರ ಕೆಲವು ಪದಗಳಲ್ಲಿ ಉಳಿದುಕೊಂಡಿದೆ. ಈ ಒಳನುಡಿಯ ಞಙ್ಙು ಇಲ್ಲವೇ ಞಳಿ ‘ನಗ್ಗು’, ಞಾಣು ‘ಗರಿಗರಿಯಾಗಿಲ್ಲದಿರು (ಹಪ್ಪಳ)’, ಞೋಣ ‘ಗಂಡು ಎಮ್ಮೆಕರು’, ಞೋಣಿ ‘ಹೆಣ್ಣು ಎಮ್ಮೆಕರು’, ಞೋಳಿ ‘ಲೋಳೆ’ ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಪದಗಳನ್ನು ಅದು

ತುಳುವಿನಿಂದ ಇಲ್ಲವೇ ಮಲಯಾಳದಿಂದ ಎರವಲಾಗಿ ಪಡೆದಿರಲೂ ಸಾದ್ಯವಿದೆ. ಯಾಕೆಂದರೆ, ನರಂಬು ‘ನರ’, ನರಕ್ಕು ‘ನರಳು’, ನಕ್ಕುರುಳು ‘ಎರೆಹುಳ’, ನೇಗಿಲು, ನೇಣು, ನೇಲು ‘ನೇತಾಡು’, ನಾರು, ನೆರಿಗೆ ‘ನಿರಿಗೆ’ ಮೊದಲಾದ ಬೇರೆ ಹಲವು ಹವ್ಯಕ ಕನ್ನಡ ಪದಗಳಲ್ಲಿ ಮೂಲದ್ರಾವಿಡದ ಞಕಾರ ನಕಾರವಾಗಿಯೇ ಕಾಣಿಸಿಕೊಳ್ಳುತ್ತದೆ.

(4) ಪದಗಳ ಮೊದಲಿಗೆ ಬಂದಿದ್ದ ನಕಾರ ಕನ್ನಡದ ಕೆಲವು ಪದಗಳಲ್ಲಿ ಬಿದ್ದುಹೋಗಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು (ಕ) ಬೇರೆ ದ್ರಾವಿಡ ನುಡಿಗಳ ಪದಗಳೊಂದಿಗೆ ಇಲ್ಲವೇ (ಚ) ಕನ್ನಡದವೇ ಆದ ಬೇರೆ ಪದಗಳೊಂದಿಗೆ ಹೋಲಿಸಿ ನೋಡಬಹುದು.

ಇತರ ದ್ರಾವಿಡ ನುಡಿಗಳು

ಕನ್ನಡ
ಅವುಡು ‘ಕೆಳದುಟಿ’’ ತಮಿಳು: ನಮುಟು ಅರಳ್ ‘ಹೆದರಿಕೆ’’

ಪಾಜ್ರಿ: ನರ್ ತಮಿಳು: ನೀಂದು

ಕನ್ನಡ
ಎಗರು ‘ಏರು’’

ಕನ್ನಡ

ನೀರು

ಈ ಬದಲಾವಣೆ ಹೆಚ್ಚಿನ ದ್ರಾವಿಡ ನುಡಿಗಳಲ್ಲೂ ಕಾಣಿಸುತ್ತಿದೆಯಾದ ಕಾರಣ, ಅದು ಮೂಲದ್ರಾವಿಡದಲ್ಲೇನೇ ನಡೆದಿರಬೇಕೆಂದು ಕಲ್ಪಿಸಲಾಗಿದೆ. ಆದರೆ, ಇವತ್ತು ಅದು ಬೇರೆ ಬೇರೆ ದ್ರಾವಿಡ ನುಡಿಗಳ ಬೇರೆ ಬೇರೆ ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪದಗಳಲ್ಲಿ ಮೊದಲಿಗೆ ಬಂದಿದ್ದ ನಕಾರ ಕನ್ನಡದಲ್ಲಿ ಉಳಿದಿದೆ ಆದರೆ ಬೇರೆ ಕೆಲವು ದ್ರಾವಿಡ ನುಡಿಗಳಲ್ಲಿ ಬಿದ್ದುಹೋಗಿದೆ.

ಕನ್ನಡ
ನಿನ್ನೆ ನಿಲ್ಲು
ನೀನು
ನೆತ್ತರು

ಬೇರೆ ದ್ರಾವಿಡ ನುಡಿಗಳು ನಾಯ್ಕಿ: ಅಡ್್ಗ- ಮಲಯಾಳ: ಇನ್ನಲೆ ಕೋಲಾಮಿ: ಇಲ್- ತುಳು: ಈ, ಗದಬ: ಈನ್ ನಾಯ್ಕಿ: ಎತ್ತುರ್

Eke →

5.2.2 ಸ್ವರಗಳ ನಡುವಿನ ಒತ್ತೆ ಮೂಗುಲಿಗಳು

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡ ಬೇರುಗಳ ಎರಡನೆಯ ವ್ಯಂಜನವಾಗಿ ನ, ಮ ಮತ್ತು ಣಗಳು ಮಾತ್ರ ಬರಬಲ್ಲುವಾಗಿದ್ದುವು. ಹಾಗಾಗಿ, ಎರಡು ಸ್ವರಗಳ ನಡುವೆಯೂ ಈ ಮೂರು ಮೂಗುಲಿಗಳು

ಮಾತ್ರ ಒತ್ತೆ ಬರಬಲ್ಲುವಾಗಿದ್ದುವು.

ರೂಪದಲ್ಲಿ ಇಲ್ಲವೇ ಇಮ್ಮಡಿ

ರೂಪದಲ್ಲಿ

ಒತ್ತೆ ರೂಪದಲ್ಲಿ ಬಂದ ಈ ಮೂರು ಮೂಗುಲಿಗಳಲ್ಲಿ ನಕಾರ ಮತ್ತು ಣಕಾರಗಳು ಕನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ಬದಲಾಗದೆ ಉಳಿದಿವೆ. ಬರಹ ಕನ್ನಡದ ಮನೆ, ಕನಸು, ಆನೆ, ಜಿನುಗು; ಹಣಿಗೆ, ಬೆಣೆ, ತಣಿ, ಪದಗಳನ್ನು ಇದಕ್ಕೆ ಉದಾಹರಣೆಗಳಾಗಿ ಕೊಡಬಹುದು.

ಮೊದಲಾದ

(1) ಆದರೆ, ಎರಡು ಸ್ವರಗಳ ನಡುವೆ ಬಂದ ಮಕಾರ ಹೆಚ್ಚಿನ ಪದ ಗಳಲ್ಲೂ ವಕಾರವಾಗಿ ಬದಲಾಗಿದೆ. ಹಳೆಗನ್ನಡದಲ್ಲೇನೇ ಕೆಲವು ಪದಗಳಲ್ಲಿ ಮಕಾರವಿರುವ ಮತ್ತು ಅದರ ಬದಲು ವಕಾರ ಬಂದಿರುವ ಎರಡು ರೀತಿಯ ರೂಪಗಳನ್ನೂ ಕಾಣಬಹುದು.

ಮಕಾರವಿರುವ ರೂಪ ಅಮುಂಕು ತಾಮರೆ
ತೆಮರ್ ‘ಕಟ್ಟೆ, ದಡ’’
ತಿಮಿರ್ ‘ಕಂಪಿನ ದ್ರವ್ಯ’’
ಸಮನಿಸು

ವಕಾರವಿರುವ ರೂಪ ಅವುಂಕು ತಾವರೆ ತೆವರ್ ಸವನಿಸು

ಇದಲ್ಲದೆ,

ಮೊದಲಿಗೆ

ಮಕಾರವಿದ್ದ

ಸ್ವರದಲ್ಲಿ ಕೊನೆಗೊಳ್ಳುವ ಪದದ ಅನಂತರ ಬಂದಾಗ, ಅವುಗಳ ಮಕಾರ ವಕಾರವಾಗುವಂತಹ ಒಂದು ಅನಿಯಮಿತವಾದ ಸೇರಿಕೆಯ ನಿಯಮವೂ ಹಳೆಗನ್ನಡದ ಕಾಲದಲ್ಲಿತ್ತು.

ಪದಗಳು

ಮಱು + ಮಾತು ಇನಿ + ಮಾತು
ಕಡು + ಮಳೆ

ಮಱುವಾತು ಇನಿವಾತು ಕಡುವಳೆ

ನಟ್ಟೆ + ಮನೆ
ಪೞ + ಮಾತು
ಬಿಱು + ಮಳೆ

ನಟ್ಟೆವನೆ ಪೞವಾತು ಬಿಱುವಳೆ

ಹಳೆಗನ್ನಡದ ಪದಗಳಲ್ಲಿ ಬದಲಾಗದೆ ಉಳಿದಿದ್ದ ಮಕಾರಗಳಲ್ಲಿ ಕೆಳಗಿನ

ವಕಾರವಾಗಿವೆ ಎಂಬುದನ್ನು

ಹೊಸಗನ್ನಡದಲ್ಲಿ

ಹಲವು ಉದಾಹರಣೆಗಳಲ್ಲಿ ಕಾಣಬಹುದು.

ಹಳೆಗನ್ನಡದ ಮಕಾರ ಬೆಮರ್
ಕಿಮುೞ್ಚು ಸಮಱು
ತಮರ್
ಚಿಮುಟು ಸಮೆ
ಮಾಮ

ಹೊಸಗನ್ನಡದ ವಕಾರ ಬೆವರು ಕಿವುಚು ಸವರು ತವರು ಚಿವುಟು ಸವೆ ಮಾವ

ಇದಲ್ಲದೆ, ಹಳೆಗನ್ನಡ ಪದಗಳ ಕೊನೆಯಲ್ಲಿ ಬಂದಿದ್ದ ಮಕಾರದ ಅನಂತರ ಹೊಸಗನ್ನಡದಲ್ಲಿ ಒಂದು ಸೇರಿದ್ದು, ಅಂತಹ ಮಕಾರಗಳಲ್ಲಿ ಹಲವು ಹೊಸಗನ್ನಡದಲ್ಲಿ ಸ್ವರಗಳ ನಡುವಿನದಾಗಿವೆ; ಇಂತಹ ಮಕಾರಗಳೂ ಹೊಸಗನ್ನಡದಲ್ಲಿ ವಕಾರವಾಗಿ ಬದಲಾಗಿವೆ.

ಸ್ವರ

ಹಳೆಗನ್ನಡದ ಮಕಾರ ನಾಮ್
ನೀಮ್
ಕೇಳುವೆಮ್ ಮಾಡಿದೆಮ್

ಹೊಸಗನ್ನಡದ ವಕಾರ ನಾವು ನೀವು ಕೇಳುವೆವು ಮಾಡಿದೆವು

ಹೊಸಗನ್ನಡದ ಪದಗಳಲ್ಲಿ ಸ್ವರಗಳ ನಡುವೆ ಮಕಾರ ಕಾಣಿಸುವುದು ಅಪರೂಪ. ಅಮುಕು, ಉಳುಮೆ, ಗಮನ, ಕುಮುಟು, ಕುಲುಮೆ, ಕೋಮಟಿ, ಚಿಮುಕಿಸು, ದುಮುಕು ಮೊದಲಾದ ಕೆಲವು ಪದಗಳನ್ನು ಮಾತ್ರ ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಇವು ಮೇಲಿನ ಬದಲಾವಣೆ ನಡೆದ ಮೇಲೆ ಹಳೆಯ ಒಳನುಡಿಯಿಂದ ಇಲ್ಲವೇ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳಿರಬೇಕು.

(2) ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಎರಡು ಸ್ವರಗಳ ನಡುವೆ

ಬಂದ ಣಕಾರ ನಕಾರವಾಗಿದೆ (ಆಚಾರ್ಯ 1967).

ಬರಹದ ಕನ್ನಡ
ಎಣಿಸು

ಹಾಲಕ್ಕಿ ಕನ್ನಡ ಕಾನು ಹನೆ

ಇಂತಹದೇ

ಬದಲಾವಣೆ

ಚಾಮರಾಜನಗರದ

ಕೆಲವು ಒಳನುಡಿಗಳಲ್ಲೂ ನಡೆದಿದೆ. ಆದರೆ ಇಲ್ಲಿ ಣಕಾರ ನಕಾರವಾಗುವ ಬದಲು, ನಕಾರ ಣಕಾರವಾಗಿದೆ. ಉದಾಹರಣೆಗಾಗಿ, ಚಾಮರಾಜ ನಗರದ ಉಪ್ಪಲಿಗರ ಕನ್ನಡದಲ್ಲಿ ಬರಹ ಕನ್ನಡದ ಆನೆ ಎಂಬುದು ಆಣೆ ಎಂದಾಗಿದೆ (ಬಟ್ 1969 ನೋಡಿ).

Eke →

5.2.3 ಸ್ವರಗಳ ನಡುವಿನ ಇಮ್ಮಡಿ ಮೂಗುಲಿಗಳು

ಸ್ವರಗಳ ನಡುವೆ ಬಂದಿದ್ದ ಮೂಲದ್ರಾವಿಡದ ಇಮ್ಮಡಿ ಮೂಗುಲಿಗಳು (ಮ್್ಮ, ನ್್ನ ಮತ್ತು ಣ್್ಣ) ಕನ್ನಡದ ಹಲವು ಪದಗಳಲ್ಲಿ ಬದಲಾಗದೆ ಉಳಿದಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು.

ಕನ್ನಡ

ತಮಿಳು

ಅಮ್ಮ
ಸುಮ್ಮಗೆ ಕಣ್ಣಿ ‘ಹಗ್ಗ’’

ಅಮ್ಮ ಚುಮ್ಮ ಚಿನ್ನಮ್ ‘ಚಿನ್ನದ ನಾಣ್ಯ’’

(1) ಮೂಲದ್ರಾವಿಡದಲ್ಲೇನೇ ಸ್ವರದಲ್ಲಿ ಮೊದಲಾಗುವ ಒಟ್ಟು ಮೂಗುಲಿಗಳಾಗುವ ಮೂಗುಲಿಗಳು ಒತ್ತೆ ಸೇರಿದಾಗ ಇಮ್ಮಡಿ ಬದಲಾವಣೆಯೊಂದು ನಡೆದಿತ್ತು. ಹಿಂದಿನ ಅದ್ಯಾಯದಲ್ಲಿ (4.4.1ರಲ್ಲಿ) ವಿವರಿಸಿದಂತಹ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗುವ ಬದಲಾವಣೆಯನ್ನು ಇದು ಹೋಲುತ್ತದೆ.

ಒತ್ತೆ ಮೂಗುಲಿ

ಇಮ್ಮಡಿ ಮೂಗುಲಿ ಚಿಮ್ಮು ‘ಹೊರಚೆಲ್ಲು’’ ಚಿಮುಕು, ಚಿಮುಕಿಸು ಅಮ್ಮು ‘ಶಕ್ತನಾಗು’’ ಅಮಗು ‘ತಕ್ಕಾಗು’’ ದಿಮ್ಮಿ ‘ಎತ್ತರಿಸಿದ ನೆಲ’’ ತೆಮರ್ ‘ಕಟ್ಟೆ’ ಎಣ್ಣು ‘ಎಣಿಸು’

ಹವ್ಯಕ: ಉಣುಂಗು ಚಿನಿವಾರ

ಹಳೆಗನ್ನಡ  ಪದಗಳ  ಕೊನೆಯಲ್ಲಿ  ಗಿಡ್ಡ  ಸ್ವರದ  ಅನಂತರ    ಮತ್ತು  ಣ  ಮೂಗುಲಿಗಳು  ಹೊಸಗನ್ನಡದಲ್ಲಿ  ಬಂದಿದ್ದ  ನ  ಉಚ್ಚಾರಣೆಗಾಗಿ  ಉಕಾರ  ಮೂಗುಲಿಗಳಾಗಿ  ಬದಲಾಗಿವೆ  (7.9  ನೋಡಿ).  ಆದರೆ  ಇವೇ  ಮೂಗುಲಿಗಳ  ಅನಂತರ  ಸೇರಿದಾಗ,  ಅವು  ಒತ್ತೆ  ಸ್ವರದಲ್ಲಿ  ಮೂಗುಲಿಗಳಾಗಿಯೇ  ಉಳಿದಿವೆ.  ಈ  ಬದಲಾವಣೆಯೂ  ಮೇಲಿನ  ನಿಯಮವನ್ನೇ ಸೂಚಿಸುತ್ತದೆ. 

ಮೊದಲಾಗುವ ಒಟ್ಟು

ಸೇರಿದಾಗ ಇಮ್ಮಡಿ

ಹಳೆಗನ್ನಡ

ಹೊಸಗನ್ನಡ ಉಣ್ಣು, ಉಣಿ ‘ಉಣ್ಣುವವನು’’ ತಿನ್ನು, ತಿನಿಸು ಎನ್ನು, ಎನಿಸು

(3) ಇಮ್ಮಡಿ ರೂಪದಲ್ಲಿ ಬಂದ ಬರಹ ಕನ್ನಡದ ಣಕಾರ ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ನಕಾರವಾಗಿದೆ ಮತ್ತು ಇದಕ್ಕೆ ವಿರುದ್ದವಾಗಿ, ಇಮ್ಮಡಿ ರೂಪದಲ್ಲಿ ಬಂದ ನಕಾರ ಚಾಮರಾಜನಗರದ ಕೆಲವು ಒಳನುಡಿಗಳಲ್ಲಿ ಣಕಾರವಾಗಿದೆ. ಇವೆರಡರಲ್ಲೂ ನ-ಣಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ ಎಂಬುದನ್ನು ಗಮನಿಸಬಹುದು.

ಬರಹ ಕನ್ನಡ ಬೆಣ್ಣೆ

ಬರಹ ಕನ್ನಡ ನಿನ್ನೆ

ಹಾಲಕ್ಕಿ ಕನ್ನಡ ಬೆನ್ನೆ ಕನ್ನು

ಚಾಮರಾಜನಗರದ ಉಪ್ಪಲಿಗರ ಕನ್ನಡ

Eke →

5.2.4 ತಡೆಯುಲಿಗಳ ಮೊದಲು ಬಂದ ಮೂಗುಲಿಗಳು

ಹೆಚ್ಚಿನೆಡೆಗಳಲ್ಲೂ ತಡೆಯುಲಿಗಳ ಮೊದಲು ಬಂದ ಮೂಗುಲಿಗಳು ಕನ್ನಡದಲ್ಲಿ ಬದಲಾಗದೆ ಉಳಿದಿವೆ. ತೆಂಕ, ತೆಂಗು; ಕಂತೆ, ಅಂದ, ತೊಂದರೆ; ಅಂಚು, ಮಂಜು; ಅಂಟು, ನೆಂಟ, ಹಿಂಡು; ತಂಪು, ತುಂಬು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

ಈ ಪದಗಳಲ್ಲಿ ತಡೆಯುಲಿಗಳ ಮೊದಲು ಕಾಣಿಸುವ ಸೊನ್ನೆಗೆ ಮೂಲ ದ್ರಾವಿಡದಲ್ಲಿದ್ದ ಹಾಗೆ ಆ ತಡೆಯುಲಿಗಳ ಜಾಗದಲ್ಲೇನೇ ಉಂಟಾಗುವ ಮೂಗುಲಿಗಳ ಉಚ್ಚಾರಣೆ ಕನ್ನಡದಲ್ಲೂ ಇದೆ. ಈ ಉಚ್ಚಾರಣೆಯನ್ನು ಸರಿ ಯಾಗಿ ಸೂಚಿಸಬೇಕಿದ್ದಲ್ಲಿ ಅವನ್ನು ತೆಙ್ಕ, ತೆಙ್ಗು; ಕನ್ತೆ, ಅನ್ದ, ತೊನ್ದರೆ; ಅಞ್ಚು, ಮಞ್ಜು; ಅಣ್ಟು, ನೆಣ್ಟ, ಹಿಣ್ಡು; ತಮ್ಪು, ತುಮ್ಬು ಎಂಬುದಾಗಿ ಬರೆಯಬೇಕು.
ಕನ್ನಡ ಬರಹದಲ್ಲಿ

ಮೊದಲು ಬರುವ ಮೂಗುಲಿಗಳನ್ನು ಆ ರೀತಿ ಬರೆಯುವ ಬದಲು, ಸೊನ್ನೆಯ (ಅನುಸ್ವಾರದ) ಮೂಲಕ ಸೂಚಿಸುವ ಕ್ರಮ ಬಳಕೆಯಲ್ಲಿದೆ. ಆದರೆ ಇದು ಕನ್ನಡ ಬರಹದಲ್ಲಿ ಬಳಕೆಯಾಗುವ ಲಿಪಿಯ ಒಂದು ವಿಶೇಶ ಗುಣ ಮಾತ್ರ. ಉಚ್ಚಾರಣೆಯಲ್ಲಿ ಇಂತಹ ಪದಗಳಲ್ಲೆಲ್ಲ ಬೇರೆ ಬೇರೆ ಮೂಗುಲಿಗಳೇ ಕಾಣಿಸುತ್ತವೆ.

ತಡೆಯುಲಿಗಳ

ತಡೆಯುಲಿಗಳ

ಮೊದಲು ಬಂದ

ಚರಿತ್ರೆಯಲ್ಲಿ ಒಳಗಾಗಿವೆ.

ಕೆಳಗೆ ವಿವರಿಸಿದಂತಹ

ಮೂಗುಲಿಗಳು

ಕನ್ನಡದ ಕೆಲವು ಬದಲಾವಣೆಗಳಿಗೂ

(1) ಉದ್ದ ಸ್ವರದ ಅನಂತರ ಬಂದ ಮೂಗುಲಿ ಅದರ ಅನಂತರ ತಡೆಯುಲಿ ಬಂದಿರುವಲ್ಲೆಲ್ಲ ಬಿದ್ದುಹೋಗಿದೆ. ಈ ಬದಲಾವಣೆ ಹಳೆಗನ್ನಡ ಕ್ಕಿಂತಲೂ ಹಿಂದಿನ ಕಾಲದಲ್ಲೇನೇ ಮೊದಲಾಗಿದ್ದಿರಬೇಕು. ಯಾಕೆಂದರೆ, ಇಂತಹ ಹಲವು ಪದಗಳಲ್ಲಿ ತಮಿಳಿನಲ್ಲಿ ಕಾಣಿಸುವ ಮೂಗುಲಿ ಹಳೆಗನ್ನಡ ಪದಗಳಲ್ಲೂ ಕಾಣಿಸುವುದಿಲ್ಲ.

ಹಳೆಗನ್ನಡ ಬಾಗು ಬೀಗು ನೀಗು

ತಮಿಳು ವಾಙ್ಕು ವೀಙ್ಕು ನೀಙ್ಕು

ಹಳೆಗನ್ನಡ ಕೂದಲ್ ಮೂಱು ತೋಱು

ತಮಿಳು ಕೂನ್ತಲ್ ಮೂನ್ಱು ತೋನ್ಱು

ತೋಡು ಬೇಡು

ಪೂಞ್ಚು ತೋಣ್ಟು ವೇಣ್ಟು

ಬೇವು ಹಾವು

ವೇಮ್ಪು ಪಾಮ್ಪು ಓಮ್ಪು

ಈ ರೀತಿ ಮೂಗುಲಿ ಬಿದ್ದು ಹೋದ ಅನಂತರ ಉಳಿದ ತಡೆಯುಲಿಗಳಲ್ಲಿ ಕ, ಚ, ಟ ಮತ್ತು ತಗಳು ಕನ್ನಡದಲ್ಲಿ ಕೊರಳಿಸಿದ ತಡೆಯುಲಿಗಳಾಗಿ (ಗ, ಜ, ಡ ಮತ್ತು ದಗಳಾಗಿ) ಕಾಣಿಸಿಕೊಳ್ಳುತ್ತವೆ; ಆದರೆ ಱಕಾರ ಹೊಡೆಯುಲಿಯಾಗಿ (ಮತ್ತು ಅನಂತರ ರಕಾರವಾಗಿ) ಮತ್ತು ಪಕಾರ ವಕಾರವಾಗಿ ಬದಲಾಗಿವೆ ಎಂಬುದನ್ನು ಮೇಲಿನ ಉದಾಹರಣೆಗಳಿಂದ ತಿಳಿಯಬಹುದು.

ಇಂತಹ ಬೇರೆ ಕೆಲವು ಪದಗಳಲ್ಲಿದ್ದ ಮೂಗುಲಿ ಹೊಸಗನ್ನಡದಲ್ಲಿ ಬಿದ್ದುಹೋಗಿದೆಯಾದರೂ ಹಳೆಗನ್ನಡದಲ್ಲಿ ಉಳಿದುಕೊಂಡಿದೆ. ಈ ಮೂಗುಲಿ ಕರಾವಳಿಯ ಕನ್ನಡದ ಒಳನುಡಿಗಳಲ್ಲಿಯೂ ಉಳಿದುಕೊಂಡಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಹವ್ಯಕ ಪದಗಳಿಂದ ತಿಳಿಯಬಹುದು.

ಹಳೆಗನ್ನಡ ಮಾಂಜು ಸಾಂದು
ಸೇಂದು ‘- ನಾಂದು

ಹವ್ಯಕ ಕನ್ನಡ ಬರಹ ಕನ್ನಡ

ಮಾಜು ಸಾದು ಸೇದು ನಾದು ತೂಬು

ನಾಂದು
ತೂಂಬು

ಇದಲ್ಲದೆ, ಉದ್ದ ಸ್ವರಗಳ ಅನಂತರ ಮೂಗುಲಿ ಮತ್ತು ಇಮ್ಮಡಿ ತಡೆಯುಲಿಗಳು ಬಂದಿರುವಲ್ಲೂ, ಕನ್ನಡದ ಕೆಲವು ಪದಗಳಲ್ಲಿ ಮೂಗುಲಿ ಬಿದ್ದುಹೋಗಿದೆ; ಆದರೆ ಬೇರೆ ಕೆಲವು ಪದಗಳಲ್ಲಿ ಉಳಿದುಕೊಂಡಿದೆ. ಈ ರೀತಿ ಮೂಗುಲಿ ಉಳಿದುಕೊಂಡಿರುವ ಪದಗಳಲ್ಲೂ, ಅದು ಹೊಸಗನ್ನಡ ದಲ್ಲಿ ಬಿದ್ದುಹೋಗಿದೆ ಮತ್ತು ಹವ್ಯಕ ಕನ್ನಡದಲ್ಲಿ ಉಳಿದುಕೊಂಡಿದೆ.

ಇಂತಹ ಪದಗಳಲ್ಲಿ ಬಂದಿರುವ ಇಮ್ಮಡಿ ತಡೆಯುಲಿ ಕನ್ನಡದಲ್ಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕಾಣಿಸಿಕೊಳ್ಳುತ್ತದೆ. ತಮಿಳಿನಲ್ಲಿ (ಮತ್ತು ಮಲಯಾಳದಲ್ಲಿ) ಈ ತಡೆಯುಲಿ ಇಮ್ಮಡಿ ರೂಪದಲ್ಲೇ ಉಳಿದಿದೆಯಾದರೂ, ಅದರ ಮೊದಲಿಗಿದ್ದ ಮೂಗುಲಿ ಬಿದ್ದು ಹೋಗಿದೆ (4.5 ನೋಡಿ).

(ಕ) ಮೂಗುಲಿ ಹಳೆಗನ್ನಡದಲ್ಲೂ ಕಾಣಿಸದಿರುವ ಪದಗಳು

ಕನ್ನಡ
ಆಪು ‘ತಡೆ’’ ತಮಿಳು: ಆಪ್ಪು (<ಆನ್-ಪ್ಪು) ಓಟೆ ಹುಳಿ ಗೋಟು ‘ಒಣ’’ ತುಳು: ಗೋಂಟು (<ಕೋಣ್ಟ್ಟು) ತಮಿಳು: ತೋಟ್ಟಿ, ತುಳು: ದೋಂಟಿ

ತುಳು: ಓಂಟೆ ಪುಳಿ (<ಓಣ್ಟ್ಟಯ್) ತಮಿಳು: ಓತ್ತಿ, ತುಳು: ಓಂತಿ (<ಓನ್ತ್ತಿ)

(ಚ) ಹಳೆಗನ್ನಡದ ಮೂಗುಲಿ ಹೊಸಗನ್ನಡದಲ್ಲಿ ಬಿದ್ದು ಹೋಗಿರುವುದು

ಹಳೆಗನ್ನಡ ನೂಂಕು
ಬೇಂಟೆ
ಹೋಂತ

ಹೊಸಗನ್ನಡ ನೂಕು
ಬೇಟೆ
ಹೋತ

ತಮಿಳು
ನೂಕ್ಕು ವೇಟ್ಟಮ್ ಪೋತ್ತು ‘ಗಂಡು ಮಿಗ’’ ತೋಟ್ಟಮ್ ವೇಟ್ಟಮ್

ಇಂತಹ ಕೆಲವು ಪದಗಳಲ್ಲಿ ಬಂದಿರುವ ಮೂಗುಲಿ ಕರಾವಳಿಯ ಕೆಳಗಿನ

ಒಳನುಡಿಗಳಲ್ಲಿ ಉಳಿದಿದೆಯುಂಬುದನ್ನು ಹವ್ಯಕ ಉದಾಹರಣೆಗಳಲ್ಲಿ ಕಾಣಬಹುದು.

ಕನ್ನಡದ

ಹಳೆಗನ್ನಡ ಸಾಂಕು
ನೂಂಕು

ಹವ್ಯಕ ಕನ್ನಡ ಬರಹ ಕನ್ನಡ ಸಾಂಕು
ನೂಂಕು

ಸಾಕು ನೂಕು

ಪೀಂಕು
ಮೋಂಟು

ಪೀಕು ತಾಟು ‘ತಟ್ಟು’’ ಮೋಟು

ಈ ಎರಡು ರೀತಿಯ ಪದಗಳಲ್ಲೂ ಉದ್ದ ಸ್ವರವನ್ನು ಗಿಡ್ಡ ಸ್ವರವಾಗಿ ಬದಲಾಯಿಸಿ, ಅದರ ಅನಂತರ ಬಂದಿರುವ ಮೂಗುಲಿಯನ್ನು ಉಳಿಸಿ ಕೊಂಡಿರುವ ಕೆಲವು ಪದಗಳೂ ಕನ್ನಡದಲ್ಲಿವೆ.

(ಕ) ಮೂಗುಲಿಯ ಅನಂತರ ಒತ್ತೆ ತಡೆಯುಲಿ ಬಂದಿರುವಲ್ಲಿ

ಉದ್ದಸ್ವರ ತೂಂಬು, ತೂಬು ಗೋಜು ಈಡು ‘ಸೇರಿಕೆ’’

ಗಿಡ್ಡಸ್ವರ ತುಂಬು

(ಚ) ಮೂಗುಲಿಯ ಅನಂತರ ಇಮ್ಮಡಿ ತಡೆಯುಲಿ ಬಂದಿರುವಲ್ಲಿ

ಉದ್ದಸ್ವರ ಸೋಂಕು, ಸೋಕು ತೇಂಕು, ತೇಕು
ಗೂಂಟ, ಗೂಟ
ಬೇಂಟ, ಬೇಟ

ಗಿಡ್ಡಸ್ವರ ಸೊಂಕು ತೆಂಕು ‘ತೇಲು’’

(2) ಎರಡು ಗಿಡ್ಡ ಸ್ವರಗಳ ಅನಂತರ ಮೂಗುಲಿ ಮತ್ತು ಪದಗಳಲ್ಲಿ

ತಡೆಯುಲಿಗಳು ಒಟ್ಟಿಗೆ ಬಂದಿರುವಲ್ಲೂ ಕಾಣಿಸಿದಂತಹದೇ ಬದಲಾವಣೆ ಕನ್ನಡದಲ್ಲಿ ನಡೆದಿದೆ.

ಮೇಲಿನ

ಹಳೆಗನ್ನಡದಲ್ಲೇನೇ ಇಂತಹ ಪದಗಳಲ್ಲಿ ಬರುವ ಮೂಗುಲಿ ಬಿದ್ದು ಕಾಣಬಹುದು. ಕೆಳಗಿನ ಉದಾಹರಣೆಗಳಲ್ಲಿ ಹೋಗಿರುವುದನ್ನು ಮೂಗುಲಿಯ ಅನಂತರದ ಒತ್ತೆ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಮತ್ತು ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕನ್ನಡದಲ್ಲಿ ಬದಲಾಗಿದೆ. ಇದಕ್ಕೆ ಬದಲು, ತಮಿಳಿನಲ್ಲಿ ಒತ್ತೆ ತಡೆಯುಲಿ ಮತ್ತು ಇಮ್ಮಡಿ ತಡೆಯುಲಿಗಳು ಬದಲಾಗದೆ ಉಳಿದಿದ್ದು, ಇಮ್ಮಡಿ ತಡೆಯುಲಿಯ ಮೊದಲು ಬಂದಿದ್ದ ಮೂಗುಲಿ (ಚ) ಬಿದ್ದು ಹೋಗಿದೆ.

ತಡೆಯುಲಿ

(ಕ) ಮೂಗುಲಿ ಮತ್ತು ಒತ್ತೆ ತಡೆಯುಲಿ ಬಂದಿರುವಲ್ಲಿ

ಕನ್ನಡ
ಬೆಳಗು
ಮೊೞಗು ಕವುದಿ
ಕಿಲುಬು
ಅಲುಬು

ತಮಿಳು
ವಿಳಙ್ಕು
ಮುೞಙ್ಕು ಕವನ್ತಿ ಚಿಲುಮ್ಪು ಅಲಮ್ಪು

(ಚ) ಮೂಗುಲಿ ಮತ್ತು ಇಮ್ಮಡಿ ತಡೆಯುಲಿ ಬಂದಿರುವಲ್ಲಿ

ತಮಿಳು

ಕನ್ನಡ
ಅಮುಕು ‘ಒತ್ತು’’ ಅಲಕು ‘ಅಲುಗಿಸು’’ ಅಲಕ್ಕು (<ಅಲನ್ಕ್ಕು) ನುಱುಕು ‘ಜಜ್ಜು’ ನುಱುಕ್ಕು (<ನುಱುನ್ಕ್ಕು)

ಅಮುಕ್ಕು (<*ಅಮುನ್ಕ್ಕು)

ಹಿದುಕು ‘ತಿಕ್ಕು’

ಪಿತುಕ್ಕು (<*ಪಿತುನ್ಕ್ಕು)

ಬೇರೆ ಕೆಲವು ಪದಗಳಲ್ಲಿ ಈ ಮೂಗುಲಿ ಹಳೆಗನ್ನಡದಲ್ಲಿ ಮತ್ತು ಕರಾವಳಿಯ ಒಳನುಡಿಗಳಲ್ಲಿ ಉಳಿದುಕೊಂಡಿದೆಯಾದರೂ ಹೊಸಗನ್ನಡ ದಲ್ಲಿ ಬಿದ್ದುಹೋಗಿದೆ.

ಹಳೆಗನ್ನಡ ಮರಂಗಳ್ ಅಲುಂಬು ಕಿಲುಂಬು

ಕಲಂಕು
ಅವುಂಕು ಮುರುಂಟು ಸುರುಂಟು

ಹವ್ಯಕ ಕನ್ನಡ ಬರಹ ಕನ್ನಡ ಮರಂಗೊ ಅಲುಂಬು ಕಿಲುಂಬು

ಮರಗಳು ಅಲುಬು ಕಿಲುಬು

ಕಲಂಕು
ಅವುಂಕು ಮುರುಂಟು ಸುರುಂಟು

ಕಲಕು ಅವುಕು (ಅಮುಕು) ಮುರುಟು ಸುರುಟು

ಇಂತಹ ಪದಗಳಲ್ಲಿ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರ ಬಂದಿದೆಯಾದರೆ, ಹಳೆಗನ್ನಡದಲ್ಲೇನೇ ಎರಡನೆಯ ಗಿಡ್ಡ ಸ್ವರ ಬಿದ್ದು ಹೋಗಿರುವುದು ಕಾಣಿಸುತ್ತದೆ; ಇವುಗಳಲ್ಲೂ ಎರಡನೆಯ ಸ್ವರದ ಅನಂತರ ಬಂದಿದ್ದ ಮೂಗುಲಿ ಬಿದ್ದು ಹೋಗಿ, ಅದರ ಅನಂತರ ಬಂದಿದ್ದ ತಡೆಯುಲಿ ರಕಾರದೊಂದಿಗೆ (ಇಲ್ಲವೇ ೞಕಾರದೊಂದಿಗೆ) ಸೇರಿ ಇಮ್ಮಡಿ ತಡೆಯುಲಿಯಾಗುತ್ತದೆ (5.2.5 ನೋಡಿ).

ಕನ್ನಡ
ಕವ್ರು, ಕಬ್ರು, ಕಬ್ಬು ಕುಗ್ರು, ಕುಗ್ಗು
ಸುಕ್ರು, ಸುಕ್ಕು
ತಿದ್ರು, ತಿದ್ದು

ತಮಿಳು ಕರುಮ್ಪು ಕುರಙ್ಕು ಚುರುಕ್ಕು (<*ಚುರುನ್ಕ್ಕು) ತಿರುನ್ತು

ಮದ್ರು, ಮದ್ದು
ಕುಗ್ರು, ಕುಗ್ಗು
ಬಿದ್ರು, ಬಿದ್ದು
ಪದ್ರು, ಹದ್ದು

ಮರುನ್ತು ಕುರಙ್ಕು ವಿರುನ್ತು ’‘ಅವುತಣ’’ ಪರುನ್ತು

(ಚ) ಗೞ್ದ, ಗದ್ರೆ, ಗದ್ದೆ ಪುೞಿ್ಗ, ಪುಗ್ಗಿ ಕಿೞ್ಗು, ಕಿಗ್ರು ಉದ್ರು, ಉದ್ದು

ಕೞನಿ (ಕೞನ್ತಯ್) ಪುೞುಙ್ಕು ಕಿೞಕ್ಕು (ಕಿೞನ್ಕು, *ಕಿೞನ್ಕ್ಕು) ಉೞುನ್ತು

ಈ ಬದಲಾವಣೆಗೆ ಒಳಗಾಗದ ಪದಗಳೂ ಹಳೆಗನ್ನಡದಲ್ಲಿವೆ. ಎಂದರೆ, ಇದೊಂದು ಅನಿಯಮಿತ ಬದಲಾವಣೆಯ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ, ಕೆಳಗಿನ ಪದಗಳನ್ನು ಗಮನಿಸಬಹುದು.

ಕನ್ನಡ
ಕುರುಂಬೆ ಸೊರಗು ಮೊೞಗು ಮುೞುಗು

ತಮಿಳು ಕುರುಮ್ಪಯ್ ಚುರುಙ್ಕು ಮುೞಙ್ಕು ಮುೞುಙ್ಕು

(3) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿರುವ ಮೂಗುಲಿ ಮತ್ತು ಕೊರಳಿಸದ ತಡೆಯುಲಿಗಳ ಸೇರಿಕೆ ಬಡಗ ಕನ್ನಡದಲ್ಲಿ ಇಮ್ಮಡಿ ತಡೆಯುಲಿಯಾಗಿ ಹಲವು ಪದಗಳಲ್ಲಿ ಬದಲಾಗಿರುವುದನ್ನು ಕಾಣಬಹುದು.

ಬರಹ ಕನ್ನಡ ಕಂಕುಳು ಹಂಚು
ಮಿಂಚು

ಬಡಗ ಕನ್ನಡ ತೆಕ್ಕು ಕಕ್ಕುವೆ ಹಚ್ಚು ಮಿಚ್ಚು

ನಂಟರು

ನಟ್ಟರು ಸತ್ತೆ

ಪದಗಳಲ್ಲಿ

Eke →

5.2.5 ಇತರ ವ್ಯಂಜನಗಳೊಂದಿಗೆ ಬಂದ ಮೂಗುಲಿಗಳು

ನೇರವಾಗಿ ಮೂಗುಲಿಗಳು ಮೂಲದ್ರಾವಿಡ ತಡೆಯುಲಿಗಳೊಂದಿಗೆ ಮಾತ್ರ ಬರಬಲ್ಲುವಾಗಿದ್ದುವಲ್ಲದೆ ಇತರ ವ್ಯಂಜನಗಳೊಂದಿಗೆ ಬರುತ್ತಿರಲಿಲ್ಲವೆಂದು ಕಲ್ಪಿಸಲಾಗಿದೆ. ಮೂಗುಲಿಗಳಲ್ಲಿ ಕೊನೆಗೊಳ್ಳುವ ಬೇರು ಇಲ್ಲವೇ ಪದಗಳ ಅನಂತರ ಇತರ ವ್ಯಂಜನಗಳಲ್ಲಿ ಮೊದಲಾಗುವ ಒಟ್ಟು ಇಲ್ಲವೇ ಪದ ಬಂದಾಗ ಅವುಗಳ ನಡುವೆ ಒಂದು ಸ್ವರ ಸೇರಿಕೊಳ್ಳುವುದೇ ಇದಕ್ಕೆ ಕಾರಣ.

ಆದರೆ, ಕನ್ನಡದಲ್ಲಿ ಈ ಸ್ವರ ಕೆಲವು ಸನ್ನಿವೇಶಗಳಲ್ಲಿ ಬಿದ್ದು ಹೋಗಿರುವುದನ್ನು ಕಾಣಬಹುದು. ಉದಾಹರಣೆಗಾಗಿ, ಹಳೆಗನ್ನಡದ ಒರ್ಮೆ ‘ಒಮ್ಮೆ’ (ತಮಿಳು: ಒರುಮಯ್) ಪದದಲ್ಲಿ ರಕಾರದ ಅನಂತರ ಬಂದಿದ್ದ ಉಕಾರ ಬಿದ್ದುಹೋಗಿದೆ.

(1) ಇಂತಹ ಹೆಚ್ಚಿನ ಪದಗಳಲ್ಲೂ ಮೂಗುಲಿ ಮತ್ತು ಇತರ ಮೂಗುಲಿಯಾಗಿರುವುದನ್ನು

ವ್ಯಂಜನಗಳು ಒಟ್ಟುಸೇರಿ ಇಮ್ಮಡಿ ಕಾಣಬಹುದು.

(2) ಕನ್ನಡದ ಅಯ್ದು (ತಮಿಳು: ಅಯ್ನ್ತು) ಪದದಲ್ಲಿ ಯಕಾರ

ಮತ್ತು ತಕಾರಗಳ ನಡುವೆ ಬಂದಿದ್ದ ನಕಾರ ಬಿದ್ದುಹೋಗಿದೆ.

(3) ಮಕಾರ ವಕಾರವಾಗುವಂತಹ ಸೇರಿಕೆಯ ಬದಲಾವಣೆ ಹಳೆ ಗನ್ನಡದಲ್ಲಿ ಲಕಾರದ ಅನಂತರವೂ ನಡೆದಿದೆ (ಮೆಲ್ + ಮಾತು > ಮೆಲ್ವಾತು).

Eke →

5.2.6 ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು

ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು ಹಳೆಗನ್ನಡದಲ್ಲಿ ಹಾಗೆಯೇ ಉಳಿದಿದ್ದುವು, ಆದರೆ ಮುಂದೆ ಉಕಾರವೊಂದು ಸೇರಿ ಅವು ಸ್ವರಗಳ ನಡುವಿನ ಮೂಗುಲಿಗಳಾಗಿವೆ.

ಹೊಸಗನ್ನಡದಲ್ಲಿ ಅವುಗಳ

(1) ಉದ್ದ ಸ್ವರದ ಅನಂತರ ಈ ರೀತಿ ಉಕಾರ ಸೇರಿದಾಗ ಣಕಾರ- ನಕಾರಗಳು ಬದಲಾಗದೆ ಉಳಿಯುತ್ತವೆ. ಆದರೆ ಮಕಾರ ವಕಾರವಾಗಿ ಬದ ಲಾಗುತ್ತದೆ.

ಹಳೆಗನ್ನಡ ನೀನ್
ಮೀನ್

ನಾಮ್
ನೀಮ್

ಹೊಸಗನ್ನಡ ನೀನು ಮೀನು

ನಾವು ನೀವು

(2) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಣಕಾರ- ಕೊನೆಯವಾಗಿದ್ದಲ್ಲಿ ಅವುಗಳ ಅನಂತರ

ನಕಾರಗಳು ಉಚ್ಚಾರಣೆಯ ಉಕಾರ ಸೇರಿದಾಗ ಇಮ್ಮಡಿ ರೂಪಕ್ಕೆ ಬದಲಾಗಿವೆ.

ಪದಗಳ

ಹಳೆಗನ್ನಡ

ಹೊಸಗನ್ನಡ ಹಣ್ಣು ಹೆಣ್ಣು

ತಿನ್ನು

ಪೊನ್
ಬೆನ್

ಹೊನ್ನು ಬೆನ್ನು ಎನ್ನು

(3) ಆದರೆ ಇತರ ಗಿಡ್ಡ ಸ್ವರಗಳ ಅನಂತರ ನಕಾರ ಕೆಲವು ಪದಗಳಲ್ಲಿ ಬದಲಾಗದೆ ಉಳಿದಿದೆ ಮತ್ತು ಬೇರೆ ಕೆಲವು ಪದಗಳಲ್ಲಿ (ಪದರೂಪಗಳಲ್ಲಿ) ಬಿದ್ದುಹೋಗಿದೆ (2.4.2 ನೋಡಿ).

ಹಳೆಗನ್ನಡ ಅವನ್
ಬಂದೆನ್

ಹೊಸಗನ್ನಡ ಅವನು

Eke →

5.3 ಹೊಡೆಯುಲಿ ಮತ್ತು ಪಕ್ಕದುಲಿಗಳು

ಮೂಲದ್ರಾವಿಡದಲ್ಲಿ ರಕಾರವೆಂಬ ಒಂದು ಹೊಡೆಯುಲಿಯೂ ಲಕಾರ ಮತ್ತು ಳಕಾರಗಳೆಂಬ ಎರಡು ಪಕ್ಕದುಲಿಗಳೂ (ಉಸಿರನ್ನು ನಾಲಿಗೆಯ ಪಕ್ಕದಲ್ಲಿ ಬಿಡುವುದರ ವ್ಯಂಜನಗಳೂ) ಬಳಕೆಯಲ್ಲಿದ್ದುವು. ಇವು ಮೂರೂ ಪದಗಳ ನಡುವೆ ಮತ್ತು ಕೊನೆಯಲ್ಲಿ ಮಾತ್ರವೇ ಬರಬಲ್ಲುವಾಗಿದ್ದುವು.

ಮೂಲಕ ಸಿದ್ದವಾಗುವ

ಲಕಾರ ಮತ್ತು ಳಕಾರಗಳು ಸ್ವರಗಳ ನಡುವೆ ಒತ್ತೆ ರೂಪದಲ್ಲಿ ಮಾತ್ರ ವಲ್ಲದೆ ಇಮ್ಮಡಿ ರೂಪದಲ್ಲೂ ಬರಬಲ್ಲುವಾಗಿದ್ದುವು (ಇಲಿ, ಹುಲಿ, ಅಲ್್ಲ, ನೆಲ್ಲಿ; ಎಳತು, ಅಳಿಯ, ಪಿಳ್ಳೆ, ಕಳ್ಳ); ಆದರೆ ರಕಾರ ಒತ್ತೆ ರೂಪದಲ್ಲಿ ಮಾತ್ರ ಬರಬಲ್ಲುದಾಗಿತ್ತು (ಮರ, ಕರಿ).

Eke →

5.3.1 ಲಕಾರದ ಬದಲಾವಣೆಗಳು

ಹೆಚ್ಚಿನ ಪದಗಳಲ್ಲೂ ಮೂಲದ್ರಾವಿಡದ ಲಕಾರ ಕನ್ನಡದಲ್ಲಿ ಬದಲಾಗದೆ ಉಳಿದುಕೊಂಡಿದೆ. ಇಲಿ, ತಲೆ, ಕಾಲು, ಕಲ್ ‘ಕಲ್ಲು’, ಪಾಲ್ ‘ಹಾಲು’, ನೆಲ್ಲಿಕಾಯಿ ಮೊದಲಾದ ಉದಾಹರಣೆಗಳನ್ನಾಗಿ ಕೊಡಬಹುದು.

ಪದಗಳನ್ನು

(1) ಲಕಾರದ ಅನಂತರ ನಕಾರ ಮತ್ತು ತಕಾರಗಳು ಬಂದಿರುವಲ್ಲಿ ಲಕಾರ ಬಿದ್ದು ಹೋಗಿ ತಕಾರ ಱಕಾರವಾಗುತ್ತದೆ ಎಂಬ ಸೇರಿಕೆಯ ನಿಯಮ ಮೂಲದ್ರಾವಿಡದಲ್ಲಿತ್ತು. ಈ ಱಕಾರ ಕನ್ನಡದಲ್ಲಿ ದಕಾರವಾಗಿ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗಾಗಿ, ಲಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಹಿಂದಿನ ಸಮಯವನ್ನು ಸೂಚಿಸುವ ನ್್ತ ಒಟ್ಟು ಬಂದಾಗ,
ಲಕಾರ ಬಿದ್ದು ಱಕಾರವಾಗುತ್ತದೆ ಕನ್ನಡದಲ್ಲಿ ಈ ಱಕಾರ ದಕಾರವಾಗಿ ಕಾಣಿಸಿಕೊಳ್ಳುತ್ತದೆ.

ಹೋಗುತ್ತದೆ

ನ್್ತ ಒಟ್ಟಿನ

ನೋಡಿ).

ಮತ್ತು

ಕೊಲ್
ಸಲ್

ನಿಂದು (ತಮಿಳು: ನಿನ್ಱು) ಕೊಂದು (ತಮಿಳು: ಕೊನ್ಱು) ಸಂದು (ತಮಿಳು: ಚೆನ್ಱು)

(2) ರಕಾರ ಇಲ್ಲವೇ ಱಕಾರದ ಅನಂತರ ಬಂದ ಹಳೆಗನ್ನಡದ

ಲಕಾರ ಹೊಸಗನ್ನಡದಲ್ಲಿ ಳಕಾರವಾಗಿ ಬದಲಾಗಿದೆ.

ಹಳೆಗನ್ನಡ ಬೆರಲ್
ಕೊರಲ್
ಪರಲ್

ನೇಱಲ್
ನೆಱಲ್

ಹೊಸಗನ್ನಡ ಬೆರಳು ಕೊರಳು ಒರಳು ಹರಳು

ನೇರಳೆ ನೆರಳು

Eke →

5.3.2 ಳಕಾರದ ಬದಲಾವಣೆಗಳು

ಹೆಚ್ಚಿನ ಪದಗಳಲ್ಲೂ ಮೂಲದ್ರಾವಿಡದ ಳಕಾರ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಅಳವು, ಅಳತೆ, ಎಳತು, ಚಳಿ, ಬೆಳಕು, ಒಳಿತು, ತಾಳು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

(1) ಆದರೆ ಬೇರೆ ಕೆಲವು ಪದಗಳಲ್ಲಿ ಮೂಲದ್ರಾವಿಡ ಳಕಾರ

ಅನಿಯಮಿತವಾಗಿ ಣಕಾರವಾಗಿದೆ.

ತಮಿಳು ಕುಳಮ್ ಕೇಳನ್ ನುಳಮ್ಪು ಪುಳಿ ಕುಳಮ್ಪು ‘ಗೊರಸು’’

ಕನ್ನಡ
ಕೊಳ, ಕೊಣ ಗೆಳೆಯ, ಗೆಣೆಯ ನೊಳ, ನೊಣ
ಹುಳಿ, ಹುಣಿಸೆ
ಕೊಳಗು, ಕೊಣಗು ಮಾಳ್, ಮಾಣ್ ‘ತಡೆ’’ ಮಾಳ್ ಅಳಂಬೆ, ಅಣಬೆ
ಅಳಾಂಪು (ಮಲಯಾಳ) ಗಾಳ, ಗಾಣ ‘ಕೊಕ್ಕೆ’’ ಕಾಳಮ್ (ಮಲಯಾಳ) ನೊಣೆ ‘ನುಂಗು’

ನೊಳ್

(2) ಳಕಾರದ ಅನಂತರ ಟಕಾರ (ಡಕಾರ) ಬಂದಿರುವಲ್ಲಿ ಳಕಾರ

ನಿಯಮಿತವಾಗಿ ಣಕಾರವಾಗಿರುವುದು ಕಂಡುಬರುತ್ತದೆ.

ಕನ್ನಡ
ಗಿಂಡು ‘ಚಿವುಟು’’ ಕುಳಿಕೆ, ಕೊಂಡಿ
ಕೋಳ್, ಕೊಂಡೆ ತೆಂಟು ‘ಗಾಳಿಸು’’

ತಮಿಳು

ಕಿಳ್ಳು ಕೊಳ್ ಕೋಳ್ ‘ಚಾಡಿ ಹೇಳು’’ ತೆಳಿ ‘ಚಿಮುಕಿಸು’’

(3) ಮೂಲದ್ರಾವಿಡದಲ್ಲೇನೇ ಳಕಾರದ ಅನಂತರ ತಕಾರ ಬಂದಾಗ ಳಕಾರ ಣಕಾರವಾಗುವ ಮತ್ತು ತಕಾರ ಟಕಾರವಾಗುವ ಸೇರಿಕೆಯ ನಿಯಮವೊಂದು ಬಳಕೆಯಲ್ಲಿದ್ದಿರಬೇಕು. ಇದಕ್ಕೆ ಉದಾಹರಣೆಯಾಗಿ ಕನ್ನಡದ ಕೊಳ್ ಕ್ರಿಯಾಪದಕ್ಕಿರುವ ಹಿಂದಿನ ಸಮಯದ ಕೊಂಡು ರೂಪವನ್ನು ಗಮನಿಸಬಹುದು.

(4) ಕನ್ನಡದ ಇವತ್ತಿನ ಕೆಲವು ಒಳನುಡಿಗಳಲ್ಲಿ ಲಕಾರ ಮತ್ತು ವ್ಯತ್ಯಾಸ ಇಲ್ಲವಾಗಿದೆ. ಉದಾಹರಣೆಗಾಗಿ, ಳಕಾರಗಳ ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಳಕಾರ ಲಕಾರವಾಗಿದೆ (ಆಚಾರ್ಯ

ನಡುವಿನ

ಬರಹ ಕನ್ನಡ ತೆಳು
ಹಳಬ
ಪೊಳ್ಳು
ಬೆಳ್ಳುಳ್ಳಿ
ಕೊಳಲು

ಹಾಲಕ್ಕಿ ಕನ್ನಡ ಹಲಬ
ಪೊಲ್ಲು ಬೆಲುಲಿ ಕೊಲ್ಲು

(5) ಬಡಗ ಕನ್ನಡದಲ್ಲಿ ಳಕಾರ ಬಿದ್ದುಹೋಗಿದೆ ಮತ್ತು ಅದರ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಟ್ಟುಸೇರಿದುದರಿಂದಾಗಿ
ಗಿಡ್ಡಸ್ವರವಿರುವಲ್ಲೂ ಉದ್ದಸ್ವರ ಕಾಣಿಸುತ್ತದೆ. ಈ ಳಕಾರ ಮೂಲದ್ರಾವಿಡ ೞಕಾರದಿಂದಲೂ ಳಕಾರದಿಂದ ಬಂದಿರಬಹುದು.

ಬಂದಿರಬಹುದು

ಇಲ್ಲವೇ

ಬರಹ ಕನ್ನಡ ಕಳ ‘ಕಣ’ ಕೀಳು
ದೂಳು

ಬಡಗ ಕನ್ನಡ

ಎಳೆ (ನೂಲಿನ)
ಜೋಳ

ಮುಳುಗು ಕೆಳಗೆ
ಎಳೆಕರು

ಮೂಗು ಕೀಯು

ಬೇರೆ ಕೆಲವು ಪದಗಳಲ್ಲಿ ಳಕಾರದ ಬದಲು ಯಕಾರ ಇಲ್ಲವೇ ವಕಾರ

ಬಂದಿರುವುದನ್ನು ಕಾಣಬಹುದು (ಬಾಲಕ್ರುಶ್ಣನ್ 1999).

ಬರಹ ಕನ್ನಡ ಸುಳಿ ’ ಹೊಳೆ ಹುಳಿ ’ ಮೊಳೆ ‘ಮೊಳಕೆ’’ ಬೀಳು
ಸಂಬಳ
ಕಂಕುಳು

ಬಡಗ ಕನ್ನಡ ಗುಯಿ ಸುಯಿ ಹೊಯೆ ಹುಯಿ ಮೊಯೆ ಬುಯ್ ಸಂಬುವ ಕಕ್ಕುವೆ

Eke →

5.3.3 ರಕಾರದ ಬದಲಾವಣೆಗಳು

(1) ಸ್ವರಗಳ ನಡುವಿನ ರಕಾರ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡುವುದರ ಮೂಲಕ ಇದನ್ನು ತಿಳಿಯಬಹುದು.

ಕನ್ನಡ
ಹರಳು
ಬಿರುದು
ಒರಳು

ತಮಿಳು ಪರಲ್ ವಿರುತು ಕಾರಮ್

(2) ಪದಗಳ ಕೊನೆಯಲ್ಲಿದ್ದ ರಕಾರವೂ ಕನ್ನಡದಲ್ಲಿ ಬದಲಾಗದೆ

ಉಳಿದಿದೆ (ಬೆಮರ್, ಉಸಿರ್, ಬರ್, ತರ್).

ಹೊಸಗನ್ನಡದಲ್ಲಿ ಇಂತಹ ಪದಗಳ ಅನಂತರ ಉಕಾರವೊಂದು ಸೇರಿಕೊಂಡಿದ್ದು, ಅದು ಸ್ವರಗಳ ನಡುವಿನ ರಕಾರವೇ ಆಗಿದೆ. ಇರ್-ಇರು, ಬರ್-ಬರು, ತರ್-ತರು, ತೊಡರ್-ತೊಡರು, ಕೊನರ್-ಕೊನರು, ತೀರ್-ತೀರು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

(3) ಬೇರುಗಳ ಕೊನೆಯಲ್ಲಿದ್ದ ರಕಾರ, ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ ಬಿದ್ದುಹೋದುದರಿಂದಾಗಿ, ಹಲವು ಪದಗಳಲ್ಲಿ ವ್ಯಂಜನದ ಮೊದಲು ಬರುವಂತಾಗಿದೆ. ಇಂತಹ ಪದಗಳಲ್ಲಿ ಅದು ಕನ್ನಡದಲ್ಲಿ ಎರಡು ರೀತಿಯ ಬದಲಾವಣೆಗಳಿಗೊಳಗಾಗಿದೆ. ಕೆಲವು ಸನ್ನಿವೇಶಗಳಲ್ಲಿ ಅದು ಬಿದ್ದು ಹೋಗಿದೆ ಮತ್ತು ಬೇರೆ ಕೆಲವು ಸನ್ನಿವೇಶಗಳಲ್ಲಿ ಅದು ಅದರ ಅನಂತರ ಬಂದಿದ್ದ ವ್ಯಂಜನದ ರೂಪವನ್ನೇ ಪಡೆದಿದೆ.

(ಕ) ಉದ್ದಸ್ವರದ ಅನಂತರ ಬಂದ ರಕಾರ ಹಳೆಗನ್ನಡದಲ್ಲಿ ಉಳಿದು ಕೊಂಡಿತ್ತು; ಆದರೆ ಹೊಸಗನ್ನಡದ ಕೆಲವು ಪದಗಳಲ್ಲಿ ಬಿದ್ದುಹೋಗಿದೆ. ಉದಾಹರಣೆಗಾಗಿ, ಹಳೆಗನ್ನಡದ ಬಾರ್ಚು ಪದ ಹೊಸಗನ್ನಡದಲ್ಲಿ ಬಾಚು ಎಂದಾಗಿದೆ. ಹೊಸಗನ್ನಡದ ಪಾಪ ಪದದಲ್ಲೂ ರಕಾರ ಬಿದ್ದುಹೋಗಿದೆ (ಪಾರ ‘ಚಿಕ್ಕ ಮಗು’).

ಆದರೆ ತೀರ್ಪು, ತೀರ್ಮಾನ, ಏರ್ಪಾಡು ಮೊದಲಾದ ಬೇರೆ ಕೆಲವು

ಪದಗಳಲ್ಲಿ ರಕಾರ ಹೊಸಗನ್ನಡದಲ್ಲೂ ಬಿದ್ದುಹೋಗದೆ ಉಳಿದಿದೆ.

ವ್ಯಂಜನದೊಡನೆ

(ಚ) ಗಿಡ್ಡಸ್ವರದ ಅನಂತರ ಬಂದ ರಕಾರ ಅದರ ಅನಂತರ ಬಂದಿದ್ದ ವ್ಯಂಜನ ಇಮ್ಮಡಿ ಸೇರಿಹೋಗಿ, ಆ ವ್ಯಂಜನವಾಗುವ ಹಾಗೆ ಮಾಡಿದೆ. ಈ ಬದಲಾವಣೆಯನ್ನು ತೋರಿಸುವ ಕಚ್ಚು ಶಾಸನದಲ್ಲೇನೇ ಕಾಣಸಿಗುತ್ತದೆ.

(<ಕರ್ಚು) ಪದ ಹತ್ತನೇ

ಶತಮಾನದ

ಹೊಸಗನ್ನಡ ಹಳೆಗನ್ನಡ ಬೆಕ್ಕು
ಬೆರ್ಕು
ಪೊದ್ದು
ಪೊರ್ದು
ಪೆರ್ಗಡೆ
ಹೆಗ್ಗಡೆ
ಪೆರ್ಚು, ಪೆಚ್ಚು ಹೆಚ್ಚು
ಬಿಚ್ಚು
ಬಿರ್ಚು
ಬೆಚ್ಚು
ಬೆರ್ಚು
ಹೆಮ್ಮೆ
ಪೆರ್ಮೆ
ಮೊಮ್ಮಗ ಗುಬ್ಬಿ

ತಮಿಳು ವೆರುಕು ಪೊರುತು ಪೆರ್ ‘ದೊಡ್ಡ’’ ಪೆರ್ ‘ದೊಡ್ಡ’ ವೆರು ‘ಹೆದರಿಕೆ’’ ಪೀರುಮಯ್ ಮರುಮಗನ್ ಕುರುವಿ

(ಟ) ಬಿದ್ದುಹೋಗಿರುವ ಸ್ವರದ ಅನಂತರ ಇಮ್ಮಡಿ ತಡೆಯುಲಿಯಿದ್ದ ಪದಗಳಲ್ಲಿ ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಬದ

ಲಾಗುತ್ತದೆ ಮತ್ತು ಅದರೊಂದಿಗೆ ರಕಾರ ಸೇರಿ ಹೊಸಗನ್ನಡದಲ್ಲಿ ಕೊರಳಿಸದ ಇಮ್ಮಡಿ ತಡೆಯುಲಿ ಉಳಿಯುವಂತೆ ಮಾಡುತ್ತದೆ.

ಹಳೆಗನ್ನಡ ಕರ್ಕು
ಸೊರ್ಕು

ಹೊಸಗನ್ನಡ ಕಕ್ಕು
ಸೊಕ್ಕು
ಪಪ್ಪು

ತಮಿಳು ಪರುತ್ತಿ ಕರುಕ್ಕು ಉರುಕ್ಕು ಚೆರುಕ್ಕು ಪರುಪ್ಪು

(ತ) ಬಿದ್ದು ಹೋಗಿರುವ ಸ್ವರದ ಅನಂತರ ಮೂಗುಲಿ ಮತ್ತು ಒತ್ತೆ ತಡೆಯುಲಿಗಳಿದ್ದ ಪದಗಳಲ್ಲಿ ಮೂಗುಲಿ ಬಿದ್ದುಹೋಗಿದೆ ಮತ್ತು ರಕಾರ ಬಾಕಿ ಉಳಿದಿದ್ದ ತಡೆಯುಲಿಯೊಂದಿಗೆ ಸೇರಿ ಆ ತಡೆಯುಲಿ ಇಮ್ಮಡಿ ಯಾಗುವಂತೆ ಮಾಡಿದೆ.

ಹೊಸಗನ್ನಡ

ತಮಿಳು ಹಳೆಗನ್ನಡ ಪರುನ್ತು ಪರ್ದು, ಪದ್ದು ಹದ್ದು
ಮರುನ್ತು ಮದ್ದು
ಮರ್ದು
ಪರಮ್ಪು ಹಬ್ಬು
ಪರ್ವು, ಪರ್ಬು ಕರುಮ್ಪು ಕಬ್ಬು
ಕರ್ವು, ಕರ್ಬು
ಮಗ್ಗುಲು ಮರುಙ್ಕು ಒಗ್ಗು ‘ಬಗ್ಗು’’ ಒರುಙ್ಕು ಕುರಙ್ಕು ಕುಗ್ಗು
ಕುರ್ಗು

ಹಳೆಗನ್ನಡದ ಸುರ್ಕು ‘ನೆರಿಗೆ ಕಟ್ಟು’ ಪದ ಹೊಸಗನ್ನಡದಲ್ಲಿ ಸುಕ್ಕು ಎಂದಾಗಿದೆ. ತಮಿಳಿನಲ್ಲಿ ಚುರುಕ್ಕು ಪದವಿದೆ. ಆದರೆ ಕನ್ನಡದ ಪದ ಮೂಲದ್ರಾವಿಡದ *ಚುರುನ್ಕ್ಕು ಎಂಬುದರಿಂದ ಬಂದಿರಬೇಕು.

ಕನ್ನಡದಲ್ಲಿ ಇದು ಮೊದಲಿಗೆ *ಸುರುಂಕು ಎಂದಾಗಿದ್ದು ಅನಂತರ ಎರಡನೆಯ ಉಕಾರ ಮತ್ತು ಮೂಗುಲಿ ಬಿದ್ದು ಹೋಗಿ ಸುರ್ಕು ಎಂದಾಗಿದೆ; ಅನಂತರ ರಕಾರದೊಂದಿಗೆ ಕಕಾರ ಸೇರಿ ಸುಕ್ಕು ಎಂದಾಗಿದೆ. ಈ ಎರಡು ರೀತಿಯ ಬದಲಾವಣೆಗಳನ್ನೂ ಮೂಲದ್ರಾವಿಡದ ರಕಾರ ಮಾತ್ರವಲ್ಲದೆ ಱಕಾರ ಇಲ್ಲವೇ ೞಕಾರದಿಂದ ಬಂದ ರಕಾರವೂ ತೋರಿಸು ತ್ತದೆ. ಇದಕ್ಕೆ ಕಾರಣವೇನೆಂದರೆ, ಮೇಲಿನ ಎರಡು ಬದಲಾವಣೆಗಳು ಕನ್ನಡದಲ್ಲಿ ಱಕಾರ (4.3.4 ನೋಡಿ) ಮತ್ತು ೞಕಾರಗಳು (5.4.3 ನೋಡಿ) ರಕಾರವಾಗುವ ಬದಲಾವಣೆಯ ಅನಂತರ ನಡೆದಿರಬೇಕು.

(ಕ) ಉದ್ದಸ್ವರದ ಅನಂತರ ಱಕಾರ ಬಿದ್ದುಹೋಗಿರುವುದು

ಕನ್ನಡ
ತೋಱು, ತೋಚು ಗೀಱು, ಗೀಚು

ತಮಿಳು ತೋಱು

(ಚ) ಗಿಡ್ಡ ಸ್ವರದ ಅನಂತರ ಮೊದಲಿಗೆ ಱಕಾರ ರಕಾರವಾಗಿ, ಅನಂತರ ವ್ಯಂಜನದೊಂದಿಗೆ ಸೇರಿರುವುದು

ಕನ್ನಡ
ಗುಱುತು, ಗುರ್ತು, ಗೊತ್ತು ಕೊಱ, ಕೊರ್ಚು, ಕೊಚ್ಚು ಪೆಱ್, ಹೆಪ್ಪು
ತೆಱಪು, ತೆಪ್ಪಗೆ
ಕಿಱಿ, ಕಿರ್ದು, ಕಿತ್ತು ಹೆಕ್ಕು
ಮುಱುಕು, ಮುರ್ಕು, ಮುಕ್ಕು ಗೊಱಟೆ, ಕೊಟ್ಟೆ

ತಮಿಳು ಕುಱಿ ಕುಱಯ್ ಪೆಱುಕು ‘ಮೊಸರು’’ ತೆಱು ‘ತಡಮಾಡು’’ ಪೆಱುಕ್ಕು ಮುಱುಕ್ಕು ‘ಹೆಮ್ಮೆ’’ ಕುಱಟ್ಟ (ಮಲಯಾಳ)

(ತ) ಗಿಡ್ಡ ಸ್ವರದ ಅನಂತರ ೞಕಾರ ಮೊದಲಿಗೆ ರಕಾರವಾಗಿ ಅನಂತರ ವ್ಯಂಜನದೊಂದಿಗೆ ಸೇರಿರುವುದು

ಕನ್ನಡ

ತಮಿಳು ಕೊೞು ‘ದಪ್ಪ’ ತಾೞ್

ಕೊರ್ಬು, ಕೊಬ್ಬು
ಗೞ್ದ, ಗರ್ದೆ, ಗದ್ದೆ
ತೞ್ಗು, ತರ್ಗು, ತಗ್ಗು ತೞ್ಕ, ತರ್ಬು, ತಬ್ಬು ಬೞ್ದುಂಕು, ಬರ್ದುಂಕು, ಬದುಕು ವಾೞ್ ಪಿಳ್ಕೆ, ಹಿಕ್ಕೆ ಒೞ್ಕು, ಉಗ್ಗು ‘ಚೆಲ್ಲು’’
ಕೞ್ತು, ಕತ್ತು ಕೞ್ತ, ಕತ್ತೆ ಉರ್ದು, ಉದ್ದು
ಅಳ್ದು, ಅದ್ದು ಪುೞಿ್ಗ, ಪುಗ್ಗಿ, ಹುಗ್ಗಿ

ಪಿೞುಕ್ಕಯ್ ಒೞುಕು ಕೞುತ್ತು ಕೞುತಯ್ ಉೞುನ್ತು ಅೞುನ್ತು ಪುೞುಙ್ಕು

(4) ಗಿಡ್ಡ ಸ್ವರದ ಅನಂತರ ವ್ಯಂಜನಗಳ ಮೊದಲು ಬರುತ್ತಿದ್ದ ರಕಾರ ಆ ವ್ಯಂಜನಗಳ ರೂಪವನ್ನೇ ಪಡೆಯುತ್ತಿದ್ದ ಸಮಯದಲ್ಲಿ ರಕಾರ+ವ್ಯಂಜನಗಳಿಗೂ ವ್ಯಂಜನ+ವ್ಯಂಜನಗಳಿಗೂ ನಡುವಿದ್ದ ವ್ಯತ್ಯಾಸ ಇಲ್ಲವಾಗಿತ್ತಾದ ಕಾರಣ, ಮೂಲದ್ರಾವಿಡದಲ್ಲಿ ವ್ಯಂಜನ+ವ್ಯಂಜನಗಳಿದ್ದ ಕೆಲವು ಪದಗಳೂ ಕನ್ನಡದಲ್ಲಿ ರಕಾರ+ವ್ಯಂಜನಗಳಿರುವ ಪದಗಳಾಗಿ ಕಾಣಿಸಿಕೊಳ್ಳುತ್ತವೆ.

ಹಳೆಗನ್ನಡ ಪೊರ್ಕುೞ್, ಪೊಕ್ಕುೞ್
ಮರ್ಕಳ್, ಮಕ್ಕಳ್ ‘ಮಕ್ಕಳು’’ ಬರ್ಗು, ಬಗ್ಗು ‘ಕೂಗುವಿಕೆ’’

ತಮಿಳು ಪೊಕ್ಕುಳ್ ಮಕ್ಕಳ್ ವಕುಳಿ

ಪುರ್ಗು, ಪುಗ್ಗು ‘ಜಂಬ’’
ಕರ್ಚು, ಕಚ್ಚು ‘ಕಡಿ’’ ಒರ್ಪು, ಒಪ್ಪು ಕಿರ್ಚು, ಕಿಚ್ಚು

ಪುಕಲ್ವು ಕಚ್ಚು ಒಪ್ಪು

ಮೇಲಿನ ಪದಗಳಲ್ಲಿ ಕಾಣಿಸುವ ರಕಾರ ಮೂಲದ್ರಾವಿಡದ್ದೆಂದು

ಹೇಳಲು ಬೇರೆ ದ್ರಾವಿಡ ನುಡಿಗಳಲ್ಲಿ ಯಾವ ಆದಾರವೂ ಸಿಗುವುದಿಲ್ಲ.

(5) ಮೂರು ಉಲಿಕಂತೆಗಳಿರುವ ಪದಗಳಲ್ಲಿ ಎರಡನೆಯ ಸ್ವರ ಬಿದ್ದು ಹೋದುದರಿಂದಾಗಿ (3.4.1 ನೋಡಿ) ಕನ್ನಡದ ಕೆಲವು ಒಳನುಡಿಗಳಲ್ಲಿ ರಕಾರ+ವ್ಯಂಜನಗಳು ಮೂಡಿಬಂದಿದ್ದು, ಅವು ಬೇರೆ ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಈ ಬದಲಾವಣೆಗಳ ಸ್ವರೂಪವೇನು ಮತ್ತು ಅವು ಎಲ್ಲೆಲ್ಲಿ ಮತ್ತು ಯಾವ ಯಾವ ತಿಳಿಯಲು ಇನ್ನಶ್ಟು ನಡೆದಿವೆ ಎಂಬುದನ್ನು ಒಳನುಡಿಗಳಲ್ಲಿ ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ಇಂತಹ ಪದಗಳಲ್ಲಿ ರ್್ಡ ಎಂಬುದು ಬಳ್ಳಾರಿಯಲ್ಲಿ ಳ್್ಡ ಎಂದಾಗಿದೆ, ಗುಲ್ಬರ್ಗದಲ್ಲಿ ಡ್್ಡ ಎಂದಾಗಿದೆ, ಹಾಲಕ್ಕಿ ಕನ್ನಡದಲ್ಲಿ ಯ್ಡ ಎಂದಾಗಿದೆ, ಮತ್ತು ನಂಜನಗೂಡಿನಲ್ಲಿ ಣ್್ಡ ಎಂದಾಗಿದೆ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು (ಉಪಾದ್ಯಾಯ 1976).

ಬಳ್ಳಾರಿ ಗುಲ್ಬರ್ಗ ಹಾಲಕ್ಕಿ ನಂಜನಗೂಡು

ಬರಹ ಕುರುಡ ಕುಳ್ಡ ಕುಡ್ಡ ಕುಯ್ಡ ಕುಣ್ಡ
ಕರಡಿ ಕಳ್ಡಿ ಕಡ್ಡಿ ಕಯ್ಡ –‘ ಬುರುಡೆ ಬುಳ್ಡೆ ಬುಡ್ಡಿ –‘ ಬುಣ್ಡ ಹೊರಡು ವಳ್ಡು –‘ ಹೊಯ್ಡು ವಣ್ಡು

Eke →

5.4 ತಡೆಯಿಲ್ಲದ ವ್ಯಂಜನಗಳು

ಮೂಲದ್ರಾವಿಡದಲ್ಲಿ ಯಕಾರ, ವಕಾರ ಮತ್ತು ೞಕಾರಗಳೆಂಬ ಮೂರು ಮತ್ತು ತಡೆಯಿಲ್ಲದ

ವ್ಯಂಜನಗಳಿದ್ದುವು. ಇವುಗಳಲ್ಲಿ

ಯಕಾರ

ವಕಾರಗಳನ್ನು ‘ಅರೆಸ್ವರ’ಗಳೆಂದು ಪರಿಗಣಿಸಲು ಸಾದ್ಯವಿದೆಯಾದರೂ ಅವುಗಳ ಬಳಕೆ ಇತರ ವ್ಯಂಜನಗಳ ಬಳಕೆಯ ಹಾಗೆಯೇ ಇರುವ ಕಾರಣ ಅವನ್ನು ವ್ಯಂಜನಗಳೆಂದು ಪರಿಗಣಿಸುವುದೇ ಒಳ್ಳೆಯದು.

(1) ದ್ರಾವಿಡ ನುಡಿಗಳು ಬಳಸುವ ಲಿಪಿಗಳಲ್ಲಿ ಐ, ಔಗಳೆಂಬ ಎರಡು ಸ್ವರಗಳನ್ನು ಸೂಚಿಸಬಲ್ಲ ಸ್ವರ ಚಿಹ್ನೆಗಳಿವೆ. ಆದರೆ ಅಂತಹ ಸ್ವರಗಳ ಇರುವಿಕೆಯನ್ನು ಮೂಲದ್ರಾವಿಡದಲ್ಲಿ ಇಲ್ಲವೇ ಇವತ್ತಿನ ದ್ರಾವಿಡ ನುಡಿಗಳಲ್ಲಿ ಕಲ್ಪಿಸಿಕೊಳ್ಳಲು ಯಾವ ಆದಾರವೂ ಇಲ್ಲ (2.1.1 ನೋಡಿ). ನಿಜಕ್ಕೂ ಅವು ಅಕಾರದೊಂದಿಗೆ ಯಕಾರ ಮತ್ತು ವಕಾರಗಳು ಬಂದಿರುವ ಎರಡೆರಡು ಉಲಿಗಳ ಸೇರಿಕೆಗಳು ಮಾತ್ರ.

(2) ಮೂಲದ್ರಾವಿಡದ *ಅತ್, ಆ ‘ಅದು, ಆ’, *ಚತ್, ಚಾ ‘ಸಾಯು’, *ಉಣ್, ಊಣ್ ‘ಉಣ್ಣು’, *ತರ್, ತಾ ‘ಕೊಡು’ ಮೊದಲಾದ ಹತ್ತು-ಹನ್ನೆರಡು ಪದಗಳಲ್ಲಿ ಗಿಡ್ಡ-ಉದ್ದ ಸ್ವರವ್ಯತ್ಯಾಸ ಕಾಣಿಸುತ್ತಿದ್ದು, ಇದರ ಮೂಲವೇನೆಂಬುದನ್ನು ವಿವರಿಸಲು ಸಾದ್ಯವಾಗಿಲ್ಲ.

ಇಂತಹ ಸ್ವರವಿರುವಲ್ಲೆಲ್ಲ ಹಕಾರವೆಂಬ ಇನ್ನೊಂದು ತಡೆಯಿಲ್ಲದುಲಿ ಯೂ ಇದ್ದಿರಬೇಕೆಂದು ಕ್ರುಶ್ಣಮೂರ್ತಿ (1997, 2003) ವಾದಿಸಿದ್ದಾರೆ. ಈ ಹಕಾರವನ್ನು ಅವರು ‘ಲಾರಿಂಜಲ್’ (ಗಂಟಲಿನಲ್ಲಿ ಉಂಟಾಗುವ ವ್ಯಂಜನ) ಎಂಬುದಾಗಿ ಕರೆದಿದ್ದಾರೆ; ಹಳೆತಮಿಳಿನಲ್ಲಿ ಬಳಕೆಯಲ್ಲಿದ್ದ ‘ಆಯ್ದಮ್’ ಎಂಬ ವ್ಯಂಜನ ಇದೇ ಹಕಾರದ ಪಳೆಯಳಿಕೆಯಿರಬೇಕೆಂದೂ ಅವರು ವಾದಿಸಿದ್ದಾರೆ.

ಈ ವ್ಯಂಜನ ಯಕಾರ ಮತ್ತು ವಕಾರಗಳ ಹಾಗೆ ಒಂದು ತಡೆಯಿಲ್ಲದುಲಿಯಾಗಿದ್ದು ಬೇರುಗಳ ಕೊನೆಯ ವ್ಯಂಜನವಾಗಿ ಮಾತ್ರ ಬರುತ್ತಿದ್ದಿರಬೇಕೆಂದು ಅವರು ವಾದಿಸಿದ್ದಾರೆ. ಉದಾಹರಣೆಗಾಗಿ, ಕನ್ನಡದ ಅದು, ಇದು, ಉದು ಪದಗಳು ಮೂಲದ್ರಾವಿಡದಲ್ಲಿ *ಅಹ್-ತು, *ಇಹ್-ತು, *ಉಹ್-ತು ಎಂದಿದ್ದಿರಬೇಕೆಂದು ಅವರು ಸೂಚಿಸಿದ್ದಾರೆ.

ಈ ವ್ಯಂಜನದ ಅನಂತರ (ಕ) ಯಾವ ಒಟ್ಟೂ ಬಾರದಿದ್ದಲ್ಲಿ ಅದು ಅದರ ಮೊದಲು ಬಂದಿದ್ದ ಸ್ವರದೊಂದಿಗೆ ಸೇರಿ ಆ ಸ್ವರ ಉದ್ದವಾಗುವ ಹಾಗೆ ಮಾಡುತ್ತದೆ (ಆ ಮನೆ, ಈ ಮರ); (ಚ) ಕೊರಳಿಸಿದ ವ್ಯಂಜನ ಬಂದಿದೆಯಾದರೆ, ಲಾರಿಂಜಲ್) (ಹಕಾರ ಬಿದ್ದುಹೋಗುತ್ತದೆ (ಅದು, ಇದು, ಅವನು, ಇವನು); ಮತ್ತು (ಟ) ಕೊರಳಿಸದ ವ್ಯಂಜನ (ತಡೆಯುಲಿ) ಬಂದಿದೆಯಾದರೆ ಅದು (ಲಾರಿಂಜಲ್) ಬಿದ್ದುಹೋಗಿ, ತಡೆಯುಲಿ ಇಮ್ಮಡಿಯಾಗುತ್ತದೆ (ಅತ್ತ, ಇತ್ತ) - ಎಂಬುದಾಗಿ ಮೂಲ ದ್ರಾವಿಡಕ್ಕೆ ಕೆಲವು ನಿಯಮಗಳನ್ನೂ ಅವರು ಕಲ್ಪಿಸಿದ್ದಾರೆ.

ಇಲ್ಲವೇ

ಆದರೆ, ನಿಜಕ್ಕೂ ಈ ಕಲ್ಪಿತ ವ್ಯಂಜನದಿಂದ ಮೂಲದ್ರಾವಿಡದ ಕೆಲವೇ ಕೆಲವು ಪದಗಳಲ್ಲಿದ್ದ ಮೇಲಿನ ಉದ್ದ-ಗಿಡ್ಡ ಸ್ವರವ್ಯತ್ಯಾಸವನ್ನು ವಿವರಿಸು ವುದರಲ್ಲಿ ಸಹಾಯವೇನೂ ಸಿಗುವ ಹಾಗೆ ಕಾಣಿಸುವುದಿಲ್ಲವೆಂಬುದಾಗಿ ಸುಬ್ರಹ್ಮಣ್ಯಂ (ಬರಲಿದೆ) ವಾದಿಸಿದ್ದಾರೆ.

Eke →

5.4.1 ಪದಗಳ ಮೊದಲಿಗೆ ಬಂದ ತಡೆಯಿಲ್ಲದುಲಿಗಳು

ಯಕಾರ ಮತ್ತು ವಕಾರಗಳೆಂಬ ಎರಡು ತಡೆಯಿಲ್ಲದುಲಿಗಳು ಮಾತ್ರ ಮೂಲದ್ರಾವಿಡದಲ್ಲಿ ಪದಗಳ ಮೊದಲಿಗೆ ಬರಬಲ್ಲುವಾಗಿದ್ದುವು. ೞಕಾರ ವೆಂಬ ಮೂರನೆಯ ತಡೆಯಿಲ್ಲದುಲಿ ಪದಗಳ ನಡುವೆ ಮತ್ತು ಕೊನೆಯಲ್ಲಿ ಮಾತ್ರ ಬರಬಲ್ಲುದಾಗಿತ್ತು.

(1) ಯಕಾರ: ಪದಗಳ ಮೊದಲಿನ ಯಕಾರ ಮೂಲದ್ರಾವಿಡದಲ್ಲಿ ಆ ಎಂಬ ಸ್ವರದ ಮೊದಲು ಮಾತ್ರ ಬರುತ್ತಿದ್ದಿರಬೇಕೆಂಬುದು ಸದ್ಯದ ಕಲ್ಪನೆ ಯಾಗಿದೆ. ಕನ್ನಡದಲ್ಲಿ ಇದು ಬಿದ್ದುಹೋಗಿದೆಯುಂಬುದಕ್ಕೆ ಕೆಳಗಿನ ಪದಗಳನ್ನು ಉದಾಹರಣೆಯಾಗಿ ಕೊಡಬಹುದು. ಹಳೆಯ ತಮಿಳಿನಲ್ಲಿ ಮಾತ್ರ ಇದು ಬಿದ್ದು ಹೋಗದೆ ಉಳಿದಿದೆ.

ಕನ್ನಡ

ಹಳೆಯ ತಮಿಳು ಯಾನಯ್

ಆವನ್ ‘ಯಾರು’

ಯಾಳ್ ಯಾನ್ ಯಾಮಯ್ ಯಾವನ್

ಆದರೆ ಕನ್ನಡದ ಯಾರು, ಯಾಕೆ, ಯಾವ ಮೊದಲಾದ ಬೇರೆ ಕೆಲವು ಪದಗಳಲ್ಲಿ ಈ ಯಕಾರ ಬಿದ್ದುಹೋಗದೆ ಉಳಿದಿದೆ. ಇದಲ್ಲದೆ ಏನು, ಏಕೆ, ಏಡು ‘ವರ್ಶ’ ಮೊದಲಾದ ಬೇರೆ ಕೆಲವು ಪದಗಳಲ್ಲಿ ಯಕಾರ ಬಿದ್ದು ಹೋಗುವುದರೊಂದಿಗೆ ಅದರ ಅನಂತರ ಬಂದಿದ್ದ ಉದ್ದ ಆ ಸ್ವರ ಉದ್ದ ಏ ಸ್ವರವಾಗಿ ಬದಲಾಗಿದೆ ಮತ್ತು ಈ ಉದ್ದ ಏ ಸ್ವರ ಬೇರೆ ಕೆಲವು ಸನ್ನಿವೇಶಗಳಲ್ಲಿ (ಎಲ್ಲಿ, ಎಂದು, ಎತ್ತ, ಎಮಗೆ, ಎನ್ನ) ತನ್ನ ಉದ್ದವನ್ನು ಕಳೆದುಕೊಂಡು ಗಿಡ್ಡ ಎ ಸ್ವರವಾಗಿದೆ.

ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ಪದಗಳ ಮೊದಲಿಗೆ ಬಂದ ಎಕಾರ ಯ ಎಂಬುದಾಗಿ ಬದಲಾಗಿರುವುದರಿಂದ ಅವುಗಳಲ್ಲಿ ಪದಗಳ ಮೊದಲಿಗೆ ಯಕಾರ ಹೊಸದಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಾವು ಎರಡನೇ ಅದ್ಯಾಯದಲ್ಲಿ (2.2.3ರಲ್ಲಿ) ನೋಡಿರುವೆವು (ಎಡ > ಯಡ, ಎಲ್ಲ > ಯಲ್ಲ).

(2) ವಕಾರ: ಮೂಲದ್ರಾವಿಡದಲ್ಲಿ ಪದಗಳ ಮೊದಲಿಗಿದ್ದ ವಕಾರ ತುಟಿ ದುಂಡಗಿಲ್ಲದ ಸ್ವರಗಳ (ಇ, ಈ, ಎ, ಏ ಮತ್ತು ಅ, ಆ ಎಂಬವುಗಳ) ಮೊದಲಿಗೆ ಮಾತ್ರ ಬರಬಲ್ಲುದಾಗಿತ್ತು. ಇದು ಕನ್ನಡದಲ್ಲಿ ಬಕಾರವಾಗಿ ಬದಲಾಗಿದೆ.

ಶತಮಾನದಲ್ಲಿ

ಕನ್ನಡದ ಚರಿತ್ರೆಯಲ್ಲಿ ಈ ರೀತಿ ವಕಾರ ಬಕಾರವಾಗುವ ಬದಲಾವಣೆ ವಾದಿಸಲು ಆರು-ಏಳನೇ ಶಾಸನಗಳ ಅದಾರವಿದೆ. ಎಂಟರಿಂದ ಹತ್ತನೇ ಶತಮಾನದ ವರೆಗಿನ ಶಾಸನಗಳಲ್ಲಿ ಇಂತಹ ಹಲವು ಪದಗಳಿಗೆ ಬಕಾರವಿರುವ ರೂಪ ಮಾತ್ರವಲ್ಲದೆ ವಕಾರವಿರುವ ರೂಪವೂ ಕಾಣಿಸುತ್ತದೆ.

ಮೊದಲಾಗಿರಬೇಕೆಂದು

ಆದರೆ ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ನುಡಿಗಳಲ್ಲಿ ವಕಾರವಿರುವ ರೂಪಗಳು ಮಾತ್ರ ಇವೆ (ನರಸಿಂಹಯ್ಯ 1941, ಗಾಯ್

ಎಂಟು-ಹತ್ತನೇ ಶತಮಾನದ ಕನ್ನಡ ವಂದು, ಬಂದು
ವರೆ, ಬರೆ ವಿಟ್ಟ, ಬಿಟ್ಟ ವಿೞ್ದ, ಬಿೞ್ದ

ತಮಿಳು ವಂತು ವರಯ್

ವಕಾರದ ಬದಲು ಬಕಾರದ ಬಳಕೆ ಅನಂತರದ ಶತಮಾನಗಳಲ್ಲಿ ಹೆಚ್ಚಾಗುತ್ತಾ ಹೋಗಿ, ಪದಗಳ ಮೊದಲಿಗೆ ವಕಾರ ಇಲ್ಲವೇ ಇಲ್ಲವೆಂದು ಆಗುವುದನ್ನು ಕನ್ನಡದ ಶಾಸನಗಳಲ್ಲಿ ಕಾಣಬಹುದು.

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಪದಗಳ ಮೊದಲಿಗೆ ಕಾಣಿಸುವ ಬಕಾರಗಳಲ್ಲಿ ಹೆಚ್ಚಿನವೂ ಈ ರೀತಿ ಮೂಲದ್ರಾವಿಡ ವಕಾರದಿಂದಲೇ ಬಂದಿವೆಯುಂದು ಹೇಳಬಹುದು.

ಬರಹ ಕನ್ನಡ ಬಡಗು
ಬಾಗು
ಬೀಸು
ಬೆಳಕು
ಬೇಡು

ತಮಿಳು ವಟಕು ವರಯ್ ವಾಂಕು ವೀಚು ವಿಳಕ್ಕು ವೇಂಟು

ಆದರೆ, ಕೆಲವು ಪದಗಳಲ್ಲಿ ಅವು ಮೂಲದ್ರಾವಿಡದ ಪಕಾರದಿಂದಲೂ ಬಂದಿರಲು ಸಾದ್ಯ ಎಂಬುದಕ್ಕೆ ಕನ್ನಡದ ಕೆಳಗಿನ ಪದಗಳನ್ನು ಉದಾಹರಣೆ ಯಾಗಿ ಕೊಡಬಹುದು.

ಕನ್ನಡ
ಬಸಳೆ
ಬೀಡು
ಬೂಟಾಟಿಕೆ ಬೊಂಬೆ
ಬೊಕ್ಕೆ

ತಮಿಳು ಪಚಳಯ್ ಪಾನಯ್ ಪುಟ್ಟಿಲ್ ಪೂಟ್ಟಕಮ್ ಪೊಮ್ಮಯ್ ಪೊಕ್ಕಯ್

Eke →

5.4.2 ಪದಗಳ ನಡುವಿನ ಯಕಾರ ಮತ್ತು ವಕಾರಗಳು

(1) ಯಕಾರ: ಪದಗಳ ನಡುವಿನ ಯಕಾರ ಮೂಲದ್ರಾವಿಡದಲ್ಲೇನೇ ಹಲವು ಪದಗಳಲ್ಲಿ ಚಕಾರದೊಂದಿಗೆ ಸಂಬಂದವನ್ನು ತೋರಿಸುತ್ತಿದ್ದಿರ ಬೇಕೆಂದು ಕಲ್ಪಿಸಲಾಗಿದೆ. ಕನ್ನಡದಲ್ಲೂ ಕೆಲವು ಪದಗಳಿಗೆ ಯಕಾರವನ್ನು ತೋರಿಸುವ ರೂಪದೊಂದಿಗೆ ಸಕಾರವನ್ನು ತೋರಿಸುವ ರೂಪವೂ ಕಾಣಿಸುತ್ತಿದ್ದು, ಇದು ಮೂಲದ್ರಾವಿಡದಲ್ಲಿದ್ದ ಯ-ಚ ಸಂಬಂದದ ಪಳೆಯಳಿಕೆಯಿರಬೇಕು.

ಯಕಾರವಿರುವ ರೂಪ ಏಯ್ ‘ಹೊಡೆ’
ಒಯ್ ‘ಕೊಂಡುಹೋಗು’
ಕಯ್ ‘ಕಹಿ’ ಸಯ್ ‘ನಿಲ್ಲು’
ನಯ ‘ನುಣುಪು, ಮಿದು’
ಬಾಯು ‘ಬಾತುಕೊಳ್ಳು’

ಸಕಾರವಿರುವ ರೂಪ ಎಸೆ ‘ಹೊಡೆ’’ ಒಸಗೆ ‘ಸುದ್ದಿ ತಿಳಿಸುವಿಕೆ’’ ಕಸುರು ‘ಕಟುವಾದ’’ ಸಸನೆ ‘ಅಲುಗಾಡದೆ’’ ನಸೆ ‘ಮೆತ್ತಗೆ’’ ಬಾಸುೞಿ ‘ಬಾಸುಂಡೆ’’

ಬೇರೆಯೂ ಹಲವು ಪದಗಳಲ್ಲಿ ಕನ್ನಡದ ಸಕಾರ ತಮಿಳಿನ ಯಕಾರವಾಗಿ ಕಾಣಿಸುತ್ತದೆ. ಆದರೆ ಇಲ್ಲಿ ಕನ್ನಡ ಮೂಲದ್ರಾವಿಡದ

ಚಕಾರವನ್ನು (ಸಕಾರ ವಾಗಿ) ಉಳಿಸಿಕೊಂಡಿದ್ದು (4.3.2 ನೋಡಿ) ತಮಿಳು ಅದನ್ನು ಯಕಾರವಾಗಿ ಬದಲಾಯಿಸಿದೆ.

ಕನ್ನಡ
ಹೆಸರು
ಬಸಿಱು
ಬೆಸ ‘ಮಾಡುವಿಕೆ’’ ಹಾಸು

ತಮಿಳು ಪೆಯರ್ ವಯಿಱು ವಿಯಮ್ ‘ಅಪ್ಪಣೆ’’ ಪಾಯ್

(2) ವಕಾರ: ಪದಗಳ ನಡುವೆ ಕಾಣಿಸುವ ವಕಾರ ಹೆಚ್ಚಿನೆಡೆಗಳಲ್ಲೂ ಮೂಲದ್ರಾವಿಡದ ಪಕಾರ, ಮಕಾರ ಇಲ್ಲವೇ ಕಕಾರದಿಂದ ಬಂದಿರುವ ಹಾಗೆ ಕಾಣಿಸುತ್ತದೆ (4.3.1). ಇವುಗಳಲ್ಲಿ ಪಕಾರ ಮತ್ತು ವಕಾರಗಳ ನಡುವಿನ ಸಂಬಂದ ಮೂಲದ್ರಾವಿಡದಲ್ಲೇನೇ ಇದ್ದಿರಬೇಕು.

ಹಳೆಗನ್ನಡದ ಕಾಲದಲ್ಲಿ ಪಕಾರ, ಬಕಾರ ಮತ್ತು ಮಕಾರಗಳಲ್ಲಿ ಮೊದಲಾಗುವ ಪದಗಳು ಸ್ವರದಲ್ಲಿ ಮೊದಲಾಗುವ ಪದಗಳ ಅನಂತರ ಬಂದಾಗ, ಅವುಗಳ ಮೊದಲನೆಯ ವ್ಯಂಜನ ವಕಾರವಾಗುತ್ತದೆಯುಂಬ ಸೇರಿಕೆಯ ಕೆಲವು ಜೋಡುಪದಗಳಲ್ಲಿ ಈ ನಿಯಮದ ಪಳೆಯಳಿಕೆಯನ್ನು ಕಾಣಬಹುದು (4.3.1 ನೋಡಿ).

ನಿಯಮವೊಂದಿತ್ತು.

ಹೊಸಗನ್ನಡದಲ್ಲೂ

Eke →

5.4.3 ೞಕಾರದ ಬದಲಾವಣೆಗಳು

ಮೂಲದ್ರಾವಿಡದ ೞಕಾರ ಪದಗಳ ನಡುವೆ ಇಲ್ಲವೇ ಕೊನೆಯಲ್ಲಿ ಬರಬಲ್ಲುದಾಗಿತ್ತು. ಹಳೆಗನ್ನಡದ ಹೆಚ್ಚಿನ ಪದಗಳಲ್ಲೂ ಇದು ಬದಲಾಗದೆ ಉಳಿದಿದೆ. ಆದರೆ ಇವತ್ತಿನ ಬರಹ ಕನ್ನಡದಲ್ಲಿ ಎಲ್ಲೂ ಕಾಣಿಸುವುದಿಲ್ಲ.
ೞಕಾರ ಮತ್ತು ಳಕಾರಗಳ ನಡುವಿನ ವ್ಯತ್ಯಾಸದ ಮೂಲಕ ಅರ್ತ ವ್ಯತ್ಯಾಸವನ್ನು ಸೂಚಿಸುವ ಪದಜೋಡಿಗಳು ಹಳೆಗನ್ನಡದಲ್ಲಿ ಹಲವಿದ್ದು,

ಆ ಜೋಡಿಗಳೆಲ್ಲ ಇವತ್ತಿನ ಬರಹ ಕನ್ನಡದಲ್ಲಿ ಎರಡು ಅರ್ತ ಕೊಡುವ ಪದಗಳಾಗಿವೆ.

ಮೂಲದ್ರಾವಿಡದ ೞಕಾರ ಹಳೆಗನ್ನಡ ಹೊಸಗನ್ನಡ ಬೞಸು

ಉಳಿ ‘ಉಳಿಯು’’ ಉಳಿ ಎಳೆ ’‘ಎಳೆದಾಡು’’ ಎಳೆ ಬಳಸು ’’

ಮೂಲದ್ರಾವಿಡದ ಳಕಾರ ಹೊಸಗನ್ನಡ ಹಳೆಗನ್ನಡ ಉಳಿ ’‘ಕೆತ್ತುವ ಉಳಿ’ ಎಳೆ ‘ಎಳತು’’ ಬಳಸು ‘ನೇರವಲ್ಲದ’

ಬಳಸು

ಹೊಸಗನ್ನಡದಲ್ಲಿ ಮೇಲೆ ಕೊಟ್ಟಿರುವ ಉಳಿ, ಎಳೆ ಮತ್ತು ಬಳಸು ಪದಗಳಿಗೆ ಎರಡೆರಡು ಅರ್ತಗಳಿವೆ; ಆದರೆ ಹಳೆಗನ್ನಡದಲ್ಲಿ ಈ ಅರ್ತಗಳನ್ನು ಸೂಚಿಸಲು ಉೞಿ-ಉಳಿ, ಎೞ-ಎಳೆ ಮತ್ತು ಬೞಸು- ಬಳಸು ಎಂಬುದಾಗಿ ಎರಡೆರಡು ಪದಗಳಿದ್ದುವು ಎಂಬುದನ್ನು ಗಮನಿಸಬಹುದು.

ಹಳೆಗನ್ನಡದಲ್ಲಿದ್ದ ೞಕಾರ ಕನ್ನಡದಲ್ಲಿ ಕಾಣೆಯಾಗಲು ಅದರ ಚರಿತ್ರೆ ಯಲ್ಲಿ ನಡೆದ ಕೆಳಗೆ ಕೊಟ್ಟಿರುವ ಮೂರು ರೀತಿಯ ಬದಲಾವಣೆಗಳು

(1) ೞಕಾರದ ಅನಂತರ ಯಾವುದಾದರೊಂದು ವ್ಯಂಜನ ಬಂದಿರುವಲ್ಲಿ ಆ ೞಕಾರ ರಕಾರವಾಗಿ ಬದಲಾಗಿದೆ ಮತ್ತು
(2) ಇತರ ಕಡೆಗಳಲ್ಲಿ ಅದು ಳಕಾರವಾಗಿ ಬದಲಾಗಿದೆ;

ಇದಲ್ಲದೆ,
ಕೆಲವು

ಪದಗಳಲ್ಲಿ

ಅನಿಯಮಿತವಾಗಿ

ಣಕಾರವಾಗಿಯೂ ಬದಲಾಗಿದೆ.

(1) ಈ ಮೂರು ಬದಲಾವಣೆಗಳಲ್ಲಿ, ೞಕಾರ ರಕಾರವಾಗುವಂತಹ ಮೊದಲನೆಯ ಬದಲಾವಣೆಯನ್ನು ಹಳೆಗನ್ನಡದ ಕಾವ್ಯಗಳಲ್ಲೇನೇ ಕಾಣ ಬಹುದು.

ವ್ಯಂಜನದ ಮೊದಲು ೞಕಾರ ರಕಾರವಾಗಿರುವುದು

ಹಳೆಗನ್ನಡ ತೞ್ಗು, ತರ್ಗು ಕಿೞ್ಗು, ಕಿರ್ಗು ಪೊೞ್ತು, ಪೊರ್ತು ಬೞ್ದುಂಕು, ಬರ್ದುಂಕು ಗೞ್ದ, ಗರ್ದೆ ಕಳ್ಚು, ಕರ್ಚು ‘ತೊಳೆ’’ ಕೞುವು

ತಮಿಳು ತಾೞ್ ಕೀೞ್ ಪೊೞುತು ವಾೞ್

ಮೂಲದ್ರಾವಿಡದ

ೞಕಾರದಿಂದ ಬಂದಿದ್ದ ಈ

ಮೂಲದ್ರಾವಿಡದ ರಕಾರದ ಹಾಗೆ ಹೊಸಗನ್ನಡದಲ್ಲಿ ಅದರ ಅನಂತರದ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗುತ್ತದೆ ಎಂಬುದನ್ನು ಮೇಲೆ (5.3.3)ರಲ್ಲಿ ನೋಡಿರುವೆವು.

(2) ಇತರೆಡೆಗಳಲ್ಲಿ ೞಕಾರ ಳಕಾರವಾಗಿದೆಯುಂಬುದನ್ನು ತೋರಿಸಿ ಕೊಡಲು ಹಳೆಗನ್ನಡ ಪದಗಳನ್ನು ಹೊಸಗನ್ನಡ ಪದಗಳೊಂದಿಗೆ ಹೋಲಿಸ ಬೇಕಾಗುತ್ತದೆ. ಯಾಕೆಂದರೆ, ಹಳೆಗನ್ನಡ ಬರಹಗಳಲ್ಲಿ ಈ ಬದಲಾವಣೆ ನಡೆದ ಮೇಲೂ ೞಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು.
ಉದಾಹರಣೆಗಾಗಿ, ಕೇಶಿರಾಜನು ತನ್ನ ವ್ಯಾಕರಣದಲ್ಲಿ ೞಕಾರವನ್ನು ಯಾವ ಪದಗಳಲ್ಲಿ ಬಳಸಬೇಕು ಎಂಬುದಕ್ಕೆ ಒಂದು ಪಟ್ಟಿಯನ್ನೇ ಮಾಡಿದ್ದನು ಮತ್ತು ಆ ಪದಗಳಲ್ಲಿ ಅವುಗಳ ಬದಲು ಳಕಾರವನ್ನು ಬಳಸುವುದು ತಪ್ಪು ಎಂಬುದಾಗಿ ಸಾರಿದ್ದನು. ಆದರೆ, ಹೊಸಗನ್ನಡದಲ್ಲಿ ಇದು ಬರವಣಿಗೆಯಲ್ಲೂ ಳಕಾರದೊಂದಿಗೆ ಸೇರಿಹೋಗಿದೆ.

(ಕ) ಎರಡು ಸ್ವರಗಳ ನಡುವೆ ೞಕಾರ ಳಕಾರವಾಗಿರುವುದು

ಹಳೆಗನ್ನಡ

ಹೊಸಗನ್ನಡ

ಕೊೞವೆ
ಕೋೞಿ
ಮೞ

ಕೊಳವೆ ಕೋಳಿ ಮಳೆ

(ಚ) ಪದಗಳ ಕೊನೆಯ ೞಕಾರ ಳಕಾರವಾಗಿರುವುದು

ಹಳೆಗನ್ನಡ ಬಾೞ್
ಬೀೞ್
ಕೀೞ್
ಪಾೞ್
ಉಗುೞ್ ಪೊಗೞ್

ಹೊಸಗನ್ನಡ ಬಾಳು ಬೀಳು ಕೀಳು ಹಾಳು ಉಗುಳು ಹೊಗಳು

ಳಕಾರವಾಗಿರುವುದು

ಹಳೆಗನ್ನಡದಲ್ಲಿ ಪದಗಳ ಕೊನೆಯಲ್ಲಿ ಬಂದಿದ್ದ ೞಕಾರ ಹೊಸಗನ್ನಡ ಮಾತ್ರವಲ್ಲದೆ, ಅದರ ಅನಂತರ ಉಕಾರವೊಂದು ಸೇರುವುದರಿಂದಾಗಿ ಅದು ಸ್ವರಗಳ ನಡುವಿನ ಳಕಾರವೇ ಆಗಿದೆ ಎಂಬುದನ್ನು ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು.

ೞಕಾರವು (ಕ) ರಕಾರವಾಗುವ ಮತ್ತು (ಚ) ಳಕಾರವಾಗುವ ಈ ಎರಡು ರೀತಿಯ ಬದಲಾವಣೆಗಳೂ ಹಳೆಗನ್ನಡದಲ್ಲೇನೇ ಹತ್ತು- ಶಾಸನಗಳ ಹನ್ನೊಂದನೇ ಆದಾರದ ಮೇಲೆ ಹೇಳಲು ಸಾದ್ಯವಾಗುತ್ತದೆ (ನರಸಿಂಹಯ್ಯ 1941 ನೋಡಿ).

ನಡೆದಿರಬೇಕೆಂಬುದಾಗಿ

ಶತಮಾನದಲ್ಲಿ

ಅದಕ್ಕಿಂತಲೂ ಮೊದಲು, ಎಂಟು-ಒಂಬತ್ತನೇ ಶತಮಾನದ ಶಾಸನ ಗಳಲ್ಲೂ ೞಕಾರದ ಬದಲು ಳಕಾರವನ್ನು ತೋರಿಸುವ ಬೀಳದು, ಕೇಳ್ದು, ಏಳ್, ಬೀಳಿಸಿ, ಪುಳು ಎಂಬಂತಹ ಪದಗಳ ಬಳಕೆಯಾಗಿದೆ.

ಹತ್ತನೇ ಶತಮಾನದ ಶಾಸನಗಳಲ್ಲಿ ೞಕಾರ ಳಕಾರವಾಗಿರುವ ಪೊಗಳಲ್, ಅಳಿವಿಂಗೆ, ಬಳಿಕ್ಕೆ ಎಂಬಂತಹ ಪದರೂಪಗಳು ಮಾತ್ರವಲ್ಲದೆ ೞಕಾರ ರಕಾರವಾಗಿರುವ ಅಕ್ರರಿಂದಮ್, ನೋಪ್ರ್ಪರ, ಪೊಗತ್ರ್ತೆಗೆ, ನೆಗಪ್ರ್ಪಿನ್ ಎಂಬಂತಹ ಪದರೂಪಗಳೂ ಕಾಣಿಸುತ್ತವೆ

ಶತಮಾನದ

ಹದಿನಾಲ್ಕು-ಹದಿನಯ್ದನೇ

ಶಾಸನಗಳ ಸಮಯಕ್ಕಾಗುವಾಗ ಈ ಬದಲಾವಣೆ ಕೊನೆಗೊಂಡಿತ್ತೆಂದು ಹೇಳಬಹುದು. ಯಾಕೆಂದರೆ, ಆ ಕಾಲದ ಶಾಸನಗಳಲ್ಲಿ ಹಿಂದೆ ೞಕಾರವಿದ್ದ ಎಲ್ಲಾ ಪದಗಳಲ್ಲೂ (ಕ) ಸ್ವರಗಳ ನಡುವೆ ಳಕಾರ ಕಾಣಿಸುತ್ತದೆ ಮತ್ತು (ಚ) ವ್ಯಂಜನದ ಮೊದಲು ರಕಾರ ಕಾಣಿಸುತ್ತದೆ (ನರಸಿಂಹಯ್ಯ 1941 ನೋಡಿ). ಇದಕ್ಕೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಎಂಟು-ಒಂಬತ್ತನೇ ಶತಮಾನ ಅನಂತರದ ಶತಮಾನಗಳು

ಅೞಿದ ‘ನಾಶವಾದ’’ ಪುೞು ‘ಹುಳ’’
ಪೊಗೞ್ ‘ಹೊಗಳು’’
ಎೞ್ಪತ್ತು ‘ಎಪ್ಪತ್ತು’’ ಗೞ್ದ ‘ಗದ್ದೆ’’
ನೆಗೞ್ದ ‘ಹೆಸರಾಂತ’’

ಪುಳು ಪೊಗಳ್

ಎರ್ಪತ್ತು ನೆಗರ್ದ

ಇವುಗಳಲ್ಲಿ ವ್ಯಂಜನಗಳ ಮೊದಲು ರಕಾರವಾಗಿರುವ ೞಕಾರ ಅನಂತರ ಆ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗಿದೆ (ಎಪ್ಪತ್ತು, ಗದ್ದೆ) (5.3.3 ನೋಡಿ).

(3) ಎರಡು ಸ್ವರಗಳ ನಡುವೆ (ಇಲ್ಲವೇ ಪದದ ಕೊನೆಯಲ್ಲಿ) ಪದಗಳಲ್ಲಿ ಣಕಾರವಾಗಿ ಕೆಲವು

ಬಂದಿದ್ದ ೞಕಾರ

ಕನ್ನಡದ

ಬದಲಾಗಿರುವುದನ್ನು ಕಾಣಬಹುದು. ಇದು ಕನ್ನಡದಲ್ಲಿ ಅನಿಯಮಿತವಾಗಿ ನಡೆದ ಒಂದು ಬದಲಾವಣೆ.

ಈ ರೀತಿ ಬದಲಾಗಿರುವ ಪದಗಳಲ್ಲಿ (ಕ) ಕೆಲವಕ್ಕೆ ೞಕಾರವನ್ನು ತೋರಿಸುವ ರೂಪ ಮತ್ತು ಣಕಾರವನ್ನು ತೋರಿಸುವ ರೂಪ ಎಂಬುದಾಗಿ ಎರಡೆರಡು ರೂಪಗಳಿವೆ; ಆದರೆ (ಚ) ಬೇರೆ ಕೆಲವಕ್ಕೆ ಣಕಾರವನ್ನು ತೋರಿಸುವ ರೂಪ ಮಾತ್ರ ಇದೆ. (ಇಲ್ಲಿ ಕಂಸದೊಳಗೆ ಕೊಟ್ಟಿರುವ ಳಕಾರವಿರುವ ರೂಪಗಳು ಹೊಸಗನ್ನಡದವು.)

(ಕ) ಎರಡು ರೂಪಗಳಿರುವ ಪದಗಳು

ಹೂಣು

ಗೞ (ಗಳೆ) ಪೂೞು (ಹೂಳು) ಮುೞುಗು (ಮುಳುಗು) ಮುಣುಗು ತುೞಿ (ತುಳಿ) ನೊೞವು (ನೊಳ) ಮೊೞ (ಮೊಳ)
ಮೊೞಕಯ್ ಗೆೞಸು
ಕುೞಿ (ಗುಳಿ) ನೊೞ
ಪುೞ, ಪುೞು

ಮೊಣಕಯ್ ಗೆಣಸು ಕುಣಿ, ಗುಣಿ ನುಣುಚು ಪುಣುಗು, ಪುನುಗು

(ಚ) ಣಕಾರ ಮಾತ್ರ ಇರುವ ಪದಗಳು

ಕನ್ನಡ
ಕೊಣಸು ‘ಎಳತು’’ ತಣಲು ‘ಕೆಂಡ’’
ಪಣ್, ಹಣ್ಣು’
ಕಣಂಜು ‘ಒಂದು ತೂಕ’

ತಮಿಳು ಕುೞ ‘ಮೆತ್ತಗೆ’’ ತೞಲ್ ‘ಸುಡು’’ ಪೞಮ್ ಕೞಞ್ಚು

ಗಣ್ಣ ‘ಗದ್ದೆಯ ತುಂಡು’
ಗುಣ್ಪು ‘ನೆರವಿ’
ಕುಣಿಕೆ ‘ಕೊಂಡಿ’
ತಣಲ್ ‘ಕೆಂಡ’
ಮಣಕ ‘ಕರು’’
ಮೇಣಿ ‘ನೇಗಿಲ ತುದಿ, ಮೇಟಿ’’ ಮೇೞಿ

ಕೞನಿ ‘ಗದ್ದೆ’ ಕುೞು
ಕುೞಯ್ಚ್ಚು ತೞಯ್ ‘ಬಹಳ ಬಿಸಿ’’ ಮೞ ‘ಎಳೆಯ’

ಬಳ್ಳಾರಿ, ಹಡಗಲಿ ಮತ್ತು ಹೊಸ್ಪೇಟೆಗಳಲ್ಲಿ ದೊರೆತ ಹನ್ನೊಂದನೇ ಶತಮಾನದ ಶಾಸನಗಳಲ್ಲಿ ಇತರ ಕಡೆಗಳಲ್ಲಿ ದೊರೆತ ಶಾಸನಗಳ ೞಕಾರಕ್ಕೆ ಬದಲಾಗಿ ಈ ರೀತಿ ಣಕಾರ ಕಾಣಿಸುವುದಾದ ಕಾರಣ, ಕನ್ನಡದ ಬಡಗು ಇಲ್ಲವೇ ಮೂಡು-ಬಡಗು ಒಳನುಡಿಯಲ್ಲಿ ಈ ೞ>ಣ ಬದಲಾವಣೆ ನಡೆದಿರಬಹುದೆಂದು ಊಹಿಸಬಹುದು.

(4) ಕನ್ನಡದ ಬೇರೆ ಕೆಲವು ಪದಗಳಲ್ಲಿ ಮೂಲದ್ರಾವಿಡ ೞಕಾರ ಡಕಾರವಾಗಿ ಕಾಣಿಸುತ್ತದೆ; ಆದರೆ ಈ ಪದಗಳು ಕನ್ನಡಕ್ಕೆ ತೆಲುಗಿನಿಂದ ಎರವಲಾಗಿ ಬಂದವುಗಳಿರಬಹುದು; ಯಾಕೆಂದರೆ, ತೆಲುಗಿನಲ್ಲಿ ಸ್ವರಗಳ ನಡುವಿನ ೞಕಾರ ನಿಯಮಿತವಾಗಿ ಡಕಾರವಾಗಿದೆ.

ತಮಿಳು

ಕನ್ನಡ ಈಳಮ್ ಕೞಯ್ ಗಡೆ, ಗೞ ಗಾಟು ‘ಕಾರ’’ ಕಾೞ್ ಕೊಡ ‘ಎಳವೆ’’ ಕೊೞುನ್ತು ಕೋಡು ‘ಅಳುಕು’’ ಕೋೞಯ್ ಬೋಡಿ ‘ಬೋಳು’’ ಪೋೞು

ತೆಲುಗು ಕೊಡುಕು ‘ಮಗ’’ ಕೋಡಾಡು ಬೋಡಿ

ಹಳೆಗನ್ನಡದ ೞಕಾರ ಡಕಾರದಿಂದಲೂ ಬಂದಿದೆಯುಂಬುದನ್ನು ಮೇಲೆ

(4.3.4)ರಲ್ಲಿ ನೋಡಿರುವೆವು. (ಮತ್ತು

ಕನ್ನಡದಲ್ಲಿ ಬಿದ್ದುಹೋಗಿವೆಯುಂಬುದನ್ನು ಮತ್ತು ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ
ಲಕಾರವಾಗಿವೆಯೆಂಬುದನ್ನು ಮೇಲೆ (5.3.2)ರಲ್ಲಿ ನೋಡಿರುವೆವು.

ಳಕಾರಗಳು) ಬಡಗ

Eke →

5.4.4 ಪದಗಳ ಕೊನೆಯ ತಡೆಯಿಲ್ಲದುಲಿಗಳು

ಮೂಲದ್ರಾವಿಡ ಬೇರುಗಳ ಇಲ್ಲವೇ ಪದಗಳ ಕೊನೆಯಲ್ಲಿ ವಕಾರ ಕಾಣಿಸಿ ಕೊಳ್ಳುವುದು ಬಹಳ ಅಪರೂಪ. ಆದರೆ ಯಕಾರ ಮತ್ತು ೞಕಾರಗಳು ಸಾಕಶ್ಟು ಬೇರುಗಳಲ್ಲಿ ಮತ್ತು ಪದಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಬೇರುಗಳ ಕೊನೆಯಲ್ಲಿದ್ದ ಯಕಾರ ಹಳೆಗನ್ನಡದಲ್ಲಿ ಬದಲಾಗದೆ ಉಳಿದಿದೆ. ಆದರೆ ಹೊಸಗನ್ನಡದಲ್ಲಿ ಇದು ಕೆಲವು ಸನ್ನಿವೇಶಗಳಲ್ಲಿ ಬದಲಾಗಿದೆ ಮತ್ತು ಬೇರೆ ಕೆಲವು ಸನ್ನಿವೇಶಗಳಲ್ಲಿ ಬದಲಾಗದೆ ಉಳಿದಿದೆ. ಉದಾಹರಣೆಗಾಗಿ ಕಯ್, ಕೆಯ್, ಮೆಯ್ ಮೊದಲಾದ ಗಿಡ್ಡ ಸ್ವರವಿರುವ ನಾಮಪದಗಳ ಕೊನೆಯಲ್ಲಿ ಅದು ಬದಲಾಗದೆ ಉಳಿದಿದೆ.

ಇದೇ ರೀತಿಯಲ್ಲಿ ಕೇಳುಗನಿಂದ ಕೆಲಸವೊಂದನ್ನು ಮಾಡಿಸುವುದಕ್ಕಾಗಿ ಬಳಸುವ ಕೊಯ್, ಬಯ್, ಹುಯ್ ಮೊದಲಾದ ಗಿಡ್ಡಸ್ವರವಿರುವ ಕ್ರಿಯಾರೂಪಗಳಲ್ಲೂ ಅದು ಬದಲಾಗದೆ ಉಳಿದಿದೆ.

ಉದ್ದಸ್ವರವಿರುವ ನಾಯಿ, ಬಾಯಿ, ಕಾಯಿ ಮೊದಲಾದ ಕೆಲವು ನಾಮಪದಗಳಲ್ಲಿ ಮತ್ತು ಕೆಲಸ ಮಾಡಿಸಲು ಬಳಸುವ ಆಯಿ, ಸಾಯಿ, ಕಾಯಿ ಮೊದಲಾದ ಕೆಲವು ಕ್ರಿಯಾರೂಪಗಳಲ್ಲಿ ಯಕಾರ ಬದಲಾಗದೆ ಉಳಿದಿದೆಯಾದರೂ ಅದರ ಅನಂತರ ಇಕಾರವೊಂದು ಕಾಣಿಸಿಕೊಳ್ಳುತ್ತದೆ. ಆದರೆ, ಉದ್ದ ಈ ಸ್ವರವಿರುವ ಮೀ, ಈ ಪದಗಳಲ್ಲಿ ಯಕಾರ ಬಿದ್ದು ಹೋಗಿದೆ.

ಒಟ್ಟುಗಳ ಕೊನೆಯಲ್ಲಿ ಬರುವ ಯಕಾರ ಕನ್ನಡದಲ್ಲಿ ಬಿದ್ದು ಹೋಗಿದೆ ಮತ್ತು ಅದರ ಹಿಂದಿರುವ ಅಕಾರ ಎಕಾರವಾಗಿ ಬದಲಾಗಿದೆ (3.6.1 ನೋಡಿ).

ಕನ್ನಡ
ಗೞಲೆ
ಕೊಟ್ಟಿಗೆ
ದೋಸೆ

ತಮಿಳು ಕೞಲಯ್ ಕೞುತಯ್ ಪಾರಯ್ ಕುಟುಕ್ಕಯ್ ಕೊಟ್ಟಿಕಯ್ ತೋಚಯ್

ಪದಗಳ ಕೊನೆಯಲ್ಲಿ ಬಂದ ೞಕಾರ ಹೊಸಗನ್ನಡದಲ್ಲಿ ಳಕಾರವಾಗಿ

ಬದಲಾಗಿರುವುದನ್ನು ಮೇಲೆ 5.4.3ರಲ್ಲಿ ವಿವರಿಸಲಾಗಿದೆ.

Eke →

5.5 ತಿರುಳು

ಮೂಲದ್ರಾವಿಡದ ನಾಲ್ಕು ಮೂಗುಲಿಗಳು (ಮ, ನ, ಣ, ಞ), ಒಂದು ಹೊಡೆಯುಲಿ (ರ), ಎರಡು ಪಕ್ಕದುಲಿಗಳು (ಲ, ಳ), ಮತ್ತು ಮೂರು ತಡೆಯಿಲ್ಲದುಲಿಗಳು (ೞ, ಯ, ವ) ಕನ್ನಡದಲ್ಲಿ ಎಂತಹ ಬದಲಾವಣೆ ಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಮೂಗುಲಿಗಳಲ್ಲಿ ಞಕಾರ ಕನ್ನಡದಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ತನ್ನ ಶಕ್ತಿಯನ್ನು ಕಳೆದುಕೊಂಡಿದೆ; ಕರಾವಳಿಯ ಕೆಲವು ಒಳನುಡಿಗಳು ಮೂಗುಲಿಗಳೂ ಮಾತ್ರ ಇದಕ್ಕೆ ಅಪವಾದಗಳಾಗಿವೆ. ಉಳಿದ ಹೊಸಗನ್ನಡದಲ್ಲಿ ಮತ್ತು ಇವತ್ತಿನ ಇತರ ಒಳನುಡಿಗಳಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿವೆ.

ಲಕಾರ-ಳಕಾರಗಳ ನಡುವಿನ ವ್ಯತ್ಯಾಸ ಕೆಲವು ಒಳನುಡಿಗಳಲ್ಲಿ ಇಲ್ಲ ವಾಗಿದೆ ಮತ್ತು ೞಕಾರವೂ ಬೇರೆ ಬೇರೆ ಕಾರಣಗಳಿಗಾಗಿ ಹೊಸಗನ್ನಡದಲ್ಲಿ

ಇಲ್ಲವಾಗಿದೆ. ವಕಾರ ಬಕಾರವಾಗಿರುವುದು ಕನ್ನಡದಲ್ಲಿ ನಡೆದ ಇನ್ನೊಂದು ಬದಲಾವಣೆ.

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಈ ವ್ಯಂಜನಗಳು ಬೇರೆಯೂ ಹಲವು ಬದಲಾವಣೆಗಳಿಗೊಳಗಾಗಿದ್ದು, ಅವುಗಳ ಸ್ವರೂಪ ಎಂತಹದು ಎಂಬುದನ್ನು ತಿಳಿಯಲು ಇನ್ನಶ್ಟು ನಡೆಸುವ ಅವಶ್ಯಕತೆಯಿದೆ.

ಸಂಶೋದನೆಗಳನ್ನು

6. ಪದಗಳ ಒಳರಚನೆ

Eke →

6.1 ಮುನ್ನೋಟ

ಮೂಲದ್ರಾವಿಡದಲ್ಲಿ ಮುಕ್ಯವಾಗಿ ಕ್ರಿಯಾಪದ, ನಾಮಪದ ಮತ್ತು ಗುಣಪದಗಳೆಂಬ ಮೂರು ರೀತಿಯ ಪದಗಳಿದ್ದಿರಬೇಕು. ಈ ಪದಗಳಿಗೆ ಕೆಲಸಗಳನ್ನು ತಿಳಿಸುವುದು (ಕ್ರಿಯಾಪದ), ಅಂತಹ ಕೆಲಸಗಳಲ್ಲಿ ತೊಡಗಿದ್ದ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದು (ನಾಮಪದ) ಮತ್ತು ಗುಣಗಳನ್ನು ಸೂಚಿಸುವುದು (ಗುಣಪದ) ಎಂಬುದಾಗಿ ಮೂರು ರೀತಿಯ ಕೆಲಸಗಳಿದ್ದುವು ಮತ್ತು ಇದಕ್ಕಾಗಿ ಅವು ಮೂರು ರೀತಿಯ ಅರ್ತಗಳನ್ನು ಮತ್ತು ಮೂರು ರೀತಿಯ ಒಳರಚನೆಗಳನ್ನು ಪಡೆದಿರಬೇಕಾಗಿತ್ತು.

ಇದಲ್ಲದೆ, ಈ ಮೂರು ರೀತಿಯ ಪದಗಳ ಒಳರಚನೆಯಲ್ಲೂ ನಾಮ ಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬ ಮೂರು ಬೇರೆ ಬೇರೆ ರೀತಿಯ ಬೇರುಗಳು ಬಳಕೆಯಾಗುತ್ತಿದ್ದಿರಬೇಕು. ಈ ಬೇರುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಅವನ್ನು ನೇರವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಾಗಿ ವಾಕ್ಯಗಳಲ್ಲಿ ಬಳಸಲು ಸಾದ್ಯವಿತ್ತಾದ ಕಾರಣ, ಅವಕ್ಕೆ ಮೇಲಿನ ಹೆಸರುಗಳನ್ನು ಕೊಡಲಾಗಿದೆ.

ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳಲು ಸಾದ್ಯವಿರುವಂತಹ ಕೆಲವು ಬೇರು

ಗಳನ್ನು ಕೆಳಗೆ ಉದಾಹರಣೆಗಳಾಗಿ ಕೊಡಲಾಗಿದೆ.

ಮೂಲದ್ರಾವಿಡದ ನಾಮಬೇರುಗಳು

*ಆಳ್ ‘ಆಳು’’
*ಕಣ್ ‘ಕಣ್ಣು’’

*ಇಲ್ ‘ಮನೆ’ *ಕುಪ್್ಪ ‘ರಾಶಿ’’
*ಕಾಯ್ ‘ಕಾಯಿ’’

*ಕಲ್ ‘ಕಲ್ಲು’ *ಕಾಲ್ ‘ಕಾಲು’
*ನಾಟ್ ‘ನಾಡು’
*ಪೆಣ್ ‘ಹೆಂಗಸು’’ *ಪುಲ್ ‘ಹುಲ್ಲು’

*ಕಳ್ ‘ಕಳ್ಳು’’ *ಕೂಟ್ ‘ಗೂಡು’’ *ಞಮ್ ‘ನವಿಲು’’ *ತೇರ್ ‘ತೇರು’ *ನೀರ್ ‘ನೀರು’

ಮೂಲದ್ರಾವಿಡದ ಕ್ರಿಯಾಬೇರುಗಳು *ಪಾಟ್ ‘ಹಾಡು’’ *ಪೂ ‘ಅರಳು’ *ಮೇಯ್ ‘ಮೇಯು’’ *ಚೊಲ್ ‘ಮಾತಾಡು’’ *ಕಪ್್ಪ ‘ಮುಚ್ಚು’ *ಆಱ್ ‘ಆರು’ *ನಿಱ್ ‘ತುಂಬು’’ *ಒ ‘ಒಪ್ಪು’

*ನಕ್್ಕ ‘ನಕ್ಕು’’
*ಕೆಯ್ ‘ಮಾಡು’’ *ಪೋ ‘ಹೋಗು’’ *ವಿಲ್ ‘ಮಾರು’
*ಕಾಣ್ ‘ಕಾಣು’’ *ಪಾರ್ ‘ನೋಡು’’ *ಕುೞ್ ‘ಹೊಂಡ’’

ಮೂಲದ್ರಾವಿಡದ ಗುಣಬೇರುಗಳು

*ಎಱ್ ‘ಕೆಂಪು’’ *ಕಿಱ್ ‘ಚಿಕ್ಕ’ *ಮೇ ‘ಮೇಲೆ’’
*ಪಚ್ ‘ಹಸುರು’’ *ಕರ್ ‘ಕಪ್ಪು’ *ಚೊಟ್್ಟ ‘ಕುಂಟು’’ *ನಲ್ ‘ಒಳ್ಳೆ’’

*ಕೀೞ್ ‘ಕೆಳಗೆ’’ *ಮುನ್ ‘ಮುಂದೆ’’ *ತಣ್ ‘ತಣ್ಣಗೆ’ *ತೇ ‘ಸಿಹಿ’ *ಕಯ್ ‘ಕಹಿ’’ *ಪಿನ್ ‘ಹಿಂದೆ’’ *ವೆಳ್ ‘ಬಿಳಿ’

ಈ ಮೂರು ರೀತಿಯ ಬೇರುಗಳು ಮಾತ್ರವಲ್ಲದೆ ಬೇರೆಯೂ ಕೆಲವು ರೀತಿಯ ಬೇರುಗಳು ಮತ್ತು ಪದಗಳು ಮೂಲದ್ರಾವಿಡದಲ್ಲಿದ್ದುವು. ಉದಾಹರಣೆಗಾಗಿ, ಆಡುಗ ಪದಗಳು, ತೋರುಗ ಪದಗಳು ಮತ್ತು ಎಣಿಕೆಯ ಪದಗಳು ಎಂಬಂತಹ ಮೂರು ರೀತಿಯ ಪದಗಳಿದ್ದು ಅವುಗಳಲ್ಲಿ ಮೂರು ರೀತಿಯ ಬೇರುಗಳು ಬಳಕೆಯಾಗುತ್ತಿದ್ದುವು. ಆದರೆ ಇವುಗಳಲ್ಲಿ ಪ್ರತಿಯೊಂದು ರೀತಿಯ ಪದಗಳಲ್ಲೂ ಕೆಲವೇ ಕೆಲವು ಬೇರುಗಳು ಮಾತ್ರ ಬಳಕೆಯಾಗುತ್ತಿದ್ದುವು.

ಉದಾಹರಣೆಗಾಗಿ, *ಆನ್, *ನೀನ್ ಮತ್ತು *ತಾನ್ ಎಂಬ ಮೂರು

ಬೇರುಗಳು ಮಾತ್ರ ಆಡುಗ ಪದಗಳಲ್ಲಿ ಬಳಕೆಯಾಗುತ್ತವೆ.

ಎಣಿಕೆಯ ಪದಗಳಲ್ಲಿ ಇದಕ್ಕಿಂತ ಸ್ವಲ್ಪ ಹೆಚ್ಚು, ಎಂದರೆ ಹನ್ನೊಂದು ಬೇರುಗಳಿವೆ. ವ್ಯಕ್ತಿ ಇಲ್ಲವೇ ವಸ್ತುಗಳ ಪ್ರಮಾಣವನ್ನು ಸೂಚಿಸುವ *ಕಿಲ್-ಅ ‘ಕೆಲವು’, *ಪಲ್-ಅ ‘ಹಲವು’, *ಎಲ್-ಅ ‘ಎಲ್ಲ’ ಮತ್ತು *ಕೊ-ಞ್್ಚ- ಗುಂಪಿನಲ್ಲಿರಿಸಬಹುದಾಗಿದ್ದು, ಇವುಗಳಲ್ಲಿ ಬೇರೆ ಕೆಲವು ಬೇರುಗಳು ಬಳಕೆಯಾಗಿವೆ.

ಪದಗಳನ್ನು

ಇನ್ನೊಂದು

ತೋರುಗ ಪದಗಳಲ್ಲಿಯೂ ಹೆಚ್ಚು ಬೇರುಗಳು ಬಳಕೆಯಾಗುವುದಿಲ್ಲ. ಅವನ್ನೆಲ್ಲ *ಆ, *ಈ, *ಊ ಮತ್ತು *ಯಾ ಎಂಬ ನಾಲ್ಕು ಬೇರುಗಳೊಂದಿಗೆ ಬೇರೆ ಬೇರೆ ಒಟ್ಟುಗಳನ್ನು ಸೇರಿಸಿ ರಚಿಸಲಾಗಿದೆ.

Eke →

6.2 ಬೇರುಗಳ ಸ್ವರೂಪ

ಮೂಲದ್ರಾವಿಡ ಪದಗಳಲ್ಲಿ ಬರುವ ಬೇರುಗಳ ಕುರಿತು ಕೆಳಗೆ ಕೊಟ್ಟಿರು ವಂತಹ ಕೆಲವು ಸಾಮಾನ್ಯ ಸಂಗತಿಗಳನ್ನು ಕಲ್ಪಿಸಿಕೊಳ್ಳಲಾಗಿದೆ.

(1) ಈ ಬೇರುಗಳಲ್ಲಿ ಒಂದೇ ಒಂದು ಉಲಿಕಂತೆ ಮಾತ್ರ ಇದ್ದಿರಬೇಕು ಮತ್ತು ಆ ಉಲಿಕಂತೆಯಲ್ಲಿ ಒಂದು ಉದ್ದ ಇಲ್ಲವೇ ಗಿಡ್ಡ ಸ್ವರ ಅವಶ್ಯವಾಗಿಯೂ ಬಂದಿರಬೇಕು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಮೂಲದ್ರಾವಿಡ ಬೇರುಗಳನ್ನು ಗಮನಿಸಬಹುದು.

ಉದ್ದಸ್ವರವಿರುವ ಬೇರುಗಳು: *ಆಯ್ ‘ತಾಯಿ’, *ಕಾಲ್ ‘ಕಾಲು’,

*ಪೂ ‘ಹೂವು’.

ಗಿಡ್ಡಸ್ವರವಿರುವ ಬೇರುಗಳು: *ತೆನ್ ‘ತೆಂಕ’, *ಎಣ್ ‘ಎಣಿಸು’,

*ಕೊಲ್ ‘ಕೊಲ್ಲು’.

(2) ಈ ಸ್ವರದ ಮೊದಲು ಮತ್ತು ಅನಂತರ ವ್ಯಂಜನಗಳು ಬರುತ್ತಿರ ಬಹುದು ಇಲ್ಲವೇ ಅದರೊಂದಿಗೆ ಯಾವ ವ್ಯಂಜನವೂ ಬಾರದಿರಬಹುದು. ಬೇರುಗಳನ್ನು ಕೊಟ್ಟಿರುವ ಉದಾಹರಣೆಗಳಾಗಿ ಕೊಡಬಹುದು.

ಮೂಲದ್ರಾವಿಡ

ಕೆಳಗೆ

ಒಂದು ಸ್ವರ ಮಾತ್ರ ಇರುವ ಬೇರುಗಳು: *ಒ ‘ಒಪ್ಪು’, *ಈ

‘ಹಾರು’, *ಆ ‘ದನ’.

ಸ್ವರದ ಮೊದಲು ಒಂದು ವ್ಯಂಜನ ಬಂದಿರುವ ಬೇರುಗಳು: *ಪೊ

‘ತೂತು ಮಾಡು’, *ಕಾ ‘ಕಾಪಾಡು’, *ತೇ ‘ಸಿಹಿ’, *ಪೂ ‘ಹೂವು’.

ಸ್ವರದ ಅನಂತರ ಒಂದು ವ್ಯಂಜನ ಬಂದಿರುವ ಬೇರುಗಳು: *ಇರ್

‘ಇರು’, *ಏೞ್ ‘ತಿರುಗು’ *ಒರ್ ‘ಒಂದು’.

ಸ್ವರದ ಮೊದಲು ಒಂದು ವ್ಯಂಜನ ಮತ್ತು ಸ್ವರದ ಅನಂತರವೂ ಒಂದು ವ್ಯಂಜನ ಬಂದಿರುವ ಬೇರುಗಳು: *ಕಳ್ ‘ಕದಿ’, *ಕಾಣ್ ‘ಕಾಣು’, *ಪಾಱ್ ‘ಹಾರು’, *ತೇರ್ ‘ತೇರು’.

(3) ಮೂಲದ್ರಾವಿಡ ಬೇರುಗಳಲ್ಲಿ ಸ್ವರದ ಮೊದಲು ಒಂದು ವ್ಯಂಜನ ಮಾತ್ರ ಬರಬಲ್ಲುದು. ಇದು ಱ, ಟ, ರ, ಲ, ಳ ಇಲ್ಲವೇ ೞ ವ್ಯಂಜನಗಳನ್ನು ವ್ಯಂಜನವೂ ಆಗಿರಬಲ್ಲುದು: *ಕಣ್ ‘ಕಣ್ಣು’, *ಚೊಲ್ ‘ಮಾತನಾಡು’, *ತೆನ್ ‘ತೆಂಕು’, ಪಲ್ ‘ಹಲ್ಲು’, *ಞಂಟ್ ‘ಏಡಿ’, *ನಕ್್ಕ ‘ನಕ್ಕು’, *ಮೀನ್ ‘ಮೀನು’, *ಯಾನ್-(ಅಯ್) ‘ಆನೆ’, *ವಾಯ್ ‘ಬಾಯಿ’.

ಹೊರತುಪಡಿಸಿ

ಯಾವ

ಬೇರೆ

(4) ಬೇರುಗಳ ಮೊದಲಿಗೆ ವ್, ಯ್ ಇಲ್ಲವೇ ಞ್ ವ್ಯಂಜನ ಬಂದಿದೆಯಾದರೆ, ಅದರ ಅನಂತರ ಉಕಾರ ಮತ್ತು ಒಕಾರಗಳು ಬರಲಾರವು. ಯಕಾರ ಮತ್ತು ಞಕಾರಗಳು ಬಂದಿವೆಯಾದರೆ ಅವುಗಳ ಅನಂತರ ಅಕಾರ ವ್ಯತ್ಯಾಸಕ್ಕೆ ಮತ್ತು ಎಕಾರಗಳ ಅರ್ತವ್ಯತ್ಯಾಸವನ್ನು ಸೂಚಿಸುವ ಶಕ್ತಿಯಿಲ್ಲ.

ನಡುವಿನ

(5) ಬೇರುಗಳ ಕೊನೆಯಲ್ಲಿ ಞ ಮೂಗುಲಿಯೊಂದನ್ನು ಬಿಟ್ಟು ಬೇರೆ ಎಲ್ಲಾ ವ್ಯಂಜನಗಳೂ ಬರಬಲ್ಲುವು: *ಪಕ್-(ಅಲ್) ‘ಹಗಲು’, *ಕೆಚ್- (ಅಱ್) ‘ಕೆಸರು’, *ಒಟ್-(ಅಯ್) ‘ಒಡೆ’, *ಆಱ್ ‘ಆರು’, *ಕುತ್- (ಇ) ‘ನೆಗೆ’, *ಚುಪ್ ‘ಉಪ್ಪು’, *ಪೆಣ್ ‘ಹೆಣ್ಣು’, *ಇನ್ ‘ಸಿಹಿ’, *ಕೆಮ್ ‘ಕೆಂಪು’, *ಕೊಯ್ ‘ಕೊಯ್ಯು’, *ಪವ್-(ಅಳ್) ‘ಹವಳ’, *ಆಳ್ ‘ಆಳು’, *ಕಲ್ ‘ಕಲ್ಲು’, *ಕೀೞ್ ‘ಕೆಳಗೆ’, *ಪಾರ್ ‘ನೋಡು’.

(6) ಬೇರುಗಳ ಕೊನೆಯಲ್ಲಿ ಬರುವ ತಡೆಯುಲಿ ಒತ್ತೆ ರೂಪದಲ್ಲಿ

ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ ಇರಬಲ್ಲುದು.

ಉದಾಹರಣೆಗಾಗಿ, *ಕಟ್್ಟ ‘ಕಟ್ಟು’ ಎಂಬುದರ ಕೊನೆಯ ವ್ಯಂಜನ ಇಮ್ಮಡಿ ರೂಪದಲ್ಲಿದೆ, ಆದರೆ *ಕೆಟ್ ‘ಕೆಡು’ ಎಂಬುದರಲ್ಲಿ ಅದು ಒತ್ತೆ ರೂಪದಲ್ಲಿದೆ.

(7) ಸ್ವರದ ಅನಂತರ ಬೇರುಗಳ ಕೊನೆಯಲ್ಲಿ ಬಂದ ವ್ಯಂಜನ ತಡೆಯುಲಿಯಾಗಿದ್ದಲ್ಲಿ, ಅದರ ಅನಂತರ ಉಚ್ಚಾರಣೆಗಾಗಿ ಒಂದು ಉಕಾರ ಬಂದಿರುತ್ತದೆ.

ಉದಾಹರಣೆಗಾಗಿ, *ಇಟ್-ಉ ‘ಇಡು’, *ಆಟ್-ಉ ‘ಆಡು’, *ನಕ್್ಕ- ಉ ‘ನಕ್ಕು’, *ಅಮ್್ಪ-ಉ ‘ಅಂಬು’, *ವಿತ್್ತ-ಉ ‘ಬೀಜ’ ಮೊದಲಾದ ಬೇರುಗಳ ಕೊನೆಯಲ್ಲಿ ಇಂತಹ ಉಕಾರವಿದೆ. ಮೇಲೆ ಕೊಟ್ಟಿರುವ ಉದಾ ಹರಣೆಗಳಲ್ಲಿ ಉಚ್ಚಾರಣೆಗಾಗಿ ಬರುತ್ತಿದ್ದ ಈ ಉಕಾರವನ್ನು ತೋರಿಸಿಲ್ಲ.

ಮೂಲದ್ರಾವಿಡದ ಈ

ಮುಕ್ಯವಾಗಿ ಕ್ರಿಯಾಬೇರುಗಳ ಮೇಲಿನ ಸಂಶೋದನೆಯ ಮೇಲೆ ಅವಲಂಬಿಸಿದೆ. ನಾಮ

ಬೇರುಗಳ

ಸ್ವರೂಪ

ಮತ್ತು ಗುಣಬೇರುಗಳ ಕುರಿತಾಗಿ ಹೆಚ್ಚಿನ ಸಂಶೋದನೆ ನಡೆದಿಲ್ಲ. ಹಾಗಾಗಿ, ಅವುಗಳ ಸ್ವರೂಪ ಇದಕ್ಕಿಂತ ಬೇರಾಗಿರಲೂ ಸಾದ್ಯವಿದೆ.

ನಾಮಬೇರುಗಳಿಗೂ ಕ್ರಿಯಾಬೇರುಗಳಿಗೂ ನಡುವೆ ಕಾಣಿಸುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಕ್ರಿಯಾಬೇರುಗಳಲ್ಲಿ ಹೆಚ್ಚಿನವೂ ಅವುಗಳ ಬೇರಿನ ರೂಪದಲ್ಲೇ ಒಂದಲ್ಲ ಒಂದು ದ್ರಾವಿಡ ನುಡಿಯಲ್ಲಿ ಬಳಕೆಯಾಗು ತ್ತಿರುತ್ತವೆ. ಇದಲ್ಲದೆ, ಅವುಗಳಿಂದ ಪಡೆಯಲಾಗುವ ನಾಮಪದ ಮತ್ತು ಗುಣಪದಗಳಲ್ಲೂ ಬೇರು ಮತ್ತು ಒಟ್ಟುಗಳ ನಡುವಿನ ವ್ಯತ್ಯಾಸ ಸ್ಪಶ್ಟವಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಅವುಗಳ ಬೇರಿನ ಸ್ವರೂಪವನ್ನು ತಿಳಿಯಲು ಮತ್ತು ಒಟ್ಟುಗಳಿಂದ ಅದನ್ನು ಬೇರ್ಪಡಿಸಲು ಕಶ್ಟವಾಗುವುದಿಲ್ಲ.

ಆದರೆ, ಹೆಚ್ಚಿನ ನಾಮಪದಗಳೂ ಇವತ್ತಿನ ದ್ರಾವಿಡ ನುಡಿಗಳಲ್ಲಿ ಅವುಗಳ ಪೂರ್ಣರೂಪದಲ್ಲಿ, ಎಂದರೆ ಬೇರು ಮತ್ತು ಒಟ್ಟುಗಳು ಸೇರಿ ಬರುತ್ತವೆ. ಬೇರುಗಳನ್ನು ಒಟ್ಟುಗಳಿಂದ ಬೇರ್ಪಡಿಸುವ ಕೆಲಸ ಅಶ್ಟೊಂದು ಸುಲಬವಲ್ಲ.

ಹಾಗಾಗಿ ಅವುಗಳಲ್ಲಿ

ಉದಾಹರಣೆಗಾಗಿ, ಕನ್ನಡದ ಹಂದಿ, ತಮಿಳಿನ ಪನ್ಱಿ, ತುಳುವಿನ ಪಂಜಿ, ಗೋಂಡಿಯ ಪದ್ದಿ, ಪೆಂಗೋವಿನ ಪಂಜಿ, ಕೂಯಿಯ ಪಜಿ ಪದಗಳನ್ನು ಹೋಲಿಸುವ ಮೂಲಕ ಮೂಲದ್ರಾವಿಡದಲ್ಲಿ ಪನ್ಱಿ ನಾಮಪದವಿದ್ದಿರಬೇಕೆಂದು ಕಲ್ಪಿಸಿಕೊಳ್ಳಬಹುದು. ಆದರೆ, ಇದರಲ್ಲಿ ನಾಮಬೇರು ಯಾವ ರೂಪದ್ದು (ಪನ್ ಎಂಬುದೇ ಇಲ್ಲವೇ *ಪನ್ಱ್ ಎಂಬುದೇ) ಎಂಬ ವಿಶಯದಲ್ಲಿ ಒಂದು ನಿರ್ದಾರಕ್ಕೆ ಬರಲು ಇವತ್ತಿನ ದ್ರಾವಿಡ ನುಡಿಗಳಲ್ಲಿ ಯಾವ ಆದಾರವೂ ಸಿಗುವುದಿಲ್ಲ.

ಇದಲ್ಲದೆ, ಕ್ರಿಯಾಬೇರುಗಳಿಂದ ಬೇರೆ ಬೇರೆ ಒಟ್ಟುಗಳನ್ನು ಬಳಸಿ ಹಲವಾರು ನಾಮಪದ ಮತ್ತು ಗುಣಪದಗಳನ್ನು ತಯಾರಿಸಲು ಸಾದ್ಯ, ಆದರೆ ನಾಮಬೇರುಗಳಿಂದ ಒಟ್ಟುಗಳನ್ನು ಬಳಸಿ ಬೇರೆ ನಾಮಪದ, ಗುಣಪದ ಇಲ್ಲವೇ ಕ್ರಿಯಾಪದಗಳನ್ನು ಬಹಳ ಅಪರೂಪವಾಗಿ ಮಾತ್ರವೇ ತಯಾರಿಸಲಾಗುತ್ತದೆ.

ನಾಮಬೇರುಗಳ

ಹೀಗಿದ್ದರೂ, ಕ್ರಿಯಾಬೇರುಗಳ ವಿವರಿಸಿದಂತಹ ಇದ್ದಿರಬಹುದು ಎಂಬುದಾಗಿ ಸದ್ಯಕ್ಕೆ ಕಲ್ಪಿಸಿಕೊಳ್ಳಲಾಗಿದೆ.

ಮೂಲಸ್ವರೂಪದ

ಮೂಲಸ್ವರೂಪ

ಮೇಲೆ ಹಾಗೆಯೇ

ಬೇರುಗಳ

ರೂಪದಲ್ಲೇನೇ

ಗುಣಬೇರುಗಳು

ಕ್ರಿಯಾಬೇರುಗಳ

ಮೂಲದ್ರಾವಿಡದ

ನಾಮಪದಗಳೊಂದಿಗೆ

ಸುಲಬವಾಗಿ ಒಟ್ಟುಗಳಿಂದ ಬೇರ್ಪಡಿಸಲು ಸಾದ್ಯವಾಗುವಂತಹವಾಗಿವೆ. ಜೋಡುಪದಗಳಲ್ಲಿ ಬರುವುವಾದ ಕಾರಣ, ಈ ಕೆಲಸ ಸುಲಬವಾಗುತ್ತದೆ. ಉದಾಹರಣೆಗಾಗಿ, ಪೆರ್ಮರ, ಚೆಂಗೊರಲ್, ಕೇಸಕ್ಕಿ, ಬೆಳ್ಗಡಲ್, ಒಳ್ಗರುಳ್, ನಲ್ಲುಣಿಸು ಕನ್ನಡದ ಜೋಡುಪದಗಳಲ್ಲಿ ಗುಣಬೇರುಗಳನ್ನು ಸುಲಬವಾಗಿ ಬೇರ್ಪಡಿಸಬಹುದು. ಇವುಗಳ ಮೂಲಸ್ವರೂಪ ಮೇಲೆ ವಿವರಿಸಿದಂತಹ ಕ್ರಿಯಾಬೇರುಗಳ ಮೂಲ ಸ್ವರೂಪದ ಹಾಗೆಯೇ ಇದೆಯುಂಬುದನ್ನು ಇಲ್ಲಿ ಗಮನಿಸಬಹುದು.

ಮೊದಲಾದ

ತಣ್ಣೆಲರ್,

Eke →

6.3 ಉಲಿಕಂತೆಗಳಲ್ಲಿ ಹಗುರ ಮತ್ತು ತೂಕ

ಮೂಲದ್ರಾವಿಡದ ಉಲಿಕಂತೆಗಳನ್ನು ಹಗುರದವು ಮತ್ತು ತೂಕದವು ಎಂಬುದಾಗಿ ಎರಡು ರೀತಿಯವುಗಳೆಂದು ವಿಂಗಡಿಸುವ ಅವಶ್ಯಕತೆಯಿದೆ ಎಂಬುದನ್ನು ನೋಡಿರುವೆವು. ಪದರಚನೆಯಲ್ಲಿ ಕಾಣಿಸುವ ಹಲವು ಸೇರಿಕೆಯ ನಿಯಮಗಳು ಮತ್ತು ಪದಗಳ ಚರಿತ್ರೆಯಲ್ಲಿ ಕಾಣಿಸುವ ಹಲವು ಬದಲಾವಣೆಗಳು ಈ ಹಂಚಿಕೆಯನ್ನವಲಂಬಿಸಿವೆ.

ಮೇಲೆ

ನಾವು

ಉದ್ದಸ್ವರವಿರುವ ಉಲಿಕಂತೆಗಳು ಮತ್ತು ಒಂದು ವ್ಯಂಜನದಲ್ಲಿ ಕೊನೆ ತೂಕದವು; ಉಳಿದ ಉಲಿಕಂತೆಗಳೆಲ್ಲ ಗೊಳ್ಳುವ ಉಲಿಕಂತೆಗಳು ಹಗುರದವು. ಉಲಿಕಂತೆಗಳ ಮೊದಲಿಗೆ ಬರುವ ವ್ಯಂಜನಕ್ಕೆ ಅವುಗಳ ಈ ಹಂಚಿಕೆಯಲ್ಲಿ ಯಾವ ಕೆಲಸವೂ ಇಲ್ಲ.

ಉದಾಹರಣೆಗಾಗಿ,

ಉಲಿಕಂತೆಗಳಿದ್ದು (ಕೆ ಮತ್ತು ಡು) ಅವೆರಡೂ ಹಗುರ ಉಲಿಕಂತೆಗಳು.

ಪದದಲ್ಲಿ

ಇದೇ ರೀತಿಯಲ್ಲಿ *ಇಟು ‘ಇಡು’ ಪದದಲ್ಲೂ ಎರಡು ಉಲಿಕಂತೆಗಳಿದ್ದು (ಇ ಮತ್ತು ಡು) ಅವೆರಡೂ ಹಗುರದವೇ. ಆದರೆ, *ಕಟ್ಟು ಪದದಲ್ಲಿರುವ ಎರಡು (ಕಟ್ ಮತ್ತು ಟು) ಉಲಿಕಂತೆಗಳಲ್ಲಿ ಮೊದಲನೆಯದು ತೂಕದ ಉಲಿಕಂತೆ ಮತ್ತು ಎರಡನೆಯದು ಹಗುರದ ಉಲಿಕಂತೆ. *ಈ ‘ನೊಣ’, *ಅಲ್ ‘ಅಲ್ಲ’, *ಕಲ್ ‘ಕಲ್ಲು’, *ಆಳ್ ‘ಆಳು’, *ಕೇಳ್ ‘ಕೇಳು’ ಮೊದಲಾದ ಪದಗಳಲ್ಲಿ ಒಂದೇ ಉಲಿಕಂತೆಯಿದ್ದು ಅವೆಲ್ಲವುಗಳಲ್ಲೂ ಅದು ತೂಕದ ಉಲಿಕಂತೆಯಾಗಿದೆ.

ಒಂದು ಪದದಲ್ಲಿ ಬರುವ ಬೇರು ಮತ್ತು ಒಟ್ಟುಗಳ ನಡುವಿನ ವಿಂಗಡಣೆಗೂ ಅದರ ಉಲಿಕಂತೆಗಳ ನಡುವಿನ ವಿಂಗಡಣೆಗೂ ನಡುವೆ ಯಾವ ಸಂಬಂದವೂ ಇಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ತೂಕದ ಮತ್ತು ಹಗುರದ ಉಲಿಕಂತೆಗಳು ಪದಗಳ ‘ರಚನೆ’ಯನ್ನು ವಿವರಿಸುವಲ್ಲಿ ಬಳಕೆಯಾಗುತ್ತವೆ ಮತ್ತು ಬೇರು-ಒಟ್ಟುಗಳು ಅವುಗಳ ‘ಒಳರಚನೆ’ಯನ್ನು ವಿವರಿಸುವಲ್ಲಿ ಬಳಕೆಯಾಗುತ್ತವೆ.

ಉದಾಹರಣೆಗಾಗಿ, *ಪಕಲ್ ‘ಹಗಲು’ ಪದದ ರಚನೆಯಲ್ಲಿ ಪ ಮತ್ತು ಕಲ್ ಎಂಬ ಎರಡು ಉಲಿಕಂತೆಗಳನ್ನು ಕಾಣಬಹುದು. ಆದರೆ ಅದೇ ಪದದ ಒಳರಚನೆಯಲ್ಲಿ *ಪಕ್ ಬೇರಿನ ಅನಂತರ *ಅಲ್ ಒಟ್ಟು

Eke →

6.4 ಪದರಚನೆಯಲ್ಲಿ ಬೇರುಗಳ ಬಳಕೆ

ಮೇಲೆ ಸೂಚಿಸಿದ ಮೂರು ರೀತಿಯ ಬೇರುಗಳು (ನಾಮಬೇರು, ಕ್ರಿಯಾ ಬೇರು ಮತ್ತು ಗುಣಬೇರು) ಮೂಲದ್ರಾವಿಡ ಪದಗಳ ಒಳರಚನೆಯಲ್ಲಿ ಹೇಗೆ ಬಳಕೆಯಾಗುತ್ತಿದ್ದುವು ಎಂಬ ವಿಶಯದಲ್ಲಿ ಇನ್ನೂ ಬಹಳಶ್ಟು ಸಂಶೋದನೆಗಳನ್ನು ನಡೆದ ಸಂಶೋದನೆಗಳಲ್ಲಿ ಹೆಚ್ಚಿನವೂ ಕ್ರಿಯಾಬೇರುಗಳನ್ನು ಬಳಸಿ ಕ್ರಿಯಾಪದ, ನಾಮಪದ ಇಲ್ಲವೇ ಗುಣಪದಗಳನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಮಾತ್ರವೇ ವಿವರಿಸಲು ಪ್ರಯತ್ನಿಸಿವೆ.

ನಡೆಸಬೇಕಾಗಿದೆ.

ಇದುವರೆಗೆ

ಕ್ರಿಯಾಬೇರುಗಳಿಗಿಂತ ಬೇರಾಗಿರುವ ಹಲವಾರು ನಾಮಬೇರುಗಳು ಮತ್ತು ಗುಣಬೇರುಗಳು ಮೂಲದ್ರಾವಿಡದಲ್ಲಿ ಇದ್ದುವಾದ ಕಾರಣ ಮತ್ತು ಅವನ್ನು ಬಳಸಿಯೂ ಕ್ರಿಯಾಪದಗಳನ್ನು (ಇಲ್ಲವೇ ನಾಮಪದಗಳನ್ನು ಮತ್ತು ಪಡೆಯಲು ಮೂಲದ್ರಾವಿಡದಲ್ಲಿ ಆ ರೀತಿಯ ಪದಗಳ ರಚನೆ ಹೇಗಿದ್ದಿರಬಹುದು ಮತ್ತು ಅದು ಹೇಗೆ ಇವತ್ತಿನ ದ್ರಾವಿಡ ನುಡಿಗಳಲ್ಲಿ ಉಳಿದುಕೊಂಡಿದೆ ಎಂಬುದನ್ನೂ ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಗುಣಪದಗಳನ್ನು)

ಸಾದ್ಯವಿತ್ತಾದ

ಮೇಲೆ

ಈ ವಿಶಯದ

ಹೆಚ್ಚಿನ ಒತ್ತು

ಕೊಡುವುದಕ್ಕಾಗಿ ಮೂಲದ್ರಾವಿಡದ ಕ್ರಿಯಾಪದಗಳ, ನಾಮಪದಗಳ ಮತ್ತು ಗುಣಪದಗಳ ರಚನೆಯಲ್ಲಿ ಈ ಮೂರು ಬೇರೆ ಬೇರೆ ರೀತಿಯ ಬೇರುಗಳ ಬಳಕೆ ಹೇಗೆ ನಡೆದಿರಬಹುದು ಮತ್ತು ಕನ್ನಡ ಆ ಬಳಕೆಯನ್ನು ಯಾವ ರೀತಿಯಲ್ಲಿ ಉಳಿಸಿಕೊಂಡಿದೆ ಎಂಬುದನ್ನು ಮೂರು ಬೇರೆ ಬೇರೆ ಅದ್ಯಾಯಗಳಲ್ಲಿ (ಏಳು, ಒಂಬತ್ತು ಮತ್ತು ಹನ್ನೊಂದನೇ ಅದ್ಯಾಯಗಳಲ್ಲಿ) ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

Eke →

6.5 ತಿರುಳು

ಈ ಅದ್ಯಾಯದಲ್ಲಿ ಮೂಲದ್ರಾವಿಡದಲ್ಲಿ ಬಳಕೆಯಾಗುತ್ತಿದ್ದ ಬೇರುಗಳ ಸ್ವರೂಪವೆಂತಹದು ಎಂಬುದನ್ನು ಮತ್ತು ಪದರಚನೆಯಲ್ಲಿ ಅವುಗಳ ಬಳಕೆ ಹೇಗಿದ್ದಿರಬಹುದು ಎಂಬುದನ್ನು ಬಹಳ ಚುಟುಕಾಗಿ ವಿವರಿಸಲಾಗಿದೆ.

ನಾಮಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬುದಾಗಿ ಮೂರು ಮುಕ್ಯ ಗುಂಪುಗಳಲ್ಲಿ ಹಂಚಿಕೆಯಾಗಬಲ್ಲ ಬೇರುಗಳು ಮೂಲದ್ರಾವಿಡ ದಲ್ಲಿದ್ದಿರಬೇಕು. ಕನ್ನಡದಲ್ಲೂ ಈ ಮೂರು ರೀತಿಯ ಬೇರುಗಳು ಬಳಕೆ ಯಲ್ಲಿವೆ.

ಮೇಲೆ ಸೂಚಿಸಿದ ಹಾಗೆ, ಈ ಮೂರು ರೀತಿಯ ಬೇರುಗಳು ಮತ್ತು ಬೇರೆ ಕೆಲವು ರೀತಿಯ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಬರುವ ಬೇರುಗಳು ಪದರಚನೆಯಲ್ಲಿ ಹೇಗೆ ಬಳಕೆಯಾಗುತ್ತವೆ, ಅವುಗಳ ಬಳಕೆಯಲ್ಲಿ ಕನ್ನಡ

ಎಂತಹ ಬದಲಾವಣೆಗಳನ್ನೆಲ್ಲ ಮಾಡಿಕೊಂಡಿದೆ ಎಂಬುದನ್ನು ಹೆಚ್ಚು ವಿವರವಾಗಿ ಮುಂದಿನ ಅದ್ಯಾಯಗಳಲ್ಲಿ ಸೂಚಿಸಲಾಗುವುದು.

7. ಕ್ರಿಯಾಪದಗಳ ಒಳರಚನೆ

Eke →

7.1 ಮುನ್ನೋಟ

ಮೂಲದ್ರಾವಿಡದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರ ಬಂದಿರಲು ಸಾದ್ಯವಿತ್ತು ಮತ್ತು ಆ ಬೇರಿನ ಅನಂತರ ಹಲವು ರೀತಿಯ ಒಟ್ಟುಗಳೂ ಬಂದಿರಲು ಸಾದ್ಯವಿತ್ತು.

ಕನ್ನಡದಲ್ಲೂ ಇಂತಹದೇ ಪರಿಸ್ತಿತಿಯನ್ನು ಕಾಣಬಹುದು. ನಿಲ್, ಉಣ್, ಕೆಯ್ ಮೊದಲಾದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರ ಬಳಕೆಯಾಗಿದೆ. ಆದರೆ ಬೆಳೆ, ತಿಳಿ, ತೊಡಗು, ಬೆವರು ಮೊದಲಾದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರವಲ್ಲದೆ ಒಂದು ಇಲ್ಲವೇ ಎರಡು ಒಟ್ಟುಗಳೂ ಬಳಕೆಯಾಗಿವೆ.

ಈ ರೀತಿ ಬೇರುಗಳೊಂದಿಗೆ ಒಟ್ಟುಗಳೂ ಬಂದಿರುವ ಕ್ರಿಯಾಪದಗಳ ಅದ್ಯಾಯದಲ್ಲಿ

ಎಂಬುದನ್ನು

ಒಳರಚನೆಯುಂತಹದು ಪರಿಶೀಲಿಸಲಾಗಿದೆ.

ವ್ಯತ್ಯಾಸದ ಆದಾರದ

Eke →

7.2 ಆಗುವಿಕೆ ಮತ್ತು ಮಾಡುವಿಕೆ

ಮೂಲದ್ರಾವಿಡ ಕ್ರಿಯಾಪದಗಳ ರಚನೆಯನ್ನು ಹೆಚ್ಚಿನ ವಿದ್ವಾಂಸರೂ ಸಕರ್ಮಕ-ಅಕರ್ಮಕ ಮೇಲೆ ವಿವರಿಸಲು ಪ್ರಯತ್ನಿಸಿದ್ದಾರೆ. ಈ ವ್ಯತ್ಯಾಸ ಕ್ರಿಯಾಪದಗಳು ಸೂಚಿಸುವ ಕೆಲಸಗಳಲ್ಲಿ ಎಶ್ಟು ಮಂದಿ ವ್ಯಕ್ತಿ, ವಸ್ತು ಮೊದಲಾದವುಗಳು (ಇಲ್ಲವೇ ಅವುಗಳ ಗುಂಪುಗಳು) ತೊಡಗಿಕೊಂಡಿವೆ (ಒಂದು ಇಲ್ಲವೇ ಜಾಸ್ತಿ) ಎಂಬ ವಿಶಯದ ಮೇಲೆ ಅವಲಂಬಿಸಿದೆ.

ಒಂದು ಕೆಲಸದಲ್ಲಿ ತೊಡಗಿಕೊಂಡಿರುವುದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ಆಗಿದೆಯಾದರೆ, ಆ ಕೆಲಸವನ್ನು ಸೂಚಿಸುವ

ಕ್ರಿಯಾಪದವನ್ನು ‘ಅಕರ್ಮಕ’ವೆಂದು ಕರೆಯಲಾಗುತ್ತದೆ ಮತ್ತು ಅದರಲ್ಲಿ ಒಂದಕ್ಕಿಂತ ಜಾಸ್ತಿ ವ್ಯಕ್ತಿ ಇಲ್ಲವೇ ವಸ್ತುಗಳು ತೊಡಗಿಕೊಂಡಿವೆಯಾದರೆ, ಅಂತಹ ಕ್ರಿಯಾಪದವನ್ನು ‘ಸಕರ್ಮಕ’ವೆಂದು ಕರೆಯಲಾಗುತ್ತದೆ.

ಉದಾಹರಣೆಗಾಗಿ, ಬೀಳು ಕ್ರಿಯಾಪದವು ಸೂಚಿಸುವ ಕೆಲಸದಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ತೊಡಗಿಕೊಂಡಿರಬಲ್ಲುದು; ಹಾಗಾಗಿ, ಬೀಳು ಕ್ರಿಯಾಪದ ಅಕರ್ಮಕ. ಆದರೆ, ಕೊಲ್ಲು ಕ್ರಿಯಾಪದವು ಸೂಚಿಸುವ ಕೆಲಸದಲ್ಲಿ ಕೊಲ್ಲುವ ವ್ಯಕ್ತಿ ಮತ್ತು ಕೊಲೆಯಾಗುವ ವ್ಯಕ್ತಿ (ಇಲ್ಲವೇ ಪ್ರಾಣಿ) ಎಂಬುದಾಗಿ ಕಡಿಮೆಯುಂದರೆ ಎರಡು ವ್ಯಕ್ತಿ ಇಲ್ಲವೇ ಪ್ರಾಣಿಗಳಾದರೂ ತೊಡಗಿಕೊಂಡಿರಬೇಕಾಗುತ್ತದೆ. ಹಾಗಾಗಿ, ಕೊಲ್ಲು ಕ್ರಿಯಾಪದ ಸಕರ್ಮಕ (ಹಲವಚನದಲ್ಲಿ ಬರುವ ಪದ ಹಲವು ವ್ಯಕ್ತಿ ಇಲ್ಲವೇ ವಸ್ತುಗಳನ್ನು ಸೂಚಿಸುವುದಾದರೂ, ಅದು ಅವುಗಳ ಒಂದು ಗುಂಪನ್ನು ಸೂಚಿಸುವ ಕಾರಣ, ಅದನ್ನೂ ಇಲ್ಲಿ ‘ಒಂದು’ ಎಂಬುದಾಗಿ ಪರಿಗಣಿಸಲಾಗುತ್ತದೆ).

ಮೂಲದ್ರಾವಿಡ ವ್ಯಾಕರಣಗಳಲ್ಲಿ ಮಾತ್ರವಲ್ಲದೆ ಹೆಚ್ಚಿನ ದ್ರಾವಿಡ ನುಡಿಗಳ ವ್ಯಾಕರಣಗಳಲ್ಲೂ ಕ್ರಿಯಾಪದಗಳ ರಚನೆಯನ್ನು ಈ ಸಕರ್ಮಕ- ಅಕರ್ಮಕ ವ್ಯತ್ಯಾಸದ ಮೇಲೇನೇ ವಿವರಿಸಲಾಗಿದೆ.

ಆದರೆ, ನಿಜಕ್ಕೂ ಇದು ಸಂಸ್ಕ್ರುತ, ಲ್ಯಾಟಿನ್, ಇಂಗ್ಲಿಶ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳ ಕ್ರಿಯಾಪದಗಳನ್ನು ವಿವರಿಸುವಲ್ಲಿ ಅನುಕೂಲವಾಗಿರುವಂತಹ ವ್ಯತ್ಯಾಸವಾಗಿದೆಯಲ್ಲದೆ, ದ್ರಾವಿಡ ನುಡಿಗಳ ಕ್ರಿಯಾಪದಗಳನ್ನು ವಿವರಿಸುವಲ್ಲಿ ಅನುಕೂಲವಾದಂತಹ ವ್ಯತ್ಯಾಸವಲ್ಲ. ಇದಕ್ಕೆ ಕಾರಣವೇನೆಂದರೆ, ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಗಿಂತಲೂ ಕೆಲಸದ ಸ್ವರೂಪಕ್ಕೇನೇ ದ್ರಾವಿಡ ನುಡಿಗಳಲ್ಲಿ ಹೆಚ್ಚಿನ ಬೆಲೆಯಿದೆ.

ಉದಾಹರಣೆಗಾಗಿ, ತಮಿಳು ಮತ್ತು ಕನ್ನಡ ಕ್ರಿಯಾಪದಗಳ ಕುರಿತು

ನಡೆಸಿದ ಎರಡು ಸಂಶೋದನೆಗಳನ್ನು ಇಲ್ಲಿ ಪರಿಶೀಲಿಸಬಹುದು.

Eke →

7.2.1 ತಮಿಳಿನಲ್ಲಿ ಕೆಲಸದ ಪರಿಣಾಮ

ತಮಿಳಿನಲ್ಲಿ ಒಂದು ಕೆಲಸದ ಪರಿಣಾಮ ಅದನ್ನು ಮಾಡಿದ ವ್ಯಕ್ತಿಯ ಮೇಲೆ ಆಗಿದೆಯೇ ಇಲ್ಲವೇ ಬೇರೊಬ್ಬ ವ್ಯಕ್ತಿಯ ಮೇಲೆ (ಇಲ್ಲವೇ ಬೇರೆ ಪ್ರಾಣಿ ಇಲ್ಲವೇ ವಸ್ತುವಿನ ಮೇಲೆ) ಆಗಿದೆಯೇ ಎಂಬ ವಿಶಯದ ಮೇಲೆ ಅದರ ಕ್ರಿಯಾಪದಗಳನ್ನು ವಿಂಗಡಿಸುವುದು ಅವಶ್ಯ ಎಂಬುದಾಗಿ ಪರಮಶಿವಂ ಅವರು ತೋರಿಸಿಕೊಟ್ಟಿದ್ದಾರೆ (ಪರಮಶಿವಂ 1979).

ತಮಿಳಿನಲ್ಲಿ ಇದಕ್ಕಾಗಿ ಎರಡು ರೀತಿಯ ಕ್ರಿಯಾಪದಗಳನ್ನು ಇಲ್ಲವೇ ಕ್ರಿಯಾರೂಪಗಳನ್ನು ಬಳಸಲಾಗುತ್ತದೆ. ಉದಾಹರಣೆಗಾಗಿ, ವಳಯ್ ‘ಸುತ್ತುವರಿ’ ಕ್ರಿಯಾಪದಕ್ಕೆ ‘ಸುತ್ತುವರಿದು’ ಎಂಬ ಅರ್ತವನ್ನು ಕೊಡುವ ವಳಯ್ನ್ತು ಮತ್ತು ವಳಯ್ತ್ತು ಎಂಬ ಎರಡು ಕ್ರಿಯಾರೂಪಗಳಿವೆ.

ಅವುಗಳಲ್ಲಿ ಮೊದಲನೆಯದು ಸುತ್ತುವರಿಯುವ ಕೆಲಸದ ಪರಿಣಾಮ ಸುತ್ತುವರಿಯುವ ವ್ಯಕ್ತಿಗಳ (ಗುಂಪಿನ) ಮೇಲೆ ನಡೆಯುತ್ತದೆಯುಂಬುದನ್ನು ವ್ಯಕ್ತಿಗಳು ಸೂಚಿಸುತ್ತದೆ ಸುತ್ತುವರಿದಿರುವಂತಹ ವ್ಯಕ್ತಿಯ ಮೇಲೆ ನಡೆಯುತ್ತದೆಯುಂಬುದನ್ನು ಸೂಚಿಸುತ್ತದೆ.

ಎರಡನೆಯದು

ಮತ್ತು

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಎರಡು ತಮಿಳು ವಾಕ್ಯಗಳ

ನಡುವಿನ ವ್ಯತ್ಯಾಸವನ್ನು ಗಮನಿಸಬಹುದು.

(1ಕ) ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಂಟಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದರು’ (1ಚ) ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಂಟಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದರು’

ಮೇಲಿನ ಎರಡು ವಾಕ್ಯಗಳೂ ‘ಸಕರ್ಮಕ’ ವಾಕ್ಯಗಳೇ. ಯಾಕೆಂದರೆ ಅವೆರಡರಲ್ಲೂ ನಟಿಕಯ್ ಮತ್ತು ರಚಿಕರ್ಕಳ್ ಎಂಬ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪನ್ನು ಸೂಚಿಸುವ ಎರಡು ನಾಮಪದಗಳು ಬಂದಿವೆ. ಆದರೆ

ತಮಿಳಿನಲ್ಲಿ ಈ ಎರಡು ವಾಕ್ಯಗಳ ನಡುವೆ ಅರ್ತದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವಿದೆ. (ಕನ್ನಡದಲ್ಲಿ ಈ ವ್ಯತ್ಯಾಸವನ್ನು ನೇರವಾಗಿ ಸೂಚಿಸಬಲ್ಲ ಕ್ರಿಯಾರೂಪಗಳಿಲ್ಲ).

(1ಕ) ವಾಕ್ಯದಲ್ಲಿ ವಳಯ್ ‘ಸುತ್ತುವರಿ’ ಕ್ರಿಯಾಪದ ವಳಯ್ನ್ತು ಎಂಬ ರೂಪದಲ್ಲಿ ಬಂದಿದ್ದು, ಅದು ನಟಿಯ ಅಬಿಮಾನಿಗಳಿಗೆ ಏನಾಯಿತು ಎಂಬುದನ್ನು ತಿಳಿಸುತ್ತದೆ; ಆದರೆ (1ಚ) ವಾಕ್ಯದಲ್ಲಿ ಅದೇ ಕ್ರಿಯಾಪದ ವಳಯ್ತ್ತು ಎಂಬ ರೂಪದಲ್ಲಿ ಬಂದಿದ್ದು, ಅದು ನಟಿಗೆ ಆಕೆಯ ಅಬಿಮಾನಿಗಳು ಏನು ಮಾಡಿದರು ಎಂಬುದನ್ನು ಸೂಚಿಸುತ್ತದೆ.

ಈ ಕಾರಣಕ್ಕಾಗಿ, ಅಬಿಮಾನಿಗಳಿಗೆ ಬೇರೆ ಏನಾಯಿತು ಎಂಬುದನ್ನು ಸೂಚಿಸುವ ಕ್ರಿಯಾರೂಪವನ್ನು (1ಕ) ವಾಕ್ಯದ ಅನಂತರ ಬಳಸಲು ಸಾದ್ಯವಿದೆಯಲ್ಲದೆ (1ಚ) ವಾಕ್ಯದ ಅನಂತರ ಬಳಸಲು ಸಾದ್ಯವಾಗದು.

(2ಕ) ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಣ್ಟು ಆಟಿನಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದು ಕುಣಿದರು’
(2ಚ) *ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಣ್ಟು ಆಟಿನಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದು ಕುಣಿದರು’

(2ಚ) ವಾಕ್ಯದಲ್ಲಿ ಅಬಿಮಾನಿಗಳಿಗೆ ಬೇರೆ ಏನಾಯಿತು ಎಂಬುದನ್ನು ಸೂಚಿಸುವ ಆಟಿನಾರ್ಕಳ್ ಕ್ರಿಯಾರೂಪವನ್ನು ಅವರು ನಟಿಗೆ ಏನು ಮಾಡಿದರು ಎಂಬುದನ್ನು ತಿಳಿಸುವ ವಳಯ್ತ್ತುಕೊಣ್ಟು ಕ್ರಿಯಾರೂಪದ ಅನಂತರ ಬಳಸಲಾಗಿದೆಯಾದ ಕಾರಣ, ಆ ವಾಕ್ಯ ವ್ಯಾಕರಣದ ಮಟ್ಟಿಗೆ ಸರಿಯಲ್ಲ. (ಇಲ್ಲಿ ಒಂದು ವಾಕ್ಯ ವ್ಯಾಕರಣದ ಮಟ್ಟಿಗೆ ಸರಿಯಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ನಕ್ಶತ್ರ ಚಿಹ್ನೆ(*)ಯನ್ನು ಬಳಸಲಾಗಿದೆ).

ಇದೇ ರೀತಿಯಲ್ಲಿ ಅಬಿಮಾನಿಗಳು ನಟಿಗೆ ಬೇರೆ ಏನು ಮಾಡಿದರು ಎಂಬುದನ್ನು ಸೂಚಿಸುವ ಕ್ರಿಯಾರೂಪವೊಂದನ್ನು ಅವರು ನಟಿಗೆ ಏನು ಮಾಡಿದರು ಎಂಬುದನ್ನು ತಿಳಿಸುವ (1ಚ) ವಾಕ್ಯದ ಅನಂತರ ಬಳಸಲು

ಸಾದ್ಯವಿದೆಯಲ್ಲದೆ ಅಬಿಮಾನಿಗಳಿಗೆ ಏನಾಯಿತು ಎಂಬುದನ್ನು ತಿಳಿಸುವ (1ಕ) ವಾಕ್ಯದ ಅನಂತರ ಬಳಸಲು ಸಾದ್ಯವಾಗದು.

(3ಕ) *ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಣ್ಟು ಅಟಿತ್ತಾರ್ಕಳ್ ನಟಿಯನ್ನು

ಸುತ್ತುವರಿದು

‘ಅಬಿಮಾನಿಗಳು ಹೊಡೆದರು’’

(3ಚ) ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಣ್ಟು ಅಟಿತ್ತಾರ್ಕಳ್ ನಟಿಯನ್ನು

ಸುತ್ತುವರಿದು

‘ಅಬಿಮಾನಿಗಳು ಹೊಡೆದರು’’

(3ಕ) ವಾಕ್ಯ ವ್ಯಾಕರಣದ ಮಟ್ಟಿಗೆ ತಪ್ಪಾಗಲು ಅದರಲ್ಲಿ ಅಬಿಮಾನಿ ಗಳಿಗೆ ಏನಾಯಿತು ಎಂಬುದನ್ನು ಸೂಚಿಸುವ ವಳಯ್ನ್ತುಕೊಣ್ಟು ಕ್ರಿಯಾ ರೂಪದ ಅನಂತರ ವಾಕ್ಯದ ಕೊನೆಯಲ್ಲಿ ಅವರು ನಟಿಗೆ ಬೇರೆ ಏನು ಮಾಡಿದರು ಎಂಬುದನ್ನು ತಿಳಿಸುವ ಅಟಿತ್ತಾರ್ಕಳ್ ಕ್ರಿಯಾರೂಪವನ್ನು ಬಳಸಿದುದೇ ಕಾರಣ.

ಮೇಲೆ ಸೂಚಿಸಿದ ಹಾಗೆ, ಹೆಚ್ಚಿನ ವಯ್ಯಾಕರಣಿಗಳೂ ತಮಿಳಿನ ಹಲವು ಕ್ರಿಯಾಪದಗಳಲ್ಲಿ ಮತ್ತು ಕೆಲವು ಕ್ರಿಯಾರೂಪಗಳಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಸಕರ್ಮಕ-ಅಕರ್ಮಕ ವ್ಯತ್ಯಾಸವೆಂದು ವರ್ಣಿಸಿದ್ದಾರೆ. ಆದರೆ ಈ ಎರಡು ರೀತಿಯ ವಾಕ್ಯಗಳಲ್ಲೂ ಎರಡೆರಡು ನಾಮಪದಗಳ ಬಳಕೆ ಯಾಗಿದೆಯಾದ ಕಾರಣ ಮತ್ತು ಅವುಗಳ ನಡುವಿನ ವ್ಯತ್ಯಾಸ ವಾಕ್ಯಗಳಲ್ಲಿ ಬರುವ ನಾಮಪದಗಳ ಎಣಿಕೆಯ ಮೇಲೆ ಅವಲಂಬಿಸಿಲ್ಲವಾದ ಕಾರಣ, ಅದನ್ನು ಅಕರ್ಮಕ-ಸಕರ್ಮಕ ವ್ಯತ್ಯಾಸವೆಂದು ಕರೆಯುವುದು ಸರಿಯಲ್ಲ ಎಂಬುದಾಗಿ ಪರಮಶಿವಂ ವಾದಿಸಿದ್ದಾರೆ.

Eke →

6.2.2 ಕನ್ನಡದಲ್ಲಿ ಆಗುವಿಕೆ-ಮಾಡುವಿಕೆ ವ್ಯತ್ಯಾಸ

ಕನ್ನಡದಲ್ಲಿ ಇಂತಹದೇ ಒಂದು ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಇಸು ಒಟ್ಟನ್ನು ಬಳಸಲಾಗುತ್ತದೆ. ಇದನ್ನೂ ವಯ್ಯಾಕರಣಿಗಳು ಅಕರ್ಮಕ-ಸಕರ್ಮಕ

ವ್ಯತ್ಯಾಸವೆಂದೇ ಕರೆದಿದ್ದಾರೆ. ಆದರೆ ಕನ್ನಡದ ಮಟ್ಟಿಗೂ ಇದು ಸರಿಯಲ್ಲ. ಯಾಕೆಂದರೆ, ಕನ್ನಡದಲ್ಲೂ ವಾಕ್ಯಗಳು ಸೂಚಿಸುವ ಕೆಲಸಗಳಲ್ಲಿ ಎಶ್ಟು ಮಂದಿ ತೊಡಗಿಕೊಂಡಿರುವರೆಂಬ ವಿಶಯಕ್ಕಿಂತಲೂ ಆ ಕೆಲಸಗಳು ಆಗುವಿಕೆಗಳೇ ಇಲ್ಲವೇ ಮಾಡುವಿಕೆಗಳೇ ಎಂಬ ವಿಶಯಕ್ಕೇನೇ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಡುವ ಅವಶ್ಯಕತೆಯಿದೆ.

ಸಕರ್ಮಕ-ಅಕರ್ಮಕ ವ್ಯತ್ಯಾಸವಿರುವ ನುಡಿಗಳಲ್ಲಿ ಅಕರ್ಮಕ ಕ್ರಿಯಾಪದ ಗಳನ್ನು ಸಕರ್ಮಕ ಕ್ರಿಯಾಪದಗಳನ್ನಾಗಿ ಮಾಡುವ ವಿದಾನಕ್ಕಿಂತ ಕನ್ನಡದಲ್ಲಿ ಕ್ರಿಯಾಪದಕ್ಕೆ ಇಸು ಒಟ್ಟನ್ನು ಸೇರಿಸುವ ವಿದಾನ ಹಲವು ವಿಶಯಗಳಲ್ಲಿ ಬೇರಾಗಿದೆ. ಇದನ್ನು ಸೂಚಿಸುವಂತಹ ನಾಲ್ಕು ವಿಶಯಗಳನ್ನು ಕೆಳಗೆ ಕೊಡಲಾಗಿದೆ.

(1) ಇಸು ಒಟ್ಟಿನ ಮೂಲಕ ಕನ್ನಡದಲ್ಲಿ ಒಬ್ಬ ವ್ಯಕ್ತಿ ಮಾತ್ರ ತೊಡಗಿಕೊಂಡಿರುವ ಅಕರ್ಮಕ ಕ್ರಿಯಾಪದಗಳನ್ನು ಮಾತ್ರವಲ್ಲದೆ ಇಬ್ಬರು ವಸ್ತು) ವ್ಯಕ್ತಿಗಳು ವ್ಯಕ್ತಿ ತೊಡಗಿಕೊಂಡಿರುವ ‘ಸಕರ್ಮಕ’ ಕ್ರಿಯಾಪದಗಳನ್ನೂ ಬದಲಾಯಿಸಲು ಸಾದ್ಯವಿದೆ.

(ಇಲ್ಲವೇ ಒಬ್ಬ

ಮತ್ತು ಒಂದು

(4ಕ) ರಾಜು ಓಡಿದ (4ಚ) ಹರಿ ರಾಜುವನ್ನು ಓಡಿಸಿದ

(5ಕ) ರಾಜು ಹಣ್ಣು ತಿಂದ (5ಚ) ಹರಿ ರಾಜುವಿಗೆ ಹಣ್ಣು ತಿನ್ನಿಸಿದ

(5ಕ)ದಲ್ಲಿ ಬಂದಿರುವ ತಿನ್ನು ಕ್ರಿಯಾಪದ ಅಕರ್ಮಕವಲ್ಲ, ಸಕರ್ಮಕ; ಯಾಕೆಂದರೆ, ಅದರೊಂದಿಗೆ ಎರಡು ನಾಮಪದಗಳು (ರಾಜು ಮತ್ತು ಹಣ್ಣು) ಬಳಕೆಯಾಗಿವೆ. ಹೀಗಿದ್ದರೂ, ಅದಕ್ಕೆ ಇಸು ಒಟ್ಟನ್ನು ಸೇರಿಸಲು ಸಾದ್ಯ ಎಂಬುದನ್ನು (5ಚ)ದಲ್ಲಿ ಕಾಣಬಹುದು.

ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಈ ಇಸು ಒಟ್ಟಿನ ಕೆಲಸ ಅಕರ್ಮಕ ಕ್ರಿಯಾಪದವನ್ನು ಸಕರ್ಮಕವಾಗಿ ಮಾಡುವುದಲ್ಲ; ಒಂದು ಕೆಲಸದ

ಮೇಲೆ ಒಬ್ಬ ವ್ಯಕ್ತಿಗಿರುವ ಹಿಡಿತವನ್ನು ತಪ್ಪಿಸಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕೊಡುವುದೇ ಅದರ ಕೆಲಸ. ಮೇಲೆ (ಕ) ವಾಕ್ಯಗಳಲ್ಲಿ ಒಂದು ಕೆಲಸದ ಮೇಲೆ ರಾಜುವಿಗಿದ್ದ ಹಿಡಿತವನ್ನು (ಚ) ವಾಕ್ಯಗಳಲ್ಲಿ ತಪ್ಪಿಸಿ, ಆ ಹಿಡಿತವನ್ನು ಹರಿಗೆ ಕೊಡಲಾಗಿದೆ.

(2) ಕನ್ನಡದಲ್ಲಿ ಕೊಳ್ಳು ಎಂಬುದರ ಬಳಕೆಯೂ ಇದೇ ರೀತಿಯಲ್ಲಿ ಸಕರ್ಮಕ-ಅಕರ್ಮಕ ವ್ಯತ್ಯಾಸಗಳಿರುವ ನುಡಿಗಳಲ್ಲಿರುವ ಹಾಗೆ ಬರಿಯ ಸಕರ್ಮಕ ಕ್ರಿಯಾಪದಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಬ್ಬನೇ ವ್ಯಕ್ತಿ ತೊಡಗಿಕೊಂಡಿರುವ ಕ್ರಿಯಾಪದಗಳೊಂದಿಗೂ ಅದನ್ನು ಬಳಸಲು ಸಾದ್ಯವಿದೆ. ಒಂದು ಕೆಲಸ ಪೂರ್ತಿ ಅದನ್ನು ನಡೆಸುವ ವ್ಯಕ್ತಿಯ ಹಿಡಿತದಲ್ಲಿದೆ ಮತ್ತು ಅದು ಆತನ ಹಿತಕ್ಕಾಗಿಯೇ ನಡೆದಿದೆ ಎಂಬುದನ್ನು ಸೂಚಿಸುವುದೇ ಅದರ ಕೆಲಸ.

(6ಕ) ಮಗು ನಿಂತಿದೆ (6ಚ) ಮಗು ನಿಂತುಕೊಂಡಿದೆ

(7ಕ) ಹರಿ ರಾಜುವನ್ನು ದೂರಿದ (7ಚ) ರಾಜು ತನ್ನನ್ನೇ ದೂರಿಕೊಂಡ

ವಾಕ್ಯ (6)ರಲ್ಲಿ ಬಂದಿರುವ ನಿಲ್ಲು ಕ್ರಿಯಾಪದ ಅಕರ್ಮಕ ಮತ್ತು (7)ನೇ ವಾಕ್ಯದಲ್ಲಿ ಬಂದಿರುವ ದೂರು ಕ್ರಿಯಾಪದ ಸಕರ್ಮಕ. ಆದರೆ ಕನ್ನಡದಲ್ಲಿ ಈ ಎರಡು ರೀತಿಯ ಕ್ರಿಯಾಪದಗಳೊಂದಿಗೂ ಕೊಳ್ಳು ಎಂಬುದನ್ನು ಬಳಸಲು ಸಾದ್ಯವಿದೆ (ನಿಂತುಕೊಂಡಿದೆ, ದೂರಿಕೊಂಡ). ತಕ್ಕುದಾದುದಲ್ಲ ಎಂಬುದು ಕನ್ನಡಕ್ಕೆ ಸಕರ್ಮಕ-ಅಕರ್ಮಕ ವ್ಯತ್ಯಾಸ ಇದರಿಂದಲೂ ಸಿದ್ದವಾಗುತ್ತದೆ.

(3) ಬೇರೆ ನುಡಿಗಳಿಂದ ಎರವಲಾಗಿ ಪಡೆದ ಕ್ರಿಯಾಪದಗಳನ್ನು ಕನ್ನಡದಲ್ಲಿ ಬಳಸುವುದಕ್ಕಾಗಿ ಆಗು ಮತ್ತು ಮಾಡು ಎಂಬ ಎರಡು ಕ್ರಿಯಾಪದಗಳನ್ನು ಅವುಗಳೊಂದಿಗೆ ಸೇರಿಸಿ ಬಳಸಲು ಸಾದ್ಯವಿದೆ. ಉದಾಹರಣೆಗಾಗಿ, ಇಂಗ್ಲಿಶ್ನ ಅವ್ಟಾಗು, ಬವ್ಲಾಗು, ಅವ್ಟುಮಾಡು,

ಬವ್್ಲಮಾಡು ಮೊದಲಾದ ಎರವಲುಗಳನ್ನು ಗಮನಿಸಬಹುದು. ಇಲ್ಲಿ ಅಕರ್ಮಕ-ಸಕರ್ಮಕ ವ್ಯತ್ಯಾಸಕ್ಕಿಂತಲೂ ಆಗುವಿಕೆ-ಮಾಡುವಿಕೆ ವ್ಯತ್ಯಾಸವೇ ಮುಕ್ಯವಾಗಿದೆ.

(4) ಕನ್ನಡದಲ್ಲಿ ಎರಡು ವಾಕ್ಯಗಳನ್ನು ಮಾಡಿ, ಮಾಡುತ್ತಾ, ಮಾಡಲು ಮತ್ತು ಮಾಡದೆ ಎಂಬ ನಾಲ್ಕು ರೀತಿಯ ಜೋಡಿಸುವ ಕ್ರಿಯಾರೂಪಗಳ ಮೂಲಕ ಜೋಡಿಸಿ ಹೇಳಲು ಸಾದ್ಯವಿದೆ.

(8ಕ) ರಾಜು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ. (8ಚ) ರಾಜು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ. (8ಟ) ರಾಜು ಊಟ ಮಾಡಲು ನಮ್ಮಲ್ಲಿಗೆ ಬಂದ. (8ತ) ರಾಜು ಊಟ ಮಾಡದೆ ನಮ್ಮಲ್ಲಿಗೆ ಬಂದ.

ಎರಡು ವಾಕ್ಯಗಳನ್ನು ಈ ರೀತಿ ಜೋಡಿಸಬೇಕಿದ್ದಲ್ಲಿ ಅವು ಮಾಡು ವಿಕೆಗಳೇ ಇಲ್ಲವೇ ಆಗುವಿಕೆಗಳೇ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಯಿದೆ. ಯಾಕೆಂದರೆ, ಮಾಡುವಿಕೆಗಳನ್ನು (ಎಂದರೆ ಒಬ್ಬ ವ್ಯಕ್ತಿಯ ಹಿಡಿತದಲ್ಲಿರುವ ಕೆಲಸಗಳನ್ನು) ಸೂಚಿಸುವ ಎರಡು ವಾಕ್ಯಗಳನ್ನು ಇಂತಹ ಜೋಡಿಸುವ ಕ್ರಿಯಾರೂಪಗಳ ಮೂಲಕ ಜೋಡಿಸಬೇಕಿದ್ದಲ್ಲಿ ಅವೆರಡನ್ನು ಮಾಡುವ ವ್ಯಕ್ತಿ ಒಬ್ಬನೇ ಆಗಿರುವ ಅವಶ್ಯಕತೆಯಿದೆ.

(9ಕ) ರಾಜು ತರಕಾರಿ ತಂದು ಅಡುಗೆ ಮಾಡಿದ. (9ಚ) *ರಾಜು ತರಕಾರಿ ತಂದು ಜಾನಕಿ ಅಡುಗೆ ಮಾಡಿದಳು.

ತರಕಾರಿ ತರುವುದು ಮತ್ತು ಅಡುಗೆ ಮಾಡುವುದು ಎಂಬ ಈ ಎರಡು ಕೆಲಸಗಳೂ ಮಾಡುವಿಕೆಗಳಾದ ಕಾರಣ, ಅವನ್ನು ತಂದು ಕ್ರಿಯಾರೂಪದ ಮೂಲಕ ಜೋಡಿಸಬೇಕಿದ್ದಲ್ಲಿ ಅವೆರಡನ್ನೂ ಒಬ್ಬನೇ ವ್ಯಕ್ತಿ ಮಾಡಿರುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ (9ಚ) ವಾಕ್ಯ ಸರಿಯಾದುದಲ್ಲ.

ಎರಡು ಕೆಲಸಗಳೂ ಆಗುವಿಕೆಗಳಾದಲ್ಲಿ ಇಲ್ಲವೇ ಒಂದು ಮಾಡುವಿಕೆ ಮತ್ತು ಇನ್ನೊಂದು ಆಗುವಿಕೆ ಎಂದಿರುವಲ್ಲಿ ಮಾತ್ರ ಈ ರೀತಿ ಬೇರೆ ಬೇರೆ ವ್ಯಕ್ತಿಗಳು ಕೆಲಸಗಳನ್ನು ಜೋಡಿಸಿ ಹೇಳಲು ಸಾದ್ಯವಿದೆ.

ತೊಡಗಿಕೊಂಡಿರುವ

(10ಕ) ಜೋರಾಗಿ ಗಾಳಿ ಬೀಸಿ ತರಗೆಲೆಗಳೆಲ್ಲ ಒಳಗೆ ಬಂದುವು. (10ಚ) ನಾವು ಇಶ್ಟು ಬೇಗ ಬಂದು ಅವಳಿಗೆ ತೊಂದರೆಯಾಯಿತು.

(10ಕ)ದಲ್ಲಿ ಗಾಳಿ ಬೀಸುವುದು ಮತ್ತು ಒಳಗೆ ಬರುವುದು ಎಂಬವು ಎರಡೂ ಆಗುವಿಕೆಗಳು; ಮತ್ತು (10ಚ)ದಲ್ಲಿ ಬೇಗ ಬರುವುದು ಒಂದು ಮಾಡುವಿಕೆ ಮತ್ತು ತೊಂದರೆಯಾಗುವುದು ಒಂದು ಆಗುವಿಕೆ; ಈ ಕಾರಣಕ್ಕಾಗಿ, ಮೇಲಿನ ಎರಡು ಜೋಡಣೆಗಳೂ ಸರಿಯಾಗಿವೆ (ಬಟ್ 2006 ನೋಡಿ). ಸಕರ್ಮಕ-ಅಕರ್ಮಕ

ಮುಕ್ಯವಾದುದಲ್ಲ ಎಂಬುದನ್ನು ಮತ್ತು ಆಗುವಿಕೆ-ಮಾಡುವಿಕೆ ವ್ಯತ್ಯಾಸ ಮುಕ್ಯ ಎಂಬುದನ್ನು ತೋರಿಸಿಕೊಡಲು ಇಂತಹ ಇನ್ನೂ ಹಲವು ವಿಶಯಗಳನ್ನು ಆದಾರವಾಗಿ ಕೊಡಬಹುದು (ಹೆಚ್ಚಿನ ವಿವರಗಳಿಗೆ ಬಟ್ 1991 ನೋಡಿ).

ಕನ್ನಡದಲ್ಲಿ

ವ್ಯತ್ಯಾಸ

Eke →

7.2.3 ಮೂಲದ್ರಾವಿಡದ ವ್ಯತ್ಯಾಸ

ಮೇಲೆ ವಿವರಿಸಿದ ಕಾರಣಗಳಿಗಾಗಿ, ಸಕರ್ಮಕ-ಅಕರ್ಮಕ ಅರ್ತವ್ಯತ್ಯಾಸದ ಬದಲು ತಮಿಳು ಮತ್ತು ಕನ್ನಡ ನುಡಿಗಳಲ್ಲಿ ಕಾಣಿಸಿಕೊಳ್ಳುವ ಈ ಎರಡು ರೀತಿಯ ಅರ್ತವ್ಯತ್ಯಾಸಗಳಲ್ಲಿ ಯಾವುದಾದರೂ ಒಂದನ್ನು ಇಲ್ಲವೇ ಬೇರೊಂದು ಅರ್ತವ್ಯತ್ಯಾಸವನ್ನು ಸಮಾನವಾಗಿರುವ ಅವೆರಡಕ್ಕೂ ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ.

ಕೆಲಸದ ಪರಿಣಾಮ ಆಗುಗನ ಇಲ್ಲವೇ ಮಾಡುಗನ ಮೇಲೆಯೇ ನಡೆದಿದೆಯಾದರೆ ಅದನ್ನು ಆಗುವಿಕೆಯುಂದು ಮತ್ತು ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಮೇಲೆ ನಡೆದಿದೆಯಾದರೆ ಅದನ್ನು ಮಾಡುವಿಕೆಯುಂದು ಸಾದ್ಯವಿದೆ. ಹಾಗಾಗಿ, ಮೂಲದ್ರಾವಿಡ ಕ್ರಿಯಾಪದಗಳ ಕರೆಯಲು

ರಚನೆಯನ್ನು ಇಲ್ಲಿ ಸಕರ್ಮಕ-ಅಕರ್ಮಕ ವ್ಯತ್ಯಾಸದ ಮೂಲಕ ವಿವರಿಸುವ ಬದಲು ಆಗುವಿಕೆ-ಮಾಡುವಿಕೆ ವ್ಯತ್ಯಾಸದ ಮೂಲಕ ವಿವರಿಸಲಾಗಿದೆ.

ಮೂಲದ್ರಾವಿಡದಲ್ಲಿ ಕ್ರಿಯಾಬೇರುಗಳೇನೇ ಆಗುವಿಕೆಗಳನ್ನು ಇಲ್ಲವೇ ಮಾಡುವಿಕೆಗಳನ್ನು ಸೂಚಿಸಲು ಸಾದ್ಯವಿದ್ದು, ಈ ವ್ಯತ್ಯಾಸವನ್ನವಲಂಬಿಸಿ ಅವನ್ನು ಕೆಳಗೆ ಸೂಚಿಸಿದ ಹಾಗೆ ಎರಡು ಗುಂಪುಗಳಲ್ಲಿ ಹಂಚಬಹುದು.

ಮಾಡುವಿಕೆಗಳು ಆಗುವಿಕೆಗಳು *ಕೊಟ್್ಟ ‘ಹೊಡೆ’’ *ಪೂ ‘ಅರಳು’’
*ಕಳ್ ‘ಕದಿ’’ *ನಿಱ್ ‘ತುಂಬು’’ *ಕೊಲ್ ‘ಕೊಲ್ಲು’’ *ಮಾಱ್ ‘ಬದಲು’’ *ವೀೞ್ ‘ಬೀಳು’’ *ಯಾಳ್ ‘ಆಳು’’ *ಚೊಟ್ ‘ತೊಟ್ಟಿಕ್ಕು’’ *ವಿಲ್ ‘ಮಾರು’’ *ಕಯ್ ‘ಕಹಿಯಾಗು’’ *ಪೂಣ್ ‘ಉಡು’’ *ನೀ ‘ಉದ್ದವಾಗು’’

*ನಿಲ್ ‘ನಿಲ್ಲು’’ *ಕೊಯ್ ‘ಕೊಯ್ಯು’’

ಈ ಕ್ರಿಯಾಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಬೇರೆ ಕ್ರಿಯಾಪದಗಳನ್ನು ರಚಿಸುವಲ್ಲೂ ಆಡುವಿಕೆ-ಮಾಡುವಿಕೆ ವ್ಯತ್ಯಾಸವೇ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಕೆಳಗಿನ ವಿವರಣೆಯಿಂದ ತಿಳಿಯಬಹುದು.

Eke →

7.3 ಕ್ರಿಯಾಬೇರುಗಳಿಂದ ಕ್ರಿಯಾಪದಗಳು

ಮೂಲದ್ರಾವಿಡ ಕ್ರಿಯಾಬೇರುಗಳನ್ನು ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಕ್ರಿಯಾಪದಗಳಾಗಿ ಬಳಸಬಹುದಿತ್ತು. ಇದಲ್ಲದೆ ಅವಕ್ಕೆ ಹಲವು ಹೊಸ ಕ್ರಿಯಾಪದಗಳನ್ನು ರಚಿಸಬಹುದಿತ್ತು.

ಪದದೊಟ್ಟುಗಳನ್ನು

ಸೇರಿಸಿಯೂ

ಹೊಸ

Eke →

7.3.1 ಅ, ಇ, ಉ ಒಟ್ಟುಗಳು

ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳ ಅನಂತರ ಅ, ಇ ಮತ್ತು ಕ್ರಿಯಾಪದಗಳನ್ನು ತಯಾರಿಸಬಹುದಿತ್ತು. ಆದರೆ, ಈ ಒಟ್ಟುಗಳು ಯಾವ ಅರ್ತದಲ್ಲಿ ಬರುತ್ತಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಇನ್ನೂ ಸಾದ್ಯವಾಗಿಲ್ಲ. ಕೆಳಗೆ ಕೊಟ್ಟಿರುವ ಕನ್ನಡ ಕ್ರಿಯಾಪದಗಳಲ್ಲಿ ಈ ಮೂರು ಒಟ್ಟುಗಳ

ಮೂರು ಒಟ್ಟುಗಳನ್ನು

ಸೇರಿಸಿ

ಬಳಕೆಯನ್ನು ಕಾಣಬಹುದು.

(ಕ) ಇ ಒಟ್ಟಿನ ಬಳಕೆ

ನೂಲ್ ‘ನೂಲು ಮಾಡು’
ನೂಱು ‘ಜಜ್ಜು’
ಪಾರ್ ‘ಓಡು’
ಕೂನ್ ‘ಬಾಗು, ಕುಸಿ’

ನುಲಿ ‘ತಿರುಪು’’ ನುಱಿ ‘ಪುಡಿಮಾಡು’’ ಪರಿ ‘ಓಡು’’ ಕುನಿ ‘ಬಾಗು, ಮುದುಡು’’

(ಚ) ಉ ಒಟ್ಟಿನ ಬಳಕೆ

ಬೀಸು ‘ಬಿಸಾಡು’’

ಬಿಸು ‘ಬಿಸಾಡು’’ ಅಗು ‘ಆಗು’’

(ಟ) ಅ(ಯ್) ಒಟ್ಟಿನ ಬಳಕೆ

ನಾನ್ ‘ಒದ್ದೆಮಾಡು’’
ನೇರ್ ‘ಒಪ್ಪು’’
ತಾಳ್ ‘ತಾಳ್ಮೆಯಿಂದಿರು’’

ನನೆ ‘ಒದ್ದೆಯಾಗು’’ ನೆರೆ ‘ಒಟ್ಟು ಸೇರು’ ತಳೆ ‘ತಾಳು’

ಮೇಲೆ (ಟ) ವಿಬಾಗದಲ್ಲಿ ಕೊಟ್ಟಿರುವ ಕನ್ನಡ ಉದಾಹರಣೆಗಳಲ್ಲಿ ಎ ಒಟ್ಟು ಕಾಣಿಸುವುದಾದರೂ ಅದು ಮೂಲ ದ್ರಾವಿಡದಲ್ಲಿ *ಅಯ್ ಎಂಬ ರೂಪದಲ್ಲೇ ಬರುತ್ತಿತ್ತು (ತಮಿಳು: ನನಯ್, ನಿಱಯ್) ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆ.

Eke →

7.3.2 ತಡೆಯುಲಿಯಲ್ಲಿ ಕೊನೆಗೊಳ್ಳುವ ಒಟ್ಟುಗಳು

(ಕ) ಸ್ವರದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳ ಅನಂತರ ಮತ್ತು (ಚ) ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳಿಗೆ, ಮೇಲೆ ಸೂಚಿಸಿದ ಹಾಗೆ, ಅ, ಇ, ಉ ಒಟ್ಟುಗಳನ್ನು ಸೇರಿಸಿದ ಅನಂತರ, ತಡೆಯುಲಿಯಲ್ಲಿ ಕೊನೆಗೊಳ್ಳುವ ಮೂರು ರೀತಿಯ ಒಟ್ಟುಗಳು ಬರಬಲ್ಲುವೆಂಬುದಾಗಿ ಕಲ್ಪಿಸಲಾಗಿದೆ. ಈ ಒಟ್ಟುಗಳು ಕಕಾರದಲ್ಲಿ, ತಕಾರದಲ್ಲಿ ಇಲ್ಲವೇ ಪಕಾರದಲ್ಲಿ ಕೊನೆಗೊಳ್ಳಬಲ್ಲುವಾಗಿದ್ದುವು.

ಈ ಮೂರು ರೀತಿಯ ಒಟ್ಟುಗಳಲ್ಲೂ ತಡೆಯುಲಿ ಒತ್ತೆ ರೂಪದಲ್ಲಿ (ಕು, ತು, ಪು) ಇಲ್ಲವೇ ಇಮ್ಮಡಿ ರೂಪದಲ್ಲಿ (ಕ್ಕು, ತ್ತು, ಪ್ಪು) ಬರಬಲ್ಲುದಾಗಿತ್ತು ಮತ್ತು ಅದರ ಮೊದಲು ಒಂದು ಮೂಗುಲಿ ಬರಬಲ್ಲು ದಾಗಿತ್ತು (ನ್ಕು, ನ್ಕ್ಕು, ನ್ತು, ನ್ತ್ತು, ಮ್ಪು, ಮ್ಪ್ಪು) ಎಂಬುದಾಗಿ ಕ್ರುಶ್ಣಮೂರ್ತಿ (1997, 2003) ವಾದಿಸಿದ್ದಾರೆ. ಅವರ ಮತದಂತೆ, ಈ ಒಟ್ಟುಗಳು ಮೂಲದ್ರಾವಿಡದಲ್ಲಿ ಅಕರ್ಮಕ-ಸಕರ್ಮಕ ವ್ಯತ್ಯಾಸವನ್ನು ಮತ್ತು ಹಿಂದಿನ ಸಮಯ - ಮುಂದಿನ ಸಮಯ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಹಾಗೆ ಸೂಚಿಸುತ್ತಿದ್ದಿರಬೇಕು.

ಅಕರ್ಮಕ

ಸಕರ್ಮಕ

ಮುಂದಿನ ಸಮಯ *ಮ್್ಪ *ನ್್ಕ
*ಮ್ಪ್್ಪ *ನ್ಕ್್ಕ

ಹಿಂದಿನ ಸಮಯ *ನ್ತ್್ತ

(1) ಆದರೆ, ಕೆಳಗೆ 7.5ರಲ್ಲಿ ಸೂಚಿಸಿದ ಹಾಗೆ, ಆಗುವಿಕೆಯ ಕ್ರಿಯಾಪದಗಳಿಂದ ಮಾಡುವಿಕೆಯ ಕ್ರಿಯಾಪದಗಳನ್ನು ಪಡೆಯುವುದಕ್ಕಾಗಿ ಅವಕ್ಕೆ ಮೂಲದ್ರಾವಿಡದಲ್ಲಿ ತ್ ಒಟ್ಟನ್ನು ಸೇರಿಸಲಾಗುತ್ತಿತ್ತೆಂಬ ಕಲ್ಪನೆ ಸರಿಯಾದಲ್ಲಿ, ಮೇಲೆ ಕೊಟ್ಟಿರುವ ಮಾಡುವಿಕೆಯ ಒಟ್ಟುಗಳೆಲ್ಲ (ಪ್್ಪ, *ಕ್್ಕ, *ತ್್ತ ಮತ್ತು *ಮ್ಪ್್ಪ, *ನ್ಕ್್ಕ ಮತ್ತು *ನ್ತ್್ತ) ಆಗುವಿಕೆಯ

ಒಟ್ಟುಗಳಿಗೆ (ಕ್ರುಶ್ಣಮೂರ್ತಿಯವರ ‘ಅಕರ್ಮಕ’’ಒಟ್ಟುಗಳಿಗೆ) ಅದೇ *ತ್ ಒಟ್ಟನ್ನು ಸೇರಿಸಿ ಪಡೆದ ರೂಪಗಳಲ್ಲದೆ ಸ್ವತಂತ್ರವಾದ ಒಟ್ಟುಗಳಲ್ಲ ಎಂಬುದಾಗಿ ವಾದಿಸಲು ಸಾದ್ಯವಿದೆ. ಈ ಎಲ್ಲಾ ಒಟ್ಟುಗಳಲ್ಲೂ (ಮತ್ತು ಇವುಗಳಲ್ಲಿ ಮಾತ್ರವೇ) ಇಮ್ಮಡಿ ತಡೆಯುಲಿಗಳು ಬಂದಿವೆಯೆಂಬುದನ್ನು ಗಮನಿಸಬಹುದು (ಪ್+ತ್>ಪ್್ಪ, ಮ್್ಪ+ತ್>ಮ್ಪ್್ಪ, ಇತ್ಯಾದಿ).

ಕೊನೆಗೊಳ್ಳುವ

(2) ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಪಕಾರದಲ್ಲಿ ಮತ್ತು ಒಟ್ಟುಗಳು ಕಕಾರದಲ್ಲಿ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕೆಂದು ಮೇಲೆ ಕೊಟ್ಟಿರುವ ಕೋಶ್ಟಕದಲ್ಲಿ ಸೂಚಿಸಲಾಗಿದೆ. ಆದರೆ, ಇವುಗಳ ನಡುವೆ ಅರ್ತದಲ್ಲಿ ಕಲ್ಪಿಸಿಕೊಳ್ಳಲು ಇನ್ನೂ ಸಾದ್ಯವಾಗಿಲ್ಲ.

ವ್ಯತ್ಯಾಸವಿತ್ತು ಎಂಬುದನ್ನು

(3) ಪಕಾರ ಮತ್ತು ಕಕಾರಗಳಲ್ಲಿ ಕೊನೆಗೊಳ್ಳುವ ಒಟ್ಟುಗಳಿಗೆ ಮೂಲ ದ್ರಾವಿಡದಲ್ಲಿ ಮೊದಲಿಗೆ ಮುಂದಿನ ಸಮಯವನ್ನು ಸೂಚಿಸುವ ಅರ್ತವಿದ್ದಿರಬೇಕು ಮತ್ತು ತಕಾರದಲ್ಲಿ ಕೊನೆಗೊಳ್ಳುವ ಒಟ್ಟುಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಅರ್ತವಿದ್ದಿರಬೇಕು ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆ. ಆದರೆ ಈ ಅರ್ತವ್ಯತ್ಯಾಸವೂ ಇವತ್ತಿನ ನುಡಿಗಳಲ್ಲಿ ಉಳಿದುಕೊಂಡಿಲ್ಲ. ಅದರ ಕೆಲವು ಕ್ರಿಯಾಪದಗಳ ಬಳಕೆಯಲ್ಲಿ ಕಾಣಬಹುದು.

ಪಳೆಯಳಿಕೆಗಳನ್ನು

ಮಾತ್ರ

ಮತ್ತು

ಉದಾಹರಣೆಗಾಗಿ,

ಹೋಗು ಕನ್ನಡದ ಆಗು ಕ್ರಿಯಾಪದಗಳಲ್ಲಿ ಕಾಣಿಸುವ ಗಕಾರ ಮೂಲದ್ರಾವಿಡದಲ್ಲಿ ಬರುತ್ತಿದ್ದ ಸಮಯದ ಒಟ್ಟಿನ ಪಳೆಯಳಿಕೆಯುಂಬುದಾಗಿ ಹೇಳಲು ಮುಂದಿನ ಸಾದ್ಯವಿದೆ. ಯಾಕೆಂದರೆ, ಅದು ಮುಂದಿನ ಸಮಯದ ಕ್ರಿಯಾರೂಪಗಳಲ್ಲಿ (ಆಗುತ್ತದೆ, ಆಗಲಿ; ಹೋಗುತ್ತದೆ) ಕಾಣಿಸುತ್ತದಲ್ಲದೆ ಹಿಂದಿನ ಹೋದ, ಸಮಯದ ಹೋಯಿತು) ಸಮಯವನ್ನು ಸೂಚಿಸುವ ಆಗಿ ಮತ್ತು ಹೋಗಿ ರೂಪಗಳು ಇದಕ್ಕೆ ಅಪವಾದಗಳು).

(ಆದ, ಆಯಿತು; (ಆದರೆ ಹಿಂದಿನ

ಕ್ರಿಯಾರೂಪಗಳಲ್ಲಿ ಕಾಣಿಸುವುದಿಲ್ಲ.

ಕನ್ನಡದ ಪಿೞಿ ಕ್ರಿಯಾಪದದ ಅರ್ತದಲ್ಲೇ ಪಿಂಡು, ಹಿಂಡು ರೂಪ ಗಳೂ ಬಳಕೆಯಲ್ಲಿರುವುದು ಮೇಲಿನ ಕಲ್ಪನೆಗೆ ಇನ್ನೊಂದು ಉದಾಹರಣೆ ಯಾಗಬಲ್ಲುದು. ಇವುಗಳಲ್ಲಿ ಕಾಣಿಸುವ ಣ್್ಡ ಒಟ್ಟು ಮೇಲೆ ಕೊಟ್ಟಿರುವ ಹಿಂದಿನ ಸಮಯದ ನ್್ತ ಒಟ್ಟಿನ ಪಳೆಯಳಿಕೆಯಿರಬೇಕು. (ೞಕಾರದ ಅನಂತರ ಬಂದ ನ್್ತ ಎಂಬುದು ಣ್್ಡ ಎಂದಾಗಿದೆ). ಆದರೆ ಈ ರೂಪಗಳು ಕನ್ನಡದಲ್ಲಿ ಹಿಂದಿನ ಸಮಯಕ್ಕೆ ಸೀಮಿತವಾಗಿಲ್ಲ.

ವ್ಯತ್ಯಾಸವನ್ನೂ

(4) ಮೂಲದ್ರಾವಿಡದಲ್ಲಿ ಈ ಒಟ್ಟುಗಳು ಅಕರ್ಮಕ-ಸಕರ್ಮಕ (ಆಗುವಿಕೆ-ಮಾಡುವಿಕೆ) ಕೊಡುತ್ತಿದ್ದಿರಬೇಕೆಂಬುದಾಗಿ ಮೇಲಿನ ಕೋಶ್ಟಕದಲ್ಲಿ ಸೂಚಿಸಲಾಗಿದೆ. ಈ ವ್ಯತ್ಯಾಸ ತಮಿಳು, ಮಲಯಾಳ ಮೊದಲಾದ ಹಲವು ತೆಂಕುದ್ರಾವಿಡ ನುಡಿಗಳಲ್ಲಿ ಇವತ್ತಿಗೂ ಉಳಿದುಕೊಂಡಿದೆ; ಆದರೆ, ಕನ್ನಡದಲ್ಲಿ ಇದು ಬಹಳ ಮಟ್ಟಿಗೆ ಅಳಿದು ಹೋಗಿದೆ (ವಿವರಗಳಿಗೆ 7.5.1 ನೋಡಿ).

Eke →

7.3.3 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು

ಮೇಲೆ ವಿವರಿಸಿದ ತಡೆಯುಲಿಗಳು ಮಾತ್ರವಲ್ಲದೆ ಚ್, ಱ್ ಮತ್ತು ಟ್ ತಡೆಯುಲಿಗಳೂ ನುಣುಚು, ಎಡಱು, ಬೆದಱು, ಕದಡು, ಹೊರಡು).

ಕಾಣಿಸಿಕೊಳ್ಳುತ್ತವೆ

ಕ್ರಿಯಾಪದಗಳಲ್ಲಿ

ಆದರೆ, ಇವು ಮೂಲದ್ರಾವಿಡ ಬೇರುಗಳಲ್ಲಿ ಇಲ್ಲವೇ ಒಟ್ಟುಗಳಲ್ಲಿ ಬಂದಿರುವ ವ್ಯಂಜನಗಳಲ್ಲಿ ನಡೆದ ಕೆಲವು ಸೇರಿಕೆಯ ಬದಲಾವಣೆಗಳಿಂದ ಮೂಡಿಬಂದಿವೆಯಲ್ಲದೆ, ಮೂಲದ್ರಾವಿಡ ಒಟ್ಟುಗಳಲ್ಲಿದ್ದ ವ್ಯಂಜನಗಳಲ್ಲ ಎಂಬುದಾಗಿ ಕ್ರುಶ್ಣಮೂರ್ತಿ (2003) ವಾದಿಸಿದ್ದಾರೆ.
ಕಾಣಿಸುವ ಕ್ರಿಯಾಪದಗಳಲ್ಲಿ

ಟ್ ಎಂಬುದು ಳಕಾರದೊಂದಿಗೆ ತಕಾರ ಸೇರಿದಾಗ ನಡೆದ ಬದಲಾವಣೆಯ ಪಲ ಎಂಬುದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು.

ಕನ್ನಡದ

ಕನ್ನಡ
ಸುರುಟು (*ಸುರುಳ್-ತು)

ತಮಿಳು ಚುರುಳ್

ತೆರಟು ‘ಉರುಳು’’

ತೆರಳ್

Eke →

7.4 ಆಗುವಿಕೆಯ ಒಟ್ಟುಗಳು

ಸ್ವರದಲ್ಲಿ ಕೊನೆಗೊಳ್ಳುವ ಬೇರುಗಳ ಅನಂತರ ಮತ್ತು ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳಿಗೆ ಅ, ಇ, ಉ ಒಟ್ಟುಗಳನ್ನು ಸೇರಿಸಿದ ಅನಂತರ (7.3.1 ನೋಡಿ), ಅವುಗಳೊಂದಿಗೆ ಲ, ಳ, ರ, ೞ, ವ ಮೊದಲಾಗುವ ಒಟ್ಟುಗಳೂ ಇಲ್ಲವೇ ಬರಬಲ್ಲುವಾಗಿದ್ದುವು.

ವ್ಯಂಜನಗಳಲ್ಲಿ

ಮೂಲದ್ರಾವಿಡದಲ್ಲಿ ಮೇಲಿನ ಒಟ್ಟುಗಳಿಗೆ ಸಕರ್ಮಕ ಕ್ರಿಯಾಪದಗಳನ್ನು ಮಾಡುವಿಕೆಗಳನ್ನು ಅಕರ್ಮಕ ಆಗುವಿಕೆಗಳನ್ನಾಗಿ) ಬದಲಾಯಿಸುವ ಕೆಲಸವಿದ್ದಿರಬೇಕೆಂದು ಕ್ರುಶ್ಣಮೂರ್ತಿ (2003) ವಾದಿಸಿದ್ದಾರೆ.

ಕ್ರಿಯಾಪದಗಳನ್ನಾಗಿ

ದ್ರಾವಿಡ ನುಡಿಗಳಲ್ಲಿ ಇಂತಹ ಒಟ್ಟುಗಳಿರುವ ಕ್ರಿಯಾಪದಗಳಲ್ಲಿ ಹೆಚ್ಚಿ ನವೂ ಆಗುವಿಕೆಗಳಾಗಿವೆಯುಂಬುದು ಈ ಊಹೆಗೆ ಒಂದು ಆದಾರ. ಉದಾ ಹರಣೆಗಾಗಿ, ಕನ್ನಡದ ಕ್ರಿಯಾಪದಗಳಲ್ಲಿ ಲ, ಳ, ೞ ಇಲ್ಲವೇ ರ ಒಟ್ಟಿನ ಸಾಮಾನ್ಯವಾಗಿ ಒಂದು ಜಾಗದಲ್ಲಿ ಬಂದಿದೆಯಾದರೆ, ಅವು ಆಗುವಿಕೆಯನ್ನು ಸೂಚಿಸುತ್ತವೆ.

ಳಕಾರವಿರುವವು ತೆವಳ್ ‘ತೆವಳು’’ ನರಳ್ ‘ನರಳು’’

ಲಕಾರವಿರುವವು
ಸಡಿಲ್ ‘ಸಡಿಲು’’ ಕೞಲ್ ‘ಕಳಚು’
ಕಳಲ್ ‘ಉದುರು’’ ಉರುಳ್ ‘ಉರುಳು’’ ಕವಲ್ ‘ಕವಲೊಡೆ’’ ಕನಲ್ ‘ಸಿಟ್ಟಾಗು’’ ಎೞಲ್ ‘ನೇತಾಡು’’

ತೆಮಳ್ ‘ಜಾರು’’ ಮುಗುಳ್ ‘ಮುಚ್ಚು’’ ಪೊರಳ್ ‘ಹೊರಳು’’

ೞಕಾರವಿರುವವು

ರಕಾರವಿರುವವು

ನೆಗೞ್ ‘ವ್ಯಕ್ತವಾಗು’’ ಬಿದಿರ್ ‘ಚೆಲ್ಲು, ಹರಡು’’ ತುಮುೞ್ ‘ಬೆಳಗು’’ ಅದಿರ್ ‘ನಡುಗು’’ ಜಗುೞ್ ‘ಜಾರು’’ ಅಗುೞ್ ‘ಮುಳುಗು’’ ಚಿಗುರ್ ‘ಚಿಗುರು’’ ಪೊದೞ್ ‘ಕಾಣಿಸು’’ ಮಗುೞ್ ‘ಮಗುಚು’’ ಬೆಮರ್ ‘ಬೆವರು’’

ಪಸುರ್ ‘ಹಸುರಾಗು’’

ಕುಳಿರ್ ‘ಚಳಿಯಾಗು’’

ಮೇಲೆ ಕೊಟ್ಟಿರುವ ಕನ್ನಡ ಕ್ರಿಯಾಪದಗಳ ಕೊನೆಯಲ್ಲಿ ಬರುವ ಒಟ್ಟಿನಲ್ಲಿ ಲ, ಳ, ೞ ಇಲ್ಲವೇ ರ ವ್ಯಂಜನವಿದ್ದು ಅವೆಲ್ಲವೂ ಆಗುವಿಕೆಗಳನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು. ಇಂತಹ ಒಟ್ಟುಗಳನ್ನು ಮಾಡುವಿಕೆಯನ್ನು ಸೂಚಿಸುವಂತಹ ಅವಲ್ ‘ಒನಕೆಯಿಂದ ಕುಟ್ಟು’, ಅಗೞ್ ‘ಅಗೆ’, ಸವರು ‘ಕತ್ತರಿಸು’ ಎಂಬಂತಹ ಕೆಲವೇ ಕೆಲವು ಮಾತ್ರ ಕನ್ನಡದಲ್ಲಿವೆ.

ಕ್ರಿಯಾಪದಗಳಲ್ಲಿ

ಪಡೆದಿರುವ

ಇದಲ್ಲದೆ, ಬಡಗು ದ್ರಾವಿಡ ನುಡಿಗಳಾದ ಕುಡುಕ್ ಮತ್ತು ಮಾಲ್ತೋ ಗಳಲ್ಲಿ ಮಾಡುವಿಕೆಗಳನ್ನು ಆಗುವಿಕೆಗಳನ್ನಾಗಿ ಮಾಡಲು ರಕಾರವಿರುವ ಒಟ್ಟೊಂದು ಬಳಕೆಯಲ್ಲಿದೆಯುಂಬುದು ಮೇಲಿನ ಕಲ್ಪನೆಗೆ ಇನ್ನೊಂದು ಆದಾರ. ಉದಾಹರಣೆಗಾಗಿ, ಮಾಲ್ತೋ ನುಡಿಯಲ್ಲಿ ಇದಕ್ಕಾಗಿ ರ್ ಒಟ್ಟನ್ನು ಬಳಸಲಾಗುತ್ತದೆ.

ಮಾಡುವಿಕೆ ಏಗ್ ‘ಬೀಳಿಸು’’
ಅಸ್್ಗ ‘ಅಂಟಿಸು’
ಎಯ್ ‘ಕಟ್ಟು’
ಬಾಗ್ ‘ಕೆರೆ’

ಆಗುವಿಕೆ ಏಗ್್ರ ‘ಬೀಳು’’ ಅಸ್್ಗ್ರ ‘ಅಂಟು’’ ಎಯ್ರ ‘ಕಟ್ಟಿಕೊಳ್ಳು’’ ಬಾಗ್್ರ ‘ಕೆರೆದುಕೊಳ್ಳು’’

Eke →

7.5 ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು

ಮೂಲತೆಂಕುದ್ರಾವಿಡದಲ್ಲಿ ಆಗುವಿಕೆಯನ್ನು ಸೂಚಿಸುವ ಕ್ರಿಯಾಬೇರುಗಳಿಗೆ *ತ್ ಒಟ್ಟನ್ನು ಸೇರಿಸಿ ಅವು ಮಾಡುವಿಕೆಯನ್ನು ಸೂಚಿಸುವ ಹಾಗೆ ಮಾಡಲು ಸಾದ್ಯವಿತ್ತು. ಕನ್ನಡ (ಮತ್ತು ತುಳು, ಕೊರಗ) ನುಡಿಗಳನ್ನು ಬಿಟ್ಟು ಇತರ ಎಲ್ಲಾ ತೆಂಕುದ್ರಾವಿಡ ನುಡಿಗಳೂ ಈ ಒಟ್ಟನ್ನು ಬಹಳ ಸ್ಪಶ್ಟವಾಗಿ ಉಳಿಸಿಕೊಂಡಿವೆ.

ಉದಾಹರಣೆಗಾಗಿ, ತಮಿಳಿನ ಹಲವು ಕ್ರಿಯಾಪದಗಳಿಗೆ ಆಗುವಿಕೆ ಮತ್ತು ಮಾಡುವಿಕೆಗಳನ್ನು ರೂಪಗಳಿದ್ದು ಅವುಗಳಲ್ಲಿ ಎರಡನೆಯ (ಮಾಡುವಿಕೆಯನ್ನು ಸೂಚಿಸುವ) ರೂಪವನ್ನು ಮೊದಲನೆಯದಕ್ಕೆ ತ್ ಒಟ್ಟನ್ನು ಸೇರಿಸುವುದರ ಮೂಲಕ ಪಡೆಯಲು ಸಾದ್ಯವಿದೆ.

ಸೂಚಿಸುವ ಎರಡೆರಡು

(ಕ) ಈ ಕ್ರಿಯಾಪದಗಳ ಕೊನೆಯ ವ್ಯಂಜನ ಕ್, ಟ್ ಇಲ್ಲವೇ ಱ್ ಇದ್ದಲ್ಲಿ, ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಅವುಗಳದೇ ರೂಪ ವನ್ನು ಪಡೆಯುತ್ತದೆ; (ಚ) ನ್ ಇಲ್ಲವೇ ಲ್ ಇದ್ದಲ್ಲಿ ಆ ವ್ಯಂಜನ ಮತ್ತು ಒಟ್ಟಿನ ತಕಾರ ಎರಡೂ ಱ್ ರೂಪವನ್ನು ಪಡೆಯುತ್ತವೆ ಮತ್ತು (ಟ) ಣ್ ಇಲ್ಲವೇ ಳ್ ಇದ್ದಲ್ಲಿ ಎರಡೂ ಟ್ ರೂಪವನ್ನು ಪಡೆಯುತ್ತವೆ; (ತ) ಇತರ ಕ್ರಿಯಾಪದಗಳ ಅನಂತರ ಅದು ತ್್ತ ರೂಪದಲ್ಲಿ ಬರುತ್ತದೆ.

ಇದಲ್ಲದೆ, (ಪ) ಕ್ರಿಯಾಪದಗಳ ಕೊನೆಯ ವ್ಯಂಜನ ಒಂದು ತಡೆ ಯುಲಿಯಾಗಿದ್ದು, ಅದಕ್ಕೆ ಮೊದಲು ಮೂಗುಲಿಯೊಂದು ಬಂದಿದ್ದರೆ, ಅಂತಹ ಕ್ರಿಯಾಪದಕ್ಕೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟನ್ನು ಸೇರಿಸಿದಾಗ ತಡೆಯುಲಿಯ ಮೊದಲಿದ್ದ ಮೂಗುಲಿ ಬಿದ್ದುಹೋಗುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ತಮಿಳು ಕ್ರಿಯಾಪದಗಳ

ಆಗುವಿಕೆ ಮತ್ತು ಮಾಡುವಿಕೆಯ ರೂಪಗಳನ್ನು ಪರಿಶೀಲಿಸಬಹುದು.

ಆಗುವಿಕೆ
ಪೋಕು ‘ಹೋಗು’

ಮಾಡುವಿಕೆ ಪೋಕ್ಕು ‘ಹೋಗಿಸು’’

ಏಱು ‘ಏರು’

ಓಟ್ಟು ‘ಓಡಿಸು’’ ಏಱ್ಱು ‘ಏರಿಸು’

(ಚ) ತಿನ್ ‘ತಿನ್ನು’

ಅಕಲ್ ‘ಹರಡು’

ತಿಱ್ಱು ‘ತಿನ್ನಿಸು’ ಅಕಱ್ಱು ‘ಹರಡಿಸು’’

ಮಾಳ್ ‘ಸಾಯು’

ಊಟ್ಟು ‘ಉಣಿಸು’ ಮಾಟ್ಟು ‘ಕೊಲ್ಲು’

(ತ) ಅಲರ್ ‘ಅರಳು’

ಅಲರ್ತ್ತು ‘ಅರಳಿಸು’’

(ಪ) ಇಱಙ್ಕು ‘ಇಳಿ’’

ಇರಕ್ಕು ‘ಇಳಿಸು’

ಈಣ್ಟು ‘ಒಟ್ಟು ಸೇರು’’ ಈಟ್ಟು ‘ಒಟ್ಟು ಸೇರಿಸು’’ ಪೊರುನ್ತು ‘ಒಪ್ಪು’ ತಿರುಮ್ಪು ‘ತಿರುಗು’

ಪೊರುತ್ತು ‘ಒಪ್ಪಿಸು’ ತಿರುಪ್ಪು ‘ತಿರುಗಿಸು’

Eke →

7.5.1 ಕನ್ನಡದಲ್ಲಿ *ತ್ ಒಟ್ಟಿನ ಪಳೆಯಳಿಕೆಗಳು

ಆಗುವಿಕೆಗಳನ್ನು ಮಾಡುವಿಕೆಗಳಾಗಿ ಬದಲಾಯಿಸುವ ಈ ವಿದಾನ ಕನ್ನಡ ದಲ್ಲಿ ಉಳಿದಿಲ್ಲ. ಅದರ ಪಳೆಯಳಿಕೆಗಳನ್ನು ಮಾತ್ರ ಹಳೆಗನ್ನಡದ ಕೆಲವು ಕ್ರಿಯಾಪದ ಜೋಡಿಗಳಲ್ಲಿ ಕಾಣಬಹುದು.

ಆಗುವಿಕೆ
ಅಡಗು ‘ಮರೆಯಾಗು’’
ಅಮುಗು ‘ಒತ್ತಿಹೋಗು’
ತುಱುಗು ‘ಒತ್ತಿ ತುಂಬಿರು’’ ಅಣುಂಗು ‘ನಾಶವಾಗು’

ಮಾಡುವಿಕೆ ಅಡಕು ‘ಬಚ್ಚಿಟ್ಟುಕೊಳ್ಳು’’ ಅಮುಕು ‘ಒತ್ತು’ ತುಱುಕು ‘ಒತ್ತಿ ತುಂಬಿಸು’ ಅಣುಂಕು ‘ನಾಶಮಾಡು’

ಕನ್ನಡದ

ಇದಲ್ಲದೆ,

ಕ್ರಿಯಾಪದಗಳು

ಗು ಎಂಬುದರಲ್ಲಿ ಕೊನೆಗೊಳ್ಳುವುವಾದರೆ ಅವು ಆಗುವಿಕೆಗಳಾಗಿರುವುದು ಹೆಚ್ಚು ಮತ್ತು ಕು ಎಂಬುದರಲ್ಲಿ ಕೊನೆಗೊಳ್ಳುವುವಾದರೆ ಮಾಡುವಿಕೆಗಳಾಗಿರುವುದು ಹೆಚ್ಚು. ಇವುಗಳಲ್ಲಿ ಬರುವ ಗು ಮತ್ತು ಕು ಎಂಬವುಗಳು ಮೂಲತೆಂಕುದ್ರಾವಿಡದ ಕು ಮತ್ತು *ಕ್ಕು (<ಕ್+*ತ್) ಎಂಬವುಗಳ (ಇಲ್ಲವೇ *ನ್ಕು ಮತ್ತು ನ್ಕ್ಕು ಎಂಬವುಗಳ) ಕನ್ನಡ ರೂಪಗಳಾಗಿವೆ ಎಂಬುದನ್ನು ಇದರಿಂದಲೂ ಊಹಿಸಬಹುದು.

ಆಗುವಿಕೆಗಳು ಮೊೞಗು ಮುೞುಗು ಮಿಱುಗು ಸೊರಗು ನಡುಗು
ಪೞಗು
ಕೊರಗು
ಜಿನುಗು
ಕರಗು

ಮಾಡುವಿಕೆಗಳು ತದಕು ಕುಸುಕು ಪೆಱುಕು (ಹೆಕ್ಕು) ಹುಡುಕು ಹಿಸುಕು ತುಱುಕು ಸಿಡುಕು
ಚಿಮುಕು

ಇದಲ್ಲದೆ, ಕನ್ನಡದ ಹಲವು ನಾಮಪದಗಳಲ್ಲಿ ಮಾಡುವಿಕೆಯನ್ನು

ಸೂಚಿಸುವ ಕ್ರಿಯಾರೂಪ ಉಳಿದುಕೊಂಡಿರುವುದನ್ನು ಕಾಣಬಹುದು.

ಮೊದಲಾದ

ಉದಾಹರಣೆಗಾಗಿ, ಕನ್ನಡದ ತೂಗು-ತೂಕ, ನಾಱು-ನಾತ, ಆಡು- ಜೋಡಿಗಳಲ್ಲಿ ಮೂಲದ್ರಾವಿಡದ ಆಗುವಿಕೆಯ ಮೊದಲನೆಯದು ರೂಪದಿಂದ (*ತೂಂಕು, *ನಾಱು ಮತ್ತು *ಆಟು ಎಂಬುದರಿಂದ) ಬಂದಿರಬೇಕು ಮತ್ತು ಎರಡನೆಯದು (ನಾಮಪದ) ಮಾಡುವಿಕೆಯ

ಕ್ರಿಯಾಪದ-ನಾಮಪದ

(ಕ್ರಿಯಾಪದ)

ರೂಪದಿಂದ (*ತೂಂಕ್ಕು, *ನಾಱ್ಱು ಮತ್ತು *ಆಟ್ಟು ಎಂಬುದರಿಂದ) ಬಂದಿರಬೇಕು.

Eke →

7.5.2 ಸಮಯದ ಒಟ್ಟಿನ ಅನಂತರ *ತ್ ಒಟ್ಟಿನ ಬಳಕೆ

ಕನ್ನಡ (ಮತ್ತು ತುಳು) ನುಡಿಗಳನ್ನು ಹೊರತುಪಡಿಸಿ ಇತರ ತೆಂಕುದ್ರಾವಿಡ ನುಡಿಗಳಲ್ಲಿ ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು ಕೆಲವು ಕ್ರಿಯಾಪದ ಗಳಿಗೆ ನೇರವಾಗಿ ಸೇರುವ ಬದಲು ಸಮಯದ ಒಟ್ಟಿನ ಅನಂತರ ಬರುತ್ತದೆ ಎಂಬುದಾಗಿ ವಿದ್ವಾಂಸರು ಕಲ್ಪಿಸಿಕೊಂಡಿದ್ದಾರೆ (ಸುಬ್ರಹ್ಮಣ್ಯಂ 1971 ನೋಡಿ).

ಇಕಾರದಲ್ಲಿ ಇಲ್ಲವೇ ಯ್, ರ್ ಅತವಾ ೞ್ ವ್ಯಂಜನದಲ್ಲಿ ಕೊನೆ ಗೊಳ್ಳುವ ಹಲವಾರು ಕ್ರಿಯಾಪದಗಳ ಕ್ರಿಯಾರೂಪಗಳಲ್ಲಿ (ಮತ್ತು ಕೆಟು ‘ಕೆಡು’, ವಿಟು ‘ಬಿಡು’, ವಱು ‘ಹುರಿ’ಯಂತಹ ಕೆಲವು ಉಕಾರದಲ್ಲಿ ಕೊನೆಗೊಳ್ಳುವ ಮತ್ತು ಎರಡು ಹಗುರ ಉಲಿಕಂತೆಗಳಿರುವ ಕ್ರಿಯಾಪದಗಳ ಕ್ರಿಯಾರೂಪಗಳಲ್ಲಿ) ಇಂತಹ ಬಳಕೆಯನ್ನು ಕಾಣಬಹುದು.

ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಹಿಂದಿನ ಸಮಯದ ತಮಿಳು

ಕ್ರಿಯಾರೂಪಗಳನ್ನು ಪರಿಶೀಲಿಸಬಹುದು.

ಆಗುವಿಕೆ

ಕ್ರಿಯಾಪದ ಕುೞಯ್ ‘ಕೊಳೆ’’ ಕುೞಯ್ನ್ತತು ಚಮಯ್ ‘ಸಮೆ’’ ಚಮಯ್ನ್ತತು ಕುನಿ ‘ಬಾಗು’’ ಕುನಿನ್ತತು ಚರಿ ‘ಜಾರು’’ ಚರಿನ್ತತು
ತಱಿ ‘ತುಂಡಾಗು’ ತಱಿನ್ತತು ಚೇರ್ ‘ಸೇರು’ ಚೇರ್ನ್ತತು ತಾೞ್ ‘ತಗ್ಗು’’ ತಾೞ್ನ್ತತು ತೋಯ್ ‘ನೆನೆ’’ ತೋಯ್ನ್ತತು

ಮಾಡುವಿಕೆ

ಕುೞಯ್ತ್ತೇನ್ ಚಮಯ್ತ್ತೇನ್ ಕುನಿತ್ತೇನ್ ಚರಿತ್ತೇನ್ ತಱಿತ್ತೇನ್ ಚೇರ್ತ್ತೇನ್ ತಾೞ್ತ್ತೇನ್ ತೋಯ್ತ್ತೇನ್

ಕೊಟ್ಟಿರುವ

ಕ್ರಿಯಾಪದಗಳಿಗೆ ಆಗುವಿಕೆ

ಸೂಚಿಸುವ ಎರಡೆರಡು ಹಿಂದಿನ

ಮೇಲೆ ಮತ್ತು ಸಮಯದ ಮಾಡುವಿಕೆಗಳನ್ನು ರೂಪಗಳಿವೆ. ಇವುಗಳಲ್ಲಿ ಆಗುವಿಕೆಯನ್ನು ಸೂಚಿಸುವ ಮೊದಲನೆಯ ಕ್ರಿಯಾರೂಪದಲ್ಲಿ ಮತ್ತು ಮಾಡುವಿಕೆಯನ್ನು ಸೂಚಿಸುವ ಎರಡನೆಯ ಕ್ರಿಯಾರೂಪದಲ್ಲಿ ತ್್ತ ಸಮಯದ ಒಟ್ಟು ಬಂದಿದೆ.

ಸಮಯದ ಒಟ್ಟು ಬಂದಿದೆ

ತಮಿಳು

ರೂಪವಾಗಿದೆ

ಇವುಗಳಲ್ಲಿ ಮೊದಲನೆಯ ಒಟ್ಟು ಮೂಲ ತೆಂಕುದ್ರಾವಿಡದ *ನ್್ತ ತಮಿಳಿನಲ್ಲಿ ಸಮಯದ ಒಟ್ಟಿನ ಬದಲಾಗದೆ ಉಳಿದಿದೆ); ಒಟ್ಟಿನೊಂದಿಗೆ ಮೂಲತೆಂಕುದ್ರಾವಿಡದ ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು ಸೇರಿ ಆಗಿರುವ *ನ್ತ್್ತ ಎಂಬುದರ ತಮಿಳು ರೂಪವಾಗಿದೆ (ಇಲ್ಲಿ ನಕಾರ ಬಿದ್ದು ಹೋಗಿದೆ - 7.5(ಪ) ನೋಡಿ).

ಎರಡನೆಯ

ಸಮಯದ

ಇಂತಹದೇ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಮುಂದಿನ ಸಮಯದ ಕ್ರಿಯಾರೂಪಗಳಲ್ಲೂ ಕಾಣಿಸುತ್ತದೆ. ಉದಾಹರಣೆಗಾಗಿ, ತಮಿಳಿನ ಉತಿರ್ ‘ಉದುರು’ ಕ್ರಿಯಾಪದಕ್ಕೆ ಉತಿರ್ವ ‘ಉದುರುವ’ ಮತ್ತು ಉತಿರ್ಪ್ಪ ‘ಉದುರಿಸುವ’ ಎಂಬ ಎರಡು ಮುಂದಿನ ಸಮಯದ ರೂಪಗಳಿವೆ.

ಇವುಗಳಲ್ಲಿ ಮೊದಲನೆಯದು ಮುಂದಿನ ಸಮಯದ ಪ್ ಒಟ್ಟು ವ್ ಆದುದರಿಂದ ತಯಾರಾಗಿದೆ ಮತ್ತು ಎರಡನೆಯದು ಮುಂದಿನ ಸಮಯದ ಪ್ ಒಟ್ಟಿನೊಂದಿಗೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಸೇರಿ ಪ್್ಪ ಆದುದರಿಂದ ತಯಾರಾಗಿದೆ.

Eke →

7.5.3 ಬಡಗ ಕನ್ನಡದಲ್ಲಿ *ತ್ ಒಟ್ಟು

ಕ್ರಿಯಾರೂಪಗಳು

ಆಗುವಿಕೆ

ಮತ್ತು

ಮಾಡುವಿಕೆಗಳನ್ನು

ಸೂಚಿಸುವ ಕನ್ನಡದಲ್ಲೂ ಉಳಿದುಕೊಂಡಿವೆ.

ಉದಾಹರಣೆಗಾಗಿ ಪರಿಶೀಲಿಸಬಹುದು (ಎಮೆನೋ 1967).

ಕೆಳಗೆ

ಕೊಟ್ಟಿರುವ

ಕ್ರಿಯಾರೂಪಗಳನ್ನು

ಆಗುವಿಕೆಗಳು ಸಿಗುದುತ್ತು ‘ಹರಿಯಿತು’
ಹೊಗದತ್ತು ‘ಹೊಗೆ ಬಂತು’ ಇಡುದತ್ತು ‘ಒಡೆಯಿತು’
ಅಗಿದುತ್ತು ‘ಬಿಟ್ಟಿತು’ ಸುಲದುತ್ತು ‘ಸುಲಿಯಿತು’ ನನದೆ ‘ಒದ್ದೆಯಾದೆ’ ಸೇದೆ ‘ಸೇರಿದೆ’

ಮಾಡುವಿಕೆಗಳು
ಸಿಗುತ್ತೆ ‘ಹರಿದೆ’ ಹೊಗತ್ತೆ‘ಹೊಗೆ ಬರಿಸಿದೆ’ ಇಡುತ್ತೆ ‘ಒಡೆದೆ’ ಅಗಿತ್ತೆ ‘ಬಿಟ್ಟೆ’ ಸುಲತ್ತೆ ‘ಸುಲಿದೆ’ ನನತ್ತೆ ‘ಒದ್ದೆ ಮಾಡಿದೆ’ ಸೇತ್ತೆ ‘ಸೇರಿಸಿದೆ’

ಮೊದಲನೆಯ

ಆಗುವಿಕೆಯನ್ನು

ಸೂಚಿಸುವಂತಹ

ಕ್ರಿಯಾರೂಪಗಳಲ್ಲಿ *ನ್್ತ ಒಟ್ಟು ದ್

ಕಾಲಂನಲ್ಲಿ ಮೂಲತೆಂಕುದ್ರಾವಿಡದ ಹಿಂದಿನ ಕೊಟ್ಟಿರುವ ಸಮಯದ ಮತ್ತು ರೂಪಕ್ಕೆ ಬದಲಾಗಿದೆ ಮಾಡುವಿಕೆಯನ್ನು ಸೂಚಿಸುವಂತಹ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಕ್ರಿಯಾರೂಪಗಳಲ್ಲಿ ಅದರೊಂದಿಗೆ ಮಾಡುವಿಕೆಯ *ತ್ ಒಟ್ಟು ಬಂದಿದ್ದು ಅವೆರಡೂ ಸೇರಿರುವ *ನ್ತ್್ತ ಎಂಬುದು ತ್್ತ ರೂಪಕ್ಕೆ ಬದಲಾಗಿದೆ.

ಆದರೆ, ಇದು ಬಡಗ ನುಡಿಯಲ್ಲಿ ತೆಂಕುದ್ರಾವಿಡದ ಉಳಿಕೆಯೇ ಇಲ್ಲವೇ ಬೇರೆ ತಮಿಳು, ತೊದ ಮೊದಲಾದ ತೆಂಕುದ್ರಾವಿಡ ನುಡಿಗಳ ಸಂಪರ್ಕದಿಂದ ಬೆಳೆದು (ಇಲ್ಲವೇ ಎರವಲಾಗಿ) ಬಂದುದೇ ಎಂಬ ವಿಶಯದಲ್ಲಿ ಸಂಶಯವಿದೆ. ಯಾಕೆಂದರೆ, ಬಡಗ ಕನ್ನಡದ ಬೇರೆ ಪದಗಳಲ್ಲಿ ತಮಿಳಿನಲ್ಲಿ ನಡೆದ ಈ ಎರಡನೆಯ (*ನ್ತ್್ತ > ತ್್ತ) ಬದಲಾವಣೆ ನಡೆದಿಲ್ಲ.

ಆದರೆ, ಕನ್ನಡದಲ್ಲಿ ಪಳೆಯಳಿಕೆಯಾಗಿ ಮಾತ್ರವೇ ಉಳಿದಿರುವಂತಹ ಆಗುವಿಕೆ ಮತ್ತು ಮಾಡುವಿಕೆಗಳ ನಡುವಿನ ವ್ಯತ್ಯಾಸಕ್ಕೆ (7.5.1 ನೋಡಿ) ಸಮನಾದ ವ್ಯತ್ಯಾಸ ಬಡಗ ಕನ್ನಡದ ಹಲವು ಕ್ರಿಯಾಪದಗಳಲ್ಲಿ

ಕಾಣಿಸುತ್ತದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಎರಡು ರೀತಿಯ ಕ್ರಿಯಾಪದಗಳನ್ನು ಹೋಲಿಸಿ ನೋಡಬಹುದು (ಬಾಲಕ್ರುಶ್ಣನ್ 1999).

ಮಾಡುವಿಕೆ

ಆಗುವಿಕೆ
ಅಲುಗು ‘ಅಲ್ಲಾಡು’’ ಅಲುಕು ‘ಅಲ್ಲಾಡಿಸು’’ ಒಣಗು ‘ಒಣಗು’’ ಕುಲುಗು ‘ಅಲ್ಲಾಡು’’ ಮಂಗು ‘ಮಂಕಾಗು’’ ಮಕ್ಕು ‘ಮಂಕು ಮಾಡು’’ ತಿರುಗು ‘ತಿರುಗು’

ಒಣಕು ‘ಒಣಗಿಸು’ ಕುಲುಕು ‘ಅಲ್ಲಾಡಿಸು’’

ಈಕು ‘ಇಳಿಸು’ ತಿರುಕು ‘ತಿರುಗಿಸು’

ಇದಲ್ಲದೆ,  ಬೇರೆ  ಕೆಲವು  ರೀತಿಯ  ವ್ಯತ್ಯಾಸಗಳನ್ನು  ತೋರಿಸುವ  ಕ್ರಿಯಾಪದಗಳೂ  ಬಡಗ  ಕನ್ನಡದಲ್ಲಿ  ಆಗುವಿಕೆ-ಮಾಡುವಿಕೆ  ಅರ್ತವ್ಯತ್ಯಾಸ  ವನ್ನು ಸೂಚಿಸಬಲ್ಲುದು. 

ಮಾಡುವಿಕೆ ಆಗುವಿಕೆ
ಮಾತು ‘ಬದಲಾಯಿಸು’’ ಮಾರು ‘ಬದಲಾಗು’ ನಾತು ‘ಒದ್ದೆ ಮಾಡು’ ನಾನು ‘ಒದ್ದೆಯಾಗು’ ಆಟು ‘ಅಲ್ಲಾಡಿಸು’ ಆಡು ‘ಅಲ್ಲಾಡು’ ಕೂಟು ‘ಸೇರಿಸು’ ಕೂಡು ‘ಸೇರು’’
ಬೂಕು ‘ಬೀಳಿಸು’’ ಬೂ ‘ಬೀಳು’ ಸುರುಳು ‘ಸುತ್ತಿಕೊಳ್ಳು’ ಸುರುಟು ‘ಸುಂದು’’

ಇವುಗಳಲ್ಲಿ ಕೆಲವು ಕ್ರಿಯಾಪದಗಳು ತಮಿಳಿನಿಂದ ಎರವಲಾಗಿ ಬಂದಿರಲು ಸಾದ್ಯವಿದೆಯಾದರೂ, ಕೆಲವು ಮೂಲದ್ರಾವಿಡದ ವ್ಯತ್ಯಾಸವನ್ನು ಬಡಗ ಕನ್ನಡ ಉಳಿಸಿಕೊಂಡಿದೆಯುಂಬುದಕ್ಕೆ ಆದಾರವಾಗಿರಲು ಸಾದ್ಯವಿದೆ.

Eke →

7.5.4 ಹವ್ಯಕ ಕನ್ನಡದಲ್ಲಿ *ತ್ ಒಟ್ಟು

ಹವ್ಯಕ ಕನ್ನಡದಲ್ಲೂ ಆಗುವಿಕೆ ಮತ್ತು ಮಾಡುವಿಕೆಗಳನ್ನು ಸೂಚಿಸುವ ಕಾಣಿಸುತ್ತವೆ. ಕೆಲವು ಹಿಂದಿನ ಕನ್ನಡದ ಉದಾಹರಣೆಗಾಗಿ, ಕ್ರಿಯಾರೂಪಗಳನ್ನು ಗಮನಿಸಬಹುದು.

ಸಮಯದ ಕೆಳಗೆ

ಕ್ರಿಯಾರೂಪಗಳು

ಕೊಟ್ಟಿರುವ

ಹವ್ಯಕ

ಆಗುವಿಕೆ
ಮುರುತ್ತು ‘ಮುರಿಯಿತು’’ ಹರುತ್ತು ‘ಹರಿಯಿತು’ ಸಿಗುತ್ತು ‘ಸಿಗಿಯಿತು’ ಕಡುತ್ತು ‘ಕಡಿಯಿತು’ ಇಳುತ್ತು ‘ಇಳಿಯಿತು’ ಹಿಡುತ್ತು ‘ಹಿಡಿಯಿತು’’
ಒಡತ್ತು ‘ಒಡೆಯಿತು’ ತಳತ್ತು ‘ಸವೆಯಿತು’ ಮರತ್ತು ‘ಮರೆತ’

ಮಾಡುವಿಕೆ ಮುರುದತ್ತು ‘ಮುರಿದ’’ ಹರುದತ್ತು ‘ಹರಿದ’ ಸಿಗುದತ್ತು ‘ಸಿಗಿದ’ ಕಡುದತ್ತು ‘ಕಡಿದ’ ಇಳುದತ್ತು ‘ಇಳಿದ’ ಹಿಡುದತ್ತು ‘ಹಿಡಿದ’’ ಒಡದತ್ತು ‘ಒಡೆದ’ ತಳದತ್ತು ‘ಸವೆದ’ ಮರದತ್ತು ‘ಮರೆತ’’

ಹವ್ಯಕ

ಕನ್ನಡದ

ಕ್ರಿಯಾರೂಪಗಳನ್ನು

ಸಂದರ್ಬಗಳಲ್ಲಿ ಅದು

ಗವ್ರವಾರ್ತದಲ್ಲಿ ಬಳಸಬೇಕಾದಾಗ ಮಾತ್ರ ಅವುಗಳಲ್ಲಿ ಲಿಂಗಬೇದ ಸೂಚಿತವಾಗುತ್ತದೆ, ಮೇಲೆ ಸೂಚಿಸುವ ಕೊಟ್ಟಿರುವಂತಹ ಆಗುವಿಕೆ-ಮಾಡುವಿಕೆ ವ್ಯತ್ಯಾಸವನ್ನು ಕ್ರಿಯಾರೂಪಗಳು ಮಾತ್ರ ಗವ್ರವಾರ್ತವನ್ನು ಕಾಣಿಸುವುವಾದ ಕಾರಣ, ಈ ಎರಡು ರೀತಿಯ ಕ್ರಿಯಾರೂಪಗಳ ಕೊನೆಯಲ್ಲೂ ತ್ತು ಆಡುಗ ಒಟ್ಟು ಬಳಕೆಯಾಗಿದೆ.

ಸೂಚಿತವಾಗುವುದಿಲ್ಲ.

ಸೂಚಿಸದಿರುವಲ್ಲಿ

ಇವುಗಳಲ್ಲಿ ಮೊದಲನೆಯ ರೂಪವನ್ನು ಕ್ರಿಯಾಪದಕ್ಕೆ ಹಿಂದಿನ ಸಮಯದ ‘ಸೊನ್ನೆ’ ಒಟ್ಟನ್ನು (ಮತ್ತು ತ್ತು ಆಡುಗ ಒಟ್ಟನ್ನು)

ಸೇರಿಸುವುದರ ಮೂಲಕ ರಚಿಸಲಾಗಿದೆ ಮತ್ತು ಅದು ಒಂದು ವಸ್ತುವಿಗೆ ಏನಾಯಿತೆಂಬುದನ್ನು (ಎಂದರೆ ಆಗುವಿಕೆಯನ್ನು) ತಿಳಿಸುತ್ತದೆ.

ಎರಡನೆಯ ರೂಪವನ್ನು ಕ್ರಿಯಾಪದಕ್ಕೆ ಹಿಂದಿನ ಸಮಯದ ದ್(ಅ) ಒಟ್ಟನ್ನು (ಮತ್ತು ಅದರ ಅನಂತರ ತ್ತು ಒಟ್ಟನ್ನು) ಸೇರಿಸುವುದರ ಮೂಲಕ ರಚಿಸಲಾಗಿದೆ ಮತ್ತು ಅದು ಒಬ್ಬ ವ್ಯಕ್ತಿ ಏನು ಮಾಡಿದ ಎಂಬುದನ್ನು (ಎಂದರೆ ಮಾಡುವಿಕೆಯನ್ನು) ತಿಳಿಸುತ್ತದೆ.

ಈ ಎರಡು ರೀತಿಯ

ವ್ಯತ್ಯಾಸ ಅಕರ್ಮಕ-ಸಕರ್ಮಕಗಳ

ಕ್ರಿಯಾರೂಪಗಳ ಬಳಕೆಯುಂತಹದು ಎಂಬುದನ್ನು ಕೆಳಗಿನ ಹವ್ಯಕ ವಾಕ್ಯಗಳು ಸ್ಪಶ್ಟಪಡಿಸುತ್ತವೆ. ಇಲ್ಲಿ ಕಾಣಿಸುವ ನಡುವಿನದು ಎಂದು ಹೇಳುವುದಕ್ಕಿಂತಲೂ ಆಗುವಿಕೆ-ಮಾಡುವಿಕೆಗಳ ನಡುವಿನದು ಎಂದು ಹೇಳುವುದೇ ಉದಾಹರಣೆಯಿಂದ ನಾಮಪದಗಳ ವಾಕ್ಯಗಳಲ್ಲೂ ಒಂದಕ್ಕಿಂತ ಬಳಕೆಯಾಗಿದೆಯುಂಬುದನ್ನು ಗಮನಿಸಬಹುದು.

ಕೊಟ್ಟಿರುವ ಕೆಳಗೆ ಸ್ಪಶ್ಟವಾಗುತ್ತದೆ. ಈ ಎರಡು

ಸರಿ ಎಂಬುದು

ಹೆಚ್ಚು

(11ಕ) ಅಳಗೆ ಒಡತ್ತು

’‘ಮಡಿಕೆ ಒಡೆಯಿತು’’ (11ಚ) ಕೂಸು ಅಳಗೆಯ ಒಡದತ್ತು

’‘ಹುಡುಗಿ ಮಡಿಕೆಯನ್ನು ಒಡೆದಳು’

(12ಕ) ಕೂಸಿಂಗೆ ಪದ ಮರತ್ತು

‘‘ಹುಡುಗಿಗೆ ಪದ ಮರೆತಿತು’’

(12ಚ) ಕೂಸು ಪದವ ಮರದತ್ತು

’‘ಹುಡುಗಿ ಪದವನ್ನು ಮರೆತಳು’’

ಈ ರೀತಿಯ ರೂಪವ್ಯತ್ಯಾಸ ಹವ್ಯಕ ಕನ್ನಡದಲ್ಲಿ ಎಕಾರಾಂತ ಮತ್ತು ಇಕಾರಾಂತ ಕ್ರಿಯಾಪದಗಳಲ್ಲಿ, ಅದರಲ್ಲೂ ಆಡುಗ-ಕೇಳುಗರನ್ನು ಬಿಟ್ಟು

ಇತರ ವ್ಯಕ್ತಿಗಳ ಕೆಲಸವನ್ನು ಸೂಚಿಸುವ ಮತ್ತು ಗವ್ರವಾರ್ತವಿಲ್ಲದ ಕ್ರಿಯಾ ರೂಪಗಳಲ್ಲಿ ಮಾತ್ರವೇ ಕಾಣಿಸುತ್ತದೆ.

ಸುಬ್ರಹ್ಮಣ್ಯಂ (ಬರಲಿದೆ) ಅವರ ಅಬಿಪ್ರಾಯದಂತೆ, ಹವ್ಯಕದ ಈ ರೂಪವ್ಯತ್ಯಾಸಕ್ಕೂ ತಮಿಳು ಇಲ್ಲವೇ ಬಡಗ ಕನ್ನಡದಲ್ಲಿ ಕಾಣಿಸುವ ರೂಪ ವ್ಯತ್ಯಾಸಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಹವ್ಯಕದಲ್ಲಿ ಕಾಣಿಸುವ ವ್ಯತ್ಯಾಸಕ್ಕೆ ಅವರು ಕೊಟ್ಟಿರುವ ಹಾಗೆ ವಿವರಣೆಯನ್ನು ಒದಗಿಸಿದ್ದಾರೆ.

ಕೆಳಗೆ

ಹವ್ಯಕದ ಹೆಚ್ಚಿನ ಕ್ರಿಯಾರೂಪಗಳಲ್ಲೂ ಹಿಂದಿನ ಸಮಯದ ಒಟ್ಟಿಗೆ ಅದರ ಅನಂತರ ಬರುವ ಆಗುಗ ಒಟ್ಟನ್ನವಲಂಬಿಸಿ ಎರಡೆರಡು ರೂಪಗಳಿವೆ; ಗವ್ರವವನ್ನು ಸೂಚಿಸುವ ಆಗುಗ ಒಟ್ಟು ಬಂದಿದೆಯಾದರೆ ಅದಕ್ಕೆ ದ್ ರೂಪವಿದೆ (ಮಾಡಿದೆ, ಹೇಳಿದೆ, ಬಡುದೆ) ಮತ್ತು ಗವ್ರವವನ್ನು ಸೂಚಿಸದಿರುವ ಆಗುಗ ಒಟ್ಟು ಬಂದಿದೆಯಾದರೆ ಸೊನ್ನೆ ರೂಪವಿದೆ (ಮಾಡಿತ್ತು, ಹೇಳಿತ್ತು, ಬಡುತ್ತು).

ಗವ್ರವವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಬರುವ ದ್ ಒಟ್ಟನ್ನು ಗವ್ರವವನ್ನು ಸೂಚಿಸದಿರುವ ಕ್ರಿಯಾರೂಪಗಳಲ್ಲೂ ಬಳಸುವ ಮೂಲಕ ಹವ್ಯಕ ಕನ್ನಡ ಕೆಲವು ಕ್ರಿಯಾಪದಗಳ ಮಟ್ಟಿಗೆ ಆಗುವಿಕೆ-ಮಾಡುವಿಕೆ ವ್ಯತ್ಯಾಸವನ್ನು ಹೊಸದಾಗಿ ತಯಾರಿಸಿಕೊಂಡಿರಬೇಕು; ಎಂದರೆ, ಹವ್ಯಕ ಕನ್ನಡದ ಈ ವ್ಯತ್ಯಾಸ ಮೂಲ ತೆಂಕುದ್ರಾವಿಡದಲ್ಲಿದ್ದ ಆಗುವಿಕೆ- ಮಾಡುವಿಕೆ ವ್ಯತ್ಯಾಸದ ಪಳೆಯಳಿಕೆಯಲ್ಲ ಎಂಬುದಾಗಿ ಸುಬ್ರಹ್ಮಣ್ಯಂ ವಾದಿಸುತ್ತಾರೆ.

ಆದರೆ ಸುಬ್ರಹ್ಮಣ್ಯಂ ಅವರ ಈ ವಿವರಣೆ ಒಂದು ವಿಶಯದಲ್ಲಿ

ತೊಂದರೆ ಕೊಡುವಂತಹದಾಗಿದೆ.

ಮೇಲೆ (7.5.2ರಲ್ಲಿ) ಸೂಚಿಸಿದ ಹಾಗೆ, ತಮಿಳಿನಲ್ಲಿ ಮಾಡುವಿಕೆ ಯನ್ನು ಸೂಚಿಸುವ ತ್ ಒಟ್ಟು ಸಮಯದ ಒಟ್ಟಿನ ಅನಂತರ ಬರುವುದು ಮುಕ್ಯವಾಗಿ ಇಕಾರದಲ್ಲಿ ಮತ್ತು ಯ, ರ, ೞ ವ್ಯಂಜನಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಮಾತ್ರ.

ಎಕಾರದಲ್ಲಿ

ಹವ್ಯಕ ಕನ್ನಡದಲ್ಲೂ ಮೇಲಿನ ಅರ್ತವ್ಯತ್ಯಾಸವನ್ನು ಕಾಣಿಸುವಲ್ಲಿ ಅಂತಹದೇ ನಿರ್ಬಂದವಿದೆಯುಂದು ಹೇಳಬಹುದು. ಅದು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮಾತ್ರ ಕಾಣಿಸುತ್ತದೆ. ಇವುಗಳಲ್ಲಿ ಕ್ರಿಯಾಪದಗಳು ಮೂಲದ್ರಾವಿಡದಲ್ಲಿ *ಅಯ್ ಎಂಬುದರಲ್ಲಿ ಕೊನೆಗೊಳ್ಳುತ್ತಿದ್ದುವಾದ ಕಾರಣ, ಅವು ತಮಿಳಿನ ಯಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ಸಮನಾಗಿವೆ. (ರಕಾರ ಮತ್ತು ೞಕಾರದಲ್ಲಿ ಕೊನೆಗೊಳ್ಳುವ ಮೂಲದ್ರಾವಿಡ ಕ್ರಿಯಾಪದಗಳು ಹವ್ಯಕದಲ್ಲಿ ಉಕಾರದಲ್ಲಿ ಕೊನೆಗೊಳ್ಳುವ ಕಾರಣ ಅಂತಹ ಕ್ರಿಯಾಪದಗಳಲ್ಲಿ ಈ ವ್ಯತ್ಯಾಸ ಕಾಣಿಸುವುದಿಲ್ಲ).

ಕೊನೆಗೊಳ್ಳುವ

ಮೇಲೆ ಕೊಟ್ಟಿರುವ ಸುಬ್ರಹ್ಮಣ್ಯಂ ಅವರ ವಿವರಣೆಯನ್ನು ಒಪ್ಪಿ ಕೊಂಡಲ್ಲಿ, ತಮಿಳು ಮತ್ತು ಬಡಗ ಕನ್ನಡಗಳಲ್ಲಿ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಸಮಯದ ಒಟ್ಟಿನ ಅನಂತರ ಬರುವುದಕ್ಕಿರುವ ನಿರ್ಬಂದವೇ ಹವ್ಯಕದಲ್ಲಿ ಮೇಲೆ ಸೂಚಿಸಿದ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಕಾಣಿಸಿಕೊಳ್ಳುವುದಕ್ಕೂ ಯಾಕೆ ಇದೆ ಎಂಬುದನ್ನು ವಿವರಿಸಲು ಸಾದ್ಯವಾಗದು.

ಹಾಗಾಗಿ, ಹವ್ಯಕದಲ್ಲೂ ಮೇಲಿನ ವ್ಯತ್ಯಾಸ ಮಾಡುವಿಕೆಯ ಒಟ್ಟು ಸಮಯದ ಒಟ್ಟಿನ ಅನಂತರ ಬಂದುದರಿಂದಾಗಿ ಮೂಡಿಬಂದಿದೆಯುಂದು ವಾದಿಸುವ ಅವಶ್ಯಕತೆಯಿದೆ. ಕೆಳಗೆ ಕಾಣಿಸಿದ ಹಾಗೆ ಆ ರೀತಿ ವಾದಿಸಲು ಒಂದು ದಾರಿಯೂ ಇದೆ.

ಹಿಂದಿನ ಸಮಯದ ನ್್ತ ಒಟ್ಟಿನ ಅನಂತರ ನೇರವಾಗಿ ಗವ್ರವವನ್ನು ಸೂಚಿಸದಿರುವ ತ್ತು ಒಟ್ಟು ಬಂದಾಗ ಅದು ಹವ್ಯಕದಲ್ಲಿ ಸೊನ್ನೆ ರೂಪ ವನ್ನು ಪಡೆದಿದೆ ಮತ್ತು ಅದರೊಂದಿಗೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟೂ ಬಂದಾಗ ಅವೆರಡರ ಜೋಡಿ (ನ್ತ್್ತ ಎಂಬುದು) ದ್ ರೂಪ ಹವ್ಯಕದಲ್ಲೂ ಹೇಳುವ ವನ್ನು ತಮಿಳಿನಂತಹದೇ ನಿರ್ಬಂದ ಯಾಕೆ ಇದೆ ಎಂಬುದನ್ನು ವಿವರಿಸಲು ಸಾದ್ಯವಿದೆ.

ಪಡೆದಿದೆ ಎಂದು

ಮೂಲಕ

Eke →

7.6 ಮಾಡುವಿಕೆಯನ್ನು ಸೂಚಿಸುವ ಬೇರೆ ಒಟ್ಟುಗಳು

*ಇಪು ಮತ್ತು *ಇಚು ಎಂಬ ಬೇರೆ ಎರಡು ಒಟ್ಟುಗಳ ಮೂಲಕವೂ ಮೂಲದ್ರಾವಿಡದಲ್ಲಿ ಆಗುವಿಕೆಗಳನ್ನು ಮಾಡುವಿಕೆಗಳಾಗಿ ಬದಲಾಯಿಸಲು ಸಾದ್ಯವಿದ್ದಿರಬೇಕು. ಇವುಗಳಲ್ಲಿ ಮೊದಲಿನದು ಮುಂದಿನ ಸಮಯದ ಕ್ರಿಯಾಪದಗಳೊಂದಿಗೆ ಬರುತ್ತಿದ್ದಿರಬೇಕು ಮತ್ತು ಎರಡನೆಯದು ಹಿಂದಿನ ಸಮಯದ ಕ್ರಿಯಾಪದಗಳೊಂದಿಗೆ ಬರುತ್ತಿದ್ದಿರಬೇಕು. ಹಳೆಗನ್ನಡದ ಕೆಲವು ಕ್ರಿಯಾಪದಗಳಲ್ಲಿ ಈ ಎರಡು ಒಟ್ಟುಗಳ ಬಳಕೆಯನ್ನೂ ಕಾಣಬಹುದು.

ಆಗುವಿಕೆ

ಕರಗು

ಮಾಡುವಿಕೆ

ಮುಂದಿನ ಸಮಯ ಕರಗಿಪರ್ ಅಳಿಪರ್
ಗೆಲಿಪರ್

ಹಿಂದಿನ ಸಮಯ ಕರಗಿಸಿದರ್ ಅಳಿಸಿದರ್ ಗೆಲಿಸಿದರ್

ಆದರೆ ಹೊಸಗನ್ನಡದಲ್ಲಿ ಇಸು ಒಟ್ಟನ್ನೇ ಎಲ್ಲಾ ಸಂದರ್ಬಗಳಲ್ಲೂ

ಬಳಸಲಾಗುತ್ತದೆ.

ಆಗುವಿಕೆ

ಕರಗಿಸು
ಗೆಲ್ಲು

ಮಾಡುವಿಕೆ

ಮುಂದಿನ ಸಮಯ ಕೆಡಿಸುತ್ತಾರೆ ಕರಗಿಸುತ್ತಾರೆ
ಅಳಿಸುತ್ತಾರೆ ಗೆಲ್ಲಿಸುತ್ತಾರೆ

ಹಿಂದಿನ ಸಮಯ ಕೆಡಿಸಿದರು ಕರಗಿಸಿದರು ಅಳಿಸಿದರು ಗೆಲ್ಲಿಸಿದರು

ಬೇರೆ

ರೂಪಗಳಲ್ಲೂ ಹಳೆಗನ್ನಡದಲ್ಲೇನೇ ಚು ಒಟ್ಟು ಆಗುವಿಕೆಗಳನ್ನು ಮಾಡುವಿಕೆಗಳಾಗಿ

ಕ್ರಿಯಾಪದಗಳ

ಕೆಲವು

ಬದಲಾಯಿಸಲು ಬಳಕೆಯಾಗುತ್ತಿತ್ತು. ಇದೂ ಕೂಡ ಮೂಲದ್ರಾವಿಡದ *ಇಚು ಒಟ್ಟಿನ ಪಳೆಯಳಿಕೆಯಾಗಿರಬೇಕು.

ಆಗುವಿಕೆ
ಉರುಳ್
ತಿರುಗು

ಮಾಡುವಿಕೆ ಅಗಲ್ಚು ತೀರ್ಚು ಉರುಳ್ಚು ತಿರುಚು

Eke →

7.7 ನಾಮಬೇರುಗಳಿಂದ ಕ್ರಿಯಾಪದಗಳು

ಮೂಲದ್ರಾವಿಡದಲ್ಲಿ ನಾಮಬೇರುಗಳಿಂದ ಇಲ್ಲವೇ ನಾಮಪದಗಳಿಂದ ಕ್ರಿಯಾಪದಗಳನ್ನು ಪಡೆಯಲು ಸಾದ್ಯವಿತ್ತೇ ಎಂಬುದಿನ್ನೂ ಸ್ಪಶ್ಟವಾಗಿಲ್ಲ. ಕನ್ನಡದ ಕ್ರಿಯಾಪದಗಳನ್ನು ಕನ್ನಡದ್ದೇ ಆದ ನಾಮಪದಗಳೊಂದಿಗೆ ಇಲ್ಲವೇ ತಮಿಳು ಮೊದಲಾದ ಇತರ ದ್ರಾವಿಡ ನುಡಿಗಳ ಪದಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳ ಒಳರಚನೆಯಲ್ಲಿ ಕೆಳಗೆ ಸೂಚಿಸಿದ ಕೆಲವು ಒಟ್ಟುಗಳು ಬಳಕೆಯಾಗಿರುವ ಹಾಗೆ ತೋರುತ್ತದೆ.

ನಾಮಪದ ಪುೞು ‘ಹುಳ’’
ನೂಲು

ಕ್ರಿಯಾಪದ ಪುೞಿ ‘ಹುಳ ಹಿಡಿ’’ ನುಲಿ ‘ತಿರುಚು, ನೂಲು ತೆಗೆ’’

(2) ಕು\ಗು ಒಟ್ಟು: ನಾಮಪದ ಮಿಡಿ ‘ದುಗುಡ’
ಕೂ ‘ಕೂಗು’ ಮೞ ‘ಮಸುಕು’

ಕ್ರಿಯಾಪದ ಮಿಡುಕು ‘ಅಳಲು’’ ಕೂಗು ಮೞ್ಗು, ಮಗ್ಗು ‘ಮಸುಕಾಗು’’

(3) ಚು ಒಟ್ಟು:

ನಾಮಪದ ನಾಣ್ ‘ನಾಚುಗೆ’’ ಕೊರಲ್ ‘ಉಲಿ’
ತಮಿಳು: ವೆರು ‘ಹೆದರಿಕೆ’ ಬೆರ್ಚು ‘ಬೆಚ್ಚು’’

ಕ್ರಿಯಾಪದ ನಾಣ್ಚು ‘ನಾಚು’ ಕೊರಲ್ಚು ‘ಉಲಿ ಮಾಡು’

ಮೇಲಿನ ಒಟ್ಟೇ ಸು ರೂಪದಲ್ಲಿ ಇನ್ನೂ ಹಲವು ಪದಗಳಲ್ಲಿ

ಬಳಕೆಯಾಗುತ್ತದೆ.

ನಾಮಪದ ತುಂಡು
ಹೆಸರು
ಕೊಂಡೆ ‘ಚಾಡಿ’
ನೂಲು
ಬೋಳು ಬಯಕೆ
ಬೆಸ ‘ಅಪ್ಪಣೆ’’
ಬೆಪ್ಪಳ ‘ಅಚ್ಚರಿ’

(4) ಮು ಒಟ್ಟು: ನಾಮಪದ ಆಳ್ ‘ಕೆಚ್ಚು’’

(5) ಲ್ ಒಟ್ಟು:

ಕ್ರಿಯಾಪದ ತುಂಡಿಸು ಹೆಸರಿಸು ಕತ್ತರಿಸು ಕೊಂಡಿಸು ‘ಚಾಡಿ ಹೇಳು’’ ನೂಲಿಸು ‘ನೂಲು ಮಾಡು’’ ಬೋಳಿಸು

ಬಯಸು ಬೆಸಸು ‘ಅಪ್ಪಣೆ ಮಾಡು’ ಬೆಪ್ಪಳಿಸು ‘ಅಚ್ಚರಿಪಡು’

ಕ್ರಿಯಾಪದ ಅಣ್ಮು ‘ಕೆಚ್ಚು ತೋರಿಸು’

ನಾಮಪದ ಮೞ ‘ಮಸುಕು’

ಕ್ರಿಯಾಪದ ಮೞಲ್ ‘ಮಸಕಾಗು’’

ಮೂಲದ್ರಾವಿಡದಲ್ಲೇನೇ ಹಲವು ನಾಮಪದಗಳು ಮತ್ತು ಕ್ರಿಯಾಪದ ಗಳು ಒಂದೇ ರೂಪದಲ್ಲಿದ್ದುವೆಂದು ಕಲ್ಪಿಸಲಾಗಿದೆ. ಕನ್ನಡದಲ್ಲೂ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು.

ಕ್ರಿಯಾಬೇರು ಹಿಗ್ಗು
ನಗು ದೂರು
ಹಾಡು

ನಾಮಪದ ಹಿಗ್ಗು
ನಗು ದೂರು ಹಾಡು

ಮೂಲಕ

ಆದರೆ, ಇಂತಹ ಸಂದರ್ಬಗಳಲ್ಲೆಲ್ಲ ಕ್ರಿಯಾಬೇರುಗಳಿಂದ ‘ಸೊನ್ನೆ’ ಪಡೆಯಲಾಗಿದೆಯುಂದೇ ನಾಮಪದಗಳನ್ನು ಕಲ್ಪಿಸಿಕೊಳ್ಳಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ, ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಕ್ರಿಯಾಪದಗಳನ್ನು ಪಡೆಯುವ ವಿದಾನ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿಲ್ಲ; ಆದರೆ, ಕ್ರಿಯಾಬೇರುಗಳಿಗೆ ಹಲವು ರೀತಿಯ ಒಟ್ಟುಗಳನ್ನು ಸೇರಿಸುವುದರ ಮೂಲಕ ನಾಮಪದಗಳನ್ನು ಪಡೆಯಲು ಸಾದ್ಯವಿದೆ (9.3 ನೋಡಿ)

Eke →

7.8 ಗುಣಬೇರುಗಳಿಂದ ಕ್ರಿಯಾಪದಗಳು

ಗುಣಬೇರುಗಳಿಗೆ ಇ ಒಟ್ಟನ್ನು ಸೇರಿಸಿ ತಯಾರಿಸಿದ ಕ್ರಿಯಾಪದಗಳು
ಕನ್ನಡದಲ್ಲಿ ಕೆಲವಿವೆ. ಬೇರೆ ಕೆಲವು ಕ್ರಿಯಾಪದಗಳಲ್ಲಿ ಇ ಒಟ್ಟಿನ ಅನಂತರ ಮೂಲದ್ರಾವಿಡದ *ತು ಒಟ್ಟು ಬಂದಿದ್ದು ಅದು ಕನ್ನಡದಲ್ಲಿ ಚು ರೂಪಕ್ಕೆ ಬದಲಾಗಿದೆ.

ಗುಣಬೇರು ಕ್ರಿಯಾಪದ ತಣ್ ‘ತಣ್ಣಗೆ, ತಂಪು’’ ತಣಿ ‘ತಣ್ಣಗಾಗು’, ದಣಿ ‘ಬಳಲು’ ನಸು ‘ಚಿಕ್ಕ, ಸ್ವಲ್ಪ’’

ನಸಿ ‘ತಳೆ, ಚಿಕ್ಕದಾಗು’’

ಪಿನ್ ‘ಹಿಂದೆ’’
ಪೆರ್ ‘ದೊಡ್ಡ’’

ಪಿಂಚು ‘ಹಿಂದೆ ಸರಿ’’ ಪೆರ್ಚು, ಪೆಚ್ಚು ‘ಹೆಚ್ಚು’’

ಗುಣಪದಗಳಿಂದ ಇಸು ಒಟ್ಟಿನ ಮೂಲಕ ಕ್ರಿಯಾಪದಗಳನ್ನು

ರಚಿಸುವ ಕನ್ನಡದ ಕ್ರಮ ಇದೇ ಒಟ್ಟಿನ ಮುಂದುವರಿಕೆಯಾಗಿರಬಹುದು.

ಗುಣಪದ ಇದುರು
ಕಂಪು
ಚೊಕ್ಕ

ಕ್ರಿಯಾಪದ ಇದುರಿಸು ಕಂಪಿಸು ‘ಪರಿಮಳಿಸು’’ ಅಡ್ಡವಿಸು ಸೊಗಯಿಸು ದಟ್ಟಣಿಸು ಪೞಸು

ಗುಣಬೇರುಗಳಿಗೆ ಗು ಒಟ್ಟನ್ನು ಸೇರಿಸಿ ರಚಿಸಿರುವ ಕ್ರಿಯಾಪದಗಳೂ

ಕೆಲವಿವೆ.

ಗುಣಬೇರು ಕಿೞ್ ‘ಕೆಳ, ಕೆಳಗೆ’’ ಪಿನ್ ‘ಹಿಂದೆ’ ಪೆರ್ ‘ದೊಡ್ಡ’’
ಒಣ್-ಅ ‘ಒಣಗಿದ’’ ಒಣಗು ‘ನೀರಾರು’

ಕ್ರಿಯಾಪದ ಕಿಳ್ಗು ‘ತಗ್ಗು’’ ಪಿಂಗು ‘ಹಿಂದೆ ಸರಿ’’ ಹಿಗ್ಗು ‘ದೊಡ್ಡದಾಗು, ಉಬ್ಬು’

Eke →

7.9 ಕ್ರಿಯಾಪದಗಳ ರೂಪದಲ್ಲಿ ಬದಲಾವಣೆಗಳು

ಮೂಲದ್ರಾವಿಡ ಕ್ರಿಯಾಪದಗಳು ಹಳೆಗನ್ನಡದಲ್ಲಿ ಹೆಚ್ಚು ಬದಲಾಗದೆ ಉಳಿದುಕೊಂಡಿವೆ (ಹಳೆತಮಿಳು ಇಲ್ಲವೇ ಹಳೆಗನ್ನಡದಲ್ಲಿ ಕಾಣಿಸುವ ರೂಪವೆಂಬುದಾಗಿ ರೂಪವೇ

ಮೂಲದ್ರಾವಿಡದ

ಹೆಚ್ಚುಕಡಿಮೆ

ಕಲ್ಪಿಸಿಕೊಂಡಿರುವುದೇ ಹೊಸಗನ್ನಡದಲ್ಲಿ ಅವುಗಳ ರೂಪ ಬಹಳ ಮಟ್ಟಿಗೆ ಬದಲಾಗಿದೆ.

ಕಾರಣವಿರಬಹುದು).

ಮೂಲದ್ರಾವಿಡದ ಹಾಗೆ ಹಳೆಗನ್ನಡದಲ್ಲಿ ಹಲವು ಆಕಾರಗಳಲ್ಲಿರುವ ಕ್ರಿಯಾಪದಗಳಿದ್ದುವು; ಆದರೆ ಹೊಸಗನ್ನಡದಲ್ಲಿ ಉಕಾರ, ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಮೂರು ರೀತಿಯ ಕ್ರಿಯಾಪದಗಳು ಮಾತ್ರ ಕಾಣಿಸುತ್ತವೆ. ಅದರಲ್ಲೂ, ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲೆಲ್ಲ ಎರಡು ಹಗುರ ಉಲಿಕಂತೆಗಳು ಮಾತ್ರ ಬರಬಲ್ಲುವು (ನುಡಿ, ಮಡಿ, ಅರಿ, ಹರಿ; ಕರೆ, ತೆರೆ, ಸೆಳೆ, ಹೊಳೆ, ಬರೆ).

ಇತರ ಉಲಿಕಂತೆಗಳು (ಕಟ್ಟು, ಅಂಜು, ತೂಗು) ಮತ್ತು ಎರಡಕ್ಕಿಂತ ಜಾಸ್ತಿ ಉಲಿಕಂತೆಗಳು (ಒಣಗು, ದುಡುಕು, ಅಪ್ಪಳಿಸು, ಮೂದಲಿಸು) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮಾತ್ರ ಬರಬಲ್ಲುವು.

ಕೆಳಗೆ

ಸೂಚಿಸಿದ ಬದಲಾವಣೆಗಳಿಂದಾಗಿ, ಮೂಲದ್ರಾವಿಡದಲ್ಲಿ ಇಲ್ಲವೇ ಹಳೆಗನ್ನಡದಲ್ಲಿದ್ದ ಹಲವಾರು ಬಗೆಯ ಕ್ರಿಯಾಪದಗಳು ಈ ರೀತಿ ಹೊಸಗನ್ನಡದಲ್ಲಿ ಇಲ್ಲವಾಗಿವೆ.

ಇದ್ದುವಾದರೂ

(1) ತಡೆಯುಲಿಗಳಲ್ಲಿ ಕೊನೆಗೊಳ್ಳುವ ಹಲವು ಕ್ರಿಯಾಪದಗಳು ಕೊನೆಯಲ್ಲಿ ಮೂಲದ್ರಾವಿಡದಲ್ಲಿ ಉಚ್ಚಾರಣೆಗಾಗಿ ಉಕಾರವೊಂದು ಬರುತ್ತಿತ್ತೆಂಬುದನ್ನು ನಾವು ಹಿಂದೆ ಆರನೇ ಅದ್ಯಾಯದಲ್ಲಿ ನೋಡಿರುವೆವು. ಈ ಉಕಾರ ಹೊಸಗನ್ನಡಲ್ಲೂ ಉಳಿದುಕೊಂಡಿದೆ (ಇಡು, ಕಟ್ಟು, ಸಿಗು, ಹೆಕ್ಕು, ಹತ್ತು, ಅಪ್ಪು).

ಅವುಗಳ

(2) ಮೂಲದ್ರಾವಿಡದಲ್ಲಿ ತಡೆಯುಲಿಯಾಗಿದ್ದ ಱಕಾರ ಕನ್ನಡದಲ್ಲಿ ಸ್ವರಗಳ ನಡುವೆ ತಡೆಯುಲಿಯಾಗಿ ಉಳಿಯದೆ ಹೊಡೆಯುಲಿ (ಇಲ್ಲವೇ ಅದಿರುಲಿ)ಯಾಗಿ ಬದಲಾಗಿದೆಯಾದ ನೋಡಿ), ಱಕಾರದಲ್ಲಿ ಕ್ರಿಯಾಪದಗಳ ಅನಂತರ ಹಲವು ಹಳೆಗನ್ನಡದಲ್ಲಿ ಉಚ್ಚಾರಣೆಗಾಗಿ ಉಕಾರ ಬರುವ ಅವಶ್ಯಕತೆಯಿರಲಿಲ್ಲ. ಹಾಗಾಗಿ ಅವು ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳಾಗಿದ್ದುವು (ತಾಱ್ ‘ಒಣಗು’, ಆಱ್ ‘ನಂದು’, ಉಱ್ ‘ಇರು’ ಎೞ್ಚಱ್ ‘ನಿದ್ದೆತಿಳಿ’).

ಕೊನೆಗೊಳ್ಳುವ

ಆದರೆ, ಹೊಸಗನ್ನಡದಲ್ಲಿ ಇಂತಹ ಕ್ರಿಯಾಪದಗಳೆಲ್ಲ ಉಕಾರದಲ್ಲಿ

ಕೊನೆಗೊಳ್ಳುವುವಾಗಿವೆ (ನಾಱ್ > ನಾರು, ಪೆಱ್ > ಹೆರು).

(3) ಇದಲ್ಲದೆ, ಮೂಲದ್ರಾವಿಡದಲ್ಲಿ ನ, ಣ, ಯ, ವ, ರ, ಲ, ಳ ಮತ್ತು ೞಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿದ್ದುವು ಮತ್ತು ಇವೆಲ್ಲ ಕೊನೆಗೊಳ್ಳುವ ಹಳೆಗನ್ನಡದಲ್ಲಿ ವ್ಯಂಜನಗಳಲ್ಲಿ ಕ್ರಿಯಾಪದಗಳಾಗಿಯೇ ಉಳಿದಿದ್ದುವು; ಆದರೆ ಹೊಸಗನ್ನಡದಲ್ಲಿ ಇವೆಲ್ಲವೂ ಸ್ವರದಲ್ಲಿ (ಉಕಾರದಲ್ಲಿ) ಕೊನೆಗೊಳ್ಳುವ ಕ್ರಿಯಾಪದಗಳಾಗಿ ಬದಲಾಗಿವೆ.

ಈ ಕ್ರಿಯಾಪದಗಳಲ್ಲಿ ಒಂದೇ ಉಲಿಕಂತೆಯಿದ್ದು, ಅದರಲ್ಲಿ ಗಿಡ್ಡ ಸ್ವರ ಬಂದಿದೆಯಾದರೆ, ಅದರ ಕೊನೆಯ ವ್ಯಂಜನ ಹೊಸಗನ್ನಡದಲ್ಲಿ ಇಮ್ಮಡಿ ರೂಪವನ್ನು ಪಡೆಯುತ್ತದೆ. (ರಕಾರ ಇಲ್ಲವೇ ಱಕಾರದಿಂದ ಬಂದ ರಕಾರ (ಬರ್ > ಬರು, ತೆಱ್ > ತೆರು) ಮತ್ತು ೞಕಾರದಿಂದ ಬಂದ ಳಕಾರ (ಅೞ್ > ಅಳು) ಮಾತ್ರ ಈ ನಿಯಮಕ್ಕೆ ಅಪವಾದಗಳಾಗಿವೆ).

ಗಿಡ್ಡ ಸ್ವರ ಇರುವಲ್ಲಿ ಹಳೆಗನ್ನಡ ಹೊಸಗನ್ನಡ ತಿನ್ನು ಕೊಯ್ ಕೊಯ್ಯು ಗೆಲ್ಲು ಕೊಳ್ಳು ಕೊಳ್ ತೆಱ್ ಅೞ್ ಅೞು

ಉದ್ದ ಸ್ವರ ಇರುವಲ್ಲಿ ಹಳೆಗನ್ನಡ ಹೊಸಗನ್ನಡ ಸೀನ್ ಸೀನು ನೋಯ್ ನೋಯು ಸೋಲ್ ಸೋಲು ಕೇಳು ಕೇಳ್ ಹೀರು ನಾಱ್ ನಾರು ಬಾೞ್ ಬಾಳು

(4)  ಆದರೆ,  ಎರಡು  ಉಲಿಕಂತೆಗಳಿರುವ  ಕ್ರಿಯಾಪದಗಳಲ್ಲಿ  ಗಿಡ್ಡ  ಸ್ವರದ  ಅನಂತರವೂ  ಲಕಾರ  ಮತ್ತು  ಳಕಾರಗಳು  ಒತ್ತೆ  ರೂಪದಲ್ಲೇ  ಉಳಿದಿವೆ. 

ಹಳೆಗನ್ನಡ ಕನಲ್
ಪೊಗಳ್
ತೆಗೞ್

ಹೊಸಗನ್ನಡ ಕನಲು ಹೊಗಳು ತೆಗಳು

(5)  ಇಂತಹ  ಕೆಲವು  ಕ್ರಿಯಾಪದಗಳ  ಕೊನೆಯಲ್ಲಿ  ಉಚ್ಚಾರಣೆಗಾಗಿ  ಸೇರಿದ  ಉಕಾರ  ಅವುಗಳ  ಕ್ರಿಯಾರೂಪಗಳಲ್ಲೂ  ಉಳಿದುಕೊಂಡಿರುವ  ಕಾರಣ, ಅದು ಕ್ರಿಯಾಪದದ ಅಂಶವಾಗಿದೆ. ಉದಾಹರಣೆಗಾಗಿ, ಹಳೆಗನ್ನಡ  ಮತ್ತು  ಹೊಸಗನ್ನಡಗಳಲ್ಲಿ  ಕೆಳಗಿನ  ಕ್ರಿಯಾಪದಗಳಿಗಿರುವ  ಹಿಂದಿನ  ಸಮಯದ ರೂಪಗಳನ್ನು ಹೋಲಿಸಿ ನೋಡಬಹುದು. 

  ಹಳೆಗನ್ನಡ   ಬೆಮರ್   ಕನಲ್    ಬಾೞ್   ಕೇಳ್   

ಪೀರ್ದ
ಬೆಮರ್ದ
ಕನಲ್ದ
ಬಾೞ್ದ
ಕೇೞ್ದ

ಹೊಸಗನ್ನಡ  ಹೀರು    ಬೆವರು   ಕನಲು    ಬಾಳು    ಕೇಳು   

ಬೆವರಿದ ಕನಲಿದ ಬಾಳಿದ ಕೇಳಿದ

ಮೇಲೆ ಕೊಟ್ಟಿರುವ ಹೊಸಗನ್ನಡ ಕ್ರಿಯಾಪದಗಳ ಕೊನೆಯಲ್ಲಿ ಬಂದಿರುವ ಉಕಾರ ಬರಿಯ ಉಚ್ಚಾರಣೆಗಾಗಿ ಬಂದುದಲ್ಲ. ಯಾಕೆಂದರೆ, ಅವುಗಳ ಅನಂತರ ಹಿಂದಿನ ಸಮಯದ ದ್ ಒಟ್ಟು ಸೇರಿದಾಗಲೂ ಈ ಉಕಾರ ಇಕಾರವಾಗಿ ಬದಲಾಗುತ್ತದಲ್ಲದೆ ಬಿದ್ದುಹೋಗುವುದಿಲ್ಲ.

(6) ಆದರೆ ಬೇರೆ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಅದು ಬರಿಯ ಉಚ್ಚಾರಣೆಗಾಗಿ ಸಾದ್ಯವಿದೆ. ಮಾತ್ರವೇ ಬಂದುದೆಂದು ಹೇಳಲು ಯಾಕೆಂದರೆ, ಅವುಗಳ ಅನಂತರ ಹಿಂದಿನ ಸಮಯದ ಒಟ್ಟು ಸೇರಿದಾಗ ಈ ಉಕಾರ ಬಿದ್ದುಹೋಗುತ್ತದೆ.

  ಹಳೆಗನ್ನಡ  

ಹೊಸಗನ್ನಡ 

ಸೋಲ್
ಸಾಯ್

ಸೋಲ್ತ ಸತ್ತ

ತಿನ್ನು
ಗೆಲ್ಲು
ಸೋಲು ಸಾಯು

ಸೋತ ಸತ್ತ

ಹಳೆಗನ್ನಡದ ತಿನ್ ಕ್ರಿಯಾಪದದ ಕೊನೆಯಲ್ಲಿ ಉಕಾರ ಸೇರಿ ಅದು ಹೊಸಗನ್ನಡದಲ್ಲಿ ತಿನ್ನು ಎಂದಾಗಿದೆಯಾದರೂ ಹಿಂದಿನ ಸಮಯದ ಕ್ರಿಯಾರೂಪದಲ್ಲಿ ತಿನ್ ಎಂಬ ರೂಪದಲ್ಲೇ ಉಳಿದಿದೆ. ಇತರ ಕ್ರಿಯಾಪದಗಳ ಕೊನೆಯ ಉಕಾರವೂ ಹೊಸಗನ್ನಡದ ಹಿಂದಿನ ಸಮಯದ ರೂಪಗಳಲ್ಲಿ ಉಳಿದಿಲ್ಲವೆಂಬುದನ್ನು ಗಮನಿಸಬಹುದು.

(7) ಒಂದೇ ಉಲಿಕಂತೆಯಿರುವ ಮತ್ತು ಸ್ವರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರವೂ ಹೊಸಗನ್ನಡದಲ್ಲಿ ಇಂತಹ ಉಕಾರ ಸೇರಿ ಅವು ಎರಡು ಉಲಿಕಂತೆಯ ಕ್ರಿಯಾಪದಗಳಾಗಿವೆ. ಇದಲ್ಲದೆ, ಈ ಉಕಾರದ ಮೊದಲು ಯಕಾರವೊಂದು ಸೇರಿರುತ್ತದೆ.

ಆದರೆ, ಈ ಉಕಾರ ಮತ್ತು ಯಕಾರಗಳು ಬರಿಯ ಉಚ್ಚಾರಣೆಗಾಗಿ ಸೇರಿದವುಗಳೆಂದು ಹೇಳಲು ಸಾದ್ಯವಿದೆ. ಯಾಕೆಂದರೆ, ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ಅವೆರಡೂ ಉಳಿಯುವುದಿಲ್ಲ.

ಹಳೆಗನ್ನಡ ಮೇ

ಮೇದ

ಹೊಸಗನ್ನಡ

ಕಾಯು ತೇಯು ಮೇಯು

ಮೇದ

(8) ಮೇಲಿನ ಬದಲಾವಣೆಗಳು ಮಾತ್ರವಲ್ಲದೆ, ಹಳೆಗನ್ನಡದಲ್ಲಿದ್ದ ಹಲವು ರೀತಿಯ ವ್ಯಂಜನಕಂತೆಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ

(ವಿವರಗಳಿಗೆ ಬದಲಾವಣೆಗಳಿಂದಾಗಿಯೂ ಕ್ರಿಯಾಪದಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ.

ಹಳೆಗನ್ನಡದಲ್ಲಿದ್ದ

ನೋಡಿ). ಈ ಹಲವು ರೀತಿಯ

ಉದಾಹರಣೆಗಾಗಿ, ಎರಡು ಉಲಿಕಂತೆಗಳಿರುವ ಕ್ರಿಯಾಪದಗಳ ಮೊದಲನೆಯ ಉಲಿಕಂತೆಯಲ್ಲಿ ಉದ್ದಸ್ವರವಿದೆಯಾದಲ್ಲಿ ಅದರ ಅನಂತರ ಹೊಸಗನ್ನಡದಲ್ಲಿ ಒಂದು ವ್ಯಂಜನ ಮಾತ್ರ ಬರಬಲ್ಲುದು.

ಹಳೆಗನ್ನಡ ಬಾರ್ಚು
ಸೋಂಕು ನೂಂಕು
ಮೀಂಟು

ಹೊಸಗನ್ನಡ ಬಾಚು ಸೋಕು ನೂಕು ಮೀಟು

ಗಿಡ್ಡಸ್ವರ

ಮೊದಲನೆಯ ಉಲಿಕಂತೆಯಲ್ಲಿ

ಇರುವಲ್ಲೂ ಹೊಸಗನ್ನಡದಲ್ಲಿ ಆ ಸ್ವರದ ಅನಂತರ ಇಮ್ಮಡಿ ವ್ಯಂಜನ (ಕಟ್ಟು, ತಿನ್ನು, ಕೊಯ್ಯು) ಇಲ್ಲವೇ ಮೂಗುಲಿಯೊಂದಿಗೆ ಬಂದ ತಡೆಯುಲಿ (ನುಂಗು, ತುಂಬು, ಅಂಟು) ಮಾತ್ರ ಬರಬಲ್ಲುದಲ್ಲದೆ ಇತರ ವ್ಯಂಜನಕಂತೆಗಳು ಬರಲಾರವು.

ಹಳೆಗನ್ನಡ ಕೞ್ಕು
ಕುರ್ಗು
ಪೊಣ್ಮು

ಹೊಸಗನ್ನಡ ಕಕ್ಕು ಕುಗ್ಗು ಹೊಮ್ಮು

ಮೂರು ಉಲಿಕಂತೆಗಳಿರುವ

ಹಳೆಗನ್ನಡದಲ್ಲಿ ವ್ಯಂಜನಕಂತೆಗಳು ಬರಬಲ್ಲುವಾಗಿದ್ದುವು. ಆದರೆ ಹೊಸಗನ್ನಡದಲ್ಲಿ ಇವೆಲ್ಲ ಇಲ್ಲವಾಗಿವೆ.

ಪದಗಳಲ್ಲೂ

ಹಳೆಗನ್ನಡ ಬೞ್ದುಂಕು ಕಲಂಕು
ಮುರುಂಟು ಪಲುಂಬು

ಹೊಸಗನ್ನಡ ಬದುಕು ಕಲಕು ಮುರುಟು ಹಲುಬು

ಮೇಲಿನ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಹೊಸಗನ್ನಡದ ಕ್ರಿಯಾಪದಗಳೆಲ್ಲ ಇಸು ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ (ನಿಟ್ಟಿಸು, ಆಲಿಸು, ಜಂಕಿಸು). ಇದಲ್ಲದೆ, ಜಾಸ್ತಿ ಉಲಿಕಂತೆಗಳಿರುವ ಮೂರಕ್ಕಿಂತ ಹೊಸಗನ್ನಡ ಕ್ರಿಯಾಪದಗಳೆಲ್ಲ ಇಸು ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ (ಅಪ್ಪಳಿಸು, ಕನವರಿಸು, ಬೇಸರಿಸು).

Eke →

7.10 ತಿರುಳು

ಮೂಲದ್ರಾವಿಡದ ಕ್ರಿಯಾಪದಗಳನ್ನು ಕ್ರಿಯಾಬೇರುಗಳಿಂದ ಇಲ್ಲವೇ ಗುಣ ಬೇರುಗಳಿಂದ ಪಡೆಯಲು ಸಾದ್ಯವಿತ್ತು; ಆದರೆ ನಾಮಬೇರುಗಳಿಂದಲೂ ಅವನ್ನು ಪಡೆಯಲು ಸಾದ್ಯವಿತ್ತೇ ಎಂಬ ವಿಶಯದಲ್ಲಿ ಸಂಶಯವಿದೆ.

ಕ್ರಿಯಾಬೇರುಗಳಿಗೆ ತ್ ಒಟ್ಟನ್ನು ಸೇರಿಸುವ ಮೂಲಕ ಆಗುವಿಕೆಗಳನ್ನು ಮಾಡುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು ಮತ್ತು ಲ, ಳ, ರ, ೞ, ವ ಇಲ್ಲವೇ ಯ ವ್ಯಂಜನಗಳಿಂದ ಮೊದಲಾಗುವ ಒಟ್ಟುಗಳನ್ನು ಸೇರಿಸುವ ಮೂಲಕ ಮಾಡುವಿಕೆಗಳನ್ನು ಆಗುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು. ಕನ್ನಡದಲ್ಲಿ ಈ ಎರಡು ವಿದಾನಗಳೂ ಪಳೆಯಳಿಕೆಗಳಲ್ಲಿ ಮಾತ್ರ ಉಳಿದುಕೊಂಡಿವೆ.

ಆದರೆ, ಈ ಮೂಲದ್ರಾವಿಡ ವಿದಾನಗಳಿಗೆ ಬದಲಾಗಿ ಕ್ರಿಯಾಪದಗಳಿಗೆ ಇಸು ಒಟ್ಟನ್ನು ಸೇರಿಸುವಂತಹ ತನ್ನದೇ ಆದ ವಿದಾನವನ್ನು ಕನ್ನಡ ಕಲ್ಪಿಸಿ

ಕ್ರಿಯಾಪದಗಳು

ಹಳೆಗನ್ನಡದಲ್ಲಿ

ಮೂಲದ್ರಾವಿಡದ

ಹೆಚ್ಚು ಬದಲಾಗಿಲ್ಲ, ಆದರೆ ಹೊಸಗನ್ನಡದಲ್ಲಿ ಅವು ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಇದರಿಂದಾಗಿ ಹೊಸಗನ್ನಡದಲ್ಲಿ ಕೆಲವೇ ಮಾತ್ರ ಕೆಲವು ಬಳಕೆಯಾಗುತ್ತವೆ.

ತೋರಿಸುವ ಕ್ರಿಯಾಪದಗಳು

ರೂಪಬೇದಗಳನ್ನು

8. ಕ್ರಿಯಾರೂಪಗಳು

Eke →

8.1 ಮುನ್ನೋಟ

ವಾಕ್ಯಗಳಲ್ಲಿ ಬಳಕೆಯಾಗುವ ಕ್ರಿಯಾರೂಪಗಳನ್ನು ವಾಕ್ಯದ ಕೊನೆಯಲ್ಲಿ ಬರುವವು ಮತ್ತು ನಡುವೆ ಬರುವವು ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು. ಮಾಡುತ್ತಾನೆ, ಮಾಡಿದ, ಹೋಗು, ಬರಲಿ ಮೊದಲಾ ದವು ವಾಕ್ಯದ ಕೊನೆಯಲ್ಲಿ ಬರಬಲ್ಲ ಕ್ರಿಯಾರೂಪಗಳು; ಮಾಡಿ, ಮಾಡಲು, ಮಾಡುವ, ಮಾಡಿದರೆ ಮೊದಲಾದವು ವಾಕ್ಯದ ನಡುವೆ ಬರಬಲ್ಲ ಕ್ರಿಯಾರೂಪಗಳು.

Eke →

8.1.1 ವಾಕ್ಯದ ಕೊನೆಯ ಕ್ರಿಯಾರೂಪಗಳು

ಮೂಲದ್ರಾವಿಡದಲ್ಲಿ ಮುಕ್ಯವಾಗಿ ತಿಳಿಸುವ ವಾಕ್ಯಗಳು ಮತ್ತು ಕೆಲಸವನ್ನು ಮಾಡಿಸಿಕೊಳ್ಳುವ ವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳಿದ್ದಿರ ಬೇಕು. ಕನ್ನಡದಲ್ಲೂ ಇಂತಹವೇ ಎರಡು ರೀತಿಯ ವಾಕ್ಯಗಳಿವೆ.

ಉದಾಹರಣೆಗಾಗಿ, ಅವನು ಮನೆಗೆ ಹೋಗುತ್ತಾನೆ ಎಂಬುದು ಒಂದು ತಿಳಿಸುವ ವಾಕ್ಯ ಮತ್ತು ಅವನು ಮನೆಗೆ ಹೋಗಲಿ ಎಂಬುದು ಒಂದು ಕೆಲಸವನ್ನು ಮಾಡಿಸಿಕೊಳ್ಳುವ ವಾಕ್ಯ. ಈ ಎರಡು ರೀತಿಯ ವಾಕ್ಯಗಳ ಕೊನೆಯಲ್ಲೂ ಕ್ರಿಯಾರೂಪಗಳು ಬರುತ್ತಿದ್ದು ಅವುಗಳ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳನ್ನು ಕಲ್ಪಿಸಲಾಗಿದೆ.

(1) ತಿಳಿಸುವ ವಾಕ್ಯಗಳ ಕೊನೆಯಲ್ಲಿ ಸಾಮಾನ್ಯವಾಗಿ ಎರಡು ಒಟ್ಟು ಗಳಿರುವ ಕ್ರಿಯಾರೂಪಗಳು ಬರುತ್ತವೆ. ಈ ಎರಡು ಒಟ್ಟುಗಳಲ್ಲಿ ನಡೆಯಲಿರುವ) ನಡೆದಿರುವ ಮೊದಲನೆಯದು ಸಮಯವನ್ನು ಸೂಚಿಸುತ್ತದೆ ಮತ್ತು ಎರಡನೆಯದು ಕೆಲಸದ ಆಗುಗ ಇಲ್ಲವೇ ಮಾಡುಗನು ಮಾತಿನ ಆಡುಗನೇ, ಕೇಳುಗನೇ ಇಲ್ಲವೇ ಇತರರೇ

(ಇಲ್ಲವೇ

ಕೆಲಸ

ಎಂಬುದನ್ನು ಸೂಚಿಸುತ್ತದೆ. ಕನ್ನಡದ ತಿಳಿಸುವ ವಾಕ್ಯಗಳ ಕೊನೆಯಲ್ಲೂ ಇಂತಹ ಎರಡು ಒಟ್ಟುಗಳಿರುವ ಕ್ರಿಯಾರೂಪಗಳು ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಕನ್ನಡದ ತಳ್ಳಿದೆ ಕ್ರಿಯಾರೂಪದಲ್ಲಿ ತಳ್ಳು ಕ್ರಿಯಾ ಪದದ ಅನಂತರ ಹಿಂದಿನ ಸಮಯವನ್ನು ಸೂಚಿಸುವ ದ್ ‘ಸಮಯ’ ಒಟ್ಟು ಬಂದಿದೆ ಮತ್ತು ಅದರ ಅನಂತರ ತಳ್ಳುವ ಕೆಲಸವನ್ನು ಮಾಡಿದವನು ವಾಕ್ಯದ ಆಡುಗ ಎಂಬುದನ್ನು ಸೂಚಿಸುವ ಎ ‘ಆಡುಗ’ ಒಟ್ಟು ಬಂದಿದೆ.

ಒಂದು ಕೆಲಸ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸುವ ಬದಲು, ಒಂದು ಕೆಲಸ ನಡೆದಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನು ತಿಳಿಸಬೇಕಿದ್ದಲ್ಲಿ ಸಮಯದ ಒಟ್ಟಿನ ಜಾಗದಲ್ಲಿ ಅಲ್ಲಗಳೆಯುವ *ಆ ಒಟ್ಟನ್ನು ಬಳಸಲಾಗುತ್ತಿತ್ತು.

ಇಂತಹ ಅಲ್ಲಗಳೆಯುವ ಕ್ರಿಯಾರೂಪ ಹಳೆಗನ್ನಡದಲ್ಲಿ ಉಳಿದಿದೆ (ಪಿಡಿಯಂ ‘(ಅವನು) ಹಿಡಿಯುವುದಿಲ್ಲ’), ಆದರೆ ಹೊಸಗನ್ನಡದ ಹಲವು ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಉಳಿದಿಲ್ಲ.

(2) ಕೆಲಸವನ್ನು ಮಾಡಿಸುವ ವಾಕ್ಯಗಳ ಕೊನೆಯಲ್ಲಿ ಕ್ರಿಯಾಪದವು ಒರ್ವಚನದಲ್ಲಿ ಯಾವ ಒಟ್ಟನ್ನೂ ಸೇರಿಸಿಕೊಳ್ಳದೆ ಹಾಗೆಯೇ ಬರುತ್ತದೆ. ಉದಾಹರಣೆಗಾಗಿ, ಕನ್ನಡದ ಅವನಿಗೊಂದು ಪುಸ್ತಕ ಕೊಡು ವಾಕ್ಯ ಮಾಡಿಸಿಕೊಳ್ಳುವುದಕ್ಕಾಗಿ ಬಳಕೆಯಾಗುತ್ತಿದ್ದು, ಅದರ ಕೆಲಸವನ್ನು ಕೊನೆಯಲ್ಲಿ ಕೊಡು ಕ್ರಿಯಾಪದ ಯಾವ ಒಟ್ಟನ್ನೂ ಸೇರಿಸಿಕೊಳ್ಳದೆ ಹಾಗೆಯೇ ಬಂದಿದೆ.

ಹಲವಚನದಲ್ಲಿ ಮಾತ್ರ ಕ್ರಿಯಾಪದದೊಂದಿಗೆ ವಚನವನ್ನು ಸೂಚಿಸು ವುದಕ್ಕಾಗಿ ಕೇಳುಗನನ್ನು ಸೂಚಿಸುವ ಹಲವಚನದ ಆಡುಗ ಒಟ್ಟು ಬರುತ್ತದೆ. ಉದಾಹರಣೆಗಾಗಿ, ಕನ್ನಡದ ನೀವು ಮನೆಗೆ ಹೋಗಿ ವಾಕ್ಯದ ಕೊನೆಯಲ್ಲಿ ಹೋಗು ಕ್ರಿಯಾಪದದೊಂದಿಗೆ ಹಲವಚನವನ್ನು ಸೂಚಿಸುವ ಇ ಒಟ್ಟು ಬಂದಿದೆ.

Eke →

8.1.2 ವಾಕ್ಯದ ನಡುವಿನ ಕ್ರಿಯಾರೂಪಗಳು

ವಾಕ್ಯಗಳ ನಡುವೆ ಬರುವ ಕ್ರಿಯಾರೂಪಗಳಲ್ಲಿ ಕ್ರಿಯಾ-ಗುಣಪದಗಳ ಜಾಗದಲ್ಲಿ ಬರಬಲ್ಲ ‘ಜೋಡಿಸುವ’ ರೂಪಗಳು ಮತ್ತು ನಾಮ-ಗುಣ ಪದಗಳ ಜಾಗದಲ್ಲಿ ಬರಬಲ್ಲ ‘ಸಂಬಂದಿಸುವ’ ರೂಪಗಳು ಎಂಬುದಾಗಿ ಎರಡು ರೀತಿಯವುಗಳನ್ನು ಕಾಣಬಹುದು. ಜೋಡಿಸುವ ರೂಪಗಳಲ್ಲಿ ಸಮಯವನ್ನು ಸೂಚಿಸುವ ಒಟ್ಟು ಮಾತ್ರ ಬಂದಿರುತ್ತದೆ; ಆದರೆ ಸಂಬಂದಿಸುವ ರೂಪಗಳಲ್ಲಿ ಸಂಬಂದವನ್ನು ಸೂಚಿಸುವ ಅ ಒಟ್ಟೂ ಬಂದಿರುತ್ತದೆ (12.2-3 ನೋಡಿ).

ಈ ಎರಡು ರೀತಿಯ ಕ್ರಿಯಾರೂಪಗಳು ಮಾತ್ರವಲ್ಲದೆ, ಶರತ್ತನ್ನು ಸೂಚಿಸುವ ಕ್ರಿಯಾರೂಪಗಳು ಮತ್ತು ನಾಮಪದಗಳ ಜಾಗದಲ್ಲಿ ಬರಬಲ್ಲ ಕ್ರಿಯಾಪದಗಳ ನಾಮರೂಪಗಳು ಎಂಬುದಾಗಿ ಬೇರೆ ಎರಡು ರೀತಿಯ ಕ್ರಿಯಾರೂಪಗಳೂ ವಾಕ್ಯದ ನಡುವೆ ಬಳಕೆಯಾಗಬಲ್ಲುವಾಗಿದ್ದುವು.

ಮೂಲದ್ರಾವಿಡದಲ್ಲಿ ಈ ಬೇರೆ ಬೇರೆ ರೀತಿಯ ಕ್ರಿಯಾರೂಪಗಳ ಒಳ ರಚನೆ ಹೇಗಿದ್ದಿರಬಹುದು ಮತ್ತು ಅವು ಕನ್ನಡದ ಚರಿತ್ರೆಯಲ್ಲಿ ಹೇಗೆ ಬದಲಾಗಿರಬಹುದು ಎಂಬುದನ್ನು ಈ ಅದ್ಯಾಯದಲ್ಲಿ (ಮತ್ತು ಮುಂದೆ ಒಂಬತ್ತು ಮತ್ತು ಹನ್ನೆರಡನೇ ಅದ್ಯಾಯಗಳಲ್ಲಿ) ವಿವರಿಸಲಾಗುವುದು.

Eke →

8.2 ಸಮಯದ ಒಟ್ಟುಗಳು

ಮೂಲದ್ರಾವಿಡಕ್ಕೆ ಮುಂದಿನ ಸಮಯ ಮತ್ತು ಹಿಂದಿನ ಸಮಯ ಸೂಚಿಸುವಂತಹ ಎಂಬುದಾಗಿ ಎರಡು ರೀತಿಯ ಕ್ರಿಯಾರೂಪಗಳಲ್ಲೂ ಒಟ್ಟುಗಳನ್ನು ಇಂತಹವೇ ಎರಡು ರೀತಿಯ ಸಮಯದ ಒಟ್ಟುಗಳು ಬಳಕೆಯಾಗುತ್ತವೆ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಎರಡು ವಾಕ್ಯಗಳನ್ನು

ಸಮಯಗಳನ್ನು ಕನ್ನಡದ

ಕಲ್ಪಿಸಿಕೊಳ್ಳಲಾಗಿದೆ.

ಪರಿಶೀಲಿಸಬಹುದು.

(1ಕ) ನಾನು ಮುಂಬಯಿಗೆ ಹೋಗುತ್ತೇನೆ. (1ಚ) ನಾನು ಮುಂಬಯಿಗೆ ಹೋದೆ.

(1ಕ) ವಾಕ್ಯದಲ್ಲಿ ಹೋಗುತ್ತೇನೆ ಕ್ರಿಯಾರೂಪ ಬಂದಿದ್ದು, ಅದು ಆ ವಾಕ್ಯವನ್ನಾಡಿದ ಸಮಯದ ಅನಂತರ ನಡೆಯಲಿರುವ (ಎಂದರೆ ‘ಮುಂದಿನ’ ಸಮಯದ) ಕೆಲಸವನ್ನು ಸೂಚಿಸುತ್ತದೆ; ಇದಕ್ಕೆ ಬದಲು (1ಚ) ವಾಕ್ಯದಲ್ಲಿ ಹೋದೆ ಕ್ರಿಯಾರೂಪ ಬಂದಿದ್ದು, ಅದು ಆ ವಾಕ್ಯವನ್ನಾಡಿದ ಸಮಯಕ್ಕಿಂತ ಮೊದಲೇ ನಡೆದ (ಎಂದರೆ ‘ಹಿಂದಿನ’ ಸಮಯದ) ಕೆಲಸವನ್ನು ಸೂಚಿಸುತ್ತದೆ.

ಮುಂದಿನ ಸಮಯದ ಕ್ರಿಯಾರೂಪಕ್ಕೆ ಒಂದು ವಾಕ್ಯವನ್ನಾಡಿರುವ ಸಮಯದ ಅನಂತರ ಜರಗುವ ಕೆಲಸವನ್ನು ಮಾತ್ರವಲ್ಲದೆ, ರೂಡಿಯಲ್ಲಿ ಜರುಗುವ ಕೆಲಸವನ್ನು ಸೂಚಿಸುವ ಅರ್ತವೂ ಇದೆ. ಇದನ್ನು ಕೆಳಗೆ ಕೊಟ್ಟಿರುವ (1ಟ) ವಾಕ್ಯದಲ್ಲಿ ಕಾಣಬಹುದು.

(1ಟ) ನಾನು ಅಂಗಡಿಗೆ ದಿನಾಲೂ ಎಂಟು

ಹೋಗುತ್ತೇನೆ.

(1ಟ) ವಾಕ್ಯವು ರಾಜು ಅಂಗಡಿಗೆ ಹೋಗುವ ಕೆಲಸ ಆ ವಾಕ್ಯವ ನ್ನಾಡಿದ ಸಮಯದ ಅನಂತರ ನಡೆಯುತ್ತದೆಯುಂದೇನೂ ಸೂಚಿಸುತ್ತಿಲ್ಲ; ಇದಕ್ಕೆ ಬದಲು ವಾಕ್ಯದ ಆಡುಗನು (ನಾನು) (ರೂಡಿಯಲ್ಲಿ) ಅಂಗಡಿಗೆ ಹೋಗುವ ಸಮಯ ಯಾವುದು ಎಂಬುದನ್ನು ಮಾತ್ರವೇ ಸೂಚಿಸುತ್ತದೆ. (ಆ ವಾಕ್ಯವನ್ನಾಡಿರುವ ದಿವಸ ಆತ ಅಂಗಡಿಗೆ ಹೋಗದಿರಲೂ ಸಾದ್ಯವಿದೆ).

Eke →

8.2.1 ಹಿಂದಿನ ಸಮಯದ ಒಟ್ಟು

ಮೂಲದ್ರಾವಿಡದಲ್ಲಿ ಹಿಂದಿನ ಸಮಯವನ್ನು ಸೂಚಿಸುವುದಕ್ಕಾಗಿ *ನ್್ತ ಒಟ್ಟಿನ ಬಳಕೆಯಾಗುತ್ತಿದ್ದಿರಬೇಕು. ಇದಕ್ಕೆ ಮೂಲದ್ರಾವಿಡದಲ್ಲೇನೇ ಬೇರೆ ಬೇರೆ ಸನ್ನಿವೇಶಗಳಲ್ಲಿ *ನ್್ತ, *ತ್, *ಚ್ ಮತ್ತು *ಕ್ ಎಂಬ ರೂಪಗಳಿದ್ದುವೆಂದು ಕಲ್ಪಿಸಬೇಕಾಗುತ್ತದೆ. ಆದರೆ ಈ ರೂಪಗಳು ಬರುವ ಸನ್ನಿವೇಶಗಳು ಎಂತಹವು ಎಂಬುದನ್ನು ನಿಶ್ಚಿತವಾಗಿ ಹೇಳಲು ಇನ್ನೂ ಸಾದ್ಯವಾಗಿಲ್ಲ.

ಮೂಲದ್ರಾವಿಡದ ಒಂದು ಕವಲಾದ ತೆಂಕುದ್ರಾವಿಡದಲ್ಲಿ ಈ ಒಟ್ಟಿನ ಸ್ವರೂಪ ಹೇಗಿದ್ದಿರಬಹುದೆಂಬ ವಿಶಯ ಹೆಚ್ಚು ಸ್ಪಶ್ಟವಾಗಿದೆ. ಅದರಲ್ಲಿ ಈ ಒಟ್ಟಿಗೆ ಕೆಲವು ಕ್ರಿಯಾಪದಗಳ ಅನಂತರ *ನ್್ತ ಎಂಬ ರೂಪ ಮತ್ತು ಬೇರೆ ಕೆಲವು ಕ್ರಿಯಾಪದಗಳ ಅನಂತರ *ತ್ ಎಂಬ ರೂಪ ಎಂಬುದಾಗಿ ಎರಡು ಮುಕ್ಯ ರೂಪಗಳಿದ್ದುವೆಂದು ಹೇಳಬಹುದು. ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕ ಬೇರೆಯೂ ಕೆಲವು ಬದಲಾವಣೆಗಳು ಅದರಲ್ಲಿ ನಡೆದಿರುವುದನ್ನು ಕಲ್ಪಿಸಿಕೊಳ್ಳಬಹುದು.

(1) ತಡೆಯುಲಿಯಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಈ ಒಟ್ಟು *ನ್್ತ ಎಂಬ ರೂಪದಲ್ಲೇ ಬರುತ್ತಿದ್ದಿರಬೇಕು ಮತ್ತು ಅದು ಸೇರಿದಾಗ, ಈ ಕ್ರಿಯಾಪದಗಳ ಕೊನೆಯಲ್ಲಿ ಉಚ್ಚಾರಣೆಗಾಗಿ ಬರುತ್ತಿದ್ದ ಉಕಾರ ಇಕಾರವಾಗಿ ಬದಲಾಗುತ್ತಿದ್ದಿರಬೇಕು.

ಕನ್ನಡದಲ್ಲಿ ಮೇಲಿನ ಕ್ರಿಯಾಪದಗಳೊಂದಿಗೆ ಬರುವ ಈ ಒಟ್ಟಿನ ನಕಾರ ಬಿದ್ದುಹೋಗಿ, ಅದರ ಅನಂತರದ ತ್ ವ್ಯಂಜನ ದ್ ಎಂಬ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬದಲು, ತಮಿಳು, ಮಲಯಾಳ, ಕೊಡಗು, ತೊದ ಮೊದಲಾದ ಇತರ ತೆಂಕುದ್ರಾವಿಡ ನುಡಿಗಳಲ್ಲಿ ಅದರ ತಕಾರ ಬಿದ್ದುಹೋಗಿ, ನ್ ಮಾತ್ರ ಉಳಿದಿದ್ದು, ಈ ಒಟ್ಟು ನ್ ಎಂಬ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಎರಡು ರೀತಿಯ ನುಡಿಗಳಲ್ಲೂ ಕ್ರಿಯಾಪದದ ಕೊನೆಯಲ್ಲಿ ಉಚ್ಚಾರಣೆಗಾಗಿ ಬಂದಿದ್ದ ಉಕಾರ ಇಕಾರವಾಗಿ ಬದಲಾಗಿದೆ.

ಕ್ರಿಯಾಪದ ತೂಗು (<ತೂಂಙ್ಕು) ನಂಬು
ಅಡಗು (<
ಅಡಙ್ಕು) ಅಡಗಿದೆ(ನ್) ಅಟಙ್ಕನೇನ್ ಅಮುಕು (<*ಅಮುಕ್ಕು) ಅಮುಕಿದೆ(ನ್) ಅಮುಕ್ಕಿನೇನ್

ಕನ್ನಡ
ತೂಗಿದೆ(ನ್) ನಂಬಿದೆ (ನ್) ಕಟ್ಟಿದೆ(ನ್)

ತಮಿಳು ಆಟಿನೇನ್ ತೂಙ್ಕನೇನ್ ನಮ್ಪಿನೇನ್ ಕಟ್ಟಿನೇನ್

ಈ ಇಕಾರವೂ ಮೂಲದ್ರಾವಿಡದಲ್ಲಿ ಹಿಂದಿನ ಸಮಯದ ಒಟ್ಟಿನ ಅಂಶವಾಗಿರಬೇಕೆಂದು ಹೆಚ್ಚಿನ ವಿದ್ವಾಂಸರೂ ವಾದಿಸುತ್ತಾರೆ. ಆದರೆ ಇದು ಸರಿಯೆಂದು ನನಗೆ ತೋರುವುದಿಲ್ಲ.

ಇಲ್ಲಿ ನಾವು ಮುಕ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ, ಈ ರೀತಿ ಇಕಾರ ಕಾಣಿಸುವುದು ತಡೆಯುಲಿಯಲ್ಲಿ ಕೊನೆಗೊಳ್ಳುವ ಮತ್ತು ಉಚ್ಚಾರಣೆಗಾಗಿ ಕೊನೆಯಲ್ಲಿ ಉಕಾರವನ್ನು ಪಡೆದಿರುವ ಕ್ರಿಯಾಪದಗಳ ಹಿಂದಿನ ಸಮಯದ ಕ್ರಿಯಾರೂಪಗಳಲ್ಲಿ ಮಾತ್ರ. ಈ ಇಕಾರದ ಅನಂತರವೂ *ನ್್ತ ಒಟ್ಟಿನ ಅಂಶಗಳು ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸುವುವಾದ ಕಾರಣ, ಅವನ್ನು ಮಾತ್ರವೇ ಹಿಂದಿನ ಸಮಯದ ಒಟ್ಟಿನ ರೂಪಗಳೆಂದು ಪರಿಗಣಿಸಿದರೆ ಸಾಕು.

ಈ ಸಮಯದ ಒಟ್ಟಿನ ಅನಂತರ ಒರ್ವಚನದಲ್ಲಿ ಮನುಶ್ಯೇತರರನ್ನು ಸೂಚಿಸುವ ತು ಒಟ್ಟು ಬಂದಾಗ ಅದಕ್ಕೆ (ಸಮಯದ ಒಟ್ಟಿಗೆ) ಕನ್ನಡದಲ್ಲಿ ಸೊನ್ನೆ ರೂಪವಿದೆ (ಆಡಿತು, ತೂಗಿತು, ನಂಬಿತು).

ಇದಲ್ಲದೆ, ಈ ಕ್ರಿಯಾಪದಗಳ ಜೋಡಿಸುವ ರೂಪಗಳಲ್ಲಿ ತಮಿಳು ಮತ್ತು ಕನ್ನಡ ನುಡಿಗಳೆರಡರಲ್ಲೂ ಹಿಂದಿನ ಸಮಯದ ಒಟ್ಟಿಗೆ ಸೊನ್ನೆ ರೂಪವಿದೆ (ಎಂದರೆ ಅದರ ನಕಾರ ಮತ್ತು ತಕಾರಗಳೆರಡೂ ಬಿದ್ದು ಹೋಗಿವೆ); ಆದರೆ ಕ್ರಿಯಾಪದದ ಕೊನೆಯಲ್ಲಿ ಉಚ್ಚಾರಣೆಗಾಗಿ ಬಂದ ಉಕಾರ ಇಕಾರವಾಗಿ ಬದಲಾಗಿದ್ದು, ಆ ರೂಪದಲ್ಲೇ ಉಳಿದಿದೆ.

ಕನ್ನಡ
ಅಮುಕಿ

ತಮಿಳು ತೂಙ್ಕ ನಮ್ಪಿ ಅಮುಕ್ಕಿ

ತಡೆಯುಲಿಯಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಗಿಡ್ಡ ಸ್ವರವಿರುವ ಮತ್ತು ಗಿಡ್ಡ ಸ್ವರದ ಅನಂತರ ಒತ್ತೆ ತಡೆಯುಲಿಯಿರುವ ಕೊಡು, ಬಿಡು, ನಗು, ಸಿಗು, ಪೆಱ್(ಉ) ಮೊದಲಾದವುಗಳು ಮೇಲಿನ ನಿಯಮಕ್ಕೆ ಅಪವಾದಗಳು. ಇವುಗಳ ಅನಂತರ ಬಂದ ಹಿಂದಿನ ಸಮಯದ *ನ್್ತ ಒಟ್ಟು ಕನ್ನಡದಲ್ಲಿ ಟ್, ಕ್ ಮತ್ತು ತ್ ಎಂಬ ರೂಪಗಳಲ್ಲಿದೆ.

ಇದಲ್ಲದೆ, ಈ ಕ್ರಿಯಾಪದಗಳ ಕೊನೆಯುಲ್ಲಿ ಉಚ್ಚಾರಣೆಗಾಗಿ ಬಂದಿದ್ದ ಉಕಾರ ಬಿದ್ದುಹೋಗಿ, ಅದರ ಹಿಂದಿರುವ ತಡೆಯುಲಿ ಕೊರಳಿಸದ ಟ್, ಕ್ ಮತ್ತು ತ್ ರೂಪಗಳಲ್ಲಿ ಉಳಿದಿದೆ.

ತಮಿಳಿನಲ್ಲಿಯೂ ಇಂತಹದೇ ಬದಲಾವಣೆ ನಡೆದಿದೆ. ಆದರೆ, ಱಕಾರದ ಅನಂತರ ಈ ಒಟ್ಟಿನ ತಕಾರ ಱಕಾರವಾಗಿದೆ. (ಕನ್ನಡದಲ್ಲೂ ಮೊದಲಿಗೆ ಇಂತಹದೇ ಬದಲಾವಣೆ ನಡೆದಿರಬಹುದು; ಆದರೆ ಱ್ಱ್ ತ್್ತ ಎಂಬುದಾಗಿ ಎಂಬುದು ಅನಂತರ ಕನ್ನಡದ ಚರಿತ್ರೆಯಲ್ಲಿ ಬದಲಾಗಿರುವ ಕಾರಣ (4.4.4 ನೋಡಿ), ಮೇಲೆ ವಿವರಿಸಿದಂತಹ ನಿಯಮ ಕನ್ನಡದಲ್ಲಿದೆ.

ಕ್ರಿಯಾಪದ ನಗು ಕೊಡು
ಹೆರು (<ಪೆಱು)
ತೆರು (<ತೆಱು)

ಕನ್ನಡ
ನಕ್ಕೆ ಕೊಟ್ಟೆ
ಹೆತ್ತೆ

ತಮಿಳು ನಕ್ಕೇನ್ ಇಟ್ಟೇನ್ ಕೊಟ್ಟೇನ್ ಪೆಱ್ಱೀನ್ ತೆಱ್ಱೀನ್

ಈ ಕ್ರಿಯಾಪದಗಳ ಜೋಡಿಸುವ ರೂಪದಲ್ಲಿ ಹಿಂದಿನ ಸಮಯದ ಒಟ್ಟು ಬಿದ್ದುಹೋಗಿಲ್ಲ (ಎಂದರೆ, ಅದಕ್ಕೆ ಸೊನ್ನೆ ರೂಪವಿಲ್ಲ). ಇದಕ್ಕೆ ಬದಲು, ಆ ಒಟ್ಟಿನ ಅನಂತರ ಉಚ್ಚಾರಣೆಗಾಗಿ ಉಕಾರವೊಂದು ಸೇರಿಕೊಂಡಿದೆ.

ಕನ್ನಡ
ನಕ್ಕು
ಕೊಟ್ಟು
ಹೆತ್ತು

ತಮಿಳು ನಕ್ಕು ಕೊಟ್ಟು ಪೆಱ್ಱು

(2) ಕ್ರಿಯಾಪದಗಳ ಕೊನೆಯ ಅಕಾರ ಕನ್ನಡದಲ್ಲಿ ಎಕಾರವಾಗಿದೆ. ಇಂತಹ ಎರಡು ಉಲಿಕಂತೆಗಳಿರುವ ಕ್ರಿಯಾಪದಗಳ ಅನಂತರ ಬಂದಿದ್ದ ಹಿಂದಿನ ಸಮಯದ *ನ್್ತ ಒಟ್ಟು ತಮಿಳಿನಲ್ಲಿ ಬದಲಾಗದೆ ಉಳಿದಿದೆ; ಆದರೆ ಕನ್ನಡದಲ್ಲಿ ನಕಾರವನ್ನು ಕಳೆದುಕೊಂಡು ದ್ ರೂಪಕ್ಕೆ ಬದಲಾಗಿದೆ.

ಕ್ರಿಯಾಪದ ನಡೆ (<ನಟ)
ತೊಱ (<
ತೊಱ) ತೆಱ (<ತೆಱ)
ಕಱ (<
ಕಱ)

ಕನ್ನಡ
ನಡೆದೆ
ತೊಱದೆ ತೆಱದೆ
ಕಱದೆ

ತಮಿಳು ನಟನ್ತೇನ್
ತುಱನ್ತೇನ್ ತಿಱನ್ತೇನ್ ಕಿಟನ್ತೇನ್ ಕಱನ್ತೇನ್

ತಮಿಳಿನಲ್ಲಿ ಎಕಾರ-ಒಕಾರಗಳು, ಅವುಗಳ ಅನಂತರ ಒಟ್ಟಿನ ಅಕಾರ ಬಂದಿರುವಲ್ಲಿ, ಇಕಾರ-ಉಕಾರಗಳಾಗಿ ಬದಲಾಗಿರುವ ಕಾರಣ (2.2.1 ನೋಡಿ), *ತೊಱ, *ತೆಱ ಮತ್ತು *ಕೆಟ ಕ್ರಿಯಾಪದಗಳು ತುಱ, ತಿಱ ಮತ್ತು ಕಿಟ ರೂಪದಲ್ಲಿ ಕಾಣಿಸುತ್ತವೆ. ಕೆಳಗೆ (3)ನೇ ವಿಬಾಗದಲ್ಲಿ ಕೊಟ್ಟಿರುವ ಕ್ರಿಯಾಪದಗಳಲ್ಲೂ ಇಂತಹದೇ ಬದಲಾವಣೆ ತಮಿಳಿನಲ್ಲಿ ನಡೆದಿದೆ.

(3) *ಅಯ್ ಎಂಬುದರಲ್ಲಿ ಕೊನೆಗೊಳ್ಳುತ್ತಿದ್ದ ಎರಡು ಉಲಿಕಂತೆ ಗಳಿರುವ ಕ್ರಿಯಾಪದಗಳೂ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುತ್ತವೆ (ತಮಿಳು: ಉಟಯ್ ಕನ್ನಡ: ಒಡೆ, ತಮಿಳು: ಕುೞಯ್ ಕನ್ನಡ: ಕೊಳೆ).

ಇವುಗಳ ಅನಂತರ ಬರುವ ಹಿಂದಿನ ಸಮಯದ *ನ್್ತ ಒಟ್ಟಿಗೆ ತಮಿಳಿ ನಲ್ಲಿ ಎರಡು ರೂಪಗಳಿವೆ: ಅವುಗಳ ಅನಂತರ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಬಂದಿರುವಲ್ಲಿ (7.5.2 ನೋಡಿ) ಅದು ನಕಾರವನ್ನು ಕಳೆದುಕೊಂಡು ತ್ ರೂಪದಲ್ಲಿ ಉಳಿದಿದೆ; ಮಾಡುವಿಕೆಯ ತ್ ಒಟ್ಟು ಬರದಿರುವಲ್ಲಿ ಅದು ನ್್ತ ರೂಪದಲ್ಲೇ ಉಳಿದಿದೆ.

ಆಗುವಿಕೆ ಮತ್ತು ಮಾಡುವಿಕೆಗಳ ನಡುವಿನ ಈ ವ್ಯತ್ಯಾಸ ಕನ್ನಡದಲ್ಲಿ ಉಳಿದಿಲ್ಲ (ಹವ್ಯಕ ಮತ್ತು ಬಡಗ ಒಳನುಡಿಗಳು ಇದಕ್ಕೆ ಅಪವಾದಗಳು 7.5.3-4 ನೋಡಿ). ಹಾಗಾಗಿ, ಇಂತಹ ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ನ್್ತ ಒಟ್ಟಿಗೆ ಕನ್ನಡದಲ್ಲಿ ದ್ ಎಂಬ ರೂಪವೇ ಇದೆ (ಅದರ ಅನಂತರ ತು ಆಡುಗ ಒಟ್ಟು ಬಂದಿರುವಲ್ಲಿ ಮಾತ್ರ ಅದಕ್ಕೆ ಸೊನ್ನೆ ರೂಪವಿದೆ ಮತ್ತು ಕ್ರಿಯಾಪದದ ಕೊನೆಯಲ್ಲೊಂದು ಇಕಾರ ಕಾಣಿಸಿಕೊಳ್ಳುತ್ತದೆ (ನೆನೆಯಿತು). ಇದು ಕನ್ನಡದಲ್ಲಿ ಮಾತ್ರ ನಡೆದ ಬದಲಾವಣೆ).

ಕನ್ನಡ

ತಮಿಳು

ಆಗುವಿಕೆ/ಮಾಡುವಿಕೆ

ಆಗುವಿಕೆ

ಮಾಡುವಿಕೆ

ನೆನೆದೆ ನನೆಯಿತು

ಉಟಯ್ನ್ತತು ಇಱಯ್ನ್ತತು ನಿನಯ್ನ್ತತು ತಟಯ್ನ್ತತು ನನಯ್ನ್ತತು

ಉಟಯ್ತ್ತೇನ್ ಇಱಯ್ತ್ತೇನ್ ನಿನಯ್ತ್ತೇನ್ ತಟಯ್ತ್ತೇನ್ ನನಯ್ತ್ತೇನ್

(4) ಇಕಾರ ಮತ್ತು ಉಕಾರಗಳಲ್ಲಿ ಕೊನೆಗೊಳ್ಳುವ ಮತ್ತು ಎರಡು ಉಲಿಕಂತೆಗಳಿರುವ ಹಲವು ಕ್ರಿಯಾಪದಗಳ ಅನಂತರ, ಹಾಗೂ ಯಕಾರ, ರಕಾರ ಇಲ್ಲವೇ ೞಕಾರಗಳಲ್ಲಿ ಕೊನೆಗೊಳ್ಳುವ ಮತ್ತು ಒಂದು ಇಲ್ಲವೇ ಎರಡು ಉಲಿಕಂತೆಗಳಿರುವ ಹಲವು ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ನ್್ತ ಒಟ್ಟಿಗೆ ತಮಿಳಿನಲ್ಲಿ ಎರಡೆರಡು ರೂಪಗಳಿವೆ. ಅವುಗಳ ಅನಂತರ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಬಂದಿದೆಯಾದರೆ

ಅದಕ್ಕೆ ತ್ ರೂಪವಿದೆ ಮತ್ತು ಮಾಡುವಿಕೆಯ ತ್ ಒಟ್ಟು ಬಾರದಿರುವಲ್ಲಿ ನ್್ತ ರೂಪವಿದೆ.

ಮೇಲೆ ಸೂಚಿಸಿದ ಹಾಗೆ, ಕನ್ನಡದಲ್ಲಿ ಈ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಉಳಿದಿಲ್ಲ (ಹವ್ಯಕ ಮತ್ತು ಬಡಗ ಒಳನುಡಿಗಳು ಇದಕ್ಕೆ ಅಪವಾದಗಳು). ಹಾಗಾಗಿ, ಇಂತಹ ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ಒಟ್ಟಿಗೆ ಕನ್ನಡದಲ್ಲಿ ದ್ ರೂಪವೇ ಇದೆ (ಇಲ್ಲೂ ಆ ಒಟ್ಟಿನ ಅನಂತರ ತು ಆಡುಗ ಒಟ್ಟು ಬಂದಿರುವಲ್ಲಿ ಅದಕ್ಕೆ ಸೊನ್ನೆ ರೂಪವಿದೆ ಮತ್ತು ಕ್ರಿಯಾಪದಗಳ ಅನಂತರ ಇಕಾರವೊಂದು ಬಂದಿದೆ (ಬಿರಿಯಿತು)).

ಕನ್ನಡ

ತಮಿಳು

ಆಗುವಿಕೆ/ಮಾಡುವಿಕೆ

ಆಗುವಿಕೆ

ಮಾಡುವಿಕೆ

ಬಿರಿಯಿತು
ಮುರಿಯಿತು, ಮುರಿದೆ

ವಿರಿನ್ತತು
ಮುಱಿನ್ತತು ಇರುನ್ತೇನ್

ವಿರಿತ್ತೇನ್ ಮುರಿತ್ತೇನ್ ಇರುತ್ತೇನ್

ನೋಯು, ಮೀಯು, ಬೇಯು, ತರು ಮತ್ತು ಬರು ಎಂಬ ಐದು ಕ್ರಿಯಾಪದಗಳ ಅನಂತರ ಮಾತ್ರ ಹಿಂದಿನ ಸಮಯದ ಒಟ್ಟು ಕನ್ನಡದಲ್ಲಿ ನ್್ದ(<*ನ್್ತ) ರೂಪದಲ್ಲೇ ಉಳಿದಿದೆ. ಆದರೆ ಈ ಒಟ್ಟು ಸೇರಿರುವಲ್ಲಿ ಕ್ರಿಯಾಪದಗಳ ಎರಡನೆಯ ಉಲಿಕಂತೆ ಬಿದ್ದುಹೋಗಿದೆ.

ಕ್ರಿಯಾಪದ ನೋಯು

ಕನ್ನಡ
ನೊಂದೆ

ತಮಿಳು ನೊನ್ತೇನ್ ವನ್ತೇನ್ ತನ್ತೇನ್

(5) ನಕಾರ ಇಲ್ಲವೇ ಣಕಾರಗಳಲ್ಲಿ ಕೊನೆಗೊಳ್ಳುವ ಒಂದು ಉಲಿ ಕಂತೆಯ ಕ್ರಿಯಾಪದಗಳ ಅನಂತರ ಹಿಂದಿನ ಸಮಯದ ಒಟ್ಟಿಗೆ ತೆಂಕು ದ್ರಾವಿಡದಲ್ಲಿ *ತ್ ಎಂಬ ರೂಪವಿದ್ದಿರಬೇಕು. ಕನ್ನಡದಲ್ಲಿ ಇದು ನಕಾರದ

ಅನಂತರ ದ್ ಎಂಬುದಾಗಿ ಮತ್ತು ಣಕಾರದ ಅನಂತರ ಡ್ ಎಂಬುದಾಗಿ ಕಾಣಿಸಿಕೊಳ್ಳುತ್ತದೆ.

ಕ್ರಿಯಾಪದಗಳು

ಹಿಂದಿನ ಸಮಯದ ರೂಪ

(6) ಲಕಾರ ಇಲ್ಲವೇ ಳಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಹಿಂದಿನ ಸಮಯದ ಒಟ್ಟು ತೆಂಕುದ್ರಾವಿಡದಲ್ಲಿ ಯಾವ ರೂಪ ದಲ್ಲಿದ್ದಿರಬಹುದೆಂಬುದು ಇನ್ನೂ ಸ್ಪಶ್ಟವಾಗಿಲ್ಲ. ಲಕಾರ ಮತ್ತು ಳಕಾರಗಳು ಕೆಲವು ಸೇರಿಕೆಯ ಬದಲಾವಣೆಗಳಿಗೆ ಒಳಗಾಗಿರುವುದು ಈ ಅಸ್ಪಶ್ಟತೆಗೆ ಒಂದು ಕಾರಣ. ಈ ಬದಲಾವಣೆಗಳು ಅನಿಯಮಿತವಾಗಿ ಕಾಣಿಸುವುದು ಇನ್ನೊಂದು ಕಾರಣ.

ಉದಾಹರಣೆಗಾಗಿ, ಲ್+ನ್್ತ ಎಂಬುದು ನ್ಱ್ ಎಂದಾಗುವುದು ಮತ್ತು ಳ್+ನ್್ತ ಎಂಬುದು ಣ್್ಟ ಎಂದಾಗುವುದು ಇಂತಹ ಒಂದು ಬದಲಾವಣೆ. ಕನ್ನಡದ ನಿಂದು (ನಿಲ್) ಮತ್ತು ಕೊಂಡು (ಕೊಳ್) ಕ್ರಿಯಾರೂಪಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು (ಕನ್ನಡದ ನಿಂದು ಎಂಬುದು ತೆಂಕುದ್ರಾವಿಡದ *ನಿನ್ಱು ಎಂಬುದರಿಂದ ಬಂದಿದೆ (4.5(1) ನೋಡಿ); ತಮಿಳಿನಲ್ಲಿ ಇದು ನಿನ್ಱು ರೂಪದಲ್ಲೇ ಇದೆ).

ಆದರೆ, ಈ ನಿಯಮಕ್ಕೆ ಕನ್ನಡದಲ್ಲಿ ಹಲವು ಅಪವಾದಗಳೂ ಇವೆ. ಉದಾಹರಣೆಗಾಗಿ, ನಿಲ್ತು (ನಿತ್ತು), ಕಲ್ತು, ಗೆಲ್ದು (ಗೆದ್ದು), ಕಳ್ದು (ಕದ್ದು), ಕೇಳ್ದು ಕ್ರಿಯಾರೂಪಗಳನ್ನು ಗಮನಿಸಬಹುದು.

Eke →

8.2.2 ಮುಂದಿನ ಸಮಯದ ಒಟ್ಟು

ಮುಂದಿನ ಸಮಯದ ಒಟ್ಟಿಗೆ ಮೂಲದ್ರಾವಿಡದಲ್ಲಿ ಪ್್ಪ, ಕ್್ಕ, ತ್್ತ, ಉಮ್ ಮತ್ತು ನ್ ಎಂಬ ರೂಪಗಳಿದ್ದಿರಬೇಕೆಂದು ಕಲ್ಪಿಸಲಾಗಿದೆ (ಸುಬ್ರಹ್ಮಣ್ಯಂ 1971 ನೋಡಿ).

(1) ಇವುಗಳಲ್ಲಿ ಮುಕ್ಯವಾಗಿ ಮೊದಲನೆಯ ಪ್್ಪ ರೂಪವೇ ಹಳೆಗನ್ನಡದಲ್ಲಿ ಉಳಿದಿದ್ದು, ಹೆಚ್ಚಿನ ಕ್ರಿಯಾರೂಪಗಳಲ್ಲೂ ಇದು ವ್ ಎಂಬುದಾಗಿ ಕಾಣಿಸುತ್ತದೆ.

ಕ್ರಿಯಾಪದ

ಪೇೞ್
ನಡುಗು

ಮುಂದಿನ ಸಮಯದ ರೂಪ ಪೇಳ್ವನ್ ‘ಹೇಳುತ್ತಾನೆ’’
ಗೆಲ್ವ ‘ಗೆಲ್ಲುವ’’ ಅಂಜುವಿರ್ ‘ಹೆದರುತ್ತೀರಿ’’ ಬಿಡುವುವು ‘ಬಿಡುತ್ತವೆ’ ನಡುಗುವ

ಆದರೆ, ಕೆಲವು ಕ್ರಿಯಾಪದಗಳ ಅನಂತರ ಮೇಲಿನ ಒಟ್ಟಿಗೆ ಹಳೆಗನ್ನಡದಲ್ಲಿ ಪ್, ಪ್್ಪ ಇಲ್ಲವೇ ಬ್ ಎಂಬ ರೂಪಗಳಿರುವುದನ್ನು ಕಾಣಬಹುದು (ವಿವರಗಳಿಗೆ 8.3 ನೋಡಿ).

ಕ್ರಿಯಾಪದ

ನೋಡು ಎಸಗು

ತೊಳಗು

ಮುಂದಿನ ಸಮಯದ ರೂಪ ಇರ್ಪನ್ ‘ಇರುತ್ತಾನೆ’’ ನೋೞ್ಪನ್ ‘ನೋಡುತ್ತೇನೆ’’ ಎಸಪನ್ ‘ಓಡಿಸುತ್ತಾನೆ’ ಅಪ್ಪರ್ ‘ಆಗುತ್ತಾರೆ’ ತೊಳಪ್ಪ ‘ಹೊಳೆಯುವ’’ ತಿಂಬೆನ್ ‘ತಿನ್ನುತ್ತೇನೆ’

ಕೊಳ್

ಉಣ್ಬೆನ್ ‘ಉಣ್ಣುತ್ತೇನೆ’’ ಕೊಂಬೆನ್ ‘ತೆಗೆದುಕೊಳ್ಳುತ್ತೇನೆ’’

(2) ಮೂಲದ್ರಾವಿಡದ ಕ್್ಕ ಒಟ್ಟಿನ ಬಳಕೆ ಹಳೆಗನ್ನಡದ ಕೇಳ್ಗುಂ, ಪುಟ್ಟುಗುಂ, ಇರ್ಕುಂ, ಮಾಳ್ಕುಂ ಮೊದಲಾದ ಪದರೂಪಗಳಲ್ಲಿ ಕಾಣಿಸು ತ್ತದೆ. ಇವತ್ತಿನ ಬರಹದ ಕನ್ನಡದಲ್ಲಿ ಇದು ಬೇಕು ಮತ್ತು ಸಾಕು ಎಂಬ ಎರಡು ರೂಪಗಳಲ್ಲಿ ಮಾತ್ರ ಉಳಿದಿದೆ.

ಮೂಲದ್ರಾವಿಡದಲ್ಲಿ ಮುಂದಿನ ಸಮಯದ ಈ ಎರಡು (ಪ್್ಪ, ಕ್್ಕ) ಒಟ್ಟುಗಳ ನಡುವೆ ಎಂತಹ ಸಂಬಂದವಿತ್ತು ಎಂಬುದಿನ್ನೂ ಸ್ಪಶ್ಟವಾಗಿಲ್ಲ. ಹಳೆಗನ್ನಡದಲ್ಲಿ ಕುಂ (ಗುಂ) ಒಟ್ಟಿನ ಬಳಕೆ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರು ನಡೆಸುವ ಕೆಲಸಗಳನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಮಾತ್ರ ಕಾಣಿಸುತ್ತದೆ.

ಈ ಒಟ್ಟಿರುವ ಕ್ರಿಯಾರೂಪಗಳನ್ನು ಹಳೆಗನ್ನಡದಲ್ಲಿ ಮೂರು ಕಾಲ ಗಳಲ್ಲೂ ಬಳಸಲಾಗುತ್ತಿತ್ತೆಂದು ಹೆಚ್ಚಿನ ವಿದ್ವಾಂಸರೂ ಹೇಳುತ್ತಾರೆ. ಆದರೆ ಕಾವ್ಯಗಳಲ್ಲಿ ಅವುಗಳ ಬಳಕೆಯನ್ನು ಪರಿಶೀಲಿಸಿದಾಗ ಮುಂದಿನ ಸಮಯದ ಕೆಲಸವನ್ನು ತಿಳಿಸುವಲ್ಲಿ ಆ ಕೆಲಸ ನಡೆಯುವ ಬಗೆಗೆ ಊಹೆಯನ್ನು ಸೂಚಿಸಬೇಕಾಗಿರುವ ಸಂದರ್ಬಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತವೆಯೆಂದು ತೋರುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ಬಳಕೆಯನ್ನು

ಗಮನಿಸಬಹುದು.

ಬೇಡಿದೊಡೆ ಬಲದ ಬರಿಯುಮನ್ ಈಡಾಡುಗುಂ (1.100) ‘ಯಾಚಿಸಿದರೆ (ಕರ್ಣನು) ಬಲಪಕ್ಕೆಯನ್ನು ಕತ್ತರಿಸಿ ಎಸೆದಾನು’

(2)ನೇ ವಾಕ್ಯದಲ್ಲಿ ಈಡಾಡುಗುಂ ಕ್ರಿಯಾರೂಪ ಮುಂದಿನ ಸಮಯದಲ್ಲಿ ನಡೆಯಲಿರುವ ಕೆಲಸದ ಕುರಿತು ಆಡುಗನ ಊಹೆಯನ್ನು

ಸೂಚಿಸುತ್ತದಲ್ಲದೆ ನಿಶ್ಚಿತವಾಗಿಯೂ ಮುಂದೆ ನಡೆಯಲಿರುವ ಕೆಲಸವನ್ನು ಸೂಚಿಸುವುದಿಲ್ಲ.

ಇದಲ್ಲದೆ, ಹಿಂದಿನ ಸಮಯದ ಕೆಲಸಗಳನ್ನು ತಿಳಿಸುವುದಕ್ಕಾಗಿ ಬಳಕೆ ಯಾದಾಗಲೆಲ್ಲ, ಅವು ರೂಡಿಯಲ್ಲಿದ್ದ ಕೆಲಸಗಳನ್ನು ಮಾತ್ರವೇ ಸೂಚಿಸುವ ಹಾಗೆ ಕಾಣಿಸುತ್ತದೆ (ಬಟ್ 2005:210-13 ನೋಡಿ).

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ಕಂದಪದ್ಯದಲ್ಲಿ ಕುಂ (ಗುಂ) ಒಟ್ಟಿರುವ ಮೂರು ಕ್ರಿಯಾರೂಪಗಳು ಹಿಂದಿನ ಸಮಯವನ್ನು ಸೂಚಿಸುವಲ್ಲಿ ಬಳಕೆಯಾಗಿವೆ. ಆದರೆ ಇವೆಲ್ಲವೂ ಸುಬದ್ರೆ ವಿರಹ ‘ರೂಡಿಯ’ ತಾಪದಿಂದ ಸೂಚಿಸುವ ಕೆಲಸಗಳನ್ನು ಅರ್ತದಲ್ಲೇ ಬಳಕೆಯಾಗಿವೆ ಎಂಬುದನ್ನು ಗಮನಿಸಬಹುದು.

ಮಾಡುತ್ತಿದ್ದ

ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ ಮಾತು ತಪೊ್ಪಡಂ ಮತ್ತಮದಂ ನುಡಿಯಿಸುಗುಂ ಮೊದಲಿಂದಾ ನುಡಿ ಪಱಿಪಡೆ ಮುಳಿದು ನೋಡುಗುಂ ಕೆಳದಿಯರಂ (4.56)

ಈ ಕುಂ (ಗುಂ) ಒಟ್ಟಿನಲ್ಲಿರುವ ಕಕಾರ ಮಾತ್ರವೇ ಮೂಲದ್ರಾವಿಡದ ಮುಂದಿನ ಸಮಯದ ಕ್್ಕ ಒಟ್ಟಿನ ಮುಂದುವರಿಕೆಯೆಂದು ಹೇಳಲು ಸಾದ್ಯವಿದೆ. ಹಾಗಿದ್ದಲ್ಲಿ, ಅದರ ಅನಂತರ ಬರುವ ಉಮ್ ಎಂಬುದು ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ‘ಆಡುಗ’ ಒಟ್ಟೆಂದು ವಾದಿಸಬಹುದು.

Eke →

8.3 ಹಳೆಗನ್ನಡದಲ್ಲಿ ಸಮಯದ ಒಟ್ಟುಗಳು

ಕನ್ನಡದ ಹೆಚ್ಚಿನ ವಿದ್ವಾಂಸರೂ ಹಳೆಗನ್ನಡದ ಕ್ರಿಯಾರೂಪಗಳಲ್ಲಿ ದ, ದಪ ಮತ್ತು ವ ಎಂಬುದಾಗಿ ಮೂರು ಸಮಯದ ಒಟ್ಟುಗಳು ಬಳಕೆಯಾಗುತ್ತಿದ್ದುವು ಮತ್ತು ಇವಕ್ಕೆ ಅನುಕ್ರಮವಾಗಿ ಹಿಂದಿನ (ಬೂತ), ಈಗಿನ (ವರ್ತಮಾನ) ಮತ್ತು ಮುಂದಿನ (ಬವಿಶ್ಯತ್) ಕಾಲಗಳನ್ನು ಸೂಚಿಸುವ ಅರ್ತವಿತ್ತು ಎಂಬುದಾಗಿ ಹೇಳುತ್ತಾರೆ. ಆದರೆ ಇದು ಸರಿಯಲ್ಲ.

ಯಾಕೆಂದರೆ, ನಿಜಕ್ಕೂ ದ ಮತ್ತು ವ ಎಂಬ ಎರಡು ಸಮಯದ ಒಟ್ಟುಗಳಿಗಿಂತ ಬೇರೆಯಾಗಿರುವ ದಪ ಎಂಬ ಒಟ್ಟೇ ಹಳೆಗನ್ನಡದಲ್ಲಿ ಇರಲಿಲ್ಲ. ಕನ್ನಡ ವಯ್ಯಾಕರಣಿಗಳು ಅಂತಹ ದಪ ಒಟ್ಟು ಬಳಕೆಯಾಗಿದೆ ಪೇಳ್ದಪಂ ಎಂಬಂತಹ ಯುಂದು ಕ್ರಿಯಾರೂಪಗಳು ಎರಡೆರಡು ಕ್ರಿಯಾರೂಪಗಳಲ್ಲಿ ಬಳಕೆಯಾಗಿವೆಯಲ್ಲದೆ ದಪ ಎಂಬ ಒಟ್ಟು ಬಳಕೆಯಾಗಿಲ್ಲ.

ಬಂದಪಂ,

ಹೇಳುವ

ಉದಾಹರಣೆಗಾಗಿ, ಬಂದಪಂ ಎಂಬುದರಲ್ಲಿ ಬರು ಕ್ರಿಯಾಪದದ ಹಿಂದಿನ ಸಮಯದ ಬಂದ ರೂಪ ಮತ್ತು ಆಗು ಕ್ರಿಯಾಪದದ ಮುಂದಿನ ಸಮಯದ ಅಪಂ (<ಅಪ್ಪಂ) ರೂಪ ಎಂಬುದಾಗಿ ಎರಡು ಕ್ರಿಯಾರೂಪ ಗಳು ಸೇರಿಕೊಂಡಿವೆ. ಈ ವಿಶಯ ಪರೆದಪ್ಪರ್ ‘ಚದರಿಹೋಗುತ್ತಾರೆ’ ಎಂಬುದರಲ್ಲಿ ಇನ್ನಶ್ಟು ಸ್ಪಶ್ಟವಾಗಿ ಕಾಣಿಸುತ್ತದೆ. ಇದರಲ್ಲಿ ಆಗು ಕ್ರಿಯಾ ಪದದ ಮುಂದಿನ ಸಮಯದ ರೂಪ ಅಪ್ಪರ್ ಎಂಬುದಾಗಿಯೇ ಇದೆ.

ಇಂತಹ ಬಳಕೆಗಳಲ್ಲಿ

ಮೊದಲನೆಯ

ರೂಪದಲ್ಲಿ

(‘ಬೂತಕ್ರುದಂತ’

ಕಿಟ್ಟೆಲ್ ಅವರು

ನೋಡಿ). ಆದರೆ ಇದೂ

ಕ್ರಿಯಾಪದ ಅದರ ರೂಪದಲ್ಲಿ) (ಕಿಟ್ಟೆಲ್ ಸರಿಯುಂದು

ಹೇಳುತ್ತಾರೆ

ಸಂಬಂದಿಸುವ ಬಳಕೆಯಾಗಿದೆಯುಂದು ತೋರುವುದಿಲ್ಲ.

ಯಾಕೆಂದರೆ, ಕನ್ನಡದಲ್ಲಿ ಕ್ರಿಯಾಪದಗಳ ಸಂಬಂದಿಸುವ (ಕ್ರುದಂತ) ರೂಪಗಳನ್ನು ಆ ರೀತಿ ಇನ್ನೊಂದು ಕ್ರಿಯಾಪದದೊಂದಿಗೆ ಸೇರಿಸಿ ಹೇಳುವ ಕ್ರಮ ಬಳಕೆಯಲ್ಲಿಲ್ಲ. ನಾಮಪದಗಳ ವಿಶೇಶಣಗಳಾಗಿ ಮಾತ್ರ ಅವು ಕ್ರಿಯಾಪದಗಳ ಬಳಕೆಯಾಗಬಲ್ಲುವಲ್ಲದೆ, (ಕ್ರುದಂತಗಳು) ವಿಶೇಶಣಗಳಾಗಿ (ಇಲ್ಲವೇ ಬೇರೆ ರೀತಿಯಲ್ಲಿ ಕ್ರಿಯಾಪದಗಳೊಂದಿಗೆ ನೇರವಾಗಿ ಸಂಬಂದಿಸಿ) ಬಳಕೆಯಾಗಲಾರವು.

ಹಾಗಾಗಿ, ಮೇಲಿನ ರಚನೆಗಳನ್ನು ಬಂದನ್ ಅಪ್ಪನ್, ಪರೆದರ್ ಕ್ರಿಯಾಪದಗಳ

ಅಪ್ಪರ್ ಎಂಬಂತಹ

ರಚನೆಗಳಿಂದ

ಹೇಳಿಕೆಯೂ

ಕಂಡುಬರುವ

ಸರಿಯಲ್ಲವೆಂದು

ಪಂಪಬಾರತದಲ್ಲಿ

ನಾಮರೂಪದೊಂದಿಗೆ ಆಗು ಕ್ರಿಯಾಪದದ ಮುಂದಿನ ಸಮಯದ ರೂಪವನ್ನು ಸೇರಿಸಿ ತಯಾರಿಸಿರುವ ರಚನೆಗಳಿಂದ) ಪಡೆಯಬೇಕಾಗುತ್ತದೆ. ಬಂದಪಂ, ಪರೆದಪ್ಪರ್ ಎಂಬಂತಹ ಈ ರಚನೆಗಳಿಗೆ ಹಳೆಗನ್ನಡದಲ್ಲಿ ಈಗಿನ (ವರ್ತಮಾನ) ಸಮಯವನ್ನು ಸೂಚಿಸುವ ಅರ್ತವಿತ್ತೆಂಬ ಕನ್ನಡ ತೋರುತ್ತದೆ. ವಯ್ಯಾಕರಣಿಗಳ ಉದಾಹರಣೆಗಾಗಿ, ಕ್ರಿಯಾರೂಪಗಳ ಬಳಕೆಯನ್ನು ಪರಿಶೀಲಿಸಿದಾಗ, ಅವಕ್ಕೂ ವ (ಪ) ಒಟ್ಟಿರುವ ಬರ್ಪಂ, ನಿಲ್ವಂ ಎಂಬಂತಹ ಕ್ರಿಯಾರೂಪಗಳಿಗೂ ನಡುವೆ ಸಮಯದ ಸೂಚನೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲದಿರುವುದು ಸ್ಪಶ್ಟವಾಗುತ್ತದೆ (ವಿವರಗಳಿಗೆ ಬಟ್ 2005:202 ನೋಡಿ). ಬರುತ್ತಾನೆ ಹೊಸಗನ್ನಡದಲ್ಲಿ

ಮತ್ತು ಬಂದವನಾಗುತ್ತಾನೆ ಎಂಬ ಎರಡು ರೂಪಗಳ ನಡುವೆ ಎಂತಹ ವ್ಯತ್ಯಾಸವಿದೆಯೋ ಅಂತಹದೇ ವ್ಯತ್ಯಾಸ ಹಳೆಗನ್ನಡದಲ್ಲಿ ಬರ್ಪಂ ಮತ್ತು ಬಂದಪಂ ನಾವು ರೂಪಗಳ ಕಲ್ಪಿಸಿಕೊಳ್ಳಬೇಕಾಗುತ್ತದೆ.

ನಡುವೆಯೂ ಇದ್ದಿರಬೇಕೆಂದು

ಇವತ್ತು ಕರಾವಳಿಯ ಗವ್ಡ ಕನ್ನಡದಲ್ಲಿ ಮತ್ತು ನೀಲಗಿರಿಯ ಬಡಗ ಕನ್ನಡದಲ್ಲಿ ಹಳೆಗನ್ನಡದ ಈ ‘ದಪ’ ರೂಪದಿಂದ ಬಂದಿರಬಹುದಾದ ಕೆಲಸವನ್ನು ಕ್ರಿಯಾರೂಪವೊಂದು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದೆ (8.3.3-4) ನೋಡಿ.

ಸಮಯದ

ಮುಂದಿನ

ಮಾತ್ರವೇ

ಇದಲ್ಲದೆ, ಒಳನಾಡಿನ ಒಳನುಡಿಗಳಲ್ಲೂ ಅದು ಬಳಕೆಯಲ್ಲಿದ್ದು, ಮುಂದಿನ ಸಮಯದಲ್ಲಿ ಕೆಲಸವೊಂದು ನಡೆಯಬಹುದು ಎಂಬ ಊಹೆಯ ಅರ್ತವನ್ನು ಬಳಕೆಯಾಗುತ್ತದೆ. ನಿಶ್ಚಿತವಾಗಿಯೂ ಮುಂದಿನ ಸಮಯದಲ್ಲಿ ನಡೆಯಲಿರುವ ಕೆಲಸವನ್ನು ಸೂಚಿಸುವುದಕ್ಕಾಗಿ ಒಳನಾಡಿನ ಒಳನುಡಿಗಳಲ್ಲಿ ಉತ್ತ ಒಟ್ಟಿರುವ ರೂಪವನ್ನು ಬಳಸಿರುವುದೇ ಇದಕ್ಕೆ ಕಾರಣವಿರಬಹುದು (ಬರುತ್ತಾನೆ, ತಿನ್ನುತ್ತಾನೆ).

ಕೊಡುವುದಕ್ಕಾಗಿ

ದಪ ಕ್ರಿಯಾರೂಪಗಳು ಒಳನಾಡಿನ ಒಳನುಡಿಗಳಲ್ಲಿ ಬೇರೆಯೂ ಕೆಲವು ಬದಲಾವಣೆಗಳಿಗೆ ಒಳಗಾಗಿವೆ. ಅವುಗಳ ಎರಡನೆಯ ಅಂಗವಾಗಿದ್ದ ಅಪ್ಪನ್ ಎಂಬುದು ನಡುಗನ್ನಡದಲ್ಲಿ ಅಹನ್ ಎಂದು ಬದಲಾಗಿದೆ ಮತ್ತು ಅನಂತರ ಅದರ ಹಕಾರ ಬಿದ್ದುಹೋದುದರಿಂದಾಗಿ ಆನು ಎಂಬ ರೂಪವನ್ನು ಪಡೆದಿದೆ (ಬಂದಪನ್ > ಬಂದಹನ್ > ಬಂದಾನು).

ಬಂದೇನು, ಬಂದಾರು, ಬಂದಾಳು

ಮೊದಲಾದ ಇತರ ರೂಪಗಳಲ್ಲೂ ಇದೇ ರೀತಿಯಲ್ಲಿ ಪಕಾರ ಹಕಾರವಾಗಿದೆ ಮತ್ತು ಅನಂತರ ಬಿದ್ದುಹೋಗಿದೆ. ಈ ಪಕಾರದ ಪಳೆಯಳಿಕೆಯಾಗಿ ಅದರ ಅನಂತರ ಬಂದಿದ್ದ ಸ್ವರ ಇವತ್ತು ಉದ್ದಸ್ವರವಾಗಿ ಉಳಿದುಕೊಂಡಿದೆ.

ನಡುಗನ್ನಡ ಹಳೆಗನ್ನಡ ಬಂದಹೆಂ ಬಂದಪೆಂ ಬಂದಪಯ್ ಬಂದಹೆ
ಬಂದಹಂ ಬಂದಪಂ ಬಂದಹಳ್ ಬಂದಪಳ್

ದಾರವಾಡ ಬಂದೇನು ಬಂದಾನು ಬಂದಾಳು

ಸಮಯಗಳನ್ನು

ಈ ನಿಯಮಕ್ಕೆ ಬರಹ ಕನ್ನಡದಲ್ಲಿ ಬಳಕೆಯಲ್ಲಿರುವ ಇರು ಕ್ರಿಯಾಪದದ ರೂಪಗಳು ಅಪವಾದಗಳಾಗಿರುವ ಹಾಗೆ ಕಾಣಿಸುತ್ತವೆ. ನಿಜಕ್ಕೂ ಈ ಕ್ರಿಯಾಪದಕ್ಕೆ ಬರಹ ಕನ್ನಡದಲ್ಲಿ ಮುಂದಿನ, ಈಗಿನ ಮತ್ತು ಹಿಂದಿನ ರೂಪಗಳಿವೆ ಸೂಚಿಸಬಲ್ಲ (ಇರುತ್ತಾನೆ, ಇದ್ದಾನೆ, ಇದ್ದ). ಇವುಗಳಲ್ಲಿ ಮೊದಲನೆಯ ಇರುತ್ತಾನೆ ರೂಪ ಮತ್ತು ಮೂರನೆಯ ಇದ್ದ ರೂಪಗಳು ಇತರ ಕ್ರಿಯಾಪದಗಳ ಮುಂದಿನ ಮತ್ತು ಹಿಂದಿನ ಸಮಯದ ರೂಪಗಳ ಹಾಗೆ ಉತ್್ತ ಮತ್ತು ದ್ ಒಟ್ಟುಗಳ ಸೇರಿಕೆಯಿಂದ ರಚಿತವಾಗಿವೆ.

ಮೂರು

ಆದರೆ ಈಗಿನ ಸಮಯವನ್ನು ಸೂಚಿಸುವ ಇದ್ದಾನೆ ರೂಪ ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ ಇರ್ದಪನ್ ರೂಪದಿಂದ ಬಂದಿರುವ ಹಾಗೆ

ಕಾಣಿಸುತ್ತದೆ (ಇರ್ದಪನ್ > ಇರ್ದಹನ್ > ಇದ್ದಾನೆ). ಆದರೆ, ಈ ಕ್ರಿಯಾರೂಪ ಮೇಲೆ ವಿವರಿಸಿದಂತಹ ಊಹೆಯನ್ನು ಸೂಚಿಸುವ ಇದ್ದಾನು ರೂಪದಿಂದ ಬೇರಾಗಿದೆಯೆಂಬುದನ್ನು ಗಮನಿಸಬಹುದು. ಈ ರೂಪದ ಕೊನೆಯಲ್ಲಿ ಎಕಾರವಿದೆಯಾದರೆ, ಊಹೆಯನ್ನು ಸೂಚಿಸುವ ರೂಪದ ಕೊನೆಯಲ್ಲಿ ಉಕಾರವಿದೆ. ಈ ಉಕಾರದ ಮೂಲವೇನು ಎಂಬುದು ಸ್ಪಶ್ಟವಾಗಿಲ್ಲ.

ಕನ್ನಡದ ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಹಳೆಗನ್ನಡದ ವ (ಪ) ಒಟ್ಟಿರುವ ಕ್ರಿಯಾರೂಪಗಳು ಉಳಿದುಕೊಂಡಿವೆ ಆದರೆ ಒಳನಾಡಿನ ಒಳನುಡಿಗಳಲ್ಲಿ ಅವು ಉಳಿದಿಲ್ಲ.

ಕೆಲಸವೊಂದು ನಿಶ್ಚಿತವಾಗಿಯೂ

ಆದರೆ, ಈ ಎರಡು ಒಳನುಡಿಗಳಲ್ಲೂ ಅದಕ್ಕೆ ಕೆಲಸವೊಂದು ಮುಂದೆ ನಡೆಯಬಹುದು ಎಂಬ ಊಹೆಯ ಅರ್ತ ಮಾತ್ರವೇ ಇದೆ. ಮುಂದಿನ ಕಾಲ ನಡೆಯಬಹುದೆಂಬುದನ್ನು ಸೂಚಿಸುವುದಕ್ಕಾಗಿ ಬಡಗ ಕನ್ನಡದಲ್ಲಿ ಮತ್ತು ಕರಾವಳಿಯ ಗವ್ಡ ಕನ್ನಡದಲ್ಲಿ ಹಳೆಗನ್ನಡದ ‘ದಪ’ ರೂಪವನ್ನು ಬಳಸಿರುವುದು ಮತ್ತು ಕರಾವಳಿಯ ಇತರ ಒಳನುಡಿಗಳಲ್ಲಿ ಉತ್ತ ಒಟ್ಟಿರುವ ರೂಪವನ್ನು ಬಳಸಿರುವುದು ಇದಕ್ಕೆ ಕಾರಣವಿರಬಹುದು.

Eke →

8.3.1 ಹಿಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು

ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ ಹಿಂದಿನ ಸಮಯದ ಒಟ್ಟು ಕನ್ನಡದ ಅನಂತರದ ಚರಿತ್ರೆಯಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿದೆ. ಈ ಬದಲಾವಣೆಗಳಲ್ಲಿ ಹಲವಕ್ಕೆ ಕ್ರಿಯಾಪದಗಳ ರೂಪದಲ್ಲಿ ನಡೆದ ಬದಲಾವಣೆಗಳೇ (7.9 ನೋಡಿ) ಕಾರಣವೆಂದು ಹೇಳಲು ಸಾದ್ಯವಿದೆ.

(1) ಹಳೆಗನ್ನಡದಲ್ಲಿ ರ್, ಱ್, ಲ್, ಳ್ ಮತ್ತು ೞ್ ವ್ಯಂಜನಗಳಲ್ಲಿ ಕೊನೆಗೊಳ್ಳುತ್ತಿದ್ದ ಕ್ರಿಯಾಪದಗಳು ಹೊಸಗನ್ನಡದಲ್ಲಿ ಉಕಾರದಲ್ಲಿ ಕೊನೆ ಗೊಳ್ಳುವಂತಾಗಿದೆ. ಈ ಕಾರಣಕ್ಕಾಗಿ ಇವುಗಳಲ್ಲಿ ಹಲವು ಕ್ರಿಯಾಪದಗಳ

ಹಿಂದಿನ ಸಮಯದ ರೂಪದಲ್ಲಿ ಬದಲಾವಣೆಗಳಾಗಿರುವುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

ಕ್ರಿಯಾಪದ ಬೆದಱ್
ಕನಲ್
ಕೇಳ್
ಬಾೞ್

ಹಳೆಗನ್ನಡ ಪೀರ್ದನ್
ಬೆದರ್ದನ್ ಕನಲ್ದನ್ ಕೇಳ್ದನ್
ಬಾೞ್ದನ್

ಹೊಸಗನ್ನಡ ಹೀರಿದ(ನು) ಬೆದರಿದ ಕನಲಿದ ಕೇಳಿದ ಬಾಳಿದ

ಆದರೆ, ಈ ನಿಯಮಕ್ಕೆ ಅಪವಾದವಾಗಿ ಹಲವು ಕ್ರಿಯಾಪದಗಳ ಹಿಂದಿನ ರೂಪಗಳ ರೂಪಗಳು ಮುಂದುವರಿಕೆಗಳಾಗಿಯೂ ಉಳಿದುಕೊಂಡಿವೆ. ಇವುಗಳಲ್ಲಿ ಹಲವು ಹಳೆಗನ್ನಡದಲ್ಲೇನೇ ಮೇಲಿನ ನಿಯಮಕ್ಕೆ ಅಪವಾದಗಳಾಗಿದ್ದುವು.

ಸಮಯದ

ಹಳೆಗನ್ನಡ

ಕ್ರಿಯಾಪದ ಕುಳಿರ್
ಕೊಲ್
ಸಲ್ ಕೊಳ್

ಹಳೆಗನ್ನಡ ಕುಳಿತನ್ ಬಂದನ್
ತಂದನ್
ಗೆದ್ದನ್
ಕೊಂದನ್ ನಿಂದನ್
ಸಂದನ್
ಕೊಂಡನ್

ಹೊಸಗನ್ನಡ ಕುಳಿತ

ಇನ್ನು ಕೆಲವು ಕ್ರಿಯಾರೂಪಗಳು ಬೇರೆ ಕೆಲವು ಬದಲಾವಣೆಗಳಿಗೆ ಒಳಗಾಗಿರುವುದೇ ಮೇಲಿನ ನಿಯಮಕ್ಕೆ ಅಪವಾದಗಳಾಗಿ ಉಳಿಯಲು ಕಾರಣವಿರಬೇಕು. ಉದಾಹರಣೆಗಾಗಿ, ಹಳೆಗನ್ನಡದ ಲ್್ತ ಎಂಬುದು ಉದ್ದ

ಸ್ವರದ ಅನಂತರ ತ್ ಎಂಬುದಾಗಿ ಬದಲಾಗಿರುವ ಕಾರಣ, ಕೆಳಗಿನ ಕ್ರಿಯಾರೂಪಗಳು ಮೇಲಿನ ನಿಯಮಕ್ಕೆ ಅಪವಾದಗಳಾಗಿವೆ.

ಕ್ರಿಯಾಪದ ನೇಲ್
ಸೋಲ್
ನೂಲ್

ಹಳೆಗನ್ನಡ ನೇಲ್ತನ್ ಸೋಲ್ತನ್ ನೂಲ್ತನ್

ಹೊಸಗನ್ನಡ ನೇತ ಸೋತ ನೂತ

ಇದೇ ರೀತಿಯಲ್ಲಿ, (ಕ) ಗಿಡ್ಡ ಸ್ವರದ ಅನಂತರ ಬಂದ ೞ್್ತ ಎಂಬುದು ತ್್ತ ಎಂದಾದುದು ಮತ್ತು (ಚ) ರ್್ದ, ೞ್್ದ ಮತ್ತು ಳ್್ದ ಎಂಬವುಗಳು ದ್್ದ ಎಂದಾದುದು ಕೆಳಗೆ ಕೊಟ್ಟಿರುವ ಕ್ರಿಯಾರೂಪಗಳು ಮೇಲಿನ ನಿಯಮಕ್ಕೆ ಅಪವಾದಗಳಾಗಿ ಉಳಿಯಲು ಕಾರಣವಿರಬೇಕು.

ಕ್ರಿಯಾಪದ (ಕ) ಅೞ್

ಬೀೞ್

ಹಳೆಗನ್ನಡ ಅೞ್ತನ್
ಉೞ್ತನ್
ಕಿೞ್ತನ್

ಇರ್ದನ್
ಎೞ್ದನ್
ಬಿೞ್ದನ್
ಕಳ್ದನ್

ಹೊಸಗನ್ನಡ

(2) ನಕಾರ ಮತ್ತು ಣಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು ಹೊಸಗನ್ನಡದಲ್ಲಿ ಎರಡು ರೀತಿಯ ಬದಲಾವಣೆಗಳಿಗೊಳಗಾಗಿವೆ. ಇವು ಗಳಲ್ಲಿ ಸ್ವರ ಬಂದಿದೆಯಾದರೆ, ಉಕಾರ ಮಾತ್ರ ಸೇರಿಕೊಳ್ಳುತ್ತದೆ (ಸೀನು, ಆನು, ಕಾಣು); (ಚ) ಗಿಡ್ಡ ಸ್ವರ ಬಂದಿದೆಯಾದರೆ, ಅವುಗಳ ಕೊನೆಯಲ್ಲಿದ್ದ ನಕಾರ ಇಲ್ಲವೇ ಣಕಾರ ಇಮ್ಮಡಿ ರೂಪವನ್ನೂ ಪಡೆಯುತ್ತದೆ (ತಿನ್ನು, ಎನ್ನು, ಉಣ್ಣು).

ಆದರೆ, ಈ ಎರಡು ಬದಲಾವಣೆಗಳೂ ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳ ಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ. ಅವು ಹಳೆಗನ್ನಡದಲ್ಲಿದ್ದ ರೂಪದಲ್ಲೇ ಉಳಿದಿವೆ. ಉದ್ದ ಸ್ವರದ ಅನಂತರ ಮೂಗುಲಿ ಬಿದ್ದು ಹೋಗುವ ಒಂದು ಬದಲಾವಣೆ ಮಾತ್ರ ಇಲ್ಲಿ ನಡೆದಿದೆ.

ಕ್ರಿಯಾಪದ

ಹಳೆಗನ್ನಡ

ಹೊಸಗನ್ನಡ

ಆತು(ಕೊಂಡ)

Eke →

8.3.2 ಮುಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು

ಹಳೆಗನ್ನಡದಲ್ಲಿ ಮುಂದಿನ ಸಮಯದ ಒಟ್ಟಿಗೆ ವ್, ಬ್ ಮತ್ತು ಪ್ ಎಂಬ ಮೂರು ರೂಪಗಳಿದ್ದುವೆಂಬುದನ್ನು ನಾವು ಮೇಲೆ ನೋಡಿರುವೆವು. (1) ಣಕಾರ ಮತ್ತು ನಕಾರಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರ ಇದಕ್ಕೆ ಬ್ ರೂಪವಿತ್ತು, ಮತ್ತು (2) ರಕಾರ, ಱಕಾರ, ೞಕಾರ ಮತ್ತು ನಕಾರಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರ ಪ್ ರೂಪವಿತ್ತು. ಇದಲ್ಲದೆ, ಇಸು ಒಟ್ಟಿನಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಮತ್ತು ಗು ಇಲ್ಲವೇ ಡು ಉಲಿಕಂತೆಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರವೂ ಇದಕ್ಕೆ ಪ್ ರೂಪವಿತ್ತು.

ಈ ರೀತಿ, ಪ್ ರೂಪ ಇರುವಲ್ಲಿ ಕ್ರಿಯಾಪದಗಳ ಕೊನೆಯ ಇಸು ಮತ್ತು ಗು ಉಲಿಕಂತೆಗಳು ಬಿದ್ದು ಹೋಗುತ್ತವೆ ಮತ್ತು ಡು ಎಂಬುದು ೞ್ ಎಂದಾಗುತ್ತದೆ (ಉದಾಹರಣೆಗಳನ್ನು ಕೆಳಗೆ (3)ನೇ ಪಾರಾದ ಅನಂತರ ಕೊಡಲಾಗಿದೆ).

(3) ಉಳಿದ ಕ್ರಿಯಾಪದಗಳ ಅನಂತರ ಅದಕ್ಕೆ ವ್ ರೂಪವಿತ್ತು. ಆದರೆ, ಎಲ್ಲಿ ಪ್ ಇಲ್ಲವೇ ಬ್ ರೂಪವಿತ್ತು ಮತ್ತು ಎಲ್ಲಿ ವ್ ರೂಪವಿತ್ತು ಎಂಬುದನ್ನು ತಿಳಿಸುವ ನಿಶ್ಚಿತವಾದ ನಿಯಮಗಳಿಲ್ಲ.

ಕ್ರಿಯಾಪದಗಳ ಪಟ್ಟಿಯ ಮೂಲಕವೇ ಇದನ್ನು ವಿವರಿಸಬೇಕು. ಈ ಎಲ್ಲಾ ಬದಲಾವಣೆಗಳಿಗೂ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಪ್(ಬ್) ರೂಪ 

ತೋಱ್ ಕೀೞ್ ನೋನ್ ನೋಡು

ತೋರ್ಪ ನೋನ್ಪ ನೋೞ್ಪ

ವ್ ರೂಪ

ಕುಡು

ಪೇೞ್ ಬೇಡು

ಬೀಸು

ಕುಡುವ

ಪೀರ್ವ ಪೇೞ್ವ ಅಱಿವ ಬೇಡುವ

ಅಳೆವ ಬೀಸುವ

ಈ ಒಟ್ಟಿನ ರೂಪಗಳು ನಡುಗನ್ನಡದಲ್ಲಿ ಹೆಚ್ಚುಕಡಿಮೆ ಬದಲಾಗದೆ ಉಳಿದಿವೆ. ಪಕಾರ ಹಕಾರವಾಗುವ ಒಂದು ಬದಲಾವಣೆ ಮಾತ್ರ ಇವುಗಳಲ್ಲಿ ಕೆಲವು ರೂಪಗಳನ್ನು ಮಾರ್ಪಡಿಸಿವೆ. ಮೊದಲಿಗೆ ಈ ಬದಲಾವಣೆ ಇಮ್ಮಡಿ ಪಕಾರವಿರುವ ಇಪ್ಪ>ಇಹ, ಬಪ್ಪ>ಬಹ, ತಪ್ಪ>ತಹ ರೂಪಗಳಲ್ಲಿ ಕಾಣಿಸಿಕೊಂಡಿದ್ದು ಅನಂತರ ಬೇಳ್ಪ>ಬೇಹ, ಪೋಪ> ಹೋಹ ರೂಪಗಳಲ್ಲೂ ಕಾಣಿಸಿಕೊಂಡಿದೆ.

ಇವತ್ತಿನ ಬರಹ ಕನ್ನಡದಲ್ಲಿ ಮುಂದಿನ ಸಮಯದ ಈ ವ್ (ಪ್) ಒಟ್ಟು ಕ್ರಿಯಾಪದಗಳ ಸಂಬಂದಿಸುವ ರೂಪದಲ್ಲಿ (ಆಳುವ, ಬೀಳುವ, ಸೀಳುವ) ಮಾತ್ರ ಉಳಿದಿದೆ. ಕೆಲವು ವಿಶಿಶ್ಟವಾದ ಬರಹಗಳಲ್ಲಿ ಮಾತ್ರ, ಅದು ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲೂ (ಮಾಡುವೆನು, ಮಾಡು ವರು) ಕಾಣಿಸಿಕೊಳ್ಳುತ್ತದೆ.

ವಾಕ್ಯಗಳ

ಕೊನೆಯಲ್ಲಿ ಬಳಸುವುದಕ್ಕಾಗಿ ಈ ಒಟ್ಟಿರುವ ಕ್ರಿಯಾರೂಪಕ್ಕೆ ಬದಲಾಗಿ ಬರಹ ಕನ್ನಡದಲ್ಲಿ ಉತ್್ತ ಎಂಬ ಬೇರೆಯೇ

ಒಂದು ಒಟ್ಟಿರುವ ಕ್ರಿಯಾರೂಪ ಬಳಕೆಯಾಗುತ್ತದೆ (ಮಾಡುತ್ತಾನೆ, ಬರುತ್ತೇನೆ, ಹೋಗು ತ್ತಾಳೆ). ಇದು ಎರಡು ಕ್ರಿಯಾರೂಪಗಳ ಜೋಡಣೆಯಿಂದ ಸಿದ್ದವಾಗಿರುವ ಹಾಗೆ ಕಾಣಿಸುತ್ತದೆ.

ಜೋಡಿಸುವುದಕ್ಕಾಗಿ ಬಳಕೆಯಾಗಿರುವ ಕ್ರಿಯಾರೂಪಗಳು ಯಾವುವು ಎಂದು ಹೇಳುವುದು ಮಾತ್ರ ಸ್ವಲ್ಪ ಕಶ್ಟ. ಕಿಟ್ಟೆಲ್ ಅವರ ಮತದಂತೆ, ಆಗು ಕ್ರಿಯಾಪದದ ಮುಂದಿನ ಸಮಯದ ಕ್ರಿಯಾರೂಪಗಳನ್ನು ಉತ್ತ ಒಟ್ಟಿನಲ್ಲಿ ಕೊನೆಗೊಳ್ಳುವ ಮಾಡುತ್ತ, ಬರುತ್ತ, ಹೋಗುತ್ತ ಮೊದಲಾದ ಜೋಡಿಸುವ ಕ್ರಿಯಾರೂಪಗಳೊಂದಿಗೆ ರೂಪಗಳನ್ನು ನೋಡಿ) ತಯಾರಿಸಲಾಗಿದೆ.

ಮೂಲಕ ಈ

ಸೇರಿಸುವ

ಮುಂದಿನ

ಕ್ರಿಯಾಪದದ

ಇವುಗಳಲ್ಲಿ ಆಗು

ಸಮಯದ (ಅಪ್ಪೆನ್, ಅಪ್ಪೆಮ್, ಅಪ್ಪನ್, ಅಪ್ಪಳ್ ಕ್ರಿಯಾರೂಪಗಳು ಮೊದಲಾದುವು) ಏನೆ, ಏವೆ, ಆನೆ, ಆಳೆ ಮೊದಲಾದ ಕುಗ್ಗಿಸಿದ ರೂಪಗಳಲ್ಲಿ ಬಂದಿವೆಯೆಂಬುದಾಗಿ ಅವರು ಸೂಚಿಸುತ್ತಾರೆ (ಕಿಟ್ಟೆಲ್ 1903: 133 ನೋಡಿ).

ಆದರೆ ಇಲ್ಲಿ ಸಮಸ್ಯೆಯೇನೆಂದರೆ, ಮಾಡುತ್ತುಂ ಅಪ್ಪೆನ್ ‘ಮಾಡುತ್ತಾ ಆಗುವೆನು’ ಎಂಬಂತಹ ರಚನೆ ಕನ್ನಡದ ಮಟ್ಟಿಗೆ ಅಶ್ಟೊಂದು ಸರಿಯಾದುದೆಂದು ತೋರುವುದಿಲ್ಲ

ಬರಹ ಕನ್ನಡದ ಸಂಬಂದಿಸುವ ರೂಪಗಳಲ್ಲಿ ವ್(ಪ್) ಒಟ್ಟು ಎಲ್ಲಾ ರೀತಿಯ ಕ್ರಿಯಾಪದಗಳ ಅನಂತರವೂ ವ್ ಎಂಬ ಒಂದೇ ರೂಪದಲ್ಲಿ ಬಳಕೆಯಾಗುತ್ತದೆ (ಎಂಬ ಸಂಬಂದಿಸುವ ಕ್ರಿಯಾರೂಪ ಮಾತ್ರ ಇದಕ್ಕೆ ಅಪವಾದ; ಅದರಲ್ಲಿ ಬ್ ರೂಪ ಉಳಿದಿದೆ). ಕ್ರಿಯಾಪದಗಳ ರೂಪದಲ್ಲಿ ನಡೆದ ಹಲವಾರು ರೀತಿಯ ಬದಲಾವಣೆಗಳೇ (7.9 ನೋಡಿ) ಈ ರೀತಿ ಇವತ್ತಿನ ಬರಹ ಕನ್ನಡದಲ್ಲಿ ಹಳೆಗನ್ನಡದ ಮೂರು (ವ್, ಪ್, ಬ್) ರೂಪಗಳ ಬದಲು ವ್ ಎಂಬ ಒಂದೇ ರೂಪ ಉಳಿದಿರಲು ಕಾರಣವಿರಬೇಕು. ಕೆಳಗಿನ ಉದಾಹರಣೆಗಳು ಇದನ್ನು ಸ್ಪಶ್ಟಪಡಿಸುತ್ತವೆ.

ಹಳೆಗನ್ನಡ ಕ್ರಿಯಾಪದ ಕ್ರಿಯಾರೂಪ
ಪೋ

ಬೇವ
ಕೀಳ್ಪ
ಪೋಪ

ಹೊಸಗನ್ನಡ

ಕ್ರಿಯಾಪದ ಬೇಯು
ತಿನ್ನು
ಕೀಳು
ಹೋಗು

ಕ್ರಿಯಾರೂಪ ಆಳುವ ಬೇಯುವ ತಿನ್ನುವ ಇರುವ ಕೀಳುವ ಹೋಗುವ

Eke →

8.3.3 ಕರಾವಳಿಯ ಒಳನುಡಿಗಳಲ್ಲಿ ಮುಂದಿನ ಸಮಯದ ಒಟ್ಟು

ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದ ಮುಂದಿನ ಸಮಯದ ಒಟ್ಟು ಕರಾ ವಳಿಯ ಒಳನುಡಿಗಳಲ್ಲಿ ಸಂಬಂದಿಸುವ ರೂಪಗಳಲ್ಲಿ ಮಾತ್ರವಲ್ಲದೆ ಇದಲ್ಲದೆ, ಈ ಕ್ರಿಯಾರೂಪಗಳಲ್ಲಿ ಹಲವು ರೂಪಬೇದಗಳೂ ಉಳಿದುಕೊಂಡಿವೆ.

ರೂಪಗಳಲ್ಲೂ ಉಳಿದುಕೊಂಡಿದೆ. ಮುಂದಿನ

ಸಮಯದ ಒಟ್ಟಿನ

(1) ಉದಾಹರಣೆಗಾಗಿ, ಹವ್ಯಕ

ಕನ್ನಡದಲ್ಲಿ ಈ ಒಟ್ಟಿಗೆ ಹಳೆಗನ್ನಡದಲ್ಲಿ ಕಾಣಿಸುವ ಪ್, ಬ್ ಮತ್ತು ವ್ ಎಂಬ ಮೂರು ರೂಪಗಳೂ ಇವೆ.

ಹಳೆಗನ್ನಡ ಪೋಪೆನ್ ಬರ್ಪೆನ್
ಉಣ್ಬೆನ್
ಕಾಣ್ಬೆನ್

ಹವ್ಯಕ ಕನ್ನಡ ಹೋಪೆ ಬಪ್ಪೆ

ಗೆಲ್ವೆನ್
ಪಾಡುವೆನ್ ನಡೆವೆನ್

ಗೆಲ್ಲುವೆ ಹಾಡುವೆ ನಡೆವೆ

ಆದರೆ, ಈ ರೂಪಗಳ ಬಳಕೆಯಲ್ಲಿ ಕೆಲವು ಬದಲಾವಣೆಗಳೂ ನಡೆದಿವೆ. ಕನ್ನಡದ ಇತರ ಒಳನುಡಿಗಳಲ್ಲಿ (ಕ್ರಿಯಾಪದಗಳ ರೂಪದಲ್ಲಿ) ನಡೆದಂತಹ ಹಲವು ಬದಲಾವಣೆಗಳು (7.9 ನೋಡಿ) ಹವ್ಯಕದಲ್ಲೂ ನಡೆದಿರುವುದೇ ಇದಕ್ಕೆ ಕಾರಣವಿರಬಹುದು.

ಹಳೆಗನ್ನಡದಲ್ಲಿ ಹಲವು ಕ್ರಿಯಾಪದಗಳ ಅನಂತರ ಬರುತ್ತಿದ್ದ ಪ್ ರೂಪದ ಬದಲು, ಹವ್ಯಕದಲ್ಲಿ ವ್ ರೂಪ ಕಾಣಿಸುವುದು ಇಂತಹ ಬದಲಾವಣೆಗಳಲ್ಲಿ ಮುಕ್ಯವಾದುದು.

ಹಳೆಗನ್ನಡ ಕೀಳ್ - ಕೀಳ್ಪೆನ್ ಮಾಡು - ಮಾೞ್ಪನ್ ನೋಡು - ನೋೞ್ಪನ್ ತರಿಸು - ತರಿಪೆನ್ ಮಾಡಿಸು - ಮಾಡಿಪ್ಪೆನ್ ಮಾಡುಸು - ಮಾಡುಸುವೆ ತೂಗು - ತೂಪೆನ್

ಹವ್ಯಕ ಕನ್ನಡ ಕೀಳು - ಕೀಳುವೆ ಮಾಡು - ಮಾಡುವೆ ನೋಡು - ನೋಡುವೆ ತರುಸು - ತರುಸುವೆ

ತೂಗು - ತೂಗುವೆ

ಹವ್ಯಕ ಕನ್ನಡದಲ್ಲಿ ಈ ಕ್ರಿಯಾರೂಪಗಳ ಅರ್ತದಲ್ಲೂ ಬದಲಾವಣೆ ಯಾಗಿದೆ. ಮೇಲೆ ಸೂಚಿಸಿದ ಹಾಗೆ, ಅವು ಮುಂದಿನ ಸಮಯದ ಸಂಗತಿ ಯೊಂದನ್ನು ತಿಳಿಸುವ ಬದಲು, ಅದರ ಕುರಿತಾಗಿ ಆಡುಗನ ಊಹೆಯನ್ನು ಸೂಚಿಸುತ್ತವೆ. ನಿಶ್ಚಿತವಾಗಿಯೂ ಒಂದು ಸಂಗತಿ ಮುಂದಿನ ಸಮಯದಲ್ಲಿ ಜರಗಲಿದೆ ಎಂಬುದನ್ನು ತಿಳಿಸಲು, ಇವಕ್ಕೆ ಬದಲು ಉತ್್ತ ಒಟ್ಟಿರುವ ಮಾಡುತ್ತೆ ‘ಮಾಡುತ್ತೇನೆ’, ತರುಸುತ್ತೆ ‘ತರಿಸುತ್ತೇನೆ’ ಮೊದಲಾದ ಕ್ರಿಯಾರೂಪಗಳನ್ನೇ ಹವ್ಯಕ ಕನ್ನಡವೂ ಬಳಸುತ್ತದೆ.

ಇದಲ್ಲದೆ, ಹವ್ಯಕ ಕನ್ನಡದಲ್ಲಿ ಊಹೆಯನ್ನು ಸೂಚಿಸುವ ಮೇಲಿನ ಕ್ರಿಯಾರೂಪಗಳನ್ನು ಆಡುಗ ಮತ್ತು ಕೇಳುಗರು ನಡೆಸಲಿರುವ ಕೆಲಸಗಳನ್ನು ಸೂಚಿಸುವುದಕ್ಕಾಗಿ ಮಾತ್ರವೇ ಬಳಸಲಾಗುತ್ತದೆ. ಇತರರು ನಡೆಸಲಿರುವ

ಕೆಲಸಗಳನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪಗಳನ್ನು ಬಳಸಲಾಗುತ್ತದೆ.

ಒಟ್ಟಿರುವ

ಹಳೆಗನ್ನಡ ಆನ್ ಬರ್ಪೆನ್ ಆಮ್ ಬರ್ಪೆಮ್
ನೀಂ ಬಪ್ರಿರ್
ಅವನ್ ಬಪ್ರನ್
ಅವರ್ ಬಪ್ರರ್

ಹವ್ಯಕ ಕನ್ನಡ ಆನು ಬಪ್ಪೆ ಎಂಗೊ ಬಪ್ಪೆಯೊᵒ ನಿಂಗೊ ಬಪ್ಪಿ ಅವೆ ಬಕ್ಕು ಅವು ಬಕ್ಕು

ಮೇಲೆ (8.2.2)ರಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡದಲ್ಲೂ ಕುಂ (ಗುಂ) ಒಟ್ಟಿರುವ ಕ್ರಿಯಾರೂಪಗಳ ಬಳಕೆಯಲ್ಲಿ ಈ ಎರಡು ನಿರ್ಬಂದಗಳಿದ್ದುವು; (ಕ) ಅವು ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರು ನಡೆಸುವ ಕೆಲಸಗಳನ್ನು ಮಾತ್ರವೇ ಸೂಚಿಸುತ್ತಿದ್ದುವು ಮತ್ತು (ಚ) ಮುಂದಿನ ಸಮಯದ ಕೆಲಸಗಳ ಕುರಿತಾಗಿ ಊಹೆಯನ್ನು ಮಾತ್ರವೇ ಸೂಚಿಸುತ್ತಿದ್ದುವು.

ಹಾಗಾಗಿ, ಈ ಒಟ್ಟಿನ ಮಟ್ಟಿಗೆ ಹವ್ಯಕ ಕನ್ನಡ ಹಳೆಗನ್ನಡದ ಕಾಲದಲ್ಲಿದ್ದ ಬಳಕೆಯನ್ನೇ ಮುಂದುವರಿಸಿದೆ. ಆಗುಗ ಮತ್ತು ಕೇಳುಗರು ನಡೆಸುವ ಕೆಲಸಗಳನ್ನು ಸೂಚಿಸುವಲ್ಲಿ ಮಾತ್ರ ಅದು ಬದಲಾವಣೆಯನ್ನು ಮಾಡಿಕೊಂಡಿದೆ; ಮುಂದಿನ ಸಮಯದ ಕೆಲಸಗಳನ್ನು ಸೂಚಿಸುವ ವ್ (ಪ್) ಒಟ್ಟಿರುವ ಕ್ರಿಯಾರೂಪಗಳನ್ನು ಅಂತಹ ಕೆಲಸಗಳ ಕುರಿತಾಗಿ ಊಹೆಯನ್ನು ಸೂಚಿಸಬೇಕಾಗಿರುವಲ್ಲಿ ಮಾತ್ರ ಬಳಸುವಂತೆ ಅದು ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡಿಕೊಂಡಿದೆ.

ಇದಲ್ಲದೆ, ಹಳೆಗನ್ನಡದ ಹಾಗೆ ಹವ್ಯಕ ಕನ್ನಡದಲ್ಲೂ ಕುಂ (ಗುಂ) ಒಟ್ಟಿರುವ ಕ್ರಿಯಾರೂಪಗಳು ರೂಪದಲ್ಲಿ) ಹಿಂದಿನ ಸಮಯದಲ್ಲಿ ರೂಡಿಯಲ್ಲಿದ್ದ ಕೆಲಸಗಳನ್ನು ಸೂಚಿಸುವುದಕ್ಕಾಗಿಯೂ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯವನ್ನು ಗಮನಿಸ ಬಹುದು.

(4) ಅವು ಪುಣೆಲಿಪ್ಪಗ ಉಂಬಲೆ ಹೋಟೆಲಿಂಗೆ ಹೋಕು

‘ಅವರು ಪುಣೆಯಲ್ಲಿದ್ದಾಗ ಊಟಕ್ಕೆ ಹೋಟೆಲಿಗೆ ಹೋಗುತ್ತಿದ್ದರು’

ಮೇಲಿನ ವಾಕ್ಯದಲ್ಲಿ ಹೋಕು ಕ್ರಿಯಾರೂಪ ಹಿಂದಿನ ಸಮಯದಲ್ಲಿ ರೂಡಿಯಲ್ಲಿ ನಡೆಯುತ್ತಿದ್ದ ಕೆಲಸವೊಂದನ್ನು ಸೂಚಿಸುತ್ತದೆ. ಆದರೆ, ವ್ (ಪ್) ಒಟ್ಟಿರುವ ಹೋಪೆ ‘ಹೋದೇನು’, ಹೋಪಿ ‘ಹೋದೀರಿ’ ಕ್ರಿಯಾ ರೂಪಗಳಿಗೆ ಈ ರೀತಿ ಹಿಂದಿನ ಸಮಯದ (ರೂಡಿಯ) ಕೆಲಸಗಳನ್ನು ಸೂಚಿಸುವ ಬಳಕೆಯಿಲ್ಲ.

ಈ ಕಾರಣಕ್ಕಾಗಿ, ಆಡುಗ ಇಲ್ಲವೇ ಕೇಳುಗ ನಡೆಸುತ್ತಿದ್ದ ಕೆಲಸಗಳನ್ನು (ಅವರೊಂದಿಗೆ ಇತರರನ್ನೂ ಸೇರಿಸಿ ಹೇಳಿರುವ ಸಂದರ್ಬಗಳಲ್ಲಿ) ಕು (ಗು) ಒಟ್ಟಿರುವ ರೂಪಗಳ ಮೂಲಕವೇನೇ ಹಿಂದಿನ ಸಮಯದ ರೂಡಿಯ ಕೆಲಸಗಳನ್ನು ಸೂಚಿಸಲಾಗುತ್ತದೆ.

(5) ನಾವು ಪುಣೆಲಿಪ್ಪಗ ಉಂಬಲೆ ಹೋಟೆಲಿಂಗೆ ಹೋಕು

ಪುಣೆಯಲ್ಲಿದ್ದಾಗ ಊಟಕ್ಕೆ

‘ನಾವು ಹೋಗುತ್ತಿದ್ದೆವು’

ಹೋಟೆಲಿಗೆ

ಈ ವಿಶಯದಲ್ಲಿ ಹವ್ಯಕ ಕನ್ನಡ ಹಳೆಗನ್ನಡಕ್ಕಿಂತ ಬೇರಾಗಿರುವ ಹಾಗೆ

ಕಾಣಿಸುತ್ತದೆ.

ಮುಂದಿನ ಸಮಯದ ಕೆಲಸದ ಕುರಿತಾಗಿ ಊಹೆಯನ್ನು ಸೂಚಿಸುವ ಈ ಅರ್ತದಲ್ಲಿ ವ್ (ಪ್) ಒಟ್ಟಿರುವ ಕ್ರಿಯಾರೂಪಗಳ ಬಳಕೆ ಕರಾವಳಿಯ ಬೇರೆ ಒಳನುಡಿಗಳಲ್ಲೂ ಕಾಣಿಸುತ್ತದೆ. ಆದರೆ, ಈ ಒಳನುಡಿಗಳಲ್ಲಿ ಆಡುಗ ಮತ್ತು ಕೇಳುಗರು ನಡೆಸಲಿರುವ ಕೆಲಸಗಳನ್ನು ಮಾತ್ರವಲ್ಲದೆ ಇತರರು ನಡೆಸಲಿರುವ ಕೆಲಸಗಳನ್ನೂ ಈ ಕ್ರಿಯಾರೂಪಗಳ ಮೂಲಕವೇ ಸೂಚಿಸಲಾಗುತ್ತದೆ.

ಉದಾಹರಣೆಗಾಗಿ, ಹಾಲಕ್ಕಿ ಕನ್ನಡದಲ್ಲಿ (ಆಚಾರ್ಯ 1967) ಕುಡೀವೆ ‘ಕುಡಿದೇನು’, ಎಂಬಂತಹ ರೂಪಗಳು ಮಾತ್ರವಲ್ಲದೆ, ಕುಡೀವ ‘ಅವನು

ಕುಡಿದಾನು’, ಬರುವ ‘ಅವನು ಬಂದಾನು’ ಎಂಬಂತಹ ರೂಪಗಳೂ

(2) ಸುಳ್ಯದ ಗವ್ಡ ಕನ್ನಡವೂ ಹಳೆಗನ್ನಡದ ವ್(ಪ್) ಒಟ್ಟನ್ನು ಉಳಿಸಿ ಕೊಂಡಿದೆ ಮತ್ತು ಅದನ್ನು ಅನಿಶ್ಚಿತವಾಗಿರುವ ಮುಂದಿನ ಸಮಯವನ್ನು ಸೂಚಿಸುವ ಅರ್ತದಲ್ಲಿ ಬಳಸುತ್ತದೆ (ಕುಶಾಲಪ್ಪ ಗವ್ಡ 1970).

ತಿನ್ - ತಿಮ್ಬೊ
ಕಾಣ್ - ಕಾಂಬ
ಅಳಿ - ಅಳಿವೆ

ಕೊಡು - ಕೊಡುವೆ

‘(ಅವನು) ತಿಂದಾನು’ ‘(ನೀನು) ನೋಡಬಹುದು’ ‘(ನಾನು) ಅಳೆದೇನು’ ‘(ನಾನು) ಕೊಟ್ಟೇನು’

ನಿಶ್ಚಿತವಾದ ಮುಂದಿನ ಸಮಯವನ್ನು ಇಲ್ಲವೇ ಈಗಿನ ಸಮಯವನ್ನು ಸೂಚಿಸುವುದಕ್ಕಾಗಿ, ಬರಹ ಕನ್ನಡ ಇಲ್ಲವೇ ಕರಾವಳಿಯ ಹವ್ಯಕ ಕನ್ನಡದ ಹಾಗೆ, ಉತ್್ತ ಒಟ್ಟನ್ನು ಬಳಸುವ ಬದಲು ಗವ್ಡ ಕನ್ನಡ ಹಿಂದಿನ ಸಮಯದ ಒಟ್ಟಿನೊಂದಿಗೆ ಬೇರೊಂದು ಒಟ್ಟನ್ನು ಬಳಸುತ್ತಿರುವ ಹಾಗೆ ಕಾಣಿಸುತ್ತದೆ. ಇದು ಹಳೆಗನ್ನಡದ ‘ದಪ’ ಕ್ರಿಯಾರೂಪದ ಇಲ್ಲವೇ ಅಂತಹ ಬೇರೊಂದು ರೂಪದ ಮುಂದುವರಿಕೆಯಾಗಿರಬೇಕು.

ಕೊಡು
ಹೋಗು
ಹಾರು
ಕೊಡು

ಕೊಟ್ಟನೆ ‘ಕೊಡುತ್ತೇನೆ’ ತಂದನೆ, ತನ್ನೆ ‘ತರುತ್ತೇನೆ’ ಹೋದನೆ, ಹೋನೆ ‘ಹೋಗುತ್ತೇನೆ’ ಹಾರಿಯ ‘ಹಾರುತ್ತೀ’ ಅಳ್ದಿಯ ‘ಅಳೆಯುತ್ತೀ’ ಅತ್ತವೆ ‘ಅಳುತ್ತಾರೆ’ ಕೊಟ್ಟದೆ ‘ಕೊಡುತ್ತದೆ’

ಕೆಳಗೆ 8.3.4ರಲ್ಲಿ ಕೊಟ್ಟಿರುವ ಬಡಗ ಕನ್ನಡದ ಮುಂದಿನ ಸಮಯದ ಕ್ರಿಯಾರೂಪಗಳಿಗೂ ಈ ಕರಾವಳಿಯ ಗವ್ಡ ಕನ್ನಡದ ಕ್ರಿಯಾರೂಪಗಳಿಗೂ ನಡುವಿರುವ ಹೋಲಿಕೆಯನ್ನು ಗಮನಿಸುವುದು ಅವಶ್ಯ.

Eke →

8.3.4 ಬಡಗ ಕನ್ನಡದಲ್ಲಿ ಸಮಯದ ಒಟ್ಟುಗಳು

ನೀಲಗಿರಿಯ ಬಡಗರ ಕನ್ನಡ ಒಳನುಡಿಯಲ್ಲಿ ಹಿಂದಿನ ಸಮಯದ ಕ್ರಿಯಾ ರೂಪಗಳು ಹೆಚ್ಚುಕಡಿಮೆ ಕನ್ನಡದ ಇತರ ಒಳನುಡಿಗಳಲ್ಲಿರುವ ಹಾಗೆಯೇ ಕೆಳಗೆ ಉಳಿದುಕೊಂಡಿವೆ. ಇದಕ್ಕೆ ಕೊಡಲಾಗಿದೆ.

ಕೆಲವು ಉದಾಹರಣೆಗಳನ್ನು

ಮಾಡಿದೆ
ಹೋದ

‘ನೀನು ಮಾಡಿದೆ’’ ‘ಅವನು ಹೋದ’’ ‘ಅವನು ಎದ್ದ’ ‘ಅವನು ಬಂದ’

ಆದರೆ, ಮುಂದಿನ

ಸೂಚಿಸುವುದಕ್ಕಾಗಿ ಬಡಗ ಸಮಯವನ್ನು ಕನ್ನಡದಲ್ಲಿ ಹಳೆಗನ್ನಡದ ದಪ ಒಟ್ಟು ಮುಂದುವರಿದಿರುವ ಹಾಗೆ ಕಾಣಿಸುತ್ತದೆ. ಎಂದರೆ, ಅದರಲ್ಲಿ ಹಿಂದಿನ ಸಮಯದ ಕ್ರಿಯಾರೂಪಕ್ಕೆ ಆಗು ಕ್ರಿಯಾಪದದ ಮುಂದಿನ ಸಮಯದ ಕ್ರಿಯಾರೂಪವನ್ನು ಸೇರಿಸಿ ರಚಿಸಿದಂತಹ ಹಳೆಗನ್ನಡದ ಕ್ರಿಯಾರೂಪವೇ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿರುವ ಹಾಗೆ ಕಾಣಿಸುತ್ತದೆ.

ಉದಾಹರಣೆಗಾಗಿ, ಬಡಗ ಕನ್ನಡದಲ್ಲಿ ಬಳಕೆಯಾಗುವ ಕೆಲವು ಮುಂದಿನ ಸಮಯದ ಕ್ರಿಯಾರೂಪಗಳನ್ನು ಪರಿಶೀಲಿಸಬಹುದು. ಇವು ಮೇಲೆ 6.3.3ರಲ್ಲಿ ರೂಪಗಳನ್ನು ಹೋಲುತ್ತವೆ.

ಕೊಟ್ಟಿರುವ

ಕನ್ನಡದ

ಗವ್ಡ

ನಡದಾರ
ಮಾಡಿನ

‘ಅವರು ನಡೆಯುತ್ತಾರೆ’ ‘ಅವನು ಮಾಡುತ್ತಾನೆ’

ಬಂದನೊ

‘ನೀವು ಉಜ್ಜುತ್ತೀರಿ’ ‘ನಾನು ಉಳುತ್ತೇನೆ’ ‘ನಾವು ಬರುತ್ತೇವೆ’ ‘ನಾನು ಓಡುತ್ತೇನೆ’

ಇದಲ್ಲದೆ, ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದ್ದ ವ್ (ಪ್) ಒಟ್ಟಿರುವ ಕ್ರಿಯಾರೂಪವೂ ಬಡಗ ಕನ್ನಡದಲ್ಲಿ ಉಳಿದುಕೊಂಡಿದೆ. ಆದರೆ, ಕರಾವಳಿಯ ಹವ್ಯಕ ಕನ್ನಡದ ಹಾಗೆ, ಅದನ್ನು ಬಡಗ ಕನ್ನಡ ಆಡುಗ ಮತ್ತು ಕೇಳುಗರು ನಡೆಸುವ ಕೆಲಸಗಳನ್ನು ಸೂಚಿಸುವುದಕ್ಕಾಗಿ ಮಾತ್ರ ಬಳಸುತ್ತದೆ. ಇದಲ್ಲದೆ, ಒರ್ವಚನದಲ್ಲೂ ಅದರ ಬಳಕೆಯಿಲ್ಲ.

ಹೋಪೋ

ಅಳಿಬೋ

‘ನೀವು ಬರುವಿರಿ’ ‘ನಾವು (ಮತ್ತು ನೀವು) ಹೋಗುವೆವು’ ‘ನೀವು ಅಡಿಗೆ ಮಾಡುವಿರಿ’ ‘ನಾವು (ಮತ್ತು ನೀವು) ನಾಶವಾಗುವೆವು’

Eke →

8.3.5 ಸಂಗತಿಯನ್ನು ತಿಳಿಸುವ ಕ್ರಿಯಾಪದಗಳು

ಹಳೆಗನ್ನಡದ ಹೆಚ್ಚಿನ ಕ್ರಿಯಾಪದಗಳೂ ಒಂದು ಕೆಲಸವನ್ನು (ಆಗುವಿಕೆ ಇಲ್ಲವೇ ಮಾಡುವಿಕೆಯನ್ನು) ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಕಾರಣಕ್ಕಾಗಿ ಅವು ಹಿಂದಿನ ಇಲ್ಲವೇ ಮುಂದಿನ ಸಮಯದ ಒಟ್ಟಿನೊಂದಿಗೆ (ಇಲ್ಲವೇ ಅಲ್ಲಗಳೆಯುವ ಒಟ್ಟಿನೊಂದಿಗೆ - 8.4 ನೋಡಿ) ಬರಬಲ್ಲುವು. ಈ ನಿಯಮಕ್ಕೆ ಅಪವಾದವಾಗಿ ಹಳೆಗನ್ನಡದಲ್ಲಿ ಒಳ್ ‘ಇರು’, ಬಲ್ ‘ತಿಳಿದಿರು’, ಅಲ್ ‘ಅಲ್ಲ’ ಎಂಬಂತಹ ಸಂಗತಿಗಳನ್ನು ತಿಳಿಸುವ ಕೆಲವು ಕ್ರಿಯಾಪದಗಳಿವೆ. ಇವು ಕೆಲಸಗಳನ್ನು ತಿಳಿಸುವುದಿಲ್ಲವಾದ ಕಾರಣ, ಅವುಗ ಳೊಂದಿಗೆ ಸಮಯದ ಒಟ್ಟುಗಳು ಬರಲಾರವು. ಹಾಗಾಗಿ, ವಾಕ್ಯಗಳ ಕೊನೆ

ಯಲ್ಲಿ ಬಳಕೆಯಾಗಬಲ್ಲ ಕ್ರಿಯಾರೂಪಗಳಲ್ಲಿ ಅವಕ್ಕೆ ಆಡುಗ ಒಟ್ಟುಗಳನ್ನು ನೇರವಾಗಿ ಸೇರಿಸಲಾಗುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಒಳ್ ಕ್ರಿಯಾಪದದ ಹಳೆಗನ್ನಡ

ಕ್ರಿಯಾರೂಪಗಳನ್ನು ಗಮನಿಸಬಹುದು.

ಕೇಳುಗ:
ಗಂಡಸು:
ಹೆಂಗಸು:

ಒರ್ವಚನ
ಒಳಯ್
ಒಳಳ್

ಹಲವಚನ ಒಳೆವು ಒಳವು

ಈ ಕ್ರಿಯಾಪದಗಳ ಸಂಬಂದಿಸುವ ರೂಪದಲ್ಲೂ ಸಮಯದ ಒಟ್ಟು ಕಾಣಿಸುವುದಿಲ್ಲ (ಉಳ್ಳ ‘ಇರುವ’, ಬಲ್ಲ ‘ತಿಳಿದ’). ಈ ರೂಪಗಳಲ್ಲೂ ಸಂಬಂದಿಸುವ ಅ ಒಟ್ಟನ್ನು ಅವಕ್ಕೆ ನೇರವಾಗಿ ಸೇರಿಸಲಾಗಿದೆ. ಅಲ್ಲ ಕ್ರಿಯಾಪದದ ಸಂಬಂದಿಸುವ ಅಲ್ಲದ ರೂಪದಲ್ಲಿ ದ್ ಒಟ್ಟು ಕಾಣಿಸುವು ದಾದರೂ ಅದಕ್ಕೆ ಸಮಯವನ್ನು ಸೂಚಿಸುವ ಅರ್ತವಿಲ್ಲ.

ಹೊಸಗನ್ನಡದಲ್ಲಿ ಈ ಕ್ರಿಯಾರೂಪಗಳ ಕೆಲವು ಪಳೆಯಳಿಕೆಗಳು ಮಾತ್ರ ಉಳಿದಿವೆ (ಉಳ್ಳವರು, ಉಂಟು, (ಮಾಡ)ಬಲ್ಲೆ). ಕೂಡುಪದದ ಅಂಗವಾಗಿ ಬರುವ ಬಲ್ ಎಂಬುದು ಮಾತ್ರ ಎಲ್ಲಾ ಆಡುಗ ಒಟ್ಟುಗಳೊಂದಿಗೂ ಬಳಕೆಯಾಗುತ್ತದೆ (ಮಾಡಬಲ್ಲ, ಹೋಗಬಲ್ಲರು, ತಿನ್ನಬಲ್ಲೆವು, ಕೇಳಬಲ್ಲಿರಿ, ಕೊಡಬಲ್ಲಳು).

ಈ ರೀತಿ, ಸಮಯದ ಒಟ್ಟನ್ನು ಪಡೆಯದಿರುವ ಕ್ರಿಯಾಪದಗಳನ್ನು ಮೂಲದ್ರಾವಿಡಕ್ಕೂ ಕಲ್ಪಿಸಬೇಕಾಗುತ್ತದೆಯೇ ಎಂಬ ವಿಶಯವನ್ನು ಇನ್ನೂ ಪರಿಶೀಲಿಸಬೇಕಾಗಿದೆ.

Eke →

8.4 ಅಲ್ಲಗಳೆಯುವ ಒಟ್ಟು

ಮೂಲದ್ರಾವಿಡದಲ್ಲೇನೇ ಸಮಯದ ಒಟ್ಟಿಗೆ ಬದಲಾಗಿ ಆ ಜಾಗದಲ್ಲಿ ಅಲ್ಲಗಳೆಯುವ ಒಟ್ಟನ್ನು ಇರಿಸುವ ಮೂಲಕ ಕೆಲಸ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ಅಲ್ಲಗಳೆಯಲು ಸಾದ್ಯವಿತ್ತು. ಹೆಚ್ಚಿನ ದ್ರಾವಿಡ ನುಡಿಗಳೂ ಈ ಮೂಲದ್ರಾವಿಡ ರಚನೆಯನ್ನು ಉಳಿಸಿಕೊಂಡಿವೆ.

ತೆಂಕುದ್ರಾವಿಡ ನುಡಿಗಳಲ್ಲಿ ಈ ಅಲ್ಲಗಳೆಯುವ ಒಟ್ಟಿಗೆ ಎರಡು ರೂಪಗಳಿವೆ. (ಕ) ಆಡುಗ ಇಲ್ಲವೇ ಕೇಳುಗ ಒಟ್ಟುಗಳ ಮೊದಲು ಮತ್ತು (ಚ) ಇತರರಲ್ಲಿ ಮನುಶ್ಯರನ್ನು ಸೂಚಿಸುವ ಒಟ್ಟುಗಳ ಮೊದಲು ಅದು ಸೊನ್ನೆ ರೂಪದಲ್ಲಿದೆ ಮತ್ತು ಮನುಶ್ಯರಲ್ಲದ ಇತರರನ್ನು ಸೂಚಿಸುವ ಒಟ್ಟುಗಳ ಮೊದಲು ಅದು ಆ ರೂಪದಲ್ಲಿದೆ (ತುಳು ನುಡಿ ಇದಕ್ಕೆ ಅಪವಾದ).

ಹಳೆಗನ್ನಡದಲ್ಲಿಯೂ ಅದಕ್ಕೆ ಇಂತಹವೇ ಎರಡು ರೂಪಗಳಿವೆ. ಆದರೆ, ಅಲ್ಲಗಳೆಯುವ ಆ ಒಟ್ಟು ಮಾತ್ರ ಅ ಎಂಬುದಾಗಿ (ಗಿಡ್ಡಸ್ವರವಾಗಿ) ಬದಲಾಗಿದೆ. ನೋಡೆಂ ನೋಡಯ್ ನೋಡಂ ನೋಡಳ್ ನೋಡದು

ನೋಡೆವು ನೋಡಿರ್ ನೋಡರ್ ನೋಡವು

ನೋಡದು ಮತ್ತು ನೋಡವು ಕ್ರಿಯಾರೂಪಗಳಲ್ಲಿ ಅಲ್ಲಗಳೆಯುವ ಒಟ್ಟು ಅ ರೂಪದಲ್ಲಿದೆ (ಅ+ಉದು, ಅ+ಉವು) ಮತ್ತು ಇತರ ಕ್ರಿಯಾರೂಪಗಳಲ್ಲಿ ಸೊನ್ನೆ ರೂಪದಲ್ಲಿದೆ ಎಂದು ಹೇಳಬಹುದು.

ಹಳೆಗನ್ನಡದ ಈ ಅಲ್ಲಗಳೆಯುವ ಕ್ರಿಯಾರೂಪಗಳಿಗೆ ಮೂರು ಕಾಲದ ಕೆಲಸಗಳನ್ನೂ ಅಲ್ಲಗಳೆಯುವ ಬಳಕೆಯಿತ್ತೆಂದು ವಿದ್ವಾಂಸರು ಹೇಳುತ್ತಾರೆ. ಆದರೆ, ಈ ಕ್ರಿಯಾರೂಪಗಳ ಹೆಚ್ಚಿನ ಬಳಕೆಗಳಲ್ಲೂ ಅವಕ್ಕೆ ಮುಂದಿನ ಕೆಲಸಗಳನ್ನು ಅಲ್ಲಗಳೆಯುವ ಅರ್ತವೇ ಕಾಣಿಸುತ್ತದೆ.

ಹಿಂದಿನ

ಇದಲ್ಲದೆ,

ಕೆಲಸಗಳನ್ನು ಸೂಚಿಸುವ ಅಲ್ಲಗಳೆಯಬೇಕಾದಲ್ಲೆಲ್ಲ ಕ್ರಿಯಾರೂಪದದೊಂದಿಗೆ ಇಲ್ಲ ಪದದ ಬಳಕೆಯೇ ಕಾಣಿಸುತ್ತದೆ. ಇದನ್ನು ಕೆಳಗಿನ ಹಳೆಗನ್ನಡ ವಾಕ್ಯದಲ್ಲಿ ನೋಡಬಹುದು.

ಕೆಲಸಗಳನ್ನು

ಸಮಯದ

(6) ಈ ಕನ್ನೆಯನ್ ಪದ್ಮಜನ್ ಪಡೆದನ್ ಇಲ್ಲ ‘ಈ ಕನ್ಯೆಯನ್ನು ಪದ್ಮಜನು ಪಡೆದಿಲ್ಲ’

ಮೂಲದ್ರಾವಿಡದಲ್ಲಿ ಈ ಅಲ್ಲಗಳೆಯುವ ಒಟ್ಟಿಗೆ ಯಾವ ರೂಪ ಇದ್ದಿರಬಹುದು ಎಂಬ ವಿಶಯದಲ್ಲಿ ಒಮ್ಮತವಿಲ್ಲ. ಅದರ ಬಳಕೆಯಲ್ಲಿ ಕಾಣಿಸುವ ಕೆಲವು ಬದಲಾವಣೆಗಳನ್ನು ವಿವರಿಸುವುದಕ್ಕಾಗಿ ಅದಕ್ಕೆ ಅ ಸ್ವರದೊಂದಿಗೆ ‘ಲಾರಿಂಜಲ್’ ವ್ಯಂಜನ (5.4 ನೋಡಿ) ಸೇರಿರುವ *ಅಹ್ ರೂಪವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆಯುಂದು ಕ್ರುಶ್ಣಮೂರ್ತಿ (2003: 348) ವಾದಿಸಿದ್ದಾರೆ.

ಈ ಒಟ್ಟನ್ನು ಪಡೆದಿರುವ ಮತ್ತು ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾರೂಪಗಳು ಇವತ್ತಿನ ಬರಹ ಕನ್ನಡದಲ್ಲಿ ಮತ್ತು ಒಳನಾಡಿನ ಒಳ ನುಡಿಗಳಲ್ಲಿ ಉಳಿದಿಲ್ಲ. ಆದರೆ, ಕರಾವಳಿಯ ಒಳನುಡಿಗಳಲ್ಲಿ ಅವು ಉಳಿದಿದ್ದು, ಮುಂದಿನ ಸಮಯದ ಕೆಲಸಗಳನ್ನು ಅಲ್ಲಗಳೆಯುವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯವನ್ನು ಪರಿಶೀಲಿಸಬಹುದು.

(7ಕ) ಆನು ಅವನ ಮನೆಗೆ ಹೋಗೆ

‘ನಾನು ಅವನ ಮನೆಗೆ ಹೋಗಲಿಕ್ಕಿಲ್ಲ’’

ಹಿಂದಿನ ಸಮಯದ ಕೆಲಸವನ್ನು ಅಲ್ಲಗಳೆಯುವುದಕ್ಕಾಗಿ ಹವ್ಯಕ ಸಮಯದ ಕ್ರಿಯಾರೂಪದೊಂದಿಗೆ ಇಲ್ಲೆ

ಕನ್ನಡದಲ್ಲೂ ಹಿಂದಿನ ಪದವನ್ನೇ ಬಳಸಲಾಗುತ್ತದೆ.

(7ಚ) ಆನು ಅವನ ಮನೆಗೆ ಹೋಯಿದಿಲ್ಲೆ ‘ನಾನು ಅವನ ಮನೆಗೆ ಹೋಗಲಿಲ್ಲ’’

ಹೋಯಿದಿಲ್ಲೆ ಎಂಬುದರಲ್ಲಿ ಹೋಯಿದೆ ‘ಹೋಗಿದ್ದೇನೆ’ ಕ್ರಿಯಾ ರೂಪದೊಂದಿಗೆ ಇಲ್ಲೆ ‘ಇಲ್ಲ’ ಪದವನ್ನು ಬಳಸಲಾಗಿದೆ. ಇದಲ್ಲದೆ, ಹವ್ಯಕ ಕನ್ನಡದಲ್ಲಿ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳ ಅನಂತರವೂ ಇಲ್ಲೆ ಪದವನ್ನು ಬಳಸಲು ಸಾದ್ಯವಿದ್ದು (ಬತ್ತಿಲ್ಲೆ ‘ನಾನು ಬರುವುದಿಲ್ಲ’, ಬತ್ತವಿಲ್ಲೆ ‘ಅವರು ಬರುವುದಿಲ್ಲ’), ಅದು ಅಲ್ಲಗಳೆಯುವ ಒಟ್ಟಿರುವ ಮೇಲಿನ ಕ್ರಿಯಾರೂಪದಿಂದ ಅರ್ತದಲ್ಲಿ ಬೇರಾಗಿದೆ ಎಂಬುದನ್ನು ಗಮನಿಸಬಹುದು (ಹೋಗೆ ‘ಹೋಗಲಿಕ್ಕಿಲ್ಲ’, ಹೋವುತ್ತಿಲ್ಲೆ ‘ಹೋಗುವುದಿಲ್ಲ’).

ಬಡಗ ಕನ್ನಡವೂ ಹಳೆಗನ್ನಡದ ಈ ಅಲ್ಲಗಳೆಯುವ ರೂಪವನ್ನು ಉಳಿಸಿಕೊಂಡಿದೆ (ಬರ ‘ಅವನು ಬರಲಿಕ್ಕಿಲ್ಲ’, ತಿನ ‘ತಿನ್ನಲಿಕ್ಕಿಲ್ಲ’, ಓಡ ‘ಓಡಲಿಕ್ಕಿಲ್ಲ’). ಇದಲ್ಲದೆ, ಕ್ರಿಯಾಪದಗಳೊಂದಿಗೆ ಆರ್ ಎಂಬುದನ್ನು ಸೇರಿಸಿಯೂ ಅದು ಅಲ್ಲಗಳೆಯುವ ರೂಪವನ್ನು ಪಡೆಯಬಲ್ಲುದು (ಬರಾರ ‘ಅವನು ಬರಲಿಕ್ಕಿಲ್ಲ’).

ಇದಲ್ಲದೆ, ಇಲ್ಲೆ (ಇಲೆ) ‘ಇಲ್ಲ’ ಪದವನ್ನು ಬಳಸಿಯೂ ಬಡಗ ಕನ್ನಡದಲ್ಲಿ ಅಲ್ಲಗಳೆಯುವ ಕೂಡುಪದಗಳನ್ನು ತಯಾರಿಸಲು ಸಾದ್ಯವಿದೆ ‘ಬಂದಿರಲಿಲ್ಲ’, (ಬಪ್ಪಿಲೆ ಬಪ್ಪದಿಲ್ಲೆ ‘ಬಂದಿರಲಿಕ್ಕಿಲ್ಲ’).

‘(ಅವನು) ಬರಲಿಕ್ಕಿಲ್ಲ’, ಬಂದದಿಲ್ಲೆ

Eke →

8.5 ಆಡುಗ ಒಟ್ಟುಗಳು

ಮೂಲದ್ರಾವಿಡ ಕ್ರಿಯಾರೂಪಗಳಲ್ಲಿ ಸಮಯದ ಒಟ್ಟಿನ ಅನಂತರ ಆಡುಗ ಒಟ್ಟುಗಳು (ಕೆಲಸದ ಆಗುಗ ಇಲ್ಲವೇ ಮಾಡುಗನು ಆಡುಗನೇ, ಕೇಳುಗನೇ ಅತವಾ ಇತರರೇ ಎಂಬುದನ್ನು ಸೂಚಿಸುವ ಒಟ್ಟುಗಳು)

ಬರಬಲ್ಲುವಾಗಿದ್ದುವು. ಈ ‘ಆಡುಗ’ ಒಟ್ಟುಗಳ ಸ್ವರೂಪವೇನೆಂಬುದನ್ನು ಕೆಳಗೆ ವಿವರಿಸಲಾಗಿದೆ.

Eke →

8.5.1 ಆಡುಗ ಮತ್ತು ಕೇಳುಗರನ್ನು ಸೂಚಿಸುವ ಒಟ್ಟುಗಳು

(1) ಆಡುಗನನ್ನು ಸೂಚಿಸುವ ಒಟ್ಟು ಮೂಲದ್ರಾವಿಡದಲ್ಲಿ *ಏನ್ ಎಂಬ ರೂಪದಲ್ಲಿದ್ದಿರಬಹುದೆಂದು ಕಲ್ಪಿಸಲಾಗಿದೆ. ಹಳೆಗನ್ನಡದಲ್ಲಿ ಇದರ ಉದ್ದ ಸ್ವರ ಗಿಡ್ಡವಾಗಿದೆ (ಮಾೞ್ಪನ್, ಮಾಡಿದೆನ್) ಮತ್ತು ವಿಕಲ್ಪವಾಗಿ ಅದರ ಕೊನೆಯ ನಕಾರ ಬಿದ್ದುಹೋಗಿದೆ (ಮಾೞ್ಪ, ಮಾಡಿದೆ).

ಮೂಲದ್ರಾವಿಡದಲ್ಲೇನೇ ಇದಕ್ಕೆ (ಮತ್ತು ಕೇಳುಗನನ್ನು, ಹಾಗೂ ಅವರಿಬ್ಬರ ಬೇರೆ ಬೇರೆ ಕೂಡಿಕೆಗಳನ್ನು ಸೂಚಿಸುವ ಒಟ್ಟುಗಳಿಗೆ) ಉದ್ದ ಮತ್ತು ಗಿಡ್ಡ ಸ್ವರಗಳಿರುವ ಎರಡೆರಡು ರೂಪಗಳು (*ಏನ್ ಮತ್ತು *ಎನ್) ಇದ್ದಿರಬಹುದೆಂದು ಕೆಲವರ ಅಬಿಪ್ರಾಯ.

(2) ಕೇಳುಗನನ್ನು ಸೂಚಿಸುವ ಒಟ್ಟು ಮೂಲದ್ರಾವಿಡದಲ್ಲಿ *ಆಯ್ ಮತ್ತು *ಈ ಎಂಬ ಎರಡು ರೂಪಗಳಲ್ಲಿದ್ದಿರಬಹುದೆಂದು ಕಲ್ಪಿಸಲಾಗಿದೆ. ಹಳೆಗನ್ನಡದಲ್ಲಿ ಇದು ಅಯ್ ರೂಪದಲ್ಲಿ (ಉದ್ದಸ್ವರ ಗಿಡ್ಡವಾಗಿ) ಬಳಕೆ ಯಾಗುತ್ತದೆ (ಮಾೞ್ಪಯ್, ಮಾಡಿದಯ್).

(3) ಹಲವಚನದಲ್ಲಿ ಇವೆರಡಕ್ಕೆ ಮೂರು ಕೂಡಿಕೆಯ ರೂಪಗಳಿದ್ದಿರ ಬೇಕು (10.2 ನೋಡಿ). ಇದಕ್ಕಾಗಿ ಮೂಲದ್ರಾವಿಡಕ್ಕೆ (ಕ) ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಎಮ್ ಒಟ್ಟು, (ಚ) ಕೇಳುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಇರ್ ಒಟ್ಟು (ಮೊದಲಿಗೆ ಇದು *ಇಮ್ ಎಂದೇ ಇದ್ದಿರಬಹುದು) ಮತ್ತು (ಟ) ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಅಮ್ ಒಟ್ಟು ಎಂಬುದಾಗಿ ಮೂರು ಒಟ್ಟುಗಳನ್ನು ಕಲ್ಪಿಸಿಕೊಳ್ಳಲಾಗಿದೆ.

(4) ಇವುಗಳಲ್ಲಿ ಮೊದಲ ಎರಡು ಒಟ್ಟುಗಳು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿವೆ (ಮಾೞ್ಪಮ್, ಮಾಡಿದೆಮ್; ಮಾೞಿ್ಪರ್, ಮಾಡಿದಿರ್). ಆದರೆ ಮೂರನೆಯ ಒಟ್ಟು ಕೆಲವು ಕ್ರಿಯಾರೂಪಗಳಲ್ಲಿ

ಉಳಿದುಕೊಂಡಿದೆ (ಮಾಡುವಂ ‘ಮಾಡೋಣ’) ಮತ್ತು ಬೇರೆ ಕ್ರಿಯಾ ಕೂಡಿಕೆಯನ್ನು ರೂಪಗಳಲ್ಲಿ ಅದಕ್ಕೂ ಆಡುಗನೊಂದಿಗೆ ಇತರರ ಸೂಚಿಸುವ ಎಮ್ ಒಟ್ಟಿಗೂ ನಡುವಿರುವ ವ್ಯತ್ಯಾಸ ಅಳಿದುಹೋಗಿ, ಎಲ್ಲಾ ಸಂದರ್ಬಗಳಲ್ಲೂ ಎಮ್ ಎಂಬುದೇ ಬಳಕೆಗೆ ಬಂದಿದೆ.

ಉದಾಹರಣೆಗಾಗಿ, ಪಂಪಬಾರತದ ಕೆಳಗಿನ ಬಳಕೆಯನ್ನು ಗಮನಿಸ

ಬಹುದು.

ನಾಮೆಲ್ಲಂ ಒಂದೆ ಗರುಡಿಯೊಳ್ ಓದಿದ ಮಾನಸರೆವು ‘ನಾವೆಲ್ಲರೂ ಒಂದೇ ಗರಡಿಯಲ್ಲಿ ಕಲಿತ ಮನುಶ್ಯರಾಗಿದ್ದೇವೆ’’

(8)ನೇ ವಾಕ್ಯದಲ್ಲಿ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ನಾಮ್ ಆಡುಗ ಪದ ಬಂದಿದೆಯಾದರೂ ಕ್ರಿಯಾಪದದ ಜಾಗದಲ್ಲಿ ಬಂದಿರುವ ನಾಮಪದದೊಂದಿಗೆ ಅಮ್ ಒಟ್ಟು ಬಂದಿಲ್ಲ; ಅದಕ್ಕೆ ಬದಲು ಎಮ್ (<ಎವು) ಒಟ್ಟೇ ಬಂದಿದೆ.

ಮತ್ತು

ಕೇಳುಗರನ್ನು

Eke →

8.5.2 ಇತರರನ್ನು ಸೂಚಿಸುವ ಒಟ್ಟುಗಳು

ಇತರರನ್ನು ಸೂಚಿಸಬೇಕಾದಾಗ ಮೂಲದ್ರಾವಿಡದಲ್ಲಿ ಯಾವ ರೀತಿಯ ಒಟ್ಟುಗಳು ಬಳಕೆಯಲ್ಲಿದ್ದಿರಬಹುದು ಎಂಬ ವಿಶಯದಲ್ಲಿ ವಿದ್ವಾಂಸರೊಳಗೆ ಒಮ್ಮತವಿಲ್ಲ. ಈ ಒಟ್ಟುಗಳಲ್ಲಿ ಬೇರೆ ಬೇರೆ ದ್ರಾವಿಡ ನುಡಿಗಳು ಬೇರೆ ಬೇರೆ ರೀತಿಯ ಲಿಂಗಬೇದವನ್ನು ತೋರಿಸುತ್ತಿರುವುದೇ ಇದಕ್ಕೆ ಕಾರಣ.

ಹೊರತುಪಡಿಸಿ

ತೆಂಕುದ್ರಾವಿಡ ನುಡಿಗಳಲ್ಲಿ ಮನುಶ್ಯ ಮತ್ತು ಇತರ ಎಂಬ ಲಿಂಗಬೇದ ವಿದೆ. ಒರ್ವಚನದಲ್ಲಿ ಮಾತ್ರ ಮನುಶ್ಯರೊಳಗೆ ಗಂಡಸು ಮತ್ತು ಹೆಂಗಸು ಎಂಬ ಹೆಚ್ಚಿನ ಲಿಂಗಬೇದವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಕ್ರಿಯಾರೂಪಗಳನ್ನು ಗಮನಿಸಬಹುದು.

ಒರ್ವಚನ

ಹಲವಚನ

ಮನುಶ್ಯ, ಗಂಡುಸು ಹೆಂಗುಸು

ಹೇಳುತ್ತಾನೆ ಹೇಳುತ್ತಾಳೆ ಹೇಳುತ್ತದೆ

ಹೇಳುತ್ತಾರೆ ಹೇಳುತ್ತವೆ

ಇದಕ್ಕೆ ಬದಲು, ನಡುದ್ರಾವಿಡ ನುಡಿಗಳಲ್ಲಿ ಗಂಡುಸು (ಮನುಶ್ಯ) ಮತ್ತು ಇತರ ಎಂಬ ಲಿಂಗಬೇದವಿದೆ (ತೆಲುಗು ಇದಕ್ಕೆ ಅಪವಾದ) ಮತ್ತು ಬಡಗು ದ್ರಾವಿಡ ನುಡಿಗಳಾದ ಕುಡುಕ್, ಮಾಲ್ತೋಗಳಲ್ಲಿ ಮತ್ತು ತೆಲುಗು ನುಡಿಯಲ್ಲಿ ಒರ್ವಚನದಲ್ಲಿ ಮಾತ್ರ ಗಂಡುಸು ಮತ್ತು ಇತರ ಎಂಬ ಬೇದವಿದ್ದು, ಹಲವಚನದಲ್ಲಿ ಮತ್ತು ಇತರ ಎಂಬ ಲಿಂಗಬೇದವಿದೆ.

ಮನುಶ್ಯ

ಈ ಮೂರು ರೀತಿಯ ಲಿಂಗಬೇದಗಳು ಇವತ್ತಿನ ದ್ರಾವಿಡ ನುಡಿಗಳಲ್ಲಿ ಕಾಣಿಸಿಕೊಳ್ಳಲು ಮೂಲದ್ರಾವಿಡದ ಎಂತಹ ಪರಿಸ್ತಿತಿ ಕಾರಣವಿರಬಹುದು ಸೂಚಿಸಿದ ಹಾಗೆ, ಈ ಎಂಬುದನ್ನು ತಿಳಿಯಬೇಕಾಗಿದೆ. ಮೇಲೆ ವಿಶಯದಲ್ಲಿ ವಿದ್ವಾಂಸರೊಳಗೆ ಒಮ್ಮತವಿಲ್ಲ. ಒರ್ವಚನದಲ್ಲಿ (1) ಗಂಡುಸು *ಅನ್ ಮತ್ತು (2) ಇತರ *ಅತ್ ಎಂಬ ಬೇದವಿದ್ದು, ಹಲವಚನದಲ್ಲಿ (1) ಗಂಡುಸು ಇಲ್ಲವೇ ಮನುಶ್ಯ *ಅರ್ ಮತ್ತು (2) ಇತರ *ಅವ್ ಎಂಬ ಬೇದವಿದ್ದಿರಬಹುದೆಂದು ಕೆಲವರ ಮತ.

ತೆಂಕುದ್ರಾವಿಡದಲ್ಲಿ ಹೆಂಗಸನ್ನು ಸೂಚಿಸುವುದಕ್ಕಾಗಿ ಒರ್ವಚನದಲ್ಲಿ *ಅಳ್ ಎಂಬ ಬೇರೆಯೇ ಒಂದು ಒಟ್ಟು ಅನಂತರದ ಕಾಲದಲ್ಲಿ ಬಳಕೆಗೆ ಬಂದಿರಬೇಕು.

ಹಳೆಗನ್ನಡದಲ್ಲಿ ಮೂಲದ್ರಾವಿಡದ ಈ ಆಡುಗ ಒಟ್ಟುಗಳು ಹೆಚ್ಚು ಬದಲಾಗದೆ ಉಳಿದಿವೆ. ಮನುಶ್ಯರನ್ನು ಬಿಟ್ಟು ಇತರರನ್ನು ಸೂಚಿಸುವ *ಅತ್ ಮತ್ತು *ಅವ್ ಒಟ್ಟುಗಳು ಮಾತ್ರ ಉದು, ತು, ಉವು ಎಂಬುದಾಗಿ ಬದಲಾಗಿವೆ.

Eke →

8.5.3 ಕನ್ನಡದ ಒಳನುಡಿಗಳಲ್ಲಿ ಆಡುಗ ಒಟ್ಟುಗಳು

ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಲ್ಲಿ (1) ಆಡುಗ ಮತ್ತು ಕೇಳುಗರ ಕೂಡಿಕೆ ಹಾಗೂ (2) ಆಡುಗ ಮತ್ತು ಇತರರ ಕೂಡಿಕೆಗಳ ನಡುವೆ ಮೂಲದ್ರಾವಿಡದಲ್ಲಿದ್ದ ಹಳೆಗನ್ನಡದಲ್ಲಿ ಉಳಿದಿಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು. ಒಳನಾಡಿನ ಒಳನುಡಿಗಳಲ್ಲೂ ಈ ವ್ಯತ್ಯಾಸ ಉಳಿದಿಲ್ಲ.

ವ್ಯತ್ಯಾಸ

ಮತ್ತು

(1) ಆದರೆ, ಬಡಗ ಕನ್ನಡದಲ್ಲಿ ಇದು ಉಳಿದುಕೊಂಡಿದೆ. ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪಗಳ ಕೊನೆಯಲ್ಲಿ ಅದು ಓ ಒಟ್ಟನ್ನು ಬಳಸುತ್ತದೆ ಮತ್ತು ಕೇಳುಗನನ್ನು ಹೊರತುಪಡಿಸಿ ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಇಯೊ ಒಟ್ಟನ್ನು ಬಳಸುತ್ತದೆ (ಬಾಲಕ್ರುಶ್ಣನ್ 1999).

(9ಕ) ನಂಗ ಬಂದೋ

‘ನಾವು (ನಾನು ಮತ್ತು ನೀನು) ಬಂದೆವು’’

(9ಚ) ಎಂಗ ಬಂದೆಯೊ

‘ನಾವು (ನಾನು ಮತ್ತು ಅವನು) ಬಂದೆವು’’

ಹವ್ಯಕ

ಕರಾವಳಿಯ

ವ್ಯತ್ಯಾಸ ಉಳಿದುಕೊಂಡಿದೆ; ಆದರೆ ಅದನ್ನು ಸೂಚಿಸುವುದಕ್ಕಾಗಿ ಮೇಲಿನ ಎರಡು ಒಟ್ಟುಗಳನ್ನು ಬಳಸುವ ಬದಲು, ಅದರಲ್ಲಿ ಬೇರೆಯೇ ಒಂದು ಕ್ರಮ ಬಳಕೆಗೆ ಬಂದಿದೆ.

ಕನ್ನಡದಲ್ಲೂ ಈ

ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಎಮ್ ಒಟ್ಟು ಎಯೊᵒ ರೂಪದಲ್ಲಿ ಬಳಕೆಯಾಗುತ್ತದೆ ಮತ್ತು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸಲು ಬಳಸುವ ತು (ದು) ಒಟ್ಟನ್ನೇ ಬಳಸಲಾಗುತ್ತದೆ. ಹೀಗೆ ಮಾಡುವುದರ ಮೂಲಕ, ಅದರಲ್ಲಿ ಮೇಲಿನ ಮೂರು ಕೂಡಿಕೆಗಳ ಸೂಚಿಸಲು ನಡುವಿರುವ

ಕ್ರಿಯಾರೂಪದಲ್ಲೂ

ವ್ಯತ್ಯಾಸವನ್ನು

ಸಾದ್ಯವಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಹವ್ಯಕ ವಾಕ್ಯಗಳಿಂದ ತಿಳಿಯಬಹುದು.

(10ಕ) ಎಂಗೊ ಹೋವುತ್ತೆಯೊᵒ

‘ನಾವು (ನಾನು ಮತ್ತು ಅವನು) ಹೋಗುತ್ತೇವೆ’’

(10ಚ) ನಿಂಗೊ ಹೋವುತ್ತಿ

‘ನೀವು (ನೀನು ಮತ್ತು ಅವನು) ಹೋಗುತ್ತೀರಿ’’

(10ಟ) ನಾವು ಹೋವುತ್ತು

‘ನಾವು (ನಾನು ಮತ್ತು ನೀವು) ಹೋಗುತ್ತೇವೆ’’

(3) ಹಳೆಗನ್ನಡದಲ್ಲಿದ್ದ ಇತರ ಆಡುಗ ಒಟ್ಟುಗಳ ರೂಪದಲ್ಲೂ ಕೆಲವು ಬದಲಾವಣೆಗಳು ಇವತ್ತಿನ ಕನ್ನಡದ ಒಳನುಡಿಗಳಲ್ಲಿ ನಡೆದಿವೆ. ಎನ್ ಮತ್ತು ಅನ್ ಒಟ್ಟುಗಳ ಕೊನೆಯ ನಕಾರ ಅವುಗಳ ಮುಂದೆ ಬೇರೆ ಒಟ್ಟು ಬಾರದಿರುವಲ್ಲಿ ಬಿದ್ದು ಹೋಗಿರುವುದು ಇಂತಹ ಒಂದು ಬದಲಾವಣೆ (ಬಂದೆನ್ >ಬಂದೆ, ಬಂದನ್>ಬಂದ). ಕೇಳುಗನನ್ನು ಸೂಚಿಸುವ ಅಯ್ ಒಟ್ಟಿನ ಬದಲು ಇ ಒಟ್ಟು ಬಳಕೆಗೆ ಬಂದಿರುವುದು ಮಾಡಿದಿ, ಇನ್ನೊಂದು ಪೇಳಿದಯ್>ಹೇಳಿದಿ).

(ಮಾಡಿದಯ್>

ಬದಲಾವಣೆ

ಇದಲ್ಲದೆ, ಇರ್ ಎಂಬುದು ಇರಿ ರೂಪಕ್ಕೆ ಮತ್ತು ಅರ್ ಎಂಬುದು

ಅರು ರೂಪಕ್ಕೆ ಬದಲಾಗಿವೆ (ಬಂದಿರ್>ಬಂದಿರಿ, ಬಂದರ್>ಬಂದರು).

ಒರ್ವಚನದಲ್ಲಿ ಇತರರನ್ನು ಸೂಚಿಸುವ *ಅತ್ ಒಟ್ಟಿಗೆ ಹಳೆಗನ್ನಡ ದಲ್ಲೇನೇ ಹಲವು ರೂಪಗಳಿದ್ದುವು. ಹೆಚ್ಚಿನೆಡೆಗಳಲ್ಲೂ ಇದಕ್ಕೆ ಉದು ರೂಪ ವಿತ್ತು (ಇರ್ದುದು, ಬರ್ಪುದು, ಕೊಟ್ಟುದು). ಆದರೆ ಹಿಂದಿನ ಸಮಯದ ಒಟ್ಟು ತ್ ಇಲ್ಲವೇ ಸೊನ್ನೆ ರೂಪದಲ್ಲಿರುವಲ್ಲಿ ಅದಕ್ಕೆ ತು ರೂಪವಿತ್ತು (ಮಾಡಿತ್ತು, ಅಡಂಗಿತ್ತು, ಪೋಯ್ತು, ಬಿೞ್ದತ್ತು).

ಅಲ್ ‘ಅಲ್ಲ’ ಕ್ರಿಯಾಪದದ ಅನಂತರವೂ ತು ರೂಪವಿತ್ತು (ಅಲ್ತು) ಮತ್ತು ಉಳ್ ‘ಇರು’ ಕ್ರಿಯಾಪದದ ಅನಂತರ ಟು ರೂಪವಿತ್ತು

ಹೊಸಗನ್ನಡದಲ್ಲಿ ಇದು ಹಿಂದಿನ ಸಮಯವನ್ನು ಸೂಚಿಸುವ ಒಟ್ಟಿನ ಅನಂತರ ಎಲ್ಲಾ ಕ್ರಿಯಾರೂಪಗಳಲ್ಲೂ ತು ರೂಪದಲ್ಲಿ ಕಾಣಿಸುತ್ತದೆ (ಬಿಟ್ಟಿತು, ತಿಂದಿತು, ಬರೆಯಿತು, ತಿಳಿಯಿತು, ನುಂಗಿತು).

(4) ಇತರರನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಮನುಶ್ಯರು ಮತ್ತು ಇತರರು ಎಂಬ ವ್ಯತ್ಯಾಸ ತೆಂಕುದ್ರಾವಿಡದಲ್ಲಿತ್ತು ಮತ್ತು ಒರ್ವಚನದಲ್ಲಿ ಮಾತ್ರ ಮನುಶ್ಯರೊಳಗೆ ಗಂಡುಸು ಮತ್ತು ಹೆಂಗುಸು ಎಂಬ ವ್ಯತ್ಯಾಸವಿತ್ತು ಎಂಬುದನ್ನು ನಾವು ಮೇಲೆ (8.5.2)ರಲ್ಲಿ ನೋಡಿರುವೆವು. ಈ ವ್ಯತ್ಯಾಸ ಹಳೆಗನ್ನಡದಲ್ಲಿ ಮತ್ತು ಒಳನಾಡಿನ ಕನ್ನಡ ನುಡಿಗಳಲ್ಲಿ ಉಳಿದುಕೊಂಡಿದೆ; ಆದರೆ, ಕರಾವಳಿಯ ಒಳನುಡಿಗಳಲ್ಲಿ ಬೇರೆಯೇ ವ್ಯತ್ಯಾಸ ಬಳಕೆಗೆ

(ಕ) ಹಾಲಕ್ಕಿ ಕನ್ನಡದಲ್ಲಿ ಗಂಡಸರು ಮತ್ತು ಇತರರು ಎಂಬ ವ್ಯತ್ಯಾಸ

ಬಳಕೆಗೆ ಬಂದಿದೆ (ಆಚಾರ್ಯ 1967).

ಮಾಡಿದ ‘ಅವನು ಮಾಡಿದ’’ ಮಾಡುತು ‘ಅವಳು ಮಾಡಿದಳು, ಅದು ಮಾಡಿತು’’

(ಚ) ಹವ್ಯಕ ಕನ್ನಡದಲ್ಲಿ ಬೇರೊಂದು ರೀತಿಯ ಬದಲಾವಣೆ ನಡೆದಿದೆ. ಒರ್ವಚನದಲ್ಲಿ ಮೂರು ಲಿಂಗರೂಪಗಳು ಉಳಿದಿವೆಯಾದರೂ ಮಾತ್ರ ಮೊದಲ ಎರಡು ಕಾಣಿಸಿಕೊಳ್ಳುತ್ತದೆ. ಇತರ ಸಂದರ್ಬಗಳಲ್ಲೆಲ್ಲ ಮೂರನೆಯ ರೂಪವೇ ಬಳಕೆಯಾಗುತ್ತದೆ.

ರೂಪಗಳ ಬಳಕೆ

ಗವ್ರವಾರ್ತದಲ್ಲಿ

(11ಕ) ಅವ ᵒ ಬಂದ ᵒ

‘ಅವನು ಬಂದ’ (ಗವ್ರವಾರ್ತದಲ್ಲಿ)

(11ಚ) ಅವ ಬಂದ

‘ಅವಳು ಬಂದಳು’ (ಗವ್ರವಾರ್ತದಲ್ಲಿ)

(11ಟ) ಅದು ಬಂತು

‘ಅವನು ಬಂದ, ಅವಳು ಬಂದಳು, ಅದು ಬಂತು’’

(11ಕ)ದಲ್ಲಿ ಹಳೆಗನ್ನಡದಲ್ಲಿದ್ದ ಅವನ್ ಮತ್ತು ಬಂದನ್ ರೂಪಗಳ ಕೊನೆಯ ನಕಾರ ಬಿದ್ದು ಹೋಗಿ ಅದರ ಹಿಂದಿನ ಸ್ವರ ಮೂಗಿಸಿದ ಸ್ವರ ವಾಗಿದೆ; ಇದಕ್ಕೆ ಬದಲು (11ಚ)ದಲ್ಲಿ ಅವಳ್ ಮತ್ತು ಬಂದಳ್ ಎಂಬವುಗಳಲ್ಲಿದ್ದ ಳಕಾರ ಬಿದ್ದುಹೋಗಿ ಅದರ ಹಿಂದಿನ ಸ್ವರ ಬದಲಾಗದೆ ಉಳಿದಿದೆ. ಇದರಿಂದಾಗಿ, ಈ ಎರಡು ರೂಪಗಳ ನಡುವಿನ ವ್ಯತ್ಯಾಸ ಉಳಿದುಕೊಂಡಿದೆ.

ಹಲವಚನದಲ್ಲಿ ಎಲ್ಲಾ

ಸಂದರ್ಬಗಳಲ್ಲೂ ಒಂದೇ

ರೂಪ ಬಳಕೆಯಾಗುತ್ತದೆ ಮತ್ತು ಇತರ ಕನ್ನಡ ಒಳನುಡಿಗಳಲ್ಲಿ ಕಾಣಿಸುವ ಮನುಶ್ಯ-ಇತರ ಲಿಂಗಬೇದ ಹವ್ಯಕದಲ್ಲಿ ಇಲ್ಲವಾಗಿದೆ. ಇದನ್ನು ಕೆಳಗೆ ಕೊಟ್ಟಿರುವ (11ತ) ವಾಕ್ಯದಲ್ಲಿ ಕಾಣಬಹುದು.

(11ತ) ಅವು ಬಂದವು

‘ಅವರು ಬಂದರು, ಅವು ಬಂದುವು’

ಗವ್ರವಾರ್ತವನ್ನು ಸೂಚಿಸಬೇಕಾದಲ್ಲೂ ಮೇಲಿನ (ಅವು ‘ಅವರು’)

ರೂಪವೇ ಹವ್ಯಕದಲ್ಲಿ ಬಳಕೆಯಾಗುತ್ತದೆ.

(ಟ) ಬಡಗ ಕನ್ನಡ ಈ ವಿಶಯದಲ್ಲಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ. ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಅದು ಒರ್ವಚನದಲ್ಲಿ ಗಂಡಸು (ಅನ), ಹೆಂಗಸು (ಇಯ) ಮತ್ತು ಇತರ (ಅರ) ಎಂಬ ಮೂರು ಒಟ್ಟುಗಳನ್ನು ಬಳಸುತ್ತದೆ. ಆದರೆ ಹಲವಚನದಲ್ಲಿ ಮನುಶ್ಯರನ್ನು ಸೂಚಿಸುವ ಆರ ಎಂಬ ಒಂದು ಒಟ್ಟನ್ನು ಮಾತ್ರ ಬಳಸುತ್ತದೆ.

ಹಿಂದಿನ

ಬದಲು,

ಸಮಯವನ್ನು

ಸೂಚಿಸುವ ಕ್ರಿಯಾರೂಪಗಳಲ್ಲಿ ಅದು ಒರ್ವಚನದಲ್ಲೂ ಮನುಶ್ಯರನ್ನು ಸೂಚಿಸುವ (ಅ) ಮತ್ತು ಇತರರನ್ನು ಸೂಚಿಸುವ (ಅ/ಇತು) ಎಂಬ ಎರಡು ಒಟ್ಟುಗಳನ್ನು ಮಾತ್ರ ಬಳಸುತ್ತದೆ. ಇದಲ್ಲದೆ, ಹವ್ಯಕದ ಹಾಗೆ, ಇತು ಒಟ್ಟನ್ನು ಅದು ಮನುಶ್ಯರನ್ನು (ಹೆಂಗಸರನ್ನು ಮತ್ತು ಗಂಡಸರನ್ನು) ಸೂಚಿಸಬೇಕಾಗಿರುವಲ್ಲೂ ಬಳಸಬಲ್ಲುದು.

Eke →

8.5.4 ಆಡುಗ ಇಲ್ಲವೇ ಕೇಳುಗನನ್ನು ಸೂಚಿಸುವ ಇನ್ನೊಂದು ಒಟ್ಟು

ಮೂಲದ್ರಾವಿಡದಲ್ಲಿ ವಾಕ್ಯದ ಆಡುಗ ಇಲ್ಲವೇ ಕೇಳುಗನು

(1) ಕೆಲಸದ ಆಗುಗ ಇಲ್ಲವೇ ಕೊನೆಯಾಗಿದ್ದಲ್ಲಿ ಇಲ್ಲವೇ
(2) ಕೆಲಸವನ್ನು ವಾಕ್ಯದ ಆಡುಗನಿಗಾಗಿ ಇಲ್ಲವೇ ಕೇಳುಗನಿಗಾಗಿ

ನಡೆಸುತ್ತಿದ್ದಲ್ಲಿ

ಅಂತಹ ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಿಗೂ ಇತರ ಕ್ರಿಯಾರೂಪ ಗಳಿಗೂ ನಡುವೆ ವ್ಯತ್ಯಾಸವಿತ್ತೆಂದು ಕೆಲವರು ವಿದ್ವಾಂಸರು ವಾದಿಸಿದ್ದಾರೆ (ಎಮೆನೋ 1945 ನೋಡಿ). ನಡುದ್ರಾವಿಡ ವಿಬಾಗಕ್ಕೆ ಸೇರುವ ಕೂಯಿ ನುಡಿಯಲ್ಲಿ ಇಂತಹ ವ್ಯತ್ಯಾಸ ಕಾಣಿಸುವುದೇ ಇದಕ್ಕೆ ಆದಾರ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕೂಯಿ ನುಡಿಯ ಕ್ರಿಯಾರೂಪ

ಗಳನ್ನು ಪರಿಶೀಲಿಸಬಹುದು.

ಇತರರನ್ನು ಸೂಚಿಸುವವು

ಆಡುಗ-ಕೇಳುಗರನ್ನು ಸೂಚಿಸುವವು

ಸೀಇ ’ಅವರಿಗೆ ಕೊಡುತ್ತೇನೆ’ ಸೀನೆ ’ಅವನಿಗೆ ಕೊಡುತ್ತಾಳೆ’ ’ಅವನನ್ನು ಎಳೆಯುತ್ತೇನೆ’ ಪೆಹಿಇ ‘ಅವನನ್ನು ಓಡಿಸುತ್ತೇನೆ’ ವೇಇ ‘ಅವನಿಗೆ ಹೊಡೆಯುತ್ತೇನೆ’

ಸೀಅಇ ’ನಿಮಗೆ ಕೊಡುತ್ತೇನೆ’ ಸೀಅನೆ ‘ನನಗೆ ಕೊಡುತ್ತಾಳೆ’ ಜೆಜಇ ’ನಿನ್ನನ್ನು ಎಳೆಯುತ್ತೇನೆ’ ಪೆಹಇ ’ನಿನ್ನನ್ನು ಓಡಿಸುತ್ತೇನೆ’ ವೇತಇ ’ನಿನಗೆ ಹೊಡೆಯುತ್ತೇನೆ’ ತುಗ್ದಇ ’ನಿನಗಾಗಿ ಕಟ್ಟುತ್ತೇನೆ’

’ಅವನಿಗಾಗಿ ಕಟ್ಟುತ್ತೇನೆ’ ’ಅವನೆಡೆಗೆ ಕೈ ಹಿಡಿಯುತ್ತೇನೆ’ ಎಂಡಇ ’ನಿನ್ನ ಕಡೆಗೆ ಕೈಹಿಡಿಯುತ್ತೇನೆ’ ’ಅವನು ಹೇಳಿದ್ದು ಕೇಳಿಸುತ್ತದೆ

ವೆಂಜಇ ‘ನೀನು ಹೇಳಿದ್ದು ಕೇಳಿಸುತ್ತದೆ

ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಒಂದು ಹೆಚ್ಚಿನ ಅಕಾರ ಬಂದಿರುವುದನ್ನು ಕಾಣಬಹುದು. (ಇದರೊಂದಿಗೆ ಜೆಜಇ, ಪೆಹಇ, ವೇತಇ ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಿಸುವ ಹಾಗೆ ಜ್, ಇ, ತ್, ದ್, ಡ್ ಮೊದಲಾದವು ಬಂದಿರುವುದಕ್ಕೆ ಕೂಯಿ ನುಡಿಯ ಸೇರಿಕೆಯ ನಿಯಮಗಳು ಕಾರಣ.)

ಕನ್ನಡದಲ್ಲಿ ಮತ್ತು ಇತರ ದ್ರಾವಿಡ ನುಡಿಗಳಲ್ಲಿ ಈ ಒಟ್ಟು ಹೆಚ್ಚಿನ ಮಟ್ಟಿಗೂ ಇಲ್ಲವಾಗಿದೆ. ಬಾ ಮತ್ತು ತಾ ಕ್ರಿಯಾಪದಗಳಿಗಿರುವ ಬಾರದೆ, ತಾರದೆ ರೂಪಗಳಲ್ಲಿ ಕಾಣಿಸುವ ಆರ್ ಎಂಬುದು ಈ ಒಟ್ಟಿನ ಪಳೆಯಳಿಕೆ ಯಾಗಿರಬಹುದು. ಆದರೆ, ಈ ಕ್ರಿಯಾಪದಗಳ ಬರುತ್ತಾ, ಬರಲು ಮೊದಲಾದ ರೂಪಗಳಿಗೆ ಅಲ್ಲಗಳೆಯುವ ಅರ್ತವಿಲ್ಲವಾದರೂ ಅವುಗಳಲ್ಲಿ ಅರ್ ಅಂಶ ಉಳಿದಿರುವುದು ಈ ವಿಶಯದಲ್ಲಿ ಸಂಶಯಕ್ಕೆಡೆಮಾಡಿದೆ.

Eke →

8.6 ಕೆಲಸವನ್ನು ಮಾಡಿಸುವ ಕ್ರಿಯಾರೂಪಗಳು

(1) ಕೇಳುಗನ ಮೂಲಕ ಕೆಲಸವನ್ನು ಮಾಡಿಸುವುದಕ್ಕಾಗಿ ಕ್ರಿಯಾಪದವನ್ನು ಹಾಗೆಯೇ ಯಾವ ಒಟ್ಟನ್ನೂ ಸೇರಿಸದೆ ಬಳಸುವ ಕ್ರಮ ಮೂಲದ್ರಾವಿಡ ದಲ್ಲೇನೇ ಬಳಕೆಯಲ್ಲಿದ್ದಿರಬೇಕು ಮತ್ತು ಇದೇ ಕ್ರಮ ಕನ್ನಡದಲ್ಲೂ ಉಳಿದುಕೊಂಡಿದೆ.

ಹಲವರು ಕೇಳುಗರಿಂದ ಇಲ್ಲವೇ ಕೇಳುಗ ಮತ್ತು ಇತರರಿಂದ ಕೆಲಸವನ್ನು ಮಾಡಿಸಬೇಕಾದಲ್ಲಿ ಕ್ರಿಯಾಪದಕ್ಕೆ ನೇರವಾಗಿ ಹಲವಚನದ ಒಟ್ಟನ್ನು ಸೇರಿಸಿ ಬಳಸಲಾಗುತ್ತಿತ್ತು. ಹಳೆಗನ್ನಡದಲ್ಲಿ ಇದು ಇಮ್ ರೂಪದಲ್ಲಿತ್ತು (ಪೇಳಿಂ ‘ಹೇಳಿ(ರಿ)’, ಮಾಡಿಂ ‘ಮಾಡಿ(ರಿ)’). ಇವತ್ತಿನ ಬರಹ ಕನ್ನಡದಲ್ಲಿ ಅದು ಇರಿ ಇಲ್ಲವೇ ಇ ರೂಪದಲ್ಲಿದೆ.

ಮೂಲದ್ರಾವಿಡಕ್ಕೆ ಹಲವಚನದ *ಇಮ್ (ಉಮ್) ಒಟ್ಟನ್ನು ಕಲ್ಪಿಸಿ ಕೊಳ್ಳಲಾಗಿದೆ. ಬರಹ ಕನ್ನಡದ ಇರಿ ರೂಪ ಮೇಲೆ (8.5.1)ರಲ್ಲಿ ವಿವರಿಸಿದ ಕೇಳುಗ+ಇತರರನ್ನು ಸೂಚಿಸುವ ಇರಿ (ಈರಿ) ಒಟ್ಟಿನ (ಹೇಳಿದಿರಿ, ಹೇಳುತ್ತೀರಿ) ವಿಸ್ತರಣೆಯಾಗಿರಬಹುದು.

ಕೆಲಸವನ್ನು

ಮಾಡದಂತೆ

(ಪೋಗಲ್

ತಡೆಯುವುದಕ್ಕಾಗಿ ಕ್ರಿಯಾಪದದೊಂದಿಗೆ ಅಲ್ ಒಟ್ಟನ್ನು ಬಳಸುವ ಕ್ರಮ ಹಳೆಗನ್ನಡದಲ್ಲಿ ನೋಡಲ್ ಬಳಕೆಯಲ್ಲಿತ್ತು ‘ನೋಡಬೇಡ’). ಇದಕ್ಕೆ ಇಮ್ ಒಟ್ಟನ್ನು ಸೇರಿಸಿ ಹಲವಚನದ ರೂಪವನ್ನು ಪಡೆಯಬಹುದು (ಪೋಗಲಿಂ ‘ಹೋಗ ಬೇಡಿ’). ಈ ಅಲ್ ಕ್ರಿಯಾಪದದಿಂದ ಬಂದಿರಬೇಕೆಂದು ಊಹಿಸಲಾಗಿದೆ.

‘ಹೋಗಬೇಡ’,

ಮೂಲದ್ರಾವಿಡದ

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಈ ಒಟ್ಟು ಉಳಿದಿರುವ ಹಾಗೆ ಕಾಣಿಸುವುದಿಲ್ಲ. ಅದರ ಬದಲು ಬೇಡ (ಬೇಡಿ(ರಿ)) ರೂಪವೇ ಬಳಕೆಗೆ ಬಂದಿದೆ. ಹವ್ಯಕ ಕನ್ನಡದಲ್ಲಿ ಇದು ಡ ಒಟ್ಟಾಗಿ ಬದಲಾಗಿದೆ (ಹೋಗಡ ‘ಹೋಗಬೇಡ’, ಬರಡಿ ‘ಬರಬೇಡಿ’).

ಹಳೆಗನ್ನಡದಲ್ಲಿ

ಸೂಚಿಸುವುದಕ್ಕಾಗಿ

(3) ಆಡುಗನು ಒಂದು ಕೆಲಸವನ್ನು ಕೇಳುಗನೊಂದಿಗೆ ನಡೆಸುವ ಬಯಕೆಯನ್ನು ಕ್ರಿಯಾಪದಕ್ಕೆ ಮುಂದಿನ ಸಮಯದ ಪ್ (ವ್) ಒಟ್ಟನ್ನು ಮತ್ತು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ಅಮ್ ಒಟ್ಟನ್ನು ಬಳಸಿರುವ ಮಾಡುವಂ ‘ಮಾಡೋಣ’, ಪೋಪಂ ‘ಹೋಗೋಣ’, ತೋಱುವಂ ‘ತೋರಿಸೋಣ’) ರೂಪಗಳನ್ನು ಬಳಸಲಾಗುತ್ತಿತ್ತು.

ಹಳೆಗನ್ನಡದ ಈ ಕ್ರಿಯಾರೂಪ ಮೂಲದ್ರಾವಿಡದಲ್ಲಿ ಆಡುಗ ಮತ್ತು ಕೇಳುಗರು ಒಟ್ಟಾಗಿ ಮುಂದಿನ ಸಮಯದಲ್ಲಿ ನಡೆಸುವ ಕೆಲಸವನ್ನು ತಿಳಿಸು ವಂತಹ ಕ್ರಿಯಾರೂಪವಾಗಿದ್ದಿರಬೇಕು. ಮುಂದಿನ ಸಮಯದ ಪ್ (ವ್) ಒಟ್ಟಿನೊಂದಿಗೆ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ *ಅಮ್ ಒಟ್ಟು ಬಂದಿರುವ ಈ ಕ್ರಿಯಾರೂಪಕ್ಕೆ ಹಳೆಗನ್ನಡದಲ್ಲಿ ಮೇಲೆ ಸೂಚಿಸಿದಂತಹ ಬೇರೆಯೇ ಅರ್ತ ಬಳಕೆಗೆ ಬಂದಿದೆ.

ಕರಾವಳಿಯ ಹವ್ಯಕ ಕನ್ನಡದಲ್ಲಿ ಹಳೆಗನ್ನಡದ ಈ ಕ್ರಿಯಾರೂಪ ಹಳೆಗನ್ನಡದ ಅರ್ತದಲ್ಲೇನೇ ಉಳಿದುಕೊಂಡಿದೆ. ಅದರ ಅಮ್ ಒಟ್ಟು

ಮಾತ್ರ ಒᵒ ಎಂಬುದಾಗಿ (ಎಂದರೆ ಮೂಗಿಸಿದ ಒಕಾರವಾಗಿ) ಬದಲಾಗಿದೆ (ಮಾಡುವೊᵒ ‘ಮಾಡೋಣ’, ಹೋಪೊᵒ ‘ಹೋಗೋಣ’ ಉಂಬೊᵒ ‘ಊಟ ಮಾಡೋಣ’).

ಕನ್ನಡದ ಇತರ ಒಳನುಡಿಗಳಲ್ಲಿ ಈ ಕ್ರಿಯಾರೂಪ ಉಳಿದಿಲ್ಲ. ಅದಕ್ಕೆ ಬದಲು, ಕ್ರಿಯಾಪದಕ್ಕೆ ನೇರವಾಗಿ ಓಣ ಒಟ್ಟನ್ನು ಸೇರಿಸಿ ರಚಿಸಿರುವ ಕ್ರಿಯಾರೂಪಗಳು ಬಳಕೆಗೆ ಬಂದಿವೆ (ಮಾಡೋಣ, ಹೋಗೋಣ).

ಬಳಕೆಯಲ್ಲಿತ್ತು.

(4) ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರರಿಂದ ಒಂದು ಕೆಲಸವನ್ನು ಮಾಡಿಸಿಕೊಳ್ಳುವುದಕ್ಕಾಗಿ ಹಳೆಗನ್ನಡದಲ್ಲಿ ಕೆ (ಗೆ) ಕ್ರಿಯಾಪದಕ್ಕೆ ಇದನ್ನು ಸೇರಿಸಲಾಗುತ್ತಿತ್ತು (ಬರ್ಕೆ ‘ಬರಲಿ’, ಈಗೆ ‘ಕೊಡಲಿ’, ತಿನ್ಗೆ ‘ತಿನ್ನಲಿ’).
ಹಳೆತಮಿಳಿನಲ್ಲಿಯೂ ಇಂತಹದೇ ಒಟ್ಟು ಕ (ಕ್ಕ) ರೂಪದಲ್ಲಿ ಬಳಕೆ ಯಲ್ಲಿತ್ತು (ಕಾಣ್ಕ ‘ಕಾಣಲಿ’, ಒೞಿಕ್ಕ ‘ನಾಶಮಾಡಲಿ’). ತೆಂಕುದ್ರಾವಿಡಕ್ಕೆ ಇಂತಹದೊಂದು ಒಟ್ಟನ್ನು ಕಲ್ಪಿಸಿಕೊಳ್ಳಲು ಸಾದ್ಯವಿದೆಯಾದರೂ ಮೂಲ ದ್ರಾವಿಡದಲ್ಲಿ ಇದರ ಜಾಗವೇನು ಎಂಬುದು ಸ್ಪಶ್ಟವಾಗಿಲ್ಲ.

ನೇರವಾಗಿ

ಇವತ್ತಿನ ಕನ್ನಡ ಒಳನುಡಿಗಳಲ್ಲಿ ಈ ಒಟ್ಟು ಉಳಿದಿರುವ ಹಾಗೆ ಕಾಣಿಸುವುದಿಲ್ಲ. ಇದಕ್ಕೆ ಬದಲು ಅಲಿ ಒಟ್ಟನ್ನು ಸೇರಿಸಿರುವ ಬರಲಿ, ಹೋಗಲಿ ಮೊದಲಾದ ರೂಪಗಳು ಬಳಕೆಗೆ ಬಂದಿವೆ. ಇವು ಅನಂತರದ ಕೆಲಸವನ್ನು ಸೂಚಿಸುವ ಜೋಡಿಸುವ ಕ್ರಿಯಾರೂಪಗಳಿಂದ (12.3 ನೋಡಿ) ಬಂದಿವೆ.

Eke →

8.7 ವಾಕ್ಯದ ನಡುವೆ ಬರುವ ಕ್ರಿಯಾರೂಪಗಳು

ಮೇಲೆ ಸೂಚಿಸಿದ ಹಾಗೆ, ವಾಕ್ಯಗಳ ನಡುವೆ ಹಲವು ರೀತಿಯ ಕ್ರಿಯಾ ರೂಪಗಳು ಕನ್ನಡದಲ್ಲಿ ಬಳಕೆಯಾಗುತ್ತವೆ. ಜೋಡಿಸುವ ಕ್ರಿಯಾರೂಪಗಳು (ಮಾಡಿ, ಮಾಡಲು, ಮಾಡುತ್ತಾ, ಮಾಡದೆ), ಸಂಬಂದಿಸುವ ಕ್ರಿಯಾರೂಪಗಳು ಶರತ್ತಿನ ಕ್ರಿಯಾರೂಪಗಳು (ಮಾಡಿದರೆ) ಮತ್ತು ಕ್ರಿಯಾಪದಗಳ ನಾಮರೂಪಗಳು

(ಮಾಡುವ, ಮಾಡಿದ, ಮಾಡದ),

(ಮಾಡುವುದು, ಮುಕ್ಯವಾದವುಗಳು.

ಮಾಡಿದುದು,

ಮಾಡದುದು)

ಇವುಗಳಲ್ಲಿ

ಬೇರೆ

ಅವನ್ನು

ಈ ಕ್ರಿಯಾರೂಪಗಳು ಮೂಲದ್ರಾವಿಡದಿಂದಲೇನೇ ಬಂದಿರಬಹುದೇ ನುಡಿಗಳು ಬೇರೆ ಇಲ್ಲವೇ ಕಲ್ಪಿಸಿಕೊಂಡಿರಬಹುದೇ ಎಂಬುದಿನ್ನೂ ಮೂಲದ್ರಾವಿಡದಿಂದಲೇ ಬಂದಿವೆಯಾದರೆ ಅವಕ್ಕೆ ಅಲ್ಲಿ ಯಾವ ಸ್ವರೂಪ ಅವುಗಳ ಇದ್ದಿರಬಹುದು ಬದಲಾವಣೆಗಳೆಲ್ಲ ಕನ್ನಡದ ಚರಿತ್ರೆಯಲ್ಲಿ ನಡೆದಿರಬಹುದು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ದ್ರಾವಿಡ ಸ್ಪಶ್ಟವಾಗಿಲ್ಲ.

ಸ್ವರೂಪದಲ್ಲಿ

ಮತ್ತು

ಇವುಗಳಲ್ಲಿ ಜೋಡಿಸುವ, ಸಂಬಂದಿಸುವ ಮತ್ತು ಶರತ್ತನ್ನು ತಿಳಿಸುವ ಕ್ರಿಯಾರೂಪಗಳ ಚರಿತ್ರೆಯನ್ನು ಮುಂದೆ ವಾಕ್ಯಗಳ ಒಳರಚನೆಯನ್ನು ವಿವರಿಸುವ ಪರಿಶೀಲಿಸಲಾಗುವುದು. ಕ್ರಿಯಾಪದಗಳಿಂದ ತಯಾರಾದ ನಾಮರೂಪಗಳ ಚರಿತ್ರೆಯೆಂತಹದು ಎಂಬುದನ್ನು ನಾಮಪದಗಳ ಮತ್ತು ನಾಮರೂಪಗಳ ಒಳರಚನೆಯನ್ನು ವಿವರಿಸುವ ಮುಂದಿನ (9ನೇ) ಅದ್ಯಾಯದಲ್ಲಿ ಪರಿಶೀಲಿಸಲಾಗುವುದು.

ಹನ್ನೆರಡನೇ ಅದ್ಯಾಯದಲ್ಲಿ

Eke →

8.8 ತಿರುಳು

ಕ್ರಿಯಾರೂಪಗಳ ಒಳರಚನೆ ಮೂಲದ್ರಾವಿಡದಲ್ಲಿ ಹೇಗಿದ್ದಿರಬಹುದು ಮತ್ತು ಅದು ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. ಈ ವಿಶಯದಲ್ಲಿ ಕನ್ನಡದ ಒಳನುಡಿಗಳು, ಅದರಲ್ಲೂ ಕರಾವಳಿ ಮತ್ತು ಒಳನಾಡಿನ ಒಳನುಡಿಗಳು, ಹಲವು ರೀತಿಯಲ್ಲಿ ಬೇರಾಗಿದ್ದು, ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗಿರುವುದನ್ನು ಕಾಣಬಹುದು.

ಹಿಂದಿನ ಸಮಯದ ನ್್ತ ಒಟ್ಟಿನಲ್ಲಿದ್ದ ನಕಾರ ಹೆಚ್ಚಿನೆಡೆಗಳಲ್ಲೂ ಬಿದ್ದು ಹೋಗಿದೆ; ಮುಂದಿನ ಸಮಯವನ್ನು ಸೂಚಿಸುವ ವ್(ಪ್) ಒಟ್ಟು ಹಳೆಗನ್ನಡದಲ್ಲಿ ಉಳಿದಿದೆಯಾದರೂ ಹೊಸಗನ್ನಡದಲ್ಲಿ ಅದರ ಬದಲು ಉತ್ತ ಒಟ್ಟು ಬಳಕೆಗೆ ಬಂದಿದೆ. ಆದರೆ, ಬಡಗ ಕನ್ನಡದಲ್ಲಿ ಮತ್ತು

ಕರಾವಳಿಯ ಗವ್ಡ ಕನ್ನಡದಲ್ಲಿ ಉತ್ತ ಒಟ್ಟಿನ ಬದಲು ಹಳೆಗನ್ನಡದ ‘ದಪ’ ರೂಪ ಉಳಿದಿರುವ ಹಾಗೆ ಕಾಣಿಸುತ್ತದೆ.

ಕರಾವಳಿಯ ಒಳನುಡಿಗಳಲ್ಲಿ ಹಳೆಗನ್ನಡದ ವ್(ಪ್) ಒಟ್ಟಿಗೆ ಮುಂದಿನ ಸಮಯದಲ್ಲಿ ನಡೆಯುವ ಕೆಲಸದ ಕುರಿತಾಗಿ ಆಡುಗನ ಊಹೆಯನ್ನು ಸೂಚಿಸುವ ಅರ್ತ ಬಂದಿದೆ. ಬಡಗ ಕನ್ನಡದಲ್ಲೂ ಈ ಒಟ್ಟು

ಊಹೆಯನ್ನು ಸೂಚಿಸುವ ಕು ಒಟ್ಟು ಮತ್ತು ಅಲ್ಲಗಳೆಯುವ ಆ ಒಟ್ಟು ಹಳೆಗನ್ನಡದಲ್ಲಿ, ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಉಳಿದಿವೆ, ಆದರೆ ಒಳನಾಡಿನ ಒಳನುಡಿಗಳಲ್ಲಿ ಮತ್ತು ಬರಹ ಕನ್ನಡದಲ್ಲಿ ಉಳಿದಿಲ್ಲ.

ಕನ್ನಡದ ಒಳನುಡಿಗಳಲ್ಲಿ

ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಆಡುಗ ಒಟ್ಟುಗಳಲ್ಲೂ ಹಲವು ರೀತಿಯ ಬದಲಾವಣೆಗಳು ನಡೆದಿವೆ. ಉದಾಹರಣೆಗಾಗಿ, ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ಒಟ್ಟು ಬಡಗ ಕನ್ನಡದಲ್ಲಿ ಮಾತ್ರ ಉಳಿದಿದೆ; ಹವ್ಯಕದಲ್ಲಿ ಈ ಒಟ್ಟು ಹಲವಚನದಲ್ಲಿದ್ದ ಅಳಿದಿದೆಯಾದರೂ ಅರ್ತವ್ಯತ್ಯಾಸ ಉಳಿದಿದೆ; ಮನುಶ್ಯ-ಇತರ ಲಿಂಗಬೇದ ಕನ್ನಡದಲ್ಲಿ ಅಳಿದಿದೆ; ಒರ್ವಚನದಲ್ಲೂ ಗವ್ರವಾರ್ತ ಇಲ್ಲದಲ್ಲಿ ಲಿಂಗ ಬೇದ ಹವ್ಯಕ ಮತ್ತು ಬಡಗ ಒಳನುಡಿಗಳಲ್ಲಿ ಅಳಿದಿದೆ.

ಹವ್ಯಕ

ಕ್ರಿಯಾರೂಪಗಳ ಚರಿತ್ರೆಯ ಕುರಿತಾಗಿ ನಾವು ತಿಳಿಯಬೇಕಾಗಿರುವ ಅಂಶ ಇನ್ನೂ ಬಹಳಶ್ಟು ಇದೆ ಎಂಬುದನ್ನು ಇಲ್ಲಿ ನೆನಪಿಸುವುದು ಅವಶ್ಯ.

9. ನಾಮಪದಗಳು

Eke →

9.1 ಮುನ್ನೋಟ

ಮೂಲದ್ರಾವಿಡದಲ್ಲಿ ನಾಮಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬುದಾಗಿ ಮೂರು ರೀತಿಯ ಬೇರುಗಳಿದ್ದುವು. ಈ ಮೂರು ರೀತಿಯ ಬೇರುಗಳಿಂದಲೂ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಅವುಗಳಲ್ಲಿ ನಾಮಬೇರುಗಳನ್ನು ಹಾಗೆಯೇ ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ನಾಮಪದವಾಗಿ ಬಳಸಲು ಸಾದ್ಯವಿತ್ತು. ಉದಾಹರಣೆಗಾಗಿ, *ಕಯ್, *ಆಳ್, *ಊರ್, *ಕಣ್, *ಕಾಲ್, *ಪಲ್ ‘ಹಲ್ಲು’, *ಪೆಣ್ ‘ಹೆಂಗಸು’, ಮೂಲದ್ರಾವಿಡದ ಮೊದಲಾದವು ಈ ರೀತಿ ಬಳಕೆಯಾಗಬಲ್ಲ ನಾಮಬೇರುಗಳು.

ಕನ್ನಡದಲ್ಲೂ ಇಂತಹ ಹಲವು ನಾಮಬೇರುಗಳಿದ್ದು, ಅವನ್ನು ಯಾವ ಒಟ್ಟಿನ ಸಹಾಯವೂ ಇಲ್ಲದೆ ಹಾಗೆಯೇ ನಾಮಪದವಾಗಿ ಬಳಸಲು ಸಾದ್ಯವಿದೆ. ಉದಾಹರಣೆಗಾಗಿ, ಬೇರಿಗೆ ಹಲವಚನವನ್ನು ಸೂಚಿಸುವ ಗಳ್ ಒಟ್ಟು (ಕಣ್ಗಳ್), ಕೊನೆಯನ್ನು ಸೂಚಿಸುವ ವಿಬಕ್ತಿ ಒಟ್ಟು (ಕಣ್ಗೆ), ಮೊದಲಾದುವನ್ನು ನೇರವಾಗಿ ಸೇರಿಸಲು ಸಾದ್ಯವಿದೆ.

ಹಳೆಗನ್ನಡದಲ್ಲಿ

ಕ್ರಿಯಾಬೇರುಗಳಲ್ಲಿಯೂ ಹಲವನ್ನು ಹಾಗೆಯೇ (ಎಂದರೆ ಅವಕ್ಕೆ ‘ಸೊನ್ನೆ’ ಒಟ್ಟನ್ನು ಸೇರಿಸಿ) ನಾಮಪದವಾಗಿ ಬಳಸಲು ಸಾದ್ಯವಿತ್ತು; ಕನ್ನಡದಲ್ಲಿಯೂ ಇದು ಸಾದ್ಯವಿದೆ. ಉದಾಹರಣೆಗಾಗಿ, ಹಾಡು, ಉರಿ, ಬೆಳೆ, ಉಗುಳು, ಕೆಮ್ಮು, ಗುಡುಗು, ತಪ್ಪು ಮೊದಲಾದುವನ್ನು ಕ್ರಿಯಾಪದಗಳಾಗಿ ನಾಮಪದಗಳಾಗಿಯೂ ಬಳಸಲು ಸಾದ್ಯವಿದೆ. (ಹಾಡು ಪದ ಅವನು ಒಂದು ಹಾಡನ್ನು ಹಾಡಿದ

ಮಾತ್ರವಲ್ಲದೆ

ವಾಕ್ಯದಲ್ಲಿ ಮೊದಲಿಗೆ ನಾಮಪದವಾಗಿ ಬಳಕೆಯಾಗಿದೆ ಮತ್ತು ಅದರ ಅನಂತರ ಕ್ರಿಯಾಪದವಾಗಿಯೂ ಬಳಕೆಯಾಗಿದೆ). ಇಂತಹ ಹಲವಾರು ಬೇರುಗಳು ಕನ್ನಡದಲ್ಲಿವೆ.

ಈ ಮೂರು ರೀತಿಯ (ನಾಮ, ಕ್ರಿಯಾ ಮತ್ತು ಗುಣ) ಬೇರುಗಳಿಗೂ ಕೆಲವು ಪದರಚನೆಯ ಒಟ್ಟುಗಳನ್ನು ಸೇರಿಸಿ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಉದಾಹರಣೆಗಾಗಿ, ಮೂಲದ್ರಾವಿಡದ ಕಾ ‘ಕಾಡು’ ನಾಮ ಬೇರಿಗೆ *ಟು ಒಟ್ಟನ್ನು ಸೇರಿಸುವುದರ ಮೂಲಕ ಕನ್ನಡದ ಕಾಡು ನಾಮಪದವನ್ನು, ಮೂಲದ್ರಾವಿಡದ *ವಿಲ್ ‘ಮಾರು’ ಕ್ರಿಯಾಬೇರಿಗೆ *ಅಯ್ ಒಟ್ಟನ್ನು ಸೇರಿಸುವುದರ ಮೂಲಕ ಕನ್ನಡದ ಬೆಲೆ (<ವಿಲಯ್) ನಾಮಪದವನ್ನು ಮತ್ತು ಮೂಲದ್ರಾವಿಡದ ಪೆರ್ ‘ದೊಡ್ಡ’ ಗುಣಬೇರಿಗೆ *ಮಯ್ ಒಟ್ಟನ್ನು ಕನ್ನಡದ ಹೆಮ್ಮೆ ಸೇರಿಸುವುದರ ಮೂಲಕ (<ಪೆರುಮಯ್) ಪಡೆಯಲಾಗಿದೆಯೆಂಬುದನ್ನು ನಾಮಪದವನ್ನು ಗಮನಿಸಬಹುದು.

ಮೂರು

ಇದಲ್ಲದೆ, ಈ

ಬೇರು(ಪದ)ಗಳಿಗೂ ನಾಮಪದಗಳನ್ನು ಸೇರಿಸಿ ಜೋಡುಪದಗಳನ್ನು ತಯಾರಿಸುವ ವಿದಾನವೂ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕು. ಉದಾಹರಣೆಗಾಗಿ, *ಎಳ್ ‘ಎಳ್ಳು’ ಮತ್ತು *ನೆಯ್ ‘ಎಣ್ಣೆ, ತುಪ್ಪ’ ಎಂಬ ಎರಡು ಮೂಲದ್ರಾವಿಡ ನಾಮಪದಗಳ ಸೇರಿಕೆಯಿಂದ ಕನ್ನಡದ ಎಣ್ಣೆ ನಾಮಪದವನ್ನು, *ವಾವ್ ‘ಕಿತ್ತುಕೊಳ್ಳು’ (ಕ್ರಿಯಾಪದ) ಮತ್ತು *ಯಾಲ್ ‘ಪ್ರಾಣಿ’ (ನಾಮಪದ)ಗಳ ಸೇರಿಕೆಯಿಂದ ಕನ್ನಡದ ಬಾವಲಿ ನಾಮಪದವನ್ನು ಮತ್ತು *ವೆಳ್ ‘ಬಿಳಿ’ (ಗುಣಪದ) ಮತ್ತು *ನೆಯ್ ‘ತುಪ್ಪ’ (ನಾಮಪದ)ಗಳ ಸೇರಿಕೆಯಿಂದ ಕನ್ನಡದ ಬೆಣ್ಣೆ ನಾಮಪದವನ್ನು ತಯಾರಿಸಿರುವಲ್ಲಿ ಈ ವಿದಾನದ ಬಳಕೆಯಾಗಿದೆ.

ಮತ್ತು

ಕ್ರಿಯಾಬೇರು

ನಾಮಬೇರು,

Eke →

9.2 ನಾಮಪದಗಳ ಒಳರಚನೆ

ಮೂಲದ್ರಾವಿಡದ ನಾಮಪದಗಳ ಒಳರಚನೆಯಲ್ಲಿ ಮೇಲೆ ಸೂಚಿಸಿದ ಗುಣಬೇರುಗಳು ಬಳಕೆಯಾಗುತ್ತಿದ್ದಿರಬೇಕು ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆಯಾದರೂ, ಇವುಗಳಲ್ಲಿ ಕ್ರಿಯಾಬೇರುಗಳ ಬಳಕೆಯ ವಿಶಯದಲ್ಲಿ ಮಾತ್ರವೇ ಇದುವರೆಗೆ ಹೆಚ್ಚಿನ ಸಂಶೋದನೆಗಳು ನಡೆದಿವೆ.
ಉಳಿದ ಬೇರುಗಳ, ಅದರಲ್ಲೂ ಸಂಶೋದನೆ

ನಾಮಬೇರುಗಳ ಬಳಕೆಯ ವಿಶಯದಲ್ಲಿ ಹೆಚ್ಚಿನ ನಡೆಯದಿರುವುದಕ್ಕೆ ಅಂತಹ ಸಂಶೋದನೆಗೆ ಇವತ್ತಿನ ದ್ರಾವಿಡ ನುಡಿಗಳ ಸಹಾಯ ಸಿಗದಿರುವುದೇ ಕಾರಣವಿರಬೇಕು (9.2.1 ನೋಡಿ). ಈ ಮೂರು ರೀತಿಯ ಬೇರುಗಳ ಮೂಲಕ ನಾಮಪದಗಳನ್ನು ರಚಿಸುವ ವಿದಾನವೆಂತಹದು ಎಂಬುದನ್ನು ಕೆಳಗೆ ವಿವರಿಸಲಾಗಿದೆ.

ಕ್ರಿಯಾಬೇರು

ನಾಮಬೇರುಗಳೆಲ್ಲ,

Eke →

9.2.1 ನಾಮಬೇರುಗಳಿಂದ ನಾಮಪದಗಳು

ಮೂಲದ್ರಾವಿಡದ ಮತ್ತು ಗುಣಬೇರುಗಳ ಹಾಗೆ, ಒಂದು ಉಲಿಕಂತೆಯವುಗಳಾಗಿದ್ದಿರಬೇಕೆಂಬುದು ಇವತ್ತಿನ ಕಲ್ಪನೆಯಾಗಿದೆ. ಆದರೆ, ಸದ್ಯಕ್ಕೆ ಇದು ಬರಿಯ ಕಲ್ಪನೆ ಮಾತ್ರ. ಯಾಕೆಂದರೆ, ಒಂದಕ್ಕಿಂತ ಜಾಸ್ತಿ ಉಲಿಕಂತೆಯಿರುವ ಹಂದಿ, ಉಗುರು, ಹೊಗೆ, ನೂರಾರು ನಾಮಪದಗಳಲ್ಲಿ ಬೇರನ್ನು ಒಟ್ಟಿನಿಂದ ಪ್ರತ್ಯೇಕಿಸಲು ಇವತ್ತಿನ ದ್ರಾವಿಡ ನುಡಿಗಳು ಸಹಾಯಕವಾಗುವುದಿಲ್ಲ.

ಕಣಜ, ಗಿಡುಗ

ಮೊದಲಾದ

ಕಾಳಗ,

ಉದಾಹರಣೆಗಾಗಿ, ಕನ್ನಡದ ಹಂದಿ ಪದಕ್ಕೆ ಮೂಲದ್ರಾವಿಡದಲ್ಲಿ ಎಂತಹ ಬೇರು ಮತ್ತು ಒಟ್ಟುಗಳ ಸೇರಿಕೆ ಕಾರಣವಾಗಿರಬಹುದೆಂಬುದನ್ನು ಕಲ್ಪಿಸಿಕೊಳ್ಳುವುದು ಸುಲಬವಲ್ಲ. ಈ ಪದ ಮೂಲದ್ರಾವಿಡದಲ್ಲಿ *ಪನ್ಱಿ ಎಂಬ ರೂಪದಲ್ಲಿದ್ದಿರಬಹುದೆಂದು ಹೇಳಬಹುದೇನೋ ನಿಜ; ಆದರೆ ಅದರಲ್ಲಿ ಬಂದಿರುವ ಒಟ್ಟು ಇ ಎಂಬುದೇ ಇಲ್ಲವೇ ಱಿ ಎಂಬುದೇ

ಎಂಬುದನ್ನು ತಿಳಿಯಲು ಇವತ್ತಿನ ದ್ರಾವಿಡ ನುಡಿಗಳಲ್ಲಿ ಆದಾರ ಸಿಗುವುದಿಲ್ಲ.

ಹಾಗಾಗಿ, ಈ ವಿಶಯದಲ್ಲಿ ಹೆಚ್ಚಿನ ಸಂಶೋದನೆ ನಡೆದು, ಮೂಲ ದ್ರಾವಿಡದ ನಾಮಪದಗಳಲ್ಲಿ ಬರಬಲ್ಲ ನಾಮಬೇರುಗಳ ಮತ್ತು ಅವುಗ ಳೊಂದಿಗೆ ಬರಬಲ್ಲ ಒಟ್ಟುಗಳ ಸ್ವಶ್ಟವಾದ ಚಿತ್ರಣ ಸಿಗುವವರೆಗೂ ಮೂಲ ದ್ರಾವಿಡದ ನಾಮಬೇರುಗಳೆಲ್ಲ ನಮ್ಮ ಆಶಯವಶ್ಟೇ ಅಲ್ಲದೆ ಉಲಿಕಂತೆಯವಾಗಿದ್ದಿರಬೇಕೆಂಬುದು ತಿಳುವಳಿಕೆಯಾಗಲಾರದು.

ಇದೇ ಕಾರಣಕ್ಕಾಗಿ, ಕ್ರಿಯಾಬೇರು ಇಲ್ಲವೇ ಗುಣಬೇರುಗಳಿಂದ ಪಡೆ ಯಲು ಸಾದ್ಯವಿಲ್ಲದಂತಹ ಉಗುರು, ಹೊಗೆ, ಕಾಳಗ, ಕಣಜ ಮೊದಲಾದ ನೂರಾರು ನಾಮಪದಗಳ ಒಳರಚನೆಯಲ್ಲಿ ಎಂತಹ ನಾಮಬೇರು ಮತ್ತು ಒಟ್ಟುಗಳ ಬಳಕೆಯಾಗಿದೆ ಮತ್ತು ಅವು ಕನ್ನಡದ ಚರಿತ್ರೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ವಿವರಿಸಲು ಸದ್ಯಕ್ಕಂತೂ ನಮಗೆ ಸಾದ್ಯವಾಗದು.

ಕನ್ನಡದಲ್ಲೇನೇ ಬಳಕೆಯಾಗುವ ನಾಮಪದಗಳನ್ನು ಹೋಲಿಸಿ ನೋಡಿ ದಾಗ ಇಲ್ಲವೇ ಅವನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳ ಒಳರಚನೆಯಲ್ಲಿ ಕೆಳಗೆ ಸೂಚಿಸಿದಂತಹ ಕೆಲವು ಒಟ್ಟುಗಳು ಬಳಕೆಯಾಗಿರುವುದನ್ನು ಊಹಿಸಿಕೊಳ್ಳಲು ಸಾದ್ಯವಿದೆ. ಆದರೆ, ಇವುಗಳಲ್ಲಿ ಯಾವ ಒಟ್ಟುಗಳನ್ನು ಮೂಲದ್ರಾವಿಡಕ್ಕೂ ಸಾದ್ಯ ಎಂಬುದನ್ನು ತಿಳಿಯಲು ಹೆಚ್ಚಿನ ಸಂಶೋದನೆ ನಡೆಸುವ ಅವಶ್ಯಕತೆಯಿದೆ.

ಕಲ್ಪಿಸಿಕೊಳ್ಳಲು

(1) ಅ ಒಟ್ಟು: ಕೆಳಗಿನ ಪದಗಳಲ್ಲಿ ಈ ಒಟ್ಟಿಗೆ ‘ಸಂಬಂದಿಸಿರುವ

ವ್ಯಕ್ತಿ’ ಎಂಬ ಅರ್ತವಿದೆ.

ಎಗ್ಗು ‘ನಾಚುಗೆ’
ಕಾದಲ್

ಎಗ್ಗ ‘ಹೆಡ್ಡ’ ಕಾಟ ‘ಕಾಡಿನವನು’

ಕೆಪ್ಪು ‘ಕಿವುಡು’
ತುಡುಗು ‘ಕಳ್ಳತನ’ ಬಿರುದು
ಅಡಿ ‘ಕಾಲಿನ ಅಡಿ’

ಕೆಪ್ಪ ‘ಕಿವುಡ’ ತುಡುಗ ‘ಕಳ್ಳ’ ಬಿರುದ ‘ಬಿರುದುಳ್ಳವ’ ಅಡಿಯ ‘ಸೇವಕ’

ಆದರೆ ಕೊಂಡೆ : ಕೊಂಡೆಯ ‘ಚಾಡಿ’, ಇಂಬು ‘ಉಳಿಯುವ ಜಾಗ’: ಇಂಬ ‘ಅಗಲ’, ನೀರ್ ‘ನೀರ’ : ಈರ ‘ತೇವ’ ಮೊದಲಾದ ಬೇರೆ ಕೆಲವು ಪದಗಳಲ್ಲಿ ಈ ಒಟ್ಟಿಗೆ ಮೇಲಿನ ಅರ್ತವಿಲ್ಲ.

(2) ಇ ಒಟ್ಟು: ಕೆಲವು ಪದಗಳಲ್ಲಿ ಇದು ಅ ಒಟ್ಟಿಗೆ ಬದಲಾಗಿ ಬರುತ್ತಿದ್ದು, ಸೂಚಿಸಬಲ್ಲುದು. ಇವುಗಳಲ್ಲಿ ಕೆಲವಕ್ಕೆ ಉ ಒಟ್ಟಿನಲ್ಲಿ ಕೊನೆಗೊಳ್ಳುವ ಗುಣಪದವನ್ನೂ ಕೊಡಲು ಸಾದ್ಯವಿದೆ.

ಗಂಡು-ಹೆಣ್ಣು ಅರ್ತಬೇದವನ್ನು

ನಾಮಪದ

ಗುಣಪದ

ಕುರುಡ
ಕುಳ್ಳ ಕಿವುಡ
ಮರುಳ
ಹುಚ್ಚ
ಹೆಡ್ಡ

ಹೆಣ್ಣು
ಕುರುಡಿ
ಕುಳ್ಳಿ ಮರುಳಿ
ಹುಚ್ಚಿ

ಕುರುಡು ಕುಳ್ಳು ಕಿವುಡು ಅರಸು(ತನ) ಮರುಳು ಹುಚ್ಚು ಹೆಡ್ಡು

ಆದರೆ, ಮುದುಕ-ಮುದುಕಿ, ಅಜ್ಜ-ಅಜ್ಜಿ ಮೊದಲಾದ ಬೇರೆ ಕೊನೆಗೊಳ್ಳುವ

ಪದಗಳಿಗೆ ಇಂತಹ ಉ ಒಟ್ಟಿನಲ್ಲಿ

ಕೆಲವು

ಬೆಡಗು-ಬೆಡಗಿ, ಬಸಿಱು-ಬಸಿಱಿ ಗುಣಪದಗಳಿಲ್ಲ. ಇದಲ್ಲದೆ ಮೊದಲಾದ ಬೇರೆ ಕೆಲವು ಪದಗಳಿಗೆ ಅ ಒಟ್ಟಿನಲ್ಲಿ ಕೊನೆಗೊಳ್ಳುವ ಗಂಡುಸನ್ನು ಸೂಚಿಸುವ ಪದವೂ ಇಲ್ಲ.

ಕೆಳಗೆ ಕೊಟ್ಟಿರುವ ಬೇರೆ ಕೆಲವು ಪದಗಳಲ್ಲಿ ಇ ಒಟ್ಟಿಗೆ ಬೇರೆಯೇ

ಅರ್ತಗಳಿವೆ.

ಸೂಡು ‘ಹುಲ್ಲಿನ ಕಟ್ಟು’ ಸೂಡಿ ‘ಹುಲ್ಲಿನ ಚಿಕ್ಕ ಕಟ್ಟು’’ ನಾರ್ ‘ನಾರು’’
ಪುರುಳ್ ‘ಯೋಗ್ಯತೆ’’ ಪುರುಳಿ ‘ಯೋಗ್ಯ ವ್ಯಕ್ತಿ’’

ನಾರಿ ‘ಬಿಲ್ಲಿನ ಹಗ್ಗ’’

ತಮಿಳು
ಕೂನ್ ‘‘ಕಡಾಯಿ’

ಕನ್ನಡ ಕೂನಿ ‘ಮಣ್ಣಿನ ಪಾತ್ರೆ’

(3) ಎ ಒಟ್ಟು: ಕಾದಲ-ಕಾದಲೆ ಪದಗಳಲ್ಲಿ ಇದಕ್ಕೆ ‘ಹೆಂಗಸು’’ ಎಂಬ ಅರ್ತವಿದೆಯಾದರೂ, ಕೆಳಗೆ ಕೊಟ್ಟಿರುವ ಬೇರೆ ಹಲವು ಪದಗಳಲ್ಲಿ ಬೇರೆಯೇ ಅರ್ತವಿದೆ.

ನಾಳ್ ‘ದಿನ’’
ಗುಡ್ಡ
ಕೊಂಬು (ದನದ್ದು)
ಪುಲ್ ‘ಹುಲ್ಲು’’
ಕುಂಡ ‘ಗುಂಡಿ’
ಕೊಪ್ಪ ‘ಚಿಕ್ಕ ಹಳ್ಳಿ’

ನಾಳೆ ‘ಮರುದಿನ’ ಗುಡ್ಡೆ ‘ರಾಶಿ’ ಕೊಂಬೆ (ಮರದ್ದು) ಪುಲ್ಲೆ ‘ಜಿಂಕೆ’’ ಕುಂಟೆ ‘ಗುಂಡಿ’’ ಕೊಂಪೆ ‘ಚಿಕ್ಕ ಹಳ್ಳಿ’’

ನಾಮಪದಗಳನ್ನು ತಯಾರಿಸುವುದಕ್ಕಾಗಿ ಈ ಒಟ್ಟು ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿದೆ (9.3 ನೋಡಿ). ಆದರೆ, ನಾಮಬೇರು ಇಲ್ಲವೇ ನಾಮಪದಗಳಿಂದಲೂ ಬೇರೆ

ಕ್ರಿಯಾಬೇರುಗಳಿಂದ

ನಾಮಪದಗಳನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ರಚಿಸಲು ಅದರ ಬಳಕೆಯಾಗುತ್ತದೆಯುಂಬುದನ್ನು

ಪುಡಿಕೆ ‘ಬುಟ್ಟಿ’ ಗಣಿಕೆ ‘ಗಂಟು’

ಪುಟ್ಟಿ ‘ಬುಟ್ಟಿ’
ಕಣ್ ‘ಕಬ್ಬಿನ ಗಂಟು’ ಕಂಡು ‘ನೂಲಿನ ಉಂಡೆ’ ಕಂಡಿಕೆ ‘ನೂಲಿನ ಉಂಡೆ’’ ಕುಡಿಕೆ ‘ಮೊಸರ ಕುಡಿಕೆ’’ ಕೊಡ ‘ನೀರಿನ ಕೊಡ’ ತಡಿಕೆ ‘ತಟ್ಟಿ’’ ತಟ್ಟಿ ‘ಬಿದಿರ ಚಾಪೆ’’ ಹೊರಿಕೆ ‘ನೀರುಳ್ಳಿಯ ಸಿಪ್ಪೆ’’ ಪೊರೆ ‘ಪೊದರು’
ಹಲಿಕೆ ‘ಹಲ್ಲಿರುವ ಸಾದನ’’ ಪಲ್ ‘ಹಲ್ಲು’’

(5) ಗ ಒಟ್ಟು: ಕನ್ನಡದಲ್ಲಿ ಇದಕ್ಕೆ ಒಂದು ವಸ್ತು ಇಲ್ಲವೇ ವಿಶಯಕ್ಕೆ ಸಂಬಂದಿಸಿದವನು ಇಲ್ಲವೇ ಒಂದು ವಸ್ತುವನ್ನು ಬಳಸುವವನು ಎಂಬ ಅರ್ತವಿದೆ.

ಅಂಬಿ ‘ದೋಣಿ’’ ಪೇ ‘ಹುಚ್ಚು’’
ಬೇರು ‘ಮರದ ಬೇರು’’ ಬೇರುಗ ‘ಬೇರು ಮಾರುವವನು’

ಅಂಬಿಗ ‘ದೋಣಿ ನಡೆಸುವವನು’ ಈಡಿಗ ‘ಹೆಂಡ ಮಾಡುವವನು’’ ಹೇಗ ‘ಹುಚ್ಚ’

ಕೆಳಗಿನ ಉದಾಹರಣೆಗಳಲ್ಲಿ ಈ ಒಟ್ಟಿನೊಂದಿಗೆ ಇ ಒಟ್ಟೂ ಸೇರಿರುವ

ಇಗ ಎಂಬುದು ಬಂದಿದೆ.

ಗಾಣ ‘ಎಣ್ಣೆಯ ಗಾಣ’’ ಗಾಣಿಗ ‘ಗಾಣದವನು’’ ಹೆಣ್ಣು ‘ಹೆಂಗಸು’’ ಬೇಂಟೆ ‘ಬೇಟೆ’
ಸಾಲ ‘ಕಡ’’

ಹೆಣ್ಣಿಗ ‘ಪುಕ್ಕ’ ಬೇಂಟಿಗ ‘ಬೇಟೆಗಾರ’ ಸಾಲಿಗ ‘ಸಾಲ ಕೊಟ್ಟವನು’

ದಾರಿ ‘ಮಾರ್ಗ’’

ದಾರಿಗ ‘ಪ್ರಯಾಣಿಕ’

ಆದರೆ, ಕನ್ನಡದ ಗಿಡುಗ ‘ಹದ್ದು’ (ತುಳು: ಗಿಡಿ) ಕೊಳಗ ‘ಗೊರಸು’ (ತಮಿಳು: ಕುಳಂಪು) ಮತ್ತು ಕೊಂಡೆ, ಕೊಂಡೆಗ ‘ಚಾಡಿ’ ಪದಗಳಲ್ಲಿ ಈ ಒಟ್ಟಿಗೆ ಮೇಲಿನ ಅರ್ತವಿಲ್ಲ.

(5) ಗೆ ಒಟ್ಟು: ಇದು ಮೂಲದ್ರಾವಿಡದ *ಕಯ್ ಒಟ್ಟಿನಿಂದ ಬಂದಿರ ಬೇಕು. ಕೆಲವು ಪದಗಳಲ್ಲಿ ಇದು ಇ ಒಟ್ಟಿನೊಂದಿಗೆ ಬರುತ್ತದೆ. ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವಲ್ಲೂ ಈ ಒಟ್ಟಿನ ಬಳಕೆಯಾಗುತ್ತದೆ (9.3 ನೋಡಿ).

ಚಟ್ಟಿ ‘ಮಣ್ಣಿನ ಪಾತ್ರೆ’’ ಚಟ್ಟಿಗೆ ‘ಚಿಕ್ಕ ಚಟ್ಟಿ’ ಸದೆ ‘ಕಸ’ ನಿಱಿ ‘ನೆರಿಗೆ’

ಸೆದಗೆ ‘ಕಸ’ ನಿಱಿಗೆ ‘ನೆರಿಗೆ’

ಕುಂಡ ‘ತಗ್ಗು’’
ಚೆಂಬು ‘ತಾರ್ಮ’
ಮಾಳ ‘ಮೇಲ್ಮನೆ’’

ಗುಂಡಿಗೆ ‘ಎದೆಯ ತಗ್ಗು’ ತಂಬಿಗೆ ‘ತಾರ್ಮದ ಪಾತ್ರೆ’’ ಮಾಳಿಗೆ ‘ಮಾಳ’

ಕನ್ನಡದ ಕೆಳಗಿನ ಪದಗಳಲ್ಲೂ ಈ ಒಟ್ಟು ಬಂದಿದೆಯುಂಬುದನ್ನು

ತಮಿಳಿನ ಪದಗಳು ಸೂಚಿಸುತ್ತವೆ.

ಕೂನ್

ತಮಿಳು

ಕನ್ನಡ
ಗೂಗೆ ‘ಗೂಗೆ ಹಕ್ಕಿ’’ ಕೇದಿಗೆ ‘ಕೇದಿಗೆ ಹೂ’’ ಕಯ್ತಯ್ ಕೊಟ್ಟಿಗೆ ‘ಹಟ್ಟಿ’
ಕೊಟ್ಟಮ್ ಸುತ್ತಿಗೆ ‘ಕೊಡತಿ’ ಸುತ್ತಿ
ನಾಲಿಗೆ
ನಾ, ನಾಕ್ಕು

(6) ಪು ಒಟ್ಟು: ಕ್ರಿಯಾಬೇರು ಮತ್ತು ಗುಣಬೇರುಗಳಿಂದ ನಾಮಪದ

ಗಳನ್ನು ಪಡೆಯುವಲ್ಲೂ ಈ ಒಟ್ಟಿನ ಬಳಕೆಯಾಗುತ್ತದೆ.

ಕೆರ ‘ಎಕ್ಕಡ’’
ಗುಂಡಿ ‘ತಗ್ಗು’’
ನಂಟು ‘ಸಂಬಂದ’’

ಕೆರ್ಪು ‘ಎಕ್ಕಡ’ ಕೆಪ್ಪು ‘ಕಿವುಡು’ ಗುಣ್ಪು ‘ಆಳ’ ನಣ್ಪು ‘ಗೆಳೆತನ’

ಕೆರವು ‘ಎಕ್ಕಡ’, ಕೆಸು, ಕೆಸವು ‘ಕೆಸುವಿನ ಸೊಪ್ಪು’, ತಿರು, ತಿರುವು ‘ಬಿಲ್ಲಿನ ಹೆದೆ’, ಎಲು, ಎಲುವು ‘ಎಲುಬು’, ಮಡು, ಮಡುವು ‘ಕೊಳ’ ಪದಗಳಲ್ಲಿ ಈ ಒಟ್ಟು ವು ರೂಪದಲ್ಲಿದೆ.

(7) ಮೆ ಒಟ್ಟು: ಕೆಲವು ಪದಗಳಲ್ಲಿ ಇದಕ್ಕೆ ವೆ ರೂಪ ಬಂದಿದೆ.

(ಕ) ಅಡಿ ‘ಕಾಲಿನ ಅಡಿ’’ ಅಡಿಮೆ ‘ಕೀಳ್ಮೆ’’ ಕಾದಲ್ಮೆ ‘ನಲ್ಮೆ’’

ಕಾದಲ್ ‘ನಲ್ಮೆ’

ಕಾಲು ‘ಕಾಲುವೆ’’ ಪಲ್ ‘ಹಲ್ಲು’
ಮದ ‘ಮದುವೆ’

ಕಾಲುವೆ ಹಲಿವೆ ಮದುವೆ

ಕನ್ನಡ ನುಡಿಯ ಕುಲುಮೆ (ತಮಿಳು: ಕೊಲ್ ‘ಕಮ್ಮಾರ’), ಒಡವೆ (ತಮಿಳು: ಉಟಯ್ ‘ಸಂಪತ್ತು’) ಮತ್ತು ಇರುವೆ (ಹವ್ಯಕ: ಎರುಗು) ಪದಗಳಲ್ಲೂ ಮೆ ಇಲ್ಲವೇ ವೆ ಒಟ್ಟಿನ ಬಳಕೆಯನ್ನು ಕಾಣಬಹುದು.

(8) ಲ್ ಒಟ್ಟು: ಇದು

ನಾಮಪದದೊಂದಿಗೆ ಬಂದಿರಬಹುದು ಇಲ್ಲವೇ ಅ ಒಟ್ಟಿನೊಂದಿಗೆ ಸೇರಿ ಬಂದಿರಬಹುದು. ಕೆಳಗಿನ ಪದಗಳಲ್ಲಿ ಇದರೊಂದಿಗೆ ಉಚ್ಚಾರಣೆಯ ಉಕಾರ ಸೇರಿದೆ.

ನೇರವಾಗಿ

ಕುಡಿ ‘ತುದಿ’’
ಮಟ್ಟಿ ‘ತೆಂಗಿನ ಗರಿ’’ ಮಣ್ಣು
ಮದ ‘ಮದುವೆ’
ವಂಡು ‘ಕೆಸರು’
ಕಣ್ ‘ಬಿದಿರಿನ ಗಂಟು’ ಕುಂಚ ‘ಕುಚ್ಚು’
ಪುಕ್ಕು ‘ಅಳುಕು’
ಸೊಪ್ಪು ‘ಸಪ್ಪು’’ ದೊದ್ದೆ ‘ಉಗ್ಗು’

ಕುಡಿಲು ‘ಮೊಳಕೆ’ ಮಡಲು ಮಣಲು ‘ಮರಳು’ ಮದಲ್ ‘ಮದುವೆ’’ ಬಂಡಲು ‘ಕೆಸರು’ ಕಣಲು ‘ಗಂಟು’ ಗೊಂಚಲು ಪುಕ್ಕಲು ‘ಅಳುಕು’’ ತೊಪ್ಪಲು ‘ಸಪ್ಪು’ ತೊದಲು

ಕೆಳಗೆ ಕೊಟ್ಟಿರುವ ಪದಗಳಲ್ಲೂ ಈ ಒಟ್ಟು ಬಂದಿದೆಯುಂಬುದನ್ನು

ತಮಿಳು (ಮತ್ತು ತೆಲುಗು) ಪದಗಳು ಸೂಚಿಸುತ್ತವೆ.

ತಮಿಳು

ಕನ್ನಡ
ಒಡಲು ‘ಮೆಯ್’’ ಉಟಮ್ಪು ಎಚ್ಚಮ್ ಇದ್ದಲು
ತುಣ್ಡಮ್ ಸೊಂಡಿಲು ತದಲು ‘ಮುಳ್ಳುಪಡಿ’ ತೆಱ್ಱು ಮೀಸಲು ‘ತೆಗೆದಿರಿಸಿದ್ದು’ ಮಿಚಯ್ ಮೂಡಲ್ ‘ಬೆರಣಿ’ ಮುಟ್ಟಯ್ ವೀೞ್ ಬೀಳಲು ತೆಲುಗು: ಚೆದ ಇದ್ದಲು

(9) ಸು ಒಟ್ಟು: ಕೆಳಗಿನ ಕನ್ನಡ ಪದಗಳಲ್ಲಿ ಈ ಒಟ್ಟು ಬಂದಿದೆ ಎಂಬುದನ್ನು ಅವುಗಳ ಎದುರು ಕೊಟ್ಟಿರುವ ತಮಿಳು ಪದಗಳಿಂದ ತಿಳಿಯ ಬಹುದು.

ತಮಿಳು ಕನಾ, ಕನಾವು

ಕನ್ನಡ
ಕನಸು
ಕಡಸು ‘ಎಳೆಯ ದನ’’ ಕಟವು ಪೊಱಸು ‘ಪಾರಿವಾಳ’’ ಪುಱ ಮಾಸು ‘ಗರ್ಬಾಶಯ’’ ಮಾ ಗೆಣಸು

Eke →

9.2.2 ಕ್ರಿಯಾಬೇರುಗಳಿಂದ ನಾಮಪದಗಳು

ಮೂಲದ್ರಾವಿಡ ಕ್ರಿಯಾಬೇರುಗಳಿಂದ ನಾಮಪದಗಳನ್ನು ಪಡೆಯುವುದಕ್ಕಾಗಿ ಹಲವು ಒಟ್ಟುಗಳು ಬಳಕೆಯಲ್ಲಿದ್ದಿರಬೇಕು. ಅವುಗಳಲ್ಲಿ ಕೆಲವನ್ನು ಕನ್ನಡ ದಲ್ಲೂ ಕಾಣಬಹುದು.

ಮೂಲದ್ರಾವಿಡದ ಈ ಒಟ್ಟುಗಳಲ್ಲಿ ಕನ್ನಡ ಹಲವಾರು ಬದಲಾವಣೆ ಗಳನ್ನು ಮಾಡಿಕೊಂಡಿದೆ ಮಾತ್ರವಲ್ಲ, ಅವುಗಳಲ್ಲಿ ಕೆಲವು ಒಟ್ಟುಗಳ ಬಳಕೆಯನ್ನು ಬಹಳಶ್ಟು ಹೆಚ್ಚಿಸಿಕೊಂಡಿದೆ.

ಮತ್ತು ಉ

ಕ್ರಿಯಾಬೇರುಗಳು ವ್ಯಂಜನದಲ್ಲಿ ಕೊನೆಗೊಳ್ಳುವುವಾಗಿದ್ದರೆ, ಅವುಗಳ ಅನಂತರ ಅ, ಇ ಸ್ವರದೊಟ್ಟುಗಳನ್ನು ಬಳಸಿ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳಲ್ಲಿ ಈ ಮೂರು ಸ್ವರಗಳು ಒಟ್ಟುಗಳಾಗಿ ಬಂದಿರುವುದನ್ನು ಕಾಣಬಹುದು.

ಕ್ರಿಯಾಬೇರು ಕಲ್ ‘ಕಲಿ’’

ನಾಮಪದ ಕಲಿ ‘ಕಲಿತವನು’

ಕಣಿ ‘ನೋಟ’ ಕುಲಿ ‘ಕೊಲೆಗಾರ’

ಆಡು ‘ಆಟವಾಡು’ ಕಾಣ್ ‘ಕಾಣು’
ಕೊಲ್ ‘ಕೊಲ್ಲು’
ಕಾಯ್ ‘ಕಾಯಿ ಬಿಡು’ ಕಾಯಿ ‘ಕಾಯಿ’ ಕೊಱ್ ‘ತುಂಡುಮಾಡು’’ಕೊಱಿ ‘ತುಂಡು ಗೆಲ್ಲು’

ನಾಮಪದ

ಕ್ರಿಯಾಬೇರು ನೂಲ್ ‘ನೂಲು ಮಾಡು’ ನೂಲು ‘ನೂಲು’ ಅಱು ‘ಒಣಗುವಿಕೆ’ ಆಱ್ ‘ಒಣಗು’
ಒರೆ ‘ಸದ್ದು ಮಾಡು’ ಉರು ‘ಸದ್ದು’ ಕಿಟ್ಟು ‘ಮುಟ್ಟು’
ಇೞಿ ‘ಇಳಿಯು’

ಕಿಡು ‘ಮುಟ್ಟುವಿಕೆ’ ಇೞು ‘ಇಳಿಯುವಿಕೆ’

ಕ್ರಿಯಾಬೇರು ಗೆಲ್ ‘ಗೆಲ್ಲು’’
ಇೞ್ ‘ಎಳೆ’ ಒಡ್ಡು ‘ರಾಶಿಹಾಕು’ ಎತ್ತು ‘ಮೇಲೆತ್ತು’

ನಾಮಪದ ಗೆಲ ‘ಗೆಲುವು’’ ಇೞ ‘ಎಳೆಯುವಿಕೆ’ ಒಡ್ಡ ‘ರಾಶಿ’ ಎತ್ತ ‘ಎತ್ತುವಿಕೆ’

ಉರುಳಿ ‘ಉರುಟಾದ ಪಾತ್ರೆ’, ಎಚ್ಚಱ ‘ಎಚ್ಚರ’ ಮೊದಲಾದ ನಾಮ ಪದಗಳಲ್ಲಿ ಈ ಒಟ್ಟುಗಳನ್ನು ನೇರವಾಗಿ ಕ್ರಿಯಾಬೇರುಗಳಿಗೆ ಸೇರಿಸುವ ಬದಲು, ಅಂತಹ ಕ್ರಿಯಾಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿರುವ ಉರುಳು ‘ಉರುಳು’, ಎಚ್ಚಱ್ ‘ನಿದ್ದೆತಿಳಿ’’ಎಂಬಂತಹ ಕ್ರಿಯಾಪದಗಳಿಗೆ ಸೇರಿಸಿ ನಾಮಪದಗಳನ್ನು ತಯಾರಿಸಲಾಗಿದೆ.

(4) *ಅಯ್ ಒಟ್ಟು: ಕನ್ನಡ ಪದಗಳಲ್ಲಿ ಎಕಾರವೂ ಒಟ್ಟಿನ ಜಾಗದಲ್ಲಿ ಬರಬಲ್ಲುದು; ಆದರೆ, ಇದು ಮೂಲದ್ರಾವಿಡದ *ಅಯ್ ಒಟ್ಟಿನಿಂದ ಬಂದಿದೆ.

ಕ್ರಿಯಾಬೇರು

ನಗು ಕೊಲ್ ‘ಕೊಲ್ಲು’’ ಕಟ್ಟು ‘ಗಟ್ಟಿಯಾಗು’ ಕಿಱ್ ‘ಮುಚ್ಚು’ ಕಿಟ್ಟು ‘ಮುಟ್ಟು’ ಕೆತ್ತು

ನಾಮಪದ ಕಟ್ಟೆ ‘ಕಟ್ಟಿದ ಕಟ್ಟೆ’ ಕೊಲೆ ‘ಕೊಲ್ಲುವಿಕೆ’ ಕೆಱ ‘ನೀರಿನ ಕೆರೆ’ ಗೆಡೆ ‘ಮುಟ್ಟುವಿಕೆ’ ಕೆತ್ತೆ ‘ಚಕ್ಕೆ’’

ತಮಿಳು

ಕಟ್ಟಯ್ ನಕಯ್ ಕೊಲಯ್ — — —

ಮೂಲದ್ರಾವಿಡದಲ್ಲಿ ಇದ್ದಿರಬಹುದಾದ ಬೇರೆ ಕೆಲವು ಒಟ್ಟುಗಳನ್ನು ಕೆಳಗೆ ಕೊಟ್ಟಿರುವ ಕನ್ನಡದ ನಾಮಪದಗಳಲ್ಲಿ ಕಾಣಬಹುದು.

ರಕಾರದ ಅನಂತರ

(5) *ಕಯ್ ಒಟ್ಟು: ಕನ್ನಡದಲ್ಲಿ ಇದಕ್ಕೆ ಗೆ ಎಂಬ ರೂಪವಿದೆ; ರೂಪವಿದೆ. ಬೇರುಗಳೊಂದಿಗೆ ಉದ್ದವಾಗಿರುವ ಪಡೆದು ಮಾತ್ರವಲ್ಲದೆ ಕ್ರಿಯಾಪದಗಳೊಂದಿಗೂ ಈ ಒಟ್ಟು ಬರಬಲ್ಲುದು.

ಒಟ್ಟುಗಳನ್ನು

ಕ್ರಿಯಾಪದ ಅಪ್ಪು
ಕೊಡು

ನಾಮಪದ ಅಪ್ಪುಗೆ ಅದ್ದುಗೆ ‘ಮುಳುಗುವಿಕೆ’’ ಇಡುಗೆ ‘ಇಡುವಿಕೆ’’ ಕೊಡುಗೆ

ಗೆಲುಗೆ

ಸಾರ್ಕೆ ‘ಸಮೀಪಿಸುವಿಕೆ’’ ಸಾರ್ ‘ಬಳಿಗೆ ಬರು’ ಅಳುರ್ ‘ಮುಚ್ಚು’ ಅಳುರ್ಕೆ ‘ಮುಚ್ಚುವಿಕೆ’ ಅಮರ್ ‘ಒತ್ತಾಗಿ ಸೇರು’ ಅಮರ್ಕೆ ‘ಅಮರುವಿಕೆ’

ಇರ್ಕೆ, ಇಕ್ಕೆ ‘ನೆಲೆ’

ಕನ್ನಡದ ಅಱಿಕೆ ‘ತಿಳಿವು’ (ಅಱಿ ‘ತಿಳಿ’), ಉೞಿಕೆ ‘ಉಳಿದುದು’ (ಉೞಿ ‘ಉಳಿ’) ಮೊದಲಾದ ಬೇರೆ ಕೆಲವು ನಾಮಪದಗಳಲ್ಲಿ ಮೂಲ ದ್ರಾವಿಡದ *(ಇ)ಕ್ಕಯ್ ಒಟ್ಟು ಬಂದಿರುವ ಹಾಗೆ ಕಾಣಿಸುತ್ತದೆ.

ಕನ್ನಡದ ಚರಿತ್ರೆಯಲ್ಲಿ ಈ ಒಟ್ಟಿನ ಬಳಕೆ ಬಹಳಶ್ಟು ಹೆಚ್ಚಿದೆ. ಇದಲ್ಲದೆ, ಹೊಸಗನ್ನಡದಲ್ಲಿ ಇಕೆ ಎಂಬ ರೂಪದಲ್ಲಿರುವ ಪದರೂಪ ಯಾವ ಒಟ್ಟೊಂದು ಬಳಕೆಗೆ ಬಂದಿದ್ದು, ಅದರ ಕ್ರಿಯಾಪದದಿಂದ ಬೇಕಿದ್ದರೂ ನಾಮರೂಪಗಳನ್ನು ಪಡೆಯಲು ಸಾದ್ಯವಿದೆ (ಬಟ್ 2002:96 ನೋಡಿ).

ಮೂಲಕ

ಕ್ರಿಯಾಪದ ಕೊಡು
ತಿನ್ನು
ಹೊರಡು

ನಾಮರೂಪ ಇರುವಿಕೆ ಇಳಿಯುವಿಕೆ ಬರೆಯುವಿಕೆ ಕೊಡುವಿಕೆ ತಿನ್ನುವಿಕೆ ಆಡುವಿಕೆ ಹೊರಡುವಿಕೆ

(6) *ಅಮ್ ಒಟ್ಟು: ಕನ್ನಡದಲ್ಲಿ ಇದು ಅ ಎಂಬ ರೂಪದಲ್ಲಿದೆ; ಇದರ ಕೊನೆಯಲ್ಲಿ ಒಂದು ಮಕಾರ ಇದ್ದಿರಬೇಕೆಂಬುದನ್ನು ಕೆಳಗೆ ಕೊಟ್ಟಿರುವ ತಮಿಳು ಪದಗಳು ಸೂಚಿಸುತ್ತವೆ. ಈ ಒಟ್ಟು ಸೇರಿದಾಗ,

ಬೇರುಗಳ ಕೊನೆಯ ಒತ್ತೆ ತಡೆಯುಲಿ ಇಮ್ಮಡಿ ತಡೆಯುಲಿಯಾಗುತ್ತದೆ ಮತ್ತು ಕನ್ನಡದಲ್ಲಿ ಈ ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕಾಣಿಸಿಕೊಳ್ಳುತ್ತದೆ.

ನಾಮಪದ

ಕ್ರಿಯಾಪದ ಆೞ್ ‘ಮುಳುಗು’ ಆೞ ‘ಕೆರೆಯ ಆಳ’
ನಿಲ್ ‘ನಿಲ್ಲು’ ಅಡಕು ಒತ್ತಿಹಿಡಿ’ ಅಡಕ ‘ಒತ್ತುವಿಕೆ’ ನಡುಗು

ಓತ ’ಓದುವಿಕೆ’ ನಡುಕ

ತಮಿಳು

ಆೞಮ್ ನಿಲಮ್ ಅಟಕ್ಕಮ್ ಆಟ್ಟಮ್ ಓಟ್ಟಮ್ ನಟುಕ್ಕಮ್

(7) *ಅಲ್ ಒಟ್ಟು: ಹೊಸಗನ್ನಡದಲ್ಲಿ ಇದು ಉಚ್ಚಾರಣೆಗಾಗಿ ಬಂದ

ಉಕಾರ ಸೇರಿದುದರಿಂದಾಗಿ ಅಲು ಎಂಬ ರೂಪದಲ್ಲಿದೆ.

ಕ್ರಿಯಾಪದ ಊದು ‘ಉಬ್ಬು’
ಒಕ್ಕು ‘ಕಾಳನ್ನು ಬೇಪ್ರಡಿಸು’ ಒಟ್ಟು ‘ರಾಶಿಮಾಡು’ ಕಾಯ್ ‘ಕಾಯು’
ಕೂಡು ‘ಸೇರು’
ತಪ್ಪು
ತೂಱು ‘ಹನಿಯಾಗಿ ಬೀಳು’ ತೊಂಗು ‘ನೇತಾಡು’ ಪಡು ‘ಮಲಗು’

ನಾಮಪದ ಊದಲು ‘ಉಬ್ಬುವಿಕೆ’’ ಒಕ್ಕಲು ‘ಬೇಪ್ರಡಿಸುವಿಕೆ’ ಒಟ್ಟಲು ‘ರಾಶಿ’ ಕಾವಲು ಕೂಡಲು ‘ಸೇರುವ ಜಾಗ’ ತಪ್ಪಲ್ ‘ತಪ್ಪು ಹೆಜ್ಜೆ’ ತೂರಲು ‘ಹನಿ ಮಳೆ’ ತೊಂಗಲ್ ‘ಗೊಂಚಲು’ ಪಡಲ್ ‘ಮಲಗುವಿಕೆ’’

ಪೊಯ್ ‘ಹೊಡೆ’ ಬೀಳು
ಮೆಟ್ಟು

ಪುಯಲ್ ‘ಹೊಡೆತ’’ ಬೀಳಲು ಮೆಟ್ಟಲು

(8) ಬೇರಿನ ಗಿಡ್ಡ ಸ್ವರವನ್ನು ಉದ್ದಸ್ವರವಾಗಿ ಬದಲಾಯಿಸುವುದು: ಮೂಲದ್ರಾವಿಡದ ಕೆಲವು ಕ್ರಿಯಾಬೇರುಗಳ ಗಿಡ್ಡಸ್ವರವನ್ನು ಉದ್ದಸ್ವರವಾಗಿ ಬದಲಾಯಿಸುವುದರ ಮೂಲಕವೂ ಅವನ್ನು ನಾಮಪದಗಳನ್ನಾಗಿ ಬದಲಾ ಯಿಸಲು ಸಾದ್ಯವಿದ್ದಿರಬೇಕು. ಕನ್ನಡದಲ್ಲಿ ಈ ಬದಲಾವಣೆಯನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಕ್ರಿಯಾಪದ

ಕೊಡು
ಇಡು ‘ಇರಿಸು’’
ಕೆಡು ‘ಹಾಳಾಗು’’ ಇಱಿ ‘ಚುಚ್ಚು’

ನಾಮಪದ ಕೋಡು ‘ಕೊಡುವಿಕೆ’’ ಈಡು ‘ಗುರಿಗೆ ಇಟ್ಟುದು’’ ಕೇಡು ‘ಪೀಡೆ’ ಏಱು ‘ಗಾಯ’

(9) ತ ಒಟ್ಟು: ಇದು ಕನ್ನಡದಲ್ಲಿ ಇಕಾರ ಮತ್ತು ಎಕಾರ (ಮೂಲ ದ್ರಾವಿಡದ ಅಯ್)ಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಬಳಕೆಯಾಗುವುದೇ ಜಾಸ್ತಿ. ಇದರ ಅನಂತರ ಎ (ಅಯ್) ಒಟ್ಟೂ ಬರಬಲ್ಲುದು.

(ಕ) ತ ಒಟ್ಟಿನ ಬಳಕೆ:

ಕ್ರಿಯಾಪದ

ನಾಮಪದ

(ಚ) ತ ಒಟ್ಟಿನೊಂದಿಗೆ ಎ (*ಅಯ್) ಒಟ್ಟಿನ ಬಳಕೆ:

ನಡತೆ

ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳದಿರುವ ಕ್ರಿಯಾಪದಗಳ ಕೆಳಗಿನ

ಬರಬಲ್ಲುದೆಂಬುದಕ್ಕೆ

ಅನಂತರವೂ ಈ ಉದಾಹರಣೆಗಳನ್ನು ಕೊಡಬಹುದು.

ಕ್ರಿಯಾಪದ ತಪ್ಪು
ಮೇಯು ಕೊಯ್ಯು

ನೆಗಳ್
ಪೊಗಳ್
ಬಾಳ್

ನಾಮಪದ ತಪ್ಪಿತ ಮೇತ ಕೊಯ್ತ

ನೆಗಳ್ತೆ ಪೊಗಳ್ತೆ ಬಾಳ್ತೆ

(10) ಪು ಒಟ್ಟು:
ಕ್ರಿಯಾಪದ ನೆನೆ

ನಾಮಪದ ನೆನಪು
ಮಡಿಪು
ತೀರ್ಪು
ಬಲ್ಪು

ಕೆಲವು ಪದಗಳಲ್ಲಿ ಇದು (ಕ) ಹು ರೂಪಕ್ಕೆ ಮತ್ತು ಇನ್ನು ಕೆಲವು

ಪದಗಳಲ್ಲಿ (ಚ) ವು ರೂಪಕ್ಕೆ ಬದಲಾಗಿದೆ.

ಕ್ರಿಯಾಪದ ನೆನೆ

ನಾಮಪದ ನೆನಹು

ಮುರಿ

ಮುರುಹು ಬಿಗುಹು

ಸಾಯ್
ಮರೆ

ತಿಳಿವು ಸಾವು ಗೆಲುವು ಮರೆವು

(11 ಮೆ (<*ಮಯ್) ಒಟ್ಟು: ನಾಮಪದ ಬಲುಮೆ ತಾಳ್ಮೆ ಸೋಲ್ಮೆ ಕೂರ್ಮೆ ಗೆಯ್ಮೆ

ಕ್ರಿಯಾಪದ ಸೋಲು

Eke →

9.2.3 ಗುಣಬೇರುಗಳಿಂದ ನಾಮಪದಗಳು

ಗುಣಬೇರುಗಳಿಂದ ನಾಮಪದಗಳನ್ನು ಪಡೆಯುವುದಕ್ಕಾಗಿ ಅವಕ್ಕೆ (ಕ) *ಪ್ಪು (>ಪು, ಬು, ಹು) ಇಲ್ಲವೇ (ಚ) *ಮಯ್ (>ಮೆ) ಒಟ್ಟುಗಳನ್ನು ಸೇರಿಸಿರುವುದಕ್ಕೆ ಕನ್ನಡದಲ್ಲಿ ಕೆಲವು ಉದಾಹರಣೆಗಳಿವೆ.

ಗುಣಬೇರು

ಕಮ್ ಕೆಮ್

ನಾಮಪದ ಕರ್ಪು, ಕಪ್ಪು ಕಂಪು ಕೆಂಪು ತಂಪು

ಗುಣಬೇರು ಮುದು ನುಣ್ ನೀಳ ನೇರ್

ನಾಮಪದ ಕಡುಪು ಮುಪ್ಪು ಬಿಳುಪು ನುಣುಪು ನೀಳ್ಪು ನೇರ್ಪು

ಮುನ್

(ಚ) ಕೀಳ್

ತೆಳ್ಪು ಒಳ್ಪು ಬಲ್ಪು

ಮುಂಬು ಬಿಱುಬು

ಕೀಳ್ಮೆ ಪೆರ್ಮೆ ಎಳವೆ

ಮೆಲ್ ಸಯ್

ನಲ್

ಕೂರ್ಪು ಮೆಲ್ಪು ಸಯ್ಪು

ಒಳುಹು

ನಲ್ಮೆ ಬಲ್ಮೆ

ಕಯ್-ಕಯ್ಪ್ಪುಎಂಬುದರಲ್ಲಿ ಪೆ (<*ಪ್ಪಯ್) ಒಟ್ಟು ಮತ್ತು ಬಿಣ್-

ಬಿಮ್ಮು ಎಂಬುದರಲ್ಲಿ ಮು ಒಟ್ಟು ಕಾಣಿಸುತ್ತದೆ.

ಉಕಾರದಲ್ಲಿ ಕೊನೆಗೊಳ್ಳುವ ಕೆಲವು ಗುಣಪದಗಳಿಗೆ ಅ (<ಅನ್) ಒಟ್ಟನ್ನು ಸೇರಿಸುವ ಮೂಲಕ ಗಂಡಸರನ್ನು ಸೂಚಿಸುವ ನಾಮಪದಗಳನ್ನು ಮತ್ತು ಇ ಒಟ್ಟನ್ನು ಸೇರಿಸುವ ಮೂಲಕ ಹೆಂಗಸರನ್ನು ಸೂಚಿಸುವ ನಾಮ ಪದಗಗಳನ್ನು ಕನ್ನಡದಲ್ಲಿ ಪಡೆಯಲು ಸಾದ್ಯವಿದೆ.

ಗುಣಪದಗಳು ಕುರುಡು
ಕಿವುಡು
ಕುಳ್ಳು
ಮರುಳು ಹುಚ್ಚು
ಚೆಲುವು ಹೆಡ್ಡು

ನಾಮಪದಗಳು ಕುಂಟ, ಕುಂಟಿ ಕುರುಡ, ಕುರುಡಿ ಕಿವುಡ, ಕಿವುಡಿ ಕುಳ್ಳ, ಕುಳ್ಳಿ ಮರುಳ, ಮರುಳಿ ಹುಚ್ಚ, ಹುಚ್ಚಿ ಚೆಲುವ, ಚೆಲುವಿ ಹೆಡ್ಡ, ಹೆಡ್ಡಿ

ಆದರೆ ಇವೆರಡೂ ಇಂಡೋ-ಆರ್ಯನ್ ನುಡಿಗಳಿಂದ ಇತ್ತೀಚೆಗೆ ಎರವ

ಲಾಗಿ ಪಡೆದ ಒಟ್ಟುಗಳಿರಬೇಕು.

Eke →

9.2.4 ಜೋಡುಪದಗಳ ಒಳರಚನೆ

ಸೇರಿಸಿ ಹೊಸದೊಂದು ಪದವನ್ನು ಎರಡು ಪದಗಳನ್ನು ಒಟ್ಟು ತಯಾರಿಸಿದಲ್ಲಿ ಅದನ್ನು ಜೋಡುಪದವೆಂದು ಕರೆಯಲಾಗುತ್ತದೆ. ಇದು ನಾಮಪದಗಳಿಗೆ ಮಾತ್ರವೇ ಸೀಮಿತವಾಗಿರುವ ಪದರಚನೆಯ ಕ್ರಮವಾಗಿದೆ (ಬಟ್ 2002 ನೋಡಿ).

ಈ ರೀತಿ ಜೋಡಿಸಿರುವ ಎರಡು ಪದಗಳಲ್ಲಿ ಎರಡನೆಯದು ಯಾವಾ ಗಲೂ ಮೂಲದ್ರಾವಿಡದಲ್ಲಿ ಒಂದು ನಾಮಪದವಾಗಿರುತ್ತಿತ್ತು. ಆದರೆ ಮೊದಲನೆಯದು ನಾಮಪದವಾಗಿರಬಹುದು, ಕ್ರಿಯಾಪದವಾಗಿರಬಹುದು ಇಲ್ಲವೇ ಗುಣಪದವಾಗಿರಬಹುದು.

ಈ ವಿಶಯವನ್ನವಲಂಬಿಸಿ, ಮೂಲದ್ರಾವಿಡದ ಜೋಡುಪದಗಳನ್ನು ಮೂರು ಗುಂಪುಗಳಲ್ಲಿ ಹಂಚಲು ಸಾದ್ಯವಿದೆ (ಕ್ರುಶ್ಣಮೂರ್ತಿ 2003:200 ನೋಡಿ). ಬಳಕೆಯಲ್ಲಿದೆ (ಬಟ್ 2002). (1) ನಾಮಪದ + ನಾಮಪದ

ಕನ್ನಡದಲ್ಲೂ ಇಂತಹದೇ

ಜೋಡುಪದಗಳ

ಕಣ್ಣೀರು ಕಣ್ + ನೀರು
ಕಾಲಾಳು ಕಾಲು + ಆಳು
ಎಳ್ + ನೆಯ್
ಕನ್ನಡಿ ತೆನ್ ‘ತೆಂಕ’ + ಕಾಯ್ ತೆಂಗು

(2) ಕ್ರಿಯಾಪದ + ನಾಮಪದ ಕನ್ನಡದ ಬಾವಲಿ ನಾಮಪದವನ್ನು ಮೂಲದ್ರಾವಿಡದಲ್ಲಿ *ವಾವ್ ‘ಕಿತ್ತುಕೊಳ್ಳು’ ಕ್ರಿಯಾಪದಕ್ಕೆ *ಯಾಲ್ ‘ಪ್ರಾಣಿ’ ನಾಮಪದವನ್ನು ಸೇರಿಸಿ ತಯಾರಿಸಿರಬೇಕು (ಕ್ರುಶ್ಣಮೂರ್ತಿ 2003:204). ಕನ್ನಡದಲ್ಲಿ ಸುಳಿಗಾಳಿ, ಸುರಿಮಳೆ, ಸಿಡಿಮದ್ದು, ಬೀಸುಗಲ್ಲು, ನಿಲುಗಡೆ, ಜಾರುಬಂಡಿ,

ಊರುಗೋಲು ಮೊದಲಾದ ಬೇರೆಯೂ ಹಲವು ಜೋಡುಪದಗಳನ್ನು ಕ್ರಿಯಾಪದಗಳಿಗೆ ನಾಮಪದಗಳನ್ನು ಸೇರಿಸಿ ರಚಿಸಲಾಗಿದೆ.

(3) ಗುಣಪದ + ನಾಮಪದ

ಮುನ್ + ನಾಳ್ ‘ದಿನ’
ಪೆರ್ + ಪುಲಿ ಮುತ್ ‘ಮುದಿ’ + ಅಜ್ಜಿ
ಕೆಮ್ + ತಾಳಿ
ಮುನ್ + ಕಡ

ಮೊನ್ನೆ ಹೆಬ್ಬುಲಿ ಮುತ್ತಜ್ಜಿ ಮುಂಗಡ

ಕನ್ನಡದ ಮತ್ತು ಬೇರೆ ಹಲವು ದ್ರಾವಿಡ ನುಡಿಗಳ ವ್ಯಾಕರಣಗಳಲ್ಲಿ ಜೋಡುಪದಗಳ ಒಳರಚನೆಯನ್ನು ವಿವರಿಸುವುದಕ್ಕಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ತತ್ಪುರುಶ, ಕರ್ಮದಾರಯ, ಬಹುವ್ರೀಹಿ ಮೊದಲಾದ ಹೆಸರುಗಳನ್ನು ಬಳಸಲಾಗುತ್ತದೆ. ಆದರೆ, ನಿಜಕ್ಕೂ ಈ ಹೆಸರುಗಳು ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಜೋಡುಪದಗಳ ಒಳರಚನೆಯನ್ನು ಸರಿಯಾಗಿ ವಿವರಿಸಲಾರವು.

ಪದಗಳಲ್ಲಿ

ಇದಕ್ಕೆ ಕಾರಣವೇನೆಂದರೆ, ಮೇಲಿನ ಹೆಸರುಗಳು ಜೋಡುಪದಗಳ ಅಂಗಗಳಾಗಿ ಬಂದಿರುವ ಎರಡು ಯಾವುದು ಆ ಜೋಡುಪದದ ಕೇಂದ್ರಬಿಂದುವಾಗಿರುತ್ತದೆ ಎಂಬ ವಿಶಯದ ಮೇಲೆ ಅವಲಂಬಿಸಿವೆ. ಆದರೆ, ಮೇಲೆ ಸೂಚಿಸಿದ ಹಾಗೆ, ದ್ರಾವಿಡ ನುಡಿಗಳಲ್ಲಿ ಈ ವಿಶಯಕ್ಕಿಂತಲೂ ಜೋಡುಪದಗಳಲ್ಲಿ ಎರಡನೆಯ ಪದವಾಗಿ ಎಂತಹ ಪದ (ನಾಮಪದವೇ, ಕ್ರಿಯಾಪದವೇ, ಗುಣಪದವೇ) ಬಂದಿದೆ ಎಂಬ ವಿಶಯವೇ ಮುಕ್ಯವಾದುದರಿಂದ, ಅದನ್ನವಲಂಬಿಸಿರುವ ಹೆಸರುಗಳನ್ನು ಬಳಸುವುದೇ ಒಳ್ಳೆಯದು (ಬಟ್ 2002 ನೋಡಿ).

Eke →

9.3 ಲಿಂಗ ಮತ್ತು ವಚನ

ನಾಮಪದಗಳ ಹಂಚಿಕೆಗೆ ಬಳಕೆಯಾಗುವ ತತ್ವವನ್ನು ಲಿಂಗವೆಂದು ಕರೆಯ ಲಾಗುತ್ತದೆ. ಮೂಲದ್ರಾವಿಡದಲ್ಲಿ ಮತ್ತು ಇವತ್ತಿನ ದ್ರಾವಿಡ ನುಡಿಗಳಲ್ಲಿ ಇದು ನಾಮಪದಗಳ ಅರ್ತವನ್ನವಲಂಬಿಸಿದೆ.

ಲಿಂಗಬೇದ

ಮೂಲದ್ರಾವಿಡದ ಈ

ವಚನಬೇದದೊಂದಿಗೆ ಸೇರಿಕೊಂಡಿದೆಯುಂದು ಹೇಳಬಹುದು. ಯಾಕೆಂದರೆ, ಅವೆರಡನ್ನೂ ಮೂಲದ್ರಾವಿಡದಲ್ಲಿ ಸೂಚಿಸಲಾಗುತ್ತಿತ್ತು. ಇದಲ್ಲದೆ, ಇವತ್ತಿನ ಕೆಲವು ದ್ರಾವಿಡ ನುಡಿಗಳಲ್ಲಿ
ಬೇರೆ ಬೇರೆ ವಚನಗಳಲ್ಲಿ ಬೇರೆ ಬೇರೆ ರೀತಿಯ ಲಿಂಗಬೇದವಿದೆ.

ಮೂಲಕ

Eke →

9.3.1 ಎರಡು ಲಿಂಗಗಳು

ಮೂಲದ್ರಾವಿಡದ ನಾಮಪದಗಳನ್ನು ಅವುಗಳ ಅರ್ತವನ್ನವಲಂಬಿಸಿ (1) ಗಂಡಸರು ಮತ್ತು (2) ಇತರರು (ಹೆಂಗಸರು ಮತ್ತು ಮನುಶ್ಯರಲ್ಲದ ಇತರರು) ಎಂಬುದಾಗಿ ಹಂಚುವ ಕ್ರಮ ಬಳಕೆಯಲ್ಲಿದ್ದಿರಬೇಕು (ಕ್ರುಶ್ಣಮೂರ್ತಿ 2003); ತೆಂಕುದ್ರಾವಿಡ ನುಡಿಗಳಲ್ಲಿ ಕಾಣಿಸುವ ಹಂಚಿಕೆ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿದುದರಿಂದ ಉಂಟಾಗಿರಬೇಕು.

ಒರ್ವಚನದಲ್ಲಿ ಅಳ್ ಒಟ್ಟನ್ನು ಬಳಸುವುದರ ಮೂಲಕ ಈ ನುಡಿಗಳಲ್ಲಿ ಹೆಂಗಸರನ್ನು ಸೂಚಿಸುವುದಕ್ಕಾಗಿ ಒಂದು ಹೊಸ ಲಿಂಗವನ್ನು ಬಳಕೆಗೆ ತರಲಾಯಿತು ಮತ್ತು ಹಲವಚನದಲ್ಲಿ ಗಂಡುಸರು ಮಾತ್ರವೇ ಇರುವ ಗುಂಪನ್ನು ಸೂಚಿಸುತ್ತಿದ್ದ ಅರ್ ಒಟ್ಟಿಗೆ ಗಂಡುಸರು ಮತ್ತು ಹೆಂಗುಸರು ಒಟ್ಟಿಗಿರುವ ಸೂಚಿಸುವ ಅರ್ತವನ್ನೂ ಗುಂಪನ್ನು ಕೊಡಲಾಯಿತು; ಅನಂತರ, ಹೆಂಗಸರು ಮಾತ್ರ ಇರುವ ಗುಂಪನ್ನು ಸೂಚಿಸುವ ಅರ್ತವನ್ನೂ ಅದಕ್ಕೆ ಕೊಡಲಾಯಿತು. ಈ ಬದಲಾಯಿಸಿದ ಹಂಚಿಕೆಯೇ ಇವತ್ತು ಕನ್ನಡದಲ್ಲಿ ಬಳಕೆಯಲ್ಲಿದೆ.

ಕನ್ನಡದ ಒಳನುಡಿಗಳಲ್ಲಿ ಮಾತ್ರ, ತೆಂಕುದ್ರಾವಿಡದ ಈ ಲಿಂಗ- ವಚನದ ಸ್ವರೂಪದಲ್ಲಿ ಕೆಲವು ಬದಲಾವಣೆಗಳಾಗಿವೆ (9.3.3 ನೋಡಿ).

ನಾಮಪದಗಳ ಈ ಹಂಚಿಕೆ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳಲ್ಲಿ, ಗುಣಪದಗಳಲ್ಲಿ, ತೋರುಗ ಪದಗಳಲ್ಲಿ ಮತ್ತು ಎಣಿಕೆಯ ಪದಗಳಲ್ಲಿ ಸೂಚಿತವಾಗುತ್ತದೆ.

ಮತ್ತು

ವಚನಗಳಿಗನುಸಾರವಾಗಿ ಒರ್ವಚನದಲ್ಲಿ

ಉದಾಹರಣೆಗಾಗಿ, ಹಳೆಗನ್ನಡದ ಕ್ರಿಯಾಪದಗಳಿಗೆ ನಾಮಪದಗಳ ಮೂರು ರೂಪಗಳಿವೆ ಮತ್ತು ಹಲವಚನದಲ್ಲಿ ಎರಡು ರೂಪಗಳಿವೆ. ಆದರೆ, ಈ ಕೇಳುಗರನ್ನು ಬಿಟ್ಟು ಇತರರನ್ನು ಲಿಂಗಬೇದ ಆಡುಗ ಸೂಚಿಸಬೇಕಾದಾಗ ಮಾತ್ರ ಕ್ರಿಯಾರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಮತ್ತು

ಗಂಡಸು
ಹೆಂಗಸು

ಒರ್ವಚನ
ಬಂದನ್
ಬಂದಳ್
ಬಂದುದು

ಹಲವಚನ ಬಂದುವು

ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರನ್ನು ಸೂಚಿಸುವಲ್ಲಿ ಕಾಣಿಸುವ ಮೇಲಿನ ಲಿಂಗಬೇದ ಆಡುಗ ಮತ್ತು ಕೇಳುಗರನ್ನು ಸೂಚಿಸುವಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ನಾನ್ ಬಂದೆನ್ ಮತ್ತು ನೀನ್ ಬಂದಯ್ ಎಂಬೆರಡು ವಾಕ್ಯಗಳ ಮೂಲಕ ಆಡುಗ ಮತ್ತು ಕೇಳುಗರ ಬರವನ್ನು ಸೂಚಿಸಲಾಗುತ್ತದೆ; ಆದರೆ, ಹೀಗೆ ಸೂಚಿಸಿರುವ ಇಲ್ಲವೇ ಹೆಂಗಸಾಗಿರಬಹುದು.

ಗಂಡಸಾಗಿರಬಹುದು

ಕೇಳುಗರು

ಮತ್ತು

Eke →

9.3.2 ಎರಡು ವಚನಗಳು

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡದಲ್ಲಿ ಒರ್ವಚನ ಮತ್ತು ಹಲವಚನ ಎಂಬುದಾಗಿ ಎರಡು ವಚನಗಳು ಬಳಕೆಯಲ್ಲಿದ್ದುವು. ಹಲವಚನವನ್ನು ಸೂಚಿಸುವುದಕ್ಕಾಗಿ, ಗಂಡಸರನ್ನು ಸೂಚಿಸುವ ಪದಗಳ ಅನಂತರ *ಅರ್ ಒಟ್ಟನ್ನು ಸೇರಿಸಲಾಗುತ್ತಿತ್ತು ಮತ್ತು ಇತರರನ್ನು ಸೂಚಿಸುವ ಪದಗಳ ಅನಂತರ *ಕಳ್ ಒಟ್ಟನ್ನು ಸೇರಿಸಲಾಗುತ್ತಿತ್ತು.

ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿರುವ (*ಆರ್ ಎಂಬುದರಲ್ಲಿ ಗಂಡಸರೊಂದಿಗೆ ಹೆಂಗಸರನ್ನೂ ಸೇರಿಸಿರುವ) ಬಳಕೆ ಕನ್ನಡದಲ್ಲೂ ಇದೆ (ಅರಸರ್, ಹುಡುಗರು, ಹುಡುಗಿಯರು; ಮರಂಗಳ್, ಎಲೆಗಳು).

ತೆಂಕುದ್ರಾವಿಡದಲ್ಲಿ ಒರ್ವಚನ ಮತ್ತು ಗಂಡಸು-ಹೆಂಗಸು ಲಿಂಗಬೇದ ಇವೆರಡನ್ನು ಒಟ್ಟಿಗೆ ಸೂಚಿಸುವುದಕ್ಕಾಗಿ, ಮನುಶ್ಯರನ್ನು ಸೂಚಿಸುವ ಕೆಲವು ಪದಗಳ ಅನಂತರ *ಅನ್ ಮತ್ತು *ಅಳ್ ಒಟ್ಟುಗಳನ್ನು ಸೇರಿಸುವ ಬಳಕೆ ಯಿತ್ತು. ಕನ್ನಡದಲ್ಲೂ ಈ ಒಟ್ಟುಗಳಿವೆ (ಮಗನ್, ಮಗಳ್).

ಕನ್ನಡದ ಗಳ್ ಒಟ್ಟು ಕರಾವಳಿಯ ಕೆಲವು ಒಳನುಡಿಗಳಲ್ಲಿ ತನ್ನ

ಳಕಾರವನ್ನು ಕಳೆದುಕೊಂಡಿದೆ.

ಕರಾವಳಿಯ ಒಳನುಡಿಗಳು
ಹವ್ಯಕ
ಆನೆಗೊ ಎತ್ತುಗೊ ಮರಂಗೊ

ಮರಂಗ

ಬರಹ ಆನೆಗಳು ಎತ್ತುಗಳು ಮರಗಳು

ಆದರೆ, ಈ ಹಲವಚನ ಒಟ್ಟಿನ ಅನಂತರ ಒತ್ತಿ ಹೇಳುವ ಉದೆ ಒಟ್ಟು ಬಂದಾಗ, ಈ ರೀತಿ ಬಿದ್ದುಹೋಗಿರುವ ಳಕಾರ ತಿರುಗಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ವಾಕ್ಯಗಳನ್ನು ಗಮನಿಸಬಹುದು.

(1ಕ) ಸರ್ಕಸ್ಸಿಲಿ ಮೂರು ಆನೆಗೊ ಇತ್ತಿದ್ದವು ‘ಸರ್ಕಸ್ಸಿನಲ್ಲಿ ಮೂರು ಆನೆಗಳು ಇದ್ದುವು’

(1ಚ) ಸರ್ಕಸ್ಸಿಲಿ ಮೂರು ಆನೆಗಳುದೆ ಇತ್ತಿದ್ದವು ‘ಸರ್ಕಸ್ಸಿನಲ್ಲಿ ಮೂರು ಆನೆಗಳೂ ಇದ್ದುವು’

(1ಕ)ದಲ್ಲಿ ಬಂದಿರುವ ಆನೆಗೊ ಪದ (1ಚ)ದಲ್ಲಿ ಆನೆಗಳ್ ಎಂಬ ರೂಪದಲ್ಲೇ ಇದೆ; ಅದರ ಅನಂತರ ಉದೆ ಒಟ್ಟು ಬಂದಿರುವುದೇ ಇದಕ್ಕೆ

ಸುಳ್ಯದ ಗವ್ಡ ಕನ್ನಡದಲ್ಲೂ ಗಳ್ ಒಟ್ಟು ಳಕಾರವನ್ನು ಕಳೆದುಕೊಂಡು ಗ ರೂಪದಲ್ಲಿ ಬಳಕೆಯಾಗುತ್ತದೆ; ಆದರೆ ಈ ರೀತಿ ಬಿದ್ದು ಹೋಗಿರುವ ಳಕಾರ ವಿಬಕ್ತಿ ಒಟ್ಟುಗಳನ್ನು ಸೇರಿಸಿದಾಗಲೂ ಕಾಣಿಸಿಕೊಳ್ಳುತ್ತದೆ. ಮರಂಗ ‘ಮರಗಳು’ : ಮರಂಗಳ್ನ್ದ ‘ಮರಗಳಿಂದ’. ’ ಬಡಗ ಒಳನುಡಿಯಲ್ಲೂ ಹಲವಚನವನ್ನು

ಎಂಬುದು ಗೊ ಎಂಬುದಾಗಿ ಬದಲಾಗಿದೆ (ಮೊರ ‘ಮರ’ : ಮೊರಗೊ
‘ಮರಗಳು’, ಎತ್ತು ‘ಎತ್ತು’ : ಎತ್ತುಗೊ ‘ಎತ್ತುಗಳು’, ನಂಡು ‘ಏಡಿ’
ನಂಡುಗೊ ‘ಏಡಿಗಳು’).

ಸೂಚಿಸುವ

Eke →

9.3.3 ಲಿಂಗಬೇದದಲ್ಲಿ ಬದಲಾವಣೆ

ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಮೇಲೆ ವಿವರಿಸಿ ದಂತಹ ಕನ್ನಡದ ಲಿಂಗಬೇದ ಸ್ವಲ್ಪ ಮಟ್ಟಿಗೆ ಬದಲಾಗಿದೆ.

(1) ಬಡಗ ಕನ್ನಡದಲ್ಲಿ ಹೆಂಗಸರು ಮತ್ತು ಗಂಡಸರ ನಡುವಿನ ವ್ಯತ್ಯಾಸವನ್ನು ತೋರಿಸದಿರುವ ಹಲವಚನದ ಅರ್ ಒಟ್ಟಿಗೆ ಅಂತಹ ವ್ಯತ್ಯಾಸವನ್ನು ತೋರಿಸದಿರುವ ಬಳಕೆ ಮಾತ್ರ ಇದೆ. ಹೆಂಗಸು-ಗಂಡಸು ವ್ಯತ್ಯಾಸವನ್ನು ತೋರಿಸುವಂತಹ ನಾಮಪದಗಳೊಂದಿಗೆ ಅದರ ಬದಲು ಗೊ ಒಟ್ಟನ್ನೇ ಹಲವಚನದ ಒಟ್ಟಾಗಿ ಬಳಸಲಾಗುತ್ತದೆ.

ಕಳ್ಳ ’‘ಕಳ್ಳ’ ಕರ್ಪ ‘ಕರಿಯ’ ssಸೆಟ್ಟಿ ‘ಸೆಟ್ಟಿ’

ಗಂಡುಸರು ಕಳ್ಳಗೊ
ಕರ್ಪಗೊ
ಸೆಟ್ಟಿಗೊ

ಹೆಂಗುಸರು ಕಳ್ಳಿಗೊ
ಕರ್ಪಿಗೊ
ಸೆಟ್ಟಿಚಿಗೊ

ವ್ಯತ್ಯಾಸವಿಲ್ಲ ಕಳ್ಳರು ಕರ್ಪರು ಸೆಟ್ಟಿಯರು

ಈ ಕಾರಣಕ್ಕಾಗಿ, ನಂಟಸ್ತಿಕೆಯನ್ನು ಸೂಚಿಸುವ ಹೆತ್ತ ‘ಅಜ್ಜ’, ಹೆತ್ತೆ ‘ಅಜ್ಜಿ’, ಅಣ್ಣ ‘ಅಣ್ಣ’, ಅಮ್ಮ ‘ತಾಯಿ’ ಮೊದಲಾದ ಪದಗಳೂ (ಗಂಡುಸು-ಹೆಂಗುಸು ಲಿಂಗಬೇದವನ್ನು (ಹೆತ್ತಗೊ ಹಲವಚನದಲ್ಲಿ ‘ಅಜ್ಜಂದಿರು’, ಹೆತ್ತೆಗೊ ‘ಅಜ್ಜಿಯರು’, ಅಣ್ಣಗೊ ‘ಅಣ್ಣಂದಿರು’, ಅಮ್ಮಗೊ ‘ತಾಯಿಯರು’).

ಗೊ ಒಟ್ಟಿನೊಂದಿಗೆ ಬರುತ್ತವೆ

ಸೂಚಿಸುವ

(2) ಹವ್ಯಕ ಕನ್ನಡದಲ್ಲಿ ಗೊ(ಕೊ) (<ಗಳ್) ಮತ್ತು ಅರ್ ಒಟ್ಟುಗಳ ಬಳಕೆ ಬೇರೊಂದು ರೀತಿಯ ಬದಲಾವಣೆಗೊಳಗಾಗಿದೆ. ಅದರಲ್ಲಿ ನಂಟಸ್ತಿಕೆಯನ್ನು ಮೂಗಿಸಿದ ಅಕಾರದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಮಾತ್ರ ಅರ್ ಒಟ್ಟು ಬಳಕೆಯಾಗುತ್ತದೆ (ಇದಕ್ಕೆ ಮೊದಲು ನಂಟಸ್ತಿಕೆಯನ್ನು ಸೂಚಿಸುವ (9.4 ನೋಡಿ) ನ್್ದ ಒಟ್ಟು ಬರುತ್ತದೆ).

ಸೂಚಿಸುವ

ಮತ್ತು

ಇತರ ನಂಟಸ್ತಿಕೆಯನ್ನು ಸೂಚಿಸುವ ಪದಗಳೊಂದಿಗೆ ಗಳ್ ಒಟ್ಟು (ಅ)ಕ್ಕೊ ರೂಪದಲ್ಲಿ ಬರುತ್ತದೆ; ಮತ್ತು ಇತರ ಎಲ್ಲಾ ಪದಗಳೊಂದಿಗೂ ಅದು ಗೊ ರೂಪದಲ್ಲಿ ಬರುತ್ತದೆ.

(ಕ) ಮೂಗಿಸಿದ ಅಕಾರದಲ್ಲಿ ಕೊನೆಗೊಳ್ಳುವ ನಂಟಸ್ತಿಕೆಯ ಪದಗಳು:

ಒವ್ರಚನ ಅಪ್ಪ ᵒ
ತಮ್ಮᵒ
ಅಳಿಯ ᵒ

ಹಲವಚನ ಅಪ್ಪಂದ್ರು ಅಕ್ಕಂದ್ರು ತಮ್ಮಂದ್ರು ಅಳಿಯಂದ್ರು

(ಚ) ಇತರ ನಂಟಸ್ತಿಕೆಯ ಪದಗಳು: ಅಬ್ಬೆ ‘ತಾಯಿ’

ಅಬ್ಬೆಕ್ಕೊ ಅಜ್ಯಕ್ಕೊ ತಂಗೆಕ್ಕೊ

ಅಪ್ಪಚ್ಚಿ ‘ಚಿಕ್ಕಪ್ಪ’‘

ಅಪ್ಪಚ್ಯಕ್ಕೊ

(ಟ) ಇತರ ನಾಮಪದಗಳು: ಕಳ್ಳ ᵒ
ಮರ ಕೂಸು ‘ಹುಡುಗಿ’ ಮನೆ

ಕಳ್ಳಂಗೊ ಮರಂಗೊ ಕೂಸುಗೊ ಮನೆಗೊ

ಇದಲ್ಲದೆ, ಗವ್ರವವನ್ನು ಸೂಚಿಸಬೇಕಾದಲ್ಲೂ ಕ್ಕೊ ಒಟ್ಟನ್ನು ಬಳಸಲಾಗುತ್ತದೆ. ಈ ಬಳಕೆಯನ್ನು ಮಾಶ್ಟ್ರಕ್ಕೊ, ಬಟ್ಟಕ್ಕೊ ಮೊದಲಾದ ಉದಾಹರಣೆಗಳಲ್ಲಿ ಕಾಣಬಹುದು.

ಸುಳ್ಯದ ಗವ್ಡ ಕನ್ನಡದಲ್ಲೂ ಇಂತಹದೇ ಬಳಕೆ ಕಾಣಿಸುತ್ತದೆ. ಅಕಾರದಲ್ಲಿ ಕೊನೆಗೊಳ್ಳುವ ನಂಟಸ್ತಿಕೆಯ ಪದಗಳೊಂದಿಗೆ ನ್ದರ್ ಒಟ್ಟು (ಅಪ್ಪಂದರ್), ಇತರ ನಂಟಸ್ತಿಕೆಯ ಪದಗಳೊಂದಿಗೆ ಕ ಒಟ್ಟು (ಅತ್ತೆಕ ‘ಅತ್ತೆಯರು’), ಮತ್ತು ಇತರ ಪದಗಳೊಂದಿಗೆ ಗ ಒಟ್ಟು (ಅರ್ಸುಗ ‘ಅರಸರು’, ಕೊತ್ತಿಗ ‘ಬೆಕ್ಕುಗಳು’, ಮರಂಗ ‘ಮರಗಳು’) ಅದರಲ್ಲಿ ಬಳಕೆಯಾಗುತ್ತವೆ.

Eke →

9.4 ನಂಟಸ್ತಿಕೆಯ ಪದಗಳು

ಮೂಲದ್ರಾವಿಡದಲ್ಲಿ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಮೊದಲಾದ ನಂಟಸ್ತಿಕೆಯನ್ನು ಸೂಚಿಸುವ ನಾಮಪದಗಳಿಗೆ ಒಂದು ವಿಶಿಶ್ಟವಾದ ಜಾಗವನ್ನು ಕಲ್ಪಿಸಬೇಕಾಗುತ್ತದೆ. ಇವು ಕನ್ನಡದಲ್ಲಿ ಇರುವ ಹಾಗೆ, ಬರಿಯ ನಂಟಸ್ತಿಕೆಯನ್ನು ಮಾತ್ರವೇ ತಿಳಿಸದೆ, ಆ ನಂಟಸ್ತಿಕೆ ಯಾರೊಡನಿದೆ ಎಂಬುದನ್ನೂ ತಿಳಿಸುತ್ತಿದ್ದಿರಬೇಕು. ಇದಕ್ಕಾಗಿ, ಮೂಲದ್ರಾವಿಡದಲ್ಲಿ ಈ ಪದಗಳನ್ನು ಎನ್, ನಿನ್ ಮತ್ತು ತನ್ ಎಂಬ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವ ಮೂರು ಆಡುಗ ಪದಗಳೊಂದಿಗೆ ಸೇರಿಸಿಯೇ ಬಳಸುತ್ತಿದ್ದಿರಬೇಕು. ಇವತ್ತು ಈ

ವಿದಾನವನ್ನು ಕೋಲಾಮಿ, ಕುಡುಕ್ ಮೊದಲಾದ ಕೆಲವೇ ಕೆಲವು ದ್ರಾವಿಡ ನುಡಿಗಳು ಮಾತ್ರ ಉಳಿಸಿಕೊಂಡಿವೆ. ಹಳೆಯ ತಮಿಳಿನಲ್ಲೂ ಇಂತಹ ಆಡುಗ ಪದಗಳ ಬಳಕೆಯಿತ್ತು.

ಹಳೆಯ ತಮಿಳು ನುಂತಯ್ ತಂತಯ್

ನುಂಕಯ್ ತಂಕಯ್

ಕುಡುಕ್ ನಿಂಬಸ್ ತಂಬಸ್

ಕನ್ನಡ ನನ್ನ ತಂದೆ ನಿನ್ನ ತಂದೆ ಅವನ ತಂದೆ

ನನ್ನ ತಂಗಿ ನಿನ್ನ ತಂಗಿ ಅವನ ತಂಗಿ

ಕನ್ನಡದ ತಮ್ಮ, ತಂಗಿ, ತಂದೆ ಮತ್ತು ತಾಯಿ ಪದಗಳ ಸುರುವಿಗೆ ಬರುವ ತಕಾರ ಮೂಲದ್ರಾವಿಡದಲ್ಲಿ ‘ಅವನ’ ಎಂಬ ಅರ್ತವನ್ನು ಕೊಡಬಲ್ಲ ಮೂಲದ್ರಾವಿಡದಲ್ಲಿ ಅದಕ್ಕಿದ್ದ ಈ ಅರ್ತ ಕನ್ನಡದಲ್ಲಿ ಅಳಿದುಹೋಗಿದೆ.

ಪಳೆಯಳಿಕೆಯಾಗಿದೆ.

ಪದದ

ಹಾಗಾಗಿ, ಈ ಪದಗಳನ್ನು ಕನ್ನಡದಲ್ಲಿ ನನ್ನ, ನಿನ್ನ ಮೊದಲಾದ ಆಡುಗ ಪದಗಳೊಂದಿಗೆ ಸೇರಿಸಿಯೂ (ನನ್ನ ತಮ್ಮ, ನಿನ್ನ ತಮ್ಮ ಮೊದಲಾದವುಗಳಲ್ಲಿ ಕಾಣಿಸುವ ಹಾಗೆ) ಬಳಸಲು ಸಾದ್ಯವಾಗುತ್ತಿದೆ.

ಕನ್ನಡದ ನಂಟಸ್ತಿಕೆಯ ಪದಗಳು ಇನ್ನೊಂದು ವಿಶಯದಲ್ಲೂ ಇತರ ಪದಗಳಿಗಿಂತ ಬೇರಾಗಿವೆ. ಏಕವಚನದಲ್ಲಿ ಗಂಡಸನ್ನು ಸೂಚಿಸುವ ಒಟ್ಟು ರೂಪದಲ್ಲಿದ್ದಿರಬೇಕೆಂದು ಮೂಲದ್ರಾವಿಡದಲ್ಲಿ ಕಲ್ಪಿಸಲಾಗಿದೆ. ಕನ್ನಡದಲ್ಲಿ ಮತ್ತು ತೆಂಕುದ್ರಾವಿಡದ ಇತರ ನುಡಿಗಳಲ್ಲಿ ಇದು ಅನ್ ಎಂಬ ರೂಪಕ್ಕೆ ಬದಲಾಗಿದೆ.

*ಅನ್ಱ್ ಎಂಬ

ಆದರೆ ನಂಟಸ್ತಿಕೆಯನ್ನು ಸೂಚಿಸುವ ಪದಗಳ ಹಲವಚನ ರೂಪದಲ್ಲಿ ಇವತ್ತಿಗೂ ಈ ಒಟ್ಟು ಅನ್ಱ್ ಎಂಬ ರೂಪದಲ್ಲೇನೇ (ಎಂದರೆ ಅನ್ಱ್ ಎಂಬುದು ಅನ್್ದ ಎಂಬ ಮೂಲಕ)

ರೂಪಕ್ಕೆ ಬದಲಾಗುವ

ಪಳೆಯಳಿಕೆಯಾಗಿ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ. ತಾಯಂದಿರು ಎಂಬಲ್ಲಿ ಇದು ಅಕಾರದಲ್ಲಿ ಕೊನೆಗೊಳ್ಳದಿರುವ ಪದಗಳಿಗೂ ಹರಡಿರುವ ಹಾಗೆ ಕಾಣಿಸುತ್ತದೆ.

ಮಾವ

ಅಣ್ಣಂದಿರು ಅಕ್ಕಂದಿರು ಮಾವಂದಿರು

Eke →

9.5 ಸಂಬಂದದ ಒಟ್ಟು

ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟೆಂಬುದು ಒಂದು ವಿಬಕ್ತಿಯ ಒಟ್ಟಾಗಿರಲಿಲ್ಲ. ಯಾಕೆಂದರೆ, ನಾಮಪದಗಳನ್ನು ಕ್ರಿಯಾಪದದೊಂದಿಗೆ ಸಂಬಂದಿಸುವುದಕ್ಕಾಗಿ ಅದನ್ನು ಬಳಸುತ್ತಿರಲಿಲ್ಲ.

ಸಂಬಂದಿಸಬೇಕಾದಾಗ

ಇದಕ್ಕೆ ಬದಲು, ಒಂದು ನಾಮಪದವನ್ನು ಇನ್ನೊಂದು ನಾಮಪದ (ಎಂದರೆ ಅದನ್ನು ಎರಡನೇ ದೊಂದಿಗೆ ನಾಮಪದದ ವಿಶೇಶಣವಾಗಿ ಗುಣಪದದ ಜಾಗದಲ್ಲಿ ಬಳಸಬೇಕಾದಾಗ), ಅದಕ್ಕೆ ಈ ಸಂಬಂದದ ಒಟ್ಟನ್ನು ಸೇರಿಸಲಾಗುತ್ತಿತ್ತು. ಕನ್ನಡದಲ್ಲೂ ಇದೇ ಕೆಲಸಕ್ಕಾಗಿ ಸಂಬಂದದ ಒಟ್ಟನ್ನು ಬಳಸಲಾಗುತ್ತದೆ (ಬೆಕ್ಕಿನ ಕಣ್ಣು, ಹುಲಿಯ ಹಲ್ಲು, ಹುಡುಗನ ಕಾಲು). ನಾಮಪದಗಳಿಗೆ

ಒಟ್ಟುಗಳನ್ನು ಸೇರಿಸಬೇಕಾದಾಗಲೂ ಮೊದಲಿಗೆ ಅವಕ್ಕೆ ಸಂಬಂದದ ಒಟ್ಟನ್ನು ಸೇರಿಸುವ ಅವಶ್ಯಕತೆಯಿತ್ತು. ಮೂಲದ್ರಾವಿಡದ ವಿಬಕ್ತಿ ಒಟ್ಟುಗಳೆಲ್ಲ ಮೊದಲಿಗೆ ನಾಮಪದಗಳಾಗಿದ್ದುದೇ ಇದಕ್ಕೆ ಕಾರಣವಿರಬೇಕು.

ಇದಲ್ಲದೆ,

Eke →

9.5.1 ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟು

ಎರಡು ನಾಮಪದಗಳ ನಡುವಿನ ಸಂಬಂದವನ್ನು ಸೂಚಿಸುವ ಈ ಒಟ್ಟಿಗೆ ಮೂಲದ್ರಾವಿಡದಲ್ಲಿ ಅಕಾರ ಇಲ್ಲವೇ ಇಕಾರದೊಂದಿಗೆ ತ್ತ ಇಲ್ಲವೇ ನ ಎಂಬುದನ್ನು (ಇಲ್ಲವೇ ಅವೆರಡನ್ನೂ) ಸೇರಿಸಿರುವ *ಅತ್ತ, *ಇತ್ತ, *ಅನ, *ಇನ, *ಅತ್ತಿನ, *ಇತ್ತಿನ, *ಅನ್ತ ಮೊದಲಾದ ಹಲವು

ರೂಪಗಳಿದ್ದಿರಬೇಕು. ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ಸ್ಪಶ್ಟವಾಗಿ ನಿರ್ದರಿಸಲು ಇನ್ನೂ ಸಾದ್ಯವಾಗಿಲ್ಲ.

ಕನ್ನಡದಲ್ಲಿ ಈ ಸೇರಿಕೆಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು

ಕೆಳಗೆ ವಿವರಿಸಲಾಗಿದೆ.

(1) ಅತ್ತ/ಇತ್ತ ಎಂಬುದು ದ ರೂಪದಲ್ಲಿ ಅನ್ (ಇಲ್ಲವೇ ಅಮ್) ಎಂಬುದರಲ್ಲಿ ಮನುಶ್ಯರನ್ನು ಕೊನೆಗೊಳ್ಳುವ ಹೊರತುಪಡಿಸಿ ಇತರರನ್ನು ಸೂಚಿಸುವ ಪದಗಳ ಸಂಬಂದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ (ಮರನ್ - ಮರದ, ಪೊಲನ್ - ಪೊಲದ, ನೆಲನ್

  • ನೆಲದ).

ಮತ್ತು

(2) *ಇನ ಎಂಬುದು ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಅನಂತರ ಕಾಣಿಸಿಕೊಳ್ಳುತ್ತದೆ (ಅಂದು- ಅಂದಿನ, ಇಂದು - ಇಂದಿನ, ಮಡು - ಮಡುವಿನ).

(3) *ಅನ ಎಂಬುದು *ಅಣ ರೂಪದಲ್ಲಿ ಅತ್ತಣ, ಇತ್ತಣ, ತೆಂಕಣ, ಪಡುವಣ, ಬಡಗಣ, ಮೂಡಣ ಎಂಬ ಈ ಎಂಟು ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ದಿಕ್ಕನ್ನು ಸೂಚಿಸುವ ಮೇಗಣ, ಕೆಳಗಣ, ಪೊಱಗಣ, ಅತ್ತಣ, ಇತ್ತಣ ಪದಗಳಲ್ಲೂ ಇದೇ ಅಣ ಒಟ್ಟು ಬಂದಿದೆ. ಇಲ್ಲಿ ನಕಾರ ಣಕಾರ ಹೇಗಾಯಿತೆಂಬುದು ಸ್ಪಶ್ಟವಾಗಿಲ್ಲ.

(4) *ಅನ್ತ ಎಂಬುದು ತೆಂಕುದ್ರಾವಿಡದಲ್ಲಿ ಅನ್ಱ ಎಂಬುದಾಗಿ ಬದಲಾಗಿದ್ದು, ಕನ್ನಡದಲ್ಲಿ ಅದರ ಮೂಗುಲಿ ಬಿದ್ದುಹೋಗಿ ಅರ (<ಅಱ) ಎಂದಾಗಿದೆ. ಇದು ಕೆಳಗಿನ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. (ಕ) ಎಣಿಕೆಯ ಪದಗಳು (ಒಂದರ, ಎರಡರ, ಮೂರರ),
(ಚ) ಮನುಶ್ಯರನ್ನು ಬಿಟ್ಟು ಇತರರನ್ನು ಸೂಚಿಸುವ ತೋರುಗ

ಪದಗಳು (ಅದರ, ಇದರ, ಯಾವುದರ),

(ಟ) ತು, ತ್ತು, ಸು, ಟುಗಳಲ್ಲಿ ಕೊನೆಗೊಳ್ಳುವ ಮತ್ತು

ಪ್ರಮಾಣವನ್ನು ಸೂಚಿಸುವ ಪದಗಳು (ಅನಿತರ, ಅಶ್ಟರ),

(ತ) ತು, ತ್ತು, ದುಗಳಲ್ಲಿ ಕೊನೆಗೊಳ್ಳುವ ಗುಣಪದಗಳು (ಕಿರಿದರ,

ದೊಡ್ಡದರ),

(ಪ) ಉದು ಮತ್ತು ಅದುಗಳಲ್ಲಿ ಕೊನೆಗೊಳ್ಳುವ ಕ್ರಿಯಾರೂಪಗಳು

(ಮಾಡಿದುದರ, ಮಾಡುವದರ),

(ಗ) ಎಲ್ಲ ಎಂಬುದು (ಎಲ್ಲರ), ಮತ್ತು
(ಜ) ಏನ್ ಎಂಬುದು (ಏತಱ).

Eke →

9.5.2 ವಿಬಕ್ತಿ ಒಟ್ಟುಗಳೊಂದಿಗಿನ ಬಳಕೆ

ಮೂಲದ್ರಾವಿಡದಲ್ಲಿ ವಿಬಕ್ತಿಯ ಒಟ್ಟುಗಳನ್ನು ನೇರವಾಗಿ ನಾಮಪದಗಳಿಗೆ ಸೇರಿಸುವ ಬದಲು ಅವುಗಳ ಸಂಬಂದ ರೂಪಕ್ಕೆ ಸೇರಿಸಲಾಗುತ್ತಿತ್ತೆಂದು ಮೇಲೆ ಸೂಚಿಸಲಾಗಿತ್ತು. ಮೂಲದ್ರಾವಿಡದ ವಿಬಕ್ತಿ ಒಟ್ಟುಗಳೆಲ್ಲ ನಾಮ ಪದಗಳ ಪಳೆಯಳಿಕೆಗಳಾಗಿದ್ದುದೇ ಇದಕ್ಕೆ ಕಾರಣವಿರಬೇಕು. ಈ ಕಾರಣ ಕ್ಕಾಗಿ, ಅವನ್ನು ನಾಮಪದಗಳ ಅನಂತರ ಬಳಸಬೇಕಾದಾಗಲೆಲ್ಲ ಆ ನಾಮ ಪದಗಳಿಗೆ ಸಂಬಂದದ ಒಟ್ಟನ್ನು ಸೇರಿಸಿ ಅವನ್ನು ವಿಶೇಶಣ ರೂಪಕ್ಕೆ ಬದಲಾಯಿಸಬೇಕಾಗಿತ್ತು.

ಮತ್ತು

ಜಾಗಗಳೆಂಬ ಉಳಿದ

ಹಳೆಗನ್ನಡದ ನಾಲ್ಕು ವಿಬಕ್ತಿಗಳಲ್ಲಿ ಆಗುಗವೊಂದನ್ನು ಬಿಟ್ಟು ಸುರು, ಕೊನೆ ಮೂರು ವಿಬಕ್ತಿಗಳು ಮೂಲದ್ರಾವಿಡದ ಈ ಬಳಕೆಯನ್ನು ಉಳಿಸಿಕೊಂಡಿವೆ. ಅವನ್ನು ಸೂಚಿಸುವ ಒಟ್ಟುಗಳನ್ನು ನಾಮಪದಗಳಿಗೆ ನೇರವಾಗಿ ಸೇರಿಸುವ ಬದಲು, ಅವುಗಳ ಸಂಬಂದರೂಪದೊಂದಿಗೆ ಸೇರಿಸಲಾಗುತ್ತದೆ. ಆದರೆ, ಆಗುಗ ಒಟ್ಟು ಮಾತ್ರ ನಾಮಪದಕ್ಕೆ ನೇರವಾಗಿ ಸೇರಿಕೊಳ್ಳುತ್ತದೆ.

ಸಂಬಂದ ಮಗನ

ಮಗನೊಳ್

ಕಿಚ್ಚಿನೊಳ್

ಆಟದೊಳ್

ಸುರು ಮಗನಿನ್

ಕಿಚ್ಚಿನಿನ್

ಕೊನೆ ಮಗಂಗೆ

ಮಗನನ್

ಕಿಚ್ಚನ್

ಆಟಮನ್

ಅದಱೂಳ್

ಅದಱಿನ್

ಎತ್ತಣಿನ್

ಮೇಲಿನ ಉದಾಹರಣೆಗಳಲ್ಲಿ ಕಾಣಿಸಿದ ಹಾಗೆ, ಜಾಗ, ಸುರು ಮತ್ತು  ಕೊನೆಗಳನ್ನು ಸೂಚಿಸುವ ಒಳ್, ಇನ್ ಮತ್ತು ಗೆ ಒಟ್ಟುಗಳು ಸೇರಿದಾಗ,  ನಾಮಪದಗಳ  ಮುಂದೆ  ಇನ್,  ದ್,  ಅಱ್  ಮತ್ತು  ಅಣ್  ಎಂಬವುಗಳು  ಬರುತ್ತವೆ. 

ಸಂಬಂದಿಸುವ ಅ ಒಟ್ಟಿಗೂ ಈ ನಾಮಪದಗಳ ಅನಂತರ ಇನ್, ದ್, ಅಱ್ ಮತ್ತು ಅಣ್ ಸೇರಿರುವ ರೂಪಗಳಿರುವುದನ್ನು ಮೊದಲನೆಯ ಕಾಲಂನಲ್ಲಿ ಕಾಣಬಹುದು. ಹಾಗಾಗಿ, ಇಲ್ಲಿ ಜಾಗ, ಸುರು ಮತ್ತು ಕೊನೆ ಒಟ್ಟುಗಳು ನಾಮಪದಗಳಿಗೆ ನೇರವಾಗಿ ಸೇರುವ ಬದಲು ಸಂಬಂದಿಸುವ ಒಟ್ಟಿನ ಅನಂತರ ಸೇರುತ್ತವೆಯುಂದು ಹೇಳಲು ಸಾದ್ಯವಿದೆ.

ಆದರೆ, ಈ ನಾಮಪದಗಳಿಗೆ ಆಗುಗವನ್ನು ಸೂಚಿಸುವ ಅನ್ ಒಟ್ಟನ್ನು ಸೇರಿಸಿದಾಗ, ಇನ್, ದ್, ಅಱ್ ಮತ್ತು ಅಣ್ ಎಂಬವುಗಳು ಬರುವುದಿಲ್ಲ. ಆ ಒಟ್ಟನ್ನು ನಾಮಪದಗಳಿಗೆ ನೇರವಾಗಿ ಸೇರಿಸಲಾಗಿದೆ.

Eke →

9.5.3 ಕನ್ನಡದ ಬದಲಾವಣೆಗಳು

ಸಂಬಂದಿಸುವ ಒಟ್ಟಿನ ರೂಪದಲ್ಲಿ ಮತ್ತು ಬಳಕೆಯಲ್ಲಿ ಕನ್ನಡದ ಒಳನುಡಿ ಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ಸೂಚಿಸಲಾಗಿದೆ.

(1) ಒಂಬತ್ತನೇ ಶತಮಾನಕ್ಕಿಂತಲೂ ಹಿಂದಿನ ಕನ್ನಡ ಬರಹಗಳಲ್ಲಿ ಸಂಬಂದದ ಒಟ್ಟಿಗೆ ಆ ಎಂಬ ಉದ್ದಸ್ವರವಿರುವ ರೂಪವಿತ್ತು. ಉದಾಹರಣೆಗಾಗಿ, ಆರನೆಯ ಶತಮಾನದ ಶಾಸನವೊಂದರಲ್ಲಿ ಬಂದಿರುವ ಏೞನೆಯಾ ನರಕದಾ ಪುೞು ಅಕ್ಕುಂ ವಾಕ್ಯವನ್ನು ಗಮನಿಸಬಹುದು.

(2) ಕರಾವಳಿಯ ಒಳನುಡಿಗಳಲ್ಲಿ ಸುರು ಮತ್ತು ಜಾಗಗಳನ್ನು ಸೂಚಿಸುವ ಒಟ್ಟುಗಳನ್ನು ನಾಮಪದಗಳಿಗೆ ನೇರವಾಗಿ ಸೇರಿಸಲಾಗುತ್ತದೆ. ಅವಕ್ಕೂ ನಾಮಪದಗಳಿಗೂ ನಡುವೆ ಸಂಬಂದಿಸುವ ಒಟ್ಟು ಬರುವುದಿಲ್ಲ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಪದರೂಪಗಳನ್ನು ಗಮನಿಸಬಹುದು.

(ಕ) ಸುರು ಒಟ್ಟು:

ಹವ್ಯಕ ಕನ್ನಡ ಮರಂದ
ಕಲ್ಲಿಂದ
ಮೆಡಿಂದ ಮನೆಂದ

(ಚ) ಜಾಗ ಒಟ್ಟು:

ಹವ್ಯಕ ಕನ್ನಡ ಮರಲ್ಲಿ
ಕಲ್ಲಿಲಿ
ಮೆಡಿಲಿ
ಮನೆಲಿ

ಬರಹ ಕನ್ನಡ ಮರದಿಂದ ಕಲ್ಲಿನಿಂದ ಮಿಡಿಯಿಂದ ಮನೆಯಿಂದ

ಬರಹ ಕನ್ನಡ ಮರದಲ್ಲಿ ಕಾಡಿನಲ್ಲಿ ಕಲ್ಲಿನಲ್ಲಿ ಮಿಡಿಯಲ್ಲಿ ಮನೆಯಲ್ಲಿ

ಬರಹ

ಕನ್ನಡದಲ್ಲಿ

ನಾಮಪದಗಳಿಗೆ ಇಂದ ಮತ್ತು ಅಲ್ಲಿ ಒಟ್ಟುಗಳನ್ನು ಸೇರಿಸುವ ಮೊದಲು ಅವಕ್ಕೆ ದ್, ಇನ್ ಮೊದಲಾದುವನ್ನು ಸೇರಿಸಬೇಕಾಗುತ್ತದೆ, ಹವ್ಯಕ ಕನ್ನಡದಲ್ಲಿ ಇದು ಅವಶ್ಯವಿಲ್ಲ ಎಂಬುದನ್ನು ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು.

ಆದರೆ, ಸಂಬಂದಿಸುವ ರೂಪದಲ್ಲಿ ಅ ಎಂಬುದರೊಂದಿಗೆ ಅರ್ ಎಂಬುದನ್ನು ಪಡೆಯುವ ನಾಮಪದಗಳಿಗೆ ಮಾತ್ರ ಹವ್ಯಕ ಕನ್ನಡದಲ್ಲೂ ಸುರು ಮತ್ತು ಜಾಗ ಒಟ್ಟುಗಳು ನೇರವಾಗಿ ಸೇರದೆ ಅರ್ ಎಂಬುದರ ಅನಂತರ (ಎಂದರೆ ನಾಮಪದಗಳ ಸಂಬಂದಿಸುವ ರೂಪದೊಂದಿಗೆ) ಸೇರುತ್ತವೆ. ಹವ್ಯಕ ಕನ್ನಡದ ಅದರಂದ, ಅದರಲ್ಲಿ, ಮೂರರಂದ,

ಮೂರರಲ್ಲಿ ಮೊದಲಾದ ರೂಪಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಸುಳ್ಯದ

ಪದರೂಪಗಳು ಬಳಕೆಯಲ್ಲಿವೆ (ಮರಂದ, ಏಣಿಂದ, ಅದರಂದ; ಮರಲಿ, ಏಣಿಲಿ,

ಕನ್ನಡದಲ್ಲೂ ಇಂತಹವೇ

ಗವ್ಡ

(3) ಬಡಗ ಕನ್ನಡದಲ್ಲಿಯೂ ಎಂದ (<ಇಂದ) ಒಟ್ಟನ್ನು ನಾಮಪದ ಗಳಿಗೆ ನೇರವಾಗಿ ಸೇರಿಸಲು ಸಾದ್ಯವಿದೆ. ಆದರೆ, ಆ ರೀತಿ ಪಡೆದ ಪದರೂಪಗಳನ್ನು ಅದರಲ್ಲಿ ಒಂದು ಕೆಲಸದ ‘ಕರಣ’ (2ಕ) ಇಲ್ಲವೇ ‘ಕಾರಣ’ವನ್ನು (2ಚ) ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ. ‘ಚಲನೆಯ ಸುರು’ ಎಂಬ ಅರ್ತವನ್ನು ಕೊಡಬೇಕಾದಲ್ಲಿ ಮಾತ್ರ (2ತ) ಬರಹ ಕನ್ನಡದ ಹಾಗೆ ಇಂದ ಒಟ್ಟನ್ನು ಸಂಬಂದ ಒಟ್ಟಿನ ಅನಂತರ ಬಳಸಲಾಗುತ್ತದೆ.

(2ಕ) ಮೊರಾಂದ ಮನೆ ಕೆಟ್ಟು ‘ಮರದಿಂದ ಮನೆ ಕಟ್ಟು’ (2ಚ) ಅಮಗ ದನಾಂದ ಹಣ ಕಿಟ್ಟಿರ ‘ನಮಗೆ ದನದಿಂದ ಹಣ ಸಿಕ್ಕಿದೆ’

(2ತ) ಮೊರನಿಂದ ಹಣ್ಣು ಬುದ್ದ ‘ಮರದಿಂದ ಹಣ್ಣು ಬಿತ್ತು’

(4) ಕರಾವಳಿಯ ಒಳನುಡಿಗಳಲ್ಲಿ ನಾಮಪದಗಳಿಗೆ ಆಗುಗ ಒಟ್ಟನ್ನು ಸೇರಿಸುವ ಮೊದಲು ಇನ್ ಮತ್ತು ಅರ್ ಎಂಬವುಗಳನ್ನು (ಸಂಬಂದಿಸುವ ಒಟ್ಟನ್ನು) ಸೇರಿಸುವ ಅವಶ್ಯಕತೆಯಿದೆ. ಆದರೆ ಕನ್ನಡದ ಇತರ ಒಳನುಡಿ ಗಳಲ್ಲಿ ಇದು ಅವಶ್ಯವಿಲ್ಲ.

ಹವ್ಯಕ ಕನ್ನಡ

ಬರಹ ಕನ್ನಡ ಕಾಡನ್ನು

ಕಲ್ಲಿನ
ಹತ್ತರ

ಕಲ್ಲನ್ನು ಹತ್ತನ್ನು ಅದನ್ನು

ಇಂತಹ ಸಂದಭ್ರಗಳಲ್ಲಿ ಕರಾವಳಿಯ ಒಳನುಡಿಗಳು ಆಗುಗ ಒಟ್ಟನ್ನೂ ನೇರವಾಗಿ ನಾಮಪದಕ್ಕೆ ಸೇರಿಸದೆ ಅವುಗಳ ಸಂಬಂದ ರೂಪಕ್ಕೆ ಸೇರಿಸುತ್ತವೆಯುಂದು ಮತ್ತು ಈ ವಿಶಯದಲ್ಲಿ ಅವು ಮೂಲದ್ರಾವಿಡದ ಬಳಕೆಯನ್ನು ಉಳಿಸಿಕೊಂಡಿವೆಯುಂದು ಹೇಳಲು ಸಾದ್ಯವಿದೆ.

ಆದರೆ, ಅಕಾರದಲ್ಲಿ ಕೊನೆಗೊಳ್ಳುವ ಮರ, ಆಟ ಮೊದಲಾದ ಪದಗಳಿಗೆ ನೇರವಾಗಿಯೇ ಸೇರಿಸಲಾಗುತ್ತದೆ. ಇವುಗಳ ಆಗುಗರೂಪ ಮತ್ತು ಸಂಬಂದಿಸುವ ರೂಪಗಳ ನಡುವೆ ವ್ಯತ್ಯಾಸವಿದೆ.

ಆಗುಗ ಒಟ್ಟನ್ನು

ಹವ್ಯಕದಲ್ಲೂ

ಆಗುಗ ರೂಪ ಮರವ
ಬೀಜವ

ಸಂಬಂದಿಸುವ ರೂಪ ಮರದ

ಸುಳ್ಯದ ಗವ್ಡ ಕನ್ನಡದಲ್ಲೂ ಮರ ಪದದ ಆಗುಗ ರೂಪ ಮರನ

ಎಂದಿದೆ ಮತ್ತು ಸಂಬಂದಿಸುವ ರೂಪ ಮರದ ಎಂದಿದೆ.

(4) ಬಡಗ ಕನ್ನಡದಲ್ಲಿ ಸಂಬಂದಿಸುವ ಒಟ್ಟು ಬೇರೆ ಕೆಲವು ಬದಲಾ ವಣೆಗಳಿಗೊಳಗಾಗಿದೆ. ಅದರ ದ ರೂಪ ಆ ಒಟ್ಟಿನ ಅನಂತರ ಜಾಗವನ್ನು ಸೂಚಿಸುವ ವಿಬಕ್ತಿ ಒಟ್ಟು (ಒ (<ಒಳ್) ಎಂಬುದು ಬಂದಿರುವಲ್ಲಿ ಮಾತ್ರ) ಉಳಿದಿದೆ (ಕೂಟದೊ ‘ಕೂಟದಲ್ಲಿ’, ಮೊರದೊ ‘ಮರದಲ್ಲಿ’). ಉಳಿದೆಡೆಗಳಲ್ಲಿ ಅದಕ್ಕೆ ನ ರೂಪವಿದೆ (ಮೊರನ ‘ಮರದ’, ದನನಿಂದ ‘ದನದಿಂದ’).

ಇದಲ್ಲದೆ, ಉಕಾರದಲ್ಲಿ ಕೊನೆಗೊಳ್ಳುವ ನಾಮಪದಗಳ ಅನಂತರವೂ ಜಾಗ ಒಟ್ಟಿನೊಂದಿಗೆ ಬರುವ ಸಂಬಂದಿಸುವ ಒಟ್ಟಿಗೆ ಬಡಗ ಕನ್ನಡದಲ್ಲಿ ದ ರೂಪವಿದೆ (ಕಾಡುದೊ ‘ಕಾಡಿನಲ್ಲಿ’, ಕಣ್ಣುದೊ ‘ಕಣ್ಣಿನಲ್ಲಿ’).

Eke →

9.6 ವಿಬಕ್ತಿ ಒಟ್ಟುಗಳು

ನಾಮಪದ ಮತ್ತು ಕ್ರಿಯಾಪದಗಳ ಸಂಬಂದಗಳನ್ನು ಸೂಚಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅಯ್ದು ವಿಬಕ್ತಿಗಳ ಬಳಕೆಯಾಗು ತ್ತಿದ್ದಿರಬೇಕೆಂದು ಕಲ್ಪಿಸಲಾಗಿದೆ. ಆಗುಗ, ಸುರು, ಕೊನೆ, ಜಾಗ ಮತ್ತು ಒಡನೆ ಎಂಬುದಾಗಿ ಈ ವಿಬಕ್ತಿಗಳನ್ನು ಹೆಸರಿಸಬಹುದು. ಇವುಗಳಲ್ಲಿ ಮೊದಲನೆಯ ನಾಲ್ಕು ವಿಬಕ್ತಿಗಳು ಮಾತ್ರ ಕನ್ನಡದಲ್ಲಿ ಉಳಿದಿವೆ.

ನಡುವಿರುವ

ನಾಮಪದಕ್ಕೆ ಎರಡು

ಈ ವಿಬಕ್ತಿಗಳನ್ನು ಸೂಚಿಸುವ ಒಟ್ಟುಗಳನ್ನು ನಾಮಪದಕ್ಕೆ ಸೇರಿಸುವ ಮೊದಲು, ಆ ನಡುವಿನ ಸಂಬಂದವನ್ನು ಸೂಚಿಸುವಂತಹ ಒಟ್ಟೊಂದನ್ನು ಸೇರಿಸುವ ಅವಶ್ಯಕತೆ ಮೂಲದ್ರಾವಿಡದಲ್ಲಿತ್ತು ಎಂಬುದನ್ನು ವಿವರಿಸಲಾಗಿದೆ.

ನಾಮಪದಗಳ

ಮೇಲೆ

Eke →

9.6.2 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು

ಮೂಲದ್ರಾವಿಡದಲ್ಲಿ ಆಗುಗ ಒಟ್ಟಿಗೆ ಅನ್ ಮತ್ತು ಅಯ್ ಎಂಬುದಾಗಿ ಎರಡು ರೂಪಗಳಿದ್ದುವೆಂದು ಕಲ್ಪಿಸಲಾಗಿದೆ. ಇವುಗಳಲ್ಲಿ ಮೊದಲನೆಯದು ಕನ್ನಡದಲ್ಲಿ ಉಳಿದುಕೊಂಡಿದೆ ಮತ್ತು ಎರಡನೆಯದು ತಮಿಳಿನಲ್ಲಿ ಉಳಿದು ಕೊಂಡಿದೆ (ಕನ್ನಡ: ಮಗನನ್; ತಮಿಳು: ಮಕನಯ್).

ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ನಾಮಪದಗಳ ಅನಂತರ ಈ ಒಟ್ಟನ್ನು ಬಳಸದಿದ್ದರೂ ಆಗಬಹುದು ಎಂಬುದು ಮೂಲದ್ರಾವಿಡದಲ್ಲೇನೇ ಇದ್ದಿರಬೇಕು. ಈ ವ್ಯವಸ್ತೆ ಕನ್ನಡದಲ್ಲೂ ಉಳಿದುಕೊಂಡಿದೆ.

(3ಕ) ಅವನೊಂದು ಕಾಗದ ಬರೆಯುತ್ತಿದ್ದಾನೆ

(3ಚ) ಅವನೊಬ್ಬ ಹುಡುಗನನ್ನು ಓಡಿಸುತ್ತಿದ್ದಾನೆ

(3ಕ)ದಲ್ಲಿ ಕಾಗದ ಎಂಬುದು ವಸ್ತುವನ್ನು ಸೂಚಿಸುವ ಕಾರಣ, ಅದರ ಅನಂತರ ಅನ್ನು ಒಟ್ಟು ಬಂದಿಲ್ಲ; ಆದರೆ (3ಚ)ದಲ್ಲಿ ಹುಡುಗ ಎಂಬುದು ಮನುಶ್ಯನನ್ನು ಸೂಚಿಸುವ ಕಾರಣ, ಅದರ ಅನಂತರ ಅನ್ನು ಬಂದಿದೆ (ಬಟ್ 2006:55 ನೋಡಿ).

ಕೊನೆ ಒಟ್ಟಿಗೆ ಮೂಲದ್ರಾವಿಡದಲ್ಲಿ *ನ್ಕ್್ಕ ಎಂಬ ರೂಪವಿದ್ದಿರ ಬೇಕೆಂದು ಕಲ್ಪಿಸಲಾಗಿದೆ. ಕನ್ನಡದಲ್ಲಿ ಇದಕ್ಕೆ ಕ್ಕೆ ಮತ್ತು ಗೆ ಎಂಬ ಎರಡು ರೂಪಗಳಿವೆ (ಮರಕ್ಕೆ, ಮನೆಗೆ).

ಇತರ ವಿಬಕ್ತಿ ಒಟ್ಟುಗಳಿಗೆ ಮೂಲದ್ರಾವಿಡದಲ್ಲಿ ಎಂತಹ ರೂಪವಿದ್ದಿರ

ಬಹುದು ಎಂಬುದಿನ್ನೂ ಸ್ಪಶ್ಟವಾಗಿಲ್ಲ.

Eke →

9.6.2 ಕನ್ನಡದ ಬದಲಾವಣೆಗಳು

ಸೂಚಿಸುವ ಅನ್ ಒಟ್ಟಿಗೆ ಒಂಬತ್ತನೇ (1) ಆಗುಗವನ್ನು ಶತಮಾನಕ್ಕಿಂತಲೂ ಹಿಂದಿನ ಬರಹಗಳಲ್ಲಿ ಆನ್ ಎಂಬ ಉದ್ದ ಸ್ವರವಿರುವ ರೂಪವಿತ್ತು (ಇದಾನ್ ಅೞಿವೋನ್).

ಈ ಒಟ್ಟಿನ ಕೊನೆಯಲ್ಲಿ ಬರುವ ನಕಾರ ಹಳೆಗನ್ನಡದ ಕೆಲವು ಬಳಕೆಗಳಲ್ಲಿ ಬಿದ್ದುಹೋಗಿರುವುದನ್ನು ಕಾಣಬಹುದು (ತೆಂಕನಾಡಂ ಮರೆಯಲ್ಕೆ, ತೆಂಕನಾಡ ಮರೆಯಲ್ಕೆ).

ಕರಾವಳಿಯ ಕನ್ನಡ ಒಳನುಡಿಗಳಲ್ಲಿ ಆಗುಗ ಒಟ್ಟಿಗೆ ಇಂತಹ ನಕಾರ ಬಿದ್ದುಹೋಗಿರುವ ಅ ಎಂಬ ರೂಪವೇ ಇದೆ. ಆದರೆ ಇದರ ಅನಂತರ ಬೇರೆ ಒಟ್ಟು ಬಂದಾಗ, ಮೊದಲಿಗಿದ್ದ ಅನ್ ರೂಪ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಆನೆಯ ನೋಡಿದೆ ‘ಆನೆ ಯನ್ನು ನೋಡಿದೆ’ ಎಂಬುದರಲ್ಲಿ ಆಗುಗವನ್ನು ಸೂಚಿಸಲು ಅ ಒಟ್ಟು ಬಂದಿದೆ, ಆದರೆ ಆನೆಯನ್ನುದೆ ನೋಡಿದೆ ‘ಆನೆಯನ್ನೂ ನೋಡಿದೆ’

ಎಂಬುದರಲ್ಲಿ ಅನ್ನು ಒಟ್ಟು ಬಂದಿದೆ. ಆಗುಗ ಒಟ್ಟಿನ ಅನಂತರ ಒತ್ತಿ ಹೇಳುವ ಉದೆ ಒಟ್ಟು ಬಂದಿರುವುದೇ ಇದಕ್ಕೆ ಕಾರಣ.

ಬಡಗ ಕನ್ನಡದಲ್ಲೂ ಆಗುಗ ಒಟ್ಟಿಗೆ ಅ ರೂಪವಿದೆ (ಅಮನ ‘ಅವ

ನನ್ನು’, ಕೂಸುನ ‘ಮಗುವನ್ನು’).

(2) ಸುರುವನ್ನು ಸೂಚಿಸುವ ಒಟ್ಟಿಗೆ ಹಳೆಗನ್ನಡದಲ್ಲಿ ಇನ್ ಮತ್ತು ಇಂದಂ (ಇಂದೆ) ಎಂಬ ರೂಪಗಳಿದ್ದುವು; ಇವುಗಳಲ್ಲಿ ಎರಡನೆಯದು ಹೊಸಗನ್ನಡದಲ್ಲಿ ಮಾತ್ರ ಉಳಿದುಕೊಂಡಿದೆ.

ರೂಪದಲ್ಲಿ)

ಇವತ್ತು

ಬಡಗ ಕನ್ನಡದಲ್ಲಿ ಇದು ಕರಣ ಇಲ್ಲವೇ ಕಾರಣವನ್ನು ಸೂಚಿಸುವ ಎಂದ ಮತ್ತು ಸುರುವನ್ನು ಸೂಚಿಸುವ ಇನ್ದ ಎಂಬ ಎರಡು ಒಟ್ಟುಗಳಾಗಿ ಒಡೆದಿದೆಯುಂಬುದನ್ನು ನೋಡಿರುವೆವು (ಮೊರಾಂದ : ಮೊರನಿಂದ; ಅವಾಂದ : ಅವ್ವಿಂದ; ನಿನ್ನೆಂದ : ನಿನ್ನಿಂದ).

ಮೇಲೆ

(3) ಜಾಗವನ್ನು ಸೂಚಿಸುವ ಒಟ್ಟಿಗೆ ಹಳೆಗನ್ನಡದಲ್ಲಿ ಒಳ(ಗೆ) ಮತ್ತು ಹಲವು

ಪದಗಳಿಂದ ಸಿದ್ದವಾದಂತಹ

ಅಲ್ಲಿ ಎಂಬ ಎರಡು ರೂಪಗಳಿದ್ದುವು (ಅಕ್ಕನೊಳ್, ನೀರಲ್ಲಿ).

ಇವುಗಳಲ್ಲಿ ಅಲ್ಲಿ ಎಂಬುದೇ ಇವತ್ತು ಹೊಸಗನ್ನಡದಲ್ಲಿ ಜಾಗವನ್ನು ಸೂಚಿಸುವ ಒಟ್ಟಾಗಿ ಬಳಕೆಯಲ್ಲಿದೆ (ಮನೆಯಲ್ಲಿ, ಕಾಡಿನಲ್ಲಿ). ಆದರೆ, ಬಡಗ ಒಳನುಡಿಯಲ್ಲಿ ಒಳ್ ರೂಪ ಒ ರೂಪಕ್ಕೆ ಬದಲಾಗಿ ಉಳಿದಿದೆ ‘ಕಿವಿಯಲ್ಲಿ’, (ಕಿವಿಯೂ ಮೊರದೊ ಕಾಡುದೊ ‘ಮರದಲ್ಲಿ’, ಮನೆಯೊ ‘ಮನೆಯಲ್ಲಿ’).

‘ಕಾಡಿನಲ್ಲಿ’,

Eke →

9.7 ತಿರುಳು

ಮೂಲದ್ರಾವಿಡದಲ್ಲಿದ್ದ ನಾಮಪದಗಳ ಒಳರಚನೆ ಕನ್ನಡದಲ್ಲಿ ಹೇಗೆ ಉಳಿದುಕೊಂಡಿದೆ ಎಂಬುದನ್ನು ಮತ್ತು ಮೂಲದ್ರಾವಿಡ ನಾಮಪದಗಳ

ಪದರೂಪಗಳು ಕನ್ನಡದಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಒಟ್ಟುಗಳನ್ನು ಇಲ್ಲವೇ

ನಾಮಪದಗಳನ್ನು ನಾಮಬೇರುಗಳಿಗೆ, ಕ್ರಿಯಾಬೇರುಗಳಿಗೆ ಇಲ್ಲವೇ ಮೂಲಕ ಗುಣಬೇರುಗಳಿಗೆ ಪಡೆಯಲಾಗುತ್ತಿತ್ತು ಹಾಗೆಯೇ ನಾಮಪದಗಳಾಗಿ ಬಳಸಲೂ ಸಾದ್ಯವಿತ್ತು. ಇದಲ್ಲದೆ, ನಾಮಪದ, ಕ್ರಿಯಾಪದ ಇಲ್ಲವೇ ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ರಚಿಸಿದ ಜೋಡುಪದಗಳನ್ನೂ ನಾಮಪದಗಳಾಗಿ ಬಳಸಲು ಸಾದ್ಯವಿತ್ತು. ಇವೆಲ್ಲಾ ವಿದಾನಗಳೂ ಕನ್ನಡದಲ್ಲಿ ಉಳಿದುಕೊಂಡಿವೆ.

ಸೇರಿಸುವುದರ ನಾಮಬೇರುಗಳನ್ನು

ಮಾಡಿಕೊಂಡಿದೆ. ಲಿಂಗಬೇದವನ್ನು

ನಾಮಪದಗಳಿಂದ ನಾಮರೂಪಗಳನ್ನು ಪಡೆಯುವಲ್ಲಿ ಕನ್ನಡ ಹಲವು ಮತ್ತು ಬದಲಾವಣೆಗಳನ್ನು ಅದರೊಂದಿಗೆ ಮತ್ತು ವಿಬಕ್ತಿ ಒಟ್ಟುಗಳನ್ನು ಬಳಸುವಲ್ಲಿ ಇಂತಹ ಬದಲಾವಣೆಗಳು ನಡೆದಿರುವುದನ್ನು ಕಾಣಬಹುದು.

ವಚನಬೇದವನ್ನು

ತೋರಿಸುವಲ್ಲಿ

10. ಆಡುಗ ಮತ್ತು ತೋರುಗ ಪದಗಳು

ಸಂಬಂದಿಸಿರುವ

Eke →

10.1 ಮುನ್ನೋಟ

ಮೂಲದ್ರಾವಿಡದಲ್ಲಿ ಬಳಕೆಯಾಗುವ ಆಡುಗ ಪದಗಳು ಎರಡು ಪದಗುಂಪುಗಳಲ್ಲಿ ಬರುತ್ತವೆ. ವಾಕ್ಯದ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ‘ಆಡುಗ’ ಪದಗಳದು ಒಂದು ಗುಂಪು; ಮತ್ತು ವ್ಯಕ್ತಿ, ವಸ್ತು, ವಿಶಯ, ದಿಕ್ಕು, ಸಮಯ, ಪ್ರಮಾಣ, ವಿದಾನ, ನಮೂನೆ ಮೊದಲಾದವುಗಳ ಜಾಗವನ್ನು ಆಡುಗನ ಸೂಚಿಸುವ ಇಲ್ಲವೇ ಅವು ಜಾಗಕ್ಕೆ ತಿಳಿದಿಲ್ಲವೆಂದು ಸೂಚಿಸುವ ‘ತೋರುಗ’ ಪದಗಳದು ಇನ್ನೊಂದು ಗುಂಪು.
ಈ ಎಲ್ಲಾ ಪದಗಳನ್ನೂ ಒಟ್ಟಾಗಿ ‘ಸರ್ವನಾಮ’ವೆಂಬ ಪದಗುಂಪಿನಲ್ಲಿ ಸೇರಿಸಿ ಹೇಳುವುದು ರೂಡಿ. ಆದರೆ, ಮೂಲದ್ರಾವಿಡದಲ್ಲಿ ಇಲ್ಲವೇ ಕನ್ನಡ ದಲ್ಲಿ ಇವು ಮೇಲೆ ಸೂಚಿಸಿದ ಹಾಗೆ ಎರಡು ಬೇರೆ ಬೇರೆ ಪದಗುಂಪುಗಳಲ್ಲಿ ಬರುತ್ತವೆ. ಆಡುಗನಿಗೆ ಸಂಬಂದಿಸಿವೆ ಎಂಬ ಒಂದು ವಿಶಯವನ್ನು ಬಿಟ್ಟರೆ ಇವನ್ನು ಒಂದೇ ಗುಂಪಿನಲ್ಲಿ ಸೇರಿಸಿ ಹೇಳಲು ಬೇರೆ ಆದಾರಗಳೇನೂ ಇಲ್ಲ (ಹೆಚ್ಚಿನ ವಿವರಗಳಿಗೆ ಬಟ್ 2003:18 ನೋಡಿ). ಇದಲ್ಲದೆ, ಆಡುಗನಿಗೆ ಸಂಬಂದಿಸಿದಂತಹ ಬೇರೆಯೂ ಹಲವು ಪದಗಳು ಬಳಕೆಯಲ್ಲಿದ್ದು (ಮೇಲೆ, ಕೆಳಗೆ, ನಿನ್ನೆ, ನಾಳೆ, ಈಗ) ಇವನ್ನೆಲ್ಲ ಸರ್ವನಾಮಗಳ ಗುಂಪಿನಲ್ಲಿರಿಸುವ ರೂಡಿಯಿಲ್ಲ.

Eke →

10.2 ಆಡುಗ ಪದಗಳು

ಮೂಲದ್ರಾವಿಡದಲ್ಲಿ ವಾಕ್ಯದ ಆಡುಗನನ್ನು ಸೂಚಿಸುವ *ಯಾನ್, ಕೇಳುಗ ನನ್ನು ಸೂಚಿಸುವ *ಞೀನ್ ಮತ್ತು ಅವರಿಬ್ಬರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಲ್ಲೊಬ್ಬನನ್ನು ಸೂಚಿಸುವ *ತಾನ್ ಎಂಬುದಾಗಿ ಮೂರು ಆಡುಗ ಪದಗಳು ಬಳಕೆಯಲ್ಲಿದ್ದಿರಬೇಕು.

ಹಲವಚನದಲ್ಲಿ ಈ ಮೂರು ಪದಗಳಿಗೆ ಮೂರರ ಬದಲು ನಾಲ್ಕು ರೂಪಗಳಿದ್ದುವು. ಇದಕ್ಕೆ ಕಾರಣವೇನೆಂದರೆ, ಈ ಪದಗಳ ಹಲವಚನ ರೂಪಗಳು ನಾಮಪದಗಳ ಹಾಗೆ ಒಬ್ಬನಿಗಿಂತ ಜಾಸ್ತಿ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವ ಬದಲು, ಆ ವ್ಯಕ್ತಿಗಳ ಬೇರೆ ಬೇರೆ ‘ಕೂಡಿಕೆ’ಗಳನ್ನು ಸೂಚಿಸಬೇಕಾಗಿದೆ. ಹಾಗಾಗಿ, ನಿಜಕ್ಕೂ ಅವನ್ನು ‘ಹಲವಚನ’ದ ಕೂಡಿಕೆಯ ಕರೆಯುವುದಕ್ಕಿಂತಲೂ ರೂಪಗಳೆಂದು ರೂಪಗಳೆಂದು ಕರೆಯುವುದೇ ಒಳ್ಳೆಯದು.

(1) ಆಡುಗ ಮತ್ತು ಇತರ:
(2) ಆಡುಗ ಮತ್ತು ಕೇಳುಗ: (3) ಕೇಳುಗ ಮತ್ತು ಇತರ: (4) ಇತರ ಮತ್ತು ಇತರ:

*ಯಾಮ್ *ಞಾಮ್ *ಞೀಮ್ *ತಾಮ್

ಮೇಲೆ ಕೊಟ್ಟಿರುವ ಪದಗಳಲ್ಲಿ ಆಡುಗ ಮತ್ತು ಕೇಳುಗರನ್ನು ಒಟ್ಟಾಗಿ ಸೂಚಿಸುವ *ಞಾಮ್ ಎಂಬುದು ಎರಡು ಪದಗಳ ಜೋಡಣೆಯಿಂದ ಸಿದ್ದವಾಗಿದೆಯುಂದು ಕಲ್ಪಿಸಲಾಗಿದೆ. ಆಡುಗನನ್ನು ಮಾತ್ರವೇ ಸೂಚಿಸುವ *ಯಾನ್ ಮತ್ತು ಕೇಳುಗನನ್ನು ಮಾತ್ರವೇ ಸೂಚಿಸುವ *ಞೀನ್ ಎಂಬ ಎರಡು ಪದಗಳು ಅದರಲ್ಲಿ ಒಟ್ಟು ಸೇರಿವೆ.

ಎಂದರೆ, ಆಡುಗನನ್ನು ಸೂಚಿಸುವ *ಯಾನ್ ಪದದ ಮೊದಲನೆಯ ವ್ಯಂಜನಕ್ಕೆ (ಯಕಾರಕ್ಕೆ) ಬದಲಾಗಿ ಕೇಳುಗನನ್ನು ಸೂಚಿಸುವ *ಞೀನ್ ಪದದ ಮೊದಲನೆಯ ವ್ಯಂಜನವನ್ನು (ಞಕಾರವನ್ನು) ಬಳಸಿ ಮತ್ತು

ಕೂಡಿಕೆಯ ಅರ್ತವನ್ನು ಕೊಡುವುದಕ್ಕಾಗಿ ಆ ಪದದ ಕೊನೆಯ ನಕಾರವನ್ನು ಮಕಾರವಾಗಿ ಬದಲಾಯಿಸಿ *ಞಾಮ್ ಎಂಬುದನ್ನು ತಯಾರಿಸಲಾಗಿದೆ.

Eke →

10.2.1 ವ್ಯವಸ್ತೆಯಲ್ಲಿ ಬದಲಾವಣೆ

ಮೂಲದ್ರಾವಿಡದ ಈ ಆಡುಗ ಪದಗಳ ವ್ಯವಸ್ತೆ ಹಳೆಗನ್ನಡದಲ್ಲಿ ಉಳಿದು ಕೊಂಡಿದೆ; ಆದರೆ ಹೊಸಗನ್ನಡದ ಹೆಚ್ಚಿನ ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಬಹಳ ಮಟ್ಟಿಗೆ ಬದಲಾಗಿದೆ.

ಉದಾಹರಣೆಗಾಗಿ, ಪಂಪಬಾರತದಲ್ಲಿ ಆಡುಗ, ಕೇಳುಗ ಮತ್ತು ಇತರ ಎಂಬ ಮೂರು ರೀತಿಯ ವ್ಯಕ್ತಿಗಳನ್ನು ಸೂಚಿಸುವುದಕ್ಕಾಗಿ ಆನ್, ನೀನ್ ಮತ್ತು ತಾನ್ ಎಂಬ ಮೂರು ಪದಗಳು ಬಳಕೆಯಲ್ಲಿವೆ; ಇವುಗಳಲ್ಲಿ ಮೂಲ ದ್ರಾವಿಡ ಪದಗಳ ಸುರುವಿನ ಯಕಾರ ಬಿದ್ದುಹೋದುದರಿಂದಾಗಿ *ಯಾನ್ ಮತ್ತು ಞಕಾರ ನಕಾರವಾದುದರಿಂದಾಗಿ *ಞೀನ್ ಎಂಬುದು ನೀನ್ ಆಗಿದೆ.

ಎಂಬುದು

ಈ ಪದಗಳಿಗೆ ಪಂಪಬಾರತದಲ್ಲಿ ಆಮ್, ನಾಮ್, ನೀಮ್ ಮತ್ತು ತಾಮ್ ಎಂಬ ನಾಲ್ಕು ಕೂಡಿಕೆಯ (ಹಲವಚನದ) ರೂಪಗಳಿವೆ ಮತ್ತು ಇವಕ್ಕೆ ಮೂಲದ್ರಾವಿಡದಲ್ಲಿದ್ದಂತಹದೇ ಅರ್ತವ್ಯತ್ಯಾಸಗಳನ್ನು ಸೂಚಿಸುವ ಬಳಕೆಯೂ ಇದೆ (ಬಟ್ 2005:77-8 ನೋಡಿ).

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ವಾಕ್ಯದಲ್ಲಿ ಆಮ್ ಮತ್ತು ನಾಮ್ ಎಂಬ ಎರಡು ಆಡುಗ ಪದಗಳೂ ಬಂದಿದ್ದು, ಮೊದಲನೆಯ ಎಮ್ಮಮ್ ಎಂಬುದು ಅವುಗಳಲ್ಲಿ ಕೇಳುಗನನ್ನು ಹೊರತುಪಡಿಸಿ ಆಡುಗನನ್ನು ಸೂಚಿಸುತ್ತದೆ; ಆದರೆ, ಎರಡನೆಯ ನಾಮ್ ಎಂಬುದು ಆಡುಗನೊಂದಿಗೆ ಕೇಳುಗನನ್ನು (ಮತ್ತು ಇತರರನ್ನೂ) ಸೇರಿಸಿ ಸೂಚಿಸುತ್ತದೆ.

ಮಾತ್ರವೇ

ನಾಮೆಲ್ಲಂ ಒಂದೆ ಗರುಡಿಯೊಳ್ ಓದಿದ ಮಾನಸರೆವು;
ಎಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸವೇಡ (9.48 ವಚನ) ‘ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಶ್ಯರಾಗಿದ್ದೇವೆ; ನೀವು

ನಮ್ಮನ್ನು ಸುಮ್ಮಗೆ ಆಯಾಸಪಡಿಸಬೇಡಿ’’

ವಡ್ಡಾರಾದನೆಯಲ್ಲೂ, ಕೇಳುಗನನ್ನು ಹೊರತುಪಡಿಸಿ ಆಡುಗ ಮತ್ತು ಇತರರನ್ನು ಸೂಚಿಸಲು ಆಮ್, ಎಮ್ಮನ್, ಎಮಗೆ ಮತ್ತು ಎಮ್ಮ ಪದಗಳ ಬಳಕೆಯಾಗುತ್ತದೆ ಮತ್ತು ಆಡುಗನೊಂದಿಗೆ ಕೇಳುಗನನ್ನೂ ಸೇರಿಸಿ ಹೇಳಬೇಕಿದ್ದಲ್ಲಿ ನಾಮ್, ನಮ್ಮನ್, ಮತ್ತು ನಮಗೆ ಪದಗಳ ಬಳಕೆಯಾಗುತ್ತದೆ (ಗಾಯ್ 1955 ನೋಡಿ).

(1) ಹಳೆಗನ್ನಡ ಉಳಿಸಿಕೊಂಡಿದ್ದ ಈ ಮೂಲದ್ರಾವಿಡದ ಅರ್ತ (ಮತ್ತು ಪದರೂಪ) ವ್ಯತ್ಯಾಸ ಕರಾವಳಿಯ ಕನ್ನಡ ಒಳನುಡಿಗಳಲ್ಲಿ ಇವತ್ತಿಗೂ ಉಳಿದುಕೊಂಡಿದೆ. ಉದಾಹರಣೆಗಾಗಿ, ಕರಾವಳಿಯ ಹವ್ಯಕ ಕನ್ನಡದಲ್ಲಿ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ಆನು ಮತ್ತು ನೀನು ಪದಗಳು ಬಳಕೆಯಾಗುತ್ತವೆ.

ಇದಲ್ಲದೆ, ಮೇಲಿನ ಎರಡು ಪದಗಳಿಗೆ ಹವ್ಯಕ ಕನ್ನಡದಲ್ಲಿ ಎಂಗೊ, ನಾವು ಮತ್ತು ನಿಂಗೊ ಎಂಬುದಾಗಿ ಮೂರು ಕೂಡಿಕೆಯ ರೂಪಗಳಿವೆ ಮತ್ತು ಇವು ಹಳೆಗನ್ನಡದ ಆಮ್, ನಾಮ್ ಮತ್ತು ನೀಮ್ ಎಂಬವುಗಳ ಹಾಗೆ, ಮೂರು ರೀತಿಯ ಕೂಡಿಕೆಗಳ ಅರ್ತಗಳಲ್ಲೇ ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಎರಡು ವಾಕ್ಯಗಳನ್ನು ಅವುಗಳ ಕೆಳಗೆ ಕೊಟ್ಟಿರುವ ಬರಹ ಕನ್ನಡದ ವಾಕ್ಯಗಳೊಡನೆ ಹೋಲಿಸಿ ನೋಡಬಹುದು.

(2ಕ) ಎಂಗೊ ಪೇಟೆಗೆ ಹೋವುತ್ತೆಯೊ ᵒ ‘ನಾವು ಪೇಟೆಗೆ ಹೋಗುತ್ತೇವೆ’’

(2ಚ) ನಾವು ಪೇಟೆಗೆ ಹೋಪೊ ᵒ ‘ನಾವು ಪೇಟೆಗೆ ಹೋಗೋಣ’

(2ಕ-ಚ) ವಾಕ್ಯಗಳೆರಡರಲ್ಲೂ ಬರಹ ಕನ್ನಡದಲ್ಲಿ ನಾವು ಎಂಬುದೇ ಬಳಕೆಯಾಗಿದೆ; ಆದರೆ ಅದಕ್ಕೆ (2ಕ)ದಲ್ಲಿ ಆಡುಗನೊಂದಿಗೆ ಕೇಳುಗನನ್ನು

ಸೇರಿಸದಿರುವ ಅರ್ತವಿದೆ ಮತ್ತು (2ಚ)ದಲ್ಲಿ ಕೇಳುಗನನ್ನು ಸೇರಿಸಿರುವ ಅರ್ತವಿದೆ ಎಂಬುದು ಈ ವಾಕ್ಯಗಳ ಕೊನೆಯಲ್ಲಿ ಬಂದಿರುವ ಕ್ರಿಯಾರೂಪ ಗಳಿಂದ (ಹೋಗುತ್ತೇವೆ ಮತ್ತು ಹೋಗೋಣ ಎಂಬವುಗಳಿಂದ) ಸ್ಪಶ್ಟ ವಾಗುತ್ತದೆ.

ಹವ್ಯಕ ಕನ್ನಡದಲ್ಲಿ ಈ ವ್ಯತ್ಯಾಸವನ್ನು ಸೂಚಿಸಲು ಎಂಗೊ ಮತ್ತು ನಾವು ಎಂಬ ಎರಡು ಬೇರೆ ಬೇರೆ ಪದಗಳನ್ನು (ಮೇಲೆ (2ಕ) ಮತ್ತು (2ಚ) ವಾಕ್ಯಗಳಲ್ಲಿ) ಬಳಸಲಾಗಿದೆ; ಆದರೆ ಇವತ್ತಿನ ಬರಹ ಕನ್ನಡದಲ್ಲಿ ಇವೆರಡು ಸಂದರ್ಬಗಳಲ್ಲೂ ನಾವು ಎಂಬುದನ್ನೇ ಬಳಸಲಾಗುತ್ತದೆ.

ಹಳೆಗನ್ನಡದ ಆಮ್ ಎಂಬುದು ಹವ್ಯಕ ಕನ್ನಡದಲ್ಲಿ ಎಂಗೊ ಎಂಬ ರೂಪಕ್ಕೆ, ನಾಮ್ ಎಂಬುದು ನಾವು ಎಂಬ ರೂಪಕ್ಕೆ ಮತ್ತು ನೀಮ್ ಎಂಬುದು ನಿಂಗೊ ಎಂಬ ರೂಪಕ್ಕೆ ಬದಲಾಗಿದೆ. ಇಲ್ಲಿ ಆಮ್ ಎಂಬುದರ ಆ (ಉದ್ದ ಸ್ವರ) ಗಿಡ್ಡ ಎಕಾರವಾಗಿದೆ, ನಾಮ್ ಎಂಬುದರ ಮಕಾರ ವಕಾರವಾಗಿ ಅದರ ಮುಂದೆ ಉಕಾರ ಸೇರಿದೆ ಮತ್ತು ಆಮ್ ಮತ್ತು ನೀಮ್ ಎಂಬವುಗಳಿಗೆ ಹಲವಚನದ ಗೊ ಒಟ್ಟು ಹೆಚ್ಚಾಗಿ ಸೇರಿಕೊಂಡಿದೆ.

(2) ಬಡಗ ಕನ್ನಡದಲ್ಲೂ ಆಡುಗ ಪದಗಳಿಗೆ ಮೂರು ಕೂಡಿಕೆಯ ರೂಪಗಳಿದ್ದು ಅದು ಹಳೆಗನ್ನಡದ (ಮತ್ತು ಮೂಲದ್ರಾವಿಡದ) ವ್ಯವಸ್ತೆ ಯನ್ನು ಉಳಿಸಿಕೊಂಡಿದೆ. ಅದರಲ್ಲಿ ಎಂಗ ‘ನಾನು ಮತ್ತು ಅವನು’, ನಂಗ (ಇಲ್ಲವೇ ಅಂಗ) ‘ನಾನು ಮತ್ತು ನೀನು’ ಮತ್ತು ನಿಂಗ ‘ನೀನು ಮತ್ತು ಅವನು’ ಎಂಬ ಮೂರು ಕೂಡಿಕೆಯ ರೂಪಗಳು ಬಳಕೆಯಲ್ಲಿವೆ.

(3) ಹಳೆಗನ್ನಡದಲ್ಲಿದ್ದ ಆಮ್ ಪದದ ಬಳಕೆ ನಡುಗನ್ನಡದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಅದರ ಜಾಗದಲ್ಲಿ ನಾಮ್ ಎಂಬುದರ ಬಳಕೆ ಜಾಸ್ತಿಯಾಗುತ್ತಾ ಹೋಗುತ್ತದೆ. ಇದಕ್ಕೆ ಮೊದಲೇ ಅವುಗಳ ನಡುವಿದ್ದ ಅರ್ತವ್ಯತ್ಯಾಸವೂ ಇಲ್ಲವಾಗಿರಬೇಕು. ಇವತ್ತು ಬರಹ ಕನ್ನಡದಲ್ಲಿ ಮತ್ತು ಒಳನಾಡಿನ ಒಳನುಡಿಗಳಲ್ಲಿ ಇವೆರಡರ ಬದಲು

ನಾಮ್ ಎಂಬ ಉಳಿದುಕೊಂಡಿದೆ.

ಪದ ಮಾತ್ರ

(ನಾವು ಎಂಬ

ರೂಪದಲ್ಲಿ)

ಇದಲ್ಲದೆ, ಆಡುಗನನ್ನು ಸೂಚಿಸುವ ಆನ್ ಎಂಬುದರ ಮೊದಲಿಗೆ ನಕಾರ ಸೇರಿಕೊಂಡುದರಿಂದಾಗಿ ನಾನು ಎಂಬ ಹೊಸ ರೂಪವೊಂದು ಬಳಕೆಗೆ ಬಂದಿದೆ.

ಕೇಳುಗರನ್ನು

Eke →

10.2.2 ಮೂರನೆಯ ವ್ಯಕ್ತಿ

ಮೂರನೆಯ ಮತ್ತು ವ್ಯಕ್ತಿಯೊಬ್ಬನನ್ನು ಮೂಲದ್ರಾವಿಡದಲ್ಲಿ ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದ್ದ *ತಾನ್ ಮತ್ತು *ತಾಮ್ ಪದಗಳು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿವೆ.

ಹೊರತುಪಡಿಸಿ

ಇದಲ್ಲದೆ, ಮೂಲದ್ರಾವಿಡದಲ್ಲಿದ್ದ ಹಾಗೆಯೇ ತಾನ್ ಎಂಬುದಕ್ಕೆ ಆಡುಗ ಮತ್ತು ಕೇಳುಗರಿಂದ ಬೇರೆಯಾಗಿರುವ ಮೂರನೆಯ (ಇತರ) ವ್ಯಕ್ತಿಯನ್ನು ಸೂಚಿಸುವ ಮತ್ತು ತಾಮ್ ಎಂಬುದಕ್ಕೆ ಅಂತಹ ವ್ಯಕ್ತಿಗಳ ಕೂಡಿಕೆಯನ್ನು ಸೂಚಿಸುವ ಅರ್ತವೂ ಹಳೆಗನ್ನಡದಲ್ಲಿತ್ತು.

(1) ಇವತ್ತಿನ ಬರಹ ಕನ್ನಡದಲ್ಲಿ ಈ ಪದಗಳು ತಾನು ಮತ್ತು ತಾವು ಎಂಬ ಪದಗಳಿಗೆ ರೂಪದಲ್ಲಿ ಬಳಕೆಯಾಗುತ್ತವೆ. ಈ ‘ಆತ್ಮಾರ್ತ’ವಿದೆಯುಂಬ ಕನ್ನಡ ವಯ್ಯಾಕರಣಿಗಳ ಹೇಳಿಕೆಗೆ ಪಾಶ್ಚಾತ್ಯ ವ್ಯಾಕರಣಗಳ ಪ್ರಬಾವವೇ ಕಾರಣವಿರಬೇಕು. ಯಾಕೆಂದರೆ, ನಿಜಕ್ಕೂ ‘ಆತ್ಮಾರ್ತ’ದಲ್ಲಿ ಇವತ್ತಿನ ಬರಹ ಬಳಕೆಯಾಗುವುದಿಲ್ಲ.

ಕನ್ನಡದಲ್ಲಿ ಈ

ಪದಗಳು

ಬರಹ ಕನ್ನಡದಲ್ಲಿ ‘ಆತ್ಮಾರ್ತ’ವನ್ನು ಎಂದರೆ ‘ಒಂದು ಕೆಲಸವನ್ನು ಆಗುಗ ಇಲ್ಲವೇ ಮಾಡುಗನು ತನ್ನ ಹಿತಕ್ಕಾಗಿ (ಇಲ್ಲವೇ ಬೇರೆಯವರ ಸಹಾಯವಿಲ್ಲದೆ) ನಡೆಸಿದ್ದಾನೆ’ ಎಂಬ ಅರ್ತವನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಕೊಳ್ಳು ಎಂಬುದನ್ನು ಬಳಸಲಾಗುತ್ತದೆ.

(3ಕ) ರಾಜು ಮೂರು ಪುಟ ಬರೆದ (3ಚ) ರಾಜು ಮೂರು ಪುಟ ಬರೆದುಕೊಂಡ

(3ಕ) ವಾಕ್ಯದ ಪ್ರಕಾರ, ಮೂರು ಪುಟ ಬರೆಯುವ ಕೆಲಸವನ್ನು ರಾಜು ತನ್ನ ಹಿತಕ್ಕಾಗಿ ಮಾಡಿರಬಹುದು, ಇಲ್ಲವೇ ಬೇರೊಬ್ಬರಿಗೆ ಬೇಕಾಗಿಯೂ ಮಾಡಿರಬಹುದು; ಆದರೆ, (3ಚ) ವಾಕ್ಯದ ಪ್ರಕಾರ ಆ ಕೆಲಸವನ್ನು ಆತ ತನ್ನ ಹಿತಕ್ಕಾಗಿ ವಾಕ್ಯದಲ್ಲಿ ಮಾತ್ರವೇ ‘ಆತ್ಮಾರ್ತ’ವಿದೆ; ಆದರೆ ತಾನು ಪದ ಬಳಕೆಯಾಗಿಲ್ಲ.

ಮಾಡಿದ್ದಾನೆ.

(2) ತಾನು ಮತ್ತು ತಾವು ಪದಗಳನ್ನು ಅವನು, ಅವಳು ಮೊದಲಾದ ತೋರುಗಪದಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಹೊಸಗನ್ನಡ ವಾಕ್ಯಗಳಲ್ಲಿ ಅವುಗಳಿಗಿರುವ ಕೆಲಸವೇನು ಎಂಬ ವಿಶಯ ಸ್ಪಶ್ಟವಾಗುತ್ತದೆ.

ತಾನು ಎಂಬುದು ಒಂದು ವಾಕ್ಯದಲ್ಲಿ ಹೆಸರಿಸಿರುವ ವ್ಯಕ್ತಿಯನ್ನು ಮಾತ್ರವೇ ಸೂಚಿಸಬಲ್ಲುದು; ಆದರೆ ಅವನು ಎಂಬುದು ಯಾವ ವ್ಯಕ್ತಿಯನ್ನೂ ಸೂಚಿಸಬಲ್ಲುದು.

(4ಕ) ರಾಜು ಸೀತೆಯ ಹತ್ತಿರ ಅವನ ಅಣ್ಣನನ್ನು ದೂರುತ್ತಿದ್ದಾನೆ (4ಚ) ರಾಜು ಸೀತೆಯ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದಾನೆ

(4ಕ) ವಾಕ್ಯದಲ್ಲಿ ಬಂದಿರುವ ಅವನ ಪದ ರಾಜುವನ್ನಾಗಲಿ ಇಲ್ಲವೇ ಬೇರೆ ಯಾರೋ ಒಬ್ಬ (ವಾಕ್ಯದಲ್ಲಿ ಹೆಸರಿಸದಿರುವ) ವ್ಯಕ್ತಿಯನ್ನಾಗಲಿ ಸೂಚಿಸಬಲ್ಲುದು; ಆದರೆ (6ಚ) ವಾಕ್ಯದಲ್ಲಿ ಬಂದಿರುವ ತನ್ನ ಪದ ರಾಜುವನ್ನು ಮಾತ್ರ ಸೂಚಿಸಬಲ್ಲುದು.

ಇದಲ್ಲದೆ, ತಾನು ಪದ ವಾಕ್ಯದ ಆಡುಗ ಇಲ್ಲವೇ ಕೇಳುಗರನ್ನು

ಸೂಚಿಸಲಾರದು. (4ಟ) ರಾಜು ನನ್ನ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದಾನೆ

(4ಟ) ವಾಕ್ಯದಲ್ಲಿ ಬಂದಿರುವ ತನ್ನ ಪದ ರಾಜುವನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ, ಆ ವಾಕ್ಯದ ಆಡುಗನನ್ನು ಸೂಚಿಸಲಾರದು. ತಾನು ಎಂಬುದಕ್ಕೆ ವಾಕ್ಯದ ಆಡುಗ ಮತ್ತು ಕೇಳುಗರೊಂದಿಗೆ ಸಂಬಂದವಿದೆ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ. (ಜಾಸ್ತಿ ವಿವರಗಳಿಗೆ ಬಟ್ 2003: 60 ನೋಡಿ).

(3) ಕನ್ನಡದ ಹೆಚ್ಚಿನ ಒಳನುಡಿಗಳಲ್ಲೂ ಮೂಲದ್ರಾವಿಡದ ಈ ಎರಡು ಪದರೂಪಗಳು ಉಳಿದುಕೊಂಡಿವೆ. ಅವುಗಳ ಅರ್ತದಲ್ಲಿ ಮಾತ್ರ, ಮೇಲೆ ಸೂಚಿಸಿದ ಹಾಗೆ, ಬದಲಾವಣೆಯಾಗಿದೆ. ಆದರೆ, ಕರಾವಳಿಯ ಕೆಲವು ಒಳನುಡಿಗಳಲ್ಲಿ ಈ ಪದರೂಪಗಳು ಬಳಕೆಯಿಂದ ಬಿದ್ದುಹೋಗಿವೆ. ಉದಾಹರಣೆಗಾಗಿ, ತೆಂಕು ಹವ್ಯಕದಲ್ಲಿ ತಾನು ಮತ್ತು ತಾವು ಪದಗಳು ಬಳಕೆಯಲ್ಲಿಲ್ಲ. ಅವುಗಳ ಬದಲು, ಅವನು, ಅವಳು ಮೊದಲಾದ ತೋರುಗ ಪದಗಳೇ ಬಳಕೆಯಾಗುತ್ತವೆ.

ಬಡಗ ಕನ್ನಡದಲ್ಲಿ ಮಾತ್ರ, ತಾನು ಮತ್ತು ಅದರ ಹಲವಚನದ ರೂಪವಾದ ತಂಗ ಪದಗಳು ‘ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಮೂರನೆಯ ವ್ಯಕ್ತಿ’ ಎಂಬ ಅರ್ತದಲ್ಲೇ ಬಳಕೆಯಾಗುತ್ತಿವೆ. ಆದರೆ, ಇವನ್ನು ಈ ಅರ್ತದಲ್ಲಿ ಈಗ ಮುದುಕರು ಮಾತ್ರ ಬಳಸುತ್ತಿದ್ದಾರೆ; ಚಿಕ್ಕವರ ಮಾತಿನಲ್ಲಿ ಅವು ಬರಹ ಕನ್ನಡದಲ್ಲಾದ ಹಾಗೆ ಬದಲಾಗಿವೆ (ಬಾಲಕ್ರುಶ್ಣನ್ 1999).

Eke →

10.2.3 ಆಡುಗ ಪದಗಳು ಮತ್ತು ನಾಮಪದಗಳು

ನಾಮಪದಗಳ ಹಾಗೆ ಆಡುಗ ಪದಗಳು ವಿಬಕ್ತಿ ಒಟ್ಟುಗಳೊಂದಿಗೆ ಬರಬಲ್ಲುವಾಗಿದ್ದುವು. ಈ ಒಟ್ಟುಗಳು ಸೇರಿದಾಗ ಎಲ್ಲಾ ಆಡುಗ ಪದ ಮತ್ತು ಪದರೂಪಗಳಲ್ಲೂ ಮೊದಲನೆಯ ಸ್ವರ ಉದ್ದ ಇದ್ದುದು ಗಿಡ್ಡ ಸ್ವರವಾಗಿ ಬದಲಾಗುತ್ತದೆಯುಂದು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ (ಯಾನ್> *ಯನ್, *ನೀನ್>ನಿಮ್, ತಾನ್>ತಮ್, *ಯಾಮ್>

ಯಮ್, *ಞಾಮ್>ಞಮ್, ನೀಮ್>ನಿಮ್ ಮತ್ತು *ತಾಮ್> ತಮ್).

ಇಂತಹದೇ

ಬದಲಾವಣೆ

ಹಳೆಗನ್ನಡದಲ್ಲಿ

(ಮತ್ತು ಹೊಸಗನ್ನಡದಲ್ಲೂ) ಕಾಣಿಸುತ್ತದೆ (ನೀನ್, ನಿನಗೆ; ನೀಮ್, ನಿಮಗೆ; ತಾನ್, ತನಗೆ; ತಾಮ್, ತಮಗೆ). ಇದಲ್ಲದೆ, ಮೂಲದ್ರಾವಿಡದ *ಯನ್ ಮತ್ತು *ಯಮ್ ಎಂಬವುಗಳು ಹಳೆಗನ್ನಡದಲ್ಲಿ ಎನ್ ಮತ್ತು ಎಮ್ ಎಂಬುದಾಗಿ ಬದಲಾಗಿವೆ (ಆನ್, ಎನಗೆ; ಆಮ್, ಎಮಗೆ).

ಸ್ವರದಿಂದ ಸುರುವಾಗುವ ಆಗುಗ, ಸುರು ಮತ್ತು ಜಾಗ ಒಟ್ಟುಗಳು ಸೇರಿದಾಗ ಮೇಲಿನ ಎಲ್ಲಾ ಪದಗಳ ಎರಡನೆಯ ವ್ಯಂಜನ (ನಕಾರ ಇಲ್ಲವೇ ಮಕಾರ) ಇಮ್ಮಡಿಯಾಗುತ್ತದೆ (ಎನ್ನ, ಎಮ್ಮ, ನಿನ್ನಿಂದ, ನಿಮ್ಮಿಂದ).

ವಿಬಕ್ತಿ ಒಟ್ಟುಗಳೊಂದಿಗೆ ಬಳಕೆಯಾಗುವ ವಿಶಯದಲ್ಲಿ ಆಡುಗ ಪದಗಳು ನಾಮಪದಗಳನ್ನು ಹೋಲುತ್ತಿವೆಯಾದರೂ ಬೇರೆ ಹಲವು ವಿಶಯಗಳಲ್ಲಿ ಅವು ನಾಮಪದಗಳಿಂದ ಬೇರಾಗಿವೆ. ಉದಾಹರಣೆಗಾಗಿ, ಮೇಲೆ ಸೂಚಿಸಿದ ಹಾಗೆ, ಅವಕ್ಕೆ ಹಲವಚನ ರೂಪಗಳಿರುವ ಬದಲು ಕೂಡಿಕೆಯ ರೂಪಗಳಿವೆ, ಮತ್ತು ಈ ಕಾರಣಕ್ಕಾಗಿ ಮೂಲದ್ರಾವಿಡದಲ್ಲಿ ಮತ್ತು ಹಳೆಗನ್ನಡದಲ್ಲಿ ಮೂರು ಆಡುಗ ಪದಗಳಿಗೆ ನಾಲ್ಕು ಕೂಡಿಕೆಯ ರೂಪಗಳಿವೆ (ಆಮ್, ನಾಮ್, ನೀಮ್, ತಾಮ್).

ಗುಣಗಳನ್ನು

ನಾಮಪದಗಳೊಂದಿಗೆ ಅವುಗಳ

ಸೂಚಿಸಬಲ್ಲ ಪದಗಳನ್ನು (ಗುಣಪದಗಳನ್ನು) ಬಳಸಬಲ್ಲೆವು; ಆದರೆ ಆಡುಗ ಪದಗಳೊಂದಿಗೆ ಅಂತಹ ಪದಗಳನ್ನು ಬಳಸಲಾರೆವು. ದೊಡ್ಡ ಪುಸ್ತಕ ಎನ್ನುವ ಹಾಗೆ *ದೊಡ್ಡ ನಾನು ಇಲ್ಲವೇ *ದೊಡ್ಡ ನೀನು ಎಂದು ಹೇಳಲು ಸಾದ್ಯವಾಗದು (ಹೆಚ್ಚಿನ ವಿವರಗಳಿಗೆ ಬಟ್ 2003 ನೋಡಿ).

Eke →

10.3 ತೋರುಗ ಪದಗಳು

ಮೂಲದ್ರಾವಿಡದಲ್ಲಿ ಪದಗಳು ಬಳಕೆಯಲ್ಲಿದ್ದುವು. ಇವುಗಳಲ್ಲಿ ಮೂರು ಆಡುಗನ ಜಾಗಕ್ಕೆ ಸಂಬಂದಿಸಿದ

ತೋರುಗ

ನಾಲ್ಕು

ಹಾಗೆ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸುತ್ತಿದ್ದುವು ಮತ್ತು ನಾಲ್ಕನೆಯದು ಅವು ತಿಳಿದಿಲ್ಲವೆಂಬುದನ್ನು ಸೂಚಿಸುತ್ತಿತ್ತು.

ಈ ಪದಗಳ ಒಳರಚನೆಯಲ್ಲಿ ಎರಡು ಅಂಗಗಳಿರುತ್ತವೆ; ಅವುಗಳಲ್ಲಿ ಮೊದಲನೆಯದು ಪದಗಳ ಕೆಲಸವೇನೆಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವು ಎಂತಹದರ (ವ್ಯಕ್ತಿ, ವಸ್ತು, ಜಾಗ, ಸಮಯ, ಪ್ರಮಾಣ, ನಮೂನೆ ಮೊದಲಾದವುಗಳಲ್ಲಿ ಯಾವುದರ) ಕುರಿತಾಗಿ ಈ ಕೆಲಸವನ್ನು ನಡೆಸುತ್ತವೆ ಎಂಬುದನ್ನು ತಿಳಿಸುತ್ತದೆ.

ಉದಾಹರಣೆಗಾಗಿ, ಕನ್ನಡದ ಅಲ್ಲಿ ಪದದ ಮೊದಲನೆಯ ಅಂಗವಾದ ಅ ಎಂಬುದು ‘ಆ ಪದ ಆಡುಗನಿಗಿಂತ ಸ್ವಲ್ಪ ದೂರದಲ್ಲಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸಲು ಬಳಕೆಯಾಗುತ್ತದೆ’ ಎಂಬುದನ್ನು ತಿಳಿಸುತ್ತದೆ (ಈ ವಿಶಯದಲ್ಲಿ ಅದು ಇಲ್ಲಿ ಮತ್ತು ಎಲ್ಲಿ ಎಂಬವುಗಳಿಂದ ಬೇರಾಗಿದೆ; ಇಲ್ಲಿ ಎಂಬುದು ಆಡುಗನ ಹತ್ತಿರ ಇರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸುತ್ತದೆ ಮತ್ತು ಎಲ್ಲಿ ಎಂಬುದು ಆಡುಗನಿಗೆ ತಿಳಿಯದಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುತ್ತದೆ).

ಅಲ್ಲಿ ಪದದ ಎರಡನೆಯ ಅಂಗವಾದ ಲ್ಲಿ ಎಂಬುದು ‘ಆ ಪದ ಒಂದು ಜಾಗದ ಕುರಿತಾಗಿ ಈ ಕೆಲಸವನ್ನು ನಡೆಸುತ್ತದೆ’ ಎಂಬುದನ್ನು ತಿಳಿಸುತ್ತದೆ (ಈ ವಿಶಯದಲ್ಲಿ ಅದು ಅಶ್ಟು, ಅಂದು, ಅತ್ತ, ಆಗ ಮೊದಲಾದವುಗಳಿಂದ ಬೇರಾಗಿದೆ; ಅಶ್ಟು ಎಂಬುದರ ಎರಡನೆಯ ಅಂಗವಾದ ಶ್ಟು ಎಂಬುದು ಪ್ರಮಾಣವನ್ನು ಸೂಚಿಸುತ್ತದೆ; ಅಂದು ಎಂಬುದರ ಎರಡನೆಯ ಅಂಗವಾದ ಂದು ಎಂಬುದು ಸಮಯವನ್ನು ಸೂಚಿಸುತ್ತದೆ; ಅತ್ತ ಎಂಬುದರ ಎರಡನೆಯ ಅಂಗವಾದ ತ್ತ ಎಂಬುದು ದಿಕ್ಕನ್ನು ಸೂಚಿಸುತ್ತದೆ).

ಮೂಲದ್ರಾವಿಡದಲ್ಲಿ ಈ ಪದಗಳ ಮೊದಲನೆಯ ಅಂಗವಾಗಿ *ಆ, ಬೇರುಗಳು

ಮತ್ತು

ನಾಲ್ಕು

ಬರಬಲ್ಲುವಾಗಿದ್ದುವು; ಹಳೆಗನ್ನಡದ ತೋರುಗ ಪದಗಳಲ್ಲಿ ಈ ನಾಲ್ಕು ಬೇರುಗಳೂ ಉಳಿದುಕೊಂಡಿವೆ.

ಆಡುಗನಿಂದ ದೂರ ಆಡುಗನ ಹತ್ತಿರ ಆ ಮತ್ತು ಈಗಳ ನಡುವೆ ತಿಳಿಯದುದು

ತೋರುಗ

ಮೂಲದ್ರಾವಿಡದ

ಪದಗಳಲ್ಲಿ ಈ

ನಾಲ್ಕು ಬೇರುಗಳೊಂದಿಗೆ ಎರಡನೆಯ ಅಂಗವಾಗಿ ಹಲವು ಬೇರುಗಳು ಇಲ್ಲವೇ ಬಳಸಿ ಒಟ್ಟುಗಳು ತಯಾರಿಸಲಾಗಿರುವ ಪದಗಳನ್ನು, ಕೆಳಗೆ ಕೊಟ್ಟಿರುವ ಹಾಗೆ, ಒಂದು ಕೋಶ್ಟಕದಲ್ಲಿ ಪಟ್ಟಿ ಮಾಡಬಹುದು.

ಬರಬಲ್ಲುವಾಗಿದ್ದುವು.

ಅವುಗಳನ್ನು

(1) ನಾಮಪದಗಳು ದೂರದವು ಅವನ್ ಅವಳ್

ನಡುವಿನವು ಉವನ್ ಉವಳ್

ಹತ್ತಿರದವು ಇವನ್ ಇವಳ್ ಈತನ್ ಊತನ್

ತಿಳಿಯದವು ಆವನ್ ಆವಳ್ ಆವುದು ಆವುವು

(2) ನಾಮ-ಗುಣಪದಗಳು

ದೂರದವು

ಹತ್ತಿರದವು

ನಡುವಿನವು

ತಿಳಿಯದವು

(3) ಕ್ರಿಯಾ-ಗುಣಪದಗಳು

ಹತ್ತಿರದವು

ನಡುವಿನವು

ದೂರದವು ಅಂತು(ಟು) ಇಂತು(ಟು) ಉಂತು(ಟು) ಅತ್ತ(ಲ್)

ಇತ್ತ(ಲ್) ಉತ್ತ(ಲ್)

ತಿಳಿಯದವು ಎತ್ತ(ಲ್)

ಇವುಗಳಲ್ಲಿ ಆ, ಈ, ಊ ಮತ್ತು ಆವ (ಏ) ಎಂಬ ಗುಣಪದಗಳಲ್ಲಿ ಮಾತ್ರ ಎರಡು ಅಂಗಗಳಿಲ್ಲ. ನಿಜಕ್ಕೂ ಇವು ನಾಮಪದಕಂತೆಗಳಲ್ಲಿ ಕೆಲಸವನ್ನು ಸೂಚಿಸುವ ಮೊದಲನೆಯ ಅಂಗವಾಗಿ ಬರುತ್ತವೆ ಮತ್ತು ಎಂತಹದರ ಕುರಿತಾಗಿ ಅವು ಈ ಕೆಲಸವನ್ನು ನಡೆಸುತ್ತವೆ ಎಂಬುದನ್ನು ಪದಕಂತೆಗಳಲ್ಲಿ ಅವುಗಳ ಅನಂತರ ಬರುವ ನಾಮಪದಗಳೇ ಸೂಚಿಸುತ್ತವೆ.

ಉದಾಹರಣೆಗಾಗಿ, ಆ ಮನೆ ಪದಕಂತೆಯಲ್ಲಿ ಆ ಎಂಬುದು ಮೊದಲನೆಯ ಅಂಗವಾಗಿ ಬಂದಿದೆ ಮತ್ತು ಮನೆ ನಾಮಪದ ಇಂತಹ ತೋರುಗ ಪದಗಳ ಎರಡನೆಯ ಅಂಗಕ್ಕೆ ಬದಲಾಗಿ ಬಂದಿದೆ.

ಹಳೆಗನ್ನಡದ ಏನ್ ಮತ್ತು ಏಕೆ ಎಂಬ ‘ತಿಳಿಯದ’ ಪದಗಳೂ ಈ ಪಟ್ಟಿಗೆ ಸೇರಬೇಕು; ಆದರೆ, ಅವುಗಳಿಗೆ ಸಮನಾದ ಇತರ (‘ತಿಳಿದ’) ಪದಗಳಿಲ್ಲ.

ಇದೇ ರೀತಿಯಲ್ಲಿ, ಏವನ್, ಏವಳ್, ಏವರ್, ಏವುದು ಮತ್ತು ಏವುವು ಎಂಬ ಕ್ರಿಯಾರೂಪಗಳ ಗುಂಪಿಗೆ ಸೇರಬಲ್ಲ ‘ತಿಳಿಯದ’ ಪದಗಳೂ ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದುವು ಮಾಡುತ್ತಾನೆ?’). ಇವಕ್ಕೂ ಸಮನಾದ ಇತರ (‘ತಿಳಿದ’) ಪದಗಳಿಲ್ಲ.

(ಏವನ್

ಆವನ್, ಆವಳ್, ಆವುದು, ಎಲ್ಲಿ, ಎಂತು ಮೊದಲಾದುವನ್ನು ಸಾಮಾನ್ಯವಾಗಿ ‘ಪ್ರಶ್ನಾರ್ತಕ’ ಪದಗಳೆಂದು ಕರೆಯಲಾಗುತ್ತದೆ. ಆದರೆ ಅವನ್ನಿಲ್ಲಿ ‘ತಿಳಿಯದ’ ಪದಗಳೆಂದು ಕರೆಯಲಾಗಿದೆ.

ಇದಕ್ಕೆ ಕಾರಣವೇನೆಂದರೆ, ಪ್ರಶ್ನೆ (ಕೇಳ್ವಿ)ಯ ಅರ್ತವನ್ನು ಕೊಡುವುದ ಕ್ಕಿಂತಲೂ ಆಡುಗನಿಗೆ ಅವು ತೋರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ವಿಶಯ ತಿಳಿದಿಲ್ಲವೆಂಬುದನ್ನು ಸೂಚಿಸುವುದೇ ಈ ಪದಗಳ ನಿಜವಾದ ಕೆಲಸ. ಇದನ್ನು ನಾನು (ಬಟ್ 2003, 2004)ರಲ್ಲಿ ಸ್ಪಶ್ಟವಾಗಿ ತೋರಿಸಿಕೊಟ್ಟಿದ್ದೇನೆ.

ಮೇಲಿನ ಕೋಶ್ಟಕದಲ್ಲಿ ಕೊಟ್ಟಿರುವ ಪದಗಳಿಗೆ ಬದಲಾಗಿ, ಕನ್ನಡದ ಒಳನುಡಿಗಳಲ್ಲಿ ಹಲವು ಅವುಗಳಿಗಿಂತ ಬೇರಾಗಿರುವ ಪದಗಳು ಬಳಕೆ ಯಾಗುತ್ತವೆ. ಇದಕ್ಕೆ ಈ ಒಳನುಡಿಗಳಲ್ಲಿ ನಡೆದಿರುವ ಬೇರೆ ಬೇರೆ ಬದಲಾವಣೆಗಳು ಕಾರಣ.

Eke →

10.3.1 ಮೊದಲನೆಯ ಅಂಗದಲ್ಲಿ ನಡೆದ ಬದಲಾವಣೆಗಳು

ಹಳೆಗನ್ನಡದಲ್ಲಿ ಆ, ಈ, ಊ ಮತ್ತು ಆವ (ಏ) ಎಂಬ ನಾಲ್ಕು ಬೇರುಗಳು ಬಳಕೆಯಾಗುತ್ತಿದ್ದುವು ಎಂಬುದನ್ನು ನಾವು ಮೇಲೆ ನೋಡಿರುವೆವು. ಮೂಲದ್ರಾವಿಡದಲ್ಲಿಯೂ ಬೇರುಗಳು ಬಳಕೆಯಲ್ಲಿದ್ದಿರಬೇಕೆಂದು ಕಲ್ಪಿಸಲಾಗಿದೆ.

ಮೊದಲನೆಯ

ತೋರುಗ

ಪದಗಳ

ನಾಲ್ಕು

ಮೇಲಿನ ಕೋಶ್ಟಕದಲ್ಲಿ ಕಾಣಿಸಿದ ಹಾಗೆ, ಈ ಬೇರುಗಳಿಗೆ ಉದ್ದ ರೂಪ (ಆತನ್, ಈತನ್, ಊತನ್, ಆವ) ಮತ್ತು ಗಿಡ್ಡ ರೂಪ (ಅಲ್ಲಿ, ಇಲ್ಲಿ, ಉಲ್ಲಿ, ಎಲ್ಲಿ) ಎಂಬುದಾಗಿ ಎರಡೆರಡು ರೂಪಗಳಿದ್ದುವು. ಮೂಲ ದ್ರಾವಿಡದಲ್ಲಿಯೂ ಇಂತಹದೇ ವ್ಯತ್ಯಾಸ ಇದ್ದಿರಬೇಕು.

ಈ ರೂಪವ್ಯತ್ಯಾಸವನ್ನು ವರ್ಣಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅವುಗಳ ಸ್ವರದ ಅನಂತರ ಒಂದು ‘ಲಾರಿಂಜಲ್’ (ಹಕಾರ - 5.4 ನೋಡಿ) ಬಂದಿತ್ತು ಎಂಬುದಾಗಿ ಕಲ್ಪಿಸುವ ಅವಶ್ಯಕತೆಯಿದೆಯೆಂದು

ಕ್ರುಶ್ಣಮೂರ್ತಿ (2003:253) ವಾದಿಸಿದ್ದಾರೆ. ಆದರೆ, ನಿಜಕ್ಕೂ ಅಂತಹ ಕಲ್ಪನೆಯಿಂದ ಏನು ಪ್ರಯೋಜನ ಎಂಬುದಿನ್ನೂ ಸ್ಪಶ್ಟವಾಗಿಲ್ಲ.

ಕನ್ನಡದ ಒಳನುಡಿಗಳಲ್ಲಿ ಈ ಮೊದಲನೆಯ ಅಂಗದಲ್ಲಿ ನಡೆದ

ಕೆಲವು ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ.

(1) ಹಳೆಗನ್ನಡದ ತೋರುಗ ಬೇರುಗಳಲ್ಲಿದ್ದ ಮೂರನೆಯ ಊ ಬೇರು ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಉಳಿದಿಲ್ಲ. ಆದರೆ, ಅದರ ಪಳೆಯುಳಿಕೆಯನ್ನು ಕ್ರಿಯಾರೂಪಗಳಲ್ಲಿ ಬರುವ ಉದು ಒಟ್ಟಿನಲ್ಲಿ (ಮಾಡುವುದು, ಹೋಗುವುದು) ಕಾಣಬಹುದು.

(2) ತಿಳಿಯದುದನ್ನು ಸೂಚಿಸುವ ಹಳೆಗನ್ನಡದ ಆವ ಮತ್ತು ಏ ಬೇರುಗಳು ಹೊಸಗನ್ನಡದಲ್ಲಿ ಯಾವ ಮತ್ತು ಯಾ ಎಂಬ ರೂಪದಲ್ಲಿವೆ (ಯಾರು, ಯಾವನು, ಯಾಕೆ); ಈ ಯಕಾರ ದಕಾರವಾಗಿರುವ ದಾರು, ದಾವನು ರೂಪಗಳೂ ಕೆಲವು ಒಳನುಡಿಗಳಲ್ಲಿವೆ (ಕಿಟ್ಟೆಲ್ 1903:

(3) ಹವ್ಯಕ ಕನ್ನಡದಲ್ಲಿ ತಿಳಿಯದುದನ್ನು ಸೂಚಿಸಲು ಏವ ‘ಯಾವ’, ಎಂತಗೆ ‘ಯಾಕೆ’, ಆರು ‘ಯಾರು’, ಏವದು ‘ಯಾವದು’, ಮೊದಲಾದ ಬಂದಿಲ್ಲವೆಂಬುದನ್ನು ರೂಪಗಳಿದ್ದು ‘ಯಾವ’, ಎವಕ ಗಮನಿಸಬಹುದು. ಬಡಗ ‘ಯಾರು’’ಏದು ‘ಯಾವುದು’ ಎಂಬಂತಹ ರೂಪಗಳಿವೆ.

ಯಕಾರ ಕನ್ನಡದಲ್ಲೂ ಏ

ಅವುಗಳಲ್ಲಿ

ಮನುಶ್ಯರ

ಪದಗಳ ಬಳಕೆಯಾಗುತ್ತದೆ;

(4) ಬಡಗ ಕನ್ನಡದಲ್ಲಿ ತಿಳಿಯದುದನ್ನು ಸೂಚಿಸಲು ಮೂರು ತೋರುಗ ಹೇಳುವುದಿದ್ದರೆ ದಾರು ‘ಯಾರು’ ಪದದ ಬಳಕೆಯಾಗುತ್ತದೆ ಮತ್ತು ಇತರರ ಕುರಿತಾಗಿ ಹೇಳುವುದಿದ್ದರೆ ಏದು ‘ಯಾವುದು’ ಪದದ ಬಳಕೆಯಾಗುತ್ತದೆ. ಇದಲ್ಲದೆ ಏನ ಎಂಬ ಮೂರನೆಯ ಪದವೊಂದು ಎಂಬುದು ತಿಳಿಯದಿರುವಲ್ಲಿ ಬಳಕೆಯಾಗುತ್ತದೆ (ಬಾಲಕ್ರುಶ್ಣನ್ 1999).

ನಡೆಯುತ್ತಿತ್ತು’

ನಡೆಯುತ್ತಿದೆ

ಇಲ್ಲವೇ

Eke →

10.3.2 ಎರಡನೆಯ ಅಂಗದಲ್ಲಿ ಬದಲಾವಣೆಗಳು

ತೋರುಗ ಪದಗಳ ಎರಡನೆಯ ಅಂಗವಾಗಿ ವ್ಯಕ್ತಿ, ಜಾಗ, ಸಮಯ, ಪ್ರಮಾಣ ಮೊದಲಾದುವನ್ನು ತಿಳಿಸುವ ಒಟ್ಟುಗಳು ಬಳಕೆಯಾಗುತ್ತವೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಮೂಲದ್ರಾವಿಡದಲ್ಲಿ ಇವು ಯಾವ ರೂಪದಲ್ಲಿದ್ದುವು ಎಂಬ ವಿಶಯದಲ್ಲಿ ಇನ್ನೂ ಸಾಕಶ್ಟು ಸಂಶೋದನೆಗಳು ನಡೆದಿಲ್ಲ.

ವ್ಯಕ್ತಿಗಳನ್ನು ಸೂಚಿಸುವ ಪದಗಳಲ್ಲಿ ಮನುಶ್ಯರು ಮತ್ತು ಇತರರು ಎಂಬ ವ್ಯತ್ಯಾಸ ಮತ್ತು ಮನುಶ್ಯರಲ್ಲೇನೇ ಒರ್ವಚನದಲ್ಲಿ ಗಂಡಸು- ಹೆಂಗಸು ಎಂಬ ಹೆಚ್ಚಿನ ವ್ಯತ್ಯಾಸ ಈ ಎರಡನೆಯ ಅಂಗದಲ್ಲಿ ಕಾಣಿಸುತ್ತದೆ.

ಮನುಶ್ಯರು: ಗಂಡಸು
ಹೆಂಗಸು
ಇತರರು

ಒವ್ರಚನ (ಅ)ವನು (ಅ)ವಳು

ಹಲವಚನ (ಅ)ವರು

ಹಲವಚನದಲ್ಲಿದ್ದ ಮನುಶ್ಯರು-ಇತರರು ವ್ಯತ್ಯಾಸ ಕರಾವಳಿಯ ಒಳನುಡಿಗಳಲ್ಲಿ ಇಲ್ಲವಾಗಿದೆ. ಉದಾಹರಣೆಗಾಗಿ ಹವ್ಯಕ ಕನ್ನಡದಲ್ಲಿ ಅವು ಎಂಬುದನ್ನೇ ‘ಅವರು’ ಮತ್ತು ‘ಅವು’ ಎಂಬ ಎರಡು ಅರ್ತಗಳಲ್ಲೂ ಬಳಸಲಾಗುತ್ತದೆ. ಸುಳ್ಯದ ಗವ್ಡ ಕನ್ನಡದಲ್ಲೂ ಹೀಗೆಯೇ.

ಒರ್ವಚನದಲ್ಲಿಯೂ ಅದು ಎಂಬುದಕ್ಕೆ ಇಂತಹದೇ ಬಳಕೆಯಿದ್ದು, ಗವ್ರವಾರ್ತದಲ್ಲಿ ಮಾತ್ರ ಅವ ᵒ ‘ಅವನು’ ಮತ್ತು ಅವ ‘ಅವಳು’ ಪದಗಳ ಬಳಕೆಯಾಗುತ್ತದೆ.

ಅಹಗೆ, ಇಹಗೆ ಮತ್ತು ಎಹಗೆ ಪದಗಳು ಇವತ್ತಿನ ಬರಹ ಕನ್ನಡದಲ್ಲಿ ಹಾಗೆ, ಹೀಗೆ ಮತ್ತು ಹೇಗೆ ಎಂಬುದಾಗಿ ಬದಲಾಗಿವೆ. ಇಲ್ಲಿ ಎರಡನೆಯ ಅಂಗದಲ್ಲಿದ್ದ ಹಕಾರ ಮೊದಲನೆಯ ಅಂಗದ ಮುಂದೆ ಬಂದು ನಿಂತಿದೆ. ಹವ್ಯಕ ಕನ್ನಡದಲ್ಲಿ ಇವು ಹಾಂಗೆ, ಹೀಂಗೆ ಮತ್ತು ಹೇಂಗೆ

ಎಂಬ ರೂಪದಲ್ಲಿವೆ. ಅಹಗೆ ಮೊದಲಾದವುಗಳ ಹಿಂದಿದ್ದ ರೂಪಗಳಲ್ಲಿ ಒಂದು ಮೂಗುಲಿಯೂ ಬರುತ್ತಿತೆಂಬುದು ಇದರಿಂದ ತಿಳಿಯುತ್ತದೆ.

ಮೇಲೆ

ಸೂಚಿಸಿದ

ಹಾಗೆ, ಎರಡನೇ ಅಂಗದಲ್ಲಿ

ನಡೆದ ಬದಲಾವಣೆಗಳ ಕುರಿತಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ. ಇದಕ್ಕಾಗಿ ಕನ್ನಡದ ಬೇರೆ ಬೇರೆ ಒಳನುಡಿಗಳಲ್ಲಿ ಎಂತಹ ತೋರುಗ ಪದಗಳೆಲ್ಲ ಬಳಕೆಯಲ್ಲಿವೆ ಎಂಬುದನ್ನು ಪಟ್ಟಿ ಮಾಡುವ ಅವಶ್ಯಕತೆಯಿದೆ.

Eke →

10.4 ತಿರುಳು

ಮೂಲದ್ರಾವಿಡದ ಆಡುಗ ಪದಗಳು ಮತ್ತು ತೋರುಗ ಪದಗಳು ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಆಡುಗ ಪದಗಳ ಕೂಡಿಕೆಯ ರೂಪಗಳಲ್ಲಿದ್ದ ವ್ಯತ್ಯಾಸವೊಂದು ಸೇರಿಸದೆ ಹಲವು ಒಳನುಡಿಗಳಲ್ಲಿ

(ಆಡುಗನೊಂದಿಗೆ ಸೂಚಿಸುವಂತಹ ವ್ಯತ್ಯಾಸ) ಇಲ್ಲವಾಗಿರುವುದು ಇವುಗಳಲ್ಲಿ ಮುಕ್ಯವಾದುದು.

ಸೇರಿಸಿ ಇಲ್ಲವೇ

ಕೇಳುಗನನ್ನು

ಕನ್ನಡದ

ಇದೇ ರೀತಿಯಲ್ಲಿ, ತೋರುಗ ಪದಗಳ ಮೊದಲನೆಯ ಅಂಗದಲ್ಲಿದ್ದ ಒಂದು ವ್ಯತ್ಯಾಸವೂ ಇವತ್ತಿನ ಕನ್ನಡ ಒಳನುಡಿಗಳಲ್ಲಿ ಇಲ್ಲವಾಗಿದೆ. ಉದಾಹರಣೆಗಾಗಿ, ಅಲ್ಲಿ, ಇಲ್ಲಿ, ಉಲ್ಲಿ ಎಂಬ ಮೂರು ತೋರುಗ ಪದಗಳ ಬದಲು ಇವತ್ತು ಅಲ್ಲಿ ಮತ್ತು ಇಲ್ಲಿ ಎಂಬ ಎರಡು ತೋರುಗ ಪದಗಳು ಮಾತ್ರ ಉಳಿದುಕೊಂಡಿವೆ.

11. ಗುಣಪದಗಳು

Eke →

11.1 ಮುನ್ನೋಟ

ಮೂಲದ್ರಾವಿಡ ವಾಕ್ಯಗಳಲ್ಲಿ ಬಳಕೆಯಾಗುತ್ತಿದ್ದ ಕ್ರಿಯಾಪದ ಮತ್ತು ನಾಮಪದಗಳ ಮತ್ತು ಅವುಗಳ ಪದರೂಪಗಳ ಸ್ವರೂಪ ಎಂತಹದು ಎಂಬುದನ್ನು ನಾವು ಹಿಂದಿನ ನಾಲ್ಕು ಅದ್ಯಾಯಗಳಲ್ಲಿ ನೋಡಿದ್ದೇವೆ. ಇವುಗಳಲ್ಲಿ ಕ್ರಿಯಾಪದಗಳಿಗೆ ಮಾಡುವಿಕೆಯನ್ನು ಇಲ್ಲವೇ ಆಗುವಿಕೆಯನ್ನು ಸೂಚಿಸುವ ನಾಮಪದಗಳಿಗೆ ಅಂತಹ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವ ಕೆಲಸವಿದ್ದಿರಬೇಕು.

ಕೆಲಸವಿದ್ದಿರಬೇಕು ಮತ್ತು

ಮೂಲದ್ರಾವಿಡದಲ್ಲಿ ಈ ಎರಡು ರೀತಿಯ ಪದಗಳು ಮಾತ್ರವಲ್ಲದೆ ಗುಣಪದಗಳೆಂಬ ಇನ್ನೊಂದು ರೀತಿಯ ಪದಗಳೂ ಸಾಕಶ್ಟು ಎಣಿಕೆಯಲ್ಲಿ ಬಳಕೆಯಾಗುತ್ತಿದ್ದಿರಬೇಕು. ಇವಕ್ಕೆ ನಾಮಪದ ಮತ್ತು ಕ್ರಿಯಾಪದಗಳ ಕೆಲಸದಲ್ಲಿ ಸಹಾಯ ಮಾಡುವಂತಹ ಕೆಳಗಿನ ಸ್ತರದ ಕೆಲಸವಿತ್ತು. ಈ ಕಾರಣಕ್ಕಾಗಿ, ಅವನ್ನು ‘ನಾಮ-ಗುಣಪದ’ ಮತ್ತು ‘ಕ್ರಿಯಾ-ಗುಣಪದ’ ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು.

Eke →

11.1.1 ನಾಮ-ಗುಣಪದಗಳ ಕೆಲಸ

ಮೂಲಕ, ನಾಮಪದಗಳೊಂದಿಗೆ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುವುದೇ ನಾಮ-ಗುಣಪದಗಳ ಅತಿ ಮುಕ್ಯವಾದ ಕೆಲಸ.

ಪದಕಂತೆಗಳಲ್ಲಿ ಬಳಕೆಯಾಗುವ

ಹೂವು

ಉದಾಹರಣೆಗಾಗಿ,

ನಾಮಪದದೊಂದಿಗೆ

ಕೆಂಪು ಗುಣಪದವನ್ನು ಬಳಸಿದಾಗ, ಹೂವು ಪದದ ವ್ಯಾಪ್ತಿ ಕಡಿಮೆಯಾಗುತ್ತದೆ. ಯಾಕೆಂದರೆ, ಹೂವು ಪದವು ಸೂಚಿಸುವ ವಸ್ತುಗಳಲ್ಲಿ ಕೆಲವನ್ನು ಮಾತ್ರ (‘ಕೆಂಪು ಬಣ್ಣ’ ಇರುವವುಗಳನ್ನು ಮಾತ್ರ) ಅದರೊಂದಿಗೆ ಕೆಂಪು ಗುಣಪದವನ್ನು ಬಳಸಿ ತಯಾರಿಸಿರುವ ಕೆಂಪು ಹೂವು ಪದಕಂತೆ ಸೂಚಿಸಬಲ್ಲುದು.

ನಾಮ-ಗುಣಪದಗಳಿಗಿರುವ ಈ ಕೆಲಸಕ್ಕಾಗಿ ಅವು ಒಂದು ನಿಶ್ಚಿತವಾದ ಗುಣವನ್ನು ಸ್ವಲ್ಪವೂ ಸಂಶಯ ಬಾರದಂತೆ ಸೂಚಿಸುವ ಅವಶ್ಯಕತೆಯಿದೆ. ಗುಣಪದಗಳ ಬಳಕೆಯಲ್ಲಿ ಕಾಣಿಸುವ ಹಲವು ನಿರ್ಬಂದಗಳು ಈ ಅವಶ್ಯಕತೆಯನ್ನು ಬೆಳೆದು ಬಂದಿವೆ. ಪೂರಯ್ಸುವುದಕ್ಕಾಗಿ ಉದಾಹರಣೆಗಾಗಿ, ಕನ್ನಡ ಗುಣಪದಗಳ ಬಳಕೆಯಲ್ಲಿ ಕಾಣಿಸುವ ಕೆಳಗಿನ ಒಂದು ನಿರ್ಬಂದವನ್ನು ಇಲ್ಲಿ ಪರಿಶೀಲಿಸಬಹುದು.

ಕನ್ನಡದಲ್ಲಿ ‘ಮೊದಲಾದ’ ಎಂಬ ಅರ್ತವನ್ನು ಕೊಡುವುದಕ್ಕಾಗಿ ನಾಮ ಪದಗಳೊಂದಿಗೆ ಇಲ್ಲವೇ ಕ್ರಿಯಾಪದಗಳೊಂದಿಗೆ ಅವುಗಳ ಮೊದಲನೆಯ ಅಕ್ಶರದ ಬದಲು ಗಿ ಇಲ್ಲವೇ ಗೀ ಎಂಬುದನ್ನು ಬಳಸಿ ರಚಿಸಿದ ಪದವನ್ನು ಸೇರಿಸಿ ಹೇಳಲಾಗುತ್ತದೆ. (ಆ ಪದದ ಮೊದಲನೆಯ ಸ್ವರ ಗಿಡ್ಡ ಇದ್ದರೆ ಗಿ ಎಂಬುದನ್ನು ಬಳಸಬೇಕು ಮತ್ತು ಉದ್ದ ಇದ್ದರೆ ಗೀ ಎಂಬುದನ್ನು ಬಳಸ ಬೇಕು). ಇಂತಹ ಪದಗಳ ಬಳಕೆ ಮೂಲದ್ರಾವಿಡದಲ್ಲೂ ಇದ್ದಿರಬೇಕು.

(1ಕ) ಇದರಲ್ಲಿ ಏನಾದರೂ ಕಲ್ಲುಗಿಲ್ಲು ಇದೆಯೋ ನೋಡಿ. (1ಚ) ಅವಳಿಗೆ ಹಾವುಗೀವು ಬಂದೀತೆಂದು ಹೆದರಿಕೆ. (1ಟ) ಆ ಹುಡುಗ ಎಲ್ಲಿಯಾದರೂ ಬಿದ್ದುಗಿದ್ದಾನು.

(1ಕ)ದಲ್ಲಿ ಕಲ್ಲುಗಿಲ್ಲು ಎಂಬುದಕ್ಕೆ ‘ಕಲ್ಲು ಮೊದಲಾದವು’ ಎಂಬ ಅರ್ತ ಇದೆ ಮತ್ತು (1ಟ)ದಲ್ಲಿ ಬಂದಿರುವ ಬಿದ್ದುಗಿದ್ದಾನು ಎಂಬುದಕ್ಕೆ ‘ಬಿದ್ದಾನು ಇಲ್ಲವೇ ಬೇರೆ ಯಾವುದಾದರೂ ಅಪಾಯಕರ ಕೆಲಸವನ್ನು ಮಾಡಿಯಾನು’ ಎಂಬ ಅರ್ತವಿದೆ.

ನಾಮ-ಗುಣಪದಗಳೊಂದಿಗೆ ಈ ರೀತಿ ಗಿ ಇಲ್ಲವೇ ಗೀ ಎಂಬವುಗಳಿಂದ ಮೊದಲಾಗುವ ಪದಗಳನ್ನು ನೇರವಾಗಿ ಸೇರಿಸಿ ಹೇಳಲು ಸಾದ್ಯವಾಗದು. ಉದಾಹರಣೆಗಾಗಿ, ಕೆಂಪು ಗುಣಪದದೊಂದಿಗೆ ಗಿಂಪು ಎಂಬುದನ್ನು ಸೇರಿಸಿ ಕೆಂಪುಗಿಂಪು ಹೂವು ಎನ್ನಲು ಬರುವುದಿಲ್ಲ. ಗಿಂಪುಹೂವು ಅಂತಹದನ್ನು ಎಂಬುದಾಗಿ ಇಡೀ ಪದಕಂತೆಗೇನೇ ಸೇರಿಸಬೇಕು.

ಸೇರಿಸುವುದಿದ್ದರೆ,

ಕೆಂಪುಹೂವು

ಈ ನಿರ್ಬಂದಕ್ಕೆ ಕಾರಣವೇನೆಂದರೆ, ‘ಮೊದಲಾದ’ ಎಂಬ ಅರ್ತವನ್ನು ಕೊಡುವ ಗಿಂಪು ಪದ ಸೇರಿದಾಗ ಕೆಂಪು ಗುಣಪದದ ಅರ್ತ ಅಸ್ಪಶ್ಟವಾಗುತ್ತದೆ; ಆದರೆ ಮೇಲೆ ಸೂಚಿಸಿದ ಹಾಗೆ, ನಾಮಪದದ ಒಂದು ನಿಶ್ಚಿತವಾದ ಗುಣವನ್ನು ಗುಣಪದ ಸೂಚಿಸಬೇಕಾಗಿದೆಯಾದ ಕಾರಣ, ಅದರ ಈ ಮುಕ್ಯ ಕೆಲಸಕ್ಕೆ ಗಿಂಪು ಎಂಬುದರ ಸೇರಿಕೆ ಅಡ್ಡಿಯಾಗುತ್ತದೆ.

ಮೂಲದ್ರಾವಿಡದ ನಾಮ-ಗುಣಪದಗಳನ್ನು ಕೆಳಗೆ ಸೂಚಿಸಿದ ಹಾಗೆ ಏಳು ಗುಂಪುಗಳಲ್ಲಿ ಹಂಚಲು ಸಾದ್ಯವಿದೆ. ಇವಕ್ಕೆ ಉದಾಹರಣೆಗಳನ್ನು ಕೆಳಗೆ ಕನ್ನಡದಿಂದ ಕೊಡಲಾಗಿದೆ.

ಗುಂಪುಗಳು

  1. ಬೆಲೆ
  2. ಮನುಶ್ಯರ ಗುಣಗಳು
  3. ವಸ್ತುಗಳ ಗುಣಗಳು

ಕನ್ನಡದ ಉದಾಹರಣೆಗಳು ಉದ್ದ-ಗಿಡ್ಡ, ದಪ್ಪ-ತೆಳು
ಕರ್, ಕೆಮ್, ಬೆಳ್ ಪೊಸ-ಪೞ, ಎಳ್-ಮುದಿ ಪೊಲ್, ಚನ್
ಕುರುಡು, ಕಿವುಡು, ಪೋಲಿ, ಗಟ್ಟಿ ಇನ್, ಎಳ್, ಕಯ್, ಕೂರ್, ತಣ್

  1. ದಿಕ್ಕು

ಮೂಡು, ತೆನ್, ಪಡು, ಬಡ

ನಾಮಪದ ಕಂತೆಗಳಲ್ಲಿ ಈ ಗುಣಪದಗಳ ಬಳಕೆಯುಂತಹದು ಎಂಬುದನ್ನು ಕೆಳಗೆ ಕೊಟ್ಟಿರುವ ಹಳೆಗನ್ನಡ ಮತ್ತು ಹೊಸಗನ್ನಡ ಉದಾಹರಣೆಗಳು ತೋರಿಸಿಕೊಡುತ್ತವೆ.

ಹಳೆಗನ್ನಡ ಪೆರ್ಮರಂ ಒಳ್ಗನ್ನಡಂ ಪೇರಡವಿ ನಿಡುದೋಳ್ ಪೞವಾವಿ ಕೀೞ್ಗಡೆ
ಕಿಱಿಗೂಸು ಚೆಂದಾವರೆ

ಹೊಸಗನ್ನಡ ದೊಡ್ಡ ಮರ ಒಳ್ಳೆ ಕನ್ನಡ ದೊಡ್ಡ ಕಾಡು ಉದ್ದ ತೋಳು ಹಳೆಬಾವಿ ಕೆಳಗಡೆ ಚಿಕ್ಕ ಮಗು ಕೆಂಪು ತಾವರೆ

ಇಂತಹ ಗುಣಪದಗಳು ಮಾತ್ರವಲ್ಲದೆ, ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಯನ್ನು ಸೂಚಿಸುವ ಒನ್/ಓರ್/ ಒಕ್, ಈರ್, ಮೂ, ನಾಲ್, ಚಯ್, *ಚಾಱ್, ಏೞ್, ಎಣ್, *ತೊಳ್/ತೊಣ್, ಪತ್, ನೂಱ್ ಮತ್ತು ಅರ್, ಕೆಲ್ (<*ಕಿಲ್), ಪಲ್ ಎಂಬ ಎಣಿಕೆಯ ಬೇರುಗಳು ಹಾಗೂ ಆ, ಈ, ಊ ಮತ್ತು ಯಾ ನಾಮ- ಗುಣಪದಗಳಾಗಿ ಬಳಕೆಯಲ್ಲಿದ್ದಿರಬೇಕು.

ಮೂಲದ್ರಾವಿಡದಲ್ಲಿ

ಬೇರುಗಳು

ತೋರುಗ

Eke →

11.1.2 ಕ್ರಿಯಾ-ಗುಣಪದಗಳ ಕೆಲಸ

ನಾಮಪದಗಳ ಗುಣಗಳನ್ನು ಸೂಚಿಸುವುದಕ್ಕಾಗಿ ನಾಮ-ಗುಣಪದಗಳ ಬಳಕೆಯಾಗುವ ಗುಣಗಳನ್ನು ಬಳಕೆಯಾಗುತ್ತದೆ. ಸೂಚಿಸುವುದಕ್ಕಾಗಿ

ಕ್ರಿಯಾ-ಗುಣಪದಗಳ

ಕ್ರಿಯಾಪದಗಳ

ಹಾಗೆಯೇ,

ಉದಾಹರಣೆಗಾಗಿ, ನಾಡಂ ನಾಡೆ ಕೆಡಿಸಿದನ್ ಎಂಬ ಹಳೆಗನ್ನಡ ವಾಕ್ಯದಲ್ಲಿ ಬಂದಿರುವ ನಾಡೆ ಗುಣಪದವು ಕೆಡಿಸು ಕ್ರಿಯಾಪದದ ಒಂದು ಗುಣವನ್ನು ಸೂಚಿಸುತ್ತದೆ.

ಆದರೆ, ಕ್ರಿಯಾಪದಗಳ ಗುಣಗಳನ್ನು ಸೂಚಿಸುವಂತಹ ಕ್ರಿಯಾ-ಗುಣ ಪದಗಳಲ್ಲಿ ಹೆಚ್ಚಿನವನ್ನೂ ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸುವುದರ ಮೂಲಕ ರಚಿಸಲಾಗುತ್ತದೆ. ದೊಪ್ಪನೆ, ತಟ್ಟನೆ, ಸರಸರನೆ ಮೊದಲಾದ ಅಣಕಿಸುವ ಗುಣಪದಗಳು ಮಾತ್ರ ಇದಕ್ಕೆ ಅಪವಾದಗಳಾಗಿದ್ದು, ಅವನ್ನು ಆ ರೀತಿ ನಾಮಬೇರುಗಳಿಂದ ಪಡೆಯಲು ಸಾದ್ಯವಾಗುವುದಿಲ್ಲ. ಆದರೆ, ಇಂತಹ ಪದಗಳು ಬೇರೆ ಹಲವು ವಿಶಯಗಳಲ್ಲಿ ಇತರ ಗುಣಪದಗಳಿಂದ ಬೇರಾಗಿದ್ದು ಪದಕೋಶದ ಹೊರಗೆ ನಿಲ್ಲುತ್ತವೆ (11.5 ನೋಡಿ).

ಈ ಕಾರಣಕ್ಕಾಗಿ, ಕ್ರಿಯಾ-ಗುಣಪದವೆಂಬ ಬೇರೆಯೇ ಒಂದು ಗುಂಪಿ ನಲ್ಲಿ ಬರುವ ಗುಣಬೇರುಗಳು ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದುವೇ ಎಂಬ ವಿಶಯದ ಕುರಿತು ಸಂಶಯವೆದ್ದಿದೆ ಮತ್ತು ಈ ವಿಶಯದಲ್ಲಿ ಇನ್ನಶ್ಟು ಸಂಶೋದನೆ ನಡೆಸುವ ಅವಶ್ಯಕತೆಯಿದೆ.

ಮಾತ್ರವಲ್ಲದೆ,

ಇಂತಹ ಕ್ರಿಯಾ-ಗುಣಪದಗಳು

ಗುಣಪದಗಳ ಗುಣಗಳನ್ನು ಸೂಚಿಸುವಂತಹ ಗುಣ-ಗುಣಪದಗಳೂ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕು. ಉದಾಹರಣೆಗಾಗಿ, ಕನ್ನಡದ ಹೆಚ್ಚು ದೊಡ್ಡ ಮನೆ ಪದಕಂತೆಯಲ್ಲಿ ಬಂದಿರುವ ಹೆಚ್ಚು ಗುಣಪದ ದೊಡ್ಡ ಗುಣಪದದ ಒಂದು ಗುಣವನ್ನು ಸೂಚಿಸುತ್ತದೆ. ಆದರೆ ನಾಮ-ಗುಣಪದ ಮತ್ತು ಕ್ರಿಯಾ-ಗುಣಪದಗಳ ಹಾಗೆ ಈ ಗುಣ-ಗುಣಪದಗಳ ಎಣಿಕೆ ಹೆಚ್ಚಿಲ್ಲ.

Eke →

10.2 ನಾಮ-ಗುಣಪದಗಳ ಒಳರಚನೆ

ಮೂಲದ್ರಾವಿಡದ ನಾಮ-ಗುಣಪದಗಳು ಬರಿಯ ಗುಣಬೇರುಗಳಾಗಿರ ಬಹುದು ಇಲ್ಲವೇ ಅಂತಹ ಗುಣಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದ ಪದಗಳಾಗಿರಬಹುದು. ಇದಲ್ಲದೆ, ಕ್ರಿಯಾಬೇರುಗಳಿಗೆ ಇಲ್ಲವೇ

ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದ ಪದಗಳೂ ನಾಮ- ಗುಣಪದಗಳಾಗಿ ಬಳಕೆಯಾಗಬಲ್ಲುವು.

ಉದಾಹರಣೆಗಾಗಿ, ಹಳೆಗನ್ನಡದ ಬೆಳ್ಗುದುರೆ ಪದಕಂತೆಯಲ್ಲಿ ಬೆಳ್ ಗುಣಬೇರು ನೇರವಾಗಿ ನಾಮಪದದೊಂದಿಗೆ ಬಳಕೆಯಾಗಿದೆ. ಆದರೆ ಬಿಳಿ ಗಱಿಕೆ ಪದದಲ್ಲಿ ಇದೇ ಗುಣಬೇರು ಇ ಒಟ್ಟಿನೊಂದಿಗೆ ಬಂದಿದೆ

ಎಗ್ಗ ‘ನಾಚುವ’ ಗುಣಪದವನ್ನು ಎಗ್ಗು ‘ನಾಚಿಕೆ’ ನಾಮಬೇರಿಗೆ ಅ ಒಟ್ಟನ್ನು ಸೇರಿಸಿ ರಚಿಸಲಾಗಿದೆ ಮತ್ತು ಸೊಡ ‘ಉರಿಯುವ’ ಗುಣಪದ ವನ್ನು ಸುಡು ಕ್ರಿಯಾಬೇರಿಗೆ ಅ ಒಟ್ಟನ್ನು ಸೇರಿಸಿ ರಚಿಸಲಾಗಿದೆ. (ಈ ಅಕಾರ ಸೇರಿದುದರಿಂದಾಗಿ ಸುಡು ಪದದ ಮೊದಲಿನ ಉಕಾರ ಸೊಡ ಎಂಬುದರಲ್ಲಿ ಒಕಾರವಾಗಿದೆ (2.2.1 ನೋಡಿ)).

Eke →

11.2.1 ಗುಣಬೇರುಗಳಿಂದ ನಾಮ-ಗುಣಪದಗಳು

ಮೂಲದ್ರಾವಿಡದ ಗುಣಬೇರುಗಳಿಗೆ ಕೆಲವು ಒಟ್ಟುಗಳನ್ನು ಸೇರಿಸುವುದರ ಮೂಲಕ ಹಲವು ಹೆಚ್ಚಿನ ಗುಣಪದಗಳನ್ನು ತಯಾರಿಸಲು ಸಾದ್ಯವಿತ್ತು. ಉ, ಇ ಮತ್ತು ಅ ಎಂಬ ಮೂರು ಒಟ್ಟುಗಳು ಮೂಲದ್ರಾವಿಡದಲ್ಲೇನೇ ಸೇರಿಸಿದಾಗ ಇದಕ್ಕಾಗಿ ಬಳಕೆಯಾಗುತ್ತಿದ್ದುವೆಂಬುದಕ್ಕೆ ಮೂಲದ್ರಾವಿಡಕ್ಕೇನೇ ಸೇರಿಕೆಯ ಕಲ್ಪಿಸಿಕೊಳ್ಳಬಲ್ಲ ಬದಲಾವಣೆಗಳು ನಡೆಯುತ್ತವೆ ಎಂಬುದನ್ನು ಆದಾರವಾಗಿ ಕೊಡಬಹುದು. ಕನ್ನಡದ ಗುಣಪದಗಳಲ್ಲಿ ಈ ಮೂರು ಒಟ್ಟುಗಳ ಬಳಕೆಯನ್ನು ಕೆಳಗೆ

ಅವನ್ನು ಕೆಲವು

ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

(1) ಉ ಒಟ್ಟಿನ ಬಳಕೆ ಆಱ್ ‘ಆರು’ ಕೇಸ್ (ಕೇಸಕ್ಕಿ)
ಪೇರ್ (ಪೇರಡವಿ) ಕಟ್ (ಕಟ್ಟಡವಿ)

ಅಱು (ಅರುತಿಂಗಳು) ಕಿಸು (ಕಿಸುಗಣ್) ಪೆರು (ಪೆರುಕಿಚ್ಚು) ಕಡು (ಕಡುಗಾಳಿ)

(2) ಇ ಒಟ್ಟಿನ ಬಳಕೆ

ಕಾರ್ (ಕಾರಿರುಳು) ಇನ್ (ಇನ್ನುಣಿಸು) ಪೇರ್ (ಪೇರಡವಿ) ಬೆಳ್ (ಬೆಳ್ಗಡಲ್)

ಕರಿ (ಕರಿಜೀರಿಗೆ) ಇನಿ (ಇನಿವಾತು) ಪಿರಿ (ಪಿರಿಯಣ್ಣ) ಬಿಳಿ (ಬಿಳಿಗೂದಲು)

(3) ಅ ಒಟ್ಟಿನ ಬಳಕೆ

ಉಳ್ (ಉಳ್ಗರುಳ್) ಬೆಳ್ (ಬೆಳ್ಗೊಡೆ)

ಒಳ (ಒಳಮಾತು) ಬೆಳ (ಬೆಳದಿಂಗಳು)

ನಾಮ-ಗುಣಪದಗಳನ್ನು

Eke →

11.2.2 ನಾಮಬೇರುಗಳಿಂದ ನಾಮ-ಗುಣಪದಗಳು

ನಾಮಬೇರುಗಳಿಂದ ತಯಾರಿಸಿ ಬಳಸುವು ದಕ್ಕಿಂತಲೂ ಅವನ್ನು ಇಲ್ಲವೇ ಅವನ್ನು ಬಳಸಿ ರಚಿಸಿದ ನಾಮಪದಗಳನ್ನು ನೇರವಾಗಿ ನಾಮ-ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳ ವ್ಯಾಪ್ತಿಯನ್ನು ಅವುಗಳೊಂದಿಗೆ ಪದಕಂತೆಗಳಲ್ಲಿ) ಬಳಸುವ ವಿದಾನವೇ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದಕ್ಕಾಗಿ ನಾಮಬೇರುಗಳಿಗೆ ಇಲ್ಲವೇ ನಾಮಪದಗಳಿಗೆ ಒಟ್ಟನ್ನು ನಾಮಪದಗಳನ್ನು ಸೇರಿಸಬೇಕಾಗುತ್ತದೆ (9.5.1 ನೋಡಿ).

ಸಂಬಂದಿಸಬಲ್ಲ ಅ

ಮಾಡುವುದಕ್ಕಾಗಿ

ಕಡಿಮೆ

ಈ ರೀತಿ ಅ ಒಟ್ಟನ್ನು ಸೇರಿಸಿರುವ ನಾಮಪದಗಳನ್ನು ಅವುಗಳ ಗುಣ ರೂಪಗಳೆಂದು (ಇಲ್ಲವೇ ಸಂಬಂದಿಸುವ ರೂಪಗಳೆಂದು) ಕರೆಯಬಹುದು.

ಮರದ ಗೆಲ್ಲು
ಮೊಸರಿನ ಮಡಿಕೆ ಹೂವಿನ ಎಸಳು
ಕಲ್ಲಿನ ಗೋಡೆ
ಹಾವಿನ ಹುತ್ತ

ಮನೆಯ ಮಾಡು ಚಿನ್ನದ ಹೂ ಮಗಳ ಮದುವೆ ಹಲ್ಲಿನ ಹೊಳಪು ಬಣ್ಣದ ಗೊಂಬೆ

ಇದಲ್ಲದೆ, ನಾಮಪದಗಳನ್ನು ನೇರವಾಗಿ ಯಾವ ಒಟ್ಟನ್ನೂ ಸೇರಿಸದೆ ಬೇರೆ ನಾಮಪದಗಳೊಂದಿಗೆ ಬಳಸಿ ಹಲವು ರೀತಿಯ ಜೋಡುಪದಗಳನ್ನು ರಚಿಸಲು ಕನ್ನಡದಲ್ಲಿ ಸಾದ್ಯವಿದ್ದು, ಇಂತಹ ರಚನೆಗಳಲ್ಲಿ ನಾಮಪದಗಳು ನೇರವಾಗಿ ಗುಣಪದಗಳ ಕೆಲಸವನ್ನು ನಡೆಸುತ್ತವೆ.

ಅ ಒಟ್ಟಿನೊಂದಿಗೆ
ಬೆಂಕಿಯ ಪೆಟ್ಟಿಗೆ ನೂಲಿನ ಏಣಿ ತಲೆಯ ಕೂದಲು ಕಣ್ಣಿನ ನೀರು ಹೂವಿನ ಗಿಡ ಕಾಡಿನ ಕಿಚ್ಚು

ನೇರವಾಗಿ ಬೆಂಕಿಪೆಟ್ಟಿಗೆ ನೂಲೇಣಿ ತಲೆಗೂದಲು ಕಣ್ಣೀರು ಹೂಗಿಡ ಕಾಳ್ಗಿಚ್ಚು

Eke →

11.2.3 ಕ್ರಿಯಾಬೇರುಗಳಿಂದ ನಾಮಗುಣಪದಗಳು

ಕ್ರಿಯಾಬೇರುಗಳಿಗೆ ಅ ಒಟ್ಟನ್ನು ಸೇರಿಸಿ ಗುಣಪದಗಳನ್ನು ತಯಾರಿಸಲು ಸಾದ್ಯ ಎಂಬುದನ್ನು ಕನ್ನಡದ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಗುಣಪದ

ಕ್ರಿಯಾಪದ ಬಱ್ ‘ಒಣಗು’
ನೀಳ್ ‘ಉದ್ದವಾಗು’’ ನೀಳ ‘ಉದ್ದ’ ಕೂಡು ‘ಸೇರು’’

ಕೂಡ ‘ಒಟ್ಟಿಗೆ’’

ಆದರೆ, ಕ್ರಿಯಾಬೇರುಗಳಿಗೆ ಈ ರೀತಿ ನೇರವಾಗಿ ಅ ಒಟ್ಟನ್ನು ಸೇರಿಸಿ ಗುಣಪದಗಳನ್ನು ತಯಾರಿಸಿಕೊಳ್ಳುವ ವಿದಾನ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಅದಕ್ಕೆ ಬದಲು ಕ್ರಿಯಾಪದಗಳಿಗೆ ಮುಂದಿನ (ಕೊಡುವ, ತಿನ್ನುವ), ಹಿಂದಿನ (ಕೊಟ್ಟ, ತಿಂದ) ಇಲ್ಲವೇ ಅಲ್ಲಗಳೆಯುವ (ಕೊಡದ, ತಿನ್ನದ) ಒಟ್ಟುಗಳನ್ನು ಸೇರಿಸಿ, ಅವುಗಳ ಅನಂತರ ಅ

ಒಟ್ಟನ್ನು ಬಳಸಿ ರಚಿಸಿಕೊಳ್ಳುವುದೇ ಜಾಸ್ತಿ.

ಕ್ರಿಯಾಪದಗಳ ’ಗುಣರೂಪಗಳನ್ನು

ಮುಂದಿನ ರೂಪ ಮಾಡುವ ಕೆಲಸ ತಿನ್ನುವ ಹಣ್ಣು ಹೋಗುವ ದಾರಿ ಕೇಳುವ ಹಾಡು ಕಟ್ಟುವ ಮನೆ

ಅಲ್ಲಗಳೆಯುವ ರೂಪ

ಹಿಂದಿನ ರೂಪ ಮಾಡಿದ ಕೆಲಸ ಮಾಡದ ಕೆಲಸ ತಿಂದ ಹಣ್ಣು ಹೋದ ದಾರಿ ಕೇಳಿದ ಹಾಡು ಕಟ್ಟಿದ ಮನೆ

ತಿನ್ನದ ಹಣ್ಣು ಹೋಗದ ದಾರಿ ಕೇಳದ ಹಾಡು ಕಟ್ಟದ ಮನೆ

Eke →

11.3 ನಾಮ-ಗುಣಪದಗಳ ಬಳಕೆ

ಮೂಲದ್ರಾವಿಡದಲ್ಲಿ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಬೇರುಗಳ ರೂಪದಲ್ಲೇನೇ ಬಳಕೆಯಾಗುತ್ತಿದ್ದಿರಬಹುದು, ಇಲ್ಲವೇ ಕೆಲವು ಒಟ್ಟುಗಳೊಂದಿಗೆ ಸೇರಿಯೂ ಬಳಕೆಯಾಗುತ್ತಿದ್ದಿರಬಹುದು ಎಂಬುದನ್ನು ನಾವು ಮೇಲೆ ನೋಡಿರುವೆವು. ಕನ್ನಡದಲ್ಲಿ ಈ ಎರಡು ರೀತಿಯ ನಾಮ- ಗುಣಪದಗಳ ಬಳಕೆಯನ್ನೂ ಕಾಣಬಹುದು.

(ಕ) ಬೇರುಗಳ ರೂಪದಲ್ಲಿ ಬಳಕೆ

ಮುಂ
ನಲ್ ಬೆಳ್

ಕೆಂಬಣ್ಣ, ಕೆಂಬರಲ್, ಕೆಂಬಿಸಿಲ್, ಕೆಮ್ಮಣ್ಣು ಮುಂಗಣ್ಣು, ಮುಂಗಾಲು, ಮುಂಗೊರಲ್
ತಣ್ಗದಿರ್, ತಣ್ಣೆಲರ್, ತಣ್ಬನಿ, ತಣ್ಗೊಳ ನಲ್ಗುದುರೆ, ನಲ್ಗಾದೆ, ನಲ್ಲುಣಿಸು ಬೆಳ್ಗಡಲ್, ಬೆಳ್ಗೊಡೆ, ಬೆಳ್ನೊರೆ, ಬೆಳ್ಳಾನೆ

(ಚ) ಒಟ್ಟುಗಳೊಂದಿಗೆ ಬಳಕೆ ಪೊಸ್-ಅ ಪೞ್-ಅ

ಪೊಸ ಕಂಪು, ಪೊಸ ಪೂ, ಪೊಸದಳಿರ್ ಕಿಸುಗಣ್, ಕಿಸುವಣ್ಣ, ಕಿಸುಗಲ್, ಕಿಸುಗಾಡು ಬಿಳಿಗಱಿಕೆ, ಬಿಳಿಗಡ್ಡ, ಬಿಳಿಗೂದಲು ಪೞಗನ್ನಡ, ಪೞನೆಲ್, ಪೞನವಿರ್

ನಿಡುದೋಳ್, ನಿಡುಗರುಳ್, ನಿಡುಗಿಚ್ಚು

ಮೇಲೆ ಸೂಚಿಸಿದ ಹಾಗೆ, ಎಣಿಕೆಯ ಪದಗಳ ಮತ್ತು ತೋರುಗ ಪದಗಳ ಮೊದಲನೆಯ ಅಂಶಗಳೂ (ಒರ್, ಇರ್, ಮೂ; ಆ, ಈ, ಊ, ಯಾವ) ಗುಣಪದಗಳಾಗಿ ಬಳಕೆಯಾಗಬಲ್ಲುವಾಗಿದ್ದು, ಮೂಲದ್ರಾವಿಡದ ಈ ಬಳಕೆ ಹಳೆಗನ್ನಡದಲ್ಲೂ ಉಳಿದುಕೊಂಡಿದೆ.

ಎಣಿಕೆಯ ಪದ
ಇರ್ಕಾಲು
ಮೂಗೊಳ ನಾಲ್ದಿಂಗಳ್ ಒರ್ಪೆಸರ್

ತೋರುಗ ಪದ ಆ ಮನೆ ಈ ಬಂದರ್ (ಬಂದವರು)

ಊ ಬನಮ್

ಆವ ಆನೆಗಳ್

ಆದರೆ, ಹೊಸಗನ್ನಡದಲ್ಲಿ ತೋರುಗ ಪದಗಳ ಮೊದಲನೆಯ ಅಂಶ ಮಾತ್ರ ಈ ರೀತಿ ನಾಮ-ಗುಣಪದವಾಗಿ ಬಳಕೆಯಾಗಬಲ್ಲುದಲ್ಲದೆ ಎಣಿಕೆಯ ಪದಗಳ ಮೊದಲನೆಯ ಅಂಶಕ್ಕೆ ಅಂತಹ ಬಳಕೆಯಿಲ್ಲ. ಕೆಲವು ಜೋಡುಪದಗಳಲ್ಲಿ ಮಾತ್ರ ಅದು ನಾಮಪದಗಳೊಂದಿಗೆ ಆ ರೀತಿ ಬಂದಿರುವುದನ್ನು ಕಾಣಬಹುದು (ಇಬ್ಬರು, ಮೂವರು, ಒಗ್ಗಟ್ಟು).

Eke →

11.3.1 ಮೂಲದ್ರಾವಿಡದ ಸೇರಿಕೆಯ ಬದಲಾವಣೆಗಳು

ನಾಮ-ಗುಣಪದಗಳನ್ನು ಬೇರುಗಳ ರೂಪದಲ್ಲಿ ಬಳಸಿದಾಗ, ಅವು ಕೆಲವು ಸೇರಿಕೆಯ ನಿಯಮಗಳಿಗೊಳಗಾಗುವುದನ್ನು ಕಾಣಬಹುದು. ಈ ನಿಯಮ ಗಳಲ್ಲಿ ಕೆಲವು ಮೂಲದ್ರಾವಿಡದಲ್ಲೇನೇ ಬಳಕೆಯಲ್ಲಿದ್ದಿರಬೇಕು.

(1) ಉದ್ದ ಸ್ವರವಿರುವ ಕೀೞ್ ‘ಕೆಳ’, ಪೇರ್ ‘ದೊಡ್ಡ’, ಕಾರ್ ‘ಕಪ್ಪು’ ಮತ್ತು ಮಾಱ್ ‘ಮತ್ತಿನ’ ಗುಣಪದಗಳ ಅನಂತರ ಮತ್ತು ಓರ್ ‘ಒಂದು’, ಈರ್ ‘ಎರಡು’, ಮೂಱ್ ‘ಮೂರು’ ಮತ್ತು ಆಱ್ ‘ಆರು’ ಎಣಿಕೆಯ ಪದಗಳ ಅನಂತರ (<*ಚಾಱ್) ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಉದ್ದಸ್ವರ ಬದಲಾಗದೆ

ಉಳಿಯುತ್ತದೆ; ಆದರೆ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅದು ಗಿಡ್ಡ ಸ್ವರವಾಗಿ ಬದಲಾಗುತ್ತದೆ (ಎಂದರೆ, ಈ ಬೇರುಗಳಿಗೆ ಎರಡೆರಡು ರೂಪಗಳಿವೆ).

ಉದ್ದಸ್ವರದ ರೂಪ ಕೀೞಲೆ, ಕೀೞಸಳ್ ಪೇರಡವಿ, ಪೇರರ್ಬಿ ಕಾರೆಳ್ಳು, ಕಾರಡವಿ ಮಾಱಡಿ, ಮಾಱೂಡ್ಡು ಓರಡಿ, ಓರೊರ್ಮೆ ಈರಡಿ, ಈರಯ್ದು ಮೂಱು, ಮೂಱಡಿ ಆಱಡಿ, ಆಱಾಟ

ಗಿಡ್ಡಸ್ವರದ ರೂಪ ಕಿೞ್ಗವಲ್, ಕಿೞ್ಗಣ್ಣು ಪೆರ್ಗಡಲ್, ಪೆರ್ಗಿಚ್ಚು ಕರ್ಪೊಗೆ, ಕರ್ವಿಸಿಲ್ ಮಱುಮಾತು, ಮಱುವಾಳ್ ಒರ್ನುಡಿ, ಒರ್ಪೆಸರ್ ಇರ್ತಲೆ, ಇರ್ಕಿವಿ ಮುಕ್ಕಣ್, ಮುನ್ನೂರು ಅಱುನೂಱು, ಅಱುವತ್ತು

(2) ಮೇಲಿನ ನಿಯಮವನ್ನು ಹೋಲುವ ಇನ್ನೊಂದು ನಿಯಮ ಕಟ್್ಟ ‘ಹೆಚ್ಚಿನ’, ಕುಱ್ಱ್ ‘ಚಿಕ್ಕ’, ನಟ್್ಟ ‘ನಡುವಿನ’, ನಿಟ್್ಟ ‘ಉದ್ದ’ ಮತ್ತು ಮುತ್್ತ ‘ಮುದಿ’ ಗುಣಬೇರುಗಳ ಬಳಕೆಯಲ್ಲಿ ಕಾಣಿಸುತ್ತದೆ.

ಈ ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಕೊನೆಯ ಇಮ್ಮಡಿ ವ್ಯಂಜನ ಬದಲಾಗದಿರುತ್ತದೆ ಮತ್ತು ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಆ ಇಮ್ಮಡಿ ವ್ಯಂಜನ ಒತ್ತೆ ರೂಪಕ್ಕೆ ಬದಲಾಗುತ್ತದೆ.

ಇಮ್ಮಡಿ ವ್ಯಂಜನ ಕಟ್ಟಿರುವೆ, ಕಟ್ಟುಬ್ಬಸ ಕುತ್ತೆಸಳ್, ಕುತ್ತಳೆ ನಟ್ಟಡವಿ, ನಟ್ಟಿರುಳ್ ನಿಟ್ಟುಸಿರ್, ನಿಟ್ಟೆಲುವು ಮುತ್ತಜ್ಜ, ಮುತ್ತಪ್ಪ

ಒತ್ತೆ ವ್ಯಂಜನ ಕಡುಗೆಂಪು, ಕಡುಬಡವ ಕುಱುಗಡ್ಡ, ಕುಱುವಜ್ಜೆ ನಡುಗಡಲ್, ನಡುಗಂಬ ನಿಡುದೋಳ್, ನಿಡುಗೊಂಬು ಮುದುಗಾಗೆ, ಮುದುವರ್ದು

ಕಾಣಿಸಲು

(3) ಮೇಲೆ ವಿವರಿಸಿದ ಸೇರಿಕೆಯ ನಿಯಮಗಳು ಈ ಬೇರುಗಳ ಕಾರಣವೇನೆಂದರೆ, ಅವುಗಳ ಅನಂತರ ಬಳಕೆಯಲ್ಲಿ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಕೊನೆಯಲ್ಲಿ ಉ ಎಂಬ ಒಂದು ಸ್ವರ ಒಟ್ಟು ಸೇರಿಕೊಳ್ಳುತ್ತದೆ; ಈ ರೀತಿ ಬೇರುಗಳ ಅನಂತರ ಒಂದು ಸ್ವರ ಒಟ್ಟು (ಇಲ್ಲವೇ ಸ್ವರದಲ್ಲಿ ಮೊದಲಾಗುವ ಒಟ್ಟು) ಸೇರಿದಾಗ, ಅವುಗಳ ಉದ್ದ ಸ್ವರ ಗಿಡ್ಡವಾಗುತ್ತದೆ ಮತ್ತು ಕೊನೆಯ ಇಮ್ಮಡಿ ವ್ಯಂಜನ ಒತ್ತೆ ವ್ಯಂಜನವಾಗುತ್ತದೆ ಎಂಬುದನ್ನು ನಾವು (2.3.1) ಮತ್ತು (4.4.1)ರಲ್ಲಿ ನೋಡಿದ್ದೇವೆ.

(ಕ) ಉದ್ದ ಸ್ವರವಿರುವ ಕೀೞ್, ಪೇರ್, ಕಾರ್, ಮಾಱ್, ಓರ್, ಈರ್, ಮೂಱ್, ಆಱ್ ಬೇರುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗಲೆಲ್ಲ ಅವುಗಳೊಂದಿಗೆ ಉ ಒಟ್ಟು ಸೇರಿಕೊಳ್ಳುತ್ತದೆ; ಮತ್ತು ಇದರಿಂದಾಗಿ ಅವುಗಳ ಉದ್ದಸ್ವರ ಗಿಡ್ಡವಾಗುತ್ತದೆ.

ಆದರೆ, ಮೇಲಿನ ಕನ್ನಡ ಪದಗಳಲ್ಲಿ ಈ ಒಟ್ಟು ಹೆಚ್ಚಿನೆಡೆಗಳಲ್ಲೂ ಬಿದ್ದುಹೋಗಿದೆ ಎಂಬುದನ್ನು ಕಿೞ್ಗವಲ್ (<ಕಿೞುಗವಲ್), ಪೆರ್ಗಡಲ್ (<ಪೆರುಗಡಲ್, ಒರ್ನುಡಿ (<ಒರುನುಡಿ), ಇರ್ತಲೆ (<ಇರುತಲೆ) ಮೊದಲಾದ ಬಳಕೆಗಳಲ್ಲಿ ಕಾಣಬಹುದು.

ಆದರೆ, ಮಱುಮಾತು, ಮಱುವಾಳ್, ಅಱುನೂಱು, ಅಱುವತ್ತು ಎಂಬವುಗಳಲ್ಲಿ ಈ ಉ ಒಟ್ಟು ಬಿದ್ದುಹೋಗದೆ ಉಳಿದಿದೆ. ಮುಕ್ಕಣ್, ಮುನ್ನೂರು ಎಂಬವುಗಳಲ್ಲಿ ಕನ್ನಡದವೇ ಆದ ಬೇರೆ ಕೆಲವು ವ್ಯಂಜನಗಳ ಬದಲಾವಣೆಗಳೂ ನಡೆದಿವೆ (11.3.2 ನೋಡಿ).

ಮೂರು ಉಲಿಕಂತೆಗಳಿರುವ ಪದಗಳಲ್ಲಿ ಗಿಡ್ಡ ಸ್ವರಗಳು ಮಾತ್ರ ಬಂದಿದ್ದು, ಆ ಪದಗಳ ಎರಡನೆಯ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರವಿದ್ದಾಗ, ಎರಡನೆಯ ಗಿಡ್ಡ ಸ್ವರ ಬಿದ್ದುಹೋಗುತ್ತದೆ ಎಂಬ ಕನ್ನಡದ ನಿಯಮವೇ (3.5.1 ನೋಡಿ) ಈ ರೀತಿ ಮೇಲೆ ಕೊಟ್ಟಿರುವ

ಪದಗಳಲ್ಲಿ ಬೇರುಗಳ ಅನಂತರ ಬಂದಿದ್ದ ಉ ಒಟ್ಟು ಬಿದ್ದುಹೋಗಲು

(ಚ) ಇಮ್ಮಡಿ ವ್ಯಂಜನವಿರುವ ಕಟ್್ಟ, ಕುಱ್ಱ್, ನಟ್್ಟ, ನಿಟ್್ಟ, ಮುತ್್ತ (<*ಮುಱ್ಱ್) ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಇಮ್ಮಡಿ ವ್ಯಂಜನ ಬದಲಾಗದೆ ಉಳಿದಿದೆಯುಂಬುದನ್ನು ಕಟ್ಟಿರುವೆ, ಕುತ್ತೆಸಳ್, ಕಟ್ಟಡವಿ ಮೊದಲಾದ ಪದಗಳಲ್ಲಿ ಕಾಣಬಹುದು.

ಇದಕ್ಕೆ ಬದಲು, ಅವುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳೊಂದಿಗೆ ಉ ಒಟ್ಟು ಸೇರಿಕೊಳ್ಳುತ್ತದೆ ಎಂಬುದನ್ನು ಮತ್ತು ಇದರಿಂದಾಗಿ ಅವುಗಳ ಇಮ್ಮಡಿ ವ್ಯಂಜನ ಒತ್ತೆ ವ್ಯಂಜನವಾಗಿ (ಕಡು, ಕುಱು, ನಡು, ನಿಡು ಮತ್ತು ಮುದು ಎಂಬುದಾಗಿ) ಬದಲಾಗುತ್ತದೆ ಎಂಬುದನ್ನು ಕಡುಗೆಂಪು, ಕುಱುಗಡ್ಡೆ, ನಡುಗಡಲ್ ಮೊದಲಾದ ಪದಗಳಲ್ಲಿ ಕಾಣಬಹುದು.

ಉದ್ದಸ್ವರ ಗಿಡ್ಡವಾಗುವ ಮೇಲಿನ (ಕ) ನಿಯಮಕ್ಕೆ ಕನ್ನಡದಲ್ಲಿ ಕೆಲವು ಅಪವಾದಗಳೂ ಇವೆ. ಮೂಲದ್ರಾವಿಡದ ಬದಲಾವಣೆ ನಡೆದ ಅನಂತರ ಕನ್ನಡದಲ್ಲೇನೇ ತಯಾರಾಗಿರಬಹುದಾದ ಜೋಡುಪದಗಳಲ್ಲಿ ಇಂತಹ ಅಪವಾದಗಳನ್ನು ಕಾಣಬಹುದು.

ಉದಾಹರಣೆಗಾಗಿ, ಮೂಗಾವುದ, ಮೂಗಂದಾಯ, ಮೂಗೊಳ, ಮೂವತ್ತು (<ಮೂಱ್ ಪತ್ತು) ಜೋಡುಪದಗಳಲ್ಲಿ ಮೂ(ಱ್) ಪದದ ಅನಂತರ ಪದಗಳು ಬಂದಿವೆಯಾದರೂ ಅದರ ಉದ್ದಸ್ವರ ಗಿಡ್ಡಸ್ವರವಾಗದೆ ಉಳಿದಿದೆ.

ವ್ಯಂಜನಗಳಲ್ಲಿ

ಮೊದಲಾಗುವ

Eke →

11.3.2 ಕನ್ನಡದವೇ ಆದ ಸೇರಿಕೆಯ ಬದಲಾವಣೆಗಳು

ಕನ್ನಡದವೇ ಆದ ಕೆಲವು ಸೇರಿಕೆಯ ಬದಲಾವಣೆಗಳನ್ನೂ ಗುಣಪದಗಳ ವ್ಯಂಜನಗಳಲ್ಲಿ ಕಾಣಬಹುದು. ಇವು ಬಳಕೆಯಲ್ಲಿ ಕೊನೆಗೊಳ್ಳುವ ಮೊದಲಾಗುವ ಗುಣಪದಗಳು ನಾಮಪದಗಳೊಂದಿಗೆ ಬಂದಾಗ ಕಾಣಿಸಿಕೊಳ್ಳುತ್ತವೆ.

ಮುಕ್ಯವಾಗಿ ವ್ಯಂಜನಗಳಲ್ಲಿ

(1) ರಕಾರದಲ್ಲಿ ಕೊನೆಗೊಳ್ಳುವ ಕಾರ್ ‘ಕಪ್ಪು’, ಪೇರ್ ‘ದೊಡ್ಡ’, ಓರ್’‘ಒಂದು’, ಈರ್ ‘ಎರಡು’ ಮತ್ತು ಮೂಱ್ ‘ಮೂರು’ ಪದಗಳಿಗೆ ವ್ಯಂಜನದಲ್ಲಿ ಮೊದಲಾಗುವ ಪದಗಳು ಸೇರಿದಾಗ ಉ ಒಟ್ಟಿನಲ್ಲಿ ಕೊನೆಗೊಳ್ಳುವ ಮತ್ತು ಬೇರಿನ ಉದ್ದಸ್ವರ ಗಿಡ್ಡವಾಗಿರುವ ಕರು, ಪೆರು, ಒರು, ಇರು ಮತ್ತು ಮುರು ರೂಪಗಳಲ್ಲಿ ಬರುತ್ತವೆ ಎಂಬುದನ್ನು ಮೇಲೆ 11.3.1ರಲ್ಲಿ ನೋಡಿರುವೆವು.

ಹೆಚ್ಚಿನೆಡೆಗಳಲ್ಲೂ ಇವುಗಳ ಕೊನೆಯ ಉ ಒಟ್ಟು ಕನ್ನಡದಲ್ಲಿ ಬಿದ್ದು ಹೋಗಿದೆ. ಇದಲ್ಲದೆ, ಈ ಬೇರುಗಳ ಕೊನೆಯಲ್ಲಿರುವ ರಕಾರ ಮತ್ತು ಱಕಾರಗಳು ಅವುಗಳ ಅನಂತರ ಬಂದ ವ್ಯಂಜನಗಳೊಂದಿಗೆ ಸೇರಿಹೋಗಿ ಅವೆರಡೂ ಹಲವು ರೀತಿಯ ಬದಲಾವಣೆಗಳನ್ನು ತೋರಿಸುತ್ತವೆ.

ಉದಾಹರಣೆಗಾಗಿ, ಒರ್ ‘ಒಂದು’ ಬೇರಿನ ಕೊನೆಯ ರಕಾರ, ಅದರ ಅನಂತರ ಕ, ಚ (ಸ), ತ ಮತ್ತು ಪ ವ್ಯಂಜನಗಳು ಬಂದಾಗ, ಅವುಗಳದೇ ರೂಪವನ್ನು ಪಡೆಯುತ್ತದೆ (ಒಕ್ಕಟ್ಟು, ಒಚ್ಚೆರಗು, ಒತ್ತಟ್ಟು, ಒಪೊ್ಪತ್ತು); ಈ ವ್ಯಂಜನಗಳು ಕೊರಳಿಸಿದ ರೂಪವನ್ನು ಪಡೆದಿರುವಲ್ಲಿ ಮತ್ತು ವಕಾರ ಬಕಾರವಾಗಿರುವಲ್ಲಿ ರಕಾರವೂ ಅಂತಹದೇ ರೂಪವನ್ನು (ಒಗ್ಗಟ್ಟು, ಒಬ್ಬ). ಅದರ ಅನಂತರ ಮೂಗುಲಿ ಪಡೆಯುತ್ತದೆ ಬಂದಿರುವಲ್ಲೂ ಅಂತಹದೇ ರೂಪವನ್ನು ಪಡೆಯುತ್ತದೆ (ಒಮ್ಮೆ).

(2) ಮೂಗುಲಿಯಲ್ಲಿ ಕೊನೆಗೊಳ್ಳುವ ಇನ್ ‘ಸಿಹಿ’, ಕೆಮ್/ಚೆಮ್ ‘ಕೆಂಪು’, ತಣ್ ‘ತಂಪು’, ಪಿನ್ ‘ಹಿಂದೆ’, ಮುನ್ ‘ಮುಂದೆ’ ಗುಣಪದಗಳ ಕೊನೆಯ ವ್ಯಂಜನವೂ ಅವುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಹಲವು ರೀತಿಯ ಬದಲಾವಣೆಗಳನ್ನು ತೋರಿಸುತ್ತವೆ.

ಉದಾಹರಣೆಗಾಗಿ, ಕೆಂ ‘ಕೆಂಪು’ ಪದಕ್ಕೆ ಕೆಣ್, ಕೆನ್ ಮತ್ತು ಕೆಮ್ ಎಂಬ ರೂಪಗಳಿರುವುದನ್ನು ಕೆಂಗಣ್, ಕೆಂಜಡೆ, ಕೆಣ್ಡ, ಕೆನ್ದಳಿರ್, ಕೆನ್ನೀರ್, ಕೆಮ್ಬಿಸಿಲ್, ಕೆಮ್ಮಣ್ ಮೊದಲಾದ ಪದಗಳಲ್ಲಿ ಕಾಣಬಹುದು.

ಕನ್ನಡದ

ಕಗ್ಗಂಟು,

ಕಗ್ಗಾಯಿ,

ಕಗ್ಗತ್ತಲೆ,

ಕಗ್ಗೊಲೆ ಮೊದಲಾದ ಕೆಲವು ಜೋಡುಪದಗಳಲ್ಲಿ ಕಟ್್ಟ ಗುಣಪದ ಕಡು ರೂಪಕ್ಕೆ ಕೊನೆಯ ಉ ಒಟ್ಟು ಬದಲಾಗಿದೆಯಾದರೂ ಅನಂತರ ಅದರ ಬಿದ್ದುಹೋಗಿದೆ ಕಕಾರ(ಇಲ್ಲವೇ ಮತ್ತು ಗಕಾರ)ದೊಂದಿಗೆ ಸೇರಿ ಅವೆರಡೂ ಗಕಾರಗಳಾಗಿವೆ (ಕಡು+ಗಂಟು > ಕಗ್ಗಂಟು, ಕಡು+ ಕತ್ತಲೆ > ಕಗ್ಗತ್ತಲೆ).

ಮುಂದಿನ

ಪದಗಳಲ್ಲಿ

ಮೊದಲಾದ

(4) ಪೆರ್-ಪಿರಿ, ಹಿರಿ; ಬೆಳ್-ಬಿಳಿ, ಬಿಳಿಮೋಡ, ಬಿಳ್ಪು; ಬೆಚ್- ಬಿಸಿ, ಬಿಸಿಲು, ಬಿಸಿನೀರ್; ಎದುರ್-ಇದಿರ್; ಕೆಚ್-ಕಿಸು, ಕಿಸ್ಗಾರ, ಕಿಸುವೊನ್ ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ನಡೆದ ಎಕಾರ ಇಕಾರವಾಗುವ ಬದಲಾವಣೆಯನ್ನು ಕಾಣಬಹುದು (2.2.2 ನೋಡಿ). ಜೋಡುಪದಗಳಲ್ಲಿ

ಬದಲಾವಣೆಗಳೆಲ್ಲ ಸಾಮಾನ್ಯವಾಗಿ ಅನಿಯಮಿತವಾಗಿರುತ್ತವೆ (ಬಟ್ 2002:148 ನೋಡಿ). ಈ ಕಾರಣಕ್ಕಾಗಿ ಮೇಲಿನ ಬದಲಾವಣೆಗಳಿಗೂ ಕನ್ನಡದಲ್ಲೇನೇ ಹಲವು ಅಪವಾದಗಳನ್ನು ಕಾಣಬಹುದು.

ನಡೆಯುವ

ಉದಾಹರಣೆಗಾಗಿ, ನೇರ್ ‘ನೇರ’ ಪದದ ಉದ್ದಸ್ವರ ನೇರ್ಗೋಲ್, ನೇರ್ಪು ಪದಗಳಲ್ಲಿ ಗಿಡ್ಡಸ್ವರವಾಗಿಲ್ಲ; ನುಣ್ ‘ನುಣ್ಣಗೆ’ ಪದದ ಣಕಾರ ನುಣ್ಗದಪು, ನುಣ್ದೊಡೆ, ನುಣ್ಬನಿ, ನುಣ್ಮಾತು ಪದಗಳಲ್ಲಿ ಅದರ ಅನಂತರ ಬಂದ ವ್ಯಂಜನಕ್ಕನುಗುಣವಾಗಿ ಬದಲಾಗಿಲ್ಲ. ಇಂತಹ ಬದಲಾವಣೆಗಳೆಲ್ಲ ನಿಜಕ್ಕೂ ಒಂದು ನುಡಿಯ ಇಲ್ಲವೇ ಒಳ ನುಡಿಯ ‘ಒಲವು’ಗಳಲ್ಲದೆ ‘ನಿಯಮ’ಗಳಲ್ಲ.

Eke →

11.4 ಕ್ರಿಯಾ-ಗುಣಪದಗಳು

ಕ್ರಿಯಾ-ಗುಣಪದಗಳು ಕ್ರಿಯಾಪದಗಳ ಮುಕ್ಯವಾಗಿ ಕ್ರಿಯಾಪದಗಳು ಸೂಚಿಸುವ ಕೆಲಸದ ಜಾಗ (ಮೇಲೆ, ಕೆಳಗೆ, ಒಳಗೆ, ಅಲ್ಲಿ, ಇಲ್ಲಿ,

ಸೂಚಿಸಬಲ್ಲ ರೀತಿಯವುಗಳಾಗಿರುತ್ತವೆ.

ಗುಣವನ್ನು

ಮೂರು

ಹತ್ತಿರ), ಸಮಯ (ನಾಳೆ, ಅಂದು, ಇಂದು, ಆಗ, ಬಳಿಕ, ಒಡನೆ, ಕೂಡಲೆ, ಬೆಳಿಗ್ಗೆ) ಮತ್ತು ಪ್ರಕಾರ (ಇಂತು, ಹಾಗೆ, ಬಱಿದೆ, ಮತ್ತೆ, ಗಡಗಡನೆ, ಬಗ್ಗನೆ, ಕತಕತನೆ, ದಿಡೀ ರನೆ) ಎಂಬುದಾಗಿ ಮೂರು ರೀತಿಯ ಗುಣಗಳನ್ನು ಇವು ಸೂಚಿಸುತ್ತವೆ.

ಈ ಮೂರು ರೀತಿಯ ಗುಣಪದಗಳಾಗಿಯೂ ತೋರುಗ ಪದಗಳ ಬಳಕೆಯಾಗುತ್ತದೆಯೆಂಬುದನ್ನು ಗಮನಿಸಬಹುದು (ಅಲ್ಲಿ, ಅಂದು, ಹಾಗೆ). ಉಳಿದವುಗಳಲ್ಲಿ ಸಮಯಗಳನ್ನು ಸೂಚಿಸುವವುಗಳು ಮುಕ್ಯವಾಗಿ ನಾಮಪದಗಳಿಗೆ ಇಲ್ಲವೇ ನಾಮ- ಗುಣಪದಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದವುಗಳು ಮತ್ತು ಪ್ರಕಾರವನ್ನು ಸೂಚಿಸುವವುಗಳು ಮುಕ್ಯವಾಗಿ ಅಣಕಿಸುವ ಪದಗಳು.

ಮತ್ತು

ನಾಮ-ಗುಣಪದಗಳಿಗೆ ಅಗೆ ಇಲ್ಲವೇ ಅನೆ ಒಟ್ಟನ್ನು ಸೇರಿಸಿ ಕನ್ನಡದಲ್ಲಿ ಕ್ರಿಯಾ-ಗುಣಪದಗಳನ್ನು ತಯಾರಿಸಲಾಗುತ್ತದೆ. ಇವು ಅನ್ ‘ಹೇಳು’ ಮತ್ತು ಆಗು ಕ್ರಿಯಾಪದಗಳಿಂದ ತಯಾರಾದ ಒಟ್ಟುಗಳಿರಬೇಕು.

ಗುಣಪದ ಮೆಲ್
ದುಂಡು

ತೆಳ್ಳಗೆ
ಮೆಲ್ಲಗೆ
ನೆಟ್ಟಗೆ
ಕರ್ರಗೆ
ದುಂಡಗೆ

ಅನೆ ಒಟ್ಟು ತೆಳ್ಳನೆ
ಮೆಲ್ಲನೆ ನೆಟ್ಟನೆ ಕರ್ರನೆ ದುಂಡನೆ

ಜಾಗವನ್ನು ಸೂಚಿಸುವ ಗುಣಪದಗಳೊಂದಿಗೆ ಬರುವ (ಕೆಳಗೆ, ಒಳಗೆ, ಹೊರಗೆ) ಒಟ್ಟು ಇದಕ್ಕಿಂತ ಬೇರಾಗಿರುವ ಕೊನೆ ಒಟ್ಟು (9.6 ನೋಡಿ).

Eke →

11.5 ಅಣಕಿಸುವ ಪದಗಳು

ಅರಿವು, ತೋರಿಕೆ, ಉಲಿ ಮೊದಲಾದುವನ್ನು ಅಣಕಿಸುವಂತಹ ಸರ್ರನೆ, ದೊಪ್ಪನೆ, ತಟಕ್ಕನೆ, ಕಿಲಕಿಲನೆ, ಬಡಬಡನೆ ಮೊದಲಾದ ಹಲವು

ಪದಗಳು ಕ್ರಿಯಾಪದಗಳ ಗುಣಗಳನ್ನು ಸೂಚಿಸುವುದಕ್ಕಾಗಿ ಹೆಚ್ಚಿನ ದ್ರಾವಿಡ ನುಡಿಗಳಲ್ಲೂ ಬಳಕೆಯಾಗುತ್ತಿದ್ದು, ಅವನ್ನು ಮೂಲದ್ರಾವಿಡ ಪದಗಳೆಂದು ತಿಳಿಯಲು ಸಾದ್ಯವಿದೆ.

ಆದರೆ ಇಂತಹ ಅಣಕಿಸುವ ಪದಗಳು ಮೇಲೆ ಸೂಚಿಸಿದ ಹಾಗೆ ಹಲವು ವಿಶಯಗಳಲ್ಲಿ ಇತರ ಪದಗಳಿಂದ ಬೇರಾಗಿರುವ ಕಾರಣ, ಅವು ಒಂದು ರೀತಿಯಲ್ಲಿ ವ್ಯಾಕರಣ ಮತ್ತು ಪದಕೋಶಗಳ ಹೊರಗೆ ನಿಲ್ಲುತ್ತವೆ. ನುಡಿಗಳಲ್ಲಿ ನಡೆಯುವ ಹಲವು ರೀತಿಯ ಬದಲಾವಣೆಗಳು ಅವನ್ನು ಮುಟ್ಟುವುದಿಲ್ಲ. ಉದಾಹರಣೆಗಾಗಿ,

ಪಕಾರ ಹಕಾರವಾಗುವ ಬದಲಾವಣೆ ಪಕ್ಕನೆ, ಪಟಪಟನೆ, ಪಚಕ್ಕನೆ, ಪರ್ರನೆ, ಪಳಪಳನೆ ಮೊದಲಾದ ಅಣಕಿಸುವ ಪದಗಳನ್ನು ತಟ್ಟಿಲ್ಲ ಮತ್ತು (2) ಕಿಲಕಿಲನೆ ಇಕಾರ ಎಕಾರವಾಗುವ ಬದಲಾವಣೆ ಮೊದಲಾದುವನ್ನು ತಟ್ಟಿಲ್ಲ.

ನಡೆದಿರುವ

ಕನ್ನಡದಲ್ಲಿ

ಗಿರಗಿರನೆ,

(3) ಮೂಲದ್ರಾವಿಡ ಪದಗಳಲ್ಲಿದ್ದ ಇಮ್ಮಡಿ ಱಕಾರ ಕನ್ನಡದಲ್ಲಿ ತಕಾರವಾಗಿ ಬದಲಾಗಿದೆ (4.4 ನೋಡಿ). ಆದರೆ ಅಣಕಿಸುವ ಪದಗಳಲ್ಲಿ ಅದು ಬದಲಾಗದೆ ಉಳಿದಿದೆ (ಗಿಱ್ಱನೆ, ಬಱ್ಱನೆ, ತಿಱ್ಱನೆ, ಡಱ್ಱನೆ, ಸುಱ್ಱನೆ).

ದ್ರಾವಿಡ

ಪದಗಳಿಗಿಂತ

ನುಡಿಗಳ ಇತರ

ಬೇರೆ ಹಲವು ವಿಶಯಗಳಲ್ಲೂ ಈ ಪದಗಳು ಮೂಲದ್ರಾವಿಡದ ಇಲ್ಲವೇ ಬೇರಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, (4) ಇವು ಇತರ ಪದಗಳ ಹಾಗೆ ಸ್ವರದಲ್ಲಿ ಮೊದಲಾಗುವುದಿಲ್ಲ. ಅವುಗಳ ಮೊದಲಿಗೆ ಯಾವಾಗಲೂ ಒಂದು ವ್ಯಂಜನ ಬಂದಿರುತ್ತದೆ (ಅಯ್ಕನೆ ಮತ್ತು ಒಯ್ಕನೆ ಎಂಬ ಎರಡು ಸ್ವರದಲ್ಲಿ ಮೊದಲಾಗುವ ಅಣಕಿಸುವ ಪದಗಳು ಇದಕ್ಕೆ ಅಪವಾದಗಳಾಗಿ ಕಾಣಿಸುತ್ತವೆ).

(5) ಇಂತಹ ಗುಣಪದಗಳು ಜೋಡಿಯಾಗಿ ಬರುವುದಿದ್ದರೆ (ಗಡ ಗಡ, ಗಮಗಮ, ಗುಸುಗುಸು) ಅವುಗಳಲ್ಲಿ ಒತ್ತಕ್ಶರಗಳು ಇಲ್ಲವೇ

ಉದ್ದ ಸ್ವರ ಇರುವುದಿಲ್ಲ ಮತ್ತು ಒತ್ತೆಯಾಗಿ ಬರುವುದಿದ್ದರೆ ಒತ್ತಕ್ಶರ, ಉದ್ದಸ್ವರ (ಇಲ್ಲವೇ ಮಹಾಪ್ರಾಣಕ್ಶರ) ಇಲ್ಲದಿರುವುದಿಲ್ಲ (ಬರ್ರನೆ, ಬಗ್ಗನೆ, ದೊಪ್ಪನೆ, ಸರಕ್ಕನೆ, ಪಟಾರನೆ, ಧಿಗಿಲನೆ, ಘೞಿಲನೆ) ಎಂಬಂತಹ ನಿಯಮವನ್ನೂ ಕನ್ನಡದ ಮಟ್ಟಿಗೆ ಮಾಡಲು ಸಾದ್ಯವಿದೆ.

(6) ಇತರ ಪದಗಳಲ್ಲಿಲ್ಲದಿರುವ ಮಹಾಪ್ರಾಣಾಕ್ಶರಗಳು ಇಂತಹ ಪದಗಳಲ್ಲಿ ಕಾಣಿಸಿಕೊಳ್ಳುತ್ತವೆ (ಖಳಿಲನೆ, ಭುಗಿಲ್ಲನೆ, ದುಢುಮ್ಮನೆ, ಭೋಂಕನೆ, ಛಟಛಟ).

(7) ಇಂತಹ ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಕೊರಳಿಸಿದ ದಡಬಡ) ತಡೆಯುಲಿಗಳೂ ಬರಬಲ್ಲುವಾಗಿದ್ದುವು ಎಂಬುದಾಗಿ ಎಮೆನೋ ಮತ್ತು ಹಾರ್್ಟ (1993) ವಾದಿಸಿದ್ದಾರೆ. ಇತರ ಪದಗಳಲ್ಲಿ ಈ ರೀತಿ ಪದಗಳ ಮೊದಲಿಗೆ ಕೊರಳಿಸಿದ ತಡೆಯುಲಿಗಳು ಮೂಲದ್ರಾವಿಡದಲ್ಲಿ ಬರುತ್ತಿರಲಿಲ್ಲ ಎಂಬುದನ್ನು ನಾವು ಮೇಲೆ ನಾಲ್ಕನೇ ಅದ್ಯಾಯದಲ್ಲಿ (4.1.2) ನೋಡಿರುವೆವು.

(ದಬಕ್ಕನೆ,

ಇಂತಹ ಬೇರೆ ಬೇರೆ ಕಾರಣಗಳಿಗಾಗಿ, ಇವು ಮೂಲದ್ರಾವಿಡದಲ್ಲಿ (ಮತ್ತು ಇವತ್ತಿನ ದ್ರಾವಿಡ ನುಡಿಗಳಲ್ಲಿ) ಇತರ ಪದಗಳಿಂದ ಬೇರಾಗಿ ನಿಲ್ಲುವ ಮತ್ತು ನುಡಿಯ ವ್ಯವಸ್ತೆಯಿಂದ ಹೊರಗಿರುವ ಪದಗಳೆಂದು ಪರಿಗಣಿಸಬೇಕಾಗುತ್ತದೆ.

ಪದಗಳನ್ನು ಕನ್ನಡದ

ಅಣಕಿಸುವ ಮತ್ತು

ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳಬಹುದು ಎಂತಹದಾದರೂ ಬದಲಾವಣೆಗಳಿಗೆ ಒಳಗಾಗಿವೆಯೇ ಎಂಬುದನ್ನು ತಿಳಿಯಲು ಈ ಪದಗಳ ಕುರಿತಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ಚರಿತ್ರೆಯಲ್ಲಿ

Eke →

11.6 ಗುಣಪದಗಳ ನಾಮರೂಪಗಳು

ಗುಣಪದಗಳನ್ನು ನಾಮಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವನ್ನು ನಾಮರೂಪಕ್ಕೆ ಬದಲಾಯಿಸಬೇಕಾಗುತ್ತದೆ. ಹಳೆಗನ್ನಡದಲ್ಲಿ ಇದಕ್ಕಾಗಿ

ಅವುಗಳೊಂದಿಗೆ ಲಿಂಗ-ವಚನಗಳನ್ನು ಸೂಚಿಸುವ ಒಟ್ಟುಗಳನ್ನು (ಅಮ್, ಅಳ್, ಅರ್, ತು, ಉವು ಎಂಬವುಗಳನ್ನು) ಸೇರಿಸಬೇಕಾಗುತ್ತದೆ.

ಗುಣಪದಗಳಿಗಿರುವ ಇಂತಹ ನಾಮರೂಪಗಳ ಸ್ವರೂಪವನ್ನವಲಂಬಿಸಿ

ಹಳೆಗನ್ನಡದ ಗುಣಪದಗಳನ್ನು ಎರಡು ಗುಂಪುಗಳಲ್ಲಿ ಹಂಚಬಹುದು.

(ಕ) ಮೊದಲನೆಯ ಉಲಿಕಂತೆ ಮುಚ್ಚಿರುವ (ವ್ಯಂಜನದಲ್ಲಿ ಕೊನೆ ಗೊಳ್ಳುವ - ಒಳ್ಳಿತು, ಒಳ್ಳಿತ್ತು; ತೆಳ್ಳಿತು, ತೆಳ್ಳಿತ್ತು) ಮತ್ತು ಮೊದಲನೆಯ ಉಲಿಕಂತೆ ತೆರೆದಿದ್ದು (ಸ್ವರದಲ್ಲಿ ಕೊನೆಗೊಳ್ಳುತ್ತಿದ್ದು), ಉದ್ದ ಸ್ವರವಿರುವ ಪದಗಳದು (ನೇರಿತು, ನೇರಿತ್ತು; ಕೂರಿತು, ಕೂರಿತ್ತು) ಒಂದು ಗುಂಪು.

(ಚ) ಮೊದಲನೆಯ ಉಲಿಕಂತೆ ತೆರೆದಿದ್ದು, ಗಿಡ್ಡ ಸ್ವರವಿರುವ

ಪದಗಳದು (ಅಸಿದು, ಇನಿದು) ಇನ್ನೊಂದು ಗುಂಪು.

ಮೂರು ಉಲಿಕಂತೆಗಳಿರುವ ಅಗಲ ಗುಣಪದ ಮೊದಲನೆಯ (ಕ)

ಗುಂಪಿನಲ್ಲೇ ಬರುತ್ತದೆ (ಅಗಲಿತು, ಅಗಲಿತ್ತು).

ಈ ಎರಡು ಗುಂಪುಗಳಲ್ಲಿ ಬರುವ ಗುಣಪದಗಳ ನಾಮರೂಪಗಳು ಬೇರೆ ಬೇರೆ ರೀತಿಯವಾಗಿರುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ರೂಪಾವಳಿಗಳನ್ನು ಗಮನಿಸಬಹುದು.

ಗಂಡಸು
ಹೆಂಗಸು

ಒರ್ವಚನ
ಒಳ್ಳಿದಳ್ ಒಳ್ಳಿತ್ತು, ಒಳ್ಳಿತು

ಗಂಡಸು
ಹೆಂಗಸು

ಪಿರಿಯಳ್

ಹಲವಚನ ಒಳ್ಳಿದರ್ ಒಳ್ಳಿದುವು

ಪಿರಿಯರ್ ಪಿರಿದುವು

ಲಿಂಗ-ವಚನದ ಒಟ್ಟನ್ನು ಸೇರಿಸುವ ಮೊದಲು (ಕ) ಗುಂಪಿನಲ್ಲಿ ಬಂದಿರುವ ಗುಣಪದಗಳಿಗೆ ದ್ ಎಂಬುದನ್ನು ಸೇರಿಸಬೇಕಾಗುತ್ತದೆ; ಮತ್ತು (ಚ) ಗುಂಪಿನಲ್ಲಿ ಬಂದಿರುವ ಗುಣಪದಗಳಿಗೆ ಯ್ ಎಂಬುದನ್ನು ಸೇರಿಸ ಬೇಕಾಗುತ್ತದೆ; ಗಂಡಸು ಮತ್ತು ಹೆಂಗಸರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ‘ಇತರ’ ರೂಪಗಳಲ್ಲಿ ಮಾತ್ರ ಇದು ಅವಶ್ಯವಿಲ್ಲ.

ಆದರೆ, ಈ ‘ಇತರ’ ರೂಪಗಳಲ್ಲಿ ಬರುವ ಒರ್ವಚನದ ಒಟ್ಟಿಗೆ (ಕ) ಗುಂಪಿನ ಗುಣಪದಗಳ ಅನಂತರ ತು ಇಲ್ಲವೇ ತ್ತು ಎಂಬ ರೂಪವಿದೆ ಮತ್ತು (ಚ) ಗುಂಪಿನ ಗುಣಪದಗಳ ಅನಂತರ ದು ಎಂಬ ರೂಪವಿದೆ. ಇದಲ್ಲದೆ, ಈ ಎರಡು ಗುಂಪುಗಳಲ್ಲೂ ಹಲವಚನದ ವು ಒಟ್ಟು ಒರ್ವಚನದ ದು ಒಟ್ಟಿನ ಅನಂತರ ಬರುತ್ತದೆ.

ಮೊದಲಿಗೆ ತೂಕದ ಉಲಿಕಂತೆಯಿರುವ ಗುಣಪದಗಳು (ಕ) ಗುಂಪಿ ನಲ್ಲಿ ಬರುತ್ತವೆ ಮತ್ತು ಹಗುರದ ಉಲಿಕಂತೆಯಿರುವ ಗುಣಪದಗಳು (ಚ) ಗುಂಪಿನಲ್ಲಿ ಬರುತ್ತವೆ ಎಂಬುದಾಗಿಯೂ ಇಲ್ಲಿ ನಿಯಮವನ್ನು ರಚಿಸಬಹುದು.

ಹೊಸಗನ್ನಡದಲ್ಲಿ ಗುಣಪದಗಳ ನಾಮರೂಪಗಳನ್ನು ರಚಿಸುವುದಕ್ಕಾಗಿ ಅವನು, ಅವಳು, ಅವರು, ಅದು, ಅವು ಎಂಬ ತೋರುಗ ಪದಗಳನ್ನು ಸೇರಿಸಲಾಗುತ್ತದೆ.

ಗಂಡಸು
ಹೆಂಗಸು

ಒರ್ವಚನ
ದೊಡ್ಡವನು ದೊಡ್ಡವಳು ದೊಡ್ಡದು

ಹಲವಚನ ದೊಡ್ಡವರು ದೊಡ್ಡವು

ಇದು ಎಲ್ಲಾ ಗುಣಪದಗಳಿಗೂ ಸಮಾನವಾಗಿದ್ದು ಹಳೆಗನ್ನಡದಲ್ಲಿ

ಕಾಣಿಸುವ ಮೇಲಿನ ವ್ಯತ್ಯಾಸ ಹೊಸಗನ್ನಡದಲ್ಲಿ ಉಳಿದಿಲ್ಲ. ದೊಡ್ಡದು-ಉದ್ದದ್ದು;

ಹಳೆದು- ತೋರದ್ದು; ಬಿಳಿದು, ಕರಿದು; ಅಗಲದ್ದು; ಹೊಸತು, ಹಳತು, ಎಳತು

ಹೊಸಗನ್ನಡದ

ಗುಣಪದಗಳಲ್ಲಿ ಈ

ಮೊದಲಾದ ಕೆಲವು ಒಟ್ಟುಗಳು ತೋರಿಸುತ್ತವೆ. ಈ ರೂಪವ್ಯತ್ಯಾಸಗಳನ್ನು ಹಳೆಗನ್ನಡದಲ್ಲಿದ್ದಂತಹ ವ್ಯತ್ಯಾಸಗಳು ಮೇಲೆ ವಿವರಿಸಿದ ನಿಯಮದ ಪಳೆಯಳಿಕೆಯಿರಬಹುದೆಂದು ತೋರುತ್ತದೆ.

Eke →

11.7 ತಿರುಳು

ಮೂಲದ್ರಾವಿಡದಲ್ಲಿ ನಾಮಪದಗಳ ಗುಣಗಳನ್ನು ಸೂಚಿಸುವವು ಮತ್ತು ಕ್ರಿಯಾಪದಗಳ ಗುಣಗಳನ್ನು ಸೂಚಿಸುವವು ಎಂಬುದಾಗಿ ಎರಡು ರೀತಿಯ ಗುಣಪದಗಳಿದ್ದಿರಬೇಕು. ಕನ್ನಡದಲ್ಲೂ ಇಂತಹ ಎರಡು ರೀತಿಯ ಗುಣಪದಗಳು ಬಳಕೆಯಲ್ಲಿವೆ.

ಬೇರಿನ

ನಾಮ-ಗುಣಪದಗಳು

ರೂಪದಲ್ಲೂ ಇವುಗಳಲ್ಲಿ ಬಳಕೆಯಾಗಬಲ್ಲುವು. ನಾಮ- ಗುಣಪದಗಳಿಂದ ಇಲ್ಲವೇ ನಾಮಪದಗಳಿಂದ (ಮತ್ತು ಕ್ರಿಯಾಪದಗಳಿಂದ) ತಯಾರಾಗುತ್ತವೆ; ಅವು ಬೇರಿನ ರೂಪದಲ್ಲಿ ಬರುವುದಿಲ್ಲ. ಕೆಲವು ತೋರುಗ ಪದಗಳೂ ಕ್ರಿಯಾ-ಗುಣಪದಗಳಾಗಿ ಬರಬಲ್ಲುವು.

ಕ್ರಿಯಾ-ಗುಣಪದಗಳು

ಇದಲ್ಲದೆ, ಪದಕೋಶದ ಹೊರಗೆ ನಿಲ್ಲುವ ಹಲವು ರೀತಿಯ ಅಣಕಿಸುವ ಪದಗಳೂ ನಾಮ- ಇಲ್ಲವೇ ಕ್ರಿಯಾ-ಗುಣಪದಗಳಾಗಿ ಬಳಕೆಯಾಗಬಲ್ಲುವು. ಪದಗಳ

ಕುರಿತಾಗಿ ಇನ್ನಶ್ಟು

ಸಂಶೋದನೆ

ನಡೆಸುವ

ಅವಶ್ಯಕತೆಯಿದೆ.

12. ವಾಕ್ಯಗಳ ಒಳರಚನೆ

Eke →

12.1 ಮುನ್ನೋಟ

ಮೂಲದ್ರಾವಿಡದ ವಾಕ್ಯರಚನೆಯ ವಿಶಯವಾಗಿ ಹೆಚ್ಚಿನ ಸಂಶೋದನೆಗ ಳಿನ್ನೂ ನಡೆಯಬೇಕಾಗಿದೆ. ಅದಕ್ಕೆ ಮೊದಲು, ಇವತ್ತಿನ ದ್ರಾವಿಡ ನುಡಿಗಳಲ್ಲಿ ಮತ್ತು ಒಳನುಡಿಗಳಲ್ಲಿ ಎಂತಹ ವಾಕ್ಯರಚನೆಯಿದೆ ಮತ್ತು ಈ ವಿಶಯದಲ್ಲಿ ಅವುಗಳ ನಡುವೆ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಅದರಲ್ಲಿ ಕೆಲಸಗಳನ್ನು ತಿಳಿಸುವ ವಾಕ್ಯಗಳು ಮತ್ತು ಸಂಗತಿಗಳನ್ನು ತಿಳಿಸುವ ವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ (1ಕ) ವಾಕ್ಯ ಒಂದು ಕೆಲಸ (ಮರಕ್ಕೆ ಹತ್ತುವುದು) ನಡೆದಿರುವುದನ್ನು ತಿಳಿಸುತ್ತದೆ ಮತ್ತು (1ಚ) ವಾಕ್ಯ ಒಂದು ಸಂಗತಿಯ ಇರುವಿಕೆಯನ್ನು (ಶಾಲೆಗೆ ರಜೆ ಇರುವುದನ್ನು) ತಿಳಿಸುತ್ತದೆ.

(1ಕ) ಹುಡುಗ ಮರಕ್ಕೆ ಹತ್ತಿದ. (1ಚ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇದೆ.

ಕೆಲಸಗಳನ್ನು ಇಲ್ಲವೇ ಸಂಗತಿಗಳನ್ನು ತಿಳಿಸುವುದಕ್ಕಾಗಿ ಮಾತ್ರವಲ್ಲದೆ, ಅವನ್ನು ಅಲ್ಲಗಳೆಯುವುದು, ಅವುಗಳ ಕುರಿತಾಗಿ ಆಶ್ಚರ್ಯ ಸೂಚಿಸುವುದು, ಸಂಶಯ ಸೂಚಿಸುವುದು, ಪ್ರಶ್ನಿಸುವುದು, ಇನ್ನೊಬ್ಬರಿಂದ ಅವನ್ನು ಮಾಡಿ

ಸುವುದು, ಮೊದಲಾದ ಬೇರೆ ಹಲವಾರು ರೀತಿಯ ಮಾತಿನ ಕೆಲಸಗಳಲ್ಲೂ ಇಂತಹ ವಾಕ್ಯಗಳನ್ನು ಬಳಸಲು ಸಾದ್ಯವಿದ್ದು, ಅದಕ್ಕಾಗಿ ಈ ವಾಕ್ಯಗಳ ಕೊನೆಯಲ್ಲಿ ಬೇರೆ ಬೇರೆ ರೀತಿಯ ಕ್ರಿಯಾರೂಪಗಳನ್ನು ಬಳಸಬೇಕಾಗು ತ್ತದೆ (ಹೆಚ್ಚಿನ ವಿವರಗಳಿಗೆ ಬಟ್ 2006 ನೋಡಿ).

(2ಕ) ಹುಡುಗ ಮರಕ್ಕೆ ಹತ್ತಲಿಲ್ಲ. (2ಚ) ಹುಡುಗ ಮರಕ್ಕೆ ಹತ್ತಿದನೋ? (2ಟ) ಹುಡುಗ ಮರಕ್ಕೆ ಹತ್ತಲಿ. (2ತ) ಹುಡುಗ ಮರಕ್ಕೆ ಹತ್ತಬಾರದು. (2ಪ) ಹುಡುಗ ಮರಕ್ಕೆ ಹತ್ತಬಹುದು.

(3ಕ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇಲ್ಲ. (3ಚ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇದೆಯೋ? (3ಟ) ಮಕ್ಕಳಿಗೆ ಇವತ್ತು ಶಾಲೆಗೆ ರಜೆಯಿರಬಹುದು. (3ತ) ಮಕ್ಕಳಿಗೆ ಇವತ್ತು ಶಾಲೆಗೆ ರಜೆಯಿರಲಾರದು.

ಕೆಲಸಗಳನ್ನು

ಸೂಚಿಸುವುದಕ್ಕಾಗಿ

ಕನ್ನಡದಲ್ಲಿ ಕ್ರಿಯಾರೂಪಗಳ ಬಳಕೆಯಾಗುತ್ತದೆ ಮತ್ತು ಕೆಲಸಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಇಲ್ಲವೇ ನಾಮರೂಪಗಳ ಬಳಕೆಯಾಗುತ್ತದೆ.

ಗುರುತಿಸುವುದಕ್ಕಾಗಿ

ವಿಶಯಗಳನ್ನು

ಉದಾಹರಣೆಗಾಗಿ, ಮೇಲೆ (2ಕ) ವಾಕ್ಯದಲ್ಲಿ ಕೆಲಸವನ್ನು ಹತ್ತು ಕ್ರಿಯಾಪದದ ಹತ್ತಲಿಲ್ಲ ಕ್ರಿಯಾರೂಪ ತಿಳಿಸುತ್ತದೆ, ಮತ್ತು ಆ ಕೆಲಸದಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಹುಡುಗ ಮತ್ತು ಮರ ಎಂಬ ನಾಮಪದಗಳ ನಾಮರೂಪಗಳು ತಿಳಿಸುತ್ತವೆ.

ಕೆಲಸಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿದಾನಗಳ ಮೂಲಕ ಗುರುತಿಸಲು ಕೆಲಸವನ್ನು ನಾಮಪದಗಳ ಮೂಲಕ ನಡೆಸಲಾಗುತ್ತದೆ ಮತ್ತು ವರ್ಣಿಸುವ ಕೆಲಸವನ್ನು

ಸಾದ್ಯವಿದೆ. ಇವುಗಳಲ್ಲಿ

ಹೆಸರಿಸುವ

ನಾಮಪದಗಳೊಂದಿಗೆ ಗುಣಪದಗಳನ್ನು ಸೇರಿಸಿ ರಚಿಸಿದ ಪದಕಂತೆಗಳ ಮೂಲಕ ಮಾಡಲಾಗುತ್ತದೆ.

(4) ಚಿಕ್ಕ ಹುಡುಗ ದೊಡ್ಡ ಮರಕ್ಕೆ ಹತ್ತಿದ.

(4)ನೇ ವಾಕ್ಯದಲ್ಲಿ ಚಿಕ್ಕ ಹುಡುಗ ಮತ್ತು ದೊಡ್ಡ ಮರ ಎಂಬ ಎರಡು ಪದಕಂತೆಗಳ ಮೂಲಕ ಹತ್ತುವ ಕೆಲಸದಲ್ಲಿ ತೊಡಗಿದ ವ್ಯಕ್ತಿ ಪದಕಂತೆಗಳನ್ನು ಮತ್ತು ರಚಿಸುವುದಕ್ಕಾಗಿ ಹುಡುಗ ಮತ್ತು ಮರ ಪದಗಳೊಂದಿಗೆ ಚಿಕ್ಕ ಮತ್ತು ದೊಡ್ಡ ಗುಣಪದಗಳನ್ನು ಸೇರಿಸಲಾಗಿದೆ.

ಗುರುತಿಸಲಾಗಿದೆ. ಈ

ವಸ್ತುಗಳನ್ನು

ಕನ್ನಡದ ಈ ವಾಕ್ಯರಚನೆಯ ವಿದಾನವೇ ಮೂಲದ್ರಾವಿಡದಲ್ಲೂ

ಇದ್ದಿರಬೇಕೆಂಬುದಾಗಿ ಸದ್ಯಕ್ಕೆ ಕಲ್ಪಿಸಿಕೊಳ್ಳಬಹುದು.

Eke →

12.2 ಜೋಡಿಸುವ ಕ್ರಿಯಾರೂಪಗಳು

ಎರಡು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೂಲದ್ರಾವಿಡದಲ್ಲೇನೇ ಕೆಲವು ಜೋಡಿಸುವ ಕ್ರಿಯಾರೂಪಗಳು ಬಳಕೆಯಲ್ಲಿದ್ದಿರಬೇಕು. ಈ ಕ್ರಿಯಾರೂಪಗಳಲ್ಲಿ ಕ್ರಿಯಾಪದದೊಂದಿಗೆ ಸಮಯದ ಒಟ್ಟು ಇಲ್ಲವೇ ಅಲ್ಲಗಳೆಯುವ ಒಟ್ಟು ಮಾತ್ರವೇ ಬರುತ್ತಿದ್ದಿರಬೇಕು.

ಬೇರೆ

ಬೇರೆ ತಿಳಿಸುವ

ಜೋಡಿಸಿ ಹೇಳುವುದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಈ ರೀತಿ ಜೋಡಿಸುವ ರೂಪಕ್ಕೆ ಬದಲಾಯಿಸಲಾಗುತ್ತದೆ.

ವಾಕ್ಯಗಳನ್ನು

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸ

ಬಹುದು.

(5ಕ) ರಾಜು ಮನೆಗೆ ಹೋದ. (5ಚ) ರಾಜು ಊಟ ಮಾಡಿದ. (5ಟ) ರಾಜು ಮನೆಗೆ ಹೋಗಿ ಊಟ ಮಾಡಿದ.

ನಡುವೆ

ಕೆಲಸಗಳ

(5ಕ) ಮತ್ತು (5ಚ) ವಾಕ್ಯಗಳನ್ನು ಜೋಡಿಸುವ ಮೂಲಕ (5ಟ) ವಾಕ್ಯವನ್ನು ರಚಿಸಲಾಗಿದೆ ಮತ್ತು ಇದಕ್ಕಾಗಿ (5ಕ) ವಾಕ್ಯದ ಕ್ರಿಯಾಪದ ವನ್ನು ಅದರ ಹೋಗಿ ಎಂಬ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಸಮಯ ಸಂಬಂದಗಳಿರಲು ಸಾದ್ಯವಿದೆ: (1) ಮೊದಲನೆಯದು ಎರಡನೆಯದರ ಮೊದಲು ನಡೆದಿರಬಹುದು, (2) ಅನಂತರ ನಡೆದಿರಬಹುದು, ಇಲ್ಲವೇ (3) ಅವೆರಡೂ ಒಂದೇ ಸಮಯದಲ್ಲಿ ನಡೆದಿರಬಹುದು. ಇದಲ್ಲದೆ, ಅವುಗಳ ನಡುವೆ ಅಲ್ಲಗಳೆಯುವ (ಎಂದರೆ ಮೊದಲನೆಯದು ನಡೆಯದೆ ಎರಡನೆಯದು ನಡೆಯುವಂತಹ) ನಾಲ್ಕನೆಯ ಸಂಬಂದವನ್ನೂ ಕಾಣಲು ಸಾದ್ಯವಿದೆ.

ಮೂರು ರೀತಿಯ

ಹಾಗಾಗಿ, ವಾಕ್ಯಗಳನ್ನು ಜೋಡಿಸಿ ಹೇಳುವುದಕ್ಕಾಗಿ ನಾಲ್ಕು ರೀತಿಯ ಜೋಡಿಸುವ ಕನ್ನಡದಲ್ಲಿ ಬಳಕೆಯಲ್ಲಿರುವ ಇಂತಹ ನಾಲ್ಕು ಜೋಡಿಸುವ ಕ್ರಿಯಾರೂಪಗಳನ್ನು ಕೆಳಗಿನ ಜೋಡಿಸಿದ ವಾಕ್ಯಗಳಲ್ಲಿ ಕಾಣಬಹುದು.

ಅವಶ್ಯಕತೆಯಿದೆ.

ಕ್ರಿಯಾರೂಪಗಳ

(6ಕ) ಓದಿ ಹೋದ.
(6ಚ) ಓದಲು ಹೋದ. (6ಟ) ಓದುತ್ತಾ ಹೋದ. (6ತ) ಓದದೆ ಹೋದ.

ಈ ಕ್ರಿಯಾರೂಪಗಳಲ್ಲಿ ಮೊದಲಿನ ಕೆಲಸವನ್ನು ಸೂಚಿಸುವ ಸೊನ್ನೆ ರೂಪದಲ್ಲಿರುವ ಒಟ್ಟು (6ಕ)ದಲ್ಲಿಯೂ, ಅನಂತರದ ಕೆಲಸವನ್ನು ಸೂಚಿಸುವ ಅಲು ಒಟ್ಟು (6ಚ)ದಲ್ಲಿಯೂ, ಒಂದೇ ಸಮಯದ ಕೆಲಸಗಳನ್ನು ಸೂಚಿಸುವ ಉತ್ತಾ ಒಟ್ಟು (6ಟ)ದಲ್ಲಿಯೂ, ಅಲ್ಲಗಳೆದ ಕೆಲಸವನ್ನು ಸೂಚಿಸುವ (ಅ)ದೆ ಒಟ್ಟು(6ತ)ದಲ್ಲಿಯೂ ಬಂದಿರುವುದನ್ನು ಕಾಣಬಹುದು. ಹಳೆಗನ್ನಡದಲ್ಲಿ ಇವು ಸೊನ್ನೆ, ಅಲ್, ಉತ್ತೆ (ಉತ್ತುಂ) ಮತ್ತು (ಅ)ದೆ ರೂಪದಲ್ಲಿದ್ದುವು.

ಇವುಗಳಲ್ಲಿ ಅಲ್ಲಗಳೆದ ಕೆಲಸವನ್ನು ಸೂಚಿಸುವ ಜೋಡಿಸುವ ರೂಪ ದಲ್ಲಿ ಅಲ್ಲಗಳೆಯುವ ಆ ಒಟ್ಟಿನೊಂದಿಗೆ ಜೋಡಿಸುವ ದೆ ಒಟ್ಟು ಬಂದಿದೆ ಯೆಂದು ಹೇಳಬಹುದು. ಹಳೆಯ ಶಾಸನಗಳಲ್ಲಿ ಬರುವ ತಪ್ಪಾದೆ, ವೆಳೆ ಯಾದೆ ಪದಗಳಲ್ಲಿ ಈ ಅಲ್ಲಗಳೆಯುವ ಒಟ್ಟು ಆ ರೂಪದಲ್ಲೇ ಇದೆ (ನರಸಿಂಹಯ್ಯ 1941: 208).

ಕೆಲಸವನ್ನು ಕನ್ನಡದಲ್ಲಿ ಇವತ್ತಿಗೂ ಅಲ್ಲಗಳೆದ ಸೂಚಿಸುವುದಕ್ಕಾಗಿ ಆದೆ ಒಟ್ಟನ್ನೇ ಬಳಸಲಾಗುತ್ತದೆ (ಗೋರಾದೆ ‘ಬಾಚದೆ’, ಬೂವಾದೆ ‘ಬೀಳದೆ’, ಸಾವಾದೆ ‘ಸಾಯದೆ’).

ಮೊದಲಿನ

ಕೆಲಸವನ್ನು

ಸೊನ್ನೆ ಒಟ್ಟಿನೊಂದಿಗೂ ಸೂಚಿಸುವ ಜೋಡಿಸುವ ಇ ಒಟ್ಟು ಬಂದಿದೆಯುಂದು ಹೇಳಬಹುದು. ಇಂತಹ ಕೆಲವು ಜೋಡಿಸುವ ರೂಪಗಳಲ್ಲಿ ಕ್ರಿಯಾಪದೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ದ್ ಒಟ್ಟು ಬಂದಿದ್ದು (ಕರೆದು, ತಿಂದು, ಉಂಡು), ಅದರ ಅನಂತರ ಜೋಡಿಸುವ ಒಟ್ಟು ಉ ರೂಪದಲ್ಲಿ ಬರುತ್ತದೆ.

ಆದರೆ, ಹಳೆಗನ್ನಡದಲ್ಲೇನೇ ಇಂತಹ ಜೋಡಿಸುವ ರೂಪಗಳಲ್ಲೂ ಜೋಡಿಸುವ ಒಟ್ಟು ಇ ರೂಪದಲ್ಲಿ ಬಂದಿರುವುದನ್ನು ತೆರಳ್ದಿ ‘ತೆರಳಿ’, ನಾನ್ದಿ ಕಾಣಬಹುದು. ಮೊದಲಾದ ಒಳನಾಡಿನ ಕೆಲವು ಒಳನುಡಿಗಳಲ್ಲೂ ಇದು ಇ ರೂಪದಲ್ಲಿದೆ.

‘ಒದ್ದೆಮಾಡಿ’

ರೂಪಗಳಲ್ಲಿ

ಅಲ್ಲಗಳೆಯುವ ಆ ಒಟ್ಟಿನ ಅನಂತರ ಬರುವ ತ್ (ದ್) ವ್ಯಂಜನ ಮೂಲದ್ರಾವಿಡದ ಹಿಂದಿನ ಸಮಯದ ಒಟ್ಟಿನ ಪಳೆಯಳಿಕೆಯಿರಬೇಕೆಂದು ಸುಬ್ರಹ್ಮಣ್ಯಂ (1971:390) ವಾದಿಸಿದ್ದಾರೆ.

ಹವ್ಯಕ ಕನ್ನಡದಲ್ಲಿ ಈ ವ್ಯಂಜನ ಇಮ್ಮಡಿ ರೂಪದಲ್ಲಿದೆ (ಹೋಗದ್ದೆ

‘ಹೋಗದೆ’, ತಿನ್ನದ್ದೆ ‘ತಿನ್ನದೆ’, ಹೋಗದ್ದ ‘ಹೋಗದ’).

ಹಳೆಗನ್ನಡದ ಜೋಡಿಸುವ ಕ್ರಿಯಾರೂಪಗಳಲ್ಲಿ ಅಲ್ ಎಂಬ ಒಂದೇ ರೂಪದಲ್ಲಿರುವ ಎರಡು ಬೇರೆ ಬೇರೆ ಒಟ್ಟುಗಳ ಬಳಕೆಯಾಗುತ್ತಿತ್ತು. ಅವುಗಳಲ್ಲಿ ಒಂದು ಅನಂತರದ ಕೆಲಸವನ್ನು ಸೂಚಿಸುತ್ತಿತ್ತು ಮತ್ತು

ಮೊದಲಿನ

ಇನ್ನೊಂದು ಬಳಕೆಯಲ್ಲಿ ಎರಡು ಕಾಣಿಸಿಕೊಳ್ಳುತ್ತವೆ.

ಕೆಲಸವನ್ನು

ಸೂಚಿಸುತ್ತಿತ್ತು. ಇವೆರಡರ ಬೇರೆ ರೀತಿಯ ನಿಬ್ರಂದಗಳು

ಬೇರೆ

ಕೆಲಸವನ್ನು

(1) ಅನಂತರದ

ಸೂಚಿಸುವ ಅಲ್ ಒಟ್ಟನ್ನು ಬಳಸಿದೆಯಾದಲ್ಲಿ, ಅಂತಹ ವಾಕ್ಯಗಳು ಬೇರೆ ಬೇರೆ ವ್ಯಕ್ತಿಗಳು ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಜೋಡಿಸಲಾರವು. ಮೊದಲಿನ ಕೆಲಸವನ್ನು ಸೂಚಿಸುವ ಸೊನ್ನೆ ಒಟ್ಟಿನ ಬಳಕೆಯಲ್ಲೂ ಇಂತಹದೇ ನಿಬ್ರಂದವಿದೆ.

(7ಕ) ಕೀಚಕಂ ತಮ್ಮಕ್ಕನಂ ಕಾಣಲ್ ಪೋದಂ

‘ಕೀಚಕನು ತನ್ನ ಅಕ್ಕನನ್ನು ಕಾಣಲು ಹೋದನು’

(7ಚ) ನೀ ಎನ್ನ ಕಾಳೆಗಮಂ ಪೆಱಗಿರ್ದು ನೋಡಿಂ

‘ನೀವು ನನ್ನ ಕಾಳಗವನ್ನು ಹೊರಗೆ ಇದ್ದು ನೋಡಿ’

ಮೇಲಿನ ಎರಡು ವಾಕ್ಯಗಳಲ್ಲೂ ಒಬ್ಬನೇ ವ್ಯಕ್ತಿ ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಜೋಡಿಸಲಾಗಿದೆ. ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಇವುಗಳ ಮೂಲಕ ಜೋಡಿಸಲು ಸಾದ್ಯವಾಗದು.

ಆದರೆ, ಮೊದಲಿನ ಕೆಲಸವನ್ನು ಸೂಚಿಸುವ ಅಲ್ ಒಟ್ಟನ್ನು ಬಳಸುವು

ದಿದ್ದಲ್ಲಿ ಈ ನಿರ್ಬಂದವಿಲ್ಲ.

(7ಟ) ಎಂದು ನುಡಿದು ಕೞಿಪಲ್ ಆ ದ್ರವ್ಪದಿ ಅಂತೆ ಗೆಯ್ವುನೆಂದು

ಪೋಗಿ…. ‘(ಕೀಚಕನು) ಹಾಗೆ ಹೇಳಿ ಕಳಿಸಿದಾಗ ದ್ರವ್ಪದಿ ಹಾಗೆಯೇ
ಮಾಡುತ್ತೇನೆಂದು (ಹೇಳಿ ಹೋದಳು); ಹೋಗಿ….’

ಮೇಲಿನ (7ಟ) ವಾಕ್ಯದಲ್ಲಿ ಬಂದಿರುವ ಅಲ್ ಒಟ್ಟು ಮೊದಲಿನ ಕೆಲಸವನ್ನು ಸೂಚಿಸುತ್ತದೆ. ಹಾಗಾಗಿ, ಕಳಿಸು ಮತ್ತು ಹೋಗು ಎಂಬ

ಎರಡು ಬೇರೆ ಬೇರೆ ವ್ಯಕ್ತಿಗಳು (ಕೀಚಕ ಮತ್ತು ದ್ರವ್ಪದಿ) ಸ್ವೇಚ್ಚೆಯಿಂದ ನಡೆಸುವ ಕೆಲಸಗಳನ್ನು ಸೂಚಿಸುವ ಎರಡು ವಾಕ್ಯಗಳನ್ನು ಅದರ ಮೂಲಕ ಜೋಡಿಸಲು ಸಾದ್ಯವಾಗಿದೆ.

ಇದಲ್ಲದೆ, ಮೊದಲಿನ ಕೆಲಸವನ್ನು ಸೂಚಿಸುವುದಕ್ಕಾಗಿ ಎ ಎಂಬ ಇನ್ನೊಂದು ಒಟ್ಟೂ ಹಳೆಗನ್ನಡದಲ್ಲಿ ಬಳಕೆಯಲ್ಲಿತ್ತು. ಇದರ ಬಳಕೆಯಲ್ಲೂ ಮೇಲಿನ ನಿರ್ಬಂದವಿಲ್ಲ (7ತ ನೋಡಿ). ಈ ಎರಡು ಒಟ್ಟುಗಳೂ ಇವತ್ತಿನ ಬರಹ ಕನ್ನಡದಲ್ಲಿ ಉಳಿದಿಲ್ಲ.

(7ತ) ಪಾಂಡ್ಯನ್

ತೋಮರದಿಂದ ಇಡೆ

ಗುರುತನೂಜಂ

ಎಡೆಯೊಳ್ ಕಡಿದಂ ‘ಪಾಂಡ್ಯನು ತೋಮರದಿಂದ ಹೊಡೆದಾಗ ಗುರುತನೂಜನು
(ಅದನ್ನು) ನಡುದಾರಿಯಲ್ಲೇ ಕಡಿದನು’

ನಡೆಯುವ

ಸಮಯದಲ್ಲಿ

ಕೆಲಸಗಳನ್ನು ಜೋಡಿಸುವುದಕ್ಕಾಗಿ ಹವ್ಯಕ ಕನ್ನಡದಲ್ಲಿ ಉತ್ತ ಒಟ್ಟಿನ ಬದಲು ಕೊಳ್ ಗೊಂಡು ಕ್ರಿಯಾಪದದ ಜೋಡಿಸುವ (<ಕೊಂಡು) ಕ್ರಿಯಾರೂಪವನ್ನು ಬಳಸಲಾಗುತ್ತದೆ.

ಎಂಬುದನ್ನು

ರೂಪವಾದ

ಸೇರಿಸಿರುವ

ಮೊದಲಿನ

(8) ಆನು ಸಂಗೀತ ಕೇಳಿಗೊಂಡು ಉಣ್ಣುತ್ತೆ

‘ನಾನು ಸಂಗೀತವನ್ನು ಕೇಳುತ್ತಾ ಊಟಮಾಡುತ್ತೇನೆ’

ಉತ್ತ ಒಟ್ಟನ್ನು ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬದಲಾವಣೆಯನ್ನು ಹವ್ಯಕ ಈ

ಬಳಸಿರುವ ಮಾಡಿಕೊಂಡಿರಬಹುದು.

Eke →

12.3 ಸಂಬಂದಿಸುವ ಕ್ರಿಯಾರೂಪಗಳು

ಕೆಲಸವನ್ನು ನಾಮಪದದೊಂದಿಗೆ ಸಂಬಂದಿಸಿ ಪದಕಂತೆಯನ್ನು ರಚಿಸಲು ಸಾದ್ಯವಿದೆ. ಇದಕ್ಕಾಗಿ ಆ ವಾಕ್ಯದ

ಸೂಚಿಸುವ ಒಂದು ವಾಕ್ಯವನ್ನು

ಕೊನೆಯಲ್ಲಿ ಆಡುಗ ಒಟ್ಟಿನ ಬದಲು ಸಂಬಂದಿಸುವ ಅ ಒಟ್ಟನ್ನು ಸೇರಿಸಲಾಗುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸ

ಬಹುದು. (9ಕ) ಹುಡುಗಿ ಮನೆಗೆ ಬಂದಳು (9ಚ) ಹುಡುಗಿ ಊಟ ಮಾಡಿದಳು (9ಟ) ಮನೆಗೆ ಬಂದ ಹುಡುಗಿ ಊಟ ಮಾಡಿದಳು

ವಾಕ್ಯವನ್ನು

ವಾಕ್ಯದಲ್ಲಿರುವ

ಹುಡುಗಿ ನಾಮಪದದೊಂದಿಗೆ ಸಂಬಂದಿಸುವ ಮೂಲಕ, (9ಟ) ವಾಕ್ಯವನ್ನು ರಚಿಸಲಾಗಿದೆ. ಇದಕ್ಕಾಗಿ (9ಕ) ವಾಕ್ಯದ ಕೊನೆಯಲ್ಲಿರುವ ಬಂದಳು ಕ್ರಿಯಾಪದದ ಕೊನೆಯ ಅಳು ಒಟ್ಟನ್ನು ತೆಗೆದು ಹಾಕಿ, ಅದರ ಬದಲು ಸಂಬಂದಿಸುವ ಅ ಒಟ್ಟನ್ನು ಸೇರಿಸಲಾಗಿದೆ. ಇದಲ್ಲದೆ, ಈ ಎರಡು ವಾಕ್ಯಗಳಿಗೂ ಸಮಾನವಾಗಿರುವ ಹುಡುಗಿ ಪದವನ್ನು (9ಕ) ವಾಕ್ಯದಿಂದ ತೆಗೆದುಹಾಕಲಾಗಿದೆ.

ಕ್ರಿಯಾಪದಗಳ ಹಿಂದಿನ, ಮುಂದಿನ ಮತ್ತು ಅಲ್ಲಗಳೆಯುವ ರೂಪಗಳಿಂದ ಮೂರು ರೀತಿಯ ಸಂಬಂದಿಸುವ ಕ್ರಿಯಾರೂಪಗಳನ್ನು ಪಡೆಯಲು ಸಾದ್ಯವಿದೆ (ಮನೆಗೆ ಬಂದ ಹುಡುಗಿ, ಮನೆಗೆ ಬರುವ ಹುಡುಗಿ, ಮನೆಗೆ ಬಾರದ ಹುಡುಗಿ). ಇವುಗಳಲ್ಲಿ ಕಾಣಿಸುವ ಸಂಬಂದಿಸುವ ಅ ಒಟ್ಟನ್ನು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ.

ಕೆಲಸಕ್ಕೆ ಇನ್ನೊಂದು

Eke →

12.4 ಶರತ್ತಿನ ಕ್ರಿಯಾರೂಪಗಳು

ಶರತ್ತು ಎಂಬುದನ್ನು ಸೂಚಿಸುವುದಕ್ಕಾಗಿ, ಎರಡನೆಯ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಶರತ್ತಿನ (ಜೋಡಿಸುವ) ರೂಪಕ್ಕೆ ಬದಲಿಸಲಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯವನ್ನು ಪರಿಶೀಲಿಸಬಹುದು.

ಕೆಲಸ

(10) ರಾಜು ಬಂದರೆ ಹರಿ ಮನೆಗೆ ಹೋಗುತ್ತಾನೆ.

(10)ನೇ ವಾಕ್ಯದಲ್ಲಿ ‘ರಾಜು ಬರುವ’ ಕೆಲಸ ‘ಹರಿ ಮನೆಗೆ ಹೋಗುವ’ ಕೆಲಸಕ್ಕೆ ಶರತ್ತಾಗಿದೆ. ಇದನ್ನು ಸೂಚಿಸುವುದಕ್ಕಾಗಿ ‘ಬರುವ’ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಬಂದರೆ ಎಂಬ ಶರತ್ತಿನ ಜೋಡಿಸುವ ರೂಪಕ್ಕೆ ಬದಲಿಸಲಾಗಿದೆ.

ಸೂಚಿಸುವ

ಜೋಡಿಸುವ

ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಬೇರೆ ಬೇರೆ ಒಟ್ಟುಗಳು ಇಂತಹ ಕ್ರಿಯಾರೂಪಗಳನ್ನು ಶರತ್ತನ್ನು ತಯಾರಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅದು ಯಾವ ರೂಪದಲ್ಲಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾದ್ಯವಾಗಿಲ್ಲ. ಉದಾಹರಣೆಗಾಗಿ, ತಮಿಳಿನಲ್ಲಿ ಇದಕ್ಕಾಗಿ ಆಲ್ ಒಟ್ಟನ್ನು ಬಳಸಲಾಗುತ್ತದೆ (ಕಂಟಾಲ್ ‘ಕಂಡರೆ’).

ಬಳಕೆಯಾಗುತ್ತಿವೆಯಾದ

Eke →

12.4.1 ಹಳೆಗನ್ನಡದ ರೂಪಗಳು

ಹಳೆಗನ್ನಡದಲ್ಲಿ ಇಂತಹ ಶರತ್ತಿನ ಜೋಡಿಸುವ ರೂಪಗಳನ್ನು ತಯಾರಿಸು ವುದಕ್ಕಾಗಿ ಸಂಬಂದಿಸುವ ಕ್ರಿಯಾರೂಪಗಳಿಗೆ ಒಡೆ ಒಟ್ಟನ್ನು ಸೇರಿಸಲಾಗು ತ್ತಿತ್ತು.

ಮೇಲೆ (12.3)ರಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಮುಂದಿನ, ಹಿಂದಿನ ಮತ್ತು ಅಲ್ಲಗಳೆಯುವ ಎಂಬುದಾಗಿ ಮೂರು ಸಂಬಂದಿಸುವ ಕ್ರಿಯಾರೂಪಗಳಿದ್ದು, ಈ ಮೂರರೊಂದಿಗೂ ಒಡೆ ಒಟ್ಟನ್ನು ಬಳಸಲು ಸಾದ್ಯವಿತ್ತು.

(11ಕ) ಪೋಪೊಡೆ ಬರ್ಪೆಂ ‘ಹೋಗುವುದಿದ್ದರೆ ಬರುತ್ತೇನೆ’’ (11ಚ) ಪೋದೊಡೆ ಬರ್ಪೆಂ ‘ಹೋದರೆ ಬರುತ್ತೇನೆ’ (11ಟ) ಪೋಗದೊಡೆ ಬರ್ಪೆಂ ‘ಹೋಗದಿದ್ದರೆ ಬರುತ್ತೇನೆ’

ಆದರೆ ಈ ಶರತ್ತಿನ ಜೋಡಿಸುವ ರೂಪಗಳಲ್ಲಿ ವ್ (ಪ್) ಮತ್ತು ದ್ ಒಟ್ಟುಗಳಿಗೆ ಮುಂದಿನ ಮತ್ತು ಹಿಂದಿನ ಸಮಯಗಳನ್ನು ಸೂಚಿಸುವ ಅರ್ತವಿಲ್ಲ. ಇದಕ್ಕೆ ಬದಲು, ಅವು ಮಾಡಲಿರುವ ಕೆಲಸಕ್ಕೆ ಮೊದಲು

ಇಲ್ಲವೇ ಅನಂತರ ನಡೆಯಬೇಕಾದ ಕೆಲಸವನ್ನು ಶರತ್ತಾಗಿ ಸೂಚಿಸಲು ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಆಡುಗನು ಬರುವ ಕೆಲಸಕ್ಕೆ (11ಕ) ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಅನಂತರ (ಎಂದರೆ ಕೆಲಸ ಮುಗಿದ ಮೇಲೆ) ಹೋಗುವುದು ಶರತ್ತು, ಮತ್ತು (11ಚ) ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಕೆಲಸ ಶರತ್ತು (ವಿವರಗಳಿಗೆ ಬಟ್ 2005:227 ನೋಡಿ).

ಮೊದಲೇ ಹೋಗುವುದು

ಸುರುವಾಗುವುದಕ್ಕಿಂತ

Eke →

12.4.2 ಕನ್ನಡದಲ್ಲಿ ನಡೆದ ಬದಲಾವಣೆಗಳು

ಹಳೆಗನ್ನಡದಲ್ಲಿದ್ದ ಅಡೆ ಒಟ್ಟು ಹೊಸಗನ್ನಡದಲ್ಲಿ ಅರೆ ರೂಪವನ್ನು ಪಡೆದಿದೆ. ಆದರೆ, ಇವತ್ತಿನ ಬರಹ ಕನ್ನಡದಲ್ಲಿ ಈ ಒಟ್ಟನ್ನು ನೇರವಾಗಿ ಹಿಂದಿನ ಸಮಯದ ಸಂಬಂದಿಸುವ ಕ್ರಿಯಾರೂಪಕ್ಕೆ ಮಾತ್ರವೇ ಸೇರಿಸಲು ಸಾದ್ಯವಲ್ಲದೆ (ಬಂದರೆ, ಹೋದರೆ) ಮುಂದಿನ ಸಮಯದ (ಬರುವ, (ಬಾರದ, ಹೋಗದ) ಹೋಗುವ) ಇಲ್ಲವೇ ಅಲ್ಲಗಳೆಯುವ ಸಂಬಂದಿಸುವ ಸೇರಿಸಲು ಸಾದ್ಯವಾಗದು.

ರೂಪಗಳೊಂದಿಗೆ ಅದನ್ನು

ನೇರವಾಗಿ

ಕರಾವಳಿಯ ಹವ್ಯಕ ಕನ್ನಡ ಈ ವಿಶಯದಲ್ಲಿ ಹಳೆಗನ್ನಡದ ವಿದಾನ ವನ್ನು ಉಳಿಸಿಕೊಂಡಿದೆ. ಅದರಲ್ಲಿ ಶರತ್ತನ್ನು ಸೂಚಿಸುವ ಅರೆ ಒಟ್ಟನ್ನು ಹಿಂದಿನ ಸಮಯದ ಸಂಬಂದಿಸುವ ಕ್ರಿಯಾರೂಪಗಳೊಂದಿಗೆ ಮಾತ್ರವಲ್ಲದೆ ಮುಂದಿನ ಮತ್ತು ಅಲ್ಲಗಳೆಯುವ ಕ್ರಿಯಾರೂಪಗಳೊಂದಿಗೂ ಸೇರಿಸಿ ಹೇಳಲು ಸಾದ್ಯವಿದೆ. ಇದಲ್ಲದೆ, ಹಳೆಗನ್ನಡದಲ್ಲಿದ್ದ ಅರ್ತವ್ಯತ್ಯಾಸವನ್ನೂ ಮೂಲಕ ಹವ್ಯಕದಲ್ಲಿ ಈ ಸೂಚಿಸಲಾಗುತ್ತದೆ.

ಜೋಡಿಸುವ

ರೂಪಗಳ

ಶರತ್ತಿನ

(12ಕ) ನೀನು ಕೊಡುತ್ತರೆ ಬತ್ತೆ

‘ನೀನು (ಅನಂತರ) ಕೊಡುವುದಿದ್ದರೆ (ಈಗ) ಬರುತ್ತೇನೆ’’

(12ಚ) ನೀನು ಕೊಟ್ಟರೆ ಬತ್ತೆ

‘ನೀನು (ಈಗ) ಕೊಟ್ಟರೆ (ಅನಂತರ) ಬರುತ್ತೇನೆ’’

(12ಟ) ನೀನು ಕೊಡದ್ದರೆ ಬತ್ತೆ

‘ನೀನು ಕೊಡದಿದ್ದರೆ ಬರುತ್ತೇನೆ’’

ಬರಹ ಕನ್ನಡದಲ್ಲಿ ಅಲ್ಲಗಳೆಯುವ ಕ್ರಿಯಾರೂಪದೊಂದಿಗೆ ಅರೆ ಒಟ್ಟನ್ನು ಬಳಸಬೇಕಿದ್ದಲ್ಲಿ ಅದರೊಂದಿಗೆ ಇರು ಕ್ರಿಯಾಪದದ ಹಿಂದಿನ ಸಮಯದ ರೂಪವನ್ನು ಬಳಸಬೇಕಾಗುತ್ತದೆ (ಕೊಡದೆ ಇದ್ದರೆ) ಮತ್ತು ಮುಂದಿನ ಕ್ರಿಯಾರೂಪದೊಂದಿಗೆ ಬಳಸಬೇಕಿದ್ದಲ್ಲಿ ಕ್ರಿಯಾಪದದ ನಾಮರೂಪವನ್ನು ಬಳಸಬೇಕಾಗುತ್ತದೆ (ಕೊಡುವುದು ಇದ್ದರೆ) ಎಂಬುದನ್ನು ಕೊಟ್ಟಿರುವ ಉದಾಹರಣೆಗಳಿಂದ ತಿಳಿಯಬಹುದು.

ಸಮಯದ

ಮೇಲೆ

ಬಡಗ ಕನ್ನಡದಲ್ಲಿ ಶರತ್ತನ್ನು ಸೂಚಿಸುವ ಒಟ್ಟು ಅಲೆ ರೂಪದಲ್ಲಿದೆ. ಉದಾಹರಣೆಗಾಗಿ, ಕೆಳಗಿನ ಬಡಗ ವಾಕ್ಯಗಳನ್ನು ಗಮನಿಸಬಹುದು (ಬಾಲ ಕ್ರುಶ್ಣನ್ 1999:181, 220).

ಮೇ ಹೂದಲೆ ಕೊರವು ಅಪ್ಪರ ಇರಾ ‘ಮಳೆ ಸುರಿದರೆ ಚಳಿ ಹೆಚ್ಚು ಇರಲಿಕ್ಕಿಲ್ಲ’
ಮೇ ಇಲ್ಲಾದೋಲೆ ಹೊಲ ಎಲ್ಲ ಹಾಳಾಗಿಬುಟ್ಟರ ‘ಮಳೆ ಇಲ್ಲದಿದ್ದರೆ ಹೊಲ ಎಲ್ಲ ಹಾಳಾಗಿಬಿಟ್ಟೀತು’

ಈ ಅಲೆ ಒಟ್ಟನ್ನು ಬಡಗ ಕನ್ನಡವು ತಮಿಳಿನಿಂದ ಎರವಲಾಗಿ

ಪಡೆದಿರಲು ಸಾದ್ಯವಿದೆ. ತಮಿಳಿನಲ್ಲಿ ಆಲ್ ಒಟ್ಟು ಬಳಕೆಯಲ್ಲಿದೆ.

Eke →

12.5 ತಿರುಳು

ವಾಕ್ಯರಚನೆಯಲ್ಲಿ ಕನ್ನಡ ನುಡಿ ನಡೆದು ಬಂದ ದಾರಿ ಎಂತಹದು ನಡೆಸುವ ಎಂಬುದನ್ನು ತಿಳಿಯಲು ಇನ್ನಶ್ಟು

ಸಂಶೋದನೆಗಳನ್ನು

ಅವಶ್ಯಕತೆಯಿದೆ. ಇದಕ್ಕೆ ಕಾರಣವೇನೆಂದರೆ, ಮೂಲದ್ರಾವಿಡ ವಾಕ್ಯದ ಸ್ವರೂಪ ಹೇಗಿತ್ತು ಎಂಬುದಿನ್ನೂ ಸ್ಪಶ್ಟವಾಗಿಲ್ಲ.

ಹಾಗಾಗಿ, ಕನ್ನಡ ವಾಕ್ಯಗಳ ಸ್ವರೂಪ ಮತ್ತು ಅವುಗಳಲ್ಲಿ ಕನ್ನಡದ ಒಳನುಡಿಗಳು ತೋರಿಸುವ ಕೆಲವು ವ್ಯತ್ಯಾಸಗಳನ್ನಶ್ಟೇ ಇಲ್ಲಿ ವಿವರಿಸಲು ಸಾದ್ಯವಾಗಿದೆ.

ಆಕರಸೂಚಿ

ಉಪಾದ್ಯಾಯ, ಯು. ಪಿ. 1976. ಂ ಛಿomಠಿಚಿಡಿಚಿಣive sಣuಜಥಿ oಜಿ ಏಚಿಟಿಟಿಚಿಜಚಿ

ಎಮೆನೋ, ಎಮ್. ಬಿ. 1940. ‘ಖಿhe voತಿeಟs oಜಿ ಃಚಿಜಚಿgಚಿ ಟಚಿಟಿguಚಿge’.

ಎಮೆನೋ ಮತ್ತು ಹಾರ್್ಟ, ಕೆ. 1993. ಖಿಚಿmiಟ exಠಿಡಿessives ತಿiಣh iಟಿiಣiಚಿಟ

ಕಾಲ್್ಡವೆಲ್, ಆರ್. 1913. ಂ ಅomಠಿಚಿಡಿಚಿಣive gಡಿಚಿmmಚಿಡಿ oಜಿ ಣhe

ಕುಮಾರಸ್ವಾಮಿ ರಾಜ, ಎನ್. 1969. Posಣ-ಟಿಚಿsಚಿಟ voiಛಿeಟess ಠಿಟosives

ಕೆಂಪೇಗವ್ಡ, ಕೆ. 1976. ಬಾಶಾವಿಜ್ನಾನ ಕೋಶ. ಮಯ್ಸೂರು:

ಮಯ್ಸೂರು ವಿಶ್ವವಿದ್ಯಾನಿಲಯ.

ಕ್ರುಶ್ಣಮೂರ್ತಿ, ಬ. 1997. ಖಿhe oಡಿigiಟಿ ಚಿಟಿಜ evoಟuಣioಟಿ oಜಿ ಠಿಡಿimಚಿಡಿಥಿ

ಕ್ರುಶ್ಣಮೂರ್ತಿ 2001ರಲ್ಲಿ ಇನ್ನೊಮ್ಮೆ ಮುದ್ರಿತವಾಗಿದೆ).

ಗವ್ಡ, ಕೆ. ಕುಶಾಲಪ್ಪ 1970. ಉoತಿಜಚಿ ಏಚಿಟಿಟಿಚಿಜಚಿ. ಂಟಿಟಿಚಿmಚಿಟಚಿiಟಿಚಿgಚಿಡಿ:

ಗವ್ಡ, ಕೆ. ಎಸ್. ಗುರುಬಸವೇ 1968. ಆesಛಿಡಿiಠಿಣive ಚಿಟಿಚಿಟಥಿsis oಜಿ Soಟigಚಿ.

ಚಿದಾನಂದ ಮೂರ್ತಿ, ಎಮ್. 1972. ‘ಂ ಠಿಚಿಟಚಿಣಚಿಟiziಟಿg ಚಿಟಿಜ veಟಚಿಡಿiziಟಿg

ದ್ಸ್ವೆಲೆಬಿಲ್, ಕಮಿಲ್ 1970. ಅomಠಿಚಿಡಿಚಿಣive ಆಡಿಚಿviಜiಚಿಟಿ ಠಿhoಟಿoಟogಥಿ.

ನರಸಿಂಹಯ್ಯ, ಎ. ಎನ್. 1941. ಂ gಡಿಚಿmmಚಿಡಿ oಜಿ ಣhe oಟಜesಣ ಏಚಿಟಿಚಿಡಿese

ನರಸಿಂಹಾಚಾರ್, ಆರ್. 1969. ಊisಣoಡಿಥಿ oಜಿ ಏಚಿಟಿಟಿಚಿಜಚಿ ಟಚಿಟಿguಚಿge.

(ಎರಡನೇ ಆವ್ರುತ್ತಿ). ಒಥಿsoಡಿe: ಒಥಿsoಡಿe Uಟಿiveಡಿsiಣಥಿ.

ಪರಮಶಿವಂ, ಕೆ. 1980. ಇಜಿಜಿeಛಿಣiviಣಥಿ ಚಿಟಿಜ ಛಿಚಿusಚಿಣiviಣಥಿ iಟಿ ಖಿಚಿmiಟ.

ಬರೋ, ಟಿ. ಮತ್ತು ಎಮೆನೋ, ಎಮ್. ಬಿ. 1961. ಖಿhe ಆಡಿಚಿviಜiಚಿಟಿ

—-1995. ಕನ್ನಡ ಬಾಶೆಯ ಕಲ್ಪಿತ ಚರಿತ್ರೆ. ಹಂಪಿ: ಕನ್ನಡ

ವಿಶ್ವವಿದ್ಯಾಲಯ.

—-2002. ಕನ್ನಡ ಪದಗಳ ಒಳರಚನೆ. (ಎರಡನೇ ಆವ್ರುತ್ತಿ).

ಮಯ್ಸೂರು: ಬಾಶಾಪ್ರಕಾಶನ.

—-2003. ಕನ್ನಡದ ಸರ್ವನಾಮಗಳು. ಮಯ್ಸೂರು: ಬಾಶಾಪ್ರಕಾಶನ.

—-2005. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಮಯ್ಸೂರು:

ಬಾಶಾಪ್ರಕಾಶನ.

—-2005. ಕನ್ನಡ ಬರಹವನ್ನು ಸರಿಪಡಿಸೋಣ. ಮಯ್ಸೂರು:

ಬಾಶಾಪ್ರಕಾಶನ.

—-2006 ಕನ್ನಡ ವಾಕ್ಯಗಳ ಒಳರಚನೆ (ಎರಡನೇ ಮುದ್ರಣ).

ಮಯ್ಸೂರು: ಬಾಶಾಪ್ರಕಾಶನ.

ಬಾಲಕ್ರುಶ್ಣನ್, ಆರ್. 1999. ಃಚಿಜಚಿgಚಿ – ಂ ಆಡಿಚಿviಜiಚಿಟಿ ಟಚಿಟಿguಚಿge.

ರಾಮಚಂದ್ರರಾವ್, ಬಿ. 1972. ಂ ಜesಛಿಡಿiಠಿಣive gಡಿಚಿmmಚಿಡಿ oಜಿ Pಚಿmಠಿಚಿ

ರಾಮಚಂದ್ರರಾವ್, ಬಿ. 1998. ಕನ್ನಡ ಬಾಶೆಯ ಇತಿಹಾಸ.

ಮಯ್ಸೂರು: ಡಿ.ವಿ.ಕೆ.ಮೂರ್ತಿ.

ವೆಂಕಟಾಚಲ ಶಾಸ್ತ್ರೀ, ಟಿ. ವಿ. 1994. ’ಉಪೋದ್ಗಾತ’. ವೆಂಕಟಾಚಲ ಶಾಸ್ತ್ರೀ (ಸಂ.) ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣಂ, ಪುಟ 1-

  1. ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರುತಿ ನಿರ್ದೇಶನಾಲಯ.

ಸೀತಾರಾಮಯ್ಯ, ವಿ. 1979. ಪ್ರಾಚೀನ ಕನ್ನಡ ವ್ಯಾಕರಣಗಳು.

ಮಯ್ಸೂರು: ಮಯ್ಸೂರು ವಿಶ್ವವಿದ್ಯಾನಿಲಯ.

ಸುಬ್ರಹ್ಮಣ್ಯಂ, ಪಿ. ಎಸ್. (ಬರಲಿದೆ) ಆಡಿಚಿviಜiಚಿಟಿ ಛಿomಠಿಚಿಡಿಚಿಣive

ಹೋಕಿಂಗ್್ಸ, ಪಿ. ಮತ್ತು ಪಯ್ಲಟ್-ರಯ್ಚೂರ್, ಸಿ. 1992. ಂ

ವಿಶಯಸೂಚಿ

ಅಣಕಿಸುವ ಪದ 304, 313-15 ಅನುಸ್ವಾರ 144 ಅರ್ತವ್ಯತ್ಯಾಸ 97 ಅರಕಲಗೂಡು 106 ಅರೆಸ್ವರ 161 ಅಲ್ಲಗಳೆ 216, 241, 321 ಆಗುವಿಕೆ 193-5
ಆಗುವಿಕೆ-ಮಾಡುವಿಕೆ 182-93, 195-206, 221-3 ಆತ್ಮಾರ್ತ 291-2 ಆಯ್ದಮ್ 162 ಆರ್ಯರು 24 ಇಂಡೋ-ಆರ್ಯನ್ 270 ಇಂಡೋ-ಯುರೋಪಿಯನ್ 16, 183 ಇಮ್ಮಡಿ ಱಕಾರ 314

ಇರು ಕ್ರಿಯಾಪದ 229 ಇರುಳ 22 ಇಲಾಮಯ್ಟ 24 ಈಗಿನ ಸಮಯ 226-7

ಉದ್ದಸ್ವರ 267 ಉಪಾದ್ಯಾಯ 55-6, 70, 100 ಉರಾಲ್-ಆಲ್ಟೇಯಿಕ್ 24 179, 209, 213, 221-3, 315-16; ಹಗುರ-ತೂಕ 39-40, ಎಮೆನೋ 72-3, 249 ಐ-ಔಗಳು 38-9 ಒಲವು 313 ಒಳನಾಡು 18, 21-31, 47, 163, 291, 312 ಕನ್ನಡ-ತೆಲುಗು ಲಿಪಿ 39

ಕಾಲ್್ಡವೆಲ್ 21

ಕುಡುಕ್ 23, 45, 195, 245, 277 ಕುಱುಂಬ 22 ಕೂಡುಪದ 240 ಕೂಯಿ 23, 75, 249-50 ಕೆಆರ್ನಗರ 106 ಕೆಲಸ 319-20 ಕೇಶಿರಾಜ 168 ಕೇಳುಗ 273, 276, 287-8 ಕೊಡಗು 22, 75 ಕೊನೆ 280, 285, 293, 313 ಕೊರಗ 22, 25, 195 ಕೊರಳಿಸಿದ ಉಚ್ಚಾರಣೆ 94, 95- ಕೋತ 22 ಕೋಲಾಮಿ 23, 60, 64, 140, 277 ಕ್ರುದಂತ 227 ಕ್ರುಶ್ಣಮೂರ್ತಿ 24, 162, 242, 270-2, 191-2, 193-4, 297 ಗವ್ಡ ಕನ್ನಡ 52, 69-70, 89, 132, 2378, 274, 276, 282-3,

ಗವ್ಡ, ಕುಶಾಲಪ್ಪ 52

ಗವ್ಡ, ಗುರುಬಸವೇ 72, 115 ಗವ್ರವಾರ್ತ 201, 203-4, 248, 276 ಗುಲ್ಬರ್ಗ 54-5, 69-70, 82, 86-7, 100-1 ಚಾಮರಾಜನಗರ 85, 141, 144 ಚಿದಾನಂದ ಮೂರ್ತಿ 105-6 ಜಪಾನೀಸ್ 24 ಜೇನುಕುರುಬ 55-6, 83 ಜೋಡಿಸುವ ರೂಪ 216, 321-4 ಜೋಡುಪದ 41, 134, 136, 179, 256, 270-2, 306, 309,

ತಡೆಯಿಲ್ಲದುಲಿ 137, 161-73 ತಿಳಿಯದ ಪದ 295-7 ತೆಂಕು ಒಳನುಡಿ 54, 82, 85-6, 108

ದಪ ಒಟ್ಟು 226 ದಾರವಾಡ 105, 228 ದಿಕ್ಕು 279

ದುಂಡಗಿಲ್ಲದ ಸ್ವರ 163 ದ್ಸ್ವೆಲೆಬಿಲ್ 38 ನಂಜನಗೂಡು 100-1 ನಂಟಸ್ತಿಕೆ 15-6, 20, 24, 275-8 ನಕಾರ, ಎರಡು ರೀತಿ 92 ನಟರಾಜನ್ 115 ನಡುಗನ್ನಡ 112, 229 ನಡುದ್ರಾವಿಡ 22-3, 103, 245, 249 ನರಸಿಂಹಯ್ಯ 99, 111-12, 116, 164, 169, 322 ನಾಯ್ಕಿಡಿ 23 ನಿಯಮ-ಒಲವು 81 ನುಡಿಕುಟುಂಬ 21 ಪಂಪಬಾರತ 38, 111, 226-7, 244, 289 ಪದಕೋಶ 304, 314 ಪಯ್ಲಟ್-ರಯ್ಚೂರ್ 17 ಪರಮಶಿವಂ 183 ಪಶ್ಚಿಮಗಟ್ಟ 18 ಪಳೆಯಳಿಕೆ 196, 203, 205, 240, 277-8, 280, 317, 122 ಪಾಶ್ಚಾತ್ಯ ವ್ಯಾಕರಣ 291 ಪೆಂಗೊ 23 ಪ್ರಮಾಣ 279 ಪ್ರಶ್ನಾರ್ತಕ ಪದ 297 ಪ್ರಾಸ 38-9

ಬಡಗು ಒಳನುಡಿ 54, 82, 86, 110-4, 171 ಬಡಗುದ್ರಾವಿಡ 22-3, 103, 195, 245 ಬರಹ 144 ಬಲೂಚಿಸ್ತಾನ 19 ಬಳ್ಳಾರಿ 56, 100, 171 ಬಾಲಕ್ರುಶ್ಣನ್ 73, 115, 200, 246, 298, 327 ಬೇರು 40, 42, 75-6 ಬ್ರಾಹುಯೀ 19, 23-4 ಬ್ರಾಹ್ಮೀ ಲಿಪಿ 25, 39 ಮಂಡ 23 ಮಡಚಿದ ವ್ಯಂಜನ 107 ಮನುಶ್ಯ 128, 219, 284-5, 298-9 ಮಯ್ಸೂರು 54-5, 82-3, 86-7, 101 ಮರಾಟಿ 105

ಮಹಾಪ್ರಾಣಾಕ್ಶರ 315 ಮಾಡುವಿಕೆ 194, 195 ಮಾತಿನ ಕೆಲಸ 319 ಮಾಲ್ತೋ 23, 195, 245 ಮುಂಗೆಳಗಿನ ಸ್ವರ 85

ಮುಂದಿನ ಸಮಯ 26, 191-2, 217, 224-29, 232 ಮುಂದಿನ ಸ್ವರ - ಹಿಂದಿನ ಸ್ವರ 41 ಮೂಗುಲಿ 137, 152 ಮೂಡು-ಬಡಗು ಒಳನುಡಿ 171 ಮೂಲನುಡಿ 19-29 ರಚನೆ-ಒಳರಚನೆ 180 ರಾಮಚಂದ್ರ ರಾವ್ 111 ರೂಡಿಯ ಕೆಲಸ 217-8, 237 ಲಾರಿಂಜಲ್ 162, 242, 297 ಲಿಂಗಬೇದ 201, 245, 249, 272 ವಚನ 272, 316 ವಡ್ಡಾರಾದನೆ 289 ವಯ್ಯಾಕರಣಿ 133, 226-7, 291 ವರ್ಣಿಸು 320 ವಿಶೇಶಣ 278, 280 ಶರತ್ತು 325

ಶಿತಿಲದ್ವಿತ್ವ 134 ಸಂಬಂದದ ಒಟ್ಟು 278-9, 306 ಸಂಬಂದಿಸುವ ರೂಪ 216, 324-5 ಸಂಸ್ಕ್ರುತ 16, 20, 21, 127

ಸಕರ್ಮಕ-ಅಕರ್ಮಕ 182-6, 189, 191, 193-4, 202 ಸಕಲೇಶಪುರ 107 ಸಮಯದ ಒಟ್ಟು 216, 240-1, 321 ಸರ್ವನಾಮ 287 ಸುಬ್ರಹ್ಮಣ್ಯಂ 62, 92, 119, 127-8, 162, 198, 202-3, 224,

ಸುರು 280, 285, 293 ಸೇರಿಕೆಯ ಬದಲಾವಣೆ 309-11 ಸೊನ್ನೆ 144, 322 ಸೊನ್ನೆ ಒಟ್ಟು 207, 255 ಸೊಲಿಗ 69, 72, 102, 114-5 ಸ್ವರ, ಗಿಡ್ಡ-ಉದ್ದ 35-6, 41, 58, 61, 83; ಮೂಗಿಸಿದ 71, 83-4; ಮಡಚಿದ 72; ಬಿದ್ದುಹೋಗು 81-3; ದುಂಡಗಿಲ್ಲದ 70-1, 89; ಹೆಸರು 35; ಎಣಿಕೆ 35, 68

ಸ್ವೇಚ್ಚೆ 323 ಹಲವಚನ 26, 134, 183, 216, 245, 251, 272-3, 288-9,

ಹಳೆತಮಿಳು 92, 96, 98, 109, 163, 208, 252, 277 ಹಿಂದಿನ ಸಮಯ 191, 198, 217-24, 227, 229-31 ಹಿರೇಮಟ 104 ಹೆಂಗಸು 269, 270, 272, 298, 316

ಹೆಸರಿಸು 320 ಹೊಡೆಯುಲಿ 114, 119, 137, 145, 152, 156-61 ಹೊಸೂರು 106 ಹೊಳೇನರಸೀಪುರ 105 ಹೋಕಿಂಗ್್ಸ 17 (ಪುಸ್ತಕದ ಹೆಚ್ಚಿನ ಪುಟಗಳಲ್ಲಿಯೂ ಕಾಣಿಸುವ ಕನ್ನಡ, ಹಳೆಗನ್ನಡ,

ಮತ್ತು ತಮಿಳು ಪದಗಳನ್ನು ಈ ಸೂಚಿಯಲ್ಲಿ ಸೇರಿಸಲಿಲ್ಲ)

ಬಾಶಾಪ್ರಕಾಶನದ ಇತರ ಪುಸ್ತಕಗಳು

ಡಿ. ಎನ್. ಶಂಕರ ಬಟ್ ಬರೆದ ಇತರ ಪುಸ್ತಕಗಳು:

  1. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, 2000, 2001; ದೊಡ್ಡ ಮಾಡಿರುವ 3ನೇ ಮುದ್ರಣ 2006; ಪುಟ 248, ರೂ 140.
  2. ಕನ್ನಡ ಬರಹವನ್ನು ಸರಿಪಡಿಸೋಣ! 2005, ಪುಟ 247, ರೂ.

  3. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? 2005, ಪುಟ 265,

  4. ಕನ್ನಡ ಪದಗಳ ಒಳರಚನೆ, 1999; ದೊಡ್ಡ ಮಾಡಿರುವ ಎರಡನೇ

ಮುದ್ರಣ 2002, ಪುಟ 239, ರೂ. 120.

  1. ಕನ್ನಡದ ಸರ್ವನಾಮಗಳು, 2003, ಪುಟ 192, ರೂ. 46.
  2. ಬಾಶೆಯ ಬಗೆಗೆ ನೀವೇನು ಬಲ್ಲಿರಿ?, 1970, 1998, ದೊಡ್ಡ

ಮಾಡಿರುವ ಮೂರನೇ ಮುದ್ರಣ 2002, ಪುಟ 191, ರೂ. 100.

  1. ಕನ್ನಡ ವಾಕ್ಯಗಳ ಒಳರಚನೆ, 2004, ಎರಡನೇ ಮುದ್ರಣ 2006,

ಪುಟ 280, ರೂ. 120.

ಬಾರತಿ ಬಟ್ ಬರೆದ ಪುಸ್ತಕಗಳು:

  1. ನನ್ನ ಬೆಲ್ಜಿಯಂ ಪ್ರವಾಸ, 2000, ಪುಟ 160, ರೂ. 50.
  2. ತಾಯಂದಿರಿಗೆ ಕಿವಿಮಾತು, 2007, ಪುಟ 224, ರೂ. 120.

ದಬ್ರೆ ನಾರಾಯಣ ಶಾಸ್ತ್ರಿಗಳು ಬರೆದ ಪುಸ್ತಕ: ಸನಾತನತ್ವದ ಇಣುಕುನೋಟಗಳು, 2007, ಪುಟ 264, ರೂ. 140

ಪ್ರತಿಗಳಿಗೆ ಬರೆಯಿರಿ:

ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001

ದೂರವಾಣಿ: 0824-2425161, -249397