ಕನ್ನಡ ವಾಕ್ಯಗಳ ಒಳರಚನೆ
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ
ಪರಿವಿಡಿ
- ಅಧ್ಯಾಯ 1 — ಪೀಠಿಕೆ
- ಅಧ್ಯಾಯ 2 — ಕ್ರಿಯಾವಾಕ್ಯಗಳ ಒಳರಚನೆ
- ಅಧ್ಯಾಯ 3 — ವಿಷಯವಾಕ್ಯಗಳ ಒಳರಚನೆ
- ಅಧ್ಯಾಯ 4 — ನಾಮಪದಗಳ ಕಂತೆಗಳು
- ಅಧ್ಯಾಯ 5 — ಕ್ರಿಯಾಪದಗಳ ಪದರೂಪಗಳು
- ಅಧ್ಯಾಯ 6 — ಗುಣಪದಗಳ ಬಳಕೆ - 6.2.2 ಜಾಗ, ಸುರು ಮತ್ತು ಕೊನೆ
- ಅಧ್ಯಾಯ 7 — ಒಳವಾಕ್ಯಗಳು
- ಅಧ್ಯಾಯ 8 — ವಾಕ್ಯಗಳ ಜೋಡಣೆ
- ಅಧ್ಯಾಯ 9 — ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು
- ಅಧ್ಯಾಯ 10 — ಮಾತಿನ ಕೆಲಸಗಳು
- ಅಧ್ಯಾಯ 11 — ಕನ್ನಡದ ಕೆಲವು ವೈಶಿಷ್ಟ್ಯಗಳು
- 11.1 ಪೀಠಿಕೆ
- 11.2 ಮುಖ್ಯ ಪದವಗ್ರಗಳು
- 11.3 ಮುಖ್ಯವಲ್ಲದ ಪದವಗ್ರಗಳು
- 11.4 ಪದಗಳ ಅನುಕ್ರಮ
- 11.5 ವ್ಯಾಕರಣ ಸಂಬಂಧ
- 11.6 ಸಮಯದ ಸೂಚನೆ
- 11.7 ಅಲ್ಲಗಳೆಯುವ ವಾಕ್ಯಗಳು
- 11.8 ಕೇಳ್ವಿಗಳು
-
11.9 ಮುಕ್ತಾಯ
ಕನ್ನಡ ವಾಕ್ಯಗಳ ಒಳರಚನೆ ಡಿ. ಎನ್. ಶಂಕರ ಭಟ್ ಭಾಷಾ ಪ್ರಕಾಶನ, ಆರಗ, ತೀರ್ಥಹಳ್ಳಿ KANNADA VAAKYAGALA OLARACANE (The structure of Kannada sentences) by D.N.Shankara Bhat, Alilabagilu, Araga P.O., Tirthahalli 577 414; phone:
- E-mail: bhatdns@rediffmail.com ಮೊದಲನೆಯ ಅಚ್ಚು : 2004 ಎರಡನೆಯ ಅಚ್ಚು : 2006 ಮೂರನೆಯ ಅಚ್ಚು: 2012 ಬಿ: ಬರಹಗಾರ ಹೊರಪಡಿಕೆ : ಭಾಷಾ ಪ್ರಕಾಶನ, ಆರಗ, ತೀರ್ಥಹಳ್ಳಿ 577 417 ಹಂಚಿಕೆ : ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು 575 001. ಅಚ್ಚು : ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮೈಸೂರು 570 014. ಮುನ್ನುಡಿ ಇಪ್ಪತ್ತಾರು ವಷ್ರಗಳ ಹಿಂದೆ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ ಎಂಬ ಹೆಸರಿನಲ್ಲಿ ನನ್ನದೊಂದು ಪುಸ್ತಕ ಮೈಸೂರಿನ ಗೀತಾ ಬುಕ್ ಹೌಸ್ ಮೂಲಕ ಪ್ರಕಟವಾಗಿತ್ತು. ಅದರಲ್ಲಿ ಕನ್ನಡ ವಾಕ್ಯಗಳ ಒಳರಚನೆಯನ್ನು ಹೊಸ ಭಾಷಾವಿಜ್ಞಾನದ ದೃಷ್ಟಿ ಕೋನದ ಮೂಲಕ ಪರಿಶೀಲಿಸಲು ಪ್ರಯತ್ನಿಸಿದ್ದೆ. ಅದನ್ನೇ ಆಧಾರವಾಗಿರಿಸಿ ಕೊಂಡು ಈಗ ಈ ಹೊಸದೊಂದು ಪುಸ್ತಕವನ್ನು ಬರೆದಿದ್ದೇನೆ. ಈ ಪುಸ್ತಕದಲ್ಲಿ ಅರ್ಥವ್ಯವಸ್ಥೆಗಿಂತಲೂ ಆಂತರಿಕ ರಚನೆಗೇನೇ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಇದಲ್ಲದೆ, ಕಳೆದ ಇಪ್ಪತ್ತೈದು ವಷ್ರಗಳಲ್ಲಿ ನಡೆಸಿದ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಕನ್ನಡ ವಾಕ್ಯಗಳ ಒಳರಚನೆಯ ಕುರಿತು ಹಲವು ಹೊಸ ವಿಷಯಗಳನ್ನು ಕಂಡುಹಿಡಿದಿದ್ದೇನೆ, ಮತ್ತು ನನ್ನಲ್ಲಿದ್ದ ಕೆಲವು ಹಳೆಯ ವಿಚಾರಗಳು ತಪ್ಪೆಂಬುದನ್ನೂ ಕಂಡುಕೊಂಡಿದ್ದೇನೆ. ಇವನ್ನು ಬಳಸಿದುದರಿಂದಾಗಿ ಈ ಪುಸ್ತಕ ಹಳೆಯದ ರಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿರುವುದನ್ನು ಕಾಣಬಹುದು. ಕನ್ನಡದ ಶಾಸ್ತ್ರೀಯ ಬರಹಗಳಲ್ಲೆಲ್ಲ ಅವಶ್ಯವಿರುವಲ್ಲೂ ಇಲ್ಲದಿರು ವಲ್ಲೂ ಹೆಚ್ಚು ಹೆಚ್ಚು ಸಂಸ್ಕೃತ ಪದಗಳನ್ನು ಬಳಸುವುದರಿಂದಾಗಿ ಅವು ಸಾಮಾನ್ಯರ ಕೈಗೆ ಎಟುಕದಂತಾಗುವುದೇ ಜಾಸ್ತಿ. ಕನ್ನಡದ ವ್ಯಾಕರಣ ಪುಸ್ತಕಗಳು ಕಗ್ಗಂಟುಗಳಾಗಲು ಇದೂ ಒಂದು ಕಾರಣ. ಈ ಪುಸ್ತಕವನ್ನು ಬರೆಯುವಾಗ ಆದಷ್ಟು ಮಟ್ಟಿಗೆ ಕನ್ನಡದ ಪದಗಳನ್ನೇ ಬಳಸುವುದರ ಮೂಲಕ ಹೇಳುವ ವಿಷಯ ಸುಲಭದಲ್ಲಿ ಅರ್ಥವಾಗುವ ಹಾಗೆ ಮಾಡಲು ಪ್ರಯತ್ನಿಸಿದ್ದೇನೆ. ಕನ್ನಡದ ಸವ್ರನಾಮಗಳು ಕನ್ನಡ ವಾಕ್ಯಗಳ ಕುರಿತು ಮುಖ್ಯವೆಂದು ತೋರಿದ ಕೆಲವು ವಿಷಯ ಗಳನ್ನಷ್ಟೇ ಈ ಪುಸ್ತಕದಲ್ಲಿ ವಿವರಿಸಲು ಸಾಧ್ಯವಾಗಿದೆ. ಭಾಷೆಯೆಂಬುದು ಒಂದು ಬಹಳ ಜಟಿಲವಾದ ವ್ಯವಸ್ಥೆಯಾಗಿದ್ದು, ಅದರ ರಚನೆಯ ಕುರಿತು ಎಷ್ಟು ಹೇಳಿದರೂ ಮುಗಿಯದಷ್ಟು ವಿಷಯಗಳಿವೆ. ಈ ಪುಸ್ತಕದ ಪ್ರತಿ ಯೊಂದು ಅಧ್ಯಾಯದ ಪ್ರತಿಯೊಂದು ವಿಭಾಗದ ಮೇಲೂ ಇಂತಹ ಪುಸ್ತಕ ಗಳನ್ನು ಬರೆಯಲು ಸಾಧ್ಯವಿದೆ. ಅಂತಹ ಪುಸ್ತಕಗಳನ್ನು ಬರೆದು ಕನ್ನಡ ಭಾಷೆಗೆ ಒಂದು ಪರಿಪೂರ್ಣವಾದ ವ್ಯಾಕರಣವನ್ನು ಸಿದ್ಧಪಡಿಸುವಲ್ಲಿ ಯುವ ವಿದ್ವಾಂಸರಿಗೆ ಈ ಪುಸ್ತಕ ಪೊ್ರೀತ್ಸಾಹ ಕೊಡುವಂತಾಗಲಿ ಎಂಬುದೇ ನನ್ನ ಹಾರೈಕೆ. ಈ ಪುಸ್ತಕದ ಹಸ್ತಪ್ರತಿಯನ್ನೊಮ್ಮೆ ಓದಿ ನೋಡಿ ತಮ್ಮ ಅಮೂಲ್ಯ ವಾದ ಸಲಹೆಗಳನ್ನು ಕೊಟ್ಟ ಗೆಳೆಯ ಸಿ. ಎಸ್. ರಾಮಚಂದ್ರ ಅವರಿಗೂ, ಇದರ ಪ್ರಕಟಣೆಗಾಗಿ ಅನುದಾನ ಕೊಟ್ಟಿರುವ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೂ, ಇದರ ಮುದ್ರಣದಲ್ಲಿ ‘ಬರಹ’ ಎಂಬ ಹೆಸರಿನ ತಂತ್ರಾಂಶವನ್ನು ಉಚಿತವಾಗಿ ಬಳಸಿಕೊಳ್ಳಲು ಒಪ್ಪಿಗೆ ನೀಡಿರುವ ಶೇಶಾದ್ರಿ ವಾಸು ಚಂದ್ರಶೇಖರನ್ ಅವರಿಗೂ, ಇದನ್ನು ಅಂದವಾಗಿ ಮುದ್ರಿಸಿ ಕೊಟ್ಟಿರುವ ಶ್ರೀ ಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ರಾ. ಶ್ರೀ. ಮೋಹನ ಮೂತ್ರಿ ಅವರಿಗೂ ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಜಿ. ಎನ್. ಅಶೋಕವರ್ಧನ ಅವರಿಗೂ ನಾನು ಆಭಾರಿ. ಮೈಸೂರು ಮಾಚ್್ರ 1, 2004 ಡಿ. ಎನ್. ಶಂಕರ ಭಟ್ English → | Eke →
ಅಧ್ಯಾಯ ಒಂದು — ಪೀಠಿಕೆ
1.1 ಮಾತಿನ ಕೆಲಸಗಳು
ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಬೇರೆ ಬೇರೆ ರೀತಿಯ ‘ಮಾತಿನ ಕೆಲಸ’ ಗಳನ್ನು ನಡೆಸುವುದಕ್ಕಾಗಿ ಹಲವಾರು ರೀತಿಯ ವಾಕ್ಯಗಳನ್ನು ಬಳಸುತ್ತಿರುತ್ತೇವೆ. ಉದಾಹರಣೆಗಾಗಿ, ತಿಳಿದಿರುವ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿಹೇಳುವು ದಕ್ಕಾಗಿ ಕೆಳಗೆ (1ಕ-ಘ)ಗಳಲ್ಲಿ ಕೊಟ್ಟಿರುವಂತಹ ಒಂದು ರೀತಿಯ ವಾಕ್ಯಗಳನ್ನು ಬಳಸುತ್ತೇವಾದರೆ, ತಿಳಿಯದೆ ಇರುವ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳುವು ದಕ್ಕಾಗಿ (2ಕ-ಘ)ಗಳಲ್ಲಿ ಕೊಟ್ಟಿರುವಂತಹ ಅವಕ್ಕಿಂತ ಭಿನ್ನವಾಗಿರುವ ಬೇರೆ ರೀತಿಯ ವಾಕ್ಯಗಳನ್ನು ಬಳಸುತ್ತೇವೆ. ರಾಜು ಮರದಿಂದ ಕೆಳಗೆ ಹಾರಿದ. (1ಖ) ದೊರೆಸ್ವಾಮಿ ನಾಳೆ ಬೆಂಗಳೂರಿಗೆ ಹೋಗುತ್ತಾರೆ. (1ಗ) ನನ್ನ ಹತ್ತಿರ ನೂರೈವತ್ತು ರುಪಾಯಿ ಇದೆ. (1ಘ) ಈ ಪುಸ್ತಕ ನಮ್ಮದು. (2ಕ) ಮರದಿಂದ ಕೆಳಗೆ ಹಾರಿದ್ದು ಯಾರು? (2ಖ) ದೊರೆಸ್ವಾಮಿ ನಾಳೆ ಬೆಂಗಳೂರಿಗೆ ಹೋಗುತ್ತಾರೋ? (2ಗ) ನಿಮ್ಮ ಹತ್ತಿರ ಎಷ್ಟು ಹಣವಿದೆ? (2ಘ) ಈ ಪುಸ್ತಕ ನಮ್ಮದೋ? ಇದಲ್ಲದೆ, ಮಾಡಲಾಗದ ಕೆಲಸಗಳನ್ನು ಇನ್ನೊಬ್ಬರ ಹತ್ತಿರ ಹೇಳಿ ಮಾಡಿಸಿ ಕೊಳ್ಳುವುದು, ಮಾಡಬೇಕೆಂದಿರುವ ಕೆಲಸಗಳನ್ನು ಮಾಡಲು (ಅವಶ್ಯಬಿದ್ದಲ್ಲಿ) ಇನ್ನೊಬ್ಬರ ಒಪ್ಪಿಗೆ ಕೇಳುವುದು, ಮನಸ್ಸಿಗಾಗದ ಕೆಲಸವನ್ನು ಯಾರಾದರೂ ಮಾಡಿದಲ್ಲಿ ಅವರನ್ನು ತೆಗಳುವುದು, ಮನಸ್ಸಿಗೆ ಹಿಡಿಸಿದ ಕೆಲಸವನ್ನು ಯಾರಾ ದರೂ ಮಾಡಿದಲ್ಲಿ ಅವರನ್ನು ಹೊಗಳುವುದು, ಇತ್ಯಾದಿಯಾಗಿ ಹಲವಾರು ರೀತಿಯ ಮಾತಿನ ಕೆಲಸಗಳನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಡೆಸ ಬೇಕಾಗಿದ್ದು, ಇದಕ್ಕಾಗಿಯೂ ನಾವು ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸ ಬಲ್ಲೆವು.
(3ಕ) ಈ ಸಿಲಿಂಡರನ್ನು ಹೊರಗೆ ಇರಿಸಿ. (3ಖ) ಇವತ್ತು ನಾವು ಬೆಂಗಳೂರಿಗೆ ಹೋಗೋಣ. (3ಗ) ಆ ಹುಡುಗಿ ಎಷ್ಟು ಚೆನ್ನಾಗಿ ಕುಣಿಯುತ್ತಿದ್ದಾಳೆ! (3ಘ) ಆಕೆ ಇವತ್ತು ಅಥವಾ ನಾಳೆ ಬರಬಹುದು. ಒಂದೇ ಘಟನೆ ಇಲ್ಲವೇ ವಿಷಯವನ್ನು ತಿಳಿಸುವ ವಾಕ್ಯವನ್ನೂ ಈ ರೀತಿ ಬೇರೆ ಬೇರೆ ಮಾತಿನ ಕೆಲಸಗಳನ್ನು ಸಾಧಿಸುವುದಕ್ಕಾಗಿ ಬಳಸಲು ಸಾಧ್ಯವಿದೆ, ಮತ್ತು ಅದಕ್ಕಾಗಿ ಆ ವಾಕ್ಯದಲ್ಲಿ ಕೆಳಗೆ ಕಾಣಿಸಿರುವಂತೆ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ರಾಜು ಪೇಟೆಗೆ ಹೋಗಿದ್ದಾನೆ. (4ಖ) ರಾಜು ಪೇಟೆಗೆ ಹೋಗಿದ್ದಾನೋ? ರಾಜು ಪೇಟೆಗೆ ಹೋಗಿರಬಹುದು. (4ಘ) ರಾಜು ಪೇಟೆಗೆ ಹೋಗಲಿ. (4ಙ) ರಾಜು ಪೇಟೆಗೆ ಹೋಗುವುದು ಬೇಡ. ಮೇಲೆ ಕೊಟ್ಟಿರುವ (4ಕ-ಙ)ಗಳಲ್ಲಿ ‘ರಾಜು ಪೇಟೆಗೆ ಹೋಗುವುದು’ ಎಂಬ ಘಟನೆಯನ್ನು ಸೂಚಿಸುವ ಒಂದೇ ಒಂದು ವಾಕ್ಯವನ್ನು ಐದು ಬೇರೆ ಬೇರೆ ‘ಮಾತಿನ ಕೆಲಸ’ಗಳನ್ನು ನಡೆಸುವುದಕ್ಕಾಗಿ ಬಳಸಿಕೊಳ್ಳಲಾಗಿದೆಯೆಂಬುದನ್ನು ಗಮನಿಸಬಹುದು. (4ಕ) ವಾಕ್ಯ ಆ ಘಟನೆ ನಡೆದಿದೆಯೆಂದು ತಿಳಿಸುತ್ತದೆ, (4ಖ) ವಾಕ್ಯ ಅದು ನಡೆದಿದೆಯೇ ಎಂದು ಕೇಳುತ್ತದೆ, (4ಗ) ವಾಕ್ಯ ಅದು ನಡೆದಿರಲು ಸಾಧ್ಯ ಎಂಬುದನ್ನು ತಿಳಿಸುತ್ತದೆ, (4ಘ) ವಾಕ್ಯ ಅದು ನಡೆಯಲು ಆಡುಗನ ಒಪ್ಪಿಗೆಯಿದೆಯೆಂಬುದನ್ನು ಸೂಚಿಸುತ್ತದೆ, ಮತ್ತು (4ಙ) ವಾಕ್ಯ ಅದು ನಡೆಯದಂತೆ ತಡೆಹಾಕುತ್ತದೆ.
ವಾಕ್ಯಗಳ ಮೂಲಕ ನಡೆಸಲು ಸಾಧ್ಯವಿರುವ ಈ ಹಲವು ರೀತಿಯ ‘ಮಾತಿನ ಕೆಲಸ’ಗಳಲ್ಲಿ ನಡೆದಿರುವ ಅಥವಾ ನಡೆಯಲಿರುವ ಘಟನೆಗಳನ್ನು ಇಲ್ಲವೇ ಸಂಗತಿಗಳನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವುದೇ ಅತ್ಯಂತ ಪ್ರಾಮುಖ್ಯವಾದ ಕೆಲಸವೆಂದು ಹೇಳಬಹುದು. ಹಾಗಾಗಿ, ಕನ್ನಡ ವಾಕ್ಯಗಳ ಒಳರಚನೆಯೇನು ಎಂಬುದನ್ನು ತಿಳಿದುಕೊಳ್ಳಬೇಕೆಂದಿರುವವರು ಮೊದಲಿಗೆ ಈ ರೀತಿ ಬೇರೆ ಬೇರೆ ಘಟನೆಗಳನ್ನು ಇಲ್ಲವೇ ಸಂಗತಿಗಳನ್ನು ಇನ್ನೊಬ್ಬರಿಗೆ ತಿಳಿಸಿಹೇಳುವುದಕ್ಕಾಗಿ ಎಂತಹ ವಾಕ್ಯಗಳನ್ನು ಬಳಸಲಾಗುತ್ತದೆ, ಮತ್ತು ಆ ವಾಕ್ಯಗಳ ಒಳರಚನೆ ಎಂತಹದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಇತರ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಸುವ ವಾಕ್ಯಗಳನ್ನೆಲ್ಲ ಇಂತಹ ಘಟನೆ ಇಲ್ಲವೇ ಸಂಗತಿಗಳನ್ನು ತಿಳಿಸಿ ಹೇಳಲು ಬಳಸುವ ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡುವುದರ ಮೂಲಕ ಸಾಧಿಸಲು ಸಾಧ್ಯವಿದೆ. ಹಾಗಾಗಿ, ತಿಳಿಸಿ ಹೇಳುವ ವಾಕ್ಯಗಳನ್ನು ಮೂಲ ವಾಕ್ಯಗಳೆಂದೂ ಮತ್ತು ಇತರ ವಾಕ್ಯಗಳನ್ನು ಅಂತಹ ಮೂಲ ವಾಕ್ಯಗಳಿಂದ ತಯಾರಾಗುವ ‘ಸಾಧಿತ’ ವಾಕ್ಯಗಳೆಂದೂ ಕಲ್ಪಿಸಿಕೊಂಡಲ್ಲಿ ಕನ್ನಡ ವಾಕ್ಯಗಳ ಒಳರಚನೆಯನ್ನು ತಿಳಿದುಕೊಳ್ಳುವ ಕೆಲಸ ಸುಲಭವಾಗಬಲ್ಲುದು. ಈ ಕಾರಣಕ್ಕಾಗಿ, ಮುಂದಿನ ಏಳು ಅಧ್ಯಾಯಗಳಲ್ಲಿ ತಿಳಿಸುವ ವಾಕ್ಯಗಳ ಒಳರಚನೆಯೇನೆಂಬುದನ್ನು ಮಾತ್ರವೇ ವಿವರಿಸಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ತಿಳಿಸುವ ವಾಕ್ಯಗಳಲ್ಲೂ ಒಂದು ಘಟನೆಯನ್ನು ನೇರವಾಗಿ ತಿಳಿಸುವವುಗಳು ಮತ್ತು ಒಂದು ಘಟನೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದಕ್ಕೆ ಆ ಘಟನೆಯೊಂದಿಗಿರುವ ‘ಸಂಬಂಧ’ವನ್ನು ತಿಳಿಸುವವುಗಳು ಎಂಬುದಾಗಿ ಎರಡು ರೀತಿಯವುಗಳನ್ನು ಕಾಣಬಹುದು.
ರಾಜು ಬೆಂಗಳೂರಿಗೆ ಹೋದ. (5ಖ) ರಾಜು ಹೋದದ್ದು ಬೆಂಗಳೂರಿಗೆ. (5ಕ)ದಲ್ಲಿ ಒಂದು ಘಟನೆ ನಡೆದಿರುವುದನ್ನು ತಿಳಿಸಲಾಗಿದೆ, ಆದರೆ (5ಖ)ದಲ್ಲಿ ಬೆಂಗಳೂರು ಎಂಬ ಜಾಗಕ್ಕೂ ಮತ್ತು ಆ ಘಟನೆಗೂ ನಡುವಿರುವ ಸಂಬಂಧ ವನ್ನು ತಿಳಿಸಲಾಗಿದೆ ಇದಲ್ಲದೆ, ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದಾಗಿ ಸೂಚಿಸು ವವುಗಳು (5ಕ) ಮತ್ತು ಅದನ್ನು ‘ಅಲ್ಲಗಳೆ’ಯುವವುಗಳು (5ಗ) ಎಂಬು ದಾಗಿಯೂ ಮತ್ತು ಸಂಗತಿ ಇದೆ, ಇತ್ತು ಅಥವಾ ಇರುತ್ತದೆ ಎಂಬುದನ್ನು ಸೂಚಿಸುವವುಗಳು (5ಘ) ಮತ್ತು ಅದನ್ನು ಅಲ್ಲಗಳೆಯುವವುಗಳು (5ಙ) ಎಂಬುದಾಗಿಯೂ ಬೇರೆ ಎರಡು ರೀತಿಯವನ್ನೂ ಕಾಣಬಹುದು.
ರಾಜು ಬೆಂಗಳೂರಿಗೆ ಹೋಗಲಿಲ್ಲ. (5ಘ) ರಾಜು ಬೆಂಗಳೂರಿನಲ್ಲಿ ಇದ್ದಾನೆ. (5ಙ) ರಾಜು ಬೆಂಗಳೂರಿನಲ್ಲಿ ಇಲ್ಲ. (5ಕ)ದಲ್ಲಿ ತಿಳಿಸಿರುವ ಘಟನೆ ನಡೆದಿಲ್ಲವೆಂಬುದಾಗಿ (5ಗ)ದಲ್ಲಿ ಆ ಘಟನೆ ಯನ್ನು ಅಲ್ಲಗಳೆಯಲಾಗಿದೆ. (5ಘ)ದಲ್ಲಿ ಒಂದು ಸಂಗತಿಯನ್ನು ತಿಳಿಸಲಾಗಿದೆ ಮತ್ತು (5ಙ)ದಲ್ಲಿ ಅದನ್ನು ಅಲ್ಲಗಳೆಯಲಾಗಿದೆ. ಘಟನೆಯೊಂದಿಗೆ ಅದರ ಘಟಕಗಳಲ್ಲೊಂದನ್ನು ಸಂಬಂಧಿಸುವ ಮತ್ತು ಘಟನೆ, ಸಂಗತಿ ಇಲ್ಲವೇ ಸಂಬಂಧಗಳನ್ನು ಅಲ್ಲಗಳೆಯುವ ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ಒಂಬತ್ತನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಇತರ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಎಂತಹ ವಾಕ್ಯಗಳನ್ನು ಬಳಸಲಾಗುತ್ತದೆ ಎಂಬುದನ್ನು ಮತ್ತು ತಿಳಿಸುವ ವಾಕ್ಯಗಳಿಂದ ಅಂತಹ ವಾಕ್ಯ ಗಳನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಒಂಬತ್ತು ಅಧ್ಯಾಯಗಳಲ್ಲಿ (2-10) ಬರುವ ವಿಷಯಗಳು ಎಂತಹವು ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ಸ್ವಲ್ಪ ಚುಟುಕಾಗಿ ಸೂಚಿಸ
1.2 ಕ್ರಿಯಾವಾಕ್ಯಗಳು ಮತ್ತು ವಿಷಯವಾಕ್ಯಗಳು
ತಿಳಿಸುವ ವಾಕ್ಯಗಳಲ್ಲಿ ಯಾವುದಾದರೊಂದು ‘ಘಟನೆ’ಯನ್ನು (ಅದು ನಡೆದಿರು ವುದನ್ನು ಇಲ್ಲವೇ ನಡೆಯಲಿರುವುದನ್ನು) ತಿಳಿಸುವವು ಮತ್ತು ಒಂದು ಸಂಗತಿ ಯನ್ನು ತಿಳಿಸುವವು ಎಂಬುದಾಗಿ ಎರಡು ಮುಖ್ಯ ವಿಭಾಗಗಳನ್ನು ಮಾಡ ಬಹುದು. ಘಟನೆಯನ್ನು ತಿಳಿಸುವ ವಾಕ್ಯಗಳಲ್ಲೆಲ್ಲ ಆ ಘಟನೆಯನ್ನು ಸೂಚಿಸು ವುದಕ್ಕಾಗಿ ಯಾವುದಾದರೊಂದು ಕ್ರಿಯಾಪದ ಬಂದಿರುವ ಕಾರಣ ಅವನ್ನೆಲ್ಲ ‘ಕ್ರಿಯಾವಾಕ್ಯ’ಗಳೆಂದು ಕರೆಯಬಹುದು. ರಾಜು ಮರದಿಂದ ಕೆಳಗೆ ಹಾರಿದ. (6ಖ) ಒಬ್ಬ ಮುದುಕ ನಿಮ್ಮನ್ನು ಕಾಣಲು ಬಂದಿದ್ದ. (6ಗ) ದೊರೆಸ್ವಾಮಿಗಳು ನಾಳೆ ಬೆಂಗಳೂರಿಗೆ ಹೋಗುತ್ತಾರೆ. (6ಘ) ಶಾಮಣ್ಣೋರು ನಿಮ್ಮನ್ನು ಬಹಳ ಹೊಗಳಿದರು. ಮೇಲೆ (6ಕ-ಘ)ದಲ್ಲಿ ಬಂದಿರುವ ವಾಕ್ಯಗಳೆಲ್ಲ ಕ್ರಿಯಾವಾಕ್ಯಗಳು. ಅವು ಹಾರು, ಬರು, ಹೋಗು ಮತ್ತು ಹೊಗಳು ಎಂಬ ಕ್ರಿಯಾಪದಗಳ ಮೂಲಕ ಬೇರೆ ಬೇರೆ ಘಟನೆಗಳು ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ಸೂಚಿಸುತ್ತವೆ. ಸಂಗತಿಯನ್ನು ತಿಳಿಸುವ ವಾಕ್ಯಗಳಲ್ಲೂ ಸಾಮಾನ್ಯವಾಗಿ ಒಂದು ಕ್ರಿಯಾ ಪದ ಬಂದಿರುತ್ತದೆ. ಆದರೆ ಇದು ಇಂತಹ ಎಲ್ಲಾ ವಾಕ್ಯಗಳಲ್ಲೂ ಇರು ಎಂಬ ಒಂದೇ ಕ್ರಿಯಾಪದವಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಅದನ್ನು ಬಳಸದಿರಲೂ ಸಾಧ್ಯವಿದೆ. ಸಂಗತಿಯನ್ನು ತಿಳಿಸುವ ಈ ವಾಕ್ಯಗಳು ಘಟನೆಯನ್ನು ತಿಳಿಸುವ ವಾಕ್ಯಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿರುವ ಕಾರಣ, ಇವನ್ನು ಬೇರೊಂದು ಹೆಸರಿನಿಂದ ಕರೆಯುವ ಅವಶ್ಯಕತೆಯಿದೆ. ಈ ಪುಸ್ತಕದಲ್ಲಿ ಇವನ್ನು ‘ವಿಷಯವಾಕ್ಯ’ಗಳೆಂದು ಕರೆಯಲಾಗಿದೆ. ರಾಜುವಿನ ಕೈಯಲ್ಲಿ ಒಂದು ಹಣ್ಣಿದೆ. (7ಖ) ಅವರ ಮನೆ ಬಹಳ ದೊಡ್ಡದಿದೆ. (7ಘ) ಆ ಹುಡುಗ ಓದಿನಲ್ಲಿ ಸ್ವಲ್ಪ ಹಿಂದೆ ಇದ್ದಾನೆ. ಶಾಲೆಯ ಹುಡುಗರಿಗೆ ಇವತ್ತು ರಜೆ ಇದೆ. (7ಕ-ಘ)ದಲ್ಲಿ ಬಂದಿರುವ ವಾಕ್ಯಗಳೆಲ್ಲ ವಿಷಯವಾಕ್ಯಗಳು. ಇವು ಇರು ಕ್ರಿಯಾ ಪದದ ಮೂಲಕ ಬೇರೆ ಬೇರೆ ರೀತಿಯ ಸಂಗತಿಗಳ ಇರುವಿಕೆಯನ್ನು ಸೂಚಿಸು ತ್ತವೆ.
1.2.1 ಕ್ರಿಯಾಪದದ ಬಳಕೆ
ಮೇಲೆ ಸೂಚಿಸಿದ ಹಾಗೆ, ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳ ನಡುವೆ ಕೆಲವು ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕ್ರಿಯಾವಾಕ್ಯಗಳಲ್ಲಿ ಬೇರೆ ಬೇರೆ ಕ್ರಿಯಾಪದಗಳು ಕೇಂದ್ರಗಳಾಗಿ ಬರುತ್ತಿದ್ದು, ಅವು ವಾಕ್ಯವು ತಿಳಿಸಬೇಕಾ ಗಿರುವ ಘಟನೆಯನ್ನು ಸೂಚಿಸುವುವಾದ ಕಾರಣ, ಅವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯಿದೆ. ಆದರೆ, ವಿಷಯವಾಕ್ಯಗಳಲ್ಲೆಲ್ಲ ಇರು ಎಂಬ ಒಂದೇ ಕ್ರಿಯಾಪದ ಬರು ತ್ತಿದ್ದು, ಅದು ವಾಕ್ಯದ ಘಟಕಗಳು ಒಟ್ಟಾಗಿ ಸೂಚಿಸುವ ಒಂದು ಸಂಗತಿಯ ಇರುವಿಕೆಯನ್ನು ಮಾತ್ರ ತಿಳಿಸುವುದಾದ ಕಾರಣ ಅದಕ್ಕೆ ಅಂತಹ ಮಹತ್ವದ ಸ್ಥಾನವಿಲ್ಲ. ಹಾಗಾಗಿ, ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು ಬಳಸದಿರುವುದು ಕಷ್ಟ, ಆದರೆ ವಿಷಯವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು (ಇರು ಎಂಬು ದನ್ನು) ಬಳಸದಿರುವುದು ಸುಲಭ. ಸಾಮಾನ್ಯವಾಗಿ ಒಂದು ಸಂಗತಿಯ ಇರುವಿಕೆಯ ಕುರಿತಾಗಿ ಹೆಚ್ಚಿನದೇನನ್ನೂ ಹೇಳಬೇಕಾಗಿಲ್ಲವಾದಲ್ಲಿ ಈ ರೀತಿ ಅಂತಹ ವಿಷಯವಾಕ್ಯಗಳಲ್ಲಿ ಕ್ರಿಯಾಪದವನ್ನು ಬಳಸದಿರಲು ಸಾಧ್ಯವಿದೆ.
ಉದಾಹರಣೆಗಾಗಿ, ಒಂದು ಸಂಗತಿ ಇರುವುದು ಇಲ್ಲವೇ ಇದ್ದುದು ಯಾವಾಗ ಎಂಬುದಾಗಿ ಅದರ ಸಮಯವನ್ನು ಬೇರೆಯೇ ಒಂದು ಪದದ ಮೂಲಕ ಸೂಚಿಸಲಾಗಿದೆಯಾದರೆ (8ಕ-ಖ ನೋಡಿ), ಅಥವಾ ಹಾಗೆ ಸೂಚಿಸುವ ಅವಶ್ಯಕತೆಯಿಲ್ಲವಾದರೆ (8ಗ), ಅಂತಹ ಸಂದಭ್ರಗಳಲ್ಲಿ ವಿಷಯ ವಾಕ್ಯಗಳನ್ನು ಇರು ಕ್ರಿಯಾಪದವಿಲ್ಲದೆಯೂ ಬಳಸಲು ಸಾಧ್ಯವಿದೆ.
(8ಕ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ. (8ಖ) ಶಾಮರಾಯರ ಮನೆಯಲ್ಲಿ ನಾಳೆ ಮದುವೆ. (8ಗ) ರಾಜುವಿನ ಮನೆ ಬಹಳ ಚಿಕ್ಕದು.
(8ಕ) ಮತ್ತು (8ಖ) ವಾಕ್ಯಗಳು ಸಂಗತಿಗಳನ್ನು ತಿಳಿಸುತ್ತಿದ್ದು, ಆ ಸಂಗತಿಗಳ ಸಮಯವನ್ನು ಇವತ್ತು ಮತ್ತು ನಾಳೆ ಎಂಬ ಪದಗಳ ಮೂಲಕ ಸೂಚಿಸಲಾಗಿದೆ. ಹಾಗಾಗಿ, ಈ ವಾಕ್ಯಗಳಲ್ಲಿ ಇರು ಪದವನ್ನು ಬಳಸುವ ಅವಶ್ಯಕತೆಯಿಲ್ಲ. ಇದೇ ರೀತಿಯಲ್ಲಿ (8ಗ) ವಾಕ್ಯವು ಹಿಂದಿನ ಮತ್ತು ಮುಂದಿನ ಸಮಯಗಳೆರಡಕ್ಕೂ ಸಂಬಂಧಿಸಿರುವ ಸಂಗತಿಯೊಂದನ್ನು ತಿಳಿಸುತ್ತಿದೆಯಾದ ಕಾರಣ, ಅದರಲ್ಲೂ ಇರು ಪದವನ್ನು ಬಳಸುವ ಅವಶ್ಯಕತೆಯಿಲ್ಲ.
1.2.2 ಸಮಯ ಸೂಚನೆಯಲ್ಲಿ ವ್ಯತ್ಯಾಸ
ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳ ನಡುವೆ ಅವು ಸೂಚಿಸುವ ಸಮಯ ಭೇದದಲ್ಲೂ ವ್ಯತ್ಯಾಸವಿದೆ. ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದಗಳು ‘ಹಿಂದಿನವು’ ಮತ್ತು ‘ಮುಂದಿನವು’ ಎಂಬುದಾಗಿ ಅವು ತಿಳಿಸುವ ಘಟನೆಗಳ ಕುರಿತಾಗಿ ಎರಡು ರೀತಿಯ ಸಮಯಗಳನ್ನು ಮಾತ್ರ ಸೂಚಿಸಬಲ್ಲುವು. ಆದರೆ ಇದಕ್ಕೆ ಬದಲಾಗಿ, ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದ ‘ಹಿಂದಿನವು’, ‘ಈಗಿನವು’ ಮತ್ತು ‘ಮುಂದಿನವು’ ಎಂಬುದಾಗಿ ಅವು ತಿಳಿಸುವ ಸಂಗತಿಗಳ ಕುರಿತಾಗಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸಬಲ್ಲುವು.
ರಾಜು ಮರಕ್ಕೆ ಹತ್ತಿದ. (9ಖ) ರಾಜು ಮರಕ್ಕೆ ಹತ್ತುತ್ತಾನೆ. (10ಕ) ಆಕೆಗೆ ನಿಮ್ಮ ಮೇಲೆ ಬಹಳ ಕೋಪ ಇತ್ತು. (10ಖ) ಆಕೆಗೆ ನಿಮ್ಮ ಮೇಲೆ ಬಹಳ ಕೋಪ ಇದೆ. (10ಗ) ಆಕೆಗೆ ನಿಮ್ಮ ಮೇಲೆ (ನಾಳೆ ಭೇಟಿಗೆ ಹೋಗುವಾಗ) ಬಹಳ ಕೋಪ ಇರುತ್ತದೆ. ಕನ್ನಡದಲ್ಲಿ ಇರು ಕ್ರಿಯಾಪದಕ್ಕೆ ಇತ್ತು, ಇದೆ ಮತ್ತು ಇರುತ್ತದೆ ಎಂಬ ಮೂರು ಕ್ರಿಯಾರೂಪಗಳಿದ್ದು, ಅವನ್ನು ಬಳಸಿ ತಯಾರಿಸುವ ವಿಷಯವಾಕ್ಯಗಳು ಹಿಂದಿನ ಸಂಗತಿ, ಈಗಿನ ಸಂಗತಿ ಮತ್ತು ಮುಂದಿನ ಸಂಗತಿ ಎಂಬುದಾಗಿ ಮೂರು ಸಮಯಗಳಲ್ಲಿ ಕಾಣಿಸಿಕೊಳ್ಳುವ ಸಂಗತಿಗಳನ್ನು ಸೂಚಿಸಬಲ್ಲುವು ಎಂಬುದನ್ನು (10ಕ-ಗ) ವಾಕ್ಯಗಳಲ್ಲಿ ಕಾಣಬಹುದು.
ಆದರೆ ಕನ್ನಡದ ಇತರ ಕ್ರಿಯಾಪದಗಳಿಗೆ ಹಿಂದಿನ ಮತ್ತು ಮುಂದಿನ ಎಂಬ ಎರಡು ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆಯಾದ ಕಾರಣ, ಅವು ‘ಹಿಂದಿನ ಘಟನೆ’’ಮತ್ತು ‘ಮುಂದಿನ ಘಟನೆ’’ಎಂಬುದಾಗಿ ಎರಡು ಸಮಯಗಳಲ್ಲಿ ಕಾಣಿಸಿಕೊಳ್ಳುವ ಘಟನೆಗಳನ್ನು ಮಾತ್ರ ಸೂಚಿಸಬಲ್ಲುವು.
ಉದಾಹರಣೆಗಾಗಿ, ವಾಕ್ಯಗಳಲ್ಲಿ ಬಂದಿರುವ ಹತ್ತು ಕ್ರಿಯಾಪದಕ್ಕೆ ಹತ್ತಿದ ಮತ್ತು ಹತ್ತುತ್ತಾನೆ ಎಂಬ ಎರಡು ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆ. ಹಾಗಾಗಿ ಕ್ರಿಯಾವಾಕ್ಯಗಳಲ್ಲಿ ಮಾತಿನ ಸಮಯಕ್ಕಿಂತ ಮೊದಲು ನಡೆದ ಹತ್ತುವಿಕೆ ಮತ್ತು ಮಾತಿನ ಸಮಯದ ಅನಂತರ ನಡೆಯುವ ಹತ್ತುವಿಕೆ ಎಂಬುದಾಗಿ ಹತ್ತುವಿಕೆಯಲ್ಲಿ ಎರಡು ರೀತಿಯ ಸಮಯಭೇದವನ್ನು ಮಾತ್ರ ಈ ಕ್ರಿಯಾಪದದ ಮೂಲಕ ನೇರವಾಗಿ ಸೂಚಿಸಲು ಸಾಧ್ಯ.
ವಿಶಿಷ್ಟವಾಗಿ ಒಂದು ಘಟನೆ ಮಾತನಾಡುವ ಸಮಯದಲ್ಲೇನೇ ನಡೆಯು ತ್ತಿದೆ ಎಂಬುದಾಗಿ ಅದರ ಸಮಯವನ್ನು ಸೂಚಿಸಬೇಕಾದಾಗ, ಕನ್ನಡದಲ್ಲಿ ಕೆಳಗೆ (9ಗ)ದಲ್ಲಿ ಕಾಣಿಸಿರುವ ಹಾಗೆ ಕ್ರಿಯಾಪದವನ್ನು ಇರು ಎಂಬುದರ ಈಗಿನ ಸಮಯವನ್ನು ಸೂಚಿಸುವ ರೂಪದೊಂದಿಗೆ ಸೇರಿಸಿ ಬಳಸಬೇಕಾಗುತ್ತದೆ. (ಈ (9ಗ) ವಾಕ್ಯಕ್ಕೆ ರೂಢಿಯಲ್ಲಿರುವ ಘಟನೆಯನ್ನು ಸೂಚಿಸುವ ಇನ್ನೊಂದು ಅರ್ಥವೂ ಇದೆಯೆಂಬುದನ್ನು ಮುಂದೆ ನೋಡಲಿರುವೆವು). ರಾಜು ಮರಕ್ಕೆ ಹತ್ತುತ್ತಿದ್ದಾನೆ.
1.2.3 ಎರಡರ ನಡುವಿನ ಸಂಬಂಧ
ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳು ಈ ರೀತಿ ಒಂದರಿಂದೊಂದು ಭಿನ್ನ ವಾಗಿವೆಯಾದರೂ ಅವುಗಳ ನಡುವೆ ಹತ್ತಿರದ ಸಂಬಂಧವಿದೆ. ಸಾಮಾನ್ಯವಾಗಿ ಎರಡು ವಿಷಯವಾಕ್ಯಗಳು ತಿಳಿಸುವ ಸಂಗತಿಗಳನ್ನು ಒಂದು ಕ್ರಿಯಾವಾಕ್ಯ ಸಂಬಂಧಿಸಬಲ್ಲುದು.
(11ಕ) ರಾಜು ಮರದ ಕೆಳಗಿದ್ದಾನೆ. (11ಖ) ರಾಜು ಮರದ ಮೇಲಿದ್ದಾನೆ. (11ಗ) ರಾಜು ಮರಕ್ಕೆ ಹತ್ತಿದ. (11ಕ-ಖ)ಗಳು ವಿಷಯವಾಕ್ಯಗಳು. ಅವು ಎರಡು ಬೇರೆ ಬೇರೆ ಸಂಗತಿಗಳನ್ನು ತಿಳಿಸುತ್ತವೆ. ಆದರೆ, (11ಗ) ಒಂದು ಕ್ರಿಯಾವಾಕ್ಯ. ಅದು ಈ ಎರಡು ಸಂಗತಿಗಳನ್ನು ಸಂಬಂಧಿಸುತ್ತದೆ. ಅದು ತಿಳಿಸುವ ಘಟನೆಯಿಂದಾಗಿ (11ಕ) ತಿಳಿಸುವ ಸಂಗತಿ (11ಖ) ತಿಳಿಸುವ ಸಂಗತಿಯಾಗಿ ಬದಲಾಗಿದೆ ಎಂದು ಹೇಳಬಹುದು. ಈ ರೀತಿ ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳು ಒಂದಕ್ಕೊಂದು ಸಂಬಂಧಿಸಿವೆಯಾದರೂ ಅವುಗಳ ನಡುವೆ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಕ್ರಿಯಾವಾಕ್ಯಗಳ ಒಳರಚನೆಯನ್ನು ಎರಡನೆಯ ಅಧ್ಯಾಯದಲ್ಲೂ ಮತ್ತು ವಿಷಯವಾಕ್ಯಗಳ ಒಳರಚನೆಯನ್ನು ಮೂರನೆಯ ಅಧ್ಯಾಯದಲ್ಲೂ ವಿವರಿಸ ಲಾಗಿದೆ.
1.3 ವಾಕ್ಯದ ಘಟಕಗಳು
ಮೇಲೆ ವಿವರಿಸಿರುವ ಎರಡು ರೀತಿಯ ತಿಳಿಸುವ ವಾಕ್ಯಗಳಲ್ಲೂ ಕೇಂದ್ರಸ್ಥಾನ ದಲ್ಲಿ ಒಂದು ಕ್ರಿಯಾಪದ ಬರುತ್ತದೆ. ಕ್ರಿಯಾವಾಕ್ಯಗಳಲ್ಲಿ ಇದು ಆ ವಾಕ್ಯಗಳು ತಿಳಿಸುವ ಘಟನೆಯನ್ನು ಸೂಚಿಸುತ್ತದೆ ಮತ್ತು ವಿಷಯವಾಕ್ಯಗಳಲ್ಲಿ ಅವು ತಿಳಿಸುವ ಸಂಗತಿಯ ಇರುವಿಕೆಯನ್ನು ಸೂಚಿಸುತ್ತದೆ. ಈ ಕೇಂದ್ರದೊಂದಿಗೆ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಈ ವಾಕ್ಯಗಳಲ್ಲಿ ಕೆಲವು ‘ಘಟಕ’ ಗಳೂ ಬಂದಿರುತ್ತವೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸ ಬಹುದು. (12ಕ) ರಾಜು ಬೆಕ್ಕಿಗೆ ಹಾಲು ಕುಡಿಸಿದ. (12ಖ) ಈ ಪುಸ್ತಕಕ್ಕೆ ಕೆಂಪು ಬಣ್ಣದ ತಟ್ಟಿ ಇದೆ. (12ಕ)ದಲ್ಲಿ ಕೊಟ್ಟಿರುವ ಕ್ರಿಯಾವಾಕ್ಯದಲ್ಲಿ ಕುಡಿಸಿದ ಎಂಬ ಕ್ರಿಯಾಪದ ಮಾತ್ರವಲ್ಲದೆ ರಾಜು, ಬೆಕ್ಕಿಗೆ ಮತ್ತು ಹಾಲು ಎಂಬ ಮೂರು ಘಟಕಗಳು ಬಂದಿವೆ. ಈ ಘಟಕಗಳು ಕುಡಿಸುವ ಘಟನೆಗೆ ಸಂಬಂಧಿಸಿರುವ ಮೂರು ವ್ಯಕ್ತಿ, ಪ್ರಾಣಿ ಮತ್ತು ವಸ್ತುಗಳನ್ನು ಸೂಚಿಸುತ್ತಿವೆ.
ಇದೇ ರೀತಿಯಲ್ಲಿ (12ಖ)ದಲ್ಲಿ ಕೊಟ್ಟಿರುವ ವಿಷಯವಾಕ್ಯದಲ್ಲಿ ಇದೆ ಕ್ರಿಯಾಪದ ಮಾತ್ರವಲ್ಲದೆ, ಈ ಪುಸ್ತಕಕ್ಕೆ ಮತ್ತು ಕೆಂಪು ಬಣ್ಣದ ತಟ್ಟಿ ಎಂಬ ಎರಡು ಘಟಕಗಳು ಬಂದಿದ್ದು, ಅವು ಈ ವಾಕ್ಯ ತಿಳಿಸುವ ಸಂಗತಿಗೆ ಸಂಬಂಧಿಸಿರುವ ವಸ್ತು ಮತ್ತು ಅದರ ಗುಣಧರ್ಮಗಳನ್ನು ಸೂಚಿಸುತ್ತವೆ. ಒಂದು ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಘಟಕಗಳ ತಯಾರಿಕೆಯಲ್ಲಿ ಪದ ಮತ್ತು ಪದಕಂತೆ ಎಂಬುದಾಗಿ ಎರಡು ಮಟ್ಟಗಳಲ್ಲಿ ಬರುವ ವಾಕ್ಯಾಂಗಗಳು ಬಳಕೆ ಯಾಗುತ್ತವೆ. ಇವುಗಳಲ್ಲಿ ಮೊದಲನೆಯದು ವ್ಯಕ್ತಿ, ವಸ್ತು ಮೊದಲಾದುವನ್ನು ‘ಹೆಸರಿಸುವ’ ಮೂಲಕ ಗುರುತಿಸುತ್ತದೆ ಮತ್ತು ಎರಡನೆಯದು ಅವನ್ನೇ ‘ವರ್ಣಿಸುವ’ ಮೂಲಕ ಗುರುತಿಸುತ್ತದೆ. ಈ ಎರಡು ರೀತಿಯ ವಾಕ್ಯಾಂಗಗಳ ಬಳಕೆಯೆಂತಹದು ಎಂಬುದನ್ನು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.
1.3.1 ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು
ವಾಕ್ಯದ ಕ್ರಿಯಾಪದದೊಂದಿಗೆ ಬರುವ ಈ ಘಟಕಗಳು ಅದು ತಿಳಿಸುವ ಘಟನೆಗೆ ಬೇರೆ ಬೇರೆ ರೀತಿಯಲ್ಲಿ ಸಂಬಂಧಿಸಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾ ದವುಗಳನ್ನು ಸೂಚಿಸುತ್ತವೆ. ಇವನ್ನು ಮುಖ್ಯ ಘಟಕಗಳು ಮತ್ತು ಮುಖ್ಯವಲ್ಲದ ಘಟಕಗಳು ಎಂಬುದಾಗಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಸಾಮಾನ್ಯವಾಗಿ ಒಂದು ವಾಕ್ಯದ ಕೇಂದ್ರವಾಗಿರುವ ಕ್ರಿಯಾಪದದ ಸ್ವರೂಪ ಮತ್ತು ಗುಣಧರ್ಮಗಳನ್ನವಲಂಬಿಸಿ ಬರುವ ಘಟಕಗಳನ್ನು ಅದರ ಮುಖ್ಯ ಘಟಕಗಳೆಂದು ಕರೆಯಬಹುದು. ಉದಾಹರಣೆಗಾಗಿ, ಬೀಳು ಕ್ರಿಯಾಪದವಿರುವ ಒಂದು ವಾಕ್ಯದಲ್ಲಿ ಒಬ್ಬ ವ್ಯಕ್ತಿಯನ್ನು (ಇಲ್ಲವೇ ಒಂದು ವಸ್ತುವನ್ನು) ಸೂಚಿಸು ವಂತಹ ಒಂದೇ ಒಂದು ಮುಖ್ಯ ಘಟಕ ಮಾತ್ರ ಬರುತ್ತದೆ. ಯಾಕೆಂದರೆ, ಬೀಳುವ ಘಟನೆಗೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ಸಂಬಂಧಿ ಸಿರಲು ಸಾಧ್ಯ.
(13ಕ) ಸುರೇಶ ಬಿದ್ದ. (13ಖ) ಕೊಡ ಬಿತ್ತು. ಆದರೆ, ಬೀಳಿಸು ಕ್ರಿಯಾಪದವಿರುವ ವಾಕ್ಯದಲ್ಲಿ ಇಬ್ಬರು ವ್ಯಕ್ತಿಗಳನ್ನು (ಇಲ್ಲವೇ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವನ್ನು) ಸೂಚಿಸಬೇಕಾಗುವುದಾದ ಕಾರಣ, ಅದರೊಂದಿಗೆ ಎರಡು ಮುಖ್ಯ ಘಟಕಗಳನ್ನು ಬಳಸುವ ಅವಶ್ಯಕತೆ ಯಿದೆ. ಯಾಕೆಂದರೆ, ‘ಬೀಳಿಸುವ ಘಟನೆ’ಗೆ ‘ಬೀಳುವ ವ್ಯಕ್ತಿ (ಇಲ್ಲವೇ ವಸ್ತು)’ ಮಾತ್ರವಲ್ಲದೆ, ‘ಬೀಳಿಸುವಂತಹ ಇನ್ನೊಂದು ವ್ಯಕ್ತಿ’ಯೂ ಸಂಬಂಧಿಸಿರುತ್ತದೆ.
(14ಕ) ಜಾನಕಿ ಸುರೇಶನನ್ನು ಬೀಳಿಸಿದಳು. (14ಖ) ಜಾನಕಿ ಕೊಡವನ್ನು ಬೀಳಿಸಿದಳು. ಎರಡಕ್ಕಿಂತ ಜಾಸ್ತಿ ಮುಖ್ಯ ಘಟಕಗಳು ಬೇಕಾಗುವ ಕ್ರಿಯಾಪದಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಕೊಡು ಕ್ರಿಯಾಪದವಿರುವ ವಾಕ್ಯದಲ್ಲಿ ‘ಕೊಡುವ ವ್ಯಕ್ತಿ’, ‘ಕೊಡುವ ವಸ್ತು’ ಮತ್ತು ‘ಕೊಟ್ಟುದನ್ನು ಪಡೆಯುವ ವ್ಯಕ್ತಿ’ ಎಂಬುದಾಗಿ ಮೂರು ವ್ಯಕ್ತಿ ಮತ್ತು ವಸ್ತುಗಳನ್ನು ಸೂಚಿಸುವ ಘಟಕಗಳನ್ನು ಬಳಸಬೇಕಾಗುತ್ತದೆ. ಇದೇ ರೀತಿಯಲ್ಲಿ ತಿನ್ನಿಸು ಕ್ರಿಯಾಪದವಿರುವ ವಾಕ್ಯದಲ್ಲಿ ‘ತಿನ್ನಿಸಿದವರು ಯಾರು’, ‘ತಿನ್ನಿಸಿದ್ದು ಯಾರಿಗೆ’ ಮತ್ತು ‘ತಿನ್ನಿಸಿದ್ದು ಏನನ್ನು’ ಎಂಬ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲ ಮೂರು ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. (15ಕ) ರಂಗೇಗೌಡರು ಎತ್ತುಗಳನ್ನು ಕರೀಮನಿಗೆ ಕೊಟ್ಟರು. (15ಖ) ಸೀತಾಬಾಯಿ ಮಕ್ಕಳಿಗೆ ತಿಂಡಿ ತಿನ್ನಿಸಿದಳು. ಈ ರೀತಿ ವಾಕ್ಯವೊಂದರಲ್ಲಿ ಎಷ್ಟು ಮುಖ್ಯ ಘಟಕಗಳು ಬರುತ್ತವೆ ಎಂಬುದು ಮಾತ್ರವಲ್ಲ, ಎಂತಹ ಮುಖ್ಯ ಘಟಕಗಳು ಬರುತ್ತವೆ ಎಂಬುದೂ ವಾಕ್ಯದ ಕ್ರಿಯಾಪದ ಎಂತಹದು ಎಂಬುದನ್ನವಲಂಬಿಸಿದೆ. ಉದಾಹರಣೆಗಾಗಿ, ಹೋಗು ಕ್ರಿಯಾಪದವಿರುವ ವಾಕ್ಯದಲ್ಲಿ ‘ಹೋಗುವ ವ್ಯಕ್ತಿ’ ಮತ್ತು ‘ಹೋಗುವ ಜಾಗ’ ಎಂಬುದಾಗಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಜಾಗವನ್ನು ಸೂಚಿಸುವ ಘಟಕಗಳು ಬರಬೇಕಾಗುತ್ತದಾದರೆ, ಮರೆ ಕ್ರಿಯಾಪದವಿರುವ ವಾಕ್ಯದಲ್ಲಿ ‘ಮರೆತ ವ್ಯಕ್ತಿ’ ಮತ್ತು ‘ಮರೆತ ವಿಷಯ’ ಎಂಬುದಾಗಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ವಿಷಯವನ್ನು ಸೂಚಿಸುವ ಘಟಕಗಳು ಬರಬೇಕಾಗುತ್ತದೆ.
(16ಕ) ರಾಜು ಬೆಂಗಳೂರಿಗೆ ಹೋದ. (16ಖ) ರಾಜು ಆಕೆಯನ್ನು ಮರೆತಿದ್ದಾನೆ. ಕ್ರಿಯಾವಾಕ್ಯಗಳಲ್ಲಿ ಈ ರೀತಿ ಕ್ರಿಯಾಪದದ ಸ್ವರೂಪವನ್ನವಲಂಬಿಸಿ ಬರುವ ಮುಖ್ಯ ಘಟಕಗಳು ಮಾತ್ರವಲ್ಲದೆ ಬೇರೆ ಕೆಲವು ಮುಖ್ಯವಲ್ಲದ ಘಟಕಗಳೂ ಬರಬಲ್ಲುವು. ಇಂತಹ ಮುಖ್ಯವಲ್ಲದ ಘಟಕಗಳು ಎಲ್ಲಾ ವಾಕ್ಯಗಳಿಗೂ ಸಮಾನ ವಾಗಿದ್ದು, ಆ ವಾಕ್ಯಗಳು ತಿಳಿಸುವ ಘಟನೆಯ ಸಮಯ, ಜಾಗ, ಕಾರಣ, ಉದ್ದೇಶ, ಮೊದಲಾದುವನ್ನು ಸೂಚಿಸುತ್ತವೆ.
(17ಕ) ರಾಜು ಬೆಂಗಳೂರಿಗೆ ರೈಲಿನಲ್ಲಿ ಹೋದ. (17ಖ) ಆಕೆ ಬಿಸಿಲಿನಲ್ಲಿ ಹಪ್ಪಳ ಒಣಗಿಸಿದಳು. (17ಗ) ವತ್ಸಲಾ ಸೋಮವಾರ ಒಂದು ಸಿನೆಮಾ ನೋಡಿದ್ದಳು. (17ಘ) ಆತ ಮಣ್ಣಿನಲ್ಲಿ ಒಂದು ಗೊಂಬೆ ಮಾಡಿದ. (17ಙ) ರಾಜು ಹರಿಯೊಂದಿಗೆ ಪೇಟೆಗೆ ಹೋದ. ಮೇಲಿನ ವಾಕ್ಯಗಳಲ್ಲಿ ರೈಲಿನಲ್ಲಿ, ಬಿಸಿಲಿನಲ್ಲಿ, ಸೋಮವಾರ, ಮಣ್ಣಿನಲ್ಲಿ ಮತ್ತು ಹರಿಯೊಂದಿಗೆ ಎಂಬ ಮುಖ್ಯವಲ್ಲದ ಘಟಕಗಳು ಬಂದಿರುವುದನ್ನು ಗಮನಿಸಬಹುದು. ಇವು ಹೆಚ್ಚು ಕಡಿಮೆ ಎಲ್ಲಾ ರೀತಿಯ ವಾಕ್ಯಗಳಲ್ಲೂ ಬರಬಲ್ಲ ಜಾಗ, ಸಮಯ, ಜೊತೆಗಾರ ಮೊದಲಾದವುಗಳನ್ನು ಸೂಚಿಸುತ್ತವೆ. ಸಂಗತಿಯನ್ನು ಸೂಚಿಸುವ ವಿಷಯವಾಕ್ಯಗಳಲ್ಲೂ ಇದೇ ರೀತಿಯಲ್ಲಿ ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು ಬರಬಲ್ಲುವು. ವಿಷಯವಾಕ್ಯ ಗಳಲ್ಲೆಲ್ಲ ಇರು ಎಂಬ ಒಂದೇ ಕ್ರಿಯಾಪದ ಬರುವುದಾದ ಕಾರಣ, ಅವುಗಳ ಲ್ಲೆಲ್ಲ ಎರಡೆರಡು ಮುಖ್ಯ ಘಟಕಗಳು ಬರುತ್ತವೆ. ಆದರೆ ಅವು ಸೂಚಿಸುವ ಸಂಗತಿಯ ಸ್ವರೂಪವನ್ನಾಧರಿಸಿ, ಈ ಘಟಕಗಳು ಬೇರೆ ಬೇರೆ ರೂಪದಲ್ಲಿ ಬರುತ್ತಿದ್ದು, ವಸ್ತು, ಜಾಗ, ಗುಣಧರ್ಮ ಮೊದಲಾದುವನ್ನು ಸೂಚಿಸುತ್ತವೆ. (18ಕ) ಇವತ್ತು ಬೆಳಿಗ್ಗೆ ಆ ಟಾಂಕಿಯಲ್ಲಿ ಒಂದು ಹೆಣ ಇತ್ತು. (18ಖ) ನಾರಾಯಣಸ್ವಾಮಿಯ ತಲೆ ನುಣ್ಣಗಿದೆ. (18ಗ) ಈ ಮುದುಕನಿಗೆ ನೂರು ಮುಡಿ ಗದ್ದೆಯಿದೆ. (18ಕ) ವಾಕ್ಯದಲ್ಲಿ ಆ ಟಾಂಕಿಯಲ್ಲಿ ಎಂಬುದು ಒಂದು ಜಾಗವನ್ನೂ ಮತ್ತು ಒಂದು ಹೆಣ ಎಂಬುದು ಒಂದು ವಸ್ತುವನ್ನೂ ಸೂಚಿಸುವುದಕ್ಕಾಗಿ ಬಂದಿರುವ ಎರಡು ಮುಖ್ಯ ಘಟಕಗಳು. ಇವು ಒಟ್ಟಾಗಿ ಯಾವ ಜಾಗದಲ್ಲಿ ಯಾವ ವಸ್ತು ವಿದೆ ಎಂಬ ಸಂಗತಿಯನ್ನು ತಿಳಿಸುತ್ತವೆ. ಈ ವಾಕ್ಯದಲ್ಲಿ ಈ ಎರಡು ಮುಖ್ಯ ಘಟಕಗಳು ಮಾತ್ರವಲ್ಲದೆ ಸಂಗತಿಯ ಸಮಯವನ್ನು ಸೂಚಿಸುವ ಇವತ್ತು ಬೆಳಿಗ್ಗೆ ಎಂಬ ಒಂದು ಮುಖ್ಯವಲ್ಲದ ಘಟಕವೂ ಇದೆ. ಇದು ಇತ್ತು ಕ್ರಿಯಾಪದ ಕುರಿತಾಗಿ ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ. ಈ ರೀತಿ (18ಕ) ವಾಕ್ಯ ಒಂದು ಜಾಗದಲ್ಲಿ ವಸ್ತುವೊಂದರ ಇರುವಿಕೆ ಯನ್ನು ಸೂಚಿಸುವುದಾದರೆ, (18ಖ) ವಾಕ್ಯ ಒಂದು ವಸ್ತುವಿನ (ನಾರಾಯಣ ಸ್ವಾಮಿಯ ತಲೆಯ) ಗುಣಧರ್ಮವೊಂದನ್ನು (ನುಣ್ಣಗೆ ಎಂಬುದಾಗಿ) ತಿಳಿಸು ತ್ತದೆ, ಮತ್ತು (18ಗ) ವಾಕ್ಯ ಒಬ್ಬ ವ್ಯಕ್ತಿಗೂ (ಈ ಮುದುಕನಿಗೂ) ಮತ್ತು ಒಂದು ವಸ್ತುವಿಗೂ (ನೂರು ಮುಡಿ ಗದ್ದೆಗೂ) ನಡುವೆ ಒಂದು ಸಂಬಂಧ ಇದೆ ಎಂಬುದನ್ನು ತಿಳಿಸುತ್ತದೆ.
ಸೂಚಿಸುವ ಸಮಯದ ಈ ಮೂರು ರೀತಿಯ ವಾಕ್ಯಗಳಲ್ಲಿ ಬರುವ ಮುಖ್ಯ ಘಟಕಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ಸೂಚಿಸುವ ಸಂಗತಿಗಳ ನಡುವಿರುವ ವ್ಯತ್ಯಾಸ ಗಳೇ ಕಾರಣ.
1.3.2 ವಿಭಕ್ತಿ ಪ್ರತ್ಯಯಗಳ ಬಳಕೆ
ವಾಕ್ಯವೊಂದರಲ್ಲಿ ಒಂದಕ್ಕಿಂತ ಜಾಸ್ತಿ ಘಟಕಗಳು ಬಂದಾಗ ಅವು ಯಾವ ರೀತಿಯಲ್ಲಿ ಕ್ರಿಯಾಪದದೊಂದಿಗೆ (ಎಂದರೆ ಕ್ರಿಯಾಪದ ಸೂಚಿಸುವ ಘಟನೆಯಲ್ಲಿ ಅವು ಹೇಗೆ ತೊಡಗಿಕೊಂಡಿವೆ) ಎಂಬುದನ್ನು ತಿಳಿಸು ವುದಕ್ಕಾಗಿ ಅವುಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಇಲ್ಲವೇ ಇತರ ಪದಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು. ಸಂಬಂಧಿಸಿವೆ (19ಕ) ರಾಜು ಹರಿಯನ್ನು ದೂಡಿದ. (19ಖ) ರಾಜುವನ್ನು ಹರಿ ದೂಡಿದ. (19ಕ-ಖ)ವಾಕ್ಯಗಳಲ್ಲಿ ದೂಡು ಕ್ರಿಯಾಪದದೊಂದಿಗೆ ಎರಡು ಬೇರೆ ಬೇರೆ ವ್ಯಕ್ತಿಗಳನ್ನು ಸೂಚಿಸುವ ರಾಜು ಮತ್ತು ಹರಿ ಎಂಬ ಘಟಕಗಳು ಬಂದಿವೆ. ಇವುಗಳಲ್ಲಿ ಒಂದನ್ನು (ಎಂದರೆ ದೂಡುವ ವ್ಯಕ್ತಿಯನ್ನು ಸೂಚಿಸುವ ಘಟಕ ವನ್ನು) ಯಾವ ವಿಭಕ್ತಿ ಪ್ರತ್ಯಯವೂ ಇಲ್ಲದೆ ಹಾಗೆಯೇ ಬಳಸಲಾಗಿದೆ ಮತ್ತು ಇನ್ನೊಂದನ್ನು (ಎಂದರೆ ದೂಡಲ್ಪಡುವ ವ್ಯಕ್ತಿಯನ್ನು ಸೂಚಿಸುವ ಘಟಕವನ್ನು) ಅನ್ನು ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬಳಸಲಾಗಿದೆ.
ದೂಡುವ ವ್ಯಕ್ತಿ (19ಕ)ದಲ್ಲಿ ರಾಜು ಘಟಕ ಮತ್ತು (19ಕ)ದಲ್ಲಿ ಹರಿ ಘಟಕ; ಹಾಗಾಗಿ ಇವೆರಡೂ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿವೆ. ದೂಡಲ್ಪಡುವ ವ್ಯಕ್ತಿ (19ಕ)ದಲ್ಲಿ ಹರಿ ಘಟಕ ಮತ್ತು (19ಖ)ದಲ್ಲಿ ರಾಜು ಘಟಕ; ಹಾಗಾಗಿ ಇವೆರಡೂ ಅನ್ನು ಪ್ರತ್ಯಯದೊಂದಿಗೆ ಬಂದಿವೆ. ಈ ರೀತಿ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧ
ಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು ವಿಭಕ್ತಿ
ಪ್ರತ್ಯಯಗಳು ಬಳಕೆಯಾಗುತ್ತವೆ. ಬಾಧಿತ: ಅನ್ನು (ಘಟನೆಯಿಂದ ಬಾಧಿತವಾಗುವ ವ್ಯಕ್ತಿ ಇಲ್ಲವೇ ವಸ್ತು). ಸುರು: ಇಂದ (ಘಟನೆ ಸುರುವಾಗುವ ಜಾಗ). ಕೊನೆ: ಗೆ (ಘಟನೆ ಕೊನೆಗೊಳ್ಳುವ ಜಾಗ). ಜಾಗ: ಅಲ್ಲಿ (ಘಟನೆಯ ಜಾಗ). ಈ ನಾಲ್ಕು ವಿಭಕ್ತಿ ಪ್ರತ್ಯಯಗಳ ಮುಖ್ಯ ಬಳಕೆಗಳನ್ನು ಕೆಳಗಿನ ವಾಕ್ಯ ಗಳಲ್ಲಿ ಕಾಣಬಹುದು. (20ಕ) ಅವರು ಆ ಹುಡುಗನನ್ನು ದೂಡಿದರು. (20ಖ) ಅವರು ಮನೆಯಿಂದ ಹೊರಟಿದ್ದಾರೆ. (20ಗ) ಅವರು ಮನೆಗೆ ತಲಪಿದ್ದಾರೆ. (20ಘ) ಅವರು ಅಂಗಳದಲ್ಲಿ ಹಾಡುತ್ತಿದ್ದಾರೆ. ಈ ನಾಲ್ಕು ಮುಖ್ಯ ಬಳಕೆಗಳು ಮಾತ್ರವಲ್ಲದೆ ಬೇರೆಯೂ ಹಲವು ಬಳಕೆಗಳು ಈ ಪ್ರತ್ಯಯಗಳಿಗಿದ್ದು ಅವು ಸಂದಭ್ರಕ್ಕನುಸಾರವಾಗಿ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಸೂಚಿಸಬಲ್ಲುವು ಎಂಬುದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (21ಕ) ಮನೋಹರನಿಗೆ ಆರು ಮಂದಿ ಹುಡುಗಿಯರಿದ್ದಾರೆ. (21ಖ) ರಂಗಣ್ಣ ಕೊಡಲಿಯಿಂದ ಮರದ ಗೆಲ್ಲುಗಳನ್ನು ಕಡಿದ. (21ಕ)ದಲ್ಲಿ ಗೆ ಪ್ರತ್ಯಯ ಮನೋಹರನಿಗೂ ಮತ್ತು ಆರು ಮಂದಿ ಹುಡುಗಿ ಯರಿಗೂ ನಡುವಿರುವ ಸಂಬಂಧವನ್ನು ಸೂಚಿಸುವುದಕ್ಕಾಗಿ ಬಳಕೆಯಾಗಿದೆ ಮತ್ತು (21ಖ)ದಲ್ಲಿ ಇಂದ ಪ್ರತ್ಯಯ ಕಡಿಯುವ ಘಟನೆಯಲ್ಲಿ ತೊಡಗಿಸ ಲಾಗಿರುವ ಸಾಧನವೊಂದನ್ನು ಸೂಚಿಸಲು ಬಳಕೆಯಾಗಿದೆ. ಇಂತಹ ಹೆಚ್ಚಿನ ಬಳಕೆಗಳನ್ನೆಲ್ಲ ಮೇಲೆ ಸೂಚಿಸಿರುವ ಮುಖ್ಯ ಬಳಕೆಗಳಿಂದ ಸಾಧಿಸಲು ಸಾಧ್ಯವಿದೆ ಎಂಬುದನ್ನು ಎರಡನೇ ಅಧ್ಯಾಯದಲ್ಲಿ ನೋಡಲಿರುವೆವು.
1.3.3 ಎರಡು ರೀತಿಯ ಸಂಬಂಧಗಳು
ವಾಕ್ಯದ ಮುಖ್ಯ ಕ್ರಿಯಾಪದಕ್ಕೂ ಮತ್ತು ಅದರ ಘಟಕಗಳಿಗೂ ನಡುವಿರುವ ಸಂಬಂಧವನ್ನು ಮೇಲೆ ಸೂಚಿಸಿದ ಹಾಗೆ ವಿಭಕ್ತಿ ಪ್ರತ್ಯಯಗಳ ಮೂಲಕ ತಿಳಿಸಲಾಗುತ್ತದೆ. ಇಂತಹ ಸಂಬಂಧಗಳು ವಾಕ್ಯದ ಅರ್ಥಕ್ಕೆ ಸಂಬಂಧಿಸಿವೆಯಾದ ಕಾರಣ, ಅವನ್ನು ‘ಅರ್ಥ’ ಸಂಬಂಧಗಳೆಂದು ಕರೆಯಬಹುದು. ಇಂತಹ ಸಂಬಂಧಗಳು ಮಾತ್ರವಲ್ಲದೆ, ವಾಕ್ಯದ ಘಟಕಗಳಿಗೂ ಮತ್ತು ಮಾತಿನ ಸನ್ನಿವೇಶಕ್ಕೂ ನಡುವೆ ಕಾಣಿಸುವಂತಹ ಬೇರೆ ಕೆಲವು ಸಂಬಂಧಗಳೂ ಇವೆ. ಉದಾಹರಣೆಗಾಗಿ, ಒಂದು ವಾಕ್ಯದ ಮೂಲಕ ಕೇಳುಗನಿಗೆ ತಿಳಿದಿರುವಂತಹ ಒಂದು ವಿಷಯದ ಕುರಿತಾಗಿ ಆಡುಗ ಏನಾದರೊಂದು ಸುದ್ದಿಯನ್ನು ತಿಳಿಸುತ್ತಿರ ಬಹುದು. ಕನ್ನಡದಲ್ಲಿ ತಿಳಿದಿರುವ ಅಂಶವನ್ನು ವಾಕ್ಯದಲ್ಲಿ ಮೊದಲು ಸೂಚಿಸ ಲಾಗುತ್ತದೆ, ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಯನ್ನು ಅನಂತರ ಸೂಚಿಸಲಾಗು (22ಕ) ರಾಜುವನ್ನು ಸುರೇಶ ಕರೆದಿದ್ದಾನೆ. (22ಖ) ಸುರೇಶ ರಾಜುವನ್ನು ಕರೆದಿದ್ದಾನೆ. (22ಕ)ದಲ್ಲಿ ರಾಜು ಘಟಕ ಮೊದಲು ಬಂದಿದೆ, ಮತ್ತು (22ಖ)ದಲ್ಲಿ ಸುರೇಶ ಘಟಕ ಮೊದಲು ಬಂದಿದೆ. ಈ ಕಾರಣಕ್ಕಾಗಿ (22ಕ)ದಲ್ಲಿ ಒಂದು ಸುದ್ದಿಯನ್ನು ರಾಜುವಿನ ಕುರಿತಾಗಿ ತಿಳಿಸಲಾಗಿದೆ ಮತ್ತು (22ಖ)ದಲ್ಲಿ ಸುರೇಶನ ಕುರಿತಾಗಿ ತಿಳಿಸಲಾಗಿದೆ. ಇಂತಹ ಸುದ್ದಿಗಳಲ್ಲೂ ಯಾವುದಾದರೂ ಒಂದು ಅಂಶ ಉಳಿದುವಕ್ಕಿಂತ ಪ್ರಾಮುಖ್ಯವಾಗಿರಲು ಸಾಧ್ಯವಿದೆ. ಕನ್ನಡದಲ್ಲಿ ಸಾಮಾನ್ಯವಾಗಿ ಕ್ರಿಯಾಪದದ ಎಡಕ್ಕೆ ಬರುವ ಅಂಶ ಉಳಿದ ಅಂಶಗಳಿಗಿಂತ ಮುಖ್ಯವಾದುದಾಗಿರುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ನಿಮ್ಮ ಪುಸ್ತಕ ಎಂಬುದು (23ಕ)ದಲ್ಲೂ ಮತ್ತು ನನಗೆ ಎಂಬುದು (23ಖ)ದಲ್ಲೂ ಮುಖ್ಯ ಅಂಶಗಳಾಗಿ ಬಂದಿವೆ. (23ಕ) ಅವಳು ನನಗೆ ನಿಮ್ಮ ಪುಸ್ತಕ ಕೊಟ್ಟಿದ್ದಾಳೆ. (23ಖ) ಅವಳು ನಿಮ್ಮ ಪುಸ್ತಕವನ್ನು ನನಗೆ ಕೊಟ್ಟಿದ್ದಾಳೆ. ವಾಕ್ಯದ ಘಟಕಗಳಿಗೂ ಮತ್ತು ಮಾತಿನ ಸನ್ನಿವೇಶಕ್ಕೂ ನಡುವೆ ಕಾಣಿಸುವ ಇಂತಹ ಸಂಬಂಧಗಳನ್ನು ‘ವ್ಯವಹಾರ’ ಸಂಬಂಧಗಳೆಂದು ಕರೆಯಬಹುದು. ಇವು ಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಎರಡನೆಯ ಅಧ್ಯಾಯದ (2.7)ನೇ ವಿಭಾಗದಲ್ಲಿ ಕಾಣಬಹುದು.
1.4 ಗುಣಪದಗಳ ಬಳಕೆ
ಮೇಲೆ ವಿವರಿಸಿದ ಹಾಗೆ, ವಾಕ್ಯವೊಂದರಲ್ಲಿ ಅದರ ಮುಖ್ಯ ಅಂಗವಾಗಿ ಒಂದು ಕ್ರಿಯಾಪದವನ್ನೂ ಮತ್ತು ಆ ಕ್ರಿಯಾಪದ ಸೂಚಿಸುವ ಘಟನೆ ಇಲ್ಲವೇ ಸಂಗತಿ ಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಬೇರೆ ಬೇರೆ ರೀತಿಯ ಘಟಕಗಳನ್ನೂ ಬಳಸುವುದು ಮಾತ್ರವಲ್ಲದೆ, ಘಟನೆಯ ಗುಣ ಧರ್ಮಗಳನ್ನು ಸೂಚಿಸುವುದಕ್ಕಾಗಿ ಕೆಲವು ಗುಣಪದಗಳನ್ನೂ ಬಳಸಲು ಸಾಧ್ಯ (24ಕ) ಅವರು ಕಳ್ಳನಿಗೆ ಚನ್ನಾಗಿ ಹೊಡೆದರು. (24ಖ) ಆ ಹುಡುಗ ಬೆಂಚಿನ ಮೇಲೆ ನೆಟ್ಟಗೆ ನಿಂತಿದ್ದಾನೆ. (24ಗ) ಒಲೆಯಲ್ಲಿ ನೀರು ಕತಕತನೆ ಕುದಿಯುತ್ತಿತ್ತು. (24ಘ) ಅವನು ಗಡಗಡ ನಡುಗಿದ. (24ಕ)ದಲ್ಲಿ ಚನ್ನಾಗಿ ಗುಣಪದ ಹೊಡೆದುದು ಹೇಗೆ ಎಂಬುದನ್ನು ತಿಳಿಸುತ್ತದೆ, ಮತ್ತು (24ಗ)ದಲ್ಲಿ ಕತಕತನೆ ಗುಣಪದ ಕುದಿಯುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಘಟನೆಯ ಜಾಗ ಮತ್ತು ಸಮಯಗಳನ್ನು ಸೂಚಿಸುವುದಕ್ಕಾಗಿ ಘಟಕಗಳನ್ನು ಬಳಸುವ ಬದಲು ಗುಣಪದಗಳನ್ನು ಬಳಸಲೂ ಸಾಧ್ಯವಿದೆ. (25ಕ) ಅವನು ನಾಳೆ ಬೆಂಗಳೂರಿಗೆ ಹೋಗುತ್ತಾನೆ. (25ಖ) ಅವನನ್ನು ಅಲ್ಲಿ ಯಾರೂ ಮಾತನಾಡಿಸಲಿಲ್ಲ. (25ಕ)ದಲ್ಲಿ ನಾಳೆ ಗುಣಪದ ಹೋಗುವ ಘಟನೆಯ ಸಮಯವನ್ನೂ ಮತ್ತು (25ಖ)ದಲ್ಲಿ ಅಲ್ಲಿ ಗುಣಪದ (ಪ್ರತಿನಾಮ) ಮಾತನಾಡಿಸದಿದ್ದ ಜಾಗವನ್ನೂ ಸೂಚಿಸುತ್ತವೆ. ವಾಕ್ಯದಲ್ಲಿ ಕ್ರಿಯಾಪದದೊಂದಿಗೆ ಬರುವ ಘಟಕಗಳು ಮತ್ತು ಗುಣಪದಗಳು
- ಇವೆರಡೂ ಹೆಚ್ಚು ಕಡಿಮೆ ಒಂದೇ ರೀತಿಯ ಕೆಲಸಗಳನ್ನು ನಡೆಸಬೇಕಾಗಿದೆ. ಹಾಗಾಗಿ, ಅವುಗಳ ನಡುವಿನ ವ್ಯತ್ಯಾಸ ಅಷ್ಟೊಂದು ಕಟ್ಟುನಿಟ್ಟಿನದೇನಲ್ಲ. ಘಟನೆಯ ಕುರಿತಾಗಿ ಕ್ರಿಯಾಪದ ತಿಳಿಸದಿರುವ ಕೆಲವು ಸಂಗತಿಗಳನ್ನು, ಇಲ್ಲವೇ ಘಟನೆಯ ಗುಣಧರ್ಮಗಳನ್ನು ಅವು ತಿಳಿಸುತ್ತವೆ. ಇದಲ್ಲದೆ ವಾಕ್ಯದ ಕೊನೆ ಯಲ್ಲಿ ಬರುವ ಕ್ರಿಯಾರೂಪದಲ್ಲಿ ಕೆಲವು ಪ್ರತ್ಯಯಗಳ ಮೂಲಕ ಚುಟುಕಾಗಿ ತಿಳಿಸಿರುವ ಸಂಗತಿಗಳ ಕುರಿತಾಗಿಯೂ ಇವು ಹೆಚ್ಚಿನ ವಿವರಗಳನ್ನು ಒದಗಿಸು ತ್ತವೆ (ಗುಣಪದಗಳ ಕುರಿತು ಹೆಚ್ಚಿನ ವಿವರಗಳಿಗೆ ಆರನೆಯ ಅಧ್ಯಾಯವನ್ನು ನೋಡಬಹುದು).
1.5 ಒಳವಾಕ್ಯಗಳ ಬಳಕೆ
ಘಟಕಗಳ ತಯಾರಿಕೆಯಲ್ಲಿ ಪದಗಳನ್ನು ಮಾತ್ರವಲ್ಲದೆ ಇಡೀ ವಾಕ್ಯಗಳನ್ನೇ ಬಳಸಲೂ ಸಾಧ್ಯವಿದೆ. ಇವು ನೇರವಾಗಿ ಒಂದು ಘಟಕದ ಜಾಗದಲ್ಲಿ ಬರ ಬಹುದು ಇಲ್ಲವೇ ಒಂದು ಘಟಕದ ಅಂಗವಾಗಿ ಬರಬಹುದು. ಈ ರೀತಿಯಾಗಿ ಬೇರೊಂದು ವಾಕ್ಯದ ಅಂಗವಾಗಿ ಬರುವ ವಾಕ್ಯಗಳನ್ನು ‘ಒಳವಾಕ್ಯ’ಗಳೆಂದು ಕರೆಯಬಹುದು. (26ಕ) ಅವನು ಎಲ್ಲಿಗೆ ಹೋಗಿದ್ದಾನೋ ಗೊತ್ತಿಲ್ಲ. (26ಖ) ರಾಜು ಇರುವ ಊರಿನಲ್ಲಿ ಈಗ ಭಾರೀ ಮಳೆ. (26ಕ)ದಲ್ಲಿ ಅವನು ಎಲ್ಲಿಗೆ ಹೋಗಿದ್ದಾನೆ ಎಂಬ ವಾಕ್ಯ ಒಳವಾಕ್ಯವಾಗಿ ಬಂದಿದೆ ಮತ್ತು ಇದಕ್ಕಾಗಿ ಅದಕ್ಕೆ ಓ ಪ್ರತ್ಯಯವನ್ನು ಸೇರಿಸಲಾಗಿದೆ. ಇದಕ್ಕೆ ಬದಲು (26ಖ)ದಲ್ಲಿ ರಾಜು (ಒಂದು ಊರಿನಲ್ಲಿ) ಇದ್ದಾನೆ ಎಂಬ ವಾಕ್ಯ ಒಂದು ಘಟಕದ ಅಂಗವಾಗಿ ಬಂದಿದೆ ಮತ್ತು ಇದಕ್ಕಾಗಿ ಅದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಒಂದು ಊರಿನಲ್ಲಿ ಎಂಬ ಘಟಕವನ್ನು (ಅದು ಹೊರವಾಕ್ಯದಲ್ಲೂ ಬರುವ ಕಾರಣ) ತೆಗೆದು ಹಾಕಲಾಗಿದೆ. ಒಂದು ವಾಕ್ಯವನ್ನು ಬೇರೊಂದು ವಾಕ್ಯದ ಘಟಕವನ್ನಾಗಿ ಇಲ್ಲವೇ ಘಟಕದ ಅಂಗವನ್ನಾಗಿ ಮಾಡಲು ಎಂತಹ ವಿಧಾನಗಳನ್ನೆಲ್ಲ ಬಳಸಬಹುದು ಎಂಬುದನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಮತ್ತು ಷರತ್ತು ಎಂಬುದಾಗಿ
1.6 ವಾಕ್ಯಗಳ ಜೋಡಣೆ
ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡುವ ಬದಲು ಎರಡು ವಾಕ್ಯಗಳನ್ನು ಜೋಡಿಸಿ ಹೇಳಲೂ ಸಾಧ್ಯವಿದೆ. ಹೀಗೆ ಜೋಡಿಸಿ ಹೇಳಬೇಕಾದಲ್ಲಿ ಅವು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಯಾವು ದಾದರೂ ಒಂದು ರೀತಿಯ ಸಂಬಂಧವಿರುವುದು ಅವಶ್ಯ. ಮುಖ್ಯವಾಗಿ ಕೂಡಿಕೆ, ಬದಲಿ ಮೂರು ರೀತಿಯ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಈ ರೀತಿ ವಾಕ್ಯಗಳೆರಡನ್ನು ಜೋಡಿಸಿ ಹೇಳಲಾಗುತ್ತದೆ. ಕೂಡಿಕೆಯ ಸಂಬಂಧದಲ್ಲಿ ವಾಕ್ಯಗಳೆರಡು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳನ್ನು ಸೇರಿಸಿ ಹೇಳಲಾಗುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಮತ್ತು ಪದವನ್ನು ಬಳಸಬಹುದು ಇಲ್ಲವೇ ಎರಡರ ಕೊನೆ ಯಲ್ಲೂ ಊ ಪ್ರತ್ಯಯವನ್ನು ಬಳಸಬಹುದು. ಇದಲ್ಲದೆ, ಮೊದಲನೆಯ ವಾಕ್ಯದ ಕೊನೆಯಲ್ಲಿ ಜೋಡಿಸುವ ಕ್ರಿಯಾರೂಪವನ್ನು ಬಳಸುವುದೆಂಬ ಮೂರನೆಯ ವಿಧಾನವೂ ಕನ್ನಡದಲ್ಲಿ ಬಳಕೆಯಲ್ಲಿದೆ. (27ಕ) ರಾಜು ಮನೆಗೆ ಹೋದ ಮತ್ತು ಸ್ನಾನ ಮಾಡಿದ. (27ಖ) ರಾಜು ಮನೆಗೂ ಹೋದ, ಸ್ನಾನವನ್ನೂ ಮಾಡಿದ. (27ಗ) ರಾಜು ಮನೆಗೆ ಹೋಗಿ ಸ್ನಾನ ಮಾಡಿದ. (27ಕ)ದಲ್ಲಿ ಮತ್ತು ಪದದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಲಾಗಿದೆ ಮತ್ತು (27ಖ)ದಲ್ಲಿ ಎರಡು ವಾಕ್ಯಗಳಲ್ಲೂ ಊ ಪ್ರತ್ಯಯವನ್ನು ಬಳಸುವುದರ ಮೂಲಕ ಅವನ್ನು ಜೋಡಿಸಲಾಗಿದೆ. (27ಗ)ದಲ್ಲಿ ಮೊದಲನೆಯ ವಾಕ್ಯವನ್ನು ಅದರ ಕ್ರಿಯಾಪದದ ಹೋಗಿ ಎಂಬ ಜೋಡಿಸುವ ರೂಪದ ಮೂಲಕ ಎರಡನೆ ಯದರೊಂದಿಗೆ ಜೋಡಿಸಲಾಗಿದೆ. ಬದಲಿ ಸಂಬಂಧದ ಮೂಲಕ ಜೋಡಿಸಿರುವ ವಾಕ್ಯಗಳಲ್ಲಿ ಅವೆರಡು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳಲ್ಲಿ ಒಂದು ಮಾತ್ರ ಸ್ವೀಕೃತವಾಗ ಬೇಕೆಂದಿರುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಇಲ್ಲವೇ ಎಂಬ ಪದವನ್ನು ಬಳಸುವ ಕ್ರಮ ಕನ್ನಡದಲ್ಲಿದೆ. ಸಂಸ್ಕೃತದಿಂದ ಎರವಲಾಗಿ ಬಂದ ಅಥವಾ ಎಂಬ ಪದವೂ ಇಂತಹ ಜೋಡಣೆಯಲ್ಲಿ ಬಳಕೆಯಲ್ಲಿದೆ. ಮನೆಗೆ ಹೋಗಿದ್ದಾನೆ, ಇಲ್ಲವೇ ಅಲ್ಲೆಲ್ಲೋ ಅಡಗಿದ್ದಾನೆ. (28ಖ) ಅವರಿಗೊಂದು ಕುಚ್ರಿ ಕೊಡಿ ಅಥವಾ ಇಲ್ಲಿಗೆ ಬರಹೇಳಿ. ಷರತ್ತಿನ ಸಂಬಂಧದಲ್ಲಿ ಒಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಇನ್ನೊಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿಗೆ ಷರತ್ತು ಎಂಬುದಾಗಿ ತಿಳಿಸಲಾಗುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಒಂದು ವಿಶಿಷ್ಟವಾದ ಕ್ರಿಯಾರೂಪದ ಬಳಕೆಯಾಗುತ್ತದೆ. (29ಕ) ರಾಜು ಬೇಗನೆ ಬಂದರೆ ನಮಗೆ ಮನೆಗೆ ಹೋಗಬಹುದು. (29ಖ) ರಾಜು ಬೇಗನೆ ಬಂದಿದ್ದರೆ ನಮಗೆ ಮನೆಗೆ ಹೋಗಬಹುದಿತ್ತು. ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೇಲೆ ಕೊಟ್ಟಿರುವ ವಿಧಾನಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಎಂಟನೆಯ ಅಧ್ಯಾಯದಲ್ಲಿ ವಿವರಿಸ
1.7 ಕನ್ನಡದ ಕೆಲವು ವೈಶಿಷ್ಟ್ಯಗಳು
ಮೇಲೆ ಸೂಚಿಸಿರುವ ಹಾಗೆ, ಈ ಪುಸ್ತಕದ ಎರಡನೆಯ ಅಧ್ಯಾಯದಿಂದ ಹತ್ತನೆಯ ಅಧ್ಯಾಯದ ವರೆಗಿನ ಭಾಗದಲ್ಲಿ ಮುಖ್ಯವಾಗಿ ಕನ್ನಡ ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಬರುವ ಹನ್ನೊಂದನೆಯ ಅಧ್ಯಾಯದಲ್ಲಿ ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ವಾಕ್ಯರಚನೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಸ್ವಲ್ಪ ಚುಟುಕಾಗಿ ಪ್ರಸ್ತಾಪಿಸಲಾಗಿದೆ. ವಾಕ್ಯಗಳ ಒಳರಚನೆಯಲ್ಲಿ ಕನ್ನಡ ಭಾಷೆ ಪ್ರಪಂಚದ ಇತರ ಭಾಷೆಗಳಿಂದ ಹಲವು ರೀತಿಯಲ್ಲಿ ಭಿನ್ನವಾಗಿದೆ. ಕನ್ನಡಕ್ಕೂ ಮತ್ತು ಜಗತ್ತಿನ ಇತರ ಭಾಷೆ ಗಳಿಗೂ ನಡುವೆ ಕಾಣಿಸುವ ಈ ವ್ಯತ್ಯಾಸಗಳಿಗೆ ಮುಖ್ಯವಾಗಿ ಎರಡು ಕಾರಣ ಗಳಿವೆ.
ತಮಿಳು, ತೆಲುಗು, ಮಲಯಾಳ, ತುಳು ಮೊದಲಾದ ಇತರ ದ್ರಾವಿಡ ಭಾಷೆಗಳಿಗೂ ಮತ್ತು ಕನ್ನಡಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಈ ಎಲ್ಲಾ ಭಾಷೆಗಳೂ ಮೂಲ ದ್ರಾವಿಡ ಭಾಷೆಯೊಂದರಿಂದ ಪ್ರತ್ಯೇಕವಾಗುತ್ತಿರುವಂತೆ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದಿರುವುದು ಕಾರಣ. ಹೊಸ ಹೊಸ ಮಾತಿನ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದಕ್ಕಾಗಿ ಭಾಷೆಗಳಲ್ಲಿ ಇಂತಹ ಬದಲಾವಣೆಗಳು ನಡೆಯುತ್ತಿರುವುದು ಅತ್ಯವಶ್ಯ. ಇವುಗಳ ಮೂಲಕ ಭಾಷೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತವೆ.
ದ್ರಾವಿಡ ಭಾಷಾಕುಟುಂಬಕ್ಕೆ ಸೇರದೆ ಇರುವ ಜಗತ್ತಿನ ಇತರ ಭಾಷೆಗಳಿಗೂ ಮತ್ತು ಕನ್ನಡಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಪ್ರಾಮುಖ್ಯವಾಗಿ ಆ ಭಾಷೆಗಳು ವಾಕ್ಯರಚನೆಯ ನಿಯಮಗಳನ್ನು ಬೇರೆ ಬೇರೆ ಮೂಲ ಭಾಷೆಗಳಿಂದ ಪಡೆದಿರುವುದೇ ಕಾರಣ. ಈ ಪುಸ್ತಕದ ಕೊನೆಯ (ಹನ್ನೊಂದನೆಯ) ಅಧ್ಯಾಯ ದಲ್ಲಿ ಇಂತಹ ಕೆಲವು ವ್ಯತ್ಯಾಸಗಳನ್ನು ಪರಿಶೀಲಿಸಲಾಗಿದೆ. ಇವು ಭಾಷೆಗಳು ವಿಕಸನಗೊಳ್ಳುವ ಸಮಯದಲ್ಲಿ ಎದುರಾಗಿದ್ದ ಸಮಸ್ಯೆಗಳಿಗೆ ಈ ಮೂಲ ಭಾಷೆಗಳು ಕಂಡುಕೊಂಡಿದ್ದ ಬೇರೆ ಬೇರೆ ಪರಿಹಾರಗಳನ್ನು ಸೂಚಿಸುತ್ತವೆ.
ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ಈ ವ್ಯತ್ಯಾಸಗಳು ವಾಕ್ಯರಚನೆಯಲ್ಲಿ ಕನ್ನಡದ (ಮತ್ತು ಇತರ ದ್ರಾವಿಡ ಭಾಷೆಗಳ) ಕೊಡುಗೆ ಎಂತಹದು ಎಂಬುದನ್ನು ಸೂಚಿಸುತ್ತವೆ. ಇವನ್ನು ಕನ್ನಡದ ವ್ಯಾಕರಣ ಸಂಪತ್ತೆಂದು ಪರಿಗಣಿಸಬಹುದು. English → | Eke →
ಅಧ್ಯಾಯ ಎರಡು — ಕ್ರಿಯಾವಾಕ್ಯಗಳ ಒಳರಚನೆ
2.1 ಪೀಠಿಕೆ
ಕನ್ನಡದ ಕ್ರಿಯಾವಾಕ್ಯಗಳಲ್ಲೆಲ್ಲ ಒಂದು ಕ್ರಿಯಾಪದ ಬಂದಿದ್ದು, ಅದು ವಾಕ್ಯದ ಮುಖ್ಯ ಅಂಗವಾಗಿರುತ್ತದೆ. ಈ ಕ್ರಿಯಾಪದ ಸಾಮಾನ್ಯವಾಗಿ ವಾಕ್ಯದ ಕೊನೆ ಯಲ್ಲಿ ಬರುತ್ತದೆ. ಉದಾ: ರಾಜು ಕನ್ನಡಕವನ್ನು ಎಲ್ಲಾ ಕಡೆಯಲ್ಲೂ ಹುಡುಕಿದ. (1ಖ) ಸೀತಾಬಾಯಿ ನಾಳೆ ಡಿಲ್ಲಿಗೆ ಹೋಗುತ್ತಾಳೆ. (1ಗ) ಆಕೆಗೆ ಲಾಟರಿಯಲ್ಲಿ ಹತ್ತು ಲಕ್ಷದ ಬಹುಮಾನ ಬಂತು. (1ಘ) ಹುಡುಗರು ಮರಕ್ಕೆ ಹತ್ತಿದರು. ಮೇಲೆ ಕೊಟ್ಟಿರುವ (1ಕ-ಘ) ವಾಕ್ಯಗಳೆಲ್ಲ ಕ್ರಿಯಾವಾಕ್ಯಗಳಾಗಿದ್ದು, ಅವುಗಳ ಮುಖ್ಯ ಅಂಗಗಳಾಗಿ ಹುಡುಕು, ಹೋಗು, ಬರು ಮತ್ತು ಹತ್ತು ಎಂಬ ಕ್ರಿಯಾ ಪದಗಳು ಆ ವಾಕ್ಯಗಳ ಕೊನೆಯಲ್ಲಿ ಬಂದಿವೆ. ಇವುಗಳೊಂದಿಗೆ ಈ ವಾಕ್ಯಗಳಲ್ಲಿ ಬೇರೆ ಕೆಲವು ಪದಗಳೂ ಬಂದಿವೆಯಾದರೂ ಅವು ಕ್ರಿಯಾಪದದಷ್ಟು ಪ್ರಾಮುಖ್ಯ ವಾದುವಲ್ಲ. ಈ ಇತರ ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಸಂದಭ್ರ ಕ್ಕನುಸಾರವಾಗಿ ಬಳಸದಿರಲು ಸಾಧ್ಯವಿದೆ. ಆದರೆ ಕ್ರಿಯಾಪದವನ್ನು ಆ ರೀತಿ ಬಳಸದಿರುವುದು ಬಹಳ ಅಪರೂಪ. ರಾಜು ಕನ್ನಡಕ ಹುಡುಕಿದ. (2ಖ) ಸೀತಾಬಾಯಿ ನಾಳೆ ಹೋಗುತ್ತಾಳೆ. (2ಗ) ಸೀತಾಬಾಯಿ ಡೆಲ್ಲಿಗೆ ಹೋಗುತ್ತಾಳೆ. (2ಘ) ಆಕೆಗೆ ಬಹುಮಾನ ಬಂತು. (1ಕ) ವಾಕ್ಯದಲ್ಲಿ ಜಾಗವನ್ನು ಸೂಚಿಸಲು ಬಂದಿರುವ ಎಲ್ಲಾ ಕಡೆಗಳಲ್ಲೂ ಎಂಬುದನ್ನು ಬಳಸದಿರಲು ಸಾಧ್ಯ ಎಂಬುದನ್ನು (2ಕ)ದಲ್ಲಿ ಕಾಣಬಹುದು. ಇದೇ ರೀತಿಯಲ್ಲಿ (1ಖ)ದಲ್ಲಿ ಬಂದಿರುವ ನಾಳೆ ಇಲ್ಲವೇ ಡೆಲ್ಲಿಗೆ ಎಂಬ ಪದ ಗಳನ್ನು ಬಳಸದಿರಲು ಸಾಧ್ಯ ಎಂಬುದನ್ನು (2ಖ-ಗ) ವಾಕ್ಯಗಳಲ್ಲಿ ಕಾಣ ಬಹುದು. ಆದರೆ ಕ್ರಿಯಾಪದವನ್ನು ಈ ರೀತಿ ಬಳಸಲಿಲ್ಲವಾದರೆ ಆ ವಾಕ್ಯವಿನ್ನೂ ಕೊನೆಗೊಂಡಿಲ್ಲವೇನೋ ಎಂದೆನಿಸುತ್ತದೆ, ಇಲ್ಲವೇ ಅದೊಂದು ವಿಷಯವಾಕ್ಯ ವಾಗಿಬಿಡುತ್ತದೆ. (3ಕ) ಸೀತಾಬಾಯಿ ನಾಳೆ ಡೆಲ್ಲಿಗೆ. (3ಖ) ಹುಡುಗರು ಮರದಲ್ಲಿ. (3ಕ)ದಲ್ಲಿ ಹೋಗುತ್ತಾಳೆ ಎಂಬ ಕ್ರಿಯಾಪದವನ್ನು ಬಿಡಲಾಗಿದೆ. ಆದರೆ ಇದು ನಿಜಕ್ಕೂ ಒಂದು ಘಟನೆಯನ್ನು ತಿಳಿಸುವ ಕ್ರಿಯಾವಾಕ್ಯವಾಗಿ ಕಾಣಿಸುವ ಬದಲು ಸೀತಾಬಾಯಿಯ ಕಾರ್ಯಕ್ರಮಗಳನ್ನು ಸೂಚಿಸುವ ಪಟ್ಟಿಯ ಒಂದು ಅಂಗವಾಗಿ ಕಾಣಿಸುತ್ತದೆ. (3ಖ)ದಲ್ಲಿ ಕುಳಿತಿದ್ದಾರೆ ಎಂಬ ಕ್ರಿಯಾಪದ ಬಿದ್ದುಹೋಗಿದೆ ಎಂದು ಹೇಳುವುದಕ್ಕಿಂತಲೂ ಇದ್ದಾರೆ ಎಂಬ ಬೇರೊಂದು ಕ್ರಿಯಾಪದ ಬಿದ್ದು ಹೋಗಿದೆ (ಎಂದರೆ ಅದೊಂದು ವಿಷಯವಾಕ್ಯ) ಎಂದು ಹೇಳುವುದೇ ಸರಿ ಯೆಂದು ತೋರುತ್ತದೆ (3.2.3 ನೋಡಿ).
2.1.1 ಕ್ರಿಯಾಪದದ ಪ್ರತ್ಯಯಗಳು
ಇಂತಹ ವಾಕ್ಯಗಳಲ್ಲಿ ಬರುವ ಕ್ರಿಯಾಪದ ಈ ರೀತಿ ಒಂದು ಘಟನೆಯನ್ನು ತಿಳಿಸುವುದು ಮಾತ್ರವಲ್ಲದೆ, ಆಡುಗನ ಸಮಯಕ್ಕೆ ಸಂಬಂಧಿಸಿದಂತೆ ಆ ಘಟನೆಯ ಸಮಯವನ್ನೂ ಸೂಚಿಸುತ್ತದೆ, ಮತ್ತು ಆ ಘಟನೆಯಲ್ಲಿ ನಿರತ ರಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನೂ ಸೂಚಿಸುತ್ತದೆ. ಈ ಎರಡು ಕೆಲಸಗಳನ್ನು ನಡೆಸುವುದಕ್ಕಾಗಿ ಅದರೊಂದಿಗೆ ಎರಡು ಪ್ರತ್ಯಯಗಳು ಬರುತ್ತವೆ.
ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (2ಕ) ವಾಕ್ಯದ ಹುಡುಕಿದ ಎಂಬ ಕ್ರಿಯಾರೂಪದಲ್ಲಿ ಹುಡುಕು ಕ್ರಿಯಾಪದದೊಂದಿಗೆ ಅದು ತಿಳಿಸುವ ಘಟನೆ ಯಾವಾಗ ನಡೆದುದು (ಎಂದರೆ (2ಕ) ವಾಕ್ಯವನ್ನು ಯಾವ ಸಮಯದಲ್ಲಿ ಆಡಲಾಗಿತ್ತೋ ಅದಕ್ಕಿಂತ ಮೊದಲೇ ಆ ಘಟನೆ ನಡೆದಿತ್ತು) ಎಂಬುದನ್ನು ತಿಳಿಸಲು ಅದರೊಂದಿಗೆ ಇದ್ ಪ್ರತ್ಯಯ ಬಂದಿದೆ, ಮತ್ತು ಆ ಘಟನೆಯನ್ನು
ನಡೆಸಿರುವ ವ್ಯಕ್ತಿ ಯಾರು (ಒಬ್ಬ ಗಂಡಸು) ಎಂಬುದನ್ನು ತಿಳಿಸಲು ಅ ಪ್ರತ್ಯಯ (2ಖ) ವಾಕ್ಯದ ಹೋಗುತ್ತಾಳೆ ಎಂಬ ಕ್ರಿಯಾರೂಪದಲ್ಲಿ ಹೋಗು ಕ್ರಿಯಾಪದದೊಂದಿಗೆ ಈ ಇದ್ ಪ್ರತ್ಯಯದ ಬದಲು ಉತ್್ತ ಪ್ರತ್ಯಯ ಬಂದಿದ್ದು, ಅದು ಆ ಕ್ರಿಯಾಪದ ತಿಳಿಸುವ ಘಟನೆ (2ಖ)ನೇ ವಾಕ್ಯವನ್ನಾಡಿರುವ ಸಮಯಕ್ಕಿಂತ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸುತ್ತದೆ, ಮತ್ತು ಅದರ ಅನಂತರ ಅ ಪ್ರತ್ಯಯದ ಬದಲು ಆಳೆ ಪ್ರತ್ಯಯ ಬಂದಿದ್ದು, ಅದು ಆ ಘಟನೆಯನ್ನು ನಡೆಸಲಿರುವ ವ್ಯಕ್ತಿ ಒಬ್ಬ ಹೆಂಗಸು ಎಂಬುದನ್ನು ಸೂಚಿಸುತ್ತದೆ.
ಇದೇ ವಿಷಯವನ್ನೇ ಕ್ರಿಯಾಪದದೊಂದಿಗೆ ಬರುವ ಬೇರೆ ಪದ ಇಲ್ಲವೇ ಪದಕಂತೆಗಳ ಮೂಲಕ ಹೆಚ್ಚು ವಿವರವಾಗಿ ತಿಳಿಸಲು ಸಾಧ್ಯ ಎಂಬುದನ್ನು ಮುಂದೆ ನೋಡಲಿರುವೆವು. (ಉದಾಹರಣೆಗಾಗಿ (2ಖ) ವಾಕ್ಯದಲ್ಲಿ ಬಂದಿರುವ ನಾಳೆ ಎಂಬ ಪದ ಘಟನೆಯ ಸಮಯವನ್ನೂ ಮತ್ತು ಸೀತಾಬಾಯಿ ಎಂಬ ಪದ ಆ ಘಟನೆಯನ್ನು ನಡೆಸಲಿರುವ ವ್ಯಕ್ತಿಯನ್ನೂ ಹೆಚ್ಚು ವಿವರವಾಗಿ ಪರಿಚಯಿಸುತ್ತವೆ.) ಕ್ರಿಯಾಪದಗಳೊಂದಿಗೆ ಈ ರೀತಿ ಘಟನೆಯಲ್ಲಿ ತೊಡಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವುದಕ್ಕಾಗಿ ಮತ್ತು ಘಟನೆಯ ಸಮಯವನ್ನು ಸೂಚಿಸುವು ದಕ್ಕಾಗಿ ಮಾತ್ರವಲ್ಲದೆ ಬೇರೆಯೂ ಕೆಲವು ಕಾರ್ಯಗಳನ್ನು ಸಾಧಿಸುವುದಕ್ಕಾಗಿ ಇನ್ನೂ ಕೆಲವು ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ. ಇಂತಹ ಪ್ರತ್ಯಯಗಳನ್ನು ಪಡೆದಿರುವ ಕ್ರಿಯಾಪದಗಳ ಪದರೂಪಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ ಐದನೇ ಅಧ್ಯಾಯದಲ್ಲಿ ಕೊಡಲಾಗುವುದು.
2.1.2 ವಾಕ್ಯಘಟಕಗಳು ಮತ್ತು ಗುಣಪದಗಳು
ಮೇಲೆ ಸೂಚಿಸಿದ ಹಾಗೆ, ಕ್ರಿಯಾವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಬರುವ ಪದ ಇಲ್ಲವೇ ಪದಕಂತೆಗಳಿಗೆಲ್ಲ ಕ್ರಿಯಾವಾಕ್ಯವು ತಿಳಿಸುವ ಘಟನೆಯ ವಿಷಯವಾಗಿ ಹೆಚ್ಚಿನ ವಿವರಗಳನ್ನು ಒದಗಿಸುವ ಕೆಲಸವಿದೆ. ಇವನ್ನು (ಕ) ಆ ಘಟನೆಯಲ್ಲಿ ಸಮಯ ವ್ಯಕ್ತಿ, ಮೊದಲಾದವುಗಳನ್ನು ಹೆಸರಿಸುವ ಇಲ್ಲವೇ ವರ್ಣಿಸುವ ‘ಘಟಕ’ಗಳು ಮತ್ತು (ಖ) ಆ ಘಟನೆ ಯಾವಾಗ, ಎಲ್ಲಿ ಮತ್ತು ಹೇಗೆ ನಡೆದಿದೆಯೆಂಬುದನ್ನು ತಿಳಿಸುವ ‘ಗುಣಪದ’ಗಳು (ಇಲ್ಲವೇ ಕ್ರಿಯಾವಿಶೇಷಣಗಳು) ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ತೊಡಗಿರುವ ವಸ್ತು, ಶಾಮರಾಯರ ಮಗಳು ನಿನ್ನೆ ಪುರಭವನದಲ್ಲಿ ಪುರಂದರದಾಸರ ಕೀತ್ರನೆಯೊಂದನ್ನು ಬಹಳ ಸೊಗಸಾಗಿ ಹಾಡಿದಳು. (4)ನೇ ವಾಕ್ಯದಲ್ಲಿ ಬಂದಿರುವ ಶಾಮರಾಯರ ಮಗಳು ಎಂಬ ಘಟಕ ಆ ವಾಕ್ಯ ತಿಳಿಸುವ ಘಟನೆಯನ್ನು (ಹಾಡುವುದನ್ನು) ನಡೆಸಿರುವುದು ಯಾರು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವಂತೆ ಮಾಡುತ್ತದೆ; (ಇದನ್ನೇ ಕ್ರಿಯಾಪದದ ಕೊನೆಯಲ್ಲಿ ಬಂದಿರುವ ಅಳು ಪ್ರತ್ಯಯ ಬಹಳ ಚುಟುಕಾಗಿ ತಿಳಿಸುತ್ತದೆ); ಪುರಭವನದಲ್ಲಿ ಎಂಬ ಇನ್ನೊಂದು ಪದ ಆ ಘಟನೆ ನಡೆದದ್ದು ಎಲ್ಲಿ ಎಂಬುದನ್ನು ತಿಳಿಸುತ್ತದೆ; ಮತ್ತು, ಪುರಂದರ ದಾಸರ ಕೀತ್ರನೆಯೊಂದನ್ನು ಎಂಬ ಪದಕಂತೆ ಹಾಡಿದ್ದು ಏನನ್ನು ಎಂಬುದನ್ನು ತಿಳಿಸು ತ್ತದೆ. ಈ ಮೂರು ಪದಕಂತೆಗಳು ಘಟನೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಅಂಗಗಳು. ಇದಲ್ಲದೆ, (4)ನೇ ವಾಕ್ಯದಲ್ಲಿ ಬೇರೆಯೂ ಕೆಲವು ಪದಗಳು ಬಂದಿದ್ದು ಅವು ಆ ವಾಕ್ಯದಲ್ಲಿ ಕ್ರಿಯಾವಿಶೇಷಣಗಳಾಗಿ ಬಳಕೆಯಲ್ಲಿವೆ ಎಂಬುದನ್ನು ಗಮನಿಸಬಹುದು. ಇವುಗಳಲ್ಲಿ ನಿನ್ನೆ ಎಂಬುದು ಹಾಡಿರುವ ಸಮಯವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸುತ್ತವೆ. (ಇದನ್ನೇ ಕ್ರಿಯಾಪದದೊಂದಿಗೆ ಬಂದಿರುವ ಇದ್ ಪ್ರತ್ಯಯ ಬಹಳ ಚುಟುಕಾಗಿ ತಿಳಿಸುತ್ತದೆ); ಮತ್ತು ಬಹಳ ಹಾಗೂ ಸೊಗಸಾಗಿ ಎಂಬ ಇನ್ನೆರಡು ಪದಗಳು ಹಾಡಿರುವುದು ಹೇಗೆ ಎಂಬುದನ್ನು ತಿಳಿಸುತ್ತವೆ.
ಘಟಕಗಳು ಮತ್ತು ಕ್ರಿಯಾವಿಶೇಷಣಗಳು (ಗುಣಪದಗಳು) ಎಂಬುದಾಗಿ ವಾಕ್ಯದ ಅಂಗಗಳನ್ನು ಮೇಲೆ ಸೂಚಿಸಿದ ಹಾಗೆ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆಯಾದರೂ ಅವುಗಳೊಳಗೆ ಹಲವು ಸಾಮ್ಯಗಳಿವೆ ಎಂಬುದನ್ನು ನಾವು ಮೇಲೆ 1.3.3ರಲ್ಲಿ ನೋಡಿರುವೆವು. ಅವು ಎರಡೂ ಕ್ರಿಯಾಪದಗಳು ತಿಳಿಸುವ ಘಟನೆಯ ಕುರಿತಾಗಿ ಹೆಚ್ಚಿನ ತಿಳುವಳಿಕೆಯನ್ನು ಕೊಡುವ ವಾಕ್ಯಾಂಗಗಳಾಗಿರುವುದೇ ಇದಕ್ಕೆ ಕಾರಣ.
ಕ್ರಿಯಾಪದದೊಂದಿಗೆ ಬರಬಲ್ಲ ಗುಣಪದಗಳ ಕುರಿತಾಗಿ ಹೆಚ್ಚಿನ ವಿವರ ವನ್ನು ಮುಂದೆ ಆರನೇ ಅಧ್ಯಾಯದಲ್ಲಿ ಕೊಡಲಾಗುವುದು. ಕ್ರಿಯಾಪದದೊಂದಿಗೆ ಬರಬಲ್ಲ ಘಟಕಗಳು ಎಂತಹವು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸ
2.2 ಘಟಕಗಳಲ್ಲಿ ವೈವಿಧ್ಯ
ವಾಕ್ಯವೊಂದರಲ್ಲಿ ಕ್ರಿಯಾಪದದೊಂದಿಗೆ ಬೇರೆ ಬೇರೆ ರೀತಿಯ ಘಟಕಗಳು ಬರಲು ಸಾಧ್ಯವಿದ್ದು, ಅವು ಎಂತಹವು ಎಂಬುದು ಆ ಕ್ರಿಯಾಪದವು ಸೂಚಿಸುವ ಘಟನೆಯ ಸ್ವರೂಪವನ್ನವಲಂಬಿಸಿದೆ. ಉದಾಹರಣೆಗಾಗಿ, ಸಾಯು ಕ್ರಿಯಾಪದ ದೊಂದಿಗೆ ‘ಸತ್ತವರು ಯಾರು (ಅಥವಾ ಯಾವುದು)’ ಎಂಬುದನ್ನು ತಿಳಿಸುವ ಒಂದು ಘಟಕ ಬಂದರೆ ಸಾಕು, ಆದರೆ ಕೊಲ್ಲು ಕ್ರಿಯಾಪದದೊಂದಿಗೆ ‘ಕೊಂದವರು ಯಾರು’ ಎಂಬುದನ್ನು ತಿಳಿಸುವ ಘಟಕ ಮಾತ್ರವಲ್ಲದೆ ‘ಕೊಂದದ್ದು ಯಾರನ್ನು (ಅಥವಾ ಯಾವುದನ್ನು)’ ಎಂಬುದನ್ನು ತಿಳಿಸುವ ಇನ್ನೊಂದು ಘಟಕವೂ ಬರುವ ಅವಶ್ಯಕತೆಯಿದೆ. (5ಕ) ದೊಡ್ಡ ಬೆಕ್ಕು ಸತ್ತಿದೆ. (5ಖ) ರಾಜು ದೊಡ್ಡ ಬೆಕ್ಕನ್ನು ಕೊಂದಿದ್ದಾನೆ. ಇದೇ ರೀತಿಯಲ್ಲಿ ಅರಳು ಕ್ರಿಯಾಪದದೊಂದಿಗೆ ‘ಅರಳುವುದು (ಅಥವಾ ಅರಳಿರುವುದು) ಯಾವುದು’ ಎಂಬುದನ್ನು ತಿಳಿಸುವ ಒಂದು ಘಟಕ ಬಂದರೆ ಸಾಕು, ಆದರೆ ಎಟಕು ಕ್ರಿಯಾಪದದೊಂದಿಗೆ ‘ಎಟಕುವುದು ಯಾವುದು’ ಎಂಬುದನ್ನು ತಿಳಿಸುವ ಘಟಕ ಮಾತ್ರವಲ್ಲದೆ ‘ಎಟಕುವುದು ಯಾರಿಗೆ’ ಎಂಬುದನ್ನು ತಿಳಿಸುವ ಘಟಕವೂ ಬರಬೇಕಾಗುತ್ತದೆ. ಗುಲಾಬಿ ಹೂ ಅರಳಿದೆ. (6ಖ) ಗುಲಾಬಿ ಹೂ ಅವಳಿಗೆ ಎಟಕುತ್ತದೆ. ಎರಡಕ್ಕಿಂತ ಜಾಸ್ತಿ ಘಟಕಗಳು ಬರಬೇಕಾಗುವ ಕ್ರಿಯಾಪದಗಳೂ ಕನ್ನಡ ದಲ್ಲಿ ಕೆಲವಿವೆ. ಉದಾಹರಣೆಗಾಗಿ ಕೊಡು ಕ್ರಿಯಾಪದದೊಂದಿಗೆ ‘ಕೊಟ್ಟವರು ಯಾರು’, ‘ಕೊಟ್ಟುದು ಯಾರಿಗೆ’ ಮತ್ತು ‘ಕೊಟ್ಟುದು ಯಾವುದನ್ನು’ ಎಂಬುದನ್ನು ತಿಳಿಸುವ ಮೂರು ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ಇದೇ ರೀತಿಯಲ್ಲಿ ಹೇಳು ಕ್ರಿಯಾಪದದೊಂದಿಗೆ ‘ಹೇಳಿದ್ದು ಯಾರು’, ‘ಹೇಳಿದ್ದು ಏನು’ ಮತ್ತು ‘ಹೇಳಿದ್ದು ಯಾರಿಗೆ’ ಎಂಬ ಮೂರು ಕೇಳ್ವಿಗಳಿಗೆ ಉತ್ತರಗಳನ್ನು ಕೊಡಬಲ್ಲ ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ರಾಜು ಹರಿಗೆ ಎರಡು ಸಾವಿರ ರುಪಾಯಿ ಕೊಟ್ಟ. (7ಖ) ಅಜ್ಜಿ ಮಕ್ಕಳಿಗೆ ಒಂದು ಕತೆ ಹೇಳಿದಳು. ಈ ರೀತಿ ಕ್ರಿಯಾಪದಗಳು ಸೂಚಿಸುವ ಘಟನೆಯನ್ನವಲಂಬಿಸಿ ಬರುವ ಘಟಕಗಳು ಮಾತ್ರವಲ್ಲದೆ ಬೇರೆಯೂ ಕೆಲವು ಘಟಕಗಳು ವಾಕ್ಯದಲ್ಲಿ ಬರಲು ಸಾಧ್ಯವಿದೆ. ಇವು ಎಲ್ಲಾ ರೀತಿಯ ಕ್ರಿಯಾಪದಗಳಿಗೂ ಸಮಾನವಾಗಿರುವಂತಹ ಘಟಕಗಳು. ಅವುಗಳ ಬರುವಿಕೆ ಕ್ರಿಯಾಪದದ ಅರ್ಥವನ್ನವಲಂಬಿಸಿಲ್ಲ. ಉದಾ ಹರಣೆಗಾಗಿ, ಮೇಲೆ ಕೊಟ್ಟಿರುವ ಎಲ್ಲಾ ವಾಕ್ಯಗಳಲ್ಲೂ ಅವು ಸೂಚಿಸುವ ಘಟನೆ ‘ಯಾವಾಗ ನಡೆಯಿತು (ಅಥವಾ ನಡೆಯುತ್ತದೆ)’ ಮತ್ತು ‘ಎಲ್ಲಿ ನಡೆಯಿತು (ಅಥವಾ ನಡೆಯುತ್ತದೆ)’ ಎಂಬುದನ್ನು ತಿಳಿಸುವ ಘಟಕಗಳೆರಡನ್ನು ಬಳಸಲು ಸಾಧ್ಯವಿದೆ. ರಾಜುವಿನ ಅಂಗಳದಲ್ಲಿ ಮೂರು ದಿವಸ ಹಿಂದೆ ಒಂದು ಗುಲಾಬಿ ಹೂ ಅರಳಿತ್ತು. ರಾಜು ಹರಿಗೆ ಇವತ್ತು ಬೆಳಿಗ್ಗೆ ಸಂತೆಯಲ್ಲಿ ಎರಡು ಸಾವಿರ ಈ ರೀತಿ ಘಟನೆಯ ಸಮಯ ಮತ್ತು ಜಾಗಗಳನ್ನು ತಿಳಿಸುವ ಘಟಕಗಳು ಮಾತ್ರವಲ್ಲದೆ, ಅದರ ಉದ್ದೇಶ (8ಕ), ಅದನ್ನು ನಡೆಸುವಲ್ಲಿ ಬಳಸಿದ ಸಾಧನ (8ಖ), ಸಹಾಯಕನಾಗಿದ್ದ ವ್ಯಕ್ತಿ (8ಗ), ಮೊದಲಾದ ಬೇರೆಯೂ ಕೆಲವು ವಿಷಯಗಳನ್ನು ತಿಳಿಸುವುದಕ್ಕಾಗಿ ಹೆಚ್ಚಿನ ಘಟಕಗಳನ್ನು ಬಳಸಲು ಸಾಧ್ಯವಿದೆ ಯೆಂಬುದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (8ಕ) ಜಾನಕಿ ರಾತ್ರಿಯ ಪೂಜೆಗೆ ಹೂ ಕೊಯ್ಯುತ್ತಿದ್ದಾಳೆ. (8ಖ) ಆತ ಮಣ್ಣಿನಿಂದ ಒಂದು ಗೊಂಬೆ ಮಾಡಿದ. ರಾಜು ತನ್ನ ತಂದೆಯೊಂದಿಗೆ ಪೇಟೆಗೆ ಹೋಗಿದ್ದಾನೆ. ಕ್ರಿಯಾಪದಗಳು ಸೂಚಿಸುವ ಘಟನೆಯನ್ನು ಅವಲಂಬಿಸಿ ಬರುವ ಘಟಕ ಗಳನ್ನು ವಾಕ್ಯದ ‘ಮುಖ್ಯ ಘಟಕ’ಗಳೆಂದೂ ಮತ್ತು ಘಟನೆಗೆ ಸಂಬಂಧಿಸಿರುವ ಇತರ ವಿಷಯಗಳನ್ನು ತಿಳಿಸುವುದಕ್ಕಾಗಿ ಬರುವ ಘಟಕಗಳನ್ನು ‘ಮುಖ್ಯವಲ್ಲದ ಘಟಕ’ಗಳೆಂದೂ ಕರೆಯಬಹುದು. ಈ ಎರಡು ರೀತಿಯ ಘಟಕಗಳಲ್ಲಿ ಕ್ರಿಯಾ ಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪಗಳ ನ್ನಾಧರಿಸಿ ಕ್ರಿಯಾಪದಗಳನ್ನು ಬೇರೆ ಬೇರೆ ವಗ್ರಗಳಾಗಿ ವಿಂಗಡಿಸಲು ಸಾಧ್ಯವಿದೆ.
2.2.1 ಮುಖ್ಯ ಘಟಕಗಳು
ಕನ್ನಡದ ಕ್ರಿಯಾವಾಕ್ಯಗಳನ್ನೆಲ್ಲ ಆಗುವಿಕೆಗಳು ಮತ್ತು ಮಾಡುವಿಕೆಗಳು ಎಂಬು ದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಹತೋಟಿಯಲ್ಲಿರುವ ಘಟನೆಗಳು ಮಾಡುವಿಕೆಗಳು ಮತ್ತು ಹಾಗೆ ಹತೋಟಿಯಲ್ಲಿಲ್ಲದ ಘಟನೆಗಳು ಆಗುವಿಕೆಗಳು. ಮಾಡುವಿಕೆಗಳನ್ನು ಸೂಚಿಸುವ ವಾಕ್ಯಗಳಲ್ಲೆಲ್ಲ ಅವನ್ನು ಹತೋಟಿಯಲ್ಲಿರಿಸಿಕೊಂಡಿರುವ ಘಟಕ ವೊಂದು ಮುಖ್ಯ ಘಟಕವಾಗಿ ಬಂದಿರುತ್ತದೆ. ಇದನ್ನು ‘ಮಾಡುಗ’ ಎಂದು ಕರೆಯಬಹುದು.
ಆಗುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲಿ ಈ ಮಾಡುಗ ಎಂಬ ಘಟಕ ಬರುವುದಿಲ್ಲ. ಆದರೆ ಅದಕ್ಕೆ ಬದಲಾಗಿ, ಘಟನೆಯ ಮೂಲಕ ಯಾವುದಾದರೂ ಒಂದು ಬದಲಾವಣೆಗೊಳಗಾಗುವ ಘಟಕ ಬರುತ್ತದೆ. ಇದನ್ನು ‘ಆಗುಗ’ ಎಂದು ಕರೆಯಬಹುದು.
(ಕ) ಆಗುವಿಕೆಯನ್ನು ಸೂಚಿಸುವ ವಾಕ್ಯಗಳು (9ಕ) ಬಾಗಿಲು ತೆರೆಯಿತು. (9ಖ) ಬಟ್ಟೆ ಒಣಗಿತು. (9ಘ) ಅರಮನೆಯ ಆನೆ ಸಾಯುತ್ತಿದೆ. ರಾಜು ಬಿದ್ದ. (ಖ) ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳು (10ಕ) ರಾಜು ಓಡಿದ. (10ಖ) ಜಾನಕಿ ಹಾಡಿದಳು. (10ಗ) ಚಿಕ್ಕ ಮಗು ನಗುತ್ತಿದೆ. (10ಘ) ಹಕ್ಕಿ ಹಾರಿತು. ಆಗುವಿಕೆಯನ್ನು ಸೂಚಿಸುವ (9ಕ-ಘ) ವಾಕ್ಯಗಳಲ್ಲಿ ಬರುವ ಬಾಗಿಲು, ಬಟ್ಟೆ, ರಾಜು ಮತ್ತು ಅರಮನೆಯ ಆನೆ ಎಂಬ ಘಟಕಗಳಿಗೆ (ಆಗುಗಗಳಿಗೆ) ಆ ವಾಕ್ಯಗಳು ಸೂಚಿಸುವ ತೆರೆ, ಒಣಗು, ಬೀಳು ಮತ್ತು ಸಾಯು ಎಂಬ ಘಟನೆಗಳ ಮೇಲೆ ಹತೋಟಿಯಿಲ್ಲ; ಆದರೆ ಮಾಡುವಿಕೆಯನ್ನು ಸೂಚಿಸುವ (10ಕ-ಘ) ವಾಕ್ಯಗಳಲ್ಲಿ ಬರುವ ರಾಜು, ಜಾನಕಿ, ಚಿಕ್ಕ ಮಗು ಮತ್ತು ಹಕ್ಕಿ ಎಂಬ ಘಟಕಗಳಿಗೆ (ಮಾಡುಗಗಳಿಗೆ) ಆ ವಾಕ್ಯಗಳು ಸೂಚಿಸುವ ಓಡು, ಹಾಡು, ನಗು ಮತ್ತು ಹಾರು ಎಂಬ ಘಟನೆಗಳ ಮೇಲೆ ಹತೋಟಿಯಿದೆ ಎಂಬುದನ್ನು ಗಮನಿಸಬಹುದು.
ಇದಲ್ಲದೆ ಆಗುವಿಕೆಯನ್ನು ಸೂಚಿಸುವ ವಾಕ್ಯಗಳು ಏನಾಯಿತು? ಎಂಬಂತಹ ಆಗು ಕ್ರಿಯಾಪದವಿರುವ ಪ್ರಶ್ನೆಗಳಿಗೆ ಉತ್ತರವಾಗಿ ಬರಬಲ್ಲುವು ಸೂಚಿಸುವ ವಾಕ್ಯಗಳು ಏನು ಮಾಡಿದ? ಮತ್ತು ಮಾಡುವಿಕೆಯನ್ನು ಎಂಬಂತಹ ಮಾಡು ಕ್ರಿಯಾಪದವಿರುವ ಪ್ರಶ್ನೆಗಳಿಗೆ ಉತ್ತರವಾಗಿ ಬರಬಲ್ಲುವು ಎಂಬುದನ್ನೂ ಗಮನಿಸಬಹುದು. ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲಿ ‘ಮಾಡುಗ’ ಘಟಕ ಮಾತ್ರ ವಲ್ಲದೆ, ಬೇರೊಂದು ಆಗುಗ ಘಟಕವೂ ಬರಲು ಸಾಧ್ಯವಿದೆ. ಇಂತಹ ಮಾಡು ವಿಕೆಯನ್ನು ಸೂಚಿಸುವ ವಾಕ್ಯಗಳ ಮೂಲದಲ್ಲಿ ಒಂದು ಆಗುವಿಕೆಯೂ ಸೇರಿ ಕೊಂಡಿರುವುದೇ ಇದಕ್ಕೆ ಕಾರಣ.
(11ಕ) ಬೆಕ್ಕು ಸತ್ತಿದೆ. (11ಖ) ನಾಯಿ ಬೆಕ್ಕನ್ನು ಕೊಂದಿದೆ. (12ಕ) ಮರದ ಗೆಲ್ಲು ಬಗ್ಗಿತು. (12ಖ) ರಾಜು ಮರದ ಗೆಲ್ಲನ್ನು ಬಗ್ಗಿಸಿದ್ದಾನೆ. (11ಕ) ವಾಕ್ಯದಲ್ಲಿ ಸಾಯು ಕ್ರಿಯಾಪದ ಬಂದಿದ್ದು ಅದು ಒಂದು ಆಗುವಿಕೆ ಯನ್ನು ಸೂಚಿಸುತ್ತದೆ ಮತ್ತು ಅದರಲ್ಲಿ ಬೆಕ್ಕು ಎಂಬ ಆಗುಗ ಘಟಕ ಮಾತ್ರ ಬಂದಿದೆ. ಇದಕ್ಕೆ ಬದಲು (11ಖ) ವಾಕ್ಯದಲ್ಲಿ ಕೊಲ್ಲು ಕ್ರಿಯಾಪದ ಬಂದಿದ್ದು ಅದು ಒಂದು ಮಾಡುವಿಕೆಯನ್ನು ಸೂಚಿಸುತ್ತದೆ ಮತ್ತು ಅದರಲ್ಲಿ ನಾಯಿ ಎಂಬ ಒಂದು ಮಾಡುಗ ಘಟಕ ಮಾತ್ರವಲ್ಲದೆ ಬೆಕ್ಕು ಎಂಬ ಒಂದು ಆಗುಗ ಘಟಕವೂ ಬಂದಿದೆ. ಈ (11ಖ) ವಾಕ್ಯ ಅದರ ಮೂಲದಲ್ಲಿ (11ಕ) ವಾಕ್ಯವನ್ನು ಒಳಗೊಂಡಿದೆ ಎಂಬುದನ್ನು ಗಮನಿಸಬಹುದು. (12ಕ-ಖ)ದಲ್ಲೂ ಹೀಗೆಯೇ. ಕನ್ನಡದಲ್ಲಿ ಮಾಡುಗ ಮತ್ತು ಆಡುಗಗಳೆಂಬ ಎರಡು ಘಟಕಗಳೂ ಒಂದೇ ವಾಕ್ಯದಲ್ಲಿ ಬಂದಾಗ ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸುವು ದಕ್ಕಾಗಿ ಆಗುಗದೊಂದಿಗೆ ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮವಿದೆ (2.6 ನೋಡಿ).
ಆಗುವಿಕೆಯನ್ನು ಸೂಚಿಸುವ ವಾಕ್ಯದಲ್ಲಿ ‘ಆಗುಗ’ ಘಟಕದೊಂದಿಗೆ ಕ್ರಿಯಾ ಪದವು ಸೂಚಿಸುವ ಘಟನೆ ಎಲ್ಲಿ ನಡೆಯಿತು, ಯಾವ ಕಡೆಯಿಂದ ನಡೆಯಿತು ಮತ್ತು ಯಾವ ಕಡೆಗಾಗಿ ನಡೆಯಿತು ಎಂಬುದಾಗಿ ಮೂರು ರೀತಿಯ ಜಾಗ ಗಳನ್ನು ಸೂಚಿಸುವುದಕ್ಕಾಗಿ ‘ಜಾಗ’, ‘ಸುರು’ ಮತ್ತು ‘ಕೊನೆ’ ಎಂಬ ಘಟಕಗಳು ಬಂದಿರಲು ಸಾಧ್ಯವಿದೆ. ಈ ಮೂರು ಘಟಕಗಳು ಸೂಚಿಸುವ ಜಾಗಗಳ ನಡುವಿರುವ ವ್ಯತ್ಯಾಸಗಳನ್ನು ಮುಂದೆ (2.4.4ರಲ್ಲಿ) ವಿವರಿಸಲಾಗುವುದು. (13ಕ) ಮಾವಿನ ಮರದಲ್ಲಿ ಹೂ ಬಿಟ್ಟಿದೆ. (13ಖ) ಅಟ್ಟದಿಂದ ಒಂದು ಹಗ್ಗ ನೇಲುತ್ತಿದೆ. (13ಗ) ಹಾಗಲ ಬಳ್ಳಿ ಮಾಡಿಗೆ ಹಬ್ಬಿದೆ. ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲೂ ಮಾಡುಗ ಘಟಕದೊಂದಿಗೆ ಈ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳು ಬಂದಿರಲು ಸಾಧ್ಯವಿದೆ, ಮತ್ತು ಇವುಗಳೊಂದಿಗೆ ಬೇರೊಂದು ಆಗುಗ ಘಟಕವೂ ಬಂದಿರಲು ಸಾಧ್ಯವಿದೆ. ಈ ಎರಡು ರೀತಿಯ ಸಾಧ್ಯತೆಗಳನ್ನು (14ಕ-ಗ) ಮತ್ತು (15ಕ- ಗ) ವಾಕ್ಯಗಳಲ್ಲಿ ಕಾಣಬಹುದು. (14ಕ) ಪುಟ್ಟ ಮಗು ಕುಚ್ರಿಯಲ್ಲಿ ಕುಳಿತಿದೆ. (14ಖ) ರಾಜು ಮರದಿಂದ ಇಳಿದ. (14ಗ) ಜಾನಕಿ ಅಟ್ಟಕ್ಕೆ ಹತ್ತಿದಳು. (15ಕ) ರಾಜು ಹಣವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (15ಖ) ಮಗು ಪ್ಲೇಟಿನಿಂದ ಜೇನನ್ನೆಲ್ಲ ನೆಕ್ಕಿತು. (15ಗ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜುತ್ತಿದ್ದಾಳೆ. (14ಕ-ಗ) ವಾಕ್ಯಗಳಲ್ಲಿ ಮಾಡುಗದೊಂದಿಗೆ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳು ಬಂದಿರುವುದನ್ನು ಗಮನಿಸಬಹುದು. (15ಕ-ಗ) ವಾಕ್ಯ ಗಳಲ್ಲಿ ಮಾಡುಗದೊಂದಿಗೆ ಒಂದು ಆಗುಗವೂ ಬಂದಿದ್ದು, ಇವುಗಳೊಂದಿಗೂ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳನ್ನು ಬಳಸಲಾಗಿದೆ. ‘ಪ್ರೇರಕ’ ಎಂಬ ಹೆಸರಿನ ಆರನೆಯ ಘಟಕವು ಸಾಮಾನ್ಯವಾಗಿ ಕ್ರಿಯಾಪದ ದೊಂದಿಗೆ ಇಸು ಎಂಬ ಪ್ರತ್ಯಯವನ್ನು ಬಳಸಿರುವಂತಹ ವಾಕ್ಯಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ.
(16ಕ) ರಾಜು ಬಾಗಿಲು ತೆರೆದ. (16ಖ) ಜಾನಕಿ ರಾಜುವಿನ ಕೈಯಲ್ಲಿ ಬಾಗಿಲು ತೆರೆಸಿದಳು. (17ಕ) ಸೈನಿಕರು ಸೆರೆಯಾಳುಗಳನ್ನೆಲ್ಲ ಕೊಂದರು. (17ಖ) ವೀರಸೇನ ಸೈನಿಕರ ಮೂಲಕ ಸೆರೆಯಾಳುಗಳನ್ನೆಲ್ಲ ಕೊಲ್ಲಿಸಿದ. (16ಖ)ದಲ್ಲಿ ಜಾನಕಿ ಪದವೂ ಮತ್ತು (17ಖ)ದಲ್ಲಿ ವೀರಸೇನ ಪದವೂ ‘ಪ್ರೇರಕ’ ಘಟಕವನ್ನು ಸೂಚಿಸುತ್ತಿವೆ. ಈ ಘಟಕವೂ ಮಾಡುಗ ಘಟಕದ ಹಾಗೆ ತನ್ನ ಬಯಕೆಯಂತೆ ಕೆಲಸ ನಡೆಸುತ್ತದೆ, ಮತ್ತು ಆ ಕೆಲಸವನ್ನು ತನ್ನ ಹತೋಟಿ ಯಲ್ಲಿರಿಸಿಕೊಂಡಿರುತ್ತದೆ. ಆದರೆ, ಮಾಡುಗ ಘಟಕದ ಹಾಗೆ ಪ್ರೇರಕವು ತಾನೇ ಆ ಕೆಲಸವನ್ನು ಮಾಡುವ ಬದಲು ಬೇರೊಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಮೂಲಕ ಅದನ್ನು ಮಾಡಿಸಿಕೊಳ್ಳುತ್ತದೆ. ಘಟನೆಯ ಜಾಗವನ್ನು ಸೂಚಿಸುವ ಘಟಕಗಳು ಮಾತ್ರವಲ್ಲದೆ, ಮೇಲೆ (2.1.2)ರಲ್ಲಿ ಸೂಚಿಸಿರುವ ಹಾಗೆ ಕೆಲವು ಸಂದಭ್ರಗಳಲ್ಲಿ ಸಮಯವನ್ನು ಸೂಚಿಸುವ ಘಟಕಗಳೂ ವಾಕ್ಯದ ಒಂದು ಮುಖ್ಯ ಘಟಕವಾಗಿ ಕಾಣಿಸಿಕೊಳ್ಳ ಬಲ್ಲುವು.
2.2.2 ಮುಖ್ಯವಲ್ಲದ ಘಟಕಗಳು
ಮೇಲೆ ವಿವರಿಸಿದ ಆರು ಮುಖ್ಯ ಘಟಕಗಳು ಮಾತ್ರವಲ್ಲದೆ ಕ್ರಿಯಾವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಕೆಲವು ಮುಖ್ಯವಲ್ಲದ ಘಟಕಗಳೂ ಬರಬಲ್ಲುವು. ಇವು ಎಲ್ಲಾ ರೀತಿಯ ವಾಕ್ಯಗಳಲ್ಲೂ ಬರಬಲ್ಲುವಾಗಿದ್ದು, ಅವುಗಳ ಬಳಕೆ ಕ್ರಿಯಾ ಪದದ ಅರ್ಥವನ್ನು ಅವಲಂಬಿಸಿರುವುದಿಲ್ಲ. ಉದಾಹರಣೆಗಾಗಿ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಅವುಗಳ ಜಾಗ ಮತ್ತು ಸಮಯಗಳನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳನ್ನು ಬಳಸಲು ಸಾಧ್ಯವಿದೆ. (18ಕ) ಗೌಡರು ತಮ್ಮ ತೋಟದಲ್ಲಿ ಈ ವಷ್ರ ಹತ್ತಿ ಬೆಳೆದಿದ್ದಾರೆ. (18ಖ) ಆತ ದೇವಸ್ಥಾನದ ಕೆರೆಯಲ್ಲಿ ಮೀಯುತ್ತಿದ್ದಾನೆ. (18ಗ) ರಾಜು ಕ್ಲಾಸಿನಲ್ಲಿ ಒಂದು ಕಾದಂಬರಿ ಓದುತ್ತಿದ್ದ. (18ಕ)ದಲ್ಲಿ ಮಾಡುಗ ಘಟಕವಾಗಿರುವ ಗೌಡರು ಮತ್ತು ಆಗುಗ ಘಟಕ ವಾಗಿರುವ ಹತ್ತಿ ಎಂಬಿವೆರಡು ಮಾತ್ರ ಮುಖ್ಯ ಘಟಕಗಳು. ಜಾಗವನ್ನು ಸೂಚಿಸುವ ತಮ್ಮ ತೋಟದಲ್ಲಿ ಎಂಬುದು ಮತ್ತು ಸಮಯವನ್ನು ಸೂಚಿಸುವ ಈ ವಷ್ರ ಎಂಬುದು ಇವೆರಡೂ ಮುಖ್ಯವಲ್ಲದ ಘಟಕಗಳು. ಯಾಕೆಂದರೆ ಬೆಳೆ ಎಂಬ ಕ್ರಿಯಾಪದ ಸೂಚಿಸುವ ಘಟನೆಗೆ ಆಗುಗ ಮತ್ತು ಮಾಡುಗ ಘಟಕಗಳು ಮಾತ್ರ ನೇರವಾಗಿ ಸಂಬಂಧಿಸಿರುತ್ತವೆ. ಈ ರೀತಿಯಾಗಿ, ಘಟನೆ ನಡೆದ ಇಲ್ಲವೇ ನಡೆಯಲಿರುವ ಜಾಗ ಮತ್ತು ಸಮಯಗಳು ಮಾತ್ರವಲ್ಲದೆ, ಅದು ಯಾವ ಕಾರಣದಿಂದ ನಡೆಯಿತು ಮತ್ತು ಯಾವ ಉದ್ದೇಶವನ್ನು ಸಾಧಿಸುವುದಕ್ಕಾಗಿ ನಡೆಯಿತು, ಅದಕ್ಕಾಗಿ ಬಳಸಿದ ಉಪಕರಣ ಯಾವುದು ಮತ್ತು ಅದನ್ನು ನಡೆಸಿದ ಶಕ್ತಿ ಯಾವುದು, ಅದನ್ನು ನಡೆಸುವಲ್ಲಿ ಮಾಡುಗ ಇಲ್ಲವೇ ಆಗುಗನೊಂದಿಗೆ ಜೊತೆಗಾರನೊಬ್ಬನಿದ್ದಲ್ಲಿ ಆತ ಯಾರು, ಮಾಡುಗ ಇಲ್ಲವೇ ಅಗುಗವನ್ನು ಹೋಲುವಂತಹ ‘ಹೋಲುಗ’ ಯಾರು ಇತ್ಯಾದಿಗಳನ್ನು ಸೂಚಿಸುವ ಘಟಕಗಳು ಮುಖ್ಯವಲ್ಲದ ಘಟಕಗಳಾಗಿ ವಾಕ್ಯಗಳಲ್ಲಿ ಬರಬಲ್ಲುವು. ಇಂತಹ ಮುಖ್ಯವಲ್ಲದ ಕೆಲವು ಘಟಕಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
(19ಕ) ಜೋರಾಗಿ ಮಳೆ ಬಂದ ಕಾರಣ ಮೇಷ್ಟು ಶಾಲೆಗೆ ಬರಲಿಲ್ಲ. (19ಖ) ರಾತ್ರಿಯ ಪೂಜೆಗೆ ಆಕೆ ಹೂ ಕೊಯ್ಯುತ್ತಿದ್ದಾಳೆ. (19ಗ) ಆತ ಕತೆಗಳನ್ನು ಕೆಂಪು ಶಾಯಿಯಲ್ಲಿ ಬರೆಯುತ್ತಿದ್ದಾನೆ. (19ಘ) ಬಿಸಿಲಿಗೆ ಹಪ್ಪಳ ಒಣಗಿತು. (19ಙ) ಆಕೆ ಕೊಡದೊಂದಿಗೆ ತಂಬಿಗೆಯಲ್ಲೂ ನೀರು ತುಂಬಿಸಿದ್ದಾಳೆ. (19ಚ) ರಾಜುವಿನಂತೆ ಜಾನಕಿಗೂ ಕಾಲಿಗೆ ಪೆಟ್ಟಾಗಿದೆ. (19ಛ) ಮಗಳ ಮದುವೆಗಾಗಿ ಆತ ಹತ್ತು ಸಾವಿರ ಸಂಗ್ರಹಿಸಿದ್ದಾನೆ. ಬರು ಕ್ರಿಯಾಪದದೊಂದಿಗೆ ಮುಖ್ಯ ಘಟಕವಾಗಿ ಒಂದು ಮಾಡುಗ ಘಟಕ ಮತ್ತು ಒಂದು ಸುರು ಇಲ್ಲವೇ ಕೊನೆ ಘಟಕ ಬಂದರೆ ಸಾಕು. ಆದರೆ (19ಕ)ದಲ್ಲಿ ಇವೆರಡರೊಂದಿಗೆ ಘಟನೆ ನಡೆದುದಕ್ಕೆ ಕಾರಣವೇನೆಂಬುದನ್ನು ತಿಳಿಸುವ ಮಳೆ ಬಂದ ಕಾರಣ ಎಂಬ ಮೂರನೆಯ ಮುಖ್ಯವಲ್ಲದ ಘಟಕವೂ ಇದೇ ರೀತಿಯಲ್ಲಿ (19ಖ)ದಲ್ಲಿ ಬಂದಿರುವ ರಾತ್ರಿಯ ಪೂಜೆಗೆ ಎಂಬ ಘಟಕ, (19ಗ)ದಲ್ಲಿ ಬಂದಿರುವ ಕೆಂಪು ಶಾಯಿಯಲ್ಲಿ ಎಂಬ ಘಟಕ, (19ಘ)ದಲ್ಲಿ ಬಂದಿರುವ ಬಿಸಿಲಿಗೆ ಎಂಬ ಘಟಕ, (19ಙ)ದಲ್ಲಿ ಬಂದಿರುವ ಕೊಡದೊಂದಿಗೆ ಎಂಬ ಘಟಕ, (19ಚ)ದಲ್ಲಿ ಬಂದಿರುವ ರಾಜುವಿನಂತೆ ಎಂಬ ಘಟಕ, ಮತ್ತು (19ಛ)ದಲ್ಲಿ ಬಂದಿರುವ ಮಗಳ ಮದುವೆಗಾಗಿ ಎಂಬ ಘಟಕ ಇವೆಲ್ಲವೂ ಮುಖ್ಯವಲ್ಲದ ಘಟಕಗಳು.
2.3 ಘಟಕಗಳ ನಡುವಿನ ವ್ಯತ್ಯಾಸಗಳು
ಆಗುಗ, ಮಾಡುಗ, ಜಾಗ, ಸುರು, ಕೊನೆ, ಸಮಯ ಮತ್ತು ಪ್ರೇರಕಗಳೆಂಬ ಈ ಏಳು ಮುಖ್ಯ ಘಟಕಗಳು ಯಾವ ರೀತಿಯಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂಬುದನ್ನು ಸ್ವಲ್ಪ ವಿವರವಾಗಿ ಕೆಳಗೆ ಪರಿಶೀಲಿಸಲಾಗಿದೆ.
2.3.1 ಆಗುಗ ಮತ್ತು ಮಾಡುಗ
ಒಂದು ಘಟನೆಯ ಮೂಲಕ ಬೇರೆ ಬೇರೆ ಬದಲಾವಣೆಗಳಿಗೆ ಒಳಗಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ‘ಆಗುಗ’ ಘಟಕ ಸೂಚಿಸುತ್ತದೆ. ಆದರೆ ಇಂತಹ ಬದಲಾವಣೆಗಳಾವುವೂ ಈ ಘಟಕದ ಹತೋಟಿಯಲ್ಲಿರುವುದಿಲ್ಲ. ಒಂದು ಘಟನೆಯಿಂದಾಗಿ ಅದು ಈ ರೀತಿ ಬದಲಾವಣೆಗಳಿಗೊಳಗಾಗುತ್ತಿರುವ ಬದಲು ಹೊಸದಾಗಿ ಹುಟ್ಟಿಕೊಳ್ಳುತ್ತಿರಬಹುದು ಇಲ್ಲವೇ ತಯಾರಾಗುತ್ತಿರ ಬಹುದು. (20ಕ) ರಂಗರಾಯರು ತಮ್ಮ ಬಾವಿಯನ್ನು ಮುಚ್ಚಿಸಿದರು. (20ಖ) ರಂಗರಾಯರು ಒಂದು ಮನೆಯನ್ನು ಕಟ್ಟಿಸಿದರು. (20ಕ) ವಾಕ್ಯದಲ್ಲಿ ಆಗುಗವಾಗಿ ಬಂದಿರುವ ತಮ್ಮ ಬಾವಿ ಎಂಬ ಘಟಕ ಆ ವಾಕ್ಯವು ಸೂಚಿಸುವ ಘಟನೆಯಿಂದ ಬದಲಾವಣೆಗೊಳಗಾಗಿದೆ (ಅದು ಇಲ್ಲ ವಾಗಿದೆ), ಆದರೆ (20ಖ)ದಲ್ಲಿ ಆಗುಗವಾಗಿ ಬಂದಿರುವ ಒಂದು ಮನೆ ಎಂಬ ಘಟಕ ಆ ವಾಕ್ಯವು ಸೂಚಿಸುವ ಘಟನೆಯಿಂದ ಹೊಸದಾಗಿ ತಯಾರಾಗಿದೆ ಎಂಬುದನ್ನು ಗಮನಿಸಬಹುದು. ‘ಮಾಡುಗ’ ಘಟಕವೂ ಆಗುಗದ ಹಾಗೆಯೇ ಕ್ರಿಯಾಪದವು ಸೂಚಿಸುವ ಘಟನೆಯಿಂದ ಬದಲಾವಣೆಗೊಳಗಾಗುತ್ತಿರಲು ಸಾಧ್ಯವಿದೆ. ಆದರೆ ಅಂತಹ ಬದಲಾವಣೆ ಮಾಡುಗ ಘಟಕದ ಹತೋಟಿಯಲ್ಲಿರುತ್ತದೆಯೆಂಬುದೇ ಆಗುಗ ಘಟಕಕ್ಕೂ ಮತ್ತು ಮಾಡುಗ ಘಟಕಕ್ಕೂ ನಡುವಿರುವ ಮುಖ್ಯ ವ್ಯತ್ಯಾಸ. (21ಕ) ರಾಜು ಮನೆಗೆ ಓಡಿದ. (21ಖ) ರಾಜು ಮಹಡಿಯಿಂದ ಕೆಳಗೆ ಬಿದ್ದ. ರಾಜು ಎಂಬುದು (21ಕ)ದಲ್ಲಿ ಮಾಡುಗ ಘಟಕವಾಗಿಯೂ ಮತ್ತು (21ಖ) ದಲ್ಲಿ ಆಗುಗ ಘಟಕವಾಗಿಯೂ ಬಂದಿರುವುದನ್ನು ಗಮನಿಸಬಹುದು. (21ಕ) ಸೂಚಿಸುವ ಘಟನೆ ರಾಜುವಿನ ಹತೋಟಿಯಲ್ಲಿದೆ, ಆದರೆ (21ಖ) ಸೂಚಿಸುವ ಘಟನೆ ಆತನ ಹತೋಟಿಯಲ್ಲಿಲ್ಲ. ಒಂದು ಘಟನೆಯನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲದಂತಹ ಮನೆ, ಮರ ಮೊದಲಾದುವನ್ನೂ ಕೆಲವೊಮ್ಮೆ ಮಾಡುಗ ಘಟಕವಾಗಿ ವಾಕ್ಯ ಗಳಲ್ಲಿ ಬಳಸಲು ಸಾಧ್ಯವಿದ್ದು, ಹಾಗೆ ಮಾಡಿದಾಗ ಅವಕ್ಕೆ ಘಟನೆಯೊಂದನ್ನು ಹತೋಟಿಯಲ್ಲಿರಿಸಿಕೊಳ್ಳುವ ಶಕ್ತಿ ಬಂದಿರುವ ಹಾಗೆ ಕಾಣಿಸುತ್ತದೆ. (22ಕ) ಆ ಭೂತದ ಮನೆ ಆರು ಜನರನ್ನು ಬಲಿ ತೆಗೆದುಕೊಂಡಿದೆ.
(22ಖ) ಆ ಆಲದಮರ ನೂರಾರು ಹಕ್ಕಿಗಳಿಗೆ ಆಶ್ರಯ ನೀಡಿದೆ. (22ಗ) ಆತನ ಹಾಡುವಿಕೆ ಮರದ ಮೇಲಿದ್ದ ಕಾಗೆಯನ್ನು ಬೆದರಿಸಿತು.
2.3.2 ಜಾಗ, ಸುರು ಮತ್ತು ಕೊನೆ
ಜಾಗ, ಸುರು ಮತ್ತು ಕೊನೆ ಎಂಬ ಈ ಮೂರು ಘಟಕಗಳೂ ಮುಖ್ಯವಾಗಿ ಘಟನೆಗೆ ಸಂಬಂಧಿಸಿರುವ ಜಾಗವನ್ನು ಸೂಚಿಸುವ ಘಟಕಗಳು. ಇವುಗಳಲ್ಲಿ ಜಾಗ ಘಟಕವು ಒಂದು ಜಾಗದಲ್ಲಿ ನಡೆಯುವ ಘಟನೆಯನ್ನು ಸೂಚಿಸುವು ದಾದರೆ, ಸುರು ಘಟಕವು ಒಂದು ಜಾಗವನ್ನು ‘ಬಿಟ್ಟು’ ಹೋಗುವಂತಹ ಘಟನೆಯನ್ನೂ ಮತ್ತು ಕೊನೆ ಘಟಕವು ಒಂದು ಜಾಗದ ‘ಕಡೆಗಾಗಿ’ ನಡೆಯುವ ಘಟನೆಯನ್ನೂ ಸೂಚಿಸುತ್ತವೆ. ಈ ಮೂರು ರೀತಿಯ ಘಟಕಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (23ಕ) ರಾಜು ತನ್ನ ಪುಸ್ತಕವನ್ನು ಕಪಾಟಿನಲ್ಲಿ ಇರಿಸಿದ. (23ಖ) ರಾಜು ಕಪಾಟಿನಿಂದ ಒಂದು ಇಲಿಮರಿಯನ್ನು ತೆಗೆದ. (23ಗ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜಿದಳು. (23ಕ)ದಲ್ಲಿ ಇರಿಸು ಕ್ರಿಯಾಪದ ಬಂದಿದ್ದು ಇದು ಒಂದು ಜಾಗದಲ್ಲಿ ನಡೆಯುವ ಘಟನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಜಾಗವನ್ನು ಸೂಚಿಸುವ ಕಪಾಟಿನಲ್ಲಿ ಘಟಕ ಬಂದಿದೆ. ಇದಕ್ಕೆ ಬದಲು (23ಖ)ದಲ್ಲಿ ತೆಗೆ ಕ್ರಿಯಾಪದ ಬಂದಿದ್ದು, ಇದು ಒಂದು ಜಾಗವನ್ನು ಬಿಟ್ಟು ಹೋಗುವ ಘಟನೆ ಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಕಪಾಟಿನಿಂದ ಎಂಬ ಸುರು ಘಟಕ ಬಂದಿದೆ. (23ಗ)ದಲ್ಲಿ ಉಜ್ಜು ಕ್ರಿಯಾಪದ ಬಂದಿದ್ದು ಅದು ಒಂದು ಜಾಗದ ಕಡೆಗಾಗಿ ನಡೆಯುವ ಘಟನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಅಕ್ಕಿಬುಟ್ಟಿಗೆ ಎಂಬ ಕೊನೆ ಘಟಕ ಬಂದಿದೆ. ಕೆಲವು ಕ್ರಿಯಾಪದಗಳನ್ನು ಈ ಮೂರು ರೀತಿಯ ಘಟಕಗಳೊಂದಿಗೂ ಬಳಸಲು ಸಾಧ್ಯವಿದ್ದು ಅವು ತಮ್ಮೊಂದಿಗೆ ಬಂದಿರುವ ಘಟಕದ ಸ್ವರೂಪ ವನ್ನಾಧರಿಸಿ ಒಂದೇ ಘಟನೆಯ ಬೇರೆ ಬೇರೆ ಅಂಶಗಳಿಗೆ ಒತ್ತು ಕೊಡಬಲ್ಲುವು. (24ಕ) ಮಕ್ಕಳೆಲ್ಲ ಟೆರೇಸಿನಲ್ಲಿ ಓಡುತ್ತಿದ್ದಾರೆ. (24ಖ) ಮಕ್ಕಳೆಲ್ಲ ಟೆರೇಸಿನಿಂದ ಓಡುತ್ತಿದ್ದಾರೆ. (24ಗ) ಮಕ್ಕಳೆಲ್ಲ ಟೆರೇಸಿಗೆ ಓಡುತ್ತಿದ್ದಾರೆ. ಮೇಲಿನ ಮೂರು ವಾಕ್ಯಗಳಲ್ಲೂ ಓಡು ಎಂಬ ಒಂದೇ ಕ್ರಿಯಾಪದ ಬಂದಿದೆ. ಆದರೆ (24ಕ)ದಲ್ಲಿ ಅದು ಟೆರೇಸಿನಲ್ಲಿ ಎಂಬ ಜಾಗ ಘಟಕದೊಂದಿಗೆ ಬಂದಿರುವ ಕಾರಣ ಓಡುವ ಘಟನೆ ಒಂದು ಜಾಗದಲ್ಲಿ ನಡೆಯುತ್ತಿರುವುದನ್ನೂ, (24ಖ)ದಲ್ಲಿ ಟೆರೇಸಿಗೆ ಎಂಬ ಸುರು ಘಟಕದೊಂದಿಗೆ ಬಂದಿರುವ ಕಾರಣ ಅದೇ ಘಟನೆ ಒಂದು ಜಾಗವನ್ನು ಬಿಟ್ಟು ನಡೆಯುತ್ತಿರುವುದನ್ನೂ ಮತ್ತು (24ಗ)ದಲ್ಲಿ ಟೆರೇಸಿಗೆ ಎಂಬ ಕೊನೆ ಘಟಕದೊಂದಿಗೆ ಬಂದಿರುವ ಕಾರಣ ಅದೇ ಘಟನೆ ಒಂದು ಜಾಗದ ಕಡೆಗಾಗಿ ನಡೆಯುತ್ತಿರುವುದನ್ನೂ ಸೂಚಿಸುತ್ತದೆ.
2.3.3 ಸುರು ಮತ್ತು ಕೊನೆ ಘಟಕಗಳ ಹೆಚ್ಚಿನ ಬಳಕೆಗಳು
ಸುರು ಮತ್ತು ಕೊನೆ ಘಟಕಗಳು ನೇರವಾಗಿ ಒಬ್ಬ ವ್ಯಕ್ತಿಯ ಇಲ್ಲವೇ ಒಂದು ವಸ್ತುವಿನ ಕದಲುವಿಕೆಗೆ ಸಂಬಂಧಿಸಿರುವ ಜಾಗಗಳನ್ನು ಸೂಚಿಸುವ ಬದಲು ಒಂದು ಅನುಭವದ ‘ಕದಲುವಿಕೆ’ಯನ್ನೂ ಸೂಚಿಸಬಲ್ಲುವು.
(25ಕ) ಜಾನಕಿ ತನ್ನ ತಾಯಿಯಿಂದ ಒಂದು ಹಾಡು ಕಲಿತಳು. (25ಖ) ಜಾನಕಿಗೆ ಅವಳ ತಾಯಿ ಒಂದು ಹಾಡು ಕಲಿಸಿದಳು. ಕಲಿ ಕ್ರಿಯಾಪದ ಸುರು ಘಟಕದೊಂದಿಗೂ ಮತ್ತು ಕಲಿಸು ಕ್ರಿಯಾಪದ ಕೊನೆ ಘಟಕದೊಂದಿಗೂ ಬರಬಲ್ಲುದು ಎಂಬುದನ್ನು (25ಕ-ಖ) ವಾಕ್ಯಗಳಿಂದ ತಿಳಿಯಬಹುದು. ಆದರೆ ಇಲ್ಲಿ ನಿಜಕ್ಕೂ ಒಂದು ವಸ್ತುವಿನ ಕದಲುವಿಕೆ ನಡೆದಿಲ್ಲ. ಜಾನಕಿ ತನ್ನಲ್ಲಿಲ್ಲದ ಅನುಭವವೊಂದನ್ನು ಪಡೆದಿದ್ದು ಅದಕ್ಕೆ ಮೂಲ ಅವಳ ತಾಯಿ ಎಂಬುದಾಗಿ ಕದಲುವಿಕೆಗೆ ಸಂಬಂಧಿಸಿದ ಘಟಕಗಳು ಇಲ್ಲಿ ಅವುಗಳ ಹೆಚ್ಚಿನ ಅರ್ಥದಲ್ಲಿ ಬಳಕೆಯಾಗಿವೆ. ಇಂತಹ ಹೆಚ್ಚಿನ ಅರ್ಥಗಳಲ್ಲಿ ಸುರು ಘಟಕಕ್ಕಿಂತಲೂ ಕೊನೆ ಘಟಕದ ಬಳಕೆ ಕನ್ನಡದಲ್ಲಿ ಹೆಚ್ಚು ರೂಢಿಯಲ್ಲಿದೆ. ಈ ವಿಷಯವನ್ನು ಕೆಳಗಿನ ಉದಾ ಹರಣೆಗಳು ಸ್ಪಷ್ಟಪಡಿಸುತ್ತವೆ. (26ಕ) ಅಜ್ಜ ಮಕ್ಕಳಿಗೊಂದು ಕತೆ ಹೇಳಿದ. (26ಖ) ನರಿಗೆ ದ್ರಾಕ್ಷೆ ಹಣ್ಣು ಎಟಕಿತು. (26ಗ) ಅವಳಿಗೆ ಕೋಪ ಬಂದಿದೆ. (26ಘ) ಅವನಿಗೆ ದಿಕ್ಕು ತಪ್ಪಿತು. ಕೊನೆ ಘಟಕವನ್ನು (26ಕ)ದಲ್ಲಿ ‘ಅಜ್ಜ ಹೇಳಿದ ಕತೆ ಯಾರನ್ನು ತಲಪಿದೆ’ ಎಂಬುದನ್ನು ಸೂಚಿಸುವುದಕ್ಕಾಯೂ, (26ಖ)ದಲ್ಲಿ ‘ದ್ರಾಕ್ಷೆ ಹಣ್ಣು ಎಟಕುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ, (26ಗ)ದಲ್ಲಿ ‘ಕೋಪ ಬರುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ ಮತ್ತು (26ಘ)ದಲ್ಲಿ ‘ದಿಕ್ಕು ತಪ್ಪುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ ಬಳಸಲಾಗಿದೆ. ವಿಷಯವಾಕ್ಯಗಳಲ್ಲಿ ಒಂದು ಗುಣಧರ್ಮದ ಇರುವಿಕೆಯನ್ನು ಸೂಚಿಸುವು ದಕ್ಕಾಗಿಯೂ ಕೊನೆ ಘಟಕವನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಮುಂದೆ 3.4ರಲ್ಲಿ ನೋಡಲಿರುವೆವು.
2.4 ಕ್ರಿಯಾಪದಗಳ ವಿಭಜನೆ
ಕ್ರಿಯಾಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪ ಇವೆರಡೂ ಅವುಗಳ ಅರ್ಥವನ್ನವಲಂಬಿಸಿದೆ. ಉದಾಹರಣೆಗಾಗಿ, ಹೆಚ್ಚಿನ ಕ್ರಿಯಾಪದಗಳಿಗೂ ಇಸು ಪ್ರತ್ಯಯವನ್ನು ಸೇರಿಸಿ, ‘ಅವು ಸೂಚಿಸುವ ಘಟನೆ ಇನ್ನೊಬ್ಬ ವ್ಯಕ್ತಿಯ ಪ್ರೇರಣೆಯಿಂದ ನಡೆದಿದೆ’ ಎಂಬಂತಹ ಹೆಚ್ಚಿನ ಅರ್ಥವನ್ನು ಕ್ರಿಯಾಪದಗಳಿಗೆ ಸೇರಿಸಲು ಸಾಧ್ಯವಿದೆ. ಈ ರೀತಿ ಹೆಚ್ಚಿನ ಅರ್ಥವಿರುವ ಕ್ರಿಯಾಪದಗಳೊಂದಿಗೆ ಸಾಮಾನ್ಯವಾಗಿ ಒಂದು ಹೆಚ್ಚಿನ ಮುಖ್ಯ ಘಟಕವೂ ಬಂದಿರುತ್ತದೆ.
(27ಕ) ನೀರು ಕುದಿಯಿತು. (27ಖ) ಜಾನಕಿ ನೀರು ಕುದಿಸಿದಳು. (28ಕ) ನಮ್ಮ ಊರಿಗೆ ಒಬ್ಬ ಮಾಂತ್ರಿಕ ಬಂದಿದ್ದ. (28ಖ) ನಮ್ಮ ಊರಿಗೆ ಪಟೇಲರು ಒಬ್ಬ ಮಾಂತ್ರಿಕನನ್ನು ಬರಿಸಿದ್ದರು. (27ಕ)ದಲ್ಲಿ ಕುದಿ ಕ್ರಿಯಾಪದದೊಂದಿಗೆ ಕುದಿಯುವ ವಸ್ತುವನ್ನು ಸೂಚಿಸುವ ನೀರು ಎಂಬ ಆಗುಗ ಘಟಕ ಮಾತ್ರ ಬಂದಿದೆ. ಆದರೆ (27ಖ)ದಲ್ಲಿ ಈ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಕುದಿಸು ಕ್ರಿಯಾಪದ ಬಂದಿದೆಯಾದ ಕಾರಣ ಅದರೊಂದಿಗೆ ಜಾನಕಿ ಎಂಬ ಹೆಚ್ಚಿನ ಘಟಕವನ್ನು ಬಳಸಬೇಕಾಗಿದೆ. ಇದು ಕುದಿಯುವ ಘಟನೆಗೆ ಮಾಡುಗನೊಬ್ಬನನ್ನು ಸೇರಿಸು (28ಕ)ದಲ್ಲಿ ಬರು ಕ್ರಿಯಾಪದದೊಂದಿಗೆ ಮಾಡುಗ ಮತ್ತು ಜಾಗಗಳು ಬಂದಿವೆ, ಆದರೆ (28ಖ)ದಲ್ಲಿ ಈ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿದೆಯಾದ ಕಾರಣ ಅದರೊಂದಿಗೆ ಮಾಡುಗ ಮತ್ತು ಜಾಗಗಳು ಮಾತ್ರ ವಲ್ಲದೆ ಒಂದು ‘ಪ್ರೇರಕ’ವೂ ಬಂದಿದೆ. ಈ ರೀತಿ ಕ್ರಿಯಾಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪ ಇವೆರಡೂ ಅವುಗಳ ಅರ್ಥವನ್ನವಲಂಬಿಸಿವೆಯಾದ ಕಾರಣ, ಕ್ರಿಯಾ ಪದಗಳನ್ನು ಅವುಗಳೊಂದಿಗೆ ಬರಬಲ್ಲ ಮುಖ್ಯ ಘಟಕಗಳ ಆಧಾರದ ಮೇಲೆ ಬೇರೆ ಬೇರೆ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
2.4.1 ಘಟಕವಿಲ್ಲದೆ ಬರುವ ಕ್ರಿಯಾಪದಗಳು
ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಕಡಿಮೆಯೆಂದರೆ ಒಂದಾದರೂ ಮುಖ್ಯ ಘಟಕದ ಅವಶ್ಯಕತೆಯಿರುತ್ತದೆ. ಇದಕ್ಕೆ ಅಪವಾದವಾಗಿ ಗುಡುಗು, ಮಿಂಚು ಎಂಬಂತಹ ಕೆಲವೇ ಕೆಲವು ಕ್ರಿಯಾಪದಗಳು ಮಾತ್ರ ಯಾವ ಮುಖ್ಯ ಘಟಕವೂ ಇಲ್ಲದೆ ಬರಬಲ್ಲುವು. ಉದಾ: (29ಕ) ನಿನ್ನೆ ಜೋರು ಮಿಂಚುತ್ತಿತ್ತು. (29ಖ) ಜೋರು ಗುಡುಗುತ್ತಾ ಇದೆ. ಮೇಲೆ (29ಕ) ವಾಕ್ಯದಲ್ಲಿ ಮಿಂಚು ಕ್ರಿಯಾಪದೊಂದಿಗೆ ನಿನ್ನೆ ಮತ್ತು ಜೋರು ಎಂಬ ಎರಡು ಮಾತ್ರ ಬಂದಿವೆಯಲ್ಲದೆ ಗುಣಪದಗಳು ಘಟಕಗಳಾವುವೂ ಬಂದಿಲ್ಲ. (29ಖ)ದಲ್ಲಿ ಗುಡುಗು ಕ್ರಿಯಾಪದದೊಂದಿಗೆ ಜೋರು ಗುಣಪದ ಮಾತ್ರ ಬಂದಿದೆ. ಆದರೆ ಇಂತಹ ಕ್ರಿಯಾಪದಗಳೊಂದಿಗೆ ಅವುಗಳಿಗೆ ಸಂಬಂಧಿಸಿರುವ ಗುಡುಗು, ಮಿಂಚು ಎಂಬಂತಹ ನಾಮಪದಗಳನ್ನು ಆಗುಗ ಘಟಕಗಳಾಗಿ ಬಳಸಲು ಸಾಧ್ಯವಿದೆಯಾದ ಕಾರಣ (30ಕ-ಖ ನೋಡಿ), ಅವನ್ನೂ ಮೇಲಿನ ನಿಯಮಕ್ಕೆ ಅಪವಾದಗಳೆಂದು ತಿಳಿಯಬೇಕಾಗಿಲ್ಲ. ಇದಲ್ಲದೆ, ಇಂತಹ ಕ್ರಿಯಾ ಪದಗಳೊಂದಿಗೆ ಸಾಮಾನ್ಯವಾಗಿ ಅವು ಸೂಚಿಸುವ ಘಟನೆಯ ಸಮಯ ಇಲ್ಲವೇ ಜಾಗವನ್ನು ಸೂಚಿಸುವ ಘಟಕಗಳೂ ಬರುತ್ತಿದ್ದು (31ಕ-ಖ ನೋಡಿ), ಈ ಘಟಕಗಳು ಹೆಚ್ಚು ಕಡಿಮೆ ಅವುಗಳ ಮುಖ್ಯ ಘಟಕಗಳ ಹಾಗೆಯೇ ವತ್ರಿಸು ತ್ತವೆ. (30ಕ) ಗುಡುಗು ಗುಡುಗಿತು. (30ಖ) ಮಿಂಚು ಮಿಂಚಿತು. (31ಕ) ಆ ಊರಲ್ಲಿ ದಿನಾಲೂ ಬೆಳಿಗ್ಗೆ ಆರು ಗಂಟೆಗೆ ಗುಡುಗುತ್ತಿತ್ತು. (31ಖ) ಆ ಕಡೆ ಜೋರಾಗಿ ಮಿಂಚುತ್ತಿದೆ.
2.4.2 ಘಟನೆಯ ಹತೋಟಿ
ಮೇಲೆ ಸೂಚಿಸಿರುವಂತೆ, ಕನ್ನಡದ ಕ್ರಿಯಾಪದಗಳನ್ನು ಅವು ತಿಳಿಸುವ ಘಟನೆ ಹತೋಟಿಯಲ್ಲಿರುವಂತಹದೋ ಅಥವಾ ಅಲ್ಲವೋ ಎಂಬ ವಿಷಯದ ಮೇಲೆ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವ ಕ್ರಿಯಾಪದಗಳು ಆಗುಗ ಘಟಕದೊಂದಿಗೆ ಬರುತ್ತವೆ ಯಾದರೆ ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವ ಕ್ರಿಯಾಪದಗಳು ಮಾಡುಗ ಘಟಕದೊಂದಿಗೆ ಬರುತ್ತವೆ. ಉದಾಹರಣೆಗಾಗಿ, ಕುದಿ, ಬೇಯು, ಒಣಗು, ಸಾಯು, ಅರಳು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿಲ್ಲದಿರುವ ಘಟನೆಗಳನ್ನು ಸೂಚಿಸು ತ್ತಿದ್ದು, ಅವುಗಳೊಂದಿಗೆ ಒಂದು ಆಗುಗ ಘಟಕ ಮಾತ್ರ ಮುಖ್ಯ ಘಟಕವಾಗಿ ಬರಬಲ್ಲುದು, ಮತ್ತು ಓಡು, ಅಳು, ಮಲಗು, ಹಾರು, ಕುಣಿ ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುತ್ತಿದ್ದು ಅವುಗ ಳೊಂದಿಗೆ ಒಂದು ಮಾಡುಗ ಘಟಕ ಮಾತ್ರ ಮುಖ್ಯ ಘಟಕವಾಗಿ ಬರಬಲ್ಲುದು.
(32ಕ) ಗುಲಾಬಿ ಹೂ ಅರಳಿದೆ. (32ಖ) ಬಟ್ಟೆ ಒಣಗಿತು. (32ಗ) ರಾಜುವಿನ ಕಪ್ಪು ನಾಯಿ ಸತ್ತಿದೆ. (33ಕ) ರಾಜು ಓಡಿದ. (33ಖ) ಮಗು ಅಳುತ್ತಿದೆ. (33ಗ) ಅವಳು ಕುಣಿದಳು. ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವ ಕ್ರಿಯಾಪದಗಳಲ್ಲಿ ಕೆಲವು ಒಂದು ಮಾಡುಗ ಘಟಕ ಮಾತ್ರವಲ್ಲದೆ ಅದರೊಂದಿಗೆ ಒಂದು ಆಗುಗ ಘಟಕ ವನ್ನೂ ಪಡೆದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಮಾಡು, ಎಳೆ, ಕರೆ, ತಟ್ಟು, ನೆಡು, ತಿನ್ನು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುತ್ತಿದ್ದು, ಅವುಗಳೊಂದಿಗೆ ಮುಖ್ಯ ಘಟಕವಾಗಿ ಒಂದು ಮಾಡುಗ ಘಟಕ ಮಾತ್ರವಲ್ಲದೆ ಒಂದು ಆಗುಗ ಘಟಕವೂ ಬರಬಲ್ಲುದು.
(34ಕ) ರಾಜು ಒಂದು ಗೊಂಬೆ ಮಾಡಿದ. (34ಖ) ಆನೆ ಒಂದು ಮರವನ್ನು ಎಳೆಯುತ್ತಿದೆ. (34ಗ) ಅವನು ಒಂದು ಗಿಡ ನಟ್ಟಿದ್ದಾನೆ. ಇದಲ್ಲದೆ, ಮೇಲೆ ವಿವರಿಸಿರುವ ಮೂರು ರೀತಿಯ ಕ್ರಿಯಾಪದಗಳಲ್ಲೂ ಕೆಲವು ಜಾಗ, ಸುರು ಇಲ್ಲವೇ ಕೊನೆ ಎಂಬ ಘಟಕಗಳನ್ನು ಪಡೆಯಬಲ್ಲುವು. ಉದಾಹರಣೆಗಾಗಿ, ಕರಗು, ತೇಲು, ತುಂಬು, ತುಳುಕು, ಇಂಗು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿಲ್ಲದ ಘಟನೆಗಳನ್ನು ಸೂಚಿಸುತ್ತಿದ್ದು ಅವುಗ ಳೊಂದಿಗೆ ಮುಖ್ಯ ಘಟಕವಾಗಿ ಒಂದು ಆಗುಗ ಘಟಕ ಮಾತ್ರವಲ್ಲದೆ ಒಂದು ಜಾಗ ಘಟಕವೂ ಬರಬಲ್ಲುದು. (35ಕ) ಈ ಹಾಲಿನ ಪುಡಿ ಬಿಸಿನೀರಿನಲ್ಲೂ ಕರಗುತ್ತದೆ. (35ಖ) ನೀರಿನಲ್ಲಿ ಕಸ ತೇಲುತ್ತಿದೆ. (35ಗ) ಕೊಡದಲ್ಲಿ ನೀರು ತುಂಬಿತು. ಇದೇ ರೀತಿಯಲ್ಲಿ, ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ತಂಗು, ನೆಲೆಸು, ಅಡಗು, ಅಲೆ, ತೊಡಗು ಮೊದಲಾದ ಕ್ರಿಯಾಪದ ಗಳೊಂದಿಗೆ ಒಂದು ಮಾಡುಗ ಘಟಕ ಮಾತ್ರವಲ್ಲದೆ ಒಂದು ಜಾಗ ಘಟಕವೂ ಮುಖ್ಯ ಘಟಕವಾಗಿ ಬರಬಲ್ಲುದು. (36ಕ) ಕಳ್ಳರು ಒಂದು ಗುಹೆಯಲ್ಲಿ ಅಡಗಿದ್ದರು. (36ಖ) ಹುಡುಗರು ಬಹಳ ಹೊತ್ತು ಕಾಡಿನಲ್ಲಿ ಅಲೆಯುತ್ತಿದ್ದರು. (36ಗ) ಅವರು ಈ ಊರಿನಲ್ಲಿ ನೆಲೆಸಿದ್ದಾರೆ. ಚೆಲ್ಲು, ಬಿತ್ತು, ಇರಿಸು, ತುಂಬು ಮೊದಲಾದ ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಮಾಡುಗ, ಆಗುಗ ಮತ್ತು ಜಾಗಗಳೆಂಬ ಮೂರು ರೀತಿಯ ಘಟಕಗಳೂ ಮುಖ್ಯ ಘಟಕಗಳಾಗಿ ಬರ ಬಲ್ಲುವು. (37ಕ) ಮಕ್ಕಳು ಈ ಕೋಣೆಯಲ್ಲಿ ನೀರು ಚೆಲ್ಲಿದ್ದಾರೆ. (37ಖ) ರಾಜು ತನ್ನ ಚೀಲವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (37ಗ) ಆಕೆ ಸಿಹಿನೀರನ್ನು ಈ ಕೊಡದಲ್ಲಿ ತುಂಬಿದ್ದಾಳೆ. ಜಾಗ ಘಟಕದ ಬದಲು ಸುರು ಇಲ್ಲವೇ ಕೊನೆ ಘಟಕವನ್ನು ಮುಖ್ಯ ಘಟಕವಾಗಿ ಪಡೆದಿರುವ ಮೇಲೆ ಸೂಚಿಸಿದಂತಹ ಮೂರು ರೀತಿಯ ಕ್ರಿಯಾಪದ ಗಳಿಗೆ ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ. (38ಕ) ಅಟ್ಟದಿಂದ ಒಂದು ಹಗ್ಗ ನೇಲುತ್ತಿದೆ. (38ಖ) ಅವನ ಬೆರಳಿಗೆ ಒಂದು ಮುಳ್ಳು ಚುಚ್ಚಿತು. (39ಕ) ಅವನು ಇಲ್ಲಿಂದ ತೊಲಗಲಿ. (39ಖ) ರಾಜು ಹರಿಗೆ ಹೊಡೆದ. (40ಕ) ಆತ ಬಾವಿಯಿಂದ ನೀರು ಸೇದುತ್ತಿದ್ದಾನೆ. (40ಖ) ಆಕೆ ಗಾಯಕ್ಕೆ ಮುಲಾಮು ಹಚ್ಚುತ್ತಿದ್ದಾಳೆ. ಆಗುಗದೊಂದಿಗೆ (38ಕ)ದಲ್ಲಿ ಸುರು ಘಟಕ ಬಂದಿದೆಯಾದರೆ, (38ಖ)ದಲ್ಲಿ ಕೊನೆ ಘಟಕ ಬಂದಿದೆ. ಇದೇ ರೀತಿಯಲ್ಲಿ ಮಾಡುಗದೊಂದಿಗೆ (39ಕ)ದಲ್ಲಿ ಸುರು ಘಟಕವೂ ಮತ್ತು (39ಖ)ದಲ್ಲಿ ಕೊನೆ ಘಟಕವೂ ಬಂದಿರುವುದನ್ನು ಕಾಣಬಹುದು. ಆಗುಗ ಮತ್ತು ಮಾಡುಗಗಳೆರಡರೊಂದಿಗೆ ಸುರು ಮತ್ತು ಕೊನೆ ಘಟಕಗಳನ್ನು ಪಡೆದಿರುವ ಕ್ರಿಯಾಪದಗಳಿಗೆ ಉದಾಹರಣೆಗಳನ್ನು (40ಕ- ಖ)ಗಳಲ್ಲಿ ಕಾಣಬಹುದು.
2.4.3 ಆಗು ಕ್ರಿಯಾಪದದ ಘಟಕಗಳು
ಘಟಕಗಳ ಮಟ್ಟಿಗೆ ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವ ಆಗು ಕ್ರಿಯಾಪದ ಅಂತಹ ಇತರ ಕ್ರಿಯಾಪದಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನ ವಾಗಿದೆ. ಮೊದಲನೆಯದಾಗಿ, ಅದರೊಂದಿಗೆ ಎರಡು ಘಟಕಗಳು ಬರಲು ಸಾಧ್ಯವಿದ್ದು, ಅವುಗಳಲ್ಲಿ ಒಂದು ಜಾಗವನ್ನೂ ಮತ್ತು ಇನ್ನೊಂದು ಆ ಜಾಗದಲ್ಲಿ ನಡೆದಿರುವ ಘಟನೆ, ಕಾಣಿಸುವ ವಸ್ತು ಮೊದಲಾದುವನ್ನೂ ಸೂಚಿಸುತ್ತವೆ. (41ಕ) ಆತನ ಕಾಲಿನಲ್ಲಿ ಹುಣ್ಣಾಗಿದೆ. (41ಖ) ಆಕೆ ನೆಟ್ಟ ಗಿಡದಲ್ಲಿ ಹೂವಾಗಿದೆ. (41ಗ) ಅವರ ಮನೆಯಲ್ಲಿ ಏನೋ ಗಲಾಟೆಯಾಗುತ್ತಿದೆ. ಎರಡನೆಯದಾಗಿ, ಈ ಕ್ರಿಯಾಪದದೊಂದಿಗೆ ಬರುವ ಘಟಕಗಳೆರಡೂ ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಲು ಸಾಧ್ಯವಿದ್ದು, ಅವು ಆ ವ್ಯಕ್ತಿ ಇಲ್ಲವೇ ವಸ್ತುವಿಗೆ ಎರಡು ಬೇರೆ ಬೇರೆ ಸಮಯಗಳಲ್ಲಿರುವ ಅವಸ್ಥೆಗಳನ್ನು ಸೂಚಿಸಬಲ್ಲುವು. ಆಗು ಕ್ರಿಯಾಪದ ಈ ಎರಡು ಅವಸ್ಥೆಗಳನ್ನು ಸಂಬಂಧಿಸುವ ಘಟನೆಯನ್ನು ಸೂಚಿಸುತ್ತದೆ. (42ಕ) ರಾಜು ಹಣವಂತನಾದ. (42ಖ) ರಾಜಕುಮಾರ ಕಪ್ಪೆಯಾದ. (42ಗ) ಅವರು ಅಧ್ಯಕ್ಷರಾಗುತ್ತಾರೆ. (42ಘ) ಅವನ ತೋಳು ಆಕೆಯ ತಲೆದಿಂಬಾಗಿದೆ. (42ಕ)ದಲ್ಲಿ ಬಂದಿರುವ ರಾಜು ಮತ್ತು ಹಣವಂತ ಎಂಬ ಎರಡು ಘಟಕಗಳೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿವೆ ಎಂಬುದನ್ನು ಗಮನಿಸಬಹುದು. ಇದೇ ರೀತಿಯಲ್ಲಿ (42ಖ)ದಲ್ಲಿ ಬಂದಿರುವ ರಾಜಕುಮಾರ ಮತ್ತು ಕಪ್ಪೆ ಎಂಬ ಎರಡು ಘಟಕಗಳೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿದ್ದು, ಅವು ಆ ವ್ಯಕ್ತಿಯ ಎರಡು ಅವಸ್ಥೆಗಳನ್ನು ಸೂಚಿಸುತ್ತಿವೆ. ಆಗು ಕ್ರಿಯಾಪದದೊಂದಿಗೆ ಬರುವ ಘಟಕಗಳೆರಡೂ ಈ ರೀತಿ ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಿದ್ದಲ್ಲಿ ಅವು ಒಂದೇ ವಿಭಕ್ತಿ ರೂಪದಲ್ಲಿ ಬಳಕೆಯಾಗುತ್ತವೆ. ಇಂತಹ ವಾಕ್ಯಗಳನ್ನು ಮಾಡು ಕ್ರಿಯಾ ಪದವಿರುವ ಬೇರೊಂದು ವಾಕ್ಯದ ಒಳಗಿರಿಸಿ ಹೇಳಿದಾಗ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ.
(43ಕ) ರಾಜಕುಮಾರ ಕಪ್ಪೆಯಾದ. (43ಖ) ಮಂತ್ರವಾದಿ ರಾಜಕುಮಾರನನ್ನು ಕಪ್ಪೆಯನ್ನಾಗಿ ಮಾಡಿದ. (43ಗ) ಅವನು ಶ್ರೀಮಂತನಾದ.
(43ಘ) ಅವನನ್ನು ಶ್ರೀಮಂತನನ್ನಾಗಿ ಮಾಡಿದ್ದು ಅವನ ಬುದ್ಧಿವಂತಿಕೆ. (43ಕ)ದಲ್ಲಿ ಬಂದಿರುವ ರಾಜಕುಮಾರ ಮತ್ತು ಕಪ್ಪೆ ಎಂಬ ಎರಡು ಘಟಕಗಳೂ ಒಂದೇ ವಿಭಕ್ತಿಯಲ್ಲಿ ಬರುವುವೆಂಬ ವಿಷಯ ಆ ವಾಕ್ಯವನ್ನು ಒಳವಾಕ್ಯವಾಗಿ ಪಡೆದಿರುವ (43ಖ) ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
2.4.4 ಕದಲುವ ಮತ್ತು ಕದಲದ ಘಟನೆಗಳು
ಜಾಗವೊಂದನ್ನು ಸೂಚಿಸಬೇಕಾಗಿರುವ ಕ್ರಿಯಾಪದಗಳನ್ನು ಕದಲುವ ಘಟನೆ ಗಳನ್ನು ಸೂಚಿಸುವವುಗಳು ಮತ್ತು ಕದಲದ ಘಟನೆಗಳನ್ನು ಸೂಚಿಸುವವುಗಳು
ಎಂಬುದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇವು ಗಳಲ್ಲಿ ಕದಲದ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಜಾಗ ಘಟಕ ಬರಬಲ್ಲುದಾದರೆ ಕದಲುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಸುರು ಇಲ್ಲವೇ ಕೊನೆ ಘಟಕಗಳು (ಅಥವಾ ಅವೆರಡೂ ಒಟ್ಟಾಗಿ) ಬರಬಲ್ಲುವು.
ಕದಲುವ ಘಟನೆಗಳಲ್ಲೆಲ್ಲ ಯಾವುದಾದರೂ ಒಂದು ಜಾಗದಿಂದ ಇಲ್ಲವೇ ಒಂದು ಜಾಗದ ಕಡೆಗಾಗಿ ನಡೆಯುವ ಚಲನೆ ನೇರವಾಗಿ ಇಲ್ಲವೇ ಸೂಕ್ಷ್ಮವಾಗಿ ಸೂಚಿತವಾಗಿರುತ್ತದೆ. ಈ ಚಲನೆ ಸುರುವಾಗುವುದೆಲ್ಲಿ ಎಂಬುದನ್ನು ಸುರು ಘಟಕವೂ ಮತ್ತು ಅದು ಕೊನೆಗೊಳ್ಳುವುದೆಲ್ಲಿ ಎಂಬುದನ್ನು ಕೊನೆ ಘಟಕವೂ ತಿಳಿಸುತ್ತವೆ. ಕೆಲವು ಕ್ರಿಯಾಪದಗಳೊಂದಿಗೆ ಈ ಎರಡು ರೀತಿಯ ಘಟಕಗಳಲ್ಲಿ ಒಂದು ಮಾತ್ರ ಬರಬಲ್ಲುದು, ಆದರೆ ಬೇರೆ ಕೆಲವು ರೀತಿಯ ಕ್ರಿಯಾಪದ ಗಳೊಂದಿಗೆ ಇವೆರಡೂ ಒಟ್ಟಾಗಿ ಬರಬಲ್ಲುವು. (44ಕ) ಜಾನಕಿ ಅಕ್ಕಿಯಿಂದ ಕಲ್ಲು ಹೆಕ್ಕುತ್ತಿದ್ದಾಳೆ. (44ಖ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜುತ್ತಿದ್ದಾಳೆ. (44ಗ) ಸ್ವಾಮಿಗಳ ಸವಾರಿ ಪುಣೆಯಿಂದ ಬೊಂಬಾಯಿಗೆ ಹೋಗಿದೆ. (44ಕ)ದಲ್ಲಿ ಬಂದಿರುವ ಹೆಕ್ಕು ಕ್ರಿಯಾಪದ ಒಂದು ಜಾಗದಿಂದ ನಡೆಯುವ ಚಲನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಅಕ್ಕಿಯಿಂದ ಎಂಬ ಸುರು ಘಟಕ ಬಂದಿದೆ. ಇದಕ್ಕೆ ಬದಲು (44ಖ)ದಲ್ಲಿ ಬಂದಿರುವ ಉಜ್ಜು ಕ್ರಿಯಾಪದ ಒಂದು ಜಾಗದ ಕಡೆಗಾಗಿ ನಡೆಯುವ ಚಲನೆಯನ್ನು ಸೂಚಿಸುವು ದಾದ ಕಾರಣ ಅದರೊಂದಿಗೆ ಅಕ್ಕಿ ಬುಟ್ಟಿಗೆ ಎಂಬ ‘ಕೊನೆ’ ಘಟಕ ಬಂದಿದೆ.
(44ಗ)ದಲ್ಲಿ ಬಂದಿರುವ ಹೋಗು ಕ್ರಿಯಾಪದ ಇಂತಹ ಎರಡು ರೀತಿಯ ಚಲನೆಗಳನ್ನೂ (ಎಂದರೆ ಒಂದು ಜಾಗದಿಂದ ನಡೆಯುವ ಚಲನೆಯನ್ನು ಮತ್ತು ಇನ್ನೊಂದು ಜಾಗದ ಕಡೆಗಾಗಿ ನಡೆಯುವ ಚಲನೆಯನ್ನು) ಸೂಚಿಸುವುದಾದ ಕಾರಣ ಅದರೊಂದಿಗೆ ಪುಣೆಯಿಂದ ಎಂಬ ಸುರು ಘಟಕ ಮಾತ್ರವಲ್ಲದೆ ಬೊಂಬಾಯಿಗೆ ಎಂಬ ಕೊನೆ ಘಟಕವೂ ಬಂದಿದೆ.
ಕದಲದ ಘಟನೆಗಳಲ್ಲಿ ಈ ರೀತಿ ಚಲನೆಯ ಅರ್ಥವಿರುವುದಿಲ್ಲ. ಹಾಗಾಗಿ ಅಂತಹ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಅವು ಸೂಚಿಸುವ ಘಟನೆ ಎಲ್ಲಿ ನಡೆಯುತ್ತದೆ ಎಂಬುದನ್ನು ತಿಳಿಸುವ ಜಾಗ ಘಟಕ ಮಾತ್ರವೇ ಬರಬಲ್ಲುದು. (45ಕ) ರಾಜು ಹಣವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (45ಖ) ದರೋಡೆಕೋರರು ಹಣವನ್ನು ಕಾಡಿನಲ್ಲಿ ಅಡಗಿಸಿದ್ದಾರೆ. (45ಗ) ಮುದುಕಿಯ ಶವ ಬಾವಿಯಲ್ಲಿ ತೇಲುತ್ತಿದೆ.
2.5 ವಿಭಜನೆಯ ಸಮಸ್ಯೆಗಳು
ಈ ರೀತಿ ಕ್ರಿಯಾಪದಗಳೊಂದಿಗೆ ಎಂತಹ ಘಟಕಗಳು ಮತ್ತು ಎಷ್ಟು ಘಟಕಗಳು ಮುಖ್ಯ ಘಟಕಗಳಾಗಿ ಬರುತ್ತವೆ ಎಂಬ ವಿಷಯದ ಆಧಾರದ ಮೇಲೆ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಿ ಹೇಳುವಲ್ಲಿ ಒಂದು ಮುಖ್ಯವಾದ ತೊಂದರೆಯಿದೆ. ಅದೇನೆಂದರೆ, ಕನ್ನಡದಲ್ಲಿ ಬಳಕೆಯಾಗುವ ಹಲವು ಕ್ರಿಯಾಪದ ಗಳು ಇಂತಹ ಯಾವುದಾದರೂ ಒಂದು ಗುಂಪಿನಲ್ಲಿ ಮಾತ್ರವೇ ಉಳಿಯುವ ಬದಲು ಎರಡು ಅಥವಾ ಜಾಸ್ತಿ ಗುಂಪುಗಳಲ್ಲಿ ಬರುತ್ತವೆ, ಮತ್ತು ಅವು ಯಾವ ಗುಂಪಿನಲ್ಲಿ ಬರುತ್ತವೆ ಎಂಬುದರ ಮೇಲೆ ಅವುಗಳ ಅರ್ಥದಲ್ಲೂ ವ್ಯತ್ಯಾಸ ಕಂಡುಬರುತ್ತದೆ.
2.5.1 ಹತೋಟಿಯ ಸೂಚನೆ
ಒಂದು ಘಟನೆಯನ್ನು ವರ್ಣಿಸುವ ಸಮಯದಲ್ಲಿ ಅದು ನಡೆದಿದೆಯೆಂದಿಷ್ಟೇ ಹೇಳಬಹುದು ಇಲ್ಲವೇ ಅದು ಒಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಹತೋಟಿಯಲ್ಲಿ ನಡೆದಿದೆಯೆಂದು ಸೂಚಿಸಬಹುದು. ಹೆಚ್ಚಿನ ಕ್ರಿಯಾಪದಗಳನ್ನೂ ಈ ಎರಡನೆಯ ಅರ್ಥದಲ್ಲಿ ಬಳಸಬೇಕಿದ್ದಲ್ಲಿ ಅವಕ್ಕೆ ಇಸು ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ಕೆಳಗೆ (ಕ) ವಾಕ್ಯಗಳಲ್ಲಿ ಹತೋಟಿಯಲ್ಲಿಲ್ಲದ ಘಟನೆಗಳನ್ನೂ ಮತ್ತು (ಖ) ವಾಕ್ಯಗಳಲ್ಲಿ ಹತೋಟಿಯಲ್ಲಿರುವವುಗಳನ್ನೂ ಸೂಚಿಸಲಾಗಿದೆ (46ಕ) ನೀರು ಕುದಿಯಿತು. (46ಖ) ಜಾನಕಿ ನೀರು ಕುದಿಸಿದಳು. (47ಕ) ನೀರು ಮುಗಿಯಿತು. (47ಖ) ಜಾನಕಿ ನೀರು ಮುಗಿಸಿದಳು. ಆದರೆ ಒಡೆ, ಬೆಳೆ, ಕದಡು, ಮಗುಚು, ಸಿಗಿ, ಮುರಿ, ಹರಿ, ಏರು ಮೊದಲಾದ ಕೆಲವು ಕ್ರಿಯಾಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಮೇಲೆ ಸೂಚಿಸಿದ ಎರಡು ಸಂದಭ್ರಗಳಲ್ಲೂ ಬಳಸಲು ಸಾಧ್ಯವಿದೆ.
(48ಕ) ಕೊಡ ಒಡೆಯಿತು. (48ಖ) ಸೀತಾಬಾಯಿ ಕೊಡ ಒಡೆದಳು. (49ಕ) ಗೆಲ್ಲು ಮುರಿಯಿತು. (49ಖ) ರಾಜು ಗೆಲ್ಲು ಮುರಿದ. (48ಕ) ವಾಕ್ಯದಲ್ಲಿ ಒಡೆ ಕ್ರಿಯಾಪದ ಒಂದು ಹತೋಟಿಯಲ್ಲಿಲ್ಲದ ಘಟನೆ ಯನ್ನು ಸೂಚಿಸುತ್ತಿದೆಯಾದರೆ, (48ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆ. (48ಕ)ದಲ್ಲಿ ಈ ಕ್ರಿಯಾ ಪದದೊಂದಿಗೆ ಒಂದು ಆಗುಗ ಘಟಕ (ಕೊಡ) ಮಾತ್ರ ಬಂದಿದೆ, ಆದರೆ (48ಖ)ದಲ್ಲಿ ಅದರೊಂದಿಗೆ ಈ ಆಗುಗ ಘಟಕ ಮಾತ್ರವಲ್ಲದೆ ಒಂದು ಮಾಡುಗ ಘಟಕವೂ (ಸೀತಾಬಾಯಿ ಎಂಬುದೂ) ಬಂದಿದೆ. (49ಕ-ಖ) ವಾಕ್ಯ ಗಳಲ್ಲೂ ಹೀಗೆಯೇ.
ತುರಿಸು, ಮೆಚ್ಚು, ಒಪ್ಪು, ತಪ್ಪು, ಹೋಗು, ಮರೆ ಮೊದಲಾದ ಬೇರೆ ಕೆಲವು ಕ್ರಿಯಾಪದಗಳೂ ಮೇಲಿನವುಗಳ ಹಾಗೆಯೇ ಹತೋಟಿಯಲ್ಲಿರುವ ಇಲ್ಲವೇ ಹತೋಟಿಯಲ್ಲಿ ಇಲ್ಲದಿರುವ ಘಟನೆಗಳನ್ನು ಯಾವ ಪ್ರತ್ಯಯದ ಸಹಾಯವಿಲ್ಲದೆಯೂ ಸೂಚಿಸಬಲ್ಲುವು. ಆದರೆ ಈ ಕ್ರಿಯಾಪದಗಳು ತಿಳಿಸುವ ಘಟನೆ ಹತೋಟಿಯಲ್ಲಿಲ್ಲ ಎಂಬುದನ್ನು ಸೂಚಿಸಬೇಕಿದ್ದಲ್ಲಿ, ಅಂತಹ ಘಟನೆ ಯಲ್ಲಿ ತೊಡಗಿರುವ ವ್ಯಕ್ತಿ, ಪ್ರಾಣಿ ಮೊದಲಾದುವನ್ನು ಮಾಡುಗ ಘಟಕದ ಮೂಲಕ ಸೂಚಿಸುವ ಬದಲು ಕೊನೆ ಘಟಕದ ಮೂಲಕ ಸೂಚಿಸಬೇಕಾಗುತ್ತದೆ. (50ಕ) ಜನಾದ್ರನ ತಲೆ ತುರಿಸಿದ. (50ಖ) ಜನಾದ್ರನನಿಗೆ ತಲೆ ತುರಿಸಿತು. (51ಕ) ಗಿರೀಶ ಪಾಠವನ್ನು ಮರೆತಿದ್ದಾನೆ. (51ಖ) ಗಿರೀಶನಿಗೆ ಪಾಠ ಮರೆತಿದೆ. ಹತೋಟಿಯಲ್ಲಿಲ್ಲದ ಘಟನೆಯನ್ನಾಗಲಿ ಇಲ್ಲವೇ ಹತೋಟಿಯಲ್ಲಿರುವ ಘಟನೆಯನ್ನಾಗಲಿ ಪ್ರತ್ಯಯವನ್ನು ಬಳಸದೇನೇ ಸೂಚಿಸಬಲ್ಲ ಬೀಳು, ತೇಗು, ಆಕಳಿಸು ಮೊದಲಾದ ಬೇರೆಯೂ ಕೆಲವು ಕ್ರಿಯಾಪದಗಳೂ ಕನ್ನಡದಲ್ಲಿವೆ. ಆದರೆ ಈ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವಾಗ ಮೇಲಿನ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸಿದ ಹಾಗೆ ಅವುಗಳೊಂದಿಗೆ ಬರುವ ಘಟಕಗಳ ಸಂಖ್ಯೆಯಲ್ಲಿ ಇಲ್ಲವೇ ಸ್ವರೂಪದಲ್ಲಿ ಬದಲಾವಣೆಯಾಗುವುದಿಲ್ಲ. (52ಕ) ರಾಜು ಬಿದ್ದ. (52ಖ) ಅವನು ಆಕಳಿಸಿದ. ಮೇಲಿನ ಕ್ರಿಯಾಪದಗಳು ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವು ದಿದ್ದಲ್ಲಿ, ಅವುಗಳೊಂದಿಗೆ ಬರುವ ಘಟಕವನ್ನು ಆಗುಗವೆಂದೂ ಮತ್ತು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವುದಿದ್ದಲ್ಲಿ ಅದೇ ಘಟಕವನ್ನು ಮಾಡುಗವೆಂದೂ ಪರಿಗಣಿಸಬೇಕಾಗುವುದೆಂಬುದೇ ಇವುಗಳ ಬಳಕೆಯಲ್ಲಿ ಕಾಣಿಸುವ ವೈಶಿಷ್ಟ್ಯ.
ಉದಾಹರಣೆಗಾಗಿ, ಬೀಳು ಕ್ರಿಯಾಪದ ಸಾಮಾನ್ಯವಾಗಿ ಬೀಳುವವನ ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುತ್ತದೆ. ಆದರೆ, ಕೆಲವು ವಿಶಿಷ್ಟವಾದ ಸಂದಭ್ರಗಳಲ್ಲಿ (ಉದಾಹರಣೆಗಾಗಿ ನಾಟಕದಲ್ಲಿ ಪಾತ್ರ ವಹಿಸುತ್ತಿರುವ ಒಬ್ಬ ವ್ಯಕ್ತಿ ಕೆಳಗೆ ಬೀಳುವಂತೆ ನಟಿಸಬೇಕಾಗಿರುವಾಗ) ಅದು ಒಂದು ಹತೋಟಿ ಯಲ್ಲಿರುವ ಘಟನೆಯನ್ನೂ ಸೂಚಿಸುತ್ತಿರಲು ಸಾಧ್ಯವಿದೆ. ಮೊದಲನೆಯ ಬಳಕೆ ಯಲ್ಲಿ ಅದೊಂದು ಆಗುಗ ಘಟಕದೊಂದಿಗೆ ಬಂದಿದೆಯೆಂದು ಹೇಳಬೇಕಾಗು ತ್ತದೆ ಮತ್ತು ಎರಡನೆಯ ಬಳಕೆಯಲ್ಲಿ ಅದೊಂದು ಮಾಡುಗ ಘಟಕದೊಂದಿಗೆ ಬಂದಿದೆಯೆಂದು ಹೇಳಬೇಕಾಗುತ್ತದೆ.
2.5.2 ಸಮಗ್ರತೆಯ ಸೂಚನೆ
ಕನ್ನಡದ ಕ್ರಿಯಾಪದಗಳಲ್ಲಿ ಕೆಲವು ಸೂಚಿಸುವ ಘಟನೆಗಳು ಆಗುಗವನ್ನು ಪೂತ್ರಿ ಯಾಗಿ ಬಾಧಿಸುತ್ತವೆ, ಆದರೆ ಬೇರೆ ಕೆಲವು ಆಗುಗದ ಒಂದು ಭಾಗವನ್ನಷ್ಟೇ ಬಾಧಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಗಮನಿಸಬಹುದು. (53ಕ) ರಾಜು ಮೇಜನ್ನು ಮುಟ್ಟಿದ. (53ಖ) ರಾಜು ನದಿಯನ್ನು ದಾಟಿದ. ರಾಜು ಮೇಜಿನ ತುದಿಯನ್ನು ಮಾತ್ರವೇ ಮುಟ್ಟಿರುವನಾದರೂ (53ಕ) ವಾಕ್ಯ ವನ್ನು ಬಳಸಲು ಸಾಧ್ಯವಿದೆ, ಆದರೆ (53ಖ) ವಾಕ್ಯವನ್ನು ಬಳಸಬೇಕಿದ್ದಲ್ಲಿ ಆತ ಪೂತ್ರಿಯಾಗಿ ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಹೋಗಿ ತಲಪಿರುವುದು ಅವಶ್ಯ. ದಾಟು ಕ್ರಿಯಾಪದವು ಸೂಚಿಸುವ ಘಟನೆ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಪೂತ್ರಿಯಾಗಿ ಬಾಧಿಸುತ್ತದೆ, ಆದರೆ ಮುಟ್ಟು ಕ್ರಿಯಾ ಪದವು ಸೂಚಿಸುವ ಘಟನೆ ವ್ಯಕ್ತಿ ಇಲ್ಲವೇ ವಸ್ತುವಿನ ಒಂದು ಭಾಗವನ್ನಷ್ಟೇ ಬಾಧಿಸುತ್ತಿರಲು ಸಾಧ್ಯವಿದೆ. ಹತ್ತು, ಈಜು, ಓದು ಮೊದಲಾದ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ಘಟನೆಗಳನ್ನೂ ಸೂಚಿಸಲು ಸಾಧ್ಯವಿದ್ದು, ಮೊದಲನೆಯ ಅರ್ಥದಲ್ಲಿ ಅವುಗಳೊಂದಿಗೆ ಒಂದು ಆಗುಗ ಘಟಕ ಬರುವುದಾದರೆ, ಎರಡನೆಯ ಅರ್ಥ ದಲ್ಲಿ ಒಂದು ಕೊನೆ ಇಲ್ಲವೇ ಜಾಗ ಘಟಕ ಬರುತ್ತದೆ. (54ಕ) ಆತ ಕಾವೇರಿ ನದಿಯನ್ನು ಈಜಿದ. (54ಖ) ಆತ ಕಾವೇರಿ ನದಿಯಲ್ಲಿ ಈಜಿದ. (55ಕ) ಆತ ಏಣಿಯಿಂದ ಮರವನ್ನು ಹತ್ತಿದ. (55ಖ) ಆತ ಏಣಿಯಿಂದ ಮರಕ್ಕೆ ಹತ್ತಿದ. (54ಕ)ದಲ್ಲಿ ಈಜು ಕ್ರಿಯಾಪದದೊಂದಿಗೆ ಮಾಡುಗ ಮತ್ತು ಆಗುಗ ಘಟಕಗಳು ಬಂದಿದ್ದು, ಅದಕ್ಕೆ ‘ಆತ ಕಾವೇರಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿದ’ ಎಂಬುದಾಗಿ ಸಮಗ್ರಾರ್ಥವಿದೆ. ಆದರೆ, (54ಖ) ದಲ್ಲಿ ಇದೇ ಕ್ರಿಯಾಪದದೊಂದಿಗೆ ಮಾಡುಗ ಮತ್ತು ಜಾಗ ಘಟಕಗಳು ಬಂದಿದ್ದು, ಅದಕ್ಕೆ ‘ಆತ ಕಾವೇರಿ ನದಿಯ ಒಂದು ಭಾಗದಲ್ಲಿ ಈಜಿದ’ ಎಂದಿಷ್ಟೇ ಅರ್ಥವಿದೆ. (55ಕ-ಖ)ದಲ್ಲೂ ಹೀಗೆಯೇ.
ತುಂಬು, ಸುಲಿ, ಹಿಂಡು, ಕೊಯ್ಯು, ಕುಡಿ, ಓದು, ಬರೆ ಮೊದಲಾದ ಬೇರೆ ಕೆಲವು ಕ್ರಿಯಾಪದಗಳೂ ಇದೇ ರೀತಿಯಲ್ಲಿ ವ್ಯಕ್ತಿ, ವಸ್ತು ಮೊದಲಾ ದುವನ್ನು ಪೂತ್ರಿಯಾಗಿ ಇಲ್ಲವೇ ಅವುಗಳ ಒಂದು ಭಾಗವನ್ನಷ್ಟೇ ಬಾಧಿಸು ತ್ತಿರಲು ಸಾಧ್ಯವಿದ್ದು, ಇಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಘಟಕ ಗಳು ಅವುಗಳೊಂದಿಗೆ ಆಗುಗದ ರೂಪದಲ್ಲಾಗಲೀ ಇಲ್ಲವೇ ಸುರು ಅಥವಾ ಜಾಗದ ರೂಪದಲ್ಲಾಗಲೀ ಬರಬಲ್ಲುವು.
(56ಕ) ಅವನು ಆ ಪುಸ್ತಕವನ್ನು ಓದಿದ್ದಾನೆ. (56ಖ) ಅವನು ಆ ಪುಸ್ತಕದಿಂದ ಒಂದು ಕತೆಯನ್ನು ಓದಿದ್ದಾನೆ. (57ಕ) ಆಕೆ ಒಂದು ಪುಸ್ತಕವನ್ನು ಬರೆದಿದ್ದಾಳೆ. (57ಖ) ಆಕೆ ಒಂದು ಪುಸ್ತಕದಲ್ಲಿ ಕವಿತೆಯನ್ನು ಬರೆದಿದ್ದಾಳೆ. (56ಕ)ದಲ್ಲಿ ಓದು ಕ್ರಿಯಾಪದದೊಂದಿಗೆ ಪುಸ್ತಕ ಎಂಬ ಪದ ಒಂದು ಆಗುಗ ಘಟಕವಾಗಿ ಬಂದಿದೆ, ಮತ್ತು ಆ ಕ್ರಿಯಾಪದ ಸೂಚಿಸುವ ಘಟನೆ ಪುಸ್ತಕವನ್ನು ಪೂತ್ರಿಯಾಗಿ ಬಾಧಿಸುತ್ತದೆಯೆಂಬ ಅರ್ಥ ಆ ವಾಕ್ಯಕ್ಕಿದೆ. ಆದರೆ, (56ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಪುಸ್ತಕ ಎಂಬ ಪದ ಒಂದು ಸುರು ಘಟಕವಾಗಿ ಬಂದಿದೆ ಮತ್ತು ಆ ವಾಕ್ಯಕ್ಕೆ ಓದು ಕ್ರಿಯಾಪದ ಸೂಚಿಸುವ ಘಟನೆ ಪುಸ್ತಕದ ಒಂದು ಭಾಗವನ್ನಷ್ಟೇ ಬಾಧಿಸುತ್ತದೆಯೆಂಬ ಅರ್ಥವಿದೆ. (57ಕ-ಖ)ಗಳಲ್ಲಿ ಬಂದಿರುವ ಬರೆ ಕ್ರಿಯಾಪದಕ್ಕೂ ಈ ರೀತಿ ಎರಡು ಬಳಕೆಗಳಿರುವುದನ್ನು ಕಾಣ ಬಹುದು.
2.5.3 ಕದಲುವಿಕೆಯ ಸೂಚನೆ
ಕ್ರಿಯಾಪದಗಳನ್ನು ಕದಲುವವು ಮತ್ತು ಕದಲದವು ಎಂಬುದಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದನ್ನು ನಾವು ಮೇಲೆ (2.4.4ರಲ್ಲಿ) ನೋಡಿರುವೆವು. ಕದಲುವ ಕ್ರಿಯಾಪದಗಳೊಂದಿಗೆ ಸುರು ಇಲ್ಲವೇ ಕೊನೆ ಘಟಕ ಬರುವುದಾದರೆ, ಕದಲದ ಕ್ರಿಯಾಪದಗಳೊಂದಿಗೆ ಜಾಗ ಘಟಕ ಬರುತ್ತದೆ. ಆದರೆ, ಅದ್ದು, ಬೀಳು, ಹಾಕು ಮೊದಲಾದ ಕೆಲವು ಕ್ರಿಯಾಪದಗಳು ಒಂದು ಜಾಗ ಘಟಕದೊಂದಿಗಾಗಲೀ ಇಲ್ಲವೇ ಒಂದು ಸುರು ಅಥವಾ ಕೊನೆ ಘಟಕದೊಂದಿಗಾಗಲೀ ಬರಬಲ್ಲುವಾಗಿದ್ದು, ಅವು ಎಂತಹ ಘಟಕದೊಂದಿಗೆ ಬರುತ್ತವೆ ಎಂಬುದನ್ನಾಧರಿಸಿ, ಅವುಗಳ ಬಳಕೆಯಲ್ಲಿ ಈ ಎರಡು ರೀತಿಯ ಘಟನೆಗಳೂ ಸೂಚಿತವಾಗುತ್ತವೆ. (58ಕ) ಪೊೀಲೀಸರು ಆ ಕಳ್ಳನ ಬೆರಳನ್ನು ಕುದಿಯುವ ಎಣ್ಣಿಯಲ್ಲಿ ಅದ್ದಿದರು. (58ಖ) ಪೊೀಲೀಸರು ಆ ಕಳ್ಳನ ಬೆರಳನ್ನು ಕುದಿಯುವ ಎಣ್ಣಿಗೆ ಅದ್ದಿದರು. (59ಕ) ಸುರೇಶನ ಹೊಸ ಚೆಂಡು ನೀರಿನಲ್ಲಿ ಬಿದ್ದಿದೆ. (59ಖ) ಸುರೇಶನ ಹೊಸ ಚೆಂಡು ನೀರಿಗೆ ಬಿದ್ದಿದೆ. ಅದ್ದು ಕ್ರಿಯಾಪದ ಸಾಮಾನ್ಯವಾಗಿ ಒಂದು ಚಲನೆಯನ್ನು ಸೂಚಿಸುತ್ತಿರುತ್ತದೆ. ಆದರೆ, ಅದರೊಂದಿಗೆ (58ಖ)ದಲ್ಲಿ ಕಾಣಿಸಿದ ಹಾಗೆ ಒಂದು ಕೊನೆ ಘಟಕ ವನ್ನು ಬಳಸಿದಾಗ ಈ ಚಲನೆಯ ಮೇಲೆ ಒತ್ತು ಬೀಳುತ್ತದೆ, ಮತ್ತು (58ಕ) ದಲ್ಲಿ ಕಾಣಿಸಿದ ಹಾಗೆ ಜಾಗ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುವುದಿಲ್ಲ. ಇದೇ ರೀತಿಯಲ್ಲಿ ಬೀಳು ಕ್ರಿಯಾಪದದೊಂದಿಗೆ ಜಾಗ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುವುದಿಲ್ಲ (59ಕ), ಆದರೆ ಕೊನೆ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುತ್ತದೆ (59ಖ).
2.6 ಘಟಕಗಳನ್ನು ಪ್ರತ್ಯೇಕಿಸುವುದು
ಮೇಲೆ ಸೂಚಿಸಿರುವ ಹಾಗೆ, ಕ್ರಿಯಾಪದಗಳೊಂದಿಗೆ ಅವು ತಿಳಿಸುವ ಘಟನೆಯ ಸ್ವರೂಪವನ್ನಾಧರಿಸಿ ಬೇರೆ ಬೇರೆ ರೀತಿಯ ಘಟಕಗಳನ್ನು ಬಳಸುವ ಅವಶ್ಯಕತೆ ಯಿದೆ. ಒಂದು ವಾಕ್ಯದಲ್ಲಿ ಒಂದೇ ಮುಖ್ಯ ಘಟಕ ಬಂದಿದೆಯಾದರೆ ಅದು ಯಾವುದು ಎಂಬುದನ್ನು ಕ್ರಿಯಾಪದದ ಸ್ವರೂಪದ ಆಧಾರದ ಮೇಲೆ ತಿಳಿಯಲು ಕಷ್ಟವಾಗುವುದಿಲ್ಲ. ಉದಾಹರಣೆಗಾಗಿ, ಒಂದು ಕ್ರಿಯಾಪದವು ಹತೋಟಿ ಯಲ್ಲಿಲ್ಲದಿರುವ ಘಟನೆಯನ್ನು ಸೂಚಿಸುತ್ತಿದೆಯಾದರೆ ಅದರೊಂದಿಗೆ ಬಂದಿರುವ ಘಟಕ ಆಗುಗವೆಂದೂ ಮತ್ತು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆ ಯಾದರೆ ಅದರೊಂದಿಗೆ ಬಂದಿರುವ ಘಟಕ ಮಾಡುಗವೆಂದೂ ಹೇಳಲು ಸಾಧ್ಯ (60ಕ) ರಾಜು ದಣಿದ. (60ಖ) ರಾಜು ಕುಳಿತ. (60ಕ) ವಾಕ್ಯ ಹತೋಟಿಯಲ್ಲಿಲ್ಲದ ಘಟನೆಯೊಂದನ್ನು ಸೂಚಿಸುತ್ತಿರುವ ಕಾರಣ, ಅದರಲ್ಲಿ ಬಂದಿರುವ ರಾಜು ಎಂಬ ಪದ ಆಗುಗ ಘಟಕವನ್ನು ಸೂಚಿಸುತ್ತಿದೆ. ಆದರೆ (60ಖ) ವಾಕ್ಯ ಹತೋಟಿಯಲ್ಲಿರುವ ಘಟನೆಯೊಂದನ್ನು ಸೂಚಿಸುತ್ತಿದ್ದು, ಅದರಲ್ಲಿ ಬಂದಿರುವ ಅದೇ ಪದ ಮಾಡುಗ ಘಟಕವನ್ನು ಸೂಚಿಸುತ್ತಿದೆ. ಒಂದು ವಾಕ್ಯದಲ್ಲಿ ಎರಡು ಅಥವಾ ಜಾಸ್ತಿ ಘಟಕಗಳು ಬಂದಿವೆಯಾದಲ್ಲಿ, ಅವುಗಳಲ್ಲಿ ಯಾವುದು ಯಾವ ಘಟಕ ಎಂಬುದಾಗಿ ಅವನ್ನು ಪ್ರತ್ಯೇಕಿಸಿ ಹೇಳುವ ಅವಶ್ಯಕತೆಯುಂಟಾಗುತ್ತದೆ. ಈ ರೀತಿ ವಾಕ್ಯವೊಂದರಲ್ಲಿ ಬಂದಿರುವ ಘಟಕ ಗಳನ್ನು ಪ್ರತ್ಯೇಕಿಸುವುದಕ್ಕಾಗಿ ವಿಭಕ್ತಿ ಪ್ರತ್ಯಯಗಳನ್ನಾಗಲೀ ಇಲ್ಲವೇ ಬೇರೆ ಯಾವುದಾದರೂ ಪದಗಳನ್ನಾಗಲೀ ಸೇರಿಸುವ ಕ್ರಮ ಬಳಕೆಯಲ್ಲಿದೆ.
ಉದಾಹರಣೆಗಾಗಿ ಒಂದು ವಾಕ್ಯದಲ್ಲಿ ಮಾಡುಗ ಮತ್ತು ಆಗುಗಗಳೆಂಬ ಎರಡು ಘಟಕಗಳೂ ಒಟ್ಟಾಗಿ ಬಂದಿವೆಯಾದಲ್ಲಿ, ಅವೆರಡರಲ್ಲಿ ಯಾವುದು ಮಾಡುಗ ಮತ್ತು ಯಾವುದು ಆಗುಗ ಎಂಬುದನ್ನು ತಿಳಿಸುವುದಕ್ಕಾಗಿ ಅವುಗಳಲ್ಲಿ ಒಂದರೊಂದಿಗೆ (ಆಗುಗದೊಂದಿಗೆ) ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸ ಲಾಗುತ್ತದೆ. (61ಕ) ಹರಿ ಬಿದ್ದ. (61ಖ) ರಾಜು ಹರಿಯನ್ನು ದೂಡಿದ.
(61ಕ) ವಾಕ್ಯದಲ್ಲಿ ಆಗುಗವನ್ನು ಸೂಚಿಸುವ ಒಂದು ಘಟಕ (ಹರಿ ಎಂಬುದು) ಮಾತ್ರ ಬಂದಿದೆ. ಹಾಗಾಗಿ ಅದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧ ವಿದೆ ಎಂಬುದನ್ನು ಸೂಚಿಸುವ ಅವಶ್ಯಕತೆಯಿಲ್ಲ. ಆದರೆ, (61ಖ)ದಲ್ಲಿ ಆಗುಗ ಮತ್ತು ಮಾಡುಗಗಳೆರಡೂ ಒಟ್ಟಾಗಿ ಬಂದಿವೆಯಾದ ಕಾರಣ, ಅವನ್ನು ಗುರುತಿಸುವ ಎರಡು ಪದಗಳಲ್ಲಿ (ಹರಿ ಮತ್ತು ರಾಜು ಎಂಬವುಗಳಲ್ಲಿ) ಯಾವುದು ಆಗುಗ ಮತ್ತು ಯಾವುದು ಮಾಡುಗ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಆಗುಗದೊಂದಿಗೆ ಅನ್ನು ಪ್ರತ್ಯಯವನ್ನು ಬಳಸಬೇಕಾಗಿದೆ ಎಂಬುದನ್ನು (61ಖ)ದಲ್ಲಿ ಕಾಣಬಹುದು.
2.6.1 ಅನ್ನು ಪ್ರತ್ಯಯದ ಬಳಕೆ
ಒಂದು ವಾಕ್ಯದಲ್ಲಿ ಮಾಡುಗವನ್ನು ಸೂಚಿಸುವ ಪದ ಒಬ್ಬ ವ್ಯಕ್ತಿ ಇಲ್ಲವೇ ಒಂದು ಪ್ರಾಣಿಯನ್ನು ಗುರುತಿಸುತ್ತಿದ್ದು, ಆಗುಗವನ್ನು ಸೂಚಿಸುವ ಪದ ಒಂದು ವಸ್ತುವನ್ನು ಗುರುತಿಸುತ್ತಿದೆಯಾದಲ್ಲಿ, ಅವೆರಡರಲ್ಲಿ ಯಾವುದು ಆಗುಗ ಮತ್ತು ಯಾವುದು ಮಾಡುಗ ಎಂಬ ವಿಷಯದಲ್ಲಿ ಸಂಶಯ ಬರುವ ಸಂಭವ ಕಡಿಮೆ. ಯಾಕೆಂದರೆ, ಅಂತಹ ಸಂದಭ್ರಗಳಲ್ಲೆಲ್ಲ ವ್ಯಕ್ತಿ ಇಲ್ಲವೇ ಪ್ರಾಣಿ ಮಾಡುಗ ವಾಗಿರುತ್ತದೆ ಮತ್ತು ವಸ್ತು ಆಗುಗವಾಗಿರುತ್ತದೆ. ಹಾಗಾಗಿ ಅಂತಹ ವಾಕ್ಯಗಳಲ್ಲಿ ಆಗುಗವನ್ನು ಗುರುತಿಸುವ ಪದದೊಂದಿಗೆ ಅನ್ನು ಪ್ರತ್ಯಯವನ್ನು ಬಳಸದಿರಲು ಸಾಧ್ಯವಿದೆ. (62ಕ) ರಾಜು ಒಂದು ಕಾಗದ(ವನ್ನು) ಬರೆಯುತ್ತಿದ್ದಾನೆ. (62ಖ) ಜಾನಕಿ ಅಡುಗೆ(ಯನ್ನು) ಮಾಡಿದಳು. ಆದರೆ ಸಾಮಾನ್ಯವಾಗಿ ಆಗುಗವನ್ನು ಸೂಚಿಸುವ ಪದ ಕ್ರಿಯಾಪದದ ಹತ್ತಿರ ಬಂದಿರುವಾಗ ಮಾತ್ರ ಈ ರೀತಿ ಅನ್ನು ಪ್ರತ್ಯಯವನ್ನು ಬಳಸದಿರಲು ಸಾಧ್ಯ. ಅದಕ್ಕೂ ಕ್ರಿಯಾಪದಕ್ಕೂ ನಡುವೆ ಯಾವುದಾದರೂ ಬೇರೆ ಪದ ಇಲ್ಲವೇ ಪ್ರತ್ಯಯ ಬಂದಿದೆಯಾದರೆ ಇದು ಸಾಧ್ಯವಾಗದು. (63ಕ) ರಾಜು ಒಂದು ಕಾಗದವನ್ನು ಬೇಗನೆ ಬರೆಯುತ್ತಿದ್ದಾನೆ. (63ಖ) ರಾಜು ಒಂದು ಕಾಗದವನ್ನೂ ಬರೆಯುತ್ತಿದ್ದಾನೆ.
6.2.2 ಜಾಗ, ಸುರು ಮತ್ತು ಕೊನೆ
ಘಟನೆಗೆ ಸಂಬಂಧಿಸಿದ ಜಾಗ, ಸುರು ಮತ್ತು ಕೊನೆಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಅಲ್ಲಿ, ಇಂದ ಮತ್ತು ಗೆ ಎಂಬ ಮೂರು ವಿಭಕ್ತಿ ಪ್ರತ್ಯಯಗಳು ಬಳಕೆಯಾಗುತ್ತವೆ. (64ಕ) ಆಕೆ ಕೊಡದಲ್ಲಿ ನೀರು ತುಂಬಿಸಿದಳು. (64ಖ) ಅವರು ಮನೆಯಿಂದ ಹೊರಗೆ ಬಂದರು. (64ಗ) ರಾಜು ಮನೆಗೆ ಹೋದ. ಇವುಗಳಲ್ಲಿ ಗೆ ಪ್ರತ್ಯಯಕ್ಕೆ ಅಕಾರದಲ್ಲಿ ಕೊನೆಗೊಳ್ಳುವ ನಾಮಪದಗಳ ಮುಂದೆ ಕ್ಕೆ ಎಂಬ ರೂಪವಿದೆ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ನಾಮಪದ ಗಳ ಮುಂದೆ ಇಗೆ ಎಂಬ ರೂಪವಿದೆ.
ಮೊಲ ಮೊಲಕ್ಕೆ
ಕಟ್ಟಡ ಕಟ್ಟಡಕ್ಕೆ
ಮನೆ ಮನೆಗೆ ಕಲ್ಲಿಗೆ ಕಲ್ಲು ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಮನುಷ್ಯರನ್ನು ಸೂಚಿಸುತ್ತಿವೆ ಯಾದಲ್ಲಿ ಅವಕ್ಕೆ ಒಂದು ನಕಾರ ಸೇರುತ್ತದೆ ಮತ್ತು ಅವುಗಳ ಮುಂದೆ ಈ ಪ್ರತ್ಯಯಕ್ಕೆ ಕ್ಕೆ ಎಂಬುದರ ಬದಲು ಇಗೆ ಎಂಬ ರೂಪವಿದೆ. ಮನುಷ್ಯ ಅಕ್ಕನಿಗೆ ಮನುಷ್ಯನಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಅಲ್ಲಿ ಮತ್ತು ಇಂದ ಎಂಬ ವಿಭಕ್ತಿ ಪ್ರತ್ಯಯಗಳು ಇತರ ವಿಭಕ್ತಿ ಪ್ರತ್ಯಯಗಳ ಹಾಗೆ ನೇರವಾಗಿ ನಾಮಪದ ಗಳೊಂದಿಗೆ ಸೇರುವ ಬದಲು ಅವುಗಳ ಸಂಬಂಧರೂಪದೊಂದಿಗೆ ಸೇರುತ್ತವೆ.
ನಾಮಪದ ಸಂಬಂಧ ರೂಪ ಮರದ ಮರ ತಲೆಯ ಕಾಡು ಕಾಡಿನ ಮರದಲ್ಲಿ ಮರದಿಂದ ರಾಜನಲ್ಲಿ ರಾಜನಿಂದ ತಲೆಯಲ್ಲಿ ತಲೆಯಿಂದ ಕಾಡಿನಲ್ಲಿ ಕಾಡಿನಿಂದ ಸಾಮಾನ್ಯವಾಗಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಅಲ್ಲಿ ಪ್ರತ್ಯಯ ಬಂದಿದೆಯಾದರೆ ಅದಕ್ಕೆ ಜಾಗವನ್ನು ಸೂಚಿಸುವ ಅರ್ಥಕ್ಕಿಂತಲೂ ಉಳ್ಳವನನ್ನು ಇಲ್ಲವೇ ಒಡೆತನವಿರುವವನನ್ನು ಸೂಚಿಸುವ ಅರ್ಥ ಬರುತ್ತದೆ. (65ಕ) ನಮ್ಮಲ್ಲಿ ಎರಡು ದನಗಳಿವೆ. (65ಖ) ಆ ಪುಸ್ತಕವನ್ನು ರಾಜು ಅವರಲ್ಲಿ ಕೊಟ್ಟಿದ್ದಾನೆ.
2.6.3 ಸಂಬಂಧವನ್ನು ಸೂಚಿಸುವ ಪದಗಳು
ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವು ದಕ್ಕಾಗಿ ಮೇಲೆ ವಿವರಿಸಿದಂತೆ ಹೆಚ್ಚಿನ ಸಂದಭ್ರಗಳಲ್ಲೂ ವಿಭಕ್ತಿ ಪ್ರತ್ಯಯ ಗಳನ್ನು ಬಳಸಲಾಗುತ್ತದೆ. ಆದರೆ, ಕನ್ನಡದಲ್ಲಿ ಒಟ್ಟು ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬುದಾಗಿ ಮಾತ್ರ ಬಳಕೆಯಲ್ಲಿವೆಯಾದ ಕಾರಣ, ಕೆಲವು ಸಂದಭ್ರಗಳಲ್ಲಿ ಈ ಕೆಲಸಕ್ಕಾಗಿ ಬೇರೆ ಪದಗಳನ್ನು ಬಳಸುವ ಅವಶ್ಯಕತೆ ಕಂಡುಬರುತ್ತದೆ. ನಾಲ್ಕು ವಿಭಕ್ತಿ ಪ್ರತ್ಯಯಗಳು ಉದಾಹರಣೆಗಾಗಿ ಮಾಡುಗ ಘಟಕದೊಂದಿಗೆ ಒಂದು ವಾಕ್ಯದಲ್ಲಿ ಆಗುಗ ಮತ್ತು ಪ್ರೇರಕಗಳೆರಡೂ ಬಂದಿವೆಯಾದರೆ, ಅವುಗಳಲ್ಲಿ ಆಗುಗವನ್ನು ಉಳಿದ ಎರಡು ಘಟಕಗಳಿಂದ ಪ್ರತ್ಯೇಕಿಸಲು ಅನ್ನು ಪ್ರತ್ಯಯವನ್ನು ಬಳಸಬಹುದು. ಆದರೆ ಮಾಡುಗ ಮತ್ತು ಪ್ರೇರಕಗಳನ್ನು ಪ್ರತ್ಯೇಕಿಸಿ ಹೇಳಲು ಕನ್ನಡದಲ್ಲಿ ಯಾವ ವಿಭಕ್ತಿ ಪ್ರತ್ಯಯವೂ ಇಲ್ಲ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಮಾಡುಗದೊಂದಿಗೆ ಕೈಯಲ್ಲಿ ಇಲ್ಲವೇ ಮೂಲಕ ಎಂಬ ಪದವನ್ನು ಬಳಸಬೇಕಾಗುತ್ತದೆ. (66ಕ) ಬಡದೆ ಕಟ್ಟಿಗೆ ಒಡೆದ. (66ಖ) ಸೀತಾಬಾಯಿ ಬಡದೆಯ ಕೈಯಲ್ಲಿ ಕಟ್ಟಿಗೆ ಒಡೆಸಿದಳು. (67ಕ) ಸೀತೆ ಒಂದು ಗೊಂಬೆ ತಂದಿದ್ದಾಳೆ. (67ಖ) ಜಾನಕಿ ಸೀತೆಯ ಮೂಲಕ ಒಂದು ಗೊಂಬೆ ತರಿಸಿದ್ದಾಳೆ. ಜಾಗವನ್ನು ಸೂಚಿಸುವುದಕ್ಕಾಗಿ ಅಲ್ಲಿ ಪ್ರತ್ಯಯದ ಬಳಕೆಯಾಗುತ್ತದೆ ಎಂಬು ದನ್ನು ನಾವು ಮೇಲೆ ನೋಡಿರುವೆವು. ಆದರೆ ಜಾಗಗಳಲ್ಲಿ ಹಲವು ವಿಧಗಳಿದ್ದು, ಅವುಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳ ಬದಲು ಪದಗಳನ್ನು ಬಳಸಲಾಗುತ್ತದೆ. ಈ ಪದಗಳು ನಾಮಪದ ಗಳ ಸಂಬಂಧ ರೂಪದೊಂದಿಗೆ ಬರುತ್ತವೆ. (68ಕ) ಗೆಲ್ಲಿನ ಮೇಲೆ ಒಂದು ಹಕ್ಕಿ ಕುಳಿತಿದೆ. (68ಖ) ಆ ಹಲಸಿನ ಮರದ ಆಚೆ ಗಂಧಸಾಲೆ ಬಿತ್ತಿದ್ದೇವೆ. (68ಗ) ಅವರು ತಮ್ಮ ಮನೆಯ ಸುತ್ತ ಮುಳ್ಳಿನ ಗಿಡ ನೆಟ್ಟಿದ್ದಾರೆ. (68ಘ) ಅಜ್ಜಮ್ಮನವರು ಅಡುಗೆ ಕೋಣೆಯೊಳಗೆ ಮಲಗಿದ್ದರು. (68ಙ) ಆ ಹುಡುಗ ತನ್ನ ತಂದೆಯ ಹತ್ತಿರ ನಿಂತಿದ್ದಾನೆ. ಮೇಲಿನ ವಾಕ್ಯಗಳಲ್ಲಿ ಮೇಲೆ, ಆಚೆ, ಸುತ್ತ, ಒಳಗೆ ಮತ್ತು ಹತ್ತಿರ ಎಂಬ ಪದಗಳು ಬೇರೆ ಬೇರೆ ರೀತಿಯ ಜಾಗಗಳನ್ನು ಸೂಚಿಸುತ್ತಿವೆ ಎಂಬುದನ್ನು ಗಮನಿಸಬಹುದು. ಇಂತಹ ಪದಗಳು ಸೂಚಿಸುವ ಜಾಗಗಳು ಕದಲುವಿಕೆಯ ಸುರು ಇಲ್ಲವೇ ಕೊನೆಗಳಾಗಿದ್ದಲ್ಲಿ ಈ ವಿಷಯವನ್ನು ಸೂಚಿಸಲು ಅವುಗಳೊಂದಿಗೆ ಇಂದ ಮತ್ತು ಗೆ ಎಂಬ ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ. (69ಕ) ಗೆಲ್ಲಿನ ಮೇಲಿನಿಂದ ಹಕ್ಕಿ ಹಾರಿ ಹೋಯಿತು. (69ಖ) ಆತ ಮರದ ಆಚೆಗೆ ಹೋದ.
2.7 ವ್ಯವಹಾರ ಸಂಬಂಧ
ವಾಕ್ಯಗಳಲ್ಲಿ ಬರುವ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳನ್ನು ಸೂಚಿಸುವ ಬಗೆ ಹೇಗೆ ಎಂಬುದನ್ನು ನಾವು ಮೇಲಿನ ವಿಭಾಗಗಳಲ್ಲಿ (2.1-2.6ರಲ್ಲಿ) ನೋಡಿರುವೆವು. ಈ ಎಲ್ಲಾ ಸಂಬಂಧಗಳೂ ವಾಕ್ಯದ ಅರ್ಥಕ್ಕೆ ಸಂಬಂಧಿಸಿವೆಯಾದ ಕಾರಣ ಇವನ್ನೆಲ್ಲ ಒಟ್ಟಾಗಿ ‘ಅರ್ಥ’ ಸಂಬಂಧಗಳೆಂದು ಕರೆಯಬಹುದು. ಇವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಪ್ರಾಮುಖ್ಯವಾಗಿ ವಿಭಕ್ತಿ ಪ್ರತ್ಯಯಗಳ ಬಳಕೆಯಾಗುತ್ತದೆ. ಇಂತಹ ಅರ್ಥ ಸಂಬಂಧಗಳನ್ನು ಮಾತ್ರವಲ್ಲದೆ ವಾಕ್ಯ ಘಟಕಗಳ ಮೂಲಕ ಬೇರೆ ಕೆಲವು ರೀತಿಯ ಸಂಬಂಧಗಳನ್ನೂ ಸೂಚಿಸುವ ಅವಶ್ಯಕತೆಯಿದೆ. ಈ ಸಂಬಂಧಗಳು ವಾಕ್ಯವೊಂದರ ಘಟಕಗಳನ್ನು ಆ ವಾಕ್ಯದ ಹಿಂದಿನ ವಾಕ್ಯಗಳಲ್ಲಿ ಬಂದಿರುವ ಘಟಕಗಳೊಂದಿಗೆ ಮತ್ತು ಮಾತಿನ ಸನ್ನಿವೇಶದೊಂದಿಗೆ ಸಂಬಂಧಿಸು ತ್ತವೆ. ಇವನ್ನು ‘ವ್ಯವಹಾರ’ ಸಂಬಂಧಗಳೆಂದು ಕರೆಯಬಹುದು.
2.7.1 ವಿಷಯ ಮತ್ತು ಸುದ್ದಿ
ವಾಕ್ಯಗಳನ್ನೆಲ್ಲ ಒಂದು ವಿಷಯ ಮತ್ತು ಆ ವಿಷಯದ ಕುರಿತಾಗಿ ವಾಕ್ಯ ತಿಳಿಸುವ ಸುದ್ದಿ ಎಂಬುದಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಕನ್ನಡ ವಾಕ್ಯಗಳಲ್ಲಿ ಸಾಮಾನ್ಯವಾಗಿ ಮೊದಲಿಗೆ ಬರುವ ಘಟಕ ವಿಷಯವನ್ನೂ ಮತ್ತು ಅದರ ಅನಂತರ ಬರುವ ಘಟಕಗಳು (ಮತ್ತು ಕ್ರಿಯಾಪದ) ಆ ವಿಷಯದ ಕುರಿತಾಗಿ ಏನಾದರೂ ಒಂದು ಸುದ್ದಿಯನ್ನೂ ತಿಳಿಸುತ್ತವೆ.
(70ಕ) ರಾಜು ಅಂಗಡಿಗೆ ಹೋಗಿದ್ದಾನೆ. (70ಕ)ದಲ್ಲಿ ಮೊದಲಿಗೆ ಬಂದಿರುವ ರಾಜು ಎಂಬ ಘಟಕ ಒಂದು ವಿಷಯ ವನ್ನೂ ಮತ್ತು ಅದರ ಅನಂತರ ಬಂದಿರುವ ಅಂಗಡಿಗೆ ಹೋಗಿದ್ದಾನೆ ಎಂಬ ವಾಕ್ಯದ ಅಂಗ ಆ ವಿಷಯದ ಕುರಿತಾಗಿ ಒಂದು ಸುದ್ದಿಯನ್ನೂ ತಿಳಿಸುತ್ತವೆ. ಇದೇ ವಾಕ್ಯದಲ್ಲಿ ರಾಜು ಎಂಬುದರ ಬದಲು ಅಂಗಡಿಗೆ ಎಂಬುದನ್ನು ಮೊದಲಿಗೆ ಇರಿಸಿ ಹೇಳಿದಲ್ಲಿ ಆ ವಾಕ್ಯದ ವಿಷಯದಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು (70ಖ)ದಲ್ಲಿ ಕಾಣಬಹುದು. (70ಖ) ಅಂಗಡಿಗೆ ರಾಜು ಹೋಗಿದ್ದಾನೆ. (70ಖ)ದಲ್ಲಿ ಮೊದಲು ಬಂದಿರುವ ಅಂಗಡಿಗೆ ಎಂಬುದು ಆ ವಾಕ್ಯದ ವಿಷಯ ಮತ್ತು ಅದರ ಅನಂತರ ಬಂದಿರುವ ರಾಜು ಹೋಗಿದ್ದಾನೆ ಎಂಬುದು ಆ ವಿಷಯದ ಕುರಿತಾಗಿ ವಾಕ್ಯ ತಿಳಿಸುವ ಸುದ್ದಿ ಎಂಬುದನ್ನು ಗಮನಿಸಬಹುದು. ವಾಕ್ಯದಲ್ಲಿ ಈ ರೀತಿ ಬೇರೆ ಬೇರೆ ಘಟಕಗಳನ್ನು ವಾಕ್ಯದ ಮೊದಲನೇ ಸ್ಥಾನದಲ್ಲಿ ಇರಿಸಿ ಅವನ್ನು ಆ ವಾಕ್ಯದ ವಿಷಯಗಳನ್ನಾಗಿ ಮಾಡಿ ಹೇಳಲು ಸಾಧ್ಯ (71ಕ) ರಾಜು ಬಡಗಿಯನ್ನು ಕರೆದಿದ್ದ. (71ಖ) ಬಡಗಿಯನ್ನು ರಾಜು ಕರೆದಿದ್ದ. (72ಕ) ನಾನು ಅವನಿಗೆ ನಿನ್ನೆ ಒಂದು ಪುಸ್ತಕ ಕೊಟ್ಟಿದ್ದೆ. (72ಖ) ಅವನಿಗೆ ನಾನು ನಿನ್ನೆ ಒಂದು ಪುಸ್ತಕ ಕೊಟ್ಟಿದ್ದೆ. (72ಗ) ನಿನ್ನೆ ನಾನು ಅವನಿಗೆ ಒಂದು ಪುಸ್ತಕ ಕೊಟ್ಟಿದ್ದೆ. (72ಘ) ಪುಸ್ತಕವನ್ನು ನಾನು ನಿನ್ನೆ ಅವನಿಗೆ ಕೊಟ್ಟಿದ್ದೆ. ಎರಡು ಅಥವಾ ಜಾಸ್ತಿ ವಾಕ್ಯಗಳನ್ನೊಳಗೊಂಡಿರುವ ವಾಕ್ಯಗಳಲ್ಲಿಯೂ ಈ ರೀತಿ ವಾಕ್ಯದ ಬೇರೆ ಬೇರೆ ಘಟಕಗಳನ್ನು ಮೊದಲನೆಯ ಘಟಕವನ್ನಾಗಿ ಮಾಡಿ ಅದನ್ನು ಇಡೀ ವಾಕ್ಯದ ವಿಷಯವೆಂದು ಸೂಚಿಸಲು ಸಾಧ್ಯವಿದೆ. (73ಕ) ಅವಳು ಹಾಡುತ್ತಾಳೆಂಬುದನ್ನು ನಾನು ಕೇಳಿದ್ದೇನೆ. (73ಖ) ನಾನು ಅವಳು ಹಾಡುತ್ತಾಳೆಂಬುದನ್ನು ಕೇಳಿದ್ದೇನೆ. (74ಕ) ಅವನು ಮೈಸೂರಿಗೆ ಹೋಗಿ ರಾಜುವನ್ನು ಕಂಡ. (74ಖ) ರಾಜುವನ್ನು ಅವನು ಮೈಸೂರಿಗೆ ಹೋಗಿ ಕಂಡ. (74ಗ) ಮೈಸೂರಿಗೆ ಹೋಗಿ ಅವನು ರಾಜುವನ್ನು ಕಂಡ. ಸಾಮಾನ್ಯವಾಗಿ ವಾಕ್ಯಗಳಲ್ಲಿ ವಿಷಯಗಳಾಗಿ ಬಂದಿರುವ ಘಟಕಗಳು ಕೇಳುಗನಿಗೆ ತಿಳಿದಿರುತ್ತವೆ, ಮತ್ತು ಅವುಗಳ ಅನಂತರ ‘ಸುದ್ದಿ’ಯಾಗಿ ಬರುವ ಅಂಶ ಆ ವಿಷಯಗಳ ಕುರಿತಾಗಿ ಕೇಳುಗನಿಗೆ ತಿಳಿದಿಲ್ಲದಂತಹದನ್ನೇನಾದರೂ ತಿಳಿಸುತ್ತದೆ. ಈ ಕಾರಣಕ್ಕಾಗಿ, ಕೇಳುಗನಿಗೆ ತಿಳಿದಿಲ್ಲದಂತಹ ಇಲ್ಲವೇ ಪರಿಚಿತವಾಗಿಲ್ಲದಂತಹ ಘಟಕಗಳು ವಾಕ್ಯದ ವಿಷಯವಾಗಿ ಬರಲಾರವು. ಮೇಲೆ (72ಘ)ದಲ್ಲಿ ಒಂದು ಪುಸ್ತಕ ಎಂಬುದನ್ನು ಪುಸ್ತಕ ಎಂಬುದಾಗಿ ಬದಲಾಯಿ ಸಿರುವುದು ಇದೇ ಕಾರಣಕ್ಕಾಗಿ ಎಂಬುದನ್ನು ಗಮನಿಸಬಹುದು. ಒಂದು ಪುಸ್ತಕ ಎಂಬುದು ಕೇಳುಗನಿಗೆ ಪರಿಚಿತವಾಗಿಲ್ಲದಿರುವ ಪುಸ್ತಕವನ್ನೂ ಮತ್ತು ಪುಸ್ತಕ ಎಂಬುದು ಪರಿಚಿತವಾಗಿರುವ ಪುಸ್ತಕವನ್ನೂ ಸೂಚಿಸುತ್ತವೆ.
2.7.2 ಮುಖ್ಯ ಅಂಶ
ಸಾಮಾನ್ಯವಾಗಿ ಒಂದು ವಾಕ್ಯದಲ್ಲಿ ‘ಸುದ್ದಿ’ಯಾಗಿ ಬಂದಿರುವ ಭಾಗದಲ್ಲಿ ಯಾವುದಾದರೂ ಒಂದು ಅಂಶ ಮುಖ್ಯವಾದುದಾಗಿರುತ್ತದೆ. ಇದು ವಾಕ್ಯದ ಘಟಕವಾಗಿರಬಹುದು ಇಲ್ಲವೇ ಕ್ರಿಯಾಗುಣಪದವಾಗಿರಬಹುದು. ಕನ್ನಡದಲ್ಲಿ ಈ ಮುಖ್ಯವಾಗಿರುವ ಅಂಶ ಕ್ರಿಯಾಪದದ ಎಡಕ್ಕೆ ಬರುತ್ತದೆ. ಒಂದು ವಾಕ್ಯದ ‘ಸುದ್ದಿ’ ವಿಭಾಗದಲ್ಲಿ ಬಂದಿರುವ ಬೇರೆ ಬೇರೆ ಘಟಕ ಇಲ್ಲವೇ ಕ್ರಿಯಾ ಗುಣಪದಗಳಲ್ಲಿ ಒಂದನ್ನು ಸುದ್ದಿಯ ಮುಖ್ಯ ಅಂಶವನ್ನಾಗಿ ಮಾಡಲು ಈ ರೀತಿ ಕ್ರಿಯಾಪದದ ಎಡಕ್ಕೆ ಇರಿಸಿ ಹೇಳಲು ಸಾಧ್ಯವಿದೆ. (75ಕ) ರಾಜು ನಿಮ್ಮ ಕೊಡೆಯನ್ನು ನನಗೆ ಕೊಟ್ಟ. (75ಖ) ರಾಜು ನನಗೆ ನಿಮ್ಮ ಕೊಡೆ(ಯನ್ನು) ಕೊಟ್ಟ. (75ಗ) ನನಗೆ ನಿಮ್ಮ ಕೊಡೆಯನ್ನು ರಾಜು ಕೊಟ್ಟ. (76ಕ) ರಾಜು ಮೈಸೂರಿನಿಂದ ನಾಳೆ ಬರುತ್ತಾನೆ. (76ಖ) ರಾಜು ನಾಳೆ ಮೈಸೂರಿನಿಂದ ಬರುತ್ತಾನೆ. (76ಗ) ಮೈಸೂರಿನಿಂದ ನಾಳೆ ರಾಜು ಬರುತ್ತಾನೆ. (75ಕ) ವಾಕ್ಯದಲ್ಲಿ ಬಂದಿರುವ ಸುದ್ದಿಯಲ್ಲಿ ನನಗೆ ಎಂಬುದು ಮುಖ್ಯ ಅಂಶ ಮತ್ತು (75ಖ)ದಲ್ಲಿ ಇದಕ್ಕೆ ಬದಲು ಕೊಡೆ ಎಂಬುದು ಮುಖ್ಯ ಅಂಶ; (75ಗ)ದಲ್ಲಿ ರಾಜು ಎಂಬುದು ಮುಖ್ಯ ಅಂಶ. ವಾಕ್ಯದ ಮುಖ್ಯ ಅಂಶವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಬೇರೆಯೂ ಕೆಲವು ವಿಧಾನಗಳು ಬಳಕೆಯಲ್ಲಿವೆ. ಅಂಶವೊಂದನ್ನು ಇದ್ದಲ್ಲೇ ಒತ್ತಿ ಹೇಳುವುದು ಒಂದು ವಿಧಾನ (77ಕ-ಗ); ಮತ್ತು ವಾಕ್ಯವನ್ನು ‘ಸಂಬಂಧಿಸುವ’ ವಾಕ್ಯವನ್ನಾಗಿ (9.2 ನೋಡಿ) ಬದಲಾಯಿಸಿ ಮುಖ್ಯ ಅಂಶ ವಾಕ್ಯದ ಇತರ ಅಂಶಕ್ಕೆ ಸಂಬಂಧಿಸಿರುವಂತಹದು ಎಂಬುದಾಗಿ ಸೂಚಿಸುವುದು ಇನ್ನೊಂದು ವಿಧಾನ (78ಕ-ಗ).
(77ಕ) ಅವನು ಹುಡುಗನನ್ನು ಮರಕ್ಕೆ ಹತ್ತಿಸಿದ. (77ಖ) ಅವನು ಹುಡುಗನನ್ನು ಮರಕ್ಕೆ ಹತ್ತಿಸಿದ. (77ಗ) ಹುಡುಗನನ್ನು ಅವನು ಮರಕ್ಕೆ ಹತ್ತಿಸಿದ. (78ಕ) ಅವನು ಹುಡುಗನನ್ನು ಹತ್ತಿಸಿದ್ದು ಮರಕ್ಕೆ. (78ಖ) ಅವನು ಮರಕ್ಕೆ ಹತ್ತಿಸಿದ್ದು ಹುಡುಗನನ್ನು. (78ಗ) ಹುಡುಗನನ್ನು ಮರಕ್ಕೆ ಹತ್ತಿಸಿದ್ದು ಅವನು. ಮರಕ್ಕೆ ಎಂಬುದನ್ನು (77ಕ)ದಲ್ಲಿ ಹುಡುಗನನ್ನು ಎಂಬ ಅಂಶವನ್ನು ಒತ್ತಿಹೇಳುವ ಮೂಲಕ ಅದನ್ನು ಆ ವಾಕ್ಯದ ಸುದ್ದಿಯ ಮುಖ್ಯ ಅಂಶವನ್ನಾಗಿ ಮಾಡಲಾಗಿದೆ, ಮತ್ತು (77ಖ-ಗ)ಗಳಲ್ಲಿ ಅದಕ್ಕೆ ಬದಲು ಮರಕ್ಕೆ ಮತ್ತು ಅವನು ಎಂಬವುಗಳನ್ನು ಒತ್ತಿಹೇಳುವ ಮೂಲಕ ಸುದ್ದಿಯ ಮುಖ್ಯ ಅಂಶಗಳನ್ನಾಗಿ ಮಾಡಲಾಗಿದೆ. ಭಾಗಕ್ಕೆ (78ಕ)ದಲ್ಲಿ ಸಂಬಂಧಿಸುವಂತೆ ಹೇಳುವ ಮೂಲಕ ಅದು ಆ ವಾಕ್ಯ ತಿಳಿಸುವ ಸುದ್ದಿಯ ಮುಖ್ಯ ಅಂಶವೆಂಬುದಾಗಿ ಸೂಚಿಸಲಾಗಿದೆ. (78ಖ-ಗ)ಗಳಲ್ಲಿ ಹುಡುಗನನ್ನು ಮತ್ತು ಅವನು ಎಂಬವುಗಳು ಇದೇ ಕಾರಣಕ್ಕಾಗಿ ಮುಖ್ಯ ಅಂಶಗಳು. ಕೆಲವು ಪದ ಇಲ್ಲವೇ ಪ್ರತ್ಯಯಗಳನ್ನು ಬಳಸಿಯೂ ವಾಕ್ಯದ ಸುದ್ದಿಯಲ್ಲಿ ಮುಖ್ಯ ಅಂಶ ಯಾವುದು ಎಂಬುದನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆ ಗಾಗಿ, ಒತ್ತಿಹೇಳಲು ಬಳಸುವ ಏ ಪ್ರತ್ಯಯ ಇಲ್ಲವೇ ತಾನೇ ಎಂಬ ಪದ ಈ ಕೆಲಸವನ್ನು ನಡೆಸಬಲ್ಲುದು. ವಾಕ್ಯದ ಇತರ (79ಕ) ಅವನ್ನು ಆ ಹುಡುಗನನ್ನೇ ಮರಕ್ಕೆ ಹತ್ತಿಸಿದ. (79ಖ) ಅವನು ಆ ಹುಡುಗನನ್ನು ತಾನೇ ಮರಕ್ಕೆ ಹತ್ತಿಸಿದ್ದು?
2.7.3 ಹಿನ್ನೆಣಿಕೆ
ಒಂದು ವಾಕ್ಯದಲ್ಲಿ ಹೇಳಲು ಬಿಟ್ಟು ಹೋದ ಅಂಶವನ್ನು ವಾಕ್ಯ ಮುಗಿ ದೊಡನೆಯೇ ಅದರ ‘ಹಿನ್ನೆಣಿಕೆ’ಯಾಗಿ ಸೂಚಿಸಲು ಸಾಧ್ಯವಿದೆ. ಉದಾಹರಣೆ ಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (80ಕ) ರಾಜುವನ್ನು ಬಹಳ ಹೊಗಳಿದರು, ಹೆಡ್ಮಾಷ್ಟ್ರು. (80ಖ) ಹೆಡ್ಮಾಷ್ಟ್ರು ಬಹಳ ಹೊಗಳಿದರು, ರಾಜುವನ್ನು. (81ಕ) ನಿನ್ನೆ ಒಂದು ಟಿವಿ ತಂದಿದ್ದ, ರಾಜು. (81ಖ) ರಾಜು ಒಂದು ಟಿವಿ ತಂದಿದ್ದ, ನಿನ್ನೆ. (80ಕ)ದಲ್ಲಿ ಹೆಡ್ಮಾಷ್ಟ್ರು ಎಂಬುದನ್ನು ಹಿನ್ನೆಣಿಕೆಯಾಗಿ ಸೂಚಿಸಲಾಗಿದೆ ಮತ್ತು (80ಖ)ದಲ್ಲಿ ಇದಕ್ಕೆ ಬದಲು ರಾಜುವನ್ನು ಎಂಬುದನ್ನು ಹಿನ್ನೆಣಿಕೆಯಾಗಿ ಮಾಡ ಲಾಗಿದೆ. ಸಾಮಾನ್ಯವಾಗಿ ಎರಡು ಬೇರೆ ಬೇರೆ ರೀತಿಯ ಸಂದಭ್ರಗಳಲ್ಲಿ ಇಂತಹ ಹಿನ್ನೆಣಿಕೆಗಳ ಬಳಕೆಯಾಗುವುದನ್ನು ಕಾಣಬಹುದು. ಮೊದಲನೆಯದಾಗಿ, ಮುಖ್ಯ ಅಂಶವನ್ನು ಹೇಳುವ ಆತುರದಲ್ಲಿ ಒಂದು ಅಂಶ ಬಿಟ್ಟುಹೋಗಿದ್ದು ಅದನ್ನು ಅನಂತರ ಹಿನ್ನೆಣಿಕೆಯಾಗಿ ಹೇಳಿರಲು ಸಾಧ್ಯವಿದೆ; ಮತ್ತು ಎರಡನೆಯದಾಗಿ, ಒಂದು ಅಂಶವನ್ನು ಸೂಚಿಸುವ ಅವಶ್ಯಕತೆಯಿಲ್ಲವೆಂದು ಮೊದಲು ಭಾವಿಸಿದ್ದು, ಸುದ್ದಿಯನ್ನು ತಿಳಿಸುವಾಗ ಅದು ಸ್ಪಷ್ಟವಾಗಲಿಲ್ಲವೆಂದು ಅನಿಸಿದಲ್ಲಿ, ಅನಂತರ ಹೇಳದಿದ್ದ ಅಂಶವನ್ನು ಹಿನ್ನೆಣಿಕೆಯಾಗಿ ತಿಳಿಸಿರಲು ಸಾಧ್ಯವಿದೆ.
ವ್ಯವಹಾರ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಈ ರೀತಿ ಘಟಕಗಳ ಜಾಗವನ್ನು ಬದಲಾಯಿಸುವುದು, ಒತ್ತಿ ಹೇಳುವುದು, ಘಟಕಗಳನ್ನು ವಾಕ್ಯದ ಕೊನೆಗೆ ವಗ್ರಾಯಿಸುವುದು, ಅವಕ್ಕೆ ಕೆಲವು ಪದ ಇಲ್ಲವೇ ಪ್ರತ್ಯಯ ಗಳನ್ನು ಸೇರಿಸುವುದು, ಮೊದಲಾದ ಬೇರೆ ಬೇರೆ ರೀತಿಯ ವಿಧಾನಗಳ ಬಳಕೆಯಾಗುತ್ತಿದ್ದು ಇವು ಅರ್ಥ ಸಂಬಂಧಗಳನ್ನು ಸೂಚಿಸುವ ವಿಧಾನಕ್ಕಿಂತ ತೀರ ಭಿನ್ನವಾಗಿವೆ.
ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ಅರ್ಥ ಸಂಬಂಧಕ್ಕೇನೇ ಹೆಚ್ಚಿನ ಗಮನ ಕೊಡುತ್ತಿದ್ದು, ವ್ಯವಹಾರ ಸಂಬಂಧಕ್ಕೆ ಜಾಸ್ತಿ ಗಮನ ಹರಿಸಿಲ್ಲ. ಹಾಗಾಗಿ, ಇವುಗಳ ಕುರಿತಾಗಿ ನಮಗೆ ತಿಳಿದಿರುವ ಅಂಶಗಳು ಬಹಳ ಕಡಿಮೆ (ಜಾಸ್ತಿ ವಿವರಗಳಿಗೆ ತಿರುಮಲೇಶ್ (1979) ಮತ್ತು ಭಟ್ (1991) ನೋಡಿ).
2.8 ಗುಣಪದಗಳ ಬಳಕೆ
ಕ್ರಿಯಾವಾಕ್ಯಗಳಲ್ಲಿ ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು ಮಾತ್ರ ವಲ್ಲದೆ ಒಂದು ಅಥವಾ ಜಾಸ್ತಿ ಗುಣಪದಗಳೂ ಬರಬಲ್ಲುವು. ಇವು ಕ್ರಿಯಾ ಪದವು ತಿಳಿಸುವ ಘಟನೆಯ ಗುಣಧರ್ಮಗಳನ್ನು ಸೂಚಿಸುವುದಕ್ಕಾಗಿ ಬಳಕೆ ಯಾಗುತ್ತವೆ. ಘಟನೆ ಎಂತಹದು ಎಂಬುದನ್ನು ಮಾತ್ರವಲ್ಲದೆ ಘಟನೆಯ ಸಮಯ ಮತ್ತು ಜಾಗಗಳನ್ನೂ ಇಂತಹ ಗುಣಪದಗಳು ಸೂಚಿಸಬಲ್ಲುವು. ಹಾಗಾಗಿ, ವಾಕ್ಯದಲ್ಲಿ ಬರುವ ಈ ಗುಣಪದಗಳಿಗೂ ಮತ್ತು ಘಟನೆಯ ಜಾಗ, ಸಮಯ ಮೊದಲಾದುವನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳಿಗೂ ನಡುವೆ ಹತ್ತಿರದ ಸಂಬಂಧವಿದೆ. (82ಕ) ರಾಜು ಸುಮತಿಯನ್ನು ಬಹಳ ಹೊಗಳಿದ. (82ಖ) ಅವರು ನಾಳೆ ಆಫೀಸಿಗೆ ಹೋಗುವುದಿಲ್ಲ. (82ಗ) ಅಲ್ಲಿ ನಿಮ್ಮನ್ನು ಯಾರೂ ಮಾತನಾಡಿಸುವುದಿಲ್ಲ. ಗುಣಪದಗಳ ಬಳಕೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಆರನೆಯ ಅಧ್ಯಾಯದಲ್ಲಿ ಕೊಡಲಾಗಿದೆ.
2.9 ಸಾರಾಂಶ
ಯಾವುದಾದರೂ ಒಂದು ಘಟನೆ ನಡೆದುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸಬೇಕಾದಾಗ ಕ್ರಿಯಾವಾಕ್ಯಗಳನ್ನು ಬಳಸಬೇಕಾಗುತ್ತದೆ. ಇಂತಹ ಕ್ರಿಯಾ ವಾಕ್ಯಗಳಲ್ಲಿ ಮುಖ್ಯ ಪದವಾಗಿ ಒಂದು ಕ್ರಿಯಾಪದ ಬಂದಿರುತ್ತದೆ. ಈ ಕ್ರಿಯಾ ಪದದೊಂದಿಗೆ ಮುಖ್ಯವಾಗಿ ಎರಡು ಪ್ರತ್ಯಯಗಳು ಬಂದಿರುತ್ತವೆ. ಇವುಗಳಲ್ಲಿ ಒಂದು ಘಟನೆಯ ಸಮಯವನ್ನು ಸೂಚಿಸುತ್ತದೆ ಮತ್ತು ಇನ್ನೊಂದು ಘಟನೆ ಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನು ಚುಟುಕಾಗಿ ಸೂಚಿಸುತ್ತದೆ. ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಚ್ಚು ವಿವರವಾಗಿ ಸೂಚಿಸಲು ಕ್ರಿಯಾವಾಕ್ಯದಲ್ಲಿ ಒಂದು ಅಥವಾ ಜಾಸ್ತಿ ಮುಖ್ಯ ಘಟಕಗಳು ಬರುತ್ತವೆ. ಇದಲ್ಲದೆ, ಘಟನೆಯ ಸಮಯ, ಜಾಗ, ಉದ್ದೇಶ, ಘಟನೆಯಲ್ಲಿ ಬಳಸಿದ ಸೂಚಿಸುವುದಕ್ಕಾಗಿ ಬೇರೆಯೂ ಕೆಲವು (ಮುಖ್ಯವಲ್ಲದ) ಘಟಕಗಳನ್ನು ಕ್ರಿಯಾವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ. ಒಂದು ವಾಕ್ಯದಲ್ಲಿ ಎರಡು ಅಥವಾ ಜಾಸ್ತಿ ಘಟಕಗಳು ಬಂದಿವೆಯಾದಲ್ಲಿ ಅವುಗಳಲ್ಲಿ ಯಾವುದು ಯಾವ ಘಟಕ ಎಂಬುದನ್ನು ಸೂಚಿಸುವುದಕ್ಕಾಗಿ ಅವುಗ ಳೊಂದಿಗೆ ವಿಭಕ್ತಿ ಪ್ರತ್ಯಯಗಳ ಇಲ್ಲವೇ ಇತರ ಪದಗಳ ಬಳಕೆಯಾಗುತ್ತದೆ. ವಾಕ್ಯದಲ್ಲಿ ಬರುವ ಘಟಕಗಳನ್ನು ಮತ್ತು ಕ್ರಿಯಾಗುಣಪದಗಳನ್ನು ಹಿಂದಿನ ವಾಕ್ಯಗಳ ಘಟಕಗಳೊಂದಿಗೆ ಮತ್ತು ಮಾತಿನ ಸನ್ನಿವೇಶದೊಂದಿಗೆ ಸಂಬಂಧಿಸು ಸಾಧನ, ಮೊದಲಾದುವನ್ನು ವುದಕ್ಕಾಗಿ ವಾಕ್ಯದಲ್ಲಿ ಅವು ಬರುವ ಜಾಗ, ಒತ್ತಿ ಹೇಳುವುದು, ಕೆಲವು ಪದ ಇಲ್ಲವೇ ಪ್ರತ್ಯಯಗಳ ಬಳಕೆ ಮೊದಲಾದ ವಿಧಾನಗಳನ್ನು ಬಳಸಲಾಗುತ್ತದೆ. ಕ್ರಿಯಾವಾಕ್ಯಗಳಲ್ಲಿ ಬರುವ ಕೆಲವು ಕ್ರಿಯಾಗುಣಪದಗಳು ಘಟನೆಗಳ ಗುಣಧರ್ಮಗಳನ್ನೂ ಸೂಚಿಸಬಲ್ಲುವು.
English → | Eke →
ಅಧ್ಯಾಯ ಮೂರು — ವಿಷಯವಾಕ್ಯಗಳ ಒಳರಚನೆ
3.1 ಪೀಠಿಕೆ
ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ವಿಷಯವಾಕ್ಯಗಳು ಬಳಕೆಯಲ್ಲಿವೆ. ಇವು ಮೂರು ರೀತಿಯ ಸಂಗತಿಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಸಂಗತಿಗಳ ಸ್ವರೂಪದ ಆಧಾರದ ಮೇಲೆ ಕೆಳಗೆ ಕೊಟ್ಟಿರುವಂತೆ ಈ ವಾಕ್ಯ ಗಳನ್ನು ಇರುವಿಕೆಯ ವಾಕ್ಯಗಳು, ಗುಣವಾಕ್ಯಗಳು ಮತ್ತು ಸಂಬಂಧ ವಾಕ್ಯಗಳು ಎಂಬುದಾಗಿ ಹೆಸರಿಸಬಹುದು. ಇರುವಿಕೆಯ ವಾಕ್ಯಗಳು: ಯಾವುದಾದರೊಂದು ಜಾಗದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಇರುವಿಕೆಯನ್ನು ತಿಳಿಸುವ ವಾಕ್ಯಗಳು.
(1ಕ) ಮೇಷ್ಟ್ರು ಕ್ಲಾಸಿನಲ್ಲಿದ್ದಾರೆ. (1ಖ) ನಿಮ್ಮ ಹೊಸ ಪುಸ್ತಕ ಮೇಜಿನ ಮೇಲಿತ್ತು. (1ಗ) ಆಕೆಯ ಹತ್ತಿರ ಒಂದು ಹೊಲಿಗೆ ಯಂತ್ರವಿದೆ. (1ಘ) ಈ ಹಾಲಿನಲ್ಲಿ ನಾಳೆ ಒಂದು ಸಭೆಯಿದೆ. (1ಕ) ವಾಕ್ಯದಲ್ಲಿ ಕ್ಲಾಸು ಎಂಬ ಜಾಗದಲ್ಲಿ ಮೇಷ್ಟ್ರು ಎಂಬ ವ್ಯಕ್ತಿಯ ಈಗಿನ ಇರುವಿಕೆಯನ್ನು ತಿಳಿಸಲಾಗಿದೆ, ಮತ್ತು (1ಖ) ವಾಕ್ಯದಲ್ಲಿ ಮೇಜು ಎಂಬ ಜಾಗದಲ್ಲಿ ನಿಮ್ಮ ಹೊಸ ಪುಸ್ತಕ ಎಂಬ ವಸ್ತುವಿನ ಹಿಂದಿನ ಇರುವಿಕೆಯನ್ನು ತಿಳಿಸಲಾಗಿದೆ, ಇತ್ಯಾದಿ. ಗುಣವಾಕ್ಯಗಳು: ಯಾವುದಾದರೊಂದು ಗುಣಧರ್ಮವನ್ನು ವ್ಯಕ್ತಿ, ವಸ್ತು ಮೊದಲಾದವುಗಳ ಮೇಲೆ ಹೊರಿಸುವ ವಾಕ್ಯಗಳು.
(2ಕ) ಆಕೆಯ ತುಟಿ ಬಹಳ ಕೆಂಪಗಿದೆ. (2ಖ) ನಾರಾಯಣಸ್ವಾಮಿಯ ತಲೆ ನುಣ್ಣಗಿತ್ತು. (2ಗ) ಆ ಹುಲಿ ಬಹಳ ಹಸಿದಿದೆ. (2ಘ) ನಿಮ್ಮ ಕೆಲಸ ಅವರಿಗೆ ಮೆಚ್ಚುಗೆಯಾಗಿದೆ. (2ಕ) ವಾಕ್ಯದಲ್ಲಿ ಬಹಳ ಕೆಂಪು ಎಂಬ ಗುಣಧರ್ಮವನ್ನು ಆಕೆಯ ತುಟಿಯ ಮೇಲೆ ಹೊರಿಸಲಾಗಿದೆ, ಮತ್ತು (2ಖ) ವಾಕ್ಯದಲ್ಲಿ ನುಣ್ಣಗೆ ಎಂಬ ಗುಣ ಧರ್ಮವನ್ನು ನಾರಾಯಣಸ್ವಾಮಿಯ ತಲೆಯ ಮೇಲೆ ಹೊರಿಸಲಾಗಿದೆ, ಸಂಬಂಧವಾಕ್ಯಗಳು: ಯಾವುದಾದರೊಂದು ವ್ಯಕ್ತಿ, ವಸ್ತು, ಸಂಗತಿ, ಘಟನೆ ಮೊದಲಾದವುಗಳೊಂದಿಗೆ ಬೇರೊಂದು ವ್ಯಕ್ತಿ, ವಸ್ತು, ಸಂಗತಿ, ಘಟನೆ ಮೊದಲಾದವುಗಳನ್ನು ಸಂಬಂಧಿಸುವ ವಾಕ್ಯಗಳು. ಇಂತಹ ವಾಕ್ಯಗಳು ಇಬ್ಬರು ವ್ಯಕ್ತಿಗಳ ನಡುವಿರುವ ಸಂಬಂಧಗಳನ್ನು (ಉದಾ: ನಂಟಸ್ತಿಕೆ) ಮಾತ್ರವಲ್ಲದೆ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವಿನ ನಡುವಿರುವ ಸಂಬಂಧವನ್ನಾಗಲಿ (ಉದಾ: ವ್ಯಕ್ತಿಯ ಅಂಗ, ಸೊತ್ತು, ದೇಹದ ಇಲ್ಲವೇ ಮನಸ್ಸಿನ ಸ್ಥಿತಿ, ಕೆಲಸ, ಇತ್ಯಾದಿ) ಇಲ್ಲವೇ ಎರಡು ವಸ್ತುಗಳ ಇಲ್ಲವೇ ಸಂಗತಿಗಳ ನಡುವಿರುವ ಸಂಬಂಧವನ್ನಾಗಲಿ (ಉದಾ: ವಸ್ತು ಇಲ್ಲವೇ ಸಂಗತಿಯ ಗುಣಧರ್ಮ, ಅಂಗ, ಇತ್ಯಾದಿ) ಸೂಚಿಸಬಲ್ಲುವು. (3ಕ) ಆ ರಾಜನಿಗೆ ಮೂವರು ರಾಣಿಯರಿದ್ದರು. (3ಖ) ಸೀತಾಪತಿಗೆ ನಾಲ್ಕು ಎಮ್ಮೆಗಳಿವೆ. (3ಗ) ಆತನ ಮಾತಿಗೆ ಬಹಳ ಬೆಲೆಯಿರುತ್ತದೆ. (3ಘ) ಪೊೀಲೀಸರಿಗೆ ನಿಮ್ಮ ಮೇಲೆ ಸಂಶಯವಿತ್ತು. (3ಕ) ವಾಕ್ಯದಲ್ಲಿ ರಾಜ ಎಂಬ ವ್ಯಕ್ತಿಗೂ ಮತ್ತು ಮೂವರು ರಾಣಿಯರಿಗೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಮತ್ತು (3ಘ)ದಲ್ಲಿ ಪೊೀಲೀಸ ರಿಗೂ ಮತ್ತು ನಿಮ್ಮ ಮೇಲಿನ ಸಂಶಯ ಎಂಬ ಗುಣಧರ್ಮಕ್ಕೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಇತ್ಯಾದಿ.
3.1.1 ಸಮಯಭೇದಗಳು
ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದ ಕ್ರಿಯಾವಾಕ್ಯಗಳಲ್ಲಿ ಬರುವ ಇತರ ಕ್ರಿಯಾಪದಗಳಿಗಿಂತ ಸಮಯಭೇದವನ್ನು ಸೂಚಿಸುವುದರಲ್ಲಿ ಭಿನ್ನವಾಗಿದೆ. ಇತರ ಕ್ರಿಯಾಪದಗಳಿಗೆ ಹಿಂದಿನ ಮತ್ತು ಮುಂದಿನ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸುವ ಪದರೂಪಗಳು ಮಾತ್ರ ಇವೆಯಾದರೆ, ಇರು ಕ್ರಿಯಾ ಪದಕ್ಕೆ ಹಿಂದಿನ, ಮುಂದಿನ ಮತ್ತು ಈಗಿನ ಎಂಬುದಾಗಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಪದರೂಪಗಳಿವೆ. ಉದಾಹರಣೆಗಾಗಿ ಕೆಳಗೆ (4- 5)ರಲ್ಲಿ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು.
ರಾಜು ಈಗ ಮನೆಯಲ್ಲಿದ್ದಾನೆ. (4ಖ) ರಾಜು ನಿನ್ನೆ ಮನೆಯಲ್ಲಿದ್ದ. ರಾಜು ನಾಳೆ ಮನೆಯಲ್ಲಿರುತ್ತಾನೆ. ರಾಜು ಮನೆಗೆ ಹೋದ. (5ಖ) ರಾಜು ಮನೆಗೆ ಹೋಗುತ್ತಾನೆ. (4)ರಲ್ಲಿ ಮೂರು ಬೇರೆ ಬೇರೆ ವಾಕ್ಯಗಳು ಬಂದಿದ್ದು, ಇವುಗಳಲ್ಲಿ ಇರು ಕ್ರಿಯಾಪದ ಇದ್ದಾನೆ, ಇದ್ದ ಮತ್ತು ಇರುತ್ತಾನೆ ಎಂಬ ಮೂರು ಬೇರೆ ಬೇರೆ ರೂಪಗಳಲ್ಲಿ ಬಂದಿರುವುದನ್ನು ಗಮನಿಸಬಹುದು. ಇವು ಆ ವಾಕ್ಯಗಳನ್ನು ಆಡುತ್ತಿರುವ ಸಮಯ (ಈಗಿನ ಸಮಯ), ಅದಕ್ಕಿಂತ ಹಿಂದಿನ ಸಮಯ ಮತ್ತು ಅದರ ಅನಂತರದ ಸಮಯ (ಮುಂದಿನ ಸಮಯ) ಎಂಬುದಾಗಿ ಮೂರು ಬೇರೆ ಬೇರೆ ಸಮಯಗಳಲ್ಲಿ ಒಂದು ಸಂಗತಿಯ ಇರವನ್ನು ಸೂಚಿಸುತ್ತವೆ.
ಆದರೆ (5)ರಲ್ಲಿ ಎರಡು ವಾಕ್ಯಗಳು ಮಾತ್ರ ಬಂದಿದ್ದು, ಇವುಗಳಲ್ಲಿ ಹೋಗು ಕ್ರಿಯಾಪದ ಹೋದ ಮತ್ತು ಹೋಗುತ್ತಾನೆ ಎಂಬ ಎರಡು ರೂಪ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇವು ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದಿನ ಸಮಯ ಮತ್ತು ಅದಕ್ಕಿಂತ ಮುಂದಿನ ಸಮಯ ಎಂಬುದಾಗಿ ಎರಡು ಸಮಯಗಳಲ್ಲಿ ನಡೆಯುವ ಘಟನೆಗಳನ್ನು ಮಾತ್ರವೇ ಸೂಚಿಸಬಲ್ಲುವು. ಇರು ಎಂಬುದರ ಹಾಗೆ ಹೋಗು ಎಂಬುದಕ್ಕೆ (ಮತ್ತು ಇತರ ಕ್ರಿಯಾಪದಗಳಿಗೆ) ಈಗಿನ ಸಮಯದಲ್ಲಿ ನಡೆಯುತ್ತಿರುವ ಘಟನೆಯನ್ನು ಸೂಚಿಸಲು ಮುಂದಿನ ಸಮಯದ ರೂಪಕ್ಕಿಂತ ಭಿನ್ನವಾದ ರೂಪವಿಲ್ಲ. ಒಂದು ಮಾತನ್ನು ಆಡುತ್ತಿರುವ ಸಮಯದಲ್ಲೇನೇ ನಡೆಯುವ ಈಗಿನ ಸಮಯದ ಘಟನೆಯನ್ನು ಅಂತಹ ವಾಕ್ಯಗಳಲ್ಲಿ ಸೂಚಿಸಬೇಕೆಂದಿದ್ದಲ್ಲಿ, ಕನ್ನಡದಲ್ಲಿ ಅದಕ್ಕಾಗಿ ಆ ವಾಕ್ಯಗಳ ಕ್ರಿಯಾಪದದೊಂದಿಗೆ ಇರು ಕ್ರಿಯಾಪದದ ಈಗಿನ ಸಮಯದ ರೂಪವನ್ನು ಸೇರಿಸಿ ಬಳಸಬೇಕಾಗುತ್ತದೆ. ಆದರೆ ಇದಕ್ಕೆ ಘಟನೆ ನಡೆಯುತ್ತಾ ಇದೆ ಎಂಬ ಅರ್ಥ, ಇಲ್ಲವೇ ಘಟನೆ ಹಲವು ಬಾರಿ ನಡೆಯುತ್ತಿದೆ ಎಂಬ ಅರ್ಥವೂ ಬರುತ್ತದೆ. ರಾಜು ಪುಸ್ತಕ ಓದುತ್ತಾ ಇದ್ದಾನೆ. (6ಖ) ರಾಜು ತಲೆಯನ್ನು ಆಡಿಸುತ್ತಾ ಇದ್ದಾನೆ. (6ಕ) ವಾಕ್ಯಕ್ಕೆ ‘ಪುಸ್ತಕ ಓದುವ ಒಂದು ಘಟನೆ ನಡೆಯುತ್ತಾ ಇದೆ’ ಎಂಬ ಅರ್ಥವಿದೆಯಾದರೆ, (6ಖ) ವಾಕ್ಯಕ್ಕೆ ‘ತಲೆಯನ್ನು ಆಡಿಸುವಂತಹ’ ಹಲವು ಘಟನೆಗಳು ಒಂದಾದರೊಂದರಂತೆ ನಡೆಯುತ್ತಿವೆ ಎಂಬ ಅರ್ಥ ಬರುತ್ತದೆ.
ಕನ್ನಡದಲ್ಲಿ ಈ ರೀತಿ ಒಂದು ವಿಷಯ ಇಲ್ಲವೇ ಸಂಗತಿಯ ಇರವನ್ನು ಸೂಚಿಸುವ ಇರು ಕ್ರಿಯಾಪದಕ್ಕೆ ಮೂರು ಸಮಯ ರೂಪಗಳಿವೆಯಾದರೂ ಘಟನೆಗಳನ್ನು ಸೂಚಿಸುವ ಇತರ ಕ್ರಿಯಾಪದಗಳಿಗೆ ಎರಡು ಸಮಯರೂಪಗಳು ಮಾತ್ರ ಕಾಣಿಸಿಕೊಳ್ಳುವುದಕ್ಕೆ ಸಮಯಕ್ಕೆ ಸಂಬಂಧಿಸಿದಂತೆ ಸಂಗತಿ ಮತ್ತು ಘಟನೆಗಳ ನಡುವಿರುವ ವ್ಯತ್ಯಾಸವೇ ಮುಖ್ಯ ಕಾರಣ. ಒಂದು ಘಟನೆಯನ್ನು ತಿಳಿಸುವ ಸಮಯದಲ್ಲಿ ಅದು ಒಂದೋ ನಡೆದಿರುತ್ತದೆ ಇಲ್ಲವೇ ನಡೆಯ ಲಿರುತ್ತದೆ. ಹಾಗಾಗಿ ಅದರ ಸಮಯವನ್ನು ಸೂಚಿಸಲು ಎರಡು ಸಮಯ ರೂಪಗಳಿದ್ದರೆ ಸಾಕು. ಆದರೆ ಒಂದು ಸಂಗತಿಯು ಅದನ್ನು ತಿಳಿಸುವ ಸಂದಭ್ರದಲ್ಲಿಯೂ ಇರಬಹುದು ಇಲ್ಲವೇ ಅದಕ್ಕಿಂತ ಹಿಂದೆ ಇಲ್ಲವೇ ಮುಂದೆಯೂ ಇರಬಹುದು. ಹಾಗಾಗಿ ಅದರ ಇರುವಿಕೆಯನ್ನು ತಿಳಿಸುವ ಮೂರು ಸಮಯರೂಪಗಳ ಅವಶ್ಯಕತೆಯಿದೆ.
ಕ್ರಿಯಾಪದಕ್ಕೆ ತಿಳಿಸುವ ಸಮಯದಲ್ಲಿ ಒಂದು ಘಟನೆ ನಡೆಯುತ್ತಿರಬೇಕಾದರೆ ಅದು ಕ್ಷಣಿಕವಾಗಿಲ್ಲದಿರಬೇಕು ಇಲ್ಲವೇ ಕ್ಷಣಿಕವಾಗಿದ್ದರೂ ಹಲವು ಬಾರಿ ನಡೆಯು ವಂತಹದಿರಬೇಕು. ಈ ಎರಡು ಹೆಚ್ಚಿನ ಅರ್ಥಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಸರಳ ಕ್ರಿಯಾರೂಪದ ಬದಲು ಮೇಲೆ ಸೂಚಿಸಿದಂತೆ ಕೂಡು ಕ್ರಿಯಾಪದಗಳನ್ನು ಬಳಸುವ ಕ್ರಮ ಬಳಕೆಯಲ್ಲಿ ಬಂದಿದೆ.
ಕ್ರಿಯಾವಾಕ್ಯಗಳಿಗೂ ಮತ್ತು ವಿಷಯವಾಕ್ಯಗಳಿಗೂ ನಡುವೆ ಸಮಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯವಾದ ವ್ಯತ್ಯಾಸವಿದೆ. ಕ್ರಿಯಾವಾಕ್ಯಗಳಲ್ಲೆಲ್ಲ ಘಟನೆಯ ಸಮಯವನ್ನು ಖಡ್ಡಾಯವಾಗಿಯೂ ಸೂಚಿಸಲೇಬೇಕೆಂಬ ನಿಯಮ ವಿದೆ. ಆದರೆ ವಿಷಯವಾಕ್ಯಗಳಲ್ಲಿ ಈ ರೀತಿ ಖಡ್ಡಾಯವಿಲ್ಲ. ವಿಷಯದ ಸಮಯ ಅಷ್ಟೊಂದು ಪ್ರಾಮುಖ್ಯವಾಗಿಲ್ಲವಾದಲ್ಲಿ ಅದನ್ನು ಸೂಚಿಸದೇ ಇರಲೂ ಸಾಧ್ಯ ವಿದೆ ಮತ್ತು ಇಂತಹ ಸಂದಭ್ರಗಳಲ್ಲಿ ಈ ವಾಕ್ಯಗಳನ್ನು ಇರು ಕ್ರಿಯಾಪದ ವಿಲ್ಲದೆಯೂ ಬಳಸಲು ಸಾಧ್ಯವಿದೆ. ರಾಜು ಬೊಂಬಾಯಿಯಲ್ಲಿ, ಅವನ ಹೆಂಡತಿ ಬೆಂಗಳೂರಿನಲ್ಲಿ. (7ಖ) ಆಕೆಯ ತುಟಿ ಕೆಂಪು.’ (7ಗ) ಆ ರಾಜನಿಗೆ ಮೂವರು ರಾಣಿಯರು. ಸಾಮಾನ್ಯವಾಗಿ ಇಂತಹ ಇರು ಕ್ರಿಯಾಪದವಿಲ್ಲದ ವಿಷಯವಾಕ್ಯಗಳು ಮಾತ ನಾಡುವ ಸಮಯಕ್ಕೆ ಸಂಬಂಧಿಸಿದ ಸಂಗತಿಯೊಂದನ್ನು ತಿಳಿಸುತ್ತವೆ. ಆದರೆ ಮೇಲೆ (7ಗ)ದಲ್ಲಿ ಕಾಣಿಸಿದಂತೆ ಅದು ಮಾತನಾಡುವ ಸಮಯಕ್ಕಿಂತಲೂ ವಾಕ್ಯದ ಮೂಲಕ ನಿರೂಪಿಸುವ ಸಮಯಕ್ಕೆ ಸಂಬಂಧಿಸಿದಂತಹ ಸಂಗತಿ ಯಾಗಿರಲು ಸಾಧ್ಯವಿದೆ.
3.1.2 ಕ್ರಿಯಾವಾಕ್ಯಗಳೊಂದಿಗೆ ಸಂಬಂಧ
ವಿಷಯವಾಕ್ಯ ಮತ್ತು ಕ್ರಿಯಾವಾಕ್ಯಗಳು ಹಲವು ವಿಷಯಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆಯಾದರೂ ಅವುಗಳ ನಡುವೆ ಹತ್ತಿರದ ಸಂಬಂಧವಿದೆ. ಸಾಮಾನ್ಯವಾಗಿ ಒಂದು ಕ್ರಿಯಾವಾಕ್ಯ ಎರಡು ವಿಷಯವಾಕ್ಯಗಳನ್ನು ಸಂಬಂಧಿಸು ತ್ತದೆಯೆಂದು ಹೇಳಲು ಸಾಧ್ಯವಿದೆ. ರಾಜು ಮರಕ್ಕೆ ಹತ್ತಿದ. ರಾಜು ಮರದ ಕೆಳಗಿದ್ದಾನೆ. (8ಖ) ರಾಜು ಮರದ ಮೇಲಿದ್ದಾನೆ. ಜಾನಕಿ ಒಂದು ಮಗುವನ್ನು ಹಡೆದಳು. (9ಕ) ಜಾನಕಿಗೆ ಮಕ್ಕಳಿಲ್ಲ. (9ಖ) ಜಾನಕಿಗೆ ಒಂದು ಮಗು ಇದೆ. (8)ರಲ್ಲಿ ಬಂದಿರುವ ಕ್ರಿಯಾವಾಕ್ಯವು ಸೂಚಿಸುವ ಘಟನೆ (8ಕ) ಮತ್ತು (8ಖ) ಗಳಲ್ಲಿ ಬಂದಿರುವ ವಿಷಯವಾಕ್ಯಗಳು ಸೂಚಿಸುವ ಎರಡು ಸಂಗತಿಗಳನ್ನು ಜೋಡಿಸಿ ಹೇಳುತ್ತವೆಯೆಂಬುದನ್ನು ಗಮನಿಸಬಹುದು. ಮರದ ಕೆಳಗಿರುವ ರಾಜು ಮರಕ್ಕೆ ಹತ್ತುವ ಮೂಲಕ ಮರದ ಮೇಲಿರುವವನಾಗುತ್ತಾನೆ. (9) ರಲ್ಲೂ ಹೀಗೆಯೇ; ಮಕ್ಕಳಿಲ್ಲದ ಜಾನಕಿ ಒಂದು ಮಗುವನ್ನು ಹಡೆಯುವುದರ ಮೂಲಕ ಒಂದು ಮಗು ಇರುವವಳಾಗುತ್ತಾಳೆ.
3.2 ಇರುವಿಕೆಯ ವಾಕ್ಯಗಳು
ಯಾವುದಾದರೊಂದು ಜಾಗದಲ್ಲಿ ವ್ಯಕ್ತಿ, ವಸ್ತು, ಗುಣಧರ್ಮ ಮೊದಲಾದವುಗಳ ಇರುವಿಕೆಯನ್ನು ಸೂಚಿಸುವುದಕ್ಕಾಗಿ ಇರುವಿಕೆಯ ವಾಕ್ಯಗಳು ಬಳಕೆಯಾಗುತ್ತವೆ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಜಾಗವನ್ನು ಸೂಚಿಸುವುದಕ್ಕಾಗಿ ಒಂದು ಘಟಕ ಮತ್ತು ಅದರಲ್ಲಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಒಂದು ಘಟಕ ಎಂಬುದಾಗಿ ಎರಡು ಮುಖ್ಯ ಘಟಕಗಳು ಬರಬೇಕಾಗುತ್ತದೆ. (10ಕ) ಕಪ್ಪು ಮಡಕೆಯಲ್ಲಿ ಬಿಸಿ ನೀರಿದೆ. (10ಖ) ಬಿಳಿಗಿರಿಯವರ ಬೆಕ್ಕು ಬೇವಿನ ಮರದ ತುದಿಯಲ್ಲಿತ್ತು. (10ಗ) ಆಕೆಯ ಹುಡುಗ ನಮ್ಮಲ್ಲಿರುತ್ತಾನೆ. (10ಕ)ದಲ್ಲಿ ಒಂದು ಜಾಗವನ್ನು ಸೂಚಿಸುವ ಕಪ್ಪು ಮಡಕೆ ಎಂಬ ಘಟಕವೂ ಮತ್ತು ಅದರಲ್ಲಿರುವ ಒಂದು ವಸ್ತುವನ್ನು ಸೂಚಿಸುವ ಬಿಸಿ ನೀರು ಎಂಬ ಘಟಕವೂ ಬಂದಿರುವುದನ್ನು ಗಮನಿಸಬಹುದು. ಇತರ ವಾಕ್ಯಗಳಲ್ಲೂ ಇದೇ ರೀತಿಯಲ್ಲಿ ಎರಡೆರಡು ಘಟಕಗಳು ಬಂದಿರುವುದನ್ನು ಕಾಣಬಹುದು.
3.2.1 ಜಾಗದ ಸ್ವರೂಪ
ಕ್ರಿಯಾವಾಕ್ಯಗಳಲ್ಲಿ ಒಂದು ಘಟನೆ ಇಲ್ಲವೇ ಚಲನೆಯ ಸುರು, ಕೊನೆ ಮತ್ತು ಜಾಗವನ್ನು ಸೂಚಿಸಬಲ್ಲ ಮೂರು ರೀತಿಯ ಘಟಕಗಳು ಬರಬಲ್ಲುವೆಂಬುದನ್ನು ನೋಡಿರುವೆವು. ಆದರೆ ನಾವು ಹಿಂದಿನ ಅಧ್ಯಾಯದಲ್ಲಿ ಇರುವಿಕೆಯ ವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸ ಬಲ್ಲ ಘಟಕಗಳು ಮಾತ್ರ ಬರಬಲ್ಲುವು.
ಇದಕ್ಕೆ ಕಾರಣವೇನೆಂದರೆ, ಸುರು ಇಲ್ಲವೇ ಕೊನೆಗಳೊಂದಿಗೆ ಬರುವ ಘಟನೆಗಳಿಂದಲೂ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುವ ಸಂಗತಿಗಳೇ ಸಿದ್ಧವಾಗುವುವಾದ ಕಾರಣ, ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುವ ವಿಷಯವಾಕ್ಯಗಳಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಘಟಕಗಳ ಅವಶ್ಯಕತೆಯಿಲ್ಲ. (11ಕ) ಬೆಕ್ಕು ಮರದ ತುದಿಗೆ ಹತ್ತಿತು. (11ಖ) ಬೆಕ್ಕು ಮರದ ತುದಿಯಲ್ಲಿದೆ. (12ಕ) ರಾಯರು ಬೆಂಗಳೂರಿನಿಂದ ಬಂದಿದ್ದಾರೆ. (12ಖ) ರಾಯರು ಬೆಂಗಳೂರಿನಲ್ಲಿ ಇಲ್ಲ. (11ಕ)ದಲ್ಲಿ ಹತ್ತು ಎಂಬ ಘಟನೆಯ ಕೊನೆಯನ್ನು ಸೂಚಿಸುವುದಕ್ಕಾಗಿ ಮರದ ತುದಿಗೆ ಎಂಬ ಘಟಕ ಬಂದಿದೆ. ಆದರೆ ಆ ಘಟನೆಯಿಂದ ಸಿದ್ಧವಾಗಿರುವ ಸಂಗತಿಯನ್ನು ತಿಳಿಸುವ (11ಖ) ವಾಕ್ಯದಲ್ಲಿ ಮರದ ತುದಿಯಲ್ಲಿ ಎಂಬುದಾಗಿ ಒಂದು ಜಾಗವನ್ನು ಸೂಚಿಸುವ ಘಟಕ ಬಂದಿದೆ.
ಇದೇ ರೀತಿಯಲ್ಲಿ (12ಕ) ವಾಕ್ಯದಲ್ಲಿ ಘಟನೆಯ ಸುರುವನ್ನು ಸೂಚಿಸುವ ಬೆಂಗಳೂರಿನಿಂದ ಎಂಬ ಘಟಕವೂ ಮತ್ತು (12ಖ) ವಾಕ್ಯದಲ್ಲಿ ಆ ಘಟನೆ ಯಿಂದ ಸಿದ್ಧವಾಗಿರುವ ಸಂಗತಿಯ ಜಾಗವನ್ನು ಸೂಚಿಸುವ ಬೆಂಗಳೂರಿನಲ್ಲಿ ಎಂಬ ಘಟಕವೂ ಬಂದಿರುವುದನ್ನು ಕಾಣಬಹುದು. ಜಾಗವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಅಲ್ಲಿ ಪ್ರತ್ಯಯ ಬಳಕೆಯಾಗು ತ್ತದೆ. ಹಾಗಾಗಿ, ಈ ಪ್ರತ್ಯಯವನ್ನೊಳಗೊಂಡಿರುವ ಪದಗಳನ್ನು ಹೆಚ್ಚಿನ ಇರುವಿಕೆಯ ವಾಕ್ಯಗಳಲ್ಲೂ ಕಾಣಬಹುದು. ಈ ಪ್ರತ್ಯಯ ಮಾತ್ರವಲ್ಲದೆ, ಸುತ್ತಲೂ, ಹತ್ತಿರ, ಹಿಂದುಗಡೆ ಮೊದಲಾದ ಬೇರೆ ಕೆಲವು ಪದಗಳೂ ಜಾಗಗಳನ್ನು ಸೂಚಿಸುವುದಕ್ಕಾಗಿ ಇಂತಹ ಇರುವಿಕೆಯ ವಾಕ್ಯಗಳಲ್ಲಿ ಬರ ಬಲ್ಲುವು. ಇವು ಜಾಗಗಳ ನಡುವಿರುವ ವೈವಿಧ್ಯವನ್ನು ಸೂಚಿಸುತ್ತವೆ. (13ಕ) ಅವರ ಮನೆಯ ಸುತ್ತಲೂ ಮುಳ್ಳಿನ ಗಿಡಗಳಿವೆ. (13ಖ) ತಂದೆಯ ಹತ್ತಿರ ಮಗನೂ ಇದ್ದ. (13ಗ) ಮನೆಯ ಹಿಂದುಗಡೆ ತರಕಾರಿಯ ತೋಟ ಇದೆ. (13ಘ) ಪೆಟ್ಟಿಗೆಯ ಒಳಗೆ ಒಂದು ಹಾವಿತ್ತು.
3.2.2 ಸಮಯಘಟಕದ ಬಳಕೆ
ಜಾಗ ಮತ್ತು ಜಾಗದಲ್ಲಿರುವ ವ್ಯಕ್ತಿ, ವಸ್ತು ಇತ್ಯಾದಿ ಎಂಬುದಾಗಿ ಎರಡು ಘಟಕಗಳು ಮಾತ್ರವಲ್ಲದೆ ಇರುವಿಕೆಯ ಸಮಯವನ್ನು ಹೆಚ್ಚು ಸ್ಪಷ್ಟವಾಗಿ ಸೂಚಿಸಬಲ್ಲ ಸಮಯ ಘಟಕವೂ ಇರುವಿಕೆಯ ವಾಕ್ಯಗಳಲ್ಲಿ ಬರಬಲ್ಲುದು.
(14ಕ) ನಿನ್ನೆ ರಾತ್ರಿ ಈ ಉದ್ಯಾನದಲ್ಲಿ ಒಂದು ಹುಲಿ ಇತ್ತು. (14ಖ) ಮಾಧವರಾಯರು ಈಗ ಕ್ಲಾಸಿನಲ್ಲಿ ಇದ್ದಾರೆ. (14ಗ) ಇವತ್ತು ಬೆಳಿಗ್ಗೆ ಆ ಟಾಂಕಿಯಲ್ಲಿ ಸ್ವಲ್ಪ ನೀರಿತ್ತು. (14ಘ) ಮೂರು ವಷ್ರಗಳ ಹಿಂದೆ ಆತ ಮಂಗಳೂರಿನಲ್ಲಿದ್ದ. (14ಕ)ದಲ್ಲಿ ಈ ಉದ್ಯಾನ ಎಂಬುದಾಗಿ ಒಂದು ಜಾಗವನ್ನು ಸೂಚಿಸುವ ಘಟಕ ಮತ್ತು ಒಂದು ಹುಲಿ ಎಂಬುದಾಗಿ ಆ ಜಾಗದಲ್ಲಿರುವ ಒಂದು ಪ್ರಾಣಿಯನ್ನು ಸೂಚಿಸುವ ಘಟಕ ಮಾತ್ರವಲ್ಲದೆ ನಿನ್ನೆ ರಾತ್ರಿ ಎಂಬುದಾಗಿ ಒಂದು ಸಮಯ ವನ್ನು ಸೂಚಿಸುವ ಘಟಕವೂ ಬಂದಿರುವುದನ್ನು ಗಮನಿಸಬಹುದು. ಸೂಚಿಸುವ ಘಟಕ ಇರುವಿಕೆಯ ವಾಕ್ಯವೊಂದರಲ್ಲಿ ಸೂಚಿಸುವ ಘಟಕವನ್ನು ಬಳಸದಿರಲೂ ಬಂದಿದೆಯಾದಲ್ಲಿ, ಜಾಗವನ್ನು ಸಾಧ್ಯವಿದೆ. ಜಾಗಕ್ಕೂ ಸಮಯಕ್ಕೂ ಹತ್ತಿರದ ಸಂಬಂಧವಿರುವುದೇ ಇದಕ್ಕೆ ಕಾರಣವಿರಬೇಕು. ಸಮಯವನ್ನು (15ಕ) ನಾಳೆ ರಾತ್ರಿ ಒಂದು ಭಾರೀ ಮದುವೆಯಿದೆ. (15ಖ) ನಿನ್ನೆ ರಾತ್ರಿ ಒಂದು ಒಂದು ಮೀಟಿಂಗ್ ಇತ್ತು. (15ಗ) ಇವತ್ತು ಮೂರು ಗಂಟೆಗೆ ಹೊಸ ಉದ್ಯಾನದ ಉದ್ಘಾಟನೆಯಿದೆ. ಸಾಮಾನ್ಯವಾಗಿ ಇಂತಹ ವಾಕ್ಯಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಇರವನ್ನು ಸೂಚಿಸುವುದಕ್ಕಿಂತಲೂ ಒಂದು ಘಟನೆಯ ಇರವನ್ನು ಸೂಚಿಸಲಾಗುತ್ತದೆ. ಘಟನೆಗಳ ಇರುವಿಕೆಗೆ ಜಾಗಕ್ಕಿಂತಲೂ ಸಮಯವೇ ಹೆಚ್ಚು ಪ್ರಾಮುಖ್ಯವಾದು ದಾದ ಕಾರಣ, ಇವು ಒಂದು ನಿಶ್ಚಿತವಾದ ಸಮಯದಲ್ಲಿ ಘಟನೆಯ ಇರವನ್ನು ಸೂಚಿಸುವ ಬೇರೊಂದು ರೀತಿಯ ವಾಕ್ಯಗಳು ಎಂದೂ ಹೇಳಲು ಸಾಧ್ಯವಿದೆ.
3.2.3 ಇರು ಕ್ರಿಯಾಪದದ ಬಳಕೆ
ವಿಷಯವಾಕ್ಯಗಳಲ್ಲಿ ವಸ್ತು, ವ್ಯಕ್ತಿ ಮೊದಲಾದವುಗಳ ಇರವನ್ನು ಸೂಚಿಸುವ ಕ್ರಿಯಾಪದವನ್ನು ಬಳಸದಿರಲೂ ಸಾಧ್ಯ ಎಂಬುದನ್ನು ಮೇಲೆ 3.1.1ರಲ್ಲಿ ನೋಡಿರುವೆವು. ಆದರೆ ಇರುವಿಕೆಯ ವಾಕ್ಯಗಳಲ್ಲಿ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರುವಲ್ಲಿ ಕೆಲವು ನಿಬ್ರಂಧಗಳಿವೆ. ಸಾಮಾನ್ಯವಾಗಿ ಒಂದು ಘಟನೆಯ ಇರವನ್ನು ಸೂಚಿಸುವ ಇರುವಿಕೆಯ ವಾಕ್ಯಗಳಲ್ಲಿ ಮಾತ್ರವೇ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರಲು ಸಾಧ್ಯ. (16ಕ) ಅವರಲ್ಲಿ ನಾಳೆ ಮದುವೆ (ಇದೆ). (16ಖ) ಶಾಲೆಯಲ್ಲಿ ಇವತ್ತು ಪರೀಕ್ಷೆ (ಇದೆ). ವ್ಯಕ್ತಿ, ವಸ್ತು ಮೊದಲಾದವುಗಳ ಇರವನ್ನು ಸೂಚಿಸುವ ವಾಕ್ಯಗಳಲ್ಲಿ ಈ ರೀತಿ ಇರು ಕ್ರಿಯಾಪದವನ್ನು ಬಳಸದಿರುವುದು ಕಷ್ಟ. ಆದರೆ, ಇಂತಹ ಎರಡು ಅಥವಾ ಜಾಸ್ತಿ ಇರುವಿಕೆಯ ವಾಕ್ಯಗಳನ್ನು ಜೋಡಿಸಿ ಹೇಳಲಾಗಿದೆಯಾದಲ್ಲಿ, ಅವುಗಳ ಇರು ಕ್ರಿಯಾಪದವನ್ನು ಬಳಸದಿರಲು ಸಾಧ್ಯವಿದೆ. (17ಕ) ಒಂದು ಕೈಯಲ್ಲಿ ಕೊಡೆ (ಇದೆ) ಮತ್ತು ಇನ್ನೊಂದರಲ್ಲಿ ತರಕಾರಿ (17ಖ) ಕೋಣೆಯ ನಡುವೆ ಒಂದು ಮೇಜು (ಇದೆ), ಮೇಜಿನ ಮೇಲೆ ಕೆಲವು ಪುಸ್ತಕಗಳು (ಇವೆ), ಮೇಜಿನ ಪಕ್ಕಕ್ಕೆ ಒಂದು ಕಪಾಟು (ಇದೆ), ಮತ್ತು ಮೇಜಿನ ಕೆಳಗೆ ಒಂದು ಸ್ಟೂಲು (ಇದೆ). (17ಗ) ಮಾಧವರಾಯರು ಕ್ಲಾಸಿನಲ್ಲಿ (ಇದ್ದಾರೆ), ಮತ್ತು ಹುಡುಗರೆಲ್ಲ ಸಂತೆಯಲ್ಲಿ (ಇದ್ದಾರೆ).
3.3 ಗುಣವಾಕ್ಯಗಳು
ಗುಣವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಒಂದು ಘಟಕ ಮತ್ತು ಆ ಘಟಕದ ಗುಣಧರ್ಮವೊಂದನ್ನು ಸೂಚಿಸುವ ಇನ್ನೊಂದು ಘಟಕ ಘಟಕಗಳು ಬರುತ್ತವೆ. ಇವುಗಳಲ್ಲಿ ಎಂಬುದಾಗಿ ಎರಡು ಮುಖ್ಯ ಸಾಮಾನ್ಯವಾಗಿ ಗುಣಧರ್ಮವನ್ನು ಸೂಚಿಸುವ ಘಟಕ ಅದನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕದ ಅನಂತರ ಬರುತ್ತದೆ. (18ಕ) ಆಚೆ ಮನೆಯ ಹುಡುಗ ಸಪ್ಪಗಿದ್ದಾನೆ. (18ಖ) ಈ ಬುಟ್ಟಿಯ ಹಣ್ಣುಗಳು ಮೆತ್ತಗಿವೆ. (18ಗ) ಈ ಗಿಡದ ನಿಂಬೇಹಣ್ಣು ಬಹಳ ದೊಡ್ಡದಾಗಿದೆ. ವಾಕ್ಯದಲ್ಲೂ ಹೀಗೆಯೇ. ಈ ಎರಡು (18ಕ) ವಾಕ್ಯದಲ್ಲಿ ಆಚೆ ಮನೆಯ ಹುಡುಗ ಎಂಬುದು ಒಬ್ಬ ವ್ಯಕ್ತಿಯನ್ನೂ ಮತ್ತು ಸಪ್ಪಗೆ ಎಂಬುದು ಆ ವ್ಯಕ್ತಿಯ ಗುಣಧರ್ಮವನ್ನೂ ಸೂಚಿಸುತ್ತವೆ. ವಾಕ್ಯಗಳಲ್ಲೂ ಗುಣಧರ್ಮವನ್ನು ಸೂಚಿಸುವ ಘಟಕ ಅಗೆ ಪ್ರತ್ಯಯದಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಗಮನಿಸ ಬಹುದು. (18ಗ) ವಾಕ್ಯ ಇವೆರಡಕ್ಕಿಂತ ಸ್ವಲ್ಪ ಭಿನ್ನವಾದುದು. ಇದರಲ್ಲಿ ಒಂದು ವಸ್ತುವನ್ನು ಸೂಚಿಸುವ ಈ ಗಿಡದ ನಿಂಬೇಹಣ್ಣು ಎಂಬುದು ಇತರ ಎರಡು ವಾಕ್ಯಗಳಲ್ಲಿ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಘಟಕದ ಹಾಗೆಯೇ ಇದೆ; ಆದರೆ, ಆ ವಸ್ತುವಿನ ಗುಣಧರ್ಮವನ್ನು ಸೂಚಿಸುವ ಬಹಳ ದೊಡ್ಡದಾಗಿ ಎಂಬ ಘಟಕ ಆಗಿ ಎಂಬ ಕ್ರಿಯಾಪದರೂಪದಲ್ಲಿ ಕೊನೆಗೊಂಡಿದ್ದು ಇತರ ಎರಡು ವಾಕ್ಯಗಳಲ್ಲಿ ಕಾಣಿಸುವ ಗುಣಧರ್ಮವನ್ನು ಸೂಚಿಸುವ ಘಟಕಕ್ಕಿಂತ ಭಿನ್ನವಾಗಿದೆ.
3.3.1 ಅಗೆ ಪ್ರತ್ಯಯದ ಬಳಕೆ
ಅಗೆ ಪ್ರತ್ಯಯವನ್ನು ಬಳಸಿ ತಯಾರಿಸಿರುವ ಪದಗಳು ಕನ್ನಡದಲ್ಲಿ ಜಾಸ್ತಿ ಇಲ್ಲ. ಕೆಂಪಗೆ, ಕರ್ರಗೆ, ಬೆಳ್ಳಗೆ, ನುಣ್ಣಗೆ, ನೆಟ್ಟಗೆ, ತೆಪ್ಪಗೆ, ತೆಳ್ಳಗೆ, ದುಂಡಗೆ, ಬೆಚ್ಚಗೆ, ಮೆತ್ತಗೆ, ಮೆಲ್ಲಗೆ, ಸಪ್ಪಗೆ ಮೊದಲಾದವುಗಳು ಈ ವಿಭಾಗಕ್ಕೆ ಸೇರಬಹುದಾದ ಪದಗಳು. (19ಕ) ಆಕೆಯ ಮಕ್ಕಳು ದುಂಡಗಿದ್ದಾರೆ. (19ಖ) ಆ ಬಟ್ಟೆ ಬಹಳ ಬೆಳ್ಳಗಿದೆ. (19ಗ) ಈ ಬುಟ್ಟಿಯ ಹಣ್ಣುಗಳು ಮೆತ್ತಗಿವೆ. (19ಘ) ತಾತನ ತಲೆ ನುಣ್ಣಗಿದೆ. ಅಗೆ ಪ್ರತ್ಯಯದಲ್ಲಿ ಕೊನೆಗೊಳ್ಳುವ ಈ ಘಟಕಗಳ ಮುಂದೆಯೂ ಆಗಿ ಎಂಬ ಕ್ರಿಯಾರೂಪವನ್ನು ಬಳಸಿ ಹೇಳಲು ಸಾಧ್ಯವಿದೆ. (20ಕ) ಆಕೆಯ ತುಟಿ ಬಹಳ ಕೆಂಪಗಿದೆ. (20ಖ) ಆಕೆಯ ತುಟಿ ಬಹಳ ಕೆಂಪಗಾಗಿದೆ. ಆದರೆ ಈ ಎರಡು ವಾಕ್ಯಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬಹುದು. (20ಕ) ವಾಕ್ಯಕ್ಕೆ ‘ಆಕೆಯ ತುಟಿ ಕೆಂಪು’ ಎಂಬ ಒಂದು ಸಂಗತಿಯನ್ನು ತಿಳಿಸುವ ಅರ್ಥ ಮಾತ್ರ ಇದೆ, ಆದರೆ (20ಖ) ವಾಕ್ಯಕ್ಕೆ ಈ ಅರ್ಥ ಮಾತ್ರವಲ್ಲದೆ ‘ಕೆಂಪಿಲ್ಲದ ತುಟಿ ಕೆಂಪಾಗಿರುವ’ ಒಂದು ಘಟನೆಯನ್ನು ತಿಳಿಸುವ ಅರ್ಥವೂ ಬರಲು ಸಾಧ್ಯವಿದೆ.
3.3.2 ಆಗಿ ಕ್ರಿಯಾರೂಪದ ಬಳಕೆ
ಆಗಿ ಎಂಬುದು ಆಗು ಕ್ರಿಯಾಪದದ ‘ಜೋಡಿಸುವ’ ರೂಪ (10.2.4 ನೋಡಿ). ಇಂತಹ ಜೋಡಿಸುವ ಕ್ರಿಯಾರೂಪಗಳು ಸಾಮಾನ್ಯವಾಗಿ ಒಂದು ಘಟನೆಯನ್ನು ಸೂಚಿಸುವ ವಾಕ್ಯವನ್ನು ಅದರ ಅನಂತರ ನಡೆಯುವ ಇನ್ನೊಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸಿ ಹೇಳಲು ಬಳಕೆಯಾಗುತ್ತವೆ. (21ಕ) ಜಾನಕಿ ನದಿಯನ್ನು ದಾಟಿ ಹಳ್ಳಿಯ ಕಡೆಗೆ ನಡೆದಳು. (21ಖ) ಆತ ಬಟ್ಟೆಗಳನ್ನು ಹಿಂಡಿ ಒಣಗಲು ಹಾಕಿದ. (21ಗ) ಕುಸುಮ ಆತನ ಕಾಲಿಗೆ ಎಣ್ಣೆ ಹಚ್ಚಿ ತಿಕ್ಕಿದಳು. (21ಘ) ಆತ ಸಂಘದ ಅಧ್ಯಕ್ಷನಾಗಿ ಒಂದು ವಷ್ರ ಮುಗಿಯಿತು. (21ಕ)ದಲ್ಲಿ ದಾಟು ಕ್ರಿಯಾಪದದ ಜೋಡಿಸುವ ರೂಪವಾಗಿರುವ ದಾಟಿ ಎಂಬುದನ್ನು ಬಳಸಲಾಗಿದೆ. ಈ ರೂಪದ ಮೂಲಕ (21ಕ)ದಲ್ಲಿ ‘ನದಿಯನ್ನು ದಾಟುವ’ ಘಟನೆಯನ್ನು ಸೂಚಿಸುವ ವಾಕ್ಯವನ್ನು ಅದರ ಅನಂತರ ಜರಗುವ ‘ಹಳ್ಳಿಯ ಕಡೆಗೆ ನಡೆಯುವ’ ಘಟನೆಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸಿ ಹೇಳಲು ಸಾಧ್ಯವಾಗಿದೆ. ಇತರ ಎರಡು ವಾಕ್ಯಗಳಲ್ಲೂ ಹೀಗೆಯೇ (8.2.3 ನೋಡಿ). ಆಗಿ ಎಂಬ ಜೋಡಿಸುವ ಕ್ರಿಯಾರೂಪವನ್ನೂ ಈ ರೀತಿ ಒಂದು ಘಟನೆ ಯನ್ನು ಸೂಚಿಸುವ ವಾಕ್ಯವನ್ನು ಇನ್ನೊಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ವಾಕ್ಯದೊಂದಿಗೆ ಜೋಡಿಸುವುದಕ್ಕಾಗಿ ಬಳಸಲು ಸಾಧ್ಯವಿದೆ ಎಂಬುದನ್ನು ಮೇಲೆ (21ಘ)ದಲ್ಲಿ ನೋಡಬಹುದು. ಇದಲ್ಲದೆ, ಆಗಿ ಎಂಬ ಕ್ರಿಯಾರೂಪವನ್ನು ಗುಣಪದಗಳೊಂದಿಗೆ ಸೇರಿಸಿ ಅವನ್ನು ಗುಣವಾಕ್ಯಗಳಲ್ಲಿ ಸೂಚಿಸುವ ಘಟಕಗಳನ್ನಾಗಿ ಬದಲಾಯಿಸುವುದಕ್ಕೂ ಗುಣಧರ್ಮಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (22ಕ) ಆ ಪೆಟ್ಟಿಗೆಯೊಳಗಿರುವ ಮಣಿಗಳೆಲ್ಲ ಕೆಂಪಾಗಿವೆ. (22ಖ) ಆ ಕೆರೆಯ ನೀರು ಯಾವಾಗಲೂ ಬಿಸಿಯಾಗಿರುತ್ತದೆ. (22ಗ) ಗೌರೀಪತಿಯ ತಂಗಿ ಬಹಳ ತೆಳುವಾಗಿದ್ದಾಳೆ. (22ಘ) ಆ ಕಟ್ಟಡ ಬಹಳ ಎತ್ತರವಾಗಿದೆ. ಈ ಮೇಲಿನ ವಾಕ್ಯಗಳಿಗೆಲ್ಲ ಎರಡು ಬೇರೆ ಬೇರೆ ಅರ್ಥಗಳು ಬರಲು ಸಾಧ್ಯವಿದೆ. ಉದಾಹರಣೆಗಾಗಿ, (22ಕ) ವಾಕ್ಯಕ್ಕೆ ‘ಆ ಪೆಟ್ಟಿಗೆಯೊಳಗಿದ್ದ ಮಣಿ ಗಳು ಮೊದಲು ಬಿಳಿ ಬಣ್ಣದವಾಗಿದ್ದುವು, ಆದರೆ ಈಗ ಯಾವುದೋ ಕಾರಣ ಕ್ಕಾಗಿ ಕೆಂಪಾಗಿವೆ’ ಎಂಬ ಅರ್ಥವಾಗಲಿ, ಇಲ್ಲವೇ ‘ಆ ಪೆಟ್ಟಿಗೆಯೊಳಗಿರುವ ಮಣಿಗಳೆಲ್ಲ ಕೆಂಪು ಬಣ್ಣದವು’ ಎಂಬ ಅರ್ಥವಾಗಲಿ ಬರಲು ಸಾಧ್ಯವಿದೆ. ಈ ಎರಡನೆಯ ಅರ್ಥದಲ್ಲಿ ಆಗಿ ಕ್ರಿಯಾರೂಪದ ಮೂಲಕ ಬಿಳಿ ಗುಣಪದವನ್ನು ಗುಣಧರ್ಮವನ್ನು ಸೂಚಿಸುವ ಘಟಕವನ್ನಾಗಿ ಮಾಡಲಾಗಿದೆ. ಅದಕ್ಕೆ ಈ ಬಳಕೆಯಲ್ಲಿ ಆಗು ಕ್ರಿಯಾಪದವು ಸೂಚಿಸಬಲ್ಲ ಘಟನೆಯನ್ನು ತಿಳಿಸುವ ಅರ್ಥ ವಿಲ್ಲ ಎಂಬುದನ್ನು ಗಮನಿಸಬಹುದು.
ಇತರ ಕ್ರಿಯಾಪದಗಳ ಜೋಡಿಸುವ ರೂಪಗಳನ್ನೂ ಈ ರೀತಿ ಗುಣಧರ್ಮ ವನ್ನು ಸೂಚಿಸುವ ಘಟಕಗಳನ್ನಾಗಿ ಬಳಸುವುದರ ಮೂಲಕ ಗುಣವಾಕ್ಯಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗಿನ ವಾಕ್ಯಗಳಲ್ಲಿ ಬರುವ ಜೋಡಿಸುವ ಕ್ರಿಯಾರೂಪಗಳಿಗೆ ಎರಡು ಬೇರೆ ಬೇರೆ ಅರ್ಥಗಳಿರಲು ಸಾಧ್ಯ (23ಕ) ಅಂಗಡಿಯ ಬಾಗಿಲು ತೆರೆದಿದೆ. (23ಖ) ಆ ಕಪಾಟಿನ ಕನ್ನಡಿ ಒಡೆದಿತ್ತು. (23ಗ) ಹೊಸ ಕುಚ್ರಿಯ ಕಾಲು ಮುರಿದಿದೆ. (23ಘ) ಆ ಹುಲಿ ಬಹಳ ಹಸಿದಿದೆ. (23ಕ) ವಾಕ್ಯವು ‘ಮುಚ್ಚಿಕೊಂಡಿದ್ದ ಅಂಗಡಿಯ ಬಾಗಿಲು ಈಗ ತೆರೆದಿದೆ’ ಎಂಬುದಾಗಿ ಒಂದು ಘಟನೆಯ ಇರವನ್ನು ತಿಳಿಸುತ್ತಿರಬಹುದು, ಇಲ್ಲವೇ ‘ಅಂಗಡಿಯ ಬಾಗಿಲು ತೆರೆದಿದೆ’ ಎಂಬುದಾಗಿ ಒಂದು ಸಂಗತಿಯ ಇರವನ್ನು ಮಾತ್ರವೇ ತಿಳಿಸುತ್ತಿರಬಹುದು. ಈ ಎರಡನೆಯ ಅರ್ಥದಲ್ಲಿ ತೆರೆದು ಎಂಬ ಜೋಡಿಸುವ ಕ್ರಿಯಾರೂಪಕ್ಕೆ ಅಂಗಡಿಯ ಬಾಗಿಲಿನ ಒಂದು ಗುಣಧರ್ಮವನ್ನು ತಿಳಿಸುವ ಕೆಲಸವಷ್ಟೇ ಇರುತ್ತದೆ. ಆದರೆ ಈ ರೀತಿ ಜೋಡಿಸುವ ಕ್ರಿಯಾರೂಪಗಳನ್ನು ಗುಣಧರ್ಮವನ್ನು ಸೂಚಿಸುವ ಘಟಕಗಳಾಗಿ ಬಳಸಬೇಕಿದ್ದಲ್ಲಿ, ಅವು ಹತೋಟಿಯಲ್ಲಿಲ್ಲದ ಘಟನೆ ಗಳನ್ನು ಸೂಚಿಸುತ್ತಿರುವುದು ಅವಶ್ಯ. ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳನ್ನು ಜೋಡಿಸುವ ರೂಪದಲ್ಲಿ ಬಳಸಿದಾಗಲೆಲ್ಲ ಅವಕ್ಕೆ ಘಟನೆಯ ಅರ್ಥವೇ ಬರುತ್ತದೆ. (24ಕ) ರಾಜು ಅಂಗಡಿಯ ಬಾಗಿಲನ್ನು ತೆರೆದಿದ್ದಾನೆ. (24ಖ) ಆಕೆ ಆ ಕಪಾಟಿನ ಕನ್ನಡಿಯನ್ನು ಒಡೆದಿದ್ದಾಳೆ. (24ಗ) ಹೊಸ ಕುಚ್ರಿಯ ಕಾಲನ್ನು ಆ ನಾಯಿ ಮುರಿದಿದೆ. ಮೇಲೆ ಕೊಟ್ಟಿರುವ ಮೂರು ವಾಕ್ಯಗಳಿಗೂ ಘಟನೆಯನ್ನು ಸೂಚಿಸುವ ಅರ್ಥ ವಿದೆಯಲ್ಲದೆ ಸಂಗತಿಯನ್ನು ಸೂಚಿಸುವ ಅರ್ಥವಿಲ್ಲ. ಕದಲುವಿಕೆಯನ್ನು ಸೂಚಿಸುವ ಕ್ರಿಯಾಪದಗಳ ಜೋಡಿಸುವ ರೂಪಗಳೂ ಇಂತಹ ವಾಕ್ಯಗಳಲ್ಲಿ ಸಂಗತಿಯ ಅರ್ಥವನ್ನು ಕೊಡಲಾರವು. ಉದಾಹರಣೆಗಾಗಿ, ಕ್ರಿಯಾಪದದೊಂದಿಗೆ ಕದಲುವಿಕೆಯ ಸುರು ಇಲ್ಲವೇ ಕೊನೆಗಳನ್ನು ಸೂಚಿಸುವ ಇಂದ ಮತ್ತು ಗೆ ಎಂಬ ಪ್ರತ್ಯಯಗಳಿರುವ ಘಟಕಗಳಿವೆಯಾದಲ್ಲಿ ಅಂತಹ ಕ್ರಿಯಾಪದಗಳ ಜೋಡಿಸುವ ರೂಪಗಳಿಗೆ ಗುಣಧರ್ಮದ ಅರ್ಥವಿಲ್ಲ. (25ಕ) ಮಾಡಿನಿಂದ ನೀರು ಸೋರುತ್ತಿತ್ತು. (25ಖ) ಆಕೆಯ ಕೆನ್ನೆಗೆ ಮಸಿ ಹಿಡಿದಿತ್ತು. ಇದಲ್ಲದೆ, ಇಂತಹ ವಾಕ್ಯಗಳಲ್ಲಿ ಬರುವ ಜೋಡಿಸುವ ಕ್ರಿಯಾರೂಪಗಳು ‘ಹಿಂದಿನ ಸಮಯ’ದ ಕ್ರಿಯಾರೂಪಗಳಾಗಿರಬೇಕೆಂಬ ಇನ್ನೊಂದು ನಿಬ್ರಂಧವೂ ಇರುವ ಹಾಗೆ ತೋರುತ್ತದೆ. ಈಗಿನ ಇಲ್ಲವೇ ಮುಂದಿನ ಸಮಯದ ಕ್ರಿಯಾ ರೂಪಗಳನ್ನು ಇರು ಕ್ರಿಯಾಪದದೊಂದಿಗೆ ಜೋಡಿಸುವ ಕ್ರಿಯಾರೂಪದಲ್ಲಿ ಬಳಸಿದಾಗಲೆಲ್ಲ ಅವಕ್ಕೆ ಘಟನೆಯ ಅರ್ಥ ಬರುತ್ತದಲ್ಲದೆ ಸಂಗತಿಯ ಅರ್ಥ ಬರುವುದಿಲ್ಲ. (26ಕ) ಅಂಗಡಿಯ ಬಾಗಿಲು ತೆರೆಯಲಿದೆ. (26ಖ) ಅಂಗಡಿಯ ಬಾಗಿಲು ತೆರೆಯುತ್ತಾ ಇದೆ. (27ಕ) ಆ ಕಪಾಟಿನ ಕನ್ನಡಿ ಒಡೆಯಲಿದೆ. (27ಖ) ಆ ಕಪಾಟಿನ ಕನ್ನಡಿ ಒಡೆಯುತ್ತಾ ಇದೆ. ಮೇಲೆ ಕೊಟ್ಟಿರುವ ವಾಕ್ಯಗಳನ್ನು ಘಟನೆಯನ್ನು ಸೂಚಿಸುವ ಕ್ರಿಯಾವಾಕ್ಯಗಳೆಂದು ಕರೆಯಲು ಸಾಧ್ಯವಿದೆಯಲ್ಲದೆ ಸಂಗತಿಯನ್ನು ಸೂಚಿಸುವ ವಿಷಯವಾಕ್ಯ ಇಲ್ಲವೇ ಗುಣವಾಕ್ಯಗಳೆಂದು ಕರೆಯಲು ಸಾಧ್ಯವಾಗದು ಎಂಬುದನ್ನು ಗಮನಿಸಬಹುದು.
3.3.3 ಗುಣಪದಗಳ ವಿಭಜನೆ
ಆಗಿ ಕ್ರಿಯಾರೂಪದೊಂದಿಗೆ ಬರಬಲ್ಲ ಗುಣಪದಗಳನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
(ಕ) ಅವುಗಳೊಂದಿಗೆ ಗುಣವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಬರುವ ಘಟಕಗಳ ಸ್ವರೂಪವನ್ನಾಧರಿಸಿ, ಅವನು, ಅವಳು, ಅವರು, ಅದು ಇಲ್ಲವೇ ಅವು ಎಂಬ ಸವ್ರಪದದೊಂದಿಗೆ ಬರುವ ದೊಡ್ಡ, ಕಿರಿ, ಒಳ್ಳೆ, ತಕ್ಕ, ಹಳೆ ಮೊದಲಾದವುಗಳದು ಒಂದು ವಿಭಾಗ. (28ಕ) ಆ ಹುಡುಗ ಬಹಳ ದೊಡ್ಡವನಾಗಿದ್ದಾನೆ. (28ಖ) ರಾಧಾಮಣಿ ಬಹಳ ಕೆಟ್ಟವಳಾಗಿದ್ದಳು. (28ಗ) ಈ ಉಪ್ಪಿನಕಾಯಿ ಬಹಳ ಹಳೆಯದಾಗಿದೆ. (28ಘ) ವಾದಿರಾಜರ ಮಕ್ಕಳು ದೊಡ್ಡವರಾಗಿದ್ದರು. (28ಙ) ನ್ಯೂಯಾಕ್ರಿನ ಕಟ್ಟಡಗಳು ಅತ್ಯಂತ ಎತ್ತರವಾಗಿವೆ. ಮೇಲೆ ಕೊಟ್ಟಿರುವ ಸವ್ರಪದಗಳು ಒಂದು ಮತ್ತು ಒಂದಕ್ಕಿಂತ ಜಾಸ್ತಿ (ಹಲವು) ಎಂಬುದಾಗಿ ಎರಡು ರೀತಿಯ ವಚನಭೇದವನ್ನು ಸೂಚಿಸುತ್ತವೆ. ಇದಲ್ಲದೆ, ಒಂದಕ್ಕಿಂತ ಜಾಸ್ತಿ ಇದ್ದಲ್ಲಿ ಮನುಷ್ಯರು ಮತ್ತು ಇತರರು ಎಂಬು ದಾಗಿ ಎರಡು ರೀತಿಯ ಲಿಂಗಭೇದವನ್ನೂ, ಮತ್ತು ಒಂದೇ ಇದ್ದಲ್ಲಿ ಹೆಣ್ಣು, ಗಂಡು ಮತ್ತು ಇತರ ಎಂಬುದಾಗಿ ಮೂರು ರೀತಿಯ ಲಿಂಗಭೇದವನ್ನೂ ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು. (ಖ) ಸಂಸ್ಕೃತದಿಂದ ಎರವಲಾಗಿ ಬಂದ ಪ್ರಖ್ಯಾತ, ದೃಢ, ಪ್ರಬಲ, ಕ್ರೂರ ಮೊದಲಾದ ಪದಗಳು ಈ ರೀತಿ ಸವ್ರಪದಗಳೊಂದಿಗೆ ಬರುವ ಬದಲು ನು, ಳು, ವು ಇಲ್ಲವೇ ರು ಎಂಬ ಪ್ರತ್ಯಯಗಳೊಂದಿಗೆ ಬರುತ್ತವೆ. ಇವನ್ನು ಎರಡನೆಯ ವಿಭಾಗದಲ್ಲಿ ಇರಿಸಬಹುದು. (29ಕ) ಆ ಹುಡುಗ ಪ್ರಖ್ಯಾತನಾಗಿದ್ದಾನೆ. (29ಖ) ಜಾನಕಿ ಬಹಳ ಗಂಭೀರಳಾಗಿದ್ದಾಳೆ. (29ಗ) ಅಲ್ಲಿನ ಪೊೀಲೀಸರು ಪ್ರಬಲರಾಗಿದ್ದರು. (29ಘ) ಈ ಕಂಬ ದೃಢವಾಗಿದೆ. ಮೇಲೆ ಕೊಟ್ಟಿರುವ ಪ್ರತ್ಯಯಗಳು ಮನುಷ್ಯೇತರರಲ್ಲಿ ವಚನಭೇದವನ್ನು ಸೂಚಿಸುವುದಿಲ್ಲ. ಆದರೆ ಪ್ರಖ್ಯಾತದಂತಹ ಕೆಲವು ಪದಗಳು ಗಳು ಎಂಬ ಹೆಚ್ಚಿನ ಪ್ರತ್ಯಯದ ಮೂಲಕ ವಚನಭೇದವನ್ನೂ ಸೂಚಿಸಬಲ್ಲುವು. (30ಕ) ಈ ಕಂಪೆನಿಯ ಕಾರು ಬಹಳ ಪ್ರಖ್ಯಾತವಾಗಿದೆ. (30ಖ) ಈ ಕಂಪೆನಿಯ ಕಾರುಗಳು ಬಹಳ ಪ್ರಖ್ಯಾತಗಳಾಗಿವೆ. (ಗ) ಎಲ್ಲಾ ಸಂದಭ್ರಗಳಲ್ಲೂ ಒಂದೇ ರೂಪದಲ್ಲಿ ಉಳಿಯುವ ದಪ್ಪ, ಗಟ್ಟಿ, ಉದ್ದ, ಕೆಂಪು, ಗಿಡ್ಡ, ತೋರ, ಜೋರು, ತೆಳು, ಬಿಸಿ ಮೊದಲಾದ ಪದಗಳನ್ನು ಮೂರನೆಯ ವಿಭಾಗದಲ್ಲಿ ಇರಿಸಬಹುದು. (31ಕ) ಆ ಹುಡುಗ ಬಹಳ ತೆಳುವಾಗಿದ್ದಾನೆ. (31ಖ) ಗೌರೀಪತಿಯ ತಂಗಿ ಉದ್ದವಾಗಿದ್ದಳು. (31ಗ) ಈ ಕೆರೆಯ ನೀರು ಯಾವಾಗಲೂ ಬಿಸಿಯಾಗಿರುತ್ತದೆ. (31ಘ) ಆ ಜನರ ಕಣ್ಣುಗಳು ಕೆಂಪಾಗಿದ್ದುವು.
3.3.4 ಹೆಚ್ಚಿನ ಘಟಕಗಳು
ಗುಣವಾಕ್ಯಗಳಲ್ಲಿ ಗುಣಧರ್ಮವನ್ನು ಸೂಚಿಸುವ ಘಟಕ ಮತ್ತು ಆ ಗುಣ ಧರ್ಮವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ಎಂಬುದಾಗಿ ಎರಡು ಘಟಕಗಳು ಮಾತ್ರವಲ್ಲದೆ ಬೇರೆಯೂ ಕೆಲವು ಘಟಕಗಳು ಬರಲು ಸಾಧ್ಯವಿದೆ.
ಉದಾಹರಣೆಗಾಗಿ, ಯಾವುದಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನಲ್ಲಿ ಗುಣಧರ್ಮವೊಂದು ಕಾಣಿಸುತ್ತದೆ ಎಂಬುದನ್ನು ತಿಳಿಸಲು ಗುಣವಾಕ್ಯಗಳಲ್ಲಿ ಅಲ್ಲಿ ವಿಭಕ್ತಿಯಲ್ಲಿ ಕೊನೆಗೊಳ್ಳುವ ‘ಜಾಗ’ ಇಲ್ಲವೇ ‘ಸಮಯ’ವನ್ನು ಸೂಚಿಸುವ ಘಟಕ ಬರಬಲ್ಲುದು.
(32ಕ) ಆ ಹುಡುಗಿ ಮಾತಿನಲ್ಲಿ ಜೋರಿದ್ದಾಳೆ. (32ಖ) ಆತ ಮನೆಯಲ್ಲಿ ತೆಪ್ಪಗಿರುತ್ತಾನೆ. (32ಗ) ಚಿಕ್ಕಂದಿನಲ್ಲಿ ಆಕೆ ತೆಳ್ಳಗಿದ್ದಳು. ಇದೇ ರೀತಿಯಲ್ಲಿ ಒಂದು ಗುಣಧರ್ಮದ ವ್ಯಾಪ್ತಿಯನ್ನು ಸೂಚಿಸುವುದಕ್ಕಾಗಿ ಗೆ ವಿಭಕ್ತಿಯಲ್ಲಿ ಕೊನೆಗೊಳ್ಳುವ ‘ಕೊನೆ’ ಘಟಕವೂ ಇಂತಹ ಗುಣವಾಕ್ಯಗಳಲ್ಲಿ ಬರಬಲ್ಲುದು.
(33ಕ) ಆ ಚೂರಿ ನನಗೆ ಇಷ್ಟವಾಗಿದೆ. (33ಖ) ಈ ಅಂಗಿ ಅವನಿಗೆ ದೊಡ್ಡದಾಗುತ್ತದೆ. (33ಗ) ಈ ಮರದ ತುಂಡು ನನ್ನ ಕೆಲಸಕ್ಕೆ ತಕ್ಕುದಾಗಿದೆ (33ಘ) ನಿಮ್ಮ ಕೆಲಸ ಅವರಿಗೆ ಮೆಚ್ಚುಗೆಯಾಗಿದೆ.
3.3.5 ಜೋಡಿ ಗುಣಪದಗಳು
ಅಳತೆ ಮತ್ತು ಭೌತಿಕ ಗುಣಧರ್ಮಗಳನ್ನು ಸೂಚಿಸುವ ಗುಣಪದಗಳಲ್ಲಿ ಉದ್ದ- ಗಿಡ್ಡ, ಅಗಲ-ಸಪುರ, ಎತ್ತರ-ತಗ್ಗು, ದಪ್ಪ-ತೆಳು, ದೂರ-ಹತ್ತಿರ, ದೊಡ್ಡ- ಚಿಕ್ಕ ಮೊದಲಾದ ಕೆಲವು ಪದಗಳು ವಿರುದ್ಧಾರ್ಥದ ಜೋಡಿಗಳಾಗಿ ಬರುತ್ತವೆ (4.3.2 ನೋಡಿ). ಇಂತಹ ಪದಗಳು ಗುಣವಾಕ್ಯಗಳಲ್ಲಿ ಬರುವಾಗ ಕೆಲವು ನಿಬ್ರಂಧಗಳಿಗೊಳಗಾಗುತ್ತವೆ. ಮೊದಲನೆಯದಾಗಿ, ಇಂತಹ ಜೋಡಿಗಳಲ್ಲಿ ಬರುವ ಎರಡು ಪದಗಳು ಒಂದೇ ಗುಣಧರ್ಮದ ಎರಡು ಅಂಗಗಳನ್ನು ಅವು ಎರಡು ವಿರುದ್ಧ ದಿಕ್ಕಿನ ಲ್ಲಿರುವವುಗಳೆಂಬುದಾಗಿ ಸೂಚಿಸುತ್ತವೆ. ಉದಾಹರಣೆಗಾಗಿ, ಉದ್ದ ಮತ್ತು ಗಿಡ್ಡ ಎಂಬೆರಡು ಗುಣಪದಗಳು ಅಳತೆಗೆ ಸಂಬಂಧಿಸಿದ ಒಂದೇ ಗುಣಧರ್ಮದ ಎರಡು ಅಂಗಗಳಾಗಿದ್ದು, ವಿರುದ್ಧಾರ್ಥವನ್ನು ಕೊಡುತ್ತವೆ. ಇದಲ್ಲದೆ, ಇಂತಹ ಗುಣಧರ್ಮಗಳಿಗೆ ಒಂದು ವಿಸ್ತಾರ ಇಲ್ಲವೇ ವ್ಯಾಪ್ತಿ ಯಿದ್ದು, ಈ ವ್ಯಾಪ್ತಿಯಲ್ಲಿ ಬರುವ ಬೇರೆ ಬೇರೆ ಬಿಂದುಗಳನ್ನು ಸೂಚಿಸುವು ದಕ್ಕಾಗಿ ಸ್ವಲ್ಪ, ಬಹಳ, ಜಾಸ್ತಿ, ಒಳ್ಳೆ ಮೊದಲಾದ ಪದಗಳನ್ನು ಈ ಗುಣಪದಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿದೆ.
ಉದಾಹರಣೆಗಾಗಿ, ಉದ್ದ-ಗಿಡ್ಡ ಎಂಬೆರಡು ಗುಣಪದಗಳು ಸೂಚಿಸುವ ಗುಣಧರ್ಮದ ವ್ಯಾಪ್ತಿಯಲ್ಲಿ ನಾಲ್ಕು ಬಿಂದುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದ್ದು ಅವನ್ನು ಕೆಳಗೆ ತೋರಿಸಿದ ಹಾಗೆ ಈ ಗುಣಪದಗಳೊಂದಿಗೆ ಬಹಳ ಮತ್ತು ಸ್ವಲ್ಪ ಎಂಬ ಪದಗಳನ್ನು ಸೇರಿಸಿ ಸೂಚಿಸಲು ಸಾಧ್ಯವಿದೆ. ಬಹಳ ಉದ್ದ - ಸ್ವಲ್ಪ ಉದ್ದ - ಸ್ವಲ್ಪ ಗಿಡ್ಡ - ಬಹಳ ಗಿಡ್ಡ
ಎರಡನೆಯದಾಗಿ, ಇಂತಹ ಗುಣಪದಗಳು ಸೂಚಿಸುವ ಗುಣಧರ್ಮ ಅವು ಯಾವ ರೀತಿಯ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಅವಲಂಬಿಸಿದೆ. ಉದಾಹರಣೆಗಾಗಿ, ಒಂದು ಆನೆ ಎಷ್ಟೇ ಚಿಕ್ಕ ದಾದರೂ ಅತೀ ದೊಡ್ಡ ಇಲಿಗಿಂತ ದೊಡ್ಡದಾಗಿರುತ್ತದೆ. (ಕಟ್ಟುಕತೆಗಳಲ್ಲಿ ಮಾತ್ರ ಇದಕ್ಕೆ ಅಪವಾದಗಳಿರಬಲ್ಲುವು). ಇದಲ್ಲದೆ, ಇಂತಹ ಗುಣಧರ್ಮಗಳು ಅವನ್ನು ಕಾಣುವ ಕಣ್ಣು, ಬಳಸುವ ಸಂದಭ್ರ, ಅನುಭವಿಸುವ ವ್ಯಕ್ತಿ, ಮೊದಲಾದವುಗಳ ಮೇಲೂ ಅವಲಂಬಿಸಿರಲು ಸಾಧ್ಯವಿದೆ. ಉದಾಹರಣೆಗಾಗಿ, ಒಬ್ಬನಿಗೆ ಬಿಸಿಯಾಗಿ ಕಾಣಿಸುವ ಕಾಫಿ ಇನ್ನೊಬ್ಬನಿಗೆ ತಣ್ಣಗಾಗಿ ಕಾಣಿಸಬಹುದು; ಒಬ್ಬನಿಗೆ ಖಾರವಾಗಿರುವ ತಿಂಡಿ ಇನ್ನೊಬ್ಬನಿಗೆ ಸಪ್ಪೆಯಾಗಿರಬಹುದು; ನೋಡಲು ಚೆನ್ನಾಗಿರುವ ಹಣ್ಣು ತಿನ್ನಲು ಕೆಟ್ಟುದಾಗಿರಬಹುದು; ಬಸ್ಸಿನಲ್ಲಿ ಹೋಗಲು ಬಹಳ ದೂರವಾಗಿರುವ ಜಾಗ ವಿಮಾನದಲ್ಲಿ ಹೋಗಲು ಬಹಳ ಹತ್ತಿರ ವಾಗಿರಬಹುದು; ಇತ್ಯಾದಿ. ಮೂರನೆಯದಾಗಿ, ಗುಣಪದಗಳ ಜೋಡಿಗಳಲ್ಲಿ ಸಾಮಾನ್ಯವಾಗಿ ಒಂದು ಪದವು ಇಡೀ ಗುಣಧರ್ಮವನ್ನೇ ಸೂಚಿಸುವಂತಿರುತ್ತದೆ, ಮತ್ತು ಇನ್ನೊಂದು ಆ ಗುಣಧರ್ಮದ ಒಂದು ಅಂಗವನ್ನಷ್ಟೇ ಸೂಚಿಸುವಂತಿರುತ್ತದೆ.
ಉದಾಹರಣೆಗಾಗಿ, ದೊಡ್ಡ ಮತ್ತು ಚಿಕ್ಕ ಎಂಬೆರಡು ಪದಗಳು ಸೂಚಿಸುವ ಅಳತೆಯ ಗುಣಧರ್ಮವನ್ನು ದೊಡ್ಡ ಎಂಬ ಒಂದೇ ಪದದ ಮೂಲಕ ಪೂತ್ರಿಯಾಗಿ ಸೂಚಿಸಲು ಸಾಧ್ಯವಿದೆ; ಆದರೆ, ಚಿಕ್ಕ ಎಂಬ ಪದದ ಮೂಲಕ ಅದರ ಒಂದು ಅಂಗವನ್ನು ಮಾತ್ರವೇ ಸೂಚಿಸಲು ಸಾಧ್ಯ. ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. (35ಕ) ಅವರ ಮನೆ ಎಷ್ಟು ದೊಡ್ಡದು? -ಅದು ಬಹಳ ದೊಡ್ಡದು. -ಅದು ಬಹಳ ಚಿಕ್ಕದು. (35ಖ) ಅವರ ಮನೆ ಎಷ್ಟು ಚಿಕ್ಕದು? -ಅದು ಬಹಳ ಚಿಕ್ಕದು. -ಅದು (ಇದಕ್ಕಿಂತ) ಸ್ವಲ್ಪ ಚಿಕ್ಕದು. ದೊಡ್ಡ ಎಂಬ ಗುಣಪದವನ್ನು ಬಳಸಿರುವ (35ಕ)ದ ಕೇಳ್ವಿಗೆ ದೊಡ್ಡ ಮತ್ತು ಚಿಕ್ಕ ಎಂಬ ಎರಡು ಗುಣಪದಗಳನ್ನು ಬಳಸಿಯೂ ಉತ್ತರ ಕೊಡಲು ಸಾಧ್ಯ. ಆದರೆ, ಚಿಕ್ಕ ಎಂಬ ಪದವನ್ನು ಬಳಸಿರುವ (35ಖ)ದ ಕೇಳ್ವಿಗೆ ಚಿಕ್ಕ ಎಂಬ ಪದವನ್ನು ಬಳಸಿರುವ ಉತ್ತರವನ್ನು ಮಾತ್ರ ಕೊಡಲು ಸಾಧ್ಯ.
ಇದಲ್ಲದೆ, ಈ ರೀತಿಯಾಗಿ ಗುಣಧರ್ಮದ ಒಂದು ಅಂಗವನ್ನು ಮಾತ್ರವೇ ಸೂಚಿಸಬಲ್ಲ ಗುಣಪದಗಳನ್ನು ಕೇಳ್ವಿಗಳಲ್ಲಿ ಬಳಸಿದಾಗ, ಅವು ಆ ಗುಣ ಧರ್ಮಕ್ಕೆ ಸಂಬಂಧಿಸಿದ ಅಳತೆಯೆಷ್ಟೆಂಬುದನ್ನು ಮಾತ್ರವೇ ಕೇಳುವ ಬದಲು ಅದು ಎಷ್ಟರ ಮಟ್ಟಿಗೆ ಕಡಿಮೆ ಎಂಬುದಾಗಿ ಕೇಳುತ್ತವೆ. (36ಕ) ಆ ಕೋಲು ಎಷ್ಟು ಉದ್ದ ಇದೆ? (36ಖ) ಆ ಕೋಲು ಎಷ್ಟು ಗಿಡ್ಡ ಇದೆ? ಉದ್ದ ಎಂಬ ಪದವನ್ನು ಬಳಸಿರುವ (36ಕ) ಕೇಳ್ವಿ ಆ ಕೋಲಿನ ಅಳತೆ ಯೆಷ್ಟೆಂಬುದನ್ನು ಮಾತ್ರವೇ ಕೇಳುತ್ತಿದೆ; ಆ ಕೋಲು ಉದ್ದ ಇರಬಹುದು ಇಲ್ಲವೇ ಗಿಡ್ಡ ಇರಬಹುದು; ಆದರೆ, ಗಿಡ್ಡ ಎಂಬ ಪದವನ್ನು ಬಳಸಿರುವ (36ಖ)ದ ಕೇಳ್ವಿ ಅದರ ಅಳತೆ ಬೇಕಾದ್ದಕ್ಕಿಂತ ಎಷ್ಟರ ಮಟ್ಟಿಗೆ ಕಡಿಮೆಯಿದೆ ಎಂಬುದನ್ನು ಕೇಳುತ್ತಿದೆ.
ನಾಲ್ಕನೆಯದಾಗಿ, ಈ ರೀತಿ ಜೋಡಿಗಳಾಗಿ ಬರುವ ಗುಣಪದಗಳಲ್ಲಿ ಒಂದು ಇನ್ನೊಂದರ ಅಲ್ಲಗಳೆಯುವ ರೂಪಕ್ಕೆ ಸಮ ಎಂದು ಹೇಳಲು ಸಾಧ್ಯ ವಿದೆ. ಈ ಕಾರಣಕ್ಕಾಗಿ ಕೆಳಗೆ ಕೊಟ್ಟಿರುವಂತಹ ವಾಕ್ಯಗಳಲ್ಲಿ ಜೋಡಿಯಾಗಿ ಬರುವ ಗುಣಪದಗಳನ್ನು ಮಾತ್ರವೇ ಬಳಸಲು ಸಾಧ್ಯ. (37ಕ) ಅವನು ಉದ್ದ, ಆಕೆಯೂ ಗಿಡ್ಡವೇನಲ್ಲ. (37ಖ) ಅವರ ಮನೆ ದೊಡ್ಡದು, ಇವರದೂ ಚಿಕ್ಕದೇನಲ್ಲ. (37ಗ) ಆಕೆ ಬಹಳ ಸುಂದರಿ, ಈಕೆಯೂ ಕುರೂಪಿಯೇನಲ್ಲ.
3.3.6 ಇರು ಪದದ ಬಳಕೆ
ಇರುವಿಕೆಯ ವಾಕ್ಯಗಳ ಹಾಗೆ ಗುಣವಾಕ್ಯಗಳಲ್ಲೂ ಇರು ಕ್ರಿಯಾಪದದ ರೂಪ ಗಳನ್ನು ಬಳಸದಿರಲು ಸಾಧ್ಯವಿದೆ. (38ಕ) ಆ ಹುಡುಗಿ ಬಹಳ ಬೆಳ್ಳಗಿದ್ದಾಳೆ. (38ಖ) ಆ ಹುಡುಗಿ ಬಹಳ ಬೆಳ್ಳಗೆ. (39ಕ) ಈ ಎಮ್ಮೆಯ ಕೊಂಬು ನೆಟ್ಟಗಿದೆ. (39ಖ) ಈ ಎಮ್ಮೆಯ ಕೊಂಬು ನೆಟ್ಟಗೆ. ಆದರೆ, ಇಂತಹ ಗುಣವಾಕ್ಯಗಳಲ್ಲಿ ಗುಣಪದಗಳ ಮುಂದೆ ಆಗಿ ಎಂಬ ಕ್ರಿಯಾರೂಪ ಬಂದಿದೆಯಾದರೆ, ಇರು ಪದದೊಂದಿಗೆ ಅದನ್ನೂ ಬಳಸದಿರ ಬೇಕಾಗುತ್ತದೆ. ಉದಾಹರಣೆಗಾಗಿ, ಕೆಳಗಿನ ವಾಕ್ಯಜೋಡಿಗಳನ್ನು ಗಮನಿಸ ಬಹುದು. (40ಕ) ಈ ಹಣ್ಣು ಕೆಂಪಾಗಿದೆ. (40ಖ) ಈ ಹಣ್ಣು ಕೆಂಪು. (41ಕ) ಆಕೆ ಆ ಕಾಖ್ರಾನೆಯಲ್ಲಿ ಟೈಪಿಸ್್ಟ ಆಗಿದ್ದಾಳೆ. (41ಖ) ಆಕೆ ಆ ಕಾಖ್ರಾನೆಯಲ್ಲಿ ಟೈಪಿಸ್್ಟ. ಗುಣಪದದ ಜಾಗದಲ್ಲಿ ಕ್ರಿಯಾಪದಗಳ ಜೋಡಿಸುವ ರೂಪ ಬಂದಿದೆ ಯಾದರೆ, ಅಂತಹ ಗುಣವಾಕ್ಯಗಳಲ್ಲಿ ಇರು ಪದವನ್ನು ಬಳಸದಿರಲು ಸಾಧ್ಯ ವಾಗದು.
(42) ಅಂಗಡಿಯ ಬಾಗಿಲು ತೆರೆದಿದೆ. (42)ನೇ ವಾಕ್ಯದಲ್ಲಿ ತೆರೆ ಕ್ರಿಯಾಪದದ ಜೋಡಿಸುವ ರೂಪ ಗುಣಪದದ ಜಾಗದಲ್ಲಿ ಬಂದಿದೆಯಾದ ಕಾರಣ, ಈ ವಾಕ್ಯದಿಂದ ಇರು ಕ್ರಿಯಾಪದವನ್ನು ತೆಗೆದು ಹಾಕಲು ಸಾಧ್ಯವಾಗದು.
3.3.7 ಇರುವಿಕೆಯ ವಾಕ್ಯದೊಂದಿಗಿರುವ ಸಂಬಂಧ
ಇರುವಿಕೆಯ ವಾಕ್ಯಗಳಿಗೂ ಮತ್ತು ಗುಣವಾಕ್ಯಗಳಿಗೂ ನಡುವೆ ಹತ್ತಿರದ ಸಂಬಂಧವಿದೆ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಒಂದು ಜಾಗದಲ್ಲಿದೆ ಎಂಬುದನ್ನು ಇರುವಿಕೆಯ ವಾಕ್ಯ ತಿಳಿಸುವುದಾದರೆ, ಅದೇ ಸಂಗತಿಯನ್ನು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಇರುವುದು ಒಂದು ಜಾಗದ ಗುಣಧರ್ಮ ಎಂಬುದಾಗಿ ಗುಣವಾಕ್ಯ ತಿಳಿಸಬಲ್ಲುದು. (43ಕ) ಆ ಸಾಹುಕಾರರಲ್ಲಿ ಬಹಳ ಹಣವಿದೆ. (43ಖ) ಆ ಸಾಹುಕಾರರು ಬಹಳ ಹಣವಂತರಾಗಿದ್ದಾರೆ. (43ಕ)ದಲ್ಲಿ ಹಣ ಎಂಬ ವಸ್ತು ಸಾಹುಕಾರ ಎಂಬ ವ್ಯಕ್ತಿಯಲ್ಲಿ (ಎಂದರೆ ಜಾಗದಲ್ಲಿ) ಇರುವುದನ್ನು ಇರುವಿಕೆಯ ವಾಕ್ಯದ ಮೂಲಕ ಸೂಚಿಸಲಾಗಿದೆ, ಮತ್ತು ಅದೇ ಸಂಗತಿಯನ್ನು (43ಖ)ದಲ್ಲಿ ಹಣ ಇರುವುದು ಸಾಹುಕಾರರ ಒಂದು ಗುಣಧರ್ಮ ಎಂಬುದಾಗಿ ಗುಣವಾಕ್ಯದ ಮೂಲಕ ಸೂಚಿಸಲಾಗಿದೆ. ಇದಲ್ಲದೆ, ಗುಣಧರ್ಮವೊಂದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಲ್ಲಿದೆ ಎಂಬುದಾಗಿ ಇರುವಿಕೆಯ ವಾಕ್ಯದ ಮೂಲಕ ತಿಳಿಸುವ ಬದಲು, ಆ ಗುಣಧರ್ಮ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನದು ಎಂಬುದಾಗಿ ಗುಣವಾಕ್ಯದ ಮೂಲಕ ತಿಳಿಸಲು ಸಾಧ್ಯವಿದೆ. (44ಕ) ಅವಳಲ್ಲಿ ಜಾಣ್ಮೆಯಿದೆ. (44ಖ) ಅವಳು ಜಾಣೆ(ಯಾಗಿದ್ದಾಳೆ). (45ಕ) ಆ ಹುಡುಗನಲ್ಲಿ ಬಹಳ ತುಂಟತನವಿದೆ. (45ಖ) ಆ ಹುಡುಗ ಬಹಳ ತುಂಟ(ನಾಗಿದ್ದಾನೆ). ಇರುವಿಕೆಯ ವಾಕ್ಯ ಮತ್ತು ಗುಣವಾಕ್ಯಗಳ ನಡುವೆ ಇಂತಹ ಸಂಬಂಧ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಬಳಕೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೆಳಗಿನ ಕೆಲವು ಉದಾಹರಣೆಗಳನ್ನು ಕೊಡಬಹುದು. (46ಕ) ಆಚಾರ್ಯರು ಗಂಭೀರರಾಗಿದ್ದಾರೆ. (46ಖ) ಆಚಾರ್ಯರಲ್ಲಿ ಗಾಂಭೀರ್ಯವಿದೆ. (47ಕ) ಅವನು ಬಹಳ ನಿಪುಣನಾಗಿದ್ದಾನೆ. (47ಖ) ಅವನಲ್ಲಿ ಬಹಳ ನೈಪುಣ್ಯವಿದೆ. (48ಕ) ಆತನು ಕೃತಘ್ನನಾಗಿದ್ದಾನೆ. (48ಖ) ಆತನಲ್ಲಿ ಕೃತಘ್ನತೆಯಿದೆ.
3.4 ಸಂಬಂಧ ವಾಕ್ಯಗಳು
ಇತರ ಎರಡು ವಿಷಯವಾಕ್ಯಗಳ ಹಾಗೆ ಸಂಬಂಧ ವಾಕ್ಯಗಳಲ್ಲೂ ಮುಖ್ಯವಾಗಿ ಎರಡು ಘಟಕಗಳಿರುತ್ತವೆ. ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ವೊಂದು, ಮತ್ತು ಅವಕ್ಕೆ ಸಂಬಂಧಿಸಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಘಟಕ ಇನ್ನೊಂದು. ಇವುಗಳಲ್ಲಿ ಮೊದಲನೆಯದು ಗೆ ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬರುತ್ತದೆ. (49ಕ) ಮನೋಹರನಿಗೆ ಆರು ಮಂದಿ ಹುಡುಗಿಯರಿದ್ದಾರೆ. (49ಖ) ಆ ಮುದುಕನಿಗೆ ನೂರು ಮುಡಿ ಗದ್ದೆಯಿದೆ. (49ಗ) ಈ ಪುಸ್ತಕಕ್ಕೆ ಕೆಂಪು ಬಣ್ಣದ ತಟ್ಟಿಯಿದೆ. (49ಘ) ಪುಣೆ ನಗರಕ್ಕೊಂದು ಕಾಪ್ರರೇಶನ್ ಇದೆ. (49ಕ)ದಲ್ಲಿ ಮನೋಹರನಿಗೆ ಎಂಬ ಮೊದಲನೆಯ ಘಟಕ ಒಬ್ಬ ವ್ಯಕ್ತಿಯನ್ನೂ ಮತ್ತು ಆರು ಮಂದಿ ಹುಡುಗಿಯರು ಎಂಬ ಎರಡನೆಯ ಘಟಕ ಆ ವ್ಯಕ್ತಿಗೆ ಸಂಬಂಧಿಸಿರುವ ವ್ಯಕ್ತಿಗಳನ್ನೂ (ಅವರ ಪರಿಮಾಣವನ್ನೂ) ತಿಳಿಸುತ್ತವೆ. ಗೆ ಪ್ರತ್ಯಯಕ್ಕೆ ಘಟನೆಯನ್ನು ಸೂಚಿಸುವ ಕ್ರಿಯಾವಾಕ್ಯಗಳಲ್ಲಿ ಘಟನೆಯ ಕೊನೆಯನ್ನು ಸೂಚಿಸುವ ಅರ್ಥವಿದೆಯೆಂಬುದನ್ನು ನಾವು ಹಿಂದೆ 2.2ರಲ್ಲಿ ನೋಡಿರುವೆವು. ಸಂಬಂಧವಾಕ್ಯಗಳಲ್ಲೂ ಇದಕ್ಕೆ ಒಂದು ಸಂಬಂಧದ ‘ಕೊನೆ’ ಯನ್ನು, ಎಂದರೆ ಆ ಸಂಬಂಧ ಎಲ್ಲಿ ಹೋಗಿ ನೆಲೆಸುವುದೋ ಅಂತಹ ವ್ಯಕ್ತಿ, ವಸ್ತು, ಮೊದಲಾದುವನ್ನು ಸೂಚಿಸುವ ಅರ್ಥವಿದೆಯೆಂದು ಹೇಳಲು ಸಾಧ್ಯವಿದೆ. ಆದರೆ ಇಲ್ಲಿ ಕ್ರಿಯಾವಾಕ್ಯಗಳಲ್ಲಿ ಕಾಣಿಸುವ ಹಾಗೆ ಈ ಪ್ರತ್ಯಯಕ್ಕೆ ಕದಲುವ ಅರ್ಥವಿಲ್ಲ (2.5.3 ನೋಡಿ).
3.4.1 ಹೆಚ್ಚಿನ ಘಟಕಗಳು
ಸಂಬಂಧ ವಾಕ್ಯಗಳಲ್ಲಿ ಮೇಲೆ ಸೂಚಿಸಿದ ಎರಡು ಘಟಕಗಳು ಮಾತ್ರವಲ್ಲದೆ ಬೇರೆ ಕೆಲವು ಘಟಕಗಳೂ ಬರಬಲ್ಲುವು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯಲ್ಲಿ ಕಾಣಿಸುವ ಗುಣಧರ್ಮಕ್ಕೆ ಒಂದು ವ್ಯಾಪ್ತಿಯಿದೆಯಾದಲ್ಲಿ ಅದನ್ನು ಸೂಚಿಸುವು ದಕ್ಕಾಗಿ ಮೂರನೆಯ ಘಟಕವೊಂದು ಅಂತಹ ವಾಕ್ಯಗಳಲ್ಲಿ ಬರಬಲ್ಲುದು. ಇದು ಜಾಗ ಘಟಕದ ರೂಪದಲ್ಲಿರುತ್ತದೆ. (50ಕ) ಆಕೆಗೆ ಈ ಸೀರೆಯ ಮೇಲೆ ಆಸೆಯಿದೆ. (50ಖ) ಅವನಿಗೆ ತನ್ನ ಕೆಲಸದಲ್ಲಿ ಶ್ರದ್ಧೆಯಿದೆ. (50ಗ) ಜಾನಕಿಗೆ ಶ್ರೀಹರಿಯ ಮೇಲೆ ಕೋಪವಿದೆ. (50ಘ) ಆ ಹುಡುಗನಿಗೆ ಆಟದಲ್ಲಿ ಮಾತ್ರ ಉತ್ಸಾಹವಿದೆ. ಇದಲ್ಲದೆ, ಸಂಬಂಧಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗ ಮತ್ತು ಸಮಯಗಳನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳೂ ಇಂತಹ ವಾಕ್ಯಗಳಲ್ಲಿ ಬರಬಲ್ಲುವು. (51ಕ) ಅವರಿಗೆ ಇವತ್ತು ಒಂದು ಮೀಟಿಂಗ್ ಇದೆ. (51ಖ) ಹುಡುಗರಿಗೆ ನಾಳೆ ಶಾಲೆಗೆ ರಜೆಯಿದೆ.
3.5 ಸಾರಾಂಶ
ಬೇರೆ ಬೇರೆ ರೀತಿಯ ಸಂಗತಿಗಳನ್ನು ತಿಳಿಸುವುದಕ್ಕಾಗಿ ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ವಿಷಯವಾಕ್ಯಗಳ ಬಳಕೆಯಾಗುತ್ತದೆ. ಜಾಗವೊಂದರಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಇರುವಿಕೆಯನ್ನು ತಿಳಿಸುವ ‘ಇರುವಿಕೆಯ ವಾಕ್ಯಗಳು’, ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ತಿಳಿಸುವ ‘ಗುಣವಾಕ್ಯಗಳು’, ಮತ್ತು ವ್ಯಕ್ತಿ, ವಸ್ತು, ಗುಣಧರ್ಮ ಮೊದಲಾದವುಗಳಲ್ಲಿ ಒಂದು ಇನ್ನೊಂದ ರೊಡನೆ ಸಂಬಂಧಿಸಿರುವುದನ್ನು ತಿಳಿಸುವ ‘ಸಂಬಂಧ ವಾಕ್ಯಗಳು’ ಎಂಬುದಾಗಿ ಇವನ್ನು ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು. ಈ ಎಲ್ಲಾ ವಾಕ್ಯಗಳಲ್ಲೂ ಇರು ಎಂಬ ಒಂದೇ ಕ್ರಿಯಾಪದ ಬರುತ್ತದೆ. ಇಂತಹ ವಾಕ್ಯಗಳಲ್ಲಿ ಹಲವನ್ನು ಇರು ಕ್ರಿಯಾಪದವಿಲ್ಲದೆಯೂ ಬಳಸಲು ಸಾಧ್ಯ ಇಂತಹ ಹೆಚ್ಚಿನ ವಾಕ್ಯಗಳಲ್ಲೂ ಎರಡು ಮುಖ್ಯ ಘಟಕಗಳು ಬಂದಿರುತ್ತವೆ. ಅವುಗಳೊಂದಿಗೆ ಕೆಲವು ಅಮುಖ್ಯ ಘಟಕಗಳೂ ಬರಬಲ್ಲುವು.
English → | Eke →
ಅಧ್ಯಾಯ ನಾಲ್ಕು — ನಾಮಪದಗಳ ಕಂತೆಗಳು
4.1 ಪದಗಳು ಮತ್ತು ಪದಕಂತೆಗಳು
ನಾಮಪದಗಳ ಮಟ್ಟಿಗೆ ಪದ ಮತ್ತು ಪದಕಂತೆ ಎಂಬುದಾಗಿ ಎರಡು ಮಟ್ಟಗಳಲ್ಲಿ ಬರುವ ಘಟಕಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ. ಮರ ಎಂಬುದೊಂದು ನಾಮಪದ, ಮತ್ತು ದೊಡ್ಡ ಮರ ಎಂಬುದೊಂದು ನಾಮ ಪದಕಂತೆ. ಈ ಎರಡು ರೀತಿಯ ಘಟಕಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಮತ್ತು ವಾಕ್ಯಗಳಲ್ಲಿ ಅವುಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಶೀಲಿಸಲಿರುವೆವು. ಮರ ಎಂಬ ನಾಮಪದಕ್ಕೆ ಒಳರಚನೆಯೆಂಬುದಿಲ್ಲ. ಅದರ ತಯಾರಿಕೆಯಲ್ಲಿ ಮ್, ಅ, ರ್, ಮತ್ತು ಅ ಎಂಬ ನಾಲ್ಕು ವರ್ಣಗಳನ್ನು ಬಳಸಲಾಗಿದೆಯಾದರೂ ಅದಕ್ಕಿರುವ ಅರ್ಥವನ್ನು ಈ ವರ್ಣಗಳಿಂದ ನೇರವಾಗಿ ಪಡೆಯಲು ಸಾಧ್ಯವಿಲ್ಲ. ಆ ನಾಮಪದಕ್ಕೊಂದು ಸ್ವರೂಪವನ್ನು ಕೊಡುವುದು ಮತ್ತು ಉಳಿದ ನಾಮಪದ ಗಳಿಂದ ಅದು ಬೇರಾಗಿ ನಿಲ್ಲುವಂತೆ ಮಾಡುವುದು ಎಂಬ ಈ ಎರಡು ಕಾರ್ಯ ಗಳನ್ನು ಮಾತ್ರ ಅದರಲ್ಲಿ ಬರುವ ವರ್ಣಗಳು ನಡೆಸಬಲ್ಲುವು. ಅದರ ಅರ್ಥ ಏನು ಎಂಬುದು ಯಾವ ಅರ್ಥದಲ್ಲಿ ಅದು ರೂಢಿಗೆ ಬಂದಿದೆ ಎಂಬ ವಿಷಯದ ಮೇಲೆ ಮಾತ್ರವೇ ಅವಲಂಬಿಸಿದೆ. ಆದರೆ ದೊಡ್ಡ ಮರ ಎಂಬ ನಾಮಪದಕಂತೆ ಇದಕ್ಕಿಂತ ತೀರ ಭಿನ್ನ ವಾದುದು. ಅದಕ್ಕೆ ದೊಡ್ಡ ಮತ್ತು ಮರ ಎಂಬ ಎರಡು ಪದಗಳ ಕೂಡಿಕೆ ಯಿಂದ ತಯಾರಾದ ಅರ್ಥವಿರುವ ಒಳರಚನೆಯಿದೆ. ಅದರ ಅಂಗಗಳಾಗಿ ಬಂದಿರುವ ದೊಡ್ಡ ಮತ್ತು ಮರ ಎಂಬ ಎರಡು ಪದಗಳಿಗೆ ಮಾತ್ರ ಬರಿಯ ವರ್ಣಗಳ ಕೂಡಿಕೆಯಿಂದ ತಯಾರಾದ ಅರ್ಥವಿಲ್ಲದಿರುವ ಒಳರಚನೆಯಿದೆ.
ತಯಾರಿಕೆಗೆ ನಾಮಪದಗಳಲ್ಲೂ ಕೆಲವನ್ನು ಬೇರೆ ಪದಗಳ ಇಲ್ಲವೇ ಬೇರೆ ಪದ ಮತ್ತು ಪ್ರತ್ಯಯಗಳ ಕೂಡಿಕೆಯ ಮೂಲಕ ತಯಾರಿಸಿರುವುದನ್ನು ಕಾಣಬಹುದು. ಆದರೆ, ಅವುಗಳಿಗಿರುವ ಈ ಒಳರಚನೆ ಅವುಗಳ ಮಾತ್ರ ಸಂಬಂಧಿಸಿದ್ದಲ್ಲದೆ ನೇರವಾಗಿ ಅವುಗಳ ಅರ್ಥಕ್ಕೆ ಇಲ್ಲವೇ ಬಳಕೆಗೆ ಸಂಬಂಧಿಸಿದ್ದಲ್ಲ.
ಉದಾಹರಣೆಗಾಗಿ, ಕರಿಹಲಗೆ ಎಂಬ ನಾಮಪದವನ್ನು ಕರಿ ಮತ್ತು ಹಲಗೆ ಎಂಬ ಎರಡು ಪದಗಳ ಕೂಡಿಕೆಯ ಮೂಲಕ ತಯಾರಿಸಲಾಗಿದೆ. ಆದರೆ, ಈ ಪದಗಳಿಗೆ ಮತ್ತು ಅವುಗಳ ಕೂಡಿಕೆಗಿರುವ ಅರ್ಥದ ಮೇಲೆ ಕರಿಹಲಗೆ ಎಂಬ ನಾಮಪದದ ಅರ್ಥ ನಿಂತಿಲ್ಲ ಎಂಬುದನ್ನು ಗಮನಿಸಬಹುದು. ಬಳಕೆಯಲ್ಲಿ ಕರಿಹಲಗೆ ಎಂಬ ಪದ ಕಪ್ಪಲ್ಲದ ವಸ್ತುವನ್ನೂ ಸೂಚಿಸಬಲ್ಲುದು (ಕರಿಹಲಗೆ ಯೊಂದಕ್ಕೆ ನೀಲಿ ಬಣ್ಣ ಕೊಟ್ಟಿರಲು ಸಾಧ್ಯವಿದೆ) ಮತ್ತು ಹಲಗೆಯಲ್ಲದ ವಸ್ತು ವೊಂದನ್ನೂ ಸೂಚಿಸಬಲ್ಲುದು (ಗೋಡೆಯ ಒಂದು ಭಾಗಕ್ಕೆ ಬಣ್ಣ ಕೊಟ್ಟು ಅದನ್ನು ಕರಿಹಲಗೆ ಎಂದು ಕರೆದಿರಲೂ ಸಾಧ್ಯವಿದೆ).
ನಾಮಪದ ಮತ್ತು ನಾಮಪದಕಂತೆಗಳ ನಡುವಿರುವ ಈ ವ್ಯತ್ಯಾಸದ ಆಧಾರದ ಮೇಲೆ ವಾಕ್ಯರಚನೆಯ ಮಟ್ಟಿಗೆ ಅವು ಎರಡು ‘ಮಟ್ಟ’ಗಳಲ್ಲಿ ಬರು ತ್ತವೆ ಎಂದು ಹೇಳಲು ಸಾಧ್ಯವಾಗುತ್ತದೆ. ಆದರೆ ಇಂತಹ ವ್ಯತ್ಯಾಸ ವಾಕ್ಯಗಳಲ್ಲಿ ಬರುವ ಇತರ ಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಕ್ರಿಯಾಪದಗಳ ಬಳಕೆಯಲ್ಲಿ ಇಲ್ಲವೇ ಗುಣಪದಗಳ ಬಳಕೆಯಲ್ಲಿ ಈ ರೀತಿ ಪದಗಳು ಮತ್ತು ಪದಕಂತೆಗಳು ಎಂಬುದಾಗಿ ಎರಡು ರೀತಿಯ ಘಟಕಗಳು ಕಾಣಿಸುವುದಿಲ್ಲ. ಇದಕ್ಕೆ ಕೆಳಗೆ 4.1.1ರಲ್ಲಿ ಸೂಚಿಸಿರುವ ಹಾಗೆ ಒಂದು ಮುಖ್ಯ ವಾದ ಕಾರಣವೂ ಇದೆ.
4.1.1 ವ್ಯತ್ಯಾಸದ ಅವಶ್ಯಕತೆ
ವಾಕ್ಯಗಳಲ್ಲಿ ಬರುವ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಬೇರೆ ಬೇರೆ ಕೆಲಸಗಳಿವೆ. ಕ್ರಿಯಾಪದಗಳು ಒಂದು ಘಟನೆಯನ್ನು ಸೂಚಿಸಲು ಬಳಕೆ ಯಾಗುತ್ತವೆ, ಮತ್ತು ನಾಮಪದಗಳು ಅಂತಹ ಘಟನೆಯಲ್ಲಿ ತೊಡಗಿಕೊಂಡಿ ರುವ ವ್ಯಕ್ತಿ, ಪ್ರಾಣಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಲು ಬಳಕೆ ಯಾಗುತ್ತವೆ. ಉದಾಹರಣೆಗಾಗಿ ಕೆಳಗಿನ ವಾಕ್ಯವನ್ನು ಗಮನಿಸಬಹುದು. ಜಾನಕಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿದ್ದಾಳೆ. (1)ನೇ ವಾಕ್ಯದಲ್ಲಿ ಹೋಗು ಎಂಬ ಕ್ರಿಯಾಪದ ಒಂದು ಘಟನೆಯನ್ನು ಸೂಚಿಸು ತ್ತದೆ, ಮತ್ತು ಅದರೊಂದಿಗೆ ಬಂದಿರುವ ಜಾನಕಿ, ಬಸ್ಸು ಮತ್ತು ಮೂರು ಗುರುತಿಸುವ ಘಟನೆಯಲ್ಲಿ ನಾಮಪದಗಳು ಆ ಬೆಂಗಳೂರು ಎಂಬ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮತ್ತು ಜಾಗಗಳನ್ನು ಗುರುತಿಸುತ್ತವೆ.
ಈ ರೀತಿ ಬೇರೆ ಬೇರೆ ಘಟನೆ ಇಲ್ಲವೇ ಸಂಗತಿಗಳನ್ನು ತಿಳಿಸುವಲ್ಲಿ ನಾವು ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳ ಸಂಖ್ಯೆ ನಮ್ಮ ಭಾಷೆಯಲ್ಲಿರುವ ನಾಮಪದಗಳ ಸಂಖ್ಯೆಗಿಂತ ಎಷ್ಟೋ ಪಾಲು ಹೆಚ್ಚಿನದಾಗಿದೆ. ಕೆಲಸದಲ್ಲಿ ಹಾಗಾಗಿ, ವ್ಯಕ್ತಿ, ವಸ್ತು ಮೊದಲಾದುವನ್ನು ‘ಹೆಸರಿಸುವುದು’ ಮತ್ತು ‘ವರ್ಣಿಸುವುದು’ ಎಂಬುದಾಗಿ ಎರಡು ವಿಧಾನಗಳನ್ನು ಬಳಸುವ ಅವಶ್ಯಕತೆಯಿದೆ, ಮತ್ತು ಇದಕ್ಕಾಗಿ ವಾಕ್ಯಗಳಲ್ಲಿ ನಾಮಪದಗಳು ಮತ್ತು ನಾಮಪದಕಂತೆಗಳು ಎಂಬುದಾಗಿ ಎರಡು ರೀತಿಯ ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಒಂದು ಕಾಡಿನಲ್ಲಿ ಲಕ್ಷಗಟ್ಟಲೆ ಮರಗಳಿರಬಹುದು. ಇವುಗಳಲ್ಲಿ ಕೆಲವನ್ನು ಗುರುತಿಸಲು ಮಾವು, ಹಲಸು, ಹುಣಿಸೆ, ಗೇರು, ಮೊದಲಾದ ಹೆಸರಿಸುವ ನಾಮಪದಗಳನ್ನು ಬಳಸಬಲ್ಲೆವು. ಆದರೆ ಬೇರೆ ಹಲವು ಮರಗಳಿಗೆ ಹೆಸರೇ ಇಲ್ಲದಿರಬಹುದು. ಅಥವಾ ಹೆಸರಿದ್ದರೂ ಅದು ನಮಗೆ ತಿಳಿದಿಲ್ಲದಿರಬಹುದು. ಇಂತಹ ಸಂದಭ್ರಗಳಲ್ಲಿ ಅವನ್ನು ಗುರುತಿಸಿ ಅವುಗಳ ವರ್ಣನೆಯೊಂದನ್ನು ಬಳಸುವುದೇ ದಾರಿ. ಮತ್ತು ಇಂತಹ ವರ್ಣನೆಗಳಿಗಾಗಿ ನಾಮಪದಗಳ ಬದಲು ನಾಮಪದಕಂತೆ ಗಳನ್ನು ಬಳಸಬೇಕಾಗುತ್ತದೆ. ಕುರಿತು ಏನಾದರೂ ಹೇಳಬೇಕಿದ್ದಲ್ಲಿ (2) ಈ ಉದ್ದ ಎಲೆಯ ಗಿಡವನ್ನು ಮುಟ್ಟಿದರೆ ಕೈ ತುರಿಸುತ್ತದೆ. (2)ನೇ ವಾಕ್ಯದಲ್ಲಿ ವಿಶಿಷ್ಟವಾದ ಗಿಡವೊಂದನ್ನು ಅದರ ಹೆಸರೇನೆಂದು ತಿಳಿದಿಲ್ಲ ವಾದ ಕಾರಣ ಉದ್ದ ಎಲೆಯ ಗಿಡ ಎಂಬ ನಾಮಪದಕಂತೆಯ ಮೂಲಕ ವರ್ಣಿಸಿ ಗುರುತಿಸಲಾಗಿದೆ.
ಇದಲ್ಲದೆ, ಮರಗಳಲ್ಲಿ ಪ್ರತಿಯೊಂದಕ್ಕೂ ಹಲವು ಉಪಭೇದಗಳಿದ್ದು, ಅವನ್ನೆಲ್ಲ ಬೇರೆ ಬೇರಾಗಿ ಗುರುತಿಸಿ ಹೇಳಲು ಹೆಸರುಗಳಿರುವುದಿಲ್ಲ. ನಮಗೆ ಜಾಸ್ತಿ ಉಪಯೋಗಕ್ಕೆ ಬರುವ ಮಾವು, ಹಲಸು ಮೊದಲಾದ ಕೆಲವು ಜಾತಿ ಯವುಗಳಲ್ಲಿ ಮಾತ್ರ ಈ ರೀತಿ ಉಪಭೇದಗಳಿಗೆ ಅವುಗಳದೇ ಆದ ಹೆಸರುಗ ಳಿವೆ. ಇತರ ಜಾತಿಯ ಮರಗಳಲ್ಲಿ ಉಪಭೇದಗಳನ್ನು ಗುರುತಿಸಬೇಕಿದ್ದಲ್ಲಿ ವರ್ಣನೆಗಳನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ, ಮನುಷ್ಯರಿಗಿರುವ ಹಾಗೆ ಹೆಚ್ಚಿನ ಮರ-ಗಿಡಗಳಿಗೂ ಅಂಕಿತ ನಾಮಗಳಿಲ್ಲವಾದ ಕಾರಣ, ಅವುಗಳಲ್ಲಿ ಯಾವುದಾದರೂ ಒಂದನ್ನು ಉಳಿದವು ಗಳಿಂದ ಪ್ರತ್ಯೇಕಿಸಿ ಗುರುತಿಸಬೇಕಾದಾಗಲೂ ವರ್ಣನೆಗಳನ್ನೇ ಬಳಸಬೇಕಾಗು ನಮ್ಮಲ್ಲಿನ ನೀಲಂ ಗಿಡದಲ್ಲಿ ಮೂರನೆಯ ವಷ್ರಕ್ಕೇ ಹಣ್ಣಾಗಿದೆ. (3)ನೇ ವಾಕ್ಯದಲ್ಲಿ ಒಂದು ನಿರ್ದಿಷ್ಟವಾದ ಗಿಡವನ್ನು, ಅದಕ್ಕೆ ಅಂಕಿತನಾಮ ವಿಲ್ಲವಾದ ಕಾರಣ, ನಮ್ಮಲ್ಲಿನ ನೀಲಂ ಗಿಡ ಎಂಬ ನಾಮಪದಕಂತೆಯ ಮೂಲಕ ವರ್ಣಿಸಿ ಗುರುತಿಸಬೇಕಾಗಿದೆ.
4.1.2 ಕ್ರಿಯಾಪದ ಮತ್ತು ಗುಣಪದಗಳು
ನಾಮಪದಗಳು ನಡೆಸಬೇಕಾಗಿರುವ ಈ ‘ಗುರುತಿಸುವ’ ಕೆಲಸಕ್ಕಿಂತ ಕ್ರಿಯಾ ಪದಗಳು ನಡೆಸಬೇಕಾಗಿರುವ ‘ಸೂಚಿಸುವ’ ಕೆಲಸ ತೀರ ಭಿನ್ನವಾದುದು. ಅವು ಘಟನೆಯೊಂದನ್ನು ಸೂಚಿಸುವುದು ಮಾತ್ರವಲ್ಲದೆ ಅದು ಇನ್ನೊಬ್ಬರಿಗೆ ತಿಳಿಯು ವಂತೆ ಮಾಡುವುದು, ಅದರ ವಿಷಯವಾಗಿ ಇನ್ನೊಬ್ಬರಿಂದ ಹೆಚ್ಚಿನ ಸಂಗತಿ ಗಳನ್ನು ಕೇಳಿ ತಿಳಿದುಕೊಳ್ಳುವುದು, ಇನ್ನೊಬ್ಬರ ಮೂಲಕ ಅಂತಹ ಘಟನೆಯನ್ನು ಮಾಡಿಸಿಕೊಳ್ಳುವುದು, ಅದರ ವಿಷಯವಾಗಿ ಬೆರಗನ್ನು ಸೂಚಿಸುವುದು, ಮೊದ ಲಾದ ಬೇರೆ ಬೇರೆ ಮಾತಿನ ಕೆಲಸಗಳಲ್ಲಿ ಆ ಘಟನೆಯನ್ನು ತೊಡಗಿಸಬೇಕಾಗು ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿ ಕ್ರಿಯಾಪದಗಳಲ್ಲಿ ಬೇರೆಯೇ ಕೆಲವು ಗುಣಧರ್ಮಗಳು ಕಾಣಿಸಿಕೊಳ್ಳುತ್ತವೆ. ಘಟನೆಯ ಸಮಯ, ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ಘಟನೆಯ ಸ್ವರೂಪ ಮೊದಲಾದುವನ್ನು ಸೂಚಿಸುವ ಪ್ರತ್ಯಯಗಳು ಅದರೊಂದಿಗೆ ಬರುತ್ತವೆ, ಮತ್ತು ಎಂತಹ ಮಾತಿನ ಕೆಲಸದಲ್ಲಿ ಆ ಘಟನೆಯನ್ನು ತೊಡಗಿಸಲಾಗಿದೆ ಎಂಬುದನ್ನು ಸೂಚಿಸುವ ಪದ ಇಲ್ಲವೇ ಪ್ರತ್ಯಯಗಳೂ ಅದರೊಂದಿಗೆ ಬರುತ್ತವೆ.
ಹುಡುಗನನ್ನು ಶಾಲೆಗೆ ಸೇರಿಸಿದೆ. ಮೇಲಿನ ವಾಕ್ಯದಲ್ಲಿ ಬಂದಿರುವ ಸೇರು ಕ್ರಿಯಾಪದದೊಂದಿಗೆ ಅದು ಸೂಚಿಸುವ ಘಟನೆಯನ್ನು ಇನ್ನೊಬ್ಬ ವ್ಯಕ್ತಿಯ (ಹುಡುಗನ) ಮೂಲಕ ನಡೆಸಲಾಗಿದೆ ಎಂಬುದನ್ನು ಸೂಚಿಸುವ ಇಸು ಪ್ರತ್ಯಯವೂ, ಆ ಘಟನೆ (4)ನೇ ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲೇ ನಡೆದುದೆಂಬುದನ್ನು ಸೂಚಿಸುವ ಇದ್ ಪ್ರತ್ಯಯವೂ ಮತ್ತು ಆ ಘಟನೆಯನ್ನು ಇನ್ನೊಬ್ಬ ವ್ಯಕ್ತಿಯ ಮೂಲಕ ನಡೆಸಿದವನು (4)ನೇ ವಾಕ್ಯದ ಆಡುಗನೆಂಬುದನ್ನು ಸೂಚಿಸುವ ಎ ಪ್ರತ್ಯಯವೂ ಬಂದಿರುವುದನ್ನು ಕಾಣಬಹುದು. ಆದರೆ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳಿಗೆ ಕ್ರಿಯಾಪದಗಳ ಬಳಕೆಯಲ್ಲಿ ಯಾವ ಸ್ಥಾನವೂ ಇಲ್ಲವಾದ ಕಾರಣ, ಪದಗಳ ಮತ್ತು ಪದಕಂತೆಗಳ ನಡು ವಿರುವ ವ್ಯತ್ಯಾಸ ಅವುಗಳ ರಚನೆಯಲ್ಲಿ ಕಾಣಿಸುವುದಿಲ್ಲ.
ವಾಕ್ಯಗಳಲ್ಲಿ ಗುಣಪದಗಳು ನಡೆಸಬೇಕಾಗಿರುವ ಕೆಲಸವೂ ನಾಮಪದ ಮತ್ತು ಕ್ರಿಯಾಪದಗಳು ನಡೆಸಬೇಕಾಗಿರುವ ಕೆಲಸಗಳಿಗಿಂತ ತೀರ ಭಿನ್ನವಾದುದು. ಅವುಗಳಲ್ಲಿ ನಾಮಪದಗಳೊಂದಿಗೆ ಬರುವವುಗಳು, ಕ್ರಿಯಾಪದಗಳೊಂದಿಗೆ ಬರುವವುಗಳು ಮತ್ತು ಗುಣಪದಗಳೊಂದಿಗೆ ಬರುವವುಗಳು ಎಂಬುದಾಗಿ ಮೂರು ವಿಧದವುಗಳಿದ್ದು, ಇವಕ್ಕೆ ಮೂರು ಬೇರೆ ಬೇರೆ ಕೆಲಸಗಳಿವೆ. ನಾಮ ಪದಗಳೊಂದಿಗೆ ಬರುವ ಗುಣಪದಗಳು ನಾಮಪದಕಂತೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ ಮತ್ತು ಹೊಸ ಹೊಸ ನಾಮಪದಗಳ ತಯಾರಿಕೆಯಲ್ಲೂ ಬಳಕೆಯಾಗುತ್ತವೆ. ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳು ಕ್ರಿಯಾಪದಗಳು ಸೂಚಿಸುವ ಘಟನೆಯ ಕುರಿತಾಗಿ ಇಲ್ಲವೇ ಅದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳ ಕುರಿತಾಗಿ ಏನಾದರೂ ತಿಳಿಸಲು ಬಳಕೆಯಾಗುತ್ತಿದ್ದು ಅವು ಸೂಚಿಸುವ ಗುಣಧರ್ಮಗಳು ನಾಮಪದಗಳೊಂದಿಗೆ ಬರುವ ಗುಣ ಪದಗಳು ಸೂಚಿಸುವ ಗುಣಧರ್ಮಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು.
ಗುಣಪದಗಳೊಂದಿಗೆ ಬರುವ ಗುಣಪದಗಳು ಅವುಗಳ ಪ್ರಮಾಣ, ವ್ಯಾಪ್ತಿ ಮೊದಲಾದುವನ್ನು ಸೂಚಿಸುತ್ತವೆ. ಈ ಮೂರು ರೀತಿಯ ಗುಣಪದಗಳ ಬಳಕೆ ಯಲ್ಲೂ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ವಿಧಾನಗಳ ಅವಶ್ಯಕತೆ ಯಿಲ್ಲವಾದ ಕಾರಣ ಅವುಗಳ ರಚನೆಯಲ್ಲೂ ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ.
4.2 ಗುರುತಿಸುವ ವಿಧಾನಗಳು
ವಾಕ್ಯವೊಂದರಲ್ಲಿ ಕ್ರಿಯಾಪದದ ಮೂಲಕ ಘಟನೆಯೊಂದನ್ನು ಸೂಚಿಸುವಾಗ ಲೆಲ್ಲ ಸಾಮಾನ್ಯವಾಗಿ ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಿಕೊಡುವ ಅವಶ್ಯಕತೆಯಿರುತ್ತದೆ. ಉದಾ ಹರಣೆಗಾಗಿ ಕೊಡು ಕ್ರಿಯಾಪದವನ್ನು ಒಂದು ವಾಕ್ಯದಲ್ಲಿ ಬಳಸುವುದಿದ್ದಲ್ಲಿ ಯಾರು ಯಾರಿಗೆ ಏನನ್ನು ಕೊಟ್ಟರು ಎಂಬುದನ್ನು ತಿಳಿಸುವುದಕ್ಕಾಗಿ ಇಬ್ಬರು ವ್ಯಕ್ತಿಗಳನ್ನೂ ಮತ್ತು ಒಂದು ವಸ್ತುವನ್ನೂ ಗುರುತಿಸಿಕೊಡಬೇಕಾಗುತ್ತದೆ. ರಾಜು ಜಾನಕಿಗೆ ಒಂದು ಪುಸ್ತಕ ಕೊಟ್ಟ. ವ್ಯಕ್ತಿ, ವಸ್ತು ಮೊದಲಾದುವನ್ನು ಈ ರೀತಿ ಗುರುತಿಸುವುದಕ್ಕಾಗಿ ನಾವು ವಾಕ್ಯ ಗಳಲ್ಲಿ ನಾಮಪದಗಳನ್ನು ಇಲ್ಲವೇ ನಾಮಪದಕಂತೆಗಳನ್ನು ಬಳಸುತ್ತೇವೆ. ಮೇಲಿನ ವಾಕ್ಯದಲ್ಲಿ ವ್ಯಕ್ತಿಗಳಿಬ್ಬರನ್ನು ಗುರುತಿಸಲು ರಾಜು ಮತ್ತು ಜಾನಕಿ ಎಂಬ ಎರಡು ನಾಮಪದಗಳನ್ನೂ ಮತ್ತು ವಸ್ತುವೊಂದನ್ನು ಗುರುತಿಸಲು ಒಂದು ಪುಸ್ತಕ ಎಂಬ ನಾಮಪದಕಂತೆಯನ್ನೂ ಬಳಸಲಾಗಿದೆ. ಸಾಮಾನ್ಯವಾಗಿ ನಾಮಪದಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದವು ಗಳನ್ನು ಹೆಸರಿಸಿ ಗುರುತಿಸುತ್ತೇವೆ ಮತ್ತು ನಾಮಪದಕಂತೆಗಳ ಮೂಲಕ ವರ್ಣಿಸಿ ಗುರುತಿಸುತ್ತೇವೆ. ಹೆಸರಿಸುವ ನಾಮಪದಗಳು ಮೇಲೆ (5)ನೇ ವಾಕ್ಯ ದಲ್ಲಿ ಕಾಣಿಸುವಂತೆ ಅಂಕಿತನಾಮಗಳಿರಬಹುದು ಇಲ್ಲವೇ ಕೆಳಗೆ (6)ನೇ ವಾಕ್ಯ ದಲ್ಲಿ ಕಾಣಿಸುವಂತೆ ರೂಢನಾಮಗಳಿರಬಹುದು.
ನಾಯಿಗೆ ಬೆದರಿದ ಬೆಕ್ಕು ಮರಕ್ಕೆ ಹತ್ತಿತು. ಈ (6)ನೇ ವಾಕ್ಯದಲ್ಲಿ ನಾಯಿ ಮತ್ತು ಬೆಕ್ಕು ಎಂಬ ಎರಡು ರೂಢನಾಮಗಳು ಎರಡು ಪ್ರಾಣಿಗಳನ್ನೂ ಮತ್ತು ಮರ ಎಂಬ ಇನ್ನೊಂದು ರೂಢನಾಮ ಒಂದು ವಸ್ತುವನ್ನೂ ಹೆಸರಿಸುತ್ತಿವೆ.
4.2.1 ಹೆಸರಿಸುವುದು ಮತ್ತು ವರ್ಣಿಸುವುದು
ಮೇಲೆ ಸೂಚಿಸಿದ ಹಾಗೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ರೀತಿಯ ವಿಧಾನ ಗಳನ್ನು ಬಳಸಲು ಸಾಧ್ಯವಿದೆ. ಗುರುತಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತುವಿಗೆ ಅದರದೇ ಆದ ಹೆಸರಿದೆಯಾದಲ್ಲಿ (ಎಂದರೆ ಅಂಕಿತನಾಮ ಇಲ್ಲವೇ ರೂಢ ನಾಮವಿದೆಯಾದಲ್ಲಿ) ಅದನ್ನು ಬಳಸುವುದರ ಮೂಲಕ ನಾವು ಆ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲೆವು.
ಆದರೆ ಮೇಲೆ ವಿವರಿಸಿದಂತೆ ಎಲ್ಲಾ ರೀತಿಯ ವ್ಯಕ್ತಿ ಇಲ್ಲವೇ ವಸ್ತುಗಳಿಗೂ ಅವುಗಳದೇ ಆದ ಹೆಸರುಗಳಿರುವುದಿಲ್ಲ. ಯಾಕೆಂದರೆ, ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿ ನಾವು ಬಳಸಬಹುದಾದ ಮತ್ತು ನೆನಪಿ ನಲ್ಲಿಟ್ಟುಕೊಳ್ಳಬಹುದಾದ ನಾಮಪದಗಳ ಸಂಖ್ಯೆಗೆ ಒಂದು ಪರಿಮಿತಿಯಿದೆ.
ಆದರೆ ಮಾತಿನಲ್ಲಿ ನಾವು ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ಮೊದಲಾ ದವುಗಳಿಗೆ ಮತ್ತು ಅವುಗಳಲ್ಲಿ ಕಾಣಿಸುವ ವೈವಿಧ್ಯತೆಗಳಿಗೆ ಪರಿಮಿತಿಯಿಲ್ಲ. ಹಾಗಾಗಿ, ಎಲ್ಲಾ ಸಂದಭ್ರಗಳಲ್ಲೂ ನಮ್ಮೆದುರಿಗಿರುವ ವ್ಯಕ್ತಿ ಇಲ್ಲವೇ ವಸ್ತು ವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸಲು ಸಾಧ್ಯವಾಗದು.
ಇದಲ್ಲದೆ, ಹಲವು ಸಂದಭ್ರಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಹೆಸರು ನಮಗೆ ತಿಳಿದಿದ್ದರೂ ನಮ್ಮ ಕೇಳುಗರಿಗೆ ಅದು ತಿಳಿದಿಲ್ಲದಿರಲು ಸಾಧ್ಯವಿದೆ. ಬೇರೆ ಕೆಲವು ಸಂದಭ್ರಗಳಲ್ಲಿ ಅದನ್ನು ನಾವೇ ಮರೆತಿರಲು ಸಾಧ್ಯವಿದೆ. ಇಂತಹ ಸಂದಭ್ರಗಳಲ್ಲೂ ಹೆಸರಿಸುವುದು ಎಂಬ ಮೊದಲನೆಯ ವಿಧಾನದ ಬದಲು ವರ್ಣಿಸುವುದು ಎಂಬ ಎರಡನೆಯ ವಿಧಾನವನ್ನು ಬಳಸಬೇಕಾಗುತ್ತದೆ. ಈ ಎರಡು ವಿಧಾನಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. ರಾಜು ಇವತ್ತು ಶಾಲೆಗೆ ಹೋಗಲಿಲ್ಲ. (7ಖ) ಪಕ್ಕದ ಮನೆಯ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. ಸಪೊೀಟ ಬಹಳ ರುಚಿಯಾಗಿದೆ. (8ಖ) ರಾಜು ಕೊಟ್ಟ ಈ ಹಣ್ಣು ಬಹಳ ರುಚಿಯಾಗಿದೆ. ಹೆಸರಿಸುವ (7ಕ)ದಲ್ಲಿ ಶಾಲೆಗೆ ಹೋಗದ ವ್ಯಕ್ತಿಯನ್ನು ಗುರುತಿಸಲು ಹೆಸರಿಸುವ ವಿಧಾನ ವನ್ನು ಬಳಸಲಾಗಿದೆ ಮತ್ತು (7ಖ)ದಲ್ಲಿ ಅದೇ ವ್ಯಕ್ತಿಯನ್ನು ಗುರುತಿಸಲು ವರ್ಣಿಸುವ ವಿಧಾನವನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ ರುಚಿಯಾಗಿರುವ ಒಂದು ವಸ್ತುವನ್ನು ಗುರುತಿಸಲು (8ಕ)ದಲ್ಲಿ ಹೆಸರಿಸುವ ವಿಧಾನವನ್ನೂ ಮತ್ತು (8ಖ)ದಲ್ಲಿ ವರ್ಣಿಸುವ ವಿಧಾನವನ್ನೂ ಬಳಸಲಾಗಿದೆ. ಹೆಸರಿಸುವ ವಿಧಾನದಲ್ಲಿ ರೂಢನಾಮ ಮತ್ತು ಅಂಕಿತನಾಮ ಎಂಬುದಾಗಿ ಎರಡು ರೀತಿಯ ಹೆಸರುಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನೂ ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು. (7ಕ)ದಲ್ಲಿ ಹೆಸರಿಸುವುದಕ್ಕಾಗಿ ಅಂಕಿತ ನಾಮದ ಬಳಕೆಯಾಗಿದೆಯಾದರೆ, (8ಕ)ದಲ್ಲಿ ರೂಢನಾಮದ ಬಳಕೆಯಾಗಿದೆ.
ಅಂಕಿತನಾಮಗಳು ಅವು ಮೊದಲಾದವುಗಳಿಗೆ ಮತ್ತು ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗುತ್ತವೆ ಎಂಬುದೇ ಈ ಎರಡು ರೀತಿಯ ಹೆಸರುಗಳ ನಡುವಿರುವ ಮುಖ್ಯ ವ್ಯತ್ಯಾಸ. ಉದಾಹರಣೆಗಾಗಿ, ಒಂದೇ ಊರಿನಲ್ಲಿ ಹಲವು ಮಂದಿ ರಾಮು ಎಂಬ ಅಂಕಿತನಾಮವಿರುವ ವ್ಯಕ್ತಿಗಳಿರಲು ಸಾಧ್ಯವಿದೆ. ಆದರೆ ಇವರಲ್ಲಿ ಪ್ರತಿ ಯೊಬ್ಬನಿಗೂ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ಜನರು ಈ ಹೆಸರನ್ನು ಕೊಟ್ಟಿರುತ್ತಾರೆ. ಇದಲ್ಲದೆ, ಹೆಸರು ಒಂದೇ ಆದರೂ ಅದರ ಮೂಲಕ ಗುರುತಿಸ ಲಾಗುವ ಈ ವ್ಯಕ್ತಿಗಳ ನಡುವೆ ಯಾವ ಸಾಮ್ಯತೆಯೂ ಇರಬೇಕಾಗಿಲ್ಲ.
ರೂಢನಾಮದ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಉದಾಹರಣೆಗಾಗಿ, ಬಡಗಿ ಎಂಬ ರೂಢನಾಮವಿರುವ ವ್ಯಕ್ತಿಗಳು ಒಂದು ಊರಲ್ಲಿ ಒಬ್ಬರಿಗಿಂತ ಜಾಸ್ತಿ ಇರಲು ಸಾಧ್ಯವಿದೆ. ಆದರೆ ಇಂತಹ ವ್ಯಕ್ತಿಗಳನ್ನೆಲ್ಲ ಈ ಹೆಸರಿನ ಮೂಲಕ ಗುರುತಿಸುವ ನಿರ್ಧಾರವನ್ನು ಕನ್ನಡ ಭಾಷೆಯನ್ನಾಡುವ ಸಮಾಜದಲ್ಲಿ ಯಾವಾ ಗಲೋ ಒಮ್ಮೆ ಮಾಡಿರಬೇಕು.
ವಸ್ತು, ಸಂಬಂಧಿತವಾಗುತ್ತವೆ, ಬೇರಾಗಿ ವ್ಯಕ್ತಿ, ಬೇರೆ ಆ ನಿರ್ಧಾರದ ಫಲವಾಗಿ ಆವತ್ತು ಜೀವಿಸುತ್ತಿದ್ದ ಕೆಲವು ವಿಶಿಷ್ಟ ವ್ಯಕ್ತಿಗಳು (ತಮ್ಮ ಕಸುಬಾಗಿ ಮರದ ಕೆಲಸ ಮಾಡುವವರು) ಮಾತ್ರವಲ್ಲದೆ ಮುಂದೆ ಜೀವಿಸಲಿರುವ ಮತ್ತು ಅದಕ್ಕಿಂತ ಹಿಂದೆ ಜೀವಿಸುತ್ತಿದ್ದ ಅಂತಹ ಇತರ ಎಲ್ಲಾ ವ್ಯಕ್ತಿಗಳನ್ನೂ ಆ ಪದ ಹೆಸರಿಸುವಂತಾಗಿರಬೇಕು.
ಆ ಪದ ಹೆಸರಿಸುವ ವ್ಯಕ್ತಿಗಳೊಳಗೂ ಅವರೆಲ್ಲ ಒಂದೇ ರೀತಿಯ (ಮರದ ಕೆಲಸ ಮಾಡುವ) ವೃತ್ತಿಯವರೆಂಬುದಾಗಿ ಒಂದು ರೀತಿಯ ಸಾಮ್ಯವೂ ಇದೆ (ಹೆಚ್ಚಿನ ವಿವರಗಳಿಗೆ (ಭಟ್ 2002:80) ನೋಡಿ).
4.2.2 ಹೊಸ ಮತ್ತು ಹಳೆ ಗುರುತಿಸುವಿಕೆಗಳು
ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸುವುದಕ್ಕಾಗಿ ರೂಢನಾಮ ವೊಂದನ್ನು ಬಳಸುವುದಿದ್ದಲ್ಲಿ, ಆ ವ್ಯಕ್ತಿ ಇಲ್ಲವೇ ವಸ್ತು ಕೇಳುಗನಿಗೆ ಪರಿಚಿತ ವಾಗಿದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ಹೊಸತು ಮತ್ತು ಹಳೆಯದು ಎಂಬುದಾಗಿ ಎರಡು ರೀತಿಯ ಗುರುತಿಸುವಿಕೆಗಳನ್ನು ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ನೋಡಬಹುದು. (9ಕ) ಆಕೆ ರಾಜುವಿಗೆ ಒಂದು ಪುಸ್ತಕ ಕೊಟ್ಟಿದ್ದಳು, ಮತ್ತು ನಿನ್ನೆ ರಾತ್ರಿ ಯೆಲ್ಲ ಆತ ಆ ಪುಸ್ತಕ ಓದುತ್ತಿದ್ದ. (9ಖ) ಆಕೆ ರಾಜುವಿಗೆ ಒಂದು ಪುಸ್ತಕ ಕೊಟ್ಟಿದ್ದಳು, ಮತ್ತು ನಿನ್ನೆ ರಾತ್ರಿಯೆಲ್ಲ ಆತ ಒಂದು ಪುಸ್ತಕ ಓದುತ್ತಿದ್ದ. (9ಕ) ವಾಕ್ಯದ ಪ್ರಕಾರ, ಆಕೆ ರಾಜುವಿಗೆ ಕೊಟ್ಟಿದ್ದ ಪುಸ್ತಕ ಮತ್ತು ರಾಜು ರಾತ್ರಿಯೆಲ್ಲ ಓದುತ್ತಿದ್ದ ಪುಸ್ತಕ ಇವೆರಡೂ ಒಂದೇ. ಆದರೆ (9ಖ) ವಾಕ್ಯದ ಪ್ರಕಾರ ಅವನು ರಾತ್ರಿಯೆಲ್ಲ ಓದುತ್ತಿದ್ದ ಪುಸ್ತಕ ಆಕೆ ಕೊಟ್ಟಿದ್ದ ಪುಸ್ತಕಕ್ಕಿಂತ ಬೇರಾಗಿರಲು ಸಾಧ್ಯವಿದೆ. ಈ ವ್ಯತ್ಯಾಸಕ್ಕೆ (9ಕ)ದಲ್ಲಿ ಎರಡನೆಯ ಬಾರಿಗೆ ಒಂದು ಪುಸ್ತಕ ಎಂಬುದರ ಬದಲು ಆ ಪುಸ್ತಕ ಎಂಬುದನ್ನು ಬಳಸಿರುವುದು ಮತ್ತು (9ಖ)ದಲ್ಲಿ ಎರಡು ಬಾರಿಯೂ ಒಂದು ಪುಸ್ತಕ ಎಂಬುದನ್ನೇ ಬಳಸಿರುವುದು ಕಾರಣ.
ಈ ವಾಕ್ಯಗಳಲ್ಲಿ ಒಂದು ಪುಸ್ತಕ ಎಂಬುದು ಒಂದು ವಸ್ತುವನ್ನು ಹೊಸ ದಾಗಿ ಗುರುತಿಸಿ ಹೇಳಲು ಬಳಕೆಯಾಗುತ್ತದೆ. ಇದಕ್ಕೆ ಬದಲು ಆ ಪುಸ್ತಕ ಎಂಬುದು ಇದಕ್ಕೆ ಮೊದಲೇ ಗುರುತಿಸಿರುವಂತಹ ವಸ್ತುವನ್ನೇ ಇನ್ನೊಮ್ಮೆ ಗುರುತಿಸಿ ಹೇಳುವುದಕ್ಕಾಗಿ ಬಳಕೆಯಾಗುತ್ತದೆ. ಹಾಗಾಗಿ, ಮೊದಲನೆಯದು ‘ಹೊಸ ಗುರುತಿಸುವಿಕೆ’ಯನ್ನೂ ಮತ್ತು ಎರಡನೆಯದು ‘ಹಳೆ ಗುರುತಿಸುವಿಕೆ’ ಯನ್ನೂ ನಡೆಸುತ್ತವೆ ಎಂದು ಹೇಳಬಹುದು. ಆ ಪುಸ್ತಕ ಎಂಬುದೂ ಕೆಲವು ಸಂದಭ್ರಗಳಲ್ಲಿ ಹೊಸ ಗುರುತಿಸುವಿಕೆ ಯನ್ನೇ ಮಾಡಬಲ್ಲುದು. ಉದಾಹರಣೆಗಾಗಿ ಆಡುಗನು ತನ್ನ ಎದುರಿನಲ್ಲಿರುವ ಒಂದು ಪುಸ್ತಕವನ್ನು ಬೆರಳಿನಿಂದ ತೋರಿಸುತ್ತಾ ಕೆಳಗಿನ ವಾಕ್ಯವನ್ನು ಆಡಿರುವ ನಾದರೆ ಅದರಲ್ಲಿ ಬಂದಿರುವ ಆ ಪುಸ್ತಕ ಎಂಬುದಕ್ಕೆ ಹೊಸ ಗುರುತಿಸುವಿಕೆಯ ಅರ್ಥ ಬರುತ್ತದೆ. (10) ಆ ಪುಸ್ತಕವನ್ನು ನಿಮಗೆ ಯಾರು ಕೊಟ್ಟರು? ಕನ್ನಡದಲ್ಲಿ ಸಾಮಾನ್ಯವಾಗಿ ಹಳೆ ಗುರುತಿಸುವಿಕೆಯನ್ನು ಸೂಚಿಸಲು ವಿಶಿಷ್ಟ ವಾದ ಸಾಧನವೇನೂ ಬೇಕಾಗುವುದಿಲ್ಲ. ನಾಮಪದಗಳನ್ನು ಹಾಗೆಯೇ ಬಳಸಿ ದಾಗಲೆಲ್ಲ ಅವು ಹಳೆ ಗುರುತಿಸುವಿಕೆಯನ್ನೇ ಮಾಡುತ್ತವೆ. ಗುರುತಿಸುವಿಕೆ ಹೊಸ ದೆಂದು ಸೂಚಿಸಬೇಕಾಗಿರುವಾಗ ಮಾತ್ರ ಅದಕ್ಕಾಗಿ ಹೆಸರಿನೊಂದಿಗೆ ಒಂದು ಇಲ್ಲವೇ ಒಬ್ಬ ಎಂಬುದನ್ನು (ಅಥವಾ ಎರಡು, ಮೂರು ಮೊದಲಾದ ಬೇರೆ ಎಣಿಕೆಯ ಪದಗಳನ್ನು) ಬಳಸಬೇಕಾಗುತ್ತದೆ. ಕೆಲವು, ಸ್ವಲ್ಪ ಮೊದಲಾದ ಅಳತೆಯ ಪದಗಳನ್ನೂ ಈ ಕಾರ್ಯಕ್ಕಾಗಿ ಬಳಸಲು ಸಾಧ್ಯವಿದೆ. ಇದಲ್ಲದೆ, ಒಮ್ಮೆ ಗುರುತಿಸಿರುವ ವ್ಯಕ್ತಿ ಇಲ್ಲವೇ ವಸ್ತುವನ್ನೇ ಇನ್ನೊಮ್ಮೆ ಗುರುತಿಸಿ ಹೇಳಬೇಕಾಗಿರುವಾಗ ಅದನ್ನು ಸೂಚಿಸುವ ನಾಮಪದ ಇಲ್ಲವೇ ನಾಮಪದಕಂತೆಯನ್ನು ಹಾಗೆಯೇ ಇನ್ನೊಮ್ಮೆ ಬಳಸುವ ಬದಲು ಪ್ರತಿನಾಮ ಇಲ್ಲವೇ ಸವ್ರಪದವೊಂದನ್ನು ಬಳಸುವ ಸಾಧ್ಯತೆಯೂ ಇದೆ. (11ಕ) ಬಿಳಿ ಹಕ್ಕಿ ಕಪ್ಪು ಹಕ್ಕಿಯನ್ನು ತನ್ನ ಗೂಡಿನಿಂದ ಹೊರಗೆ (11ಖ) ನಾವು ಹರಿಯ ವಿಷಯ ಮಾತನಾಡುತ್ತಿದ್ದಾಗ ಅವನೇ ನಮ್ಮೆದುರು ಬಂದು ನಿಂತ. ವ್ಯಕ್ತಿ (11ಕ)ದಲ್ಲಿ ಬಿಳಿ ಹಕ್ಕಿಯನ್ನು ಪುನ: ಎರಡನೆಯ ಬಾರಿಗೆ ಗುರುತಿಸಲು ತನ್ನ ಎಂಬ ಪ್ರತಿನಾಮವನ್ನೂ ಮತ್ತು (11ಖ)ದಲ್ಲಿ ಹರಿಯನ್ನು ಎರಡನೆಯ ಬಾರಿಗೆ ಗುರುತಿಸಲು ಅವನೇ ಎಂಬ ಸವ್ರಪದವನ್ನೂ ಬಳಸಲಾಗಿದೆ. ಗುರುತಿಸುವಿಕೆ ವಸ್ತುವಿನ ಹಳೆಯದೆಂದೆನಿಸಲು ಅದನ್ನು ಇದಕ್ಕೆ ಮೊದಲೇ ಮಾತಿನಲ್ಲಿ ಗುರುತಿಸಿರುವುದು ಒಂದು ಕಾರಣ. ಮಾತಿನ ಸಂದಭ್ರದಲ್ಲಿ ಕೇಳುಗನಿಗೆ ಬರಿಯ ಹೆಸರಿನ ಬಳಕೆಯಿಂದಲೇ ಯಾರನ್ನು ಇಲ್ಲವೇ ಯಾವುದನ್ನು ಗುರುತಿಸಲಾಗುತ್ತಿದೆಯೆಂದು ಗೊತ್ತಾಗುವಂತೆ ಇದ್ದಲ್ಲೂ ಅದನ್ನು ಹಳೆಯ ಗುರುತಿಸುವಿಕೆಯೆಂದು ಕರೆಯಲು ಸಾಧ್ಯವಿದೆ.
ಇಲ್ಲವೇ ಒಂದು (12ಕ) ನಾವು ಸ್ನಾನಕ್ಕೆ ಕೆರೆಗೆ ಹೋಗೋಣ. (12ಖ) ನಾವು ಸ್ನಾನಕ್ಕೆ ಒಂದು ಕೆರೆಗೆ ಹೋಗೋಣ. ಊರಲ್ಲಿ ಕೆರೆ ಒಂದೇ ಇದೆಯಾದರೆ ಕೆರೆ ಎಂದಿಷ್ಟೇ ಹೇಳಿದರೆ ಸಾಕು, ಆ ಪದ ಯಾವುದನ್ನು ಗುರುತಿಸುತ್ತದೆ ಎಂಬುದು ಕೇಳುಗನಿಗೆ ತಿಳಿಯುತ್ತದೆ. ಆದರೆ ಎರಡು ಅಥವಾ ಜಾಸ್ತಿ ಕೆರೆಗಳಿವೆಯಾದಲ್ಲಿ ಅವುಗಳಲ್ಲೊಂದನ್ನು ಗುರುತಿಸಲು ಒಂದು ಕೆರೆ ಎಂಬುದಾಗಿ ಪದಕಂತೆಯೊದನ್ನು ಬಳಸಬೇಕಾಗುತ್ತದೆ.
4.2.3 ತಿಳಿದ ಮತ್ತು ತಿಳಿಯದ ಗುರುತಿಸುವಿಕೆಗಳು
ಗುರುತಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತು ಇಂತಹದೇ ಎಂಬುದಾಗಿ ಆಡುಗನಿಗೆ ತಿಳಿದಿಲ್ಲವಾದಲ್ಲಿ ಅಥವಾ ಅದನ್ನು ತಿಳಿಸುವ ಬಯಕೆ ಅವನಿಗಿಲ್ಲ ವಾದಲ್ಲಿ ಕೆಲವು ವಿಶಿಷ್ಟವಾದ ಸವ್ರಪದಗಳನ್ನು ಬಳಸುವುದರ ಮೂಲಕ ಅವನ್ನು ಆ ರೀತಿ ತಿಳಿಯದ ವ್ಯಕ್ತಿ ಇಲ್ಲವೇ ವಸ್ತುವೆಂಬುದಾಗಿ ಗುರುತಿಸಿ ಹೇಳಲು ಸಾಧ್ಯವಿದೆ. ಕೆಳಗಿನ ವಾಕ್ಯಗಳಲ್ಲಿ ಇಂತಹ ತಿಳಿಯದ ವ್ಯಕ್ತಿ ಇಲ್ಲವೇ ವಸ್ತುವಿನ ಗುರುತಿಸುವಿಕೆಗಳು ಬಂದಿರುವುದನ್ನು ಕಾಣಬಹುದು. (13ಕ) ನಿನ್ನೆ ರಾತ್ರಿ ನಮ್ಮಲ್ಲಿಗೆ ಯಾವನೋ ಒಬ್ಬ ಮುದುಕ ಬಂದಿದ್ದ. (13ಖ) ಅವನು ಆ ಹುಡುಗಿಗೆ ಯಾವುದೋ ಒಂದು ಪುಸ್ತಕ ಕೊಟ್ಟಿದ್ದ. (13ಗ) ಆ ಮುದುಕಿ ಹಣವನ್ನು ಇಲ್ಲೆಲ್ಲೋ ಅಡಗಿಸಿಟ್ಟಿದ್ದಾಳೆ. (13ಘ) ಅವನು ಆ ಹುಡುಗರಿಗೆ ಏನೋ ಕೊಟ್ಟಿದ್ದ. ಹಿಂದಿನ ದಿವಸ ತನ್ನ ಮನೆಗೆ ಬಂದ ಮುದುಕ ಯಾರು ಎಂಬುದು ಸರಿಯಾಗಿ ತಿಳಿಯದಿದ್ದಲ್ಲಿ ಇಲ್ಲವೇ ಅದನ್ನು ತಿಳಿಸುವ ಬಯಕೆಯಿಲ್ಲದಿದ್ದಲ್ಲಿ ಆತನನ್ನು ಗುರುತಿಸಿ ಹೇಳಲು (13ಕ)ದಲ್ಲಿ ಕಾಣಿಸಿದಂತೆ ಯಾವನೋ ಎಂಬ ಸವ್ರ ಪದವನ್ನು ಬಳಸಲು ಸಾಧ್ಯವಿದೆ. ಇದೇ ರೀತಿಯಲ್ಲಿ ಯಾವುದೋ, ಎಲ್ಲೋ ಮತ್ತು ಏನೋ ಎಂಬ ಸವ್ರಪದಗಳ ಬಳಕೆಯನ್ನು (13ಖ-ಘ) ವಾಕ್ಯಗಳಲ್ಲಿ ಕಾಣಬಹುದು (ಇಂತಹ ಸವ್ರಪದಗಳ ಬಳಕೆಯ ಕುರಿತಾಗಿ ಜಾಸ್ತಿ ವಿವರ ಗಳನ್ನು (ಭಟ್ 2003:159)ರಲ್ಲಿ ನೋಡಬಹುದು).
4.2.4 ಗುರುತಿಸದ ನಾಮಪದಗಳು
ಕೆಲವು ಸಂದಭ್ರಗಳಲ್ಲಿ ನಾಮಪದಗಳನ್ನು ಇಲ್ಲವೇ ನಾಮಪದಕಂತೆಗಳನ್ನು ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಕ್ಕಾಗಿ ಬಳಸುವ ಬದಲು ಅವು ಸೂಚಿಸುವ ವಿಷಯವನ್ನು ಮಾತ್ರವೇ ತಿಳಿಸುವುದಕ್ಕಾಗಿಯೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (14) ನಾನು ಒಂದು ಎಮ್ಮೆಯನ್ನು ಕೊಂಡುಕೊಳ್ಳಬೇಕೆಂದಿದ್ದೇನೆ. (14)ರಲ್ಲಿ ಒಂದು ಎಮ್ಮೆ ಎಂಬ ನಾಮಪದಕಂತೆ ಎರಡು ಅರ್ಥಗಳಲ್ಲಿ ಬಂದಿರಲು ಸಾಧ್ಯವಿದೆ. ಯಾವ ಎಮ್ಮೆಯನ್ನು ಕೊಂಡುಕೊಳ್ಳುವುದೆಂಬುದನ್ನು (14)ರ ಆಡುಗ ಆಗಲೇ ನಿರ್ಧರಿಸಿರುವನಾದರೆ, ಒಂದು ಎಮ್ಮೆ ಎಂಬುದು ಆ ಎಮ್ಮೆಯನ್ನು ಗುರುತಿಸುತ್ತಿರಬಹುದು. ಆದರೆ ಆತನಿನ್ನೂ ಹಾಗೆ ನಿರ್ಧರಿಸಿಲ್ಲವಾ ದಲ್ಲಿ ಅದು ಯಾವುದೊಂದು ವಿಶಿಷ್ಟವಾದ ಎಮ್ಮೆಯನ್ನೂ ಗುರುತಿಸದಿರಲು ಸಾಧ್ಯವಿದೆ. ಇದಲ್ಲದೆ ಬೇರೆ ಕೆಲವು ಸಾಮಾನ್ಯ ಸಂಗತಿಗಳನ್ನು ತಿಳಿಸುವ ವಾಕ್ಯಗಳಲ್ಲೂ ನಾಮಪದ ಇಲ್ಲವೆ ನಾಮಪದಕಂತೆಗಳು ಗುರುತಿಸುವ ಕೆಲಸವನ್ನು ಮಾಡದಿರಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (15ಕ) ತಡವಾಗಿ ಬರುವ ಹುಡುಗರಿಗೆ ತಿಂಡಿಯಿಲ್ಲ. (15ಖ) ಹೊಸ ಅಕ್ಕಿ ಬೇಯಿಸಲು ನೀರು ಸ್ವಲ್ಪ ಕಡಿಮೆ ಹಾಕಬೇಕು. (15ಗ) ಹುಲಿ ಹತ್ತಿರ ಬರುವಾಗ ಕೋತಿ ಎಚ್ಚರಿಕೆ ಕೊಡುತ್ತದೆ. ಮೇಲಿನ ವಾಕ್ಯಗಳಲ್ಲಿ ಹುಡುಗ, ತಿಂಡಿ, ಹೊಸ ಅಕ್ಕಿ, ನೀರು, ಹುಲಿ ಮತ್ತು ಕೋತಿ ಎಂಬ ನಾಮಪದಗಳು ಯಾವುದೇ ಒಂದು ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸದಿರಲು ಸಾಧ್ಯವಿದೆ. ಸಾಮಾನ್ಯವಾಗಿ ಒಂದು ನಾಮಪದ ಇಲ್ಲವೇ ನಾಮಪದಕಂತೆಯನ್ನು ಒಂದು ವಾಕ್ಯದಲ್ಲಿ ಗುರುತಿಸುವುದಕ್ಕಾಗಿ ಬಳಸ ಲಾಗಿದೆಯೇ ಅಥವಾ ಇಲ್ಲವೇ ಎಂಬುದು ಆ ವಾಕ್ಯವನ್ನು ಯಾವ ಉದ್ದೇಶದಲ್ಲಿ ಬಳಸಲಾಗಿದೆ ಎಂಬುದನ್ನು ಅವಲಂಬಿಸಿದೆ.
4.3 ವರ್ಣಿಸುವ ನಾಮಪದಕಂತೆಗಳು
ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ವರ್ಣಿಸುವ ವಿಧಾನವನ್ನು ಬಳಸುವುದಿದ್ದಲ್ಲಿ, ಅದಕ್ಕಾಗಿ ಬೇರೆ ಬೇರೆ ರೀತಿಯ ನಾಮಪದಕಂತೆಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಇವು ಕೇಳುಗರಿಗೆ ಗುರುತಿಸಬೇಕಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳ ವರ್ಣನೆಗಳನ್ನು ಕೊಡುತ್ತವೆ.
ಇಂತಹ ನಾಮಪದಕಂತೆಗಳಲ್ಲಿ ನಾಮಪದಕ್ಕೆ ಗುಣಪದವೊಂದನ್ನು ಸೇರಿಸಿ ತಯಾರಿಸಿದಂತಹವುಗಳು ಅತ್ಯಂತ ಪ್ರಾಮುಖ್ಯವಾದವುಗಳು. ಇವುಗಳಲ್ಲಿ ಬರುವ ಗುಣಪದಗಳು ನಾಮಪದಗಳು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣ ಧರ್ಮವೊಂದನ್ನು ಸೂಚಿಸುವ ಮೂಲಕ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸ ಬಹುದು. (16ಕ) ನನಗೆ ಒಂದು ಹೂ ಬೇಕಾಗಿತ್ತು. (16ಖ) ನನಗೆ ಒಂದು ಕೆಂಪು ಹೂ ಬೇಕಾಗಿತ್ತು. ಆಡುಗನಿಗೆ ಬೇಕಾಗಿರುವ ವಸ್ತುವನ್ನು (16ಕ)ದಲ್ಲಿ ಹೂ ಎಂಬ ಒಂದು ನಾಮಪದದ ಮೂಲಕವೂ ಮತ್ತು (16ಖ)ದಲ್ಲಿ ಆ ನಾಮಪದದೊಂದಿಗೆ ಕೆಂಪು ಗುಣಪದವನ್ನು ಸೇರಿಸಿ ತಯಾರಿಸಿದ ಕೆಂಪು ಹೂ ಎಂಬ ನಾಮಪದ ಕಂತೆಯ ಮೂಲಕವೂ ಗುರುತಿಸಲಾಗಿದೆ.
(16ಖ)ದಲ್ಲಿ ಹೂ ನಾಮಪದದೊಂದಿಗೆ ಕೆಂಪು ಗುಣಪದವನ್ನು ಬಳಸಿ ದುದರಿಂದಾಗಿ ಆ ಪದದ ವ್ಯಾಪ್ತಿ (ಎಂದರೆ ಅದು ಹೆಸರಿಸಬಹುದಾದ ವಸ್ತುಗಳ ಸಂಖ್ಯೆ) ಕಡಿಮೆಯಾಗಿದೆ, ಮತ್ತು ಇದರಿಂದಾಗಿ ಆಡುಗನಿಗೆ ಎಂತಹ ವಸ್ತು ಬೇಕಾಗಿದೆ ಎಂಬುದನ್ನು ನಿರ್ಧರಿಸುವ ಕೆಲಸ ಸುಲಭವಾಗಿದೆ. ನಾಮಪದದೊಂದಿಗೆ ಹೊಸದೊಂದು ಸೇರಿಸಿ ಗುಣಪದವೊಂದನ್ನು ನಾಮಪದವನ್ನೇ ತಯಾರಿಸಲೂ ಸಾಧ್ಯವಿದೆ. ಮೇಲೆ (4.1)ರಲ್ಲಿ ಸೂಚಿಸಿದ ಹಾಗೆ ಹಲಗೆ ನಾಮಪದಕ್ಕೆ ಕರಿ ಗುಣಪದವನ್ನು ಸೇರಿಸಿ ತಯಾರಿಸಿದ ಕರಿಹಲಗೆ ಎಂಬುದು ಬರಿಯ ಒಂದು ನಾಮಪದ (ಜೋಡುಪದ)ವಲ್ಲದೆ ನಾಮಪದ ಕಂತೆಯಲ್ಲ. ಈ ರೀತಿ ನಾಮಪದವೊಂದಕ್ಕೆ ಗುಣಪದವನ್ನು ಸೇರಿಸಿ ತಯಾರಿಸಿದ ಜೋಡುಪದಕ್ಕೂ ಮತ್ತು ಅಂತಹದೇ ವಿಧಾನವನ್ನು ಬಳಸಿ ತಯಾರಿಸಿದ ನಾಮಪದಕಂತೆಗೂ ನಡುವೆ ಹಲವು ವ್ಯತ್ಯಾಸಗಳಿವೆಯೆಂಬುದನ್ನು ಮುಂದೆ (4.3.1)ರಲ್ಲಿ ನೋಡಲಿರುವೆವು. ಮಾತ್ರವಲ್ಲದೆ ಎಣಿಕೆಯನ್ನು ನಾಮಪದದೊಂದಿಗೆ ಸೂಚಿಸುವ ಒಂದು, ಎರಡು, ಮೂರು ಮೊದಲಾದ ಪದಗಳನ್ನೂ, ಎಣಿಕೆಯಲ್ಲಿ ಒಬ್ಬ ವ್ಯಕ್ತಿಯ ಇಲ್ಲವೇ ಒಂದು ವಸ್ತುವಿನ ಜಾಗವನ್ನು ಸೂಚಿಸುವ ಮೊದಲ ನೆಯ, ಎರಡನೆಯ, ಮೂರನೆಯ ಮೊದಲಾದ ಪದಗಳನ್ನೂ, ಮತ್ತು ನಾಮಪದವು ಗುರುತಿಸುವ ವಸ್ತುವಿನ ಅಳತೆಯನ್ನು ಸೂಚಿಸುವ ಕಟ್ಟು, ಹೊರೆ, ಕೆ.ಜಿ., ಹಿಡಿ ಮೊದಲಾದ ಪದಗಳನ್ನೂ ಬಳಸಲು ಸಾಧ್ಯವಿದೆ. ಗುಣಪದಗಳನ್ನು (17ಕ) ಮೂರು ವಷ್ರಗಳಲ್ಲಿ ಆತ ಐದು ಪುಸ್ತಕ ಬರೆದ. (17ಖ) ಮೂರನೆಯ ಪುಸ್ತಕವನ್ನು ನಿನ್ನೆ ಬರೆದು ಮುಗಿಸಿದೆ. (17ಗ) ಒಂದು ಹಿಡಿ ಅಕ್ಕಿಗೆ ಎರಡು ಹಿಡಿ ಮರಳು ಸೇರಿಸಿದ್ದಾರೆ. ಒಂದು ನಾಮಪದದೊಂದಿಗೆ ಇನ್ನೊಂದು ನಾಮಪದವನ್ನು ಸೇರಿಸಿಯೂ ನಾಮಪದಕಂತೆಯೊಂದನ್ನು ತಯಾರಿಸಲು ಸಾಧ್ಯವಿದೆ. ಆದರೆ ಇದಕ್ಕಾಗಿ ಅವೆರಡರ ನಡುವೆ ಅವನ್ನು ಸಂಬಂಧಿಸುವ ಅ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ. ಮರದ ಕಾಲು, ಮಣ್ಣಿನ ಕೊಡ, ರಾಜುವಿನ ತಲೆ, ದನದ ಬಾಲ ಮೊದಲಾದ ನಾಮಪದಕಂತೆಗಳನ್ನು ಈ ವಿಧಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಇದಲ್ಲದೆ, ಒಂದು ಇಡೀ ವಾಕ್ಯವನ್ನೇ ನಾಮಪದದೊಂದಿಗೆ ಇರಿಸಿ ಅದನ್ನು ಒಂದು ನಾಮಪದಕಂತೆಯನ್ನಾಗಿ ಮಾಡಿ ಹೇಳಲು ಸಾಧ್ಯವಿದೆ. ಇದಕ್ಕಾಗಿ ಆ ವಾಕ್ಯದೊಂದಿಗೆ ಎಂಬ ಇಲ್ಲವೇ ಎನ್ನುವ ಎಂಬ ಪದವನ್ನು ಬಳಸಬೇಕಾಗ ಬಹುದು, ಇಲ್ಲವೇ ಆ ವಾಕ್ಯದಲ್ಲಿ ಬೇರೆ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು.
(18ಕ) ಅವನು ಇವತ್ತು ಬರುತ್ತಾನೆ ಎಂಬ ಸಂಗತಿ ಯಾರಿಗೂ ತಿಳಿಯದು. (18ಖ) ಅವನು ಇವತ್ತು ಬರುವ ಸಂಗತಿ ಯಾರಿಗೂ ತಿಳಿಯದು. (18ಗ) ಅವನ ಇವತ್ತಿನ ಬರುವಿಕೆ ಯಾರಿಗೂ ತಿಳಿಯದು. ಅವನು ಇವತ್ತು ಬರುತ್ತಾನೆ ಎಂಬ ವಾಕ್ಯಕ್ಕೆ (18ಕ)ದಲ್ಲಿ ಎಂಬ ಎಂಬ ಪದವನ್ನು ಸೇರಿಸಲಾಗಿದೆ ಮತ್ತು (18ಖ-ಗ)ಗಳಲ್ಲಿ ಆ ವಾಕ್ಯವನ್ನು ಅವನು ಇವತ್ತು ಬರುವ ಮತ್ತು ಅವನ ಇವತ್ತಿನ ಬರುವಿಕೆ ಎಂಬುದಾಗಿ ಬದಲಾ ಯಿಸಲಾಗಿದೆ. ಈ ರೀತಿ ವಾಕ್ಯಗಳನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿ ಹೇಳುವ ವಿಧಾನಗಳು ಯಾವುವು ಎಂಬುದನ್ನು ಮುಂದೆ ಏಳನೆಯ ಅಧ್ಯಾಯ ದಲ್ಲಿ ವಿವರಿಸಲಾಗುವುದು.
4.3.1 ಪದಕಂತೆಗಳು ಮತ್ತು ಜೋಡುಪದಗಳು
ಮೇಲೆ ಸೂಚಿಸಿರುವ ಹಾಗೆ, ನಾಮಪದಕ್ಕೆ ಒಂದು ಗುಣಪದವನ್ನು (ಇಲ್ಲವೇ ಎಣಿಕೆಯ ಪದವನ್ನು ಅಥವಾ ಬೇರೊಂದು ನಾಮಪದವನ್ನು) ಸೇರಿಸಿ ನಾಮಪದಕಂತೆಗಳನ್ನೂ ತಯಾರಿಸಬಹುದು ಇಲ್ಲವೇ ಬೇರೊಂದು ಹೊಸತಾದ ನಾಮಪದವನ್ನೂ ತಯಾರಿಸಬಹುದು. ಇವುಗಳಲ್ಲಿ ಎರಡನೆಯ ವಿಧಾನದ ಮೂಲಕ ತಯಾರಾಗುವ ನಾಮಪದಕ್ಕೆ ‘ಜೋಡುಪದ’ ಎಂದು ಹೆಸರು. ಉದಾ ಹರಣೆಗಾಗಿ, ಹುಡುಗಿ ನಾಮಪದಕ್ಕೆ ಚಿಕ್ಕ ಗುಣಪದವನ್ನು ಸೇರಿಸಿ ತಯಾರಿಸಿದ ಚಿಕ್ಕ ಹುಡುಗಿ ಎಂಬುದು ಒಂದು ನಾಮಪದಕಂತೆ, ಮತ್ತು ಅಮ್ಮ ನಾಮ ಪದಕ್ಕೆ ಅದೇ ಗುಣಪದವನ್ನು ಸೇರಿಸಿ ತಯಾರಿಸಿದ ಚಿಕ್ಕಮ್ಮ ಎಂಬುದೊಂದು ಜೋಡುಪದ. ಒಂದು ಪದಕ್ಕೆ ಇನ್ನೊಂದು ಪದವನ್ನು ಸೇರಿಸಿ ಒಂದು ಹೊಸತಾದ ನಾಮಪದ(ಜೋಡುಪದ)ವನ್ನು ತಯಾರಿಸುವುದು ಭಾಷೆಯಲ್ಲಿ ನಡೆಯುವ ಒಂದು ಚಾರಿತ್ರಿಕ ಘಟನೆ. ಇದರ ಮೂಲಕ ಭಾಷೆಯಲ್ಲಿ ಒಂದು ಹೊಸತಾ ಗಿರುವ ಪದವೇ ತಯಾರಾಗುತ್ತದೆ. ಆದರೆ, ಒಂದು ಪದಕ್ಕೆ ಇನ್ನೊಂದು ಪದ ವನ್ನು ಸೇರಿಸಿ ಪದಕಂತೆಯೊಂದನ್ನು ತಯಾರಿಸುವುದು ಅಂತಹ ಚಾರಿತ್ರಿಕ ಘಟನೆಯೇನಲ್ಲ. ಅದು ಆ ಭಾಷೆಯಲ್ಲಿರುವ ಪದಗಳ ಬಳಕೆ ಮಾತ್ರ.
ಈ ಎರಡು ವಿಧಾನಗಳ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ, ಪದಕಂತೆಗಳ ತಯಾರಿಕೆಯಲ್ಲಿ ವಾಕ್ಯರಚನೆಯ ನಿಯಮಗಳು ಬಳಕೆಯಾಗುತ್ತವೆ, ಮತ್ತು ಜೋಡುಪದಗಳ ತಯಾರಿಕೆಯಲ್ಲಿ ಪದರಚನೆಯ ನಿಯಮಗಳು ಬಳಕೆ ಯಾಗುತ್ತವೆ. ಇದಲ್ಲದೆ, ಪದಕಂತೆಗಳ ಅರ್ಥವನ್ನು ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ಪಡೆಯಲು ಸಾಧ್ಯವಿದೆ, ಆದರೆ ಜೋಡುಪದ ಗಳ ಅರ್ಥವನ್ನು ಹೆಚ್ಚಿನ ಸಂದಭ್ರಗಳಲ್ಲೂ ಆ ರೀತಿ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ಪಡೆಯಲು ಸಾಧ್ಯವಾಗದು. ಜೋಡುಪದಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವುಗಳ ಅಂಗಗಳು ಸ್ವಲ್ಪ ಸಹಾಯವನ್ನು ಮಾತ್ರವೇ ಒದಗಿಸಬಲ್ಲುವು.
ಉದಾಹರಣೆಗಾಗಿ, ಚಿಕ್ಕ ಹುಡುಗಿ ಎಂಬ ಪದಕಂತೆ ಯಾವ ರೀತಿಯಲ್ಲಿ ಬೇಕಿದ್ದರೂ ಚಿಕ್ಕವಳಾಗಿ ಕಾಣಿಸುವ ಹುಡುಗಿಯೊಬ್ಬಳನ್ನು ಗುರುತಿಸಬಲ್ಲುದು. ಆದರೆ ಚಿಕ್ಕಮ್ಮ ಎಂಬ ಜೋಡುಪದ ತಾಯಿಯ ತಂಗಿಯನ್ನು ಮಾತ್ರ ಗುರುತಿಸ ಬಲ್ಲುದಲ್ಲದೆ ಅದಕ್ಕಿಂತ ಭಿನ್ನವಾಗಿರುವ ವ್ಯಕ್ತಿಯನ್ನು ಗುರುತಿಸಲಾರದು. ಉದಾ ಹರಣೆಗಾಗಿ ವಯಸ್ಸಿನಲ್ಲಿ ಇಲ್ಲವೇ ಗಾತ್ರದಲ್ಲಿ ಚಿಕ್ಕವಳಾಗಿ ಕಾಣಿಸುವ ‘ಅಮ್ಮ’ ನನ್ನಾಗಲೀ ಇಲ್ಲವೇ ಅಮ್ಮನಿಗಿಂತ ವಯಸ್ಸಿನಲ್ಲಿ ಅಥವಾ ಗಾತ್ರದಲ್ಲಿ ಚಿಕ್ಕವಳಾಗಿ ಕಾಣಿಸುವ ಹೆಂಗಸನ್ನಾಗಲೀ (ಆಕೆ ತಾಯಿಯ ತಂಗಿಯಲ್ಲವಾದಲ್ಲಿ) ಆ ಪದ ಗುರುತಿಸಲಾರದು.
ಕರಿಹಲಗೆ ಎಂಬ ಇನ್ನೊಂದು ಜೋಡುಪದದ ಅರ್ಥವನ್ನು ಪಡೆಯುವಲ್ಲಿ ಅದರ ಅಂಗಗಳೆರಡೂ ಸಹಾಯಕವಾಗುವುದಿಲ್ಲ ಎಂಬುದನ್ನು ಮೇಲೆ 4.1ರಲ್ಲಿ ನೋಡಿರುವೆವು. ಜೋಡುಪದಗಳು ನಾಮಪದಗಳಾಗಿರುವ ಕಾರಣ, ಅವು ‘ಹೆಸರಿಸುವ’ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಆದರೆ ಇದಕ್ಕೆ ವಿರುದ್ಧವಾಗಿ, ಪದಕಂತೆಗಳು ಹೆಚ್ಚಿನ ಸಂದಭ್ರಗಳಲ್ಲೂ ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಈ ಎರಡು ರೀತಿಯ ಘಟಕಗಳ ನಡುವೆ ಕಾಣಿಸುವ ಹೆಚ್ಚಿನ ವ್ಯತ್ಯಾಸಗಳಿಗೂ ಭಾಷೆಯಲ್ಲಿ ಅವು ಈ ರೀತಿ ಎರಡು ಬೇರೆ ಬೇರೆ ಕೆಲಸಗಳನ್ನು ನಡೆಸ ಬೇಕಾಗಿದೆಯೆಂಬುದೇ ಮುಖ್ಯ ಕಾರಣ (ಜಾಸ್ತಿ ವಿವರಗಳಿಗೆ (ಭಟ್ 2002:60) ನೋಡಿ).
4.3.2 ಗುಣಪದಗಳ ವಿಭಜನೆ
ಕನ್ನಡದಲ್ಲಿ ಗುಣಪದಗಳು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನ ವಾಗಿರುವ ಬೇರೆಯೇ ಒಂದು ಪದವಗ್ರದಲ್ಲಿ ಬರುತ್ತವೆ. ಮೇಲೆ ಸೂಚಿಸಿರುವ ಹಾಗೆ ಅವು ವಾಕ್ಯದಲ್ಲಿ ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿರುವ ಕೆಲಸವೊಂದನ್ನು (ನಾಮಪದ ಇಲ್ಲವೇ ಕ್ರಿಯಾಪದವೊಂದರ ವ್ಯಾಪ್ತಿಯನ್ನು ಕಡಿಮೆ ಮಾಡುವ ಕೆಲಸವನ್ನು) ಮಾಡಬೇಕಾಗಿರುವುದೇ ಇದಕ್ಕೆ ಕಾರಣ. ಗುಣಪದಗಳು ಈ ರೀತಿ ಕನ್ನಡದಲ್ಲಿ ಬೇರೆಯೇ ಒಂದು ಪದವಗ್ರದಲ್ಲಿ ಬರುತ್ತವೆ ಎಂದು ಹೇಳುವುದಕ್ಕೆ ಕನ್ನಡದಲ್ಲಿ ಅವಕ್ಕಿರುವ ಹಲವು ವಿಶಿಷ್ಟವಾದ ಗುಣಧರ್ಮಗಳೂ ಆಧಾರವಾಗಬಲ್ಲುವು. ಈ ಗುಣಧರ್ಮಗಳು ವಾಕ್ಯಗಳಲ್ಲಿ ಗುಣಪದಗಳು ಮಾಡಬೇಕಾಗಿರುವ ವಿಶಿಷ್ಟವಾದ ಕೆಲಸಕ್ಕಾಗಿ ಕಾಣಿಸಿಕೊಳ್ಳುತ್ತವೆ.
ಉದಾಹರಣೆಗಾಗಿ, ಗುಣಪದಗಳನ್ನು ನಾಮಪದಗಳೊಂದಿಗೆ (ಇಲ್ಲವೇ ಕ್ರಿಯಾಪದಗಳೊಂದಿಗೆ) ಅವಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಹಾಗೆಯೇ ಬಳಸಲು ಸಾಧ್ಯವಿದೆ (ಉದಾ: ಕೆಂಪು ಹೂ, ಬೇಗ ಬಂದ). ಆದರೆ ನಾಮಪದ ಇಲ್ಲವೇ ಕ್ರಿಯಾಪದಗಳನ್ನು ಬೇರೊಂದು ನಾಮಪದದೊಂದಿಗೆ ಈ ರೀತಿ ಬಳಸಬೇಕಿದ್ದಲ್ಲಿ ಅವಕ್ಕೆ ಅ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಉದಾ: ಮರದ ಕಾಲು, ಉಳಿದ ಅನ್ನ). (ಜಾಸ್ತಿ ವಿವರಗಳಿಗೆ (ಭಟ್ 1994 ಮತ್ತು 2002 ನೋಡಿ).
ಮೇಲೆ ಸೂಚಿಸಿರುವ ಹಾಗೆ, ಗುಣಪದಗಳಲ್ಲಿ ನಾಮಪದಗಳೊಂದಿಗೆ ಬರುವವು, ಕ್ರಿಯಾಪದಗಳೊಂದಿಗೆ ಬರುವವು ಮತ್ತು ಬೇರೆ ಗುಣಪದ ಗಳೊಂದಿಗೆ ಬರುವವು ಎಂಬುದಾಗಿ ಮೂರು ಉಪವಗ್ರಗಳಿವೆ. ಕಪ್ಪು, ಬಿಳಿ, ದೊಡ್ಡ, ಹಳೆ ಮೊದಲಾದವುಗಳು ನಾಮಪದಗಳೊಂದಿಗೆ ಬರುವವು, ಬೇಗ, ಮೆಲ್ಲಗೆ, ನುಣ್ಣಗೆ ಮೊದಲಾದವುಗಳು ಕ್ರಿಯಾಪದಗಳೊಂದಿಗೆ ಬರುವವು, ಮತ್ತು ಮಹಳ, ಭಾರೀ ಮೊದಲಾದವು ಗುಣಪದಗಳೊಂದಿಗೆ ಬರುವವು. ಈ ಮೂರು ರೀತಿಯ ಗುಣಪದಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಅವೆಲ್ಲ ಈ ಗುಣಪದಗಳು ವಾಕ್ಯಗಳಲ್ಲಿ ಮಾಡಬೇಕಾಗಿರುವ ಭಿನ್ನ ಭಿನ್ನವಾದ ಕೆಲಸಗಳ ಮೇಲೆ ಅವಲಂಬಿಸಿವೆ. ಈ ಮೂರು ರೀತಿಯ ಗುಣಪದಗಳಲ್ಲಿ ಮೊದಲನೆಯ ಉಪವಗ್ರಕ್ಕೆ ಸೇರಿದ ಗುಣಪದಗಳು ಮಾತ್ರ ನಾಮಪದಕಂತೆಗಳ ತಯಾರಿಕೆಯಲ್ಲಿ ಬಳಕೆ ಯಾಗುತ್ತವೆ. ಇವು ಮೇಲೆ ಸೂಚಿಸಿದ ಹಾಗೆ, ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುದರ ಮೂಲಕ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ. ಈ ಕೆಲಸವನ್ನು ಸಾಧಿಸುವುದಕ್ಕಾಗಿ ಕನ್ನಡದ ನಾಮಪದಕಂತೆಗಳಲ್ಲಿ ಬರುವ ಗುಣಪದಗಳನ್ನು ಐದು ಉಪವಗ್ರಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. (1) ಅಳತೆ: ಈ ಉಪವಗ್ರದ ಗುಣಪದಗಳಲ್ಲಿ ಆಳ ಎಂಬುದೊಂದನ್ನು ಬಿಟ್ಟು ಉಳಿದುವೆಲ್ಲ ವಿರುದ್ಧಾರ್ಥದ ಜೋಡಿಗಳಾಗಿ ಬರುತ್ತವೆ.
ದಪ್ಪ ತಗ್ಗು ಸಪುರ ತೆಳು ಹಗುರ ಈ ಗುಣಪದಗಳ ಒಂದು ವೈಶಿಷ್ಟ್ಯವೇನೆಂದರೆ ಪ್ರತಿಯೊಂದು ಜೋಡಿಯಲ್ಲೂ ಆ ಜೋಡಿ ಸೂಚಿಸುವ ಅಳತೆಯನ್ನು ಹೆಸರಿಸಬೇಕಾದಾಗ, ಅದು ಜಾಸ್ತಿಯಿರಲಿ ಇಲ್ಲವೇ ಕಡಿಮೆಯಿರಲಿ, ಜೋಡಿಯಲ್ಲಿ ಬರುವ ಗುಣಪದಗಳಲ್ಲಿ ಮೊದಲನೆ ಯದನ್ನು ಮಾತ್ರವೇ ಬಳಸಲು ಸಾಧ್ಯ. ಉದಾಹರಣೆಗಾಗಿ, ಒಂದು ಗೋಡೆ ಎತ್ತರವಾಗಿರಲಿ ಇಲ್ಲವೇ ತಗ್ಗಾಗಿರಲಿ, ಅದರ ಈ ಅಳತೆಯನ್ನು ಸೂಚಿಸಲು ಗೋಡೆಯ ಎತ್ತರ ಎಂದೇ ಹೇಳಬೇಕಲ್ಲದೆ *ಗೋಡೆಯ ತಗ್ಗು ಎಂದು ಗೋಡೆಯ ಉದ್ದ ಹೇಳಲು ಸಾಧ್ಯವಾಗದು. ಇದೇ ರೀತಿಯಲ್ಲಿ ಎನ್ನುತ್ತೇವಲ್ಲದೆ *ಗೋಡೆಯ ಗಿಡ್ಡ ಎನ್ನುವುದಿಲ್ಲ. (2) ಭೌತಿಕ ಗುಣಧರ್ಮ: ಈ ಉಪವಗ್ರದಲ್ಲಿ ಬರುವ ಗುಣಪದಗಳಲ್ಲಿ ಕೆಲವು ಅಳತೆಯ ಗುಣಪದಗಳ ಹಾಗೆ ವಿರುದ್ಧಾರ್ಥ ಜೋಡಿಗಳಾಗಿ ಬರುತ್ತವೆ. ದೊಡ್ಡ
ನೇರ ದುಂಡು
ನುಣುಪು
ತಂಪು ಚಪ್ಪಟೆ ದೊರಗು ಮೆದು ಕಕ್ರಶ ಕಲಕು ಮೊಂಡು ಸಡಿಲು ಮೇಲೆ ಕೊಟ್ಟಿರುವ ಗುಣಪದಗಳು ಮಾತ್ರವಲ್ಲದೆ ಬೇರೆಯೂ ಹಲವು ಗುಣಪದಗಳು ಈ ಎರಡನೆಯ ಉಪವಗ್ರದಲ್ಲಿ ಬರಬಲ್ಲುವು. ಆದರೆ ಇವನ್ನು ಮೇಲಿನವುಗಳ ಹಾಗೆ ವಿರುದ್ಧಾರ್ಥ ಜೋಡಿಗಳಾಗಿ ವಿಂಗಡಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಬೇರೆ ಬೇರೆ ರೀತಿಯ ರುಚಿಗಳನ್ನು ಸೂಚಿಸುವ ಸಿಹಿ, ಕಹಿ, ಖಾರ, ಹುಳಿ ಮೊದಲಾದವುಗಳು ಇದೇ ಉಪವಗ್ರಕ್ಕೆ ಸೇರುವುವಾದರೂ ಅವು ಮೇಲಿನವುಗಳ ಹಾಗೆ ಜೋಡಿಗಳಾಗಿ ಬರುವುದಿಲ್ಲ. ಬೇಕಿದ್ದಲ್ಲಿ ಅವನ್ನೆಲ್ಲ ಸಪ್ಪೆ ಎಂಬ ಒಂದೇ ಒಂದು ಗುಣಪದಕ್ಕೆ ವಿರುದ್ಧಾರ್ಥದವುಗಳೆಂದು ಹೇಳಲು ಸಾಧ್ಯ ವಾಗಬಹುದು.
ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಗಟ್ಟಿ ಗುಣಪದಕ್ಕೆ ಮೆದು ಗುಣಪದ ಮಾತ್ರವಲ್ಲದೆ ಕುಂಬು, ಜೊಳ್ಳು, ಗೋಳೆ, ಸಡಿಲು ಮೊದಲಾದ ಬೇರೆ ಕೆಲವು ಗುಣಪದಗಳೂ ವಿರುದ್ಧಾರ್ಥದವುಗಳಾಗಿ ಬರುತ್ತವೆಯೆಂದು ಹೇಳಲು ಸಾಧ್ಯ ವಿದೆ. ಬಣ್ಣವನ್ನು ಸೂಚಿಸುವ ಗುಣಪದಗಳಲ್ಲಿ ಕಪ್ಪು ಮತ್ತು ಬಿಳಿ ಎಂಬವುಗಳು ಜೋಡಿಯಾಗಿ ಬರುವುವಾದರೂ ಅವನ್ನು ವಿರುದ್ಧಾರ್ಥದವುಗಳೆಂದು ಹೇಳು ವುದು ಕಷ್ಟ. ಇವಲ್ಲದೆ ಆ ರೀತಿ ಜೋಡಿಗಳಾಗಿ ಬಾರದ ಕೆಂಪು, ಕೆಂಚು, ಕಾವಿ, ಕಂದು, ಬೂದಿ, ಅರಸಿನ, ನೀಲಿ ಮೊದಲಾದವುಗಳೂ ಈ ಉಪ ವಿಭಾಗಕ್ಕೆ ಸೇರುತ್ತವೆ. ಇವುಗಳಲ್ಲಿ ಕೆಲವು ನಾಮಪದಗಳಾಗಿಯೂ ಬಳಕೆಯಲ್ಲಿ ಕೆಲವು ವಿಶಿಷ್ಟವಾದ ನಾಮಪದಗಳೊಂದಿಗೆ ಮಾತ್ರವೇ ಬರಬಲ್ಲ ಗುಣಪದ ಗಳೂ ಈ ಉಪವಿಭಾಗಕ್ಕೆ ಸೇರುತ್ತವೆ. ಬೋಡು (ಬಾಯಿ), ಸೊಟ್ಟ (ಮೋರೆ), ತೇಪೆ (ಕೆಲಸ), ಕೂನು (ಬೆನ್ನು), ಬಕ್ಕ (ತಲೆ), ಕೋಸು (ಕಣ್ಣು), ಮೊಂಡು (ಕತ್ತಿ), ಸವುಳು (ನೆಲ), ಮೊದಲಾದವುಗಳು ಇಂತಹ ಗುಣಪದಗಳು. (3) ಮನುಷ್ಯರ ಗುಣಗಳು: ಕನ್ನಡದಲ್ಲಿ ಈ ಉಪವಗ್ರಕ್ಕೆ ಸೇರುವ ಗುಣಪದಗಳನ್ನು ಎರಡು ಮುಖ್ಯ ಉಪವಿಭಾಗಗಳಲ್ಲಿ ವಿಂಗಡಿಸಬಹುದು. ಕುರುಡು, ಕಿವುಡು, ಕುಂಟು ಮೊದಲಾದ ಕೆಲವು ಗುಣಪದಗಳು ದೈಹಿಕ ಕೊರತೆಗಳನ್ನು ಸೂಚಿಸುತ್ತಿದ್ದು ಮೊದಲನೆಯ ವಿಭಾಗಕ್ಕೂ ಮತ್ತು ಹುಚ್ಚು, ಮೊದ್ದು, ಚುರುಕು, ಪೊೀಲಿ, ಬೆಪ್ಪು ಮೊದಲಾದ ಬೇರೆ ಕೆಲವು ಗುಣಪದ ಗಳು ಮಾನಸಿಕ ಗುಣಗಳನ್ನು ಸೂಚಿಸುತ್ತಿದ್ದು ಎರಡನೆಯ ವಿಭಾಗಕ್ಕೂ ಸೇರು ತ್ತವೆ. (4) ವಯಸ್ಸು: ವ್ಯಕ್ತಿ ಇಲ್ಲವೇ ವಸ್ತುವಿನ ವಯಸ್ಸನ್ನು ಸೂಚಿಸುವ ಹೊಸ, ಹಳೆ, ಎಳೆ, ಮುದಿ, ಹಿರಿ, ಕಿರಿ, ಪುಟ್ಟ ಮೊದಲಾದವುಗಳು ಈ ಉಪವಗ್ರಕ್ಕೆ ಸೇರುತ್ತವೆ. ಇವಲ್ಲದೆ, ಎರಡನೆಯ ಉಪವಗ್ರದಲ್ಲಿ ಬಂದಿರುವ ದೊಡ್ಡ ಮತ್ತು ಚಿಕ್ಕ ಎಂಬೆರಡು ಪದಗಳೂ ವಯಸ್ಸನ್ನು ಸೂಚಿಸಬಲ್ಲುವಾದ ಕಾರಣ ಅವನ್ನೂ ಈ ಉಪವಗ್ರಕ್ಕೂ ಸೇರಿಸಲು ಸಾಧ್ಯವಿದೆ. (5) ಬೆಲೆ: ಈ ಉಪವಗ್ರಕ್ಕೆ ಸೇರುವ ಗುಣಪದಗಳಲ್ಲಿ ಸರಿ-ತಪ್ಪು, ಹೆಚ್ಚು-ಕಡಿಮೆ, ಕೀಳು-ಮೇಲು ಎಂಬ ಕೆಲವು ಪದಗಳು ಜೋಡಿಗಳಾಗಿ ಬಳಕೆಯಾಗುವುವಾದರೆ, ಚಂದ, ಚೊಕ್ಕ, ಬಡ ಮೊದಲಾದ ಬೇರೆ ಕೆಲವು ಪದಗಳು ಒಂದೊಂದಾಗಿ ಬರುತ್ತವೆ. ಒಳ್ಳೆ ಗುಣಪದಕ್ಕೆ ಜೋಡಿಯಾಗಿ ಕೆಡು ಕ್ರಿಯಾಪದದ ರೂಪವಾಗಿರುವ ಕೆಟ್ಟ ಎಂಬುದು ಬಳಕೆಯಲ್ಲಿದೆ.
(6) ದಿಕ್ಕು: ಕನ್ನಡದಲ್ಲಿ ದಿಕ್ಕನ್ನು ಸೂಚಿಸುವ ಮೂಡು, ತೆಂಕ, ಪಡು ಮತ್ತು ಬಡಗ ಎಂಬವುಗಳೂ ಗುಣಪದಗಳಾಗಿ ಬಳಕೆಯಲ್ಲಿವೆ. ಇವುಗಳಲ್ಲಿ ಮೂಡು ಕ್ರಿಯಾಪದವಾಗಿಯೂ ಬಳಕೆಯಾಗುತ್ತದೆ. ಇದಲ್ಲದೆ, ಒಳ-ಹೊರ, ಎಡ-ಬಲ, ಮೇಲೆ-ಕೆಳ-ನಡು ಎಂಬವುಗಳೂ ಬೇರೆ ಬೇರೆ ಜಾಗಗಳನ್ನು ಸೂಚಿಸಬಲ್ಲ ಗುಣಪದಗಳಾಗಿವೆ.
4.3.3 ನಾಮಪದಕಂತೆಗಳಲ್ಲಿ ಗುಣಪದಗಳ ಬಳಕೆ
ಮೇಲೆ ಸೂಚಿಸಿದ ಹಾಗೆ, ನಾಮಪದಕಂತೆಗಳಲ್ಲಿ ಒಂದು ನಾಮಪದದೊಂದಿಗೆ ಬರುವ ಈ ಗುಣಪದಗಳು ಆ ನಾಮಪದ ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣಧರ್ಮವೊಂದನ್ನು ಸೂಚಿಸುವುದರ ಮೂಲಕ ಅದರ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ.
ಉದಾಹರಣೆಗಾಗಿ, ಹುಡುಗ ನಾಮಪದಕ್ಕೆ ಚಿಕ್ಕ ಗುಣಪದವನ್ನು ಸೇರಿಸಿ ನೋಡಬಹುದು. ಹುಡುಗ ನಾಮಪದ ಗುರುತಿಸಬಲ್ಲ ವ್ಯಕ್ತಿಗಳಿಗಿಂತ ಚಿಕ್ಕ ಹುಡುಗ ಎಂಬ ನಾಮಪದಕಂತೆ ಗುರುತಿಸಬಲ್ಲ ವ್ಯಕ್ತಿಗಳ ಸಂಖ್ಯೆ ಕಡಿಮೆ. ಯಾಕೆಂದರೆ, ಹುಡುಗ ನಾಮಪದ ಯಾವ ವ್ಯಕ್ತಿಗಳನ್ನೆಲ್ಲ ಹೆಸರಿಸಬಲ್ಲುದೋ ಅವರಲ್ಲಿ ಚಿಕ್ಕ ಎಂಬ ಗುಣಧರ್ಮವಿರುವ ವ್ಯಕ್ತಿಗಳನ್ನು ಮಾತ್ರ ಚಿಕ್ಕ ಹುಡುಗ ಎಂಬ ಪದಕಂತೆ ವರ್ಣಿಸುತ್ತದೆ. ಗುಣಪದಗಳನ್ನು ಬಳಸುವುದಿದ್ದಲ್ಲಿ, ಸಾಮಾನ್ಯವಾಗಿ ಹೆಚ್ಚು ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಮೊದಲು ಬರುತ್ತವೆ ಮತ್ತು ಕಡಿಮೆ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಅನಂತರ ಬರುತ್ತವೆ. ಉದಾಹರಣೆಗಾಗಿ, ಪೊೀಲಿ ಗುಣಪದದೊಂದಿಗೆ ಬರಬಲ್ಲ ನಾಮಪದಗಳು ದೊಡ್ಡ ಗುಣಪದದೊಂದಿಗೆ ಬರಬಲ್ಲ ನಾಮಪದಗಳಿಗಿಂತ ಬಹಳ ಕಡಿಮೆ. ಹಾಗಾಗಿ ಇವೆರಡನ್ನೂ ಒಟ್ಟಾಗಿ ಒಂದೇ ನಾಮಪದಕಂತೆಯಲ್ಲಿ ಬಳಸಬೇಕಾದಾಗ, ದೊಡ್ಡ ಎಂಬುದನ್ನು ಪೊೀಲಿ ಎಂಬುದಕ್ಕಿಂತ ಮೊದಲು ಬಳಸಬೇಕಾಗುತ್ತದೆ (ಉದಾ: ಅವನೊಬ್ಬ ದೊಡ್ಡ ಪೊೀಲಿ ಹುಡುಗ). ನಾಮಪದದೊಂದಿಗೆ ಒಂದಕ್ಕಿಂತ ಜಾಸ್ತಿ ಆದರೆ ಕನ್ನಡದ ನಾಮಪದಕಂತೆಗಳಲ್ಲಿ ಸಾಮಾನ್ಯವಾಗಿ ಒಂದಕ್ಕಿಂತ ಜಾಸ್ತಿ ಗುಣಪದಗಳಿರುವುದು ಅಪರೂಪ. ಕನ್ನಡದವೇ ಆದ ಗುಣಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಬಂದ ಗುಣಪದಗಳು ಈ ರೀತಿ ಪದಕಂತೆಗಳಲ್ಲಿ ಒಟ್ಟೊಟ್ಟಾಗಿ ಬರುವುದು ಜಾಸ್ತಿ (ಉದಾ: ದೈನಿಕ ವಾತ್ರಾ ಪತ್ರಿಕೆ, ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ, ಇತ್ಯಾದಿ). ಈ ರೀತಿ ಒಂದು ನಾಮಪದದೊಂದಿಗೆ ಎರಡಕ್ಕಿಂತ ಜಾಸ್ತಿ ಗುಣಪದಗಳನ್ನು ಬಳಸಿದೆಯಾದಲ್ಲಿ, ಅವನ್ನು ಯಾವ ರೀತಿಯಲ್ಲಿ ಒಟ್ಟು ಸೇರಿಸಲಾಗಿದೆ ಎಂಬುದ ರಲ್ಲಿ ವೈವಿಧ್ಯ ಕಾಣಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ ಹಲವು ದೊಡ್ಡ ಮನೆಗಳು ಎಂಬ ಪದಕಂತೆಯಲ್ಲಿ ಬಂದಿರುವ ಹಲವು ಎಂಬ ಪದ ದೊಡ್ಡ ಎಂಬ ಪದದ ಹಾಗೆ ಮನೆಗಳು ಎಂಬುದಕ್ಕೆ ನೇರವಾಗಿ ಸಂಬಂಧಿಸುತ್ತದೆ. ಆದರೆ, ಬಹಳ ದೊಡ್ಡ ಮನೆಗಳು ಎಂಬ ಪದಕಂತೆಯಲ್ಲಿ ಬಂದಿರುವ ಬಹಳ ಎಂಬ ಪದ ಈ ರೀತಿ ನೇರವಾಗಿ ಮನೆಗಳು ಎಂಬುದಕ್ಕೆ ಸಂಬಂಧಿಸುವುದಿಲ್ಲ. ಇದಕ್ಕೆ ಬದಲು ಅದು ದೊಡ್ಡ ಎಂಬುದಕ್ಕೆ ಸಂಬಂಧಿಸುತ್ತಿದ್ದು, ಅದರ ಮೂಲಕ ಮನೆಗಳು ಎಂಬುದಕ್ಕೆ ಸಂಬಂಧಿಸುತ್ತದೆ.
4.3.4 ಎಣಿಕೆಯ ಪದಗಳ ಬಳಕೆ
ನಾಮಪದಗಳೊಂದಿಗೆ ಪದಕಂತೆಗಳಲ್ಲಿ ಬರಬಲ್ಲ ಇನ್ನೊಂದು ರೀತಿಯ ಪದ ಗಳೆಂದರೆ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳು. ಇವು ಗುಣಪದಗಳಿಗಿಂತ ಮೊದಲು ಬರುತ್ತವೆ (ಉದಾ: ಒಂದು ದೊಡ್ಡ ಮನೆ, ನಾಲ್ಕು ಕೆಂಪು ಹೂಗಳು). ಆದರೆ ಈ ಪದಗಳು ಎಣಿಸಲು ಸಾಧ್ಯವಿರುವಂತಹ ಮನೆ, ಮರ, ಹೂ, ಹುಡುಗ, ಕತೆ ಮೊದಲಾದ ನಾಮಪದಗಳೊಂದಿಗೆ ಮಾತ್ರ ಬರುತ್ತವೆ. ಸಾಮಾನ್ಯವಾಗಿ ಎಣಿಸಲು ಸಾಧ್ಯವಿಲ್ಲದಿರುವ ನೀರು, ಎಣ್ಣೆ, ಹಿಟ್ಟು ಮೊದಲಾದವುಗಳೊಂದಿಗೆ ಬರುವುದಿಲ್ಲ. ಕನ್ನಡದಲ್ಲಿ ಒಂದರಿಂದ ಹತ್ತರವರೆಗೆ ಎಣಿಕೆಯನ್ನು ನಡೆಸಲು ಒಂದು, ಎರಡು, ಮೂರು ಮೊದಲಾದ ಬಿಡಿ ಬಿಡಿಯಾದ ಎಣಿಕೆಯ ಪದಗಳು ಬಳಕೆ ಯಾಗುತ್ತವೆ. (ಇವುಗಳಲ್ಲಿ ಒಂಬತ್ತು ಎಂಬುದು ಮಾತ್ರ ಚಾರಿತ್ರಿಕವಾಗಿ ಒಳರಚನೆಯಿರುವ ಎಣಿಕೆಯ ಪದ). ಜನರನ್ನು ಎಣಿಸಬೇಕಾದಲ್ಲಿ ಮೇಲಿನ ಪದಗಳ ಬದಲು ಒಬ್ಬ (ಅಥವಾ ಒಬ್ಬನು, ಒಬ್ಬಳು, ಒಬ್ಬರು), ಇಬ್ಬರು, ಮೂವರು, ನಾಲ್ವರು ಮೊದಲಾದ ವಿಶಿಷ್ಟ ಪದಗಳ ಬಳಕೆಯಿದೆ.
ಹತ್ತಕ್ಕಿಂತ ಜಾಸ್ತಿ ವಸ್ತುಗಳನ್ನು ಇಲ್ಲವೇ ಜನರನ್ನು ಎಣಿಸಬೇಕಾದಾಗ, ಎರಡು ಅಥವಾ ಜಾಸ್ತಿ ಎಣಿಕೆಯ ಪದಗಳನ್ನು ಒಟ್ಟಿಗೆ ಸೇರಿಸಿ ಹೇಳಬೇಕಾಗು ತ್ತದೆ, ಮತ್ತು ಇದಕ್ಕಾಗಿ ಕನ್ನಡದಲ್ಲಿ ಕೆಳಗೆ ಸೂಚಿಸಿರುವ ಹಾಗೆ ಎರಡು ರಚನೆ ಗಳು ಬಳಕೆಯಲ್ಲಿವೆ. ಹತ್ತರಿಂದ ಹತ್ತೊಂಬತ್ತರ ವರೆಗಿನ ಎಣಿಕೆಯನ್ನು ನಡೆಸುವುದಕ್ಕಾಗಿ ಹತ್ತು ಎಂಬುದಕ್ಕೆ ಅ ಎಂಬ ಸಂಬಂಧಿಸುವ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಹತ್ತ- ಎಂಬುದರೊಂದಿಗೆ ಒಂದು, ಎರಡು, ಮೂರು ಮೊದಲಾದ ಪದಗಳಗಳನ್ನು ಬಳಸಲಾಗುತ್ತದೆ. ಆದರೆ ಈ ರಚನೆಗಳಲ್ಲಿ ಹತ್ತ- ಎಂಬುದು ಹನ್್ನ-, ಹದಿ- ಮತ್ತು ಹತ್್ತ- ಎಂಬ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇದೇ ರೀತಿಯಲ್ಲಿ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಎಣಿಕೆಗೆ ಇಪ್ಪತ್ತ ಎಂಬುದಕ್ಕೆ ಒಂದು, ಎರಡು ಮೊದಲಾದುವನ್ನು ಸೇರಿಸಿ ತಯಾರಿಸಿದ ರಚನೆಯನ್ನೂ (ಉದಾ: ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತ ಮೂರು, ಇತ್ಯಾದಿ) ಮತ್ತು ಮೂವತ್ತರಿಂದ ಮೂವತ್ತೊಂಬತ್ತರ ವರೆಗಿನ ಎಣಿಕೆಗೆ ಮೂವತ್ತ ಎಂಬುದಕ್ಕೆ ಒಂದು, ಎರಡು, ಮೂರು ಮೊದಲಾದುವನ್ನು ಸೇರಿಸಿ ತಯಾರಿಸಿದ ರಚನೆಯನ್ನೂ ಬಳಸುವುದನ್ನು ಕಾಣಬಹುದು. ಇದೇ ರೀತಿಯ ರಚನೆಯನ್ನು ನೂರರ ಅನಂತರದ ಎಣಿಕೆಯಲ್ಲೂ ಕಾಣ ಬಹುದು. ನೂರ ಒಂದು ಎಂಬುದರಲ್ಲಿ ನೂರು ಪದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ; ನೂರ ಎಪ್ಪತ್ತೊಂದು ಎಂಬುದರಲ್ಲಿ ನೂರು ಮತ್ತು ಎಪ್ಪತ್ತು ಎಂಬುವೆರಡಕ್ಕೂ ಅದೇ ಅ ಪ್ರತ್ಯಯವನ್ನು ಸೇರಿಸಲಾಗಿದೆ; ಮತ್ತು ಹತ್ತು ಸಾವಿರದ ಎಂಟು ನೂರ ಐವತ್ತ ನಾಲ್ಕು ಎಂಬುದರಲ್ಲಿ ಸಾವಿರ, ನೂರು ಮತ್ತು ಐವತ್ತು ಎಂಬವುಗಳಿಗೆ ಅದೇ ಅ ಪ್ರತ್ಯಯವನ್ನು ಸೇರಿಸಲಾಗಿದೆ. ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದ ಎಣಿಕೆಗಳಲ್ಲಿ ಮಾತ್ರ ಈ ರೀತಿ ಅ ಪ್ರತ್ಯಯವನ್ನು ಬಳಸುವ ಬದಲು ಎರಡು, ಮೂರು, ನಾಲ್ಕು ಮೊದಲಾದ ಎಣಿಕೆಯ ಪದಗಳನ್ನು ನೇರವಾಗಿ ಹತ್ತು ಪದಕ್ಕೆ ಸೇರಿಸಲಾಗಿದೆ. ಇದು ಎಣಿಕೆಯ ಪದಗಳಲ್ಲಿ ಕಾಣಿಸುವ ಎರಡನೆಯ ರಚನೆ.
ಈ ಎರಡನೆಯ ರಚನೆಯಲ್ಲೂ ಕೆಲವು ಸೇರಿಕೆಯ ಬದಲಾವಣೆಗಳು ನಡೆದಿರುವುದನ್ನು ಗಮನಿಸಬಹುದು. ಉದಾಹರಣೆಗಾಗಿ, ಎರಡು ಎಂಬುದಕ್ಕೆ ಇಪ್್ಪ- ಎಂಬ ರೂಪವಿದೆ, ಹತ್ತು ಎಂಬುದಕ್ಕೆ ಅತ್ತು, ಪತ್ತು, ವತ್ತು ಮೊದ ಲಾದ ರೂಪಗಳಿವೆ, ಇತ್ಯಾದಿ.) ಇದೇ ರೀತಿಯಲ್ಲಿ ಇನ್ನೂರು, ಮುನ್ನೂರು, ನಾನ್ನೂರು ಮೊದಲಾದ ಎಣಿಕೆಗಳಲ್ಲೂ ಎರಡು ಎಣಿಕೆಯ ಪದಗಳನ್ನು ನೇರವಾಗಿ ಅ ಪ್ರತ್ಯಯವನ್ನು ಬಳಸದೆ ಸೇರಿಸಿರುವುದನ್ನು ಕಾಣಬಹುದು.
ಈ ಮೇಲಿನ ಎಣಿಕೆಯ ಪದಗಳಲ್ಲಿ ಅ ಪ್ರತ್ಯಯ ಬಂದಲ್ಲಿ ‘ಕೂಡಿಸು’ ಎಂಬ ಅರ್ಥ ಬರುತ್ತದೆ, ಮತ್ತು ಆ ಪ್ರತ್ಯಯ ಬಾರದೆ ಎಣಿಕೆಯ ಪದಗಳೆರಡು ನೇರವಾಗಿ ಸೇರಿಕೊಂಡಿರುವಲ್ಲಿ ‘ಗುಣಿಸು’ ಎಂಬ ಅರ್ಥ ಬರುತ್ತದೆ ಎಂಬುದಾಗಿ ಈ ಎರಡು ರೀತಿಯ ರಚನೆಗಳ ಬಳಕೆಯನ್ನು ವರ್ಣಿಸಬಹುದು. ಎಣಿಕೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಜಾಗವನ್ನು ಸೂಚಿಸು ವುದಕ್ಕಾಗಿ ಎಣಿಕೆಯ ಪದಗಳಿಗೆ ನೇ ಇಲ್ಲವೇ ನೆಯ ಪ್ರತ್ಯಯವನ್ನು ಸೇರಿಸ ಬೇಕಾಗುತ್ತದೆ. ಉದಾಹರಣೆಗಾಗಿ, ನಾಲ್ಕನೇ ಹುಡುಗ ಎಂಬುದರಲ್ಲಿ ನಾಲ್ಕನೇ ಎಂಬುದು ಎಣಿಕೆಯಲ್ಲಿ ಒಬ್ಬ ಹುಡುಗನ ಜಾಗ ಯಾವುದು ಎಂಬು ದನ್ನು ಸೂಚಿಸುವ ಮೂಲಕ ಆತನನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡು ತ್ತದೆ. ಈ ಪ್ರತ್ಯಯದೆದುರು ಒಂದು ಎಂಬುದರ ಬದಲು ಮೊದಲು ಎಂಬು ದನ್ನೂ ಬಳಸಲು ಸಾಧ್ಯವಿದೆ (ಒಂದನೇ ಹುಡುಗ, ಮೊದಲನೇ ಹುಡುಗ).
4.3.5 ಅಳತೆಯನ್ನು ಸೂಚಿಸುವ ಪದಗಳು
ನಾಮಪದವು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಅಳತೆಯನ್ನು ಸೂಚಿಸುವು ದಕ್ಕಾಗಿ ಅದರೊಂದಿಗೆ ಬೇರೆ ಕೆಲವು ಪದಗಳನ್ನು ಬಳಸಲು ಸಾಧ್ಯವಿದೆ. ಇವು ಗಳಲ್ಲಿ ಅಳತೆಯನ್ನು ನಿಖರವಾಗಿ ತಿಳಿಸುವವುಗಳು ಮತ್ತು ಒಂದು ಅಂದಾಜಿಗೆ ತಿಳಿಸುವವುಗಳು ಎಂಬುದಾಗಿ ಎರಡು ವಿಧದವುಗಳಿರುವುದನ್ನು ಕಾಣಬಹುದು.
ಉದಾಹರಣೆಗಾಗಿ, ಗೇಣು, ಮೊಳ, ಅಂಗುಲ, ಮೈಲು ಮೊದಲಾ ದವುಗಳು ಅಳತೆಯನ್ನು ನಿಖರವಾಗಿ ತಿಳಿಸುತ್ತವೆ. ಸಾಮಾನ್ಯವಾಗಿ ಇವುಗ ಳೊಂದಿಗೆ ಎಣಿಕೆಯ ಪದಗಳೂ ಬಂದಿರುತ್ತವೆ. (ಉದಾ: ಎರಡು ಮೊಳ ಬಟ್ಟೆ, ಹತ್ತು ಕೆ.ಜಿ. ಅಕ್ಕಿ, ಇತ್ಯಾದಿ). ಹಲವು-ಕೆಲವು, ಬಹಳ-ಸ್ವಲ್ಪ, ಹೇರಳ ಮೊದಲಾದವುಗಳು ಅಳತೆ ಯನ್ನು ಒಂದು ಅಂದಾಜಿಗೆ ಮಾತ್ರ ಸೂಚಿಸಬಲ್ಲುವು. ಹಾಗಾಗಿ ಇವುಗಳೊಂದಿಗೆ ಎಣಿಕೆಯ ಪದಗಳು ಬರುವುದಿಲ್ಲ. (ಉದಾ: ಕೆಲವು ಜನರು, ಸ್ವಲ್ಪ ನೀರು, ಹೇರಳ ಹಣ, ಇತ್ಯಾದಿ).
4.4 ಸಾರಾಂಶ
ವಾಕ್ಯಗಳಲ್ಲಿ ಒಂದು ಘಟನೆಯನ್ನು ಇಲ್ಲವೇ ಸಂಗತಿಯನ್ನು ಸೂಚಿಸುವುದಕ್ಕಾಗಿ ಕ್ರಿಯಾಪದಗಳೂ, ಮತ್ತು ಅಂತಹ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿ ಕೊಂಡಿರುವ ವ್ಯಕ್ತಿ, ವಸ್ತು, ಜಾಗ ಮೊದಲಾದುವನ್ನು ಗುರುತಿಸುವುದಕ್ಕಾಗಿ ನಾಮಪದಗಳೂ ಬಳಕೆಯಾಗುತ್ತವೆ. ಇವುಗಳಲ್ಲಿ ಎರಡನೆಯ ಕೆಲಸವನ್ನು ನಡೆಸುವುದಕ್ಕಾಗಿ ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನ ಎಂಬುದಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸಬೇಕಾಗುತ್ತದೆ. ವರ್ಣಿಸುವ ವಿಧಾನವನ್ನು ಬಳಸಬೇಕಿದ್ದಾಗ, ಸಾಮಾನ್ಯವಾಗಿ ನಾಮಪದ ಗಳನ್ನು ಗುಣಪದ, ಎಣಿಕೆಯ ಪದ, ಅಳತೆಯ ಪದ ಮೊದಲಾದವುಗಳೊಂದಿಗೆ ಸೇರಿಸಿ ಒಂದು ‘ಪದಕಂತೆ’ಯ ರೂಪದಲ್ಲಿ ಬಳಸುವ ಅವಶ್ಯಕತೆ ಕಂಡುಬರು ತ್ತದೆ. ಒಂದು ಇಡೀ ವಾಕ್ಯವೂ ಇಂತಹ ಪದಕಂತೆಯ ಅಂಗವಾಗಿರಲು ಸಾಧ್ಯ English → | Eke →
ಅಧ್ಯಾಯ ಐದು — ಕ್ರಿಯಾಪದಗಳ ಪದರೂಪಗಳು
5.1 ಪೀಠಿಕೆ
ವಾಕ್ಯವೊಂದರ ಕೊನೆಯಲ್ಲಿ ಅದರ ಕೇಂದ್ರವಾಗಿ ಬರುವ ಕ್ರಿಯಾಪದವನ್ನು ಸಂದಭ್ರಕ್ಕನುಸಾರವಾಗಿ ಹಲವಾರು ರೂಪಗಳಲ್ಲಿ ಬಳಸಬೇಕಾಗುತ್ತದೆ. ಇಂತಹ ರೂಪಗಳಲ್ಲಿ ಹೆಚ್ಚಿನವುಗಳಲ್ಲೂ ಅವು ಸೂಚಿಸುವ ಘಟನೆಯ ಸಮಯ ಮತ್ತು ಆ ಘಟನೆಯಲ್ಲಿ ತೊಡಗಿರುವ ಘಟಕಗಳಲ್ಲಿ ಒಂದು (ಮಾಡುಗ, ಆಗುಗ, ಇಲ್ಲವೇ ಪ್ರೇರಕ) ಎಂಬುದಾಗಿ ಎರಡು ವಿಷಯಗಳನ್ನು ಚುಟುಕಾಗಿ ತಿಳಿಸಲು ಎರಡು ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ನನ್ನ ಅಣ್ಣ ನಾಳೆ ಬೆಳಿಗ್ಗೆ ನಿಮಗೆ ಹತ್ತು ಸಾವಿರ ಕೊಡುತ್ತಾನೆ. ಮೇಲಿನ ವಾಕ್ಯದಲ್ಲಿ ಕೊಡು ಕ್ರಿಯಾಪದ ಅದರ ಕೊಡುತ್ತಾನೆ ಎಂಬ ಕ್ರಿಯಾರೂಪದಲ್ಲಿ ವಾಕ್ಯದ ಕೇಂದ್ರವಾಗಿ ಬಂದಿದೆ. ಈ ಕ್ರಿಯಾರೂಪದಲ್ಲಿ ಕೊಡು ಕ್ರಿಯಾಪದ ತ್್ತ ಮತ್ತು ಆನೆ ಎಂಬ ಎರಡು ಪ್ರತ್ಯಯಗಳೊಂದಿಗೆ ಬಂದಿರುವುದನ್ನು ಕಾಣಬಹುದು. ಈ ಎರಡು ಪ್ರತ್ಯಯಗಳಲ್ಲಿ ತ್್ತ ಎಂಬುದು ಕೊಡು ಕ್ರಿಯಾಪದ ಸೂಚಿಸುವ ಘಟನೆಯ ಸಮಯ (1ಕ) ವಾಕ್ಯವನ್ನಾಡಿರುವ ಸಮಯಕ್ಕಿಂತ ಮುಂದಿನದು ಎಂಬುದನ್ನು ತಿಳಿಸುತ್ತದೆ, ಮತ್ತು ಅದರ ಅನಂತರ ಬಂದಿರುವ ಆನೆ ಪ್ರತ್ಯಯ ಈ ಘಟನೆಯನ್ನು ನಡೆಸುವ ವ್ಯಕ್ತಿ (ಎಂದರೆ ಅದರ ‘ಮಾಡುಗ’ ಘಟಕ) ಒಬ್ಬ ಗಂಡಸು ಎಂಬುದನ್ನು ತಿಳಿಸುತ್ತದೆ.
ಈ ಪ್ರತ್ಯಯಗಳು ಮೇಲಿನ ಎರಡು ವಿಷಯಗಳನ್ನು ಬಹಳ ಚುಟುಕಾಗಿ ತಿಳಿಸುತ್ತವೆ. ಅವನ್ನೇ ಹೆಚ್ಚು ವಿವರವಾಗಿ ತಿಳಿಸಲು ಅದೇ ವಾಕ್ಯದಲ್ಲಿ ನಾಳೆ ಬೆಳಿಗ್ಗೆ ಮತ್ತು ನನ್ನ ಅಣ್ಣ ಎಂಬ ಘಟಕಗಳು ಬಂದಿವೆ.
ಈ ಎರಡು ರೀತಿಯ ಪ್ರತ್ಯಯಗಳು ಮಾತ್ರವಲ್ಲದೆ, ವಾಕ್ಯವನ್ನು ಎಂತಹ ಮಾತಿನ ಕೆಲಸದಲ್ಲಿ ತೊಡಗಿಸಲಾಗಿದೆ ಎಂಬುದನ್ನು ಸೂಚಿಸುವ ಬೇರೆ ಕೆಲವು ಪ್ರತ್ಯಯಗಳೂ ಕ್ರಿಯಾರೂಪಗಳಲ್ಲಿ ಬರಬಲ್ಲುವು. ಉದಾಹರಣೆಗಾಗಿ, ಕೊಡಲಿ ಎಂಬ ಕ್ರಿಯಾರೂಪದಲ್ಲಿ ಮೇಲಿನ ಎರಡು ಪ್ರತ್ಯಯಗಳ ಬದಲು ಅಲ್ ಮತ್ತು ಇ ಎಂಬ ಪ್ರತ್ಯಯಗಳು ಬಂದಿವೆ. ಇವುಗಳಲ್ಲಿ ಮೊದಲನೆಯದು ಸಮಯವನ್ನೂ ಮತ್ತು ಎರಡನೆಯದು ಒಂದು ‘ಮಾತಿನ ಕೆಲಸ’ವನ್ನೂ ಸೂಚಿಸುತ್ತವೆ (10.5.4 ನೋಡಿ).
ಕೆಳಗೆ ಕೊಟ್ಟಿರುವ (1ಖ) ವಾಕ್ಯದಲ್ಲಿ ಕೊಡಲಿ ಎಂಬ ಈ ಕ್ರಿಯಾರೂಪ ವನ್ನು ಬಳಸಲಾಗಿದೆ, ಮತ್ತು ಆ ವಾಕ್ಯದ ಆಡುಗನಿಗೆ ಅದನ್ನು ಬಳಸಿ ಬೇರೊಬ್ಬ ವ್ಯಕ್ತಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಿದೆ. (1ಖ) ರಾಜು ನಾಳೆ ಬೆಳಿಗ್ಗೆ ನಿಮಗೆ ಹತ್ತು ಸಾವಿರ ಕೊಡಲಿ. ಇದಲ್ಲದೆ, ವಾಕ್ಯಗಳನ್ನು ಬೇರೆ ವಾಕ್ಯಗಳ ಇಲ್ಲವೇ ಬೇರೆ ವಾಕ್ಯಗಳಲ್ಲಿ ಬರುವ ಪದಕಂತೆಗಳ ಒಳವಾಕ್ಯಗಳನ್ನಾಗಿ ಮಾಡಿ ಬಳಸಬೇಕಾಗಿರುವ ಸಂದಭ್ರ ಗಳಲ್ಲೂ ಅವಕ್ಕೆ ಬೇರೆಯೇ ಕೆಲವು ಪ್ರತ್ಯಯಗಳನ್ನು ಸೇರಿಸಬೇಕಾಗಿದ್ದು, ಇಂತಹ ಪ್ರತ್ಯಯಗಳ ಬಳಕೆಯಿಂದಲೂ ಮೇಲಿನವಕ್ಕಿಂತ ಭಿನ್ನವಾಗಿರುವ ಕೆಲವು ಕ್ರಿಯಾ ರೂಪಗಳು ಸಿದ್ಧವಾಗುತ್ತವೆ.
ಉದಾಹರಣೆಗಾಗಿ, ವಾಕ್ಯಗಳನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿಕೊಳ್ಳಲು ಅವುಗಳ ಕೇಂದ್ರವಾಗಿ ಬಂದಿರುವ ಕ್ರಿಯಾಪದಕ್ಕೆ ಅ ಎಂಬ ‘ಸಂಬಂಧಿಸುವ’ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಈ ಪ್ರತ್ಯಯವನ್ನು ಸೇರಿಸಿದಾಗ, ಅಂತಹ ಕ್ರಿಯಾಪದಗಳ ಕೊನೆಯಲ್ಲಿ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಬಂದಿರುವ ಪ್ರತ್ಯಯ ಬಿದ್ದುಹೋಗುತ್ತದೆ, ಮತ್ತು ಅವುಗಳಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ಬಂದಿರುವ ಪ್ರತ್ಯಯ ದಲ್ಲೂ ಕೆಲವು ಬದಲಾವಣೆಗಳು ನಡೆಯುತ್ತವೆ. (2ಕ) ಆ ಹುಡುಗಿ ಮಂಗಳೂರಿಗೆ ನಾಳೆ ಹೋಗುತ್ತಾಳೆ. (2ಖ) ಮಂಗಳೂರಿಗೆ ನಾಳೆ ಹೋಗುವ ಹುಡುಗಿ ಅಳುತ್ತಿದ್ದಾಳೆ. (2ಕ) ವಾಕ್ಯದ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ, ಅದನ್ನು (2ಖ) ವಾಕ್ಯದಲ್ಲಿ ಒಂದು ಪದಕಂತೆಯ ಅಂಗವನ್ನಾಗಿ ಮಾಡಲಾಗಿದೆ. ಹೀಗೆ ಮಾಡುವ ಸಮಯದಲ್ಲಿ ಅದರ ಕೊನೆಯಲ್ಲಿ ಬರುವ ಅಳು ಪ್ರತ್ಯಯವನ್ನು ತೆಗೆದು ಹಾಕಲಾಗಿದೆ, ಮತ್ತು ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಅದರಲ್ಲಿ ಉತ್್ತ ಪ್ರತ್ಯಯದ ಬದಲು ಉವ್ ಪ್ರತ್ಯಯವನ್ನು ಬಳಸಲಾಗಿದೆ. ವಾಕ್ಯಗಳಲ್ಲಿ ಈ ರೀತಿ ಬೇರೆ ಬೇರೆ ಕೆಲಸಗಳಿಗಾಗಿ ಎಂತಹ ಕ್ರಿಯಾರೂಪ ಗಳೆಲ್ಲ ಬರಬಲ್ಲುವು ಮತ್ತು ಅವುಗಳ ಒಳರಚನೆಯೇನು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
5.2 ಸಮಯವನ್ನು ಸೂಚಿಸುವ ಪ್ರತ್ಯಯಗಳು
ವಾಕ್ಯದ ಮುಖ್ಯ ಅಂಗವಾಗಿ ಬರುವ ಕ್ರಿಯಾಪದಗಳಲ್ಲಿ ‘ಹಿಂದಿನ ಸಮಯ’ ಮತ್ತು ‘ಮುಂದಿನ ಸಮಯ’ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸಬಲ್ಲ ಪ್ರತ್ಯಯಗಳು ಬಳಕೆಯಾಗುತ್ತವೆ. ಇವು ಆ ಕ್ರಿಯಾಪದಗಳಿರುವ ವಾಕ್ಯವನ್ನು ಯಾವ ಸಮಯದಲ್ಲಿ ಆಡಲಾಗಿತ್ತೋ ಆ ಸಮಯದ ಹಿಂದೆ ನಡೆದಿರುವ ಮತ್ತು ಮುಂದೆ ನಡೆಯಲಿರುವ ಘಟನೆಗಳನ್ನು ಸೂಚಿಸುತ್ತವೆ. (3ಕ) ಆತ ಇವತ್ತು ಸಂಜೆ ಮೂರು ಗಂಟೆಗೆ ಹಾಡುತ್ತಾನೆ. (3ಖ) ಆತ ಇವತ್ತು ಸಂಜೆ ಮೂರು ಗಂಟೆಗೆ ಹಾಡಿದ. ಮೇಲಿನ ಎರಡು ವಾಕ್ಯಗಳೂ ಒಂದೇ ಘಟನೆಯನ್ನು (ಎಂದರೆ ಆತನು ಹಾಡುವ ಘಟನೆಯನ್ನು) ತಿಳಿಸುತ್ತವೆ. ಇದಲ್ಲದೆ, ಈ ಘಟನೆಯ ಸಮಯ ಈ ಎರಡು ವಾಕ್ಯಗಳಲ್ಲೂ ಒಂದೇ (ಇವತ್ತು ಸಂಜೆ ಮೂರು ಗಂಟೆಗೆ). ಹೀಗಿದ್ದರೂ, ಅದನ್ನು ಸೂಚಿಸುವ ಹಾಡು ಕ್ರಿಯಾಪದವನ್ನು (3ಕ)ದಲ್ಲಿ ಉತ್್ತ ಪ್ರತ್ಯಯದೊಂದಿಗೆ ಬಳಸಲಾಗಿದೆ, ಮತ್ತು (3ಖ)ದಲ್ಲಿ ಅದನ್ನೇ ಇದ್ ಪ್ರತ್ಯಯ ದೊಂದಿಗೆ ಬಳಸಲಾಗಿದೆ.
ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಈ ಎರಡು ಪ್ರತ್ಯಯಗಳು ಘಟನೆಯ ಸಮಯವನ್ನಷ್ಟೇ ಸೂಚಿಸುವ ಬದಲು ಆ ಸಮಯಕ್ಕೂ ಮತ್ತು ಅದನ್ನು ತಿಳಿಸುವ ವಾಕ್ಯದ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುತ್ತವೆ. (3ಕ) ವಾಕ್ಯವನ್ನು ಆಡುವ ಸಮಯದಲ್ಲಿ ಆ ಘಟನೆ ನಡೆದಿಲ್ಲವೆಂಬುದನ್ನು (ಎಂದರೆ ಆ ಘಟನೆ ಅನಂತರ ನಡೆಯುತ್ತದೆ ಎಂಬುದನ್ನು) ಅದರಲ್ಲಿ ಬಂದಿರುವ ಉತ್್ತ ಎಂಬ ‘ಮುಂದಿನ’ ಸಮಯದ ಪ್ರತ್ಯಯ ಸೂಚಿಸುತ್ತದೆ, ಮತ್ತು (3ಖ) ವಾಕ್ಯ ವನ್ನು ಆಡಿರುವ ಸಮಯದಲ್ಲಿ ಆ ಘಟನೆ ನಡೆದಾಗಿತ್ತು ಎಂಬುದನ್ನು ಅದರಲ್ಲಿ ಬಂದಿರುವ ಇದ್ ಎಂಬ ‘ಹಿಂದಿನ’ ಸಮಯದ ಪ್ರತ್ಯಯ ಸೂಚಿಸುತ್ತದೆ.
5.2.1 ಮುಂದಿನ ಸಮಯ
ಮೇಲೆ ಕೊಟ್ಟಿರುವ ಎರಡು ಸಮಯ ಪ್ರತ್ಯಯಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯಕ್ಕೆ ಎಲ್ಲಾ ಸಂದಭ್ರಗಳಲ್ಲೂ ಒಂದೇ ರೂಪವಿದೆ. ಆದರೆ, ಈ ಪ್ರತ್ಯಯದೊಂದಿಗೆ ಬರುವ ಕ್ರಿಯಾಪದಗಳಲ್ಲಿ ಮಾತ್ರ ಕೆಳಗೆ ಸೂಚಿಸಿದ ಹಾಗೆ ಎರಡು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.
(ಕ) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಂದಾಗ ಅವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ನಡುಗು
ತೂಗು
ನಂಬು
ನಡುಗುತ್ತಾನೆ ತೂಗುತ್ತಾನೆ ನಂಬುತ್ತಾನೆ ಕಟ್ಟುತ್ತಾನೆ ಬಿಡುತ್ತಾನೆ (ಖ) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಂದಾಗ ಅವುಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳುತ್ತದೆ. ಹೊಲಿ
ಬರೆಯುತ್ತಾನೆ ನಡೆಯುತ್ತಾನೆ ಕುಡಿಯುತ್ತಾನೆ ಹೊಲಿಯುತ್ತಾನೆ ಉತ್್ತ ಪ್ರತ್ಯಯದ ಮೂಲಕ ಸಿದ್ಧವಾದ ಈ ಕ್ರಿಯಾರೂಪಗಳಿಗೆ ಮುಂದಿನ ಸಮಯದಲ್ಲಿ ಜರಗುವ ಘಟನೆಗಳನ್ನು ಸೂಚಿಸುವ ಅರ್ಥ ಮಾತ್ರವಲ್ಲದೆ ರೂಢಿಯಲ್ಲಿ ಜರಗುವ ಘಟನೆಗಳನ್ನು ಸೂಚಿಸುವ ಅರ್ಥವೂ ಇದೆ ಎಂಬುದನ್ನು ಕೆಳಗಿನ ವಾಕ್ಯಗಳ ಬಳಕೆಯಲ್ಲಿ ಕಾಣಬಹುದು. (4ಕ) ಅವರು ಇವತ್ತು ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ. (4ಖ) ಅವರು ದಿನಾಲೂ ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ. (5ಕ) ಮೂರಕ್ಕೆ ನಾಲ್ಕು ಸೇರಿಸಿದರೆ ಏಳಾಗುತ್ತದೆ. (5ಖ) ಅಪರಿಚಿತರನ್ನು ಕಂಡಾಗ ನಾಯಿಗಳು ಬೊಗಳುತ್ತವೆ. (5ಗ) ಆತ ರೇಡಿಯೋ ರಿಪೇರಿ ಮಾಡುತ್ತಾನೆ. ಪ್ರತ್ಯಯವಿರುವ (4ಕ)ದಲ್ಲಿ ಉತ್್ತ ತೆರೆಯುತ್ತಾರೆ ಎಂಬ ಮೇಲೆ ಕ್ರಿಯಾರೂಪ ಮುಂದಿನ ಸಮಯದಲ್ಲಿ ಜರಗಲಿರುವ ಘಟನೆಯೊಂದನ್ನು ಸೂಚಿಸುತ್ತಿದೆ. ಆದರೆ (4ಖ)ದಲ್ಲಿ ಅದೇ ಕ್ರಿಯಾರೂಪ ರೂಢಿಯಲ್ಲಿ ಜರಗುವ ಘಟನೆಯೊಂದನ್ನು ಸೂಚಿಸುತ್ತಿದೆ. ಇದಕ್ಕೆ ಬದಲು (5ಕ-ಖ)ಗಳಲ್ಲಿ ಬಂದಿರುವ ಕ್ರಿಯಾರೂಪಗಳು ರೂಢಿಯ ಘಟನೆಗಳನ್ನು ಮಾತ್ರವೇ ಸೂಚಿಸಬಲ್ಲುವು, ಮತ್ತು (5ಗ)ದಲ್ಲಿ ಬಂದಿರುವ ಕ್ರಿಯಾರೂಪ ಈ ಎರಡು ರೀತಿಯ ಅರ್ಥಗಳನ್ನೂ ಕೊಡಬಲ್ಲುದು.
5.2.2 ಹಿಂದಿನ ಸಮಯ
ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಎಡಕ್ಕೆ ಬರುವ ಕ್ರಿಯಾಪದ ಮತ್ತು ಬಲಕ್ಕೆ ಬರುವ ಘಟಕ ಪ್ರತ್ಯಯ - ಇವುಗಳನ್ನವಲಂಬಿಸಿ ಹಲವು ರೂಪಗಳಿವೆ. ಅದರೊಂದಿಗೆ ಬರುವ ಕ್ರಿಯಾಪದಗಳಲ್ಲೂ ಕೆಳಗೆ ಸೂಚಿಸಿರುವ ಹಾಗೆ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.
(1) ಈ ಪ್ರತ್ಯಯಕ್ಕೆ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೆದುರು ಇದ್ ಎಂಬ ರೂಪವಿದೆ, ಮತ್ತು ಇದರೊಂದಿಗೆ ಬರುವ ಕ್ರಿಯಾಪದಗಳ ಕೊನೆಯಲ್ಲಿರುವ ಉಕಾರ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗುತ್ತದೆ.
ನಡುಗು
ಮಾಡು
ಹರಸು
ನಡುಗಿದ ಮಾಡಿದ ಹರಸಿದ ಮೇಲೆ ನಡುಗಿದ ಎಂಬ ಕ್ರಿಯಾರೂಪದಲ್ಲಿ ನಡುಗು ಕ್ರಿಯಾಪದಕ್ಕೆ ಇದ್ ಎಂಬ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವೂ ಮತ್ತು ಅ ಎಂಬ ಘಟಕವನ್ನು ಸೂಚಿಸುವ ಪ್ರತ್ಯಯವೂ ಸೇರಿವೆ. ಈ ಕ್ರಿಯಾರೂಪದಲ್ಲಿ ನಡುಗು ಕ್ರಿಯಾಪದದ ಕೊನೆಯ ಅಕಾರ ಬಿದ್ದುಹೋಗಿದೆ. ಇತರ ಕ್ರಿಯಾರೂಪಗಳಲ್ಲೂ ಹೀಗೆಯೇ. (2) ಎಕಾರ ಮತ್ತು ಇಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಮುಂದೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ. ಕುಣಿದ (3) ಈ ಪ್ರತ್ಯಯದ ಮುಂದೆ ಘಟಕವನ್ನು ಸೂಚಿಸುವ ಪ್ರತ್ಯಯಗಳಲ್ಲಿ ತು ಎಂಬುದು ಬಂದಿದೆಯಾದಲ್ಲಿ ಅದಕ್ಕೆ ಇದ್ ಎಂಬುದರ ಬದಲು ಇ ಎಂಬ ರೂಪವಿದೆ. ಉದಾಹರಣೆಗಾಗಿ, ಕೆಳಗಿ ಕೊಟ್ಟಿರುವ ನಡುಗಿತು ಎಂಬ ಕ್ರಿಯಾರೂಪದಲ್ಲಿ ಘಟಕವನ್ನು ಸೂಚಿಸಲು ತು ಪ್ರತ್ಯಯ ಬಂದಿದೆಯಾದ ಕಾರಣ ಅದರೊಂದಿಗೆ ಹಿಂದಿನ ಸಮಯವನ್ನು ಸೂಚಿಸಲು ಇ ಪ್ರತ್ಯಯ ಬಂದಿದೆ (ನಡುಗು-ಇ-ತು). ಇದಲ್ಲದೆ ಅದರೊಂದಿಗೆ ಬರುವ ಕ್ರಿಯಾಪದಗಳಲ್ಲೂ ಕೆಳಗೆ ಸೂಚಿಸಿರುವ ಹಾಗೆ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. (ಕ) ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ನಡುಗು
ತೇಲು
ತುಂಬು
ನಡುಗಿತು ತೇಲಿತು ತುಂಬಿತು ಕಟ್ಟಿತು (ಖ) ಕ್ರಿಯಾಪದಗಳ ಕೊನೆಯ ಎಕಾರ ಮತ್ತು ಇಕಾರಗಳ ಮುಂದೆ ಯಕಾರ ಸೇರಿಕೊಳ್ಳುತ್ತದೆ. ಒಡೆಯಿತು ಎಳೆಯಿತು ಕುಡಿಯಿತು ಕುದಿಯಿತು
5.2.3 ಅಪವಾದಗಳು
ಮೇಲೆ ಸೂಚಿಸಿದ ಬದಲಾವಣೆಗಳು ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಿದಾಗ ಕಾಣಿಸಿಕೊಳ್ಳು ವಂತಹವು. ಈ ಬದಲಾವಣೆಗಳಿಗೆ ಅಪವಾದಗಳಾಗಿ ಉಳಿಯುವ ಸುಮಾರು ಐವತ್ತು-ಅರುವತ್ತು ಕ್ರಿಯಾಪದಗಳು ಕನ್ನಡದಲ್ಲಿವೆ. ಇವುಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆಯುತ್ತವೆ ಮತ್ತು ಇವುಗಳೊಂದಿಗೆ ಬರುವಾಗ ಹಿಂದಿನ ಸಮಯದ ಪ್ರತ್ಯಯಕ್ಕೆ ಎಂತಹ ರೂಪಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕೆಳಗೆ ಸೂಚಿಸಲಾಗಿದೆ (ಜಾಸ್ತಿ ವಿವರಗಳಿಗೆ ಶ್ರೀಧರ್ 1990 ನೋಡಿ). (1) ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಅವಿ, ಅರಿ, ಕಲಿ ಮತ್ತು ಬಲಿ ಕ್ರಿಯಾಪದಗಳು ಇಕಾರದಲ್ಲಿ ಕೊನೆಗೊಳ್ಳುವುವಾದರೂ, ಅವುಗ ಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಮುಂದೆ ತು ಘಟಕವನ್ನು ಸೂಚಿಸುವ ಪ್ರತ್ಯಯ ಬಂದಾಗ ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪವೂ ಇದೆ.
ಕದಿ ಎಂಬ ಇನ್ನೊಂದು ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೆದುರು ಈ ಪ್ರತ್ಯಯಕ್ಕೆ ಅದರ ಮುಂದೆ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ಈ ಎರಡು ಸಂದಭ್ರಗಳಲ್ಲೂ ಈ ಕ್ರಿಯಾಪದದ ಕೊನೆಯ ಇಕಾರ ಬಿದ್ದು ಹೋಗುತ್ತದೆ.
ಕದ್ದಿತು (2) ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಎಕಾರದಲ್ಲಿ ಕೊನೆಗೊಳ್ಳುವ ದೊರೆ, ನೆರೆ, ಬೆರೆ, ಮರೆ, ಕಲೆ, ಕೊಳೆ ಮತ್ತು ಮೊಳೆ ಕ್ರಿಯಾಪದಗಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಮುಂದೆ ತು ಪ್ರತ್ಯಯ ಬಂದಾಗ ಇ ಎಂಬುದರ ಬದಲು ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದ ಬದಲು ತ್ ಎಂಬ ರೂಪವೂ ಇದೆ. ಮರೆ ಮರೆತಿತು ಮರೆತ (3) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಈ ಕ್ರಿಯಾಪದಗಳನ್ನು ಕೆಳಗೆ ಸೂಚಿಸಿದಂತೆ ವಿಂಗಡಿಸಿಕೊಂಡಲ್ಲಿ, ಅವು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಅವುಗಳಲ್ಲಿ ಮತ್ತು ಆ ಪ್ರತ್ಯಯದಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕೆಲಸ ಹೆಚ್ಚು ಸುಲಭವಾಗುತ್ತದೆ. (ಕ) ಎರಡು ಅಕ್ಷರಗಳಿದ್ದು, ಅವುಗಳಲ್ಲಿ ಒತ್ತಕ್ಷರವಾಗಲೀ ಇಲ್ಲವೇ ಉದ್ದ ಸ್ವರವಾಗಲೀ ಇಲ್ಲದಿರುವ ಕ್ರಿಯಾಪದಗಳು: ನಗು, ಮಿಗು, ಉಡು, ಕೊಡು, ಬರು, ಅಳು, ಇರು, ಇತ್ಯಾದಿ. (ಖ) ಎರಡು ಅಕ್ಷರಗಳಿದ್ದು, ಅವುಗಳಲ್ಲಿ ಎರಡನೆಯದು ಒತ್ತಕ್ಷರವಾಗಿರುವ ಕ್ರಿಯಾಪದಗಳು: ಅನ್ನು, ತಿನ್ನು, ನಿಲ್ಲು, ಗೆಲ್ಲು, ಉಣ್ಣು, ಕೊಯ್ಯು, ಬಯ್ಯು, ಇತ್ಯಾದಿ. (ಇವುಗಳ ಎರಡು ಅಕ್ಷರ ಗಳಲ್ಲೂ ಗಿಡ್ಡ ಸ್ವರಗಳು ಬರುತ್ತವೆ). (ಗ) ಎರಡು ಅಕ್ಷರಗಳಿದ್ದು ಮೊದಲನೆಯ ಅಕ್ಷರದಲ್ಲಿ ಉದ್ದ ಸ್ವರವಿರುವ ಕ್ರಿಯಾಪದಗಳು: ಆಗು, ಹೋಗು, ಕಾಣು, ಕಾಯು, ತೇಯು, ಸಾಯು, ಏಳು, ಬೀಳು, ಸೋಲು, ಇತ್ಯಾದಿ. (ಇವು ಗಳಲ್ಲಿ ಒತ್ತಕ್ಷರ ಬರುವುದಿಲ್ಲ) (ಘ) ಮೂರು ಅಕ್ಷರವಿರುವ ಕ್ರಿಯಾಪದಗಳು: ಬೆವರು ಮತ್ತು ಹೊರಡು. ಈ ನಾಲ್ಕು ಗುಂಪುಗಳಲ್ಲಿ ಬರುವ ಕ್ರಿಯಾಪದಗಳು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಮೇಲೆ ಕೊಟ್ಟಿರುವ ನಿಯಮಗಳಿಗೆ ಹೇಗೆ ಅಪವಾದಗಳಾಗುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ. (ಕ) ಎರಡು ಅಕ್ಷರಗಳಿರುವ ಮತ್ತು ಒತ್ತಕ್ಷರವಾಗಲೀ ಉದ್ದ ಸ್ವರವಾಗಲೀ ಇಲ್ಲದಿರುವ ಕ್ರಿಯಾಪದಗಳು: ಇಂತಹ ಕ್ರಿಯಾಪದಗಳ ಎರಡನೆಯ ಅಕ್ಷರದಲ್ಲಿ ಗ್ ಇಲ್ಲವೇ ಡ್ ವ್ಯಂಜನ ಬಂದಿದೆಯಾದಲ್ಲಿ (ನಗು, ಮಿಗು, ಸಿಗು, ಹುಗು ಎಂಬವುಗಳಲ್ಲಿ ಮತ್ತು ಅಡು, ಇಡು, ಉಡು, ಕೆಡು, ಕೊಡು, ತೊಡು, ನಡು, ಪಡು, ಬಿಡು, ಸುಡು ಎಂಬವುಗಳಲ್ಲಿ) ಆ ವ್ಯಂಜನ ಕ್ ಇಲ್ಲವೇ ಟ್ ಎಂಬುದಾಗಿ ಬದಲಾಗುತ್ತದೆ. ಇದಲ್ಲದೆ, ಅವುಗಳೊಂದಿಗೆ ಬರುವ ಹಿಂದಿನ ಸಮಯದ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ಕಿ ಮತ್ತು ಟಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ಕ್ ಮತ್ತು ಟ್ ಎಂಬ ರೂಪವೂ ಇದೆ. ಹುಗು ಕ್ರಿಯಾಪದಕ್ಕೆ ಇಲ್ಲಿ ಹೊಕ್ ಎಂಬ ರೂಪವಿದೆ. ನಗು ನಕ್ಕಿತು
ನಕ್ಕ ಬಿಟ್ಟಿತು ತರು ಕ್ರಿಯಾಪದಗಳಿಗೆ ಹಿಂದಿನ ಎರಡನೆಯ ಅಕ್ಷರದಲ್ಲಿ ರಕಾರ ಇಲ್ಲವೇ ಳಕಾರ ಬಂದಿರುವ ಇಂತಹ ಕ್ರಿಯಾಪದಗಳಲ್ಲಿ ಎರಡು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಬರು ಮತ್ತು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಬಂ ಮತ್ತು ತಂ ಎಂಬ ರೂಪಗಳಿವೆ. ಈ ಕ್ರಿಯಾಪದಗಳೆದುರು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಾಗ ರೂಪಹೀನವಾಗುತ್ತದೆ, ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದಲ್ಲೇ ಬರುತ್ತದೆ. ಸಮಯವನ್ನು ತೆರು ಮತ್ತು ಅಳು ಕ್ರಿಯಾಪದಗಳಿಗೆ ತೆತ್ ಮತ್ತು ಅತ್ ಎಂಬ ರೂಪಗಳಿದ್ದು, ಇವುಗಳೆದುರು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಾಗ ಇ ಎಂಬ ರೂಪದಲ್ಲೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪದಲ್ಲೂ ಬರುತ್ತದೆ. ಇರು ಕ್ರಿಯಾಪದ ಎರಡು ವಿಷಯಗಳಲ್ಲಿ ಮೇಲಿನ ಕ್ರಿಯಾಪದಗಳಿಗಿಂತ ಭಿನ್ನವಾಗಿದೆ. ಮೊದಲನೆಯದಾಗಿ, ಇದರೊಂದಿಗೆ ಬರುವ ಹಿಂದಿನ ಸಮಯ ವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ರೂಪ ಹೀನತೆಯಿದೆ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವಿದೆ. ಎರಡನೆಯದಾಗಿ, ಈ ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ರೂಪಹೀನವಾಗಿರುವಲ್ಲಿ (ಎಂದರೆ, ಅದರ ಅನಂತರ ತು ಪ್ರತ್ಯಯ ಬಂದಿರುವಲ್ಲಿ) ಇತ್ ಎಂಬ ರೂಪವೂ ಮತ್ತು ಇತರ ಸಂದಭ್ರಗಳಲ್ಲಿ ಇದ್ ಎಂಬ ರೂಪವೂ ಇದೆ. (ಖ) ಎರಡು ಅಕ್ಷರಗಳಿರುವ ಮತ್ತು ಎರಡನೆಯದು ಒತ್ತಕ್ಷರವಾಗಿರುವ ಕ್ರಿಯಾಪದಗಳು: ಇವುಗಳಲ್ಲಿ ಅನ್ನು, ತಿನ್ನು, ಕೊಲ್ಲು, ನಿಲ್ಲು ಮತ್ತು ಸಲ್ಲು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಅಂ, ತಿಂ, ಕೊಂ, ನಿಂ ಮತ್ತು ಸಂ ಎಂಬ ರೂಪಗಳಿವೆ, ಮತ್ತು ಆ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ನಿಲ್ಲು ಕ್ರಿಯಾಪದದೊಂದಿಗೆ ಮಾತ್ರ ಅದಕ್ಕೆ ತಿ ಮತ್ತು ತ್ ಎಂಬ ರೂಪಗಳಿವೆ. ತಿನ್ನು ನಿಲ್ಲು ಉಣ್ಣು ಮತ್ತು ಕೊಳ್ಳು ಕ್ರಿಯಾಪದಗಳಿಗೂ ಮೇಲಿನವುಗಳ ಹಾಗೆಯೇ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಉಂ ಮತ್ತು ಕೊಂ ಎಂಬ ರೂಪಗಳಿವೆ, ಆದರೆ ಆ ಪ್ರತ್ಯಯಕ್ಕೆ ಇವುಗಳೆದುರು ಅದರ ಅನಂತರ ತು ಪ್ರತ್ಯಯ ಬಂದಿದೆಯಾದಲ್ಲಿ ಡಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದಲ್ಲಿ ಡ್ ಎಂಬ ರೂಪವೂ ಇದೆ. ಗೆಲ್ಲು ಮತ್ತು ಮೆಲ್ಲು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಗೆದ್ ಮತ್ತು ಮೆದ್ ಎಂಬ ರೂಪಗಳಿವೆ. ಇವುಗಳೆದುರು ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪವೂ ಗೆಲ್ಲು
ಗೆದ್ದಿತು ಇಂತಹ ಕ್ರಿಯಾಪದಗಳಲ್ಲಿ ಬರುವ ಒತ್ತಕ್ಷರ ಯಕಾರದ್ದಾಗಿದೆಯಾದರೆ (ಕೊಯ್ಯು, ಗೆಯ್ಯು, ತೊಯ್ಯು, ಬಯ್ಯು ಮತ್ತು ಹೊಯ್ಯು) ಹಿಂದಿನ ಸಮಯದ ಪ್ರತ್ಯಯದೊಂದಿಗೆ ಬಂದಾಗ ಅವುಗಳ ಕೊನೆಯ ಉಕಾರದೊಂದಿಗೆ ಎರಡನೆಯ ಅಕ್ಷರದ ಎರಡು ಯಕಾರಗಳಲ್ಲಿ ಒಂದು ಬಿದ್ದುಹೋಗಿ ಒಂದು ಯಕಾರ ಮಾತ್ರ ಉಳಿದುಕೊಳ್ಳುತ್ತದೆ (ಬರಹದಲ್ಲಿ ಬಯ್ ಎಂಬುದು ಬೈ ಸೂಚಿಸುವ ಪ್ರತ್ಯಯಕ್ಕೆ ಇವುಗಳೆದುರು ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪವೂ ಇದೆ. ಕಾಣಿಸಿಕೊಳ್ಳುತ್ತದೆ). ಹಿಂದಿನ ಸಮಯವನ್ನು ಬಯ್ಯು
ಬೈದಿತು
ಬೈದ (ಗ) ಎರಡು ಅಕ್ಷರಗಳಿದ್ದು ಅವುಗಳಲ್ಲಿ ಮೊದಲನೆಯದರ ಸ್ವರ ಉದ್ದ ವಾಗಿರುವ ಕ್ರಿಯಾಪದಗಳು: ಇವುಗಳಲ್ಲಿ ಆಗು ಮತ್ತು ಹೋಗು ಕ್ರಿಯಾ ಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೆದುರು ಆ ಮತ್ತು ಹೋ ಎಂಬ ರೂಪಗಳಿವೆ. ಇವುಗಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯವಿದೆಯಾದರೆ ಇ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳಿವೆಯಾದರೆ ದ್ ಎಂಬ ರೂಪವೂ ಇದೆ. ಇದಲ್ಲದೆ, ಇ ಪ್ರತ್ಯಯ ಸೇರಿದಾಗ ಈ ಕ್ರಿಯಾರೂಪಗಳಲ್ಲಿ ಯಕಾರ ಕಾಣಿಸಿ ಕೊಳ್ಳುತ್ತದೆ. ಹೋಗು
ಹೋಯಿತು ಹೋದ
ಕಾಣು ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ದೊಂದಿಗೆ ಬಂದಾಗ ಕಂ ಎಂಬ ರೂಪವಿದೆ. ಇದರ ಮುಂದೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆ ಯಾದರೆ ಡಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ಡ್ ಎಂಬ ರೂಪವೂ ಇದೆ. ಎರಡನೆಯ ಅಕ್ಷರದಲ್ಲಿ ಯಕಾರವಿರುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಸೇರಿದಾಗ ಆ ಕ್ರಿಯಾಪದಗಳಲ್ಲಿ ಐದು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಕ್ರಿಯಾಪದಗಳ ಕೊನೆಯ ಉಕಾರ ಮಾತ್ರ ಬಿದ್ದು ಹೋಗುತ್ತದೆ, ಮತ್ತು ಹಿಂದಿನ ಸಮಯದ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪದಲ್ಲೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪದಲ್ಲೂ ಬರುತ್ತದೆ. ನೇಯು
ನೇಯ್ದಿತು ನೇಯ್ದ ಆಯು, ಕಾಯು (ಬಿಸಿಯಾಗು ಎಂಬರ್ಥದಲ್ಲಿ), ತೇಯು, ತೋಯು, ಮಾಯು, ಮೇಯು ಮತ್ತು ಹಾಯು ಕ್ರಿಯಾಪದಗಳೂ ಇಂತಹವೇ ರೂಪ ಗಳಲ್ಲಿ ಬರಬಲ್ಲುವು. ಆದರೆ ಇವುಗಳಲ್ಲಿ ಕೆಲವು ಉಕಾರದೊಂದಿಗೆ ಯಕಾರವನ್ನೂ ಕಳೆದು ಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ ತೇಯು ಕ್ರಿಯಾಪದಕ್ಕೆ ತೇದ ಎಂಬ ರೂಪವೂ ಇದೆ. ಇದಲ್ಲದೆ, ಈಯು, ಕಾಯು (ಇದಿರು ನೋಡು ಇಲ್ಲವೇ ರಕ್ಷಿಸು ಎಂಬರ್ಥದಲ್ಲಿ) ಮತ್ತು ಮಾಯು ಎಂಬವುಗಳಿಗೆ ಈ ಎರಡನೆಯ ರೂಪ ಮಾತ್ರ ಇರುವಂತೆ ತೋರುತ್ತದೆ. ಈ ಕ್ರಿಯಾಪದಗಳಿಗೆ ಘಟಕವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಕೆಲವನ್ನು ಮಾತ್ರ ಸೇರಿಸಲು ಸಾಧ್ಯವಾಗುವುದಾದ ಕಾರಣ (ಕೆಲವಕ್ಕೆ ಜೋಡಣೆಯ ರೂಪ ಮಾತ್ರ ಕಾಣಿಸುತ್ತದೆ), ಈ ವಿಷಯ ದಲ್ಲಿ ಹೆಚ್ಚು ಕಟ್ಟುನಿಟ್ಟಾದ ನಿಯಮಗಳನ್ನು ಹೇಳುವುದು ಕಷ್ಟ. ಇದಲ್ಲದೆ, ಯಕಾರ ಉಳಿದಿರುವ ರೂಪ ಚಾರಿತ್ರಿಕವಾಗಿ ಸ್ವಲ್ಪ ಮಟ್ಟಿಗೆ ಹಿಂದಿನ ಕಾಲದ ರೂಪವಾಗಿದ್ದು ಅದು ಬಿದ್ದುಹೋಗಿರುವ ರೂಪ ಇತ್ತೀಚೆಗಿನ ದೆಂದು ತೋರುತ್ತದೆ. ಈಯು ಮತ್ತು ಸಾಯು ಕ್ರಿಯಾಪದಗಳ ಎದುರು ಬರುವಾಗ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆ ಯಾದರೆ ತ್ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ತ್್ತ ಎಂಬ ರೂಪವೂ ಕಾಣಿಸುತ್ತದೆ. ಈ ಪ್ರತ್ಯಯದೊಂದಿಗೆ ಬರುವಾಗ ಮೇಲಿನ ಕ್ರಿಯಾಪದಗಳ ಎರಡನೆಯ ಅಕ್ಷರ ಬಿದ್ದುಹೋಗುತ್ತದೆ ಮಾತ್ರವಲ್ಲ, ಅವುಗಳ ಮೊದಲನೆಯ ಅಕ್ಷರದಲ್ಲಿರುವ ಉದ್ದ ಸ್ವರ ಗಿಡ್ಡವಾಗುತ್ತದೆ. ಸಾಯು
ಸತ್ತಿತು ಸತ್ತ ಬಾಯು ಎಂಬ ಇನ್ನೊಂದು ಕ್ರಿಯಾಪದವೂ ಇದೇ ರೀತಿಯದು, ಆದರೆ ಇದರ ಮೊದಲನೆಯ ಅಕ್ಷರದಲ್ಲಿರುವ ಸ್ವರ ಉದ್ದವಾಗಿಯೇ ಉಳಿಯುತ್ತದೆ, ಮತ್ತು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಇದರೆದುರು ಬರುವಾಗ ತಿ ಮತ್ತು ತ್ ಎಂಬ ರೂಪಗಳಿವೆ. ನೋಯು, ಬೇಯು ಮತ್ತು ಮೀಯು ಕ್ರಿಯಾಪದಗಳೂ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಎರಡನೆಯ ಅಕ್ಷರವನ್ನು ಕಳೆದುಕೊಳ್ಳುತ್ತವೆ ಮತ್ತು ಮೊದಲನೆಯ ಅಕ್ಷರದಲ್ಲಿರುವ ಉದ್ದ ಸ್ವರವನ್ನು ಗಿಡ್ಡ ಸ್ವರವನ್ನಾಗಿ ಮಾಡಿಕೊಳ್ಳುತ್ತವೆ. ಇದಲ್ಲದೆ, ಅವುಗಳ ಕೊನೆಯಲ್ಲಿ ಒಂದು ಅನುಸ್ವಾರವೂ ಸೇರಿಕೊಳ್ಳುತ್ತದೆ. ಈ ಕ್ರಿಯಾಪದಗಳ ಮುಂದೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆ ಯಾದರೆ ದ್ ಎಂಬ ರೂಪವೂ ಇದೆ. ನೋಯು ನೊಂದಿತು ನೊಂದ ಏಳು ಮತ್ತು ಬೀಳು ಎಂಬೆರಡು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಎದ್ ಮತ್ತು ಬಿದ್ ಎಂಬ ರೂಪ ಗಳಿವೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಇಲ್ಲಿ ಅದರ ಅನಂತರ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ಬೀಳು
ಎದ್ದಿತು ಬಿದ್ದಿತು ಇದಕ್ಕೆ ಬದಲು ಕೀಳು ಕ್ರಿಯಾಪದಕ್ಕೆ ಕಿತ್ ಎಂಬ ರೂಪವಿದ್ದು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ತಿ ಮತ್ತು ತ್ ಎಂಬ ರೂಪಗಳಿವೆ. ಕೀಳು
ಸೋಲು ಮತ್ತು ಹೂಳು ಕ್ರಿಯಾಪದಗಳಿಗೆ ಸೋ ಮತ್ತು ಹೂ ಎಂಬ ರೂಪಗಳಿದ್ದು, ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ಮೇಲೆ ಮೊದಲಿನ ರೂಪದಲ್ಲಿ ಕಾಣಿಸುವ ಹಾಗೆ ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪವೂ ಸೋಲು
ಸೋತಿತು ಸೋತ (ಘ) ಮೂರು ಅಕ್ಷರಗಳಿರುವ ಕ್ರಿಯಾಪದಗಳು: ಬೆವರು ಮತ್ತು ಹೊರಡು ಎಂಬೆರಡು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ದೊಂದಿಗೆ ಬಂದಾಗ ಬೆವ ಮತ್ತು ಹೊರ ಎಂಬ ರೂಪಗಳಿವೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ತಿ ಮತ್ತು ಟಿ ಎಂಬ ರೂಪಗಳೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಮತ್ತು ಟ್ ಎಂಬ ರೂಪಗಳೂ ಇವೆ. ಬೆವರು
ಬೆವತಿತು ಬೆವತ ಹೊರಡು ಹೊರಟಿತು ಹೊರಟ
5.2.4 ಈಗಿನ ಸಮಯ
ಕನ್ನಡದಲ್ಲಿ ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಹಿಂದಿನ ಮತ್ತು ಮುಂದಿನ ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರವಲ್ಲದೆ, ಈಗಿನ ಸಮಯವನ್ನು ಸೂಚಿಸುವ ಮೂರನೆಯದೊಂದು ರೂಪವೂ ಇದೆ ಎಂಬುದನ್ನು ನಾವು ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು (3.1.1 ನೋಡಿ). ಈ ರೂಪದಲ್ಲಿ ವಾಕ್ಯದ ಘಟಕವೊಂದನ್ನು ಸೂಚಿಸುವ ಪ್ರತ್ಯಯಗಳಿಗೆ ಹೆಚ್ಚುಕಡಿಮೆ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಕಾಣಿಸುವ ರೂಪಗಳೇ ಇವೆ ಎಂಬುದನ್ನು ನಾವು ಮುಂದೆ (5.3)ರಲ್ಲಿ ನೋಡಲಿರುವೆವು.
ಈಗಿನ ಸಮಯವನ್ನು ಸೂಚಿಸುವ ಈ ಪ್ರತ್ಯಯ ಅದರ ಅನಂತರ ಎ ಎಂಬ ಘಟಕವನ್ನು ಸೂಚಿಸುವ ಪ್ರತ್ಯಯ ಬಂದಾಗ ರೂಪಹೀನವಾಗುತ್ತದೆ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದಲ್ಲಿ ಬರುತ್ತದೆ. ಇದರೊಂದಿಗೆ ಬರುವ ಇರು ಕ್ರಿಯಾಪದಕ್ಕೆ ಇದ್ ಎಂಬ ರೂಪವಿದೆ.
ಇದ್ದಾನೆ
5.2.5 ಸಮಯ ಪ್ರತ್ಯಯವಿಲ್ಲದೆ ಬಳಕೆಯಾಗುವ ಕ್ರಿಯಾಪದಗಳು
ಬಲ್್ಲ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳು ಮಾತ್ರ ಮೇಲೆ ಸೂಚಿಸಿದ ಸಮಯ ಪ್ರತ್ಯಯಗಳಲ್ಲಿ ಒಂದನ್ನೂ ಪಡೆಯದೆ ನೇರವಾಗಿ ಘಟಕ ಪ್ರತ್ಯಯ ಗಳೊಂದಿಗೆ ಬಳಕೆಯಾಗುತ್ತವೆ. ಇವು ಮುಂದಿನ ಸಮಯದಲ್ಲಿ ನಡೆಯಬಲ್ಲ ವಸ್ತುವಿಗಿರುವ ಘಟನೆಯಲ್ಲಿ ತೊಡಗಲು ಒಬ್ಬ ವ್ಯಕ್ತಿ ಇಲ್ಲವೇ ‘ಸಾಮರ್ಥ್ಯ’ವನ್ನು ಮಾತ್ರವೇ ಸೂಚಿಸುತ್ತಿರುವುದೇ ಇವುಗಳೊಂದಿಗೆ ಸಮಯ ಪ್ರತ್ಯಯಗಳು ಬಾರ ದಿರುವುದಕ್ಕೆ ಕಾರಣವಿರಬೇಕು. (6ಕ) ಆಕೆ ರಾತ್ರಿ ಹೊತ್ತಿನಲ್ಲಿ ಆಫೀಸಿನಿಂದ ಒಬ್ಬಳೇ ಬರಬಲ್ಲಳು. (6ಖ) ನಾನು ರಾತ್ರಿ ಹೊತ್ತಿನಲ್ಲಿ ಆಫೀಸಿನಿಂದ ಒಬ್ಬನೇ ಬರಬಲ್ಲೆ. (7ಕ) ನೀವು ಹೇಳಿದ ಕೆಲಸವನ್ನು ನಾನು ಮಾಡಲಾರೆ. (7ಖ) ಅವರಲ್ಲಿ ಯಾವ ವಸ್ತುವೂ ಸಿಗಲಾರದು. ಈ ಎರಡು ಕ್ರಿಯಾಪದಗಳೂ ಸಾಮಾನ್ಯವಾಗಿ ಬೇರೊಂದು ಕ್ರಿಯಾಪದದ ಜೋಡಣೆಯ ರೂಪದೊಂದಿಗೆ ಬಳಕೆಯಾಗುತ್ತವೆ. ಬಲ್್ಲ ಕ್ರಿಯಾಪದ ಮಾತ್ರ ಸ್ವತಂತ್ರವಾಗಿಯೂ ಬಳಕೆಯಾಗಬಲ್ಲುದು.
5.3 ಘಟಕವನ್ನು ಸೂಚಿಸುವ ಪ್ರತ್ಯಯಗಳು
ವಾಕ್ಯದಲ್ಲಿ ಬರುವ ಘಟಕಗಳಲ್ಲಿ ಯಾವುದಾದರೂ ಒಂದನ್ನು ಚುಟುಕಾಗಿ ಸೂಚಿಸಲು ಕೆಳಗೆ ಕೊಟ್ಟಿರುವ ಒಂಬತ್ತು ಬೇರೆ ಬೇರೆ ಪ್ರತ್ಯಯಗಳಲ್ಲಿ ಒಂದನ್ನು ಕ್ರಿಯಾಪದದೊಂದಿಗೆ ಬಳಸಬೇಕಾಗುತ್ತದೆ. (ಇಲ್ಲಿ ‘ಹಲವರು’ ಎಂಬುದಕ್ಕೆ ಒಬ್ಬರಿಗಿಂತ (ಇಲ್ಲವೇ ಒಂದಕ್ಕಿಂತ) ಜಾಸ್ತಿ ಎಂಬ ಅರ್ಥವಿದೆ, ಮತ್ತು ಈ ಹಲವರನ್ನು ಸೂಚಿಸುವ ಪ್ರತ್ಯಯ ಗಂಡಸು-ಹೆಂಗಸು ಎಂಬ ವ್ಯತ್ಯಾಸವನ್ನು ತೋರಿಸುವುದಿಲ್ಲ). ಕೇಳುಗ
ಇತರರು: ಗಂಡಸು
ಹೆಂಗಸು
ಹಲವರು ಈ ಪ್ರತ್ಯಯಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಕೊಡು ಕ್ರಿಯಾಪದದ ಮುಂದಿನ ಸಮಯದ ರೂಪಗಳಲ್ಲಿ ಕಾಣಬಹುದು. ಕೇಳುಗ
ಇತರರು: ಗಂಡಸು
ಕೊಡುತ್ತೇನೆ ಕೊಡುತ್ತಿ ಕೊಡುತ್ತಾನೆ ಹಲವರು ಕೊಡುತ್ತೇವೆ ಕೊಡುತ್ತೀರಿ ಕೊಡುತ್ತಾರೆ ಹೆಂಗಸು
ಕೊಡುತ್ತಾಳೆ ಕೊಡುತ್ತದೆ ಕೊಡುತ್ತವೆ ಮೇಲೆ ಕೊಟ್ಟಿರುವ ಪ್ರತ್ಯಯಗಳಿಗೆ ಅವುಗಳೊಂದಿಗೆ ಬರುವ ಸಮಯದ ಪ್ರತ್ಯಯವನ್ನವಲಂಬಿಸಿ ಎರಡು ರೂಪಗಳಿವೆ. ಮೊದಲನೆಯದಾಗಿ, ಕ್ರಿಯಾಪದ ದೊಂದಿಗೆ ಮುಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಬಂದಿದೆಯಾದಲ್ಲಿ ಅದರ ಅನಂತರ ಬರುವ ಈ ಪ್ರತ್ಯಯಗಳಿಗೆ ಮೇಲೆ ಕೊಟ್ಟಿರುವ ರೂಪಗಳಿರು ತ್ತವೆ.
ಆದರೆ, ಇದಕ್ಕೆ ಬದಲು ಕ್ರಿಯಾಪದದೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಬಂದಿದೆಯಾದಲ್ಲಿ ಅವಕ್ಕೆ ಮೇಲೆ ಕೊಟ್ಟುದಕ್ಕಿಂತ ಸ್ವಲ್ಪ ಭಿನ್ನವಾಗಿರುವ ರೂಪಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಕೊಡು ಕ್ರಿಯಾಪದದ ಕೆಳಗಿನ ರೂಪಗಳಲ್ಲಿ ಕಾಣಬಹುದು. ಕೇಳುಗ
ಇತರರು: ಗಂಡಸು
ಹೆಂಗಸು
ಕೊಟ್ಟೆ
ಕೊಟ್ಟಳು ಕೊಟ್ಟಿತು ಹಲವರು ಕೊಟ್ಟೆವು ಕೊಟ್ಟರು ಕೊಟ್ಟುವು ಹಿಂದಿನ ಸಮಯವನ್ನು ಸೂಚಿಸುವ ಈ ಕ್ರಿಯಾರೂಪಗಳಲ್ಲಿ ಘಟಕವನ್ನು ಸೂಚಿಸುವುದಕ್ಕಾಗಿ ಬರುವ ಪ್ರತ್ಯಯಗಳಿಗೆ ಕೆಳಗಿನ ಪಟ್ಟಿಯಲ್ಲಿ ಕಾಣಿಸಿರು ವಂತಹ ರೂಪಗಳಿವೆಯೆಂಬುದನ್ನು ಗಮನಿಸಬಹುದು. ಕೇಳುಗ
ಇತರರು: ಗಂಡಸು
ಹೆಂಗಸು
ಹಲವರು ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಮುಂದಿನ ಮತ್ತು ಹಿಂದಿನ ಸಮಯಗಳನ್ನು ಸೂಚಿಸುವ ರೂಪಾವಳಿಗಳು ಮಾತ್ರವಲ್ಲದೆ ಈಗಿನ ಸಮಯ ವನ್ನು ಸೂಚಿಸುವ ಮೂರನೆಯದೊಂದು ರೂಪಾವಳಿಯೂ ಇದೆ ಎಂಬುದನ್ನು ನಾವು ಮೇಲೆ (5.2.4)ರಲ್ಲಿ ನೋಡಿರುವೆವು. ಈ ರೂಪಾವಳಿಯಲ್ಲಿ ಘಟಕ ವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಹೆಚ್ಚಿನವಕ್ಕೂ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಕಾಣಿಸುವ ರೂಪವೇ ಇದೆ. ಆದರೆ, ಅದೆ ಮತ್ತು ಅವೆ ಪ್ರತ್ಯಯಗಳು ಎ ಮತ್ತು ವೆ ಎಂಬ ರೂಪದಲ್ಲೂ ಮತ್ತು ಇ ಪ್ರತ್ಯಯ ಈಯೆ ಎಂಬ ರೂಪದಲ್ಲೂ ಬರುತ್ತವೆ. ಕೇಳುಗ
ಇತರರು: ಗಂಡಸು
ಹೆಂಗಸು
ಇದ್ದೇನೆ
ಇದ್ದೀಯೆ ಇದ್ದಾನೆ
ಇದ್ದಾಳೆ
ಹಲವರು ಇದ್ದೇವೆ ಬಲ್್ಲ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳೊಂದಿಗೆ ಘಟಕವನ್ನು ಸೂಚಿಸುವ ಈ ಪ್ರತ್ಯಯಗಳು ನೇರವಾಗಿ, ಎಂದರೆ ಸಮಯ ಪ್ರತ್ಯಯಗಳ ಸಹಾಯವಿಲ್ಲದೆ ಬಳಕೆಯಾಗುತ್ತವೆ ಎಂಬುದನ್ನು ನಾವು ಮೇಲೆ 5.2.5ರಲ್ಲಿ ನೋಡಿರುವೆವು.
ಈ ಕ್ರಿಯಾಪದಗಳೆದುರು ಘಟಕವನ್ನು ಸೂಚಿಸುವ ಪ್ರತ್ಯಯಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೆದುರು ಕಾಣಿಸುವ ರೂಪಗಳೇ ಇವೆ. ಆದರೆ, ಇ ಮತ್ತು ತು ಪ್ರತ್ಯಯಗಳಿಗೆ ಮಾತ್ರ ಈ ಕ್ರಿಯಾಪದಗಳೆದುರು ಎ ಮತ್ತು ಉದು ಎಂಬ ರೂಪಗಳಿವೆ. ಕೇಳುಗ
ಇತರರು: ಗಂಡಸು
ಹೆಂಗಸು
ಬಲ್ಲೆ ಬಲ್ಲೆ ಬಲ್ಲಳು
ಬಲ್ಲುದು
ಹಲವರು ಬಲ್ಲೆವು ಬಲ್ಲರು ಬಲ್ಲುವು
5.4 ಇಸು ಪ್ರತ್ಯಯದ ಬಳಕೆ
ಕನ್ನಡದ ಹೆಚ್ಚಿನ ಕ್ರಿಯಾಪದಗಳೂ ಮೇಲಿನ ಎರಡು ಪ್ರತ್ಯಯಗಳನ್ನು ಪಡೆಯುವ ಮೊದಲು ಇಸು ಎಂಬ ಇನ್ನೊಂದು ಪ್ರತ್ಯಯವನ್ನು ಪಡೆಯಬಲ್ಲುವು. ಈ ಪ್ರತ್ಯಯಕ್ಕೆ ಸಂದಭ್ರಕ್ಕನುಸಾರವಾಗಿ ಬೇರೆ ಬೇರೆ ಅರ್ಥಗಳು ಬರುತ್ತಿದ್ದು, ಇವುಗಳಲ್ಲಿ ಘಟನೆಯನ್ನು ಮಾಡುವಂತೆ ವ್ಯಕ್ತಿಯೊಬ್ಬನನ್ನು ಪ್ರೇರೇಪಿಸುವಂತಹ ಅರ್ಥ ಪ್ರಾಮುಖ್ಯವಾದುದು. (8ಕ) ಸೀತೆ ಜಾನಕಿಗೊಂದು ಪತ್ರ ಬರೆದಳು. (8ಖ) ಸುಂದರಿ ಸೀತೆಯ ಕೈಯಲ್ಲಿ ಜಾನಕಿಗೊಂದು ಪತ್ರ ಬರೆಸಿದಳು. ಸೈನಿಕರು ಸೆರೆಯಾಳುಗಳನ್ನು ಕೊಂದರು. (9ಖ) ರಾಜ ಸೈನಿಕರ ಮೂಲಕ ಸೆರೆಯಾಳುಗಳನ್ನು ಕೊಲ್ಲಿಸಿದ. (8ಕ)ದಲ್ಲಿ ಬರೆ ಕ್ರಿಯಾಪದ ನೇರವಾಗಿ ಸಮಯವನ್ನು ಸೂಚಿಸುವ ದ್ ಪ್ರತ್ಯಯ ದೊಂದಿಗೆ ಮತ್ತು ಘಟಕವನ್ನು ಸೂಚಿಸುವ ಅಳು ಪ್ರತ್ಯಯದೊಂದಿಗೆ ಬಂದಿದೆ. ಆದರೆ (8ಖ)ದಲ್ಲಿ ಇದೇ ಕ್ರಿಯಾಪದ ಈ ಎರಡು ಪ್ರತ್ಯಯಗಳನ್ನು ಪಡೆಯುವ ಮೊದಲು ಇಸು ಎಂಬ ಬೇರೊಂದು ಪ್ರತ್ಯಯವನ್ನು ಪಡೆದಿದೆ.
(8ಕ)ದಲ್ಲಿ ಬರೆ ಕ್ರಿಯಾಪದ ಸೀತೆ ನಡೆಸಿದ ಒಂದು ಘಟನೆಯನ್ನು ಸೂಚಿಸುತ್ತದೆ; (8ಖ)ದಲ್ಲಿ ಅದೇ ಕ್ರಿಯಾಪದ ಇಸು ಪ್ರತ್ಯಯದೊಂದಿಗೆ ಬಂದಿದೆಯಾದ ಕಾರಣ, ಸೀತೆ ಆ ಘಟನೆಯನ್ನು ನಡೆಸುವಂತೆ ಸುಂದರಿ ಪ್ರೇರೇಪಿಸಿರುವಳೆಂಬುದನ್ನು ಸೂಚಿಸುತ್ತದೆ. ಇಸು ಪ್ರತ್ಯಯಕ್ಕೆ ಈ ರೀತಿ ವಾಕ್ಯಕ್ಕೊಂದು ಪ್ರೇರಕ ಘಟಕವನ್ನು ಸೇರಿಸುವ ಕೆಲಸ ಮಾತ್ರವಲ್ಲದೆ ಬೇರೆಯೂ ಕೆಲವು ಕೆಲಸಗಳಿವೆ. ವಾಕ್ಯದಲ್ಲೊಂದು ಮಾಡುಗ ಘಟಕವಿದೆಯಾದರೆ, ಅಂತಹ ವಾಕ್ಯವನ್ನು ಈ ಪ್ರತ್ಯಯ ಕೆಳಗೆ ಸೂಚಿಸಿರುವ ಹಾಗೆ ಮೂರು ರೀತಿಗಳಲ್ಲಿ ಬದಲಾಯಿಸಬಲ್ಲುದು. (ಕ) ಮೇಲೆ ಸೂಚಿಸಿದ ಹಾಗೆ ಇಸು ಪ್ರತ್ಯಯ ಆ ವಾಕ್ಯಕ್ಕೆ ಒಂದು ಪ್ರೇರಕ ಘಟಕವನ್ನು ಸೇರಿಸಬಲ್ಲುದು. ಇಂತಹ ಸಂದಭ್ರಗಳಲ್ಲಿ ವಾಕ್ಯದ ಮಾಡುಗ ಘಟಕ ಕೈಯಲ್ಲಿ ಇಲ್ಲವೇ ಮೂಲಕ ಎಂಬ ಪದದೊಂದಿಗೆ ಬರುತ್ತದೆ (8ಖ, 9ಖ ನೋಡಿ). (ಖ) ಎರಡನೆಯದಾಗಿ, ಇಸು ಪ್ರತ್ಯಯ ಆ ವಾಕ್ಯಕ್ಕೆ ಒಂದು ಹೊಸ ಮಾಡುಗ ಘಟಕವನ್ನು ಸೇರಿಸಬಲ್ಲುದುದು. ಇಂತಹ ಸಂದಭ್ರಗಳಲ್ಲಿ ವಾಕ್ಯದಲ್ಲಿ ಮೊದಲು ಮಾಡುಗವಾಗಿದ್ದ ಘಟಕ ಆಗುಗವಾಗುತ್ತದೆ; ವಾಕ್ಯದಲ್ಲಿ ಮೊದಲು ಬೇರೊಂದು ಆಗುಗ ಘಟಕವಿತ್ತಾದರೆ, ಇಸು ಪ್ರತ್ಯಯವನ್ನು ಬಳಸಿದಾಗ ಆ ಆಗುಗವನ್ನು ಬಿಟ್ಟುಬಿಡಬೇಕಾಗುತ್ತದೆ.
(10ಕ) ರಾಮು ನದಿಯನ್ನು ದಾಟಿದ. (10ಖ) ಸೀತಾಪತಿ ರಾಮುವನ್ನು ದಾಟಿಸಿದ. (11ಕ) ದನಗಳು ಹುಲ್ಲು ಮೇಯುತ್ತಿವೆ. (11ಖ) ಕೃಷ್ಣಪ್ಪ ದನಗಳನ್ನು ಮೇಯಿಸುತ್ತಿದ್ದಾನೆ. (10ಖ)ದಲ್ಲಿ ಕ್ರಿಯಾಪದದೊಂದಿಗೆ ಇಸು ಪ್ರತ್ಯಯವನ್ನು ಬಳಸಲಾಗಿದ್ದು, ಸೀತಾಪತಿ ಎಂಬ ಹೊಸದೊಂದು ಘಟಕ ಅದರ ಮಾಡುಗವಾಗಿ ಬಂದಿದೆ. ಅದರಲ್ಲಿ ಮೊದಲಿಗಿದ್ದ (ಎಂದರೆ (10ಕ)ದಲ್ಲಿದ್ದ) ಮಾಡುಗ ಘಟಕ ಆಗುಗ ವಾಗಿದೆ (ರಾಮು ಘಟಕ ಅನ್ನು ಪ್ರತ್ಯಯದೊಂದಿಗೆ ಬಂದಿದೆ) ಮತ್ತು ಮೊದಲಿ ಗಿದ್ದ ಆಗುಗ ಘಟಕವನ್ನು (ನದಿ ಎಂಬುದನ್ನು) ವಾಕ್ಯದಿಂದ ಬಿಟ್ಟು ಕೊಡಲಾಗಿದೆ (11ಖದಲ್ಲೂ ಹೀಗೆಯೇ). ಕನ್ನಡದ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ವಾಕ್ಯಗಳಲ್ಲೂ ಬಳಕೆಯಾಗಬಲ್ಲುವು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (12ಕ-ಗ) ವಾಕ್ಯ ಗಳನ್ನು ಗಮನಿಸಬಹುದು. (12ಕ) ರಾಜು ಮೂರು ಮೈಲು ಓಡಿದ. (12ಖ) ಹರಿ ರಾಜುವಿನ ಕೈಯಲ್ಲಿ ಮೂರು ಮೈಲು ಓಡಿಸಿದ. (12ಗ) ಹರಿ ರಾಜುವನ್ನು ಮೂರು ಮೈಲು ಓಡಿಸಿದ. ಮೇಲೆ (12ಖ)ದಲ್ಲಿ ಹರಿ ಘಟಕ ಪ್ರೇರಕವಾಗಿ ಬಂದಿದ್ದು, ಮೊದಲು ಮಾಡುಗವಾಗಿದ್ದ ರಾಜು ಘಟಕ ಮಾಡುಗವಾಗಿಯೇ ಉಳಿದಿದೆ ಮತ್ತು ಕೈಯಲ್ಲಿ ಎಂಬ ಪದದೊಂದಿಗೆ ಬಂದಿದೆ. ಇದಕ್ಕೆ ಬದಲು (12ಗ)ದಲ್ಲಿ ಹರಿ ಘಟಕ ಮಾಡುಗವಾಗಿ ಬಂದಿದೆ ಮತ್ತು ರಾಜು ಘಟಕ ಆಗುಗವಾಗಿ (ಅನ್ನು ಪ್ರತ್ಯಯದೊಂದಿಗೆ) ಬಂದಿದೆ. ಈ ಮೂರು ವಾಕ್ಯಗಳಲ್ಲೂ ಮೂರು ಮೈಲಿ ಎಂಬುದು ಪರಿಮಾಣವನ್ನು ಸೂಚಿಸುವ ಒಂದು ಅಮುಖ್ಯ ಘಟಕ. (ಗ) ಮೂರನೆಯದಾಗಿ, ಇಸು ಪ್ರತ್ಯಯ ಮಾಡುಗ ಘಟಕವಿರುವ ವಾಕ್ಯಕ್ಕೆ ಒಂದು ಹೊಸ ಮಾಡುಗವನ್ನು ಸೇರಿಸುವುದರೊಂದಿಗೆ ಅದರಲ್ಲಿ ಮೊದಲಿದ್ದ ಮಾಡುಗ ಘಟಕವನ್ನು ಕೊನೆ ಘಟಕವಾಗಿ ಬದಲಾಯಿಸಬಲ್ಲುದು. (13ಕ) ಮಗು ಬಾಳೇಹಣ್ಣು ತಿನ್ನುತ್ತಾ ಇದೆ. (13ಖ) ಮುರಳಿ ಮಗುವಿಗೆ ಬಾಳೇಹಣ್ಣು ತಿನ್ನಿಸುತ್ತಾ ಇದ್ದಾನೆ. (14ಕ) ರಾಘವ ಒಂದು ಕಪ್ ಮಜ್ಜಿಗೆ ಕುಡಿದ. (14ಖ) ಗಂಗಮ್ಮ ರಾಘವನಿಗೆ ಒಂದು ಕಪ್ ಮಜ್ಜಿಗೆ ಕುಡಿಸಿದಳು. (13ಖ)ದಲ್ಲಿ ಮುರಳಿ ಎಂಬ ಒಂದು ಹೊಸತಾಗಿರುವ (ಎಂದರೆ (13ಕ)ದಲ್ಲಿ ಇಲ್ಲದಿದ್ದ) ಮಾಡುಗ ಘಟಕ ಸೇರಿಕೊಂಡಿದೆ ಮತ್ತು ಅದರಲ್ಲಿ ಮೊದಲಿಗೆ ಇದ್ದ ಮಗು ಎಂಬ ಮಾಡುಗ ಘಟಕ ಕೊನೆ ಘಟಕವಾಗಿ ಬದಲಾಗಿದ್ದು ಗೆ ಪ್ರತ್ಯಯ ದೊಂದಿಗೆ ಬಳಕೆಯಾಗಿದೆ. ಇಂತಹ ವಾಕ್ಯಗಳಲ್ಲೂ ಹೊಸದಾಗಿ ಒಂದು ಮಾಡುಗ ಘಟಕದ ಬದಲು ಪ್ರೇರಕ ಘಟಕವನ್ನು ಸೇರಿಸಿಕೊಳ್ಳಲು ಸಾಧ್ಯವಿದೆ; ಹಾಗೆ ಮಾಡಿದಾಗ ಮೊದಲಿದ್ದ ಮಾಡುಗ ಘಟಕ ಮಾಡುಗವಾಗಿಯೇ ಉಳಿಯುತ್ತದಾದರೂ ಕೈಯಲ್ಲಿ ಎಂಬ ಪದದೊಂದಿಗೆ ಬರುತ್ತದೆ. (15ಕ) ಅವನು ಮೂರು ಚಪಾತಿ ತಿಂದ. (15ಖ) ನಾನು ಅವನಿಗೆ ಮೂರು ಚಪಾತಿ ತಿನ್ನಿಸಿದೆ. (15ಗ) ನಾನು ಅವನ ಕೈಯಲ್ಲಿ ಮೂರು ಚಪಾತಿ ತಿನ್ನಿಸಿದೆ. (ಘ) ಮಾಡುಗ ಘಟಕವಿಲ್ಲದ ವಾಕ್ಯಗಳ ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವಕ್ಕೆಲ್ಲ ಹೊಸದಾಗಿ ಮಾಡುಗ ಘಟಕವೊಂದು ಸೇರಿಕೊಳ್ಳುತ್ತದೆ. (16ಕ) ನೀರು ಕುದಿಯಿತು. (16ಖ) ಜಾನಕಿ ನೀರು ಕುದಿಸಿದಳು. (17ಕ) ಸೀತಾಪತಿಗೆ ಪರೀಕ್ಷೆಯ ಸುದ್ದಿ ಮುಟ್ಟಿದೆ. (17ಖ) ರಾಜು ಸೀತಾಪತಿಗೆ ಪರೀಕ್ಷೆಯ ಸುದ್ದಿ ಮುಟ್ಟಿಸಿದ್ದಾನೆ. (16ಕ)ದಲ್ಲಿ ಮಾಡುಗ ಘಟಕವಿಲ್ಲ; ಆದರೆ (16ಖ)ದಲ್ಲಿ ಕುದಿ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಲಾಗಿದೆಯಾದ ಕಾರಣ, ಅದರಲ್ಲಿ ಜಾನಕಿ ಎಂಬ ಮಾಡುಗ ಘಟಕವೊಂದು ಹೊಸತಾಗಿ ಸೇರಿಕೊಂಡಿದೆ. ಇಸು ಪ್ರತ್ಯಯದ ಬಳಕೆಯಾದಾಗ, ವಾಕ್ಯದ ಕ್ರಿಯಾಪದವನ್ನವಲಂಬಿಸಿ ಅದರ ಘಟಕಗಳಲ್ಲಿ ಬೇರೆಯೂ ಕೆಲವು ಬದಲಾವಣೆಗಳು ಕಾಣಿಸುತ್ತವೆ. ಉದಹರಣೆಗಾಗಿ, ಕೆಳಗೆ ಕೊಟ್ಟಿರುವ ನಾಲ್ಕು ಬದಲಾವಣೆಗಳನ್ನು ಗಮನಿಸ ಬಹುದು.
(ಙ) ಮೆಚ್ಚು ಇಲ್ಲವೇ ನಂಬು ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿದಾಗ, ಅದರ ಆಗುಗ ಮಾಡುಗವಾಗುತ್ತದೆ, ಮತ್ತು ಮಾಡುಗ ಆಗುಗವಾಗುತ್ತದೆ. (18ಕ) ರಾಮು ಜಾನಕಿಯನ್ನು ನಂಬಿದ. (18ಖ) ಜಾನಕಿ ರಾಮುವನ್ನು ನಂಬಿಸಿದಳು. (ಚ) ಹೆದರು, ಸೋಲು, ರೇಗು, ಒಪ್ಪು ಮೊದಲಾದ ಬೇರೆ ಕೆಲವು ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವುಗಳ ಕೊನೆ ಘಟಕ ಮಾಡುಗ ಘಟಕವಾಗುತ್ತದೆ. (19ಕ) ರಾವಣ ಹನುಮಂತನಿಗೆ ಸೋತ. (19ಖ) ಹನುಮಂತ ರಾವಣನನ್ನು ಸೋಲಿಸಿದ. (ಛ) ಕಾಣು ಮತ್ತು ಕೇಳು ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವುಗಳ ಮಾಡುಗ ಘಟಕ ಕೊನೆ ಘಟಕವಾಗುತ್ತದೆ. (20ಕ) ಅವನು ಒಂದು ಹಾಡನ್ನು ಕೇಳಿದ. (20ಖ) ಅವನಿಗೆ ಒಂದು ಹಾಡು ಕೇಳಿಸಿತು.
(ಜ) ತೆರೆ, ಒಡೆ, ಸುಡು ಮೊದಲಾದ ಬೇರೆ ಕೆಲವು ಕ್ರಿಯಾಪದಗಳು ಮಾಡುಗ ಘಟಕದೊಂದಿಗೂ ಬರಬಲ್ಲುವು, ಮಾಡುಗ ಘಟಕವಿಲ್ಲದೆಯೂ ಬರಬಲ್ಲುವು. ಇಂತಹ ಕ್ರಿಯಾಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿದಲ್ಲಿ, ಅವು ಪ್ರೇರಕದೊಂದಿಗೆ ಮಾತ್ರ ಬರಬಲ್ಲುವಲ್ಲದೆ ಪ್ರೇರಕವಿಲ್ಲದೆ ಬರಲಾರವು. (21ಕ) ಬಾಗಿಲು ತೆರೆಯಿತು. (21ಖ) ಹುಡುಗ ಬಾಗಿಲು ತೆರೆದ. (21ಗ) ಆಕೆ ಹುಡುಗನ ಕೈಯಲ್ಲಿ ಬಾಗಿಲು ತೆರೆಸಿದಳು. (21ಕ)ದಲ್ಲಿ ತೆರೆ ಕ್ರಿಯಾಪದದೊಂದಿಗೆ ಆಗುಗ ಘಟಕ (ಬಾಗಿಲು) ಮಾತ್ರ ಬಂದಿದೆ; (21ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಮಾಡುಗ (ಹುಡುಗ) ಮತ್ತು ಆಗುಗ (ಬಾಗಿಲು)ಗಳೆರಡೂ ಬಂದಿವೆ; (21ಗ)ದಲ್ಲಿ ಆ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಲಾಗಿದೆಯಾದ ಕಾರಣ ಅದರೊಂದಿಗೆ ಆಗುಗ (ಬಾಗಿಲು) ಮತ್ತು ಮಾಡುಗ (ಹುಡುಗ) ಘಟಕಗಳು ಮಾತ್ರವಲ್ಲದೆ ಪ್ರೇರಕ ಘಟಕವೂ (ಆಕೆ ಎಂಬುದೂ) ಬಂದಿದೆ.
5.5 ವಾಕ್ಯದ ನಡುವೆ ಕಾಣಿಸುವ ಕ್ರಿಯಾರೂಪಗಳು
ನಾವು ಇದುವರೆಗೆ ಪರಿಶೀಲಿಸಿದ ಕ್ರಿಯಾರೂಪಗಳೆಲ್ಲ ವಾಕ್ಯದ ಕೊನೆಯಲ್ಲಿ ಬರುವ ಮುಖ್ಯ ಕ್ರಿಯಾಪದದ ರೂಪಗಳು. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳಬೇಕಾದಾಗ ಇಲ್ಲವೇ ಇನ್ನೊಂದು ವಾಕ್ಯದ ಇಲ್ಲವೇ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಹೇಳಬೇಕಾದಾಗ, ಅಂತಹ ವಾಕ್ಯದಲ್ಲಿ ಬರುವ ಮುಖ್ಯ ಕ್ರಿಯಾಪದ ವಾಕ್ಯದ ನಡುವೆ ಕಾಣಿಸಿಕೊಳ್ಳುತ್ತದೆ. ಈ ರೀತಿ ವಾಕ್ಯದ ನಡುವೆ ಕಾಣಿಸಿಕೊಳ್ಳುವ ಕ್ರಿಯಾಪದಕ್ಕೆ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದಕ್ಕಿಂತ ಭಿನ್ನವಾದ ರೂಪವಿರುತ್ತದೆ. ಉದಾಹರಣೆಗಾಗಿ, ವಾಕ್ಯದ ನಡುವೆ ಬರುವ ಕ್ರಿಯಾಪದದೊಂದಿಗೆ ಘಟಕ ವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲ. ಎಂದು, ಎಂಬ, ಓ ಎಂಬಂತಹ ಎತ್ತಿ ಹೇಳುವ ಪದ ಇಲ್ಲವೇ ಪ್ರತ್ಯಯಗಳೊಂದಿಗೆ ಬರುವ ಕ್ರಿಯಾರೂಪಗಳು ಮಾತ್ರ ಇದಕ್ಕೆ ಅಪವಾದಗಳು. ವಾಕ್ಯದ ನಡುವೆ ಬರುವ ಕ್ರಿಯಾಪದದೊಂದಿಗೆ ಸಮಯ ಪ್ರತ್ಯಯ ಬರಬಲ್ಲುದಾದರೂ ಅದಕ್ಕೆ ಕೆಲವು ಸಂದಭ್ರಗಳಲ್ಲಿ ವಾಕ್ಯದ ಕೊನೆಯಲ್ಲಿ ಬರುವ ಸಮಯ ಪ್ರತ್ಯಯಕ್ಕಿಂತ ಬೇರೆಯೇ ಅರ್ಥವಿರುತ್ತದೆ.
ಈ ರೀತಿ ವಾಕ್ಯದ ನಡುವೆ ಬರುವ ಕ್ರಿಯಾರೂಪಗಳಲ್ಲಿ ಎಂತಹ ಪ್ರತ್ಯಯ ಗಳೆಲ್ಲ ಬರುತ್ತವೆ ಮತ್ತು ಅವುಗಳ ಬಳಕೆ ಹೇಗೆ ಎಂಬುದನ್ನು ಕೆಳಗಿನ ಉಪ ವಿಭಾಗಗಳಲ್ಲಿ ವಿವರಿಸಲಾಗಿದೆ.
5.5.1 ಜೋಡಿಸುವ ರೂಪಗಳು
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳುವುದಕ್ಕಾಗಿ ಮೂರು ವಿಧಾನಗಳು ಬಳಕೆಯಲ್ಲಿದ್ದು, ಆ ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸುವುದು ಇವುಗಳಲ್ಲಿ ಒಂದು ಎಂಬುದನ್ನು ನಾವು ಮುಂದೆ ಎಂಟನೇ ಅಧ್ಯಾಯದಲ್ಲಿ ನೋಡಲಿರುವೆವು. ಈ ವಿಧಾನದಲ್ಲಿ ಬಳಕೆಯಾಗುವ ಜೋಡಿಸುವ ಕ್ರಿಯಾರೂಪದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯ ಬರುತ್ತದೆ, ಆದರೆ ಘಟಕವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲ. (22ಕ) ರಾಜು ಮನೆಗೆ ಹೋಗಿ ನಿದ್ದೆ ಮಾಡಿದ. (22ಖ) ಜಾನಕಿ ಮನೆಗೆ ಹೋಗಿ ಅಡುಗೆ ಮಾಡಿದಳು. (22ಗ) ರಾಜು ಮನೆಗೆ ಹೋಗಲು ರಿಕ್ಷಾ ಹತ್ತಿದ. ಹೋಗುವ ಘಟನೆಯನ್ನು ನಡೆಸಿದ ವ್ಯಕ್ತಿ (22ಕ)ದಲ್ಲಿ ಒಬ್ಬ ಗಂಡಸು ಮತ್ತು (22ಖ)ದಲ್ಲಿ ಒಬ್ಬ ಹೆಂಗಸು; ಹೀಗಿದ್ದರೂ ಇವೆರಡು ವಾಕ್ಯಗಳಲ್ಲೂ ಹೋಗಿ ಎಂಬ ಒಂದೇ ಕ್ರಿಯಾರೂಪ ಜೋಡಿಸುವ ರೂಪವಾಗಿ ಬಂದಿದೆ.
(22ಕ) ಮತ್ತು (22ಖ) ವಾಕ್ಯಗಳಲ್ಲಿ ಮೊದಲನೆಯ ಘಟನೆ ಎರಡನೆ ಯದರ ಮೊದಲೇ ನಡೆದಿರುತ್ತದೆ. ಆದರೆ (22ಗ)ದಲ್ಲಿ ಮೊದಲನೆಯ ಘಟನೆ ನಡೆಯುವಂತಹದಾಗಿದೆ. ಈ ವ್ಯತ್ಯಾಸವನ್ನು ಎರಡನೆಯದರ ಅನಂತರ ಸೂಚಿಸುವುದಕ್ಕಾಗಿ (22ಕ-ಖ)ಗಳಲ್ಲಿ ಹೋಗಿ ಎಂಬ ಕ್ರಿಯಾರೂಪವನ್ನೂ, ಮತ್ತು (22ಗ)ದಲ್ಲಿ ಹೋಗಲು ಎಂಬ ಕ್ರಿಯಾರೂಪವನ್ನೂ ಬಳಸಲಾಗಿದೆ. ಈ ರೀತಿ ಈ ಜೋಡಿಸುವ ಕ್ರಿಯಾರೂಪಗಳು ಘಟನೆಗಳ ಸಮಯದಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಸೂಚಿಸಬಲ್ಲುವು, ಆದರೆ ಅವುಗಳ ಘಟಕಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಸೂಚಿಸಲಾರವು.
5.5.2 ಸಮಯವನ್ನು ಸೂಚಿಸುವ ಪ್ರತ್ಯಯಗಳು
ಸಮಯವನ್ನು ಸೂಚಿಸುವುದಕ್ಕಾಗಿ ಇಂತಹ ಜೋಡಿಸುವ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳಿಗೂ ಮತ್ತು ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ.
ಮೇಲೆ 5.2ರಲ್ಲಿ ವಿವರಿಸಿರುವ ಹಾಗೆ, ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾರೂಪಗಳು ಘಟನೆಯೊಂದರ ಸಮಯವನ್ನು ವಾಕ್ಯವನ್ನಾಡುವ ಸಮಯಕ್ಕೆ ಸಂಬಂಧಿಸಿದಂತೆ ಸೂಚಿಸುತ್ತವೆ. ಆ ಘಟನೆ ವಾಕ್ಯವನ್ನಾಡುವ ಸಮಯಕ್ಕಿಂತ ಹಿಂದೆ ನಡೆದುದೆಂಬುದನ್ನು ಸೂಚಿಸಲು ಅವುಗಳಲ್ಲಿ ‘ಹಿಂದಿನ ಸಮಯ’ದ ಪ್ರತ್ಯಯವೂ ಮತ್ತು ಅದು ಆ ಸಮಯದ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸಲು ‘ಮುಂದಿನ ಸಮಯ’ದ ಪ್ರತ್ಯಯವೂ ಬಳಕೆಯಾಗು ತ್ತವೆ. ಘಟನೆಯ ಸಮಯಕ್ಕೂ ಮತ್ತು ವಾಕ್ಯದ ಸಮಯಕ್ಕೂ ನಡುವಿರುವ ಸಂಬಂಧವನ್ನು ಈ ರೀತಿ ವಾಕ್ಯದ ಕೊನೆಯ ಕ್ರಿಯಾರೂಪವೇ ತಿಳಿಸುವ ಕಾರಣ ಅದನ್ನೇ ಪುನ: ವಾಕ್ಯದ ನಡುವೆ ಬರುವ ಜೋಡಿಸುವ ಕ್ರಿಯಾರೂಪಗಳು ತಿಳಿಸುವ ಅವಶ್ಯಕತೆಯಿಲ್ಲ. ಹಾಗಾಗಿ, ಜೋಡಿಸಿರುವ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ಸಮಯದ ಮಟ್ಟಿಗೆ ಎಂತಹ ಸಂಬಂಧವಿದೆ ಎಂಬುದನ್ನು ಮಾತ್ರ ಜೋಡಿಸುವ ಕ್ರಿಯಾರೂಪದಲ್ಲಿ ಬರುವ ಸಮಯ ಪ್ರತ್ಯಯಗಳು ತಿಳಿಸುತ್ತವೆ. ಕೆಳಗಿನ ವಾಕ್ಯಗಳಲ್ಲಿ ಈ ಎರಡು ರೀತಿಯ ಪ್ರತ್ಯಯ ಗಳೂ ಬಂದಿದ್ದು, ಅವುಗಳ ನಡುವಿರುವ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ. (23ಕ) ರಾಜು ಮನೆಗೆ ಹೋಗಿ ನಿದ್ದೆ ಮಾಡಿದ. (23ಖ) ರಾಜು ಮನೆಗೆ ಹೋಗಿ ನಿದ್ದೆ ಮಾಡುತ್ತಾನೆ. (23ಕ)ದಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ಹೋಗು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬಂದಿದೆ ಮತ್ತು ಮಾಡು ಕ್ರಿಯಾಪದದೊಂದಿಗೆ ದ್ ಪ್ರತ್ಯಯ ಬಂದಿದೆ. (ಇದಲ್ಲದೆ, ಮಾಡು ಕ್ರಿಯಾಪದದೊಂದಿಗೆ ಘಟಕವನ್ನು ಸೂಚಿಸುವ ಅ ಪ್ರತ್ಯಯವೂ ಬಂದಿದೆ). ಇಲ್ಲಿ ಇ ಪ್ರತ್ಯಯ ಮನೆಗೆ ಹೋಗುವ ಘಟನೆ ನಿದ್ದೆ ಮಾಡುವ ಘಟನೆಗಿಂತ ಮೊದಲೇ ನಡೆದಿದೆ ಎಂಬುದನ್ನು ತಿಳಿಸುತ್ತದೆ, ಮತ್ತು ದ್ ಪ್ರತ್ಯಯ ನಿದ್ದೆ ಮಾಡುವ ಘಟನೆ (23ಕ) ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲೇ ನಡೆದಿದೆ ಎಂಬುದನ್ನು ಸೂಚಿಸುತ್ತದೆ. (23ಕ) ವಾಕ್ಯದಲ್ಲಿ ಮನೆಗೆ ಹೋಗುವ ಘಟನೆ ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲೇ ನಡೆದಿದೆಯೆಂಬ ಅರ್ಥ ಸೂಚಿತವಾಗುವುದಾದರೂ ಅದು ನೇರವಾಗಿ ಹೋಗು ಕ್ರಿಯಾಪದದೊಂದಿಗೆ ಬರುವ ಇ ಪ್ರತ್ಯಯದಿಂದ ಸೂಚಿತವಾಗುವುದಿಲ್ಲ; ಅದಕ್ಕೆ ಬದಲು, ಮಾಡು ಕ್ರಿಯಾಪದದೊಂದಿಗೆ ಬರುವ ದ್ ಪ್ರತ್ಯಯದಿಂದ (ಮತ್ತು ಮನೆಗೆ ಹೋಗುವ ಘಟನೆ ನಿದ್ದೆ ಮಾಡುವ ಘಟನೆಗಿಂತ ಮೊದಲೇ ನಡೆದಿದೆ ಎಂಬುದರಿಂದ) ಸೂಚಿತವಾಗುತ್ತದೆ.
ಇ ಪ್ರತ್ಯಯಕ್ಕೆ ಈ ರೀತಿ ಎರಡನೆಯ ಘಟನೆಗೆ ಸಂಬಂಧಿಸಿದಂತಹ ಸಮಯವನ್ನು ಸೂಚಿಸುವ ಅರ್ಥವಿದೆಯಲ್ಲದೆ ವಾಕ್ಯವನ್ನು ಆಡಿರುವ ಸಮಯಕ್ಕೆ ಸಂಬಂಧಿಸಿದಂತೆ ಸಮಯವನ್ನು ಸೂಚಿಸುವ ಅರ್ಥವಿಲ್ಲ ಎಂಬುದನ್ನು ಮೇಲೆ ಕೊಟ್ಟಿರುವ (23ಖ) ವಾಕ್ಯ ಸ್ಪಷ್ಟಪಡಿಸುತ್ತದೆ. ಈ ವಾಕ್ಯದಲ್ಲೂ ಹೋಗು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬಂದಿದೆ. ಆದರೆ ಮಾಡು ಕ್ರಿಯಾ ಪದದೊಂದಿಗೆ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯ ಬಂದಿದೆಯಾದ ಕಾರಣ, ಇಲ್ಲಿ ಮನೆಗೆ ಹೋಗುವ ಘಟನೆ (23ಖ) ವಾಕ್ಯವನ್ನು ಆಡಿರುವ ಸಮಯದ ಅನಂತರ (ಎಂದರೆ ‘ಮುಂದಿನ’ ಸಮಯದಲ್ಲಿ) ನಡೆ ದಿರಲು ಸಾಧ್ಯವಿದೆ.
ಎರಡು ಘಟನೆಗಳ ನಡುವೆ ಕೆಳಗೆ ಸೂಚಿಸಿದ ಹಾಗೆ ಅವು ನಡೆಯುವ ಸಮಯಕ್ಕೆ ಸಂಬಂಧಿಸಿದಂತೆ ನಾಲ್ಕು ರೀತಿಯ ಸಂಬಂಧಗಳಿರಲು ಸಾಧ್ಯವಿದೆ. (1) ಮೊದಲನೆಯ ವಾಕ್ಯ ಸೂಚಿಸುವ ಘಟನೆ ಎರಡನೆಯ ವಾಕ್ಯ ಸೂಚಿಸುವ ಘಟನೆಗಿಂತ ಮೊದಲು ನಡೆಯುವಂತಹದಿರಬಹುದು,
(2) ಮೊದಲನೆಯ ವಾಕ್ಯ ಸೂಚಿಸುವ ಘಟನೆ ಎರಡನೆಯ ವಾಕ್ಯ ಸೂಚಿಸುವ ಘಟನೆಗಿಂತ ಅನಂತರ ನಡೆಯುವಂತಹದಿರಬಹುದು,
(3) ಎರಡು ವಾಕ್ಯಗಳು ಸೂಚಿಸುವ ಘಟನೆಗಳೂ ಒಂದೇ ಸಮಯ ದಲ್ಲಿ ನಡೆಯುವಂತಹವಿರಬಹುದು, ಇಲ್ಲವೇ
(4) ಮೊದಲನೆಯ ವಾಕ್ಯ ಸೂಚಿಸುವ ಘಟನೆ ನಡೆಯದೆ ಎರಡನೆಯ ವಾಕ್ಯ ಸೂಚಿಸುವ ಘಟನೆ ನಡೆಯುವಂತಿರಬಹುದು.
ಈ ನಾಲ್ಕು ರೀತಿಯ ಸಾಧ್ಯತೆಗಳನ್ನು ಸೂಚಿಸುವುದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದದೊಂದಿಗೆ ನಾಲ್ಕು ರೀತಿಯ ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (24ಕ) ನಾನು ಸೀಬೆಹಣ್ಣನ್ನು ಬೇಯಿಸಿ ಕತ್ತರಿಸಿದೆ. (24ಖ) ನಾನು ಸೀಬೆಹಣ್ಣನ್ನು ಬೇಯಿಸಲು ಕತ್ತರಿಸಿದೆ. (24ಗ) ನಾನು ಸೀಬೆಹಣ್ಣನ್ನು ಬೇಯಿಸುತ್ತಾ ಕತ್ತರಿಸಿದೆ. (24ಘ) ನಾನು ಸೀಬೆಹಣ್ಣನ್ನು ಬೇಯಿಸದೆ ಕತ್ತರಿಸಿದೆ. ಮೇಲಿನ ವಾಕ್ಯಗಳಲ್ಲಿ ಪ್ರತಿಯೊಂದರಲ್ಲೂ ಸೀಬೆಹಣ್ಣನ್ನು ಬೇಯಿಸುವುದು ಮತ್ತು ಸೀಬೆ ಹಣ್ಣನ್ನು ಕತ್ತರಿಸುವುದು ಎಂಬುದಾಗಿ ಎರಡೆರಡು ಘಟನೆ ಗಳನ್ನು ಸೂಚಿಸಲಾಗಿದೆ.
(24ಕ)ದಲ್ಲಿ ಈ ಎರಡು ಘಟನೆಗಳಲ್ಲಿ ಮೊದಲನೆಯದು (ಬೇಯಿಸು ವುದು) ಎರಡನೆಯದಕ್ಕಿಂತ ಮೊದಲು ನಡೆದಿದೆಯೆಂದು ಸೂಚಿಸಲಾಗಿದೆ; (24ಖ)ದಲ್ಲಿ ಮೊದಲನೆಯದು ಎರಡನೆಯದರ ಅನಂತರ ನಡೆಯುವಂತಹದು ಎಂದು ಸೂಚಿಸಲಾಗಿದೆ; (24ಗ)ದಲ್ಲಿ ಇವೆರಡೂ ಒಟ್ಟಿಗೆ ನಡೆದಿವೆ ಎಂದು ಸೂಚಿಸಲಾಗಿದೆ; ಮತ್ತು (24ಘ)ದಲ್ಲಿ ಮೊದಲನೆಯದು ನಡೆಯದೆ ಎರಡನೆ ಯದು ನಡೆದಿದೆಯೆಂದು ಸೂಚಿಸಲಾಗಿದೆ. ಎರಡು ಘಟನೆಗಳ ನಡುವೆ ಅವುಗಳ ಸಮಯದಲ್ಲಿ ಕಾಣಿಸುವ ಈ ನಾಲ್ಕು ರೀತಿಯ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಅವುಗಳಲ್ಲಿ ಮೊದಲನೆಯ ಘಟನೆಯನ್ನು ಸೂಚಿಸುವ ಕ್ರಿಯಾಪದದೊಂದಿಗೆ ಅನುಕ್ರಮವಾಗಿ ಇ, ಅಲು, ಉತ್ತಾ ಮತ್ತು ಅದೆ ಎಂಬ ನಾಲ್ಕು ಪ್ರತ್ಯಯಗಳನ್ನು ಬಳಸಲಾಗಿದೆ.
ಇವುಗಳಲ್ಲಿ ಇ ಪ್ರತ್ಯಯವು ಅದಕ್ಕಿರುವ ಕೆಲವು ರೂಪಗಳಲ್ಲಿ ಹಿಂದಿನ ಸಮಯದ ಪ್ರತ್ಯಯದ ಹಾಗೆಯೇ ಕಾಣಿಸುತ್ತದೆ; ಆದರೆ ಬೇರೆ ಕೆಲವು ರೂಪಗಳಲ್ಲಿ ಅದು ಭಿನ್ನವಾಗಿದೆ. ಉತ್ತಾ ಪ್ರತ್ಯಯವೂ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯವನ್ನು ಹೋಲುತ್ತದೆ. ಆದರೆ ಅರ್ಥದಲ್ಲಿ ಈ ಎರಡು ಪ್ರತ್ಯಯಗಳೂ ಮೇಲೆ ವಿವರಿಸಿದ ಪ್ರತ್ಯಯಗಳಿಗಿಂತ ಭಿನ್ನವಾಗಿವೆ (ಜಾಸ್ತಿ ವಿವರಗಳಿಗೆ ಭಟ್ 1999:20-28 ನೋಡಿ). ಅದೆ ಎಂಬ ನಾಲ್ಕನೆಯ ಪ್ರತ್ಯಯವನ್ನು ಮಾತ್ರ ಸಮಯ ಪ್ರತ್ಯಯವೆಂದು ಪರಿಗಣಿಸುವ ಬದಲು ಅಲ್ಲಗಳೆಯುವ ಪ್ರತ್ಯಯವೆಂದು ಪರಿಗಣಿಸಲು ಸಾಧ್ಯ ವಿದೆ. ಯಾಕೆಂದರೆ, ಅದು ಸಮಯದ ಮಟ್ಟಿಗೆ ಎರಡು ಘಟನೆಗಳು ಸಂಬಂಧಿ ಸಿಲ್ಲ ಎಂಬುದಾಗಿ ಸೂಚಿಸುತ್ತಿದೆಯೆಂದು ಹೇಳಲೂ ಸಾಧ್ಯ.
ವಾಕ್ಯಗಳನ್ನು ಪದ ಇಲ್ಲವೇ ಪದಕಂತೆಗಳೊಂದಿಗೆ ಸಂಬಂಧಿಸುವುದಕ್ಕಾಗಿ ಬಳಸುವ ಅ ಪ್ರತ್ಯಯದೆದುರು ಅದ್ ಎಂಬ ಅಲ್ಲಗಳೆಯುವ ಪ್ರತ್ಯಯ ಬರು ತ್ತದೆಯೆಂಬುದನ್ನು ನಾವು ಕೆಳಗೆ 5.6ರಲ್ಲಿ ನೋಡಲಿರುವೆವು. ಜೋಡಿಸುವ ವಾಕ್ಯಗಳಲ್ಲಿ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ ಬರುವ ಅದೆ ಎಂಬ ಪ್ರತ್ಯಯಕ್ಕೂ ಮತ್ತು ಈ ಅದ್ ಪ್ರತ್ಯಯಕ್ಕೂ ನಡುವೆ ಸಂಬಂಧವನ್ನು ಕಲ್ಪಿಸಲು ಸಾಧ್ಯವಿದೆ.
ಬರು ಮತ್ತು ತರು ಎಂಬೆರಡು ಕ್ರಿಯಾಪದಗಳಿಗೆ ಅದ್ ಪ್ರತ್ಯಯದೆದುರು ಇರುವ ಹಾಗೆ ಈ ಅದೆ ಪ್ರತ್ಯಯದೆದುರೂ ಬಾರ್ ಮತ್ತು ತಾರ್ ಎಂಬ ವಿಶಿಷ್ಟವಾದ ರೂಪಗಳಿವೆಯೆಂಬುದನ್ನು ಇಲ್ಲಿ ಗಮನಿಸಬಹುದು. (25ಕ) ಅವನು ಬಾರದೆ ನಾನು ಹೋಗುವುದಿಲ್ಲ. (25ಖ) ಅವನು ಬಾರದೆ ನಮ್ಮ ಕೆಲಸ ಕೆಟ್ಟುಹೋಯಿತು.
5.5.3 ಇ ಪ್ರತ್ಯಯದ ರೂಪಗಳು
ಒಂದು ಘಟನೆ ಇನ್ನೊಂದು ಘಟನೆಗಿಂತ ಮೊದಲೇ ನಡೆದಿದೆ (ಅಥವಾ ನಡೆಯುತ್ತದೆ) ಎಂಬುದನ್ನು ಸೂಚಿಸುವ ಇ ಪ್ರತ್ಯಯಕ್ಕೆ ಕ್ರಿಯಾಪದಗಳ ಸ್ವರೂಪವನ್ನಾಧರಿಸಿ ಬೇರೆ ಬೇರೆ ರೂಪಗಳಿವೆ. ಮೇಲೆ ಸೂಚಿಸಿದ ಹಾಗೆ, ಈ ರೂಪಗಳು ಕೆಲವು ವಿಷಯಗಳಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ವನ್ನು ಹೋಲುವುವಾದರೂ ಬೇರೆ ಕೆಲವು ವಿಷಯಗಳಲ್ಲಿ ಅದಕ್ಕಿಂತ ಭಿನ್ನ ವಾಗಿವೆ. ಉಕಾರದಲ್ಲಿ ಕೊನೆಗೊಳ್ಳುವ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯ ವನ್ನು ಸೂಚಿಸುವುದಕ್ಕಾಗಿ ಇದ್ ಪ್ರತ್ಯಯವನ್ನು ಸೇರಿಸಲಾಗುತ್ತದೆ. ಒಂದು ಘಟನೆ ಇನ್ನೊಂದಕ್ಕಿಂತ ಮೊದಲು ನಡೆಯುವಂತಹದೆಂಬುದಾಗಿ ‘ಮೊದಲಿನ ಸಮಯ’ವನ್ನು ಸೂಚಿಸುವ ಪ್ರತ್ಯಯ ಇಂತಹ ಕ್ರಿಯಾಪದಗಳೊಂದಿಗೆ ಇ ಎಂಬ ರೂಪದಲ್ಲಿ ಬರುತ್ತದೆ. ಕ್ರಿಯಾಪದ ಮಾಡು
ಕೇಳು
ಬದುಕು
ಹಿಂದಿನ ಸಮಯ ಮೊದಲಿನ ಸಮಯ ಮಾಡಿದಳು ಕೇಳಿದಳು ಬದುಕಿದಳು ಮೇಲಿನ ಉದಾಹರಣೆಗಳಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅಳು ಪ್ರತ್ಯಯದೆದುರು ಇದ್ ಎಂಬ ರೂಪದಲ್ಲೂ ಮತ್ತು ಮೊದಲಿನ ಸಮಯ ವನ್ನು ಸೂಚಿಸುವ ಪ್ರತ್ಯಯ ಇ ಎಂಬ ರೂಪದಲ್ಲೂ ಬಂದಿರುವುದನ್ನು ಕಾಣ ಬಹುದು. (26ಕ-ಖ)ಗಳಲ್ಲಿ ಈ ಎರಡು ರೂಪಗಳೂ ಬಂದಿವೆ. (26ಕ) ಜಾನಕಿ ಒಂದು ಚಂದದ ಬುಟ್ಟಿ ಮಾಡಿದಳು. (26ಖ) ಜಾನಕಿ ಒಂದು ಚಂದದ ಬುಟ್ಟಿ ಮಾಡಿ ನನಗೆ ಕೊಟ್ಟಳು. ಮಾಡು ಕ್ರಿಯಾಪದದೊಂದಿಗೆ ಹಿಂದಿನ (26ಕ)ದಲ್ಲಿ ಸಮಯವನ್ನು ಸೂಚಿಸುವು ದಕ್ಕಾಗಿ ಇದ್ ಪ್ರತ್ಯಯ ಬಂದಿದೆ (ಅದರ ಅನಂತರ ಘಟಕವನ್ನು ಸೂಚಿಸುವ ಅಳು ಪ್ರತ್ಯಯವೂ ಬಂದಿದೆ). ಇದಕ್ಕೆ ಬದಲು (26ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಮೊದಲಿನ ಸಮಯವನ್ನು ಸೂಚಿಸುವ ಇ ಪ್ರತ್ಯಯ ಬಂದಿದೆ. (26ಖ)ದಲ್ಲಿ ಈ ಕ್ರಿಯಾಪದ ವಾಕ್ಯದ ನಡುವೆ ಬಂದಿರುವುದನ್ನು ಗಮನಿಸಬಹುದು.
ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ, ಮತ್ತು ಮೊದಲಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದು ಎಂಬ ರೂಪವಿದೆ. ಕ್ರಿಯಾಪದ ಹೊಲಿ
ಹಿಂದಿನ ಸಮಯ ಮೊದಲಿನ ಸಮಯ ಕುಣಿದಳು ಕುಡಿದಳು ಹೊಲಿದಳು ಕುಣಿದು ಕುಡಿದು ಹೊಲಿದು ಇದೇ ರೀತಿಯಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ ಮತ್ತು ಮೊದಲಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದು ಎಂಬ ರೂಪವಿದೆ. ಕ್ರಿಯಾಪದ ಹಿಂದಿನ ಸಮಯ ಮೊದಲಿನ ಸಮಯ ಕರೆದಳು
ಬರೆದಳು
ನಡೆದಳು ಕರೆದು ಬರೆದು ನಡೆದು ಮೇಲಿನ ನಿಯಮಗಳಿಗೆ ಅಪವಾದವಾಗಿ ಬರುವ ಕ್ರಿಯಾಪದಗಳಲ್ಲೆಲ್ಲ (ವಿವರಗಳಿಗೆ 5.2.3 ನೋಡಿ) ಮೊದಲಿನ ಸಮಯದ ಪ್ರತ್ಯಯ ಹಿಂದಿನ ಸಮಯದ ಪ್ರತ್ಯಯದ ಹಾಗೆಯೇ (ಎಂದರೆ ಅದಕ್ಕೆ ಅದರ ಅನಂತರ ಅನು, ಅಳು ಮೊದಲಾದ ಘಟಕಗಳನ್ನು ಸೂಚಿಸುವ ಪ್ರತ್ಯಯಗಳು ಬಂದಾಗ ಕಾಣಿಸುವ ರೂಪದ ಹಾಗೆಯೇ) ಇದೆ. ಆದರೆ ಈ ಸನ್ನಿವೇಶಗಳಲ್ಲಿ ಹಿಂದಿನ ಸಮಯದ ಪ್ರತ್ಯಯ ಒಂದು ವ್ಯಂಜನದ ರೂಪದಲ್ಲಿ (ದ್, ಡ್, ಕ್, ಟ್, ತ್ ಇತ್ಯಾದಿಗಳಾಗಿ) ಬರುವುದಾದರೆ ಮೊದಲಿನ ಸಮಯದ ಪ್ರತ್ಯಯ ಆ ವ್ಯಂಜನ ದೊಂದಿಗೆ ಒಂದು ಉಕಾರವೂ ಸೇರಿಕೊಂಡಿರುವ ರೂಪದಲ್ಲಿ (ದು, ಡು, ಕು, ಟು, ತು ಇತ್ಯಾದಿಯಾಗಿ) ಬರುತ್ತದೆ. ಕ್ರಿಯಾಪದ ನಗು ಕೊಡು
ಕೊಯ್ಯು ತಿನ್ನು ಕಲಿತು ನಕ್ಕು ಹಿಂದಿನ ಸಮಯ ಮೊದಲಿನ ಸಮಯ ಕಲಿತಳು
ನಕ್ಕಳು
ಕೊಟ್ಟಳು ಅತ್ತಳು
ಉಂಡಳು ಕೊಯ್ದಳು ತಿಂದಳು
ಕೊಯ್ದು ಕೊಟ್ಟು
5.5.4 ಸಂಬಂಧಿಸುವ ರೂಪಗಳು
ವಾಕ್ಯವೊಂದನ್ನು ಒಂದು ಪದ ಇಲ್ಲವೇ ಪದಕಂತೆಯೊಂದಿಗೆ ಸಂಬಂಧಿಸುವು ದಕ್ಕಾಗಿ ಅದರ ಮುಖ್ಯ ಕ್ರಿಯಾಪದಕ್ಕೆ ಅ ಎಂಬ ಸಂಬಂಧಿಸುವ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ಈ ಪ್ರತ್ಯಯದೆದುರು ಕ್ರಿಯಾಪದದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯ ಕಾಣಿಸಿಕೊಳ್ಳುತ್ತದೆ, ಆದರೆ ಘಟಕವನ್ನು ಸೂಚಿಸುವ ಪ್ರತ್ಯಯ ಕಾಣಿಸಿಕೊಳ್ಳುವುದಿಲ್ಲ.
(27ಕ) ಹುಡುಗಿ ಮರಕ್ಕೆ ಹತ್ತಿದಳು. (27ಖ) ಮರಕ್ಕೆ ಹತ್ತಿದ ಹುಡುಗಿ ಹೂ ಕೊಯ್ಯುತ್ತಿದ್ದಾಳೆ. (27ಕ)ದಲ್ಲಿ ಬಂದಿರುವ ವಾಕ್ಯವನ್ನು ಹುಡುಗಿ ಪದದೊಂದಿಗೆ ಸಂಬಂಧಿಸಿ (27ಖ)ದಲ್ಲಿ ಹೇಳಲಾಗಿದೆ, ಮತ್ತು ಇದಕ್ಕಾಗಿ ಅದರ ಕೊನೆಯಲ್ಲಿ ಬಂದಿರುವ ಹತ್ತಿದಳು ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ. ಈ ಪ್ರತ್ಯಯ ದೆದುರು ಘಟಕವನ್ನು ಸೂಚಿಸುವ ಅಳು ಪ್ರತ್ಯಯ ಬಿದ್ದುಹೋಗಿದೆ, ಆದರೆ ಸಮಯವನ್ನು ಸೂಚಿಸುವ ದ್ ಪ್ರತ್ಯಯ ಉಳಿದುಕೊಂಡಿದೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯವನ್ನು ಬಿಟ್ಟು ಇತರ ಘಟಕಗಳನ್ನು ಸೂಚಿಸುವ ಪ್ರತ್ಯಯಗಳು ಬಂದಾಗ ಯಾವ ರೂಪ ಕಾಣಿಸುತ್ತದೆಯೋ ಅದೇ ರೂಪ ಅದರ ಅನಂತರ ಈ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯ ಬಂದಾಗಲೂ ಕಾಣಿಸುತ್ತದೆ. ತಿಳಿಸುವ ರೂಪ ಹುಡುಗಿ ಬಂದಳು
ಮರ ಒಣಗಿತು ಜನರು ಹಾಡಿದರು
ಎಲೆಗಳು ಉದುರಿದುವು ಉದುರಿದ ಎಲೆಗಳು ಸಂಬಂಧಿಸುವ ರೂಪ ಬಂದ ಹುಡುಗಿ ಒಣಗಿದ ಮರ ಹಾಡಿದ ಜನರು ಸಮಯವನ್ನು ಸೂಚಿಸುವ ಪ್ರತ್ಯಯದ ಅನಂತರ ಈ ಮುಂದಿನ ಸಂಬಂಧಿಸುವ ಪ್ರತ್ಯಯ ಬಂದಾಗ ಅದಕ್ಕೆ ಉವ್ ಎಂಬ ಬೇರೆಯೇ ಒಂದು ರೂಪವಿದೆ.
ತಿಳಿಸುವ ರೂಪ ಹುಡುಗಿ ಬರುತ್ತಾಳೆ ಮರ ಒಣಗುತ್ತದೆ
ಜನರು ಹಾಡುತ್ತಾರೆ ಎಲೆಗಳು ಉದುರುತ್ತವೆ ಉದುರುವ ಎಲೆಗಳು ಸಂಬಂಧಿಸುವ ರೂಪ ಬರುವ ಹುಡುಗಿ ಒಣಗುವ ಮರ ಹಾಡುವ ಜನರು ಈ ಉವ್ ಪ್ರತ್ಯಯದೊಂದಿಗೆ ಬರುವ ಕ್ರಿಯಾಪದಗಳ ಕೊನೆಯಲ್ಲಿ ಉಕಾರವಿದೆಯಾದರೆ ಅದು ಬಿದ್ದು ಹೋಗುತ್ತದೆ, ಮತ್ತು ಇಕಾರ ಇಲ್ಲವೇ ಎಕಾರವಿದೆಯಾದರೆ ಅದರ ಅನಂತರ ಯಕಾರ ಬರುತ್ತದೆ. ತಿಳಿಸುವ ರೂಪ ಸಂಬಂಧಿಸುವ ರೂಪ ಗೆಲ್ಲು
ಓಡುವ ಗೆಲ್ಲುವ ಕುಡಿಯುವ ಕರೆಯುವ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡದಲ್ಲಿ ಇಲ್ಲ ಎಂಬ ಕ್ರಿಯಾರೂಪವನ್ನು ಬಳಸಲಾಗುತ್ತದೆ. ಇದನ್ನು ಕ್ರಿಯಾಪದದ ಜೋಡಣೆಯ ರೂಪದೊಂದಿಗೆ (ಮೊದಲಿನ ಸಮಯವನ್ನು ಸೂಚಿಸುವ ರೂಪದೊಂದಿಗೆ) ಬಳಸಿದಲ್ಲಿ ಅದು ಆ ಘಟನೆ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದೆ ನಡೆದಿರ ಲಿಲ್ಲವೆಂಬುದಾಗಿ ಅದನ್ನು ಅಲ್ಲಗಳೆಯುತ್ತದೆ, ಮತ್ತು ಕ್ರಿಯಾಪದದ ನಾಮಪದ ರೂಪಕ್ಕೆ ಸೇರಿಸಿದಲ್ಲಿ ಮುಂದಿನ ಸಮಯದಲ್ಲಿ ಆ ಘಟನೆ ನಡೆಯುವುದಿಲ್ಲ ಎಂಬುದಾಗಿ ಅದನ್ನು ಅಲ್ಲಗಳೆಯುತ್ತದೆ (ಹೆಚ್ಚಿನ ವಿವರಗಳಿಗೆ 9.3.3 ನೋಡಿ).
ವಾಕ್ಯಗಳನ್ನು ಪದ ಇಲ್ಲವೇ ಪದಕಂತೆಗಳೊಂದಿಗೆ ಸಂಬಂಧಿಸುವ ಅ ಪ್ರತ್ಯಯದೊಂದಿಗೆ ಬಳಸಿದಾಗ ಮಾತ್ರ, ಇಂತಹ ಅಲ್ಲಗಳೆಯುವ ವಾಕ್ಯಗಳಲ್ಲಿ ಸಮಯದ ವ್ಯತ್ಯಾಸ ಇಲ್ಲವಾಗುತ್ತದೆ. ಮೇಲೆ ವಿವರಿಸಿದ ಎರಡು ರೀತಿಯ ಅಲ್ಲಗಳೆಯುವ ವಾಕ್ಯಗಳೂ ಒಂದೇ ರೀತಿಯ ಸಂಬಂಧಿಸುವ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
(28ಕ) ಹುಡುಗ ಶಾಲೆಗೆ ಹೋಗಲಿಲ್ಲ. (28ಖ) ಶಾಲೆಗೆ ಹೋಗದ ಹುಡುಗ ಪೆಟ್ಟು ತಿಂದಿದ್ದಾನೆ. (29ಕ) ಹುಡುಗ ಶಾಲೆಗೆ ಹೋಗುವುದಿಲ್ಲ. (29ಖ) ಶಾಲೆಗೆ ಹೋಗದ ಹುಡುಗ ಪೆಟ್ಟು ತಿನ್ನುತ್ತಾನೆ. (28ಖ)ದಲ್ಲಿ ಹೋಗಲಿಲ್ಲ ಎಂಬ ಕ್ರಿಯಾರೂಪಕ್ಕೆ ಬದಲಾಗಿ ಹೋಗದ ಎಂಬ ಸಂಬಂಧಿಸುವ ರೂಪಬಂದಿದೆ, ಮತ್ತು (29ಖ)ದಲ್ಲಿ ಹೋಗುವುದಿಲ್ಲ ಎಂಬ ಕ್ರಿಯಾರೂಪಕ್ಕೆ ಬದಲಾಗಿಯೂ ಅದೇ ಹೋಗದ ರೂಪವೇ ಸಂಬಂಧಿಸುವ ರೂಪವಾಗಿ ಬಳಕೆಯಾಗಿದೆ. ಈ ರೀತಿ ಕ್ರಿಯಾಪದಗಳ ಅಲ್ಲಗಳೆಯುವ ರೂಪಗಳನ್ನು ಸಂಬಂಧಿಸುವ ರೂಪಗಳನ್ನಾಗಿ ಬದಲಾಯಿಸಿದಾಗ ಅವು ಹಿಂದಿನ ಮತ್ತು ಮುಂದಿನ ಸಮಯ ಗಳ ನಡುವಿರುವ ವ್ಯತ್ಯಾಸವನ್ನು ಸೂಚಿಸಲಾರವು ಎಂಬುದನ್ನು ಕೆಳಗಿನ ವಾಕ್ಯ ಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. (30ಕ) ಶಾಲೆಯಲ್ಲಿ ಊಟ ಮಾಡದ ಹುಡುಗರಿಗೆ ಹೊಟ್ಟೆನೋವಾಗಿರ (30ಖ) ಶಾಲೆಯಲ್ಲಿ ಊಟ ಮಾಡದ ಹುಡುಗರಿಗೆ ಐದು ಕೆಜಿ ಅಕ್ಕಿ ಕೊಡುತ್ತಾರೆ. (30ಕ)ದಲ್ಲಿ ಬಂದಿರುವ ಮಾಡದ ಎಂಬ ಸಂಬಂಧಿಸುವ ರೂಪ ಸ್ಪಷ್ಟ ವಾಗಿಯೂ ಮಾಡಲಿಲ್ಲ ಎಂಬುದರಿಂದ ಸಿದ್ಧವಾಗಿದೆ. ಆದರೆ (30ಖ)ದಲ್ಲಿ ಬಂದಿರುವ ಅದೇ ಮಾಡದ ಎಂಬ ರೂಪ ಮಾಡುವುದಿಲ್ಲ ಎಂಬುದರಿಂದಲೂ (ಯಾವ ಹುಡುಗರು ಶಾಲೆಯಲ್ಲಿ ಊಟ ಮಾಡುವುದಿಲ್ಲವೋ ಅವರಿಗೆ) ಸಿದ್ಧವಾಗಿರಲು ಸಾಧ್ಯ ಎಂಬುದನ್ನು ಗಮನಿಸಬಹುದು. ಘಟನೆಗಳನ್ನು ಅಲ್ಲಗಳೆಯುವುದಕ್ಕಾಗಿ ಬರುವ ಈ ಸಂಬಂಧಿಸುವ ಕ್ರಿಯಾರೂಪಗಳಲ್ಲಿ ಕ್ರಿಯಾಪದದೊಂದಿಗೆ ಅದ್ ಪ್ರತ್ಯಯ ಬರುತ್ತದೆ. ಈ ಪ್ರತ್ಯಯಕ್ಕೇನೇ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ, ಅದರೊಂದಿಗೆ ಇಲ್ಲ ಎಂಬ ಪದವನ್ನು ಬಳಸುವ ಅವಶ್ಯಕತೆಯಿಲ್ಲ. ಅದ್ ಪ್ರತ್ಯಯದೆದುರು ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ, ಮತ್ತು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳುತ್ತದೆ. ಮಾಡು
ಮಾಡದ ನಿಲ್ಲು ಮುಗಿ
ನಿಲ್ಲದ ಮುಗಿಯದ ಬರೆಯದ ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಮಾತ್ರ ಈ ಪ್ರತ್ಯಯದೆದುರು ಬಾರ್ ಮತ್ತು ತಾರ್ ಎಂಬ ರೂಪದಲ್ಲಿ ಬರುತ್ತವೆ. (31ಕ) ಹುಡುಗಿ ಮದುವೆಗೆ ಬರಲಿಲ್ಲ. (31ಖ) ಮದುವೆಗೆ ಬಾರದ ಹುಡುಗಿ
5.5.5 ಷರತ್ತನ್ನು ಸೂಚಿಸುವ ರೂಪ
ಒಂದು ವಾಕ್ಯ ತಿಳಿಸುವ ಘಟನೆ ಇನ್ನೊಂದು ವಾಕ್ಯ ತಿಳಿಸುವ ಘಟನೆಗೆ ಷರತ್ತು ಎಂಬುದನ್ನು ಸೂಚಿಸುವುದಕ್ಕಾಗಿ ಮೊದಲನೆಯ ವಾಕ್ಯದ ಮುಖ್ಯ ಕ್ರಿಯಾಪದಕ್ಕೆ ಅರೆ ಪ್ರತ್ಯಯವನ್ನು ಸೇರಿಸಲಾಗುತ್ತದೆ (8.3.3 ನೋಡಿ). ಆದರೆ ಈ ಪ್ರತ್ಯಯ ವನ್ನು ಕ್ರಿಯಾಪದದ ಹಿಂದಿನ ಸಮಯದ ರೂಪಗಳಿಗೆ ಮಾತ್ರವೇ ಸೇರಿಸಿ ಹೇಳಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು. (32ಕ) ರಾಜು ಬಂದರೆ ನನಗೆ ಮನೆಗೆ ಹೋಗಬಹುದು. (32ಖ) ಜಾಸ್ತಿ ಬಿಸ್ಕಿಟ್ ತಿಂದರೆ ಹೊಟ್ಟೆನೋವಾದೀತು. (32ಗ) ನೀವು ಇನ್ನೊಮ್ಮೆ ಈ ಕಡೆ ಬಂದರೆ ನಮ್ಮಲ್ಲಿಗೆ ಬನ್ನಿ. (32ಘ) ಆಕೆ ತನಗೆ ಏನಾದರೂ ಸಿಕ್ಕಿದರೆ ರಾಜುವಿಗೂ ಕೊಡುತ್ತಾಳೆ. (32ಕ)ದಲ್ಲಿ ನಾನು ಮನೆಗೆ ಹೋಗುವುದು ಎಂಬ ಎರಡನೆಯ ಘಟನೆಗೆ ರಾಜು ಬರುವುದು ಎಂಬ ಮೊದಲನೆಯ ಘಟನೆ ಷರತ್ತಾಗಿದೆ; ಇದನ್ನು ಸೂಚಿಸುವುದಕ್ಕಾಗಿ ಮೊದಲನೆಯ ಬರು ಕ್ರಿಯಾಪದಕ್ಕೆ ಅರೆ ಪ್ರತ್ಯಯವನ್ನು ಸೇರಿಸಿ ಅದನ್ನೊಂದು ಜೋಡಿಸುವ ಕ್ರಿಯಾರೂಪವನ್ನಾಗಿ ಮಾಡಲಾಗಿದೆ.
ಇಂತಹ ಷರತ್ತುಗಳೆಲ್ಲ ಸಾಮಾನ್ಯವಾಗಿ ಮುಂದಿನ ಸಮಯದಲ್ಲಿ ನಡೆಯ ಬಹುದಾದ ಘಟನೆಗೆ ಸಂಬಂಧಿಸಿದವುಗಳು. ಹಿಂದಿನ ಸಮಯದಲ್ಲಿ ನಡೆಯ ಬಹುದಾಗಿದ್ದ ಘಟನೆಗೆ ಸಂಬಂಧಿಸಿದಂತೆ ಒಂದು ಷರತ್ತನ್ನು ಹೇಳಬೇಕಿದ್ದಲ್ಲಿ ಅದಕ್ಕಾಗಿ ಎರಡೂ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳೊಂದಿಗೆ ಇರು ಕ್ರಿಯಾ ಪದದ ರೂಪಗಳನ್ನು ಬಳಸಬೇಕಾಗುತ್ತದೆ. (33ಕ) ನೀನು ಕರೆದಿದ್ದರೆ ನಾನು ಬರುತ್ತಿದ್ದೆ. (33ಖ) ಪರೀಕ್ಷೆಗೆ ಕೂತಿದ್ದರೆ ಪಾಸಾಗಬಹುದಿತ್ತು. (33ಗ) ಸ್ಕೂಟರನ್ನು ಮೆಲ್ಲಗೆ ಓಡಿಸಿದ್ದರೆ ಅಪಘಾತವಾಗುತ್ತಿರಲಿಲ್ಲ. (33ಕ)ದಲ್ಲಿ ಷರತ್ತನ್ನು ಸೂಚಿಸುವ ಮೊದಲನೆಯ ಕ್ರಿಯಾಪದದೊಂದಿಗೆ ಇದ್ದರೆ ಎಂಬ ಕ್ರಿಯಾರೂಪವನ್ನೂ ಮತ್ತು ಷರತ್ತಿಗೆ ಹೊಂದಿಕೊಂಡಂತೆ ನಡೆಯುವ ಘಟನೆಯನ್ನು ಸೂಚಿಸುವ ಎರಡನೆಯ ಕ್ರಿಯಾಪದದೊಂದಿಗೆ ಇದ್ದೆ ಎಂಬ ಕ್ರಿಯಾರೂಪವನ್ನೂ ಬಳಸಲಾಗಿದೆ. ಮೊದಲನೆಯ ಕ್ರಿಯಾರೂಪದಲ್ಲಿ ಅರೆ ಪ್ರತ್ಯಯವನ್ನು ಈ ಇರು ಕ್ರಿಯಾಪದದ ಹಿಂದಿನ ಸಮಯದ ರೂಪಕ್ಕೆ ಸೇರಿಸ ಲಾಗಿದೆ. (33ಖ-ಗ)ಗಳಲ್ಲೂ ಹೀಗೆಯೇ.
5.5.6 ಕ್ರಿಯಾಪದದ ನಾಮಪದರೂಪಗಳು
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಘಟಕವನ್ನಾಗಿ ಮಾಡಿ ಹೇಳಲು ಮೂರು ವಿಧಾನಗಳಿವೆಯೆಂಬುದನ್ನು ನಾವು ಮುಂದೆ ಏಳನೆಯ ಅಧ್ಯಾಯದಲ್ಲಿ (7.3.2ರಲ್ಲಿ) ನೋಡಲಿರುವೆವು. ಇವುಗಳಲ್ಲಿ ಒಂದು ವಿಧಾನದ ಬಳಕೆಯಲ್ಲಿ (ಎಂಬುದು ಪದದ ಬಳಕೆಯಲ್ಲಿ) ವಾಕ್ಯದ ಕ್ರಿಯಾಪದದಲ್ಲಿ ಯಾವ ಬದಲಾವಣೆಯೂ ನಡೆಯದೆ ಅದು ಹಾಗೆಯೇ ಉಳಿಯುತ್ತದೆ. ಆದರೆ, ಉಳಿದ ಎರಡು ವಿಧಾನಗಳ ಬಳಕೆಯಲ್ಲಿ (ಇಕೆ ಇಲ್ಲವೇ ಉದು ಪ್ರತ್ಯಯಗಳ ಬಳಕೆ ಯಲ್ಲಿ) ಘಟಕವಾಗಿ ಬರುವ ವಾಕ್ಯದ ಕ್ರಿಯಾಪದದಲ್ಲೂ ಕೆಲವು ಬದಲಾ ವಣೆಗಳು ಕಾಣಿಸಿಕೊಳ್ಳುತ್ತವೆ. ಇಕೆ ಪ್ರತ್ಯಯವನ್ನು ಸೇರಿಸಿದಾಗ ಕ್ರಿಯಾಪದದೊಂದಿಗೆ ಬರುವ ಸಮಯ ವನ್ನು ಸೂಚಿಸುವ ಪ್ರತ್ಯಯ ಮತ್ತು ಘಟಕವನ್ನು ಸೂಚಿಸುವ ಪ್ರತ್ಯಯ - ಇವೆರಡೂ ಬಿದ್ದು ಹೋಗುತ್ತವೆ. ಆದರೆ ಉದು ಪ್ರತ್ಯಯವನ್ನು ಸೇರಿಸಿದಾಗ ಘಟಕವನ್ನು ಸೂಚಿಸುವ ಪ್ರತ್ಯಯ ಬಿದ್ದು ಹೋಗುವುದಾದರೂ ಸಮಯವನ್ನು ಸೂಚಿಸುವ ಪ್ರತ್ಯಯ ಹಾಗೆಯೇ ಉಳಿದುಕೊಳ್ಳುತ್ತದೆ. ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (34ಕ) ಅವನು ಕುಣಿಯುವುದು ಚನ್ನಾಗಿದೆ. (34ಖ) ಅವನು ಕುಣಿದುದು ಚನ್ನಾಗಿತ್ತು. (34ಗ) ಅವನ ಕುಣಿಯುವಿಕೆ ಚನ್ನಾಗಿದೆ/ಚನ್ನಾಗಿತ್ತು. ಉದು ಪ್ರತ್ಯಯದೊಂದಿಗೆ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಉವ್ ಪ್ರತ್ಯಯವನ್ನೂ ಮತ್ತು ಹಿಂದಿನ ಸಮಯವನ್ನು ಸೂಚಿಸುವುದಕ್ಕಾಗಿ ದ್ ಪ್ರತ್ಯಯವನ್ನೂ (ಅದರ ಡ್, ಟ್, ಕ್, ಇದ್ ಮೊದಲಾದ ಬೇರೆ ಬೇರೆ ರೂಪಗಳಲ್ಲಿ) ಬಳಸಲು ಸಾಧ್ಯ ಎಂಬುದನ್ನು (34ಕ-ಖ)ದಲ್ಲಿ ಕಾಣಬಹುದು.
ಆದರೆ ಇಕೆ ಪ್ರತ್ಯಯದೊಂದಿಗೆ ಈ ಎರಡು ಸಮಯವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಯಾವುದನ್ನೂ ಬಳಸಲು ಸಾಧ್ಯವಾಗದೆಂಬುದನ್ನು ಹಿಂದಿನ ಸಮಯದ ಮತ್ತು ಮುಂದಿನ ಸಮಯದ ಘಟನೆಗಳೆರಡನ್ನೂ ಸೂಚಿಸಬಲ್ಲ ಕುಣಿಯುವಿಕೆ ಪದದ ಬಳಕೆಯಲ್ಲಿ (34ಗದಲ್ಲಿ) ಕಾಣಬಹುದು. ಇಲ್ಲಿ ಇಕೆ ಪ್ರತ್ಯಯವನ್ನು ನೇರವಾಗಿ ಕ್ರಿಯಾಪದಕ್ಕೇನೇ ಸೇರಿಸಲಾಗಿದೆ. ಉದು ಪ್ರತ್ಯಯದೊಂದಿಗೆ ಘಟನೆಯನ್ನು ಅಲ್ಲಗಳೆಯುವುದಕ್ಕಾಗಿ ಅದ್ ಪ್ರತ್ಯಯವನ್ನು ಬಳಸಲು ಸಾಧ್ಯವಿದೆ. ಆದರೆ ಆ ಪ್ರತ್ಯಯಕ್ಕೆ ಇಲ್ಲಿ ಹಿಂದಿನ ಘಟನೆಯನ್ನು ಅಲ್ಲಗಳೆಯುವ ಅರ್ಥವಿದೆಯಲ್ಲದೆ ಮುಂದಿನ ಘಟನೆಯನ್ನು ಅಲ್ಲಗಳೆಯುವ ಅರ್ಥವಿಲ್ಲ. ಈ ಎರಡನೆಯ ಅರ್ಥವನ್ನು ಸೂಚಿಸುವುದಕ್ಕಾಗಿ ವಾಕ್ಯದ ಮುಖ್ಯ ಕ್ರಿಯಾಪದದೊಂದಿಗೆ ಇರು ಕ್ರಿಯಾಪದದ ರೂಪಗಳನ್ನು ಬಳಸುವ ಅವಶ್ಯಕತೆಯಿದೆ.
(35ಕ) ಅವಳು ನಿನ್ನೆ ಹಾಡದುದನ್ನು ಯಾರೂ ಗಮನಿಸಿರಲಿಲ್ಲ. (35ಖ) ಅವಳು ನಾಳೆ ಹಾಡದಿರುವುದಕ್ಕೆ ನೀವೇ ಕಾರಣ. (35ಕ)ದಲ್ಲಿ ಅಲ್ಲಗಳೆಯುವ ಅದ್ ಪ್ರತ್ಯಯ ಉದು ಪ್ರತ್ಯಯದೊಂದಿಗೆ ಹಾಡದುದನ್ನು ಎಂಬ ನಾಮಪದರೂಪದಲ್ಲಿ ಬಂದಿರುವುದನ್ನು ಕಾಣಬಹುದು. ಆದರೆ ಈ ರೂಪಕ್ಕೆ ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುವ ಅರ್ಥ ಮಾತ್ರವೇ ಇದೆ. ಮುಂದಿನ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ (35ಖ) ದಲ್ಲಿ ಅದ್ ಪ್ರತ್ಯಯದೊಂದಿಗೆ ಇರು ಕ್ರಿಯಾಪದದ ಇರುವುದು ಎಂಬ ರೂಪವನ್ನು (ಹಾಡದಿರುವುದಕ್ಕೆ ಎಂಬುದರಲ್ಲಿ) ಬಳಸಬೇಕಾಗಿದೆ.
5.6 ಕೂಡುಪದಗಳು
ಒಂದು ವಾಕ್ಯದ ಕ್ರಿಯಾಪದವನ್ನು ಅದರ ‘ಜೋಡಿಸುವ’ ರೂಪಕ್ಕೆ ಬದಲಾ ಯಿಸುವುದರ ಮೂಲಕ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳಲು ಸಾಧ್ಯ ಎಂಬುದನ್ನು ನಾವು ಮೇಲೆ (5.4.1-3)ರಲ್ಲಿ ನೋಡಿರುವೆವು. ಇಂತಹ ವಾಕ್ಯಗಳಲ್ಲಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಜೋಡಿಸುವ ಕ್ರಿಯಾರೂಪಗಳು ಬಳಕೆಯಾಗುತ್ತವೆ. (36ಕ) ರಾಜು ಮಂಗಳೂರಿಗೆ ಹೋಗಿ ಒಂದು ಪುಸ್ತಕ ತಂದಿದ್ದ. (36ಖ) ರಾಜು ಒಂದು ಪುಸ್ತಕ ತರಲು ಮಂಗಳೂರಿಗೆ ಹೋಗಿದ್ದ. (36ಗ) ರಾಜು ಮಂಗಳೂರಿಗೆ ಹೋಗುತ್ತಾ ಒಂದು ಪುಸ್ತಕ ಮುಗಿಸಿದ. ಮೇಲಿನ ಮೂರು ವಾಕ್ಯಗಳಲ್ಲೂ ಎರಡೆರಡು ವಾಕ್ಯಗಳನ್ನು ಜೋಡಿಸಲಾಗಿದ್ದು, ಅದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಹೋಗಿ, ಹೋಗಲು ಮತ್ತು ಹೋಗುತ್ತಾ ಎಂಬ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಕನ್ನಡದಲ್ಲಿ ಈ ಜೋಡಿಸುವ ವಿಧಾನದ ಮೂಲಕ ಎರಡು ವಾಕ್ಯಗಳನ್ನು ಮಾತ್ರವಲ್ಲದೆ ಎರಡು ಕ್ರಿಯಾಪದಗಳನ್ನೂ ಒಟ್ಟಿಗೆ ಜೋಡಿಸಿ ಹೇಳಲು ಸಾಧ್ಯವಿದೆ, ಮತ್ತು ಇದರ ಮೂಲಕ ‘ಕೂಡುಪದ’ಗಳೆಂಬ ಕೆಲವು ವಿಶಿಷ್ಟವಾದ ಕ್ರಿಯಾರೂಪಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (37ಕ) ಕಪ್ಪುನಾಯಿ ಆ ಹುಡುಗನನ್ನು ಕಚ್ಚಿಬಿಟ್ಟಿತು. (37ಖ) ಪ್ರಕಾಶ ಚೆನ್ನೈಗೆ ಹೋಗಿದ್ದಾನೆ. (37ಗ) ಅವರು ಮಗಳ ಮನೆಗೆ ಹೋಗುತ್ತಿದ್ದಾರೆ. (37ಘ) ಇವತ್ತು ಮಳೆ ಬರಲಾರದು. (37ಕ)ದಲ್ಲಿ ಕಚ್ಚು ಕ್ರಿಯಾಪದದ ಜೋಡಿಸುವ ರೂಪದೊಂದಿಗೆ ಬಿಡು ಕ್ರಿಯಾಪದವನ್ನು ಸೇರಿಸಿ ಹೇಳಲಾಗಿದೆ. ಆದರೆ ಇಲ್ಲಿ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಮಾತ್ರ ಸ್ವಲ್ಪ ಕಷ್ಟ. ಯಾಕೆಂದರೆ, (37ಕ) ವಾಕ್ಯವನ್ನು ಕೆಳಗಿನ ಎರಡು ವಾಕ್ಯಗಳ ಜೋಡಣೆಯಿಂದ ಸಾಧಿಸಲು ಸಾಧ್ಯವಾಗದು. (38ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿತು. (38ಖ) ಕಪ್ಪು ನಾಯಿ ಆ ಹುಡುಗನನ್ನು ಬಿಟ್ಟಿತು. ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಇತರ (37ಖ-ಘ) ವಾಕ್ಯಗಳಲ್ಲೂ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಕಷ್ಟ. ಈ ವಾಕ್ಯಗಳೆಲ್ಲ ಚಾರಿತ್ರಿಕವಾಗಿ ಜೋಡಿಸಿರುವ ವಾಕ್ಯಗಳೇ. ಆದರೆ ರೂಢಿಯಲ್ಲಿ ಈ ಜೋಡಣೆಗಳಿಗೆ ಕೆಲವು ಹೆಚ್ಚಿನ ಅರ್ಥಗಳು ಬಂದಿದ್ದು, ಅದರಿಂದಾಗಿ ಈ ವಾಕ್ಯಗಳ ಎರಡನೆಯ ಕ್ರಿಯಾಪದಗಳು ಅವುಗಳ ಮೂಲಾರ್ಥ ವನ್ನು ಬಹಳ ಮಟ್ಟಿಗೆ ಕಳೆದುಕೊಂಡಿವೆ. ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದನ್ನೇನಾದರೂ ಹೇಳುವ ಅರ್ಥ ಮಾತ್ರವೇ ಅವಕ್ಕಿದ್ದು, ಅದಕ್ಕಿಂತ ಭಿನ್ನವಾದ ಬೇರೊಂದು ಘಟನೆಯನ್ನು ಸೂಚಿಸುವ ಅರ್ಥ ಅವಕ್ಕಿಲ್ಲ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಎರಡು ವಾಕ್ಯಗಳು ಜೋಡಿಕೊಂಡಿವೆ ಯೆಂದು ಹೇಳುವ ಬದಲು, ಎರಡು ಕ್ರಿಯಾಪದಗಳನ್ನು ಒಟ್ಟಿಗೆ ಸೇರಿಸಿ ತಯಾರಿಸಲಾಗಿರುವ ಕೆಲವು ವಿಶಿಷ್ಟವಾದ ಕ್ರಿಯಾಪದಗಳು ಬಂದಿವೆಯೆಂದು ತೋರುತ್ತದೆ. ಉದಾಹರಣೆಗಾಗಿ, ಮೇಲೆ ಹೇಳುವುದೇ ಒಳ್ಳೆಯದೆಂದು ಕೊಟ್ಟಿರುವ (36ಕ-ಘ) ವಾಕ್ಯಗಳಲ್ಲಿ ಕಚ್ಚಿಬಿಡು, ಹೋಗಿರು, ಹೋಗುತ್ತಿರು ಮತ್ತು ಬರಲಾರ್- ಎಂಬ ವಿಶಿಷ್ಟವಾದ ಕ್ರಿಯಾಪದಗಳು ಬಂದಿವೆಯೆಂದು ಹೇಳಬಹುದು. ಕೆಲವು ವಿಷಯಗಳಲ್ಲಿ ಈ ವಿಶಿಷ್ಟವಾದ ಕ್ರಿಯಾಪದಗಳು ನಾಮಪದಗಳ ಬಳಕೆಯಲ್ಲಿ ಕಾಣಿಸುವ ‘ಜೋಡುಪದ’ಗಳನ್ನು ಹೋಲುತ್ತವೆಯೆಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ, ಜೋಡುಪದಗಳ ಹಾಗೆ ಇವುಗಳ ಅರ್ಥ ವನ್ನು ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ನೇರವಾಗಿ ಪಡೆಯಲು ಸಾಧ್ಯವಾಗದು. ಆದರೆ ಮೇಲೆ 4.2.1ರಲ್ಲಿ ಸೂಚಿಸಿದ ಹಾಗೆ ನಾಮಪದಗಳ ಬಳಕೆಯಲ್ಲಿ ಜೋಡುಪದಗಳನ್ನು ರಚಿಸಿಕೊಳ್ಳುವ ವಿಧಾನ ಜಾರಿಗೆ ಬರಲು ಅವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ಬೇರೆ ಬೇರೆ ಕೆಲಸ ಗಳಲ್ಲಿ ತೊಡಗಿಸಬೇಕಾಗುತ್ತದೆಯೆಂಬುದೇ ಮುಖ್ಯ ಕಾರಣ. ಆದರೆ, ಕ್ರಿಯಾಪದ ಗಳ ಬಳಕೆಯಲ್ಲಿ ಈ ಎರಡು ರೀತಿಯ ಕೆಲಸಗಳು ಬರುವುದಿಲ್ಲ. ಅವುಗಳ ಬಳಕೆಯಲ್ಲಿ ಕಾಣಿಸುವ ಮೇಲೆ ವಿವರಿಸಿದಂತಹ ವಿಶಿಷ್ಟ ರೂಪಗಳಿಗೆ ಬೇರೆಯೇ ಕಾರಣಗಳಿದ್ದು, ಅವುಗಳಿಂದಾಗಿ ಈ ರೂಪಗಳು ಹಲವು ವಿಷಯಗಳಲ್ಲಿ
ಜೋಡುಪದಗಳಿಗಿಂತ ಭಿನ್ನವಾಗಿವೆ. ಉದಾಹರಣೆಗಾಗಿ, ಈ ವಿಶಿಷ್ಟವಾದ ಕ್ರಿಯಾರೂಪಗಳಲ್ಲಿ ಬರುವ ಮೊದಲನೆಯ ಕ್ರಿಯಾಪದದ ಅರ್ಥದಲ್ಲಿ ಯಾವ ಬದಲಾವಣೆಯೂ ಆಗಿರುವು ದಿಲ್ಲ. ಅದು ಇತರ ಬಳಕೆಗಳಲ್ಲಿ ಕಾಣಿಸುವ ಹಾಗೆ ಒಂದು ಘಟನೆಯನ್ನು ಸೂಚಿಸುತ್ತಿರುತ್ತದೆ. ಎರಡನೆಯ ಕ್ರಿಯಾಪದ ಮಾತ್ರ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದೇನನ್ನಾದರೂ ತಿಳಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಜೋಡುಪದದ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಅಂಗವಾಗಿ ಬರುವ ಎರಡು ನಾಮಪದಗಳೂ ತಮ್ಮ ಮೂಲಾರ್ಥವನ್ನು ಕಳೆದುಕೊಳ್ಳ ಬಲ್ಲುವು (4.3.1 ನೋಡಿ). ಇದಲ್ಲದೆ ಜೋಡುಪದಗಳನ್ನು ತಯಾರಿಸಿ ಬಳಸುವ ಕೆಲಸ ಭಾಷೆಯನ್ನು ಬಳಸುವ ಜನರ ಹತೋಟಿಯಲ್ಲಿರುತ್ತದೆ. ಇದಕ್ಕೆ ಬದಲು, ಮೇಲೆ ವಿವರಿಸಿದಂತಹ ಕ್ರಿಯಾರೂಪಗಳನ್ನು ಯಾರೂ ಪ್ರಜ್ಞಾ ಪೂವ್ರಕವಾಗಿ ತಯಾರಿಸಿ ಬಳಸುವ ಹಾಗೆ ಕಾಣಿಸುವುದಿಲ್ಲ. ಜೋಡುಪದಗಳಿಗೂ ಮತ್ತು ಈ ವಿಶಿಷ್ಟವಾದ ಕ್ರಿಯಾರೂಪಗಳಿಗೂ ನಡುವೆ ಇಂತಹ ಹಲವು ವ್ಯತ್ಯಾಸಗಳಿರುವ ಕಾರಣ, ಈ ಕ್ರಿಯಾರೂಪಗಳಿಗೆ ಬೇರೆಯೇ ಒಂದು ಹೆಸರನ್ನು ಕೊಡುವ ಅವಶ್ಯಕತೆಯಿದೆ. ಇದಕ್ಕಾಗಿ ಇವನ್ನು ಜೋಡುಪದ ಗಳೆಂದು ಕರೆಯುವ ಬದಲು ‘ಕೂಡುಪದ’ ಎಂದು ಕರೆಯಬಹುದು (ಜಾಸ್ತಿ ವಿವರಗಳಿಗೆ ಭಟ್ 2002:179 ನೋಡಿ).
5.6.1 ಸಮಯದ ಸೂಚನೆ
ಒಂದು ಘಟನೆಯ ಸಮಯವನ್ನು ಮೂರು ಬೇರೆ ಬೇರೆ ದೃಷ್ಟಿಕೋನಗಳ ಮೂಲಕ ಸೂಚಿಸಲು ಸಾಧ್ಯವಿದೆ ಎಂಬುದನ್ನು ನಾವು ಮುಂದೆ ಹನ್ನೊಂದನೆಂಯ ಅಧ್ಯಾಯದಲ್ಲಿ ನೋಡಲಿರುವೆವು (11.5). ಈ ಮೂರು ದೃಷ್ಟಿಕೋನಗಳನ್ನು ಸಮಯ ಸಂಬಂಧ, ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆ ಎಂಬುದಾಗಿ ಹೆಸರಿಸಬಹುದು. ಹೆಚ್ಚಿನ ಭಾಷೆಗಳೂ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಜಾಸ್ತಿ ಪ್ರಾಮುಖ್ಯತೆಯನ್ನು ಕೊಡುತ್ತವೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಘಟನೆಯ ಸಮಯಕ್ಕೂ ಮತ್ತು ಅದನ್ನು ವರದಿಮಾಡುತ್ತಿರುವ ಆಡುಗನ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಅದರ ಕ್ರಿಯಾರೂಪಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ಕಾರಣಕ್ಕಾಗಿ, ಕನ್ನಡದ ಕ್ರಿಯಾರೂಪಗಳಲ್ಲಿ ಸಮಯ ಪ್ರತ್ಯಯಗಳನ್ನು ಪ್ರಾಮುಖ್ಯವಾಗಿ ಈ ಸಮಯ ಸಂಬಂಧವನ್ನು ಸೂಚಿಸುವುದಕ್ಕಾಗಿಯೇ ಬಳಸಲಾಗುತ್ತದೆ. ಘಟನೆಗಳ ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆಗಳನ್ನು ಕನ್ನಡದ ಕ್ರಿಯಾರೂಪಗಳ ಮೂಲಕ ನೇರವಾಗಿ ಸೂಚಿಸಲು ಸಾಧ್ಯವಾಗದು. ಆದರೆ ಮೇಲೆ ವಿವರಿಸಿದಂತಹ ಕೂಡುಪದಗಳೆಂಬ ವಿಶಿಷ್ಟವಾದ ರಚನೆಗಳ ಮೂಲಕ ಕನ್ನಡದಲ್ಲಿ ಘಟನೆಯ ಸಮಯವನ್ನು ಈ ಎರಡು ದೃಷ್ಟಿಕೋನಗಳ ಮೂಲಕ ವರದಿ ಮಾಡಲು ಸಾಧ್ಯವಿದೆ. ಉದಾಹರಣೆಗಾಗಿ, ಕ್ರಿಯಾಪದಗಳ ಜೋಡಿಸುವ ರೂಪಗಳೊಂದಿಗೆ ಬಿಡು, ಆಡು, ಬಹುದು, ಇರು ಮೊದಲಾದ ಕ್ರಿಯಾಪದಗಳ ಪೂರ್ಣರೂಪಗಳನ್ನು ಸೇರಿಸಿ ರಚಿಸಿದ ಕೂಡುಪದಗಳ ಮೂಲಕ ಘಟನೆಯ ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆಗಳನ್ನು ಸೂಚಿಸಲು ಸಾಧ್ಯವಿದೆ.
(39ಕ) ಹುಡುಗ ಮಂಚದಿಂದ ಕೆಳಗೆ ಬಿದ್ದ. (39ಖ) ಹುಡುಗ ಮಂಚದಿಂದ ಕೆಳಗೆ ಬಿದ್ದುಬಿಟ್ಟ. (39ಗ) ಹುಡುಗ ಮಂಚದಿಂದ ಕೆಳಗೆ ಬೀಳಬಹುದು.
(39ಖ)ದಲ್ಲಿ ಬೀಳು ಕ್ರಿಯಾಪದದ ಸಾಮಾನ್ಯ ರೂಪಕ್ಕೆ ಬದಲಾಗಿ ಅದನ್ನು ಬಿಡು ಕ್ರಿಯಾಪದದೊಂದಿಗೆ ಸೇರಿಸಿ ತಯಾರಿಸಿದ ಬಿದ್ದುಬಿಡು ಎಂಬ ಕೂಡು ಪದವನ್ನು ಬಳಸಲಾಗಿದೆ. ಬೀಳು ಕ್ರಿಯಾಪದದ ಈ ಎರಡು ಬಳಕೆಗಳ ನಡುವೆ ಘಟನೆಯ ಆಂತರಿಕ ಕಾಲವ್ಯವಸ್ಥೆಯ ಮಟ್ಟಿಗೆ ವ್ಯತ್ಯಾಸವಿದೆಯೆಂದು ಹೇಳ ಬಹುದು. ಬಿದ್ದುಬಿಟ್ಟ ಎಂಬ ಕೂಡುಪದಕ್ಕೆ ಬೀಳುವ ಘಟನೆ ನಡೆದು ಮುಗಿಯಿತು ಎಂಬುದಾಗಿ ಪೂರ್ಣಾರ್ಥವನ್ನು ಕೊಡುವ ಹೆಚ್ಚಿನ ಅರ್ಥವಿದೆ. ಇದೇ ರೀತಿಯಲ್ಲಿ (39ಗ)ದಲ್ಲಿ ಬಂದಿರುವ ಬೀಳಬಹುದು ಎಂಬ ಕೂಡುಪದಕ್ಕೆ ಬೀಳುತ್ತಾನೆ ಎಂಬ ಸಾಮಾನ್ಯ ರೂಪಕ್ಕಿಂತ ಭಿನ್ನವಾದ ಅರ್ಥವಿದೆ. ಇದು ಘಟನೆಯ ಯಥಾರ್ಥತೆಗೆ ಸಂಬಂಧಿಸಿದುದು. ಬೀಳುತ್ತಾನೆ ಎಂಬುದರ ಬಳಕೆಯಲ್ಲಿ ಘಟನೆ ನಡೆಯುವ ವಿಷಯದಲ್ಲಿ ನಿಶ್ಚಿತತೆಯಿದೆ, ಆದರೆ ಬೀಳಬಹುದು ಎಂಬುದರ ಬಳಕೆಯಲ್ಲಿ ಅಂತಹ ನಿಶ್ಚಿತತೆಯಿಲ್ಲ.
ಸಾಮಾನ್ಯವಾಗಿ ಇಂತಹ ಸಮಯದ ಜೋಡಿಸುವ ರೂಪವನ್ನು ಬಳಸಿದೆಯಾದಲ್ಲಿ ಅವು ಘಟನೆಯ ಆಂತರಿಕ ಕಾಲ ವ್ಯವಸ್ಥೆಯನ್ನೂ ಮತ್ತು ಮುಂದಿನ ಸಮಯದ ಜೋಡಿಸುವ ರೂಪವನ್ನು ಬಳಸಿದೆಯಾದಲ್ಲಿ ಅವು ಘಟನೆಯ ಯಥಾರ್ಥತೆಯನ್ನೂ ಸೂಚಿಸುತ್ತವೆ. ಕೂಡುಪದಗಳಲ್ಲಿ ಹಿಂದಿನ
5.6.2 ಇರು ಕ್ರಿಯಾಪದದ ಬಳಕೆ
ಇಂತಹ ಕೂಡುಪದಗಳಲ್ಲಿ ಇರು ಕ್ರಿಯಾಪದವನ್ನು ಮೊದಲು, ಅನಂತರ ಮತ್ತು ಒಂದೇ ಸಮಯದಲ್ಲಿ ಎಂಬುದಾಗಿ ಮೂರು ರೀತಿಯ ಜೋಡಿಸುವ ರೂಪ ಗಳೊಂದಿಗೂ ಬಳಸಲು ಸಾಧ್ಯವಿದೆ.
(40ಕ) ರಾಜು ಚೆನ್ನೈಗೆ ಹೋಗಿದ್ದಾನೆ. (40ಖ) ರಾಜು ಚೆನ್ನೈಗೆ ಹೋಗಲಿದ್ದಾನೆ. (40ಗ) ರಾಜು ಚೆನ್ನೈಗೆ ಹೋಗುತ್ತಿದ್ದಾನೆ. (40ಕ) ವಾಕ್ಯದಲ್ಲಿ ಮೊದಲಿನ ಘಟನೆಯನ್ನು ಸೂಚಿಸುವ ಹೋಗಿ ಎಂಬ ಕ್ರಿಯಾರೂಪದೊಂದಿಗೆ ಇರು ಕ್ರಿಯಾಪದದ ಈಗಿನ ರೂಪ (ಇದ್ದಾನೆ) ಬಂದಿದೆ. ಇದಕ್ಕೆ ಹೋಗುವ ಘಟನೆ ಪೂರ್ಣಗೊಂಡಿದೆಯಾದರೂ ಅದರ ಪ್ರಭಾವ ಪೂತ್ರಿ ಅಳಿದಿಲ್ಲ ಎಂಬ ಘಟನೆಯ ಕಾಲವ್ಯವಸ್ಥೆಗೆ ಸಂಬಂಧಿಸಿದ ಅರ್ಥವಿದೆ.
ಈ ವಾಕ್ಯದಲ್ಲೇ ಇರು ಕ್ರಿಯಾಪದದ ಹಿಂದಿನ ರೂಪವನ್ನು ಬಳಸಿದಲ್ಲಿ ಆ ಘಟನೆ ಪೂತ್ರಿಯಾಗಿರುವುದು ಮಾತ್ರವಲ್ಲದೆ ಅದರ ಪ್ರಭಾವವೂ ಅಳಿದಿದೆ ಎಂಬ ಅರ್ಥ ಬರುತ್ತದೆ. (40ಘ) ರಾಜು ಚೆನ್ನೈಗೆ ಹೋಗಿದ್ದ. ರಾಜು ಚೆನ್ನೈಯಿಂದ ಮರಳಿ ಬಂದಿಲ್ಲ ಎಂಬ ಅರ್ಥ (40ಕ) ವಾಕ್ಯಕ್ಕಿದೆ, ಆದರೆ (40ಘ) ವಾಕ್ಯಕ್ಕಿಲ್ಲ ಎಂಬುದನ್ನು ಗಮನಿಸಬಹುದು.
ಇದೇ ರೀತಿಯಲ್ಲಿ ಇರು ಕ್ರಿಯಾಪದದ ಮುಂದಿನ ರೂಪವನ್ನು ಬಳಸಿ ಮೇಲಿನ ಕೂಡುಪದವನ್ನು ತಯಾರಿಸಿದಲ್ಲಿ ಅದಕ್ಕೆ ಮುಂದಿನ ಒಂದು ಸಮಯದಲ್ಲಿ ಘಟನೆಯ ಪ್ರಭಾವ ಉಳಿದಿರುತ್ತದೆ ಎಂಬ ಅರ್ಥ ಬರುತ್ತದೆ. (40ಙ) ನೀವು ಬರುವಷ್ಟರಲ್ಲಿ ರಾಜು ಚೆನ್ನೈಗೆ ಹೋಗಿರುತ್ತಾನೆ. ಹೋಗಲಿದ್ದಾನೆ ಎಂಬ ಕೂಡುಪದಕ್ಕೆ ಮುಂದೆ ನಡೆಯಲಿರುವ ಒಂದು ಘಟನೆಯನ್ನು ಸೂಚಿಸುವ ಅರ್ಥವಿದೆಯಾದರೆ, ಹೋಗಲಿದ್ದ ಎಂಬುದಕ್ಕೆ ಮುಂದೆ ನಡೆಯಬೇಕಿದ್ದ (ಆದರೆ ನಿಜಕ್ಕೂ ನಡೆಯದಿರುವ) ಘಟನೆಯನ್ನು ಸೂಚಿಸುವ (ಯಥಾರ್ಥತೆಗೆ ಸಂಬಂಧಿಸಿದ) ಅರ್ಥವಿದೆ. ಹೋಗುತ್ತಿದ್ದಾನೆ ಎಂಬುದಕ್ಕೆ ಮಾತನಾಡುವ ಸಮಯದಲ್ಲಿ ನಡೆಯುತ್ತಾ ಇರುವ ಕ್ಷಣಿಕವಲ್ಲದ ಘಟನೆಯೊಂದನ್ನು ಸೂಚಿಸುವ ಅರ್ಥವಿದೆ. ಘಟನೆ ಕ್ಷಣಿಕವಲ್ಲ ಎಂಬ ಅರ್ಥ ಅದರ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿದುದು. ಈ ವಾಕ್ಯದಲ್ಲೂ ಇರು ಕ್ರಿಯಾಪದದ ಹಿಂದಿನ ರೂಪವನ್ನು ಬಳಸಿ ರಚಿಸಿದ ಹೋಗುತ್ತಿದ್ದ ಎಂಬ ರೂಪವನ್ನು ಬಳಸಿದಲ್ಲಿ, ಕ್ಷಣಿಕವಲ್ಲದ ಹೋಗುವ ಘಟನೆ ಮಾತಿನ ಸಮಯಕ್ಕಿಂತ ಹಿಂದೆ ನಡೆದುದೆಂಬ ಆರ್ಥ ಬರುತ್ತದೆ, ಮತ್ತು ಅದೇ ಕ್ರಿಯಾಪದದ ಮುಂದಿನ ರೂಪವನ್ನು ಬಳಸಿ ರಚಿಸಿದ ಹೋಗುತ್ತಿರು ತ್ತೇನೆ ಎಂಬುದನ್ನು ಬಳಸಿದಲ್ಲಿ ಅಂತಹ ಘಟನೆ ಮಾತಿನ ಸಮಯದ ಅನಂತರ ನಡೆಯುವುದೆಂಬ ಅರ್ಥ ಬರುತ್ತದೆ. ಇಂತಹ ಮೂರು ರೀತಿಯ ಕೂಡುಪದಗಳಲ್ಲೂ ಇರು ಕ್ರಿಯಾಪದ ಹಿಂದಿನ, ಮುಂದಿನ ಮತ್ತು ಈಗಿನ ಸಮಯಗಳನ್ನು ಸೂಚಿಸುತ್ತಿರಲು ಸಾಧ್ಯವಿದೆಯಾದ ಕಾರಣ, ಸಮಯದ ಮಟ್ಟಿಗೆ ಒಟ್ಟು ಒಂಬತ್ತು ಕ್ರಿಯಾರೂಪಗಳು ಇಂತಹ ಕೂಡುಪದದ ಮೂಲಕ ಸಿದ್ಧವಾಗುತ್ತವೆ. ಜೋಡಿಸುವ ರೂಪ ಹಿಂದಿನ ಸಮಯ
ಮೊದಲಿನದು ಮಾಡಿದ್ದ
ಅನಂತರದ್ದು ಮಾಡಲಿದ್ದ ಒಂದೇ ಸಮಯದ್ದು ಮಾಡುತ್ತಿದ್ದ ಮುಂದಿನ ಸಮಯ ಈಗಿನ ಸಮಯ ಮಾಡಿರುತ್ತಾನೆ ಮಾಡಿದ್ದಾನೆ ಮಾಡಲಿರುತ್ತಾನೆ ಮಾಡಲಿದ್ದಾನೆ ಮಾಡುತ್ತಿರುತ್ತಾನೆ ಮಾಡುತ್ತಿದ್ದಾನೆ
5.6.3 ಕೊಳ್ಳು ಪದದ ಬಳಕೆ
ಮೊದಲಿನ ಸಮಯದ ಜೋಡಿಸುವ ರೂಪದೊಂದಿಗೆ ಕೊಳ್ಳು ಪದದ ಬೇರೆ ಬೇರೆ ಕ್ರಿಯಾರೂಪಗಳನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಕೊಳ್ಳು ಪದಕ್ಕೆ ಸ್ವತಂತ್ರವಾದ ಬಳಕೆಯಿಲ್ಲ. ಚಾರಿತ್ರಿಕವಾಗಿ ಇದಕ್ಕೆ ಪಡೆ ಇಲ್ಲವೇ ತೆಗೆದುಕೊಳ್ಳು ಎಂಬ ಅರ್ಥವಿದೆ. ಇದರ ಮೂಲಕ ತಯಾರಾಗುವ ಕೂಡುಪದಕ್ಕೆ ಒಂದು ಘಟನೆ ತಾನಾಗಿ ನಡೆದಿದೆ ಇಲ್ಲವೇ ಒಬ್ಬ ವ್ಯಕ್ತಿ ಅದನ್ನು ತನ್ನ ಹಿತಕ್ಕಾಗಿ ನಡೆಸಿದ್ದಾನೆ ಎಂಬ ಅರ್ಥವಿದೆ. (41ಕ) ರಾಜು ಮೂರು ಪುಟ ಬರೆದ. (41ಖ) ರಾಜು ಮೂರು ಪುಟ ಬರೆದುಕೊಂಡ. (41ಕ)ದ ಪ್ರಕಾರ ರಾಜು ಮೂರು ಪುಟ ಬರೆದಿರುವುದು ತನ್ನ ಹಿತಕ್ಕಾಗಿಯೂ ಇರಬಹುದು ಇಲ್ಲವೇ ಬೇರೊಬ್ಬನ ಹಿತಕ್ಕಾಗಿಯೂ ಇರಬಹುದು; ಆದರೆ (41ಖ)ದ ಪ್ರಕಾರ ಆತ ತನ್ನ ಹಿತಕ್ಕಾಗಿ ಮಾತ್ರವೇ ಮೂರು ಪುಟ ಬರೆದಿದ್ದಾನೆ. ಆತ ಬೇರೆಯವರ ಹಿತಕ್ಕಾಗಿ ಬರೆದಿದ್ದಾನೆ ಎಂಬ ವಿಷಯವನ್ನು ಸ್ಪಷ್ಟಪಡಿಸ ಬೇಕಿದ್ದಲ್ಲಿ ಇಂತಹ ವಾಕ್ಯಗಳಲ್ಲಿ ಕೊಡು ಕ್ರಿಯಾಪದವನ್ನು ಬಳಸಿರುವ ಕೂಡು ಪದವನ್ನು ಕೆಳಗೆ (41ಗ)ದಲ್ಲಿ ಕಾಣಿಸಿದಂತೆ ಬಳಸಬೇಕಾಗುತ್ತದೆ. (41ಗ) ರಾಜು ಮೂರು ಪುಟ ಬರೆದುಕೊಟ್ಟಿದ್ದಾನೆ. ಒಂದು ಘಟನೆ ತಾನಾಗಿ ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಈ ಕೂಡುಪದವನ್ನು ಬಳಸುವುದು ಸಾಧ್ಯ ಎಂಬುದಕ್ಕೆ ಕೆಳಗೆ ಕೊಟ್ಟಿರುವ (42ಕ- ಖ) ವಾಕ್ಯಗಳು ಉದಾಹರಣೆಗಳಾಗಬಲ್ಲುವು. (42ಕ) ಬಾಗಿಲು ತೆರೆಯಿತು. (42ಖ) ಬಾಗಿಲು ತೆರೆದುಕೊಂಡಿದೆ. (42ಕ)ದ ಪ್ರಕಾರ ಬಾಗಿಲು ತೆರೆಯಲು ಅದನ್ನು ಯಾರಾದರೂ ತೆರೆದಿರುವುದು ಕಾರಣವಾಗಿರಬಹುದು, ಆದರೆ (42ಖ)ದ ಪ್ರಕಾರ ಅದು ತಾನಾಗಿ (ಇಲ್ಲವೇ ಗಾಳಿಗೆ) ತೆರೆದುಕೊಂಡಿದೆ (ಜಾಸ್ತಿ ವಿವರಗಳಿಗೆ ಭಟ್ 1978, ಶ್ರೀಧರ್ 1990 ನೋಡಿ).
5.7 ಸಾರಾಂಶ
ತಿಳಿಸುವ ವಾಕ್ಯಗಳ ಕೊನೆಯಲ್ಲಿ ಮುಖ್ಯಕ್ರಿಯಾಪದವಾಗಿ ಬರುವ ಕ್ರಿಯಾಪದ ದೊಂದಿಗೆ ಅದು ಸೂಚಿಸುವ ಘಟನೆಯ ಸಮಯವನ್ನು ಮತ್ತು ಅದರಲ್ಲಿ ತೊಡಗಿರುವ ಘಟಕಗಳಲ್ಲೊಂದನ್ನು ಸೂಚಿಸುವುದಕ್ಕಾಗಿ ಎರಡು ಪ್ರತ್ಯಯಗಳು ಬರುತ್ತವೆ. ಈ ಪ್ರತ್ಯಯಗಳಿಗೆ ಬೇರೆ ಬೇರೆ ರೀತಿಯ ಕ್ರಿಯಾಪದಗಳೆದುರು ಬೇರೆ ಬೇರೆ ರೀತಿಯ ರೂಪಗಳಿದ್ದು ಅವು ಎಂತಹವು ಎಂಬುದನ್ನೂ ಮತ್ತು ಈ ಪ್ರತ್ಯಯಗಳೊಂದಿಗೆ ಬಂದಾಗ ಕ್ರಿಯಾಪದಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬುದನ್ನೂ ಮೇಲೆ ವಿವರಿಸಲಾಗಿದೆ. ಇದಲ್ಲದೆ, ವಾಕ್ಯಗಳೆರಡನ್ನು ಜೋಡಿಸಿ ಹೇಳಿದಾಗ ಇಲ್ಲವೇ ಒಂದು ವಾಕ್ಯ ವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಹೇಳಿದಾಗ ಅವುಗಳಲ್ಲಿ ಬರುವ ಕ್ರಿಯಾಪದಗಳ ರೂಪದಲ್ಲಿ ಎಂತಹ ಬದಲಾವಣೆಗಳೆಲ್ಲ ಕಾಣಿಸಿ ಕೊಳ್ಳುತ್ತವೆ ಎಂಬುದನ್ನೂ ಮೇಲೆ ವಿವರಿಸಲಾಗಿದೆ. ಒಂದು ವಾಕ್ಯವನ್ನು ಈ ರೀತಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ತಿಳಿಸುವ ಕೆಲಸದಲ್ಲಿ ಬಳಸುವ ಬದಲು ಅದರ ಮೂಲಕ ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಳ್ಳುವುದಕ್ಕಾಗಿಯೂ ಬಳಸಲು ಸಾಧ್ಯವಿದೆ. ಅಂತಹ ಸಂದಭ್ರಗಳಲ್ಲಿ ಅದರಲ್ಲಿ ಬರುವ ಕ್ರಿಯಾಪದದಲ್ಲಿ ಬೇರೆಯೇ ಕೆಲವು ಬದಲಾ ವಣೆಗಳನ್ನು ನಡೆಸಬೇಕಾಗುತ್ತದೆ. ಈ ಬದಲಾವಣೆಗಳು ಎಂತಹವು ಎಂಬುದನ್ನು ಮುಂದೆ ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗುವುದು. English → | Eke →
ಅಧ್ಯಾಯ ಆರು — ಗುಣಪದಗಳ ಬಳಕೆ
6.1 ಪೀಠಿಕೆ
ಕನ್ನಡದ ವಾಕ್ಯಗಳಲ್ಲಿ ಮುಖ್ಯವಾಗಿ ಮೂರು ರೀತಿಯ ಗುಣಪದಗಳು ಬಳಕೆ ಯಾಗುತ್ತವೆ.
(1) ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುದಕ್ಕಾಗಿ ಪದಕಂತೆಗಳಲ್ಲಿ ಬರುವ ದೊಡ್ಡ, ಚಿಕ್ಕ, ಹೊಸ, ಹಳೆ, ಅಗಲ, ಸಪುರ, ಕೆಂಪು, ಬಿಳಿ ಮೊದಲಾದ ಗುಣಪದಗಳು,
(2) ಕ್ರಿಯಾಪದಗಳು ತಿಳಿಸುವ ಘಟನೆಯ ಗುಣಧರ್ಮವೊಂದನ್ನು ವಾಕ್ಯಗಳಲ್ಲಿ ಬರುವ ಮೆಲ್ಲಗೆ, ಬೇಗ, ಸೂಚಿಸುವುದಕ್ಕಾಗಿ ದೊಪ್ಪನೆ, ದರದರನೆ, ಬಳಿಕ, ಮುಂಚೆ ಮೊದಲಾದ ಗುಣಪದಗಳು, ಮತ್ತು
(3) ಈ ಎರಡು ರೀತಿಯ ಗುಣಪದಗಳು ಸೂಚಿಸುವ ಗುಣಧರ್ಮದ ಪ್ರಮಾಣವನ್ನು ತಿಳಿಸುವುದಕ್ಕಾಗಿ ಅವುಗಳೊಂದಿಗೆ ಬರುವ ಬಹಳ, ಸ್ವಲ್ಪ, ಒಳ್ಳೆ, ಭಾರೀ ಮೊದಲಾದ ಗುಣಪದಗಳು. ಈ ಮೂರು ರೀತಿಯ ಗುಣಪದಗಳ ಬಳಕೆಯನ್ನೂ ಕೆಳಗಿನ ವಾಕ್ಯಗಳಲ್ಲಿ ಕಾಣ ಬಹುದು. (1ಕ) ಆ ದೊಡ್ಡ ಮನೆಯಲ್ಲಿ ಜನರು ಮೆಲ್ಲಗೆ ಮಾತನಾಡುತ್ತಾರೆ. (1ಖ) ಇವರದು ಬಹಳ ದೊಡ್ಡ ಜಗಳ. (1ಗ) ಅವಳು ಸ್ವಲ್ಪ ಮೆಲ್ಲಗೆ ನಡೆಯುತ್ತಿದ್ದಾಳೆ. ನಾಮಪದಗಳೊಂದಿಗೆ ಪದಕಂತೆಗಳಲ್ಲಿ ಬರುವ ಗುಣಪದಗಳ ಬಳಕೆ ಯೆಂತಹದು ಎಂಬುದನ್ನು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಕ್ರಿಯಾ ಪದಗಳೊಂದಿಗೆ ಮತ್ತು ಗುಣಪದಗಳೊಂದಿಗೆ ಬರುವ ಗುಣಪದಗಳ ಸ್ವರೂಪ ಮತ್ತು ಬಳಕೆಗಳೆಂತಹವು ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿರುವೆವು.
6.2 ಗುಣಪದಗಳ ನಡುವಿರುವ ಸಾಮ್ಯಗಳು
ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರುವ ಎರಡು ರೀತಿಯ ಗುಣಪದ ಗಳ ನಡುವೆ ಒಂದು ಮುಖ್ಯವಾದ ಸಾಮ್ಯವಿದೆ. ಅವೆರಡೂ ಯಾವುದಾದರೂ ಒಂದು ಗುಣಧರ್ಮವನ್ನು ಮಾತ್ರವೇ ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ವಿಷಯದಲ್ಲಿ ಅವು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆ.
ನಾಮಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುತ್ತಿದ್ದು, ಅವುಗಳ ಮೂಲಕ ಹಲವು ಗುಣಧರ್ಮಗಳು ಸೂಚಿತ ವಾಗುತ್ತಿರಲು ಸಾಧ್ಯವಿದೆ. ಇದೇ ರೀತಿಯಲ್ಲಿ ಕ್ರಿಯಾಪದಗಳು ಘಟನೆಯೊಂದನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತಿದ್ದು, ಆ ಘಟನೆಯ ಮೂಲಕವೂ ಹಲವು ಗುಣ ಧರ್ಮಗಳು ಸೂಚಿತವಾಗುತ್ತಿರಲು ಸಾಧ್ಯವಿದೆ. ಈ ಕಾರಣಕ್ಕಾಗಿ, ಯಾವುದಾದರೊಂದು ಗುಣಪದದ ಬಳಕೆ ಅವಶ್ಯವಾ ಗಿರುವಂತಹ ಕೆಲವು ಸಂದಭ್ರಗಳಲ್ಲಿ ಗುಣಪದವೊಂದನ್ನು ಬಳಸದೆ ಬರಿಯ ನಾಮಪದ ಇಲ್ಲವೇ ಕ್ರಿಯಾಪದಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಹಾಗೆ ಬಳಸಿದರೂ ಅಲ್ಲಿ ಗುಣಪದವೊಂದು ಸೂಚಿತವಾಗು ತ್ತಿರುತ್ತದೆ. ಇಂತಹ ಸಂದಭ್ರಗಳಲ್ಲಿ ಮೇಲೆ ವಿವರಿಸಿರುವ ಎರಡು ರೀತಿಯ ಗುಣಪದಗಳೂ (ನಾಮಗುಣಪದಗಳು ಮತ್ತು ಕ್ರಿಯಾಗುಣಪದಗಳು) ಬರ ಬಲ್ಲುವು ಎಂಬುದು ಈ ಎರಡು ರೀತಿಯ ಗುಣಪದಗಳ ನಡುವಿರುವ ಸಾಮ್ಯ ವನ್ನು ಸೂಚಿಸುತ್ತದೆ. ನಾಮಪದ ಇಲ್ಲವೇ ಕ್ರಿಯಾಪದಗಳೊಂದಿಗೆ ಗುಣಪದವೊಂದನ್ನು ಬಳಸಲೇ ಬೇಕಾಗುವ ಇಂತಹ ಸಂದಭ್ರಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಕೊಡ
6.2.1 ಗುಣಧರ್ಮದ ಪ್ರಮಾಣವನ್ನು ಸೂಚಿಸುವ ಪದಗಳು
ಮೇಲೆ ಸೂಚಿಸಿದ ಎರಡು ರೀತಿಯ ಗುಣಪದಗಳೂ ಗುಣಧರ್ಮವೊಂದರ ಪ್ರಮಾಣವನ್ನು ಸೂಚಿಸಬಲ್ಲ ಬಹಳ, ಸ್ವಲ್ಪ, ಭಾರೀ ಮೊದಲಾದ ಗುಣಪದ ಗಳೊಂದಿಗೆ ಬರಬಲ್ಲುವು. (2ಕ) ಇದು ಬಹಳ ದೊಡ್ಡ ಮರ. (2ಖ) ಅವನು ಬಹಳ ಬೇಗ ಮಲಗಿದ. ಪ್ರಮಾಣವನ್ನು ಸೂಚಿಸುವ ಗುಣಪದಗಳು ಸಾಮಾನ್ಯವಾಗಿ ನಾಮಪದ ಇಲ್ಲವೇ ಕ್ರಿಯಾಪದಗಳೊಂದಿಗೆ ನೇರವಾಗಿ ಸೇರಿಕೊಳ್ಳುವುದಿಲ್ಲ. ಕೆಲವು ಸಂದಭ್ರಗಳಲ್ಲಿ ಅವನ್ನು ಆ ರೀತಿ ಸೇರಿಸಲು ಸಾಧ್ಯವಾಗುವುದಾದರೂ ಅಂತಹ ಬಳಕೆಗಳಲ್ಲಿ ಯಾವುದಾದರೂ ಒಂದು ಗುಣಪದ ಸೂಚಿತವಾಗುತ್ತಿರುತ್ತದೆ. (3ಕ) ಅವರು ಭಾರೀ ಮನೆ ಕಟ್ಟಿಸಿದ್ದಾರೆ. (3ಖ) ಅವರು ತಮ್ಮ ಕನ್ನಡಕವನ್ನು ಬಹಳ ಹುಡುಕಿದರು. (3ಕ)ದಲ್ಲಿ ಭಾರೀ ಮನೆ ಎಂಬುದಕ್ಕೆ ಭಾರೀ ದೊಡ್ಡ ಮನೆ ಎಂಬ ಅರ್ಥವೂ ಮತ್ತು (3ಖ)ದಲ್ಲಿ ಬಹಳ ಹುಡುಕಿದರು ಎಂಬುದಕ್ಕೆ ಬಹಳ ಹೊತ್ತು ಹುಡುಕಿದರು ಎಂಬ ಅರ್ಥವೂ ಬರುತ್ತದೆ. ಹಾಗಾಗಿ, ಇಲ್ಲಿ ಮೂರನೆಯ ವಿಭಾಗದ ಭಾರೀ ಮತ್ತು ಬಹಳ ಎಂಬ ಗುಣಪದಗಳು ನೇರವಾಗಿ ಹೇಳ ದಿದ್ದರೂ ಸೂಚ್ಯವಾಗಿರುವ ಗುಣಪದಗಳ ಪ್ರಮಾಣವನ್ನೇ ತಿಳಿಸುತ್ತಿವೆ.
6.2.2 ಹೋಲಿಕೆಯನ್ನು ಸೂಚಿಸುವ ವಾಕ್ಯಗಳು
ಹೋಲಿಕೆಯನ್ನು ಸೂಚಿಸುವ ವಾಕ್ಯಗಳಲ್ಲೆಲ್ಲ ಯಾವುದಾದರೊಂದು ಗುಣಪದ ಬರಲೇಬೇಕೆಂಬ ನಿಯಮವಿದೆ. ಇದು ನಾಮಗುಣಪದವಿರಬಹುದು ಇಲ್ಲವೇ ಕ್ರಿಯಾಗುಣಪದವಿರಬಹುದು. (4ಕ) ಅದರಷ್ಟು ದೊಡ್ಡ ಕಟ್ಟಡ ಇಲ್ಲಿಲ್ಲ. (4ಖ) ಅವಳಷ್ಟು ಮೆಲ್ಲಗೆ ನಡೆಯುವವರನ್ನು ನಾನು ನೋಡಿಲ್ಲ. (5ಕ) ಅದಕ್ಕಿಂತ ದೊಡ್ಡ ಕಟ್ಟಡ ಇಲ್ಲಿಲ್ಲ. (5ಖ) ಅವಳಿಗಿಂತ ಮೆಲ್ಲಗೆ ನಡೆಯುವವರನ್ನು ನಾನು ನೋಡಿಲ್ಲ. ಇಂತಹ ಹೋಲಿಕೆಯ ವಾಕ್ಯಗಳಲ್ಲಿ ಕೆಲವೊಮ್ಮೆ ಗುಣಪದವೊಂದನ್ನು ಬಳಸ ದಿರಲು ಸಾಧ್ಯವಿದೆ; ಹೀಗಿದ್ದರೂ ಅಂತಹ ವಾಕ್ಯಗಳಲ್ಲಿ ಯಾವುದಾದರೊಂದು ಗುಣಪದ ಸೂಚಿತವಾಗದಿರುವುದಿಲ್ಲ.
(6ಕ) ಅವರಷ್ಟು ಹಣ ನಮ್ಮಲ್ಲಿಲ್ಲ. (6ಖ) ನಾನು ಅವರಷ್ಟು ಓದಲಿಲ್ಲ.
6.2.3 ಬೆರಗನ್ನು ಸೂಚಿಸುವ ವಾಕ್ಯಗಳು
ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬೆರಗಿಗೆ ಆಧಾರವಾಗಿ ಯಾವುದಾದರೊಂದು ಗುಣಪದವಿರುವ ಅವಶ್ಯಕತೆಯಿದೆ. ಆದರೆ ಇದು ನಾಮಗುಣಪದವಿರಬಹುದು ಇಲ್ಲವೇ ಕ್ರಿಯಾಗುಣಪದವಿರಬಹುದು. (7ಕ) ಅವರದು ಎಷ್ಟು ದೊಡ್ಡ ಮನೆ! (7ಖ) ಅವನು ಎಷ್ಟು ಬೇಗ ಓಡಿದ! ಇಂತಹ ವಾಕ್ಯಗಳಲ್ಲೂ ಕೆಲವೊಮ್ಮೆ ಗುಣಪದವೊಂದನ್ನು ಬಳಸದಿರಲು ಸಾಧ್ಯ ವಿದೆ. ಆದರೆ ಅವುಗಳಲ್ಲೂ ಯಾವುದಾದರೊಂದು ಗುಣಪದ ಸೂಚಿತವಾಗ ದಿರುವುದಿಲ್ಲ. (8ಕ) ಅವನ ಹತ್ತಿರ ಎಷ್ಟು (ತುಂಬಾ) ಪುಸ್ತಕಗಳಿವೆ! (8ಖ) ಅವನು ಹೇಗೆ (ಜೋರಾಗಿ) ಓಡಿದ!
6.3 ಕೆಲವು ವ್ಯತ್ಯಾಸಗಳು
ನಾಮಪದಗಳೊಂದಿಗೆ ಪದಕಂತೆಗಳ ಅಂಗವಾಗಿ ಬರುವ ನಾಮಗುಣಪದ ಮತ್ತು ಕ್ರಿಯಾಪದಗಳೊಂದಿಗೆ ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದ ಇವೆರಡರ ನಡುವೆ ಮೇಲೆ ವಿವರಿಸಿದಂತಹ ಸಾಮ್ಯಗಳು ಮಾತ್ರವಲ್ಲದೆ ಕೆಲವು ವ್ಯತ್ಯಾಸ ಗಳೂ ಇವೆ. ಈ ಗುಣಪದಗಳು ಎರಡು ರೀತಿಯ ಪದಗಳೊಂದಿಗೆ (ನಾಮಪದ ಗಳೊಂದಿಗೆ ಮತ್ತು ಕ್ರಿಯಾಪದಗಳೊಂದಿಗೆ) ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಬರಬೇಕಾಗುತ್ತದೆ ಎಂಬುದೇ ಅವುಗಳ ನಡುವೆ ಕಾಣಿಸುವ ಈ ವ್ಯತ್ಯಾಸಗಳಿಗೆ ಮೂಲ ಕಾರಣ.
6.3.1 ನಿಶ್ಚಿತವಾದ ಜಾಗ
ನಾಮಪದಗಳೊಂದಿಗೆ ಬರುವ ಗುಣಪದಗಳಿಗೆ ಪದಕಂತೆಯಲ್ಲಿ ಒಂದು ನಿಶ್ಚಿತವಾದ ಜಾಗವಿದ್ದು ಅದನ್ನು ಬದಲಾಯಿಸುವುದು ಕಷ್ಟಸಾಧ್ಯ. ಇದಲ್ಲದೆ, ಅದು ಒಂದು ನಾಮಪದದ ಅಧೀನವಾಗಿರುವ ಕಾರಣ, ಆ ನಾಮಪದವನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಸ್ವಾತಂತ್ರ್ಯವೂ ಅದಕ್ಕಿಲ್ಲ. ಆದರೆ, ಕ್ರಿಯಾಪದ ಗಳೊಂದಿಗೆ ಬರುವ ಗುಣಪದಗಳಿಗೆ ಈ ರೀತಿ ವಾಕ್ಯದಲ್ಲಿ ಒಂದು ನಿಶ್ಚಿತವಾದ ಜಾಗವೆಂಬುದಿಲ್ಲ. ಸಾಮಾನ್ಯವಾಗಿ ಅವು ಕ್ರಿಯಾಪದದ ಎದುರಿಗೇನೇ ಬರುವು ವಾದರೂ ಬೇರೆ ಬೇರೆ ಕಾರಣಗಳಿಗಾಗಿ ಅವನ್ನು ವಾಕ್ಯದ ಇತರ ಜಾಗಗಳಿಗೆ ವಗ್ರಾಯಿಸಲು ಸಾಧ್ಯವಿದೆ. ಪದಕಂತೆಗಳಲ್ಲಿ ಗುಣಪದಗಳು ನಾಮಪದದ ಮೊದಲು ಬರುತ್ತವೆ. ಅವು ನಾಮಪದದ ಅನಂತರ ಬಂದರೆ ಅದೊಂದು ವಾಕ್ಯವಾಗುತ್ತದಲ್ಲದೆ ಪದಕಂತೆ ಯಾಗಿ ಉಳಿಯುವುದಿಲ್ಲ. ಉದಾಹರಣೆಗಾಗಿ, ಕೆಂಪು ಹೂ ಎಂಬುದು ಒಂದು ಪದಕಂತೆ, ಆದರೆ ಹೂ ಕೆಂಪು ಎಂಬುದು ಒಂದು ವಾಕ್ಯ. (9ಕ) ಆ ಗಿಡದಲ್ಲೊಂದು ಕೆಂಪು ಹೂ ಅರಳಿದೆ. (9ಖ) ಆ ಗಿಡದ ಹೂ ಕೆಂಪು. ಆದರೆ ವಾಕ್ಯದ ಅಂಗವಾಗಿ ಬರುವ ಗುಣಪದಗಳನ್ನು ಕ್ರಿಯಾಪದದ ಅನಂತರವೂ ಬಳಸಲು ಸಾಧ್ಯವಿದೆ. ಇದು ಮೊದಲಿಗೆ ಬಳಸಲು ಮರೆತು ಹೋಗಿದ್ದ ಗುಣಧರ್ಮವೊಂದನ್ನು ಸೂಚಿಸುತ್ತಿರಬಹುದು ಇಲ್ಲವೇ ಆ ಗುಣ ಧರ್ಮದ ಮೇಲೆ ಹೆಚ್ಚಿನ ಒತ್ತು ಕೊಡಲು ಈ ರೀತಿ ಬಳಕೆಯಾಗಿರಬಹುದು. ಈ ವಿಷಯದಲ್ಲಿ ಕ್ರಿಯಾಗುಣಪದ ವಾಕ್ಯದ ಇತರ ಘಟಕಗಳ ಹಾಗೆ ವತ್ರಿಸು ತ್ತದೆ. ಅವನ್ನೂ ಈ ರೀತಿ ವಾಕ್ಯದ ಕೊನೆಗೆ ವಗ್ರಾಯಿಸಲು ಸಾಧ್ಯವಿದೆ. (10ಕ) ಅವನು ಬಹಳ ಮೆಲ್ಲಗೆ ಓದುತ್ತಾನೆ. (10ಖ) ಅವನು ಓದುತ್ತಾನೆ, ಬಹಳ ಮೆಲ್ಲಗೆ. (11ಕ) ಅವನಿಗೆ ಒಂದು ಚಿಕ್ಕ ಬಹುಮಾನ ಸಿಕ್ಕಿದೆ. (11ಖ) ಅವನಿಗೆ ಸಿಕ್ಕಿದೆ, ಒಂದು ಚಿಕ್ಕ ಬಹುಮಾನ. (10ಕ)ದಲ್ಲಿ ಬಂದಿರುವ ಮೆಲ್ಲಗೆ ಎಂಬ ಕ್ರಿಯಾಗುಣಪದವನ್ನು (10ಖ)ದಲ್ಲಿ ವಾಕ್ಯದ ಕೊನೆಗೆ (ಎಂದರೆ ಕ್ರಿಯಾಪದದ ಅನಂತರದ ಜಾಗಕ್ಕೆ) ವಗ್ರಾಯಿಸಲು ಸಾಧ್ಯವಾಗಿದೆ. ಆದರೆ, (11ಕ)ದಲ್ಲಿ ಬಂದಿರುವ ಚಿಕ್ಕ ಎಂಬ ನಾಮಗುಣ ಪದವನ್ನು ಈ ರೀತಿ ವಾಕ್ಯದ ಕೊನೆಗೆ (ಎಂದರೆ ನಾಮಪದದ ಅನಂತರದ ಜಾಗಕ್ಕೆ) ವಗ್ರಾಯಿಸಲು ಸಾಧ್ಯವಾಗದು. (11ಖ)ದಲ್ಲಿ ಅದನ್ನು ಈ ರೀತಿ ವಗ್ರಾಯಿಸಲಾಗಿದೆಯಾದರೂ ಅದರೊಂದಿಗೆ ಬಹುಮಾನ ಎಂಬ ನಾಮಪದ ವನ್ನೂ (ಎಂದರೆ ಇಡೀ ಘಟಕವನ್ನೇ ವಗ್ರಾಯಿಸಬೇಕಾಗಿದೆ) ಎಂಬುದನ್ನು ಗಮನಿಸಬಹುದು. ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದಗಳನ್ನು ವಾಕ್ಯದ ಒಳಗೇನೇ ಬೇರೆ ಜಾಗಗಳಿಗೂ ವಗ್ರಾಯಿಸಲು ಸಾಧ್ಯವಿದೆ. ಆದರೆ ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ರೀತಿ ವಾಕ್ಯದ ಬೇರೆ ಜಾಗಗಳಿಗೆ ವಗ್ರಾಯಿಸಲು ಸಾಧ್ಯವಾಗದು. (12ಕ) ಆತ ಸಾಯಿಬಾಬನನ್ನು ಬಹಳ ಚನ್ನಾಗಿ ನಂಬಿದ್ದಾನೆ. (12ಖ) ಆತ ಬಹಳ ಚನ್ನಾಗಿ ಸಾಯಿಬಾಬನನ್ನು ನಂಬಿದ್ದಾನೆ. ಕ್ರಿಯಾವಾಕ್ಯಗಳಲ್ಲಿ ಬರುವ ಘಟಕಗಳಲ್ಲಿ ಒಂದನ್ನು ಪ್ರತ್ಯೇಕಿಸಿ ವಾಕ್ಯದ ಉಳಿದ ಭಾಗದೊಂದಿಗೆ ಅದು ಸಂಬಂಧಿಸಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಅದನ್ನೊಂದು ವಿಷಯವಾಕ್ಯದ ಘಟಕವನ್ನಾಗಿ ಬದಲಾಯಿಸಲು ಸಾಧ್ಯವಿದೆ. (13ಕ) ಅವನು ರಾಜುವಿಗೆ ಹೊಡೆದ. (13ಖ) ಅವನು ಹೊಡೆದದ್ದು ರಾಜುವಿಗೆ. (13ಗ) ರಾಜುವಿಗೆ ಹೊಡೆದದ್ದು ಅವನು. (13ಖ)ದಲ್ಲಿ ರಾಜುವಿಗೆ ಎಂಬ ಘಟಕವನ್ನೂ ಮತ್ತು (13ಗ)ದಲ್ಲಿ ಅವನು ಎಂಬ ಘಟಕವನ್ನೂ (13ಕ)ದಲ್ಲಿ ಬಂದಿರುವ ವಾಕ್ಯದಿಂದ ಪ್ರತ್ಯೇಕಿಸಿ, ಎರಡು ರೀತಿಯ ವಿಷಯವಾಕ್ಯಗಳನ್ನು ತಯಾರಿಸಲಾಗಿದೆ. ವಾಕ್ಯದಲ್ಲಿ ಬರುವ ಕ್ರಿಯಾಗುಣಪದಗಳನ್ನೂ ಈ ರೀತಿ ಪ್ರತ್ಯೇಕಿಸಿ, ಅದು ವಾಕ್ಯದ ಉಳಿದ ಭಾಗಕ್ಕೆ ಸಂಬಂಧಿಸಿದೆಯೆಂಬುದಾಗಿ ಸೂಚಿಸಲು ಸಾಧ್ಯವಿದೆ. ಆದರೆ ಪದಕಂತೆಯಲ್ಲಿ ಬರುವ ನಾಮಗುಣಪದಗಳನ್ನು ಈ ರೀತಿ ಪ್ರತ್ಯೇಕಿಸಿ ಹೇಳಲು ಸಾಧ್ಯವಾಗದು. ಅವನ್ನು ಪದಕಂತೆಯಲ್ಲಿ ಹಾಗೆಯೇ ಉಳಿಸಿಕೊಳ್ಳುವ ಅವಶ್ಯಕತೆಯಿದೆ. (14ಕ) ಅವನು ಬಹಳ ಮೆಲ್ಲಗೆ ನಡೆಯುತ್ತಾನೆ. (14ಖ) ಅವನು ನಡೆಯುವುದು ಬಹಳ ಮೆಲ್ಲಗೆ. (15ಕ) ಅವನಿಗೆ ಒಂದು ಚಿಕ್ಕ ಬಹುಮಾನ ಸಿಕ್ಕಿದೆ. (15ಖ) ಅವನಿಗೆ ಸಿಕ್ಕಿದುದು ಒಂದು ಚಿಕ್ಕ ಬಹುಮಾನ. (14ಖ)ದಲ್ಲಿ ಬಹಳ ಮೆಲ್ಲಗೆ ಎಂಬುದನ್ನು ಕ್ರಿಯಾಪದದಿಂದ ಪ್ರತ್ಯೇಕಿಸಿ ಅದು ಕ್ರಿಯಾಪದಕ್ಕೆ (ಮತ್ತು ವಾಕ್ಯದ ಇತರ ಭಾಗಗಳಿಗೆ) ಸಂಬಂಧಿಸಿದೆ ಎಂದು ಸೂಚಿಸಲು ಸಾಧ್ಯವಾಗಿದೆ. ಆದರೆ, (15ಖ)ದಲ್ಲಿ ಈ ರೀತಿ ಚಿಕ್ಕ (ಇಲ್ಲವೇ ಒಂದು ಚಿಕ್ಕ) ಎಂಬುದನ್ನು ನಾಮಪದದಿಂದ ಪ್ರತ್ಯೇಕಿಸಲು ಸಾಧ್ಯವಾಗಿಲ್ಲ. ಅದನ್ನು ಬಹುಮಾನ ಎಂಬ ನಾಮಪದದೊಂದಿಗೇನೇ ಇರಿಸಿ ಇಡೀ ಘಟಕ ವನ್ನೇ ಆ ರೀತಿ ಸಂಬಂಧಿಸಿರುವಂತಹದು ಎಂಬುದಾಗಿ ಸೂಚಿಸಬೇಕಾಗಿದೆ. ಸೂಚಿಸುವುದಕ್ಕಾಗಿ ಬಳಕೆಯಾಗುವ ಗುಣಪದಗಳ ಬಹಳ, ಸ್ವಲ್ಪ ಮೊದಲಾದ ಮೂರನೆಯ ವಿಭಾಗಕ್ಕೆ (6.1 ನೋಡಿ) ಸೇರುವ ಗುಣಪದಗಳೂ ನಾಮಗುಣಪದಗಳ ಹಾಗೆ ಒಂದು ನಿಶ್ಚಿತವಾದ ಜಾಗದಲ್ಲಿ ಬರುತ್ತವೆ; ಕ್ರಿಯಾಗುಣಪದಗಳ ಹಾಗೆ ಅವನ್ನು ಬೇರೆ ಜಾಗಗಳಿಗೆ ವಗ್ರಾ ಗುಣಧರ್ಮವನ್ನು ಯಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನೂ ಮೇಲೆ ಕೊಟ್ಟಿರುವ ಉದಾಹರಣೆ ಗಳಿಂದ ತಿಳಿಯಬಹುದು.
6.3.2 ಏ ಇಲ್ಲವೇ ಊ ಪ್ರತ್ಯಯಗಳ ಜೊತೆ ಬಳಕೆ
ಕ್ರಿಯಾಗುಣಪದವೊಂದಕ್ಕೆ ಏ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಒತ್ತಿ ಹೇಳಲು ಸಾಧ್ಯವಿದೆ, ಮತ್ತು ಊ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದೊಂದು ಹೆಚ್ಚಿನ ಗುಣಧರ್ಮ ಎಂಬುದಾಗಿ ಸೂಚಿಸಲು ಸಾಧ್ಯವಿದೆ. ಇಂತಹ ಎರಡು ವಿಧಾನಗಳಲ್ಲೂ ನಾಮಗುಣಪದಗಳು ಬಳಕೆಯಾಗಲಾರವು. (16ಕ) ಅವನು ಬಹಳ ಜೋರಾಗಿಯೇ ನಡೆಯುತ್ತಿದ್ದ. (16ಖ) ಅವನು ಮೆಲ್ಲಗೂ ನಡೆಯಬಲ್ಲ. ಈ ವಿಷಯದಲ್ಲೂ ಕ್ರಿಯಾಗುಣಪದಗಳು ವಾಕ್ಯದ ಇತರ ಘಟಕಗಳ ಹಾಗೆ ವತ್ರಿಸುತ್ತವೆ. ವಾಕ್ಯದ ಘಟಕಗಳನ್ನೂ ಅವುಗಳ ಹಾಗೆ ಏ ಇಲ್ಲವೇ ಊ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆ. (17ಕ) ಆ ಮುದುಕನೇ ಬಹಳ ಜೋರಾಗಿ ನಡೆಯುತ್ತಿದ್ದ. (17ಖ) ಆ ಮುದುಕನೂ ಬಹಳ ಜೋರಾಗಿ ನಡೆಯುತ್ತಿದ್ದ.
6.3.3 ಪ್ರತಿಧ್ವನಿಸುವ ರಚನೆಯಲ್ಲಿ ಬಳಕೆ
ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಅಸ್ಪಷ್ಟವಾಗಿ ಗುರುತಿಸಿ ಹೇಳಬೇಕಾದಾಗ ಆ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ನಾಮಪದದೊಂದಿಗೆ ಆ ನಾಮಪದವನ್ನು ಪ್ರತಿಧ್ವನಿಸುವ ಇನ್ನೊಂದು ಪದವನ್ನು ಸೇರಿಸಿ ಹೇಳುವ ವಿಧಾನ ಕನ್ನಡದಲ್ಲಿ ಬಳಕೆಯಲ್ಲಿದೆ. ಕೆಳಗಿನ (18ಕ-ಖ) ವಾಕ್ಯಗಳಲ್ಲಿ ಈ ವಿಧಾನದ ಬಳಕೆಯನ್ನು ಕಾಣಬಹುದು. (18ಕ) ಇದರಲ್ಲಿ ಏನಾದರೂ ಕಲ್ಲುಗಿಲ್ಲು ಇದೆಯೋ ನೋಡು. (18ಖ) ಅಲ್ಲಿಗೆ ಹೋಗಬೇಡ, ಹಾವುಗೀವು ಇದ್ದೀತು. (18ಕ)ದಲ್ಲಿ ಕಲ್ಲು ಪದದ ಅನಂತರ ಆ ಪದದ ‘ಪ್ರತಿಧ್ವನಿ’ಯಂತೆ ಕಾಣಿಸುವ ಗಿಲ್ಲು ಪದ ಸೇರಿದೆ. ಈ ಎರಡು ಪದಗಳ ಜೋಡಿಕೆಗೆ ಕಲ್ಲು ಇತ್ಯಾದಿ ಎಂಬ ಅರ್ಥವಿದ್ದು, ಅದು ಗುರುತಿಸಬೇಕಾಗಿರುವ ವಸ್ತುವನ್ನು ಈ ಜೋಡಿಕೆ ಸ್ವಲ್ಪ ಮಟ್ಟಿಗೆ ಅಸ್ಪಷ್ಟವಾಗಿ ಸೂಚಿಸುತ್ತದೆ.
ಇದೇ ರೀತಿಯಲ್ಲಿ (18ಖ)ದಲ್ಲಿ ಹಾವು ಪದದ ಅನಂತರ ಗೀವು ಎಂಬುದು ಬಂದಿದ್ದು, ಈ ಜೋಡಿಕೆಗೆ ಹಾವು ಇತ್ಯಾದಿ ಎಂಬ ಅಸ್ಪಷ್ಟವಾದ ಅರ್ಥವಿದೆ. ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳನ್ನು ಈ ವಿಧಾನದಲ್ಲಿ ಬಳಸಿ, ಅವು ಸೂಚಿಸುವ ಗುಣಧರ್ಮ ಅಸ್ಪಷ್ಟವಾದುದು ಎಂಬುದಾಗಿ ಸೂಚಿಸಲು ಸಾಧ್ಯ (19ಕ) ಅವನು ಬೇಗಗೀಗ ಎಲ್ಲ ಬರಲಿಕ್ಕಿಲ್ಲ. (19ಖ) ನೀವು ಅದನ್ನು ಬೆಳ್ಳಗೆ ಗಿಳ್ಳಗೆ ಎಲ್ಲ ಮಾಡುತ್ತೇನೆಂದು ಕುಳಿತರೆ ರಾತ್ರಿಯಾದೀತು. ಆದರೆ, ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ವಿಧಾನದಲ್ಲಿ ಬಳಸಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ವ್ಯಕ್ತಿ, ವಸ್ತು ಮೊದಲಾ ದವುಗಳನ್ನು ಗುರುತಿಸುವ ಕೆಲಸ ಹೆಚ್ಚು ಸುಲಭವಾಗುವ ಹಾಗೆ ಮತ್ತು ಹೆಚ್ಚು ಖಚಿತವಾಗುವ ಹಾಗೆ ನಾಮಪದಗಳೊಂದಿಗೆ ಈ ಗುಣಪದಗಳನ್ನು ಬಳಸ ಲಾಗುತ್ತದೆ. ಹಾಗಾಗಿ ಅವುಗಳ ಅರ್ಥವನ್ನು ‘ಅಸ್ಪಷ್ಟ’ವಾಗಿ ಮಾಡುವ ಮೇಲಿನ ವಿಧಾನಕ್ಕೆ ಅವುಗಳ ಬಳಕೆಯಲ್ಲಿ ಯಾವ ಸ್ಥಾನವೂ ಇಲ್ಲ. ಗುಣಪದವಿರುವ ಪದಕಂತೆಗಳನ್ನು (ಎಂದರ ವಾಕ್ಯದ ಘಟಕಗಳನ್ನು) ಮಾತ್ರ ಈ ವಿಧಾನದಲ್ಲಿ ಬಳಸಲು ಸಾಧ್ಯವಿದೆ. ಆದರೆ ಹಾಗೆ ಬಳಸಿದಾಗ, ನಾಮಪದದ ಎದುರಿಗಿರುವ ತನ್ನ ಜಾಗವನ್ನು ಗುಣಪದ ಬಿಟ್ಟುಕೊಡುವುದಿಲ್ಲ. (20) ಎಲ್ಲಾದರೂ ಕೆಂಪುಹೂವು ಗೆಂಪುಹೂವು ಸಿಕ್ಕಿದರೆ ತನ್ನಿ. ಇಲ್ಲಿ ಅಸ್ಪಷ್ಟವಾಗಿರುವುದು ಹೂವಿನ ಬಣ್ಣವಲ್ಲ, ಹೂವೇ ಎಂಬುದನ್ನು ಗಮನಿಸಬಹುದು.
6.3.4 ಪ್ರತ್ಯಯಗಳ ಬಳಕೆ
ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಈ ಎರಡು ರೀತಿಯ ಗುಣಪದಗಳಿಗೂ ಅವುಗಳದೇ ಆದ ಕೆಲಸಗಳಿದ್ದು, ಅದಕ್ಕಿಂತ ಬಿನ್ನವಾದ ಕೆಲಸವೊಂದರಲ್ಲಿ ಅವನ್ನು ಬಳಸಬೇಕಿದ್ದಲ್ಲಿ ಅವಕ್ಕೆ ಯಾವುದಾದರೊಂದು ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ನಾಮಪದಗಳೊಂದಿಗೆ ಬರುವುದು ನಾಮಗುಣಪದಗಳ ಕೆಲಸ. ಇದಕ್ಕೆ ಬದಲು ಅವನ್ನು ಕ್ರಿಯಾಪದಗಳೊಂದಿಗೆ ಅವುಗಳ ಗುಣಧರ್ಮ ವನ್ನು ಸೂಚಿಸುವುದಕ್ಕಾಗಿ ಬಳಸಬೇಕಾಗಿದ್ದಲ್ಲಿ ಅವಕ್ಕೆ ಯಾವುದಾದರೂ ಪ್ರತ್ಯಯ ವನ್ನು ಸೇರಿಸಬೇಕಾಗುತ್ತದೆ.
(21ಕ) ಈ ಕೆಂಪು ಹೂ ಬಹಳ ಚನ್ನಾಗಿದೆ. (21ಖ) ಕಮ್ಮಾರನು ನೇಗಿಲಿನ ತುದಿಯನ್ನು ಕೆಂಪಗೆ ಕಾಯಿಸಿದ. (21ಕ)ದಲ್ಲಿ ಕೆಂಪು ಗುಣಪದ ಹೂ ಎಂಬ ನಾಮಪದದೊಂದಿಗೆ ಬಂದಿದೆ. ಇದನ್ನು ಕಾಯಿಸಿದ ಎಂಬ ಕ್ರಿಯಾಪದದೊಂದಿಗೆ ಬಳಸುವುದಕ್ಕಾಗಿ (21ಖ) ದಲ್ಲಿ ಅದಕ್ಕೆ ಅಗೆ ಪ್ರತ್ಯಯವನ್ನು ಸೇರಿಸಬೇಕಾಗಿದೆ. ಇದೇ ರೀತಿಯಲ್ಲಿ ಒಂದು ಕ್ರಿಯಾಗುಣಪದವನ್ನು ಕ್ರಿಯಾಪದದ ಬದಲು ನಾಮಪದದೊಂದಿಗೆ ಬಳಸಬೇಕಿದ್ದಲ್ಲಿ ಅದರೊಂದಿಗೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. (22ಕ) ಅವನು ಆ ಕೆಲಸವನ್ನು ನಾಳೆ ಮಾಡಲಿ. (22ಖ) ನೀನು ನಾಳಿನ ಕೆಲಸವನ್ನು ಇವತ್ತೇ ಮಾಡು. (23ಕ) ಅವನು ಮೆಲ್ಲಗೆ ಮಾತನಾಡಿದ. (23ಖ) ಅವನ ಮೆಲ್ಲಗಿನ ಮಾತು ನನಗೆ ಕೇಳಿಸಲಿಲ್ಲ. (22ಕ)ದಲ್ಲಿ ಜಾಗವನ್ನು ಸೂಚಿಸುವ ನಾಳೆ ಗುಣಪದ ಒಂದು ಕ್ರಿಯಾಪದ ದೊಂದಿಗೆ (ಮಾಡಲಿ ಎಂಬುದರೊಂದಿಗೆ) ಅದರ ಒಂದು ಘಟಕವಾಗಿ ಬಂದಿದೆ. ಅದನ್ನೇ ಒಂದು ನಾಮಪದದೊಂದಿಗೆ (ಮಾತು ಎಂಬುದರೊಂದಿಗೆ) ಬಳಸುವು ದಕ್ಕಾಗಿ (22ಖ)ದಲ್ಲಿ ಅದಕ್ಕೆ ಅ ಪ್ರತ್ಯಯವನ್ನು ಸೇರಿಸಿ ನಾಳಿನ ಎಂಬುದಾಗಿ ಬದಲಾಯಿಸಲಾಗಿದೆ.
(23ಖ)ದಲ್ಲಿ ಅಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಿರುವ ಮೆಲ್ಲಗೆ ಎಂಬ ಕ್ರಿಯಾಗುಣಪದವೂ ಮಾತು ನಾಮಪದದೊಂದಿಗೆ ಬರುವುದಕ್ಕಾಗಿ ಈ ರೀತಿ ಅ ಪ್ರತ್ಯಯವನ್ನು ಪಡೆಯಬೇಕಾಗಿದೆ. (ಈ ಎರಡು ಸಂದಭ್ರಗಳಲ್ಲೂ ಗುಣಪದ ಗಳ ಕೊನೆಯಲ್ಲಿ ಇನ್ ಎಂಬುದು ಸೇರಿಕೊಂಡಿದ್ದು, ಅದಕ್ಕೆ ಹೆಚ್ಚಿನ ಅರ್ಥ ವೇನೂ ಇಲ್ಲ.) ನಡುವೆ, ಕಡೆಗೆ, ತುದಿ(ಯಲ್ಲಿ) ಮೊದಲಾದ ಬೇರೆ ಕೆಲವು ಕ್ರಿಯಾಗುಣ ಗುಣಪದಗಳನ್ನಾಗಿ ಪದಗಳನ್ನು ಅವುಗಳ ಬದಲಾಯಿಸಲು ಸಾಧ್ಯವಿದೆ. ಇದಕ್ಕಾಗಿಯೂ ಅವಕ್ಕೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ. ಈ ಪ್ರತ್ಯಯದೆದುರು ಅವುಗಳಲ್ಲಿ ಬೇರೆ ಕೆಲವು ಕೂಡಿಕೆಯ ಬದಲಾವಣೆಗಳೂ ನಡೆಯುತ್ತವೆ ಎಂಬುದನ್ನು ಕಟ್ಟ ಪರಿಮಾಣವನ್ನು ಸೂಚಿಸುವ ಕಡೆಗೆ, ಮೊತ್ತ ಮೊದಲು, ತುತ್ತ ತುದಿ(ಯಲ್ಲಿ) ಎಂಬಂತಹ ಉದಾಹರಣೆ ಗಳಲ್ಲಿ ಕಾಣಬಹುದು.
6.3.5 ಗುಣಧರ್ಮದಲ್ಲಿ ವ್ಯತ್ಯಾಸ
ಕ್ರಿಯಾಗುಣಪದ ಮತ್ತು ನಾಮಗುಣಪದಗಳು ಸೂಚಿಸುವ ಗುಣಧರ್ಮಗಳ ನಡುವೆಯೂ ಒಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕ್ರಿಯಾಗುಣಪದಗಳು ಸಾಮಾನ್ಯವಾಗಿ ಕ್ಷಣಿಕವಾದ ಇಲ್ಲವೇ ಬೇಗನೆ ಅಳಿದು ಹೋಗುವಂತಹ ಗುಣಧರ್ಮಗಳನ್ನು ಸೂಚಿಸುತ್ತವೆ. ಆದರೆ ನಾಮಗುಣಪದಗಳು ಹೆಚ್ಚು ಸಮಯ ಉಳಿದುಕೊಳ್ಳಬಲ್ಲಂತಹ ಗುಣಧರ್ಮಗಳನ್ನು ಸೂಚಿಸುತ್ತವೆ. ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಕ್ರಿಯಾಪದಗಳು ಘಟನೆಗಳನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಹೆಚ್ಚಿನವೂ ಒಂದು ಬಾರಿಗೆ ನಡೆದು ಹೋಗು ವಂತಹವುಗಳು. ಹಾಗಾಗಿ ಅವುಗಳೊಂದಿಗೆ ಬರುವ ಕ್ರಿಯಾಗುಣಪದಗಳು ಬೇಗನೆ ಅಳಿದುಹೋಗುವಂತಹ ಗುಣಧರ್ಮಗಳನ್ನು ಸೂಚಿಸುತ್ತಿದ್ದರೆ ಸಾಕು. ಸಾಮಾನ್ಯವಾಗಿ ಇವು ಘಟನೆ ನಡೆಯುವ ಕ್ರಮ, ಘಟನೆಯ ಜಾಗ ಇಲ್ಲವೇ ಘಟನೆಯ ಸಮಯವನ್ನು ಸೂಚಿಸುವ ಗುಣಪದಗಳಾಗಿರುತ್ತವೆ. ಇದಕ್ಕೆ ಬದಲು, ನಾಮಪದಗಳು ಸಾಮಾನ್ಯವಾಗಿ ಹೆಚ್ಚು ಸಮಯ ಬದಲಾಗದೆ ಉಳಿಯುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ. ಹಾಗಾಗಿ, ಅವುಗಳೊಂದಿಗೆ ಬರುವ ನಾಮಗುಣಪದಗಳು ಹೆಚ್ಚು ಸಮಯ ಉಳಿಯುವಂತಹ ಗುಣಧರ್ಮಗಳನ್ನು ಸೂಚಿಸಬೇಕಾಗುತ್ತದೆ. ಈ ಗುಣಪದಗಳು ಸೂಚಿಸುವ ಅಳತೆ, ಬಣ್ಣ, ಭೌತಿಕ ಗುಣಧರ್ಮಗಳು, ಇವೆಲ್ಲ ಇಂತಹ ಸ್ವರೂಪ ದವಾಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು (4.3.2 ನೋಡಿ).
6.3.6 ವಾಕ್ಯರಚನೆಯ ಬೇಡಿಕೆಗಳು
ಕೆಲವೊಮ್ಮೆ ವಾಕ್ಯರಚನೆಯ ಬೇಡಿಕೆಗಳನ್ನು ಪೂತ್ರಿಗೊಳಿಸುವುದಕ್ಕಾಗಿ ಕ್ಷಣಿಕ ಗುಣಧರ್ಮಗಳನ್ನು ನಾಮಗುಣಪದ ಸೂಚಿಸುವ ಕ್ರಿಯಾಗುಣಪದಗಳನ್ನು ಗಳನ್ನಾಗಿ ಬಳಸುವ ಅವಶ್ಯಕತೆ ಕಂಡುಬರುತ್ತದೆ. ಉದಾಹರಣೆಗಾಗಿ ಒಂದು
ವಾಕ್ಯದ ಕೊನೆಯ ಕ್ರಿಯಾಪದಕ್ಕೆ ಇಕೆ ಪ್ರತ್ಯಯವನ್ನು ಸೇರಿಸುವ ಮೂಲಕ ಅದನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ (ಘಟಕವನ್ನಾಗಿ) ಮಾಡುವು ದಿದ್ದಲ್ಲಿ ಅದರೊಂದಿಗೆ ಬರುವ ಕ್ರಿಯಾಗುಣಪದವನ್ನು ನಾಮಗುಣಪದವಾಗಿ ಬದಲಾಯಿಸುವ ಅವಶ್ಯಕತೆಯಿದೆ (7.3.2 ನೋಡಿ). (24ಕ) ಆಕೆ ಗಟ್ಟಿಯಾಗಿ ಹಾಡುತ್ತಿದ್ದಾಳೆ. (24ಖ) ಆಕೆಯ ಗಟ್ಟಿಯಾದ ಹಾಡುವಿಕೆ ಇಲ್ಲಿವರೆಗೂ ಕೇಳಿಸುತ್ತಿದೆ. ಆದರೆ ಇಂತಹ ಸಂದಭ್ರಗಳಲ್ಲಿ ಬರುವ ನಾಮಗುಣಪದಗಳು ನಿಜಕ್ಕೂ ಕ್ರಿಯಾಗುಣಪದಗಳಾಗಿದ್ದು ಘಟನೆಯೊಂದರ ಗುಣಧರ್ಮವನ್ನು ಸೂಚಿಸುತ್ತಿವೆ ಎಂಬುದನ್ನು ಗಮನಿಸಬಹುದು. (24ಖ)ದಲ್ಲಿ ಹಾಡುವಿಕೆ ಎಂಬ ನಾಮಪದವು ಒಂದು ಘಟನೆಯನ್ನು ಸೂಚಿಸುತ್ತಿದೆ ಮತ್ತು ಈ ಘಟನೆಯ ಗುಣಧರ್ಮ ವೊಂದನ್ನು ಗಟ್ಟಿಯಾದ ಎಂಬ ಗುಣಪದ ಸೂಚಿಸುತ್ತಿದೆ. ಇದೇ ರೀತಿಯಲ್ಲಿ ಶಾಶ್ವತವಾದ ಗುಣಧರ್ಮವೊಂದನ್ನು ಸೂಚಿಸುವ ಗುಣಪದವನ್ನು ಕೆಲವು ಸಂದಭ್ರಗಳಲ್ಲಿ ಕ್ರಿಯಾಗುಣಪದವನ್ನಾಗಿ ಮಾಡಿ ಬಳಸುವ ಅವಶ್ಯಕತೆ ಕಂಡುಬರುತ್ತದೆ. ಇಂತಹ ಸಂದಭ್ರಗಳಲ್ಲಿ ಅವು ನೇರ ವಾಗಿ ಘಟನೆಯ ಗುಣಧರ್ಮವೊಂದನ್ನು ಸೂಚಿಸುವ ಬದಲು ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುತ್ತವೆ. (25ಕ) ಆಕೆ ಬಾಳೆಕಾಯಿಯನ್ನು ತೆಳ್ಳಗೆ ಕತ್ತರಿಸುತ್ತಿದ್ದಾಳೆ. (25ಖ) ಅವನು ಬಾಗಿಲಿನ ಹತ್ತಿರ ನೆಟ್ಟಗೆ ನಿಂತಿದ್ದಾನೆ. (25ಗ) ರಾಜು ರಗ್ಗು ಹೊದೆದುಕೊಂಡು ಬೆಚ್ಚಗೆ ಮಲಗಿದ್ದಾನೆ. ಮೇಲಿನ ವಾಕ್ಯಗಳಲ್ಲಿ ಬಂದಿರುವ ತೆಳ್ಳಗೆ, ನೆಟ್ಟಗೆ ಮತ್ತು ಬೆಚ್ಚಗೆ ಎಂಬ ಗುಣಪದಗಳು ಕತ್ತರಿಸು, ನಿಲ್ಲು ಮತ್ತು ಮಲಗು ಎಂಬ ಕ್ರಿಯಾಪದಗಳ ವಿಶೇಷಣಗಳಾಗಿ ಬಂದಿವೆಯಾದರೂ ಅವು ನೇರವಾಗಿ ಆ ಕ್ರಿಯಾಪದಗಳು ತಿಳಿಸುವ ಘಟನೆಗಳ ಗುಣಧರ್ಮಗಳನ್ನು ಸೂಚಿಸುವುದಕ್ಕಿಂತಲೂ ಅವು ನಡೆ ದುದರಿಂದಾಗಿ ಇಲ್ಲವೇ ನಡೆಯುತ್ತಿರುವಾಗ ಅವುಗಳ ಘಟಕಗಳಲ್ಲಿ ಕಾಣಿಸುವ ಗುಣಧರ್ಮಗಳನ್ನು ಸೂಚಿಸುತ್ತಿವೆ. ಉದಾಹರಣೆಗಾಗಿ, ಕತ್ತರಿಸುವ ಘಟನೆ ಒಂದು ವಿಧವಾಗಿ ಸಾಗುತ್ತಿರುವುದರಿಂದಾಗಿ ಅದರ ಮೂಲಕ ತೆಳ್ಳಗಾಗಿರುವ ವಸ್ತುಗಳು ಸಿದ್ಧವಾಗುತ್ತಿವೆ ಎಂಬ ಅರ್ಥ (25ಕ) ವಾಕ್ಯಕ್ಕಿದೆ. ಗುಣಧರ್ಮವನ್ನು ನೇರವಾಗಿ ಘಟನೆಯ
6.4 ಅಣಕಿಸುವ ಗುಣಪದಗಳು
ಕನ್ನಡದಲ್ಲಿ ಸೂಚಿಸುವಂತಹ ಗುಣಪದಗಳು ಜಾಸ್ತಿಯಿಲ್ಲ. ಆದರೆ, ಘಟನೆಗಳು ನಡೆಯುವಾಗ ಅವುಗಳ ಸದ್ದು, ನೋಟ, ಸ್ಪಶ್ರ ಮೊದಲಾದ ಗುಣಧರ್ಮಗಳ ವಿಷಯದಲ್ಲಿ ಆಡುಗನ ಲ್ಲುಂಟಾಗುವ ಅನುಭವಗಳನ್ನು ಸೂಚಿಸುವುದಕ್ಕಾಗಿ ಅಂತಹ ಅನುಭವಗಳನ್ನು ‘ಅಣಕಿಸು’ವಂತಹ ಹಲವು ಪದಗಳನ್ನು ಗುಣಪದಗಳಾಗಿ ಬಳಸುವ ವಿಧಾನ ಕನ್ನಡದಲ್ಲಿ ಬಳಕೆಯಲ್ಲಿದೆ.
(26ಕ) ಮೇಲಿನಿಂದ ಪೆಟ್ಟಿಗೆ ಡಬ್ಬನೆ ಕೆಳಗೆ ಬಿತ್ತು. (26ಖ) ಅವನು ಉಪ್ಪರಿಗೆಯಿಂದ ದಡದಡನೆ ಕೆಳಗಿಳಿದು ಬಂದ. (26ಗ) ದೀಪ ಮಿಣಿಮಿಣಿ ಉರಿಯುತ್ತಿತ್ತು. (26ಘ) ಅವಳು ಎಲ್ಲವನ್ನೂ ಪಟಪಟನೆ ಹೇಳಿ ಮುಗಿಸಿದಳು. (26ಙ) ಅದರಿಂದ ಗಮ್ಮನೆ ವಾಸನೆ ಹೊರಸೂಸುತ್ತಿತ್ತು. ಕನ್ನಡದಲ್ಲಿ ಇಂತಹ ಗುಣಪದಗಳು ಕೆಳಗಿನ ಉದಾಹರಣೆಗಳಲ್ಲಿ ಕಾಣಿಸುವ ಹಾಗೆ ಮುಖ್ಯವಾಗಿ ಮೂರು ರೂಪಗಳಲ್ಲಿ ಬಳಕೆಯಾಗುತ್ತವೆ.
(1) ಅಕ್ಷರಗಳು ಮೂರಿದ್ದು, ಎರಡನೆಯ ಅಕ್ಷರ ಒತ್ತಕ್ಷರವಾಗಿರುವ ಪದಗಳು: ಸರ್ರನೆ, ಗಿರ್ರನೆ, ಚಟ್ಟನೆ, ದೊಪ್ಪನೆ, ಬುಸ್ಸನೆ, ತಟ್ಟನೆ, (2) ಅಕ್ಷರಗಳು ನಾಲ್ಕಿದ್ದು, ಮೂರನೆಯ ಅಕ್ಷರ ಒತ್ತಕ್ಷರವಾಗಿರುವ ಪದಗಳು: ಗಬಕ್ಕನೆ, ತಟಕ್ಕನೆ, ಕವಕ್ಕನೆ, ಬಡಕ್ಕನೆ, ತಪಕ್ಕನೆ, ಚಟಕ್ಕನೆ, ಪಚಕ್ಕನೆ, ದುಡುಮ್ಮನೆ, ಗುಳುಮ್ಮನೆ, ಇತ್ಯಾದಿ. (3) ಅಕ್ಷರಗಳು ಐದಿದ್ದು, ಯಾವುದೂ ಒತ್ತಕ್ಷರವಾಗಿಲ್ಲದಿರುವ ಕತಕತನೆ, ಚಟಚಟನೆ, ಪದಗಳು: ಗಿರಗಿರನೆ, ಪಕಪಕನೆ, ಕರಕರನೆ, ಕಚಕಚನೆ, ಇತ್ಯಾದಿ. ಗಣಗಣನೆ, ದರದರನೆ, ಕಿಲಕಿಲನೆ, ಗಳಗಳನೆ, ಇವುಗಳಲ್ಲಿ ಮೂರನೆಯ ವಿಭಾಗಕ್ಕೆ ಸೇರಿದ ಪದಗಳಲ್ಲಿ ಕೆಲವು ಅನೆ ಎಂಬ ಪ್ರತ್ಯಯವಿಲ್ಲದೆಯೂ ಬಳಕೆಯಾಗಬಲ್ಲುವು (ಉದಾ: ದರದರ, ಚಟಚಟ, ಇತ್ಯಾದಿ). ಇದಲ್ಲದೆ, ಬೇರೆ ಕೆಲವು ಪದಗಳು ಯಾವಾಗಲೂ ಅನೆ ಎಂಬ ಪ್ರತ್ಯಯವಿಲ್ಲದೆಯೇ ಬರುತ್ತವೆ (ಉದಾ: ಕಿಣಿಕಿಣಿ, ಸುರುಸುರು, ಪಿಳಿಪಿಳಿ, ಇಂತಹ ಅಣಕಿಸುವ ಗುಣಪದಗಳಲ್ಲೆಲ್ಲ ಮೊದಲಿಗೆ ಯಾವುದಾದರೂ ಸುರುವಾಗುವ ಅಣಕಿಸುವ ಪದಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದೇನೋ.
ಇದಲ್ಲದೆ, ಇಂತಹ ಹೆಚ್ಚಿನ ಪದಗಳಲ್ಲೂ ಗಿಡ್ಡ ಸ್ವರಗಳು ಮಾತ್ರ ಬಳಕೆಯಾಗುತ್ತವೆ. ಪಟಾರನೆ ಮತ್ತು ತಟಾರನೆ ಎಂಬಂತಹ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಉದ್ದ ಸ್ವರ ಕಾಣಿಸಿಕೊಳ್ಳುತ್ತದೆ.
ಮೂರನೆಯ ವಿಭಾಗಕ್ಕೆ ಸೇರುವ ಐದಕ್ಷರವಿರುವ ಗುಣಪದಗಳಲ್ಲೆಲ್ಲ ಅಣಕವನ್ನು ಸೂಚಿಸುವ ಒಂದು ಪದ ಎರಡೆರಡು ಬಾರಿ ಬರುತ್ತದೆ. ಇದಲ್ಲದೆ ವ್ಯಂಜನವಿಲ್ಲದಿರುವುದಿಲ್ಲ. ಬಹುಶಃ ಸ್ವರದಲ್ಲಿ ಇಂತಹ ಗುಣಪದಗಳಲ್ಲಿ ಉದ್ದ ಸ್ವರ ಮಾತ್ರವಲ್ಲದೆ ಒತ್ತಕ್ಷರವೂ ಕಾಣಿಸಿ ಕೊಳ್ಳುವುದಿಲ್ಲ (ಭಟ್ 1999:192 ನೋಡಿ).
6.5 ಜಾಗವನ್ನು ಸೂಚಿಸುವ ಗುಣಪದಗಳು
ಒಂದು ಘಟನೆ ನಡೆಯುವುದು ಎಲ್ಲಿ ಎಂಬುದಾಗಿ ಅದರ ಜಾಗವನ್ನು ಸೂಚಿಸಲು ಕನ್ನಡದಲ್ಲಿ ಒಂದು ಗುಣಪದವನ್ನಾಗಲಿ ಇಲ್ಲವೇ ಅದಕ್ಕಿಂತ ಹೆಚ್ಚು ಸ್ವತಂತ್ರ ವಾಗಿರುವ ಒಂದು ಘಟಕವನ್ನಾಗಲಿ ಬಳಸಲು ಸಾಧ್ಯವಿದೆ. ಈ ಎರಡು ರೀತಿಯ ವಾಕ್ಯಾಂಗಗಳ ನಡುವೆ ಜಾಸ್ತಿ ವ್ಯತ್ಯಾಸ ಇಲ್ಲ. ಕೆಲವು ಸಂದಭ್ರಗಳಲ್ಲಿ ನಾವು ಬಳಸಿರುವ ವಾಕ್ಯಾಂಗವನ್ನು ಒಂದು ಗುಣಪದವೆಂದು ಕರೆಯಬೇಕೋ ಅಥವಾ ಒಂದು ಘಟಕವೆಂದು ಕರೆಯಬೇಕೋ ಎಂಬ ವಿಷಯದಲ್ಲಿ ಸಂಶಯವುಂಟಾಗಲು ಇಲ್ಲವೇ ಅಭಿಪ್ರಾಯಭೇದವುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ, ಅಲ್ಲಿ, ಇಲ್ಲಿ, ಆಚೆ, ಈಚೆ, ಮೇಲೆ, ಕೆಳಗೆ, ಒಳಗೆ, ಹೊರಗೆ, ಹತ್ತಿರ, ದೂರ, ಹಿಂದೆ, ಮುಂದೆ ಮೊದಲಾದ ಬೇರೆ ಬೇರೆ ರೀತಿಯ ಜಾಗಗಳನ್ನು ಸೂಚಿಸುವ ಪದಗಳನ್ನು ಗುಣಪದಗಳೆಂದು ಕರೆಯಲು ಸಾಧ್ಯವಿದೆ. ಆದರೆ ಇವನ್ನೇ ಬಳಸಿ ತಯಾರಿಸಿದ ನಮ್ಮ ಮನೆಯಲ್ಲಿ, ಮಾಡಿನ ಮೇಲೆ, ಹಟ್ಟಿಯಿಂದ ದೂರ, ಹಲಸಿನ ಮರದ ಆಚೆ ಮೊದಲಾದ ಪದಕಂತೆಗಳು ವಾಕ್ಯದಲ್ಲಿ ಬಂದಾಗ ಅವು ಮುಖ್ಯವಾದ ಇಲ್ಲವೇ ಮುಖ್ಯವಲ್ಲದ ಘಟಕಗಳಾಗಿ ಕಾಣಿಸಿಕೊಳ್ಳುತ್ತವೆ. (27ಕ) ನಿಮ್ಮ ಪುಸ್ತಕವನ್ನು ಇಲ್ಲಿ ಇರಿಸಿದ್ದೇನೆ. (27ಖ) ಅವರು ಕೊಟ್ಟ ಹಣವನ್ನು ಕಪಾಟಿನಲ್ಲಿ ಇರಿಸಿದ್ದೇನೆ. (28ಕ) ಆತನ ಗಾಳಿಪಟ ಬಹಳ ಮೇಲೆ ಹೋಗಿದೆ. (28ಖ) ಅವನು ಆ ಪುಸ್ತಕವನ್ನು ತನ್ನ ಹೊಸ ಮೇಜಿನ ಮೇಲೆ ಬರೆದ. ಈ ಗುಣಪದಗಳು ಒಂದು ಘಟನೆಯ ಜಾಗವನ್ನು ನೇರವಾಗಿ ಸೂಚಿಸುತ್ತಿರ ಬಹುದು, ಇಲ್ಲವೇ ಆಡುಗನ ಜಾಗಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುತ್ತಿರ ಬಹುದು. ಉದಾಹರಣೆಗಾಗಿ, ಸುತ್ತ, ಒಳಗೆ, ನಡುವೆ ಮೊದಲಾದ ಗುಣಪದ ಗಳು ಘಟನೆಯ ಜಾಗವನ್ನು ನೇರವಾಗಿ ಸೂಚಿಸಬಲ್ಲುವು. ಅವನ್ನು ವಾಕ್ಯದಲ್ಲಿ ಬಳಸಿದಾಗ, ಅವು ಘಟನೆಗೆ ಸಂಬಂಧಿಸಿದಂತೆ ಯಾವ ಜಾಗವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಆದರೆ, ಆಚೆ, ಈಚೆ, ಅಲ್ಲಿ, ಇಲ್ಲಿ, ಮೇಲೆ, ಕೆಳಗೆ ಮೊದಲಾದ ಬೇರೆ ಕೆಲವು ಗುಣಪದಗಳು ಘಟನೆಯ ಜಾಗವನ್ನು ಆಡುಗನ ಜಾಗಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುತ್ತವೆ. ಅವನ್ನು ವಾಕ್ಯದಲ್ಲಿ ಬಳಸಿದಾಗ ಅವು ಯಾವ ಜಾಗವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿ ನಿಂತಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಈ ಎರಡು ರೀತಿಯ ಗುಣಪದಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣ ಬಹುದು. (29ಕ) ರಾಜು ಇಲ್ಲಿ ಹಾಡುತ್ತಿದ್ದಾನೆ. (29ಖ) ರಾಜು ಒಳಗೆ ಹಾಡುತ್ತಿದ್ದಾನೆ. (29ಕ) ವಾಕ್ಯದ ಪ್ರಕಾರ ರಾಜು ಹಾಡುತ್ತಿರುವುದು ಎಲ್ಲಿ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಆದರೆ (29ಖ)ದಲ್ಲಿ ಇದು ಅವಶ್ಯವಿಲ್ಲ.
ಈ ಗುಣಪದಗಳು ಸೂಚಿಸುವ ಜಾಗ ಒಂದು ಚಲನೆಗೆ ಸಂಬಂಧಿಸಿರುವು ದಾದಲ್ಲಿ, ಅವು ಬರಿಯ ಜಾಗವನ್ನು ಸೂಚಿಸುವ ಬದಲು ಚಲನೆಯ ಸುರು ಇಲ್ಲವೇ ಕೊನೆಯನ್ನು ಸೂಚಿಸಲು ಸಾಧ್ಯವಿದೆ. ಇದಕ್ಕಾಗಿ ಈ ಗುಣಪದ ಗಳೊಂದಿಗೆ ಇಂದ ಮತ್ತು ಗೆ ಎಂಬ ಪ್ರತ್ಯಯಗಳನ್ನು ಬಳಸಬೇಕಾಗುತ್ತದೆ. (30ಕ) ಅವನು ಇಲ್ಲಿ ಹಾಡುತ್ತಿದ್ದಾನೆ. (30ಖ) ಅವನು ಇಲ್ಲಿಂದ ಹೋಗಿದ್ದಾನೆ. (30ಗ) ಅವನು ಇಲ್ಲಿಗೆ ಬಂದಿದ್ದಾನೆ. (30ಕ)ದಲ್ಲಿ ಇಲ್ಲಿ ಎಂಬ ಪದ ಬರಿಯ ಒಂದು ಜಾಗವನ್ನು ಸೂಚಿಸುತ್ತಿದೆ ಯಾದರೆ, (30ಖ)ದಲ್ಲಿ ಇಲ್ಲಿಂದ ಎಂಬುದು ಒಂದು ಚಲನೆಯ ಸುರುವನ್ನೂ ಮತ್ತು (30ಗ)ದಲ್ಲಿ ಇಲ್ಲಿಗೆ ಎಂಬುದು ಒಂದು ಚಲನೆಯ ಕೊನೆಯನ್ನೂ ಸೂಚಿಸುತ್ತಿವೆ.
6.6 ಸಮಯವನ್ನು ಸೂಚಿಸುವ ಗುಣಪದಗಳು
ಜಾಗವನ್ನು ಸೂಚಿಸುವ ಪದಗಳ ಹಾಗೆ ಸಮಯವನ್ನು ಸೂಚಿಸುವ ಪದಗಳೂ ಒಂದು ಘಟನೆಯ ಇಲ್ಲವೇ ಸಂಗತಿಯ ಸಮಯವನ್ನು ನೇರವಾಗಿ ಸೂಚಿಸ ಬಲ್ಲುವು ಇಲ್ಲವೇ ಅದನ್ನೇ ವಾಕ್ಯದ ಆಡುಗನ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಬಲ್ಲುವು. ಇದಕ್ಕಾಗಿ ವಾಕ್ಯಗಳಲ್ಲಿ ಎರಡು ರೀತಿಯ ಪದಗಳ ಬಳಕೆ ಯಾಗುತ್ತದೆ. ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಬರುವ ಪ್ರತ್ಯಯಗಳು ಘಟನೆಯ ಇಲ್ಲವೇ ಸಂಗತಿಯ ಸಮಯವನ್ನು ವಾಕ್ಯದ ಆಡುಗನ ಸಮಯಕ್ಕೆ ಸಂಬಂಧಿ ಸಿರುವ ಹಾಗೆ ಮಾತ್ರವೇ ಸೂಚಿಸುತ್ತವೆ ಎಂಬುದನ್ನು ನಾವು ಹಿಂದಿನ ಅಧ್ಯಾಯ ಗಳಲ್ಲಿ (2.1.1 ಮತ್ತು 3.1.1ರಲ್ಲಿ) ನೋಡಿರುವೆವು. (ಕ್ರಿಯಾಪದಗಳ ಜೋಡಿಸುವ ರೂಪಗಳು ಮಾತ್ರ ಇದಕ್ಕೆ ಅಪವಾದಗಳಾಗಿವೆ (5.2 ನೋಡಿ)). ಘಟನೆಯ ಸಮಯವನ್ನು ಆಡುಗನ ಸಮಯಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುವ ಗುಣಪದಗಳು ಕ್ರಿಯಾಪದದಲ್ಲಿ ಬರುವ ಪ್ರತ್ಯಯವು ಸೂಚಿಸುವ ಸಮಯವನ್ನೇ ಹೆಚ್ಚು ವಿವರವಾಗಿ ತಿಳಿಸುತ್ತವೆ. ಇದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (31ಕ) ಮಾರುತಿ ನಾಳೆ ಆಳಂದಿಗೆ ಹೋಗುತ್ತಾನೆ. (31ಖ) ಸೀತಾಬಾಯಿ ನಿನ್ನೆ ಒಂದು ಸಿನೆಮಾ ನೋಡಿದಳು. (31ಕ) ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಉತ್್ತ ಪ್ರತ್ಯಯ ಬಂದಿರುವ ಕಾರಣ, ಅದು ಆ ವಾಕ್ಯವನ್ನಾಡಿರುವ ಸಮಯದ ಅನಂತರ ನಡೆಯುವ ಘಟನೆ ಯೊಂದನ್ನು ಸೂಚಿಸುತ್ತಿದೆ ಮತ್ತು ಅದೇ ವಾಕ್ಯದಲ್ಲಿ ಬರುವ ನಾಳೆ ಎಂಬ ಪದ ಅದೇ ಸಮಯವನ್ನು ಹೆಚ್ಚು ವಿವರವಾಗಿ ತಿಳಿಸುತ್ತಿದೆ.
ಇದಕ್ಕೆ ಬದಲು (31ಖ) ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಇದ್ ಪ್ರತ್ಯಯ ಬಂದಿರುವ ಕಾರಣ, ಅದು ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲು ನಡೆದಿರುವ ಘಟನೆಯನ್ನು ಸೂಚಿಸುತ್ತಿದೆ, ಮತ್ತು ಆ ವಾಕ್ಯದಲ್ಲಿ ಬಂದಿರುವ ನಿನ್ನೆ ಎಂಬ ಪದ ಅದೇ ಸಮಯವನ್ನು ಹೆಚ್ಚು ವಿವರವಾಗಿ ತಿಳಿಸುತ್ತಿದೆ. ಈ ಪದಗಳೊಂದಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಇಂದ ಮತ್ತು ಗೆ ಪ್ರತ್ಯಯಗಳು ಬರಲು ಸಾಧ್ಯವಿದ್ದು, ಅವಕ್ಕೆ ಘಟನೆ ಸುರುವಾಗಿರುವ ಮತ್ತು ಕೊನೆಗೊಂಡಿರುವ ಸಮಯಗಳನ್ನು ಸೂಚಿಸುವ ಅರ್ಥವಿದೆ. (32ಕ) ಅವನು ನಿನ್ನೆಯಿಂದ ಉಪವಾಸ ಮಾಡುತ್ತಿದ್ದಾನೆ. (32ಖ) ಅವನ ಉಪವಾಸ ನಿನ್ನೆಗೆ ಮುಗಿಯಿತು.
6.7 ಸಾರಾಂಶ
ಕನ್ನಡ ವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ಸೂಚಿಸುವವು, ಘಟನೆಗಳ ಗುಣಧರ್ಮವನ್ನು ಸೂಚಿಸುವವು ಮತ್ತು ಗುಣ ಧರ್ಮಗಳ ಪ್ರಮಾಣವನ್ನು ಸೂಚಿಸುವವು ಎಂಬುದಾಗಿ ಮೂರು ರೀತಿಯ ಗುಣಪದಗಳು ಬಳಕೆಯಲ್ಲಿವೆ. ಇವು ಕೆಲವು ವಿಷಯಗಳಲ್ಲಿ ಸಮಾನವಾಗಿವೆ ಆದರೆ ಬೇರೆ ಕೆಲವು ವಿಷಯಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಇವುಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಇವು ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಕೆಯಾಗುತ್ತವೆ ಎಂಬ ವಿಷಯದ ಮೇಲೆ ಅವಲಂಬಿಸಿವೆ. ಘಟನೆಯ ಸಮಯ, ಜಾಗ ಮತ್ತು ಪ್ರಕಾರಗಳನ್ನು ಸೂಚಿಸುವವುಗ ಳೆಂಬುದಾಗಿ ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳನ್ನು ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಮೂರನೆಯ ಗುಂಪಿಗೆ ಸೇರಿದ ಗುಣಪದಗಳಲ್ಲಿ ಹೆಚ್ಚಿನವೂ ಕನ್ನಡದಲ್ಲಿ ಅಣಕಿಸುವ ಪದಗಳಾಗಿ ಬಳಕೆಯಲ್ಲಿವೆ.
English → | Eke →
ಅಧ್ಯಾಯ ಏಳು — ಒಳವಾಕ್ಯಗಳು
7.1 ಪೀಠಿಕೆ
ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಒಟ್ಟು ಸೇರಿಸಿ ಒಂದೇ ವಾಕ್ಯವನ್ನಾಗಿ ಮಾಡಿ ಹೇಳಲು ಕನ್ನಡದಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ. ಒಂದು ವಾಕ್ಯವನ್ನು ಇನ್ನೊಂದರೊಳಗೆ ಇರಿಸಿ ಹೇಳುವುದು ಒಂದು ವಿಧಾನ, ಮತ್ತು ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಮತ್ತು, ಅಥವಾ, ಆದರೆ ಮೊದಲಾದ ಪದಗಳ ಮೂಲಕ, ಇಲ್ಲವೇ ಊ, ಏ ಮೊದಲಾದ ಪ್ರತ್ಯಯಗಳ ಮೂಲಕ ಜೋಡಿಸಿ ಹೇಳುವುದು ಇನ್ನೊಂದು ವಿಧಾನ. ಇವುಗಳಲ್ಲಿ ಮೊದಲನೆಯ ವಿಧಾನವನ್ನು ಈ ಅಧ್ಯಾಯದಲ್ಲೂ ಮತ್ತು ಎರಡನೆಯ ವಿಧಾನವನ್ನು ಮುಂದೆ ಎಂಟನೇ ಅಧ್ಯಾಯದಲ್ಲೂ ವಿವರಿಸಲಾಗುವುದು. ಒಂದು ವಾಕ್ಯವನ್ನು ಇನ್ನೊಂದರೊಳಗೆ ಇರಿಸಿ ಹೇಳಿದಾಗ ಅವುಗಳಲ್ಲಿ ಹೊರಗೆ ನಿಲ್ಲುವ ವಾಕ್ಯವನ್ನು ‘ಹೊರವಾಕ್ಯ’ವೆಂದೂ ಮತ್ತು ಒಳಗೆ ನಿಲ್ಲುವ ವಾಕ್ಯವನ್ನು ‘ಒಳವಾಕ್ಯ’ವೆಂದೂ ಕರೆಯಬಹುದು. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಮೂರು ವಾಕ್ಯಗಳನ್ನು ಹೋಲಿಸಿ ನೋಡಬಹುದು. (1ಕ) ಇವತ್ತು ಬೇಗನೆ ಬರಬೇಕು. (1ಖ) ಶಾಮರಾಯರು (ಏನೋ) ಹೇಳಿದ್ದಾರೆ. ಶಾಮರಾಯರು ಇವತ್ತು ಬೇಗನೆ ಬರಬೇಕೆಂದು ಹೇಳಿದ್ದಾರೆ. (1ಕ) ವಾಕ್ಯವನ್ನು (1ಖ) ವಾಕ್ಯದ ‘ಒಳಗೆ’ (ಏನೋ ಎಂಬ ಪದದ ಜಾಗ ದಲ್ಲಿ) ಇರಿಸಿ (1ಗ) ವಾಕ್ಯವನ್ನು ತಯಾರಿಸಲಾಗಿದೆ, ಮತ್ತು ಇದಕ್ಕಾಗಿ (1ಕ) ವಾಕ್ಯದ ಕೊನೆಯಲ್ಲಿ ಎಂದು ಪದವನ್ನು ಸೇರಿಸಲಾಗಿದೆ.
ಬೇರೆ ಬೇರೆ ರೀತಿಯ ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದ್ದು, ಇದಕ್ಕಾಗಿ ಈ ಉದ್ದೇಶಗಳನ್ನನುಸರಿಸಿ ಬೇರೆ ಬೇರೆ ವಿಧಾನಗಳನ್ನೂ ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯು ಏನು ಹೇಳಿರುವನೆಂಬುದನ್ನು ಎತ್ತಿ ಹೇಳ ಬೇಕಿದ್ದಾಗ ಮೇಲೆ ಸೂಚಿಸಿದಂತೆ ಆತ ಬಳಸಿರುವ ವಾಕ್ಯಕ್ಕೆ ಎಂದು ಪದವನ್ನು ಸೇರಿಸಿ ಅದನ್ನು ಒಳವಾಕ್ಯವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ.
ಇದಕ್ಕೆ ಬದಲು, ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸಬೇಕಾಗಿರುವಾಗ, ಅದಕ್ಕಾಗಿ ಒಂದು ವಾಕ್ಯವನ್ನು ಬಳಸಲು ಸಾಧ್ಯವಿದ್ದು, ಅಂತಹ ವಾಕ್ಯವನ್ನೂ ಇನ್ನೊಂದು ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದೆ. ಆದರೆ, ಇದಕ್ಕಾಗಿ ಆ ವಾಕ್ಯದಲ್ಲಿ ಬೇರೆ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ (2ಕ-ಘ) ವಾಕ್ಯಗಳಲ್ಲಿ ಕಾಣಬಹುದು. (2ಕ) ಹಣ್ಣು ಚನ್ನಾಗಿಲ್ಲ. (2ಖ) ರಾಜು ಒಂದು ಹಣ್ಣು ಕೊಟ್ಟಿದ್ದ. (2ಘ) ರಾಜು ಯಾವ ಹಣ್ಣನ್ನು ಕೊಟ್ಟಿದ್ದನೋ ಅದು ಚನ್ನಾಗಿಲ್ಲ. ರಾಜು ಕೊಟ್ಟಿದ್ದ ಹಣ್ಣು ಚನ್ನಾಗಿಲ್ಲ. (2ಕ)ದಲ್ಲಿ ಬಂದಿರುವ ಹಣ್ಣು ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ. ಅದೇ ವಸ್ತುವನ್ನು ಇನ್ನಷ್ಟು ಸ್ಪಷ್ಟವಾಗಿ ವರ್ಣಿಸಲು (2ಖ) ವಾಕ್ಯವನ್ನು (2ಕ) ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದೆ. ಇದಕ್ಕಾಗಿ ಆ ವಾಕ್ಯದಲ್ಲಿ ಬೇರೆ ಎರಡು ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು (2ಗ) ಮತ್ತು (2ಘ) ವಾಕ್ಯಗಳಲ್ಲಿ ಕಾಣಬಹುದು. ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಬಳಸುವ ಮುಖ್ಯ ಸಂದಭ್ರಗಳು ಯಾವುವು ಮತ್ತು ಅಂತಹ ಸಂದಭ್ರಗಳಲ್ಲಿ ಎಂತಹ ಬದಲಾವಣೆಗಳನ್ನೆಲ್ಲ ಆ ವಾಕ್ಯಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕೆಳಗೆ ಸ್ವಲ್ಪ ವಿವರವಾಗಿ ತಿಳಿಸಲಾಗಿದೆ.
7.2 ಎತ್ತಿ ಹೇಳುವುದು
ಇನ್ನೊಬ್ಬನ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಎತ್ತಿ ಹೇಳಲು ಕನ್ನಡದಲ್ಲಿ ಮುಖ್ಯವಾಗಿ ಎರಡು ವಿಧಾನಗಳು ಬಳಕೆಯಲ್ಲಿವೆ. ಆ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಸೂಚಿಸುವ ವಾಕ್ಯವನ್ನು ಅಂತೆ ಪದದೊಂದಿಗೆ ಬಳಸುವುದು ಒಂದು ವಿಧಾನ, ಮತ್ತು ಆ ವಾಕ್ಯಕ್ಕೆ ಎಂದು ಪದವನ್ನು ಸೇರಿಸಿ ಅದನ್ನು ಬೇರೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಬಳಸುವುದು ಇನ್ನೊಂದು ವಿಧಾನ. (3ಕ) ಇವತ್ತೊಂದು ಸಭೆಯಿದೆಯಂತೆ. (3ಖ) ಇವತ್ತೊಂದು ಸಭೆಯಿದೆಯೆಂದು ರಾಜು ತಿಳಿಸಿದ್ದಾನೆ. (3ಕ) ವಾಕ್ಯದಲ್ಲಿ ಇವತ್ತೊಂದು ಸಭೆಯಿದೆ ಎಂಬ ವಾಕ್ಯವನ್ನು ಅಂತೆ ಪದದೊಂದಿಗೆ ಬಳಸಲಾಗಿದೆ ಮತ್ತು (3ಖ)ದಲ್ಲಿ ಅದೇ ವಾಕ್ಯಕ್ಕೆ ಎಂದು ಪದ ವನ್ನು ಸೇರಿಸಿ ಅದನ್ನು ರಾಜು (ಏನನ್ನೋ) ತಿಳಿಸಿದ್ದಾನೆ ಎಂಬ ವಾಕ್ಯದ ಒಳ ವಾಕ್ಯವನ್ನಾಗಿ ಮಾಡಿ ಬಳಸಲಾಗಿದೆ. ಇದಲ್ಲದೆ, ಎತ್ತಿ ಹೇಳಲಿರುವ ವಾಕ್ಯವನ್ನು ಎತ್ತಿಹೇಳುವ ಚಿಹ್ನೆಯ ಒಳಗೆ ಇರಿಸುವ ಇನ್ನೊಂದು ವಿಧಾನವೂ ಬರಹದಲ್ಲಿ ಬಳಕೆಯಲ್ಲಿದೆ. ಈ ಚಿಹ್ನೆಯ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. ‘ಇವತ್ತೊಂದು ಸಭೆಯಿದೆ’ ಎಂದು ರಾಜು ತಿಳಿಸಿದ. (4ಖ) ರಾಜು ತಿಳಿಸಿದ: ‘ಇವತ್ತೊಂದು ಸಭೆಯಿದೆ’.
7.2.1 ಅಂತೆ ಎಂಬುದರ ಬಳಕೆ
ಸಾಮಾನ್ಯವಾಗಿ, ಒಂದು ಸಂಗತಿಯನ್ನು ನಿಶ್ಚಿತವಾಗಿಯೂ ಇಂತಹವರೇ ಹೇಳಿರುವರೆಂಬುದಾಗಿ ತಿಳಿಸಲು ಸಾಧ್ಯವಿಲ್ಲದಂತಹ (ಇಲ್ಲವೇ ಹಾಗೆ ತಿಳಿಸುವ ಅವಶ್ಯಕತೆಯಿಲ್ಲದಂತಹ) ಸಂದಭ್ರದಲ್ಲಿ ಆ ಸಂಗತಿಯನ್ನು ಎತ್ತಿ ಹೇಳುವು ದಕ್ಕಾಗಿ ಅಂತೆ ಪದದ ಬಳಕೆಯಾಗುತ್ತದೆ. ಇದರ ಬಳಕೆಯಾಗುವಲ್ಲಿ ಆ ಹೇಳಿಕೆ ಗಳ ಮೂಲ ಯಾವುದೆಂಬುದನ್ನು (ಅದನ್ನು ಯಾರು ಎಲ್ಲಿ ಯಾವಾಗ ಹೇಳಿದರು ಎಂಬುದನ್ನು) ಸೂಚಿಸುವ ಪದ್ಧತಿಯಿಲ್ಲ.
ಇದಲ್ಲದೆ, ಒಬ್ಬ ವ್ಯಕ್ತಿ ತನ್ನ ವಿಷಯವಾಗಿ ಅಂತೆ ಪದವನ್ನು ಬಳಸಿ ಏನಾದರೂ ಹೇಳುವುದಿದ್ದಲ್ಲಿ, ಅದು ಆತನ ಹತೋಟಿಯಲ್ಲಿಲ್ಲದ ಘಟನೆಯ ಕುರಿತಾಗಿರಬೇಕು ಇಲ್ಲವೇ ಆತ ಬಾಲ್ಯದಲ್ಲಿ ನಡೆಸಿದ (ಮತ್ತು ಇತರರಿಂದ ತಿಳಿದುಕೊಂಡಿರುವ) ಕೆಲಸದ ಕುರಿತಾಗಿರಬೇಕು ಎಂಬ ನಿಯಮವಿದೆ. ನಾನು ಪಾಸಾಗಿದ್ದೇನಂತೆ. (5ಖ) ನಾನು ಬಹಳ ತಂಟೆ ಮಾಡುತ್ತಿದ್ದೆನಂತೆ. ಸಾಮಾನ್ಯವಾಗಿ ಅಂತೆ ಪದ ಎತ್ತಿ ಹೇಳಬೇಕಾಗಿರುವ ವಾಕ್ಯದ ಕೊನೆಯಲ್ಲಿ ಬರುತ್ತದೆ. ಕೆಲವೊಮ್ಮೆ ಅದನ್ನು ವಾಕ್ಯದ ನಡುವೆಯೂ ಬಳಸುವ ಸಾಧ್ಯತೆಯಿದೆ. ಉದಾಹರಣೆಗಾಗಿ, ವಾಕ್ಯದ ಒಂದು ಭಾಗವನ್ನು ಮಾತ್ರ ಒತ್ತಿ ಹೇಳುವುದಿದ್ದಲ್ಲಿ, ಅಂತಹ ಭಾಗದೊಂದಿಗೆ ಅದು ವಾಕ್ಯದ ನಡುವೆಯೂ ಬರಬಲ್ಲುದು. ರಾಮನಾಯಕರಿಗೆ ಸಿಕ್ಕಿದೆಯಂತೆ. (6ಖ) ರಾಮನಾಯಕರಿಗಂತೆ ಮಧುರೆಯಲ್ಲಿ ಒಂದು ಪ್ರಶಸ್ತಿ ಸಿಕ್ಕಿದ್ದು. ರಾಮನಾಯಕರಿಗೆ ಮಧುರೆಯಲ್ಲಂತೆ ಒಂದು ಪ್ರಶಸ್ತಿ ಸಿಕ್ಕಿದ್ದು. ಮಧುರೆಯಲ್ಲಿ ಪ್ರಶಸ್ತಿ (6ಖ)ದಲ್ಲಿ ರಾಮನಾಯಕರಿಗೆ ಎಂಬುದನ್ನು ಮತ್ತು (6ಗ)ದಲ್ಲಿ ಮಧುರೆ ಯಲ್ಲಿ ಎಂಬುದನ್ನು ಒತ್ತಿ ಹೇಳಲಾಗಿದೆಯಾದ ಕಾರಣ, ಅಂತೆ ಪದ ಆ ಪದಗಳೊಂದಿಗೆ ಬಂದಿದೆ. ಅಂತೆ ಎಂಬುದರ ಮೂಲಕ ಎತ್ತಿ ಹೇಳುವ ವಾಕ್ಯವನ್ನು ಒಂದು ಕೇಳ್ವಿಯಾಗಿ ಬದಲಾಯಿಸಲು ಸಾಧ್ಯವಿದೆಯಾದರೂ ಅಲ್ಲಗಳೆಯುವ ವಾಕ್ಯವಾಗಿ ಬದಲಾಯಿಸಲು ಸಾಧ್ಯವಾಗದು. ಇದಕ್ಕೆ ವಿರುದ್ಧವಾಗಿ ಅಲ್ಲಗಳೆಯುವ ವಾಕ್ಯ ವನ್ನು ಅಂತೆ ಎಂಬುದರ ಮೂಲಕ ಎತ್ತಿ ಹೇಳಬಹುದು, ಆದರೆ ಕೇಳ್ವಿ ಯೊಂದನ್ನು ಆ ರೀತಿ ಎತ್ತಿ ಹೇಳಲು ಸಾಧ್ಯವಾಗದು. (7ಕ) ಮದುವೆಗೆ ಹೋಗಬೇಕಂತೆಯೋ? (7ಖ) ಅವನು ಮದುವೆಗೆ ಹೋಗುವುದಿಲ್ಲವಂತೆ. (7ಕ) ವಾಕ್ಯದಲ್ಲಿ ಅಂತೆ ಎಂಬುದರ ಮೂಲಕ ಎತ್ತಿ ಹೇಳಿರುವ ವಾಕ್ಯ ವೊಂದನ್ನು ಕೇಳ್ವಿಯಾಗಿ ಬದಲಾಯಿಸಲಾಗಿದೆ ಮತ್ತು (7ಖ)ದಲ್ಲಿ ಅಂತೆ ಎಂಬುದರ ಮೂಲಕ ಅಲ್ಲಗಳೆದಿರುವ ವಾಕ್ಯವೊಂದನ್ನು ಎತ್ತಿ ಹೇಳಲಾಗಿದೆ ಎಂಬುದನ್ನು ಗಮನಿಸಬಹುದು.
ಕೇಳ್ವಿಗಳ ಹಾಗೆಯೇ ಇತರರ ಮೂಲಕ ಕೆಲಸ ಮಾಡಿಸಲು ಬಳಸುವ ವಾಕ್ಯಗಳನ್ನು ಇಲ್ಲವೇ ಬೆರಗನ್ನು ಸೂಚಿಸುವ ವಾಕ್ಯಗಳನ್ನು ಈ ರೀತಿ ಅಂತೆ ಎಂಬ ಪದವನ್ನು ಬಳಸಿ ಎತ್ತಿ ಹೇಳಲು ಸಾಧ್ಯವಾಗದು. ಆದರೆ, ಕೇಳುಗನು ಬೇರಾರಿಗೋ ಹೇಳಿರುವ ಮಾತೊಂದನ್ನು ಇಲ್ಲವೇ ಕೇಳುಗನ ವಿಷಯವಾಗಿ ಬೇರಾರೋ ಹೇಳಿರುವ ಸಂಗತಿಯೊಂದನ್ನು ಅದು ನಿಜವೇ ಎಂಬುದಾಗಿ ಕೇಳಿ ತಿಳಿಯಲು ಅದನ್ನು ಅಂತೆ ಪದದೊಂದಿಗೆ ಬಳಸಲು ಸಾಧ್ಯವಿದೆ. (8ಕ) ನೀವು ಮೀಟಿಂಗಿಗೆ ಹೋಗಲಿಲ್ಲವಂತೆ? (8ಖ) ನೀವು ನಿನ್ನೆಯೇ ಬಂದಿದ್ದೀರಂತೆ? ವಾಕ್ಯವೊಂದನ್ನು ಅಂತೆ ಪದದೊಂದಿಗೆ ಬಳಸಿದಾಗಲೆಲ್ಲ, ಅದರಲ್ಲಿ ಬರುವ ಪುರುಷವಾಚಕ ಪದಗಳನ್ನು ಮತ್ತು ಸಮಯವನ್ನು ಸೂಚಿಸುವ ಪದಗಳನ್ನು ಎತ್ತಿ ಹೇಳುವ ಸಂದಭ್ರಕ್ಕೆ ಹೊಂದಿಕೊಳ್ಳುವಂತೆ ಬದಲಾಯಿಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ ಮೇಲೆ (8ಖ)ದಲ್ಲಿ ಅಂತೆ ಪದದೊಂದಿಗೆ ಬಂದಿರುವ ವಾಕ್ಯವನ್ನು ಅದರ ಆಡುಗನು ನೀವು ನಿನ್ನೆಯೇ ಬಂದಿದ್ದೀರಿ ಎಂಬುದಾಗಿ ಎತ್ತಿ ಹೇಳಿರುವುದನ್ನು ಗಮನಿಸಬಹುದು. ನಿಜಕ್ಕೂ ಈ ವಾಕ್ಯವನ್ನು ರಮೇಶನೆಂಬ ಬೇರೊಬ್ಬ ವ್ಯಕ್ತಿ ರಾಜು ಇವತ್ತು ಬಂದಿದ್ದಾನೆ ಎಂಬುದಾಗಿ ಹೇಳಿರಬಹುದು. ಆ ವಾಕ್ಯವನ್ನು ಆಡುಗನು ರಾಜುವಿಗೆ ಅಂತೆ ಪದದ ಮೂಲಕ (ಮಾರನೆಯ ದಿವಸ) ಎತ್ತಿಹೇಳ ಬೇಕಾಗಿರುವ ಸಂದಭ್ರದಲ್ಲಿ ಅದರಲ್ಲಿ ಬಂದ ರಾಜು ಪದಕ್ಕೆ ಬದಲಾಗಿ ನೀವು ಎಂಬ ಪುರುಷವಾಚಕ ಪದವನ್ನೂ, ಇವತ್ತು ಪದಕ್ಕೆ ಬದಲಾಗಿ ನಿನ್ನೆ ಪದವನ್ನೂ ಮತ್ತು ಬಂದಿದ್ದಾನೆ ಎಂಬ ಕ್ರಿಯಾರೂಪಕ್ಕೆ ಬದಲಾಗಿ ಬಂದಿದ್ದೀರಿ ಎಂಬ ಕ್ರಿಯಾರೂಪವನ್ನೂ ಬಳಸಬೇಕಾಗಿದೆ ಎಂಬುದನ್ನು ಗಮನಿಸಬಹುದು.
7.2.2 ಒಳವಾಕ್ಯದ ಬಳಕೆ
ಇನ್ನೊಬ್ಬ ವ್ಯಕ್ತಿಯ ಮಾತನ್ನು ಎತ್ತಿ ಹೇಳಬೇಕಾದಾಗ, ಆ ಮಾತಿಗೆ ಎಂದು ಪದವನ್ನು ಸೇರಿಸಿ, ಅದನ್ನು ಬೇರೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಹೇಳುವುದು ಎರಡನೆಯ ವಿಧಾನ. ಇದು ಮೇಲಿನ ವಿಧಾನದಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಉದಾಹರಣೆಗಾಗಿ, ಆ ಮಾತನ್ನು ಯಾರು ಹೇಳಿದ್ದು, ಯಾರೊಂದಿಗೆ ಹೇಳಿದ್ದು, ಎಲ್ಲಿ ಹೇಳಿದ್ದು, ಯಾವಾಗ ಹೇಳಿದ್ದು, ಹೇಗೆ ಹೇಳಿದ್ದು ಎಂಬುದನ್ನೆಲ್ಲ ಈ ವಿಧಾನದಲ್ಲಿ ಬಳಕೆಯಾಗುವ ಹೊರವಾಕ್ಯದ ಮೂಲಕ ತಿಳಿಸಲು ಸಾಧ್ಯವಿದೆ. (9ಕ) ಪಿಕ್ನಿಕ್ಕಿಗೆ ಬರುವುದಿಲ್ಲವೆಂದು ನಿನ್ನೆ ಸಂಜೆ ಪಾಟ್ರಿಯಲ್ಲಿ ಕಾಣಸಿಕ್ಕಿದ್ದಾಗ ರಾಜು ನನ್ನ ಹತ್ತಿರ ಗುಟ್ಟಾಗಿ ತಿಳಿಸಿದ್ದ. (9ಖ) ರಾಜು ಪಿಕ್ನಿಕ್ಕಿಗೆ ಬರುವುದಿಲ್ಲವಂತೆ. ಇಲ್ಲಿ ಪಿಕ್ನಿಕ್ಕಿಗೆ ಬರುವುದಿಲ್ಲ ಎಂಬುದು ಒಳವಾಕ್ಯ. ಅದನ್ನು ಯಾವಾಗ ಹೇಳಿದ್ದು ಎಂಬುದನ್ನು ಹೊರವಾಕ್ಯದಲ್ಲಿರುವ ನಿನ್ನೆ ಸಂಜೆ ಎಂಬ ಘಟಕ, ಎಲ್ಲಿ ಹೇಳಿದ್ದು ಎಂಬುದನ್ನು ಪಾಟ್ರಿಯಲ್ಲಿ ಕಾಣಸಿಕ್ಕಿದಾಗ ಎಂಬ ಘಟಕ (ಇದರಲ್ಲೂ ಒಂದು ಒಳವಾಕ್ಯವಿದೆ), ಯಾರು ಹೇಳಿದ್ದು ಎಂಬುದನ್ನು ರಾಜು ಎಂಬ ಘಟಕ, ಯಾರೊಡನೆ ಹೇಳಿದ್ದು ಎಂಬುದನ್ನು ನನ್ನ ಹತ್ತಿರ ಎಂಬ ಘಟಕ ಮತ್ತು ಹೇಗೆ ಹೇಳಿದ್ದು ಎಂಬುದನ್ನು ಗುಟ್ಟಾಗಿ ಎಂಬ ಗುಣಪದ ತಿಳಿಸುತ್ತವೆ. ಅಂತೆ ಪದದ ಬಳಕೆಯಲ್ಲಿ ಇದಾವುದೂ ಸಾಧ್ಯವಿಲ್ಲವೆಂಬುದನ್ನು (9ಖ) ದಲ್ಲಿ ಕಾಣಬಹುದು. ಇದಲ್ಲದೆ, ಹೊರವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದ ಎತ್ತಿ ಹೇಳುವುದರ ಉದ್ದೇಶವೇನೆಂಬುದನ್ನು ತಿಳಿಸುತ್ತದೆ. ಈ ಹೊರವಾಕ್ಯದಲ್ಲಿ ಬೇರೆ ಬೇರೆ ಕ್ರಿಯಾಪದಗಳು ಬರಲು ಸಾಧ್ಯವಿದ್ದು ಅವು ಇಂತಹ ಬೇರೆ ಬೇರೆ ರೀತಿಯ ಉದ್ದೇಶಗಳಿಗಾಗಿ ಇನ್ನೊಬ್ಬರ ಮಾತನ್ನು ಎತ್ತಿ ಹೇಳಲು ಸಾಧ್ಯವಿದೆ ಎಂಬುದನ್ನು ಸೂಚಿಸುತ್ತವೆ. (10ಕ) ಖಂಡಿತವಾಗಿಯೂ ಬರುತ್ತೇನೆಂದು ಆತ ಮಾತು ಕೊಟ್ಟಿದ್ದ. (10ಖ) ಒಳಗೆ ಕಾಲಿಡಕೂಡದೆಂದು ಆತ ಆಜ್ಞಾಪಿಸಿದ್ದ. (10ಗ) ನಿನ್ನೆ ರಾತ್ರಿ ನಿಮ್ಮಲ್ಲಿಗೆ ಬರಬೇಕೆಂದು ಆಕೆಗೆ ಅನಿಸಿತ್ತು. (10ಘ) ಆಕೆ ಎಲ್ಲಿಗೆ ಹೋಗಿದ್ದಾಳೆಂದು ಆತ ಪ್ರಶ್ನಿಸಿದ. ಅಂತೆ ಪದದ ಬಳಕೆಗೂ ಮತ್ತು ಎಂದು ಪದದ ಬಳಕೆಗೂ ನಡುವೆ ಹಲವು ವ್ಯತ್ಯಾಸಗಳಿವೆ. ಮೇಲೆ ಸೂಚಿಸಿದ ಹಾಗೆ, ಎತ್ತಿ ಹೇಳುವ ವಾಕ್ಯವನ್ನು ಯಾರು ಯಾವಾಗ ಎಲ್ಲಿ ಹೇಳಿರುವರೆಂಬುದನ್ನು ಸ್ಪಷ್ಟವಾಗಿ ತಿಳಿಸಬೇಕಾ ಗಿರುವಾಗ ಅಂತೆ ಎಂಬುದನ್ನು ಬಳಸಲು ಸಾಧ್ಯವಾಗದು. ಅಂತಹ ಸಂದಭ್ರ ಗಳಲ್ಲಿ ಎಂದು ಎಂಬುದನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ, ಎಂದು ಎಂಬುದರೊಂದಿಗೆ ಸೇರಿ ಬರುವ ವಾಕ್ಯ ಒಂದು ಹೊರವಾಕ್ಯದ ಅಂಗವಾಗಿ ಬರುವುದಾದ ಕಾರಣ, ಆ ವಾಕ್ಯದ ಕುರಿತಾಗಿ ಇನ್ನೂ ಏನೇನು ಹೇಳಬೇಕೆಂದಿದೆಯೋ ಅದೆಲ್ಲವನ್ನೂ ಈ ಹೊರವಾಕ್ಯದಲ್ಲಿ ಹೇಳಲು ಸಾಧ್ಯವಿದೆ. ಇನ್ನೊಬ್ಬರ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಮಾತ್ರವಲ್ಲದೆ ತನ್ನದೇ ಮಾತನ್ನು ಇಲ್ಲವೇ ಅಭಿಪ್ರಾಯವನ್ನೂ ಎಂದು ಪದದ ಮೂಲಕ ಎತ್ತಿ ಹೇಳಲು ಸಾಧ್ಯವಿದೆ. (11ಕ) ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜುವಿನ ಹತ್ತಿರ ಹೇಳಿದ್ದೆ. (11ಖ) ನನಗೆ ಎಲ್ಲಿಗೂ ಹೋಗಬೇಕೆಂದು ಅನಿಸುವುದಿಲ್ಲ. ಕೆಲಸ ಮಾಡಬೇಕೆಂದು ನಾನಾತನನ್ನು ಚೆನ್ನಾಗಿ ಪೊ್ರೀತ್ಸಾಹಿಸಿದೆ. ಎತ್ತಿ ಹೇಳುವ ಒಳವಾಕ್ಯವೊಂದಕ್ಕೆ ಹೊರವಾಕ್ಯವಾಗಿ ಕ್ರಿಯಾವಾಕ್ಯಗಳು ಮಾತ್ರವಲ್ಲದೆ ವಿಷಯವಾಕ್ಯಗಳೂ ಬರಲು ಸಾಧ್ಯವಿದ್ದು, ಇವೂ ಕೂಡ ಎತ್ತಿ ಹೇಳುವುದಕ್ಕಿರುವ ಉದ್ದೇಶವೇನೆಂಬುದನ್ನು ತಿಳಿಸುತ್ತವೆ. (12ಕ) ಆಕೆಯನ್ನೇ ಮದುವೆಯಾಗುವುದೆಂದು ರಾಜುವಿನ ನಿರ್ಧಾರ. (12ಖ) ನಿಮ್ಮ ಹಣ ಹಿಂದಿರುಗಿಸಿದ್ದೇನೆಂದು ನನ್ನ ನೆನಪು. (12ಗ) ನಿಮಗೆ ಹೊಸ ಸೀರೆ ಸಿಕ್ಕಿದೆಯೆಂದು ಆಕೆಗೆ ಮತ್ಸರ. (12ಘ) ಅವನಿಗೆ ನಿಮ್ಮನ್ನು ಕಾಣಬೇಕೆಂದಿದೆ. ಅಂತೆ ಮತ್ತು ಎಂದು ಎಂಬವುಗಳ ಬಳಕೆಯ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಅಂತೆ ಎಂಬುದನ್ನು ಬಳಸಬೇಕಿದ್ದಲ್ಲಿ ಎತ್ತಿಹೇಳುವ ವಾಕ್ಯ ದಲ್ಲಿ ಎತ್ತಿ ಹೇಳುವ ಸಂದಭ್ರಕ್ಕನುಸಾರವಾಗಿ ಬದಲಾವಣೆಗಳನ್ನು ಅವಶ್ಯ ವಾಗಿಯೂ ಮಾಡಬೇಕಾಗುತ್ತದೆ, ಆದರೆ ಎಂದು ಎಂಬುದರ ಬಳಕೆಯಲ್ಲಿ ಇಂತಹ ಬದಲಾವಣೆಗಳನ್ನು ಮಾಡದೆ ಇರಲೂ ಸಾಧ್ಯವಿದೆ.
(13ಕ) ನಾನು ಇವತ್ತು ಬೇಗನೆ ಹೋಗಬೇಕಂತೆ. (13ಖ) ನಾನು ಇವತ್ತು ಬೇಗನೆ ಹೋಗಬೇಕೆಂದು ರಾಜು ಹೇಳಿದ್ದಾನೆ. (13ಗ) ನೀವು ನಾಳೆ ಬೇಗನೆ ಬರಬೇಕೆಂದು ರಾಜು ಹೇಳಿದ. ನಿಜಕ್ಕೂ ರಾಜು ಹೇಳಿದ್ದು ‘ನೀವು ನಾಳೆ ಬೇಗನೆ ಬರಬೇಕು’ ಎಂದಾ ಗಿದ್ದರೂ, ಅದನ್ನು ಎತ್ತಿ ಹೇಳುವ ಸಂದಭ್ರಕ್ಕೆ ಹೊಂದಿಕೊಳ್ಳುವಂತೆ ‘ನಾನು ಇವತ್ತು ಬೇಗನೆ ಹೋಗಬೇಕು’ ಎಂಬುದಾಗಿ (13ಕ) ಮತ್ತು (13ಖ) ಗಳಲ್ಲಿ ಬದಲಿಸಲಾಗಿದೆ. ಆದರೆ (13ಗ)ದಲ್ಲಿ ಇಂತಹ ಬದಲಾವಣೆಗಳನ್ನು ಮಾಡದೆಯೂ ಆ ವಾಕ್ಯವನ್ನು ಎಂದು ಪದದ ಮೂಲಕ ಎತ್ತಿ ಹೇಳಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಬಹುದು. ಇದು ಅಂತೆ ಎಂಬುದರ ಬಳಕೆ ಯಲ್ಲಿ ಸಾಧ್ಯವಾಗದು. ಎತ್ತಿ ಹೇಳುವ ವಾಕ್ಯದ ಕೊನೆಯಲ್ಲಿ ‘ಇಲ್ಲವೇ’ ಎಂಬ ಅರ್ಥವಿರುವ ಓ ಪ್ರತ್ಯಯ ಬಂದಿದೆಯಾದಲ್ಲಿ, ಎಂಬ ಪದವನ್ನು ಬಳಸದೆಯೂ ಆ ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. (14ಕ) ಅವಳು ಯಾಕೆ ಬಂದಿದ್ದಾಳೋ. (14ಖ) ಅವಳು ಯಾಕೆ ಬಂದಿದ್ದಾಳೋ ನನಗೆ ಗೊತ್ತಿಲ್ಲ. (15ಕ) ಆತ ಹೋಗಿರುವುದು ಪುಣೆಗೋ, ಮುಂಬಯಿಗೋ. (15ಖ) ಆತ ಹೋಗಿರುವುದು ಪುಣೆಗೋ, ಮುಂಬಯಿಗೋ ಯಾರಿಗೂ ಗೊತ್ತಾಗಿಲ್ಲ.
7.3 ವರ್ಣಿಸುವುದು
ಕ್ರಿಯೆಯೊಂದರಲ್ಲಿ ನಿರತರಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳನ್ನು ಬಳಸಲು ಸಾಧ್ಯ ಎಂಬುದನ್ನು ನಾವು ಮೇಲೆ ನಾಲ್ಕನೇ ಅಧ್ಯಾಯ ದಲ್ಲಿ ನೋಡಿರುವೆವು. ಈ ಎರಡು ವಿಧಾನಗಳಲ್ಲೂ ನಾವು ಬಳಸುವುದು ಒಂದು ಪದಕಂತೆಯನ್ನೇ.
ಆದರೆ, ವರ್ಣಿಸುವ ವಿಧಾನದಲ್ಲಿ ಅದಕ್ಕಾಗಿ ಬಳಕೆಯಾಗುವ ಪದಕಂತೆಯ ಅಂಗವಾಗಿ ಒಂದು ಇಡೀ ವಾಕ್ಯವನ್ನೂ ಬಳಸಲು ಸಾಧ್ಯವಿದೆ. ಇದು ಹೆಸರಿಸುವ ವಿಧಾನದಲ್ಲಿ ಸಾಧ್ಯವಾಗದು. ಇಂತಹ ಬಳಕೆಯಲ್ಲಿ ವರ್ಣಿಸುವ ಪದಕಂತೆಯ ಅಂಗವಾಗಿ ಬರುವ ವಾಕ್ಯ ಅದರ ‘ಒಳವಾಕ್ಯ’ವಾಗಿ ಬರುತ್ತದೆ. (16ಕ) ಜಾನಕಿ ಮೈಸೂರಿನಿಂದ ಒಂದು ಸೀರೆ ತಂದಿದ್ದಳು. (16ಖ) ಆ ಸೀರೆ ಈಗ ಹರಿದು ಹೋಗಿದೆ. (16ಗ) ಜಾನಕಿ ಮೈಸೂರಿನಿಂದ ಯಾವ ಸೀರೆಯನ್ನು ತಂದಿದ್ದಳೋ ಆ ಸೀರೆ ಈಗ ಹರಿದು ಹೋಗಿದೆ. (16ಖ)ದಲ್ಲಿ ಆ ಸೀರೆ ಎಂಬ ಪದಕಂತೆ ವರ್ಣಿಸುವ ವಿಧಾನದ ಮೂಲಕ ಒಂದು ವಸ್ತುವನ್ನು ಗುರುತಿಸುತ್ತದೆ. ಈ ವಸ್ತುವಿನ ವಿಷಯವಾಗಿ ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸುವುದಕ್ಕಾಗಿ ಅ ಪದಕಂತೆಯಲ್ಲಿ (16ಕ) ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಿ ಹೇಳಲು ಸಾಧ್ಯವಿದೆ ಎಂಬುದನ್ನು (16ಗ) ವಾಕ್ಯದಲ್ಲಿ ಕಾಣಬಹುದು. ಇದಕ್ಕಾಗಿ (16ಕ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಬಳಸಬೇಕಾಗಿದೆ ಮತ್ತು ಅದು ಗುರುತಿಸಬೇಕಾಗಿರುವ ವಸ್ತುವನ್ನು ಹೆಸರಿಸುವ ಸೀರೆ ಪದದೆದುರು ಯಾವ ಎಂಬ ಅನಿಶ್ಚಿತ ಸವ್ರಪದವನ್ನು ಇರಿಸಬೇಕಾಗಿದೆ.
ಒಂದು ವಾಕ್ಯವನ್ನು ವರ್ಣಿಸುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಹೇಳಲು ಕನ್ನಡದಲ್ಲಿ ಹಲವು ವಿಧಾನಗಳು ಬಳಕೆಯಲ್ಲಿವೆ. ಮೇಲೆ ಸೂಚಿಸಿದ ಹಾಗೆ, ಅನಿಶ್ಚಿತ ಸವ್ರಪದವೊಂದನ್ನು (ಮತ್ತು ಓ ಪ್ರತ್ಯಯವನ್ನು) ಬಳಸಿ ಹೇಳುವುದು ಒಂದು ವಿಧಾನವಾದರೆ, ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ನಾಮಪದದ ದೊಂದಿಗೆ ಬಳಸಲು ಸಾಧ್ಯವಾಗುವಂತೆ ಮಾಡುವುದು ಇನ್ನೊಂದು ವಿಧಾನ. ಈ ಎರಡನೆಯ ವಿಧಾನದ ಬಳಕೆಯನ್ನು ಕೆಳಗೆ (16ಘ)ದಲ್ಲಿ ಕಾಣಬಹುದು. (16ಘ) ಜಾನಕಿ ಮೈಸೂರಿನಿಂದ ತಂದಿದ್ದ ಆ ಸೀರೆ ಈಗ ಹರಿದು ಹೋಗಿದೆ. ಈ ವಿಧಾನದಲ್ಲಿ ಒಳವಾಕ್ಯವಾಗಿ ಬರುವ (16ಕ) ವಾಕ್ಯದ ಕ್ರಿಯಾಪದವನ್ನು (ತಂದಿದ್ದಾಳೆ ಎಂಬುದನ್ನು) ಅದರ ಸಂಬಂಧಿಸುವ ರೂಪಕ್ಕೆ (ತಂದಿದ್ದ ಎಂಬ ರೂಪಕ್ಕೆ) ಬದಲಾಯಿಸಲಾಗಿದೆ ಮಾತ್ರವಲ್ಲ, ಅದರ ಹೊರವಾಕ್ಯದಲ್ಲಿರುವ ((16ಖ)ದಲ್ಲಿರುವ) ಪದಕ್ಕೆ ಸಮನಾಗಿರುವ ಸೀರೆ(ಯನ್ನು) ಎಂಬ ಪದವನ್ನು ಆ ವಾಕ್ಯದಿಂದ ತೆಗೆದುಹಾಕಲಾಗಿದೆ. ವಾಕ್ಯವೊಂದನ್ನು ವರ್ಣಿಸುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಬಳಸಲು ಕನ್ನಡದಲ್ಲಿ ಇನ್ನೂ ಒಂದು ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ಆ ವಾಕ್ಯದ ಕೊನೆಯಲ್ಲಿ ಎಂಬ ಇಲ್ಲವೇ ಎನ್ನುವ ಎಂಬ ಪದವನ್ನು ಸೇರಿಸಿ ಹೇಳಬೇಕು. ಈ ವಿಧಾನವನ್ನು ಕೆಲವು ವಿಶಿಷ್ಟವಾದ ಸಂದಭ್ರಗಳಲ್ಲಿ ಮಾತ್ರ ಬಳಸಲು ಸಾಧ್ಯ ಎಂಬುದನ್ನು ಮುಂದೆ (7.4.4)ರಲ್ಲಿ ನೋಡಲಿರುವೆವು.
(17ಕ) ಅವನಿಗೆ ಹಣ ಸಿಕ್ಕಿಲ್ಲ. (17ಖ) ಆ ವಿಷಯ ನನಗೂ ಗೊತ್ತಿದೆ. (17ಗ) ಅವನಿಗೆ ಹಣ ಸಿಕ್ಕಿಲ್ಲವೆಂಬ ಆ ವಿಷಯ ನನಗೂ ಗೊತ್ತಿದೆ. (17ಕ) ವಾಕ್ಯಕ್ಕೆ ಎಂಬ ಪದವನ್ನು ಸೇರಿಸಿ ಅದನ್ನು (17ಖ) ವಾಕ್ಯದಲ್ಲಿ ಬಂದಿರುವ ಆ ವಿಷಯ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ (17ಗ) ವಾಕ್ಯವನ್ನು ತಯಾರಿಸಲಾಗಿದೆ. ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದವನ್ನು ನಾಮಪದವಾಗಿ ಬದಲಾ ಯಿಸುವುದರ ಮೂಲಕ ಅದನ್ನೊಂದು ಪದಕಂತೆಯನ್ನಾಗಿ ಮಾಡಲು ಸಾಧ್ಯವಿದೆ, ಮತ್ತು ಈ ರೀತಿ ಬದಲಾಗಿರುವ ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯ ವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. ಇದಲ್ಲದೆ, ಒಳವಾಕ್ಯದ ಕೊನೆಯಲ್ಲಿ ಎಂಬುದು ಪದವನ್ನು ಇರಿಸಿ ಅದಕ್ಕೇನೇ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲೂ ಸಾಧ್ಯವಿದೆ. (18ಕ) ಸೀತಾದೇವಿ ಹಾಡಿದ್ದಾಳೆ. (18ಖ) ಸೀತಾದೇವಿ ಹಾಡಿದುದನ್ನು ಎಲ್ಲರೂ ಕೇಳಿದ್ದಾರೆ. (18ಗ) ಸೀತಾದೇವಿಯ ಹಾಡುವಿಕೆಯನ್ನು ಎಲ್ಲರೂ ಕೇಳಿದ್ದಾರೆ. (18ಘ) ಸೀತಾದೇವಿ ಹಾಡಿದ್ದಾಳೆಂಬುದನ್ನು ಎಲ್ಲರೂ ಕೇಳಿದ್ದಾರೆ. (18ಕ) ವಾಕ್ಯವನ್ನು ಒಂದು ಪದಕಂತೆಯನ್ನಾಗಿ ಮಾಡಿ ಅದನ್ನು ಅನ್ನು ಪ್ರತ್ಯಯದೊಂದಿಗೆ (18ಖ) ಮತ್ತು (18ಗ) ವಾಕ್ಯಗಳಲ್ಲಿ ಬಳಸಲಾಗಿದೆ ಮತ್ತು (18ಘ) ವಾಕ್ಯದಲ್ಲಿ ಆ ವಾಕ್ಯವನ್ನು ಹಾಗೆಯೇ ಉಳಿಸಿ ಅದರೆದುರು ಎಂಬುದು ಪದವನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು. ಇದಲ್ಲದೆ ವಾಕ್ಯದ ಕೊನೆಯ ಕ್ರಿಯಾಪದದೆದುರು ಅಲು ಪ್ರತ್ಯಯವನ್ನು ಸೇರಿಸುವುದರ ಮೂಲಕವೂ ಅದನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಬದಲಾಯಿಸಲು ಸಾಧ್ಯವಿದೆ. ಇಂತಹ ಒಳವಾಕ್ಯದ ಮೂಲಕ ಹೊರವಾಕ್ಯವು ಸೂಚಿಸುವ ಘಟನೆಯ ಉದ್ದೇಶವೇನೆಂಬುದನ್ನು ತಿಳಿಸಲು ಸಾಧ್ಯವಾಗುತ್ತದೆ. (19ಕ) ಸೀತಾದೇವಿ ಕಚೇರಿಯಲ್ಲಿ ಹಾಡುತ್ತಾಳೆ. (19ಖ) ಕಚೇರಿಯಲ್ಲಿ ಹಾಡಲು ಸೀತಾದೇವಿಗೆ ಕರೆ ಬಂದಿದೆ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಇಲ್ಲವೇ ಅದರಲ್ಲಿ ಬಂದಿರುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲು ಈ ರೀತಿ ಹಲವು ವಿಧಾನಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು, ಇವಕ್ಕೆಲ್ಲ ಬೇರೆ ಬೇರೆ ಉದ್ದೇಶಗಳಿವೆ. ಆದರೆ ಈ ಎಲ್ಲಾ ವಿಧಾನಗಳಿಗೂ ಸಮಾನವಾಗಿರುವಂತಹ ಒಂದು ಉದ್ದೇಶವೂ ಇದೆ. ಅದೇನೆಂದರೆ, ಈ ಎಲ್ಲಾ ವಿಧಾನಗಳೂ ಗುರುತಿಸಬೇಕಾಗಿರುವ ವ್ಯಕ್ತಿ, ವಸ್ತು, ವಿಷಯ ಇಲ್ಲವೇ ಘಟನೆಯನ್ನು ವರ್ಣಿಸಿ ಹೇಳುವುದಕ್ಕಾಗಿ ಬಳಕೆಯಾಗುತ್ತವೆ.
ಒಳವಾಕ್ಯವನ್ನು ಈ ರೀತಿ ವಾಕ್ಯದ ಅಂಗ (ಘಟಕ)ವನ್ನಾಗಿ ಮಾಡಲು ಬಳಸುವ ವಿಧಾನಗಳು ಎಂತಹವು ಎಂಬುದನ್ನು ಕೆಳಗಿನ ಐದು (7.3.1-5) ಉಪವಿಭಾಗಗಳಲ್ಲೂ, ಮತ್ತು ಪದಕಂತೆಯ ಅಂಗವನ್ನಾಗಿ ಮಾಡಲು ಬಳಸುವ ವಿಧಾನಗಳು ಎಂತಹವು ಎಂಬುದನ್ನು ಮುಂದಿನ ವಿಭಾಗದ ನಾಲ್ಕು (7.4.1- 4) ಉಪವಿಭಾಗಗಳಲ್ಲೂ ವಿವರಿಸಲಾಗುವುದು.
7.3.1 ವಾಕ್ಯದ ಅಂಗವಾಗಿ ಬಳಕೆ
ಮೇಲೆ ಸೂಚಿಸಿದಂತೆ, ವಾಕ್ಯವೊಂದನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ನಾಲ್ಕು ವಿಧಾನಗಳನ್ನು ಬಳಸಲು ಸಾಧ್ಯವಿದೆ. ಮಾಡಬೇಕಿದ್ದಲ್ಲಿ ಅದಕ್ಕಾಗಿ ಪದಕಂತೆಯನ್ನಾಗಿ) (1) ಎಂಬುದು ಪದವನ್ನು ಆ ವಾಕ್ಯಕ್ಕೆ ಸೇರಿಸುವುದು,
(2) ಉದು ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾರೂಪಕ್ಕೆ ಸೇರಿಸುವುದು, (3) ಇಕೆ ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾಪದಕ್ಕೆ ಸೇರಿಸುವುದು, ಮತ್ತು (4) ಅಲು ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾಪದಕ್ಕೆ ಸೇರಿಸುವುದು. ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬ ಸಂಗತಿಯ ಕುರಿತಾಗಿ ಮೊದಲನೆಯ ವಿಧಾನವನ್ನೂ, ಘಟನೆಗೆ ಏನಾದರೂ ಹೇಳಬೇಕಿದ್ದಲ್ಲಿ ಸಂಬಂಧಿಸಿದ ವಸ್ತು, ವಿಷಯ ಮೊದಲಾದವುಗಳ ಕುರಿತಾಗಿ ಏನಾದರೂ ಹೇಳಬೇಕಾಗಿದ್ದಲ್ಲಿ ಎರಡನೆಯ ವಿಧಾನವನ್ನೂ ಮತ್ತು ನೇರವಾಗಿ ಆ ಘಟನೆಯ ಕುರಿತಾಗಿ (ಎಂದರೆ ಅದರಲ್ಲಿ ಬಂದಿರುವ ಕ್ರಿಯೆಯ ಕುರಿತಾಗಿ) ಏನಾದರೂ ಹೇಳಬೇಕಿದ್ದಲ್ಲಿ ಮೂರನೆಯ ವಿಧಾನವನ್ನೂ ಬಳಸಲು ಸಾಧ್ಯವಿದೆ.
ಇದಲ್ಲದೆ, ಒಂದು ಘಟನೆ ಇನ್ನೊಂದು ಘಟನೆಯ ಉದ್ದೇಶ ಎಂಬುದನ್ನು ತಿಳಿಸಬೇಕಿದ್ದಲ್ಲಿ ಇಲ್ಲವೇ ಒಂದು ಗುಣಧರ್ಮ ಇನ್ನೊಂದು ಘಟನೆಯದು ಎಂಬುದನ್ನು ಸೂಚಿಸಬೇಕಾದಲ್ಲಿ ನಾಲ್ಕನೆಯ ವಿಧಾನವನ್ನು ಬಳಸಬಹುದು. ಇದಲ್ಲದೆ ಎರಡನೆಯ ಮತ್ತು ನಾಲ್ಕನೆಯ ವಿಧಾನಗಳನ್ನು ಮೊದಲನೆಯ ಸಂದಭ್ರದಲ್ಲೂ ಬಳಸಲು ಸಾಧ್ಯವಿದೆ. ಈ ಬೇರೆ ಬೇರೆ ಸಾಧ್ಯತೆಗಳನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (20ಕ) ಅವಳು ಹಾಡುತ್ತಾಳೆಂಬುದನ್ನು ನಾನು ಕೇಳಿದ್ದೇನೆ. (20ಖ) ಅವಳು ಹಾಡಿದುದನ್ನು ನಾನು ಕೇಳಿದ್ದೇನೆ. (20ಗ) ಅವಳ ಹಾಡುವಿಕೆ ನನಗೆ ಇಷ್ಟ. (20ಘ) ಅವಳು ಹಾಡುವುದು ನನಗೆ ಇಷ್ಟ. (20ಙ) ಅವಳಿಗೆ ಹಾಡಲು ಬಹಳ ಇಷ್ಟ. (20ಕ) ವಾಕ್ಯದ ಪ್ರಕಾರ, ಅದರ ಆಡುಗನು ಕೇಳಿರುವುದು ಅವಳು ಹಾಡು ತ್ತಾಳೆ ಎಂಬ ಸಂಗತಿಯನ್ನು ಮಾತ್ರ (ಮೊದಲನೆಯ ಉದ್ದೇಶ); ಇದೇ ಅರ್ಥ ದಲ್ಲಿ (20ಖ) ವಾಕ್ಯವೂ ಬಳಕೆಯಾಗಿರಲು ಸಾಧ್ಯವಿದೆ. ಆದರೆ ಅದಕ್ಕೆ ‘ಅವಳು ಹಾಡಿದ್ದಾಳೆ ಎಂಬ ಸಂಗತಿಯನ್ನು ನಾನು ಕೇಳಿದ್ದೇನೆ’ ಎಂಬ ಅರ್ಥ ಮಾತ್ರ ವಲ್ಲದೆ, ‘ಅವಳು ಹಾಡುವ ಘಟನೆಯಲ್ಲಿ ನಾನು ಕೇಳುಗನಾಗಿದ್ದೆ’ ಎಂಬ ಅರ್ಥವೂ (ಎಂದರೆ ಎರಡನೆಯ ಉದ್ದೇಶವೂ) ಬರಬಲ್ಲುದು. (20ಕ) ವಾಕ್ಯಕ್ಕೆ ಈ ಅರ್ಥ ಬರಲಾರದು. (20ಗ) ವಾಕ್ಯಕ್ಕೆ ಈ ಎರಡು ಅರ್ಥಗಳಿಗಿಂತಲೂ ಭಿನ್ನವಾಗಿರುವ ಅರ್ಥ ವಿದೆ. ಇಲ್ಲಿ ಇಷ್ಟವಾಗಿರುವುದು ಹಾಡುವ ಘಟನೆಯಲ್ಲದೆ ಹಾಡುತ್ತಾಳೆ ಎಂಬ ಸಂಗತಿಯಲ್ಲ (ಮೂರನೆಯ ಉದ್ದೇಶ). ಎರಡನೆಯ ವಿಧಾನವನ್ನು ಬಳಸಿರುವ (20ಘ) ವಾಕ್ಯ ಈ (20ಗ) ವಾಕ್ಯಕ್ಕಿಂತ ಅರ್ಥದಲ್ಲಿ ಭಿನ್ನವಾಗಿದೆ ಎಂಬುದನ್ನೂ ಗಮನಿಸಬಹುದು. ಅದಕ್ಕೆ ‘ಅವಳು ಹಾಡುತ್ತಾಳೆ ಎಂಬ ಸಂಗತಿ ನನಗೆ ಇಷ್ಟ’ ಎಂಬ ಅರ್ಥವಾಗಲಿ (ಎಂದರೆ (20ಕ-ಖ) ವಾಕ್ಯಗಳ ಅರ್ಥಕ್ಕೆ ಸಮನಾದ ಅರ್ಥವಾಗಲಿ) ಇಲ್ಲವೇ ‘ಅವಳು ಹಾಡುವ ಹಾಡು ನನಗೆ ಇಷ್ಟ’ ಎಂಬ ಬೇರೊಂದು ಅರ್ಥವಾಗಲಿ ಬರಲು ಸಾಧ್ಯವಿದೆ. ಅಲು ಪ್ರತ್ಯಯದ ಬಳಕೆ ಹಲವು ವಿಷಯಗಳಲ್ಲಿ ಮೇಲಿನ ಮೂರು ವಿಧಾನಗಳಿಗಿಂತ ಭಿನ್ನವಾಗಿದೆ ಎಂಬುದನ್ನು ಮುಂದೆ (7.3.3ರಲ್ಲಿ) ನೋಡ ಲಿರುವೆವು. ಉಳಿದ ವಿಧಾನಗಳ ಮೂಲಕ ತಯಾರಾದ ಪದಕಂತೆ ಒಂದು ನಾಮಪದದ ಹಾಗೆ ಬಳಕೆಯಾಗುವುದಾದರೆ ಇದು ಒಂದು ಕ್ರಿಯಾಗುಣಪದದ ಹಾಗೆ ಬಳಕೆಯಾಗುತ್ತದೆ. ಹಾಗಾಗಿ ಈ ಪ್ರತ್ಯಯದ ಬಳಕೆಯನ್ನು ಬೇರೆಯೇ ಒಂದು ವಿಭಾಗದಲ್ಲಿ ವಿವರಿಸಲಾಗುವುದು.
7.3.2 ನಾಮಪದದ ಜಾಗದಲ್ಲಿ ಬಳಕೆ
ಮೇಲೆ ವಿವರಿಸಿದ ವಿಧಾನಗಳಲ್ಲಿ ಮೊದಲನೆಯ ಮೂರು ವಿಧಾನಗಳನ್ನು ಬಳಸುವುದರ ಮೂಲಕ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ನಾಮಪದ ವೊಂದರ ಜಾಗದಲ್ಲಿ ಇರಿಸಿ ಹೇಳಲು ಸಾಧ್ಯವಾಗುತ್ತದೆ. ಮತ್ತು ಇದಕ್ಕಾಗಿ ಈ ವಾಕ್ಯಗಳ ಕೊನೆಯಲ್ಲಿ ಬರುವ ಎಂಬುದು, ಉದು ಮತ್ತು ಇಕೆ ಎಂಬವುಗಳಿಗೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗುತ್ತದೆ. (21ಕ) ನೀವು ಕಷ್ಟಪಟ್ಟು ಇಲ್ಲಿವರೆಗೆ ಬಂದಿದ್ದೀರೆಂಬುದರಿಂದ ನಿಮಗೆ ಈ ಕೆಲಸದಲ್ಲಿ ಬಹಳ ಶ್ರದ್ಧೆಯಿದೆಯೆಂಬುದು ಸ್ಪಷ್ಟವಾಗುತ್ತದೆ. (21ಖ) ನೀವು ಇಲ್ಲಿಗೆ ಬರುವುದಕ್ಕೆ ಯಾರ ಒಪ್ಪಿಗೆಯೂ ಬೇಕಾಗಿಲ್ಲ. (21ಗ) ಆತನ ಕುಣಿಯುವಿಕೆಯಲ್ಲಿ ಉತ್ಸಾಹವಿದೆ. ಒಂದು ವಾಕ್ಯಕ್ಕೆ ಎಂಬುದು ಪದವನ್ನು ಸೇರಿಸಿ ಅದನ್ನು ಒಳವಾಕ್ಯವನ್ನಾಗಿ ಮಾಡಿ ಬಳಸುವ ಮೊದಲನೆಯ ವಿಧಾನದಲ್ಲಿ ಆ ವಾಕ್ಯದ ಎಲ್ಲಾ ಅಂಶಗಳೂ ಬದಲಾಗದೆ ಹಾಗೆಯೇ ಉಳಿದುಕೊಳ್ಳುತ್ತವೆ. ಆದರೆ ಎರಡು ಮತ್ತು ಮೂರನೆಯ ವಿಧಾನಗಳನ್ನು ಬಳಸುವಾಗ ವಾಕ್ಯದಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಉದು ಪ್ರತ್ಯಯದ ಬಳಕೆ ಯಲ್ಲಿ ಕಾಣಿಸುವುದಕ್ಕಿಂತಲೂ ಇಕೆ ಪ್ರತ್ಯಯದ ಬಳಕೆಯಲ್ಲಿ ಹೆಚ್ಚಿನ ಬದಲಾ ವಣೆಗಳು ಕಾಣಿಸಿಕೊಳ್ಳುತ್ತವೆ.
ಉದು ಪ್ರತ್ಯಯವನ್ನು ಬಳಸುವಾಗ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದದಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಿದರೆ ಸಾಕು. ವಾಕ್ಯದ ಉಳಿದ ಭಾಗಗಳನ್ನೆಲ್ಲ ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಿದೆ.
ಕ್ರಿಯಾಪದದ ಕೊನೆಯಲ್ಲಿ ಬರುವ ಘಟಕವನ್ನು ಸೂಚಿಸುವ ಪ್ರತ್ಯಯವನ್ನು ಬಿಟ್ಟುಕೊಡಬೇಕು ಎಂಬುದು ಇಂತಹ ಬದಲಾವಣೆಗಳಲ್ಲಿ ಮುಖ್ಯವಾದುದು. ಈ ಬದಲಾವಣೆಯಿಂದಾಗಿ, ಈ ಪ್ರತ್ಯಯದ ಬಳಕೆಯಲ್ಲಿ ಕ್ರಿಯೆಯನ್ನು ನಡೆಸಿದವರು ಯಾರು ಎಂಬುದನ್ನು ಕ್ರಿಯಾಪದದ ಮೂಲಕ ಸೂಕ್ಷ್ಮವಾಗಿ ತಿಳಿಸಿಹೇಳಲು ಸಾಧ್ಯವಾಗದು. (22ಕ) ಮೂರು ಗಂಟೆ ಹಾಡಿದ್ದಾನೆಂಬುದು ನನಗೆ ಗೊತ್ತಾಗಲಿಲ್ಲ. (22ಖ) ಮೂರು ಗಂಟೆ ಹಾಡಿದ್ದಾಳೆಂಬುದು ನನಗೆ ಗೊತ್ತಾಗಲಿಲ್ಲ. (22ಗ) ಮೂರು ಗಂಟೆ ಹಾಡಿದುದು ನನಗೆ ಗೊತ್ತಾಗಲಿಲ್ಲ. ಎಂಬುದು ಪದದ ಬಳಕೆಯಿರುವ (22ಕ) ಮತ್ತು (22ಖ) ವಾಕ್ಯಗಳ ನಡುವೆ ಕಾಣಿಸಲು ಸಾಧ್ಯವಾಗಿರುವ ವ್ಯತ್ಯಾಸವನ್ನು (ಹಾಡಿದುದು ಗಂಡಸೋ ಅಥವಾ ಹೆಂಗಸೋ ಎಂಬುದನ್ನು) ಉದು ಪ್ರತ್ಯಯದ ಬಳಕೆಯಿರುವ (22ಗ)ದಲ್ಲಿ ಕಾಣಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಬಹುದು. ಅಲ್ಲಗಳೆಯುವ ವಾಕ್ಯವೊಂದರ ಮೂಲಕ ಮಾತನಾಡುವ ಸಮಯಕ್ಕಿಂತ ಮುಂದೆ ನಡೆಯುವ ಘಟನೆಯನ್ನು ಅಲ್ಲಗಳೆಯಲಾಗಿದೆಯೋ ಅಥವಾ ಹಿಂದೆ ನಡೆದ ಘಟನೆಯನ್ನು ಅಲ್ಲಗಳೆಯಲಾಗಿದೆಯೋ ಎಂಬುದನ್ನು ಸೂಚಿಸಲು ಎರಡು ರೀತಿಯ ಕ್ರಿಯಾರೂಪಗಳು ಬಳಕೆಯಾಗುತ್ತವೆ (23ಕ-ಖ ನೋಡಿ). ಇಂತಹ ಕ್ರಿಯಾರೂಪಗಳಿರುವ ವಾಕ್ಯಗಳನ್ನು ಉದು ಪ್ರತ್ಯಯದ ಮೂಲಕ ಒಳವಾಕ್ಯ ಗಳನ್ನಾಗಿ ಬದಲಾಯಿಸಬೇಕಿದ್ದಲ್ಲಿ, ಆ ಪ್ರತ್ಯಯವನ್ನು ಹಿಂದಿನ ಘಟನೆಯನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ನೇರವಾಗಿ ಸೇರಿಸಬಹುದು (ಇದಕ್ಕಾಗಿ ಕನ್ನಡದಲ್ಲಿ ಒಂದು ವಿಶಿಷ್ಟವಾದ ಕ್ರಿಯಾರೂಪ ಬಳಕೆಯಲ್ಲಿದೆ ಎಂಬುದನ್ನು (23ಗ)ದಲ್ಲಿ ಕಾಣಬಹುದು). (23ಕ) ಆತ ನಾಳೆ ಹೋಗುವುದಿಲ್ಲ. (23ಖ) ಆತ ನಿನ್ನೆ ಹೋಗಲಿಲ್ಲ. (23ಗ) ಆತ ನಿನ್ನೆ ಹೋಗದುದು ಯಾರಿಗೂ ಸಮಾಧಾನವಿಲ್ಲ. ಆದರೆ ಮುಂದೆ ನಡೆಯಲಿರುವ ಘಟನೆಯೊಂದನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ಈ ರೀತಿ ಉದು ಪ್ರತ್ಯಯವನ್ನು ನೇರವಾಗಿ ಸೇರಿಸಿ ಹೇಳಲು ಸಾಧ್ಯವಾಗದು. ಅದಕ್ಕೆ ಬದಲು ಅಲ್ಲಗಳೆಯುವ ಕ್ರಿಯಾಪದದ ಮುಂದೆ ಇರು ಕ್ರಿಯಾಪದವನ್ನಿರಿಸಿ ಅದಕ್ಕೆ ಉದು ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. (23ಘ) ಆತ ನಾಳೆ ಹೋಗದಿರುವುದು ಯಾರಿಗೂ ಸಮಾಧಾನವಿಲ್ಲ. ಇದು ಎಂಬುದು ಮತ್ತು ಉದು ಎಂಬೆರಡು ಪದಗಳ ಬಳಕೆಯಲ್ಲಿ ಕಾಣಿಸುವ ಇನ್ನೊಂದು ವ್ಯತ್ಯಾಸ. ಇಕೆ ಪ್ರತ್ಯಯವನ್ನು ಬಳಸಿ ಒಳವಾಕ್ಯವನ್ನು ತಯಾರಿಸುವುದಿದ್ದಲ್ಲಿ ಅಂತಹ ವಾಕ್ಯದ ಕ್ರಿಯಾಪದದೊಂದಿಗೆ ಬರುವ ಘಟಕವನ್ನು ಸೂಚಿಸುವ ಪ್ರತ್ಯಯವನ್ನು ಮಾತ್ರವಲ್ಲದೆ ಸಮಯವನ್ನು ಸೂಚಿಸುವ ಪ್ರತ್ಯಯವನ್ನೂ ಬಿಟ್ಟು ಕೊಡಬೇಕಾಗು (24ಕ) ಅವನು ಹೊಲಿಯುವುದು ಚನ್ನಾಗಿರುತ್ತದೆ. (24ಖ) ಅವನು ಹೊಲಿದುದು ಚನ್ನಾಗಿತ್ತು. (24ಗ) ಅವನ ಹೊಲಿಯುವಿಕೆ ಚನ್ನಾಗಿರುತ್ತದೆ/ಚನ್ನಾಗಿತ್ತು. ಉದು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯಗಳಲ್ಲಿ ಮಾತನಾಡುವ ಸಮಯ ಕ್ಕಿಂತ ಹಿಂದೆ ನಡೆದ ಮತ್ತು ಮುಂದೆ ನಡೆಯುವ ಘಟನೆಗಳ ನಡುವಿರುವ ವ್ಯತ್ಯಾಸವನ್ನು ಉವ್ ಮತ್ತು ದ್ ಎಂಬ ಸಮಯ ಪ್ರತ್ಯಯಗಳ ಮೂಲಕ ಸೂಚಿಸಲು ಸಾಧ್ಯವಿದೆ ಎಂಬುದನ್ನು (24ಕ-ಖ) ವಾಕ್ಯಗಳಲ್ಲಿ ಕಾಣಬಹುದು. ಆದರೆ ಇಕೆ ಪ್ರತ್ಯಯವನ್ನು ಬಳಸಿ ರಚಿಸಿರುವ ಒಳವಾಕ್ಯದಲ್ಲಿ ಇದು ಸಾಧ್ಯ ವಾಗುವುದಿಲ್ಲ ಎಂಬುದನ್ನು (24ಗ)ದಲ್ಲಿ ಕಾಣಬಹುದು. ಎರಡನೆಯದಾಗಿ, ಇಕೆ ಪ್ರತ್ಯಯವನ್ನು ಒಂದು ವಾಕ್ಯದ ಕ್ರಿಯಾಪದಕ್ಕೆ ಇಲ್ಲವೇ ಸೇರಿಸುವಾಗ ನಾಮಪದಕಂತೆಗಳನ್ನು ಅವುಗಳ ಸಂಬಂಧಿಸುವ ರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಮೇಲೆ (24ಗ) ವಾಕ್ಯದಲ್ಲಿ ಅವನು ಪದವನ್ನು ಅವನ ಎಂಬುದಾಗಿ ಬದಲಾ ಯಿಸಿರುವುದಕ್ಕೆ ಇದೇ ಕಾರಣ. ಇದನ್ನೇ ಕೆಳಗಿನ ವಾಕ್ಯಗಳಲ್ಲೂ ಕಾಣಬಹುದು.
ಅದರೊಂದಿಗೆ ನಾಮಪದ ಬರುವ (25ಕ) ರಮೇಶ ಹೆದರಿದ. (25ಖ) ರಮೇಶನ ಕೆಟ್ಟುಹೋಯಿತು. ಹೆದರಿಕೆಯಿಂದಾಗಿ ಇವತ್ತಿನ ಕೆಲಸ (26ಕ) ರಾಜು ಕಂಬಳಿಯನ್ನು ಒಗೆದ. (26ಖ) ರಾಜುವಿನ ಕಂಬಳಿಯ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. ಇಕೆ ಪ್ರತ್ಯಯವನ್ನು ಬಳಸಿರುವ ಒಳವಾಕ್ಯಗಳಲ್ಲಿ ಸಾಮಾನ್ಯವಾಗಿ ಈ ರೀತಿ ಸಂಬಂಧಿಸುವ ಪ್ರತ್ಯಯದೊಂದಿಗೆ ಬರುವ ನಾಮಪದಕಂತೆಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳುವುದು ರೂಢಿ. (26ಖ) ವಾಕ್ಯದಲ್ಲಿ ಎರಡು ಪದಕಂತೆ ಗಳನ್ನೂ ಉಳಿಸಿಕೊಂಡಿರುವ ಕಾರಣ ಅದು ಅಷ್ಟೊಂದು ಒಪ್ಪಿಗೆಯಾಗುವ ವಾಕ್ಯವೆಂದು ಅನಿಸುವುದಿಲ್ಲ. ಅದಕ್ಕಿಂತ ಸಂಬಂಧಿಸುವ ರೂಪಗಳಲ್ಲಿ ಒಂದನ್ನು ಮಾತ್ರವೇ ಉಳಿಸಿಕೊಂಡಿರುವ ಕೆಳಗಿನ ಎರಡು ವಾಕ್ಯಗಳು ಹೆಚ್ಚು ಒಪ್ಪಿಗೆಯಾಗ ಬಲ್ಲುವು. (26ಗ) ರಾಜುವಿನ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. (26ಘ) ಕಂಬಳಿಯ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. ಇಕೆ ಪ್ರತ್ಯಯವನ್ನು ಬಳಸಿ ಒಳವಾಕ್ಯವೊಂದನ್ನು ತಯಾರಿಸುವಾಗ ಆ ವಾಕ್ಯದ ಕ್ರಿಯಾಪದದೊಂದಿಗೆ ಬರುವ ಕ್ರಿಯಾಗುಣಪದಗಳನ್ನು ನಾಮಗುಣಪದ ಗಳನ್ನಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಆದರೆ ಉದು ಪ್ರತ್ಯಯವನ್ನು ಬಳಸಿ ತಯಾರಿಸುವ ಒಳವಾಕ್ಯಗಳಲ್ಲಿ ಕ್ರಿಯಾಗುಣಪದಗಳು ಬದಲಾಗದೆ ಹಾಗೆಯೇ ಉಳಿದುಕೊಳ್ಳುತ್ತವೆ.
(27ಕ) ಆಕೆ ಚಂದವಾಗಿ ಕುಣಿಯುತ್ತಾಳೆ. (27ಖ) ಆಕೆ ಚಂದವಾಗಿ ಕುಣಿಯುವುದು ಎಲ್ಲರಿಗೂ ಇಷ್ಟವಾಯಿತು. (27ಗ) ಆಕೆಯ ಚಂದವಾದ ಕುಣಿಯುವಿಕೆ ಎಲ್ಲರಿಗೂ ಇಷ್ಟವಾಯಿತು. (28ಕ) ರಾಜು ಮೆಲ್ಲಗೆ ಅತ್ತ. (28ಖ) ರಾಜು ಮೆಲ್ಲಗೆ ಅತ್ತುದು ಯಾರಿಗೂ ಗೊತ್ತಾಗಲಿಲ್ಲ. (28ಗ) ರಾಜುವಿನ ಮೆಲ್ಲಗಿನ ಅಳುವಿಕೆ ಯಾರಿಗೂ ಗೊತ್ತಾಗಲಿಲ್ಲ. ಉದು ಪ್ರತ್ಯಯವನ್ನು ಬಳಸಿ ಅಲ್ಲಗಳೆಯುವ ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಲು ಸಾಧ್ಯವಿದೆಯೆಂಬುದನ್ನು ನಾವು ಮೇಲೆ ನೋಡಿರುವೆವು. ಆದರೆ ಇಕೆ ಪ್ರತ್ಯಯದ ಬಳಕೆಯಲ್ಲಿ ಇದು ಸಾಧ್ಯವಾಗದು.
7.3.3 ಕ್ರಿಯಾಗುಣಪದಗಳ ಜಾಗದಲ್ಲಿ ಬಳಕೆ
ಮೇಲೆ ಸೂಚಿಸಿರುವ ಹಾಗೆ, ವಾಕ್ಯವೊಂದನ್ನು ಅಲು ಪ್ರತ್ಯಯವನ್ನು ಬಳಸಿ ಒಳವಾಕ್ಯವನ್ನಾಗಿ ಮಾಡಿದಲ್ಲಿ ಅದನ್ನು ಇನ್ನೊಂದು ವಾಕ್ಯದ ಕ್ರಿಯಾಗುಣಪದದ ಜಾಗದಲ್ಲಿ ಬಳಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇಂತಹ ಒಳವಾಕ್ಯವನ್ನು ಹೊರವಾಕ್ಯವು ಸೂಚಿಸುವ ಘಟನೆಯ ಉದ್ದೇಶವೊಂದನ್ನು ಸೂಚಿಸಲು ಬಳಸ ಲಾಗುತ್ತದೆ. (29ಕ) ಬಾಗಿಲನ್ನು ತೆರೆಯಲು ಕಾವಲುಗಾರನನ್ನು ಕಳಿಸಿದ್ದಾರೆ. (29ಖ) ಬೆಂಗಳೂರಿಗೆ ಹೋಗಲು ಅವನು ಇವತ್ತು ಬೇಗ ಎದ್ದಿದ್ದಾನೆ. ಅಲು ಪ್ರತ್ಯಯಕ್ಕೆ ಒಂದು ಘಟನೆಯನ್ನು ನೇರವಾಗಿ ಸೂಚಿಸುವ ಅರ್ಥವೂ ಬರಬಲ್ಲುದು ಇಲ್ಲವೇ ಆ ಘಟನೆ ನಡೆದಿದೆ ಅಥವಾ ನಡೆಯಲಿದೆ ಎಂಬ ಸಂಗತಿಯನ್ನು ಸೂಚಿಸುವ ಅರ್ಥವೂ ಬರಬಲ್ಲುದು. ಈ ವಿಷಯದಲ್ಲಿ ಅದು ಉದು ಪ್ರತ್ಯಯದ ಹಾಗೆಯೇ ಬಳಕೆಯಾಗುತ್ತದೆ.
(30ಕ) ಆಕೆಗೆ ಮನೆಗೆ ಹೋಗಲು ಮರೆತಿದೆ. (30ಖ) ಆಕೆಗೆ ಕಾರು ಬಿಡಲು ಮರೆತಿದೆ. (30ಕ) ವಾಕ್ಯದ ಪ್ರಕಾರ ಆಕೆಗೆ ಮರೆತಿರುವುದು ‘ಮನೆಗೆ ಹೋಗಬೇಕು’ ಎಂಬ ಸಂಗತಿ; ಆದರೆ (30ಖ) ವಾಕ್ಯದ ಪ್ರಕಾರ ಆಕೆಗೆ ಮರೆತಿರುವುದು ‘ಕಾರನ್ನು ಹೇಗೆ ಬಿಡುವುದು’ ಎಂಬುದಾಗಿ ಅದನ್ನು ಬಿಡುವ ವಿಧಾನ. ಆದರೆ (30ಖ) ವಾಕ್ಯಕ್ಕೆ ಮೊದಲನೆಯ ವಾಕ್ಯದ ಅರ್ಥಕ್ಕೆ ಸಮನಾಗಿರುವ ಅರ್ಥವೂ ಬರಲು ಸಾಧ್ಯವಿದೆ. ಅಲು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯ ಬೇರೊಂದು ವಾಕ್ಯದ (ಅದರ ಹೊರವಾಕ್ಯದ) ಕ್ರಿಯಾಗುಣಪದದ ಜಾಗದಲ್ಲಿ ( ಎಂದರೆ, ಕ್ರಿಯಾಪದದ ‘ವಿಶೇಷಣ’ವಾಗಿ) ಬರುವುದಲ್ಲದೆ ನಾಮಪದಕಂತೆಯಾಗಿ ಬರುವುದಿಲ್ಲ. ಈ ಕಾರಣಕ್ಕಾಗಿ, ಅಂತಹ ವಾಕ್ಯಕ್ಕೆ ಉದು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯದ ಹಾಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಒಳವಾಕ್ಯ ಮತ್ತು ಹೊರವಾಕ್ಯಗಳೆರಡೂ ಮಾಡುಗನೆಂಬ ಘಟಕವನ್ನೊಳಗೊಂಡಿವೆಯಾದಲ್ಲಿ ಅಂತಹ ಘಟಕ ಎರಡರಲ್ಲೂ ಒಬ್ಬನೇ ವ್ಯಕ್ತಿಯನ್ನು ಸೂಚಿಸುತ್ತಿರಬೇಕೆಂಬ ಇನ್ನೊಂದು ನಿಯಮವೂ ಅಲು ಪ್ರತ್ಯಯದ ಕಾಣಿಸಿಕೊಳ್ಳುತ್ತದೆ. ಉದು ಇಲ್ಲವೇ ಇಕೆ ಪ್ರತ್ಯಯಗಳ ಬಳಕೆಯಲ್ಲಿ ಬಳಕೆಯಲ್ಲಿ ಈ ನಿಯಮವಿಲ್ಲ. ಈ ಕಾರಣಕ್ಕಾಗಿ ರಾಮು ಅಕ್ಕಿ ತರಲು ಸೀತೆ ಅಡುಗೆ ಮಾಡಿದಳು ಎಂಬಂತಹ ವಾಕ್ಯಗಳು ಕನ್ನಡದಲ್ಲಿ ಅಷ್ಟೊಂದು ಒಪ್ಪಿಗೆಯಾಗುವು ದಿಲ್ಲ. ಅಲು ಪ್ರತ್ಯಯವನ್ನು ಬಳಸಿ ತಯಾರಿಸಿದ ಒಳವಾಕ್ಯಗಳು ಇನ್ನೊಂದು ವಿಷಯದಲ್ಲೂ ಇತರ ಒಳವಾಕ್ಯಗಳಿಂದ ಭಿನ್ನವಾಗಿವೆ. ಅವು ಸಾಮಾನ್ಯವಾಗಿ ಹೊರವಾಕ್ಯವು ತಿಳಿಸುವ ಘಟನೆಯ ಅನಂತರ ನಡೆಯುವ (ಇಲ್ಲವೇ ನಡೆಯ ಬೇಕಾಗಿರುವ) ಘಟನೆಯೊಂದನ್ನು ಸೂಚಿಸುತ್ತವೆ. ಈ ಕಾರಣಕ್ಕಾಗಿ ಅವು ತೊಡಗು, ಸುರುಮಾಡು ಎಂಬಂತಹ ಕ್ರಿಯಾಪದಗಳಿರುವ ಹೊರವಾಕ್ಯಗಳಲ್ಲಿ ಬರಬಲ್ಲುವು, ಆದರೆ ಮುಂದುವರಿಸು, ನಿಲ್ಲಿಸು, ಮುಗಿಸು ಎಂಬಂತಹ ಕ್ರಿಯಾಪದಗಳಿರುವ ಹೊರವಾಕ್ಯಗಳಲ್ಲಿ ಬರಲಾರವು. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಬೇಕಾಗಿರುವ ಸಂದಭ್ರದಲ್ಲೂ ಅಲು ಪ್ರತ್ಯಯವನ್ನು ಬಳಸಲು ಸಾಧ್ಯ ಎಂಬುದನ್ನು ನಾವು ಮುಂದಿನ (ಎಂಟನೇ) ಅಧ್ಯಾಯದಲ್ಲಿ ನೋಡಲಿರುವೆವು. ಒಂದು ಘಟನೆ ಇನ್ನೊಂದು ಘಟನೆಯ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸುವು ದಕ್ಕಾಗಿ ಈ ಪ್ರತ್ಯಯದ ಬಳಕೆಯಾಗುತ್ತದೆ. ಈ ಬಳಕೆಗೂ ಮತ್ತು ಮೇಲೆ ವಿವರಿಸಿರುವ ಒಳವಾಕ್ಯದ ಬಳಕೆಗೂ ನಡುವೆ ಹತ್ತಿರದ ಸಂಬಂಧವಿದ್ದು ಹಲವು ಸಂದಭ್ರಗಳಲ್ಲಿ ಇವೆರಡು ಬಳಕೆಗಳಲ್ಲಿ ಯಾವುದು ಕಾಣಿಸಿಕೊಳ್ಳುತ್ತಿದೆ ಎಂಬು ದನ್ನು ನಿರ್ಧರಿಸುವುದು ಕಷ್ಟವಾಗಿ ತೋರಲು ಸಾಧ್ಯವಿದೆ.
7.3.4 ಹೊರವಾಕ್ಯದ ಕ್ರಿಯಾಪದಗಳು
ವಾಕ್ಯವೊಂದನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಲು (ಎಂದರೆ ಪದ ಕಂತೆಯನ್ನಾಗಿ ಬಳಸಲು ಇಲ್ಲವೇ ಕ್ರಿಯಾಗುಣಪದದ ಜಾಗದಲ್ಲಿ ಬಳಸಲು) ಕನ್ನದದಲ್ಲಿ ನಾಲ್ಕು ವಿಧಾನಗಳಿವೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಇದಲ್ಲದೆ, ಈ ನಾಲ್ಕು ವಿಧಾನಗಳ ಬಳಕೆ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಸೂಚಿಸುವುದಕ್ಕಾಗಿ ನಡೆಯುವುದೆಂಬುದನ್ನೂ ನೋಡಿರುವೆವು. ಇಂತಹ ವಾಕ್ಯರೂಪದ ವಾಕ್ಯಾಂಗಗಳು ಯಾವ ರೀತಿಯ ಹೊರವಾಕ್ಯಗಳಲ್ಲೆಲ್ಲ ಬರಬಲ್ಲುವು ಎಂಬುದರಲ್ಲೂ ಕೆಲವು ನಿಬ್ರಂಧಗಳಿವೆ. ಮೇಲೆ ಮೂರು ಮತ್ತು ನಾಲ್ಕನೇ ಅಧ್ಯಾಯಗಳಲ್ಲಿ ಪರಿಶೀಲಿಸಿರುವ ಕ್ರಿಯಾ ವಾಕ್ಯ ಮತ್ತು ವಿಷಯವಾಕ್ಯಗಳಿಗೂ ಮತ್ತು ಈ ರೀತಿ ಒಳವಾಕ್ಯವೊಂದನ್ನು ಘಟಕವನ್ನಾಗಿ ಪಡೆದಿರುವ (ಹೊರ)ವಾಕ್ಯಗಳಿಗೂ ನಡುವೆ ಹಲಕೆಲವು ವ್ಯತ್ಯಾಸ ಗಳಿವೆ. ಉದಾಹರಣೆಗಾಗಿ, ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದಗಳಲ್ಲಿ ಕೆಲವೇ ಕೆಲವು ಮಾತ್ರ ಇಂತಹ ಹೊರವಾಕ್ಯಗಳಲ್ಲಿ ಕ್ರಿಯಾಪದಗಳಾಗಿ ಬರ ಬಲ್ಲುವು. ಇದಕ್ಕೆ ಕಾರಣವೇನೆಂದರೆ, ಒಂದು ವಾಕ್ಯವು ತಿಳಿಸುವ ಸಂಗತಿ ಇಲ್ಲವೇ ಘಟನೆಯನ್ನು ಘಟಕವನ್ನಾಗಿ ಪಡೆಯಬಲ್ಲ ಕ್ರಿಯೆಗಳು ಕೆಲವೇ ಕೆಲವು ಮಾತ್ರ. (31ಕ) ಪೇಟೆಯಿಂದ ಬರುವ ಜಾನಕಿಯನ್ನು ರಾಜು ನೋಡಿದ್ದಾನೆ. (31ಖ) ಜಾನಕಿ ಪೇಟೆಯಿಂದ ಬರುವುದನ್ನು ರಾಜು ನೋಡಿದ್ದಾನೆ. (31ಕ) ವಾಕ್ಯದ ಪ್ರಕಾರ ರಾಜು ನೋಡಿರುವುದು ಜಾನಕಿಯನ್ನು, ಎಂದರೆ ಒಬ್ಬ ವ್ಯಕ್ತಿಯನ್ನು; ಆದರೆ (31ಖ) ವಾಕ್ಯದ ಪ್ರಕಾರ ಆತ ನೋಡಿರುವುದು ಜಾನಕಿ ಬರುವುದನ್ನು, ಎಂದರೆ ಒಂದು ಘಟನೆಯನ್ನು. (31ಕ) ವಾಕ್ಯದಲ್ಲಿ ನೋಡು ಕ್ರಿಯಾಪದ ಪೇಟೆ ಎಂಬ ಒಂದು ಜಾಗವನ್ನೂ ಮತ್ತು ಜಾನಕಿ ಮತ್ತು ರಾಜು ಎಂಬ ಎರಡು ವ್ಯಕ್ತಿಗಳನ್ನೂ ಘಟಕಗಳಾಗಿ ಪಡೆದಿದೆ. ಆದರೆ (31ಖ) ವಾಕ್ಯ ದಲ್ಲಿ ಅದೇ ಕ್ರಿಯಾಪದ ಜಾನಕಿ ಪೇಟೆಯಿಂದ ಬರುವುದು ಎಂಬ ಒಳವಾಕ್ಯ ಸೂಚಿಸುವ ಘಟನೆಯನ್ನೂ ಮತ್ತು ರಾಜು ಎಂಬ ವ್ಯಕ್ತಿಯನ್ನೂ ಘಟಕವಾಗಿ ಪಡೆದಿದೆ.
ಕನ್ನಡದಲ್ಲಿ ಕೇಳು, ನೋಡು, ಬಿಡು, ಮರೆ, ಹೊಗಳು, ಕಾಣು, ನಿಲ್ಲು, ನಂಬು, ಹೆದರು, ನೆನೆ, ತೆಗಳು ಮೊದಲಾದ ಕೆಲವೇ ಕೆಲವು ಕ್ರಿಯಾಪದಗಳು ಮಾತ್ರ ಈ ರೀತಿ ವ್ಯಕ್ತಿ, ವಸ್ತು, ಜಾಗ ಮೊದಲಾದವುಗಳನ್ನು ಮಾತ್ರವಲ್ಲದೆ ಘಟನೆ ಇಲ್ಲವೇ ಸಂಗತಿಗಳನ್ನೂ ಘಟಕಗಳನ್ನಾಗಿ ಪಡೆಯಬಲ್ಲುವು. (32ಕ) ಆತ ಸೀತಾಬಾಯಿಯನ್ನು ಹೊಗಳುತ್ತಿದ್ದಾನೆ. (32ಖ) ಆತ ಸೀತಾಬಾಯಿ ಹಾಡುವುದನ್ನು ಹೊಗಳುತ್ತಿದ್ದಾನೆ. (33ಕ) ಆಕೆ ರಮೇಶನನ್ನು ಮರೆತಿದ್ದಾಳೆ. (33ಖ) ಆಕೆ ತನಗೆ ರಮೇಶ ಸಹಾಯ ಮಾಡಿದ್ದನೆಂಬುದನ್ನು ಮರೆತಿ ದ್ದಾಳೆ. (34ಕ) ರಾಜು ಹುಡುಗನನ್ನು ವರಾಂಡದಲ್ಲಿ ನಿಲ್ಲಿಸಿದ್ದಾನೆ. (34ಖ) ರಾಜು ಕತೆ ಬರೆಯುವುದನ್ನು ನಿಲ್ಲಿಸಿದ್ದಾನೆ. (32ಕ) ವಾಕ್ಯದಲ್ಲಿ ಹೊಗಳು ಕ್ರಿಯಾಪದ ಇಬ್ಬರು ವ್ಯಕ್ತಿಗಳನ್ನು ಘಟಕವಾಗಿ ಪಡೆದಿದೆಯಾದರೆ, (32ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಘಟನೆ ಯನ್ನು (ಸೀತಾಬಾಯಿ ಹಾಡುವುದು ಎಂಬುದನ್ನು) ಮತ್ತು ಒಬ್ಬ ವ್ಯಕ್ತಿಯನ್ನು ಘಟಕವಾಗಿ ಪಡೆದಿದೆ. (33ಕ) ವಾಕ್ಯದಲ್ಲಿ ಮರೆ ಕ್ರಿಯಾಪದ ಇಬ್ಬರು ವ್ಯಕ್ತಿ ಗಳನ್ನು ಘಟಕವಾಗಿ ಪಡೆದಿದೆಯಾದರೆ, (33ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಸಂಗತಿಯನ್ನು (ತನಗೆ ರಮೇಶ ಸಹಾಯ ಮಾಡಿದ್ದನೆಂಬ ಸಂಗತಿ ಯನ್ನು) ಮತ್ತು ಒಬ್ಬ ವ್ಯಕ್ತಿಯನ್ನು ಘಟಕವಾಗಿ ಪಡೆದಿದೆ. ಉದು ಪ್ರತ್ಯಯವನ್ನು ಬಳಸಿ ತಯಾರಿಸಿದ ಒಳವಾಕ್ಯ ಮಾತ್ರ ಈ ವಿಷಯ ದಲ್ಲಿ ಇತರ ಒಳವಾಕ್ಯಗಳಿಂದ ಭಿನ್ನವಾಗಿದೆ. ಅದು ಒಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ಬದಲು ಒಂದು ವಸ್ತುವನ್ನೂ ಸೂಚಿಸಲು ಸಾಧ್ಯ ವಿದ್ದು, ಈ ಅರ್ಥದಲ್ಲಿ ಅದು ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಘಟಕ ವಾಗಿ ಬರಬಲ್ಲುದು. (35ಕ) ನೀವು ಕೊಟ್ಟುದನ್ನು ನಾನು ನಿನ್ನೆಯೇ ತಿಂದಿದ್ದೆ. (35ಖ) ಬಹುಮಾನವಾಗಿ ಸಿಕ್ಕಿದುದನ್ನು ರಾಜು ಒಡೆದಿದ್ದಾನೆ. (35ಗ) ಅಟ್ಟದಲ್ಲಿರಿಸಿದುದು ಕೊಳೆತುಹೋಗಿದೆ. (35ಘ) ಟಾಂಕಿಯಲ್ಲಿ ತೇಲುತ್ತಿರುವುದನ್ನು ಶಿವರಾಯರು ಮೇಲಕ್ಕೆ ಎತ್ತಿ ಅಲು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯಗಳೂ ಕೆಲವು ವಿಷಯ ಗಳಲ್ಲಿ ಇತರ ಒಳವಾಕ್ಯಗಳಿಂದ ಭಿನ್ನವಾಗಿವೆ. ಅವು ಸೂಚಿಸುವ ಘಟನೆ ಹೊರ ವಾಕ್ಯವು ಸೂಚಿಸುವ ಘಟನೆಯ ಉದ್ದೇಶವಾಗಿರಲು ಸಾಧ್ಯವಿದೆಯಾದ ಕಾರಣ, ಈ ಅರ್ಥದಲ್ಲಿ ಅದು ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಘಟಕವಾಗಿ ಬರಬಲ್ಲುದು. ಈ ವಿಷಯವನ್ನು ಕೆಳಗಿನ ವಾಕ್ಯಗಳ ಮೂಲಕ ಉದಾಹರಿಸ ಬಹುದು. (36ಕ) ಆಕೆಗೆ ಸಿತಾರ್ ಬಾರಿಸಲು ಮರೆತಿಲ್ಲ. (36ಖ) ಸಿತಾರ್ ಬಾರಿಸಲು ಆಕೆ ನೆರೆಮನೆಗೆ ಹೋಗುತ್ತಿದ್ದಾಳೆ. ಸಿತಾರ್ ಬಾರಿಸುವುದು ಎಂಬ ಘಟನೆ ಇಲ್ಲವೇ ಸಂಗತಿ (36ಕ) ವಾಕ್ಯದಲ್ಲಿ ನೇರವಾಗಿ ಮರೆ ಕ್ರಿಯಾಪದದ ಒಂದು ಘಟಕವಾಗಿ ಬಂದಿದೆ, ಆದರೆ (36ಖ) ವಾಕ್ಯದಲ್ಲಿ ಅದು ಈ ರೀತಿ ನೇರವಾಗಿ ಹೋಗು ಕ್ರಿಯಾಪದದ ಘಟಕವಾಗಿ ಬಂದಿರದೆ ಅದು ಸೂಚಿಸುವ ಘಟನೆಯ ಉದ್ದೇಶವಾಗಿ ಬಂದಿದೆ. ಈ ಎರಡನೆಯ ಅರ್ಥದಲ್ಲಿ ಅಲು ಪ್ರತ್ಯಯದ ಮೂಲಕ ತಯಾರಾದ ಒಳವಾಕ್ಯ ಎಲ್ಲಾ ರೀತಿಯ ಹೊರವಾಕ್ಯಗಳಲ್ಲೂ ಬರಬಲ್ಲುದು. ಯಾವುದಾದರೊಂದು ಘಟನೆ ಇಲ್ಲವೇ ಸಂಗತಿ ಅವಶ್ಯವಾಗಿಯೂ ಘಟಕ ವಾಗಿ ಬರಬೇಕಾಗಿರುವ ಕ್ರಿಯಾಪದಗಳೂ ಕನ್ನಡದಲ್ಲಿ ಕೆಲವಿವೆ. ಇವನ್ನು ಬಳಸಿರುವ ವಾಕ್ಯಗಳಲ್ಲಿ ಒಂದು ಒಳವಾಕ್ಯವನ್ನು ಇಲ್ಲವೇ ಘಟನೆಯನ್ನು ಸೂಚಿಸುವ ಪದಕಂತೆಯನ್ನು ಬಳಸುವುದು ಅವಶ್ಯ. (37ಕ) ಕೀತ್ರನೆ ಹಾಡುವುದನ್ನು ಆಕೆ ಮುಂದುವರಿಸಿದಳು. (37ಖ) ಅವನಿಗೆ ಸ್ವಲ್ಪ ನೀರು ಕುಡಿಯಬೇಕೆಂದು ಅನಿಸಿತು. (37ಗ) ಇವತ್ತೇ ಗೋಡೆಗೆ ಸುಣ್ಣ ಹಚ್ಚಲು ಆತ ಒಪ್ಪಿದ್ದಾನೆ. (37ಕ)ದ ಹೊರವಾಕ್ಯದಲ್ಲಿ ಬಂದಿರುವ ಮುಂದುವರಿಸು ಕ್ರಿಯಾಪದದ ಘಟಕ ವಾಗಿ ಒಂದು ಘಟನೆಯನ್ನು ಬಳಸುವ ಅವಶ್ಯಕತೆಯಿದೆ. ಇದಕ್ಕಾಗಿ ಈ ವಾಕ್ಯ ದಲ್ಲಿ ಕೀತ್ರನೆ ಹಾಡುವುದು ಎಂಬ ಒಳವಾಕ್ಯವನ್ನು ಬಳಸಲಾಗಿದೆ. (37ಖ) ಮತ್ತು (37ಗ) ವಾಕ್ಯಗಳಲ್ಲೂ ಹೀಗೆಯೇ.
ಇಂತಹ ವಾಕ್ಯಗಳಲ್ಲಿ ಘಟನೆಯನ್ನು ಸೂಚಿಸಲು ಈ ರೀತಿ ಒಳವಾಕ್ಯಗಳನ್ನು ಬಳಸುವ ಬದಲು ಘಟನೆಯೊಂದನ್ನು ವರ್ಣಿಸುವ ಪದಕಂತೆಗಳನ್ನು ಬಳಸಲೂ ಸಾಧ್ಯವಿದೆ.
(38ಕ) ಈ ಕಟ್ಟಡದ ಉದ್ಘಾಟನೆ ನಿನ್ನೆ ಬೆಳಿಗ್ಗೆ ಜರಗಿತು. (38ಖ) ಮಳೆ ಮೂರು ಗಂಟೆಗೇನೇ ಸುರುವಾಗಿತ್ತು. (38ಗ) ರಾತ್ರಿ ಹನ್ನೆರಡುಗಂಟೆಗೆ ನಾಟಕ ಮುಗಿಯಿತು. (38ಕ)ದಲ್ಲಿ ಜರಗು ಕ್ರಿಯಾಪದದ ಘಟಕವಾಗಿ ಘಟನೆಯೊಂದನ್ನು ಸೂಚಿಸಲು ಈ ಕಟ್ಟಡದ ಉದ್ಘಾಟನೆ ಎಂಬ ಪದಕಂತೆಯನ್ನು ಬಳಸಲಾಗಿದೆ. (38ಖ-ಗ) ವಾಕ್ಯಗಳಲ್ಲೂ ಹೀಗೆಯೇ.
7.3.5 ಹೊರವಾಕ್ಯವಾಗಿ ವಿಷಯವಾಕ್ಯಗಳ ಬಳಕೆ
ಕ್ರಿಯಾವಾಕ್ಯಗಳ ಹಾಗೆಯೇ ವಿಷಯವಾಕ್ಯಗಳೂ ಒಳವಾಕ್ಯವೊಂದನ್ನು ಘಟಕ ವನ್ನಾಗಿ ಪಡೆದಿರಲು ಸಾಧ್ಯ. ಇಂತಹ ಹೊರವಾಕ್ಯಗಳು ಜಾಗ, ಗುಣಧರ್ಮ ಇಲ್ಲವೇ ಸಂಬಂಧವನ್ನು ಸೂಚಿಸುತ್ತಿರಲು ಸಾಧ್ಯವಿದೆಯೆಂಬುದನ್ನು ಅನುಕ್ರಮ ವಾಗಿ (39ಕ-ಗ) ವಾಕ್ಯಗಳಲ್ಲಿ ಕಾಣಬಹುದು. (39ಕ) ಅವರು ಇವತ್ತು ಭಾಷಣ ಮಾಡುವುದು ಮೈಸೂರಿನಲ್ಲಿ. (39ಖ) ರಾಜು ಇವತ್ತು ಬರುವುದು ಸಂಶಯ. (39ಗ) ಇಲ್ಲಿ ಕುಳಿತರೆ ಯಾರಿಗೂ ಕಾಣಲಿಕ್ಕಿಲ್ಲವೆಂದು ಅವನಿಗೆ ಭ್ರಮೆ. ಗುಣಧರ್ಮವನ್ನು ಸೂಚಿಸುವ ಹೊರವಾಕ್ಯಗಳು ಘಟನೆಯನ್ನು ಇಲ್ಲವೇ ಸಂಗತಿಯನ್ನು ಸೂಚಿಸುವ ಒಳವಾಕ್ಯವೊಂದನ್ನು ಘಟಕವನ್ನಾಗಿ ಪಡೆಯಬಲ್ಲುವು. (40ಕ) ಅವಳು ಬರುವುದು ಬಹಳ ಮೆಲ್ಲಗೆ. (40ಖ) ಅವಳು ಬರುವುದು ನಿಜ. (40ಕ)ದಲ್ಲಿ ಬಂದಿರುವ ಅವಳು ಬರುವುದು ಎಂಬ ಒಳವಾಕ್ಯ ಒಂದು ಘಟನೆ ಯನ್ನು ಸೂಚಿಸುತ್ತಿದೆಯಾದರೆ, (40ಖ)ದಲ್ಲಿ ಅದೇ ಒಳವಾಕ್ಯ ಒಂದು ಸಂಗತಿ ಯನ್ನು ಸೂಚಿಸುತ್ತಿದೆಯೆಂಬುದನ್ನು ಗಮನಿಸಬಹುದು.
7.4 ಪದಕಂತೆಯ ಅಂಗವಾಗಿ ಬಳಕೆ
ವಾಕ್ಯವೊಂದನ್ನು ಇನ್ನೊಂದು ವಾಕ್ಯದಲ್ಲಿ ಬರುವ ಒಂದು ಪದಕಂತೆಯ ಅಂಗ ವನ್ನಾಗಿ ಮಾಡಿ ಬಳಸಲು ಕನ್ನಡದಲ್ಲಿ ನಾಲ್ಕು ವಿಧಾನಗಳಿವೆ.
(1) ಆ ವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸಿ ಬಳಸುವುದು, (2) ಅದಕ್ಕೇನೇ ಓ ಪ್ರತ್ಯಯದ ಬದಲು ಅ ಪ್ರತ್ಯಯವನ್ನು ಸೇರಿಸಿ ಬಳಸುವುದು, ಮತ್ತು (3) ಆ ವಾಕ್ಯದ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸಿ ಬಳಸುವುದು. (4) ವಾಕ್ಯದ ಕೊನೆಯಲ್ಲಿ ಎಂಬ ಇಲ್ಲವೇ ಎನ್ನುವ ಪದವನ್ನು ಸೇರಿಸಿ ಬಳಸುವುದು. ಈ ನಾಲ್ಕು ವಿಧಾನಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (41ಕ) ಜಾನಕಿ ಮೈಸೂರಿನಿಂದ ಒಂದು ಸೀರೆ ತಂದಿದ್ದಳು. (41ಖ) ಆ ಸೀರೆ ಈಗ ಹರಿದು ಹೋಗಿದೆ. (42ಕ) ಯಾವ ಸೀರೆಯನ್ನು ಜಾನಕಿ ಮೈಸೂರಿನಿಂದ ತಂದಿದ್ದಳೋ ಆ ಸೀರೆ ಈಗ ಹರಿದು ಹೋಗಿದೆ. (42ಖ) ಜಾನಕಿ ಮೈಸೂರಿನಿಂದ ತಂದಿದ್ದ ಸೀರೆ ಈಗ ಹರಿದು ಹೋಗಿದೆ. (42ಗ) ಜಾನಕಿಯ ಮೈಸೂರಿನ ಸೀರೆ ಈಗ ಹರಿದು ಹೋಗಿದೆ. (43ಕ) ಅವನಿಗೆ ಹಣ ಸಿಕ್ಕಿಲ್ಲ. (43ಖ) ಆ ವಿಷಯ ನನಗೂ ಗೊತ್ತಿದೆ. (43ಗ) ಅವನಿಗೆ ಹಣ ಸಿಕ್ಕಿಲ್ಲ ಎಂಬ ಆ ವಿಷಯ ನನಗೂ ಗೊತ್ತಿದೆ. (41ಕ) ವಾಕ್ಯವನ್ನು (41ಖ)ದಲ್ಲಿ ಬಂದಿರುವ ಆ ಸೀರೆ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲು ಮೂರು ವಿಧಾನಗಳನ್ನು ಬಳಸಲು ಸಾಧ್ಯವಿದ್ದು ಇವುಗಳ ಬಳಕೆಯನ್ನು (42ಕ-ಗ) ವಾಕ್ಯಗಳಲ್ಲಿ ಕಾಣಬಹುದು. (41ಕ) ವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸುವ ಮೂಲಕ (42ಕ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ, ಅದಕ್ಕೇನೇ ಅ ಪ್ರತ್ಯಯವನ್ನು ಸೇರಿಸುವ ಮೂಲಕ (42ಖ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ, ಮತ್ತು ಆ ವಾಕ್ಯದ ಎರಡು ಘಟಕಗಳಿಗೆ ನೇರವಾಗಿ ಇದೇ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ (42ಗ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ ತಯಾರಿಸಲಾಗಿದೆ. ನಾಲ್ಕನೆಯ ವಿಧಾನದ ಬಳಕೆಯನ್ನು (43ಕ-ಗ) ವಾಕ್ಯಗಳಲ್ಲಿ ಕಾಣ ಬಹುದು. ಇಲ್ಲಿ ಬಂದಿರುವ (43ಕ) ವಾಕ್ಯಕ್ಕೆ ಎಂಬ ಪದವನ್ನು ಸೇರಿಸುವುದರ ಮೂಲಕ ಅದನ್ನು (43ಖ) ವಾಕ್ಯದಲ್ಲಿ ಬಂದಿರುವ ಆ ವಿಷಯ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ (43ಗ) ವಾಕ್ಯವನ್ನು ತಯಾರಿಸಲಾಗಿದೆ.
ಈ ಒಳವಾಕ್ಯಗಳ ರಚನೆಯಲ್ಲಿ ಬೇರೆಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ, ಒಳವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸುವುದರೊಂದಿಗೆ ಅದರಲ್ಲಿ ಬರುವ ಒಂದು ಘಟಕಕ್ಕೆ ಯಾವ ಎಂಬ ಪದವನ್ನೂ ಸೇರಿಸಿಕೊಳ್ಳಬೇಕಾಗುತ್ತದೆ ((42ಕ) ನೋಡಿ).
ಇದಕ್ಕೆ ಬದಲು, ಒಳವಾಕ್ಯದ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವು ದಿದ್ದಲ್ಲಿ, ಅದರ ಘಟಕಗಳಲ್ಲೊಂದನ್ನು (ಒಂದು ಸೀರೆ ಎಂಬುದನ್ನು) ಬಿಟ್ಟು ಕೊಡಬೇಕಾಗುತ್ತದೆ ಎಂಬುದನ್ನು (42ಖ)ದಲ್ಲಿ ಕಾಣಬಹುದು. ಅ ಪ್ರತ್ಯಯ ವನ್ನು ನೇರವಾಗಿ ಒಳವಾಕ್ಯದ ಘಟಕಗಳಿಗೆ ಸೇರಿಸುವುದಿದ್ದಲ್ಲೂ ಈ ರೀತಿ ಘಟಕ ಗಳಲ್ಲೊಂದನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ ಇದರೊಂದಿಗೆ ಆ ಎಂಬುದನ್ನೂ) ವಾಕ್ಯದ ಬಿಟ್ಟುಕೊಡಬೇಕಾಗುತ್ತದೆ ಎಂಬುದನ್ನು (42ಗ)ದಲ್ಲಿ ಕಾಣಬಹುದು.
ಎಂಬ ಇಲ್ಲವೇ ಎನ್ನುವ ಪದವನ್ನು ಬಳಸುವಲ್ಲಿ ಮಾತ್ರ ಒಳವಾಕ್ಯವಾಗಿ ಬರುವ ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. ಆದರೆ ಮೇಲೆ ಸೂಚಿಸಿದ ಹಾಗೆ ಈ ವಿಧಾನವನ್ನು ಕೆಲವು ವಿಶಿಷ್ಟವಾದ ಸಂದಭ್ರ ಗಳಲ್ಲಿ ಮಾತ್ರ ಬಳಸಲು ಸಾಧ್ಯ. ಈ ನಾಲ್ಕು ವಿಧಾನಗಳ ಬಳಕೆಯಲ್ಲಿ ಕಾಣಿಸುವ ಬೇರೆ ಬೇರೆ ವೈಶಿಷ್ಟ್ಯಗಳನ್ನು ಕೆಳಗಿನ ವಿಭಾಗಗಳಲ್ಲಿ ವಿವರಿಸ ಕ್ರಿಯಾಪದವನ್ನೂ (ತಂದಿದ್ದಳು
7.4.1 ಓ ಪ್ರತ್ಯಯದ ಬಳಕೆ
ಈ ವಿಧಾನವನ್ನು ಬಳಸುವುದಿದ್ದಲ್ಲಿ ಒಳವಾಕ್ಯವಾಗಿ ಬರುವ ವಾಕ್ಯದ ಎಲ್ಲಾ ಅಂಶಗಳೂ ಬದಲಾಗದೆ ಹೆಚ್ಚುಕಡಿಮೆ ಹಾಗೆಯೇ ಉಳಿದುಕೊಳ್ಳುತ್ತವೆ. ಆ ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಸೇರಿಸುವುದು ಮತ್ತು ಅದರ ಘಟಕ ವೊಂದಕ್ಕೆ ಅನಿಶ್ಚಿತ ಸವ್ರಪದವೊಂದನ್ನು ಸೇರಿಸುವುದು ಎಂಬ ಎರಡು ಬದಲಾವಣೆಗಳು ಮಾತ್ರ ಈ ವಾಕ್ಯದಲ್ಲಿ ನಡೆಯುತ್ತವೆ.
(44ಕ) ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. (44ಖ) ಆ ಹುಡುಗನಿಗೆ ಚಾಕಲೇಟಿಲ್ಲ. (44ಗ) ಯಾವ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲವೋ ಆ ಹುಡುಗನಿಗೆ ಚಾಕಲೇಟಿಲ್ಲ. (44ಕ) ವಾಕ್ಯವನ್ನು (44ಖ)ದಲ್ಲಿ ಬಂದಿರುವ ಆ ಹುಡುಗನಿಗೆ ಎಂಬ ಪದ ಕಂತೆಯ ಒಳವಾಕ್ಯವನ್ನಾಗಿ ಮಾಡಿ (44ಗ) ವಾಕ್ಯವನ್ನು ತಯಾರಿಸಲಾಗಿದೆ. ಇದಕ್ಕಾಗಿ (44ಕ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಹುಡುಗ ಪದದೆದುರು ಯಾವ ಎಂಬ ಅನಿಶ್ಚಿತ ಸವ್ರಪದವನ್ನು ಬಳಸಲಾಗಿದೆ.
ವಾಕ್ಯವೊಂದರ ಮೂಲಕ ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳಲ್ಲಿ ಒಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುವು ದಕ್ಕಾಗಿ ಈ ರೀತಿ ಅಂತಹ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದಕಂತೆಯಲ್ಲಿ ಒಂದು ಒಳವಾಕ್ಯವನ್ನಿರಿಸುತ್ತೇವೆ. ಮೇಲೆ (44ಖ) ವಾಕ್ಯದಲ್ಲಿ ಆ ಹುಡುಗ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಆತನ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುವುದಕ್ಕಾಗಿ (44ಗ) ವಾಕ್ಯದಲ್ಲಿ (44ಕ) ವಾಕ್ಯವನ್ನು ಆ ಹುಡುಗ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲಾಗಿದೆ. ಈ ವಿಧಾನದ ಬಳಕೆಯಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದ ಇಲ್ಲವೇ ಪದಕಂತೆ ಎರಡು ಬಾರಿ ಬರುತ್ತದೆ. ಒಮ್ಮೆ ಒಳವಾಕ್ಯದಲ್ಲಿ ಮತ್ತು ಇನ್ನೊಮ್ಮೆ ಅದನ್ನು ಒಳವಾಕ್ಯವಾಗಿ ಪಡೆದಿರುವ ಪದಕಂತೆಯಲ್ಲಿ. ಮೇಲೆ (44ಗ) ವಾಕ್ಯದಲ್ಲಿ ಆ ಹುಡುಗ ಎಂಬ ಪದಕಂತೆ ಎರಡು ಬಾರಿ ಬಂದಿರುವು ದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ರೀತಿ ಒಂದೇ ಪದ ಇಲ್ಲವೇ ಪದಕಂತೆಯನ್ನು ಎರಡು ಬಾರಿ ಬಳಸುವ ಬದಲು ಎರಡನೆಯ ಸಲಕ್ಕೆ ಸವ್ರ ಪದವೊಂದನ್ನು ಬಳಸುವುದು ರೂಢಿ. (44ಘ) ಯಾವ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲವೋ ಆತನಿಗೆ ಚಾಕಲೇಟಿಲ್ಲ. ಒಂದು ಪದಕಂತೆಯಲ್ಲಿ ಒಂದಕ್ಕಿಂತ ಜಾಸ್ತಿ ಒಳವಾಕ್ಯಗಳನ್ನು ಬಳಸಲು ಸಾಧ್ಯವಿದ್ದು, ಇದಕ್ಕಾಗಿ ಆ ವಾಕ್ಯಗಳನ್ನು ಮತ್ತು, ಇಲ್ಲವೇ, ಅಥವಾ ಮೊದ ಲಾದ ಪದಗಳ ಮೂಲಕ ಬೇಪ್ರಡಿಸುವ ಅವಶ್ಯಕತೆಯಿದೆ. (45ಕ) ಯಾವ ಪುಸ್ತಕ ಬಹಳ ಕಡಿಮೆ ಬೆಲೆಗೆ ದೊರಕುತ್ತದೆಯೋ, ಮತ್ತು ಯಾವುದು ಎಲ್ಲಾ ಸಂದಭ್ರಗಳಲ್ಲೂ ಪ್ರಯೋಜನಕ್ಕೆ ಬರುತ್ತದೆಯೋ, ಅಂತಹ ಈ ಪುಸ್ತಕವನ್ನು ಯಾರೂ ಕೊಂಡು ಕೊಳ್ಳುತ್ತಿಲ್ಲವೆಂಬುದು ವಿಚಿತ್ರ. (45ಖ) ಯಾವ ಪೆಟ್ಟಿಗೆಯನ್ನು ಚೀನಾದಿಂದ ತಂದಿದ್ದಾರೋ, ಯಾವುದು ಕಾಗದದಿಂದ ಕಪ್ಪು ಬಣ್ಣದಲ್ಲಿದೆಯೋ, ಯಾವುದನ್ನು ಮಾಡಲಾ ಚೌಕಾಕಾರದಲ್ಲಿದೆಯೋ ಆ ಪೆಟ್ಟಿಗೆ ಕಪಾಟಿನೊಳಗಿದೆ. ಗಿದೆಯೋ, ಮತ್ತು ಯಾವುದು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದಕಂತೆಗಳಲ್ಲಿ ಮಾತ್ರ ವಲ್ಲದೆ, ಪದಕಂತೆಯ ಅಂಗವಾಗಿ ಬರುವ ನಾಮಗುಣಪದಗಳೊಂದಿಗೂ ಮತ್ತು ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದಗಳೊಂದಿಗೂ ಈ ವಿಧಾನದಿಂದ ಸಿದ್ಧವಾಗುವ ಒಳವಾಕ್ಯಗಳನ್ನು ಬಳಸಲು ಸಾಧ್ಯವಿದೆ. (46ಕ) ಯಾವ ದನದ ಕರು ಹುಲಿಯ ಬಾಯಿಗೆ ಬಿದ್ದಿದೆಯೋ ಆ ದನ ರಾಜುವಿನದು. (46ಖ) ಯಾವ ಹುಡುಗನೊಂದಿಗೆ ಜಾನಕಿ ಸಂತೆಗೆ ಹೋಗಿದ್ದಳೋ ಆ ಹುಡುಗ ಈಗ ಕಾಣೆಯಾಗಿದ್ದಾನೆ. ಕೊಡವನ್ನು ಹಾಗೆಯೇ ನೀರಿನ ಹೊರುತ್ತಾಳೋ ಹೊರುತ್ತಾಳೆ. ಜಾಗ್ರತೆಯಿಂದ ಹೇಗೆ ಪುಸ್ತಕದ ಚೀಲವನ್ನೂ
7.4.2 ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದು
ವಾಕ್ಯವೊಂದನ್ನು ಇನ್ನೊಂದು ವಾಕ್ಯದಲ್ಲಿ ಬಂದಿರುವ ಪದಕಂತೆಯ ಅಂಗವನ್ನಾಗಿ ಮಾಡಲು ನಾವು ಬಳಸಬಹುದಾದ ಎರಡನೆಯ ವಿಧಾನವೇನೆಂದರೆ, ಅದರ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದು. ಕನ್ನಡದ ಕ್ರಿಯಾಪದಗಳು ಈ ಪ್ರತ್ಯಯದೊಂದಿಗೆ ಮೂರು ರೂಪಗಳಲ್ಲಿ ಬರಬಲ್ಲುವು, ಮತ್ತು ಈ ರೂಪಗಳು ಹಿಂದಿನ ಸಮಯದ ಘಟನೆ, ಮುಂದಿನ ಸಮಯದ ಘಟನೆ ಮತ್ತು ಅಲ್ಲಗಳೆ ಯುವ ಘಟನೆಗಳೆಂಬ ಮೂರು ರೀತಿಯ ಘಟನೆಗಳನ್ನು ಸೂಚಿಸಬಲ್ಲುವು. (47ಕ) ಇವತ್ತು ಶಾಲೆಗೆ ಹೋದ ಹುಡುಗರಿಗೆ ಚಾಕಲೇಟ್ ಸಿಕ್ಕಿದೆ. (47ಖ) ನಾಳೆ ಶಾಲೆಗೆ ಹೋಗುವ ಹುಡುಗರಿಗೆ ಚಾಕಲೇಟ್ ಸಿಗುತ್ತದೆ. (47ಗ) ಇವತ್ತು ಶಾಲೆಗೆ ಹೋಗದ ಹುಡುಗರಿಗೆ ಚಾಕಲೇಟ್ ಸಿಗಲಿಲ್ಲ. (47ಕ)ದ ಒಳವಾಕ್ಯದಲ್ಲಿ ಹೋದ ಕ್ರಿಯಾರೂಪ ಬಂದಿದ್ದು ಅದು ಮಾತ ನಾಡುವ ಸಮಯಕ್ಕಿಂತ ಹಿಂದಿನ ಸಮಯದಲ್ಲಿ ನಡೆದ ಘಟನೆಯನ್ನು ಸೂಚಿಸು ತ್ತದೆ. ಇದಕ್ಕೆ ಬದಲು, (47ಖ)ದ ಒಳವಾಕ್ಯದಲ್ಲಿ ಹೋಗುವ ಎಂಬ ಕ್ರಿಯಾ ರೂಪ ಬಂದಿದ್ದು, ಅದು ಮಾತನಾಡುವ ಸಮಯದ ಅನಂತರ ನಡೆಯಲಿರುವ ಮುಂದಿನ ಸಮಯದ ಘಟನೆಯನ್ನು ಸೂಚಿಸುತ್ತದೆ. (47ಗ)ದ ಒಳವಾಕ್ಯದಲ್ಲಿ ಇವೆರಡಕ್ಕಿಂತಲೂ ಭಿನ್ನವಾದ ಹೋಗದ ಎಂಬ ಕ್ರಿಯಾರೂಪ ಬಂದಿದ್ದು, ಇದು ನಡೆಯದ ಘಟನೆಯೊಂದನ್ನು ಸೂಚಿಸುತ್ತದೆ.
ಅಲ್ಲಗಳೆಯುವ ವಾಕ್ಯಗಳನ್ನು ಈ ರೀತಿ ಒಳವಾಕ್ಯಗಳನ್ನಾಗಿ ಮಾಡಿ ಬಳಸುವುದಿದ್ದಲ್ಲಿ, ಅವು ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿವೆಯೇ ಅಥವಾ ಮುಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿವೆಯೇ ಎಂಬ ವಿಷಯ ದಲ್ಲಿ ಸಂಶಯವುಂಟಾಗಲು ಸಾಧ್ಯವಿದೆ. ಈ ಎರಡು ಸಂದಭ್ರಗಳಲ್ಲೂ ಇಂತಹ ಒಳವಾಕ್ಯಗಳಲ್ಲಿ ಕ್ರಿಯಾಪದಕ್ಕಿರುವ ರೂಪ ಒಂದೇ ಎಂಬುದೇ ಈ ರೀತಿ ಸಂಶಯವುಂಟಾಗಲು ಕಾರಣ. ಉದಾಹರಣೆಗಾಗಿ ಮೇಲೆ (47ಗ) ವಾಕ್ಯದಲ್ಲಿ ಬಂದಿರುವ ಶಾಲೆಗೆ ಹೋಗದ ಎಂಬ ಒಳವಾಕ್ಯವನ್ನು ಈ ಹುಡುಗರು ಶಾಲೆಗೆ ಹೋಗಲಿಲ್ಲ ಎಂಬ ವಾಕ್ಯದಿಂದ ತಯಾರಿಸಿರಬೇಕು.
ಆದರೆ ಕೆಳಗೆ ಕೊಟ್ಟಿರುವ (47ಘ) ವಾಕ್ಯದಲ್ಲಿ ಬಂದಿರುವ ಅದೇ ರೂಪದ ಒಳವಾಕ್ಯವನ್ನು ಈ ಹುಡುಗರು (ನಾಳೆ) ಶಾಲೆಗೆ ಹೋಗುವುದಿಲ್ಲ ಎಂಬ ಬೇರೊಂದು ವಾಕ್ಯದಿಂದ ತಯಾರಿಸಿರಲು ಸಾಧ್ಯವಿದೆ. (47ಘ) ನಾಳೆ ಶಾಲೆಗೆ ಹೋಗದ ಹುಡುಗರಿಗೆ ಚಾಕಲೇಟ್ ಸಿಗಲಿಕ್ಕಿಲ್ಲ. ಕೆಳಗೆ ಕೊಟ್ಟಿರುವ (47ಙ) ವಾಕ್ಯಕ್ಕೆ ಈ ಎರಡು ರೀತಿಯ ಅರ್ಥಗಳೂ ಬರಬಲ್ಲುವೆಂಬುದನ್ನು ಗಮನಿಸಬಹುದು.
(47ಙ) ಶಾಲೆಗೆ ಹೋಗದ ಹುಡುಗನಿಗೆ ಚಾಕಲೇಟ್ ಕೊಡಬಾರದು. ಶಾಲೆಗೆ ಹೋಗದ ಹುಡುಗನಿಗೆ ಎಂಬ (47ಙ)ದಲ್ಲಿ ಬಂದಿರುವ ಪದಗುಚ್ಛಕ್ಕೆ ‘ಯಾವ ಹುಡುಗನು ಶಾಲೆಗೆ ಹೋಗಲಿಲ್ಲವೋ ಆತನಿಗೆ’ ಎಂಬ ಅರ್ಥ ಬರಲು ಸಾಧ್ಯವಿದ್ದು ಅದರಲ್ಲಿರುವ ಒಳವಾಕ್ಯ ‘ಹುಡುಗ ಶಾಲೆಗೆ ಹೋಗಲಿಲ್ಲ’ ಎಂಬು ದಾಗಿ ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿರಲು ಸಾಧ್ಯವಿದೆ, ಇಲ್ಲವೇ ‘ಯಾವ ಹುಡುಗನು ಶಾಲೆಗೆ ಹೋಗುವುದಿಲ್ಲವೋ ಆತನಿಗೆ’ ಎಂಬ ಅರ್ಥ ವಿರಲು ಸಾಧ್ಯವಿದ್ದು ಅದೇ ಒಳವಾಕ್ಯ ‘ಹುಡುಗ ಶಾಲೆಗೆ ಘಟನೆಯೊಂದನ್ನು ಹೋಗುವುದಿಲ್ಲ’ ಅಲ್ಲಗಳೆಯುತ್ತಿರಲೂ ಸಾಧ್ಯವಿದೆ.
ಆದರೆ ಸಾಮಾನ್ಯವಾಗಿ ವಾಕ್ಯವನ್ನು ಬಳಸುವ ಸಂದಭ್ರವೇ ಒಂದು ಒಳವಾಕ್ಯದ ನಿಜವಾದ ಅರ್ಥ ಯಾವುದು ಎಂಬುದನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ. ಈ ವಿಧಾನದ ಮೂಲಕ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿರುವ ಪದಕಂತೆಯೊಂದರ ಒಳವಾಕ್ಯವನ್ನಾಗಿ ಮಾಡಿ ಬಳಸುವಾಗ, ಆ ಪದಕಂತೆಗೆ ಮುಂದಿನ ಸಮನಾಗಿರುವ ಪದಕಂತೆಯನ್ನು ಒಳವಾಕ್ಯದಿಂದ ತೆಗೆದುಹಾಕಬೇಕಾಗುತ್ತದೆ. ಉದಾಹರಣೆಗಾಗಿ ಮೇಲೆ (47ಕ) ವಾಕ್ಯದಲ್ಲಿ ಬಂದಿರುವ ಇವತ್ತು ಶಾಲೆಗೆ ಹೋದ ಎಂಬ ಒಳವಾಕ್ಯ ಈ ಹುಡುಗರು ಇವತ್ತು ಶಾಲೆಗೆ ಹೋದರು ಎಂಬ ವಾಕ್ಯದ ವಿಶೇಷಣ ರೂಪವೆಂದು ಹೇಳಬಹುದು. ಅದನ್ನು ತಯಾರಿಸುವು ದಕ್ಕಾಗಿ ಈ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ ಅದನ್ನು ಹೋದ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಈ ಹುಡುಗರು ಎಂಬ ಪದಕಂತೆಯನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಬಹುದು. ಈ ರೀತಿ ಮೇಲಿನ ವಿಧಾನವನ್ನು ಬಳಸಿದಾಗ ಒಳವಾಕ್ಯಗಳಲ್ಲಿರುವ ಘಟಕ ಗಳಲ್ಲಿ ಒಂದು ಬಿದ್ದುಹೋಗುವುದಾದರೂ ಆ ಘಟಕ ಹೊರವಾಕ್ಯದಲ್ಲೂ (ಒಳ ವಾಕ್ಯದ ವಿಶೇಷ್ಯವಾಗಿ) ಬರುವುದಾದ ಕಾರಣ ಬಿದ್ದು ಹೋಗಿರುವ ಘಟಕ ಯಾವುದೆಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಆದರೆ, ಒಳವಾಕ್ಯದಲ್ಲಿ ಅದು ಎಂತಹ ಘಟಕವಾಗಿತ್ತು ಎಂಬುದನ್ನು ತಿಳಿಯುವುದು ಕೆಲವು ಸಂದಭ್ರ ಗಳಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸ ಬಹುದು. (48ಕ) ನಿನ್ನೆ ಮಾತನಾಡಿಸಿದ ಮುದುಕ ಇವತ್ತು ಸತ್ತು ಹೋಗಿದ್ದಾನೆ. (48ಖ) ನಿನ್ನೆ (ನಾನೊಬ್ಬ) ಮುದುಕನನ್ನು ಮಾತನಾಡಿಸಿದ್ದೆ. (48ಗ) ನಿನ್ನೆ (ನನ್ನನ್ನೊಬ್ಬ) ಮುದುಕ ಮಾತನಾಡಿಸಿದ್ದ. (48ಕ)ದಲ್ಲಿ ಬಂದಿರುವ ನಿನ್ನೆ ಮಾತನಾಡಿಸಿದ ಎಂಬ ಒಳವಾಕ್ಯ (48ಖ) ದಲ್ಲಿ ಬಂದಿರುವ ವಾಕ್ಯದಿಂದಲೂ ತಯಾರಾಗಿರಲು ಸಾಧ್ಯವಿದೆ ಇಲ್ಲವೇ (48ಗ)ದಲ್ಲಿ ಬಂದಿರುವ ವಾಕ್ಯದಿಂದಲೂ ತಯಾರಾಗಿರಲು ಸಾಧ್ಯವಿದೆ. ಈ ರೀತಿ ಒಳವಾಕ್ಯವನ್ನು ತಯಾರಿಸುವಾಗ ಮುದುಕ ಪದದೊಂದಿಗೆ ಅದರ ಮುಂದಿರುವ ಅನ್ನು ವಿಭಕ್ತಿ ಪ್ರತ್ಯಯವನ್ನೂ ಬಿಟ್ಟುಕೊಡಬೇಕಾಗುವುದರಿಂದ (48ಕ)ದಲ್ಲಿ ಈ ವ್ಯತ್ಯಾಸವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಆದರೆ ನಾನು ಮತ್ತು ನನ್ನನ್ನು ಎಂಬ ಪದಗಳನ್ನೂ ಒಳವಾಕ್ಯದಲ್ಲಿ ಬಳಸಿದೆವಾದರೆ ಈ ಸಮಸ್ಯೆ ಬಗೆಹರಿಯುತ್ತದೆ. (48ಘ) ನಿನ್ನೆ ನಾನು ಮಾತನಾಡಿಸಿದ ಮುದುಕ ಇವತ್ತು ಸತ್ತಿದ್ದಾನೆ. (48ಙ) ನಿನ್ನೆ ನನ್ನನ್ನು ಮಾತನಾಡಿಸಿದ ಮುದುಕ ಇವತ್ತು ಸತ್ತಿದ್ದಾನೆ. ಸಾಮಾನ್ಯವಾಗಿ ಅರ್ಥಸಂದಿಗ್ಧತೆಗಳು ಕಾಣಸಿಕೊಳ್ಳುವುದು ಬಹಳ ಅಪರೂಪ. ಇದಕ್ಕೆ ಒಂದು ವಾಕ್ಯಗಳಲ್ಲಿ ಬಳಸುವ ನಾವು ಕಾರಣವೇನೆಂದರೆ, ಯಾವ ವಿಭಕ್ತಿ ಪ್ರತ್ಯಯವೂ ಇಲ್ಲದಿರುವಂತಹ ಘಟಕವೇ ಜಾಗ್ರತೆ ಇಂತಹ ಒಳವಾಕ್ಯ ವಹಿಸಿಕೊಳ್ಳುತ್ತೇವೆ. ಇದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು. ಗಳಲ್ಲಿ ಬಿದ್ದುಹೋಗುವಂತೆ ನಾವು (49ಕ) ರಾಮುವಿಗೆ ಕಾರನ್ನು ಮಾರಿದ ವ್ಯಕ್ತಿ ಈಗ ಜೈಲಿನಲ್ಲಿದ್ದಾನೆ. (49ಖ) ಒಬ್ಬ ವ್ಯಕ್ತಿ ರಾಮುವಿಗೆ ಕಾರನ್ನು ಮಾರಿದ್ದ. (50ಕ) ರಾಮುವಿನಿಂದ ಕಾರನ್ನು ಕೊಂಡುಕೊಂಡ ವ್ಯಕ್ತಿ ಈಗ ಜೈಲಿ ನಲ್ಲಿದ್ದಾನೆ. (50ಖ) ಒಬ್ಬ ವ್ಯಕ್ತಿ ರಾಮುವಿನಿಂದ ಕಾರನ್ನು ಕೊಂಡುಕೊಂಡಿದ್ದ. ವಿಷಯವಾಕ್ಯಗಳನ್ನು ಈ ವಿಧಾನದ ಮೂಲಕ ಒಳವಾಕ್ಯಗಳನ್ನಾಗಿ ಬಳಸ ಬೇಕಿದ್ದಲ್ಲಿ ಅದರಲ್ಲಿ ಬರುವ ಇರು ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ ಹೇಳಬೇಕಾಗುತ್ತದೆ.
(51ಕ) ಆ ಮನೆಯಲ್ಲಿ ಒಂದು ದೆವ್ವ ಇದೆ. (51ಖ) ದೆವ್ವ ಇರುವ ಆ ಮನೆಯನ್ನು ರಾಜು ಯಾರಿಗೋ ಮಾರಿದ್ದಾನೆ. ಹಲವು ಸಂದಭ್ರಗಳಲ್ಲಿ ಈ ಇರು ಕ್ರಿಯಾಪದ ಇಂತಹ ವಿಷಯವಾಕ್ಯ ಗಳಲ್ಲಿ ಬಾರದಿರುತ್ತದೆ ಎಂಬುದನ್ನು ನಾವು ಮೇಲೆ ಮೂರನೇ ಅಧ್ಯಾಯದಲ್ಲಿ ನೋಡಿರುವೆವು. ಆದರೆ ಮೇಲಿನ ವಿಧಾನವನ್ನು ಬಳಸಿ ತಯಾರಿಸಿದ ಒಳವಾಕ್ಯ ಗಳಲ್ಲಿ ಆ ರೀತಿ ಇರು ಕ್ರಿಯಾಪದವನ್ನು (ಇಲ್ಲವೇ ಆಗಿರು ಎಂಬುದಾಗಿ ಬರುವ ಎರಡು ಕ್ರಿಯಾಪದಗಳ ಜೋಡಿಯನ್ನು) ಬಳಸದಿರಲು ಸಾಧ್ಯವಾಗದು. (52ಕ) ರಾಜುವಿಗೆ ಮೂವರು ಹುಡುಗಿಯರು. (52ಖ) ರಾಜುವಿಗಿರುವ ಮೂವರು ಹುಡುಗಿಯರಲ್ಲಿ ಇಬ್ಬರಿಗೆ ಮದುವೆ (53ಕ) ಈ ಬುಟ್ಟಿಯ ಹಣ್ಣು ಬಹಳ ಸಿಹಿ. (53ಖ) ಬಹಳ ಸಿಹಿಯಾಗಿರುವ ಈ ಬುಟ್ಟಿಯ ಹಣ್ಣನ್ನು ನಿಮಗೇ ಕೊಡು ತ್ತೇನೆ.
7.4.3 ವಾಕ್ಯದ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸುವುದು
ವಾಕ್ಯವೊಂದರಲ್ಲಿ ಬರುವ ಘಟಕಗಳಲ್ಲಿ ಪ್ರತಿಯೊಂದಕ್ಕೂ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಪದಕಂತೆಯೊಂದರ ಒಳವಾಕ್ಯವನ್ನಾಗಿ ಮಾಡಿ ಬಳಸುವುದು ಮೂರನೆಯ ವಿಧಾನ. ಈ ವಿಧಾನದಲ್ಲಿ ಒಳವಾಕ್ಯದ ಕ್ರಿಯಾಪದ ಬಿದ್ದುಹೋಗುತ್ತದೆ, ಮತ್ತು ಅದರ ಪದಕಂತೆಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳೂ ಬಿದ್ದುಹೋಗುತ್ತವೆ. (54ಕ) ಕಳೆದ ವಾರ ಅವರು ಮೈಸೂರಿನಲ್ಲಿ ಭಾಷಣ ಮಾಡಿದ್ದರು. (54ಖ) (ಆ) ಭಾಷಣ ಚನ್ನಾಗಿರಲಿಲ್ಲ. (54ಗ) ಕಳೆದ ವಾರದ ಅವರ ಮೈಸೂರಿನ (ಆ) ಭಾಷಣ ಚನ್ನಾಗಿರಲಿಲ್ಲ. (54ಕ) ವಾಕ್ಯವನ್ನು (54ಖ)ದಲ್ಲಿ ಬಂದಿರುವ ಆ ಭಾಷಣ ಎಂಬ ಪದಕಂತೆಗೆ ಒಳವಾಕ್ಯವನ್ನಾಗಿ ಮಾಡಿ (54ಗ) ವಾಕ್ಯವನ್ನು ತಯಾರಿಸಲಾಗಿದೆ. ಮತ್ತು ಇದಕ್ಕಾಗಿ (54ಕ) ವಾಕ್ಯದ ಭಾಷಣ ಎಂಬ ಘಟಕವನ್ನೂ ಮತ್ತು ಮಾಡಿದ್ದರು ಎಂಬ ಕ್ರಿಯಾರೂಪವನ್ನೂ ಬಿಟ್ಟುಕೊಡಲಾಗಿದೆ, ಇದಲ್ಲದೆ (54ಕ) ವಾಕ್ಯದ ಉಳಿದ ಮೂರು ಘಟಕಗಳಿಗೆ (ಕಳೆದ ವಾರ, ಅವರು ಮತ್ತು ಮೈಸೂರಿನಲ್ಲಿ ಎಂಬವುಗಳಿಗೆ) ಅ ಪ್ರತ್ಯಯವನ್ನು ಸೇರಿಸಲಾಗಿದೆ.
ಈ ರೀತಿ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸುವಾಗ ಅವುಗಳ ಮುಂದೆ ವಿಭಕ್ತಿ ಪ್ರತ್ಯಯಗಳಿದ್ದಲ್ಲಿ ಅವು ಬಿದ್ದುಹೋಗುತ್ತವೆ. ಮೇಲಿನ ಉದಾಹರಣೆ ಯಲ್ಲಿ ಮೈಸೂರು ಪದದ ಮುಂದಿದ್ದ ಅಲ್ಲಿ ಎಂಬ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿರುವುದನ್ನು ಕಾಣಬಹುದು. ಕೆಳಗಿನ ಉದಾಹರಣೆಯಲ್ಲಿ ಇಗೆ ಮತ್ತು ಅಲ್ಲಿ ಎಂಬ ಎರಡು ಪ್ರತ್ಯಯಗಳೂ ಬಿದ್ದುಹೋಗಿವೆ. (55ಕ) ರಾಮುವಿಗೆ ನಾಟಕದಲ್ಲಿ ಒಂದು ಬಹುಮಾನ ಸಿಕ್ಕಿದೆ. (55ಖ) ರಾಮುವಿನ ನಾಟಕದ ಬಹುಮಾನ ಕಳೆದುಹೋಗಿದೆ.
7.4.4 ಎಂಬ ಇಲ್ಲವೇ ಎನ್ನುವ ಪದಗಳ ಬಳಕೆ
ವಾಕ್ಯವೊಂದನ್ನು ಪದಕಂತೆಯ ಅಂಗವನ್ನಾಗಿ ಮಾಡುವುದಕ್ಕಾಗಿ ಬಳಸಿದ ಮೇಲಿನ ಮೂರು ವಿಧಾನಗಳಲ್ಲೂ ಆ ವಾಕ್ಯದಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಬೇಕಾಗಿತ್ತದೆ. ಇದಲ್ಲದೆ ಈ ಎಲ್ಲಾ ವಿಧಾನಗಳಲ್ಲೂ ಒಳವಾಕ್ಯ ಮತ್ತು ಹೊರವಾಕ್ಯಗಳ ನಡುವೆ ಒಂದು ಪದದ ಮಟ್ಟಿಗಾದರೂ ಸಮಾನತೆಯಿದ್ದೇ ಇರಬೇಕೆಂಬ ನಿಯಮವಿದೆ. ಎಂಬ ಇಲ್ಲವೇ ಎನ್ನುವ ಪದವನ್ನು ಬಳಸಿ ನಡೆಸುವ ಈ ನಾಲ್ಕನೆಯ ವಿಧಾನದಲ್ಲಿ ಒಳವಾಕ್ಯವಾಗಿ ಬರುವ ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. ಆದರೆ ಈ ವಿಧಾನವನ್ನು ಕೆಲವೇ ಕೆಲವು ಸಂದಭ್ರ ಗಳಲ್ಲಿ ಮಾತ್ರ ಬಳಸಲು ಸಾಧ್ಯವಿದೆ. ಇಲ್ಲಿ ವಿಶೇಷ್ಯವಾಗಿ ವಿಷಯ, ಸುದ್ದಿ, ಸಂಗತಿ, ವಿಚಾರ, ಮೊದಲಾದ ಕೆಲವೇ ಕೆಲವು ಪದಗಳು ಮಾತ್ರ ಬರಬಲ್ಲುವು. (56ಕ) ಅವಳು ಬಾವಿಗೆ ಹಾರಿಯಾಳೆಂಬ ಸಂಗತಿಯನ್ನು ಯಾರೂ ಊಹಿ ಸಿರಲಿಲ್ಲ. (56ಖ) ನಾಳೆ ಮಂತ್ರಿಗಳು ಬರುತ್ತಾರೆಂಬ ಸುದ್ದಿ ಎಲ್ಲೆಡೆಗೂ ಹರಡಿದೆ. ವಿಶೇಷ್ಯವಾಗಿ ಒಂದು ನಾಮಪದವನ್ನು ಬಳಸುವ ಬದಲು ಎಂಬ ಪದವನ್ನೇ ಅದಕ್ಕೆ ಉದು ಪ್ರತ್ಯಯವನ್ನು ಸೇರಿಸುವುದರ ಮೂಲಕ ನಾಮಪದವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಈ ಸಾಧ್ಯತೆಯನ್ನು ಮೇಲೆ (7.3.2)ರಲ್ಲಿ ನೋಡಿರುವೆವು. ಇದನ್ನೇ ಕೆಳಗಿನ ವಾಕ್ಯಗಳಲ್ಲೂ ಕಾಣಬಹುದು. ಬಾವಿಗೆ (57ಕ) ಅವಳು ಊಹಿಸಿರಲಿಲ್ಲ. (57ಖ) ಅವನಿಗೆ ಹಣ ಸಿಕ್ಕಿದೆಯೆಂಬುದು ನನಗೂ ಗೊತ್ತಿದೆ. (57ಗ) ನೀವಿಲ್ಲಿಗೆ ಬಂದಿರುವಿರೆಂಬುದು ಬಹಳ ಗುಟ್ಟಿನ ವಿಷಯ. ಹಾರಿಯಾಳೆಂಬುದನ್ನು ಯಾರೂ
7.5 ಸಾರಾಂಶ
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಬಳಸಲು ಬೇರೆ ಬೇರೆ ವಿಧಾನಗಳು ಬಳಕೆಯಲ್ಲಿದ್ದು ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದು ಇವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಇನ್ನೊಬ್ಬನ ಮಾತು ಇಲ್ಲವೇ ಅಭಿಪ್ರಾಯವನ್ನು ಎತ್ತಿ ಹೇಳುವುದು ಇಂತಹ ಉದ್ದೇಶಗಳಲ್ಲಿ ಒಂದು. ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ, ಎಂದು ಪದವನ್ನು (ಇಲ್ಲವೇ ಓ ಪ್ರತ್ಯಯವನ್ನು) ಆ ಮಾತಿಗೆ ಇಲ್ಲವೇ ಆ ಅಭಿಪ್ರಾಯ ವನ್ನು ಸೂಚಿಸುವ ವಾಕ್ಯಕ್ಕೆ ಸೇರಿಸಿ ಅದನ್ನು ಬೇರೊಂದು ವಾಕ್ಯದ ಒಳವಾಕ್ಯ ವನ್ನಾಗಿ ಮಾಡಬಹುದು. ಇದಕ್ಕೆ ಬದಲು, ಆ ವಾಕ್ಯಕ್ಕೆ ಅಂತೆ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಹಾಗೆಯೇ ಬಳಸಲೂ ಸಾಧ್ಯವಿದೆ. ಒಳವಾಕ್ಯವನ್ನು ತಯಾರಿಸುವ ಇತರ ವಿಧಾನಗಳನ್ನೆಲ್ಲ ವ್ಯಕ್ತಿ, ವಸ್ತು, ವಿಷಯ, ಘಟನೆ ಮೊದಲಾದವುಗಳನ್ನು ವರ್ಣಿಸುವುದಕ್ಕಾಗಿ ಬಳಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಎರಡು ರೀತಿಯ ವಿಧಾನಗಳು ಬಳಕೆಯಾಗುತ್ತವೆ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಿ ಬಳಸುವುದು ಇವುಗಳಲ್ಲಿ ಒಂದು ರೀತಿಯ ವಿಧಾನ, ಮತ್ತು ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿ ಬರುವ ಘಟಕದ ಅಂಗವನ್ನಾಗಿ ಮಾಡಿ ಬಳಸುವುದು ಇನ್ನೊಂದು ರೀತಿಯ ವಿಧಾನ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಲು ವಾಕ್ಯಕ್ಕೆ ಎಂಬುದು ಪದವನ್ನು ಸೇರಿಸುವುದು, ಮತ್ತು ವಾಕ್ಯದ ಕೊನೆಯ ಕ್ರಿಯಾಪದಕ್ಕೆ ಉದು, ಇಕೆ ಮತ್ತು ಅಲು ಎಂಬ ಪ್ರತ್ಯಯಗಳಲ್ಲೊಂದನ್ನು ಸೇರಿಸುವುದು ಎಂಬುದಾಗಿ ನಾಲ್ಕು ವಿಧಾನಗಳು ಬಳಕೆಯಲ್ಲಿವೆ.
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿ ಬಂದಿರುವ ಪದಕಂತೆಯ ಅಂಗವನ್ನಾಗಿ ಮಾಡಲು ಆ ವಾಕ್ಯಕ್ಕೆ ಎಂಬ ಪದವನ್ನು ಸೇರಿಸುವುದು, ಆ ವಾಕ್ಯದ ಕ್ರಿಯಾಪದಕ್ಕೆ ಓ ಮತ್ತು ಅ ಪ್ರತ್ಯಯಗಳಲ್ಲೊಂದನ್ನು ಸೇರಿಸುವುದು ಮತ್ತು ಆ ವಾಕ್ಯದ ಘಟಕಗಳಲ್ಲಿ ಪ್ರತಿಯೊಂದಕ್ಕೂ ಅ ಪ್ರತ್ಯಯವನ್ನು ಸೇರಿಸು ವುದು ಎಂಬುದಾಗಿ ನಾಲ್ಕು ವಿಧಾನಗಳು ಬಳಕೆಯಲ್ಲಿವೆ. ಈ ವಿಧಾನಗಳನ್ನು ಬಳಸಿದಾಗ ವಾಕ್ಯದಲ್ಲಿ ಬೇರೆಯೂ ಹಲವು ಬದಲಾವಣೆಗಳು ನಡೆಯುತ್ತವೆ. ಈ ವಿಧಾನಗಳಿಗೆಲ್ಲ ಬೇರೆ ಬೇರೆ ಉದ್ದೇಶಗಳಿವೆ. English → | Eke →
ಅಧ್ಯಾಯ ಎಂಟು — ವಾಕ್ಯಗಳ ಜೋಡಣೆ
8.1 ಪೀಠಿಕೆ
ಒಂದಕ್ಕೊಂದು ಸಂಬಂಧಿಸಿರುವ ಎರಡು ವಾಕ್ಯಗಳನ್ನು ಒಟ್ಟಿಗೆ ಜೋಡಿಸಿ ಹೇಳಲು ಕನ್ನಡದಲ್ಲಿ ಮೂರು ವಿಧಾನಗಳು ಬಳಕೆಯಲ್ಲಿವೆ.
(1) ಮತ್ತು, ಇಲ್ಲವೇ, ಆದರೆ ಮೊದಲಾದ ಪದಗಳಲ್ಲೊಂದನ್ನು ಬಳಸಿ ಜೋಡಿಸುವುದು, (2) ಊ ಇಲ್ಲವೇ ಓ ಪ್ರತ್ಯಯವನ್ನು ಬಳಸಿ ಜೋಡಿಸುವುದು, ಮತ್ತು (3) ವಾಕ್ಯಗಳ ಕೊನೆಯಲ್ಲಿ ಬಂದಿರುವ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಜೋಡಿಸುವುದು. ಈ ಮೂರು ವಿಧಾನಗಳ ಬಳಕೆಯನ್ನು ಕೆಳಗಿನ ಮೂರು ವಾಕ್ಯಗಳಲ್ಲಿ ಕಾಣ ಬಹುದು. (1ಕ) ದೊಡ್ಡ ಕೋತಿ ಮಂಚದ ಮೇಲೆ ಕುಳಿತಿದೆ ಮತ್ತು ಚಿಕ್ಕ ಕೋತಿ ಬಾಗಿಲಿನ ಬಳಿ ಕುಳಿತಿದೆ. (1ಖ) ದೊಡ್ಡ ಕೋತಿ ಮಂಚದ ಮೇಲೂ ಮತ್ತು ಚಿಕ್ಕ ಕೋತಿ ಬಾಗಿಲಿನ ಬಳಿಯೂ ಕುಳಿತಿವೆ. (1ಗ) ದೊಡ್ಡ ಕೋತಿ ಮಂಚದ ಮೇಲೆ ಕುಳಿತು ಚಿಕ್ಕ ಕೋತಿಯನ್ನು ಅಣಕಿಸುತ್ತಿದೆ. (1ಕ) ವಾಕ್ಯದಲ್ಲಿ ಮತ್ತು ಪದವನ್ನು ಬಳಸುವುದರ ಮೂಲಕ ಎರಡು ವಾಕ್ಯ ಗಳನ್ನು ಜೋಡಿಸಲಾಗಿದೆ. ಇವೇ ಎರಡು ವಾಕ್ಯಗಳನ್ನು (1ಖ)ದಲ್ಲಿ ಊ ಪ್ರತ್ಯಯವನ್ನು ಬಳಸುವುದರ ಮೂಲಕ ಜೋಡಿಸಲಾಗಿದೆ. (1ಗ)ದಲ್ಲಿ ಇವಕ್ಕಿಂತ ಸ್ವಲ್ಪ ಭಿನ್ನವಾಗಿರುವ ವಾಕ್ಯಗಳೆರಡನ್ನು ಅವುಗಳಲ್ಲಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಅದರ ‘ಜೋಡಿಸುವ ರೂಪ’ಕ್ಕೆ ಬದಲಾಯಿಸಿ ಜೋಡಿಸ ಮತ್ತು ಪದವನ್ನು ಬಳಸದೆ ಎರಡು ವಾಕ್ಯಗಳನ್ನು ಒಂದರ ಅನಂತರ ಒಂದರಂತೆ ಇರಿಸಿ ಹೇಳಿದರೂ ಅದೇ ಅರ್ಥ ಬರಲು ಸಾಧ್ಯವಿದೆ. (2ಕ) ದೊಡ್ಡ ಕೋತಿ ಮಂಚದ ಮೇಲೆ ಕುಳಿತಿದೆ, ಚಿಕ್ಕದು ಬಾಗಿಲಿನ ಬಳಿ ನಿಂತಿದೆ. (2ಖ) ಅವರ ಮಗ ಮುಂಬಯಿಗೆ ಹೋದ, ಮಗಳು ಚೆನ್ನೈಗೆ ಹೋದಳು.
8.1.1 ಜೋಡಣೆಯಲ್ಲಿ ವಾಕ್ಯಗಳು ಮತ್ತು ವಾಕ್ಯಾಂಗಗಳು
ಈ ಮೂರು ವಿಧಾನಗಳ ಮೂಲಕ ವಾಕ್ಯಗಳೆರಡನ್ನು ಜೋಡಿಸುವ ಬದಲು ಒಂದು ವಾಕ್ಯದಲ್ಲೇನೇ ಎರಡು ಪದ ಇಲ್ಲವೇ ಪದಕಂತೆಗಳನ್ನು ಜೋಡಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. ರಮೇಶ ಮತ್ತು ಶ್ರೀಪತಿ ಗೆಳೆಯರು. (3ಖ) ನಾಯಿಯೂ ಬೆಕ್ಕೂ ಜಗಳಾಡಿಕೊಳ್ಳುತ್ತಿವೆ. ರಾಜುವಿನ ತಮ್ಮನೂ ಅವನ ಗೆಳೆಯನೂ ಒಂದೇ ದಿವಸ ಮುಂಬಯಿಗೆ ಹೋದರು. (3ಘ) ತನ್ನಲ್ಲಿದ್ದ ಹಣವನ್ನೆಲ್ಲ ಆತ ರಾಜುವಿಗೂ ಮತ್ತು ಹರಿಗೂ ಮೇಲಿನ ವಾಕ್ಯಗಳಲ್ಲಿ ಮತ್ತು ಮತ್ತು ಊ ಎಂಬವುಗಳ ಬಳಕೆಯಾಗಿದೆ ಯಾದರೂ ಅವುಗಳಲ್ಲಿ ಯಾವುದನ್ನೂ ಎರಡು ವಾಕ್ಯಗಳ ಜೋಡಣೆಯಿಂದ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಾಗದು. ಉದಾಹರಣೆಗಾಗಿ, (3ಕ) ವಾಕ್ಯದಲ್ಲಿ ಮತ್ತು ಪದವನ್ನು ಬಳಸಲಾಗಿದೆ. ಆದರೆ, ಆ ವಾಕ್ಯವನ್ನು ರಮೇಶ ಗೆಳೆಯ ಮತ್ತು ಶ್ರೀಪತಿ ಗೆಳೆಯ ಎಂಬ ಎರಡು ವಾಕ್ಯಗಳ ಜೋಡಣೆಯಿಂದ ತಯಾರಿಸಲಾಗಿದೆಯೆಂದು ಹೇಳಿದಲ್ಲಿ, ಅದಕ್ಕಿರುವ ‘ರಮೇಶ ಶ್ರೀಪತಿಯ ಗೆಳೆಯ’ ಎಂಬ ಅರ್ಥವಾಗಲೀ ಇಲ್ಲವೇ ‘ಶ್ರೀಪತಿ ರಮೇಶನ ಗೆಳೆಯ’ ಎಂಬ ಅರ್ಥವಾಗಲೀ ಬರಲಾರದು. ಇತರ ವಾಕ್ಯಗಳಲ್ಲೂ ಹೀಗೆಯೇ. ಎರಡು ನಾಮಪದಗಳನ್ನು ಈ ರೀತಿ ಮತ್ತು ಪದ ಇಲ್ಲವೇ ಊ ಪ್ರತ್ಯಯ ವನ್ನು ಬಳಸದೆಯೂ ಜೋಡಿಸಲು ಸಾಧ್ಯವಿದೆ. ಆದರೆ ಇಂತಹ ಜೋಡಣೆಗೆ ಮೇಲಿನದಕ್ಕಿಂತ ಸ್ವಲ್ಪ ಭಿನ್ನವಾದ ಅರ್ಥವಿದೆ. ಉದಾಹರಣೆಗಾಗಿ, ತಂದೆ ತಾಯಿ, ಅಣ್ಣ ತಮ್ಮ, ಅತ್ತೆ ಸೊಸೆ ಮೊದಲಾದ ನಂಟಸ್ತಿಕೆಯನ್ನು ಸೂಚಿಸುವ ಪದಗಳ ಜೋಡಣೆಯಲ್ಲಿ ಮತ್ತು ಇಲ್ಲವೇ ಊ ಎಂಬವುಗಳ ಬಳಕೆಯಿಲ್ಲ. ಇದೇ ರೀತಿಯಲ್ಲಿ ಎಲೆ ಅಡಿಕೆ, ಮೇಜು ಕುಚ್ರಿ, ಹಾಲು ಮೊಸರು, ಮೊದಲಾದ ಹತ್ತಿರದ ಸಂಬಂಧಗಳನ್ನು ಸೂಚಿಸುವ ಪದಗಳ ಜೋಡಣೆಯಲ್ಲೂ ಅವುಗಳ ಬಳಕೆಯಿಲ್ಲ.
ಕೆಲವು ಸಂದಭ್ರಗಳಲ್ಲಿ ಒಂದು ವಾಕ್ಯವನ್ನು ಎರಡು ವಾಕ್ಯಗಳ ಜೋಡಣೆ ಯಿಂದ ತಯಾರಿಸಲಾಗಿದೆಯೋ ಅಥವಾ ಎರಡು ಪದ ಇಲ್ಲವೇ ಪದಕಂತೆಗಳ ಜೋಡಣೆಯಿಂದ ತಯಾರಿಸಲಾಗಿದೆಯೋ ಎಂಬ ವಿಷಯದಲ್ಲಿ ಸಂಶಯ ವುಂಟಾಗಲು ಸಾಧ್ಯವಿದೆ. ಇದಲ್ಲದೆ, ಒಂದೇ ವಾಕ್ಯಕ್ಕೆ ಈ ಎರಡು ರೀತಿಯ ಜೋಡಣೆಗಳೂ ಕಾರಣವಾಗಿರಲು ಸಾಧ್ಯವಿದ್ದು ಅದರಿಂದಾಗಿ ಆ ವಾಕ್ಯಕ್ಕೆ ಎರಡು ರೀತಿಯ ಅರ್ಥಗಳು ಬರಲೂ ಸಾಧ್ಯವಿದೆ. (4ಕ) ಬರಹಗಾರರು ಮತ್ತು ಕಾಣಲು ಹೋಗಿದ್ದಾರೆ. ಪ್ರಕಾಶಕರು ಮುಖ್ಯಮಂತ್ರಿಯನ್ನು (4ಖ) ಬರಹಗಾರರು ಮುಖ್ಯಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಗ) ಪ್ರಕಾಶಕರು ಮುಖ್ಯ ಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಘ) ಬರಹಗಾರರು ಮತ್ತು ಪ್ರಕಾಶಕರು ಒಟ್ಟಾಗಿ ಮುಖ್ಯಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಕ) ವಾಕ್ಯವನ್ನು (4ಖ) ಮತ್ತು (4ಗ) ವಾಕ್ಯಗಳ ಜೋಡಣೆಯಿಂದ ತಯಾರಿ ಸಿರಲು ಸಾಧ್ಯವಿದೆಯೇನೋ ನಿಜ. ಆದರೆ, ಅದನ್ನೇ (4ಘ) ವಾಕ್ಯದ ಅರ್ಥ ದಲ್ಲೂ ಬಳಸಿರಲು ಸಾಧ್ಯವಿದೆ, ಮತ್ತು ಈ (4ಘ) ವಾಕ್ಯದ ಅರ್ಥ ಬರ ಬೇಕಿದ್ದಲ್ಲಿ, ಅದನ್ನು ((4ಕ) ವಾಕ್ಯವನ್ನು) ಎರಡು ಪದಗಳ ಜೋಡಣೆಯಿಂದ ಮಾತ್ರವೇ ತಯಾರಿಸಿರಲು ಸಾಧ್ಯ.
8.1.2 ಜೋಡಿಸಿದ ವಾಕ್ಯ ಮತ್ತು ಒಳವಾಕ್ಯ
ಒಂದು ವಾಕ್ಯದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲಾಗಿದೆಯೇ ಅಥವಾ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವಾಗಿ ಬಳಸಲಾಗಿದೆಯೇ ಎಂಬ ವಿಷಯದಲ್ಲೂ ಸಂಶಯವುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸಬಹುದು. (5ಕ) ಅವನು ರಾಜುವನ್ನು ಊಟಕ್ಕೆ ಕರೆಯಲು ಬಂದಿದ್ದಾನೆ. (5ಖ) ಅವನಿಗೆ ರಾಜುವನ್ನು ಊಟಕ್ಕೆ ಕರೆಯಲು ಮರೆತಿದೆ. (5ಕ)ದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲಾಗಿದ್ದು, ಅವು ಸೂಚಿಸುವ ಘಟನೆ ಗಳಲ್ಲಿ ಮೊದಲನೆಯದು ಎರಡನೆಯದರ ಅನಂತರ ಜರಗುವುದೆಂಬುದಾಗಿ ಅಲು ಪ್ರತ್ಯಯದ ಮೂಲಕ ಸೂಚಿಸಲಾಗಿದೆ (8.3.2 ನೋಡಿ). ಆದರೆ (5ಖ)ದಲ್ಲಿ ಮೊದಲನೆಯ ವಾಕ್ಯ ಎರಡನೆಯ ವಾಕ್ಯ ಸೂಚಿಸುವ ಘಟನೆಯ ಒಂದು ಘಟಕವಾಗಿ ಬಂದಿದ್ದು, ಅದು ಆ ವಾಕ್ಯದ ಒಳವಾಕ್ಯವಾಗಿದೆ (7.3.3 ನೋಡಿ). ಈ ರೀತಿ ಅಲು ಪ್ರತ್ಯಯದ ಬಳಕೆಯಲ್ಲಿ ಮಾತ್ರವಲ್ಲದೆ, ಕ್ರಿಯಾಪದಗಳ ಇತರ ಜೋಡಣೆಯ ರೂಪಗಳ ಬಳಕೆಯಲ್ಲೂ ಇಂತಹ ಸಂಶಯಗಳು ಬರಲು ಸಾಧ್ಯವಿದೆ. ಒಟ್ಟಿಗೆ ಬಂದಿರುವ ಎರಡು ವಾಕ್ಯಗಳ ನಡುವೆ ಎಂತಹ ಸಂಬಂಧ ವಿದೆ ಎಂಬುದನ್ನು ಪರಿಶೀಲಿಸುವುದರ ಮೂಲಕ ಇಂತಹ ಸಂಶಯಗಳನ್ನು ಹೋಗಲಾಡಿಸಬಹುದು.
8.2 ಜೋಡಣೆಯ ನಿಯಮಗಳು
ಮೇಲೆ ವಿವರಿಸಿರುವ ಮೂರು ವಿಧಾನಗಳಲ್ಲಿ ಯಾವುದನ್ನು ಎಲ್ಲಿ ಬಳಸಬಹುದು ಎಂಬ ವಿಷಯದಲ್ಲಿ, ಮತ್ತು ಆ ವಿಧಾನಗಳನ್ನು ಬಳಸಿದಾಗ ವಾಕ್ಯಗಳಲ್ಲಿ ಎಂತಹ ಬದಲಾವಣೆಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬ ವಿಷಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ನಿಯಮಗಳು ಯಾವುವು ಮತ್ತು ಮೇಲಿನ ಮೂರು ವಿಧಾನಗಳ ಬಳಕೆಯಲ್ಲಿ ಅವು ಹೇಗೆ ಕಾಣಿಸಿ ಕೊಳ್ಳುತ್ತವೆ ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ವಿವರಿಸಲಾಗಿದೆ.
8.2.1 ಒಂದೇ ಕ್ರಿಯಾಪದದ ಬಳಕೆ
ಪ್ರತ್ಯಯಗಳ ಮೂಲಕ ಕ್ರಿಯಾವಾಕ್ಯಗಳನ್ನು ಜೋಡಿಸಬೇಕಿದ್ದಲ್ಲಿ, ಅವುಗಳಲ್ಲಿ ಬರುವ ಕ್ರಿಯಾಪದ ಒಂದೇ ಆಗಿರಬೇಕೆಂಬ ನಿಯಮವಿದೆ. ಆದರೆ ಪದ ಇಲ್ಲವೇ ಕ್ರಿಯಾರೂಪಗಳ ಮೂಲಕ ಜೋಡಿಸಬೇಕಿದ್ದಲ್ಲಿ, ಈ ಕ್ರಿಯಾಪದಗಳು ಬೇರೆ ಬೇರಾಗಿದ್ದರೂ ತೊಂದರೆಯಿಲ್ಲ.
ಪ್ರತ್ಯಯಗಳ ಬಳಕೆಯಲ್ಲಿ ಈ ನಿಯಮ ಕಾಣಿಸಿಕೊಳ್ಳಲು ಮುಖ್ಯ ಕಾರಣ ವೇನೆಂದರೆ, ಅವುಗಳ ಮೂಲಕ ವಾಕ್ಯಗಳೆರಡನ್ನು ಜೋಡಿಸುವಾಗ ಅವುಗಳ ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಜೋಡಣೆಯ ಹೊರಗೆ ಇರಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎರಡು ವಾಕ್ಯಗಳಲ್ಲೂ ಒಂದೇ ಕ್ರಿಯಾಪದ ಬಂದಿರುವುದು ಅವಶ್ಯ. ಎರಡನೆಯ ವಿಧಾನಕ್ಕೂ ಮತ್ತು ಉಳಿದ ಎರಡು ವಿಧಾನಗಳಿಗೂ ನಡು ವಿರುವ ಈ ವ್ಯತ್ಯಾಸವನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ. (6ಖ) ರಾಜು ನಾಡಿದು ಮುಂಬಯಿಗೆ ಹೋಗುತ್ತಾನೆ. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ನಾಡಿದು ಮುಂಬಯಿಗೆ ಹೋಗುತ್ತಾನೆ. (7ಖ) ರಾಜು ನಾಳೆ ಡೆಲ್ಲಿಗೂ ಮತ್ತು ನಾಡಿದು ಮುಂಬಯಿಗೂ ಹೋಗುತ್ತಾನೆ. (7ಕ)ದಲ್ಲಿ ಮತ್ತು ಪದದ ಮೂಲಕ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಮತ್ತು ಪದವನ್ನು ಮೊದಲನೆಯ ವಾಕ್ಯಕ್ಕೆ ಸೇರಿಸಲಾಗಿದೆ. ರಾಜು ಪದ ಈ ಎರಡು ವಾಕ್ಯಗಳಲ್ಲೂ ಬಂದಿದ್ದು, ಅದು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿದೆಯಾದ ಕಾರಣ ಅದನ್ನು ಎರಡನೆಯ ವಾಕ್ಯದಿಂದ ತೆಗೆದುಹಾಕಲಾಗಿದೆ. ಆದರೆ ಹೋಗುತ್ತಾನೆ ಕ್ರಿಯಾಪದವನ್ನು ಎರಡರಲ್ಲೂ ಬೇರೆ ಬೇರಾಗಿ ಉಳಿಸಿಕೊಳ್ಳಲಾಗಿದೆ.
(7ಖ)ದಲ್ಲಿ ಊ ಪ್ರತ್ಯಯದ ಮೂಲಕ ಇವೇ ಎರಡು ವಾಕ್ಯಗಳನ್ನು (ಎಂದರೆ (6ಕ) ಮತ್ತು (6ಖ) ವಾಕ್ಯಗಳನ್ನು) ಜೋಡಿಸಲಾಗಿದೆ ಮತ್ತು ಇದಕ್ಕಾಗಿ ಆ ಪ್ರತ್ಯಯವನ್ನು ಬೇರೆ ಬೇರಾಗಿ ಆ ಎರಡು ವಾಕ್ಯಗಳಿಗೂ ಸೇರಿಸ ಲಾಗಿದೆ. ಇದಲ್ಲದೆ, ಈ ಎರಡು ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾ ಪದಗಳನ್ನು ಒಟ್ಟು ಸೇರಿಸಿ ಒಂದಾಗಿ ಮಾಡಿ ಅದನ್ನು ಜೋಡಣೆಯ ಹೊರಗೆ ನಿಲ್ಲಿಸಲಾಗಿದೆ ಮತ್ತು ಅವೆರಡರಲ್ಲೂ ಒಬ್ಬನೇ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಬರುವ ರಾಜು ಪದವನ್ನು ಎರಡನೆಯ ವಾಕ್ಯದಿಂದ ತೆಗೆದುಹಾಕಲಾಗಿದೆ. (6ಕ) ಮತ್ತು (6ಖ) ವಾಕ್ಯಗಳನ್ನು ಈ ರೀತಿ ಜೋಡಿಸುವಾಗ, ಕ್ರಿಯಾಪದ ಗಳೆರಡನ್ನು ಒಟ್ಟು ಸೇರಿಸಲಾಗಿದೆಯಲ್ಲದೆ ರಾಜು ಪದದ ಹಾಗೆ ಅದನ್ನು ಮೊದಲನೆಯ ವಾಕ್ಯದಿಂದ ತೆಗೆದುಹಾಕಿಲ್ಲ ಎಂಬುದನ್ನು ಕೆಳಗಿನ ವಾಕ್ಯಗಳು ಸ್ಪಷ್ಟಪಡಿಸುತ್ತವೆ. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ಹರಿ ನಾಡಿದು ಮುಂಬಯಿಗೆ ಹೋಗುತ್ತಾನೆ. (8ಖ) ರಾಜು ನಾಳೆ ಡೆಲ್ಲಿಗೂ ಹರಿ ನಾಡಿದು ಮುಂಬಯಿಗೂ ಹೋಗು (8ಖ)ದಲ್ಲಿ ಹೋಗುತ್ತಾನೆ ಎಂಬ ಕ್ರಿಯಾರೂಪದ ಬದಲು ಹೋಗುತ್ತಾರೆ ಎಂಬುದನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು. ಇದು ಎರಡು ವಾಕ್ಯ ಗಳಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಿದುದರಿಂದಾದ ರೂಪ. ಮತ್ತು ಪದದ ಬಳಕೆಯಲ್ಲೂ ಈ ರೀತಿ ಎರಡು ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಹೇಳಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು. ರಾಜು ನಾಳೆ ಡೆಲ್ಲಿಗೆ ಮತ್ತು ಹರಿ ನಾಡಿದು ಮುಂಬಯಿಗೆ ಹೋಗುತ್ತಾರೆ. ಸಾಮಾನ್ಯವಾಗಿ, ಜೋಡಿಸಬೇಕಾಗಿರುವ ಎರಡು ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳನ್ನು ಈ ರೀತಿ ಒಟ್ಟಿಗೆ ಜೋಡಿಸದೆ ಊ ಪ್ರತ್ಯಯವನ್ನು ಬಳಸಲು ಸಾಧ್ಯವಾಗದು. ಆದರೆ ಕೆಳಗಿನ ವಾಕ್ಯ ಈ ನಿಯಮಕ್ಕೆ ಅಪವಾದವಾಗಿ ಕಾಣಿಸುತ್ತದೆ. ರಾಜು ಮದುವೆಗೂ ಹೋಗಿದ್ದಾನೆ, ಅಲ್ಲಿ ಊಟವನ್ನೂ ಮಾಡಿ ದ್ದಾನೆ. (9ಖ) ಇಲ್ಲಿ ಮಳೆಯೂ ಬರುತ್ತಾ ಇದೆ, ಅದರೊಂದಿಗೆ ಬಿಸಿಲೂ ಕಾಯುತ್ತಾ ಇದೆ. ಆದರೆ ಇಂತಹ ಬಳಕೆಗಳಲ್ಲಿ ಎರಡು ವಾಕ್ಯಗಳನ್ನು ಸುಮ್ಮಗೆ ಜೋಡಿಸಿರುವ ಬದಲು ಘಟನೆ ಇಲ್ಲವೇ ಸಂಗತಿಗಳೆರಡು ಅನಿರೀಕ್ಷಿತವಾದ ರೀತಿಯಲ್ಲಿ ಸೇರಿ ಕೊಂಡಿವೆ ಎಂಬುದನ್ನು ಸೂಚಿಸಲಾಗಿದೆ. ಊ ಪ್ರತ್ಯಯದ ಹಾಗೆ ಓ ಪ್ರತ್ಯಯವನ್ನು ಬಳಸುವುದಿದ್ದರೂ ಸಾಮಾನ್ಯ ವಾಗಿ ಜೋಡಿಸಬೇಕಾಗಿರುವ ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದ ಗಳೆರಡೂ ಒಂದೇ ಆಗಿರಬೇಕು ಮತ್ತು ಅವನ್ನು ಒಟ್ಟಿಗೆ ಜೋಡಿಸಿದ ಮೇಲೆ ಜೋಡಣೆಯ ಹೊರಗಿರಿಸಿ ಹೇಳಬೇಕು ಎಂಬ ನಿಯಮವಿದೆ. (8ಘ) ರಾಜು ನಾಳೆ ಡೆಲ್ಲಿಗೋ ನಾಡಿದ್ದು ಮುಂಬಯಿಗೋ ಹೋಗು ತ್ತಾನೆ. ಮೂರನೆಯ ವಿಧಾನದ ಮೂಲಕ ಮೇಲೆ ಕೊಟ್ಟಿರುವ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸುವುದು ಹೇಗೆಂಬುದನ್ನು ಕೆಳಗಿನ ಉದಾಹರಣೆ ಯಲ್ಲಿ ನೋಡಬಹುದು. (8ಙ) ರಾಜು ನಾಳೆ ಡೆಲ್ಲಿಗೆ ಹೋಗಿ ನಾಡಿದು ಮುಂಬಯಿಗೆ ಹೋಗು ತ್ತಾನೆ. (8ಙ) ವಾಕ್ಯದಲ್ಲಿ ಮೂರನೆಯ ವಿಧಾನವನ್ನು ಬಳಸುವುದರ ಮೂಲಕ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ (6ಕ) ವಾಕ್ಯದ ಕೊನೆಯಲ್ಲಿ ಬಂದಿರುವ ಹೋಗುತ್ತಾನೆ ಕ್ರಿಯಾಪದವನ್ನು ಹೋಗಿ ಎಂಬುದಾಗಿ ಅದರ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಇದಲ್ಲದೆ, ಒಬ್ಬನೇ ವ್ಯಕ್ತಿಯನ್ನು ಸೂಚಿಸುವ ರಾಜು ಪದವನ್ನು ಎರಡನೆಯ ವಾಕ್ಯದಿಂದ ತೆಗೆದು ಹಾಕಲಾಗಿದೆ. ಪದಗಳ ಮತ್ತು ಕ್ರಿಯಾರೂಪಗಳ ಬಳಕೆಯಲ್ಲಿ (ಎಂದರೆ ಮೊದಲನೇ ಮತ್ತು ಮೂರನೇ ವಿಧಾನಗಳ ಬಳಕೆಯಲ್ಲಿ) ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಬೇಕಾಗುವುದಿಲ್ಲವಾದ ಕಾರಣ, ಅವು ಆ ವಾಕ್ಯಗಳಲ್ಲಿ ಒಂದೇ ಆಗಿರಬೇಕಾಗಿಲ್ಲ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (10ಕ) ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ಅಲ್ಲೊಂದು ಕೆಲಸಕ್ಕೆ ಸೇರುತ್ತಾನೆ. ನಾಳೆ ಡೆಲ್ಲಿಗೆ ಹೋಗಿ ಅಲ್ಲೊಂದು ಕೆಲಸಕ್ಕೆ ಸೇರುತ್ತಾನೆ,
8.2.2 ಜೋಡಿಸುವ ಪದ ಇಲ್ಲವೇ ಪ್ರತ್ಯಯಗಳ ಜಾಗ
ಎರಡನೆಯ ವಿಧಾನಕ್ಕೂ ಮತ್ತು ಉಳಿದ ವಿಧಾನಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವನ್ನೂ ನಾವು ಮೇಲೆಯೇ ನೋಡಿರುವೆವು. ಎರಡನೆಯ ವಿಧಾನದಲ್ಲಿ ಬಳಕೆಯಾಗುವ ಊ, ಓ ಮೊದಲಾದ ಪ್ರತ್ಯಯಗಳನ್ನು ಎರಡು ವಾಕ್ಯಗಳಿಗೂ ಸೇರಿಸಬೇಕಾಗುತ್ತದೆ, ಆದರೆ ಮೊದಲನೆಯ ವಿಧಾನದಲ್ಲಿ ಬಳಕೆಯಾಗುವ ಮತ್ತು, ಇಲ್ಲವೇ ಮೊದಲಾದ ಪದಗಳನ್ನು ಒಂದು ಬಾರಿ ಮಾತ್ರ, ಎರಡು ವಾಕ್ಯಗಳ ನಡುವಿನಲ್ಲಿ ಇರಿಸಿದರೆ ಸಾಕು.
ಮೂರನೆಯ ವಿಧಾನದಲ್ಲಿ ಬಳಕೆಯಾಗುವ ‘ಜೋಡಿಸುವ’ ಕ್ರಿಯಾರೂಪ ವನ್ನೂ ಇದೇ ರೀತಿಯಲ್ಲಿ ಒಂದು ಬಾರಿ ಮಾತ್ರ (ಮೊದಲನೆಯ ವಾಕ್ಯದ ಕೊನೆಯಲ್ಲಿ ಮಾತ್ರ) ಬಳಸಿದರೆ ಸಾಕು. (11ಕ) ಅವಳು ಶಾಲೆಗೆ ಹೋಗಿದ್ದಳು ಮತ್ತು ನಾನು ಪೇಟೆಗೆ ಹೋಗಿದ್ದೆ. (11ಖ) ಅವಳು ಶಾಲೆಗೂ ನಾನು ಪೇಟೆಗೂ ಹೋಗಿದ್ದೆವು. (11ಗ) ಅವಳು ಶಾಲೆಗೆ ಹೋಗಿ (ಅಲ್ಲಿಂದ) ಪೇಟೆಗೆ ಹೋಗಿದ್ದಳು. (11ಕ)ದಲ್ಲಿ ಮತ್ತು ಪದನ್ನು ಒಂದು ಬಾರಿ ಮಾತ್ರ ಬಳಸಲಾಗಿದೆ, ಮತ್ತು ಇದೇ ರೀತಿಯಲ್ಲಿ (11ಗ)ದಲ್ಲಿ ಹೋಗಿ ಎಂಬ ಜೋಡಿಸುವ ಕ್ರಿಯಾರೂಪ ವನ್ನು ಮೊದಲನೆಯ ವಾಕ್ಯದಲ್ಲಿ ಮಾತ್ರ ಬಳಸಲಾಗಿದೆ. ಆದರೆ, (11ಖ)ದಲ್ಲಿ ಊ ಪ್ರತ್ಯಯವನ್ನು ಎರಡು ಬಾರಿ, ಜೋಡಿಸಲಾಗಿರುವ ಎರಡು ವಾಕ್ಯಗ ಳೊಂದಿಗೂ ಸೇರಿಸಿ ಬಳಸಲಾಗಿದೆ. ಎರಡಕ್ಕಿಂತ ಜಾಸ್ತಿ ವಾಕ್ಯಗಳನ್ನು ಜೋಡಿಸುವುದಿದ್ದಲ್ಲಿ, ಮತ್ತು ಪದವನ್ನು ಕೊನೆಯ ವಾಕ್ಯದ ಮೊದಲಿಗೊಮ್ಮೆ ಬಳಸಿದರೆ ಸಾಕು, ಆದರೆ ಜೋಡಿಸುವ ಕ್ರಿಯಾರೂಪವನ್ನು ಕೊನೆಯ ವಾಕ್ಯವೊಂದನ್ನು ಬಿಟ್ಟು ಉಳಿದ ಎಲ್ಲಾ ವಾಕ್ಯಗ ಳೊಂದಿಗೂ ಬಳಸಬೇಕಾಗುತ್ತದೆ. ಊ ಪ್ರತ್ಯಯವನ್ನು ಕೊನೆಯ ವಾಕ್ಯವೂ ಸೇರಿ ದಂತೆ ಪ್ರತಿಯೊಂದು ವಾಕ್ಯದೊಂದಿಗೂ ಬಳಸಬೇಕಾಗುತ್ತದೆ. (12ಕ) ರಾಜು ಮನೆಗೆ ಹೋದ, ಸ್ನಾನ ಮಾಡಿದ, ಮತ್ತು ತರಕಾರಿ ಹಚ್ಚಲು ಸುರುಮಾಡಿದ. (12ಖ) ರಾಜು ಮನೆಗೆ ಹೋಗಿ, ಸ್ನಾನ ಮಾಡಿ, ತರಕಾರಿ ಹಚ್ಚಲು ಸುರು ಮಾಡಿದ. (12ಗ) ರಾಜು ಪುಣೆಗೂ, ಶಶಿ ಮುಂಬಯಿಗೂ, ಸತೀಶ ಬೆಂಗಳೂರಿಗೂ ಹೋಗಿದ್ದಾರೆ. ಜೋಡಿಸುವ (12ಕ)ದಲ್ಲಿ ಮತ್ತು ಪದವನ್ನು ಮೊದಲನೆಯ ವಾಕ್ಯದೊಂದಿಗೆ ಸೇರಿಸಿಲ್ಲ, ಮೊದಲನೇ ವಾಕ್ಯದಲ್ಲೂ ಬಳಸಬೇಕಾಗಿದೆ; ಕೊನೆಯ ವಾಕ್ಯದಲ್ಲಿ ಮಾತ್ರ ಅದನ್ನು ಬಳಸಿಲ್ಲ. (12ಗ)ದಲ್ಲಿ ಊ ಪ್ರತ್ಯಯವನ್ನು ಮೂರು ವಾಕ್ಯಗಳಲ್ಲೂ ಬಳಸಲಾಗಿದೆ. ವಾಕ್ಯಗಳ ಜೋಡಣೆಯಲ್ಲಿ ಮೊದಲನೆಯ ಎರಡು ವಿಧಾನಗಳನ್ನು ಒಟ್ಟಾಗಿ ಬಳಸಲೂ ಸಾಧ್ಯವಿದೆಯೆಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. ಕ್ರಿಯಾರೂಪವನ್ನು (13ಕ) ಅವಳು ಶಾಲೆಗೂ ಮತ್ತು ನಾನು ಪೇಟೆಗೂ ಹೋಗಿದ್ದೆವು. (13ಖ) ರಾಜು ಶಾಲೆಗೋ ಅಥವಾ ಪೇಟೆಗೋ ಹೋಗಿರಬೇಕು. ಎರಡಕ್ಕಿಂತ ಹೆಚ್ಚು ವಾಕ್ಯಗಳನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಲಾಗಿದೆಯಾದರೆ, ಅಂತಹ ಸಂದಭ್ರಗಳಲ್ಲಿ ಮೂರನೆಯ ವಿಧಾನ ದೊಂದಿಗೆ ಮೊದಲನೆಯ ವಿಧಾನವನ್ನು ಬಳಸಲು ಸಾಧ್ಯವಿದೆ. (13ಗ) ರಾಜು ಬೆಲ್ಲ ತಿಂದು ಮತ್ತು ನೀರು ಕುಡಿದು ಹೊಟ್ಟೆ ತುಂಬಿಸಿ (13ಘ) ಈ ಕೆಲಸವನ್ನು ನೀವು ಇಲ್ಲೇ ಕುಳಿತು ಅಥವಾ ಮನೆಗೆ ಹೋಗಿ ಮಾಡಬಹುದು.
8.2.3 ಜೋಡಿಸುವ ಕ್ರಿಯಾರೂಪದ ಬಳಕೆ
ಜೋಡಿಸುವ ಕ್ರಿಯಾರೂಪವನ್ನು ಬಳಸುವ ಮೂರನೆಯ ವಿಧಾನ ಇತರ ಎರಡು ವಿಧಾನಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಪ್ರತಿಯೊಂದು ಕ್ರಿಯಾ ಪದಕ್ಕೂ ನಾಲ್ಕು ಜೋಡಿಸುವ ಕ್ರಿಯಾರೂಪಗಳಿದ್ದು ಇವನ್ನು ಬೇರೆ ಬೇರೆ ಸಂದಭ್ರಗಳಲ್ಲಿ ಬಳಸಬೇಕಾಗುತ್ತದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು. (14ಕ) ಅವನು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ. (14ಖ) ಅವನು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ. (14ಗ) ಅವನು ಊಟ ಮಾಡಲು ನಮ್ಮಲ್ಲಿಗೆ ಬಂದ. (14ಘ) ಅವನು ಊಟ ಮಾಡದೆ ನಮ್ಮಲ್ಲಿಗೆ ಬಂದ. ಮಾಡು ಕ್ರಿಯಾಪದಕ್ಕೆ ಮಾಡುತ್ತಾ, ಮಾಡಿ, ಮಾಡಲು ಮತ್ತು ಮಾಡದೆ ಎಂಬುದಾಗಿ ನಾಲ್ಕು ಕ್ರಿಯಾರೂಪಗಳಿದ್ದು, ಅವುಗಳ ಬಳಕೆ ಹೇಗೆ ಎಂಬುದನ್ನು (14ಕ-ಘ) ವಾಕ್ಯಗಳಲ್ಲಿ ತೋರಿಸಲಾಗಿದೆ.
ಎರಡು ಘಟನೆಗಳು ಒಂದೇ ಸಮಯದಲ್ಲಿ ಜರಗುತ್ತಿವೆ ಎಂಬುದನ್ನು ಸೂಚಿಸುವುದಕ್ಕಾಗಿ (14ಕ)ದಲ್ಲಿ ಮಾಡುತ್ತಾ ಎಂಬ ಜೋಡಿಸುವ ರೂಪವನ್ನು ಬಳಸಲಾಗಿದೆ. ಇದಕ್ಕೆ ಬದಲು, (14ಖ)ದಲ್ಲಿ ಮೊದಲನೇ ಘಟನೆ ಎರಡನೇ ಘಟನೆಗಿಂತ ಮೊದಲೇ ನಡೆಯುವುದೆಂಬುದನ್ನು ಸೂಚಿಸಲು ಮಾಡಿ ಎಂಬ ರೂಪವನ್ನು ಬಳಸಲಾಗಿದೆ.
ಮೊದಲನೇ ಘಟನೆ ಎರಡನೇ ಘಟನೆಯ ಅನಂತರ ನಡೆಯುವುದೆಂಬು ದನ್ನು ಸೂಚಿಸಲು (14ಗ)ದಲ್ಲಿ ಮಾಡಲು ಎಂಬುದನ್ನು ಬಳಸಲಾಗಿದೆ ಮತ್ತು ಎರಡನೇ ಘಟನೆ ನಡೆಯುವ ಸಮಯದಲ್ಲಿ ಮೊದಲನೇ ಘಟನೆ ನಡೆದಿರ ಲಿಲ್ಲವೆಂಬುದನ್ನು ಸೂಚಿಸಲು (14ಘ)ದಲ್ಲಿ ಮಾಡದೆ ಎಂಬುದನ್ನು ಬಳಸ ಈ ರೀತಿ, ಜೋಡಿಸುವ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳು ಸಮಯದ ಮಟ್ಟಿಗೆ ಆ ಕ್ರಿಯಾಪದಗಳು ತಿಳಿಸುವ ಘಟನೆಗಳ ನಡುವಿರುವ ಸಂಬಂಧವೇನು ಎಂಬುದನ್ನು ಸೂಚಿಸುತ್ತವೆ (5.4.2 ನೋಡಿ). ಇದು ಮತ್ತು ಪದದ ಬಳಕೆಗಿಂತ ಭಿನ್ನವಾಗಿದೆ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟ ಪಡಿಸುತ್ತವೆ. (15ಕ) ರಾಜು ಮನೆಗೆ ಬಂದ ಮತ್ತು ಸ್ನಾನ ಮಾಡಿದ. (15ಖ) ರಾಜು ಮನೆಗೆ ಬಂದು ಸ್ನಾನ ಮಾಡಿದ. (16ಕ) ರಾಜು ಮನೆಗೆ ಬರುತ್ತಾನೆ ಮತ್ತು ಸ್ನಾನ ಮಾಡುತ್ತಾನೆ. (16ಖ) ರಾಜು ಮನೆಗೆ ಬಂದು ಸ್ನಾನ ಮಾಡುತ್ತಾನೆ. (15ಕ) ವಾಕ್ಯದಲ್ಲಿ ಬಂದ ಮತ್ತು ಮಾಡಿದ ಎಂಬ ಎರಡು ಕ್ರಿಯಾಪದಗಳೂ ಆ ವಾಕ್ಯವನ್ನಾಡಿರುವ ಸಮಯಕ್ಕೆ ಸಂಬಂಧಿಸಿದಂತೆ ಘಟನೆಯ ಸಮಯವನ್ನು ಸೂಚಿಸುತ್ತವೆ. ಆದರೆ, (15ಖ) ವಾಕ್ಯದಲ್ಲಿ ಮಾಡಿದ ಎಂಬ ಎರಡನೆಯ ಕ್ರಿಯಾರೂಪ ಮಾತ್ರ ಆ ವಾಕ್ಯವನ್ನಾಡಿರುವ ಸಮಯಕ್ಕೆ ಸಂಬಂಧಿಸಿದಂತೆ ಘಟನೆಯ ಸಮಯವನ್ನು ಸೂಚಿಸುತ್ತದೆ; ಬಂದು ಎಂಬ ಇನ್ನೊಂದು ಕ್ರಿಯಾ ರೂಪ ಎರಡನೇ ಘಟನೆಯ ಸಮಯಕ್ಕೆ ಸಂಬಂಧಿಸಿದಂತೆ ಮೊದಲನೇ ಘಟನೆಯ ಸಮಯವನ್ನು ಸೂಚಿಸುತ್ತದೆ. ಈ ವ್ಯತ್ಯಾಸ (16ಕ-ಖ) ವಾಕ್ಯಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಘಟನೆಗಳೆರಡೂ ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಅನಂತರ ನಡೆಯು ವಂತಹವುಗಳು. ಇದನ್ನು ಸೂಚಿಸುವುದಕ್ಕಾಗಿ (16ಕ)ದಲ್ಲಿ ಬರುತ್ತಾನೆ ಮತ್ತು ಮಾಡುತ್ತಾನೆ ಎಂಬುದಾಗಿ ಎರಡು ಕ್ರಿಯಾರೂಪಗಳೂ ಮುಂದಿನ ಸಮಯ ವನ್ನು ಸೂಚಿಸುತ್ತಿವೆ. ಸಾಮಾನ್ಯವಾಗಿ ಈ ರೀತಿ ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಿರುವ ವಾಕ್ಯಗಳಲ್ಲೆಲ್ಲ ಮೊದಲು ತಿಳಿಸಿರುವ ಘಟನೆ ಮೊದಲು ನಡೆಯುವಂತಹದು ಎಂಬ ಅರ್ಥ ಧ್ವನಿತವಾಗು ಈ ರೀತಿ (16ಕ)ದಲ್ಲಿ ಧ್ವನಿತವಾಗುವ ಅರ್ಥವನ್ನು (16ಖ)ದಲ್ಲಿ ಬಂದು ಎಂಬ ಜೋಡಿಸುವ ಕ್ರಿಯಾರೂಪದ ಮೂಲಕ ಸ್ಪಷ್ಟವಾಗಿ ಸೂಚಿಸಲಾಗಿದೆ. (16ಕ) ವಾಕ್ಯದ ಹಾಗೆ (16ಖ) ವಾಕ್ಯದಲ್ಲೂ ಮಾತಿನ ಸಮಯದ ಅನಂತರ ನಡೆಯುವ ಎರಡು ಘಟನೆಗಳನ್ನು ತಿಳಿಸಲಾಗಿದೆ. ಆದರೆ ಈ ವಿಷಯವನ್ನು ವಾಕ್ಯದ ಕೊನೆಯಲ್ಲಿ ಬರುವ ಮಾಡುತ್ತಾನೆ ಕ್ರಿಯಾರೂಪ ಮಾತ್ರ ಸೂಚಿಸ ಬಲ್ಲುದು. ಬಂದು ಕ್ರಿಯಾರೂಪಕ್ಕೆ ಘಟನೆಯ ಸಮಯಕ್ಕೂ ಮತ್ತು ಮಾತಿನ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವ ಅರ್ಥವಿಲ್ಲ.
ಘಟನೆಗಳನ್ನು ಸೂಚಿಸುವುದಕ್ಕಾಗಿ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದಗಳಿಗೆಲ್ಲ ಸಮಯವನ್ನು ಸೂಚಿಸುವುದಕ್ಕಾಗಿ ಎರಡು ರೂಪಗಳು ಮಾತ್ರ ಇವೆ ಎಂಬುದನ್ನು ನಾವು ಹಿಂದೆ ಐದನೇ ಅಧ್ಯಾಯದಲ್ಲಿ (5.2ರಲ್ಲಿ) ನೋಡಿರುವೆವು. ಇವು ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲು ಮತ್ತು ಅನಂತರ ನಡೆಯುವ ಘಟನೆಗಳನ್ನು ಸೂಚಿಸುತ್ತವೆ.
ಉದಾಹರಣೆಗಾಗಿ ಹೋಗು ಕ್ರಿಯಾಪದಕ್ಕೆ ಹೋಗುತ್ತಾನೆ ಮತ್ತು ಹೋದ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸುವ ಕ್ರಿಯಾರೂಪಗಳು ಮಾತ್ರ ಇವೆ (ಕೆಳಗೆ ಕೊಟ್ಟಿರುವ (17ಕ-ಖ) ವಾಕ್ಯಗಳನ್ನು ನೋಡಿ). ಒಂದು ಘಟನೆ ಅದನ್ನು ತಿಳಿಸುವ ವಾಕ್ಯವನ್ನಾಡಿರುವ ಸಮಯದಲ್ಲೇನೇ ನಡೆದಿದೆಯೆಂಬುದಾಗಿ ಘಟನೆಯ ‘ಈಗಿನ ಸಮಯ’ವನ್ನು ಸೂಚಿಸುವ ಅವಶ್ಯಕತೆ ಕೆಲವು ಸಂದಭ್ರಗಳಲ್ಲಿ ಬರುವುದಾದರೂ, ಅದಕ್ಕಾಗಿ ಕನ್ನಡದಲ್ಲಿ ಪ್ರತ್ಯೇಕವಾದ ಕ್ರಿಯಾರೂಪವಿಲ್ಲ. ಇಂತಹ ಘಟನೆಗಳು ಹೆಚ್ಚು ಹೊತ್ತು (ಎಂದರೆ ಅಂತಹ ವರ್ಣನೆಯನ್ನು ತಯಾರಿಸಿಕೊಳ್ಳಲು ಬೇಕಾಗುವಷ್ಟು ಹೊತ್ತಾದರೂ) ನಡೆದಿರ ಬೇಕಾಗುತ್ತದೆ. ಹಾಗಾಗಿ, ಅವನ್ನು ವರ್ಣಿಸುವುದಕ್ಕಾಗಿ ಕ್ರಿಯಾಪದಗಳ ಜೋಡಿಸುವ ರೂಪದೊಂದಿಗೆ ಇರು ಕ್ರಿಯಾಪದದ ಈಗಿನ ಸಮಯದ ರೂಪವನ್ನು ಬಳಸಬೇಕಾಗುತ್ತದೆ ((17ಗ) ನೋಡಿ). (17ಕ) ರಾಜು ಮನೆಗೆ ಹೋಗುತ್ತಾನೆ. (17ಖ) ರಾಜು ಮನೆಗೆ ಹೋದ. (17ಗ) ರಾಜು ಮನೆಗೆ ಹೋಗುತ್ತಾ ಇದ್ದಾನೆ. ಆದರೆ, ಈ ಕ್ರಿಯಾಪದಗಳ ಜೋಡಿಸುವ ರೂಪಗಳು ಎರಡರ ಬದಲು ಮೂರು ಸಮಯಗಳನ್ನು ಸೂಚಿಸುವ ಅವಶ್ಯಕತೆಯಿದೆ. ಯಾಕೆಂದರೆ, ಅವು ಎರಡು ಘಟನೆಗಳ ನಡುವೆ ಕಾಣಿಸಬಹುದಾದ ಮೂರು ರೀತಿಯ ಸಂಬಂಧ ಗಳನ್ನು (ಒಂದು ಘಟನೆ ಇನ್ನೊಂದು ಘಟನೆಯ ಮೊದಲು ನಡೆದಿರಬಹುದು, ಅನಂತರ ನಡೆದಿರಬಹುದು ಇಲ್ಲವೇ ಅವೆರಡೂ ಒಂದೇ ಸಮಯದಲ್ಲಿ ನಡೆದಿರಬಹುದು ಎಂಬುದಾಗಿ) ಸೂಚಿಸುವ ಅವಶ್ಯಕತೆಯಿದೆ.
ಈ ಮೂರು ರೀತಿಯ ಸಂಬಂಧಗಳು ಎಲ್ಲಾ ರೀತಿಯ ಘಟನೆಗಳ ನಡುವೆಯೂ ಕಾಣಿಸಿಕೊಳ್ಳಲು ಸಾಧ್ಯವಿದೆಯಾದ ಕಾರಣ, ಎಲ್ಲಾ ಕ್ರಿಯಾಪದ ಗಳಿಗೂ ಮೊದಲಿನ ಸಮಯ, ಅನಂತರದ ಸಮಯ ಮತ್ತು ಒಂದೇ ಸಮಯ ಎಂಬುದಾಗಿ ಮೂರು ವಿಧವಾದ ಸಮಯಗಳನ್ನು ಸೂಚಿಸಬಲ್ಲ ಜೋಡಿಸುವ ರೂಪಗಳಿವೆ.
ಇದಲ್ಲದೆ, ಎಲ್ಲಾ ಕ್ರಿಯಾಪದಗಳಿಗೂ ನಾಲ್ಕನೆಯ ಅಲ್ಲಗಳೆಯುವ ರೂಪ ವೊಂದಿದ್ದು, ಅದು ಸಮಯದ ಮಟ್ಟಿಗೆ ಘಟನೆಗಳ ನಡುವೆ ಸಂಬಂಧ ಇಲ್ಲದಿರುವುದನ್ನು ಸೂಚಿಸುತ್ತದೆ.
8.2.4 ಘಟನೆಯ ಹತೋಟಿ
ಎರಡು ಘಟನೆಗಳು ಅವನ್ನು ನಡೆಸುವ ವ್ಯಕ್ತಿಗಳ ಹತೋಟಿಯಲ್ಲಿರುವವು ಗಳಾದರೆ, ಅವನ್ನು ತಿಳಿಸುವ ವಾಕ್ಯಗಳನ್ನು ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಲು ಸಾಧ್ಯವಿದೆ. ಆದರೆ, ಜೋಡಿಸುವ ಕ್ರಿಯಾರೂಪದ ಮೂಲಕ ಇಂತಹ ವಾಕ್ಯಗಳನ್ನು ಜೋಡಿಸಬೇಕಿದ್ದಲ್ಲಿ, ಆ ಘಟನೆಗಳೆರಡನ್ನೂ ಒಬ್ಬನೇ ವ್ಯಕ್ತಿ ನಡೆಸುತ್ತಿರುವುದು ಅವಶ್ಯ.
ಬೇಯಿಸಿದ ಬೇಯಿಸಿದಳು. (18ಖ) ರಾಜು ತರಕಾರಿಯನ್ನೂ ಜಾನಕಿ ಅನ್ನವನ್ನೂ ಬೇಯಿಸಿದರು. (18ಗ) ರಾಜು ತರಕಾರಿಯನ್ನು ಬೇಯಿಸಿ ಸಾಂಬಾರ್ ಮಾಡಿದ. ಮತ್ತು ಜಾನಕಿ ಅನ್ನ (18ಕ-ಖ)ಗಳಲ್ಲಿ ನಡೆಸುವವರ ಹತೋಟಿಯಲ್ಲಿರುವ ಎರಡು ಘಟನೆಗಳನ್ನು, ಅವನ್ನು ಬೇರೆ ಬೇರೆ ವ್ಯಕ್ತಿಗಳು ನಡೆಸುತ್ತಿರುವರಾದರೂ, ಮತ್ತು ಪದ ಮತ್ತು ಊ ಪ್ರತ್ಯಯಗಳ ಮೂಲಕ ಜೋಡಿಸಲು ಸಾಧ್ಯವಾಗಿದೆ; ಆದರೆ, (19ಗ)ದಲ್ಲಿ ಅಂತಹ ಎರಡು ವಾಕ್ಯಗಳನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಬೇಕಾದ ಕಾರಣ, ಅದಕ್ಕಾಗಿ ಆ ಎರಡು ಘಟನೆಗಳನ್ನೂ ಒಬ್ಬನೇ ವ್ಯಕ್ತಿ (ರಾಜು) ಮಾಡಿದ್ದಾನೆಂದು ಹೇಳಬೇಕಾಗಿದೆ. ಎರಡು ವಾಕ್ಯಗಳು ತಿಳಿಸುವ ಘಟನೆಗಳಲ್ಲಿ ಒಂದು (ಇಲ್ಲವೇ ಎರಡೂ) ನಡೆಸುವವನ ಹತೋಟಿಯಲ್ಲಿ ಇಲ್ಲವಾದಲ್ಲಿ ಅವನ್ನು ನಡೆಸುವ ವ್ಯಕ್ತಿಗಳು ಬೇರೆ ಬೇರಾಗಿದ್ದರೂ ಜೋಡಿಸುವ ಕ್ರಿಯಾರೂಪಗಳ ಮೂಲಕ ಅವನ್ನು ಜೋಡಿಸಲು ಸಾಧ್ಯವಿದೆ. (19ಕ) ನಾವು ಇಷ್ಟು ಬೇಗ ಬಂದು ಅವರಿಗೆ ತೊಂದರೆಯಾಯಿತು. (19ಖ) ಜೋರಾಗಿ ಬಂದುವು. (19ಗ) ಮಡಕೆ ಒಡೆದು ರಾಮುವಿನ ಮುಖಕ್ಕೆ ಮೊಸರು ಚಿಮ್ಮಿತು. ಗಾಳಿ ಬೀಸಿ ತರಗೆಲೆಗಳೆಲ್ಲ ಮನೆಯೊಳಗೆ (19ಕ)ದಲ್ಲಿ ಮೊದಲನೆಯ ಘಟನೆ ನಡೆಸುವವರ ಹತೋಟಿಯಲ್ಲಿದೆ, ಆದರೆ ಎರಡನೆಯದು ಹತೋಟಿಯಲ್ಲಿಲ್ಲ; (19ಖ-ಗ)ಗಳಲ್ಲಿ ಎರಡು ಘಟನೆಗಳೂ ಹತೋಟಿಯಲ್ಲಿಲ್ಲದವು; ಈ ಕಾರಣಕ್ಕಾಗಿ ಇವನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಿ ಹೇಳಲು ಸಾಧ್ಯವಾಗಿದೆ. ಇದಲ್ಲದೆ, ಜೋಡಿಸುವ ಕ್ರಿಯಾರೂಪಗಳು ಎರಡು ಘಟನೆಗಳ ನಡುವಿರುವ ಸಂಬಂಧವನ್ನು ಅಲ್ಲಗಳೆಯುತ್ತಿವೆಯಾದರೆ, ಅಂತಹ ಕ್ರಿಯಾರೂಪಗಳ ಮೂಲಕ ಎರಡು ವಾಕ್ಯಗಳನ್ನು, ಅವು ನಡೆಸುವವನ ಹತೋಟಿಯಲ್ಲಿರುವಂತಹ ಘಟನೆ ಯನ್ನು ಸೂಚಿಸುವುದಿದ್ದರೂ, ಜೋಡಿಸಿ ಹೇಳಲು ಸಾಧ್ಯವಿದೆ. ಘಟನೆ ಹತೋಟಿ ಯಲ್ಲಿರುವಂತಹದಾದರೂ ಅದನ್ನೊಬ್ಬ ವ್ಯಕ್ತಿ ನಡೆಸುತ್ತಿಲ್ಲ ಎಂಬುದೇ ಇದಕ್ಕೆ ಕಾರಣವಿರಬಹುದು. (20ಕ) ಅವರು ಊಟಮಾಡದೆ ನಾನು ಊಟಮಾಡುವುದಿಲ್ಲ. (20ಖ) ಅವರು ಆ ಬಾಗಿಲನ್ನು ತೆರೆಯದೆ ನಾನು ನಿಮಗೆ ಪುಸ್ತಕ ಕೊಡುವುದು ಹೇಗೆ? ಆದರೆ ಇಲ್ಲೂ ಎರಡನೆಯ ವಾಕ್ಯ ಅದನ್ನು ನಡೆಸುವವನ ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆಯಾದರೆ, ಅದೊಂದು ಅಲ್ಲಗಳೆಯುವ ವಾಕ್ಯವಾಗಿರ ಬೇಕು (20ಕ) ಇಲ್ಲವೇ ಕೇಳ್ವಿಯಾಗಿರಬೇಕು (20ಖ) ಎಂಬ ನಿಬ್ರಂಧವಿರುವ ಹಾಗೆ ಕಾಣಿಸುತ್ತದೆ.
8.3 ಜೋಡಣೆಯಲ್ಲಿ ಮೂರು ಬಗೆ
ಎರಡು ವಾಕ್ಯಗಳನ್ನು ಮೇಲೆ ವಿವರಿಸಿದ ಹಾಗೆ ಜೋಡಿಸಿ ಹೇಳಲು ಮೂರು ರೀತಿಯ ಉದ್ದೇಶಗಳಿರುತ್ತವೆ. ಇವು ಘಟನೆ ಇಲ್ಲವೇ ಸಂಗತಿಗಳ ನಡುವೆ ಕಾಣಿಸಿಕೊಳ್ಳುವ ಮೂರು ರೀತಿಯ ಸಂಬಂಧಗಳನ್ನು ಸೂಚಿಸುತ್ತವೆ.
ಮೊದಲನೆಯದಾಗಿ, ಎರಡು ಘಟನೆ ಇಲ್ಲವೇ ಸಂಗತಿಗಳ ನಡುವೆ ಒಂದರೊಡನೊಂದು ಕೂಡಿಕೊಳ್ಳುವ ಸಂಬಂಧವಿದೆ ಎಂಬುದನ್ನು ಸೂಚಿಸುವು ದಕ್ಕಾಗಿ ಎರಡು ವಾಕ್ಯಗಳನ್ನು ಜೋಡಿಸಿ ಹೇಳಬಹುದು. ಉದಾಹರಣೆಗಾಗಿ, ಮತ್ತು ಪದದ ಮೂಲಕ, ಊ ಪ್ರತ್ಯಯದ ಮೂಲಕ ಇಲ್ಲವೇ ಜೋಡಿಸುವ ಕ್ರಿಯಾರೂಪದ ಮೂಲಕ ಎರಡು ವಾಕ್ಯಗಳನ್ನು ಒಟ್ಟು ಸೇರಿಸಿದಲ್ಲಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಈ ರೀತಿ ಒಂದರೊಡನೊಂದು ಕೂಡಿಕೊಳ್ಳುವ ಸಂಬಂಧವಿದೆಯೆಂದು ಸೂಚಿತವಾಗುತ್ತದೆ. (21ಕ) ರಾಮು ಪುಣೆಗೆ ಮತ್ತು ಹರಿ ಡೆಲ್ಲಿಗೆ ಹೋಗುತ್ತಾರೆ. (21ಖ) ರಾಮು ಪುಣೆಗೂ ಹರಿ ಡೆಲ್ಲಿಗೂ ಹೋಗುತ್ತಾರೆ. (21ಗ) ರಾಮು ಪುಣೆಗೆ ಹೋಗಿ (ಅಲ್ಲಿಂದ) ಡೆಲ್ಲಿಗೆ ಹೋಗುತ್ತಾನೆ. ಮೇಲಿನ ಮೂರು ವಾಕ್ಯಗಳಲ್ಲೂ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ‘ಕೂಡಿಕೆಯ’ ಸಂಬಂಧವಿದೆಯೆಂಬುದನ್ನು ಗಮನಿಸಬಹುದು. ಎರಡನೆಯದಾಗಿ, ಇಲ್ಲವೇ ಪದದ ಮೂಲಕ ಅಥವಾ ಓ ಪ್ರತ್ಯಯದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಎರಡರಲ್ಲೊಂದು ಎಂಬುದಾಗಿ ‘ಬದಲಿ’ ಸಂಬಂಧವಿದೆ ಎಂದು ಸೂಚಿಸಬಹುದು. (22ಕ) ರಾಜು ಪುಣೆಗೆ ಇಲ್ಲವೇ ಹರಿ ಡೆಲ್ಲಿಗೆ ಹೋಗುತ್ತಾರೆ. (22ಖ) ರಾಜು ಪುಣೆಗೋ ಹರಿ ಡೆಲ್ಲಿಗೋ ಹೋಗುತ್ತಾರೆ. (22ಕ)ದಲ್ಲಿ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ಬದಲಿ ಸಂಬಂಧ ವಿದೆಯೆಂಬುದನ್ನು, ಎಂದರೆ ಅವುಗಳಲ್ಲಿ ಒಂದು ನಡೆಯುವುದಾದರೆ ಇನ್ನೊಂದು ನಡೆಯುವುದಿಲ್ಲ ಎಂಬುದನ್ನು, ಅವೆರಡನ್ನು ಇಲ್ಲವೇ ಪದದ ಮೂಲಕ ಜೋಡಿಸಿ ಸೂಚಿಸಲಾಗಿದೆ. ಇದೇ ರೀತಿಯಲ್ಲಿ (22ಖ)ದಲ್ಲಿ ಎರಡು ವಾಕ್ಯ ಗಳನ್ನು ಜೋಡಿಸುವುದಕ್ಕಾಗಿ ಓ ಪ್ರತ್ಯಯವನ್ನು ಬಳಸುವುದರ ಮೂಲಕ ಇದೇ ಅರ್ಥವನ್ನು ಸೂಚಿಸಲು ಸಾಧ್ಯವಾಗಿದೆ. ಮೂರನೆಯದಾಗಿ, ಆದರೆ ಪದದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಿದಲ್ಲಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳಲ್ಲಿ ಎರಡನೆಯದು ಮೊದಲನೆಯದಕ್ಕೆ ಪ್ರತಿಕೂಲವಾಗಿದೆಯೆಂಬ ಅರ್ಥ ಸೂಚಿತವಾಗುತ್ತದೆ. (23ಕ) ರಾಜು ಪುಣೆಗೆ ಹೋಗಿದ್ದ, ಆದರೆ ಹರಿ ಡೆಲ್ಲಿಗೆ ಹೋಗಿದ್ದ. (23ಖ) ಆತ ಹರಿಯನ್ನು ಕಂಡಿದ್ದ, ಆದರೆ ಸತೀಶನನ್ನು ಕಂಡಿರಲಿಲ್ಲ. (23ಗ) ಮಳೆ ಬಂದಿದೆ, ಆದರೆ ಟಾಂಕಿ ತುಂಬಲಿಲ್ಲ. ಜೋಡಿಸಿರುವ ಎರಡು ವಾಕ್ಯಗಳಲ್ಲಿ ಎರಡನೆಯದರ ಮುಂದೆ ಆದರೆ ಪದವನ್ನು ಬಳಸುವ ಬದಲು ಮೊದಲನೆಯ ವಾಕ್ಯದ ಕ್ರಿಯಾಪದಕ್ಕೆ ರೆ ಪ್ರತ್ಯಯವನ್ನು ಸೇರಿಸಿದಲ್ಲಿ ಮೊದಲನೆಯ ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಎರಡನೆಯ ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿಗೆ ಷರತ್ತು ಎಂಬ ಅರ್ಥ ಬರುತ್ತದೆ. (24ಕ) ಅವನು ಬಂದರೆ ನಾನು ಹೋಗುತ್ತೇನೆ. (24ಖ) ಮಳೆ ಬಂದರೆ ಟಾಂಕಿಯಲ್ಲಿ ನೀರು ತುಂಬುತ್ತದೆ. (24ಗ) ಬೇಗನೆ ಹೋಗಿದ್ದರೆ ಅವರಿಗೆ ತೊಂದರೆಯಾಗುತ್ತಿತ್ತು.
8.4 ಜೋಡಿಸಿದ ವಾಕ್ಯಗಳು ಮತ್ತು ಕೂಡುಪದಗಳು
ಕನ್ನಡದಲ್ಲಿ ‘ಕೂಡುಪದ’ವೆಂಬ ಒಂದು ವಿಶಿಷ್ಟವಾದ ರಚನೆ ಬಳಕೆಯಲ್ಲಿದ್ದು, ಚಾರಿತ್ರಿಕವಾಗಿ ಇದು ಎರಡು ವಾಕ್ಯಗಳ ಜೋಡಣೆಯಿಂದ ಬೆಳೆದು ಬಂದಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು. (25ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿಬಿಟ್ಟಿತು. (25ಖ) ಆಕೆ ತನ್ನ ಕೈಬೆರಳನ್ನು ಕತ್ತರಿಸಿಕೊಂಡಳು. (25ಗ) ಸೀತಾಪತಿ ಚೆನ್ನೈಗೆ ಹೋಗಿದ್ದಾನೆ. (25ಘ) ಯಾರೋ ಈಸಿಚೇರಿನ ಬಟ್ಟೆಯನ್ನು ಹರಿದುಹಾಕಿದ್ದಾರೆ. (25ಙ) ಆತ ಹೊಟ್ಟೆನೋವಿನಿಂದ ನೆಲದ ಮೇಲೆ ಹೊರಳಾಡಿದ. (25ಕ) ವಾಕ್ಯದಲ್ಲಿ ಕಚ್ಚು ಮತ್ತು ಬಿಡು ಎಂಬ ಎರಡು ಕ್ರಿಯಾಪದಗಳು ಬಂದಿದ್ದು, ಅವುಗಳಲ್ಲಿ ಮೊದಲನೆಯದು ಅದರ ಜೋಡಿಸುವ ರೂಪದಲ್ಲೂ ಮತ್ತು ಎರಡನೆಯದು ಅದರ ತಿಳಿಸುವ ರೂಪದಲ್ಲೂ ಬಂದಿವೆ. ಆದರೆ ಈ ವಾಕ್ಯದಲ್ಲಿ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಸ್ವಲ್ಪ ಕಷ್ಟ. ಯಾಕೆಂದರೆ, ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಜೋಡಿಸಿದಲ್ಲಿ (25ಕ) ವಾಕ್ಯದ ಅರ್ಥ ಬರುವುದಿಲ್ಲ. (26ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿತು. (26ಖ) ಕಪ್ಪು ನಾಯಿ ಆ ಹುಡುಗನನ್ನು ಬಿಟ್ಟಿತು. ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಇತರ (25ಖ-ಙ) ವಾಕ್ಯಗಳಲ್ಲೂ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಕಷ್ಟ. ಯಾಕೆಂದರೆ, ಇಂತಹ ವಾಕ್ಯಗಳಲ್ಲಿ ಬರುವ ಎರಡನೆಯ ಕ್ರಿಯಾಪದಕ್ಕೆ ತನ್ನದೇ ಆದ ಒಂದು ಘಟನೆಯನ್ನು ಸೂಚಿಸುವ ಅರ್ಥವಿಲ್ಲ.
ಇದಕ್ಕೆ ಬದಲು, ಈ ಕ್ರಿಯಾಪದಗಳು ವಾಕ್ಯದಲ್ಲಿ ಅವಕ್ಕಿಂತ ಮೊದಲು ಬಂದಿರುವ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಏನಾದರೂ ತಿಳಿಸುವ ಕೆಲಸವನ್ನು ನಡೆಸುತ್ತವೆ. ಇಂತಹ ರಚನೆಗಳ ಕುರಿತು ಹೆಚ್ಚಿನ ವಿವರಗಳನ್ನು (5.6)ರಲ್ಲಿ ನೋಡಬಹುದು.
8.4 ಸಾರಾಂಶ
ಎರಡು (ಅಥವಾ ಜಾಸ್ತಿ) ವಾಕ್ಯಗಳನ್ನು ಒಟ್ಟು ಸೇರಿಸುವುದಕ್ಕಾಗಿ ಮತ್ತು, ಇಲ್ಲವೇ, ಆದರೆ ಮೊದಲಾದ ಪದಗಳನ್ನಾಗಲಿ, ಇಲ್ಲವೇ ಊ, ಓ, ರೆ ಮೊದಲಾದ ಪ್ರತ್ಯಯಗಳನ್ನಾಗಲಿ ಬಳಸಲು ಸಾಧ್ಯವಿದೆ. ಇದಲ್ಲದೆ, ವಾಕ್ಯ ವೊಂದರ ಕೊನೆಯಲ್ಲಿ ಬರುವ ಕ್ರಿಯಾಪದದ ಜೋಡಣೆಯ ರೂಪವನ್ನು ಬಳಸಿಯೂ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಲು ಸಾಧ್ಯವಿದೆ. ಈ ರೀತಿ ವಾಕ್ಯಗಳನ್ನು ಜೋಡಿಸಿ ಹೇಳಲು ಮೂರು ಮುಖ್ಯವಾದ ಉದ್ದೇಶ ಗಳಿರುತ್ತವೆ. ವಾಕ್ಯಗಳು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಕೂಡಿಕೆಯ ಸಂಬಂಧವಿದೆಯೆಂದಾಗಲೀ, ಬದಲಿ ಸಂಬಂಧವಿದೆಯೆಂದಾಗಲೀ ಇಲ್ಲವೇ ಪ್ರತಿಕೂಲ (ಅಥವಾ ಷರತ್ತಿನ) ಸಂಬಂಧವಿದೆಯೆಂದಾಗಲೀ ಸೂಚಿಸು ವುದೇ ಈ ಮೂರು ಉದ್ದೇಶಗಳು.
English → | Eke →
ಅಧ್ಯಾಯ ಒಂಬತ್ತು — ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು
9.1 ಪೀಠಿಕೆ
ತಿಳಿಸುವ ವಾಕ್ಯಗಳಲ್ಲಿ ಕ್ರಿಯಾವಾಕ್ಯಗಳು ಮತ್ತು ವಿಷಯವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳಿವೆಯೆಂಬುದನ್ನು ಮೇಲೆ ನೋಡಿರುವೆವು. ಇವುಗಳಲ್ಲಿ ಕ್ರಿಯಾವಾಕ್ಯಗಳು ಒಂದು ಘಟನೆಯನ್ನೂ ಮತ್ತು ವಿಷಯವಾಕ್ಯಗಳು ಒಂದು ಸಂಗತಿಯನ್ನೂ ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಎರಡು ರೀತಿಯ ವಾಕ್ಯಗಳೂ ಈ ರೀತಿ ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವಂತಹ ರೂಪದಲ್ಲಿ ಮಾತ್ರವಲ್ಲದೆ ಬೇರೆ ಎರಡು ರೂಪಗಳಲ್ಲೂ ಬರಬಲ್ಲುವು. ಇವನ್ನು ಸಂಬಂಧಿಸುವ ವಾಕ್ಯಗಳು ಮತ್ತು ಅಲ್ಲಗಳೆಯುವ ವಾಕ್ಯಗಳು ಎಂಬುದಾಗಿ ಕರೆಯಬಹುದು. ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು, ಅದರಲ್ಲಿ ತೊಡಗಿರುವ ಘಟಕಗಳಲ್ಲಿ ಒಂದು ಆ ಘಟನೆ ಇಲ್ಲವೇ ಸಂಗತಿಗೆ ಸಂಬಂಧಿಸಿದೆ ಎಂಬುದಾಗಿ ತಿಳಿಸಲು ಸಾಧ್ಯವಿದೆ. ಇದಕ್ಕಾಗಿ ತಿಳಿಸುವ ವಾಕ್ಯವನ್ನು ಅದರ ಸಂಬಂಧಿಸುವ ರೂಪಕ್ಕೆ ಬದಲಾಯಿಸಿಕೊಳ್ಳಬೇಕು. ಈ ವಿಧಾನದ ಬಳಕೆ ಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (1ಕ) ಮೊಸರಿನ ಗಡಿಗೆ ಒಡೆದಿದೆ. (1ಖ) ಒಡೆದದ್ದು ಮೊಸರಿನ ಗಡಿಗೆ. (2ಕ) ಆ ಡಬ್ಬದೊಳಗೆ ಒಂದು ಇಲಿಯಿದೆ. (2ಖ) ಆ ಡಬ್ಬದೊಳಗಿರುವುದು ಒಂದು ಇಲಿ. (1ಕ)ದಲ್ಲಿ ಮೊಸರಿನ ಗಡಿಗೆ ಒಡೆದಿದೆ ಎಂಬ ಘಟನೆಯನ್ನು ನೇರವಾಗಿ ತಿಳಿಸಲಾಗಿದೆ. ಆದರೆ (1ಖ)ದಲ್ಲಿ ಈ ರೀತಿ ಒಂದು ಘಟನೆ ನಡೆದಿದೆ ಎಂಬುದನ್ನು ನೇರವಾಗಿ ತಿಳಿಸುವ ಬದಲು, ಮೊಸರಿನ ಗಡಿಗೆ ಎಂಬ ಘಟಕಕ್ಕೂ ಮತ್ತು ಆ ಘಟನೆಗೂ ನಡುವೆ ಸಂಬಂಧವಿದೆ ಎಂಬುದನ್ನು ತಿಳಿಸಲಾಗಿದೆ. ಇದೇ ರೀತಿಯಲ್ಲಿ (2ಕ)ದಲ್ಲಿ ಒಂದು ವಿಷಯವನ್ನು ನೇರವಾಗಿ ತಿಳಿಸಲಾಗಿದೆಯಾದರೆ, (2ಖ)ದಲ್ಲಿ ಆ ವಿಷಯಕ್ಕೂ ಮತ್ತು ಒಂದು ಘಟಕಕ್ಕೂ (ಒಂದು ಇಲಿ ಎಂಬುದಕ್ಕೂ) ನಡುವೆ ಸಂಬಂಧವಿದೆ ಎಂಬುದನ್ನು ತಿಳಿಸಲಾಗಿದೆ. ಒಂದು ಘಟನೆ ನಡೆದಿರುವುದನ್ನು (ಅಥವಾ ನಡೆಯಲಿರುವುದನ್ನು) ಮತ್ತು ಒಂದು ಸಂಗತಿ ಇರುವುದನ್ನು ನೇರವಾಗಿ ತಿಳಿಸುವ ಬದಲು, ಒಂದು ಘಟನೆ ನಡೆದಿಲ್ಲ ಎಂಬುದನ್ನು ಇಲ್ಲವೇ ಒಂದು ಸಂಗತಿ ನಿಜವಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ‘ಅಲ್ಲಗಳೆಯುವ’ ವಾಕ್ಯವನ್ನು ಬಳಸಲಾಗುತ್ತದೆ. ಇದಕ್ಕಾಗಿ ತಿಳಿಸುವ ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸಿ ಹೇಳಬೇಕಾಗುತ್ತದೆ. (3ಕ) ಮೊಸರಿನ ಮಡಿಕೆ ಒಡೆಯಿತು. (3ಖ) ಮೊಸರಿನ ಮಡಿಕೆ ಒಡೆಯಲಿಲ್ಲ. (4ಕ) ಆ ಡಬ್ಬದೊಳಗೆ ಇಲಿಯಿದೆ. (4ಖ) ಆ ಡಬ್ಬದೊಳಗೆ ಇಲಿಯಿಲ್ಲ. ಈ ರೀತಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ಅಲ್ಲಗಳೆಯುವ ಬದಲು ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನೂ ಅಲ್ಲಗಳೆಯಲು ಸಂಬಂಧಿಸುವ ವಾಕ್ಯಗಳೂ ಅಲ್ಲಗಳೆಯುವ ರೂಪದಲ್ಲಿ ಬರಬಲ್ಲುವು. ಆದರೆ ಇದಕ್ಕಾಗಿ ಕನ್ನಡದಲ್ಲಿ ಅಲ್ಲ ಎಂಬ ಬೇರೆಯೇ ಒಂದು ಅಲ್ಲಗಳೆಯುವ ಪದವನ್ನು ಬಳಸಲಾಗುತ್ತದೆ. ಸಾಧ್ಯವಿದೆಯಾದ (5ಕ) ಒಡೆದದ್ದು ಮೊಸರಿನ ಗಡಿಗೆ. (5ಖ) ಒಡೆದದ್ದು ಮೊಸರಿನ ಗಡಿಗೆಯಲ್ಲ. (5ಗ) ಮರದ ಮೇಲಿರುವುದು ಒಂದು ಕೋತಿ. (5ಘ) ಮರದ ಮೇಲಿರುವುದು (ಒಂದು) ಕೋತಿಯಲ್ಲ.
ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ತಿಳಿಸಿರುವ ಘಟನೆಗೂ ಮತ್ತು ಅದರ ಘಟಕಕ್ಕೂ ನಡುವಿರುವ ಸಂಬಂಧ ವನ್ನು ಮಾತ್ರವಲ್ಲದೆ, ಅಲ್ಲಗಳೆದಿರುವ ಘಟನೆ(ಇಲ್ಲವೇ ಸಂಗತಿ)ಗೂ ಮತ್ತು ಘಟಕಕ್ಕೂ ನಡುವಿರುವ ಸಂಬಂಧವನ್ನೂ ಇಂತಹ ವಾಕ್ಯದ ಮೂಲಕ ಅಲ್ಲ ಗಳೆಯಲು ಸಾಧ್ಯವಿದೆ. (6ಕ) ಮೊಸರಿನ ಗಡಿಗೆ ಒಡೆಯಲಿಲ್ಲ. (6ಖ) ಒಡೆಯದುದು ಮೊಸರಿನ ಗಡಿಗೆ. (6ಗ) ಮಡಕೆಯಲ್ಲಿ ಬಿಸಿನೀರಿಲ್ಲ. (6ಘ) ಮಡಕೆಯಲ್ಲಿಲ್ಲದಿರುವುದು ಬಿಸಿನೀರಲ್ಲ. ಸಂಬಂಧಿಸುವುದಕ್ಕಾಗಿ ಮತ್ತು ಅಲ್ಲಗಳೆಯುವುದಕ್ಕಾಗಿ ಬಳಕೆಯಾಗುವ ಈ ಎರಡು ರೀತಿಯ ವಾಕ್ಯಗಳ ಒಳರಚನೆ ಹೇಗಿದೆ ಎಂಬುದನ್ನು ಕೆಳಗೆ ಸ್ವಲ್ಪ ವಿವರ ವಾಗಿ ಪರಿಶೀಲಿಸಲಾಗಿದೆ. ವಾಕ್ಯಗಳ ಕೊನೆಯಲ್ಲಿ ಅಂತೆ ಪದವನ್ನು ಸೇರಿಸುವ ಮೂಲಕ ಬೇರೊಬ್ಬನ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಎತ್ತಿಹೇಳಲು ಸಾಧ್ಯ ಎಂಬುದನ್ನು ಏಳನೆಯ ಅಧ್ಯಾಯದಲ್ಲಿ (7.2.1ರಲ್ಲಿ) ನೋಡಿರುವೆವು. ಇವನ್ನು ಮೂರನೇ ರೀತಿಯ ತಿಳಿಸುವ ವಾಕ್ಯಗಳೆಂದು ಪರಿಗಣಿಸಲು ಸಾಧ್ಯವಿದೆ.
9.2 ಸಂಬಂಧಿಸುವ ವಾಕ್ಯಗಳು
ವಾಕ್ಯದ ಒಂದು ಘಟಕವನ್ನು ಅದರ ಇತರ ಭಾಗಕ್ಕೆ ಸಂಬಂಧಿಸಿರುವಂತೆ ಹೇಳಲು ಆ ಘಟಕವನ್ನು ವಾಕ್ಯದ ಕೊನೆಯಲ್ಲಿ ಇರಿಸಬೇಕು ಮತ್ತು ವಾಕ್ಯದ ಕ್ರಿಯಾಪದವನ್ನು ಅದರ ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕು. ಉದಾ ಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಪರಿಶೀಲಿಸಬಹುದು.
(7ಕ) ಜಾನಕಿಯ ಚಿತ್ರ ಪೇಪರಿನಲ್ಲಿ ಬಂತು. (7ಖ) ಪೇಪರಿನಲ್ಲಿ ಬಂದುದು ಜಾನಕಿಯ ಚಿತ್ರ. (7ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (7ಖ)ದಲ್ಲಿ ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಲಾಗಿದೆ, ಮತ್ತು ಇದಕ್ಕಾಗಿ, ಅದರ ಎರಡು ಘಟಕ ಗಳಲ್ಲಿ ಒಂದನ್ನು (ಜಾನಕಿಯ ಚಿತ್ರ ಎಂಬುದನ್ನು) ವಾಕ್ಯದ ಕೊನೆಯಲ್ಲಿ ಇರಿಸಲಾಗಿದೆ ಮತ್ತು ಬಂತು ಎಂಬ ಅದರ ಕ್ರಿಯಾಪದವನ್ನು ಬಂದುದು ಎಂಬ ನಾಮಪದರೂಪಕ್ಕೆ ಬದಲಾಯಿಸಲಾಗಿದೆ.
9.2.1 ಘಟಕಗಳನ್ನು ಪ್ರತ್ಯೇಕಿಸುವುದು
ಒಂದು ವಾಕ್ಯದಲ್ಲಿ ಬಂದಿರುವ ಬೇರೆ ಬೇರೆ ಘಟಕಗಳನ್ನು ಈ ರೀತಿ ಅದರ ಉಳಿದ ಭಾಗಕ್ಕೆ ಸಂಬಂಧಿಸಿರುವಂತೆ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ.
ರಾಜು ಆ ವ್ಯಾಪಾರಿಗೆ ತನ್ನ ಮನೆಯನ್ನು ಮಾರಿದ್ದಾನೆ. (8ಖ) ರಾಜು ಆ ವ್ಯಾಪಾರಿಗೆ ಮಾರಿರುವುದು ತನ್ನ ಮನೆಯನ್ನು. ರಾಜು ತನ್ನ ಮನೆಯನ್ನು ಮಾರಿರುವುದು ಆ ವ್ಯಾಪಾರಿಗೆ. (8ಘ) ಆ ವ್ಯಾಪಾರಿಗೆ ತನ್ನ ಮನೆಯನ್ನು ಮಾರಿರುವುದು ರಾಜು. ಮೇಲೆ (8ಕ)ದಲ್ಲಿ ಬಂದಿರುವ ವಾಕ್ಯದಲ್ಲಿ ಮೂರು ಘಟಕಗಳಿದ್ದು ಅನಂತರದ ಮೂರು ವಾಕ್ಯಗಳಲ್ಲಿ, ಎಂದರೆ (8ಖ-ಘ)ಗಳಲ್ಲಿ ಆ ಮೂರು ಘಟಕಗಳಲ್ಲಿ ಒಂದೊಂದನ್ನೂ ಪ್ರತ್ಯೇಕಿಸಿ, ಅದು ಆ ವಾಕ್ಯದ ಇತರ ಭಾಗಕ್ಕೆ ಸಂಬಂಧಿಸಿದೆ ಎಂದು ಸೂಚಿಸಲಾಗಿದೆ. ಸಾಮಾನ್ಯವಾಗಿ ವಾಕ್ಯದಲ್ಲಿ ಬರುವ ಘಟಕಗಳಲ್ಲಿ ಒಂದನ್ನು ಮಾತ್ರವೇ ಈ ರೀತಿ ಪ್ರತ್ಯೇಕಿಸಿ ಹೇಳುವುದು ರೂಢಿ. ಆದರೆ ಕೆಲವು ವಿಶಿಷ್ಟವಾದ ಸಂದಭ್ರ ಗಳಲ್ಲಿ ಒಂದಕ್ಕಿಂತ ಜಾಸ್ತಿ ಘಟಕಗಳನ್ನೂ ಈ ರೀತಿ ಪ್ರತ್ಯೇಕಿಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ವಾಕ್ಯಗಳಲ್ಲಿ ನೋಡಬಹುದು. ರಾಜು ಕೊಟ್ಟುದು ಹರಿಗೊಂದು ಪುಸ್ತಕ. (9ಖ) ಶಾಮರಾಯರು ವರ್ಣಿಸಿದ ಅಪಘಾತ ನಡೆದುದು ನಿನ್ನೆ ರಾತ್ರಿ ಯರವಾಡದ ಸಕ್ರಲಿನಲ್ಲಿ. (9ಗ) ಜಾಸ್ತಿ ಮಳೆ ಬಂದಿರುವುದು ನಿನ್ನೆ ಬೊಂಬಾಯಿಯಲ್ಲಿ. ಇದಲ್ಲದೆ, ವಾಕ್ಯವು ಸೂಚಿಸುವ ಘಟನೆಯನ್ನೇ ಅದರ ಘಟಕಗಳಿಗೆ ಸಂಬಂಧಿ ಸಿರುವ ಹಾಗೆಯೂ ಇಂತಹ ಸಂಬಂಧಿಸುವ ವಾಕ್ಯದ ಮೂಲಕ ತಿಳಿಸಲು ಸಾಧ್ಯ ವಿದೆ. ಇದಕ್ಕಾಗಿ ಇಂತಹ ವಾಕ್ಯಗಳಲ್ಲಿ ನಾಮಪದರೂಪದಲ್ಲಿರುವ ಕ್ರಿಯಾಪದ ವನ್ನು ವಾಕ್ಯದ ಕೊನೆಯಲ್ಲಿರಿಸಬೇಕು. (10ಕ) ಆಕೆ ರಾಜುವನ್ನು ಹೊಗಳಿದುದು (ತೆಗಳಿದುದಲ್ಲ). (10ಖ) ರಾಜು ಈ ದನವನ್ನು ಮಾರುವುದು (ದಾನ ಕೊಡುವುದಲ್ಲ).
9.2.2 ಕ್ರಿಯಾಪದವನ್ನು ಬದಲಾಯಿಸುವುದು
ತಿಳಿಸುವ ವಾಕ್ಯವೊಂದರಿಂದ ಸಂಬಂಧಿಸುವ ವಾಕ್ಯವನ್ನು ತಯಾರಿಸಬೇಕಿದ್ದಲ್ಲಿ, ಅದರ ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸಬೇಕೆಂಬುದನ್ನು ನಾವು ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಮೇಲೆ ನೋಡಿರುವೆವು. ಈ ಬದಲಾವಣೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಗಳಿವೆಯೆಂಬುದನ್ನು ಈ ವಿಭಾಗದಲ್ಲಿ ನೋಡಲಿರುವೆವು. ವಿಷಯವಾಕ್ಯಗಳನ್ನು ಅವುಗಳ ಕೊನೆಯಲ್ಲಿ ಬರುವ ಇರು ಕ್ರಿಯಾಪದವನ್ನು ತೆಗೆದು ಹಾಕಿಯೂ ಬಳಸಲು ಸಾಧ್ಯ ಎಂಬುದನ್ನು ನಾವು 3.1ರಲ್ಲಿ ನೋಡಿರು ವೆವು. ಆದರೆ ಇಂತಹ ವಾಕ್ಯಗಳನ್ನು ಅವುಗಳ ಸಂಬಂಧಿಸುವ ರೂಪಕ್ಕೆ ಬದಲಾ ಯಿಸಬೇಕಿದ್ದಲ್ಲಿ ಈ ರೀತಿ ತೆಗೆದು ಹಾಕಿದ ಕ್ರಿಯಾಪದವನ್ನು ತಿರುಗಿ ಪಡೆದು ಅದನ್ನು ನಾಮಪದರೂಪದಲ್ಲಿ ಬಳಸಿಕೊಳ್ಳಬೇಕಾಗುತ್ತದೆ. (11ಕ) ಜಾನಕಿಗೆ ಶ್ರೀಹರಿಯ ಮೇಲೆ ಕೋಪವಿದೆ. (11ಖ) ಜಾನಕಿಗೆ ಶ್ರೀಹರಿಯ ಮೇಲೆ ಕೋಪ. (11ಗ) ಜಾನಕಿಗೆ ಕೋಪವಿರುವುದು ಶ್ರೀಹರಿಯ ಮೇಲೆ. (11ಕ)ದಲ್ಲಿ ಬಂದಿರುವ ವಿಷಯವಾಕ್ಯದ ಇದೆ ಕ್ರಿಯಾರೂಪವನ್ನು (11ಖ) ದಲ್ಲಿ ತೆಗೆದು ಹಾಕಲು ಸಾಧ್ಯವಾಗಿದೆ. ಆದರೆ (11ಗ)ದಲ್ಲಿ ಬಂದಿರುವ ಈ ವಾಕ್ಯದ ಸಂಬಂಧಿಸುವ ರೂಪದಿಂದ ಈ ರೀತಿ ಆ ಕ್ರಿಯಾಪದದ ಇರುವುದು ಎಂಬ ನಾಮಪದರೂಪವನ್ನು ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದಕ್ಕೆ ಮೂರು ಕ್ರಿಯಾರೂಪಗ ಳಿದ್ದು (ಉದಾ: ಇದ್ದಾನೆ, ಇರುತ್ತಾನೆ, ಇದ್ದ), ಅವು ಹಿಂದಿನ, ಮುಂದಿನ ಮತ್ತು ಈಗಿನ ಘಟನೆಗಳನ್ನು ತಿಳಿಸಬಲ್ಲುವು ಎಂಬುದನ್ನು ನಾವು ಮೇಲೆ 3.1.1ರಲ್ಲಿ ನೋಡಿರುವೆವು. ಆದರೆ, ಈ ಕ್ರಿಯಾಪದಕ್ಕೆ ಇರುವುದು ಮತ್ತು ಇದ್ದುದು ಎಂಬುದಾಗಿ ಎರಡು ನಾಮಪದರೂಪಗಳು ಮಾತ್ರ ಇವೆ. ಹಾಗಾಗಿ, ಸಂಬಂಧಿಸುವ ವಾಕ್ಯಗಳಲ್ಲಿ ಮುಂದಿನ ಮತ್ತು ಈಗಿನ ಘಟನೆಗಳ ನಡುವಿನ ವ್ಯತ್ಯಾಸವನ್ನು ಸೂಚಿಸಲು ಸಾಧ್ಯವಾಗದು. (12ಕ) ರಾಮಮೂತ್ರಿ ಈ ಮನೆಯಲ್ಲಿರುತ್ತಾನೆ. (12ಖ) ರಾಮಮೂತ್ರಿ ಈ ಮನೆಯಲ್ಲಿದ್ದಾನೆ. (12ಗ) ರಾಮಮೂತ್ರಿ ಈ ಮನೆಯಲ್ಲಿದ್ದ. (13ಕ) ರಾಮಮೂತ್ರಿ ಇರುವುದು ಈ ಮನೆಯಲ್ಲಿ. (13ಖ) ರಾಮಮೂತ್ರಿ ಇದ್ದುದು ಈ ಮನೆಯಲ್ಲಿ. (13ಕ-ಗ)ಗಳಲ್ಲಿರುವ ಮೂರು ಕ್ರಿಯಾವಾಕ್ಯಗಳಿಗೆ ಬದಲಾಗಿ (13ಕ-ಖ) ಗಳಲ್ಲಿ ಕಾಣಿಸಿರುವ ಹಾಗೆ ಎರಡು ಸಂಬಂಧಿಸುವ ವಾಕ್ಯಗಳನ್ನು ಮಾತ್ರ ತಯಾರಿಸಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಬಹುದು. ಇವುಗಳಲ್ಲಿ ಮೊದಲನೆಯದು (12ಕ) ವಾಕ್ಯದಿಂದಲೂ ತಯಾರಾಗಿರಬಹುದು ಇಲ್ಲವೇ (12ಖ)ದಿಂದಲೂ ತಯಾರಾಗಿರಬಹುದು. ಅಲ್ಲಗಳೆಯುವ ಕ್ರಿಯಾವಾಕ್ಯಗಳಲ್ಲಿ ಹಿಂದಿನ ಘಟನೆಯನ್ನು ಅಲ್ಲಗಳೆಯು ವವು ಮತ್ತು ಮುಂದಿನ ಘಟನೆಯನ್ನು ಅಲ್ಲಗಳೆಯುವವು ಎಂಬುದಾಗಿ ಎರಡು ರೀತಿಯ ವಾಕ್ಯಗಳಿವೆಯೆಂಬುದನ್ನು ಮುಂದೆ (9.3ರಲ್ಲಿ) ನೋಡಲಿರುವೆವು. ಇವುಗಳಲ್ಲಿ ಮೊದಲನೆಯದರ ಸಂಬಂಧಿಸುವ ರೂಪವನ್ನು ನೇರವಾಗಿ ಅದರಲ್ಲಿ ಬಂದಿರುವ ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸುವುದರ ಮೂಲಕ ತಯಾರಿಸಲು ಸಾಧ್ಯವಿದೆ. (14ಕ) ಜಾನಕಿ ಶಾಲೆಗೆ ಹೋಗಲಿಲ್ಲ. (14ಖ) ಶಾಲೆಗೆ ಹೋಗದುದು ಜಾನಕಿ. ಮುಂದಿನ ಘಟನೆಯನ್ನು ಅಲ್ಲಗಳೆಯುವ ಎರಡನೆಯ ಕ್ರಿಯಾವಾಕ್ಯದ ಸಂಬಂಧಿಸುವ ರೂಪವನ್ನು ಈ ರೀತಿ ನೇರವಾಗಿ ತಯಾರಿಸಲು ಸಾಧ್ಯವಾಗದು. ಘಟನೆಯನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ನಾಮಪದರೂಪವಿಲ್ಲ. ಹಾಗಾಗಿ ಇಂತಹ ಸಂದಭ್ರಗಳಲ್ಲಿ ಕ್ರಿಯಾಪದದೊಂದಿಗೆ ಇರು ಎಂಬುದರ ನಾಮಪದರೂಪವನ್ನು ಬಳಸಬೇಕಾಗುತ್ತದೆ. ಯಾಕೆಂದರೆ, ಕನ್ನಡದಲ್ಲಿ ಮುಂದಿನ (15ಕ) ಜಾನಕಿ ಶಾಲೆಗೆ ಹೋಗುವುದಿಲ್ಲ. (15ಖ) ಶಾಲೆಗೆ ಹೋಗದಿರುವುದು ಜಾನಕಿ.
9.3 ಅಲ್ಲಗಳೆಯುವ ವಾಕ್ಯಗಳು
ಮೇಲೆ 9.1ರಲ್ಲಿ ಸೂಚಿಸಿರುವ ಹಾಗೆ, ಒಂದು ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡದಲ್ಲಿ ಇಲ್ಲ ಪದದ ಬಳಕೆಯಾಗುತ್ತದೆ. ಈ ಪದ ವನ್ನು ಬಳಸಿದಾಗ, ತಿಳಿಸುವ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಗಮನಿಸಬಹುದು. (16ಕ) ಜಾನಕಿ ಅಡಿಗೆ ಮಾಡಿದಳು. (16ಖ) ಜಾನಕಿ ಅಡಿಗೆ ಮಾಡಲಿಲ್ಲ. (17ಕ) ರಾಜು ಉಪ್ಪರಿಗೆಯಲ್ಲಿ ಮಲಗುತ್ತಾನೆ. (17ಖ) ರಾಜು ಉಪ್ಪರಿಗೆಯಲ್ಲಿ ಮಲಗುವುದಿಲ್ಲ. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಹಿಂದಿನ ಘಟನೆಯೊಂದನ್ನು ತಿಳಿಸುವ (16ಕ) ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸುವುದರ ಮೂಲಕ (16ಖ) ವಾಕ್ಯದಲ್ಲಿ ಆ ಘಟನೆಯನ್ನು ಅಲ್ಲಗಳೆಯ ಲಾಗಿದೆ, ಮತ್ತು ಇದಕ್ಕಾಗಿ (16ಕ) ವಾಕ್ಯದ ಕೊನೆಯಲ್ಲಿ ಬಂದಿರುವ ಮಾಡಿದಳು ಕ್ರಿಯಾರೂಪವನ್ನು ಮಾಡಲು ಎಂಬುದಾಗಿ ಮೊದಲಿನ ಘಟನೆ ಯನ್ನು ಸೂಚಿಸುವ ರೂಪಕ್ಕೆ ಬದಲಿಸಿಕೊಳ್ಳಲಾಗಿದೆ.
ಇದೇ ರೀತಿಯಲ್ಲಿ ಮುಂದಿನ ಘಟನೆಯೊಂದನ್ನು ತಿಳಿಸುವ (17ಕ) ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸಿ (17ಖ) ವಾಕ್ಯದಲ್ಲಿ ಆ ಘಟನೆಯನ್ನು ಅಲ್ಲಗಳೆಯ ಲಾಗಿದೆ, ಮತ್ತು ಇದಕ್ಕಾಗಿ (17ಕ) ಕೊನೆಯಲ್ಲಿ ಬಂದಿರುವ ಮಲಗುತ್ತಾನೆ ಕ್ರಿಯಾರೂಪವನ್ನು ಮಲಗುವುದು ಎಂಬುದಾಗಿ ಅದರ ನಾಮಪದರೂಪಕ್ಕೆ ಬದಲಿಸಿಕೊಳ್ಳಲಾಗಿದೆ. ಸಂಗತಿಗಳನ್ನು ತಿಳಿಸುವ ವಿಷಯವಾಕ್ಯಗಳನ್ನು ಅಲ್ಲಗಳೆಯಬೇಕಿದ್ದಲ್ಲಿ, ಅವುಗಳ ಕೊನೆಯಲ್ಲಿ ಬರುವ ಇರು ಕ್ರಿಯಾಪದದ ರೂಪಗಳಲ್ಲೂ ಬದಲಾವಣೆ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಹಿಂದಿನ ಮತ್ತು ಮುಂದಿನ ಸಮಯದ ರೂಪಗಳನ್ನು ಇತರ ಕ್ರಿಯಾಪದಗಳ ರೂಪಗಳ ಹಾಗೆಯೇ ಮೇಲೆ ಸೂಚಿಸಿದಂತೆ ಬದಲಾಯಿಸಿಕೊಳ್ಳಬೇಕಾಗುತ್ತದೆ. (18ಕ) ಶಾಮರಾಯರು ಆಫೀಸಿನಲ್ಲಿ ಇದ್ದರು. (18ಖ) ಶಾಮರಾಯರು ಆಫೀಸಿನಲ್ಲಿ ಇರಲಿಲ್ಲ. (19ಕ) ಶಾಮರಾಯರು ಆಫೀಸಿನಲ್ಲಿ ಇರುತ್ತಾರೆ. (19ಖ) ಶಾಮರಾಯರು ಆಫೀಸಿನಲ್ಲಿ ಇರುವುದಿಲ್ಲ. ಹಿಂದಿನ ಸಂಗತಿಯನ್ನು ಸೂಚಿಸುವ ಇದ್ದರು ಕ್ರಿಯಾಪದಕ್ಕೆ ಬದಲಾಗಿ (18ಖ) ದಲ್ಲಿ ಇರಲು ಎಂಬ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪವನ್ನೂ ಮತ್ತು ಮುಂದಿನ (ಇಲ್ಲವೇ ರೂಢಿಯ) ಸಂಗತಿಯನ್ನು ಸೂಚಿಸುವ ಇರುತ್ತಾರೆ ಕ್ರಿಯಾಪದಕ್ಕೆ ಬದಲಾಗಿ (19ಖ)ದಲ್ಲಿ ಅದರ ಇರುವುದು ಎಂಬ ನಾಮಪದ ರೂಪವನ್ನೂ ಇಲ್ಲ ಎಂಬ ಪದದೊಂದಿಗೆ ಬಳಸಲಾಗಿದೆ. ಆದರೆ, ಈಗಿನ ಸಮಯವನ್ನು ಸೂಚಿಸುವ ಇದ್ದಾನೆ, ಇದ್ದಾಳೆ, ಇದೆ ಮೊದಲಾದ ರೂಪಗಳು ಅವುಗಳ ಮುಂದೆ ಇಲ್ಲ ಪದವನ್ನು ಬಳಸಿದಾಗ ಈ ರೀತಿ ಬದಲಾಗುವ ಬದಲು ಸುಮ್ಮಗೆ ಬಿದ್ದು ಹೋಗುತ್ತವೆ. (20ಕ) ಶಾಮರಾಯರು ಆಫೀಸಿನಲ್ಲಿ ಇದ್ದಾರೆ. (20ಖ) ಶಾಮರಾಯರು ಆಫೀಸಿನಲ್ಲಿ ಇಲ್ಲ. (21ಕ) ಅವಳಿಗೆ ನಿಮ್ಮ ಮೇಲೆ ಕೋಪ ಇದೆ. (21ಖ) ಅವಳಿಗೆ ನಿಮ್ಮ ಮೇಲೆ ಕೋಪ ಇಲ್ಲ. ತಿಳಿಸುವ ವಾಕ್ಯಗಳು ಒಂದು ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನು ಚುಟುಕಾಗಿ ಸೂಚಿಸಬಲ್ಲುವು. ಈ ಕೆಲಸ ವನ್ನು ಅವುಗಳ ಕ್ರಿಯಾಪದಗಳ ಕೊನೆಯಲ್ಲಿ ಬರುವ ಒಂದು ಪ್ರತ್ಯಯ ನಡೆಸು ತ್ತದೆ. ಆದರೆ, ಈ ವಾಕ್ಯಗಳ ಅಲ್ಲಗಳೆಯುವ ರೂಪಗಳು ಈ ರೀತಿ ಘಟನೆಯಲ್ಲಿ ತೊಡಗಿಕೊಂಡಿರುವ (ಇಲ್ಲವೇ ತೊಡಗಿಕೊಂಡಿಲ್ಲವೆಂಬುದಾಗಿ ಅಲ್ಲಗಳೆಯುವ) ವ್ಯಕ್ತಿ ಇಲ್ಲವೇ ವಸ್ತುವೊಂದನ್ನು ಚುಟುಕಾಗಿ ಸೂಚಿಸಲಾರವು. ಅಲ್ಲಗಳೆಯುವ ವಾಕ್ಯಗಳಲ್ಲಿ ಕ್ರಿಯಾಪದದ ನಾಮಪದ ರೂಪವಾಗಲೀ ಇಲ್ಲವೇ ಮುಂದಿನ ಸಮಯವನ್ನು ಸೂಚಿಸುವ ರೂಪವಾಗಲೀ ಬರುವುದೇ ಇದಕ್ಕೆ ಕಾರಣ. (22ಕ) ರಾಜು ಮಕ್ಕಳಿಗೆ ಕಾಫಿ ಕೊಡುತ್ತಾನೆ. (22ಖ) ರಾಜು ಮಕ್ಕಳಿಗೆ ಕಾಫಿ ಕೊಡುವುದಿಲ್ಲ. (23ಕ) ಜಾನಕಿ ಮಕ್ಕಳಿಗೆ ಹಾಲು ಕೊಡುತ್ತಾಳೆ. (23ಖ) ಜಾನಕಿ ಮಕ್ಕಳಿಗೆ ಹಾಲು ಕೊಡುವುದಿಲ್ಲ. (22ಕ)ದಲ್ಲಿ ಘಟನೆಯನ್ನು ನಡೆಸುವ ವ್ಯಕ್ತಿ ಒಬ್ಬ ಗಂಡಸು ಎಂಬುದನ್ನು ಅದರ ಕೊನೆಯಲ್ಲಿ ಬಂದಿರುವ ಕೊಡುತ್ತಾನೆ ಕ್ರಿಯಾರೂಪ (ಆನೆ ಪ್ರತ್ಯಯದ ಮೂಲಕ) ಚುಟುಕಾಗಿ ಸೂಚಿಸುತ್ತದೆ. ಇದೇ ರೀತಿಯಲ್ಲಿ (23ಕ)ದಲ್ಲಿ ಬಂದಿರುವ ಕೊಡುತ್ತಾಳೆ ಕ್ರಿಯಾರೂಪ ಆ ವಾಕ್ಯ ತಿಳಿಸುವ ಘಟನೆಯನ್ನು ನಡೆಸುವ ವ್ಯಕ್ತಿ ಒಬ್ಬ ಹೆಂಗಸು ಎಂಬುದನ್ನು (ಆಳೆ ಪ್ರತ್ಯಯದ ಮೂಲಕ) ಚುಟುಕಾಗಿ ಸೂಚಿಸುತ್ತದೆ.
ಆದರೆ ಈ ಎರಡು ವಾಕ್ಯಗಳ ಅಲ್ಲಗಳೆಯುವ ರೂಪಗಳಲ್ಲಿ ((22ಖ) ಮತ್ತು (23ಖ)ಗಳಲ್ಲಿ) ಈ ಎರಡು ಕ್ರಿಯಾರೂಪಗಳ ನಾಮಪದರೂಪ (ಕೊಡುವುದು) ಬಂದಿದೆಯಾದ ಕಾರಣ, ಮತ್ತು ಈ ರೂಪದಲ್ಲಿ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲವಾದ ಕಾರಣ, ಅವು ಈ ರೀತಿ (ಘಟನೆಯನ್ನು ನಡೆಸದಿರುವ) ವ್ಯಕ್ತಿಯನ್ನು ಚುಟುಕಾಗಿ ಸೂಚಿಸಲಾರವು. ಹಿಂದಿನ ವಿಭಾಗದಲ್ಲಿ ವಿವರಿಸಿರುವ ‘ಸಂಬಂಧಿಸುವ’ ವಾಕ್ಯಗಳಲ್ಲೂ ಈ ರೀತಿ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಚುಟುಕಾಗಿ ಸೂಚಿಸಲು ಸಾಧ್ಯ ವಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು (22ಗ) ಮಕ್ಕಳಿಗೆ ಕಾಫಿ ಕೊಡುವುದು ರಾಜು. (23ಗ) ಮಕ್ಕಳಿಗೆ ಹಾಲು ಕೊಡುವುದು ಜಾನಕಿ.
9.3.1 ಸಂಬಂಧವನ್ನು ಅಲ್ಲಗಳೆಯುವುದು
ಒಂದು ಘಟನೆ ಇಲ್ಲವೇ ಸಂಗತಿಯನ್ನು ಈ ರೀತಿ ನೇರವಾಗಿ ಅಲ್ಲಗಳೆಯುವ ಬದಲು, ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಬೇಕಿದ್ದಲ್ಲಿ ಇಲ್ಲ ಎಂಬುದರ ಬದಲು ಅಲ್ಲ ಎಂಬ ಬೇರೊಂದು ಪದವನ್ನು ಬಳಸಬೇಕಾಗುತ್ತದೆ. ಇಂತಹ ವಾಕ್ಯಗಳಲ್ಲಿ ಕ್ರಿಯಾಪದ ಅದರ ನಾಮಪದರೂಪದಲ್ಲಿದೆಯಾದ ಕಾರಣ, ಅದರಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. (24ಕ) ಅವರು ಹೋದುದು ಮಂಗಳೂರಿಗೆ. (24ಖ) ಅವರು ಹೋದುದು ಮಂಗಳೂರಿಗಲ್ಲ. (25ಕ) ಅವರು ಹೋಗುವುದು ಮಂಗಳೂರಿಗೆ. (25ಖ) ಅವರು ಹೋಗುವುದು ಮಂಗಳೂರಿಗಲ್ಲ. (26ಕ) ಅವರು ಇರುವುದು ಮಂಗಳೂರಲ್ಲಿ. (26ಖ) ಅವರು ಇರುವುದು ಮಂಗಳೂರಲ್ಲಿ ಅಲ್ಲ. ಸಂಗತಿಯೊಂದನ್ನು ಸೂಚಿಸುವ ವಿಷಯವಾಕ್ಯಗಳನ್ನು ಅಂತಹ ಸಂಗತಿಗೂ ಮತ್ತು ವಾಕ್ಯದ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವು ದಕ್ಕಾಗಿ ‘ಸಂಬಂಧಿಸುವ’ ವಾಕ್ಯಗಳನ್ನಾಗಿ ಬದಲಾಯಿಸಬೇಕಿದ್ದಲ್ಲಿ ಅವುಗಳಲ್ಲಿ ಬರುವ ಇರು ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸಬೇಕಾಗುವು ದೆಂಬುದನ್ನು ನಾವು ಮೇಲೆ 9.2ರಲ್ಲಿ ನೋಡಿರುವೆವು. ಈ ಇರು ಕ್ರಿಯಾಪದ ವನ್ನು ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಬಳಸದಿರಲೂ ಸಾಧ್ಯವಿದೆ, ಆದರೆ ಸಂಬಂಧಿಸುವ ವಾಕ್ಯಗಳಲ್ಲಿ ಅದರ ನಾಮಪದರೂಪವನ್ನು ಆ ರೀತಿ ಬಳಸ ದಿರಲು ಸಾಧ್ಯವಾಗದು ಎಂಬುದನ್ನೂ ಹಿಂದೆ (9.2.2ರಲ್ಲಿ) ಸೂಚಿಸಲಾಗಿತ್ತು. ಆದರೆ, ಇಂತಹ ವಾಕ್ಯಗಳನ್ನು ಅಲ್ಲಗಳೆಯುವುದಕ್ಕಾಗಿ ಅವುಗಳೊಂದಿಗೆ ಅಲ್ಲ ಪದವನ್ನು ಬಳಸಿದಾಗ, ಇರು ಕ್ರಿಯಾಪದದ ನಾಮಪದರೂಪ ಬಿದ್ದು ಹೋಗಲು ಸಾಧ್ಯವಿದೆ. (27ಕ) ಆ ಹುಡುಗಿ ಕಪ್ಪು (ಇದ್ದಾಳೆ). (27ಖ) ಆ ಹುಡುಗಿಯಿರುವುದು ಕಪ್ಪು. (27ಗ) ಆ ಹುಡುಗಿಯಿರುವುದು ಕಪ್ಪಲ್ಲ. (27ಘ) ಆ ಹುಡುಗಿ ಕಪ್ಪಲ್ಲ. (27ಙ) ಆ ಹುಡುಗಿ ಕಪ್ಪಿಲ್ಲ. (27ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (27ಖ)ದಲ್ಲಿ ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಲಾಗಿದೆ, ಮತ್ತು (27ಗ)ದಲ್ಲಿ ಈ ಸಂಬಂಧಿಸುವ ವಾಕ್ಯವನ್ನು ಅಲ್ಲಗಳೆಯಲಾಗಿದೆ. (27ಘ) ವಾಕ್ಯವೂ ಇದೇ (27ಖ) ವಾಕ್ಯದ ಅಲ್ಲಗಳೆಯುವ ರೂಪವೆಂದು ಹೇಳಲು ಸಾಧ್ಯವಿದೆ. ಯಾಕೆಂದರೆ ಅದಕ್ಕೆ (27ಗ)ದ ಅರ್ಥವೇ ಇದೆ.
ಆದರೆ (27ಙ)ದಲ್ಲಿ ಇಲ್ಲ ಪದದ ಬಳಕೆಯಾಗಿದೆಯಾದ ಕಾರಣ, ಅದನ್ನು ಸಂಗತಿಯೊಂದನ್ನು ತಿಳಿಸುವ (27ಕ) ವಾಕ್ಯದ ಅಲ್ಲಗಳೆಯುವ ರೂಪವೆಂದು ಹೇಳಬೇಕಾಗುತ್ತದೆ. ಯಾಕೆಂದರೆ, ಅದು ನೇರವಾಗಿ ಒಂದು ಸಂಗತಿಯನ್ನೇ ಅಲ್ಲಗಳೆಯುತ್ತಿದೆಯಲ್ಲದೆ ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಿಲ್ಲ.
9.3.2 ಪದಗಳನ್ನು ಅಲ್ಲಗಳೆಯುವುದು
ಸಂಸ್ಕೃತದಲ್ಲಿ ವಾಕ್ಯಗಳು ಸೂಚಿಸುವ ಅರ್ಥದ ಹಾಗೆಯೇ ಪದಗಳು ಸೂಚಿಸುವ ಅರ್ಥವನ್ನೂ ಅಲ್ಲಗಳೆಯಲು ಸಾಧ್ಯವಿದೆ. ಇದಕ್ಕಾಗಿ ಆ ಭಾಷೆಯಲ್ಲಿ ಪದಗಳ ಎದುರಿಗೆ ಅ-ಅನ್, ನ ಇಲ್ಲವೇ ನಿರ್ ಎಂಬ ಪ್ರತ್ಯಯಗಳಲ್ಲೊಂದನ್ನು ಬಳಸ ಬೇಕಾಗುತ್ತದೆ. ಕನ್ನಡದಲ್ಲೂ ಇಂತಹ ಪ್ರತ್ಯಯಗಳ ಬಳಕೆಯನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ಕೆಲವು ಪದಗಳಲ್ಲಿ ಕಾಣಬಹುದು. (ಕ) ಅ ಪ್ರತ್ಯಯ (ಇದು ವ್ಯಂಜನಗಳ ಎದುರು ಬರುತ್ತದೆ). ತೃಪ್ತಿ ಸಾಧ್ಯ
ನ್ಯಾಯ
ಜ್ಞಾನ
ಅತೃಪ್ತಿ ಅಸಾಧ್ಯ ಅನ್ಯಾಯ ಅಜ್ಞಾನ (ಖ) ಅನ್ ಪ್ರತ್ಯಯ (ಇದು ಸ್ವರಗಳ ಎದುರು ಬರುತ್ತದೆ) ಅನಾಚಾರ ಅನರ್ಥ ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಅನಿಷ್ಟ ಅನುತ್ತೀರ್ಣ (ಗ) ನ ಪ್ರತ್ಯಯ ನಾಸ್ತಿಕ
(ಘ) ನಿರ್ ಪ್ರತ್ಯಯ (ಇದಕ್ಕೆ ನಿರ್, ನಿಸ್, ನಿಶ್ ಮೊದಲಾದ ರೂಪಗಳಿವೆ) ಉದ್ಯೋಗ ಉಪಯುಕ್ತ ಪ್ರಯೋಜನ ನಿರಾಧಾರ ನಿರುದ್ಯೋಗ ನಿರುಪಯುಕ್ತ ನಿಜ್ರೀವಿ ನಿಶ್ಚಿಂತೆ
ನಿಷ್ಪ್ರಯೋಜನ ನಿಸ್ಸಾರ ಆದರೆ ಕನ್ನಡದವೇ ಆದ ಪದಗಳ ಅರ್ಥವನ್ನು ಅಲ್ಲಗಳೆಯುವುದಕ್ಕಾಗಿ ಈ ರೀತಿ ಪ್ರತ್ಯಯಗಳ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಅಂತಹ ಪದ ಗಳೊಂದಿಗೆ ಅಲ್ಲದ ಇಲ್ಲವೇ ಇಲ್ಲದ ಎಂಬ ಪದವನ್ನು ಸೇರಿಸಿ ಹೇಳುವುದರ ಮೂಲಕ ಅಂತಹದೇ ಅಲ್ಲಗಳೆಯುವ ಅರ್ಥವನ್ನು ಪಡೆಯಬಹುದು. (28ಕ) ಹಣವಿಲ್ಲದವರನ್ನು ಯಾರೂ ಮಾತನಾಡಿಸುವುದಿಲ್ಲ. (28ಖ) ಬಿಳಿಯಲ್ಲದ ಹೂವನ್ನು ಕೀಳಬೇಡಿ. (28ಗ) ನಮ್ಮದಲ್ಲದ ವಸ್ತು ನಮಗೆ ಬೇಡ.
9.3.3 ಅಲ್ಲಗಳೆಯುವ ಕ್ರಿಯಾರೂಪಗಳು
ತಿಳಿಸುವ ವಾಕ್ಯಗಳನ್ನು ಬೇರೊಂದು ವಾಕ್ಯದ ಇಲ್ಲವೇ ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸುವುದಿದ್ದಲ್ಲಿ, ಅಂತಹ ವಾಕ್ಯದ ಇಲ್ಲವೇ ಪದ ಕಂತೆಯ ಅಂಗಗಳನ್ನು ಅಲ್ಲಗಳೆಯುವುದಕ್ಕಾಗಿ ಕೆಲವು ವಿಶಿಷ್ಟವಾದ ಕ್ರಿಯಾರೂಪ ಗಳನ್ನು ಬಳಸಲಾಗುತ್ತದೆ. (29ಕ) ಜಾನಕಿ ಅಡಿಗೆ ಮಾಡಲಿಲ್ಲ. (29ಖ) ಜಾನಕಿ ಅಡಿಗೆ ಮಾಡದುದನ್ನು ಯಾರೂ ಗಮನಿಸಲಿಲ್ಲ. (29ಗ) ಅಡಿಗೆ ಮಾಡದ ಜಾನಕಿ ಊಟವನ್ನೂ ಮಾಡಲಿಲ್ಲ. (29ಕ)ದಲ್ಲಿ ಬಂದಿರುವ ವಾಕ್ಯವನ್ನು (29ಖ)ದಲ್ಲಿ ಬೇರೊಂದು ವಾಕ್ಯದ ಅಂಗವನ್ನಾಗಿ (ಒಳವಾಕ್ಯವನ್ನಾಗಿ) ಮಾಡಿ ಬಳಸಲಾಗಿದೆ, ಮತ್ತು ಹೀಗೆ ಮಾಡುವಾಗ, ಅದರ ಕೊನೆಯಲ್ಲಿ ಬಂದಿರುವ ಮಾಡಲಿಲ್ಲ ಎಂಬ ಕ್ರಿಯಾ ರೂಪದ ಬದಲು ಮಾಡದುದು ಎಂಬ ಅದೇ ಕ್ರಿಯಾಪದದ ನಾಮಪದ ರೂಪವನ್ನು ಬಳಸಲಾಗಿದೆ. ಈ ಮಾಡದುದು ಎಂಬ ಕ್ರಿಯಾರೂಪಕ್ಕೇನೇ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ ಅದರೊಂದಿಗೆ ಇಲ್ಲ ಪದವನ್ನು ಬಳಸಬೇಕಾಗಿಲ್ಲ ಎಂಬುದನ್ನು ಗಮನಿಸಬಹುದು. ಇದೇ ರೀತಿಯಲ್ಲಿ, (29ಗ) ವಾಕ್ಯದಲ್ಲಿ (29ಕ) ವಾಕ್ಯವನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿ ಬಳಸಲಾಗಿದೆ ಮತ್ತು ಅದಕ್ಕಾಗಿ ಅದರ ಕೊನೆಯಲ್ಲಿ ಬರುವ ಮಾಡಲಿಲ್ಲ ಕ್ರಿಯಾಪದವನ್ನು ಮಾಡದ ಎಂಬುದಾಗಿ ಬದಲಾಯಿಸಲಾಗಿದೆ. ಈ ಕ್ರಿಯಾರೂಪಕ್ಕೂ ಅಲ್ಲಗಳೆಯುವ ಅರ್ಥವಿದೆ.
ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಕೆಲವು ವಿಶಿಷ್ಟವಾದ ಕ್ರಿಯಾರೂಪಗಳ ಮೂಲಕ ಜೋಡಿಸುವಂತಹ ಸಂದಭ್ರಗಳಲ್ಲೂ ಇಲ್ಲ ಇಲ್ಲವೇ ಅಲ್ಲ ಎಂಬ ಪದಗಳ ಬದಲು ವಿಶಿಷ್ಟವಾದ ಕ್ರಿಯಾರೂಪಗಳನ್ನು ಬಳಸುವುದರ ಮೂಲಕ ಅಲ್ಲಗಳೆಯುವ ಅರ್ಥವನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (30ಕ) ಜಾನಕಿ ಊಟ ಮಾಡಲಿಲ್ಲ; ಹಾಗೆಯೇ ಮಲಗಿದ್ದಾಳೆ. (30ಖ) ಜಾನಕಿ ಊಟ ಮಾಡದೆ ಮಲಗಿದ್ದಾಳೆ. (30ಕ)ದಲ್ಲಿ ಬಂದಿರುವ ಎರಡು ವಾಕ್ಯಗಳನ್ನು ಮೊದಲನೆಯ ವಾಕ್ಯದಲ್ಲಿ ಬಂದಿರುವ ಮಾಡಲಿಲ್ಲ ಕ್ರಿಯಾರೂಪದ ಬದಲು ಮಾಡದೆ ಕ್ರಿಯಾರೂಪವನ್ನು ಬಳಸಿ ಜೋಡಿಸಲಾಗಿದೆ (8.2.3 ನೋಡಿ). ಈ ಮಾಡದೆ ಕ್ರಿಯಾರೂಪಕ್ಕೆ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ (30ಖ)ದಲ್ಲಿ ಇಲ್ಲ ಪದವನ್ನು ಬಳಸ ದಿದ್ದರೂ ಅಲ್ಲಗಳೆಯುವ ಅರ್ಥ ಉಳಿದುಕೊಂಡಿದೆ. ಅಲ್ಲಗಳೆಯುವ ವಾಕ್ಯವನ್ನು ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಿ ದಾಗಲೂ ಅಲ್ಲಗಳೆಯುವ ಅರ್ಥವನ್ನು ಸೂಚಿಸಲು ಇಂತಹ ವಿಶಿಷ್ಟವಾದ ಕ್ರಿಯಾರೂಪದ ಬಳಕೆಯಾಗುತ್ತದೆ. (31ಕ) ಆಕೆ ಮದುವೆಗೆ ಸೀತಾಬಾಯಿಯನ್ನು ಕರೆಯಲಿಲ್ಲ. (31ಖ) ಆಕೆ ಮದುವೆಗೆ ಕರೆಯದುದು ಸೀತಾಬಾಯಿಯನ್ನು. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಇದಲ್ಲದೆ, ಇನ್ನೊಬ್ಬ ವ್ಯಕ್ತಿಯ ಮೂಲಕ ಕೆಲಸ ಮಾಡಿಸಿಕೊಳ್ಳುವ ವಾಕ್ಯಗಳ ಬಳಕೆಯಲ್ಲೂ (10.5 ನೋಡಿ) ಇಂತಹ ಅಲ್ಲಗಳೆಯುವ ಕ್ರಿಯಾರೂಪದ ಬಳಕೆಯನ್ನು ಕಾಣಬಹುದು. ಉದಾಹರಣೆಗಾಗಿ, ಇನ್ನೊಬ್ಬ ವ್ಯಕ್ತಿಯ ಮೂಲಕ ಕೆಲಸವೊಂದನ್ನು ಮಾಡಿಸಿಕೊಳ್ಳುವ ಬದಲು ಆತ ಆ ಕೆಲಸವನ್ನು ಮಾಡದಂತೆ ತಡೆಗಟ್ಟಬೇಕಿದ್ದಲ್ಲಿ ಬೇಡ ಇಲ್ಲವೇ ಬೇಡಿ ಎಂಬ ಕ್ರಿಯಾರೂಪದ ಬಳಕೆ ಯಾಗುತ್ತದೆ. (32ಕ) ನೀವು ಮೇಲೆ ಹೋಗಿ. (32ಖ) ನೀವು ಮೇಲೆ ಹೋಗಬೇಡಿ. (33ಕ) ರಾಜು ಮನೆಗೆ ಹೋಗಲಿ. (33ಖ) ರಾಜು ಮನೆಗೆ ಹೋಗುವುದು ಬೇಡ. (32ಖ)ದಲ್ಲಿ ಬಂದಿರುವ ಬೇಡಿ ಕ್ರಿಯಾರೂಪಕ್ಕೆ ಮತ್ತು (33ಖ)ದಲ್ಲಿ ಬಂದಿರುವ ಬೇಡ ಕ್ರಿಯಾರೂಪಕ್ಕೆ ಅಲ್ಲಗಳೆಯುವ ಅರ್ಥವಿದೆ.
9.3.4 ಎರಡು ಬಾರಿ ಅಲ್ಲಗಳೆಯುವುದು
ವಾಕ್ಯವೊಂದನ್ನು ಎರಡನೆಯ ಬಾರಿ ಅಲ್ಲಗಳೆಯಬೇಕಿದ್ದಲ್ಲಿ ಅದರ ಕೊನೆಯಲ್ಲಿ ಎಂದು ಪದವನ್ನು ಬಳಸಬೇಕಾಗುತ್ತದೆ. ಎಂದರೆ, ಇಲ್ಲಿ ಒಂದು ಅಲ್ಲಗಳೆಯುವ ವಾಕ್ಯವನ್ನು ‘ಎತ್ತಿಹೇಳಿ’, ಅದನ್ನೇ ಇನ್ನೊಮ್ಮೆ ಅಲ್ಲಗಳೆಯಲಾಗುತ್ತದೆ.
(34ಕ) ಅವನು ಪತ್ತೇದಾರಿ ಕತೆ ಓದುತ್ತಾನೆ. (34ಖ) ಅವನು ಪತ್ತೇದಾರಿ ಕತೆ ಓದುವುದಿಲ್ಲ. (34ಗ) ಅವನು ಪತ್ತೇದಾರಿ ಕತೆ ಓದುವುದಿಲ್ಲವೆಂದಿಲ್ಲ.
(34ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (34ಖ)ದಲ್ಲಿ ಅಲ್ಲಗಳೆಯ ಲಾಗಿದೆ. ಇದನ್ನೇ (34ಗ)ದಲ್ಲಿ ಮತ್ತೊಮ್ಮೆ ಅಲ್ಲಗಳೆಯಲಾಗಿದೆ. ಈ ರೀತಿ ಎರಡನೆಯ ಬಾರಿ ಅಲ್ಲಗಳೆದಿರುವ ವಾಕ್ಯ ‘ಘಟನೆಯೊಂದು ನಡೆಯುತ್ತದೆ’ ಎಂಬುದಾಗಿ ‘ಅಲ್ಲಗಳೆಯದ’ ಅರ್ಥವನ್ನು ಕೊಡುವುದಾದರೂ, ಅದಕ್ಕೂ ನೇರ ವಾಗಿ ಒಂದು ಘಟನೆ ನಡೆದಿದೆ ಎಂಬುದನ್ನು ತಿಳಿಸುವ ವಾಕ್ಯಕ್ಕೂ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು.
ಮೇಲೆ (34ಗ) ವಾಕ್ಯದಲ್ಲಿ ಎರಡನೆಯ ಬಾರಿಗೆ ಬಂದಿರುವ ಇಲ್ಲ ಪದ ಮೊದಲನೆಯ ಬಾರಿಗೆ ಬಂದಿರುವ ಅದೇ ಪದವನ್ನು ಹೊಡೆದು ಹಾಕಿರುವು ದೇನೋ ನಿಜ. ಆದರೂ ಆ ವಾಕ್ಯಕ್ಕೆ (34ಕ) ವಾಕ್ಯದ ಅರ್ಥಕ್ಕಿಂತ ಸ್ವಲ್ಪ ಮಟ್ಟಿಗೆ ಭಿನ್ನವಾದ ಅರ್ಥವಿದೆ. ಅದು ಸೂಚಿಸುವ ಘಟನೆ ಅಪರೂಪವಾಗಿ ಮಾತ್ರ ನಡೆಯುತ್ತದೆ ಎಂಬುದಾಗಿ ಒಂದು ವಿಶಿಷ್ಟವಾದ ಅರ್ಥ ಆ ವಾಕ್ಯಕ್ಕೆ ಸೇರಿಕೊಳ್ಳುತ್ತದೆ.
9.3.5 ಅಳತೆಯನ್ನು ಅಲ್ಲಗಳೆಯುವುದು
ಒಂದು ವಸ್ತುವಿನ ಅಳತೆ ಇಲ್ಲವೇ ಪರಿಮಾಣವನ್ನು ತಿಳಿಸುವ ವಾಕ್ಯವನ್ನು ಅಲ್ಲಗಳೆದಾಗ, ಸಾಮಾನ್ಯವಾಗಿ ಆ ವಸ್ತುವು ಆ ವಾಕ್ಯದಲ್ಲಿ ಸೂಚಿಸಿದ ಪರಿಮಾಣಕ್ಕಿಂತ ಕಡಿಮೆ ಪರಿಮಾಣದಲ್ಲಿದೆಯೆಂಬ ಅರ್ಥ ಬರುತ್ತದೆ. ಆದರೆ ಇಂತಹ ವಾಕ್ಯಗಳನ್ನು ‘ಸಂಬಂಧಿಸುವ’ ರೂಪದಲ್ಲಿ ಬಳಸಿದೆವಾದರೆ ಈ ರೀತಿ ‘ಕಡಿಮೆ’ ಎಂಬ ಅರ್ಥ ಬರುವುದಿಲ್ಲ. (35ಕ) ಈ ಡಬ್ಬದಲ್ಲಿ ನಾಲ್ಕು ಸೇರು ಅಕ್ಕಿ ಇದೆ. (35ಖ) ಈ ಡಬ್ಬದಲ್ಲಿ ನಾಲ್ಕು ಸೇರು ಅಕ್ಕಿ ಇಲ್ಲ. (36ಕ) ಈ ಡಬ್ಬದಲ್ಲಿ ಅಕ್ಕಿಯಿರುವುದು ನಾಲ್ಕು ಸೇರು. (36ಖ) ಈ ಡಬ್ಬದಲ್ಲಿ ಅಕ್ಕಿಯಿರುವುದು ನಾಲ್ಕು ಸೇರಲ್ಲ. (35ಖ) ವಾಕ್ಯಕ್ಕೆ ಸಾಮಾನ್ಯವಾಗಿ ಈ ಡಬ್ಬಿಯಲ್ಲಿ ನಾಲ್ಕು ಸೇರಿಗಿಂತ ಕಡಿಮೆ ಅಕ್ಕಿ ಇದೆ ಎಂಬ ಅರ್ಥ ಬರುತ್ತದೆ. ಆದರೆ (36ಖ) ವಾಕ್ಯಕ್ಕೆ ಈ ರೀತಿ ಕಡಿಮೆ ಎಂಬ ಅರ್ಥ ಬರುವುದಿಲ್ಲ ಎಂಬುದನ್ನು ಗಮನಿಸಬಹುದು. ಡಬ್ಬಿಯಲ್ಲಿ ನಾಲ್ಕು ಸೇರಿಗಿಂತ ಜಾಸ್ತಿ ಅಕ್ಕಿಯಿದೆಯಾದಲ್ಲಿ (36ಖ)ವನ್ನು ಬಳಸಲು ಸಾಧ್ಯವಿದೆ, ಆದರೆ (35ಖ)ವನ್ನು ಬಳಸಲು ಸಾಧ್ಯವಾಗದು. ಇಂತಹ ಅಲ್ಲಗಳೆಯುವ ವಾಕ್ಯಗಳ ಬಳಕೆಗೆ ಬೇರೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ. (37ಕ) ಈ ಗೋಡೆ ಐದಡಿ ಎತ್ತರ ಇಲ್ಲ. (37ಖ) ಈ ಗೋಡೆಯ ಎತ್ತರ ಐದಡಿ ಅಲ್ಲ. (38ಕ) ಆಕೆ ಮೂರು ಮೈಲು ನಡೆಯಲಿಲ್ಲ. (38ಖ) ಆಕೆ ನಡೆದುದು ಮೂರು ಮೈಲಲ್ಲ.
9.3.6 ಕೆಲವು ವಿಶಿಷ್ಟ ಪದಗಳ ಬಳಕೆ
ಅಲ್ಲಗಳೆಯುವ ವಾಕ್ಯಗಳಲ್ಲಿ ಮಾತ್ರವೇ ಬಳಕೆಯಾಗಬಲ್ಲ ಕೆಲವು ವಿಶಿಷ್ಟವಾದ ಪದ ಮತ್ತು ಪದಕಂತೆಗಳು ಕನ್ನಡದಲ್ಲಿವೆ. ಇವುಗಳಲ್ಲಿ ಕೆಲವನ್ನು ಕೇಳ್ವಿಗಳಲ್ಲೂ ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಬಳಸಬಹುದು 10.4.7 ನೋಡಿ). ಉದಾಹರಣೆಗಾಗಿ, ಗೊಡವೆ ಪದವನ್ನು ಅಲ್ಲಗಳೆಯುವ ವಾಕ್ಯಗಳಲ್ಲಿ ಇಲ್ಲವೇ ಕೇಳ್ವಿಗಳಲ್ಲಿ ಬಳಸುತ್ತೇವಲ್ಲದೆ, ಇತರ ವಾಕ್ಯಗಳಲ್ಲಿ ಬಳಸುವುದಿಲ್ಲ. (39ಕ) ಆಕೆ ಯಾರ ಗೊಡವೆಗೂ ಹೋಗುವುದಿಲ್ಲ. (39ಖ) ಆಕೆ ರಾಜುವಿನ ಗೊಡವೆಗೆ ಹೋದುದು ಯಾಕೆ? ಯಾರು, ಏನು, ಎಲ್ಲಿ ಮೊದಲಾದ ಸವ್ರಪದಗಳಿಗೆ ಊ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಯಾರೂ, ಏನೂ, ಎಲ್ಲೂ ಮೊದಲಾದ ಅನಿಶ್ಚಯಾರ್ಥದ ಪದಗಳೂ ಅಲ್ಲಗಳೆಯುವ ವಾಕ್ಯಗಳಲ್ಲಿ ಇಲ್ಲವೇ ಕೇಳ್ವಿಗಳಲ್ಲಿ ಬರಬಲ್ಲುವಲ್ಲದೆ ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಇಲ್ಲವೇ ಸಂಬಂಧಿಸುವ ವಾಕ್ಯಗಳಲ್ಲಿ ಬರ ಲಾರವು. (40ಕ) ರಾಜುವಿನ ಪಾಟ್ರಿಗೆ ಯಾರೂ ಬರಲಿಲ್ಲ. (40ಖ) ರಾಜುವಿನ ಪಾಟ್ರಿಗೆ ಯಾರೂ ಬರಲಿಲ್ಲವೇ? ತಿಳಿಸುವ ವಾಕ್ಯಗಳಲ್ಲಿ ಅನಿಶ್ಚಯತೆಯಿದೆಯಾದರೆ ಮಾತ್ರ ಅಂತಹ ವಾಕ್ಯಗಳಲ್ಲಿ ಈ ಪದಗಳನ್ನು ಬಳಸಲು ಸಾಧ್ಯ. (40ಗ) ರಾಜುವಿನ ಪಾಟ್ರಿಗೆ ಯಾರೂ ಹೋಗಬಹುದು. ಇಂತಹ ಅನಿಶ್ಚಯಾರ್ಥಕ ಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವ ನಿಬ್ರಂಧಗಳ ಕುರಿತಾಗಿ ಜಾಸ್ತಿ ವಿವರಗಳಿಗೆ ಭಟ್ 2003: 167) ನೋಡಿ. ಇದೇ ರೀತಿಯಲ್ಲಿ ಅಲ್ಲಗಳೆಯುವ ವಾಕ್ಯಗಳಲ್ಲಿ ಬಳಕೆಯಾಗದಂತಹ (ಮತ್ತು ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಬಳಕೆಯಾಗುವ) ಬೇರೆ ಕೆಲವು ವಿಶಿಷ್ಟವಾದ ಪದ ಮತ್ತು ಪದಕಂತೆಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಆಗಲೇ ಪದವನ್ನು ಬಳಸಿರುವ ಕೆಳಗಿನ ವಾಕ್ಯವನ್ನು ಅಲ್ಲಗಳೆಯಲು ಸಾಧ್ಯ ವಾಗದು. (41) ಅವಳು ಆಗಲೇ ಬಂದಿದ್ದಾಳೆ. ಇದಲ್ಲದೆ, ಅಲ್ಲಗಳೆಯುವ ವಾಕ್ಯಗಳಲ್ಲಿ ಬಹಳ ಪದದ ಬದಲು ಸಾಮಾನ್ಯ ವಾಗಿ ಜಾಸ್ತಿ ಇಲ್ಲವೇ ಅಷ್ಟೊಂದು ಎಂಬುದನ್ನು ಬಳಸುವುದು ರೂಢಿ. (42ಕ) ಅವಳ ಮದುವೆಗೆ ಬಹಳ ಜನ ಬಂದಿದ್ದರು. (42ಖ) ಅವಳ ಮದುವೆಗೆ ಜಾಸ್ತಿ ಜನ ಬಂದಿರಲಿಲ್ಲ. (43ಕ) ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು. (43ಖ) ಚುನಾವಣೆಯ ಸಭೆಯಲ್ಲಿ ಅಷ್ಟೊಂದು ಜನ ಸೇರಿರಲಿಲ್ಲ.
9.4 ಸಾರಾಂಶ
ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದಕ್ಕೂ ಅದರ ಒಂದು ಘಟಕಕ್ಕೂ ನಡುವೆ ಸಂಬಂಧವಿದೆ ಎಂಬುದಾಗಿ ಸೂಚಿಸಲು ಸಾಧ್ಯವಿದೆ. ಇದಕ್ಕಾಗಿ ಸಂಬಂಧಿಸುವ ವಾಕ್ಯಗಳ ಬಳಕೆಯಾಗುತ್ತದೆ. ಇದೇ ರೀತಿಯಲ್ಲಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದರ ನಡೆಯುವಿಕೆ ಇಲ್ಲವೇ ಇರುವಿಕೆಯನ್ನು ಅಲ್ಲಗಳೆಯಲು ಸಾಧ್ಯವಿದೆ. ಇದಕ್ಕಾಗಿ ಅಲ್ಲಗಳೆಯುವ ವಾಕ್ಯಗಳ ಬಳಕೆಯಾಗುತ್ತದೆ. ಈ ಎರಡು ರೀತಿಯ ವಾಕ್ಯಗಳನ್ನೂ ತಿಳಿಸುವ ವಾಕ್ಯಗಳಲ್ಲೇನೇ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ತಯಾರಿಸಿಕೊಳ್ಳಲು ಸಾಧ್ಯವಿದೆ. English → | Eke →
ಅಧ್ಯಾಯ ಹತ್ತು — ಮಾತಿನ ಕೆಲಸಗಳು
10.1 ಪೀಠಿಕೆ
ಮಾತಿನ ಮೂಲಕ ನಾವು ಹಲವಾರು ಕೆಲಸಗಳನ್ನು ನಡೆಸಬಲ್ಲೆವು. ಯಾವುದಾದ ರೊಂದು ಸಂಗತಿಯನ್ನು ಇನ್ನೊಬ್ಬರಿಗೆ ತಿಳಿಸುವುದು ಇವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಕೆಲಸ. ಇದಲ್ಲದೆ, ತಿಳಿಯದಿರುವ ಸಂಗತಿಯನ್ನು ಬೇರೆಯವ ರಿಂದ ತಿಳಿದುಕೊಳ್ಳುವುದಕ್ಕಾಗಿ ಕೇಳ್ವಿಯೊಂದನ್ನು ಬಳಸುವುದು, ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸಿಕೊಳ್ಳುವುದಕ್ಕಾಗಿ ಅವರನ್ನು ಬೇಡಿಕೊಳ್ಳುವುದು ಇಲ್ಲವೇ ಅವರಿಗೆ ಅಪ್ಪಣೆಮಾಡುವುದು, ಮಾಡಬಾರದ ಕೆಲಸವನ್ನು ಮಾಡದಂತೆ ತಡೆಯುವುದು, ಮೊದಲಾದ ಬೇರೆಯೂ ಹಲವಾರು ರೀತಿಯ ಕೆಲಸಗಳನ್ನು ನಾವು ಮಾತಿನ ಮೂಲಕ ನಡೆಸಬಲ್ಲೆವು.
ಈ ಬೇರೆ ಬೇರೆ ರೀತಿಯ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಕನ್ನಡ ದಲ್ಲಿ ಬೇರೆ ಬೇರೆ ರೀತಿಯ ವಾಕ್ಯರಚನೆಯ ವಿಧಾನಗಳು ಬಳಕೆಯಲ್ಲಿವೆ. ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿಯೇ ಬಳಸಬಹುದಾದಂತಹ ಕೆಲವು ಪದ ಗಳು ಕನ್ನಡದಲ್ಲಿದ್ದು, ಅವನ್ನು ಬಳಸಿ ರಚಿಸಿದ ಹೊರವಾಕ್ಯಗಳೊಳಗೆ ವಾಕ್ಯ ವೊಂದನ್ನಿರಿಸಿ ಹೇಳುವುದು ಇಂತಹ ವಿಧಾನಗಳಲ್ಲೊಂದು.
(1ಕ) ದೇವರು ನಿಮಗೆ ಒಳ್ಳೆಯದು ಮಾಡಲೆಂದು ಹರಸುತ್ತೇನೆ. (1ಖ) ಸಾಲವನ್ನು ತೀರಿಸುತ್ತೇನೆಂದು ನಾಳೆಯೇ ಮಾಡುತ್ತೇನೆ. ಕಡಿಮೆಗೆ ನೂರಾದರೂ ಕೊಡಬೇಕೆಂದು ನನ್ನ ಪ್ರಾರ್ಥನೆ.
(1ಘ) ಈ ಕಾರ್ಯಕ್ರಮದಲ್ಲಿ ಸಹಕರಿಸಿದವರೆಲ್ಲರಿಗೂ ನನ್ನ ಕೃತಜ್ಞತೆ ಗಳು. (1ಙ) ಅಧ್ಯಕ್ಷರು ಬಂದಿದ್ದಾರೇನ್ರಿ? (1ಕ) ವಾಕ್ಯದಲ್ಲಿ ‘ಹರಸುವ’ ಕೆಲಸವನ್ನು ನಡೆಸುವುದಕ್ಕಾಗಿ ಹರಸು ಕ್ರಿಯಾಪದ ಹೊರವಾಕ್ಯದಲ್ಲಿ ಬಂದಿದ್ದು, ‘ಏನೆಂದು ಹರಸಿದ್ದು’ ಎಂಬುದನ್ನು ಅದರ ಒಳ ವಾಕ್ಯವಾಗಿ ಬಂದಿರುವ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂಬುದು ತಿಳಿಸುತ್ತದೆ. ಇದೇ ರೀತಿಯಲ್ಲಿ (1ಖ)ದಲ್ಲಿ ಆಣೆ ಮಾಡಿ ಹೇಳುತ್ತೇನೆ ಎಂಬ ಹೊರವಾಕ್ಯವೂ, (1ಗ)ದಲ್ಲಿ ನನ್ನಪ್ರಾರ್ಥನೆ ಎಂಬ ಹೊರವಾಕ್ಯವೂ, (1ಘ) ದಲ್ಲಿ ನನ್ನ ಕೃತಜ್ಞತೆಗಳು ಎಂಬ ಹೊರವಾಕ್ಯವೂ ಮತ್ತು (1ಙ)ದಲ್ಲಿ ಏನ್ರಿ? ಎಂಬ ಹೊರವಾಕ್ಯವೂ ಅವು ನಡೆಸಬಲ್ಲ ಕೆಲಸಗಳನ್ನು ಸೂಚಿಸುತ್ತವೆ. ವಾಕ್ಯಗಳಲ್ಲೇನೇ ಕೆಲವು ಬದಲಾವಣೆಗಳನ್ನು ಮಾಡಿ ಅಂತಹ ಬದಲಾ ಗಿರುವ ವಾಕ್ಯಗಳ ಮೂಲಕ ಮಾತಿನ ಕೆಲಸಗಳನ್ನು ನಡೆಸುವುದು ಇನ್ನೊಂದು ವಿಧಾನ. (2ಕ) ಮಗು ಕುಚ್ರಿಯಲ್ಲಿ ಕುಳಿತಿದೆ. (2ಖ) ಮಗು ಕುಚ್ರಿಯಲ್ಲಿ ಕುಳಿತಿದೆಯೇ? (2ಗ) ಮಗು ಎಲ್ಲಿ ಕುಳಿತಿದೆ? (2ಘ) ಮಗು ಕುಚ್ರಿಯಲ್ಲಿ ಕುಳಿತಿರಲಿ. (2ಙ) ಮಗೂ, ಕುಚ್ರಿಯಲ್ಲಿ ಕುಳಿತುಕೊ. (2ಕ)ದಲ್ಲಿ ತಿಳಿಸುವ ಕೆಲಸವನ್ನು ನಡೆಸುವ ವಾಕ್ಯವೊಂದು ಬಂದಿದ್ದು, (2ಖ- ಙ)ಗಳಲ್ಲಿ ಆ ವಾಕ್ಯದಲ್ಲೇನೇ ಬದಲಾವಣೆಗಳನ್ನು ಮಾಡುವುದರ ಮೂಲಕ ಅದು ನಿಜವೇ ಎಂದು ಕೇಳುವುದು, ಅದಕ್ಕೆ ಒಪ್ಪಿಗೆ ಕೊಡುವುದು, ಮೊದಲಾದ ಬೇರೆ ಕೆಲವು ಕೆಲಸಗಳಲ್ಲಿ ತೊಡಗಿಸಲು ಸಾಧ್ಯವಾಗುವಂತೆ ಮಾಡಲಾಗಿದೆ. ಇದಲ್ಲದೆ, ವಾಕ್ಯವೊಂದನ್ನು ಯಾವ ರೀತಿಯಲ್ಲಿ ನುಡಿಯಲಾಗಿದೆ ಎಂಬು ದರ ಮೇಲೂ ಅದು ಎಂತಹ ಕಾರ್ಯವನ್ನು ನಡೆಸಬಲ್ಲುದು ಎಂಬ ವಿಷಯ ಅವಲಂಬಿಸಿರುತ್ತದೆ. ಉದಾಹರಣೆಗಾಗಿ, ಒಂದು ವಾಕ್ಯವನ್ನು ಎತ್ತರದ ಧ್ವನಿ ಯಲ್ಲಿ ಹೇಳುವುದಕ್ಕೂ ಮತ್ತು ತಗ್ಗಿನ ಧ್ವನಿಯಲ್ಲಿ ಹೇಳುವುದಕ್ಕೂ ನಡುವೆ ಅವುಗಳ ಮೂಲಕ ನಡೆಸಿಕೊಳ್ಳಬಹುದಾದ ಕೆಲಸಗಳಲ್ಲಿ ವ್ಯತ್ಯಾಸವಿದೆ. ಎತ್ತರದ ಧ್ವನಿಯಲ್ಲಿ ಹೇಳಿ ಕೇಳುಗನನ್ನು ಹೆದರಿಸಬಹುದು ಮತ್ತು ತಗ್ಗಿನ ಧ್ವನಿಯಲ್ಲಿ ಹೇಳಿ ಆತನನ್ನು ಸಂತೈಸಬಹುದು.
ಒಂದು ವಾಕ್ಯವನ್ನು ಯಾರು ಬಳಸಿದ್ದಾರೆ, ಮತ್ತು ಯಾರನ್ನು ಉದ್ದೇಶಿಸಿ ಅದನ್ನು ಬಳಸಲಾಗಿದೆ ಎಂಬುದರ ಮೇಲೂ ವಾಕ್ಯವೊಂದು ಎಂತಹ ಕೆಲಸವನ್ನು ನಡೆಸಬಲ್ಲುದು ಎಂಬುದು ಅವಲಂಬಿಸಿರುತ್ತದೆ. ಉದಾಹರಣೆಗಾಗಿ, ಮಾವಿನ ಮರದ ಹತ್ತಿರ ಹೋಗಬೇಡ ಎಂಬ ವಾಕ್ಯವನ್ನು ಒಬ್ಬ ಹುಡುಗ ಇನ್ನೊಬ್ಬ ಹುಡುಗನ ಹತ್ತಿರ ಹೇಳಿರುವನಾದರೆ, ಅದು ಕಾವಲುಗಾರ ನೋಡುತ್ತಿದ್ದಾನೆ, ಹೊಡೆಯಬಹುದು ಎಂಬುದಾಗಿ ‘ಎಚ್ಚರಿಸುವ’ ಕೆಲಸ ಮಾಡಬಹುದು. ಆದರೆ ಅದೇ ವಾಕ್ಯವನ್ನು ಒಬ್ಬ ಹುಡುಗನ ಹತ್ತಿರ ಒಬ್ಬ ಕಾವಲುಗಾರ ಹೇಳಿರುವ ನಾದರೆ, ಅದು ಮರದ ಹತ್ತಿರ ಆ ಹುಡುಗ ಹೋಗದಂತೆ ‘ತಡೆಹಿಡಿಯುವ’ ಕೆಲಸವನ್ನು ಮಾಡಬಹುದು. ವಾಕ್ಯವೊಂದನ್ನು ಬಳಸಿರುವ ಸಂದಭ್ರಕ್ಕನುಸಾರವಾಗಿಯೂ ಅದು ನಡೆಸ ಬಲ್ಲ ಕೆಲಸಗಳು ಬೇರೆ ಬೇರಾಗಿರಲು ಸಾಧ್ಯವಿದೆ. ಉದಾಹರಣೆಗಾಗಿ, ಕಿಟಿಕೆ ತೆರೆದಿದೆಯೋ ಎಂಬ ವಾಕ್ಯವನ್ನು ಚಳಿಗಾಳಿ ಬೀಸುತ್ತಿರುವ ಸಂದಭ್ರದಲ್ಲಿ ಒಬ್ಬ ವ್ಯಕ್ತಿ ಹೇಳಿರುವನಾದರೆ, ‘ತೆರೆದಿದ್ದರೆ ಅದನ್ನು ಮುಚ್ಚಬೇಕು’ ಎಂಬ ಅರ್ಥ ಬರುತ್ತದೆ, ಆದರೆ ಅದೇ ವಾಕ್ಯವನ್ನು ಜಾಸ್ತಿ ಸೆಖೆಯಿರುವ ಸಂದಭ್ರದಲ್ಲಿ ಹೇಳಿರುವನಾದರೆ, ‘ತೆರೆದಿಲ್ಲವಾದಲ್ಲಿ ತೆರೆಯಬೇಕು’ ಎಂಬ ಅರ್ಥ ಬರುತ್ತದೆ. ಈ ರೀತಿ ವಾಕ್ಯವೊಂದರ ಮೂಲಕ ಎಂತಹ ಕೆಲಸಗಳನ್ನು ನಡೆಸಲು ಸಾಧ್ಯ ಎಂಬುದು ಬೇರೆ ಬೇರೆ ವಿಷಯಗಳನ್ನು ಅವಲಂಬಿಸಿದ್ದು, ಅವುಗಳಲ್ಲಿ ಕೆಲಸ ಗಳನ್ನು ನಡೆಸಿಕೊಡುವ ಹೊರವಾಕ್ಯಗಳ ಬಳಕೆ ಮತ್ತು ವಾಕ್ಯದಲ್ಲೇನೇ ನಡೆಸುವ ಬದಲಾವಣೆಗಳ ಬಳಕೆ ಎಂಬ ಮೊದಲನೆಯ ಎರಡು ವಿಷಯಗಳನ್ನು ಮಾತ್ರ ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಯಾಕೆಂದರೆ, ಈ ಎರಡು ವಿಷಯಗಳಲ್ಲಿ ಮಾತ್ರ ವಾಕ್ಯದ ಒಳರಚನೆಯಲ್ಲಿ ವ್ಯತ್ಯಾಸಗಳು ತೋರಿಬರುತ್ತವೆ.
ಮಾತಿನ ಕೆಲಸಗಳಲ್ಲಿ ಹೆಚ್ಚಿನವೂ ಪ್ರಾಮುಖ್ಯವಾಗಿ ಮಾತಿನಲ್ಲಿ ಬಳಕೆ ಯಾಗುವ ವಾಕ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬರಹದಲ್ಲಿ ಬರುವ ವಾಕ್ಯಗಳಲ್ಲಿ ಇಂತಹ ಕೆಲಸಗಳಲ್ಲಿ ಕೆಲವು ಮಾತ್ರ ಕಾಣಿಸಿಕೊಳ್ಳುತ್ತವೆ. ಈ ಪುಸ್ತಕದಲ್ಲಿ ಪ್ರಾಮುಖ್ಯವಾಗಿ ಬರಹದ ಕನ್ನಡದಲ್ಲಿ ಬರುವ ವಾಕ್ಯಗಳ ಒಳರಚನೆಯನ್ನು ವಿವರಿಸಲಾಗಿದೆಯಾದ ಕಾರಣ, ಮಾತಿನ ಕೆಲಸಗಳಲ್ಲಿ ಕೆಲವನ್ನು ಮಾತ್ರವೇ ಇಲ್ಲಿ ವಿವರಿಸುವ ಅವಶ್ಯಕತೆ ಕಂಡುಬಂದಿದೆ.
10.2 ನಡೆಸಿಕೊಡುವ ಪದಗಳು
ಕನ್ನಡದಲ್ಲಿ ಸೂಚಿಸು, ಕ್ಷಮಿಸು, ಆಶೀವ್ರದಿಸು, ಹಾರೈಸು, ಸ್ವಾಗತಿಸು, ಮಾತುಕೊಡು ಮೊದಲಾದ ಕೆಲವು ಕ್ರಿಯಾಪದಗಳನ್ನಾಗಲಿ ಇಲ್ಲವೇ ಸುಳ್ಳು, ಅಪ್ಪಣೆ, ಕೃತಜ್ಞತೆ, ಸ್ವಾಗತ, ಮೊದಲಾದ ಕೆಲವು ನಾಮಪದಗಳನ್ನಾಗಲಿ ಬಳಸಿ, ಅವುಗಳ ಮೂಲಕ ಕೆಲವು ಮಾತಿನ ಕೆಲಸಗಳನ್ನು ನಡೆಸಲು ಸಾಧ್ಯವಿದೆ. (3ಕ) ಅಧ್ಯಕ್ಷ ಸೂಚಿಸುತ್ತೇನೆ. ಸ್ಥಾನಕ್ಕೆ ನಾನು ವಿಶ್ವೇಶ್ವರನ ಹೆಸರನ್ನು (3ಖ) ಹಣವನ್ನು ಹದಿನೈದು ದಿವಸಗಳೊಳಗೆ ಹಿಂದಿರುಗಿಸುತ್ತೇನೆಂದು ಮಾತುಕೊಡುತ್ತೇನೆ. (4ಕ) ನಿಮಗೆಲ್ಲರಿಗೂ ಸ್ವಾಗತ. (4ಖ) ನೀವು ನಿನ್ನೆ ಇಲ್ಲಿಗೆ ಬಂದಿರುವುದು ಸುಳ್ಳು. (3ಕ)ದಲ್ಲಿ ‘ಸೂಚಿಸುವ’ ಕೆಲಸವನ್ನು ಸೂಚಿಸು ಕ್ರಿಯಾಪದವನ್ನು ಬಳಸುವುದರ ಮೂಲಕವೂ ಮತ್ತು (3ಖ)ದಲ್ಲಿ ಮಾತುಕೊಡುವ ಕೆಲಸವನ್ನು ಮಾತುಕೊಡು ಕ್ರಿಯಾಪದವನ್ನು ಬಳಸುವುದರ ಮೂಲಕವೂ ನಡೆಸಲು ಸಾಧ್ಯವಾಗಿದೆ. ಇದಕ್ಕೆ ಬದಲು (4ಕ-ಖ) ಗಳಲ್ಲಿ ಸ್ವಾಗತ ಮತ್ತು ಸುಳ್ಳು ಎಂಬ ಎರಡು ನಾಮಪದ ಗಳನ್ನು ಬಳಸಿ ಸ್ವಾಗತಿಸುವ ಮತ್ತು ಅಲ್ಲಗಳೆಯುವ ಕೆಲಸಗಳನ್ನು ನಡೆಸಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಕ್ರಿಯಾಪದಗಳ ಮೂಲಕ ಮಾತಿನ ಕೆಲಸಗಳನ್ನು ನಡೆಸ ಬೇಕಿದ್ದಲ್ಲಿ ಅವನ್ನು ಆಡುಗನೇ ನಡೆಸುವ ಹಾಗೆ ಮತ್ತು ಅವು ಮುಂದಿನ ಸಮಯದಲ್ಲಿ ನಡೆಯುವ ಹಾಗೆ ಹೇಳುವುದು ಅವಶ್ಯ. ಇತರರು ನಡೆಸುವ ಹಾಗೆ ಇಲ್ಲವೇ ಹಿಂದಿನ ಸಮಯದಲ್ಲಿ ನಡೆದಿರುವ ಹಾಗೆ ಹೇಳಿದಲ್ಲಿ ಅವು ಮಾತಿನ ಕೆಲಸಗಳನ್ನು ನಡೆಸುವ ಬದಲು ಅಂತಹ ಕೆಲಸಗಳು ನಡೆದಿವೆ ಅಥವಾ ನಡೆಯ ಲಿವೆ ಎಂಬುದಾಗಿ ತಿಳಿಸುವುದನ್ನು ಮಾತ್ರ ಮಾಡುತ್ತವೆ. (5ಕ) ಅಧ್ಯಕ್ಷ ಸ್ಥಾನಕ್ಕೆ ನಾನು ವಿಶ್ವೇಶ್ವರನ ಹೆಸರನ್ನು ಸೂಚಿಸಿದೆ. (5ಖ) ಹಣವನ್ನು ಹದಿನೈದು ದಿವಸಗಳೊಳಗೆ ಹಿಂದಿರುಗಿಸುತ್ತೇನೆಂದು ರಾಜು ಮಾತು ಕೊಡುತ್ತಾನೆ. (5ಕ) ವಾಕ್ಯದಲ್ಲಿ ಸೂಚಿಸು ಕ್ರಿಯಾಪದ ಹಿಂದಿನ ಕಾಲದಲ್ಲಿ ನಡೆದ ಒಂದು ಕ್ರಿಯೆಯನ್ನು ತಿಳಿಸುತ್ತದಲ್ಲದೆ ಸೂಚಿಸುವ ಕೆಲಸವನ್ನು ನಡೆಸುವುದಿಲ್ಲ. ಇದೇ ರೀತಿಯಲ್ಲಿ (5ಖ) ವಾಕ್ಯದಲ್ಲಿ ಮಾತು ಕೊಡುತ್ತೇನೆ ಎಂಬುದು ರಾಜು ಮುಂದಿನ ಕಾಲದಲ್ಲಿ ನಡೆಸಬಹುದಾದ ಕೆಲಸವೆಂತಹದು ಎಂಬುದನ್ನು ತಿಳಿಸುತ್ತ ದಲ್ಲದೆ ಮಾತು ಕೊಡುವ ಕೆಲಸವನ್ನು ನಡೆಸುವುದಿಲ್ಲ.
10.2.1 ಕೆಲವು ಅಪವಾದಗಳು
ಮೇಲಿನ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗಾಗಿ, ಮಾತಿನ ಕೆಲಸವೊಂದನ್ನು ನೇರವಾಗಿ ಸೂಚಿಸುವ ಬದಲು ಅದನ್ನು ನಡೆಸುವ ಬಯಕೆ ಯನ್ನು ಸೂಚಿಸಿದಾಗಲೂ ಅದು ನಡೆದು ಹೋಗುವ ಸಾಧ್ಯತೆಯಿದೆ. (6ಕ) ನಿಮ್ಮೆಲ್ಲರಿಗೂ ನಾನು ಕೃತಜ್ಞತೆಗಳನ್ನು ಅಪ್ರಿಸಬಯಸುತ್ತೇನೆ. (6ಖ) ಈ ಸಮ್ಮೇಳನವನ್ನು ಉದ್ಘಾಟಿಸಲು ನನಗೆ ಬಹಳ ಸಂತೋಷ ವಾಗುತ್ತದೆ. ಮಾತಿನ ಕೆಲಸವೊಂದನ್ನು ನಡೆಸುವ ‘ಬಯಕೆ’ಯನ್ನು ಮಾತ್ರವೇ ಸೂಚಿಸುವ (6ಕ) ವಾಕ್ಯ ಮತ್ತು ಅಂತಹ ಕೆಲಸವನ್ನು ನಡೆಸುವಲ್ಲಿ ದೊರಕುವ ‘ಸಂತೋಷ’ ವನ್ನು ಮಾತ್ರವೇ ಸೂಚಿಸುವ (6ಖ) ವಾಕ್ಯ ಇವೆರಡೂ ಅವು ನಡೆಸಬೇಕಾ ಗಿರುವ ‘ಕೃತಜ್ಞತೆಗಳನ್ನು ಅಪ್ರಿಸುವುದು’ ಮತ್ತು ‘ಉದ್ಘಾಟಿಸುವುದು’ ಎಂಬ ಎರಡು ಮಾತಿನ ಕೆಲಸಗಳನ್ನು ನಡೆಸಿಕೊಡಲು ಶಕ್ತವಾಗಿವೆ ಎಂಬುದನ್ನು ಗಮನಿಸಬಹುದು. ಕೆಲವು ರೀತಿಯ ಕ್ರಿಯಾಪದಗಳನ್ನು ಬಳಸದಿದ್ದರೂ ಅವು ನಡೆಸಬಲ್ಲ ಮಾತಿನ ಕೆಲಸ ಸಂದಭ್ರದ ಬಲದಿಂದ ನಡೆದು ಹೋಗಲು ಸಾಧ್ಯವಿದೆ. ನಾಲ್ಕು ಗಂಟೆಗೆ ಬರುತ್ತೇನೆಂದು ಮಾತುಕೊಡುತ್ತೇನೆ. (7ಖ) ನಾಲ್ಕು ಗಂಟೆಗೆ ಬರುತ್ತೇನೆ. (8ಕ) ದೀರ್ಘಸುಮಂಗಲಿಯಾಗೆಂದು ಆಶೀವ್ರದಿಸುತ್ತೇನೆ. (8ಖ) ದೀರ್ಘಸುಮಂಗಲಿಯಾಗು. ಮಾತುಕೊಡುತ್ತೇನೆ ಕ್ರಿಯಾರೂಪವನ್ನು ಬಳಸಿಲ್ಲವಾದರೂ ಅದಕ್ಕೆ ‘ಮಾತುಕೊಡುವ’ ಕೆಲಸವನ್ನು ನಡೆಸುವ ಶಕ್ತಿಯಿದೆ. (8ಖ) ವಾಕ್ಯದಲ್ಲಿ ಆಶೀವ್ರದಿಸುತ್ತೇನೆ ಎಂಬ ಇದೇ ರೀತಿಯಲ್ಲಿ ಕ್ರಿಯಾರೂಪವನ್ನು ಬಳಸಿಲ್ಲ ವಾದರೂ ಅದಕ್ಕೆ ‘ಆಶೀವ್ರದಿಸುವ’ ಕೆಲಸವನ್ನು ನಡೆಸುವ ಶಕ್ತಿಯಿದೆ. ಆದರೆ (7-8ಕ) ವಾಕ್ಯಗಳಲ್ಲಿ ಕಾಣಿಸಿದ ಹಾಗೆ ಮಾತಿನ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಬಳಸಿದಾಗ ಅದು ಸಾಧಿಸಬೇಕಾಗಿರುವ ಕೆಲಸದ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ. ಆದರೆ, ಉದ್ಘಾಟಿಸು, ಆಣೆಯಿಡು, ಕ್ಷಮಿಸು, ಸ್ವಾಗತಿಸು ಮೊದಲಾದ ಬೇರೆ ಕೆಲವು ಕ್ರಿಯಾಪದಗಳನ್ನು (ಇಲ್ಲವೇ ಅವಕ್ಕೆ ಸಮಾನವಾದ ನಾಮಪದ ಗಳನ್ನು) ವಾಕ್ಯದಲ್ಲಿ ಬಳಸಿದರೇನೇ ಅವು ನಡೆಸಬಲ್ಲ ಮಾತಿನ ಕೆಲಸಗಳು ನಡೆಯಬಲ್ಲುವು ಎಂಬ ನಿಯಮವಿರುವಂತೆ ತೋರುತ್ತದೆ.
ಇದಲ್ಲದೆ, ಕೆಲವು ಸಂದಭ್ರಗಳಲ್ಲಿ ಮಾತಿನ ಕೆಲಸಗಳನ್ನು ನಡೆಸಬಲ್ಲ ಈ ಕ್ರಿಯಾಪದಗಳು ಸರಿಯಾದ ಕ್ರಿಯಾರೂಪದಲ್ಲೇ ಬಂದಿವೆಯಾದರೂ, ಅವು ಸೂಚಿಸುವ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಕೆಯಾಗಿರುವ ಬದಲು ಇತರ ಕ್ರಿಯಾಪದಗಳ ಹಾಗೆ ಅಂತಹ ಘಟನೆಯೊಂದು ನಡೆಯಲಿದೆಯೆಂಬುದನ್ನು ತಿಳಿಸುವುದಕ್ಕಾಗಿ ಮಾತ್ರವೇ ಬಳಕೆಯಾಗಿರಲು ಸಾಧ್ಯವಿದೆ. ನಾಲ್ಕು ಗಂಟೆಗೆ ಬರುತ್ತೇನೆಂದು ಮಾತು ಕೊಡುತ್ತೇನೆ. ಈ ವಾಕ್ಯವನ್ನು ಒಬ್ಬ ವ್ಯಕ್ತಿ ಮಾತು ಕೊಡುವ ಕೆಲಸವನ್ನು ನಡೆಸುವುದಕ್ಕಾಗಿ ಬಳಸಿರಬಹುದು, ಇಲ್ಲವೇ ಅಂತಹ ಕೆಲಸವನ್ನು ಮಾಡಲಿರುವೆನೆಂದು ತಿಳಿಸುವು ದಕ್ಕಾಗಿ ಮಾತ್ರವೇ ಬಳಸಿರಲೂ ಬಹುದು. ಎರಡನೆಯ ಬಳಕೆಯಲ್ಲಿ ಅದು ‘ತಿಳಿಸುವ’ ಕೆಲಸವನ್ನು ನಡೆಸುತ್ತಿದೆಯಲ್ಲದೆ ‘ಮಾತುಕೊಡುವ’ ಕೆಲಸವನ್ನು ನಡೆಸುವುದಿಲ್ಲ.
10.3 ಕೇಳುವ ವಾಕ್ಯಗಳು
ತಿಳಿಯದಿರುವ ಸಂಗತಿಯೊಂದನ್ನು ಇನ್ನೊಬ್ಬರಿಂದ ಕೇಳಿ ತಿಳಿದುಕೊಳ್ಳುವುದಕ್ಕಾಗಿ ಬಳಸುವ ವಾಕ್ಯಗಳೇ ‘ಕೇಳುವ’ ವಾಕ್ಯಗಳು. ಕನ್ನಡದಲ್ಲಿ ಈ ಮಾತಿನ ಕೆಲಸಕ್ಕಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಾಗುತ್ತವೆ. ಇವನ್ನು ‘ವಾಕ್ಯಕೇಳ್ವಿಗಳು’ ಮತ್ತು ‘ವಾಕ್ಯಾಂಗ ಕೇಳ್ವಿಗಳು’ ಎಂಬುದಾಗಿ ಹೆಸರಿಸಬಹುದು.
ವಾಕ್ಯಕೇಳ್ವಿಗಳು ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ ನಿಜವೇ ಎಂದು ಕೇಳುತ್ತವೆ. ಆದರೆ ವಾಕ್ಯಾಂಗ ಕೇಳ್ವಿಗಳು ವಾಕ್ಯವು ತಿಳಿಸುವ ಸಂಗತಿಯ ಒಂದು ಅಂಶ ಎಂತಹದು ಎಂದಷ್ಟೇ ಕೇಳುತ್ತವೆ. ಆ ಸಂಗತಿಯ ಉಳಿದ ಅಂಶಗಳೆಲ್ಲ ತನಗೆ ಗೊತ್ತಿವೆಯೆಂದೇ ಇಂತಹ ವಾಕ್ಯಾಂಗ ಕೇಳ್ವಿಗಳನ್ನು ಬಳಸಿರುವ ವ್ಯಕ್ತಿಯ ತೀರ್ಮಾನವಾಗಿರುತ್ತದೆ. (10ಕ) ರಾಜು ಮಂಗಳೂರಿಗೆ ಹೋಗಿದ್ದಾನೋ? (10ಖ) ರಾಜು ಎಲ್ಲಿಗೆ ಹೋಗಿದ್ದಾನೆ? (10ಕ) ಒಂದು ವಾಕ್ಯಕೇಳ್ವಿ, ಮತ್ತು (10ಖ) ಒಂದು ವಾಕ್ಯಾಂಗ ಕೇಳ್ವಿ. (10ಕ) ದಲ್ಲಿ ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ (ಎಂದರೆ ರಾಜು ಮಂಗಳೂರಿಗೆ ಹೋಗಿದ್ದಾನೆ ಎಂಬುದು) ನಿಜವೇ ಎಂದು ಕೇಳಲಾಗಿದೆ.
ಇದಕ್ಕೆ ಬದಲು (10ಖ)ದಲ್ಲಿ ಅಂತಹ ವಾಕ್ಯವು ತಿಳಿಸುವ ಸಂಗತಿಯ ಒಂದು ಅಂಶ ಮಾತ್ರ (ಎಂದರೆ ರಾಜು ಹೋಗಿರುವ ಜಾಗ ಮಾತ್ರ) ಎಂತಹ ದೆಂದು ಕೇಳಲಾಗಿದೆ. ರಾಜು ಎಲ್ಲಿಗೋ ಹೋಗಿದ್ದಾನೆ ಎಂಬ ಆ ವಾಕ್ಯವು ತಿಳಿಸುವ ಸಂಗತಿಯ ಉಳಿದ ಅಂಶ ತನಗೆ ತಿಳಿದಿದೆ ಮತ್ತು ನಿಜ ಎಂಬುದು ಈ ಕೇಳ್ವಿಯನ್ನು ಬಳಸುವ ವ್ಯಕ್ತಿಯ ನಂಬಿಕೆಯಾಗಿದೆ.
ವಾಕ್ಯಕೇಳ್ವಿಯಲ್ಲಿ ಕೇಳ್ವಿಯ ವ್ಯಾಪ್ತಿ ಇಡೀ ವಾಕ್ಯದ ಮೇಲೆ ಬೀಳುವುದಾದ ಕಾರಣ, ಅದೊಂದು ಕೇಳ್ವಿ ಎಂಬುದನ್ನಿಷ್ಟೇ ತಿಳಿಸಿದರೆ ಸಾಕು. ಇದಕ್ಕಾಗಿ ವಾಕ್ಯದ ಕೊನೆಯಲ್ಲಿ ಓ, ಆ ಇಲ್ಲವೇ ಏ ಪ್ರತ್ಯಯವನ್ನು ಬಳಸಲಾಗುತ್ತದೆ. ಇದಲ್ಲದೆ ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುವಂತೆಯೂ ಮಾಡಲಾಗುತ್ತದೆ. ಈ ಎರಡು ವಿಷಯಗಳಲ್ಲೂ ತಿಳಿಸುವ ವಾಕ್ಯಗಳು ವಾಕ್ಯ ಕೇಳ್ವಿಗಳಿಂದ ಭಿನ್ನವಾಗಿವೆಯೆಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣ ಬಹುದು. (11ಕ) ರಘು ಇವತ್ತು ಜಾನಕಿಯ ಮನೆಗೆ ಹೋಗಿದ್ದ. (11ಖ) ರಘು ಇವತ್ತು ಜಾನಕಿಯ ಮನೆಗೆ ಹೋಗಿದ್ದನೋ? (12ಕ) ಸಕ್ರಸ್ಸಿನ ಆನೆಯ ಕಾಲು ಮುರಿದಿದೆ. (12ಖ) ಸಕ್ರಸ್ಸಿನ ಆನೆಯ ಕಾಲು ಮುರಿದಿದೆಯೇ? (11ಕ) ವಾಕ್ಯ ಒಂದು ಸಂಗತಿಯನ್ನು ತಿಳಿಸುತ್ತದೆ, ಮತ್ತು ಅದರ ಶ್ರುತಿ ಆ ವಾಕ್ಯದ ಕೊನೆಯಲ್ಲಿ ಕೆಳಗೆ ಇಳಿಯುತ್ತದೆ. ಇದಕ್ಕೆ ವಿರುದ್ಧವಾಗಿ (11ಖ) ವಾಕ್ಯ ಒಂದು ವಾಕ್ಯಕೇಳ್ವಿ, ಮತ್ತು ಅದರ ಶ್ರುತಿ ಆ ವಾಕ್ಯದ ಕೊನೆಯಲ್ಲಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುತ್ತದೆ (ಅಥವಾ ಸ್ವಲ್ಪ ಮೇಲಕ್ಕೆ ಏರುತ್ತದೆ). ಇದಲ್ಲದೆ, (11ಖ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವೂ ಬಂದಿದೆ. (12ಕ- ಖ)ಗಳ ನಡುವೆಯೂ ಇಂತಹದೇ ಶ್ರುತಿಯ ವ್ಯತ್ಯಾಸವಿದ್ದು, (12ಖ)ದ ಕೊನೆ ಯಲ್ಲಿ ಏ ಪ್ರತ್ಯಯ ಬಂದಿದೆ. ವಾಕ್ಯದ ಕೊನೆಯಲ್ಲಿ ಈ ರೀತಿ ಅದರ ಶ್ರುತಿ ಕೆಳಗೆ ಇಳಿಯದೆ ಹಾಗೆಯೇ ಉಳಿದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ‘?’ ಎಂಬ ಚಿಹ್ನೆಯನ್ನು ಬಳಸುವ ಅವಶ್ಯಕತೆಯಿದೆ. ಇದಕ್ಕೆ ಬದಲು, ವಾಕ್ಯದ ಕೊನೆಯಲ್ಲಿ ‘.’ ಎಂಬ ಚಿಹ್ನೆಯನ್ನು ಬಳಸಿದಲ್ಲಿ ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗಿಳಿದಿದೆ ಎಂಬುದು ಸೂಚಿತವಾಗುತ್ತದೆ.
ವಾಕ್ಯಾಂಗ ಕೇಳ್ವಿಯಲ್ಲಿ ಈ ರೀತಿ ಅದೊಂದು ಕೇಳ್ವಿಯೆಂಬುದನ್ನು ಮಾತ್ರ ವಲ್ಲ, ಅದನ್ನು ಬಳಸಿದ ಕೇಳುಗನಿಗೆ ವಾಕ್ಯದ ಯಾವ ಅಂಗದ ಕುರಿತಾಗಿ ಮಾಹಿತಿ ಬೇಕಾಗಿದೆ ಎಂಬುದನ್ನೂ ಸೂಚಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಯಾರು, ಏನು, ಯಾಕೆ, ಎಲ್ಲಿ ಮೊದಲಾದ ‘ಅನಿಶ್ಚಿತ’ ಸವ್ರಪದಗಳ ಲ್ಲೊಂದನ್ನು (10.4.1 ನೋಡಿ) ಇಂತಹ ವಾಕ್ಯಗಳಲ್ಲಿ ಬಳಸುವ ಕ್ರಮ ಬಳಕೆಯಲ್ಲಿದೆ. (13ಕ) ರಾಜು ಹರಿಗೆ ಒಂದು ಪುಸ್ತಕ ಕೊಟ್ಟ. (13ಖ) ರಾಜು ಹರಿಗೆ ಏನು ಕೊಟ್ಟ? (13ಗ) ರಾಜು ಒಂದು ಪುಸ್ತಕ ಯಾರಿಗೆ ಕೊಟ್ಟ? (13ಘ) ಹರಿಗೆ ಒಂದು ಪುಸ್ತಕ ಯಾರು ಕೊಟ್ಟರು? (13ಕ) ವಾಕ್ಯ ಒಂದು ಘಟನೆ ನಡೆದಿರುವುದನ್ನು ತಿಳಿಸುತ್ತಿದೆಯಾದ ಕಾರಣ, ಅದೊಂದು ‘ತಿಳಿಸುವ ವಾಕ್ಯ’. (13ಖ-ಘ)ಗಳು ಆ ಘಟನೆಯ ಬೇರೆ ಬೇರೆ ಅಂಶಗಳ ಕುರಿತಾಗಿ ಮಾಹಿತಿಯನ್ನು ಪಡೆಯಲು ಬಳಸಬಹುದಾದ ವಾಕ್ಯಾಂಗ ಕೇಳ್ವಿಗಳು. (13ಕ)ದಲ್ಲಿ ವಾಕ್ಯದ ಶ್ರುತಿ ಅದರ ಕೊನೆಯಲ್ಲಿ ಕೆಳಗೆ ಇಳಿಯುತ್ತದೆ ಮತ್ತು ಇತರ ಮೂರು ವಾಕ್ಯಗಳಲ್ಲಿ ಅದು ಈ ರೀತಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುತ್ತದೆ.
ಇದಲ್ಲದೆ, (13ಕ) ವಾಕ್ಯದ ಮೂರು ಬೇರೆ ಬೇರೆ ಘಟಕಗಳಿಗೆ ಬದಲಾಗಿ (13ಖ-ಘ) ವಾಕ್ಯಗಳಲ್ಲಿ ಅನುಕ್ರಮವಾಗಿ ಏನು, ಯಾರಿಗೆ ಮತ್ತು ಯಾರು ಎಂಬ ಅನಿಶ್ಚಿತ ಸವ್ರಪದಗಳು ಬಂದಿವೆ. ಇವು ಆ ಘಟನೆಯ ಯಾವ ಘಟಕದ ಕುರಿತಾಗಿ ಕೇಳುವವನಿಗೆ ಹೆಚ್ಚಿನ ಮಾಹಿತಿ ಬೇಕಾಗಿದೆ ಎಂಬುದನ್ನು ಸೂಚಿಸು ತ್ತವೆ.
10.3.1 ವಾಕ್ಯಕೇಳ್ವಿಗಳ ಸ್ವರೂಪ
ವಾಕ್ಯಕೇಳ್ವಿಗಳ ಕೊನೆಯಲ್ಲಿ ಓ, ಆ ಇಲ್ಲವೇ ಏ ಪ್ರತ್ಯಯಗಳಲ್ಲಿ ಯಾವು ದಾದರೂ ಒಂದು ಬಳಕೆಯಾಗುತ್ತದೆ. ಈ ಮೂರು ಪ್ರತ್ಯಯಗಳು ಕನ್ನಡದ ಬೇರೆ ಬೇರೆ ಊರುಗಳಲ್ಲಿ ಕಾಣಿಸಿಕೊಳ್ಳುವ ಮಾತಿನ ಭೇದಗಳಾಗಿದ್ದು ಬರಹದಲ್ಲೂ ಈ ಮೂರು ಪ್ರತ್ಯಯಗಳನ್ನು ಕಾಣಬಹುದು.
ಉದಾಹರಣೆಗಾಗಿ ಮಂಗಳೂರು ಕನ್ನಡದ ವಾಕ್ಯ ಕೇಳ್ವಿಗಳ ಕೊನೆಯಲ್ಲಿ ಓ ಪ್ರತ್ಯಯ ಕಾಣಿಸಿಕೊಳ್ಳುವುದೇ ಜಾಸ್ತಿ. ಇದಕ್ಕೆ ಬದಲು, ಮೈಸೂರು ಕನ್ನಡದ ವಾಕ್ಯಕೇಳ್ವಿಗಳಲ್ಲಿ ಆ ಪ್ರತ್ಯಯವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ವಾಕ್ಯಕೇಳ್ವಿಗಳ ಕೊನೆಯಲ್ಲಿ ಈ ರೀತಿ ಓ, ಆ ಇಲ್ಲವೇ ಏ ಪ್ರತ್ಯಯಗಳ ಲ್ಲೊಂದು (ಅಥವಾ ಏನು ಎಂಬುದು) ಬರುವುದು ಮಾತ್ರವಲ್ಲದೆ, ವಾಕ್ಯ ಮುಗಿದಾಗ ಅವುಗಳ ಕೊನೆಯಲ್ಲಿರುವ ಶ್ರುತಿ ಕೆಳಗಿಳಿಯದೆ ಹಾಗೆಯೇ ಉಳಿಯು ತ್ತದೆ, ಇಲ್ಲವೇ ಸ್ವಲ್ಪ ಮೇಲಕ್ಕೆ ಏರುತ್ತದೆ. ನಿಜಕ್ಕೂ ಕನ್ನಡದ ವಾಕ್ಯ ಕೇಳ್ವಿಗಳಲ್ಲಿ ‘ಅವು ಕೇಳ್ವಿಗಳು’ ಎಂಬುದನ್ನು ಸೂಚಿಸುವುದು ಅವುಗಳ ಕೊನೆಯಲ್ಲಿ ಬರುವ ಈ ಶ್ರುತಿಯ ಸ್ವರೂಪ ಮಾತ್ರ. ಅದರೊಂದಿಗೆ ಬರುವ ಏ, ಓ ಮತ್ತು ಆಗಳಿಗೆ ನೇರವಾಗಿ ಕೇಳುವಿಕೆಯ ಅರ್ಥವಿಲ್ಲ.
ಯಾಕೆಂದರೆ, ತಿಳಿಸುವ ವಾಕ್ಯದ ಕೊನೆಯಲ್ಲಿ ಬರುವ ಶ್ರುತಿಯನ್ನು ಮಾತ್ರವೇ ಬದಲಾಯಿಸಿದಾಗಲೂ ಅದು ಕೇಳ್ವಿಯಾಗಬಲ್ಲುದು.
(14ಕ) ಗಂಟೆ ಮೂರಾದರೂ ಊಟ ಬರಲಿಲ್ಲ. (14ಖ) ಗಂಟೆ ಮೂರಾದರೂ ಊಟ ಬರಲಿಲ್ಲ? (15ಕ) ಇದು ಶ್ರೀನಿವಾಸನ ಮನೆ. (15ಖ) ಇದು ಶ್ರೀನಿವಾಸನ ಮನೆ? ಮೇಲೆ ಕೊಟ್ಟಿರುವ ವಾಕ್ಯಗಳಲ್ಲಿ (ಕ) ವಾಕ್ಯಗಳು ತಿಳಿಸುವ ವಾಕ್ಯಗಳು ಮತ್ತು (ಖ) ವಾಕ್ಯಗಳು ಅವು ತಿಳಿಸುವ ಘಟನೆ ಇಲ್ಲವೇ ಸಂಗತಿ ನಿಜವೇ ಎಂಬುದನ್ನು ಕೇಳುವ ವಾಕ್ಯಗಳು. ಇವುಗಳ ನಡುವೆ ಮಾತಿನಲ್ಲಿ ಅವುಗಳ ಕೊನೆಯಲ್ಲಿ ಬರುವ ಶ್ರುತಿಯಲ್ಲಿ ಮಾತ್ರ (ಮತ್ತು ಬರಹದಲ್ಲಿ ಅವುಗಳ ಕೊನೆಯಲ್ಲಿ ಬರುವ ಚಿಹ್ನೆಯಲ್ಲಿ ಮಾತ್ರ) ವ್ಯತ್ಯಾಸ ಇದೆ ಎಂಬುದನ್ನು ಗಮನಿಸಬಹುದು. ವಾಕ್ಯಕೇಳ್ವಿಗಳ ಕೊನೆಯಲ್ಲಿ ಈ ರೀತಿ ಓ, ಆ ಇಲ್ಲವೇ ಏ ಪ್ರತ್ಯಯಗಳನ್ನು ಬಳಸುವ ಬದಲು ಏನು ಎಂಬ ಅನಿಶ್ಚಯಾರ್ಥವನ್ನು ಸೂಚಿಸುವ ಸವ್ರಪದ ವನ್ನು ಬಳಸಲೂ ಸಾಧ್ಯವಿದೆ. (16ಕ) ಶಾಮರಾಯರು ಮನೆಯಲ್ಲಿದ್ದಾರೋ? (16ಖ) ಶಾಮರಾಯರು ಮನೆಯಲ್ಲಿದ್ದಾರೇನು? (17ಕ) ನಿಮ್ಮೂರಲ್ಲಿ ಅಕ್ಕಿಯ ಬೆಲೆ ಕಡಿಮೆಯೇ? (17ಖ) ನಿಮ್ಮೂರಲ್ಲಿ ಅಕ್ಕಿಯ ಬೆಲೆ ಕಡಿಮೆಯೇನು? ಈ ರೀತಿ ಏನು ಪದವನ್ನು ಬಳಸಿ ತಯಾರಿಸಿದ ವಾಕ್ಯಕೇಳ್ವಿಗಳ ಕೊನೆಯಲ್ಲಿ ಕೇಳುಗನನ್ನು ಕರೆದು ಹೇಳುವ ರೀ, ಏ, ಓ ಮೊದಲಾದ ಪ್ರತ್ಯಯ ಇಲ್ಲವೇ ಪದಗಳನ್ನು ಬಳಸಲು ಸಾಧ್ಯವಿದೆ. ಇವುಗಳಲ್ಲಿ ಏ ಎಂಬುದನ್ನು ಒಬ್ಬ ಹುಡುಗಿ (ಇಲ್ಲವೇ ಕೆಳಗಿನ ಸ್ತರದ ಹೆಂಗಸು) ಕೇಳುಗಳಾಗಿದ್ದಾಗಲೂ ಮತ್ತು ಓ ಎಂಬುದನ್ನು ಒಬ್ಬ ಹುಡುಗ (ಇಲ್ಲವೇ ಕೆಳಗಿನ ಸ್ತರದ ಗಂಡಸು) ಕೇಳುಗ ನಾಗಿದ್ದಾಗಲೂ ಬಳಸಲಾಗುತ್ತದೆ. ಇದಲ್ಲದೆ ಕೇಳುಗನಿಗೆ ಮರ್ಯಾದೆ ಕೊಟ್ಟು ಕರೆಯಬೇಕಾಗಿರುವ ಸಂದಭ್ರದಲ್ಲಿ ರಿ ಪ್ರತ್ಯಯದ ಬಳಕೆಯಾಗುತ್ತದೆ.
(18ಕ) ಆ ಕತೆಯನ್ನು ನಾಳೆ ಬರೆದು ಕೊಡುತ್ತೀರೇನ್ರಿ? (18ಖ) ಸಕ್ಕರೆ ಈ ತಿಂಗಳಿಗೆ ಸಾಕಾದೀತೇನೇ? (18ಗ) ಹಾಲಿನವಳಿಗೆ ಆರು ರೂಪಾಯಿ ಕೊಟ್ಟೆಯೇನೋ? (18ಘ) ಒಂದು ಲೋಟೆ ನೀರು ಕೊಡುತ್ತೀಯೇನಪ್ಪ? ಓ, ಏ ಮತ್ತು ಆ ಪ್ರತ್ಯಯಗಳು ಕನ್ನಡದ ಕೇಳ್ವಿಗಳಲ್ಲಿ ಮಾತ್ರವಲ್ಲದೆ ಬೇರೆ ರೀತಿಯ ವಾಕ್ಯಗಳಲ್ಲೂ ಬರಬಲ್ಲುವು. ಉದಾಹರಣೆಗಾಗಿ, ಓ ಪ್ರತ್ಯಯಕ್ಕೆ ಬೇರೆ ಸಂದಭ್ರಗಳಲ್ಲಿ ‘ಅಥವಾ’ ಎಂಬ ಅರ್ಥವಿದೆ. ವಾಕ್ಯ ಕೇಳ್ವಿಗಳಲ್ಲಿ ಈ ‘ಅಥವಾ’ ಎಂಬ ಅರ್ಥದ ಬದಲು ಇದಕ್ಕೆ ಕೇಳುವವನಲ್ಲಿರುವ ಸಂದೇಹವನ್ನು ಸೂಚಿಸುವ ಅರ್ಥವಿದೆಯೆಂದು ಹೇಳಬಹುದು. ಆ ಪ್ರತ್ಯಯಕ್ಕೂ ‘ಅಥವಾ’ ಎಂಬ ಅರ್ಥವಿದೆ. (19ಕ) ರಾಮುವೋ ಹೋಗಬಹುದು. (19ಖ) ನೀವು ತಂದ ತಿಂಡಿಯನ್ನೆಲ್ಲ ಮಕ್ಕಳು ಸ್ವತಃ ತಿಂದೋ ನಾಯಿಗೆ ಹರಿಯೋ ಬಂದರೆ ಮನೆಗೆ ನಮಗೆ ಕೊಟ್ಟೋ ಮುಗಿಸಿರಬೇಕು. ಇದಕ್ಕೆ ಬದಲು ಏ ಪ್ರತ್ಯಯಕ್ಕೆ ಬೇರೆ ಸಂದಭ್ರಗಳಲ್ಲಿ ಕೇಳುಗನ ಗಮನ ವನ್ನು ಸೆಳೆಯುವ ಇಲ್ಲವೇ ಒಂದು ಘಟಕವನ್ನು ಒತ್ತಿಹೇಳುವ ಕೆಲಸವಿದೆ. ವಾಕ್ಯ ಕೇಳ್ವಿಗಳಲ್ಲೂ ಇದು ಇಂತಹ ಕೆಲಸವನ್ನು ನಡೆಸುವುದಕ್ಕಾಗಿಯೇ ಬಳಕೆಯಾಗು ತ್ತದೆಯೆಂದು ಹೇಳಲು ಸಾಧ್ಯವಿದೆ.
(20ಕ) ಮಗನೇ! ನೀನು ಇಂತಹ ಕೆಲಸವನ್ನು ಯಾಕೆ ಮಾಡಿದೆ? (20ಖ) ಈ ಪುಸ್ತಕವನ್ನು ಅವರೇ ಬರೆದಿರಬೇಕು. ಇದಲ್ಲದೆ, ಕೇಳ್ವಿಯೊಂದನ್ನು ಒಳವಾಕ್ಯವಾಗಿ ಪಡೆದಿರುವ ಕೆಲವು ವಾಕ್ಯಗಳು ನಿಜಕ್ಕೂ ಕೇಳ್ವಿಗಳೇ ಅಥವಾ ತಿಳಿಸುವ ವಾಕ್ಯಗಳೇ ಎಂಬುದನ್ನು ಅವುಗಳ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪದಿಂದ ಮಾತ್ರವೇ ತಿಳಿಯಲು ಸಾಧ್ಯ. (21ಕ) ರಾಜು ಊಟಿಗೆ ಯಾವಾಗ ಹೋಗುವುದೆಂದು ಹೇಳಿದ್ದಾನೆ. (21ಖ) ರಾಜು ಊಟಿಗೆ ಯಾವಾಗ ಹೋಗುವುದೆಂದು ಹೇಳಿದ್ದಾನೆ? (22ಕ) ಎಷ್ಟು ಬೇಕಾದೀತೆಂದು ಅವರು ತಿಳಿಸಿದ್ದಾರೆ. (22ಖ) ಎಷ್ಟು ಬೇಕಾದೀತೆಂದು ಅವರು ತಿಳಿಸಿದ್ದಾರೆ? (21ಕ-22ಕ) ವಾಕ್ಯಗಳು ತಿಳಿಸುವ ವಾಕ್ಯಗಳು ಮತ್ತು (21ಖ-22ಖ)
ವಾಕ್ಯಗಳು ಕೇಳ್ವಿಗಳು. ಆದರೆ, ಈ (ಕ) ಮತ್ತು (ಖ) ವಾಕ್ಯಗಳ ನಡುವೆ ಅವುಗಳ ಕೊನೆಯಲ್ಲಿ ಬರುವ ಶ್ರುತಿಯಲ್ಲಿ (ಇಲ್ಲವೇ ಚಿಹ್ನೆಯಲ್ಲಿ) ಮಾತ್ರ ವ್ಯತ್ಯಾಸ ಕಾಣಿಸುತ್ತದೆ. ಹಾಗಾಗಿ ಇವುಗಳಲ್ಲಿ (ಖ) ವಾಕ್ಯಗಳು ಕೇಳ್ವಿಗಳು ಎಂಬುದನ್ನು ಸೂಚಿಸುವುದು ಅವುಗಳ ಕೊನೆಯಲ್ಲಿ ಕೆಳಗೆ ಇಳಿಯದೆ ಉಳಿಯುವ ಶ್ರುತಿ ಮಾತ್ರ ಎಂದು ಹೇಳಬೇಕಾಗುತ್ತದೆ.
10.3.2 ವಾಕ್ಯಕೇಳ್ವಿಗಳಿಗೆ ಉತ್ತರ
ಸಾಮಾನ್ಯವಾಗಿ ವಾಕ್ಯಕೇಳ್ವಿಯೊಂದನ್ನು ಬಳಸಿರುವ ಆಡುಗನಿಗೆ ಅದು ಸೂಚಿಸುವ ಘಟನೆ ಇಲ್ಲವೇ ಸಂಗತಿ ನಿಜವೋ ಅಥವಾ ಸುಳ್ಳೋ ಎಂಬುದನ್ನು ತಿಳಿದುಕೊಳ್ಳ ಬೇಕೆಂದಿರುತ್ತದೆ. ಹಾಗಾಗಿ ಅಂತಹ ಕೇಳ್ವಿಗಳಿಗೆ ಹೌದು ಅಥವಾ ಇಲ್ಲ ಎಂಬ ಉತ್ತರ ಕೊಟ್ಟರೆ ಸಾಕಾಗುತ್ತದೆ.
ಕೆಲವು ಸಂದಭ್ರಗಳಲ್ಲಿ ಗೊತ್ತಿಲ್ಲ ಎಂಬ ಉತ್ತರವನ್ನೂ ಕೊಡಲು ಸಾಧ್ಯ ವಿದೆಯಾದರೂ ಸಾಮಾನ್ಯವಾಗಿ ಒಂದು ಕೇಳ್ವಿಯನ್ನು ಬಳಸುವವನು ಅಂತಹ ಉತ್ತರವನ್ನು ನಿರೀಕ್ಷಿಸುವುದಿಲ್ಲ. ಯಾಕೆಂದರೆ, ತಾನು ಬಳಸುವ ಕೇಳ್ವಿಗೆ ಕೇಳುಗ ನಿಂದ ಉತ್ತರ ಸಿಗಬಹುದೆಂಬ ಅಭಿಪ್ರಾಯವಿರುವಾಗ ಮಾತ್ರ ತಾನೇ ಆತ ಒಂದು ಕೇಳ್ವಿಯನ್ನು ಬಳಸುತ್ತಾನೆ? ಇಂತಹ ಕೇಳ್ವಿಗಳು ಸೂಚಿಸುವ ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆ ಯುವುದಕ್ಕಾಗಿ ಕನ್ನಡದಲ್ಲಿ ಅಲ್ಲ ಮತ್ತು ಇಲ್ಲ ಎಂಬ ಎರಡು ಪದಗಳ ಬಳಕೆ ಯಾಗುತ್ತದೆ. ಇವುಗಳಲ್ಲಿ ಅಲ್ಲ ಎಂಬುದು ಎರಡು ಘಟಕಗಳ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಕ್ಕಾಗಿ ಬಳಕೆಯಾಗುತ್ತದೆ ಮತ್ತು ಇಲ್ಲ ಎಂಬುದು ಘಟನೆ, ಸಂಗತಿ ಮೊದಲಾದವುಗಳ ಇರುವಿಕೆಯನ್ನು ಅಲ್ಲಗಳೆಯುವು ದಕ್ಕಾಗಿ ಬಳಕೆಯಾಗುತ್ತದೆ (9.1 ಮತ್ತು 9.3.1 ನೋಡಿ). (23ಕ) ಮಂಗಳೂರಿಗೆ ಹೋಗಿರುವುದು ಜಾನಕಿಯೋ? ಅಲ್ಲ. (23ಖ) ಜಾನಕಿ ಮಂಗಳೂರಿಗೆ ಹೋಗಿದ್ದಾಳೋ? ಇಲ್ಲ. (24ಕ) ಆ ಸಾಹುಕಾರರು ಹಣವಂತರಾ? ಅಲ್ಲ. (24ಖ) ಆ ಸಾಹುಕಾರರು ಹಣವಂತರಾಗಿದ್ದಾರಾ? ಇಲ್ಲ. (25ಕ) ಬಸ್ಸಿನಲ್ಲಿ ಬಂದವರು ನೀವಾ? ಅಲ್ಲ. (25ಖ) ನೀವು ಬಸ್ಸಿನಲ್ಲಿ ಬಂದಿರಾ? ಇಲ್ಲ.
(23ಕ)ದಲ್ಲಿ ‘ಜಾನಕಿ’ಗೂ ಮತ್ತು ‘ಮಂಗಳೂರಿಗೆ ಹೋಗಿರುವುದ’ಕ್ಕೂ ನಡುವೆ ಸಂಬಂಧವಿರುವುದು ನಿಜವೋ ಎಂದು ಕೇಳಲಾಗಿದೆ (9.2 ನೋಡಿ), ಮತ್ತು ಈ ರೀತಿ ಸಂಬಂಧವಿರುವುದು ನಿಜವಲ್ಲ ಎಂಬುದಾಗಿ ಆ ಸಂಬಂಧವನ್ನು ಅಲ್ಲಗಳೆ ಯಲು ಅಲ್ಲ ಪದದ ಬಳಕೆಯಾಗಿದೆ. ಆದರೆ (23ಖ)ದಲ್ಲಿ ಜಾನಕಿ ಮಂಗಳೂರಿಗೆ ಹೋಗಿದ್ದಾಳೆ ಎಂಬ ಘಟನೆ ನಡೆದಿದೆಯೇ ಎಂಬುದಾಗಿ ಒಂದು ಘಟನೆಯ ಇರುವಿಕೆಯ ಕುರಿತು ಕೇಳ್ವಿ ಬಂದಿದೆ, ಮತ್ತು ಅದನ್ನು ಅಲ್ಲಗಳೆ ಯುವುದಕ್ಕಾಗಿ ಇಲ್ಲ ಪದದ ಬಳಕೆಯಾಗಿದೆ.
10.3.3 ವಾಕ್ಯಕೇಳ್ವಿಗಳಲ್ಲಿ ವೈವಿಧ್ಯ
ಎಲ್ಲಾ ರೀತಿಯ ತಿಳಿಸುವ ವಾಕ್ಯಗಳನ್ನೂ ವಾಕ್ಯಕೇಳ್ವಿಗಳಾಗಿ ಬದಲಾಯಿಸಲು ಸಾಧ್ಯವಿದೆ. ಹಾಗಾಗಿ ತಿಳಿಸುವ ವಾಕ್ಯಗಳಲ್ಲಿ ಕಾಣಿಸುವ ವೈವಿಧ್ಯ ವಾಕ್ಯಕೇಳ್ವಿ ಗಳಲ್ಲೂ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ತಿಳಿಸುವ ವಾಕ್ಯಗಳಲ್ಲಿ ಒಂದು ಘಟನೆ ನಡೆದುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುವ ವಾಕ್ಯಗಳು ಮತ್ತು ಒಂದು ಸಂಗತಿಯ ಇರುವಿಕೆಯನ್ನು ತಿಳಿಸುವ ವಾಕ್ಯಗಳು ಎಂಬುದಾಗಿ ಎರಡು ರೀತಿಯವುಗಳಿವೆಯೆಂಬುದನ್ನು ನಾವು 1.2ರಲ್ಲಿ ನೋಡಿರುವೆವು.
ಇದಕ್ಕೆ ಅನುಗುಣವಾಗಿ ವಾಕ್ಯಕೇಳ್ವಿಗಳಲ್ಲೂ ಒಂದು ಘಟನೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೇಳುವ ವಾಕ್ಯಗಳು (26ಖ) ಮತ್ತು ಒಂದು ಸಂಗತಿಯ ಇರುವಿಕೆ ನಿಜವೇ ಅಥವಾ ಅಲ್ಲವೇ ಎಂಬುದನ್ನು ಕೇಳುವ ವಾಕ್ಯಗಳು (27ಖ) ಎಂಬುದಾಗಿ ಎರಡು ವಿಭಾಗಗಳನ್ನು ಕಾಣಬಹುದು. (26ಕ) ಅವರು ಬೊಂಬಾಯಿಗೆ ಹೋಗಿದ್ದಾರೆ. (26ಖ) ಅವರು ಬೊಂಬಾಯಿಗೆ ಹೋಗಿದ್ದಾರೋ? (27ಕ) ಇದು ರಾಜುವಿನ ಮನೆ. (27ಖ) ಇದು ರಾಜುವಿನ ಮನೆಯೋ? ತಿಳಿಸುವ ವಾಕ್ಯಗಳು ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸುವ ಬದಲು ಒಂದು ಘಟನೆ ನಡೆಯಲಿಲ್ಲ ಇಲ್ಲವೇ ನಡೆ ಯುವುದಿಲ್ಲ ಎಂಬುದಾಗಿ ಘಟನೆಯನ್ನು ಅಲ್ಲಗಳೆಯುವ ಕೆಲಸವನ್ನೂ ಮಾಡ ಬಲ್ಲುವು. ಇದೇ ರೀತಿಯಲ್ಲಿ ವಾಕ್ಯಕೇಳ್ವಿಗಳೂ ಈ ರೀತಿ ಅಲ್ಲಗಳೆದಿರುವುದು ನಿಜವೇ ಅಥವಾ ಅಲ್ಲವೇ ಎಂಬುದನ್ನೂ ಕೇಳಬಲ್ಲುವು. (28ಕ) ಶಾಮರಾಯರು ಆಫೀಸಿನಲ್ಲಿಲ್ಲ. (28ಖ) ಶಾಮರಾಯರು ಆಫೀಸಿನಲ್ಲಿಲ್ಲವೇ? (29ಕ) ರಾಜು ಊಟಮಾಡಲಿಲ್ಲ. (29ಖ) ರಾಜು ಊಟಮಾಡಲಿಲ್ಲವೋ? (30ಕ) ಅವರು ಮದುವೆಗೆ ಹೋಗುವುದಿಲ್ಲ. (30ಖ) ಅವರು ಮದುವೆಗೆ ಹೋಗುವುದಿಲ್ಲವೋ? ಆದರೆ, ಈ ರೀತಿ ಒಂದು ಘಟನೆ ನಡೆದಿರುವುದು ಇಲ್ಲವೇ ಒಂದು ಸಂಗತಿ ಇರುವುದು ನಿಜವೇ ಎಂಬುದಾಗಿ ಕೇಳುವ ವಾಕ್ಯಗಳಿಗೂ ಮತ್ತು ಅಂತಹ ಘಟನೆಯನ್ನು ಇಲ್ಲವೇ ಸಂಗತಿಯನ್ನು ಅಲ್ಲಗಳೆದಿರುವುದು ನಿಜವೇ ಎಂಬುದಾಗಿ ಕೇಳುವ ವಾಕ್ಯಗಳಿಗೂ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ.
ಅಲ್ಲಗಳೆದಿರುವುದು ನಿಜವೇ ಎಂಬುದಾಗಿ ಕೇಳುವ ವ್ಯಕ್ತಿಗೆ ಸಾಮಾನ್ಯವಾಗಿ ಅದು ನಿಜವಿರಲಾರದು ಎಂಬ ಅಭಿಪ್ರಾಯವಿರುವಂತೆ ತೋರುತ್ತದೆ. ಘಟನೆ ನಡೆದಿರುವುದು ಇಲ್ಲವೇ ಸಂಗತಿ ಇರುವುದು ನಿಜವೇ ಎಂಬುದಾಗಿ ಕೇಳುವವ ನಲ್ಲಿ ಇಂತಹ ಯಾವ ಅಭಿಪ್ರಾಯವೂ ಇರುವ ಹಾಗೆ ಕಾಣಿಸುವುದಿಲ್ಲ.
(31ಕ) ಶ್ರೀಪತಿ ಮೈಸೂರಿಗೆ ಹೋಗುತ್ತಾನೋ? (31ಖ) ಶ್ರೀಪತಿ ಮೈಸೂರಿಗೆ ಹೋಗುವುದಿಲ್ಲವೋ? (31ಕ) ವಾಕ್ಯವನ್ನು ಬಳಸಿರುವ ವ್ಯಕ್ತಿಯಲ್ಲಿ ಶ್ರೀಪತಿ ಮೈಸೂರಿಗೆ ಹೋಗುವ ವಿಷಯದಲ್ಲಿ ಯಾವ ಅಭಿಪ್ರಾಯವೂ ಇರುವ ಹಾಗೆ ಕಾಣಿಸುವುದಿಲ್ಲ. ಆದರೆ (31ಖ) ವಾಕ್ಯವನ್ನು ಬಳಸಿರುವ ವ್ಯಕ್ತಿಯಲ್ಲಿ ಆತ ಮೈಸೂರಿಗೆ ಹೋಗ ಲಿದ್ದಾನೆ ಎಂಬ ಅಭಿಪ್ರಾಯವಿರುವ ಹಾಗೆ ಕಾಣಿಸುತ್ತದೆ. ಶ್ರೀಪತಿ ಮೈಸೂರಿಗೆ ಹೋಗಬೇಕೆಂಬ ವಿಷಯ ನಿಶ್ಚಿತವಾಗಿತ್ತಾದರೂ ಆತ ಹೊರಡುವ ತಯಾರಿ ಮಾಡುವ ಹಾಗೆ ಕಾಣಿಸುವುದಿಲ್ಲವಾದ ಕಾರಣ ಕೇಳುಗನಲ್ಲಿ ಸಂಶಯ ಹುಟ್ಟಿರ ಬೇಕು. ಅದಕ್ಕೇ ಆತ (31ಖ) ವಾಕ್ಯವನ್ನು ಬಳಸಿದ್ದಾನೆ. ತಿಳಿಸುವ ವಾಕ್ಯಗಳು ಒಂದು ಘಟನೆ ನಡೆದಿರುವುದನ್ನು ಇಲ್ಲವೇ ನಡೆಯ ಲಿರುವುದನ್ನು ಹಾಗೆಯೇ ತಿಳಿಸುವ ಬದಲು ಅದರ ಬೇರೆ ಬೇರೆ ಅಂಶಗಳಲ್ಲಿ ಒಂದನ್ನು ಮಾತ್ರ ಒತ್ತಿ ಹೇಳುತ್ತಿರಲು ಸಾಧ್ಯವಿದೆ. ಇದಕ್ಕಾಗಿ ಆ ಅಂಶದ ಮೇಲೆ ಒತ್ತು ಕೊಟ್ಟು ಹೇಳಬಹುದು ಇಲ್ಲವೇ ಅದರೊಂದಿಗೆ ಏ ಪ್ರತ್ಯಯವನ್ನು ಬಳಸಿ ಹೇಳಬಹುದು. (32ಕ) ರಾಜು ಮಂಗಳೂರಿನಿಂದ ನಿನ್ನೆ ಬಂದಿದ್ದ. (32ಖ) ರಾಜು ಮಂಗಳೂರಿನಿಂದ ನಿನ್ನೆಯೇ ಬಂದಿದ್ದ. ವಾಕ್ಯಕೇಳ್ವಿಗಳಲ್ಲಿಯೂ ಈ ರೀತಿ ಒಂದು ಅಂಶಕ್ಕೆ ಒತ್ತು ಕೊಟ್ಟು, ಇಲ್ಲವೇ ಅದರೊಂದಿಗೆ ಏ ಪ್ರತ್ಯಯವನ್ನು ಬಳಸಿ, ಆ ಒಂದು ಅಂಶದ ಕುರಿತಾಗಿ ಮಾತ್ರ ಮಾಹಿತಿ ಬೇಕಾಗಿದೆಯೆಂದು ಸೂಚಿಸಲು ಸಾಧ್ಯವಿದೆ. (33ಕ) ರಾಜು ಮಂಗಳೂರಿನಿಂದ ನಿನ್ನೆ ಬಂದಿದ್ದನೋ? (33ಖ) ರಾಜು ಮಂಗಳೂರಿನಿಂದ ನಿನ್ನೆಯೇ ಬಂದಿದ್ದನೋ? ತಿಳಿಸುವ ವಾಕ್ಯಗಳಲ್ಲಿ ಬರುವ ಬೇರೆ ಬೇರೆ ಅಂಶಗಳಲ್ಲಿ ಒಂದನ್ನು ಮಾತ್ರ ಪ್ರತ್ಯೇಕಿಸಿ ಅದು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಿದೆ ಎಂಬುದನ್ನು ತಿಳಿಸುವುದಕ್ಕಾಗಿ ಕನ್ನಡದಲ್ಲಿ ಬೇರೆಯೇ ಒಂದು ರೀತಿಯ ವಾಕ್ಯದ ಬಳಕೆ ಯಾಗುತ್ತದೆ. ಇದಕ್ಕಾಗಿ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದವನ್ನು ಅದರ ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕು ಮತ್ತು ಸಂಬಂಧಿಸಬೇಕಾಗಿರುವ ಅಂಶವನ್ನು ಉಳಿದ ಅಂಶದಿಂದ ಪ್ರತ್ಯೇಕಿಸಿ ವಾಕ್ಯದ ಕೊನೆಯಲ್ಲಿ ಇರಿಸಬೇಕು (9.2 ನೋಡಿ). ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟ. (34ಕ) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದು. (34ಖ) ರಾಜು ಇಲ್ಲಿಂದ ಹೊರಟದ್ದು ಹತ್ತು ಗಂಟೆಗೆ. (34ಗ) ರಾಜು ಹತ್ತು ಗಂಟೆಗೆ ಹೊರಟದ್ದು ಇಲ್ಲಿಂದ. (34ಘ) ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದು ರಾಜು. (34)ನೇ ವಾಕ್ಯ ಒಂದು ಘಟನೆಯನ್ನು ನೇರವಾಗಿ ತಿಳಿಸುವುದಾದರೆ, ಉಳಿದ (34ಕ-ಘ) ವಾಕ್ಯಗಳು ಆ ಘಟನೆಯ ಬೇರೆ ಬೇರೆ ಅಂಶಗಳು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಿವೆ ಎಂಬುದನ್ನು ತಿಳಿಸುತ್ತವೆ. ಇಂತಹ ತಿಳಿಸುವ ವಾಕ್ಯಗಳನ್ನೂ ವಾಕ್ಯಕೇಳ್ವಿಗಳನ್ನಾಗಿ ಬದಲಿಸಲು ಸಾಧ್ಯವಿದೆ. ಇದಕ್ಕಾಗಿ ವಾಕ್ಯ ಕೇಳ್ವಿಗಳ ಕೊನೆಯಲ್ಲಿ ಬರುವ ಓ, ಏ, ಆ ಇಲ್ಲವೇ ಏನು ಎಂಬವುಗಳನ್ನು ಸಂಬಂಧಿಸಬೇಕಾಗಿರುವ ಅಂಶದೊಂದಿಗೆ ಸೇರಿಸಿ ಹೇಳಬೇಕು. (35) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟನೋ? (35ಕ) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದೋ? (35ಖ) ರಾಜು ಇಲ್ಲಿಂದ ಹೊರಟದ್ದು ಹತ್ತು ಗಂಟೆಗೋ? (35ಗ) ರಾಜು ಹತ್ತು ಗಂಟೆಗೆ ಹೊರಟದ್ದು ಇಲ್ಲಿಂದಲೋ? ಇಂತಹ ವಾಕ್ಯಕೇಳ್ವಿಗಳಲ್ಲಿ ಸಂಬಂಧಿಸಬೇಕಾದ ಅಂಶವನ್ನು ಓ, ಏ ಮೊದಲಾದ ಪ್ರತ್ಯಯ ಇಲ್ಲವೇ ಪದಗಳ ಮೂಲಕ ಗುರುತಿಸುವ ಕಾರಣ ಅದನ್ನು ವಾಕ್ಯದ ಕೊನೆಗೆ ವಗ್ರಾಯಿಸದಿರಲೂ ಸಾಧ್ಯವಿದೆ. ಉದಾ: (35ಘ) ರಾಜು ಇಲ್ಲಿಂದ ಹತ್ತು ಗಂಟೆಗೋ ಹೊರಟದ್ದು? (35ಙ) ರಾಜು ಇಲ್ಲಿಂದಲೋ ಹತ್ತು ಗಂಟೆಗೆ ಹೊರಟದ್ದು? (35ಘ)ದಲ್ಲಿ ಹತ್ತುಗಂಟೆಗೆ ಎಂಬ ಅಂಶಕ್ಕೆ ವಾಕ್ಯದ ಉಳಿದ ಅಂಶದೊಂದಿ ಗಿರುವ ಸಂಬಂಧವನ್ನು ಪ್ರಶ್ನಿಸಬೇಕಾಗಿದೆ. ಈ ಅಂಶ ಇಂತಹದೇ ಎಂಬುದನ್ನು ಅದರೊಂದಿಗೆ ಬಂದಿರುವ ಓ ಪ್ರತ್ಯಯ ಸೂಚಿಸುತ್ತಿದೆಯಾದ ಕಾರಣ ಅದನ್ನು ವಾಕ್ಯದ ಕೊನೆಗೆ ವಗ್ರಾಯಿಸಬೇಕಾಗಿಲ್ಲ.
10.3.4 ದೃಢೀಕರಿಸುವ ಕೇಳ್ವಿಗಳು
ತಿಳಿಸುವ ವಾಕ್ಯವೊಂದನ್ನು ಒಂದು ವಾಕ್ಯಕೇಳ್ವಿಯಾಗಿ ಬದಲಾಯಿಸುವ ಬದಲು ಆ ವಾಕ್ಯವನ್ನು ಹಾಗೆಯೇ ಉಳಿಸಿ, ಅದು ತಿಳಿಸುವ ಸಂಗತಿ ನಿಜ ಎಂಬುದನ್ನು ಕೇಳುಗನ ಮೂಲಕ ದೃಢೀಕರಿಸುವುದಕ್ಕಾಗಿ ಇಲ್ಲವೇ ಅಥವಾ ತಾನೇ ಎಂಬ ಪದವನ್ನು ಅದಕ್ಕೆ ಸೇರಿಸಿಯೂ ವಾಕ್ಯಕೇಳ್ವಿಗಳನ್ನು ತಯಾರಿಸಲು ಸಾಧ್ಯವಿದೆ. ಒಂದು ವಾಕ್ಯ ತಿಳಿಸುವ ಸಂಗತಿ ನಿಜವಿರಬಹುದು ಎಂಬುದಾಗಿ ಆಡುಗನ ಅಭಿಪ್ರಾಯವಿರುವ ಸಂದಭ್ರಗಳಲ್ಲಿ ಇಂತಹ ವಾಕ್ಯಕೇಳ್ವಿಗಳ ಬಳಕೆಯಾಗುತ್ತದೆ. (36ಕ) ಸೀತೆಗೆ ದಣಿವಾಗಿದೆಯೋ? (36ಖ) ಸೀತೆಗೆ ದಣಿವಾಗಿದೆ, ಅಲ್ಲವೇ? (37ಕ) ಲೆಕ್ಕ ಬರೆದಾಗಿದೆಯೋ? (37ಖ) ಲೆಕ್ಕ ಬರೆದಾಗಿದೆ, ತಾನೆ? (36ಕ)ದಲ್ಲಿ ಒಂದು ಸರಳವಾದ ವಾಕ್ಯಕೇಳ್ವಿ ಬಂದಿದೆ. ಇದಕ್ಕೆ ಬದಲು (36ಖ) ದಲ್ಲಿ ಒಂದು ದೃಢೀಕರಿಸುವ ಕೇಳ್ವಿ ಬಂದಿದೆ. (36ಕ)ದಲ್ಲಿ ಸೀತೆಗೆ ದಣಿವಾ ಗಿದೆಯೋ ಅಥವಾ ಇಲ್ಲವೋ ಎಂಬ ವಿಷಯದಲ್ಲಿ ಆ ಕೇಳ್ವಿಯನ್ನು ಬಳಸಿ ದವನಿಗೆ ಯಾವ ಅಭಿಪ್ರಾಯವೂ ಇಲ್ಲ. ಆದರೆ (36ಖ)ವನ್ನು ಬಳಸಿದವನಿಗೆ ‘ಸೀತೆಗೆ ದಣಿವಾಗಿದೆ’ ಎಂಬ ಅಭಿಪ್ರಾಯವಿದ್ದು, ಅದನ್ನು ದೃಢೀಕರಿಸುವುದಕ್ಕಾಗಿ ಆತ ಆ ವಾಕ್ಯವನ್ನು ಬಳಸಿದ್ದಾನೆ. (37ಕ-ಖ)ದಲ್ಲೂ ಹೀಗೆಯೇ. ಅಲ್ಲವೇ ಮತ್ತು ತಾನೇ ಎಂಬವುಗಳ ಬಳಕೆಯ ನಡುವೆಯೂ ಅರ್ಥದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು. ತಾನೇ ಎಂಬುದನ್ನು ಬಳಸು ವವರಿಗೆ ಅಲ್ಲವೇ ಎಂಬುದನ್ನು ಬಳಸುವವರಿಗಿಂತ ಕೇಳುವ ವಿಷಯದಲ್ಲಿ ಹೆಚ್ಚು ದೃಢವಾದ ಅಭಿಪ್ರಾಯವಿರುವ ಹಾಗೆ ಕಾಣಿಸುತ್ತದೆ. ವಾಕ್ಯಕೇಳ್ವಿಗಳ ಕೊನೆಯಲ್ಲಿ ಬರುವ ಓ, ಏ ಮೊದಲಾದವುಗಳ ಹಾಗೆ ದೃಢೀಕರಿಸುವ ಅಲ್ಲವೇ (38ಕ-ಘ ನೋಡಿ) ಮತ್ತು ತಾನೇ (39ಕ-ಘ ನೋಡಿ) ಎಂಬವುಗಳನ್ನೂ ವಾಕ್ಯದ ಬೇರೆ ಬೇರೆ ಅಂಶಗಳಿಗೆ ಸೇರಿಸಿ ಹೇಳಲು ಸಾಧ್ಯವಿದೆ. ವಾಕ್ಯದ ಒಂದು ಅಂಶಕ್ಕೂ ಮತ್ತು ಉಳಿದ ಅಂಶಕ್ಕೂ ನಡುವಿರುವ ಸಂಬಂಧವನ್ನು ದೃಢೀಕರಿಸುವುದೇ ಇಂತಹ ಕೇಳ್ವಿಗಳ ಉದ್ದೇಶವೆಂದು ಹೇಳ ಬಹುದು. (38ಕ) ನಾಲ್ಕು ಗಂಟೆಗಲ್ಲವೇ ಈ ಗಾಡಿ ಬಿಡುವುದು? (38ಖ) ಈ ಪುಸ್ತಕವನ್ನಲ್ಲವೇ ನೀವು ತರಹೇಳಿದ್ದು? (38ಗ) ನೀವು ನಿನ್ನೆ ಇಂಗ್ಲೀಷಿನಲ್ಲಲ್ಲವೇ ಭಾಷಣ ಕೊಟ್ಟದ್ದು? (38ಘ) ನೀವಲ್ಲವೇ ನಿನ್ನೆ ಇಂಗ್ಲೀಷಿನಲ್ಲಿ ಭಾಷಣ ಕೊಟ್ಟದ್ದು? (39ಕ) ಇಬ್ಬರು ತಾನೇ ಬಂದದ್ದು? (39ಖ) ನೀವು ತಾನೇ ಅಲ್ಲಿಗೆ ನಾಳೆ ಹೋಗೋಣವೆಂದದ್ದು? (39ಗ) ನೀವು ಅಲ್ಲಿಗೆ ತಾನೇ ನಾಳೆ ಹೋಗೋಣವೆಂದದ್ದು? (39ಘ) ನೀವು ಅಲ್ಲಿಗೆ ನಾಳೆ ತಾನೇ ಹೋಗೋಣವೆಂದದ್ದು?
10.3.5 ಬದಲಿ ಕೇಳ್ವಿಗಳು
ಎರಡು ಅಥವಾ ಜಾಸ್ತಿ ವಾಕ್ಯಗಳಲ್ಲಿ ಯಾವುದು ಸರಿ ಎಂಬುದಾಗಿ ಕೇಳುವ ವಾಕ್ಯಗಳು ‘ಬದಲಿ ಕೇಳ್ವಿ’ಗಳು. ಇಂತಹ ಕೇಳ್ವಿಗಳ ಮೂಲಕವೂ ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ ನಿಜವೇ ಅಥವಾ ಅಲ್ಲವೇ ಎಂದು ತಿಳಿಯ ಬೇಕಾಗಿದೆಯಾದ ಕಾರಣ ಇವನ್ನೂ ವಾಕ್ಯಕೇಳ್ವಿಗಳೆಂದೇ ಪರಿಗಣಿಸಬಹುದು. (40ಕ) ರಘು ಹೋದದ್ದು ಪುಣೆಗೋ, ಬೊಂಬಾಯಿಗೋ? (40ಖ) ಅವನು ಪಾಠ ಓದುವುದೋ, ಕತೆಪುಸ್ತಕ ಓದುವುದೋ? (40ಗ) ಈಗ ನೀವು ಸ್ನಾನ ಮಾಡುತ್ತೀರೋ ಅಥವಾ ನಾನು ಮಾಡ ಬೇಕೋ? (40ಘ) ಆಕೆ ಇಂಟರ್ವ್ಯೂಗೆ ಹೋದದ್ದು ಬೆಂಗಳೂರಿಗೋ, ಚೆನ್ನೈಗೋ ಅಥವಾ ಡಿಲ್ಲಿಗೋ? ಇಂತಹ ಬದಲಿ ಕೇಳ್ವಿಗಳಿಗೂ ಮತ್ತು ಸರಳವಾದ ವಾಕ್ಯಕೇಳ್ವಿಗಳಿಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸರಳವಾದ ವಾಕ್ಯಕೇಳ್ವಿಗಳಿಗೆ ಹೌದು ಎಂದಾಗಲಿ, ಇಲ್ಲವೇ ಇಲ್ಲ ಅಥವಾ ಅಲ್ಲ ಎಂದಾಗಲಿ ಉತ್ತರ ಕೊಟ್ಟರೆ ಸಾಕು, ಆದರೆ ಇಂತಹ ಬದಲಿ ಕೇಳ್ವಿಗಳಿಗೆ ಉತ್ತರವಾಗಿ ಅವು ಸೂಚಿಸುವ ಎರಡು ಅಥವಾ ಜಾಸ್ತಿ ಸಂಗತಿಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಹೇಳ ಬೇಕಾಗುತ್ತದೆ.
ಯಾಕೆಂದರೆ, ತಾನು ಸೂಚಿಸುವ ‘ಬದಲಿ’ ಸಂಗತಿಗಳಲ್ಲಿ ಯಾವುದಾದರೂ ಒಂದು ಸರಿಯಿರಬಹುದು ಎಂಬುದಾಗಿ ಇಂತಹ ಬದಲಿ ಕೇಳ್ವಿಯನ್ನು ಬಳಸುವ ವ್ಯಕ್ತಿಯ ಅಭಿಪ್ರಾಯವಿರುತ್ತದೆ. ಹಾಗಾಗಿ ಇಂತಹ ಕೇಳ್ವಿಗಳಿಗೆ ಹೌದು ಅಥವಾ ಇಲ್ಲ/ಅಲ್ಲ ಎಂದಿಷ್ಟೇ ಉತ್ತರ ಕೊಟ್ಟರೆ ಕೇಳ್ವಿಯನ್ನು ಬಳಸಿದವನಿಗೆ ಸಮಾ ಧಾನವಾಗಲಾರದು. 10.4. ವಾಕ್ಯಾಂಗ ಕೇಳ್ವಿಗಳು ವಾಕ್ಯಾಂಗ ಕೇಳ್ವಿಯೊಂದನ್ನು ಬಳಸುವ ವ್ಯಕ್ತಿಗೆ ಅವನು ಸೂಚಿಸುವ ಘಟನೆಯ ಒಂದು ಅಂಶದ ಕುರಿತಾಗಿ ಮಾತ್ರ ಮಾಹಿತಿ ಬೇಕಾಗಿರುತ್ತದೆ. ಉಳಿದ ಅಂಶ ಗಳೆಲ್ಲ ಆತನಿಗೆ ತಿಳಿದಿರುತ್ತದೆ. ಹಾಗಾಗಿ ಇಂತಹ ಕೇಳ್ವಿಗಳನ್ನು ಬಳಸುವ ವ್ಯಕ್ತಿಗೆ ಯಾವ ಅಂಶವನ್ನು ತಿಳಿಯಬೇಕಾಗಿದೆಯೋ ಅದನ್ನು ಸೂಚಿಸುವುದಕ್ಕಾಗಿ ಈ ಕೇಳ್ವಿಗಳಲ್ಲಿ ಒಂದು ‘ಅನಿಶ್ಚಿತ’ ಪದವನ್ನು ಬಳಸುವ ಅವಶ್ಯಕತೆಯಿದೆ. (41ಕ) ರಾಜು ಇವತ್ತು ಎಲ್ಲಿಗೆ ಹೋಗಿದ್ದಾನೆ? (41ಖ) ನಿಮ್ಮ ಮನೆಗೆ ಇವತ್ತು ಯಾರು ಬಂದಿದ್ದಾರೆ? (41ಗ) ನಾವಿಲ್ಲಿ ಎಷ್ಟು ಗಂಟೆಯ ವರೆಗೆ ಕಾಯುತ್ತಿರಬೇಕು? (41ಘ) ನೀವು ನಿನ್ನೆ ಮದುವೆಗೆ ಯಾಕೆ ಬರಲಿಲ್ಲ? (41ಙ) ನೀವು ಈ ಮನೆಗೆ ಯಾವಾಗ ಬಂದಿರಿ? (41ಚ) ಅವರಿಗೆ ಯಾವ ಪುಸ್ತಕ ಬೇಕಾಗಿದೆ? (41ಕ)ವನ್ನು ಬಳಸಿದ ವ್ಯಕ್ತಿಗೆ ರಾಜು ಇವತ್ತು ಎಲ್ಲಿಗೋ ಹೋಗಿದ್ದಾನೆ ಎಂದು ಗೊತ್ತಿದೆ, ಆದರೆ ಎಲ್ಲಿಗೆ ಎಂದು ತಿಳಿದಿಲ್ಲ; ಇದೇ ರೀತಿಯಲ್ಲಿ (41ಖ) ವನ್ನು ಬಳಸಿದ ವ್ಯಕ್ತಿಗೆ ನಿಮ್ಮ ಮನೆಗೆ ಇವತ್ತು ಯಾರೋ ಬಂದಿದ್ದಾರೆ ಎಂದು ತಿಳಿದಿದೆ, ಆದರೆ ಬಂದವರು ಯಾರು ಎಂದು ತಿಳಿದಿಲ್ಲ. ಈ ರೀತಿ ತಿಳಿಯದಿರುವ ಒಂದು ಅಂಶವನ್ನು ಮಾತ್ರ ತಿಳಿದುಕೊಳ್ಳುವುದಕ್ಕಾಗಿ ಇಂತಹ ವಾಕ್ಯಾಂಗ ಕೇಳ್ವಿಗಳಲ್ಲಿ ಎಲ್ಲಿಗೆ, ಯಾರು, ಎಷ್ಟು, ಯಾಕೆ, ಯಾವಾಗ ಮೊದಲಾದ ಅನಿಶ್ಚಿತ ಪದಗಳ ಬಳಕೆಯಾಗುತ್ತದೆ. ವಾಕ್ಯಾಂಗ ಕೇಳ್ವಿಗಳಿಗೆ ಉತ್ತರ ಕೊಡುವವರು ಅವುಗಳಲ್ಲಿ ಬಂದಿರುವ ಅನಿಶ್ಚಿತ ಪದಗಳಿಗೆ ಸಮನಾಗಿರುವ ನಿಶ್ಚಿತ ಪದಗಳನ್ನು (ಎಂದರೆ, ಜಾಗ, ವ್ಯಕ್ತಿ,
ಮೊತ್ತ, ಕಾರಣ, ಸಮಯ ಮೊದಲಾದುವನ್ನು ತಿಳಿಸುವ ಪದಗಳನ್ನು) ಬಳಸ ಬೇಕಾಗುತ್ತದೆ. ಉದಾಹರಣೆಗಾಗಿ ಒಂದು ವಾಕ್ಯಾಂಗ ಕೇಳ್ವಿಯಲ್ಲಿ ಯಾರು ಎಂಬ ಪದ ಬಂದಿದೆಯಾದರೆ ಅದಕ್ಕೆ ಕೊಡುವ ಉತ್ತರದಲ್ಲಿ ಇಂತಹವರು ಎಂಬುದನ್ನೂ, ಎಷ್ಟು ಎಂಬ ಪದ ಬಂದಿದೆಯಾದರೆ ಇಂತಿಷ್ಟು ಎಂಬುದನ್ನೂ ತಿಳಿಸಬೇಕಾಗುತ್ತದೆ. (42ಕ) ಮದುವೆಗೆ ಯಾರು ಹೋಗುತ್ತಾರೆ? (42ಖ) ರಾಜು ಹೋಗುತ್ತಾನೆ. (43ಕ) ಈ ಮನೆಗೆ ಎಷ್ಟು ಖಚ್ರಾಯಿತು? (43ಖ) ಎಂಟು ಲಕ್ಷ ಖಚ್ರಾಯಿತು.
10.4.1 ಅನಿಶ್ಚಿತ ಪದಗಳು
ವಾಕ್ಯಾಂಗ ಕೇಳ್ವಿಗಳ ಮೂಲಕ ಒಂದು ಸಂಗತಿಯ ಬೇರೆ ಬೇರೆ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸುವುದಕ್ಕಾಗಿ ಅಂತಹ ವಾಕ್ಯಗಳಲ್ಲಿ ಯಾರು, ಏನು, ಯಾಕೆ, ಎಲ್ಲಿ, ಯಾವಾಗ, ಹೇಗೆ, ಎಷ್ಟು, ಎಂತಹ ಮೊದಲಾದ ಅನಿಶ್ಚಿತ ಪದಗಳ ಬಳಕೆಯಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು. ಕನ್ನಡ ವ್ಯಾಕರಣಗಳಲ್ಲಿ ಈ ಪದಗಳನ್ನು ಸಾಮಾನ್ಯವಾಗಿ ‘ಪ್ರಶ್ನಾರ್ಥಕ’ ಪದಗಳೆಂದು ಕರೆಯುವುದು ರೂಢಿ.
ಆದರೆ ಮೇಲೆ (10.3.1ರಲ್ಲಿ) ಸೂಚಿಸಿದ ಹಾಗೆ ನಿಜಕ್ಕೂ ಪ್ರಶ್ನೆಯ ಇಲ್ಲವೇ ಕೇಳ್ವಿಯ ಅರ್ಥವಿರುವುದು ವಾಕ್ಯದ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪಕ್ಕಲ್ಲದೆ ಈ ಅನಿಶ್ಚಿತ ಪದಗಳಿಗಲ್ಲ. ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗೆ ಇಳಿಯುವುದಾದರೆ ಅದೊಂದು ತಿಳಿಸುವ ವಾಕ್ಯ, ಮತ್ತು ಹಾಗೆ ಕೆಳಗೆ ಇಳಿಯದೆ ಉಳಿಯುವುದಾದರೆ ಅದೊಂದು ಕೇಳ್ವಿ. ಬೇರೆ ಹಲವು ಬಳಕೆಗಳಲ್ಲಿ ಇವೇ ಪದಗಳಿಗೆ ಅನಿಶ್ಚಿತಾರ್ಥ ಮಾತ್ರ ಇದೆ ಯಲ್ಲದೆ ಕೇಳ್ವಿಯ ಅರ್ಥವಿಲ್ಲ. ಉದಾಹರಣೆಗಾಗಿ, ‘ಅಥವಾ’ ಎಂಬ ಅರ್ಥ ವಿರುವ ಓ ಪ್ರತ್ಯಯದೊಂದಿಗೆ, ಇಲ್ಲವೇ ‘ಮತ್ತು’ ಎಂಬ ಅರ್ಥವಿರುವ ಊ ಪ್ರತ್ಯಯದೊಂದಿಗೆ ಈ ಪದಗಳನ್ನು ಬಳಸಿದಾಗ ಅವಕ್ಕೆ ಅನಿಶ್ಚಿತಾರ್ಥ ಮಾತ್ರ ಇದೆಯಲ್ಲದೆ ಕೇಳ್ವಿಯ ಅರ್ಥವಿಲ್ಲ.
(44ಕ) ಆತನ ಮನೆಗೆ ಯಾರೋ ಬಂದಿದ್ದಾರೆ. (44ಖ) ಆಕೆ ಇವತ್ತು ಬೆಳಿಗ್ಗೇನೇ ಎಲ್ಲಿಗೋ ಹೋಗಿದ್ದಾಳೆ. (44ಗ) ಸೋಮಶೇಖರನ ಮನೆ ಇಲ್ಲೇ ಎಲ್ಲೋ ಇದೆ. (44ಘ) ಕೋಪ ಬಂದರೆ ಆತ ಏನೂ ಮಾಡಬಹುದು. (44ಕ-ಘ) ವಾಕ್ಯಗಳಲ್ಲಿ ಯಾರು, ಎಲ್ಲಿಗೆ, ಎಲ್ಲಿ ಮತ್ತು ಏನು ಎಂಬ ಪದಗಳಿಗೆ ಕೇಳ್ವಿಯ ಅರ್ಥವಿಲ್ಲ ಎಂಬುದನ್ನು ಗಮನಿಸಬಹುದು. ಅನಿಶ್ಚಿತ ವಾಗಿರುವ ಒಬ್ಬ ವ್ಯಕ್ತಿ, ಒಂದು ಜಾಗ, ಇಲ್ಲವೇ ಒಂದು ಕೆಲಸವನ್ನು ಮಾತ್ರ ಅವು ಸೂಚಿಸುತ್ತವೆ. ಬೇರೆಯೂ ಹಲವು ರೀತಿಯ ವಾಕ್ಯಗಳಲ್ಲಿ ಈ ಪದಗಳನ್ನು ಬಳಸಲು ಸಾಧ್ಯವಿದ್ದು ಅಂತಹ ಬಳಕೆಗಳಲ್ಲೂ ಅವಕ್ಕೆ ಕೇಳ್ವಿಯ ಅರ್ಥವಿಲ್ಲ.
(45ಕ) ಸಂತೆಯಲ್ಲಿ ಇವತ್ತು ಎಷ್ಟು ಜನ ಸೇರಿದ್ದಾರೆ! (45ಖ) ಹಣವನ್ನು ಎಲ್ಲಿ ಅಡಗಿಸಿಟ್ಟಿದ್ದಾರೆಂದು ಅವನು ತನ್ನ ಡೈರಿಯಲ್ಲಿ ಬರೆದಿದ್ದಾನೆ. (45ಗ) ಈ ಕತೆಯನ್ನು ಯಾರು ಬರೆದಿದ್ದಾರೋ ಅವರಿಗೆ ತಲೆ ಸರಿಯಿಲ್ಲ. ಒಟ್ಟು ಸೇರಿರುವ ಜನರ ಮೊತ್ತದ ಕುರಿತಾಗಿ ತನ್ನ ಆಶ್ಚರ್ಯವನ್ನು ಸೂಚಿಸಲು (45ಕ)ವನ್ನು ಬಳಲಾಗಿದೆ. ಇದರಲ್ಲಿ ಬಂದಿರುವ ಎಷ್ಟು ಎಂಬ ಪದಕ್ಕೆ ಆ ಮೊತ್ತದ ಕುರಿತು ಅನಿಶ್ಚಿತತೆಯನ್ನು ಸೂಚಿಸುವ ಅರ್ಥವಿದೆಯಲ್ಲದೆ ಕೇಳ್ವಿಯ ಅರ್ಥವಿಲ್ಲ. (45ಖ)ದಲ್ಲಿ ಬಂದಿರುವ ಎಲ್ಲಿ ಎಂಬ ಪದ ಸೂಚಿಸುವ ಜಾಗ ಆಡುಗನಿಗೆ ತಿಳಿದಿಲ್ಲದಿರಬಹುದು, ಆದರೆ ಅದನ್ನು ತಿಳಿಯುವ ಇಚ್ಛೆ ಆತನಿಗೆ ಇರುವ ಹಾಗೆ ಕಾಣಿಸುವುದಿಲ್ಲ.
(45ಗ)ದಲ್ಲಿ ಯಾರು ಎಂಬ ಅನಿಶ್ಚಿತ ಪದವನ್ನು ಎರಡು ವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಹೇಳುವ ಒಂದು ಸಾಧನವಾಗಿ ಬಳಸಲಾಗಿದೆ. ಇಲ್ಲೂ ಈ ಪದಕ್ಕೆ ಕೇಳ್ವಿಯ ಅರ್ಥವಿಲ್ಲ. ಯಾರು, ಏನು, ಯಾಕೆ ಮೊದಲಾದ ಪದಗಳಿಗೆ ಕನ್ನಡದಲ್ಲಿ ಈ ರೀತಿ ಹಲವು ಬಳಕೆಗಳಿದ್ದು, ಅವುಗಳ ನಡುವೆ ಹೆಚ್ಚಿನವುಗಳಲ್ಲೂ ಕಾಣಿಸಿಕೊಳ್ಳುವ ಅರ್ಥವೆಂದರೆ ಅನಿಶ್ಚಿತಾರ್ಥ ಮಾತ್ರ. ಹಾಗಾಗಿ ಅವನ್ನು ಅನಿಶ್ಚಿತಾರ್ಥದ ಪದಗಳೆಂದು ಕರೆದು, ಅವು ಬರುವ ಕೆಲವು ವಾಕ್ಯಗಳಲ್ಲಿ ಮಾತ್ರ ಕಾಣಿಸುವ ಕೇಳ್ವಿಯ ಅರ್ಥಕ್ಕೆ ಅಂತಹ ವಾಕ್ಯಗಳ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪವೇ ಕಾರಣ ಎಂದು ಹೇಳುವುದೇ ಸರಿಯೆಂದು ತೋರುತ್ತದೆ (ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು (ಭಟ್ 2003 ಮತ್ತು ಭಟ್ 2004) ರಲ್ಲಿ ನೋಡಬಹುದು).
10.4.2 ಕೇಳುವ ಅಂಗಗಳು
ವಾಕ್ಯಾಂಗ ಕೇಳ್ವಿಗಳ ಮೂಲಕ ಒಂದು ವಾಕ್ಯವು ತಿಳಿಸುವ ಘಟನೆ ಇಲ್ಲವೇ ಸಂಗತಿಯ ಬೇರೆ ಬೇರೆ ಅಂಶಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೇಳಿ ತಿಳಿಯಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ (46)ನೇ ವಾಕ್ಯವು ತಿಳಿಸುವ ಘಟನೆಯಲ್ಲಿ ಆರು ಮುಖ್ಯ ಅಂಶಗಳಿದ್ದು, ಈ ಅಂಶಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆರು ರೀತಿಯ ವಾಕ್ಯಾಂಗ ಕೇಳ್ವಿಗಳನ್ನು ಬಳಸಲು ಸಾಧ್ಯವಿದೆ. ರಘು ನಿನ್ನೆ ನಿಮ್ಮನ್ನು ನೋಡುವುದಕ್ಕಾಗಿ ಬೆಂಗಳೂರಿನಿಂದ ಟ್ಯಾಕ್ಸಿಯಲ್ಲಿ ಬಂದಿದ್ದ. (46ಕ) ಯಾರು ಬಂದಿದ್ದರು? (46ಖ) ರಘು ಏನು ಮಾಡಿದ್ದ? (46ಗ) ಯಾವಾಗ ಬಂದಿದ್ದ? (46ಘ) ಎಲ್ಲಿಂದ ಬಂದಿದ್ದ? (46ಙ) ಹೇಗೆ ಬಂದಿದ್ದ?
(46ಚ) ಯಾಕೆ ಬಂದಿದ್ದ?
-ಬಂದಿದ್ದ. -ನಿನ್ನೆ. -ಬೆಂಗಳೂರಿನಿಂದ. -ಟ್ಯಾಕ್ಸಿಯಲ್ಲಿ. -ನಿಮ್ಮನ್ನು ನೋಡುವುದಕ್ಕಾಗಿ. ಈ ರೀತಿ ಕ್ರಿಯೆಯ ಮುಖ್ಯ ಅಂಶಗಳನ್ನು ಮಾತ್ರವಲ್ಲದೆ ಇತರ ಮುಖ್ಯ ವಲ್ಲದ ಅಂಶಗಳನ್ನೂ ಇಂತಹ ವಾಕ್ಯಾಂಗ ಕೇಳ್ವಿಗಳ ಮೂಲಕ ಕೇಳಿ ತಿಳಿದು ಕೊಳ್ಳಲು ಸಾಧ್ಯವಿದೆ. (46ಛ) ರಘು ಯಾರನ್ನು ನೋಡುವುದಕ್ಕಾಗಿ ಬಂದಿದ್ದ? -ನಿಮ್ಮನ್ನು. (46ಜ) ರಘು ಯಾವ ರಾತ್ರಿ ಬಂದಿದ್ದ? -ನಿನ್ನೆ ರಾತ್ರಿ. ಒಂದೇ ಕೇಳ್ವಿಯಲ್ಲಿ ಒಂದಕ್ಕಿಂತ ಜಾಸ್ತಿ ಅನಿಶ್ಚಿತ ಪದಗಳನ್ನು ಬಳಸುವುದರ ಮೂಲಕ ಒಮ್ಮೆಗೇನೇ ಒಂದಕ್ಕಿಂತ ಜಾಸ್ತಿ ಅಂಶಗಳ ಕುರಿತಾಗಿ ತಿಳಿಯ ಬೇಕಾಗಿದೆ ಎಂಬುದನ್ನು ಸೂಚಿಸಲು ಸಾಧ್ಯವಿದೆ. (47ಕ) ನೀವು ಯಾರ ಮನೆಗೆ ಯಾವಾಗ ಹೋದಿರಿ? (47ಖ) ಈ ಪುಸ್ತಕವನ್ನು ಯಾರು ಯಾವಾಗ ಎಲ್ಲಿಂದ ತಂದರು? (47ಗ) ಯಾರು ಯಾರನ್ನು ಯಾವಾಗ ಎಲ್ಲಿ ಹತ್ಯೆ ಮಾಡಿದರು? (47ಘ) ಈ ಮೇಲಿನ ಮಾತನ್ನು ಯಾರು ಯಾವಾಗ ಎಲ್ಲಿ ಮತ್ತು ಯಾಕಾಗಿ ಹೇಳಿದರು? ಆದರೆ ಮಾತಿನಲ್ಲಿ ಇಂತಹ ಒಂದಕ್ಕಿಂತ ಜಾಸ್ತಿ ಅನಿಶ್ಚಿತ ಪದಗಳಿರುವ ವಾಕ್ಯಾಂಗ ಕೇಳ್ವಿಗಳ ಬಳಕೆ ಬಹಳ ಅಪರೂಪವೆಂದೇ ಹೇಳಬಹುದು. ಸಾಮಾನ್ಯ ವಾಗಿ ಪರೀಕ್ಷೆಗಳಲ್ಲಿ ಕೊಡುವ ಪ್ರಶ್ನಪತ್ರಿಕೆಗಳಲ್ಲಿ ಮಾತ್ರವೇ ಇಂತಹ ಬಳಕೆ ಕಂಡುಬರುತ್ತದೆ. ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಇಂತಹ ಕೇಳ್ವಿಗಳನ್ನು ಬೇರೆ ಬೇರಾಗಿ ಒಡೆದು, ಒಂದು ಕೇಳ್ವಿಯಲ್ಲಿ ಒಂದು ಅನಿಶ್ಚಿತ ಪದ ಮಾತ್ರ ಉಳಿ ದಿರುವ ಹಾಗೆ ಬಳಸುವುದೇ ಜಾಸ್ತಿ. (48ಕ) ನೀವು ಎಲ್ಲಿಂದ ಬಂದಿರಿ? ಯಾವಾಗ ಬಂದಿರಿ? ಯಾಕೆ ಬಂದಿರಿ? ಯಾರು ನಿಮ್ಮನ್ನು ಬರಹೇಳಿದರು? (48ಖ) ಅಪಘಾತವನ್ನು ಯಾರು ನೋಡಿದ್ದು? ಯಾವಾಗ ನೋಡಿದ್ದು? ಎಲ್ಲಿಂದ ನೋಡಿದ್ದು? ಹೇಗೆ ನೋಡಿದ್ದು? ಅನಿಶ್ಚಿತ ಪದಗಳು ಒಂದನ್ನೊಂದು ಅವಲಂಬಿಸಿಕೊಂಡಿರುವಂತಹ ಕೇಳ್ವಿ ಗಳಲ್ಲಿ ಮಾತ್ರ ಅವನ್ನು ಈ ರೀತಿ ಒಡೆದು ಹೇಳಲು ಸಾದ್ಯವಾಗದು.
(49ಕ) ಯಾವ ಕಪಾಟಿನಲ್ಲಿ ಯಾವ ವಸ್ತುಗಳನ್ನಿರಿಸಬೇಕು? (49ಖ) ಯಾವ ಬೆಕ್ಕಿಗೆ ಯಾವ ಪಾತ್ರೆಯಲ್ಲಿ ಹಾಲು ಕೊಡಬೇಕು? ಇಂತಹ ಕೇಳ್ವಿಗಳಲ್ಲಿ ಪ್ರತಿಯೊಂದು ಅನಿಶ್ಚಿತ ಪದವೂ ಒಂದಕ್ಕಿಂತ ಜಾಸ್ತಿ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಸೂಚಿಸುತ್ತಿದ್ದು, ಅವುಗಳೊಳಗೆ ಅನುಕ್ರಮವಿದೆ ಯಾದಲ್ಲಿ ಈ ಅನಿಶ್ಚಿತ ಪದಗಳನ್ನು ಎರಡೆರಡು ಬಾರಿ ಬಳಸುವ ಕ್ರಮ ಕನ್ನಡ ದಲ್ಲಿದೆ. ಇಂತಹವನ್ನೂ ಒಡೆದು ಹೇಳಲು ಸಾಧ್ಯವಾಗದು. (50ಕ) ಯಾರು ಯಾರಿಗೆ ಯಾವ ಯಾವ ಪುಸ್ತಕ ಬೇಕು? (50ಖ) ಯಾವ ಯಾವ ಡಬ್ಬದಲ್ಲಿ ಯಾವ ಯಾವ ವಸ್ತುಗಳಿವೆ? ಇದಲ್ಲದೆ, ಇಂತಹ ಕೇಳ್ವಿಗಳಿಗೆ ಉತ್ತರ ಕೊಡುವಾಗಲೂ ಅವನ್ನು ಜೋಡಿ ಜೋಡಿಯಾಗಿ ಒಟ್ಟಿಗೆ ಸೇರಿಸಿಯೇ ಕೊಡಬೇಕೆಂಬ ಆಶಯ ಅಂತಹ ಕೇಳ್ವಿ ಯನ್ನು ಬಳಸಿದವನದಾಗಿರುತ್ತದೆ. (51ಕ) ನನಗೆ ಗಣಿತದ ಪುಸ್ತಕ, ರಂಗನಿಗೆ ಇಂಗ್ಲಿಷ್ ಪುಸ್ತಕ ಮತ್ತು ಜಾನಕಿಗೆ ಸಂಸ್ಕೃತ ಪುಸ್ತಕ. (51ಖ) ಇದರಲ್ಲಿ ಜೀರಿಗೆ, ಇದರಲ್ಲಿ ಮೆಣಸಿನಪುಡಿ, ಇದರಲ್ಲಿ ಉಪ್ಪು, ಮತ್ತು ಇದರಲ್ಲಿ ಸಾಸಿವೆ. (51ಕ-ಖ) ವಾಕ್ಯಗಳು ಅನುಕ್ರಮವಾಗಿ (50ಕ-ಖ)ದಲ್ಲಿ ಕೊಟ್ಟಿರುವ ಕೇಳ್ವಿ ಗಳಿಗೆ ಉತ್ತರಗಳಾಗಬಲ್ಲುವೆಂಬುದನ್ನು ಗಮನಿಸಬಹುದು.
10.4.3 ಪದವಗ್ರದಲ್ಲಿ ವ್ಯತ್ಯಾಸ
ವಾಕ್ಯಾಂಗ ಕೇಳ್ವಿಗಳ ಮೂಲಕ ತಿಳಿದುಕೊಳ್ಳಬೇಕಾಗಿರುವ ವಾಕ್ಯಾಂಶ ಒಂದು ನಾಮಪದದ ಮೂಲಕ ಸೂಚಿಸುವಂತಹದಿರಬಹುದು ಇಲ್ಲವೇ ಒಂದು ಗುಣ ಪದದ ಮೂಲಕ ಸೂಚಿಸುವಂತಹದಿರಬಹುದು. ಉದಾಹರಣೆಗಾಗಿ, ಯಾರು ಇಲ್ಲವೇ ಯಾವುದು ಎಂಬುದನ್ನು ಒಂದು ವಾಕ್ಯಾಂಗ ಕೇಳ್ವಿಯಲ್ಲಿ ಬಳಸಿದಾಗ ಅದಕ್ಕೆ ಉತ್ತರವಾಗಿ ಒಂದು ನಾಮಪದವನ್ನು ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಯಾವ ಇಲ್ಲವೇ ಎಂತಹ ಎಂಬುದನ್ನು ಬಳಸಿದಲ್ಲಿ ಅದಕ್ಕೆ ಉತ್ತರವಾಗಿ ಒಂದು ಗುಣಪದವನ್ನು ಕೊಡಬೇಕಾಗುತ್ತದೆ, ಇಲ್ಲವೇ ಒಂದು ಗುಣಪದದ ಸ್ಥಾನದಲ್ಲಿ ಬರಬಲ್ಲ ನಾಮಪದ ಇಲ್ಲವೇ ಕ್ರಿಯಾಪದದ ಸಂಬಂಧಿಸುವ ರೂಪವನ್ನು ಕೊಡಬೇಕಾಗುತ್ತದೆ. ಎಷ್ಟು ಎಂಬುದನ್ನು ಬಳಸಿ ದಲ್ಲಿ ಅದಕ್ಕೆ ಉತ್ತರವಾಗಿ ಒಂದು ಎಣಿಕೆಯ ಇಲ್ಲವೇ ಅಳತೆಯ ಪದವನ್ನು ಕೊಡಬೇಕಾಗುತ್ತದೆ. (52ಕ) ಯಾವ ಚೆಂಡು ಸಿಕ್ಕಿತು? (52ಖ) ಕೆಂಪು ಚೆಂಡು ಸಿಕ್ಕಿತು. (53ಕ) ಅವಳು ಎಂತಹ ಸೀರೆಯನ್ನು ಉಟ್ಟುಕೊಂಡಿದ್ದಾಳೆ? (53ಖ) ಅವಳು ನೀಲಿಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದಾಳೆ. (54ಕ) ಎಷ್ಟು ರೂಪಾಯಿ ಕೊಟ್ಟರು? (54ಖ) ನೂರ ಐವತ್ತು ರೂಪಾಯಿ ಕೊಟ್ಟರು. (52ಕ) ಕೇಳ್ವಿಯಲ್ಲಿ ಬಂದಿರುವ ಯಾವ ಎಂಬ ಪದಕ್ಕೆ ಉತ್ತರವಾಗಿ (52ಖ)ದಲ್ಲಿ ಕೆಂಪು ಎಂಬ ಗುಣಪದ ಬಂದಿದೆ, (53ಕ)ದಲ್ಲಿ ಬಂದ ಎಂತಹ ಎಂಬುದಕ್ಕೆ ಬದಲಾಗಿ (53ಖ)ದಲ್ಲಿ ನೀಲಿಬಣ್ಣದ ಎಂಬ ಗುಣಪದದ ಸ್ಥಾನ ದಲ್ಲಿ ಬರಬಲ್ಲ ನಾಮಪದದ ಸಂಬಂಧಿಸುವ ರೂಪ ಬಂದಿದೆ, ಮತ್ತು (54ಕ) ದಲ್ಲಿ ಬಂದ ಎಷ್ಟು ಎಂಬುದಕ್ಕೆ ಬದಲಾಗಿ (54ಖ)ದಲ್ಲಿ ಐವತ್ತು ಎಂಬ ಎಣಿಕೆಯ ಪದ ಬಂದಿದೆ. ವಾಕ್ಯಾಂಗ ಕೇಳ್ವಿಗಳಲ್ಲಿ ಬರುವ ಅನಿಶ್ಚಿತ ಪದಗಳು ಘಟನೆಯೊಂದರಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸಲು ಸಾಧ್ಯವಿದ್ದು, ಈ ಕೆಲಸಗಳನ್ನವಲಂಬಿಸಿ ಅವು ಬೇರೆ ಬೇರೆ ವಿಭಕ್ತಿ ರೂಪಗಳಲ್ಲಿ ಬರಬಲ್ಲುವು. ಉದಾಹರಣೆಗಾಗಿ, ಅನಿಶ್ಚಿತವಾಗಿರುವ ವ್ಯಕ್ತಿಯೊಬ್ಬ ನನ್ನು ಸೂಚಿಸುವ ಯಾರು ಎಂಬ ಪದ ಎಲ್ಲಾ ವಿಭಕ್ತಿ ರೂಪಗಳಲ್ಲೂ ಬರ ಬಲ್ಲುದು.
(55ಕ) ಇವತ್ತು ನೀವು ಪೂಜೆಗೆ ಯಾರನ್ನು ಕರೆದಿದ್ದೀರಿ? (55ಖ) ರಾಜು ಲೆಕ್ಕದ ಪುಸ್ತಕವನ್ನು ಯಾರಿಗೆ ಕೊಟ್ಟ? (55ಗ) ಈ ಪುಸ್ತಕವನ್ನು ಯಾರಿಂದ ತಂದಿರಿ? (55ಘ) ಈ ಪುಸ್ತಕ ಯಾರಲ್ಲಿದೆ? ಇದೇ ರೀತಿಯಲ್ಲಿ ಎಷ್ಟು ಎಂಬ ಪದ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆ ಇಲ್ಲವೇ ಪ್ರಮಾಣದ ಅನಿಶ್ಚಿತತೆಯನ್ನು ಸೂಚಿಸುತ್ತಿದೆಯಾದ ಕಾರಣ, ಅದರೊಂದಿಗೆ ಎಲ್ಲಾ ವಿಭಕ್ತಿಪ್ರತ್ಯಯಗಳೂ ಬರಬಲ್ಲುವು. ಅದಕ್ಕೆ ಬದಲಾಗಿ ಉತ್ತರದಲ್ಲಿ ಬರಬಲ್ಲ ಎಣಿಕೆ ಇಲ್ಲವೇ ಪ್ರಮಾಣವನ್ನು ಸೂಚಿಸುವ ಪದಗಳೂ ಈ ರೀತಿ ಎಲ್ಲಾ ವಿಭಕ್ತಿಪ್ರತ್ಯಯಗಳೊಂದಿಗೂ ಬರಬಲ್ಲುವು. (56ಕ) ಎಷ್ಟನ್ನು ಈಗಲೇ ಕೊಡಬೇಕಾಗುತ್ತದೆ? (56ಖ) ಈ ಸಂಖ್ಯೆಯನ್ನು ಎಷ್ಟರಿಂದ ಕಳೆಯಬೇಕಾಗುತ್ತದೆ? (56ಗ) ಇದನ್ನು ಎಷ್ಟಕ್ಕೆ ಕೊಂಡುಕೊಂಡಿರಿ? (56ಘ) ನಿಮ್ಮ ಶೇರು ಎಷ್ಟರಲ್ಲಿ ನಿಂತಿದೆ? ಎಷ್ಟು ಎಂಬ ಪದಕ್ಕೆ (ನೇ ಅಥವಾ ನೆಯ) ಪ್ರತ್ಯಯವನ್ನು ಸೇರಿಸಿ, ಎಣಿಕೆಯಲ್ಲಿ ಯಾವುದಾದರೊಂದು ವ್ಯಕ್ತಿ ಇಲ್ಲವೇ ವಸ್ತುವಿನ ಜಾಗ ಯಾವುದು ಎಂಬುದನ್ನು ಕೇಳಲು ಸಾಧ್ಯವಿದೆ. ಆದರೆ ಈ ಪದ ನೇರವಾಗಿ ವಿಭಕ್ತಿ ಪ್ರತ್ಯಯ ಗಳೊಂದಿಗೆ ಬರಲಾರದು. (56ಙ) ರಾಜು ಎಷ್ಟನೇ ಕ್ಲಾಸಿನಲ್ಲಿ ಕಲಿಯುತ್ತಿದ್ದಾನೆ? ಇದೇ ರೀತಿಯಲ್ಲಿ ಗುಣಪದಗಳ ಜಾಗದಲ್ಲಿ ಬರುವ ಯಾವ ಮತ್ತು ಎಂತಹ ಎಂಬ ಪದಗಳು ಯಾವ ವಿಭಕ್ತಿಪ್ರತ್ಯಯದೊಂದಿಗೂ ಬರಲಾರವು. ಎಂತಹ ಎಂಬುದಕ್ಕೆ ದು ಪ್ರತ್ಯಯವನ್ನು ಸೇರಿಸಿದಾಗ ಮಾತ್ರ ಅದು ನಾಮ ಪದಗಳ ಸ್ಥಾನದಲ್ಲಿ ಬರಬಲ್ಲುದಾಗಿದ್ದು, ಅದಕ್ಕೆ ಬೇರೆ ಬೇರೆ ವಿಭಕ್ತಿಪ್ರತ್ಯಯ ಗಳನ್ನು ಸೇರಿಸಲು ಸಾಧ್ಯವಾಗುತ್ತದೆ.
ಒಂದು ಘಟನೆ ಇಲ್ಲವೇ ಸಂಗತಿಯ ಜಾಗವನ್ನು ತಿಳಿಯುವುದಕ್ಕಾಗಿ ಬಳಸ ಬೇಕಾಗಿರುವ ಎಲ್ಲಿ ಎಂಬ ಪದ ಇಂದ ಮತ್ತು ಗೆ ಎಂಬ ಎರಡು ವಿಭಕ್ತಿ ಪ್ರತ್ಯಯಗಳೊಂದಿಗೆ ಮಾತ್ರ ಬರಬಲ್ಲುದು. ಅಲ್ಲಿ ಪ್ರತ್ಯಯದ ಅರ್ಥ ಅದಕ್ಕೇನೇ ಇದೆ ಮತ್ತು ಅನ್ನು ಪ್ರತ್ಯಯದ ಅವಶ್ಯಕತೆ ಅದಕ್ಕಿಲ್ಲ. (57ಕ) ಇಷ್ಟೆಲ್ಲಾ ಇರುವೆಗಳು ಎಲ್ಲಿಂದ ಬಂದುವು? (57ಖ) ಮೆರವಣಿಗೆ ಎಲ್ಲಿಗೆ ಹೋಗುತ್ತಿದೆ? (57ಗ) ಈ ಮೂರು ಕಾಲಿನ ಎತ್ತು ನಿಮಗೆ ಎಲ್ಲಿ ಸಿಕ್ಕಿತು? ಒಂದು ಘಟನೆ ಇಲ್ಲವೇ ಸಂಗತಿಯ ಸಮಯವನ್ನು ತಿಳಿಯುವುದಕ್ಕಾಗಿ ಬಳಸಬೇಕಾಗಿರುವ ಯಾವಾಗ ಎಂಬ ಪದ ಇಂದ ಪ್ರತ್ಯಯದೊಂದಿಗೆ ಮಾತ್ರ ಬರಬಲ್ಲುದು. ಗೆ ಪ್ರತ್ಯಯದ ಅರ್ಥವನ್ನು ಈ ಪದದ ಮೂಲಕ ನೇರವಾಗಿ ಸೂಚಿಸಲು ಸಾಧ್ಯವಾಗದು. (58ಕ) ಅವರು ಯಾವಾಗಿನಿಂದ ಈ ಊರಲ್ಲಿ ಕೆಲಸ ಮಾಡುತ್ತಿದ್ದಾರೆ? (58ಖ) ನೀವು ಈ ಮನೆಗೆ ಯಾವಾಗ ಬಂದಿರಿ? (58ಗ) ಎಷ್ಟು ದಿವಸಗಳ ವರೆಗೆ ನೀವಿಲ್ಲಿ ಇರುತ್ತೀರಿ? ಏನು ಎಂಬ ಪದ ಒಂದು ನಾಮಪದಕ್ಕೆ ಬದಲಾಗಿ ಬರಬಲ್ಲುದಾದರೂ ಅದನ್ನು ಅನ್ನು ಪ್ರತ್ಯಯದೊಂದಿಗೆ ಮಾತ್ರ ಬಳಸಲು ಸಾಧ್ಯವಿದೆಯಲ್ಲದೆ, ಇಂದ, ಗೆ ಇಲ್ಲವೇ ಅಲ್ಲಿ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಾಗದು. ಈ ಪದ ಸೂಚಿಸುವ ಅನಿಶ್ಚಿತತೆ ಬಹಳ ಸ್ಥೂಲವಾಗಿರುವುದೇ ಇದಕ್ಕೆ ಕಾರಣವಿರ ಬೇಕು.
ಉದಾಹರಣೆಗಾಗಿ ಈ ಪದವನ್ನು ಒಂದು ಕೆಲಸವನ್ನು ನಡೆಸಿರುವ ಇಲ್ಲವೇ ನಡೆಸಲಿರುವ ಪ್ರಾಣಿಯ ಗುರುತು ಕೇಳುವಲ್ಲಿ ಬಳಸಲು ಸಾಧ್ಯವಾಗದು. ಇಂತಹ ಸಂದಭ್ರಗಳಲ್ಲಿ ಯಾವುದು ಎಂಬ ಪದವನ್ನೇ ಬಳಸಬೇಕಾಗುತ್ತದೆ. (59ಕ) ಈ ಚೀಲವನ್ನು ಕಚ್ಚಿಹಾಕಿದ್ದು ಯಾವುದು? (59ಖ) ಬೆಕ್ಕನ್ನು ಹೆದರಿಸಿದ್ದು ಯಾವುದು? ಇದೇ ರೀತಿಯಲ್ಲಿ ಒಂದು ಕದಲುವಿಕೆಯ ಸುರು, ಕೊನೆ ಇಲ್ಲವೇ ಜಾಗ ವನ್ನು ತಿಳಿಯಬೇಕಾಗಿರುವಾಗಲೂ ಯಾವುದು ಎಂಬುದನ್ನು ಬಳಸಲು ಸಾಧ್ಯ ವಿದೆಯಲ್ಲದೆ ಏನು ಎಂಬುದನ್ನು ಬಳಸಲು ಸಾಧ್ಯವಾಗದು. (60ಕ) ಹಾಗಲಬಳ್ಳಿ ಯಾವುದಕ್ಕೆ ಹಬ್ಬಿದೆ? (60ಖ) ಆತ ಯಾವುದರಿಂದ ಎಣ್ಣೆ ಹಿಂಡಿದ? (60ಗ) ಆಕೆ ಕೊತ್ತಂಬರಿಯನ್ನು ಯಾವುದರಲ್ಲಿ ಹಾಕಿದ್ದಾಳೆ? ಇಂತಹ ಸಂದಭ್ರಗಳಲ್ಲಿ ಜಾಗವನ್ನು ಹೆಚ್ಚು ಸ್ಥೂಲವಾಗಿ ಸೂಚಿಸಬೇಕಾದಲ್ಲಿ ಎಲ್ಲಿ ಎಂಬ ಪದವನ್ನು ಬಳಸಲು ಸಾಧ್ಯವಾಗಬಹುದು, ಆದರೆ ಏನು ಎಂಬ ಪದವನ್ನು ಬಳಸಲು ಸಾಧ್ಯವಾಗದು.
ವಾಕ್ಯಾಂಗ ಕೇಳ್ವಿಗಳಲ್ಲಿ ಕ್ರಿಯಾಪದವೊಂದನ್ನು ಬಿಟ್ಟು ವಾಕ್ಯದಲ್ಲಿ ಬರುವ ಇತರ ಯಾವ ಪದಕ್ಕೆ ಬದಲಾಗಿಯೂ ಅನಿಶ್ಚಿತ ಪದವೊಂದನ್ನು ಬಳಸಲು ಸಾಧ್ಯವಿದೆ. ಕ್ರಿಯಾಪದ ವಾಕ್ಯದ ಕೇಂದ್ರವಾಗಿರುವ ಕಾರಣ ಅದನ್ನು ಅನಿಶ್ಚಿತ ಗೊಳಿಸಲು ಕನ್ನಡದಲ್ಲಿ ಸಾಧನವಿಲ್ಲ.
ಇದಕ್ಕೆ ಬದಲು ಮಾಡು ಮತ್ತು ಆಗು ಎಂಬ ಕ್ರಿಯಾಪದಗಳೊಂದಿಗೆ ಏನು ಎಂಬ ಅನಿಶ್ಚಿತ ಪದವನ್ನು ಬಳಸಿ ಎಂತಹ ಘಟನೆ ನಡೆಯಿತು ಎಂಬು ದನ್ನು ತಿಳಿಯಬಯಸುವ ಕೇಳ್ವಿಯನ್ನು ರಚಿಸಲು ಸಾಧ್ಯವಿದೆ. (61ಕ) ಅವನು ಬೆಕ್ಕಿನ ಮರಿಯನ್ನು ಏನು ಮಾಡಿದ? (61ಖ) ಬೆಕ್ಕಿನ ಮರಿಗೆ ಏನಾಯಿತು? (62ಕ) ಅವನು ಬೊಂಬಾಯಿಯಲ್ಲಿ ಏನು ಮಾಡುತ್ತಿದ್ದಾನೆ? (62ಖ) ಅವನಿಗೆ ಬೊಂಬಾಯಿಯಲ್ಲಿ ಏನಾಯಿತು?
10.4.4 ವಚನದ ಅನಿಶ್ಚಿತತೆ
ಯಾರು ಎಂಬ ಬಹುವಚನ ರೂಪ ನಿಜಕ್ಕೂ ಸಂಖ್ಯೆ ಮತ್ತು ಲಿಂಗಗಳ ಮಟ್ಟಿಗೆ ಅನಿಶ್ಚಿತತೆಯನ್ನು ಸೂಚಿಸುವುದಕ್ಕಾಗಿ ಬಂದಿದೆಯಲ್ಲದೆ ‘ಒಂದಕ್ಕಿಂತ ಜಾಸ್ತಿ’ ಎಂಬ ಅರ್ಥದಲ್ಲಿ ಬಂದಿಲ್ಲ. ಉದಾಹರಣೆಗಾಗಿ, ಯಾರೋ ಒಬ್ಬ ಎಂಬ ಪದಕಂತೆಯ ಬಳಕೆಯಲ್ಲಿ ಯಾರು ಎಂಬುದು ಒಬ್ಬ ವ್ಯಕ್ತಿಯನ್ನು ಮಾತ್ರವೇ ಸೂಚಿಸುತ್ತದೆ. ಇಲ್ಲಿ ಯಾರು ಎಂಬ ಬಹುವಚನ ರೂಪ ಗೌರವಾರ್ಥವನ್ನೂ ಕೊಡುವುದಿಲ್ಲ ಎಂಬುದನ್ನು (63)ರಲ್ಲಿ ನೋಡಬಹುದು. (63) ಯಾರೋ ಒಬ್ಬ ಈ ಮಡಕೆಯನ್ನು ಒಡೆದು ಹಾಕಿದ್ದಾನೆ. ಕನ್ನಡದಲ್ಲಿ ವ್ಯಕ್ತಿಯನ್ನು ಸೂಚಿಸುವ ಅನಿಶ್ಚಿತ ಪದಗಳು ಏಕವಚನದಲ್ಲಿ ಬಂದಿವೆಯಾದರೆ ಅವು ಸಂಖ್ಯೆ ಮತ್ತು ಲಿಂಗ ಇವೆರಡು ವಿಷಯಗಳಲ್ಲೂ ನಿಶ್ಚಿತವಾಗಿರುತ್ತವೆಯೆಂಬುದನ್ನು ಯಾವನು ಮತ್ತು ಯಾವಳು ಎಂಬವುಗಳ ಪ್ರಯೋಗದಲ್ಲಿ ಕಾಣಬಹುದು. ಹಾಗಾಗಿ, ಈ ಎರಡು ವಿಷಯಗಳಲ್ಲೂ ಅನಿಶ್ಚಿತತೆಯನ್ನು ಸೂಚಿಸಬೇಕಾದಾಗ ಯಾರು ಎಂಬ ಬಹುವಚನ ರೂಪವನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ ಯಾವನು ಮತ್ತು ಯಾವಳು ಎಂಬೆರಡು ಪದಗಳಿಗೆ ಸ್ವಲ್ಪ ಮಟ್ಟಿಗೆ ಅಗೌರವವನ್ನು ಸೂಚಿಸುವ ಅರ್ಥವೂ ಇದೆಯಾದ ಕಾರಣ, ಕನ್ನಡ ಬರಹದಲ್ಲಿ ಅವುಗಳ ಬಳಕೆ ಅಪರೂಪ.
ಏನು ಮತ್ತು ಯಾವುದು ಎಂಬವುಗಳ ನಡುವೆ ಇಂತಹ ವ್ಯತ್ಯಾಸವಿಲ್ಲ. ಅವೆರಡೂ ಸಮಾನವಾಗಿ ಬಳಕೆಯಲ್ಲಿದ್ದು, ಅವುಗಳಲ್ಲಿ ಎರಡನೆಯದಕ್ಕೆ ಒಂದು ಗುಂಪಿನಲ್ಲಿರುವ ವಸ್ತುಗಳಲ್ಲಿ ಒಂದನ್ನು ಆರಿಸಿ ಹೇಳಬೇಕೆಂಬ ವಿಶಿಷ್ಟವಾದ ಅರ್ಥವಿದೆ. ಇದೇ ರೀತಿಯಲ್ಲಿ ಯಾವುವು ಎಂಬುದಕ್ಕೂ ಒಂದು ಗುಂಪಿನ ಲ್ಲಿರುವ ವಸ್ತುಗಳಲ್ಲಿ ಕೆಲವನ್ನು ಆರಿಸಿ ಹೇಳಬೇಕೆಂಬ ಅರ್ಥವಿದೆ. (63ಕ) ನಿಮಗೆ ಯಾವುದು ಬೇಕು? (63ಖ) ನಿಮಗೆ ಏನು ಬೇಕು? (63ಗ) ಈ ಪುಸ್ತಕಗಳಲ್ಲಿ ನಿಮ್ಮವು ಯಾವುವು? ಆದರೆ ಒಂದು ಗುಂಪಿನಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬನನ್ನು (ಅಥವಾ ಹಲವರನ್ನು) ಆರಿಸಿ ಹೇಳಬೇಕೆಂದಿರುವಲ್ಲೂ ಯಾರು ಎಂಬುದನ್ನೇ ಬಳಸಲು ಸಾಧ್ಯವಿದೆ. ಯಾವನು ಮತ್ತು ಯಾವಳು ಎಂಬುವಕ್ಕೆ ಅಗೌರವಾರ್ಥವಿರುವ ಕಾರಣ ಇಂತಹ ಸಂದಭ್ರಗಳಲ್ಲಿ ಅವನ್ನೇ ಬಳಸಬೇಕೆಂಬ ನಿಯಮವಿಲ್ಲ. (64ಕ) ಈ ಹುಡುಗರಲ್ಲಿ ಲೇಟಾಗಿ ಬಂದವರು ಯಾರು? (64ಖ) ಈ ನಾಲ್ಕು ಜನರಲ್ಲಿ ಕೊಲೆಗಾರನು ಯಾರು? (64ಗ) ಆ ಹಳೇ ಚಪ್ಪಲಿಯನ್ನು ಯಾರು ಕದ್ದಿರಬಹುದು?
10.4.5 ಒಳವಾಕ್ಯಗಳಾಗಿ ಬಳಕೆ
ವಾಕ್ಯಾಂಗ ಕೇಳ್ವಿಗಳನ್ನು ಒಳವಾಕ್ಯಗಳನ್ನಾಗಿ ಬಳಸಿದಾಗ ಅವು ಕೇಳ್ವಿಗಳಾಗಿ ಉಳಿಯುವ ಬದಲು ಅನಿಶ್ಚಿತ ವಾಕ್ಯಗಳಾಗಲು ಸಾಧ್ಯವಿದೆ. ಹೊರವಾಕ್ಯದ ಕೊನೆಯಲ್ಲಿ ಬರುವ ಶ್ರುತಿವಿನ್ಯಾಸ ಎಂತಹದು ಎಂಬುದರ ಮೇಲೆ ಈ ವ್ಯತ್ಯಾಸ ಅವಲಂಬಿಸಿದೆ. (65ಕ) ಎಲ್ಲಿಗೆ ಹೋಗುವುದೆಂದು ಅವನು ನಿಶ್ಚಯಿಸಿದ್ದಾನೆ? (65ಖ) ಎಲ್ಲಿಗೆ ಹೋಗುವುದೆಂದು ಅವನು ನಿಶ್ಚಯಿಸಿದ್ದಾನೆ. (66ಕ) ಎಷ್ಟು ಹಣ ಬೇಕಾಗಬಹುದೆಂದು ಅವರು ಬರೆದಿದ್ದಾರೆ? (66ಖ) ಎಷ್ಟು ಹಣ ಬೇಕಾಗಬಹುದೆಂದು ಅವರು ಬರೆದಿದ್ದಾರೆ. ಆದರೆ ‘ಇಂತಹ ವಾಕ್ಯಗಳನ್ನು ಬಳಸುತ್ತಿರುವ ವ್ಯಕ್ತಿಗೆ ಅವುಗಳ ಒಳವಾಕ್ಯ ಸೂಚಿಸುವ ಸಂಗತಿ ತಿಳಿದಿದೆ’ ಎಂಬ ಅರ್ಥವನ್ನು ಅವುಗಳ ಹೊರವಾಕ್ಯ ಸೂಚಿಸುತ್ತಿದೆಯಾದಲ್ಲಿ ಮಾತ್ರ ಒಳವಾಕ್ಯ ಒಂದು ಅನಿಶ್ಚಿತ ವಾಕ್ಯವಾಗಬಲ್ಲುದು. ಹಾಗಾಗಿ ಇತರ ಸಂದಭ್ರಗಳಲ್ಲಿ ಇಂತಹ ವಾಕ್ಯಗಳನ್ನು ‘ತಿಳಿಸುವವಾಕ್ಯ’ದ ಶ್ರುತಿ ವಿನ್ಯಾಸದೊಂದಿಗೆ ಬಳಸಲು ಸಾಧ್ಯವಾಗದು. (67ಕ) ಅವರು ಎಲ್ಲಿರಬಹುದೆಂದು ನಿಮಗನಿಸುತ್ತದೆ? (67ಖ) ಎಷ್ಟು ಜನ ಬಂದಿರಬಹುದೆಂದು ಆಕೆಯ ಅಭಿಪ್ರಾಯ? (67ಗ) ಇದನ್ನು ಯಾವಾಗ ಕೊಡುತ್ತೇನೆಂದು ನೀವು ಹೇಳಿದ್ದು? (67ಕ-ಗ)ಗಳಲ್ಲಿ ಬಂದಿರುವ ಒಳವಾಕ್ಯಗಳು ಅವುಗಳ ಆಡುಗನಿಗೆ ತಿಳಿದಿರು ವಂತಹ ಸಂಗತಿಯನ್ನು ಸೂಚಿಸುವುದಿಲ್ಲವಾದ ಕಾರಣ ಅವನ್ನು ಕೇಳ್ವಿಗಳನ್ನಾಗಿ ಮಾತ್ರ ಬಳಸಲು ಸಾಧ್ಯವಿದೆಯಲ್ಲದೆ, ತಿಳಿಸುವ ವಾಕ್ಯಗಳನ್ನಾಗಿ ಬಳಸಲು ಸಾಧ್ಯ ವಾಗದು.
10.4.6 ವಾಕ್ಯಾಂಗ ಕೇಳ್ವಿಗಳಲ್ಲಿ ವೈವಿಧ್ಯ
ತಿಳಿಸುವ ವಾಕ್ಯಗಳಲ್ಲಿ ಬರುವ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿ ಯನ್ನು ಪಡೆಯಲು ವಾಕ್ಯಾಂಗ ಕೇಳ್ವಿಗಳನ್ನು ಬಳಸುವೆವಾದ ಕಾರಣ, ತಿಳಿಸುವ ವಾಕ್ಯಗಳಲ್ಲಿ ಕಾಣಿಸುವ ವೈವಿಧ್ಯ ವಾಕ್ಯಾಂಗ ಕೇಳ್ವಿಗಳಲ್ಲೂ ಕಾಣಿಸಬಲ್ಲುದು.
ಉದಾಹರಣೆಗಾಗಿ, ತಿಳಿಸುವ ವಾಕ್ಯಗಳ ಮೂಲಕ ಒಂದು ಘಟನೆ ನಡೆಯ ಲಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನೂ ತಿಳಿಸಬಲ್ಲೆವು. ಇದಕ್ಕಾಗಿ ನಾವು ‘ಅಲ್ಲಗಳೆ’ಯುವ ವಾಕ್ಯಗಳನ್ನು ಬಳಸಬೇಕಾಗುತ್ತದೆ. ಇಂತಹ ವಾಕ್ಯಗಳ ಮೂಲಕ ಅಲ್ಲಗಳೆದಿರುವ ಘಟನೆಯ ಒಂದು ಘಟಕದ ಕುರಿತಾಗಿ ಮಾತ್ರ ಮಾಹಿತಿಯನ್ನು ಪಡೆಯಬೇಕಾಗಿದ್ದಲ್ಲಿ ಅವನ್ನು ವಾಕ್ಯಾಂಗ ಕೇಳ್ವಿಗಳನ್ನಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. (68ಕ) ರಾಜು ಮದುವೆಗೆ ಯಾಕೆ ಬರಲಿಲ್ಲ? (68ಖ) ಸೀಮೆ ಎಣ್ಣೆ ನಿಮಗೆ ಯಾವ ಅಂಗಡಿಯಲ್ಲಿ ಸಿಗಲಿಲ್ಲ? (68ಗ) ಈ ಕೋಣೆಯಲ್ಲಿ ಯಾರಿಗೆ ಊಟ ಆಗಿಲ್ಲ? (68ಘ) ನಿಮ್ಮಲ್ಲಿ ಟಿಕೇಟನ್ನು ಯಾರು ಕೊಂಡುಕೊಂಡಿಲ್ಲ? (68ಕ) ವಾಕ್ಯವನ್ನು ಬಳಸಿದ ವ್ಯಕ್ತಿಗೆ ‘ರಾಜು ಮದುವೆಗೆ ಬರಲಿಲ್ಲ’ ಎಂಬ ವಿಷಯ ತಿಳಿದಿದೆ, ಆದರೆ ಇದಕ್ಕೆ ಕಾರಣವೇನೆಂದು ಮಾತ್ರ ತಿಳಿದಿಲ್ಲ. ಈ ಒಂದು ವಿಷಯವನ್ನು ತಿಳಿಯುವುದಕ್ಕಾಗಿ (68ಕ)ವನ್ನು ಬಳಸಲಾಗಿದೆ. ಇತರ ವಾಕ್ಯಗಳಲ್ಲೂ ಹೀಗೆಯೇ. ತಿಳಿಸುವ ವಾಕ್ಯಗಳಲ್ಲಿ ಕ್ರಿಯಾವಾಕ್ಯ ಮತ್ತು ವಿಷಯವಾಕ್ಯ ಎಂಬುದಾಗಿ ಎರಡು ವಿಧದವುಗಳಿವೆಯೆಂಬುದನ್ನು (1.2)ರಲ್ಲಿ ನೋಡಿರುವೆವು. ಕ್ರಿಯಾ ವಾಕ್ಯಗಳು ಒಂದು ಘಟನೆ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುತ್ತವೆ ಮತ್ತು ವಿಷಯವಾಕ್ಯಗಳು ಒಂದು ಸಂಗತಿಯ ಇರುವಿಕೆಯನ್ನು ತಿಳಿಸುತ್ತವೆ.
ಮೇಲೆ ಕೊಟ್ಟಿರುವ ವಾಕ್ಯಾಂಗ ಕೇಳ್ವಿಗಳಲ್ಲಿ ಹೆಚ್ಚಿನವೂ ಕ್ರಿಯಾವಾಕ್ಯಗಳನ್ನು ವಾಕ್ಯಾಂಗ ಕೇಳ್ವಿಗಳನ್ನಾಗಿ ಬದಲಾಯಿಸಿದಂತಹವುಗಳು. ಇಂತಹ ವಾಕ್ಯಗಳು ಘಟನೆಗಳ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತವೆ. ಇದಕ್ಕೆ ಬದಲು ಸಂಗತಿಗಳ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದಾಗ ಅಂತಹ ಸಂಗತಿಗಳನ್ನು ತಿಳಿಸುವಂತಹ ಕೇಳ್ವಿಗಳನ್ನಾಗಿ ವಿಷಯವಾಕ್ಯಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ವಾಕ್ಯಾಂಗ (69ಕ) ಕಂಗಾರೋಗಳು ಆಸ್ಟ್ರೇಲಿಯಾದಲ್ಲಿ ಇರುತ್ತವೆ? (69ಖ) ಕಂಗಾರೋಗಳು ಎಲ್ಲಿ ಇರುತ್ತವೆ? (70ಕ) ಆಕೆಗೆ ಎರಡು ಮಂದಿ ಮಕ್ಕಳಿದ್ದಾರೆ? (70ಖ) ಆಕೆಗೆ ಎಷ್ಟು ಮಂದಿ ಮಕ್ಕಳಿದ್ದಾರೆ? (71ಕ) ಆ ಎಮ್ಮೆಯ ಕೊಂಬು ನೆಟ್ಟಗಿದೆ. (71ಖ) ಆ ಎಮ್ಮೆಯ ಕೊಂಬು ಹೇಗಿದೆ? ತಿಳಿಸುವ ವಾಕ್ಯಗಳು ಒಂದು ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದಕ್ಕೂ ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವಂತಹ ವಾಕ್ಯಗಳಾಗಿರಲು ಸಾಧ್ಯವಿದೆ. ಇಂತಹ ವಾಕ್ಯಗಳನ್ನೂ ವಾಕ್ಯಾಂಗ ಕೇಳ್ವಿಗಳಾಗಿ ಬದಲಾಯಿಸಬಹುದು. ಆದರೆ ಹೀಗೆ ಬದಲಾಯಿಸುವಾಗ ಅವುಗಳ ಮೂಲಕ ಸಂಬಂಧಿತವಾಗುವ ಘಟಕದ ಕುರಿತಾಗಿ ಮಾತ್ರವೇ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ.
(72ಕ) ಇವತ್ತು ಶಾಲೆಗೆ ಹೋಗದಿದ್ದುದು ರಾಜು. (72ಖ) ಇವತ್ತು ಶಾಲೆಗೆ ಹೋಗದಿದ್ದುದು ಯಾರು? (72ಕ) ವಾಕ್ಯದಲ್ಲಿ ರಾಜು ಘಟಕವನ್ನು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಲಾಗಿದೆ. ಹಾಗಾಗಿ, ಈ ವಾಕ್ಯವನ್ನು ವಾಕ್ಯಾಂಗ ಕೇಳ್ವಿಯಾಗಿ ಬದಲಾ ಯಿಸುವುದರ ಮೂಲಕ ರಾಜು ಘಟಕದ ಕುರಿತಾಗಿ ಮಾತ್ರ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ. ಹೋಗುವ ಸಮಯ ಇಲ್ಲವೇ ಹೋಗುವ ಜಾಗದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಿದ್ದಲ್ಲಿ ಅಂತಹ ಘಟಕ ಗಳನ್ನು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸುವ ವಾಕ್ಯಗಳನ್ನೇ ಕೇಳ್ವಿ ಗಳಾಗಿ ಬದಲಾಯಿಸಲು ಬಳಸಬೇಕಾಗುತ್ತದೆ. (73ಕ) ರಾಜು ಶಾಲೆಗೆ ಹೋಗದಿದ್ದುದು ಇವತ್ತು. (73ಖ) ರಾಜು ಶಾಲೆಗೆ ಹೋಗದಿದ್ದುದು ಯಾವಾಗ? (74ಕ) ರಾಜು ಇವತ್ತು ಹೋಗದಿದ್ದುದು ಶಾಲೆಗೆ. (74ಖ) ರಾಜು ಇವತ್ತು ಹೋಗದಿದ್ದುದು ಎಲ್ಲಿಗೆ?
10.5 ಕೆಲಸ ಮಾಡಿಸುವ ವಾಕ್ಯಗಳು
ಮಾತಿನ ಮೂಲಕ ಇತರರಿಂದ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಿಸಿ ಕೊಳ್ಳಲು ಸಾಧ್ಯವಿದೆ, ಮತ್ತು ಇದಕ್ಕಾಗಿಯೇ ಬಳಸಬಹುದಾದಂತಹ ಕೆಲವು ವಿಶಿಷ್ಟವಾದ ‘ಕೆಲಸ ಮಾಡಿಸುವ’ ವಾಕ್ಯಗಳೂ ಕನ್ನಡದಲ್ಲಿವೆ. ಬರಹದಲ್ಲಿ ಕಾಣಿಸುವ ಇಂತಹ ಕೆಲವು ವಾಕ್ಯಗಳನ್ನು ಕೆಳಗಿನ ಉಪವಿಭಾಗಗಳಲ್ಲಿ ವಿವರಿಸ
10.5.1 ಪ್ರತ್ಯಯ ಸೇರಿಸದ ರೂಪ
ಒಬ್ಬ ಕೇಳುಗನಿಂದ ಮಾತ್ರವೇ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾಗಿದ್ದಾಗ, ಕ್ರಿಯಾಪದವನ್ನು ಹಾಗೆಯೇ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸ ಬಹುದು.
(75ಕ) ಒಂದು ಗ್ಲಾಸು ನೀರು ಕೊಡು. (75ಖ) ಮೂರು ಗಂಟೆಗೆ ನೀನು ಮನೆಗೆ ಹೋಗು. (75ಗ) ಮೊದಲು ಕಾಫಿ ಕುಡಿ. (75ಘ) ಈ ಚೀಲವನ್ನು ಕಪಾಟಿನೊಳಗೆ ಇರಿಸು. ಮೇಲೆ ಕೊಟ್ಟಿರುವ (75ಕ-ಘ) ವಾಕ್ಯಗಳನ್ನು ಆಡುಗನು ತನ್ನ ಕೇಳುಗನ ಮೂಲಕ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಬಳಸಲು ಸಾಧ್ಯವಿದ್ದು, ಈ ವಾಕ್ಯಗಳಲ್ಲಿ ಕೊಡು, ಹೋಗು, ಕುಡಿ ಮತ್ತು ಇರಿಸು ಎಂಬ ಮುಖ್ಯ ಕ್ರಿಯಾಪದಗಳು ಅವುಗಳ ಮೂಲ ರೂಪದಲ್ಲಿ, ಎಂದರೆ ಅವಕ್ಕೆ ಯಾವ ಪ್ರತ್ಯಯವೂ ಸೇರದಿರುವ ರೂಪದಲ್ಲಿ ಬಳಕೆಯಾಗಿವೆ. ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಮಾತ್ರ ಈ ನಿಯಮಕ್ಕೆ ಅಪವಾದಗಳಾಗಿವೆ. ಮೇಲೆ ವಿವರಿಸಿದಂತಹ ವಾಕ್ಯಗಳಲ್ಲಿ ಇವಕ್ಕೆ ಬಾ ಮತ್ತು ತಾ ಎಂಬ ವಿಶಿಷ್ಟವಾದ ರೂಪಗಳಿವೆ. (75ಙ) ನೀನು ಈ ಕಡೆ ಬಾ. ಕ್ರಿಯಾಪದಗಳಿಗೆ ಕೊಳ್ಳು ಪದವನ್ನು ಸೇರಿಸಿ ಅವುಗಳ ಮೂಲಕ ಆಡುಗನು ತನ್ನ ಹಿತಕ್ಕಾಗಿ ನಡೆಸುವ ಘಟನೆಯೊಂದನ್ನು ಸೂಚಿಸಲು ಸಾಧ್ಯ ಎಂಬುದನ್ನು ಮೇಲೆ 5.6.3ರಲ್ಲಿ ನೋಡಿರುವೆವು. ಈ ಪ್ರತ್ಯಯಕ್ಕೆ ಕೆಲಸ ಮಾಡಿಸುವ ವಾಕ್ಯ ಗಳಲ್ಲಿ ಕೊ ಎಂಬ ರೂಪವಿದೆ. (76ಕ) ಪುಸ್ತಕವನ್ನು ಕೈಯಲ್ಲೇ ಇಟ್ಟುಕೊ. (76ಖ) ಬೀಳದ ಹಾಗೆ ನನ್ನ ಹೆಗಲನ್ನು ಹಿಡಿದುಕೊ.
10.5.2 ಇ ಇಲ್ಲವೇ ಇರಿ ಪ್ರತ್ಯಯದ ಬಳಕೆ
ಇಬ್ಬರು (ಇಲ್ಲವೇ ಇಬ್ಬರಿಗಿಂತ ಜಾಸ್ತಿ) ಕೇಳುಗರ ಮೂಲಕ ಒಂದು ಕೆಲಸವನ್ನು ಮಾಡಿಸಬೇಕಿದ್ದಲ್ಲಿ ಈ ಕ್ರಿಯಾಪದಗಳಿಗೆ ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿ ಕೊಳ್ಳಬೇಕಾಗುತ್ತದೆ. ಒಬ್ಬ ಕೇಳುಗ ಮತ್ತು ಒಬ್ಬ (ಅಥವಾ ಹಲವು) ಇತರ ಮಂದಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾಗಿದ್ದಾಗಲೂ ಇದೇ ಪ್ರತ್ಯಯದ ಬಳಕೆಯಾಗುತ್ತದೆ. (77ಕ) ಮೂರು ಗಂಟೆಗೆ ನೀವು ಮನೆಗೆ ಹೋಗಿ. (77ಖ) ನೀವು ಮೊದಲು ಕಾಫಿ ಕುಡಿಯಿರಿ. (77ಗ) ಎಲ್ಲರೂ ಒಂದು ಕತೆ ಬರೆಯಿರಿ. ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿದಾಗ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದುಹೊಗುತ್ತದೆ ಮತ್ತು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳು ತ್ತದೆ ಎಂಬುದನ್ನು ಗಮನಿಸಬಹುದು. ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಈ ನಿಯಮಕ್ಕೂ ಅಪ ವಾದಗಳಾಗಿ ಕಾಣಿಸಿಕೊಳ್ಳುತ್ತವೆ. ಇವಕ್ಕೆ ಇ ಇಲ್ಲವೇ ಇರಿ ಪ್ರತ್ಯಯದ ಅನಂತರ ಬನ್್ನ ಮತ್ತು ತನ್್ನ ಎಂಬ ರೂಪಗಳಿವೆ. (78ಕ) ನೀವು ಈ ಕಡೆ ಬನ್ನಿ. (78ಖ) ಎಲ್ಲರೂ ಬಾವಿಯಿಂದ ನೀರು ತನ್ನಿ. ಇರು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬರಬಹುದಲ್ಲದೆ ಇರಿ ಪ್ರತ್ಯಯ ಬರ ಲಾರದು. (78ಗ) ನೀವಿಬ್ಬರೂ ಇಲ್ಲೇ ಇರಿ. ಒಬ್ಬನೇ ವ್ಯಕ್ತಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾ ಗಿದ್ದಾಗಲೂ ಆ ವ್ಯಕ್ತಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿ ಹೇಳುವ ಕ್ರಮ ಕನ್ನಡದಲ್ಲಿದೆ ಎಂಬು ದನ್ನು ಇಲ್ಲಿ ಗಮನಿಸಬಹುದು.
10.5.3 ಓಣ ಪ್ರತ್ಯಯದ ಬಳಕೆ
ಆಡುಗ ಮತ್ತು ಕೇಳುಗರಿಬ್ಬರೂ ಒಟ್ಟಾಗಿ ಒಂದು ಕೆಲಸವನ್ನು ಮಾಡಬೇಕಿದ್ದಲ್ಲಿ, ಅದನ್ನು ಕೇಳುಗನಿಗೆ ಸೂಚಿಸಬೇಕಿದ್ದಾಗ ಅಂತಹ ವಾಕ್ಯದ ಮುಖ್ಯ ಕ್ರಿಯಾಪದಕ್ಕೆ ಓಣ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. (79ಕ) ನಾವಿಬ್ಬರೂ ಸಂತೆಗೆ ಹೋಗೋಣ. (79ಖ) ಇಲ್ಲೇ ಕುಳಿತುಕೊಳ್ಳೋಣ. (79ಗ) ಈ ಪೆಟ್ಟಿಗೆಯನ್ನು ಮೇಜಿನ ಮೇಲೆ ಇರಿಸೋಣ.
10.5.4 ಇ ಪ್ರತ್ಯಯದ ಬಳಕೆ
ಕೇಳುಗನ ಬದಲು ಬೇರೊಬ್ಬ ವ್ಯಕ್ತಿಯ ಮೂಲಕ (ಇಲ್ಲವೇ ಹಲವು ವ್ಯಕ್ತಿಗಳ ಮೂಲಕ) ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಿದ್ದಲ್ಲಿ ಅನಂತರದ ಘಟನೆ ಯನ್ನು ಸೂಚಿಸುವುದಕ್ಕಾಗಿ ಬಳಸುವ ಕ್ರಿಯಾಪದದ ಜೋಡಿಸುವ ರೂಪಕ್ಕೆ ಇ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. (80ಕ) ರಾಜು ಈ ಪುಸ್ತಕವನ್ನು ಹರಿಗೆ ಕೊಡಲಿ. (80ಖ) ಈ ಪೆಟ್ಟಿಗೆಯನ್ನು ಅವನು ಮೇಜಿನ ಮೇಲೆ ಇರಿಸಲಿ. (80ಗ) ಹುಡುಗರು ಮನೆಗೆ ಹೋಗಲಿ. (80ಕ)ದಲ್ಲಿ ಕೊಡು ಕ್ರಿಯಾಪದದ ಕೊಡಲು ಎಂಬ ಅನಂತರದ ಘಟನೆಯನ್ನು ಸೂಚಿಸುವ ಕ್ರಿಯಾರೂಪಕ್ಕೆ ಇ ಪ್ರತ್ಯಯವನ್ನು ಸೇರಿಸಲಾಗಿದೆ. ಮುಂದೆ ಯಾವುದಾದರೊಂದು ಘಟನೆ ನಡೆಯಲಿ ಎಂದು ಬಯಸುವು ದಕ್ಕಾಗಿ ಅಥವಾ ಅದೇ ಅರ್ಥದಲ್ಲಿ ಕೇಳುಗನನ್ನು ಹರಸುವುದಕ್ಕಾಗಿಯೂ ಮೇಲಿನ ಕ್ರಿಯಾರೂಪವನ್ನು ಬಳಸಲು ಸಾಧ್ಯವಿದೆ. (80ಘ) ನಿಮಗೆ ಒಳ್ಳೆಯದಾಗಲಿ! (80ಙ) ಕೆಲಸವೆಲ್ಲ ನಿವ್ರಿಘ್ನವಾಗಿ ನೆರವೇರಲಿ!
10.5.5 ಕೆಲವು ವಿಶಿಷ್ಟವಾದ ಪದಗಳ ಬಳಕೆ
ಕೇಳುಗನು ಒಂದು ಕೆಲಸವನ್ನು ಮಾಡದಂತೆ ತಡೆಯುವುದಕ್ಕಾಗಿ ಬೇಡ ಪದದ ಬಳಕೆಯಾಗುತ್ತದೆ. ಇದನ್ನು ಅನಂತರ ನಡೆಯುವ ಘಟನೆಯನ್ನು ಸೂಚಿಸುವ ಕ್ರಿಯಾರೂಪದೊಂದಿಗೆ ಸೇರಿಸಲಾಗುತ್ತದೆ. ಈ ಕ್ರಿಯಾರೂಪದ ಕೊನೆಯ ಲು ಅಕ್ಷರ ಬೇಡ ಪದ ಸೇರಿದಾಗ ಬಿದ್ದು ಹೋಗುತ್ತದೆ. (81ಕ) ನೀನು ಅವರಲ್ಲಿಗೆ ಹೋಗಬೇಡ. (81ಖ) ಅವರ ಹತ್ತಿರ ಯಾವುದನ್ನೂ ಕೇಳಬೇಡ. ಒಬ್ಬನಿಗಿಂತ ಜಾಸ್ತಿ ವ್ಯಕ್ತಿಗಳನ್ನು ತಡೆಯುವುದಕ್ಕಾಗಿ ಇಲ್ಲವೇ ತಡೆಯ ಬೇಕಾದ ವ್ಯಕ್ತಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಬೇಡ ಪದಕ್ಕೆ ಇ ಪ್ರತ್ಯಯ ವನ್ನು ಸೇರಿಸಬೇಕಾಗುತ್ತದೆ. (81ಗ) ನೀವು ಅವರಲ್ಲಿಗೆ ಹೋಗಬೇಡಿ. (81ಘ) ಅವರ ಹತ್ತಿರ ಯಾವುದನ್ನೂ ಕೇಳಬೇಡಿ. ಕೇಳುಗನ ಬದಲು ಇನ್ನೊಬ್ಬ ವ್ಯಕ್ತಿ ಒಂದು ಕೆಲಸವನ್ನು ಮಾಡದಂತೆ ತಡೆಯಬೇಕಾದಾಗ ಬೇಡ ಪದವನ್ನು ಕ್ರಿಯಾಪದದ ನಾಮಪದರೂಪದೊಂದಿಗೆ ಸೇರಿಸಿ ಹೇಳಬೇಕಾಗುತ್ತದೆ. (81ಙ) ಅವನು ಅವರಲ್ಲಿಗೆ ಹೋಗುವುದು ಬೇಡ. (81ಚ) ಅವರ ಹತ್ತಿರ ಅವನು ಯಾವುದನ್ನೂ ಕೇಳುವುದು ಬೇಡ. ಒಂದು ಕೆಲಸವನ್ನು ಮಾಡಲು ಕೇಳುಗನಿಗೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಒಪ್ಪಿಗೆಯನ್ನು ಕೊಡುವುದಕ್ಕಾಗಿ ಮೇಲಿನ ಕ್ರಿಯಾರೂಪಕ್ಕೇನೇ ಬಹುದು ಪದ ವನ್ನು ಸೇರಿಸಲಾಗುತ್ತದೆ. ಈ ಸಂದಭ್ರದಲ್ಲೂ ಆ ಕ್ರಿಯಾರೂಪದದ ಕೊನೆಯ ಲು ಅಕ್ಷರ ಬಿದ್ದುಹೋಗುತ್ತದೆ. (82ಕ) ನೀನು ಅವರಲ್ಲಿಗೆ ಹೋಗಬಹುದು. (82ಖ) ಅವರ ಹತ್ತಿರ ಯಾವುದನ್ನೂ ಕೇಳಬಹುದು. ಬಹುದು ಪದಕ್ಕೆ ಕೆಲಸವೊಂದನ್ನು ನಡೆಸಲು ಒಪ್ಪಿಗೆಯನ್ನು ಸೂಚಿಸುವ ಅರ್ಥಕ್ಕೆ ಬದಲು ಒಂದು ಘಟನೆ ನಡೆಯುವ ಸಾಧ್ಯತೆಯನ್ನು ಸೂಚಿಸುವ ಅರ್ಥವೂ ಬರಬಲ್ಲುದು ಎಂಬುದನ್ನು ಇಲ್ಲಿ ಗಮನಿಸಬಹುದು. ಈ ರೀತಿ ಒಂದು ಕೆಲಸವನ್ನು ನಡೆಸಲು ಒಪ್ಪಿಗೆಯನ್ನು ಕೊಡುವ ಬದಲು ಅದನ್ನು ನಿರಾಕರಿಸುವುದಕ್ಕಾಗಿ ಬಾರದು ಪದದ ಬಳಕೆಯಾಗುತ್ತದೆ. (83ಕ) ನೀನು ಅವರಲ್ಲಿಗೆ ಹೋಗಬಾರದು. (83ಖ) ಅವರ ಹತ್ತಿರ ಯಾವುದನ್ನೂ ಕೇಳಬಾರದು.
10.6 ಬೆರಗನ್ನು ಸೂಚಿಸುವ ವಾಕ್ಯಗಳು
ಕನ್ನಡದಲ್ಲಿ ಬೆರಗನ್ನು ಸೂಚಿಸುವ ವಾಕ್ಯಗಳಿಗೂ ಮತ್ತು ಕೇಳುವ ವಾಕ್ಯ (ವಾಕ್ಯಾಂಗ ಕೇಳ್ವಿ)ಗಳಿಗೂ ನಡುವೆ ಕೆಲವು ಸಾಮ್ಯಗಳು ಕಾಣಿಸುತ್ತವೆ. ಈ ಎರಡು ರೀತಿಯ ವಾಕ್ಯಗಳಲ್ಲೂ ಅನಿಶ್ಚಿತ ಸವ್ರಪದಗಳು ಬರುವುದೇ ಇದಕ್ಕೆ ಮುಖ್ಯ ಕಾರಣ. ವಾಕ್ಯಾಂಗ ಕೇಳ್ವಿಗಳಲ್ಲಿ ಇವು ಕೇಳ್ವಿಯ ವ್ಯಾಪ್ತಿಯನ್ನು ಸೂಚಿಸು ವುದಕ್ಕಾಗಿ ಬರುತ್ತವೆ ಮತ್ತು ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬೆರಗಿನ ವ್ಯಾಪ್ತಿಯನ್ನು ಸೂಚಿಸುವುದಕ್ಕಾಗಿ ಬರುತ್ತವೆ.
(84ಕ) ಮದುವೆಗೆ ಎಷ್ಟು ಜನ ಬಂದಿದ್ದರು? (84ಖ) ಮದುವೆಗೆ ಎಷ್ಟು ಜನ ಬಂದಿದ್ದರು ! (85ಕ) ಆ ಸಾಹುಕಾರರದು ಎಂತಹ ಮನೆ? (85ಖ) ಆ ಸಾಹುಕಾರರದು ಎಂತಹ ಮನೆ ! ಮೇಲೆ ಕೊಟ್ಟಿರುವ (ಕ) ಮತ್ತು (ಖ) ವಾಕ್ಯಗಳೆರಡೂ ಒಂದೇ ರೂಪದಲ್ಲಿದ್ದು, ಅವುಗಳ ಕೊನೆಯಲ್ಲಿ ಬರುವ ಚಿಹ್ನೆ ಮಾತ್ರ ಬೇರೆ ಬೇರೆಯಾಗಿದೆಯೆಂಬುದನ್ನು ಗಮನಿಸಬಹುದು. ಮಾತಿನಲ್ಲಿ ಈ ಎರಡು ರೀತಿಯ ವಾಕ್ಯಗಳ ನಡುವೆ ಅವುಗಳ ಕೊನೆಯಲ್ಲಿ ಬರುವ ಶ್ರುತಿಯ ಮಟ್ಟಿಗೆ ವ್ಯತ್ಯಾಸ ಇದೆ ಎಂಬುದನ್ನು ಬರಹದಲ್ಲಿ ಕಾಣಿಸುವ ಈ ಚಿಹ್ನೆಗಳು ಸೂಚಿಸುತ್ತವೆ. ಆದರೆ ಈ ರೀತಿ ವಾಕ್ಯದ ಕೊನೆಯ ಶ್ರುತಿಯೊಂದನ್ನು ಬಿಟ್ಟು ಬೇರೆಲ್ಲಾ ವಿಷಯಗಳಲ್ಲೂ ಕೇಳುವ ಮತ್ತು ಬೆರಗನ್ನು ಸೂಚಿಸುವ ವಾಕ್ಯಗಳು ಒಂದೇ ರೀತಿ ಇರುವುದು ಕೆಲವೇ ಕೆಲವು ವಾಕ್ಯಗಳಲ್ಲಿ ಮಾತ್ರ. ಉಳಿದ ವಾಕ್ಯಗಳಲ್ಲಿ ಇವೆರಡರೊಳಗೆ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು.
ಉದಾಹರಣೆಗಾಗಿ ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಎಷ್ಟು, ಏನು, ಎಂತಹ (ಇಲ್ಲವೇ ಎಂಥಾ) ಮತ್ತು ಹೇಗೆ ಎಂಬ ನಾಲ್ಕು ಅನಿಶ್ಚಿತ ಸವ್ರ ಪದಗಳು ಮಾತ್ರ ಬರಬಲ್ಲುವು. ಆದರೆ ಕೇಳುವ ವಾಕ್ಯಗಳಲ್ಲಿ ಈ ನಾಲ್ಕು ಅನಿಶ್ಚಿತ ಪದಗಳು ಮಾತ್ರವಲ್ಲದೆ, ಯಾರು, ಎಲ್ಲಿ, ಯಾಕೆ, ಯಾವಾಗ ಮೊದಲಾದ ಬೇರೆಯೂ ಕೆಲವು ಅನಿಶ್ಚಿತ ಪದಗಳು ಬರಬಲ್ಲುವು ಎಂಬುದನ್ನು ನಾವು ಮೇಲೆ (10.4.1)ರಲ್ಲಿ ನೋಡಿರುವೆವು. (86ಕ) ಆ ಹುಡುಗಿ ಎಷ್ಟು ಚನ್ನಾಗಿ ಕುಣಿಯುತ್ತಿದ್ದಾಳೆ ! (86ಕ) ಆತನಿಗೆ ಇಷ್ಟು ಬೇಗ ವಗ್ರವಾದದ್ದು ಏನನ್ಯಾಯ ! (86ಗ) ನಿನ್ನೆ ರಾತ್ರಿ ಎಂತಹ (ಎಂಥಾ) ಮಳೆ ಬಂದಿತ್ತು ! (86ಘ) ಅವರು ಆ ಮನೆಯನ್ನು ಹೇಗೆ ಕಟ್ಟಿದ್ದಾರೆ ! ಬೆರಗನ್ನು ಸೂಚಿಸುವ ವಾಕ್ಯಗಳು ಯಾವುದಾದರೂ ಒಂದು ಗುಣಧರ್ಮದ ಮಟ್ಟಿಗೆ ಆಡುಗನಿಗಿರುವ ಬೆರಗನ್ನು ಸೂಚಿಸಬೇಕಾಗಿದೆಯಾದ ಕಾರಣ, ಗುಣ ಧರ್ಮವೊಂದರ ದಜ್ರೆ ಇಲ್ಲವೇ ಅಂತಸ್ತನ್ನು ಸೂಚಿಸಬಲ್ಲ ಅನಿಶ್ಚಿತ ಸವ್ರಪದ ಗಳು ಮಾತ್ರ ಅವುಗಳಲ್ಲಿ ಬರಬಲ್ಲುವು.
ಎಷ್ಟು, ಏನು, ಹೇಗೆ ಮತ್ತು ಎಂತಹ ಎಂಬವುಗಳು ಈ ರೀತಿ ಗುಣ ಧರ್ಮವೊಂದರ ದಜ್ರೆಯ ಕುರಿತಾಗಿ ಅನಿಶ್ಚಿತತೆಯನ್ನು ಸೂಚಿಸಬಲ್ಲುವು. ಇದಕ್ಕೆ ಬದಲು, ಯಾರು, ಎಲ್ಲಿ, ಯಾವಾಗ ಮೊದಲಾದವುಗಳು ವ್ಯಕ್ತಿ, ವಸ್ತು, ಜಾಗ, ಸಮಯ ಮೊದಲಾದವುಗಳ ಗುರುತಿನ ಕುರಿತಾಗಿ ಅನಿಶ್ಚಿತತೆ ಯನ್ನು ಸೂಚಿಸುತ್ತಿವೆ. ಹಾಗಾಗಿ, ಅವನ್ನು ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.
10.7 ಸಾರಾಂಶ
ವಾಕ್ಯಗಳ ಮೂಲಕ ತಿಳಿಸುವ ಕೆಲಸಕ್ಕಿಂತ ಭಿನ್ನವಾಗಿರುವ ಬೇರೆ ಕೆಲವು ಕೆಲಸ ಗಳನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಕೆಲವು ರೀತಿಯ ವಾಕ್ಯಗಳನ್ನು ಬಳಸಿದೊಡನೆಯೇ ಕೆಲವು ಕೆಲಸಗಳು ನಡೆದು ಹೋಗುತ್ತವೆ. ಇಂತಹ ವಾಕ್ಯಗಳಲ್ಲಿ ಕೆಲವು ವಿಶಿಷ್ಟವಾದ ಹೊರವಾಕ್ಯಗಳು ಬಂದಿರುವುದನ್ನು ಕಾಣಬಹುದು. ಒಂದು ಘಟನೆಯ ಕುರಿತಾಗಿ ಇಲ್ಲವೇ ಒಂದು ಸಂಗತಿಯ ಕುರಿತಾಗಿ ಇನ್ನೊಬ್ಬ ವ್ಯಕ್ತಿಯಿಂದ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ಬೇರೆ ರೀತಿಯ ವಾಕ್ಯಗಳನ್ನು ಬಳಸಬೇಕಿದ್ದು ಇವನ್ನು ಕೇಳ್ವಿಗಳೆಂದು ಕರೆಯಬಹುದು. ಇವು ಗಳಲ್ಲಿ ಒಂದು ಘಟನೆ ನಡೆದಿದೆಯೇ ಅಥವಾ ಒಂದು ಸಂಗತಿ ನಿಜವೇ ಎಂಬು ದನ್ನು ತಿಳಿಯುವುದಕ್ಕಾಗಿ ಬಳಸುವ ವಾಕ್ಯಗಳನ್ನು ವಾಕ್ಯಕೇಳ್ವಿಗಳೆಂದೂ ಮತ್ತು ಅಂತಹ ಒಂದು ಘಟನೆ ಇಲ್ಲವೇ ಸಂಗತಿಯ ಒಂದು ಅಂಗದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ ಬಳಸುವ ವಾಕ್ಯಗಳನ್ನು ವಾಕ್ಯಾಂಗ ಕೇಳ್ವಿ ಗಳೆಂದೂ ಕರೆಯಬಹುದು.
ಇತರರಿಂದ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಮತ್ತು ಬೆರಗನ್ನು ಸೂಚಿಸುವುದಕ್ಕಾಗಿಯೂ ಕೆಲವು ವಿಶಿಷ್ಟವಾದ ವಾಕ್ಯಗಳನ್ನು ಬಳಸಲಾಗುತ್ತದೆ.
English → | Eke →
ಅಧ್ಯಾಯ ಹನ್ನೊಂದು — ಕನ್ನಡದ ಕೆಲವು ವೈಶಿಷ್ಟ್ಯಗಳು
11.1 ಪೀಠಿಕೆ
ಪ್ರತಿಯೊಂದು ಭಾಷೆಗೂ ಅದರದೇ ಆದ ವಾಕ್ಯರಚನೆಯ ನಿಯಮಗಳಿರುತ್ತವೆ. ಇವುಗಳಲ್ಲಿ ಹಲವು ಆ ಭಾಷೆ ತನ್ನ ಮೂಲಭಾಷೆಯಿಂದ ಪಡೆದು ಬಂದಿರುವ ನಿಯಮಗಳು ಮತ್ತು ಉಳಿದ ಕೆಲವು ಅವುಗಳಲ್ಲೇ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡುವುದರ ಮೂಲಕ ಸಾಧಿಸಿಕೊಂಡವುಗಳು. ಪ್ರತಿ ಯೊಂದು ಜೀವಂತವಾಗಿರುವ ಭಾಷೆಯೂ ಈ ರೀತಿ ತನ್ನಲ್ಲಿರುವ ನಿಯಮ ಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರುವ ಅವಶ್ಯಕತೆಯಿದೆ. ಅಂತಹ ಬದಲಾವಣೆಗಳ ಮೂಲಕವೇನೇ ಅದಕ್ಕೆ ಹೊಸ ಹೊಸ ಸನ್ನಿವೇಶಗಳಿಗೆ ಹೊಂದಿ ಕೊಳ್ಳಲು ಸಾಧ್ಯವಾಗುತ್ತದೆ. ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಕನ್ನಡಕ್ಕೂ ಮತ್ತು ಅದಕ್ಕಿಂತ ಭಿನ್ನವಾದ ಇಂಡೋ-ಯುರೋಪಿಯನ್, ಸಿನೋ-ಟಿಬೆಟನ್, ಆಫೊ್ರೀ-ಏಶಿ ಯಾಟಿಕ್ ಮೊದಲಾದ ಭಾಷಾಕುಟುಂಬಗಳಿಗೆ ಸೇರಿರುವ ಪ್ರಪಂಚದ ಇತರ ಭಾಷೆಗಳಿಗೂ ನಡುವೆ ವಾಕ್ಯರಚನೆಯ ನಿಯಮಗಳಲ್ಲಿ ಕಾಣಿಸುವ ವ್ಯತ್ಯಾಸ ಗಳಿಗೆಲ್ಲ ಅವು ತಮ್ಮ ಮೂಲ ಭಾಷೆಯಿಂದ ಬೇರೆ ಬೇರೆ ರೀತಿಯ ನಿಯಮಾ ವಳಿಗಳನ್ನು ಪಡೆದಿರುವುದೇ ಮುಖ್ಯ ಕಾರಣ. ಕನ್ನಡಕ್ಕೂ ಮತ್ತು ಸಂಸ್ಕೃತ, ಇಂಗ್ಲಿಷ್, ಚೈನೀಸ್, ಬಂಟು ಮೊದಲಾದ ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸ ಇಂತಹದು.
ಇದಕ್ಕೆ ಬದಲು, ಕನ್ನಡಕ್ಕೂ ಮತ್ತು ತಮಿಳು, ತೆಲುಗು, ಮಲಯಾಳ, ತುಳು ಮೊದಲಾದ ಇತರ ದ್ರಾವಿಡ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ಮೂಲ ಭಾಷೆಯಿಂದ ಪ್ರತ್ಯೇಕಗೊಂಡ ಮೇಲೆ ಅವುಗಳಲ್ಲಿ ನಡೆದಿರುವ ಬದಲಾವಣೆಗಳೇ ಕಾರಣವೆಂದು ಹೇಳಬಹುದು. ಹಳೆಗನ್ನಡ ಮತ್ತು ಹೊಸ ಗನ್ನಡಗಳ ನಡುವೆ ಕಾಣಿಸುವ ವ್ಯತ್ಯಾಸಗಳೂ ಈ ಎರಡನೆಯ ಕಾರಣದಿಂದಾಗಿ ಮೂಡಿಬಂದಿವೆ. ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಈ ರೀತಿ ಎರಡು ಕಾರಣ ಗಳಿರಲು ಸಾಧ್ಯವಿದೆಯಾದ ಕಾರಣ, ಅವನ್ನು ಎರಡು ವಿಧಾನಗಳ ಮೂಲಕ ಪರಿಶೀಲಿಸಲು ಸಾಧ್ಯವಿದೆ. ಒಂದೇ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಕಾಲಕ್ರಮೇಣ ಹೇಗೆ ಬದಲಾಗುತ್ತಾ ಬಂದಿವೆ ಮತ್ತು ಈ ಬದಲಾವಣೆಗಳಿಂದಾಗಿ ಅವುಗಳ ನಡುವೆ ಹೇಗೆ ವ್ಯತ್ಯಾಸಗಳು ಬೆಳೆದುಬಂದಿವೆ ಎಂಬುದಾಗಿ ಅವುಗಳ ಚರಿತ್ರೆಯನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುವುದು ಒಂದು ವಿಧಾನ (ಕನ್ನಡದ ಮಟ್ಟಿಗೆ ಈ ಪ್ರಯತ್ನ ಹೇಗೆ ಸಾಗಬಲ್ಲುದು ಎಂಬುದನ್ನು (ಭಟ್ 1995) ಪುಸ್ತಕದಲ್ಲಿ ನೋಡಬಹುದು).
ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿರುವ ಪ್ರಪಂಚದ ಭಾಷೆಗಳೆಲ್ಲ ವನ್ನೂ ಪರಿಶೀಲಿಸಿ, ಅವುಗಳ ನಡುವೆ ವಾಕ್ಯರಚನೆಯ ಮಟ್ಟಿಗೆ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕಂಡುಹಿಡಿಯುವುದು ಎರಡನೇ ವಿಧಾನ. ಈ ವಿಧಾನದ ಬಳಕೆಯಲ್ಲಿ ಭಾಷೆಗಳ ನಡುವಿರುವ ಸಂಬಂಧಕ್ಕೆ ಜಾಸ್ತಿ ಪ್ರಾಮುಖ್ಯತೆಯಿಲ್ಲ. ಅದಕ್ಕೆ ಬದಲು ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸ ಗಳಲ್ಲಿ ಒಂದು ಇನ್ನೊಂದರೊಡನೆ ಸಂಬಂಧಿಸಿದೆಯೇ ಎಂಬುದಾಗಿ ಈ ವ್ಯತ್ಯಾಸಗಳ ನಡುವಿರುವ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲಾಗು ಉದಾಹರಣೆಗಾಗಿ, ಕನ್ನಡದ ಪದಕಂತೆಗಳಲ್ಲಿ ಗುಣಪದಗಳು ನಾಮಪದದ ಎಡಕ್ಕೆ ಬರುತ್ತವೆ (ದೊಡ್ಡ ಪುಸ್ತಕ), ಆದರೆ ಬೇರೆ ಕೆಲವು ಭಾಷೆಗಳಲ್ಲಿ (ಉದಾ: ಐರಿಷ್ ಭಾಷೆ) ಗುಣಪದಗಳು ನಾಮಪದದ ಬಲಕ್ಕೆ ಬರುತ್ತವೆ. ಈ ಎರಡು ಭಾಷೆಗಳ ನಡುವೆ ಕಾಣಿಸುವ ಈ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಬೇರೆ ವ್ಯತ್ಯಾಸಗಳೇನಾದರೂ ಇವೆಯೇ, ಮತ್ತು ಇದ್ದಲ್ಲಿ ಅಂತಹ ವ್ಯತ್ಯಾಸಗಳನ್ನೆಲ್ಲ ಒಟ್ಟಿಗೆ ಸಂಬಂಧಿಸುವಂತಹ ವಾಕ್ಯರಚನೆಯ ಮೂಲತತ್ವವೇನಾದರೂ ಇದೆಯೇ (ಕೆಳಗೆ 11.3 ನೋಡಿ) ಎಂಬುದಾಗಿ ಈ ವಿಧಾನದಲ್ಲಿ ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸಗಳ ನಡುವಿರುವ ಸಂಬಂಧಗಳ ಪರಿಶೀಲನೆ ನಡೆಸಲಾಗು ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಬಳಕೆಯಲ್ಲಿವೆಯಾದ ಕಾರಣ ಅವಲ್ಲವನ್ನೂ ಹೋಲಿಸಿ ನೋಡುವ ಕೆಲಸ ಒಬ್ಬ ವ್ಯಕ್ತಿಯ ಜೀವಮಾನದಲ್ಲಿ ನಡೆಯುವಂತಹದಲ್ಲ. ಹಾಗಾಗಿ ಈ ಎರಡನೆಯ ವಿಧಾನವನ್ನನುಸರಿಸುವವರು ಸಾಮಾನ್ಯವಾಗಿ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಗೆ ಮತ್ತು ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿರುವ ನೂರೋ ಇನ್ನೂರೋ ಭಾಷೆಗಳನ್ನು ಮಾದರಿ ಭಾಷೆಗಳನ್ನಾಗಿ ಆರಿಸಿಕೊಂಡು, ಅವುಗಳ ನಡುವೆ ವಾಕ್ಯರಚನೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಾರೆ; ಮತ್ತು, ಈ ರೀತಿ ಮಾದರಿ ಭಾಷೆಗಳ ಅಭ್ಯಾಸದ ಮೂಲಕ ಸಿದ್ಧವಾಗುವ ತಿಳುವಳಿಕೆ ಪ್ರಪಂಚದ ಇತರ ಭಾಷೆಗಳಿಗೂ ಅನ್ವಯಿಸುವಂತಹದಾಗಿರಬಹುದು ಎಂಬುದಾಗಿ ಕಲ್ಪಿಸಿಕೊಳ್ಳುತ್ತಾರೆ.
ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಮುಖ್ಯವಾಗಿರುವ ಕೆಲವನ್ನು ಅಂತಹ ವ್ಯತ್ಯಾಸಗಳ ನಡುವಿರುವ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಈ ಅಧ್ಯಾಯದಲ್ಲಿ ಪರಿಶೀಲಿಸಲಾಗಿದೆ.
11.2 ಮುಖ್ಯ ಪದವಗ್ರಗಳು
ವಾಕ್ಯರಚನೆಗಾಗಿ ಎಂತಹ ಪದಗಳನ್ನೆಲ್ಲ ಬಳಸಲಾಗುತ್ತದೆ ಎಂಬ ವಿಷಯದಲ್ಲಿ ಪ್ರಪಂಚದ ಭಾಷೆಗಳ ನಡುವೆ ಕೆಲವು ಪ್ರಾಮುಖ್ಯವಾದ ವ್ಯತ್ಯಾಸಗಳನ್ನು ಕಾಣಬಹುದು. ಉದಾಹರಣೆಗಾಗಿ ಕನ್ನಡದಲ್ಲಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣಪದಗಳು ಎಂಬುದಾಗಿ ಮೂರು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಬಳಕೆಯಾಗುತ್ತವೆ. ಇದಕ್ಕೆ ಬದಲು ಸಂಸ್ಕೃತದಲ್ಲಿ ನಾಮಪದಗಳು ಮತ್ತು ಕ್ರಿಯಾಪದಗಳು ಎಂಬುದಾಗಿ ಎರಡು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಮಾತ್ರ ಬಳಕೆಯಾಗುತ್ತವೆ. ಕನ್ನಡದಲ್ಲಿ ಗುಣಪದಗಳಾಗಿ ಬರುವ ಪದ ಗಳಿಗೆ ಸಮನಾಗಿ ಸಂಸ್ಕೃತದಲ್ಲಿ ನಾಮಪದಗಳೇ ಬರುತ್ತವೆ (ಭಟ್ 1994, 2001 ನೋಡಿ). ಟಿಬೆಟೋ-ಬರ್ಮನ್ ಭಾಷಾಕುಟುಂಬಕ್ಕೆ ಸೇರುವ ಮಣಿಪುರಿ ಭಾಷೆ ಯಲ್ಲೂ ಸಂಸ್ಕೃತದ ಹಾಗೆ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಮಾತ್ರ ಬಳಕೆಯಲ್ಲಿವೆ. ಆದರೆ, ಕನ್ನಡದ ಗುಣಪದಗಳಿಗೆ ಬದಲಾಗಿ ಈ ಭಾಷೆಯಲ್ಲಿ ಸಂಸ್ಕೃತದ ಹಾಗೆ ನಾಮ ಪದಗಳು ಬರುವ ಬದಲು ಕ್ರಿಯಾಪದಗಳು ಬರುತ್ತವೆ. ಕನ್ನಡದ ಕಪ್ಪು ಎಂಬ ಗುಣಪದಕ್ಕೆ ಬದಲಾಗಿ ಸಂಸ್ಕೃತದಲ್ಲಿ ಕೃಷ್ಣ: ಎಂಬ ನಾಮಪದ ಬರುವುದಾದರೆ, ಮಣಿಪುರಿಯಲ್ಲಿ ಮೂ ಎಂಬ ಕ್ರಿಯಾಪದ ಬರುತ್ತದೆ. ಈ ಮೂರು ಭಾಷಾಕುಟುಂಬಗಳಿಗೆ ಸೇರಿರುವ ಭಾಷೆಗಳು ಪದಕಂತೆಗಳನ್ನು ರಚಿಸುವುದಕ್ಕಾಗಿ ಮೂರು ಭಿನ್ನ ಭಿನ್ನವಾದ ವಿಧಾನಗಳನ್ನು ಬಳಸುತ್ತಿರುವುದೇ ಈ ರೀತಿ ಅವುಗಳಲ್ಲಿ ಬಳಕೆಯಾಗುವ ಪದವಗ್ರಗಳ ಸಂಖ್ಯೆ ಮತ್ತು ಸ್ವರೂಪ ಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲು ಮುಖ್ಯ ಕಾರಣ.
ಕನ್ನಡದಲ್ಲಿ ಪದಕಂತೆಗಳನ್ನು ರಚಿಸುವುದಕ್ಕಾಗಿ ನಾಮಪದಗಳ ಮುಂದೆ ಅವು ಸೂಚಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ತಿಳಿಸುವ ಗುಣಪದವೊಂದನ್ನು ಇರಿಸಿ ಹೇಳುವ ವಿಧಾನ ಬಳಕೆಯಲ್ಲಿದೆ ಎಂಬುದನ್ನು ನಾವು ನಾಲ್ಕನೇ ಅಧ್ಯಾಯದಲ್ಲಿ ನೋಡಿರುವೆವು. ಕಪ್ಪು ಹಾವು ಎಂಬ ಪದಕಂತೆಯಲ್ಲಿ ಹಾವು ಎಂಬುದು ಒಂದು ಪ್ರಾಣಿಯನ್ನು ಸೂಚಿಸುತ್ತದೆ, ಮತ್ತು ಕಪ್ಪು ಎಂಬುದು ಅದರ ಗುಣಧರ್ಮವೊಂದನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಪದಕಂತೆಗಳನ್ನು ರಚಿಸಲು ಇದಕ್ಕಿಂತ ತೀರ ಭಿನ್ನವಾದ ವಿಧಾನವೊಂದು ಬಳಕೆಯಲ್ಲಿದೆ. ಎರಡು ನಾಮಪದಗಳನ್ನು ಒಂದೇ ಲಿಂಗ- ವಚನ-ವಿಭಕ್ತಿಗಳಲ್ಲಿರಿಸಿ ಹೇಳಿದಾಗ ಅವೆರಡಕ್ಕೂ ಸಮಾನವಾಗಿರುವ ವ್ಯಕ್ತಿ, ವಸ್ತು, ಮೊದಲಾದವುಗಳಲ್ಲಿ ಒಂದನ್ನು ಅವು ಸೂಚಿಸಬಲ್ಲುವೆಂಬುದೇ ಈ ವಿಧಾನದ ಹಿಂದಿರುವ ವ್ಯಾಕರಣ ತತ್ವ.
ಉದಾಹರಣೆಗಾಗಿ, ಕೃಷ್ಣ: ಸಪ್ರ: ಎಂಬ ಪದಕಂತೆಯಲ್ಲಿ ಎರಡು ನಾಮಪದಗಳನ್ನು ಒಂದೇ ಲಿಂಗ-ವಚನ-ವಿಭಕ್ತಿಯಲ್ಲಿರಿಸಿ ಹೇಳಲಾಗಿದೆ. ಈ ಕಾರಣಕ್ಕಾಗಿ ಈ ಪದಕಂತೆ ಕಪ್ಪಾಗಿಯೂ ಮತ್ತು ಸಪ್ರವಾಗಿಯೂ ಇರುವಂತಹ ಒಂದು ಪ್ರಾಣಿಯನ್ನು ಸೂಚಿಸುತ್ತದೆ. ಸಂಸ್ಕೃತ ಬಳಸುವ ಈ ವಿಧಾನಕ್ಕೆ ನಾಮ ಪದಗಳಿಗಿಂತ ಭಿನ್ನವಾದ ಗುಣಪದಗಳ ಅವಶ್ಯಕತೆಯಿಲ್ಲವಾದ ಕಾರಣ ಸಂಸ್ಕೃತ ದಲ್ಲಿ ಕನ್ನಡದ ಹಾಗೆ ಗುಣಪದವೆಂಬ ಪದವಗ್ರವಿಲ್ಲ. ಮಣಿಪುರಿ ಭಾಷೆಯಲ್ಲಿ ಪದಕಂತೆಗಳನ್ನು ರಚಿಸಲು ಬೇರೆಯೇ ಒಂದು ವಿಧಾನ ಬಳಕೆಯಲ್ಲಿದೆ. ಗುಣಧರ್ಮಗಳನ್ನು ಈ ಭಾಷೆಯಲ್ಲಿ ಕ್ರಿಯಾಪದಗಳ ಮೂಲಕ ಸೂಚಿಸಲಾಗುವುದಾದ ಕಾರಣ, ನಾಮಪದಗಳೊಂದಿಗೆ ಕ್ರಿಯಾಪದಗಳ ಸಂಬಂಧಿಸುವ ರೂಪವನ್ನಿರಿಸಿ ನಾಮಪದಕಂತೆಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗಾಗಿ ಅಮೂಬ ಮೀ ‘ಕಪ್ಪು ಮನುಷ್ಯ’ ಎಂಬ ಪದಕಂತೆಯಲ್ಲಿ ಮೀ ‘ಮನುಷ್ಯ’ ಎಂಬ ನಾಮಪದವನ್ನು ಮೂ ‘ಕಪ್ಪು’ ಎಂಬ ಕ್ರಿಯಾಪದದ ಅಮೂಬ ಎಂಬ ಸಂಬಂಧಕ ರೂಪದೊಂದಿಗೆ ಸೇರಿಸಿ ಬಳಸಲಾಗಿದೆ.
ಕನ್ನಡದಲ್ಲಿ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳನ್ನು ನಾಮಪದ ಗಳೊಂದಿಗೆ ಹೇಗೆ ಬಳಸುತ್ತೇವೆಯೋ ಹಾಗೆಯೇ ಮಣಿಪುರಿಯಲ್ಲಿ ಗುಣಧರ್ಮ ವನ್ನು ಸೂಚಿಸುವ ಪದಗಳನ್ನೂ ಬಳಸಲಾಗುತ್ತದೆ. ಉದಾಹರಣೆಗಾಗಿ ಕನ್ನಡದಲ್ಲಿ ಓಡಿದ ಹುಡುಗ ಎಂಬ ಪದಕಂತೆಯಲ್ಲಿ ಓಡು ಕ್ರಿಯಾಪದದ ಸಂಬಂಧಿಸುವ ರೂಪವಾದ ಓಡಿದ ಎಂಬುದನ್ನು ಹುಡುಗ ನಾಮಪದದೊಂದಿಗೆ ಬಳಸಲಾಗಿದೆ. ಮೇಲೆ ಕೊಟ್ಟಿರುವ ಮಣಿಪುರಿಯ ಅಮೂಬ ಮೀ ಎಂಬ ಪದಕಂತೆಯಲ್ಲಿ ಒಂದು ಗುಣಧರ್ಮವನ್ನು ಸೂಚಿಸುವ ಮೂ ‘ಕಪ್ಪು’ ಎಂಬ ಪದವನ್ನೂ ಇದೇ ವಿಧಾನದ ಮೂಲಕ ಬಳಸಲಾಗಿದೆ. ಈ ಕಾರಣಕ್ಕಾಗಿ, ಮಣಿಪುರಿ ಭಾಷೆಗೆ ಕ್ರಿಯಾಪದಗಳಿಗಿಂತ ಭಿನ್ನವಾದ ಗುಣಪದಗಳೆಂಬ ಪದವಗ್ರದ ಅವಶ್ಯಕತೆಯಿಲ್ಲ. ಈ ಮೂರು ರೀತಿಯ ಭಾಷೆಗಳಿಗಿಂತ ಭಿನ್ನವಾದ ಭಾಷೆಗಳೂ ಪ್ರಪಂಚದ ಲ್ಲಿವೆ. ಉದಾಹರಣೆಗಾಗಿ, ಆಸ್ಟ್ರೋ-ಏಶಿಯಾಟಿಕ್ ಭಾಷಾಕುಟುಂಬಕ್ಕೆ ಸೇರಿರುವ ಮುಂಡಾರಿ ಭಾಷೆಯಲ್ಲಿ ಒಂದೇ ಒಂದು ಪದವಗ್ರಕ್ಕೆ ಸೇರುವ ಪದಗಳು ಮಾತ್ರ ಬಳಕೆಯಲ್ಲಿವೆ. ಇವನ್ನು ಕ್ರಿಯಾಪದಗಳೆಂದಾಗಲಿ ಇಲ್ಲವೇ ಆಖ್ಯಾತ ಪದಗ ಳೆಂದಾಗಲಿ ಕರೆಯಬಹುದು.
ವಾಕ್ಯದ ಅರ್ಥವಿದೆ. ಇಲ್ಲಿ ಒಮ್ ಈ ಭಾಷೆಯಲ್ಲಿ ಬರುವ ವಾಕ್ಯಗಳಲ್ಲಿ ಅತ್ಯವಶ್ಯವಾಗಿ ಇರಬೇಕಾದುದು ಒಂದೇ ಒಂದು ಆಖ್ಯಾತಪದ ಮಾತ್ರ. ಅದು ಒಂದು ಘಟನೆಯನ್ನಾಗಲಿ ಇಲ್ಲವೇ ಒಂದು ಸಂಗತಿಯನ್ನಾಗಲಿ ಸೂಚಿಸುತ್ತದೆ. ಈ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ಘಟಕಗಳನ್ನು ಆಖ್ಯಾತ ಪದದೊಂದಿಗೆ ಬರುವ ಪ್ರತ್ಯಯ ಗಳೇ ಸೂಚಿಸುವುವಾದ ಕಾರಣ, ಈ ಭಾಷೆಗೆ ಆಖ್ಯಾತ ಪದಗಳಿಗಿಂತ ಭಿನ್ನವಾದ ನಾಮಪದಗಳ ಅವಶ್ಯಕತೆಯಿಲ್ಲ. ಇದೇ ಕಾರಣಕ್ಕಾಗಿ ಈ ಭಾಷೆಗೆ ನಾಮಪದ ಕಂತೆಗಳ ಅವಶ್ಯಕತೆಯೂ ಇಲ್ಲ, ವಿಭಕ್ತಿ ಪ್ರತ್ಯಯಗಳ ಅವಶ್ಯಕತೆಯೂ ಇಲ್ಲ, ಮತ್ತು ಗುಣಪದಗಳ ಅವಶ್ಯಕತೆಯೂ ಇಲ್ಲ. ಉದಾಹರಣೆಗಾಗಿ, ಒಮದ್ಕೊಅಇಞ್ ಎಂಬ ಮುಂಡಾರಿ ಭಾಷೆಯ ಆಖ್ಯಾತ ರೂಪಕ್ಕೆ ಕನ್ನಡದ ‘ನಾನು ಅವರಿಗೆ ಏನೋ ಕೊಟ್ಟೆ’ ಎಂಬ ಒಂದು ‘ಕೊಡು’ ಎಂಬ ಆಖ್ಯಾತಪದದೊಂದಿಗೆ ‘ಏನೋ’ ಎಂಬ ಅರ್ಥ ಕೊಡುವ ಅ ಪ್ರತ್ಯಯ, ಹಿಂದಿನ ಸಮಯವನ್ನು ಸೂಚಿಸುವ ದ್ ಪ್ರತ್ಯಯ, ‘ಅವರಿಗೆ’ ಎಂಬುದನ್ನು ಸೂಚಿಸುವ ಕೊ ಪ್ರತ್ಯಯ, ಇದೊಂದು ಆಖ್ಯಾತಪದ ಎಂಬುದನ್ನು ಸೂಚಿಸುವ ಅ ಪ್ರತ್ಯಯ (ಎಂದರೆ ಘಟನೆಯ ಮತ್ತು ಮಾಡುಗನನ್ನು) ಸೂಚಿಸುವ ಇಞ್ ಪ್ರತ್ಯಯ ಇವಿಷ್ಟೂ ಬಂದಿವೆ.
ವಾಕ್ಯಕ್ಕೆ ಬೇಕಾಗುವ ಮುಖ್ಯ ಘಟಕಗಳನ್ನು ಈ ರೀತಿ ಆಖ್ಯಾತ ಪದ ದೊಂದಿಗೆ ಬರುವ ಪ್ರತ್ಯಯಗಳೇ ತಿಳಿಸುವುವಾದ ಕಾರಣ ಈ ಭಾಷೆಗೆ ನಾಮ ಪದಗಳ ಮತ್ತು ಗುಣಪದಗಳ ಅವಶ್ಯಕತೆಯಿಲ್ಲ. ಘಟಕಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಸಬೇಕಾದಾಗ ಮಾತ್ರ ಮುಂಡಾರಿ ಭಾಷೆ ಇಂತಹ ಆಖ್ಯಾತ ಪದಗಳೊಂದಿಗೆ ತುಂಡುವಾಕ್ಯಗಳನ್ನು ಬಳಸಿಕೊಳ್ಳುತ್ತದೆ. ಅಮೆರಿಕಾದಲ್ಲಿ ಬಳಕೆ ಯಲ್ಲಿರುವ ಸಾಲಿಶಾನ್ ಮತ್ತು ವಾಕಶಾನ್ ಭಾಷಾಕುಟುಂಬಗಳಿಗೆ ಸೇರಿದ ಒಕನಗನ್, ಲಿಲ್ಲೋಎತ್, ಮಕಾ ಮೊದಲಾದ ಭಾಷೆಗಳೂ ಈ ವಿಷಯದಲ್ಲಿ ಮುಂಡಾರಿ ಭಾಷೆಯನ್ನು ಹೋಲುತ್ತವೆ (ಜಾಸ್ತಿ ವಿವರಗಳಿಗೆ ಭಟ್ 1994 ನೋಡಿ). ‘ನಾನು’ ಎಂಬುದಾಗಿ ಕೊಡುವವನನ್ನು
11.3 ಮುಖ್ಯವಲ್ಲದ ಪದವಗ್ರಗಳು
ಕನ್ನಡದಲ್ಲಿ ಮೇಲೆ ವಿವರಿಸಿದ ಹಾಗೆ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಮುಖ್ಯ ಪದವಗ್ರಗಳಿಗೆ ಸೇರಿದ ಪದಗಳು ಮಾತ್ರ ವಲ್ಲದೆ, ಪುರುಷವಾಚಕ ಪದಗಳು, ಸವ್ರಪದಗಳು, ಎಣಿಕೆಯ ಪದಗಳು ಮತ್ತು ಅವ್ಯಯಗಳು ಎಂಬುದಾಗಿ ನಾಲ್ಕು ಮುಖ್ಯವಲ್ಲದ ಪದವಗ್ರಗಳಿಗೆ ಸೇರಿದ ಪದ ಗಳೂ ಬಳಕೆಯಲ್ಲಿವೆ. ಇಂತಹ ಪದಗಳ ಬಳಕೆಯಲ್ಲೂ ಪ್ರಪಂಚದ ಭಾಷೆಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿವೆ. ಹೆಚ್ಚಿನ ವ್ಯಾಕರಣಗಳಲ್ಲೂ ಪುರುಷವಾಚಕ ಪದಗಳು ಮತ್ತು ಸವ್ರಪದ ಗಳು ಎಂಬ ಈ ಎರಡು ಪದವಗ್ರಗಳಿಗೆ ಸೇರಿದ ಪದಗಳನ್ನು ‘ಸವ್ರನಾಮ’ ಎಂಬ ಹೆಸರಿನ ಒಂದೇ ಪದವಗ್ರದಲ್ಲಿ ಸೇರಿಸಿ ಹೇಳುವುದು ರೂಢಿ. ಆದರೆ ನಿಜಕ್ಕೂ ಈ ಎರಡು ರೀತಿಯ ಪದಗಳ ನಡುವೆ ಸಾಮ್ಯವೇನೂ ಇಲ್ಲವಾದ ಕಾರಣ ಅವನ್ನು ಒಂದೇ ಪದವಗ್ರದಲ್ಲಿ ಸೇರಿಸಿ ಹೇಳಲು ಯಾವ ಅಧಾರವೂ ಇಲ್ಲ (ಭಟ್ 2003, 2004 ನೋಡಿ). ಒಂದು ವಾಕ್ಯದ ಆಡುಗ ಮತ್ತು ಕೇಳುಗ ಎಂಬ ಎರಡು ಪಾತ್ರಗಳನ್ನು ಆ ವಾಕ್ಯದಲ್ಲೇನೇ ಸೂಚಿಸಬೇಕಾದಾಗ ಕನ್ನಡದಲ್ಲಿ ನಾನು ಮತ್ತು ನೀನು ಎಂಬ ಪುರುಷವಾಚಕ ಪದಗಳನ್ನು ಬಳಸಲಾಗುತ್ತದೆ. ಟಿಬೆಟೋ-ಬರ್ಮನ್ ಭಾಷಾ ಕುಟುಂಬಕ್ಕೆ ಸೇರಿದ ಅಙಾಮಿ, ಮಾವೋ ನಾಗ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ಇವೆರಡು ಪಾತ್ರಗಳಿಗಿಂತ ಭಿನ್ನವಾಗಿರುವ ಮೂರನೆಯದೊಂದು ಪಾತ್ರವನ್ನು ಸೂಚಿಸುವುದಕ್ಕಾಗಿಯೂ ಪುರುಷವಾಚಕ ಪದಗಳ ಬಳಕೆಯಾಗುತ್ತದೆ (ಕನ್ನಡದಲ್ಲಿ ಇದಕ್ಕಾಗಿ ಅವನು, ಅವಳು ಮೊದಲಾದ ಸವ್ರಪದಗಳನ್ನು ಬಳಸ ಲಾಗುತ್ತದೆ).
ಕ್ರಿಯಾಪದದ ಕೊನೆಯಲ್ಲಿ ಬರುವ ಪ್ರತ್ಯಯದ ಮೂಲಕವೂ ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಹೋಗುತ್ತೇನೆ ಮತ್ತು ಹೋಗುತ್ತಿ ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಏನೆ ಮತ್ತು ಇ ಪ್ರತ್ಯಯಗಳು ಆಡುಗ ಮತ್ತು ಕೇಳುಗರನ್ನು ಸೂಚಿಸುತ್ತವೆ. ಆದರೆ, ಕನ್ನಡದಲ್ಲಿ ಇಂತಹ ಪುರುಷವಾಚಕ ಪ್ರತ್ಯಯಗಳಿಗಿಂತ ಪುರುಷವಾಚಕ ಪದಗಳಿಗೇನೇ ಹೆಚ್ಚಿನ ಪ್ರಾಮುಖ್ಯತೆಯಿದೆ.
ಇದಲ್ಲದೆ, ಪುರುಷವಾಚಕ ಪದಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುವ ಮಣಿಪುರಿಯಂತಹ ಬೇರೆ ಹಲವು ಭಾಷೆಗಳಲ್ಲಿ ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದ ಕೊನೆಯಲ್ಲಿ ಪ್ರತ್ಯಯಗಳನ್ನು ಬಳಸುವ ಈ ಎರಡನೆಯ ವಿಧಾನವೇ ಬಳಕೆಯಲ್ಲಿಲ್ಲ.
ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ವಿಶಿಷ್ಟವಾದ ಪದಗಳ ಬದಲು ಪ್ರತ್ಯಯಗಳನ್ನೇ ಬಳಸುವ ಭಾಷೆಗಳೂ ಹಲವಿವೆ. ಇಂತಹ ಭಾಷೆಗಳಲ್ಲಿ ಸ್ವತಂತ್ರವಾದ ನಾನು, ನೀನು ಎಂಬಂತಹ ಪದಗಳಿದ್ದರೂ ಅವಕ್ಕೆ ಜಾಸ್ತಿ ಪ್ರಾಮುಖ್ಯತೆಯಿಲ್ಲ. ಅಂತಹ ಪದಗಳೇ ಇಲ್ಲದ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ, ಕಯುವಾವಾ ಎಂಬ ಭಾಷೆಯಲ್ಲಿ ಆಡುಗ ಮತ್ತು ಕೇಳುಗ ರನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಬರಬಲ್ಲ ಪ್ರತ್ಯಯಗಳಿವೆಯಲ್ಲದೆ ಸ್ವತಂತ್ರವಾಗಿ ಬರಬಲ್ಲ ಪದಗಳಿಲ್ಲ. ಸವ್ರಪದಗಳ ಒಂದು ವೈಶಿಷ್ಟ್ಯವೇನೆಂದರೆ, ಅವುಗಳಲ್ಲೆಲ್ಲ ಎರಡೆರಡು ಅಂಗಗಳಿರುತ್ತವೆ. ಇವುಗಳಲ್ಲಿ ಒಂದು ಅಂಗ ಸವ್ರಪದಗಳು ವಾಕ್ಯದಲ್ಲಿ ನಡೆಸ ಬೇಕಾಗಿರುವ ಕೆಲಸ ಏನೆಂಬುದನ್ನೂ ಮತ್ತು ಇನ್ನೊಂದು ಅಂಗ ಅವುಗಳ ವ್ಯಾಪ್ತಿ ಎಂತಹದು ಎಂಬುದನ್ನೂ ಸೂಚಿಸುತ್ತವೆ.
ಉದಾಹರಣೆಗಾಗಿ, ಕನ್ನಡದ ಸವ್ರಪದಗಳಾದ ಇವಳು ಮತ್ತು ಅವಳು ಎಂಬವುಗಳಲ್ಲಿ ಮೊದಲನೆಯ ಅಂಗವಾದ ‘ಇ’ ಮತ್ತು ‘ಅ’ಗಳು ಆ ಪದಕ್ಕೆ ಘಟಕವೊಂದನ್ನು ನಿರ್ದೇಶಿಸುವ ಕೆಲಸವಿದೆಯೆಂದೂ ಮತ್ತು ಎರಡನೆಯ ಅಂಗ ವಾದ ವಳು ಎಂಬುದು ಆ ಪದಕ್ಕೆ ಹೆಂಗಸರಿಗಷ್ಟೇ ಸೀಮಿತವಾಗಿರುವ ವ್ಯಾಪ್ತಿ ಯಿದೆಯೆಂದೂ ತಿಳಿಸುತ್ತವೆ. ಘಟಕ ಆಡುಗನ ಹತ್ತಿರದ್ದು ಎಂಬುದಾಗಿ ‘ಇ’ ಸೂಚಿಸುತ್ತದೆ, ಮತ್ತು ಘಟಕ ಆಡುಗನಿಗಿಂತ ದೂರದ್ದು ಎಂಬುದಾಗಿ ‘ಅ’ ಸೂಚಿಸುತ್ತದೆ. ಕನ್ನಡದಲ್ಲಿ ಈ ರೀತಿ ಸವ್ರಪದದ ಕೆಲಸವನ್ನು ಸೂಚಿಸುವ ಅಂಗ ಮೊದಲು ಬರುತ್ತದೆ ಮತ್ತು ಅದರ ವ್ಯಾಪ್ತಿಯನ್ನು ಸೂಚಿಸುವ ಅಂಗ ಅನಂತರ ಬರುತ್ತದೆ. ಆದರೆ ಹವಾಯಿಯನ್, ಸಮೊವಾ, ತಗಲೋಗ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ವ್ಯಾಪ್ತಿಯನ್ನು ಸೂಚಿಸುವ ಅಂಗ ಮೊದಲು ಬರುತ್ತದೆ, ಮತ್ತು ಕೆಲಸವನ್ನು ಸೂಚಿಸುವ ಅಂಗ ಅನಂತರ ಬರುತ್ತದೆ.
ಸಾಮಾನ್ಯವಾಗಿ ವಾಕ್ಯದಲ್ಲಿ ಕ್ರಿಯಾಪದ ಮೊದಲಿಗೆ ಬರುವ ಭಾಷೆಗಳಲ್ಲಿ ಈ ರೀತಿ ಸವ್ರಪದದ ವ್ಯಾಪ್ತಿಯನ್ನು ಸೂಚಿಸುವ ಅಂಗ ಅದರ ಕೆಲಸವನ್ನು ಸೂಚಿಸುವ ಅಂಗಕ್ಕಿಂತ ಮೊದಲಿಗೆ ಬರುತ್ತದೆ ಮತ್ತು ವಾಕ್ಯದಲ್ಲಿ ಕ್ರಿಯಾಪದ ಕೊನೆಗೆ ಬರುವ ಕನ್ನಡ, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ಅದು ಸವ್ರ ಪದದ ಕೆಲಸವನ್ನು ಸೂಚಿಸುವ ಅಂಗದ ಅನಂತರ ಬರುತ್ತದೆ (11.3 ನೋಡಿ). ಕನ್ನಡದಲ್ಲಿ ಮುಖ್ಯವಾಗಿ ಮೂರು ಕೆಲಸಗಳನ್ನು ನಡೆಸಬಲ್ಲ ಸವ್ರಪದ ಗಳಿವೆ (ಇವನು-ಅವನು-ಯಾವನು, ಇಲ್ಲಿ-ಅಲ್ಲಿ-ಎಲ್ಲಿ, ಇಷ್ಟು-ಅಷ್ಟು- ಎಷ್ಟು, ಇಂತಹ-ಅಂತಹ-ಎಂತಹ, ಇತ್ಯಾದಿ). ಇವುಗಳಲ್ಲಿ ಮೊದಲಿನವೆರಡು ವ್ಯಕ್ತಿ, ವಸ್ತು, ಜಾಗ, ಅಳತೆ ಮೊದಲಾದವುಗಳನ್ನು ನಿರ್ದೇಶಿಸುತ್ತವೆ ಮತ್ತು ಮೂರನೆಯದು (ಯಾರು, ಎಲ್ಲಿ, ಎಷ್ಟು ಇತ್ಯಾದಿ) ಅವುಗಳ ವಿಷಯವಾಗಿ ಅನಿಶ್ಚಿತತೆಯನ್ನು ಸೂಚಿಸುತ್ತದೆ (10.4.1 ನೋಡಿ). ವ್ಯಕ್ತಿ, ವಸ್ತು, ಜಾಗ ಮೊದಲಾದುವನ್ನು ನಿರ್ದೇಶಿಸುವುದಕ್ಕಾಗಿ ಕನ್ನಡದಲ್ಲಿ ಆಡುಗನ ಹತ್ತಿರ ಮತ್ತು ದೂರ ಎಂಬುದಾಗಿ ಎರಡು ಜಾಗಗಳನ್ನು ಸೂಚಿಸಬಲ್ಲ ಸವ್ರಪದಗಳು ಮಾತ್ರ ಇವೆ. ಇದಕ್ಕಿಂತ ಜಾಸ್ತಿ ಜಾಗಗಳನ್ನು ಸೂಚಿಸಬಲ್ಲ ಭಾಷೆಗಳೂ ಹಲವಿವೆ. ಉದಾಹರಣೆಗಾಗಿ ಕೆಲವು ನಾಗಾ ಭಾಷೆಗಳಲ್ಲಿ ಆಡುಗನ ಹತ್ತಿರ, ಕೇಳುಗನ ಹತ್ತಿರ ಮತ್ತು ಇಬ್ಬರಿಗಿಂತಲೂ ದೂರ ಎಂಬುದಾಗಿ ಮೂರು ಜಾಗಗಳನ್ನು ಸೂಚಿಸಬಲ್ಲ ಪದಗಳಿವೆ. ಇದಲ್ಲದೆ, ಕಾಣಿಸುವ, ಕಾಣಿಸದ, ಮೇಲಿನ, ಕೆಳಗಿನ ಮೊದಲಾದ ಬೇರೆಯೂ ಹಲವು ರೀತಿಯ ವ್ಯತ್ಯಾಸಗಳನ್ನು ಇಂತಹ ನಿರ್ದೇಶಿಸುವ ಸವ್ರಪದಗಳಲ್ಲಿ ಕಾಣಿಸಬಲ್ಲ ಭಾಷೆಗಳೂ ಹಲವಿವೆ. ಇದಲ್ಲದೆ, ಸವ್ರಪದಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸದ ವಿಷಯ ದಲ್ಲಾಗಲೀ ಇಲ್ಲವೇ ಅವುಗಳ ವ್ಯಾಪ್ತಿಯ ವಿಷಯದಲ್ಲಾಗಲೀ ಯಾವ ರೀತಿಯ ವ್ಯತ್ಯಾಸವನ್ನೂ ತೋರಿಸದಿರುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ ನೈಜರ್-ಕೋಂಗೋ ಭಾಷಾಕುಟುಂಬಕ್ಕೆ ಸೇರಿದ ಲ್ಯೇಲೇ ಎಂಬ ಭಾಷೆಯಲ್ಲಿ ಒಂದೇ ಸವ್ರಪದವನ್ನು ಎಲ್ಲಾ ರೀತಿಯ ಕೆಲಸಗಳಿಗಾಗಿಯೂ (ವ್ಯಕ್ತಿ, ವಸ್ತು ಮೊದಲಾದುವನ್ನು ನಿರ್ದೇಶಿಸುವುದಕ್ಕಾಗಿ ಮತ್ತು ಅವುಗಳ ಕುರಿತಾಗಿ ಅನಿಶ್ಚಿತತೆ ಯನ್ನು ಸೂಚಿಸುವುದಕ್ಕಾಗಿ) ಒಂದೇ ಸವ್ರಪದದ ಬಳಕೆಯಿದೆ (ಜಾಸ್ತಿ ವಿವರ ಗಳಿಗೆ ಭಟ್ 2004 ನೋಡಿ).
11.4 ಪದಗಳ ಅನುಕ್ರಮ
ಕನ್ನಡ ವಾಕ್ಯಗಳಲ್ಲಿ ಕ್ರಿಯಾಪದಗಳು ಸಾಮಾನ್ಯವಾಗಿ ವಾಕ್ಯದ ಕೊನೆಯಲ್ಲಿ ಬರುತ್ತವೆ, ಮತ್ತು ವಾಕ್ಯದ ಇತರ ಅಂಗಗಳಾಗಿ ಬರುವ ಘಟಕಗಳು ಮತ್ತು ಗುಣಪದಗಳು ಈ ಕ್ರಿಯಾಪದಗಳ ಎಡಕ್ಕೆ ಬರುತ್ತವೆ.
ಇದಕ್ಕೆ ಬದಲು ಐರಿಶ್, ಹವಾಯಿಯನ್, ತಗಲೋಗ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ಕ್ರಿಯಾಪದಗಳು ವಾಕ್ಯದಲ್ಲಿ ಮೊದಲನೆಯ ಪದವಾಗಿ ಬರುತ್ತವೆ, ಮತ್ತು ಉಳಿದುವು (ಘಟಕಗಳು ಮತ್ತು ಗುಣಪದಗಳು) ಅವುಗಳ ಅನಂತರ ಬರುತ್ತವೆ.
ಇಂಗ್ಲಿಷ್, ಕಾಶ್ಮೀರಿ, ಮೊದಲಾದ ಇನ್ನು ಕೆಲವು ಭಾಷೆಗಳಲ್ಲಿ ಕ್ರಿಯಾ ಪದಗಳು ವಾಕ್ಯದ ನಡುವೆ ಬರುತ್ತವೆ. ವಾಕ್ಯಘಟಕಗಳಲ್ಲಿ ಒಂದು (ವಾಕ್ಯದ ಕತ್ರೃವನ್ನು ಸೂಚಿಸುವ ಘಟಕ) ಈ ಕ್ರಿಯಾಪದದ ಮೊದಲು ಬರುತ್ತದೆ ಮತ್ತು ಉಳಿದುವು ಅದರ ಅನಂತರ ಬರುತ್ತವೆ. ಕನ್ನಡ ವಾಕ್ಯಗಳಲ್ಲಿ ಕ್ರಿಯಾಪದ ಕೊನೆಯಲ್ಲಿ ಬರುವುದಾದ ಕಾರಣ, ಅದರ ಗುಣಪದಗಳು ನಾಮಪದ, ಕ್ರಿಯಾಪದ ಇಲ್ಲವೇ ಬೇರೊಂದು ಗುಣಪದದ ಎಡಕ್ಕೆ ಬರುತ್ತವೆ (ಕೆಳಗೆ ಕೊಟ್ಟಿರುವ (1ಕ-ಗ) ನೋಡಿ), ಸಂಬಂಧಿಸುವ ಪದ ಮತ್ತು ವಾಕ್ಯಗಳು ಅವು ಸಂಬಂಧಿಸುವ ನಾಮಪದದ ಎಡಕ್ಕೆ ಬರುತ್ತವೆ (1ಘ-ಙ), ಹೋಲಿಕೆಯ ಪದಗಳು ಗುಣಪದದ ಎಡಕ್ಕೆ ಬರುತ್ತವೆ (1ಚ) ಮತ್ತು ಮುಖ್ಯ ಕ್ರಿಯಾಪದಗಳು ಉಪಕ್ರಿಯಾಪದದ ಎಡಕ್ಕೆ ಬರುತ್ತವೆ (1ಛ).
(1ಕ) ದೊಡ್ಡ ಪುಸ್ತಕ (1ಖ) ಬೇಗ ಬಂದ (1ಗ) ಬಹಳ ದೊಡ್ಡ ಮನೆ (1ಘ) ರಾಜನ ಪುಸ್ತಕ (1ಙ) ರಾಜನಿಗೆ ಕೊಟ್ಟ ಪುಸ್ತಕ (1ಚ) ರಾಜುವಿಗಿಂತ ದೊಡ್ಡ (ಹುಡುಗ) (1ಛ) ಕುಳಿತಿದ್ದಾನೆ ಇದಕ್ಕೆ ಬದಲು, ವಾಕ್ಯದಲ್ಲಿ ಮೊದಲಿಗೆ ಕ್ರಿಯಾಪದ ಬರುವಂತಹ ಐರಿಷ್, ಹವಾಯಿಯನ್ ಮೊದಲಾದ ಭಾಷೆಗಳಲ್ಲಿ ಈ ವಾಕ್ಯಾಂಗಗಳ ಅನುಕ್ರಮ ಕನ್ನಡದಲ್ಲಿ ಕಾಣಿಸುವ ಅನುಕ್ರಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇವುಗಳಲ್ಲಿ ಗುಣಪದಗಳು ನಾಮಪದ, ಕ್ರಿಯಾಪದ ಮತ್ತು ಬೇರೆ ಗುಣಪದಗಳ ಬಲಕ್ಕೆ ಬರುತ್ತವೆ, ಸಂಬಂಧಿಸುವ ಪದಗಳು ಮತ್ತು ಸಂಬಂಧಿಸುವ ವಾಕ್ಯಗಳು ನಾಮ ಪದದ ಬಲಕ್ಕೆ ಬರುತ್ತವೆ, ಹೋಲಿಕೆಯ ಪದಗಳು ಗುಣಪದದ ಬಲಕ್ಕೆ ಬರು ತ್ತವೆ, ಮತ್ತು ಮುಖ್ಯಕ್ರಿಯಾಪದಗಳು ಉಪಕ್ರಿಯಾಪದದ ಬಲಕ್ಕೆ ಬರುತ್ತವೆ. ಕ್ರಿಯಾಪದ ವಾಕ್ಯದ ನಡುವೆ ಬರುವ ಇಂಗ್ಲಿಷ್ನಂತಹ ಭಾಷೆಗಳಲ್ಲಿ ಮೇಲಿನ ಕೆಲವು ರಚನೆಗಳು ಕ್ರಿಯಾಪದ ವಾಕ್ಯದ ಕೊನೆಯಲ್ಲಿ ಬರುವ ಕನ್ನಡದ ರಚನೆಗಳ ಹಾಗಿವೆ, ಆದರೆ ಬೇರೆ ಕೆಲವು ರಚನೆಗಳು ಕ್ರಿಯಾಪದ ವಾಕ್ಯದಲ್ಲಿ ಮೊದಲಿಗೆ ಬರುವ ಐರಿಷ್, ತಗಲೋಗ್ ಮೊದಲಾದ ಭಾಷೆಗಳಲ್ಲಿರುವ ಹಾಗೆ ಉದಾಹರಣೆಗಾಗಿ, ಇಂಗ್ಲಿಷ್ನ ಗುಣಪದಗಳು ಕನ್ನಡದಲ್ಲಿರುವ ಹಾಗೆ ನಾಮಪದ ಇಲ್ಲವೇ ಗುಣಪದದ ಎಡಕ್ಕೆ ಬರುತ್ತವೆ (gooಜ boಥಿ, veಡಿಥಿ gooಜ), ಆದರೆ ಕ್ರಿಯಾಪದದ ಬಲಕ್ಕೆ ಬರುತ್ತವೆ (ಛಿಚಿme quiಛಿಞಟಥಿ); ಸಂಬಂಧಿಸುವ ಪದಗಳು ನಾಮಪದದ ಎಡಕ್ಕೂ ಬರಬಲ್ಲುವು (ಎohಟಿ’s booಞ), ಬಲಕ್ಕೂ ಬರಬಲ್ಲುವು (booಞ oಜಿ ಎohಟಿ); ಸಂಬಂಧಿಸುವ ವಾಕ್ಯಗಳು ನಾಮಪದದ ಬಲಕ್ಕೆ ಬರುತ್ತವೆ (ಣhe booಞ ಣhಚಿಣ ಎohಟಿ gಚಿve); ಹೋಲಿಕೆಯ ಪದಗಳು ಗುಣಪದದ ಬಲಕ್ಕೆ ಬರುತ್ತವೆ (biggeಡಿ ಣhಚಿಟಿ ಎohಟಿ); ಮತ್ತು ಮುಖ್ಯಕ್ರಿಯಾಪದಗಳು ಉಪಕ್ರಿಯಾಪದದ ಬಲಕ್ಕೆ ಬರುತ್ತವೆ (is siಣಣiಟಿg).
ಇಲ್ಲಿ ಹೆಚ್ಚಿನ ವಿಷಯಗಳಲ್ಲೂ ಇಂಗ್ಲಿಷ್ ಭಾಷೆಯ ವಾಕ್ಯರಚನೆ ಕನ್ನಡದ ವಾಕ್ಯರಚನೆಗಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಇದಕ್ಕೆ ಇಂಗ್ಲಿಷ್ ನಲ್ಲಿ ಬಾಧಿತ ಘಟಕ ಕ್ರಿಯಾಪದದ ಬಲಕ್ಕೆ ಬರುವುದೇ ಮುಖ್ಯ ಕಾರಣ (ಜಾಸ್ತಿ ವಿವರಗಳಿಗೆ ಗ್ರೀನ್ಬಗ್್ರ 1963, ಹಾಕಿನ್್ಸ 1983 ಮತ್ತು ಪ್ರೈಮಸ್ 2001 ನೋಡಿ). ಸವ್ರಪದಗಳಲ್ಲಿ ಬರುವ ಎರಡು ಅಂಗಗಳಲ್ಲಿ ಯಾವುದು ಮೊದಲು ಬರು ತ್ತದೆ ಎಂಬುದೂ ವಾಕ್ಯದಲ್ಲಿ ಕ್ರಿಯಾಪದ ಎಲ್ಲಿ ಬರುತ್ತದೆ (ಸುರುವಿನಲ್ಲೋ ಕೊನೆಯಲ್ಲೋ) ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ನಾವು ಮೇಲೆ (11-2)ರಲ್ಲಿ ನೋಡಿರುವೆವು.
11.5 ವ್ಯಾಕರಣ ಸಂಬಂಧ
ವಾಕ್ಯವೊಂದರಲ್ಲಿ ಬರುವ ಘಟಕಗಳ ಮೂಲಕ ಅರ್ಥ ಮತ್ತು ವ್ಯವಹಾರ ಎಂಬುದಾಗಿ ಎರಡು ರೀತಿಯ ಸಂಬಂಧಗಳನ್ನು ಸೂಚಿಸುವ ಅವಶ್ಯಕತೆಯಿದೆ ಎಂಬುದನ್ನು ನಾವು ಎರಡನೇ ಅಧ್ಯಾಯದಲ್ಲಿ ನೋಡಿರುವೆವು. ಕನ್ನಡದಲ್ಲಿ ಅರ್ಥ ಸಂಬಂಧವನ್ನು ವಿಭಕ್ತಿ ಪ್ರತ್ಯಯಗಳ ಮೂಲಕವೂ ಮತ್ತು ವ್ಯವಹಾರ ಸಂಬಂಧವನ್ನು ಇದಕ್ಕಿಂತ ತೀರ ಭಿನ್ನವಾದ ಬೇರೆ ಕೆಲವು ವಿಧಾನಗಳ (ಘಟಕ ಗಳ ಅನುಕ್ರಮ, ಘಟಕವೊಂದನ್ನು ಒತ್ತಿ ಹೇಳುವುದು ಇಲ್ಲವೇ ವಾಕ್ಯದ ಉಳಿದ ಭಾಗದೊಂದಿಗೆ ಸಂಬಂಧಿಸಿ ಹೇಳುವುದು, ಇತ್ಯಾದಿಗಳ) ಮೂಲಕವೂ ಸೂಚಿಸ ಲಾಗುತ್ತದೆ (2.7 ನೋಡಿ). ಕನ್ನಡದಲ್ಲಿ ಈ ಎರಡು ಸಂಬಂಧಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ಇರಿಸ ಲಾಗಿದೆ. ಇದಲ್ಲದೆ, ಕನ್ನಡದ ವಾಕ್ಯರಚನೆಯಲ್ಲಿ ಅರ್ಥಕ್ಕೆ ಸಂಬಂಧಿಸಿದವು ಮತ್ತು ವ್ಯವಹಾರಕ್ಕೆ ಸಂಬಂಧಿಸಿದವು ಎಂಬುದಾಗಿ ಎರಡು ರೀತಿಯ ವಿಧಾನ ಗಳು ಬಳಕೆಯಾಗುತ್ತಿದ್ದು, ಇವುಗಳಲ್ಲಿ ಅರ್ಥಕ್ಕೆ ಸಂಬಂಧಿಸಿದ ವಿಧಾನಗಳನ್ನು ಅರ್ಥವೇ ನಿಯಂತ್ರಿಸುತ್ತದೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಧಾನಗಳನ್ನು ವ್ಯವಹಾರವೇ ನಿಯಂತ್ರಿಸುತ್ತದೆ. ಉದಾಹರಣೆಗಾಗಿ, ಕನ್ನಡದಲ್ಲಿ ಎರಡು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೂರು ವಿಧಾನಗಳು ಬಳಕೆಯಲ್ಲಿವೆಯೆಂಬುದನ್ನು ನಾವು ಎಂಟನೆಯ ಅಧ್ಯಾಯ ದಲ್ಲಿ ನೋಡಿರುವೆವು. ಇವುಗಳಲ್ಲಿ ಮೊದಲನೆಯ ಎರಡು ವಿಧಾನಗಳನ್ನು (ಮತ್ತು ಪದವನ್ನು ಬಳಸಿ ಹಾಗೂ ಊ ಪ್ರತ್ಯಯವನ್ನು ಬಳಸಿ ಎರಡು ವಾಕ್ಯ ಗಳನ್ನು ಜೋಡಿಸುವುದು) ವಾಕ್ಯದ ವ್ಯವಹಾರಕ್ಕೆ ಸಂಬಂಧಿಸಿದ ವಿಧಾನಗಳೆಂದೂ ಮತ್ತು ಮೂರನೆಯ ವಿಧಾನವನ್ನು (ಮೊದಲನೆಯ ವಾಕ್ಯದ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಅದನ್ನು ಎರಡನೆಯ ದರೊಂದಿಗೆ ಜೋಡಿಸುವುದು) ವಾಕ್ಯದ ಅರ್ಥಕ್ಕೆ ಸಂಬಂಧಿಸಿದ ವಿಧಾನವೆಂದೂ ಹೇಳಲು ಸಾಧ್ಯವಿದೆ. ಇವುಗಳಲ್ಲಿ ಮೂರನೆಯ ವಿಧಾನ ಉಳಿದ ಎರಡು ವಿಧಾನಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ ಎಂಬುದನ್ನು ನಾವು 8.2.3ರಲ್ಲಿ ನೋಡಿರುವೆವು. ಈ ವ್ಯತ್ಯಾಸಗಳಲ್ಲಿ ಹೆಚ್ಚಿನವಕ್ಕೂ ಮೂರನೆಯ ವಿಧಾನದ ನಿಯಂತ್ರಣ ವಾಕ್ಯದ ಅರ್ಥದ ಮೇಲೆ ಅವಲಂಬಿಸಿರುವುದೇ ಕಾರಣ. ಉದಾಹರಣೆಗಾಗಿ, ಎರಡು ಘಟನೆಗಳು ಅವನ್ನು ನಡೆಸುವ ಎರಡು ವ್ಯಕ್ತಿ ಗಳ ಹತೋಟಿಯಲ್ಲಿರುವವುಗಳಾದರೆ, ಅವನ್ನು ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಲು ಸಾಧ್ಯವಿದೆ, ಆದರೆ ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಲು ಸಾಧ್ಯವಾಗದು. ಬೇಯಿಸಿದಳು. ಬೇಯಿಸಿದ ಮತ್ತು ಜಾನಕಿ ಅನ್ನ (2ಖ) ರಾಜು ತರಕಾರಿಯನ್ನೂ ಜಾನಕಿ ಅನ್ನವನ್ನೂ ಬೇಯಿಸಿದರು. ರಾಜು ತರಕಾರಿಯನ್ನು ಬೇಯಿಸಿ ಸಾಂಬಾರ್ ಮಾಡಿದ. ಜೋಡಿಸುವ ಕ್ರಿಯಾರೂಪದ ಮೂಲಕ ನಡೆಸುವವನ ಹತೋಟಿಯಲ್ಲಿರುವ ಎರಡು ಘಟನೆಗಳನ್ನು ಜೋಡಿಸಿ ಹೇಳಬೇಕಿದ್ದಲ್ಲಿ ಅವೆರಡೂ ಒಂದೇ ವ್ಯಕ್ತಿಯ ಹತೋಟಿಯಲ್ಲಿರುವುದು ಅವಶ್ಯ ಎಂಬುದನ್ನು (2ಗ) ಸೂಚಿಸುತ್ತದೆ. ಒಂದು ಘಟನೆ ಹತೋಟಿಯಲ್ಲಿದ್ದು ಇನ್ನೊಂದು ಹತೋಟಿಯಲ್ಲಿಲ್ಲವಾದಲ್ಲಿ ಮಾತ್ರ ಅವೆರಡನ್ನು ಬೇರೆ ಬೇರೆ ವ್ಯಕ್ತಿಗಳು ನಡೆಸುತ್ತಿದ್ದರೂ ಜೋಡಿಸುವ ಕ್ರಿಯಾ ರೂಪದ ಮೂಲಕ ಜೋಡಿಸಲು ಸಾಧ್ಯವಿದೆ. (2ಘ) ರಾಜು ಬೊಬ್ಬೆಹಾಕಿ ಮಗುವಿಗೆ ಎಚ್ಚರವಾಯಿತು. (2ಘ)ದಲ್ಲಿ ಎಚ್ಚರವಾಗುವ ಘಟನೆ ಮಗುವಿನ ಹತೋಟಿಯಲ್ಲಿಲ್ಲವಾದ ಕಾರಣ ಅದನ್ನು ರಾಜು ಬೊಬ್ಬೆಹಾಕುವ ಘಟನೆಯೊಂದಿಗೆ ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಿ ಹೇಳಲು ಸಾಧ್ಯವಾಗಿದೆ (4.3.2 ನೋಡಿ).
ಮತ್ತು ಎಂಬುದರ ಮೂಲಕ ಜೋಡಿಸಿದ ವಾಕ್ಯಗಳಲ್ಲಿ ಎರಡು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಪದಗಳು ಬರಬಲ್ಲುವು, ಆದರೆ ಜೋಡಿಸುವ ಕ್ರಿಯಾರೂಪವನ್ನು ಬಳಸಿ ಜೋಡಿಸಿದ ವಾಕ್ಯಗಳಲ್ಲಿ ಇದು ಸಾಧ್ಯವಾಗಲಾರದು. ರಾಜು ನಿನ್ನೆ ಮೈಸೂರಿಗೆ ಹೋಗಿದ್ದ ಮತ್ತು ಇವತ್ತು ಅಲ್ಲಿಂದ ಒಂದು ಟಿವಿ ತಂದಿದ್ದಾನೆ. (3ಖ) ರಾಜು ಮೈಸೂರಿಗೆ ಹೋಗಿ ಒಂದು ಟಿವಿ ತಂದಿದ್ದಾನೆ. ಮೇಲೆ ವಿವರಿಸಿರುವ ಎರಡು ರೀತಿಯ ಸನ್ನಿವೇಶಗಳಲ್ಲೂ ಜೋಡಿಸುವ ಕ್ರಿಯಾರೂಪಗಳನ್ನು ಬಳಸಿ ಎಂತಹ ವಾಕ್ಯಗಳನ್ನು ಜೋಡಿಸಲು ಸಾಧ್ಯ ಎಂಬುದು ಆ ವಾಕ್ಯಗಳ ಅರ್ಥದ ಮೇಲೆ ಅವಲಂಬಿಸಿದೆ ಎಂಬುದನ್ನು ಗಮನಿಸ ಬಹುದು. ಕನ್ನಡದಲ್ಲಿ ಈ ರೀತಿ ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಬೇರೆ ಬೇರಾಗಿರಿಸಿರುವ ಕಾರಣ, ವಿಭಕ್ತಿ ಪ್ರತ್ಯಯಗಳಿಗೂ ಮತ್ತು ಅವು ಸೂಚಿಸುವ ಅರ್ಥ ಸಂಬಂಧಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ. ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿ ಮಾತ್ರವಲ್ಲದೆ ಮಣಿಪುರಿ, ತಾಂಖುರ್ ನಾಗ ಮೊದಲಾದ ಟಿಬೆಟೋ-ಬರ್ಮನ್ ಭಾಷೆಗಳಲ್ಲೂ ಇದೇ ರೀತಿ ವಿಭಕ್ತಿ ಪ್ರತ್ಯಯಗಳಿಗೂ ಮತ್ತು ಅವು ಸೂಚಿಸುವ ಅರ್ಥ ಸಂಬಂಧಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ. ಇದಕ್ಕೆ ಬದಲು, ಇಂಗ್ಲಿಷ್, ಜರ್ಮನ್, ಹಿಂದಿ ಮೊದಲಾದ ಬೇರೆ ಹಲವು ಭಾಷೆಗಳಲ್ಲಿ ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಸೂಚಿಸುವ ವಿಧಾನಗಳ ಬಳಕೆಯಲ್ಲಿ ನೇರವಾದ ಹೊಂದಾಣಿಕೆಯಿಲ್ಲದೆ ಗೊಂದಲವುಂಟಾಗಿರುವುದನ್ನು ಕಾಣಬಹುದು. ಇಂಗ್ಲಿಷ್ನ ವಾಕ್ಯಗಳಲ್ಲಿ ಘಟಕಗಳ ಅನುಕ್ರಮ ವ್ಯವಹಾರ ಸಂಬಂಧವನ್ನು ಮಾತ್ರವಲ್ಲದೆ ಅರ್ಥಸಂಬಂಧವನ್ನೂ ಸೂಚಿಸಬಲ್ಲುದು.
ಉದಾಹರಣೆಗಾಗಿ, ಣhe boಥಿ sಚಿತಿ ಣhe giಡಿಟ ವಾಕ್ಯದಲ್ಲಿ ಣhe giಡಿಟ ಘಟಕ sಚಿತಿ ಕ್ರಿಯಾಪದದ ಬಲಕ್ಕೆ ಬಂದಿದೆಯಾದ ಕಾರಣ ಅದು ಆ ಕ್ರಿಯಾಪದ ತಿಳಿಸುವ ‘ದೂಡುವ’ ಘಟನೆಯಿಂದ ಬಾಧಿತವಾಗುವ ವ್ಯಕ್ತಿಯನ್ನು ಸೂಚಿಸು ತ್ತದೆ, ಮತ್ತು ಣhe boಥಿ ಘಟಕ ಅದೇ ಕ್ರಿಯಾಪದದ ಎಡಕ್ಕೆ ಬಂದಿದೆಯಾದ ಕಾರಣ ಅದು ಆ ಕ್ರಿಯಾಪದ ತಿಳಿಸುವ ‘ದೂಡುವ’ ಘಟನೆಯನ್ನು ನಡೆಸಿ ಕೊಡುವ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಎರಡು ಅರ್ಥಸಂಬಂಧಗಳನ್ನು ಮಾತ್ರವಲ್ಲದೆ, ವಾಕ್ಯದ ಮೊದಲಿಗೆ ಬಂದಿರುವ ಣhe boಥಿ ಘಟಕ ವಾಕ್ಯದ ವಿಷಯ (ಣoಠಿiಛಿ) ಯಾವುದು ಎಂಬುದನ್ನೂ (ಎಂದರೆ ವ್ಯವಹಾರ ಸಂಬಂಧ ವನ್ನೂ) ಸೂಚಿಸುತ್ತದೆ. ಕನ್ನಡ ವಾಕ್ಯಗಳಲ್ಲಿ ಬರುವ ಘಟಕಗಳಲ್ಲಿ ಒಂದರ ಬದಲು ಇನ್ನೊಂದನ್ನು ವಾಕ್ಯದ ವಿಷಯವನ್ನಾಗಿ ಮಾಡಬೇಕಿದ್ದಲ್ಲಿ ಅದನ್ನು ವಾಕ್ಯದ ಮೊದಲನೆಯ ಘಟಕವಾಗಿ ಬಳಸಿದರೆ ಸಾಕು. ಇದಕ್ಕಾಗಿ ಆ ಘಟಕಗಳ ವಿಭಕ್ತಿ ರೂಪ ದಲ್ಲಾಗಲೀ ಇಲ್ಲವೇ ಕ್ರಿಯಾಪದದ ಕ್ರಿಯಾರೂಪದಲ್ಲಾಗಲೀ ಯಾವ ಬದಲಾ ವಣೆಯನ್ನೂ ಮಾಡಬೇಕಾಗಿಲ್ಲ.
ಆದರೆ ಇಂಗ್ಲಿಷ್ನಲ್ಲಿ ಈ ರೀತಿ ಒಂದು ಘಟಕದ ಬದಲು ಇನ್ನೊಂದು ಘಟಕವನ್ನು ವಾಕ್ಯದ ವಿಷಯವನ್ನಾಗಿ ಮಾಡಬೇಕಿದ್ದಲ್ಲಿ ಅದನ್ನು ವಾಕ್ಯದ ಮೊದಲನೆಯ ಘಟಕವನ್ನಾಗಿ ಮಾಡುವುದರೊಂದಿಗೆ ಬೇರೆಯೂ ಕೆಲವು ಬದಲಾ ವಣೆಗಳನ್ನೂ ಮಾಡಬೇಕಾಗುತ್ತದೆ. ಅದಕ್ಕಾಗಿ ಆ ವಾಕ್ಯವನ್ನು ಕತ್ರರಿ ಪ್ರಯೋಗ ದಿಂದ ಕರ್ಮಣಿ ಪ್ರಯೋಗಕ್ಕೆ ಬದಲಾಯಿಸಬೇಕಾಗುತ್ತದೆ. ‘ಅವಳು ಅವನನ್ನು ದೂಡಿದಳು’ ‘ಅವನನ್ನು ಅವಳು ದೂಡಿದಳು’
(4ಖ)ದಲ್ಲಿ him ಘಟಕವನ್ನು ವಾಕ್ಯದ ವಿಷಯವನ್ನಾಗಿ ಮಾಡಲು ವಾಕ್ಯದ ಮೊದಲನೆಯ ಪದವನ್ನಾಗಿ ಮಾಡಲಾಗಿದೆ, ಮತ್ತು ಇದರೊಂದಿಗೆ ಅದರ ವಿಭಕ್ತಿ ರೂಪವನ್ನೂ ಬದಲಾಯಿಸಲಾಗಿದೆ. ಇಲ್ಲಿ ಅರ್ಥ ವ್ಯತ್ಯಾಸವಿಲ್ಲದಿದ್ದರೂ ವಿಭಕ್ತಿ ವ್ಯತ್ಯಾಸವಿದೆ.
ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಸೂಚಿಸುವ ವಿಧಾನಗಳ ನಡುವೆ ನೇರ ಹೊಂದಾಣಿಕೆಯಿಲ್ಲದಿರುವ ಇಂತಹ ಭಾಷೆಗಳ ವಾಕ್ಯರಚನೆಯನ್ನು ವರ್ಣಿ ಸುವುದಕ್ಕಾಗಿ ಅವೆರಡಕ್ಕಿಂತ ಭಿನ್ನವಾಗಿರುವ ‘ವ್ಯಾಕರಣ ಸಂಬಂಧ’ ಎಂಬ ಬೇರೊಂದು ರೀತಿಯ ಸಂಬಂಧವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕಂಡು ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುವ ಕತ್ರೃ, ಕರ್ಮ, ಕರಣ, ಮೊದಲಾದ ‘ಕಾರಕ’ಗಳು ಮತ್ತು ಇಂಗ್ಲಿಷ್ ವ್ಯಾಕರಣದಲ್ಲಿ ಬಳಕೆಯಾಗುವ ಡಿeಟಚಿಣioಟಿ’ಗಳು ಈ ಭಾಷೆಗಳಲ್ಲಿ ಅರ್ಥ ಸಂಬಂಧಕ್ಕೂ ಮತ್ತು ಅದನ್ನು ಸೂಚಿಸುವ ವಿಧಾನಕ್ಕೂ ನಡುವೆ ನೇರವಾದ ಹೊಂದಾಣಿಕೆಯಿಲ್ಲವಾದ ಕಾರಣ ಅವೆರಡರ ನಡುವಿರುವ ಸಂಬಂಧವನ್ನು ವರ್ಣಿಸುವುದಕ್ಕಾಗಿ ಕಲ್ಪಿಸಿರುವಂತಹ ವ್ಯಾಕರಣ ಸಂಬಂಧಗಳಲ್ಲದೆ ಬೇರೇನಲ್ಲ (ಜಾಸ್ತಿ ವಿವರಗಳಿಗೆ ಭಟ್ 1991, 2001 ನೋಡಿ).
11.6 ಸಮಯದ ಸೂಚನೆ
ಹೆಚ್ಚಿನ ಭಾಷೆಗಳಲ್ಲೂ ಕ್ರಿಯಾಪದಗಳೊಂದಿಗೆ ಘಟನೆಗಳ ಸಮಯವನ್ನು ಸೂಚಿಸುವುದಕ್ಕಾಗಿ ಒಂದಲ್ಲ ಒಂದು ವಿಧಾನವನ್ನನುಸರಿಸುವ ಕ್ರಮ ಬಳಕೆ ಯಲ್ಲಿದೆ. ಆದರೆ ‘ಘಟನೆಯ ಸಮಯ’ ಎಂಬುದನ್ನು ಮುಖ್ಯವಾಗಿ ಮೂರು ದೃಷ್ಟಿಕೋನಗಳ ಮೂಲಕ ಪರಿಶೀಲಿಸಲು ಸಾಧ್ಯವಿದ್ದು, ಬೇರೆ ಬೇರೆ ಭಾಷೆಗಳು ಬೇರೆ ಬೇರೆ ದೃಷ್ಟಿಕೋನಗಳಿಗೆ ಮಹತ್ವವನ್ನು ಕೊಡುತ್ತವೆ.
ಮೊದಲನೆಯದಾಗಿ, ಘಟನೆಯ ಸಮಯವನ್ನು ಅದನ್ನು ತಿಳಿಸುವ ವಾಕ್ಯದ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಲು ಸಾಧ್ಯವಿದೆ. ವಾಕ್ಯದ ಸಮಯ ಕ್ಕಿಂತ ಅದು ತಿಳಿಸುವ ಘಟನೆಯ ಸಮಯ ಹಿಂದಿನದಿರಬಹುದು ಇಲ್ಲವೇ ಮುಂದಿನದಿರಬಹುದು. ಕನ್ನಡದ ಕ್ರಿಯಾಪದಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವಲ್ಲಿ ಈ ದೃಷ್ಟಿಕೋನಕ್ಕೆ ಹೆಚ್ಚಿನ ಮಹತ್ವವಿದೆ. ವಾಕ್ಯದ ಕೊನೆಯಲ್ಲಿ ಬರುವ ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯ ಮತ್ತು ಮುಂದಿನ ಸಮಯ ಎಂಬುದಾಗಿ ಎರಡೆರಡು ಸಮಯವನ್ನು ಸೂಚಿಸುವ ರೂಪಗಳಿವೆಯೆಂಬುದನ್ನು ನಾವು ಮೇಲೆ ಐದನೆಯ ಅಧ್ಯಾಯದಲ್ಲಿ ನೋಡಿರು ವೆವು. ಎರಡನೆಯದಾಗಿ, ಘಟನೆಯ ಸಮಯವನ್ನು ಘಟನೆಯ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿದ ಹಾಗೆ ಸೂಚಿಸಲು ಸಾಧ್ಯವಿದೆ. ಘಟನೆ ಕ್ಷಣಿಕ ವಿರಬಹುದು ಇಲ್ಲವೇ ಜಾಸ್ತಿ ಹೊತ್ತು ನಡೆಯುತ್ತಿರುವಂತಹದಿರಬಹುದು; ಅದು ಪೂರ್ಣಗೊಂಡಿರಬಹುದು ಇಲ್ಲವೇ ಅಪೂರ್ಣವಾಗಿರಬಹುದು. ಒಂದು ಬಾರಿ ಮಾತ್ರ ನಡೆಯುವಂತಹದಿರಬಹುದು ಇಲ್ಲವೇ ಒಟ್ಟಿಗೆ ಹಲವು ಬಾರಿ ನಡೆಯು ವಂತಹದಿರಬಹುದು.
ಕೆಲವು ಭಾಷೆಗಳು ಇಂತಹ ಘಟನೆಯ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿ ದಂತಹ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತವೆ. ಉದಾಹರಣೆಗಾಗಿ, ಸಂಸ್ಕೃತದ ಕ್ರಿಯಾಪದಗಳಿಗೆ ಪ್ರಾಮುಖ್ಯವಾಗಿ ಲಟ್ ಮತ್ತು ಲಿಟ್ ಎಂಬ ಎರಡು ರೀತಿಯ ರೂಪಗಳಿದ್ದು (ಕರೋತಿ-ಚಕಾರ, ಭವತಿ-ಬಭೂವ, ಪಚತಿ-ಪಪಾಚ, ಇತ್ಯಾದಿ), ಇವು ಅನುಕ್ರಮವಾಗಿ ಅಪೂರ್ಣ ಮತ್ತು ಪೂರ್ಣ ಘಟನೆಗಳನ್ನು ಸೂಚಿಸುತ್ತವೆ. ವಾಕ್ಯದ ಸಮಯಕ್ಕೂ ಮತ್ತು ಘಟನೆಯ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ಮಹತ್ವವಿಲ್ಲ. ಮೂರನೆಯದಾಗಿ, ಘಟನೆಯ ಸಮಯವನ್ನು ಸೂಚಿಸುವಲ್ಲಿ ಅದರ ಯಥಾರ್ಥತೆಗೆ ಹೆಚ್ಚಿನ ಮಹತ್ವವನ್ನು ಕೊಡುವ ಭಾಷೆಗಳೂ ಹಲವಿವೆ. ಇಂತಹ ಭಾಷೆಗಳಲ್ಲಿ ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದ ಕ್ಕಿಂತಲೂ ಘಟನೆಯನ್ನು ವರದಿ ಮಾಡುವಲ್ಲಿ ಆಡುಗನಿಗೆ ಎಂತಹ ಆಧಾರ ಇದೆ ಎಂಬುದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
ಇಂತಹ ಆಧಾರಗಳು ಸಾಕಷ್ಟು ಇವೆಯಾದಲ್ಲಿ ಘಟನೆಯನ್ನು ಕ್ರಿಯಾಪದದ ‘ಯಥಾರ್ಥ’ ರೂಪದ ಮೂಲಕವೂ ಮತ್ತು ಅಷ್ಟೊಂದು ಆಧಾರಗಳಿಲ್ಲದಿದ್ದು ಅದು ನಡೆಯುವ ಇಲ್ಲವೇ ನಡೆದಿರುವ ವಿಷಯದಲ್ಲಿ ಸಂಶಯವಿದೆಯಾದಲ್ಲಿ ‘ಅಯಥಾರ್ಥ’ ರೂಪದ ಮೂಲಕವೂ ಇಂತಹ ಭಾಷೆಗಳಲ್ಲಿ ಘಟನೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗಾಗಿ, ಬರ್ಮೀಸ್ ಭಾಷೆಯ ಕ್ರಿಯಾಪದಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವುದಕ್ಕಾಗಿ ಈ ಮೂರನೆಯ ದೃಷ್ಟಿಕೋನ ಬಳಕೆ ಯಲ್ಲಿದೆ. ನಡೆದ ಮತ್ತು ನಡೆಯುತ್ತಿರುವ ಘಟನೆಗಳನ್ನು ಯಥಾರ್ಥ ರೂಪಗಳ ಮೂಲಕವೂ ಮತ್ತು ನಡೆಯದಿದ್ದ ಮತ್ತು ನಡೆಯಲಿರುವ ಘಟನೆಗಳನ್ನು ಅಯಥಾರ್ಥ ರೂಪಗಳ ಮೂಲಕವೂ ಈ ಭಾಷೆಯಲ್ಲಿ ಸೂಚಿಸಲಾಗುತ್ತದೆ.
ಆಸ್ಟ್ರೇಲಿಯಾದ ಕಯಾದ್ರಿಲ್್ದ, ಇಂಡೋನೇಶಿಯಾದ ಮುನಾ, ಅಮೇರಿಕಾ ಖಂಡದ ಕಡ್ಡೋ ಮೊದಲಾದ ಬೇರೆ ಹಲವು ಭಾಷೆಗಳೂ ಘಟನೆಯ ಸಮಯ ವನ್ನು ಸೂಚಿಸುವುದಕ್ಕಾಗಿ ಈ ವಿಧಾನವನ್ನನುಸರಿಸುತ್ತವೆ (ಜಾಸ್ತಿ ವಿವರಗಳಿಗೆ ಭಟ್ 1999 ನೋಡಿ).
ಕನ್ನಡದಲ್ಲಿ ಘಟನೆಯ ಸಮಯವನ್ನು ಸೂಚಿಸಲು ಮಾತಿನ ಸಮಯಕ್ಕೂ ಮತ್ತು ಘಟನೆಯ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಹೆಚ್ಚಿನ ಒತ್ತು ಕೊಡ ಲಾಗುತ್ತದೆ. ಉಳಿದ ಎರಡು ದೃಷ್ಟಿಕೋನಗಳ ಮೂಲಕವೂ ಘಟನೆಯೊಂದನ್ನು ವರ್ಣಿಸುವ ಸಾಧ್ಯತೆ ಕನ್ನಡದಲ್ಲೂ ಇದೆ. ಆದರೆ ಕನ್ನಡದಲ್ಲಿ ಅವಕ್ಕೆ ಸಮಯ ಸಂಬಂಧದಷ್ಟು ಪ್ರಾಮುಖ್ಯತೆಯಿಲ್ಲ ಎಂಬುದೇ ಕನ್ನಡಕ್ಕೂ ಮತ್ತು ಸಂಸ್ಕೃತ, ಬರ್ಮೀಸ್ ಮೊದಲಾದ ಭಾಷೆಗಳಿಗೂ ನಡುವಿರುವ ವ್ಯತ್ಯಾಸ.
ಉದಾಹರಣೆಗಾಗಿ, ಕನ್ನಡದಲ್ಲಿ ಘಟನೆಯ ಪೂರ್ಣತೆಯನ್ನು ಸೂಚಿಸಲು ಒಂದು ಕ್ರಿಯಾಪದದೊಂದಿಗೆ ಬಿಡು ಎಂಬ ಇನ್ನೊಂದು ಕ್ರಿಯಾಪದವನ್ನು ಬಳಸುವ ವಿಧಾನ ಬಳಕೆಯಲ್ಲಿದೆ (ಬಿದ್ದುಬಿಡುತ್ತಾನೆ, ಬಿದ್ದುಬಿಟ್ಟ). ಆದರೆ ಈ ರೀತಿ ಘಟನೆಯ ಆಂತರಿಕ ವ್ಯವಸ್ಥೆಯನ್ನು ಸೂಚಿಸುವ ವಿಧಾನಕ್ಕೆ ಕನ್ನಡದ ವಾಕ್ಯರಚನೆಯಲ್ಲಿ ಸಮಯ ಸಂಬಂಧವನ್ನು ಸೂಚಿಸುವ ವಿಧಾನಕ್ಕಿರುವಂತಹ ಪ್ರಾಮುಖ್ಯತೆಯಿಲ್ಲ. (ಬಿದ್ದ ಎಂದಷ್ಟೇ ಹೇಳಿದರೂ ಕನ್ನಡದಲ್ಲಿ ಪೂರ್ಣಾರ್ಥ ಬರಬಲ್ಲುದು).
ಇದೇ ರೀತಿಯಲ್ಲಿ (ನೀವು ಹೇಳಿದ್ದರೆ) ಹೋಗುತ್ತಿದ್ದೆ, ಹೋಗಬಹುದು ಎಂಬಂತಹ ಪ್ರಯೋಗಗಳಲ್ಲಿ ಘಟನೆ ಯಥಾರ್ಥವಲ್ಲ ಎಂಬುದನ್ನು ಸೂಚಿಸ ಲಾಗಿದೆ. ಈ ವಿಧಾನಕ್ಕೂ ಕನ್ನಡದ ವಾಕ್ಯರಚನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಯಿಲ್ಲ. ಸಂಸ್ಕೃತದಲ್ಲೂ ಘಟನೆಯ ಸಮಯವನ್ನು ಮಾತಿನ ಸಮಯಕ್ಕೆ ಸಂಬಂಧಿ ಸಿರುವಂತೆ ಸೂಚಿಸಲು ಕೆಲವು ವಿಧಾನಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಒಂದು ಘಟನೆಯ ಸಮಯ ಅದನ್ನು ವರದಿಮಾಡುವ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದಿನದು ಎಂಬುದನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಆ ಘಟನೆಯನ್ನು ಸೂಚಿಸುವ ಕ್ರಿಯಾಪದಕ್ಕೆ ಅ ಎಂಬ ಪೂವ್ರಪ್ರತ್ಯಯವನ್ನು ಸೇರಿಸ ಲಾಗುತ್ತದೆ (ಭವತಿ-ಅಭವತ್, ಭವಿಷ್ಯತಿ-ಅಭವಿಷ್ಯತ್).
ಆದರೆ ಈ ಪ್ರತ್ಯಯವನ್ನು ಬಳಸದಿದ್ದರೂ ಸಂಸ್ಕೃತದ ಕ್ರಿಯಾಪದಗಳಿಗೆ ಹಿಂದಿನ ಸಮಯದ ಅರ್ಥ ಬರಲು ಸಾಧ್ಯವಿದೆ. ಇಂತಹ ಸಮಯ ಸಂಬಂಧ ವನ್ನು ಸೂಚಿಸುವ ವಿಧಾನಗಳಿಗೆ ಸಂಸ್ಕೃತದ ವಾಕ್ಯರಚನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲದಿರುವುದೇ ಇದಕ್ಕೆ ಕಾರಣ. ಸಮಯವನ್ನು ಸೂಚಿಸುವುದಕ್ಕಾಗಿ ಭಾಷೆಯೊಂದರಲ್ಲಿ ಯಾವ ದೃಷ್ಟಿ ಕೋನಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಎಂಬುದರ ಮೇಲೆ ಭಾಷೆಯ ಬೇರೆ ಕೆಲವು ಗುಣಧರ್ಮಗಳೂ ಅವಲಂಬಿಸಿರುವ ಹಾಗೆ ಕಾಣಿಸುತ್ತದೆ. ಉದಾ ಹರಣೆಗಾಗಿ, ಸಮಯ ಸಂಬಂಧಕ್ಕೆ ಪ್ರಾಮುಖ್ಯತೆಯನ್ನು ಕೊಡುವ ಕನ್ನಡದಂತಹ ಭಾಷೆಯಲ್ಲಿ ಹೆಚ್ಚಿನ ಕ್ರಿಯಾಪದಗಳೂ ಘಟನೆಯನ್ನು ಸೂಚಿಸುವಂತಹವು ಗಳಾಗಿರುತ್ತವೆ.
ಇದಕ್ಕೆ ಬದಲು, ಆಂತರಿಕ ಕಾಲವ್ಯವಸ್ಥೆಗೆ ಪ್ರಾಮುಖ್ಯತೆಯನ್ನು ಕೊಡುವ ಭಾಷೆಗಳಲ್ಲಿ ಕ್ರಿಯಾಪದಗಳು ಘಟನೆಯನ್ನಾಗಲೀ ಇಲ್ಲವೇ ಸಂಗತಿಯನ್ನಾಗಲೀ ಸೂಚಿಸಬಲ್ಲುವು. ಕನ್ನಡದಲ್ಲಿ ಸಂಗತಿಯನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವುದು ಇರು ಎಂಬ ಒಂದೇ ಒಂದು ಕ್ರಿಯಾಪದ ಮಾತ್ರ. ಉಳಿದ ಎಲ್ಲಾ ಕ್ರಿಯಾಪದಗಳೂ ಘಟನೆಯನ್ನು ಸೂಚಿಸುವವುಗಳು. ಬಲ್, ಬಾರ್, ಸಾಕು, ಬೇಕು ಮೊದಲಾದ ಸಮಯಭೇದವನ್ನು ತೋರಿಸದ ಬೇರೆ ಕೆಲವು ಕ್ರಿಯಾಪದಗಳೂ ಸಂಗತಿಯನ್ನು ಸೂಚಿಸುವವೆಂದು ಹೇಳಬಹುದೇನೋ.
ಇದಕ್ಕೆ ಬದಲು, ಕಾಲವ್ಯವಸ್ಥೆಗೆ ಪ್ರಾಮುಖ್ಯತೆಯನ್ನು ಕೊಡುವ ಮಾವೋ ನಾಗ, ಮುನಾ, ಮಿಕ್್ಸಟೆಕ್ ಮೊದಲಾದ ಭಾಷೆಗಳಲ್ಲಿ ಸಾಕಷ್ಟು ಕ್ರಿಯಾಪದಗಳು ಸಂಗತಿಯನ್ನು ಸೂಚಿಸುವವುಗಳಾಗಿರುತ್ತವೆ. ಇಂತಹ ಕೆಲವು ಭಾಷೆಗಳಲ್ಲಿ ಎಲ್ಲಾ ಗುಣಪದಗಳೂ ಸಂಗತಿಯನ್ನು ಸೂಚಿಸುವ ಕ್ರಿಯಾಪದಗಳಾಗಿರುತ್ತವೆ.
11.7 ಅಲ್ಲಗಳೆಯುವ ವಾಕ್ಯಗಳು
ಕನ್ನಡದಲ್ಲಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆಯುವುದಕ್ಕಾಗಿ ಇಲ್ಲ ಪದವನ್ನೂ ಮತ್ತು ಒಂದು ಘಟನೆ ಇಲ್ಲವೇ ಸಂಗತಿಗೂ ಮತ್ತು ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಕ್ಕಾಗಿ ಅಲ್ಲ ಪದವನ್ನೂ ಬಳಸಲಾಗುತ್ತದೆಯೆಂಬುದನ್ನು ನಾವು ಮೇಲೆ ಒಂಬತ್ತನೇ ಅಧ್ಯಾಯ ದಲ್ಲಿ ನೋಡಿರುವೆವು. ಅಲ್ಲಗಳೆಯುವ ಕೆಲಸಕ್ಕಾಗಿ ಇದಕ್ಕಿಂತ ಭಿನ್ನವಾದ ವಿಧಾನ ಗಳ ಬಳಕೆಯೂ ಪ್ರಪಂಚದ ಇತರ ಭಾಷೆಗಳಲ್ಲಿ ಕಾಣಿಸುತ್ತದೆ.
ಕನ್ನಡದಲ್ಲಿ ಒಂದು ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸುವ ಮೊದಲು ಅದರ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆ ಕ್ರಿಯಾ ಪದ ಹಿಂದಿನ ಸಮಯವನ್ನು ಸೂಚಿಸುತ್ತಿರುವುದಾದರೆ ಅದರ ಕೊನೆಯಲ್ಲಿ ಬಂದಿರುವ ಸಮಯಪ್ರತ್ಯಯವನ್ನು ಮತ್ತು ಘಟಕಪ್ರತ್ಯಯವನ್ನು ತೆಗೆದುಹಾಕಿ, ಅಲು ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಬಂದರು-ಬರಲಿಲ್ಲ, ಮಾಡಿ ದರು-ಮಾಡಲಿಲ್ಲ).
ಇದಕ್ಕೆ ಬದಲು, ಕ್ರಿಯಾಪದ ಮುಂದಿನ ಸಮಯವನ್ನು ಸೂಚಿಸುತ್ತಿರುವು ದಾದರೆ, ಅದನ್ನು ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ (ಬರು ತ್ತಾರೆ-ಬರುವುದಿಲ್ಲ, (ಹೆಚ್ಚಿನ ವಿವರಗಳಿಗೆ 9.3 ನೋಡಿ). ಆದರೆ ಸಂಸ್ಕೃತದಲ್ಲಿ ನ ‘ಇಲ್ಲ’ ಎಂಬುದನ್ನು ವಾಕ್ಯದಲ್ಲಿ ಯಾವ ಬದಲಾ ವಣೆಯನ್ನೂ ಮಾಡದೆ ಹಾಗೆಯೇ ಬಳಸಲು ಸಾಧ್ಯವಿದೆ. ಮಾಡುತ್ತಾರೆ-ಮಾಡುವುದಿಲ್ಲ). ತೇ ಪುಸ್ತಕಾನಿ ಪಠಂತಿ. ‘ಅವರು ಪುಸ್ತಕಗಳನ್ನು ಓದುತ್ತಾರೆ’ (5ಖ) ತೇ ಪುಸ್ತಕಾನಿ ನ ಪಠಂತಿ. ‘ಅವರು ಪುಸ್ತಕಗಳನ್ನು ಓದುವುದಿಲ್ಲ’ ಇದಲ್ಲದೆ, ಸಂಸ್ಕೃತದಲ್ಲಿ ಒಂದು ವಾಕ್ಯಕ್ಕೂ ಮತ್ತು ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಲು ಮೇಲೆ ಕೊಟ್ಟಿರುವ ನ ಎಂಬ ಪದವೇ ಬಳಕೆಯಾಗುತ್ತದೆ; ಕನ್ನಡದಲ್ಲಿರುವ ಹಾಗೆ ಅದಕ್ಕಿಂತ ಭಿನ್ನವಾದ ಬೇರೊಂದು ಅಲ್ಲಗಳೆಯುವ ಪದ ಸಂಸ್ಕೃತದಲ್ಲಿಲ್ಲ.
(5ಗ) ಸ: ನ ಪಾಚಕ: ‘ಅವನು ಅಡುಗೆಯವನಲ್ಲ’ ಆದರೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಅಲ್ಲಗಳೆಯುವ ಬದಲು ಅದರ ಒಂದು ಪದವನ್ನು ಮಾತ್ರವೇ ಅಲ್ಲಗಳೆಯಲೂ ಸಾಧ್ಯವಿದೆ. ಇದಕ್ಕಾಗಿ ಆ ಪದಕ್ಕೆ ಅ ಇಲ್ಲವೇ ಅನ್ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಏಕ-ಅನೇಕ, ಆಚಾರ-ಅನಾಚಾರ, ಇತ್ಯಾದಿ). ಕನ್ನಡ ದಲ್ಲಿ ಈ ರೀತಿ ಪದಗಳನ್ನು ನೇರವಾಗಿ ಅಲ್ಲಗಳೆಯಲು ಸಾಧ್ಯವಾಗದು (9.3.2 ನೋಡಿ).
ಕನ್ನಡದಲ್ಲಿ ಇಲ್ಲ ಪದದ ಮೂಲಕ ಹಿಂದಿನ ಘಟನೆಯನ್ನು ಮಾತ್ರವಲ್ಲದೆ ಮುಂದಿನ ಘಟನೆಯನ್ನೂ ಅಲ್ಲಗಳೆಯಲು ಸಾಧ್ಯವಿದೆ. ಆದರೆ ಮಣಿಪುರಿ ಭಾಷೆಯಲ್ಲಿ ಮುಂದಿನ ಘಟನೆಯನ್ನು ಅಲ್ಲಗಳೆಯಲು ಹಿಂದಿನ ಘಟನೆಯನ್ನು ಅಲ್ಲಗಳೆಯುವ ಪದಕ್ಕಿಂತ ಬೇರೆಯೇ ಒಂದು ಪದವನ್ನು ಬಳಸಬೇಕಾಗುತ್ತದೆ. ಅಕೊಮಾ ಭಾಷೆಯಲ್ಲಿ ಒಬ್ಬ ಆಡುಗನಿಗೆ ತಾನು ಸ್ವತ: ನೋಡಿದ ಇಲ್ಲವೇ ಅನುಭವಿಸಿದ ಘಟನೆಯೊಂದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿದೆ. ಇತರ ಘಟನೆಗಳ ಕುರಿತು ತನಗೆ ಸಂಶಯವಿದೆಯೆಂದಷ್ಟೇ ಆತ ಹೇಳಬಲ್ಲನಲ್ಲದೆ ಅವನ್ನು ಅಲ್ಲಗಳೆಯಲಾರ.
11.8 ಕೇಳ್ವಿಗಳು
ಭಾಷೆಗಳಲ್ಲಿ ಪ್ರಾಮುಖ್ಯವಾಗಿ ಎರಡು ರೀತಿಯ ಕೇಳ್ವಿಗಳು ಬಳಕೆಯಲ್ಲಿವೆ. ಇವನ್ನು ವಾಕ್ಯಕೇಳ್ವಿ ಮತ್ತು ವಾಕ್ಯಾಂಗ ಕೇಳ್ವಿ ಎಂದು ಕರೆಯಬಹುದು. ವಾಕ್ಯ ಕೇಳ್ವಿಯಲ್ಲಿ ಒಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಸರಿಯೇ ಅಥವಾ ಅಲ್ಲವೇ ಎಂಬುದನ್ನು ಕೇಳಲಾಗುತ್ತದೆ, ಮತ್ತು ವಾಕ್ಯಾಂಗ ಕೇಳ್ವಿಯಲ್ಲಿ ವಾಕ್ಯದ ಒಂದು ಅಂಗದ ಕುರಿತಾಗಿ ಕೇಳುಗನಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ (ವಿವರಗಳಿಗೆ 10.3 ನೋಡಿ). ಕನ್ನಡದಲ್ಲಿ ತಿಳಿಸುವ ವಾಕ್ಯವನ್ನು ವಾಕ್ಯಕೇಳ್ವಿಯಾಗಿ ಬದಲಾಯಿಸಲು ವಾಕ್ಯದ ಕೊನೆಯಲ್ಲಿ ಏ, ಓ ಇಲ್ಲವೇ ಆ ಪ್ರತ್ಯಯವನ್ನು ಸೇರಿಸಬೇಕು ಮತ್ತು ವಾಕ್ಯದ ಶ್ರುತಿವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನೂ ಮಾಡಿಕೊಳ್ಳಬೇಕು. ಇದಕ್ಕೆ ಬದಲು ಈ ಕೆಲಸಕ್ಕಾಗಿ ಶ್ರುತಿವಿನ್ಯಾಸದ ಬದಲಾವಣೆಯೊಂದನ್ನೇ ಬಳಸು ವಂತಹ ಭಾಷೆಗಳೂ (ಆಸ್ಟ್ರೇಲಿಯಾದ ಯಿದಿಞ್ ಭಾಷೆಯಂತಹವು) ಮತ್ತು ಪ್ರತ್ಯಯಗಳನ್ನು ಮಾತ್ರವೇ ಬಳಸುವಂತಹ ಭಾಷೆಗಳೂ ಕೆಲವಿವೆ. ಕೆಲವು ವಾಕ್ಯದ ಭಾಷೆಗಳಲ್ಲಿ ಇಂತಹ ಹಲವಾರು ಪ್ರತ್ಯಯಗಳ ಬಳಕೆಯಾಗುತ್ತಿದ್ದು, ಇವು ಬೇರೆ ಬೇರೆ ರೀತಿಯ ವಾಕ್ಯಕೇಳ್ವಿಗಳನ್ನು ತಯಾರಿಸಲು ಸಹಾಯಕವಾಗುತ್ತವೆ. ಬೇರೆ ಕೆಲವು ಭಾಷೆಗಳಲ್ಲಿ ಇದಕ್ಕಾಗಿ ವಾಕ್ಯದ ಕ್ರಿಯಾಪದದಲ್ಲೇನೇ ಕೆಲವು ಬದಲಾವಣೆಗಳನ್ನು ಉದಾಹರಣೆಗಾಗಿ ಮಾಡಿಕೊಳ್ಳಬೇಕಾಗುತ್ತದೆ. ಇಂಗ್ಲಿಷ್ನಲ್ಲಿ ಕ್ರಿಯಾಪದಕ್ಕೆ ಉಪಕ್ರಿಯಾಪದವೊಂದನ್ನು ಸೇರಿಸಬೇಕಾಗುತ್ತದೆ ಮತ್ತು ಇದನ್ನು ವಾಕ್ಯದ ಮೊದಲನೆಯ ಪದವಾಗಿ ಬಳಸಬೇಕಾಗುತ್ತದೆ (ಊe ತಿeಟಿಣ home – ಆiಜ he go home?).
ವಾಕ್ಯಾಂಗ ಕೇಳ್ವಿಗಳನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಕೇಳಬೇಕಾ ಗಿರುವ ವಾಕ್ಯಾಂಗದ ಬದಲು ಒಂದು ಅನಿಶ್ಚಿತ ಸವ್ರಪದವನ್ನು ಬಳಸ ಬೇಕಾಗುತ್ತದೆ ಮತ್ತು ವಾಕ್ಯದ ಶ್ರುತಿವಿನ್ಯಾಸವನ್ನು ಬದಲಿಸಬೇಕಾಗುತ್ತದೆ (10.4 ನೋಡಿ). ಕೆಲವು ಭಾಷೆಗಳಲ್ಲಿ ಕೇಳ್ವಿಗಳಲ್ಲಿ ಮಾತ್ರವೇ ಬಳಕೆಯಾಗು ವಂತಹ ಸವ್ರಪದಗಳಿವೆ. ಇವು ಅನಿಶ್ಚಿತ ಪದಗಳಿಂದ ಭಿನ್ನವಾಗಿದ್ದು, ಕೇಳ್ವಿಯ ಅರ್ಥವನ್ನು ಮಾತ್ರ ಕೊಡ ಬಲ್ಲುವು. ಉದಾಹರಣೆಗಾಗಿ, ಜಪಾನಿನ ಐನು ಭಾಷೆಯಲ್ಲಿ ಹುನ್ನ ಎಂಬುದಕ್ಕೆ ‘ಯಾರು’ ಎಂಬ ಅರ್ಥವಿದ್ದು, ‘ಯಾರೋ’ ಎಂಬುದನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ನೆನ್ ಎಂಬ ಪದವಿದೆ. ಇದೇ ರೀತಿಯಲ್ಲಿ ‘ಏನು’ ಎಂಬುದನ್ನು ಸೂಚಿಸಲು ಹ್ಂತ ಎಂಬ ಪದವಿದೆಯಾದರೆ, ‘ಏನೋ’ ಎಂಬುದನ್ನು ಸೂಚಿಸು ವುದಕ್ಕಾಗಿ ನೆಪ್ ಎಂಬ ಬೇರೆಯೇ ಒಂದು ಪದವಿದೆ, ಇತ್ಯಾದಿ. ಕನ್ನಡದಲ್ಲಿ ಯಾರು, ಏನು, ಎಲ್ಲಿ, ಯಾವಾಗ, ಯಾಕೆ, ಹೇಗೆ, ಮೊದಲಾದ ಹಲವು ಅನಿಶ್ಚಿತತೆಯನ್ನು ಸೂಚಿಸುವ ಪದಗಳಿದ್ದು, ಇವುಗಳ ಮೂಲಕ ಬೇರೆ ಬೇರೆ ರೀತಿಯ ವಾಕ್ಯಾಂಗ ಕೇಳ್ವಿಗಳನ್ನು ತಯಾರಿಸಲು ಸಾಧ್ಯ ವಿದೆ. ಕನ್ನಡಕ್ಕಿಂತ ಹೆಚ್ಚಿ ಅನಿಶ್ಚಿತ (ಇಲ್ಲವೇ ಕೇಳ್ವಿ) ಪದಗಳಿರುವ ಭಾಷೆಗಳೂ ಕೆಲವಿವೆ, ಆದರೆ ಎಲ್ಲಾ ಕೇಳ್ವಿಗಳಲ್ಲೂ ಒಂದೇ ಅನಿಶ್ಚಿತ ಪದವನ್ನು ಬಳಸುವ ಭಾಷೆಗಳೂ ಇವೆ.
11.9 ಮುಕ್ತಾಯ
ಕನ್ನಡ ಭಾಷೆಯಲ್ಲಿ ವಾಕ್ಯರಚನೆಗಾಗಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆ ಮತ್ತು ಆ ನಿಯಮಗಳ ಹಿಂದಿರುವ ವ್ಯಾಕರಣದ ಮೂಲತತ್ವಗಳು ಎಂತಹವು ಎಂಬುದನ್ನು ತಿಳಿದುಕೊಳ್ಳುವ ಒಂದು ಚಿಕ್ಕ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಇಂತಹ ಪ್ರಯತ್ನಕ್ಕೆ ಕನ್ನಡ ಭಾಷೆಯೊಂದನ್ನೇ ಅಭ್ಯಾಸ ಮಾಡಿದರೆ ಸಾಕಾಗುವುದಿಲ್ಲ ಎಂಬ ವಿಷಯ ಈ ಅಧ್ಯಾಯದಿಂದ ಸ್ಪಷ್ಟವಾಗಿರ ಬಹುದು. ಹಲವಾರು ವಿಧಾನಗಳನ್ನು ಬಳಸುವ ಭಾಷೆಗಳ ನಡುವೆ ಕನ್ನಡದ ಸ್ಥಾನವೇನು ಎಂಬುದನ್ನರಿತಾಗ ಮಾತ್ರ ನಿಜಕ್ಕೂ ಕನ್ನಡ ಬಳಸುವ ವ್ಯಾಕರಣ ತತ್ವಗಳೆಂತಹವು ಎಂಬ ವಿಷಯ ಸ್ಪಷ್ಟವಾಗಬಲ್ಲುದು. ಕೆಲವು ಪಾರಿಭಾಷಿಕ ಪದಗಳು ಅಂಕಿತನಾಮ (ಠಿಡಿoಠಿeಡಿ ಟಿಚಿme): ವ್ಯಕ್ತಿ, ವಸ್ತು, ಜಾಗ ಮೊದಲಾದವುಗಳಲ್ಲಿ ಒಂದೊಂದಕ್ಕೂ ಬೇರೆ ಬೇರಾಗಿ ಕೊಟ್ಟಿರುವ ಅವುಗಳದೇ ಆದ ಹೆಸರು; ರಾಜು, ಕಾವೇರಿ, ಮೈಸೂರು ಇತ್ಯಾದಿಗಳು ಇಂತಹವು. ಅಣಕಿಸುವ ಗುಣಪದ (oಟಿomಚಿಣoಠಿoeiಛಿ ತಿoಡಿಜ): ಘಟನೆಯ ಸದ್ದು, ನೋಟ, ಸ್ಪಶ್ರ ಮೊದಲಾದವುಗಳ ವಿಷಯದಲ್ಲಿ ಆಡುಗನ ಅನುಭವವನ್ನು ಸೂಚಿಸುವ ಗುಣಪದಗಳು; ಡಬ್ಬನೆ ಬೀಳು, ಮಿಣಿಮಿಣಿ ಉರಿ, ಪಟಪಟನೆ ಹೇಳು ಇತ್ಯಾದಿಗಳು ಇಂತಹವು. ಅನಿಶ್ಚಿತ ಪದ (iಟಿಜeಜಿiಟಿiಣe ತಿoಡಿಜ): ಆಡುಗನಿಗೆ ನಿಶ್ಚಿತವಾಗಿಯೂ ತಿಳಿಯ ದಿರುವ ವ್ಯಕ್ತಿ, ವಸ್ತು, ಸ್ಥಾನ, ಕಾಲ ಮೊದಲಾದುವನ್ನು ಸೂಚಿಸುವ ಪದ; ಯಾರು, ಏನು, ಯಾಕೆ, ಇತ್ಯಾದಿಗಳು ಇಂತಹವು. ಅರ್ಥ ಸಂಬಂಧ (semಚಿಟಿಣiಛಿ ಡಿeಟಚಿಣioಟಿ): ವಾಕ್ಯದಲ್ಲಿ ಬರುವ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧ; ಆಗುಗ, ಮಾಡುಗ, ಸುರು, ಕೊನೆ, ಜಾಗ, ಪ್ರೇರಕ ಮೊದಲಾದ ಈ ಸಂಬಂಧಗಳನ್ನು ಕನ್ನಡದಲ್ಲಿ ವಿಭಕ್ತಿಪ್ರತ್ಯಯಗಳ ಮೂಲಕ ಸೂಚಿಸಲಾಗುತ್ತದೆ. ಅಲ್ಲಗಳೆ (ನಿಷೇಧಿಸು, ಟಿegಚಿಣe): ಒಂದು ವಾಕ್ಯವು ತಿಳಿಸುವ ಘಟನೆ ನಡೆದಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ, ಮತ್ತು ಒಂದು ಸಂಗತಿ ನಿಜವಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಅಲ್ಲಗಳೆ ಯುವ ವಾಕ್ಯವನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ವಾಕ್ಯದ ಕೊನೆ ಯಲ್ಲಿ ಇಲ್ಲ ಪದವನ್ನು ಸೇರಿಸಬೇಕಾಗುತ್ತದೆ (ರಾಜು ಬರೆಯುವು ದಿಲ್ಲ, ಬರೆಯಲಿಲ್ಲ, ಆ ಪುಸ್ತಕ ನಮ್ಮಲ್ಲಿಲ್ಲ, ಇತ್ಯಾದಿ). ಒಂದು ಘಟನೆ ಇಲ್ಲವೇ ಸಂಗತಿಗೂ ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಲು ಅಲ್ಲ ಪದದ ಬಳಕೆಯಾಗುತ್ತದೆ (ಅದು ನಮ್ಮ ಮನೆಯಲ್ಲ). ಆಗುಗ (ಠಿಚಿಣieಟಿಣ): ಒಂದು ಘಟನೆಯಿಂದ ಬಾಧಿತವಾಗುವುದಾದರೂ ಆ ಘಟನೆಯ ಮೇಲೆ ಹತೋಟಿಯಿಲ್ಲದಿರುವ ಘಟಕ. ಮಾಡುಗವಿರುವ ವಾಕ್ಯದಲ್ಲಿ ಇದನ್ನು ಅನ್ನು ಪ್ರತ್ಯಯ ಸೂಚಿಸುತ್ತದೆ. ಆಡುಗ (sಠಿeಚಿಞeಡಿ): ಒಂದು ವಾಕ್ಯವನ್ನು ಆಡಿರುವ ವ್ಯಕ್ತಿ; ಇದನ್ನು ವಾಕ್ಯದಲ್ಲಿ ಬರುವ ನಾನು ಪದ ಸೂಚಿಸುತ್ತದೆ. ಈಗಿನ ಸಮಯ (ವತ್ರಮಾನಕಾಲ, ಠಿಡಿeseಟಿಣ ಣeಟಿse): ಕನ್ನಡದಲ್ಲಿ ಇರು ಕ್ರಿಯಾಪದಕ್ಕೆ ಮಾತ್ರ ಈಗಿನ ಸಮಯವನ್ನು ಸೂಚಿಸುವ ರೂಪಗಳಿವೆ. ಈ ರೂಪಗಳು ಸಂಗತಿಯೊಂದು ಅದನ್ನು ತಿಳಿಸುವ ವಾಕ್ಯವನ್ನಾಡುವ ಸಮಯದಲ್ಲಿ ಜಾರಿಯಲ್ಲಿದೆಯೆಂಬುದನ್ನು ಸೂಚಿಸುತ್ತವೆ (ಅವನು ಮನೆಯಲ್ಲಿದ್ದಾನೆ, ಅವರಲ್ಲಿ ಒಂದು ಎಮ್ಮೆ ಇದೆ). ಇತರ ಕ್ರಿಯಾ ಪದಗಳಿಗೆ ಹಿಂದಿನ ಮತ್ತು ಮುಂದಿನ ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆ.
ಉದ್ದ ಸ್ವರ (ದೀರ್ಘ ಸ್ವರ, ಟoಟಿg voತಿeಟ): ಗಿಡ್ಡ ಸ್ವರಕ್ಕಿಂತ ಉಚ್ಚರಿಸಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವ ಆ, ಈ, ಊ, ಏ ಇಲ್ಲವೇ ಓ ಎಂಬ ಸ್ವರ. ಉಪಕ್ರಿಯಾಪದ (ಚಿuxiಟiಚಿಡಿಥಿ veಡಿb): ಕ್ರಿಯಾಪದದ ಅನಂತರ ಅದರ ಸಹಾಯ ಕ್ಕಾಗಿ ಬರುವ ಇನ್ನೊಂದು ಕ್ರಿಯಾಪದ. ಮಾಡಿದ್ದೇನೆ ಎಂಬುದರಲ್ಲಿ ಇದ್ದೇನೆ (ಇರು) ಎಂಬುದು ಉಪಕ್ರಿಯಾಪದ ಮತ್ತು ಮಾಡು ಎಂಬುದು ಮುಖ್ಯ ಕ್ರಿಯಾಪದ.
ಎತ್ತಿ ಹೇಳು (quoಣe): ಒಬ್ಬ ವ್ಯಕ್ತಿ ಆಡುವ ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿಯ ಮಾತು, ಅಭಿಪ್ರಾಯ ಇಲ್ಲವೇ ಭಾವನೆಯನ್ನು ಒಳವಾಕ್ಯವೊಂದರ ಮೂಲಕ ತಿಳಿಸುವುದು; ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜು ಹೇಳುತ್ತಿದ್ದಾನೆ ಎಂಬುದರಲ್ಲಿ ನಾನು ಎಲ್ಲಿಗೂ ಹೋಗು ವುದಿಲ್ಲ ಎಂಬ ವಾಕ್ಯವನ್ನು ಎತ್ತಿ ಹೇಳಲಾಗಿದೆ. ಒತ್ತು ಕೊಡು (emಠಿhಚಿsize): ಒಂದು ಪದಕ್ಕೆ ಒತ್ತು ಕೊಟ್ಟು (ಇಲ್ಲವೇ ಒತ್ತಿ) ಹೇಳುವುದಕ್ಕಾಗಿ ಏ ಪ್ರತ್ಯಯವನ್ನು ಬಳಸಲಾಗುತ್ತದೆ; ರಾಜು ಬಂದ ಎನ್ನುವ ಬದಲು ರಾಜುವೇ ಬಂದ ಎಂಬುದಾಗಿ ಹೇಳುವಲ್ಲಿ ರಾಜು ಪದದ ಮೇಲೆ ಒತ್ತು ಕೊಡಲಾಗಿದೆ). ಒಳವಾಕ್ಯ (embeಜಜeಜ seಟಿಣeಟಿಛಿe): ಒಂದು ವಾಕ್ಯದ ಒಳಗೆ ಬಂದಿರುವ ಇನ್ನೊಂದು ವಾಕ್ಯ; ಇದು ರಾಜು ಬಂದಿದ್ದಾನೆಂದು ಕಾಣಿಸುತ್ತದೆ ಎಂಬುದರಲ್ಲಿ ಬಂದಿರುವ ರಾಜು ಬಂದಿದ್ದಾನೆ ಎಂಬುದರ ಹಾಗೆ ಒಂದು ಇಡೀ ವಾಕ್ಯದ ರೂಪದಲ್ಲಿರಬಹುದು, ಇಲ್ಲವೇ ರಾಜು ಬಂದ ಸಮಯ ಚನ್ನಾಗಿಲ್ಲ ಎಂಬುದರಲ್ಲಿ ಬಂದಿರುವ ರಾಜು ಬಂದ ಎಂಬುದರ ಹಾಗೆ ಒಂದು ತುಂಡು ವಾಕ್ಯದ ರೂಪದಲ್ಲಿರಬಹುದು. ಕೆಲವು ಪಾರಿಭಾಷಿಕ ಪದಗಳು ಕಾಲವ್ಯವಸ್ಥೆ (ಚಿsಠಿeಛಿಣ): ಘಟನೆ ಮುಗಿದಿದೆಯೇ, ಇನ್ನೂ ನಡೆಯುತ್ತಿದೆಯೇ, ಕ್ಷಣಿಕವೇ, ಒಮ್ಮೆ ಇಲ್ಲವೇ ಹಲವು ಬಾರಿ ನಡೆಯುವಂತಹದೇ ಎಂಬಂತಹ ಘಟನೆಯ ಆಂತರಿಕೆ ಸಮಯವಿನ್ಯಾಸವನ್ನು ಸೂಚಿಸುವ ವಿಧಾನ. ಕೂಡಿಕೆಯ ಅರ್ಥ (ಛಿoಟಿರಿuಟಿಛಿಣioಟಿ): ಮತ್ತು ಪದಕ್ಕಿರುವ ಅರ್ಥ. ಕೂಡುಪದ: ಒಂದು ಕ್ರಿಯಾಪದದ ಜೋಡಿಸುವ ರೂಪದೊಂದಿಗೆ ಇನ್ನೊಂದು ಕ್ರಿಯಾಪದವನ್ನು ಸೇರಿಸಿರುವ ರಚನೆಯ ಒಂದು ವಿಶಿಷ್ಟವಾದ ಬಳಕೆ. ಇದರಲ್ಲಿ ಎರಡನೆಯ ಕ್ರಿಯಾಪದ ತನ್ನ ಮೂಲಾರ್ಥವನ್ನು ಕಳೆದು ಕೊಂಡು ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದನ್ನೇನಾದರೂ ಸೂಚಿಸಲು ಬಳಕೆಯಾಗಿರುತ್ತದೆ; ಕಚ್ಚಿಬಿಡು, ಕತ್ತರಿಸಿಕೊಳ್ಳು, ಹರಿದುಹಾಕು, ಇತ್ಯಾದಿಗಳು ಇಂತಹ ರಚನೆಗಳು.
ಕೆಲಸ ಮಾಡಿಸುವ ವಾಕ್ಯ (iಟಟoಛಿuಣioಟಿಚಿಡಿಥಿ seಟಿಣeಟಿಛಿe): ಕೇಳುಗನ ಮೂಲಕ ಯಾವುದಾದರೊಂದು ಕೆಲಸವನ್ನು ಮಾಡಿಸುವುದಕ್ಕಾಗಿ ಆಡುಗನು ಬಳಸುವ ವಾಕ್ಯ (ಉದಾ: ಇಲ್ಲಿ ಬನ್ನಿ! ಹೊರಗೆ ಹೋಗು!).
ಕೇಳುಗ (heಚಿಡಿeಡಿ, ಚಿಜಜಡಿessee): ಆಡುಗನು ಯಾವ ವ್ಯಕ್ತಿಯನ್ನುದ್ದೇಶಿಸಿ ಒಂದು ಮಾತನ್ನು ಹೇಳಿರುವನೋ ಅಂತಹ ವ್ಯಕ್ತಿ ಆ ಮಾತಿನಲ್ಲಿ (ಅಥವಾ ವಾಕ್ಯದಲ್ಲಿ) ವಹಿಸಿರುವ ಪಾತ್ರ. ಕೇಳ್ವಿ (ಪ್ರಶ್ನೆ, iಟಿಣeಡಿಡಿogಚಿಣioಟಿ): ಕೇಳುಗನಿಂದ ಯಾವುದಾದರೊಂದು ಸಂಗತಿ ಯನ್ನು ತಿಳಿದುಕೊಳ್ಳುವುದಕ್ಕಾಗಿ ಆಡುಗನು ಬಳಸುವ ವಾಕ್ಯ. ಕನ್ನಡ ದಲ್ಲಿ ಮುಖ್ಯವಾಗಿ ವಾಕ್ಯಕೇಳ್ವಿ ಮತ್ತು ವಾಕ್ಯಾಂಗ ಕೇಳ್ವಿ ಎಂಬುದಾಗಿ ಎರಡು ರೀತಿಯ ಕೇಳ್ವಿಗಳಿವೆ. ವಾಕ್ಯಕೇಳ್ವಿಯಲ್ಲಿ ಇಡೀ ವಾಕ್ಯ ತಿಳಿಸುವ ಸಂಗತಿ ಸರಿಯೇ ಅಥವಾ ಅಲ್ಲವೇ ಎಂಬುದನ್ನು ಕೇಳಲಾಗುತ್ತದೆ (ರಾಜು ಬಂದಿದ್ದಾನೋ?) ಮತ್ತು ವಾಕ್ಯಾಂಗ ಕೇಳ್ವಿಯಲ್ಲಿ ಅಂತಹ ಸಂಗತಿಯ ಒಂದು ಅಂಶವನ್ನು ಮಾತ್ರ ಕೇಳಲಾಗುತ್ತದೆ (ಯಾರು ಬಂದಿದ್ದಾರೆ?). ಈ ಕೇಳ್ವಿ ಯಾವ ಅಂಗದ ಮೇಲೆ ಬೀಳುತ್ತದೆ ಎಂಬುದನ್ನು ಸೂಚಿಸಲು ಸಾಮಾನ್ಯವಾಗಿ ವಾಕ್ಯಾಂಗ ಕೇಳ್ವಿಗಳಲ್ಲಿ ಯಾರು, ಏನು, ಯಾಕೆ ಮೊದಲಾದ ಅನಿಶ್ಚಿತ ಪದಗಳನ್ನು ಬಳಸ ಬೇಕಾಗುತ್ತದೆ. ಕೊನೆಘಟಕ (goಚಿಟ): ಒಂದು ಕದಲುವಿಕೆ (ಚಲನೆ) ಯಾವ ಜಾಗಕ್ಕಾಗಿ ನಡೆಯುತ್ತಿದೆ ಎಂಬುದನ್ನು ಸೂಚಿಸುವ ಘಟಕ; ರಾಜು ಮನೆಗೆ ಹೋದ ಎಂಬುದರಲ್ಲಿ ಮನೆಗೆ ಎಂಬ ಘಟಕ. ಕ್ರಿಯಾವಾಕ್ಯ (eveಟಿಣ seಟಿಣeಟಿಛಿe): ಒಂದು ಘಟನೆಯನ್ನು ತಿಳಿಸುವ ವಾಕ್ಯ. ಗಿಡ್ಡ ಸ್ವರ (ಹ್ರಸ್ವಸ್ವರ, shoಡಿಣ voತಿeಟ): ಉಚ್ಚರಿಸಲು ಉದ್ದ ಸ್ವರಕ್ಕಿಂತ ಸ್ವಲ್ಪ ಕಡಿಮೆ ಸಮಯ ಬೇಕಾಗುವ ಅ, ಇ, ಉ, ಎ ಇಲ್ಲವೇ ಒ ಎಂಬ ಸ್ವರ. ಗುರುತಿಸುವಿಕೆ (ಡಿeಜಿeಡಿeಟಿಛಿe): ಘಟನೆಯೊಂದು ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸಬೇಕಾದಾಗ, ಅದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ಮೊದಲಾದವುಗಳು ಯಾವುವು ಎಂಬುದನ್ನೂ ತಿಳಿಸಬೇಕಾಗುತ್ತದೆ. ಇಂತಹ ವ್ಯಕ್ತಿ, ವಸ್ತು ಮೊದಲಾದವುಗಳನ್ನು ನಾಮಪದ ಇಲ್ಲವೇ ನಾಮಪದಕಂತೆಗಳ ಮೂಲಕ ಇಂತಹವೇ ಎಂಬುದಾಗಿ ‘ಗುರುತಿಸಿ’ ತಿಳಿಸಲಾಗುತ್ತದೆ. ಇದಕ್ಕಾಗಿ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸು ವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳನ್ನು ಬಳಸ ಲಾಗುತ್ತದೆ. ಜಾಗಘಟಕ (ಠಿಟಚಿಛಿe, ಟoಛಿಚಿಣioಟಿ): ಒಂದು ಘಟನೆ ಎಲ್ಲಿ ನಡೆಯುತ್ತಿದೆ ಎಂಬು ದನ್ನು ಸೂಚಿಸುವ ಘಟಕ.
ಜೋಡಿಸುವ ರೂಪ: ಎರಡು ವಾಕ್ಯಗಳನ್ನು ಜೋಡಿಸಿ ಒಂದೇ ವಾಕ್ಯವನ್ನಾಗಿ ಮಾಡಬೇಕಾದಾಗ ಅವುಗಳಲ್ಲಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದದಲ್ಲಿ ಕೆಲವೊಮ್ಮೆ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಈ ರೀತಿ ಬದಲಾವಣೆ ಮಾಡಿರುವ ರೂಪವನ್ನು
ಜೋಡಿಸುವ ರೂಪವೆಂದು ಕರೆಯಬಹುದು; ಊಟ ಮಾಡಿ ಹೋದ ಎಂಬುದರಲ್ಲಿ ಮಾಡು ಕ್ರಿಯಾಪದಕ್ಕೆ ಮಾಡಿ ಎಂಬ ಜೋಡಿಸುವ ರೂಪವಿದೆ). ಜೋಡುಪದ (ಸಮಾಸ, ಛಿomಠಿouಟಿಜ): ಎರಡು (ಅಥವಾ ಜಾಸ್ತಿ) ಪದಗಳನ್ನು ಸೇರಿಸಿ ಹೊಸದೊಂದು ಪದವನ್ನು ತಯಾರಿಸಿದಲ್ಲಿ ಅದಕ್ಕೆ ಜೋಡು ಪದವೆಂದು ಹೆಸರು; ನೆಲ ಮತ್ತು ಕಡಲೆ ಎಂಬ ಎರಡು ಪದಗಳನ್ನು ಸೇರಿಸಿ ತಯಾರಿಸಿದ ನೆಲಗಡಲೆ ಎಂಬುದು ಅವೆರಡಕ್ಕಿಂತ ಭಿನ್ನವಾದ ಬೇರೆಯೇ ಒಂದು ಪದವಾದ ಕಾರಣ, ಜೋಡುಪದ. ಕನ್ನಡದಲ್ಲಿ ಬಳಕೆಯಲ್ಲಿರುವ ಜೋಡುಪದಗಳೆಲ್ಲ ನಾಮಪದಗಳೇ (ಪದಕಂತೆ ನೋಡಿ).
ತಿಳಿಸುವ ವಾಕ್ಯ (ಟಿಚಿಡಿಡಿಚಿಣive seಟಿಣeಟಿಛಿe): ಯಾವುದಾದರೊಂದು ಘಟನೆ ಇಲ್ಲವೇ ಸಂಗತಿಯನ್ನು ಇತರರಿಗೆ ತಿಳಿಸಬೇಕೆಂದಿರುವಾಗ ಬಳಸುವ ರಾಜು ಮನೆಗೆ ಹೋಗಿದ್ದಾನೆ ಎಂಬಂತಹ ವಾಕ್ಯ. ನಿರ್ದೇಶಕ ಪದ (ಜemoಟಿsಣಡಿಚಿಣive ತಿoಡಿಜ): ಮಾತಿನ ಸನ್ನಿವೇಶದಲ್ಲಿರುವ ವ್ಯಕ್ತಿ, ವಸ್ತು, ಜಾಗ, ಸಮಯ ಮೊದಲಾದವುಗಳನ್ನು ಆ ಮಾತು ಸೂಚಿಸುವ ಘಟನೆಯೊಂದಿಗೆ ಸಂಬಂಧಿಸುವ ಪದ. ಪುಸ್ತಕ ಇಲ್ಲಿದೆ ಎಂಬ ವಾಕ್ಯದಲ್ಲಿ ಬಂದಿರುವ ಇಲ್ಲಿ ಎಂಬ ಪದ ಪುಸ್ತಕದ ಜಾಗವನ್ನು ಕೆಲವು ಪಾರಿಭಾಷಿಕ ಪದಗಳು ಆ ವಾಕ್ಯವನ್ನಾಡಿರುವ ಸನ್ನಿವೇಶದಲ್ಲಿ ಆಡುಗನ ಹತ್ತಿರದ್ದೆಂಬುದಾಗಿ ತಿಳಿಸುವುದಾದ ಕಾರಣ ಅದು ಒಂದು ನಿರ್ದೇಶಕ ಪದ. ಪದಕಂತೆ (ಠಿhಡಿಚಿse): ಎರಡು ಅಥವಾ ಜಾಸ್ತಿ ಪದಗಳನ್ನು ಸೇರಿಸಿ ಎರಡು ರೀತಿಯ ರಚನೆಗಳನ್ನು ತಯಾರಿಸಲು ಸಾಧ್ಯ. ಇವುಗಳಲ್ಲಿ ಒಂದು ರಚನೆ ಭಾಷೆಯಲ್ಲಿ ಒಂದು ಹೊಸ ಪದವಾಗಿ ಬಳಕೆಯಾಗುತ್ತದೆ; ದೊಡ್ಡಮ್ಮ, ಕರಿಹಲಗೆ, ನೆಲಗಡಲೆ ಮೊದಲಾದ ‘ಜೋಡುಪದ’ ಗಳು ಇಂತಹ ರಚನೆಗಳು; ಇನ್ನೊಂದು ರಚನೆ ಪದಗಳಿಗಿಂತ ಮೇಲಿನ ಮಟ್ಟದಲ್ಲಿ ಬರುತ್ತದೆ; ದೊಡ್ಡ ಮನೆ, ಕೆಂಪು ಹೂ, ಒಡೆದ ಕನ್ನಡಿ ಮೊದಲಾದ ‘ಪದಕಂತೆ’ಗಳು ಇಂತಹ ರಚನೆಗಳು. ವ್ಯಕ್ತಿ, ವಸ್ತು, ವಿಷಯ, ಮೊದಲಾದುವನ್ನು ಹೆಸರಿಸಿ ಗುರುತಿಸುವುದಕ್ಕಾಗಿ ಜೋಡು ಪದಗಳನ್ನೂ ಮತ್ತು ವರ್ಣಿಸಿ ಗುರುತಿಸುವುದಕ್ಕಾಗಿ ಪದಕಂತೆಗಳನ್ನೂ ಬಳಸಲಾಗುತ್ತದೆ. ಪುರುಷವಾಚಕ ಪದ (ಠಿeಡಿsoಟಿಚಿಟ ಠಿಡಿoಟಿouಟಿ): ವಾಕ್ಯದ ಆಡುಗ ಮತ್ತು ಕೇಳುಗ ರನ್ನು ಸೂಚಿಸುವ ಪದಗಳು (ಕನ್ನಡದ ನಾನು ಮತ್ತು ನೀನು). ಪ್ರತಿಧ್ವನಿಸುವ ರಚನೆ (eಛಿho-ಜಿoಡಿmಚಿಣioಟಿ): ಒಂದು ಪದದೊಂದಿಗೆ ಅದರ ಪ್ರತಿಧ್ವನಿಯಂತೆ ತೋರುವ ಇನ್ನೊಂದು ಪದವನ್ನು ಸೇರಿಸಿ ಬಳಸು ವುದು; ಆಟ ಗೀಟ, ಮನೆ ಗಿನೆ, ಕಲ್ಲು ಗಿಲ್ಲು, ಇತ್ಯಾದಿ.
ಪ್ರತಿನಾಮ (ಚಿಟಿಚಿಠಿhoಡಿಚಿ): ಒಮ್ಮೆ ಬಳಸಿದ ಪದವನ್ನು ಪುನ: ಬಳಸುವ ಬದಲು, ಅದನ್ನೇ ಸೂಚಿಸುವುದಕ್ಕಾಗಿ ಬಳಸುವ ಬೇರೊಂದು ಪದ; ತಾನು, ಅವನು ಇತ್ಯಾದಿಗಳಿಗೆ ಕನ್ನಡದಲ್ಲಿ ಇಂತಹ ಬಳಕೆಯಿದೆ. ಪ್ರಶ್ನಾರ್ಥಕ ಪದ (iಟಿಣeಡಿಡಿogಚಿಣive ಠಿಡಿoಟಿouಟಿ): ಯಾರು, ಏನು, ಯಾಕೆ, ಎಲ್ಲಿ ಮೊದಲಾದವುಗಳನ್ನು ಕನ್ನಡ ವ್ಯಾಕರಣಗಳಲ್ಲಿ ‘ಪ್ರಶ್ನಾರ್ಥಕ’ ಪದಗಳೆಂದು ಕರೆಯುವುದು ರೂಢಿ. ಆದರೆ ಕನ್ನಡದಲ್ಲಿ ಇವಕ್ಕೆ ಹೆಚ್ಚಿನ ಬಳಕೆಗಳಲ್ಲೂ ಪ್ರಶ್ನೆಯ (ಎಂದರೆ ಕೇಳ್ವಿಯ) ಅರ್ಥವಿಲ್ಲ. ಇವನ್ನು ಪ್ರಶ್ನಾರ್ಥಕಗಳೆಂದು ಕರೆಯುವ ಬದಲು ಅನಿಶ್ಚಿತಾರ್ಥಕಗಳೆಂದು ಕರೆ ಯುವುದೇ ವಾಸಿ. ಕನ್ನಡದಲ್ಲಿ ಪ್ರಶ್ನಾರ್ಥಕ ವಾಕ್ಯಗಳಲ್ಲಿ ಖಡ್ಡಾಯ ವಾಗಿಯೂ ಬರುವ ಸ್ವರವಿನ್ಯಾಸಕ್ಕೆ ಮಾತ್ರವೇ ಪ್ರಶ್ನಾರ್ಥವಿದೆಯೆಂದು ಹೇಳಲು ಸಾಧ್ಯ. ಪ್ರೇರಕ (ಛಿಚಿuseಡಿ): ಒಂದು ಘಟನೆಯನ್ನು ಮಾಡುಗನ ಮೂಲಕ ಮಾಡಿಸಿ ಕೊಳ್ಳುವ ಘಟಕ; ಜಾನಕಿ ರಾಜುವಿನ ಕೈಯಲ್ಲಿ ತನ್ನ ಪೆಟ್ಟಿಗೆ ಯನ್ನು ಹೊರಿಸಿದಳು ಎಂಬ ವಾಕ್ಯದಲ್ಲಿ ಜಾನಕಿ ಪ್ರೇರಕ ಘಟಕ. ಬದಲಿ ಅರ್ಥ (ಜisರಿuಟಿಛಿಣioಟಿ): ಇಲ್ಲವೇ ಮತ್ತು ಅಥವಾ ಪದಗಳಿಗಿರುವ ಮಾತಿನ ಕೆಲಸ: ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸುವುದರ ಮೂಲಕ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಲು ಇಲ್ಲವೇ ಮಾಡಿಸಿ ಕೊಳ್ಳಲು ಸಾಧ್ಯವಿದೆ. ಒಂದು ಘಟನೆ ಇಲ್ಲವೇ ಸಂಗತಿಯನ್ನು ತಿಳಿಸು ವುದು (ರಾಜು ಬಂದಿದ್ದಾನೆ), ಇನ್ನೊಬ್ಬನಿಂದ ಒಂದು ಸಂಗತಿಯನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯನ್ನು ಸೂಚಿಸುವುದು (ರಾಜು ಬಂದಿ ದ್ದಾನೋ?), ಇನ್ನೊಬ್ಬನಿಂದ ಒಂದು ಕೆಲಸವನ್ನು ಮಾಡಿಸಿಕೊಳ್ಳು ವುದು (ಆ ಪುಸ್ತಕವನ್ನು ಇಲ್ಲಿ ಕೊಡು), ಬೆರಗನ್ನು ಸೂಚಿಸುವುದು (ರಾಜು ಎಷ್ಟು ಬೇಗ ಬಂದಿದ್ದಾನೆ!) ಮೊದಲಾದ ಕೆಲಸಗಳಿಗಾಗಿ ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸಲು ಸಾಧ್ಯವಿದ್ದು, ಇವೆಲ್ಲ ಮಾತಿನ ಕೆಲಸಗಳು. ಮುಖ್ಯ ಅಂಶ (ಜಿoಛಿus): ಒಂದು ವಿಷಯದ ಕುರಿತಾಗಿ ವಾಕ್ಯವೊಂದು ತಿಳಿಸುವ ಸುದ್ದಿಯಲ್ಲಿ ಅತ್ಯಂತ ಪ್ರಾಮುಖ್ಯವಾದ ಅಂಶ; ಕನ್ನಡದಲ್ಲಿ ಇದು ನೇರ ವಾಗಿ ಕ್ರಿಯಾಪದದ ಎಡಕ್ಕೆ ಬರುತ್ತದೆ. ಮುಂದಿನ ಸಮಯ (ಭವಿಷ್ಯತ್ಕಾಲ, ಜಿuಣuಡಿe ಣeಟಿse): ವಾಕ್ಯವೊಂದು ತಿಳಿಸುವ ಘಟನೆ ಆ ವಾಕ್ಯವನ್ನಾಡಿರುವ ಸಮಯದ ಅನಂತರ ನಡೆಯುವಂತಹ ದಾದರೆ ಅದರದು ‘ಮುಂದಿನ’ ಸಮಯ; ರಾಜುವಿನ ಮನೆಗೆ ನಾನು ಹೋಗುತ್ತೇನೆ ಎಂಬ ವಾಕ್ಯದಲ್ಲಿ ಹೋಗುವ ಘಟನೆ ಆ ವಾಕ್ಯವ ನ್ನಾಡಿರುವ ಸಮಯದ ಅನಂತರ ನಡೆಯುವುದಾದ ಕಾರಣ ಹೋಗು ತ್ತೇನೆ ಎಂಬುದು ಮುಂದಿನ ಸಮಯದ ಕ್ರಿಯಾರೂಪ. ಯಥಾರ್ಥತೆ (mooಜ): ಒಂದು ಘಟನೆ ನಡೆದಿರುವ ಇಲ್ಲವೇ ನಡೆಯಲಿರುವ ವಿಷಯದಲ್ಲಿ ಆಡುಗನಿಗೆ ಎಂತಹ ಆಧಾರಗಳಿವೆಯೆಂಬುದನ್ನವಲಂಬಿಸಿ ಅದರ ಸಮಯವನ್ನು ಸೂಚಿಸುವ ವಿಧಾನ. ರೂಢನಾಮ (ಛಿommoಟಿ ಟಿouಟಿ): ಸಮಾನತೆಯಿರುವ ಹಲವು ವ್ಯಕ್ತಿ ಇಲ್ಲವೇ ವಸ್ತುಗಳಿಗೆ ರೂಢಿಯಲ್ಲಿರುವ ಹೆಸರು; ಬಡಗಿ, ಅಕ್ಕ, ಮರ, ಪೆನ್ನು, ಇತ್ಯಾದಿಗಳು ಇಂತಹವು. ವರ್ಣಿಸುವುದು (ಜesಛಿಡಿiಠಿಣioಟಿ): ಘಟನೆಯೊಂದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ವಿಷಯ, ಮೊದಲಾದವುಗಳನ್ನು ಹೆಸರಿಸುವ ಬದಲು ವರ್ಣಿಸಿ ಗುರುತಿಸಲು ಸಾಧ್ಯವಿದೆ; ಸಾಮಾನ್ಯವಾಗಿ ಈ ಕೆಲಸಕ್ಕಾಗಿ ನಾಮಪದ ಕಂತೆಗಳನ್ನು ಬಳಸಲಾಗುತ್ತದೆ. ವಿಭಕ್ತಿ ಪ್ರತ್ಯಯ (ಛಿಚಿse suಜಿಜಿix): ವಾಕ್ಯದಲ್ಲಿ ಬರುವ ನಾಮಪದವನ್ನು ಕ್ರಿಯಾ ಪದದೊಂದಿಗೆ ಸಂಬಂಧಿಸುವ ಪ್ರತ್ಯಯ. ವ್ಯಕ್ತಿ, ವಸ್ತು ಮೊದಲಾ ದವುಗಳು ಒಂದು ಘಟನೆಯಲ್ಲಿ ಎಂತಹ ಕೆಲಸಗಳಲ್ಲಿ ನಿರತವಾಗಿವೆ ಎಂಬುದನ್ನು ಈ ಪ್ರತ್ಯಯಗಳು ಸೂಚಿಸುತ್ತವೆ; ರಾಜು ತನ್ನ ಪೆನ್ನನ್ನು ಹರಿಗೆ ಕೊಟ್ಟ ಎಂಬ ವಾಕ್ಯದಲ್ಲಿ ಕೊಟ್ಟಿರುವ ವಸ್ತು ಪೆನ್ನು ಎಂಬು ಕೆಲವು ಪಾರಿಭಾಷಿಕ ಪದಗಳು ದನ್ನು ತಿಳಿಸುವ ಅನ್ನು ಪ್ರತ್ಯಯ, ಮತ್ತು ಅದನ್ನು ಪಡೆದಿರುವವನು ಹರಿ ಎಂಬುದನ್ನು ತಿಳಿಸುವ ಗೆ ಪ್ರತ್ಯಯ, ಇವು ವಿಭಕ್ತಿ ಪ್ರತ್ಯಯಗಳು. ವಿಷಯ (ಣoಠಿiಛಿ): ಒಂದು ವಾಕ್ಯ ಯಾವ ಘಟಕದ (ಇಲ್ಲವೇ ವಾಕ್ಯಾಂಶದ) ಕುರಿತಾಗಿ ಸುದ್ದಿಯನ್ನು ತಿಳಿಸುತ್ತಿದೆಯೋ ಆ ಘಟಕ. ವಿಷಯ ವಾಕ್ಯ (ಜಿಚಿಛಿಣive seಟಿಣeಟಿಛಿe): ಒಂದು ಸಂಗತಿಯನ್ನು ತಿಳಿಸುವ ವಾಕ್ಯ. ವ್ಯವಹಾರ ಸಂಬಂಧ (ಠಿಡಿಚಿgmಚಿಣiಛಿ ಡಿeಟಚಿಣioಟಿ): ವಾಕ್ಯದ ಒಂದು ಘಟಕಕ್ಕೆ ಹಿಂದಿನ ವಾಕ್ಯದ ಘಟಕವೊಂದರೊಂದಿಗೆ ಇಲ್ಲವೇ ಮಾತಿನ ಸನ್ನಿವೇಶ ದೊಂದಿಗೆ ಇರುವ ಸಂಬಂಧ (ವಿಷಯ, ಸುದ್ದಿ, ಮುಖ್ಯ ಅಂಶ, ಹಿನ್ನೆಣಿಕೆ, ಇತ್ಯಾದಿ). ವ್ಯಾಕರಣ ಸಂಬಂಧ (gಡಿಚಿmmಚಿಣiಛಿಚಿಟ ಡಿeಟಚಿಣioಟಿ): ಅರ್ಥಸಂಬಂಧ ಮತ್ತು ಅದನ್ನು ಸೂಚಿಸುವ ವಿಧಾನಗಳ ನಡುವೆ ನೇರವಾದ ಹೊಂದಾಣಿಕೆ ಯಿಲ್ಲದ ಭಾಷೆಗಳಲ್ಲಿ ಅರ್ಥ ಸಂಬಂಧವನ್ನು ವರ್ಣಿಸಲು ಬಳಸುವ ಕಲ್ಪಿತ ಸಂಬಂಧ; ಇಂತಹ ಭಾಷೆಗಳಲ್ಲಿ ವಾಕ್ಯರಚನೆಯ ನಿಯಮ ಗಳನ್ನು ವರ್ಣಿಸುವುದಕ್ಕೂ ಇಂತಹ ಕಲ್ಪಿತ ಸಂಬಂಧಗಳ ಅವಶ್ಯಕತೆ ಯಿದೆ. ಇಂಗ್ಲಿಷ್ ವ್ಯಾಕರಣದ subರಿeಛಿಣ, obರಿeಛಿಣ ಮೊದಲಾದವು, ಮತ್ತು ಸಂಸ್ಕೃತ ವ್ಯಾಕರಣದ ಕತ್ರೃ, ಕರ್ಮ, ಕರಣ ಮೊದಲಾದವು ಇಂತಹವು. ಕನ್ನಡಕ್ಕೆ ಇಂತಹ ಕಲ್ಪಿತ ಸಂಬಂಧಗಳ ಅವಶ್ಯಕತೆಯಿಲ್ಲ. ಶ್ರುತಿವಿನ್ಯಾಸ (iಟಿಣoಟಿಚಿಣioಟಿ): ಒಂದು ವಾಕ್ಯವನ್ನಾಡುವಾಗ ಅದರ ಉಚ್ಚಾರಣೆ ಗಾಗಿ ಶ್ರುತಿ ವಿನ್ಯಾಸವೊಂದನ್ನು ಆರಿಸಬೇಕಾಗುತ್ತದೆ. ಇದು ಕೇಳ್ವಿ ಗಳಲ್ಲಿ, ತಿಳಿಸುವ ವಾಕ್ಯಗಳಲ್ಲಿ ಮತ್ತು ಬೆರಗನ್ನು ಸೂಚಿಸುವ ವಾಕ್ಯ ಗಳಲ್ಲಿ ಬೇರೆ ಬೇರಾಗಿರುತ್ತದೆ. ಷರತ್ತು (ಛಿoಟಿಜiಣioಟಿ): ಒಂದು ವಾಕ್ಯ ತಿಳಿಸುವ ಘಟನೆ ಇಲ್ಲವೇ ಸಂಗತಿ ಇನ್ನೊಂದು ವಾಕ್ಯ ತಿಳಿಸುವ ಘಟನೆ ಇಲ್ಲವೆ ಸಂಗತಿಗೆ ಷರತ್ತು ಎಂಬು ದಾಗಿ ಸೂಚಿಸುವ ವಾಕ್ಯರಚನೆ; ಮಳೆ ಬಂದರೆ ಕೆರೆ ತುಂಬುತ್ತದೆ ಎಂಬ ವಾಕ್ಯದಲ್ಲಿ ಮಳೆ ಬಂದರೆ ಎಂಬುದು ಷರತ್ತು. ಸಮಯ ಸಂಬಂಧ (ಣeಟಿse): ಘಟನೆಯ ಸಮಯಕ್ಕೂ ಮತ್ತು ಅದನ್ನು ತಿಳಿಸುವ ವಾಕ್ಯವನ್ನಾಡಿರುವ ಸಮಯಕ್ಕೂ ನಡುವಿರುವ ಸಂಬಂಧ; ಹಿಂದಿನ ಸಮಯ, ಮುಂದಿನ ಸಮಯ ಮತ್ತು ಈಗಿನ ಸಮಯ ಎಂಬವುಗಳು ಇಂತಹ ಸಮಯ ಸಂಬಂಧವನ್ನು ಸೂಚಿಸುತ್ತವೆ. ಸಂಬಂಧಿಸುವ ರೂಪ (ಡಿeಟಚಿಣive ಛಿಟಚಿuse, giಟಿiಣive) ಕ್ರಿಯಾಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡಲು ಅವುಗಳ ಸಂಬಂಧಿಸುವ ರೂಪವನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಮಾಡು ಕ್ರಿಯಾ ಪದಕ್ಕೆ ಮಾಡುವ, ಮಾಡಿದ ಮತ್ತು ಮಾಡದ ಎಂಬ ಮೂರು ಸಂಬಂಧಿಸುವ ರೂಪಗಳಿದ್ದು, ಇವನ್ನು ಮಾಡುವ ಕೆಲಸ, ಮಾಡಿದ ಕೆಲಸ ಮತ್ತು ಮಾಡದ ಕೆಲಸ ಎಂಬಂತಹ ಪದಕಂತೆಗಳಲ್ಲಿ ನಾಮ ಪದಗಳ ವಿಶೇಷಣಗಳಾಗಿ ಬಳಸಬಹುದು. ಇದೇ ರೀತಿಯಲ್ಲಿ ಒಂದು ನಾಮಪದವನ್ನು ಬೇರೊಂದು ನಾಮ ಪದದ ವಿಶೇಷಣವನ್ನಾಗಿ ಮಾಡಿ ಬಳಸಲು ಅದರ ಸಂಬಂಧಿಸುವ ರೂಪವನ್ನು ಬಳಸಬಹುದು; ಮರದ ಗೆಲ್ಲು ಎಂಬುದರಲ್ಲಿ ಮರದ ಎಂಬುದು ಮರ ನಾಮಪದದ ಸಂಬಂಧಿಸುವ ರೂಪ. ಕನ್ನಡ ವ್ಯಾಕರಣಗಳಲ್ಲಿ ನಾಮಪದಗಳ ಈ ರೂಪವನ್ನು ಷಷ್ಠೀ ವಿಭಕ್ತಿಯ ರೂಪವೆಂದು ಕರೆಯಲಾಗಿದೆ; ಆದರೆ ನಿಜಕ್ಕೂ ಇದು ನಾಮಪದಗಳ ವಿಭಕ್ತಿ ರೂಪವಲ್ಲ; ಯಾಕೆಂದರೆ, ಕನ್ನಡದಲ್ಲಿ ಇದಕ್ಕೆ ನಾಮಪದ ಗಳನ್ನು ಕ್ರಿಯಾಪದಗಳೊಂದಿಗೆ ಸಂಬಂಧಿಸುವ ಕೆಲಸವಿಲ್ಲ. ಸವ್ರಪದ (ಠಿಡಿoಜಿoಡಿm): ವಾಕ್ಯದಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸು ವುದು, ಅವುಗಳ ಕುರಿತು ಅನಿಶ್ಚಿತತೆಯನ್ನು ತಿಳಿಸುವುದು ಮೊದಲಾದ ಕೆಲಸಗಳಿಗಾಗಿ ಬಳಕೆಯಾಗುವ ಪದಗಳು; ಅದು-ಇದು-ಯಾವುದು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ಪದಗಳು ಇಂತಹವು.
ಸುದ್ದಿ (ಛಿommeಟಿಣ): ಒಂದು ವಿಷಯದ ಕುರಿತಾಗಿ ವಾಕ್ಯ ಏನನ್ನು ತಿಳಿಸು ತ್ತಿದೆಯೋ ಅದು; ರಾಜು ಮನೆಗೆ ಹೋದ ಎಂಬುದರಲ್ಲಿ ರಾಜು ಎಂಬುದು ವಿಷಯ ಮತ್ತು ಮನೆಗೆ ಹೋದ ಎಂಬುದು ಸುದ್ದಿ. ಸುರುಘಟಕ (souಡಿಛಿe): ಒಂದು ಕದಲುವಿಕೆ (ಚಲನೆ) ಯಾವ ಜಾಗದಲ್ಲಿ ಸುರುವಾಗಿದೆಯೆಂಬುದನ್ನು ಸೂಚಿಸುವ ಘಟಕ; ಮನೆಯಿಂದ ಬಂದೆ ಎಂಬುದರಲ್ಲಿ ಮನೆಯಿಂದ ಎಂಬುದು ಸುರುಘಟಕ. ಸೇರಿಕೆಯ ಬದಲಾವಣೆ (ಸಂಧಿಕಾರ್ಯ, moಡಿಠಿhoಠಿhoಟಿemiಛಿs): ಎರಡು ಪದಗಳು ಇಲ್ಲವೇ ಒಂದು ಪದ ಮತ್ತು ಒಂದು ಪ್ರತ್ಯಯ ಸೇರಿದಾಗ ಅವುಗಳಲ್ಲಿರುವ ವರ್ಣ ಗಳಲ್ಲಿ ನಡೆಯುವ ಬದಲಾವಣೆ; ಬಂದ ಪದಕ್ಕೆ ಆಗ ಪದ ಸೇರಿದಾಗ ಮೊದಲನೆಯ ಪದದ ಕೊನೆಯ ಅಕಾರ ಬಿದ್ದು ಹೋಗಿ ಬಂದಾಗ ಎಂದಾಗುವುದು ಇಂತಹ ಒಂದು ಸೇರಿಕೆಯ ಬದಲಾವಣೆ. ಹಿಂದಿನ ಸಮಯ (ಭೂತಕಾಲ, ಠಿಚಿsಣ ಣeಟಿse): ಒಂದು ವಾಕ್ಯವು ತಿಳಿಸುವ ಘಟನೆ ಆ ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲು ನಡೆದಿದೆ ಯಾದಲ್ಲಿ ಅದರದು ‘ಹಿಂದಿನ’ ಸಮಯ; ನಾನು ಊಟ ಮಾಡಿದೆ ಎಂಬ ವಾಕ್ಯದಲ್ಲಿ ಊಟ ಮಾಡುವ ಘಟನೆ ಆ ವಾಕ್ಯವನ್ನಾಡಿರುವ ಕಾರಣ ಮಾಡಿದೆ ನಡೆದಿದೆಯಾದ ಸಮಯಕ್ಕಿಂತ ಮೊದಲು ಎಂಬುದು ಹಿಂದಿನ ಸಮಯದ ಕ್ರಿಯಾರೂಪ. ಕೆಲವು ಪಾರಿಭಾಷಿಕ ಪದಗಳು ಹಿನ್ನೆಣಿಕೆ (ಚಿಜಿಣeಡಿ-ಣhoughಣ): ವಾಕ್ಯದಲ್ಲಿ ಸೂಚಿಸದಿದ್ದ ಘಟಕ ಇಲ್ಲವೇ ವಾಕ್ಯಾಂಶವೊಂದನ್ನು ವಾಕ್ಯದ ಕೊನೆಯಲ್ಲಿ ಸೂಚಿಸುವುದು; ಅವನು ಬಂದಿದ್ದಾನೆ, ಬೆಳಿಗ್ಗೆ ಎಂಬುದರಲ್ಲಿ ಬೆಳಿಗ್ಗೆ ಎಂಬುದು ಹಿನ್ನೆಣಿಕೆ. ಹೆಸರಿಸುವುದು (ಟಿಚಿmiಟಿg): ಘಟನೆಯೊಂದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಅವುಗಳ ಹೆಸರೊಂದನ್ನು (ರೂಢನಾಮ ಇಲ್ಲವೇ ಅಂಕಿತನಾಮವನ್ನು) ಬಳಸುವುದು. ಹೊರವಾಕ್ಯ (mಚಿಣಡಿix seಟಿಣeಟಿಛಿe): ಒಳವಾಕ್ಯವೊಂದನ್ನು ಒಳಗೊಂಡಿರುವುದು ರಾಜು ಹೇಳಿದ್ದಾನೆ ಎಂಬುದು ಯಾರೂ ಬರಬಾರದೆಂದು ಹೊರವಾಕ್ಯ; ಒಳಗೆ ಹೇಳಿದ್ದಾನೆ ಎಂಬುದರಲ್ಲಿ ಹೊರವಾಕ್ಯ. ಹೋಲುಗ (sಣಚಿಟಿಜಚಿಡಿಜ oಜಿ ಛಿomಠಿಚಿಡಿisoಟಿ): ಹೋಲಿಕೆಯ ವಾಕ್ಯವೊಂದರಲ್ಲಿ ಯಾವ ವ್ಯಕ್ತಿ, ವಸ್ತು ಮೊದಲಾದವುಗಳೊಂದಿಗೆ ಒಂದು ಘಟಕವನ್ನು ಹೋಲಿಸಲಾಗಿದೆಯೋ ಅದು; ರಾಜುವಿಗಿಂತ ದೊಡ್ಡ ಹುಡುಗ ಎಂಬುದರಲ್ಲಿ ರಾಜು ಹೋಲುಗ). ಆಕರಸೂಚಿ ಗ್ರೀನ್ಬಗ್್ರ, ಜೆ. ಹೆಚ್. (ಸಂ) 1963. Uಟಿiveಡಿsಚಿಟs oಜಿ ತಿರುಮಲೇಶ್, ಕೆ.ವಿ. 1979. ಖeoಡಿಜeಡಿiಟಿg ಡಿuಟes iಟಿ ಏಚಿಟಿಟಿಚಿಜಚಿ ಚಿಟಿಜ ಭಟ್, ಡಿ.ಎನ್.ಎಸ್. 1978. ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ. ಮೈಸೂರು: ಗೀತಾ ಬುಕ್ ಹೌಸ್. ಪ್ರೈಮಸ್, ಬಿ. 2001. ‘Woಡಿಜ oಡಿಜeಡಿ ಣಥಿಠಿoಟogಥಿ’ : ಹಸ್ಪೆಲ್ಮಠ್, ಎಮ್. (ಸಂ), —- 2001. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಮೈಸೂರು: ಭಾಷಾಪ್ರಕಾಶನ. —- 2002. ಕನ್ನಡ ಪದಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ. —- 2003. ಕನ್ನಡದ ಸವ್ರನಾಮಗಳು. ಮೈಸೂರು: ಭಾಷಾಪ್ರಕಾಶನ. ಶ್ರೀಧರ್, ಎಸ್. ಎನ್. 1990. ಏಚಿಟಿಟಿಚಿಜಚಿ. ಐoಟಿಜoಟಿ: ಖouಣಟeಜge. ಷಿಫ್ಮನ್, ಹೆಚ್. 1983. ಂ ಡಿeಜಿeಡಿeಟಿಛಿe gಡಿಚಿmmಚಿಡಿ oಜಿ sಠಿoಞeಟಿ ಏಚಿಟಿಟಿಚಿಜಚಿ.